Categories
ಸಿನಿ ಸುದ್ದಿ

ಚಿನಕುರುಳಿ ಶಾನ್ವಿಗೆ ಕೋತಿ ಕಚ್ಚಿದ ಪ್ರಸಂಗ !

ವಾರಣಾಸಿಯ ಈ ನಟಿ ಶಾನ್ವಿ‌ಶ್ರಿ ವಾಸ್ತವ್ ‘ಕಸ್ತೂರಿ ಮಹಲ್ ‘ ಗೆ ಕಾಲಿಡುವ ಮುನ್ನ ನಿಜಕ್ಕೂ‌ ಆಗಿದ್ದೇನು?
……,………………………………..

ನಟಿ ಶಾನ್ವಿ ಶ್ರೀವಾಸ್ತವ್ ಗೊತ್ತಲ್ವಾ, ಅದೇ’ ಅವನೇ ಶ್ರೀಮನ್ನಾರಾಯಣ’ ಖ್ಯಾತಿಯ ನಟಿ. ಅವರೀಗ’ ಕಸ್ತೂರಿ ಮಹಲ್ ‘ ನಲ್ಲಿ ಬ್ಯುಸಿಯಾಗಿದ್ದಾರೆ. ಅದೃಷ್ಟ ಅಂತಾರಲ್ಲ ಹಾಗೆ ಬದಾವಣೆಯ ಗಾಳಿಯಲ್ಲಿ’ ಕಸ್ತೂರಿ ಮಹಲ್’ ಪ್ರವೇಶಿಸಿದ್ದಾರೆ. ಅದ್ದೆಂಗೆ ಅನ್ನೋದು ನಿಮಗೆಲ್ಲ ಗೊತ್ತಿರುವ ವಿಚಾರ. ರಚಿತಾ ರಾಮ್ ಅಭಿನಯಿಸಬೇಕಿದ್ದ ಜಾಗಕ್ಕೆ ಶಾನ್ವಿ ಬಂದರು. ಹಾಗಂತ ಈ ಅವಕಾಶಕ್ಕಾಗಿ ವಾರಾಣಾಸಿ ಆ ಚೆಲುವೆ ಶಾನ್ವಿ ಕಾದು ಕುಳಿತಿದ್ರಾ? ಅವಕಾಶಗಳೇ ಇಲ್ಲ ಅಂತ ಇದನ್ನ ಒಂದೇ ಗುಕ್ಕಿನಲ್ಲಿ ಒಪ್ಪಿಕೊಂಡ್ರಾ?

ವಿಷಯ ಅದಲ್ಲ, ಬೇರೆನೆ ಇದೆ‌‌‌…

ಅವರ ಪ್ರಕಾರ ಹಾಗೇನು ಅಲ್ಲ. ವಾಸ್ತವ ಬೇರೆನೆ ಇದೆ. ಅದೇನು ಎನ್ನುವುದಕ್ಕಿಂತ ಮುಂಚೆ‌. ಕಸ್ತೂರಿ ಮಹಲ್ ಗೆ ರಚಿತಾ ಯಾಕೆ ಕೈ ಎತ್ತಿದ್ರು ಗೊತ್ತಾ? ವಿಷಯ ಸ್ವಲ್ಪ ಸೀರಿಯಸ್. ಆ ಕತೆ ಹೀಗಿದೆ ಕೇಳಿ; ಈ ಚಿತ್ರಕ್ಕೆ ಮುಂಚೆ ‘ಕಸ್ತೂರಿ ನಿವಾಸ ‘ ಅಂತ ಟೈಟಲ್ ಇತ್ತು‌ . ಆಗ ಈ ಚಿತ್ರಕ್ಕೆ ರಚಿತಾ ರಾಮ್ ನಾಯಕಿ ಆಗಿದ್ದರು. ಇದು ದಿನೇಶ್ ಬಾಬು ನಿರ್ದೇಶನದ ಚಿತ್ರ ಎನ್ನುವುದರ ಜತೆಗೆ ಚಿತ್ರದ ಟೈಟಲ್ ನೋಡಿಯೇ ಅವರು ಥ್ರಿಲ್ ಆಗಿದ್ರಂತೆ‌‌ . ಜತೆಗೆ ಅದು ನಾಯಕಿ ಪ್ರಧಾನ ಚಿತ್ರ ಬೇರೆ, ಅದೇ ಗುಂಗ್ ನಲ್ಲಿ ಕತೆ ಕೇಳಿದವರೇ ಓಕೆ ನಾನೇ ನಾಯಕಿ ಅಂತಲೂ ಕಾಲ್ ಶೀಟ್ ಕೊಟ್ಟಿದ್ದರು‌‌. ಮುಂದೆ ಮುಹೂರ್ತ ಕೂಡ ಮುಗೀತು.ಆದ್ರೆ ಆಗ ಶುರುವಾಗಿದ್ದು ಟೈಟಲ್ ವಿವಾದ. ಅದೇನೋ ಯಡವಟ್ಟಾಯ್ತು ಅಂತ ಗೊತ್ತಾಗಿದ್ದೇ ತಡ, ನಂಗೆ ಡೇಟ್ಸ್ ಹೊಂದಾಣಿಕೆ ಆಗ್ತಿಲ್ಲ. ಮುಂಚೇನೆ ಕಾಲ್ ಶೀಟ್ ಕೊಟ್ಟ ಸಿನ್ಮಾದವರೂ ಬಿಡ್ತಿಲ್ಲ, ಸಾರಿ ಸರ್ ನೀವು ಯಾರನ್ನಾದ್ರೂ ಬೇರೆ ಅವ್ರನ್ನ ಹಾಕ್ಕೊಳ್ಳಿ ಅಂತ ದಿನೇಶ್ ಬಾಬು ಅವರಿಗೆ ರಾತ್ರೋರಾತ್ರಿ ಮೆಸೇಜ್ ಹಾಕಿ‌ಬಿಟ್ರು ಬುಲ್ ಬುಲ್ ಬೆಡಗಿ ರಚಿತಾ ರಾಮ್.

ರಾತ್ರೋರಾತ್ರಿ‌ ಮೆಸೇಜ್ ಹಾಕಿದ್ರು ರಚಿತಾ…

ಚೇಂಜ್ ಒವರ್ ಕತೆ ನಡೆದಿದ್ದು ಹೀಗೆ. ಮುಂದೆ ಶಾನ್ವಿ ಹೇಗೆ ಬಂದ್ರು?’ ಅವನೇ ಶ್ರೀ ಮನ್ನಾರಾಯಣ’ ಚಿತ್ರದ ನಂತರ ಹೊಸ ಅವಕಾಶಗಳನ್ನು ಎದುರು ನೋಡುತ್ತಿದ್ದ ಅವರಿಗೆ ‘ತ್ರಿಶೂಲಂ’ ಮೂಲಕ‌ ಉಪೇಂದ್ರ ಅವರ ಜತೆಗೆ ಅಭಿನಯಿಸುವ ಅವಕಾಶ ಸಿಕ್ಕಿತು. ಅಲ್ಲಿಂದೀಗ ದಿನೇಶ್ ಬಾಬು ನಿರ್ದೇಶನದ ಕಸ್ತೂರಿ ಮಹಲ್ ಚಿತ್ರಕ್ಕೆ ನಾಯಕಿಯಾದರು. ಅವರ ಪ್ರಕಾರ ಈ ಸಿನಿಮಾ ಒಪ್ಪಿಕೊಳ್ಳುವುದಕ್ಕಿದ್ದ ಮೊದಕ ಕಾರಣ ಕತೆ ಮತ್ತು ಪಾತ್ರ.‌ಒಬ್ಬ ನಟಿಗೂ ಬೇಕಾಗಿದ್ದೂ ಕೂಡ ಅದೇನೆ. ಹಾಗಾಗಿ ತಾನು ಈ ಸಿನಿಮಾ‌ಒಪ್ಪಿಕೊಂಡೇ ಎನ್ನುವ ಶಾನ್ವಿ, ಈಗ ಅದೇ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಹೀಗಿರುವಾಗಲೇ ಅವರು ತಮಗೆ ಕೋತಿ ಕಚ್ಚಿದ ಪ್ರಸಂಗವೊಂದನ್ನು’ ಕಲರ್ಸ್ ಕನ್ನಡ’ದ ಮಜಾ ಟಾಕೀಸ್ ಶೋ ನಲ್ಲಿ ಹೇಳಿಕೊಂಡಿದ್ದಾರೆ.

ಕೋತಿ ಕಂಡ್ರೆ ನಂಗೆ ಈಗಲೂ ಭಯ..

‘ ನಾನಗಾಗ 15 ವರ್ಷ.‌ಮನೆಯ ಟೇರಾಸ್ ಮೇಲೆ ಆಟ ಆಡ್ತಾ ಇದ್ವಿ.‌ ಎಲ್ಲಿಂದಲೋ‌ ಬಂದ ಕೋತಿ ನನ್ನ ಕೈ ಕಚ್ಚಿತು. ಅದೃಷ್ಟವಶಾತ್ ನಂಗೇನು‌ಗಾಯ ಆಗ್ಲಿಲ್ಲ.‌ ಆದ್ರೆ ಕೋತಿ ಕಂಡ ಭಯ ಪಟ್ಟು ಓಡಿದೆ. ಅವತ್ತಿನಿಂದ ನಂಗೆ ಮನೆಯವ್ರು ಕೋತಿ ಅಂತಲೇ ಕರೀತಿದ್ರು ಅಂತ 15 ವರ್ಷದಲ್ಲಿ ನಡೆದ ಘಟನೆಯೊಂದನ್ನು ಹೇಳಿಕೊಂಡು‌ ನಕ್ಕರು ಚಿನಕುರುಳಿ ಶಾನ್ವಿ ಶ್ರೀವಾಸ್ತವ್.

ಇದು ಬಿಡಿ, ಮುಗ್ದ ಮುಖದ ಶಾನ್ವಿ ಬಗ್ಗೆ ಹೇಳಲೇಬೇಕಾದ ಒಂದು‌ಮಾತು ಅವರಿಗಿರುವ ಕನ್ನಡದ‌ ಮೇಲಿನ‌ ಪ್ರೀತಿಯ ಬಗ್ಗೆ. ನಿಮಿಗೆಲ್ಲ ಗೊತ್ತೇ ಇದೆ. ಶಾನ್ವಿ ಕನ್ನಡಕ್ಕೆ ಬಂದ ಆಮದು ನಟಿ. ಅಂದ್ರೆ ಬೇರೆ ಭಾಷೆಯಿಂದ ಕನ್ನಡಕ್ಕೆ ಬಂದವರು. ಹಾಗೆ ಬಂದವರನೇಕ ನಟಿಯರು ಅವಕಾಶ ಇದ್ದಷ್ಟು ದಿನ ಇಲ್ಲಿದ್ದು , ಹಣ ಮಾಡಿಕೊಂಡು‌ಮರಳಿ ತಮ್ಮೂರು ಸೇರಿಕೊಂಡಿ ದ್ದಾರೆಸ್ವಲ್ಪ ಕಮಲ ಈ ನಟಿ ಬೆಂಗಳೂರಿನಲ್ಲೆ ಉಳಿದು ಕೊಂಡಿದ್ದಾರೆ. ಕನ್ನಡ ಭಾಷೆ ಕಲಿತಿದ್ದಾರೆ. ಓದು,ಬರಹ‌ ಎರಡೂ ಕನ್ನಡದಲ್ಲೇ ಮಾಡುತ್ತಾರೆ. ಬೆಂಗಳೂರು ನನ್ನೂರು ಅಂತ ಹೆಮ್ಮೆಯಿಂದ ಹೇಳುತ್ತಾರೆ. ಅಷ್ಟು ಮಾತ್ರವಲ್ಲ, ಇಲ್ಲಿಯೇ ಸೆಟ್ಲ್ ಆಗುವುದಾಗಿಯೂ ಹೇಳುತ್ತಾರೆ. ಹಾಗೆಯೇ ಕನ್ನಡದ ಸ್ಟಾರ್ ಒಬ್ಬರನ್ನು ಲವ್ ಮಾಡುತ್ತಿರುವ ಬಗ್ಗೆ‌ಗಾಸಿಪ್ ಕೂಡ ಇದೆ. ಸದ್ಯಕ್ಕೆ ಅದು ಕನ್ ಫರ್ಮ್‌ಅಲ್ಲ.‌ಗಾಸಿಪ್ ಮಾತ್ರ.‌ ಏನೇ ಆಗಲಿ ಶಾನ್ವಿ ಅವರಿಗೆ ಸಿನಿ‌ಲಹರಿ ಕಡೆಯಿಂದ ಆಲ್ ದಿ‌ಬೆಸ್ಟ್.

Categories
ಗ್ಲಾಮರ್‌ ಕಾರ್ನರ್

ನನ್ನಿಷ್ಟದ ಪಾತ್ರ ಸಿಕ್ಕರೆ ಅಭಿನಯಿಸಲು ನಾನ್‌ ರೆಡಿ

ಕಿಸ್‌ ಸುಂದರಿ ಶ್ರೀಲೀಲಾ ಎಲ್ಲಿ ಎನ್ನುವ ಪ್ರಶ್ನೆಗೆ ಕೊನೆಗೂ ಸಿಕ್ತು ಉತ್ತರ

ಸಿನಿಮಾ ಅಂತ ಹೊಸ ಪ್ರಾಜೆಕ್ಟ್ ಒಪ್ಪಿಕೊಂಡಿಲ್ಲ ಎನ್ನುವುದನ್ನು ಬಿಟ್ಟರೆ ಸೋಷಲ್ ಮೀಡಿಯಾದಲ್ಲಿ ಅಂದ ಚೆಂದದ ಫೋಟೋಗಳ ಮೂಲಕ ಶ್ರೀಲೀಲಾ ಸಿಕ್ಕಾಪಟ್ಟೆ ಸದ್ದು ಮಾಡುತ್ತಿರುವ ನಟಿ. ಈಗ ದಸರಾ ಹಬ್ಬಕ್ಕೂ ಅವರು ಒಂದು ಚೆಂದದ ಫೋಟೋಶೂಟ್ ಮಾಡಿಸಿ, ರಾಣಿಯಂತೆ ಪೋಸು ನೀಡಿರುವುದು ವಿಶೇಷ.

ಸಿನಿ ದುನಿಯಾವೇ ಹಾಗೆ. ಚಾಲ್ತಿಗೆ ಬಂದ ನಟ-ನಟಿಯರು ಇಲ್ಲಿ ಸದಾ ಸುದ್ದಿಯಲ್ಲಿರಬೇಕು. ಅದೆಲ್ಲ ಬೇಡ, ತಾವಾಯ್ತು ತಮ್ಮ ಪಾಡಾಯ್ತು ಅಂತ ಅವರೇನಾದ್ರು  ತೆರೆಮರೆಯಲ್ಲಿ ಕುಳಿತರೆ  ಇಲ್ಲಿ ದಿನಕ್ಕೊಂದು ಗಾಸಿಪ್. ಅದರಲ್ಲೂ ಒಂದು ಸಕ್ಸಸ್ ಫುಲ್ ಸಿನಿಮಾ‌ ಬಂದು‌ ಹೋದ ನಂತರ ಅದರ ನಟ ಅಥವಾ ನಟಿ ಮತ್ತೊಂದು ಸಿನಿಮಾ ಒಪ್ಪಿಕೊಳ್ಳುವುದು ತಡವಾದರೆ ಅವರ ಸುತ್ತ ಹತ್ತಾರು ಪ್ರಶ್ನೆ. ನೂರೆಂಟು ಗಾಳಿ‌ಮಾತು. ಸದ್ಯಕ್ಕೆ ಅಂತಹದೇ ಗಾಸಿಪ್ ‘ಕಿಸ್ ‘ ಚೆಲುವೆ ಶ್ರೀಲೀಲಾ‌ ಸುತ್ತಲೂ‌ ಇದೆ.

‘ಕಿಸ್ ‘ ಕೊಟ್ಟ ಕ್ಯೂಟ್ ಹುಡುಗಿ ಶ್ರೀ ಲೀಲಾ ಯಾಕೆ ಹೊಸ ಸಿನಿಮಾ ಒಪ್ಪಿಕೊ‌ಂಡಿಲ್ಲ  ?  ‘ಭರಾಟೆ ‘  ನಂತರ ಅವರ ಸಿನಿ‌ ಜರ್ನಿ ಏನಾಯ್ತು ? ಹೊಸ ಸಿನಿಮಾ‌ ಒಪ್ಪಿಕೊಂಡಿದ್ದರೆ ಅದು ಶುರುವಾಗುವುದು ಯಾವಾಗ? ಮೂರನೇ ಸಿನಿಮಾ ಯಾವ ಸ್ಟಾರ್ ಜತೆ ? ಸಿನಿಮಾ‌ ಪ್ರೇಮಿಗಳಲ್ಲಿ ಹೀಗೆಲ್ಲ ಕುತೂಹಲದ ಪ್ರಶ್ನೆಗಳಿವೆ.  ಹಾಗಂತ ಶ್ರೀಲೀಲಾ  ಸಿನಿಮಾ‌ ಬೇಡ ಅಂತ ‌ಸುಮ್ಮನಿದ್ದಾರಾ? ಖಂಡಿತಾ ಇಲ್ಲ‌.‌ ನೋ‌, ಚಾನ್ಸ್ . ‘ಭರಾಟೆ ‘ ನಂತರ ಶ್ರೀಲೀಲಾ ತಕ್ಷಣವೇ ಹೊಸ ಸಿನಿಮಾ ಒಪ್ಪಿಕೊಂಡಿಲ್ಲ ಎನ್ನುವುದು ನಿಜವೇ ಆಗಿದ್ದರೂ, ಅವರೇ ಹೇಳುವ ಪ್ರಕಾರ ಅದಕ್ಕೆ ಮೂರು ಕಾರಣ. ಮೊದಲನೇಯದು ಎಜುಕೇಷನ್. ಎರಡನೇಯದು ಒಳ್ಳೆಯ ಕತೆ ಮತ್ತು ಪಾತ್ರ. ಮೂರನೆಯದು ಕೊರೋನಾ.

‘ ನಂಗೆ  ಸಿನಿಮಾ‌ ಆಫರ್  ಇಲ್ಲ ಅಂತಲ್ಲ.  ‘ಭರಾಟೆ ‌”ರಿಲೀಸ್ ಆದ ನಂತರ ಎಕ್ಸಾಂ ಶುರುವಾದವು. ತಕ್ಷಣವೇ ಅತ್ತ  ಗಮನ‌ಹರಿಸಬೇಕಾಗಿ ಬಂತು‌. ಎಕ್ಸಾಂ ಸಿದ್ಧತೆಗಾಗಿಯೇ  ಒಂದಷ್ಟು ದಿನ ಕಳೆದವು. ಅಲ್ಲಿಂದ ಎಕ್ಸಾಂ ಮುಗಿಸುವುದಕ್ಕೂ ಒಂದಷ್ಟು‌‌ ಸಮಯ ಹಿಡಿಯಿತು. ಅದೆಲ್ಲ ಮುಗಿಸಿ ಇನ್ನೇನು ಹೊಸ ಪ್ರಾಜೆಕ್ಟ್  ಫೈನಲ್ ಮಾಡಿಕೊಳ್ಳೊಣ ಅನ್ನೋ ಹೊತ್ತಿಗೆ ಕೊರೋನಾ ಬಂತು. ಎಲ್ಲವೂ ಬಂದ್ ಆದವು. ಆಗ ನಮ್ದೇನು ಕೆಲಸ? ಹಾಯಾಗಿ ಮನೆಯಲ್ಲಿದ್ದೆ. ಒಂದಷ್ಟು ಓದು, ಅದರ ಜತೆಗೆ ಸಿನಿಮಾ ವೀಕ್ಷಣೆ ಅಂತ ಬ್ಯುಸಿಯಿದ್ದೆ. ‘ ಎನ್ನುತ್ತಾರೆ ಕಿಸ್ ಚೆಲುವೆ ಶ್ರೀಲೀಲಾ.

ಶ್ರೀಲೀಲಾ ಸದ್ಯಕ್ಕೆ ಸ್ಯಾಂಡಲ್ ವುಡ್ ನ ಬೇಡಿಕೆಯ ನಟಿ. ಮೋಹಕ‌ ನೋಟ ಹಾಗೂ ಮುದ್ದು ಮುಖದ ಮೂಲಕ ಎಂಟ್ರಿಯಲ್ಲೇ ಸಿನಿ ರಸಿಕರನ್ನು ಸೂಜಿಗಲ್ಲಿನಂತೆ ಆಕರ್ಷಿಸಿದ ನಟಿ.  ಹಾಗೆಯೇ ಅಭಿನಯ ಹಾಗೂ  ಮಾತಿನಲ್ಲೂ ಬುದ್ದಿವಂತೆ. ಹಾಗಾಗಅವರಿಗೆ ಸಿನಿಮಾ ಆಫರ್ ಇಲ್ಲ ಅಂತಲ್ಲ. ಸಾಕಷ್ಟಿವೆ‌. ಅದನ್ನು ಅವರೇ  ಒಪ್ಪಿಕೊಳ್ಳುತ್ತಾರೆ.

‘ ಭರಾಟೆ ‘ ನಂತರ‌  ಸರಿ ಸುಮಾರು 20 ಕ್ಕೂ ಹೆಚ್ಚು ಕತೆ ಕೇಳಿದ್ದೇನೆ ಅಂದ್ರೆ ನಿಮಗೆ ಅಚ್ಚರಿ ಎನಿಸಬಹುದು. ಕತೆ ಕೇಳುವುದು, ಚರ್ಚೆ ಮಾಡುವುದು ನಡೆದೇ ಇದೆ.ಆದ್ರೆ ನಂಗಿಷ್ಟವಾದ ಕತೆ ಮತ್ತು ಪಾತ್ರ ಸಿಕ್ಕಿಲ್ಲ ಎನ್ನುವ ಕಾರಣಕ್ಕಾಗಿ ಇದುವರೆಗೂ ಹೊಸ ಪ್ರಾಜೆಕ್ಟ್ ಒಪ್ಪಿಕೊಂಡಿಲ್ಲ‌ . ಇವತ್ತೇ, ಈಗಲೇ ನಂಗಿಷ್ಟವಾಗುವ ಕತೆ ಮತ್ತು ಪಾತ್ರ ಸಿಕ್ಕರೆ ನಾನು‌ಅಭಿನಯಿಸಲು ರೆಡಿ ಎನ್ನುವ ಮೂಲಕ ತಮ್ಮ ನಿರೀಕ್ಷೆಯ ಬೇಡಿಕೆಗಳನ್ನು ಮುಂದಿಡುತ್ತಾರೆ ನಟಿ ಶ್ರೀಲೀಲಾ.

Categories
ಸಿನಿ ಸುದ್ದಿ

ಹೊಸ ಲವ್ ನಲ್ಲಿ ದುನಿಯಾ ವಿಜಯ್!

ಸಲಗ ಬಳಿಕ ಕ್ಯೂಟ್ ಲವ್ ಸ್ಟೋರಿ ನಿರ್ದೇಶನಕ್ಕೆ  ನಟ ವಿಜಯ್ ಸಜ್ಜು

“ದುನಿಯಾ” ವಿಜಯ್ ಅವರು ಮೊದಲ ಬಾರಿಗೆನ ನಿರ್ದೇಶಿಸಿರುವ “ಸಲಗ” ಚಿತ್ರ ಇನ್ನೇನು ಬಿಡುಗಡೆಯ ತಯಾರಿಯಲ್ಲಿದೆ. ಕೊರೊನಾ ಸಮಸ್ಯೆ ಇಲ್ಲದೇ ಹೋಗಿದ್ದರೆ, ಇಷ್ಟೊತ್ತಿಗಾಗಲೇ, “ಸಲಗ’ ಅಬ್ಬರಿಸಿಬಿಡುತ್ತಿತ್ತು. ಇಡೀ ಚಿತ್ರರಂಗವೇ ಸ್ಥಗಿತಗೊಂಡ ಹಿನ್ನೆಲೆಯಲ್ಲಿ, ಬಿಡುಗಡೆಗೆ ಸಜ್ಜಾಗಿದ್ದ ಚಿತ್ರಗಳೂ ಬಿಡುಗಡೆಯಾಗದೆ ಉಳಿದಿದ್ದವು. ಈಗ ಚಿತ್ರರಂಗ ತನ್ನ ಕಾರ್ಯಚಟುವಟಿಕೆ ಶುರುಮಾಡಿದೆ.

“ಸಲಗ’ ಕೂಡ ಬಿಡುಗಡೆಯ ಹಾದಿಯಲ್ಲಿದೆ. “ಸಲಗ’ ನಿರ್ದೇಶಕ ಕಮ್ ನಟ “ದುನಿಯಾ” ವಿಜಯ್, ಇದೀಗ ಹೊಸದೊಂದು ಸಿನಿಮಾಗೆ ಕೈ ಹಾಕಿದ್ದಾರೆ. “ಸಲಗ” ಬಿಡುಗಡೆ ಬಳಿಕ ಹೊಸ ಚಿತ್ರ ಮಾಡಲು ಅಣಿಯಾಗುತ್ತಿದ್ದಾರೆ.

ಈ ಬಾರಿ ಅವರು ಸಾಹಸ ಚಿತ್ರಕ್ಕೆ ಮೊರೆ ಹೋಗದೆ, ಪಕ್ಕಾ ಲವ್‌ ಸ್ಟೋರಿ ಹೇಳಲು ಹೊರಟಿದ್ದಾರೆ. ಆ ಕುರಿತು “ಸಿನಿ ಲಹರಿ’ ಜೊತೆ ಮಾತನಾಡಿದ “ದುನಿಯಾ” ವಿಜಯ್, ” ನಾನೀಗ “ಸಲಗ” ಬಿಡುಗಡೆ ಎದುರು ನೋಡುತ್ತಿದ್ದೇನೆ. ಸದ್ಯ ಎಲ್ಲವೂ ತಿಳಿಯಾದ ನಂತರ ಚಿತ್ರ ಬಿಡುಗಡೆಗೆ ಮುಂದಾಗುತ್ತೇನೆ. ಇದರ ನಡುವೆ, ನಾನೊಂದು ಹೊಸ ಚಿತ್ರಕ್ಕೂ ಕೈ ಹಾಕಿದ್ದೇನೆ. ಈ ಸಲ ಒಂದು ಪ್ರೇಮಕಥೆ ಹೇಳುವ ಪ್ರಯತ್ನ ಮಾಡುತ್ತಿದ್ದೇನೆ. ಅದೊಂದು ಪಕ್ಕಾ ಫ್ರೆಶ್ ಲವ್  ಸ್ಟೋರಿಯಾಗಲಿದೆ.

” ನಾನೀಗ “ಸಲಗ” ಬಿಡುಗಡೆ ಎದುರು ನೋಡುತ್ತಿದ್ದೇನೆ. ಸದ್ಯ ಎಲ್ಲವೂ ತಿಳಿಯಾದ ನಂತರ ಚಿತ್ರ ಬಿಡುಗಡೆಗೆ ಮುಂದಾಗುತ್ತೇನೆ. ಇದರ ನಡುವೆ, ನಾನೊಂದು ಹೊಸ ಚಿತ್ರಕ್ಕೂ ಕೈ ಹಾಕಿದ್ದೇನೆ. ಈ ಸಲ ಒಂದು ಪ್ರೇಮಕಥೆ ಹೇಳುವ ಪ್ರಯತ್ನ ಮಾಡುತ್ತಿದ್ದೇನೆ. ಅದೊಂದು ಪಕ್ಕಾ ಫ್ರೆಶ್ ಲವ್  ಸ್ಟೋರಿಯಾಗಲಿದೆ” 

” ಕಪ್ಪಗಿರೋ ‌ಹುಡುಗ ಬೇಕು- ವಯಸ್ಸು ಹದಿನೆಂಟಾಗಿರಬೇಕು ” 

ಹೊಸ ಹುಡುಗ ಹುಡುಗಿ ಇರಲಿದ್ದಾರೆ. ಅದೊಂದು ರೊಮ್ಯಾಂಟಿಕ್ ಲವ್ ಸ್ಟೋರಿ ಆಗಿರಲಿದೆ. ನಾಯಕ ಆಯ್ಕೆ ನಡೆಯುತ್ತಿದೆ. ಸ್ಕ್ರಿಪ್ಟ್ ಎಂಡ್ ಆಗಿದೆ. ಹೊಸ ಹುಡುಗ ಕಥೆಗೆ ಸೂಕ್ತವಾಗಿರಬೇಕು. ಕಪ್ಪುಗಿರೋರು ಬೇಕು. ಕಥೆ ಆ ರೀತಿಯ ಹುಡುಗನನ್ನು ಡಿಮ್ಯಾಂಡ್ ಮಾಡುತ್ತಿದೆ. ನನ್ನ ಪ್ರಕಾರ ಒಳ್ಳೆಯ ಲವ್ ಸ್ಟೋರಿ  ಇದು. ನಾನು ಮಾಡೋಕೆ ಆಗದಿರುವ ಕಥೆ ಇದು. ಹಾಗಾಗಿ ಇನ್ನೊಬ್ಬರಿಗೆ ಮಾಡಬೇಕು ಅಂತಾನೇ ಈ ನಿರ್ಧಾರ. 18 ರಿಂದ 25ರ ಹುಡುಗ ಹುಡುಗಿ ನಡುವಿನ ಪ್ರೇಮಕಥೆ ಇದು. ನಟನೆ ಗೊತ್ತಿದ್ದರೂ ಓಕೆ, ಅಂತಹ ಹುಡುಗ ಬೇಕು. ಹುಡುಗಿ ಫ್ರೆಶ್ ಫೇಸ್ ಹುಡುಕುತ್ತಿದ್ದೇನೆ.

“ಸಲಗ” ನಂತರ ಈ ಸಿನಿಮಾ ಮಾಡಿ ಮುಗಿಸೋದು. ಸದ್ಯಕ್ಕಿಷ್ಟು. ದೊಡ್ಡ ಮಟ್ಟದ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ. ಇಷ್ಟರಲ್ಲೇ ಎಲ್ಲವೂ ಸರ್ಪ್ರೈಸ್ ಆಗಿರಲಿದೆ. ಅಲ್ಲಿಯವರೆಗೆ ಈ ಪ್ರೇಮಕಥೆಯ ಕೆತ್ತನೆ ಕೆಲಸ ನಡೆಯುತ್ತಿದೆ. ಸದ್ಯಕ್ಕೆ ನಾನೀಗ ಸ್ಕ್ರಿಪ್ಟ್ನಲ್ಲಿದ್ದೇನೆ. “ಸಲಗ” ಬಿಡುಗಡೆಯ ತಯಾರಿಯಲ್ಲೂ ಇದ್ದೇನೆ. ಸದ್ಯಕ್ಕಿಷ್ಟು ವಿಷಯವಿದೆ. ಉಳಿದದ್ದನ್ನು ಹಂತವಾಗಿ ವಿವರಿಸುತ್ತೇನೆ’ ಎಂದು ಮಾತು ಮುಗಿಸುತ್ತಾರೆ ದುನಿಯಾ ವಿಜಯ್

Categories
ಗ್ಲಾಮರ್‌ ಕಾರ್ನರ್

ಕಲರ್‌ಫುಲ್‌ ಲೋಕಕ್ಕೆ ಬಂದ ಕಣ್‌ ಕುಕ್ಕುವ ಸುಂದರಿ !

ಮಾಡೆಲಿಂಗ್ ಜಗತ್ತಿನಿಂದ  ಸ್ಯಾಂಡಲ್‌ ವುಡ್‌ ಗೆ ಬಂದ ‘ ಬಾಬಿ’ ಡಾಲ್

ಮಾಡೆಲಿಂಗ್ ಜಗತ್ತಿಗೂ, ಸಿನಿಮಾಕ್ಕೂ ಒಂದ್ರೀತಿ ಅವಿನಾಭಾವ ಸಂಬಂಧ. ಊರಿಗೆ ಬಂದವರು, ನೀರಿಗೆ ಬಾರದಿರುತ್ತಾರಾ ಎನ್ನುವ ಗಾದೆ ಮಾತಿನ ಹಾಗೆ ಮಾಡೆಲಿಂಗ್ ಜಗತ್ತಿನಲ್ಲಿ ಹೆಜ್ಜೆ ಹಾಕಿದವರೆಲ್ಲ ಬಣ್ಣದ ಜಗತ್ತಿಗೆ ಬಂದ ಉದಾಹರಣೆಗಳು ಸಾಕಷ್ಟಿವೆ‌. ಆ ಸಾಲಿಗೀಗ ಹೊಸ ಸೇರ್ಪಡೆ ಮೋಹಕ‌ ತಾರೆ ಜೊಸಿಟ ಅನೂಲ.

ಮಾಡೆಲಿಂಗ್ ಬೆಡಗಿ

ಈಕೆ‌ ಕುಡ್ಲ ಕುವರಿ.‌ ಅಂದ್ರೆ ಕರಾವಳಿ ಸುಂದರಿ.  ಮಂಗಳೂರಿನಲ್ಲಿ ಹುಟ್ಟಿ, ಬೆಳೆದ ಈ ಚೆಲುವೆ ,ಇಷ್ಟು ದಿನ ಮಾಡೆಲಿಂಗ್ ಜಗತ್ತಿನಲ್ಲಿ ಮೈ ಮಾಟ ಪ್ರದರ್ಶಿಸಿದ ಮದನಾರಿ‌. 2017 ರಲ್ಲಿ ಮಿಸ್ ವರ್ಲ್ಡ್‌ ಸೂಪರ್ ಮಾಡೆಲ್ ಸೌತ್ ಏಷಿಯಾ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ. 2018 ರಲ್ಲಿ ಮಿಸ್ ಗ್ಲೋರಿ ಗ್ಯಾಲಾಕ್ಸಿ ಗೆದಿದ್ದಾರಂತೆ. ಹಾಗೆಯೇ 2019ರಲ್ಲಿ ಮಿಸ್ ಟ್ಯೂರಿಸಂ ವರ್ಲ್ಡ್ ಬ್ರಾಂಡ್ ಅಂಬಾಸಿಡರ್ ಆಗಿಯೂ ಮಾಡೆಲಿಂಗ್ ನಲ್ಲಿ ಹೆಸರು ಮಾಡಿದ್ದಾರಂತೆ. ಅದರ ಪ್ರಭಾವದಿಂದಲೇ ಈಗ ನಟಿಯಾಗಿ ಸ್ಯಾಂಡಲ್ ವುಡ್ ಗೆ ಎಂಟ್ರಿ ಆಗಿದ್ದಾರೆ. ಅಲ್ವಿನ್ ಫ್ರಾನ್ಸಿಸ್ ನಿರ್ದೇಶನದ ‘ಬಾಬಿ’ ಹೆಸರಿನ ಚಿತ್ರವೊಂದಕ್ಕೆ ನಾಯಕಿ ಆಗುವ ಮೂಲಕ ಅವರ ಸಿನಿ ಜರ್ನಿಗೆ ಚಾಲನೆ ಸಿಕ್ಕಿದೆ‌.

ಹಾಟ್‌ ಹಾಟ್ ಹುಡುಗಿ !

ಮಾಡೆಲಿಂಗ್ ನಿಂದಲೇ ಬರಲಿ, ಸೀದಾ ಕಾಲೇಜಿನಿಂದಲೇ ಬರಲಿ, ನಟಿಯರಿಗೆ ಫೋಟೋಶೂಟ್ ಎನ್ನುವುದು ಬಣ್ಣದ ಲೋಕದ ಮೊದಲ ಆಹ್ವಾನ. ಯಾಕಂದ್ರೆ ಆಡಿಷನ್ ಗಳಿಗೆ ಹೋಗಬೇಕಾದ್ರೆ ಹಾಗೊಂದು ಪ್ರೊಪೈಲ್ ಇರಲೇಬೇಕು. ಅದಕ್ಕಾಗಿಯೇ ಜೊಸಿಟ ಅನೂಲ್ ಮಾಡಿಸಿದ ಪೋಟೋಶೂಟ್ ಭರ್ಜರಿಯಾಗಿದೆ.

ಬಾಲಿವುಡ್ ನಟಿಯರಿಗೇನು ತಾನೇನು ಕಮ್ಮಿ ಎನ್ನುವಂತೆ ಕ್ಯಾಮರಾ ಕಣ್ಣಿಗೆ ತಮ್ಮ‌ಮಾದಕ ಮೈ ಮಾಟ ಪ್ರದರ್ಶಿಸಿದ್ದಾರೆ ಅನೂಲ. ಕರಾವಳಿಯ ಈ ಚೆಲುವೆ ಎಂಟ್ರಿಯಲ್ಲೆ ಅಷ್ಟೇಲ್ಲ ಬೋಲ್ಡ್ ಆ್ಯಂಡ್ ಹಾಟ್ ಲುಕ್ ನೀಡಿರುವುದಕ್ಕೆ ಮಾಡೆಲಿಂಗ್ ಜಗತ್ತೇ ದೊಡ್ಡ ವೇದಿಕೆ . ಅದೇ ಅವರನ್ನು ಸಿನಿಮಾ‌ಎಂಬ ಗ್ಲಾಮರ್ ಜಗತ್ತಿಗೂ ಕರೆ ತಂದಿದೆ ಎನ್ನುವುದು ಅಷ್ಟೇ ಸತ್ಯ.

ಸಿನಿಮಾ‌ ನನ್ನ ಬಾಲ್ಯದ ಕನಸು

ಸಿನಿಮಾ ನನ್ನ ಬಾಲ್ಯದ ಕನಸು. ಅದೀಗ ನನಸಾಗಿದೆ. ಅದಕ್ಕೆ ಸೇತುವೆಯಾಗಿದ್ದು ಮಾಡೆಲಿಂಗ್. ಕಾಲೇಜು ದಿನಗಳಿಂದಲೇ ಮಾಡೆಲಿಂಗ್ ಶುರು‌ಮಾಡಿದ್ದೆ. ಆ ಮೂಲಕ ಹಲವು ಕಡೆಗಳಲ್ಲಿನ ರ್ಯಾಂಪ್ ಶೋಗಳಲ್ಲಿ ಭಾಗವಹಿಸಿದೆ‌. ಸ್ಪರ್ಧೆಗಳಲ್ಲೂ ಗೆದ್ದೆ. ಅದು ನನ್ನೊಳಗಿನ ಸಿನಿಮಾ‌ದ ಮೇಲಿನ ಆಸಕ್ತಿಯನ್ನು ದುಪ್ಪಟ್ಟು ಮಾಡಿತು. ಅವಕಾಶ ಸಿಕ್ಕರೆ ನಟಿಸೋಣ ಅಂತೆಲ್ಲ ಯೋಚಿಸುತ್ತಿದ್ದಾಗ ಕೊಂಕಣಿ ಸಿನಿಮಾದಲ್ಲಿ ಅಭಿನಯಿಸುವ ಅವಕಾಶ ಬಂತು’ ಎನ್ನುವ ಮಾತುಗಳೊಂದಿಗೆ ಮಾಡೆಲ್ ಜೊಸಿಟ, ನಟಿಯಾಗಿದ್ದರ ಹಿಂದಿನ ಕತೆ ಬಿಚ್ಚಿಡುತ್ತಾರೆ.

ಜನ್ವಾಯ್ ಮೂಲಕ ಶುರುವಾದ ಜರ್ನಿ!

ಕರಾವಳಿಯ ಈ ಚೆಲುವೆಗೆ ಸ್ಯಾಂಡಲ್ ವುಡ್ ಹೊಸದಾದರೂ ಬಣ್ಣದ ಲೋಕ ಹೊಸದಲ್ಲ. ಯಾಕಂದ್ರೆ ಈಗಾಗಲೇ ಜೊಸಿಟ, ಕೊಂಕಣಿಯ ‘ಜನ್ವಾಯ್’ ಹೆಸರಿನ ಚಿತ್ರದಲ್ಲಿ ಅಭಿನಯಿಸಿದ್ದರು. ಆದಾದ ಬಳಿಕ ‘ಸೈಕೊ’ ಹೆಸರಿನ ಕನ್ನಡದ ವೆಬ್ ಸೀರಿಸ್ ವೊಂದರಲ್ಲೂ ಕಾಣಿಸಿಕೊಂಡಿದ್ದರು. ಕಳೆದ ವರ್ಷ ಚಂದನವನದಲ್ಲಿ ಇದು ಭಾರೀ ಸದ್ದು ಮಾಡಿತ್ತು. ಇದಕ್ಕೆ ಸಾಕಷ್ಟು ಮೆಚ್ಚುಗೆ ಕೂಡ ಸಿಕ್ಕಿತ್ತು.

   ” ಫೋಟೋಸ್ ನೋಡಿ, ನಾನೇನು ಬರೀ ಗ್ಲಾಮರಸ್ ಹುಡುಗಿ ಅಂತನ್ಕೊಬೇಡಿ. ಸಿನಿಮಾ‌ ನನ್ನ ಪ್ಯಾಷನ್. ಅದ್ಯಾಕೋ ಬಾಲ್ಯದಲ್ಲೇ ಸಿನಿಮಾ ಹುಚ್ಚಿತ್ತು. ನಟಿಯಾಗ್ಬೇಕು ಎನ್ನುವುದಕ್ಕಿಂತ ಒಳ್ಳೆಯ ಪಾತ್ರಗಳಲ್ಲಿ ಅಭಿನಯಿಸಬೇಕೆನ್ನುವುದು ನನ್ನಾಸೆ. ಹಾಗಾಗಿಯೇ ಮಾಡೆಲಿಂಗ್ ಫೀಲ್ಡ್ ನಿಂದ ಇಲ್ಲಿಗೆ ಬಂದಿದ್ದೇನೆ.”

ಕಾಲಿವುಡ್ ಗೂ ಕಾಲಿಟ್ಟ ಕನ್ನಡತಿ !

ಗ್ಲಾಮರಸ್ ಪಾತ್ರಗಳಿಗೆ ಹೇಳಿ ಮಾಡಿಸಿದಂತಿರುವ ಜೊಸಿಟ ಅನೂಲ, ಬಣ್ಣ ಹಚ್ಚಿದ ಅತೀ ಕಡಿಮೆ ಅವದಿಯಲ್ಲಿ ಕಾಲಿವುಡ್ ಗೂ ಕಾಲಿಟ್ಟಿದ್ದಾರೆ‌ . ಸೈಕೋ ವೆಬ್ ಸಿರೀಸ್ ಮೂಲಕ ಸಿಕ್ಕ ಒಂದಷ್ಟು ಸಂಪರ್ಕಗಳೇ, ಕನ್ನಡದ ಗಡಿ ದಾಟಲು ಸೇತುವೆ ಆಗಿವೆ. ಅಲ್ಲಿ ‘ ಕಾದಲ್ ನಿವುಲೆ ‘ ಹೆಸರಿನ ಚಿತ್ರದಲ್ಲಿ ಅಭಿನಯಿಸಿದ್ದು, ಅದೀಗ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಈ ಮಧ್ಯೆ ಅಲ್ವಿನ್ ಪ್ರಾನ್ಸಿಸ್ ನಿರ್ದೇಶನದ ‘ಬಾಬಿ’ ಹೆಸರಿನ ಚಿತ್ರದ ಮೂಲಕ ಕನ್ನಡಕ್ಕೆ ಪೂರ್ಣ ಪ್ರಮಾಣದ ನಾಯಕಿಯಾಗಿ ಪರಿಚಯವಾಗುತ್ತಿದ್ದಾರೆ‌. ಇಷ್ಟಕ್ಕೂ ಕುತೂಹಲ ಇರುವುದು ಇವರ ಪಾತ್ರಗಳ ಆಯ್ಕೆಯ ಬಗ್ಗೆ.

ನಟನೆಗೆ ಹೆಚ್ಚು ಅವಕಾಶ ಇರಬೇಕು !

ಫೋಟೋಸ್ ನೋಡಿ, ನಾನೇನು ಬರೀ ಗ್ಲಾಮರಸ್ ಹುಡುಗಿ ಅಂತನ್ಕೊಬೇಡಿ. ಸಿನಿಮಾ‌ ನನ್ನ ಪ್ಯಾಷನ್. ಅದ್ಯಾಕೋ ಬಾಲ್ಯದಲ್ಲೇ ಸಿನಿಮಾ ಹುಚ್ಚಿತ್ತು. ನಟಿಯಾಗ್ಬೇಕು ಎನ್ನುವುದಕ್ಕಿಂತ ಒಳ್ಳೆಯ ಪಾತ್ರಗಳಲ್ಲಿ ಅಭಿನಯಿಸಬೇಕೆನ್ನುವುದು ನನ್ನಾಸೆ. ಹಾಗಾಗಿಯೇ ಮಾಡೆಲಿಂಗ್ ಫೀಲ್ಡ್ ನಿಂದ ಇಲ್ಲಿಗೆ ಬಂದಿದ್ದೇನೆ. ಮೊದಲ ಸಿನಿಮಾದಲ್ಲೇ ಅಂತ ಅವಕಾಶ ಸಿಕ್ಕಿತ್ತು.‌ ತಮಿಳಿನಲ್ಲೂ ಆ ಪಾತ್ರ ಸಿಕ್ಕಿದೆ‌. ಮುಂದೆಯೂ ಒಳ್ಳೆಯ ಪಾತ್ರಗಳು, ಅಷ್ಟೇ ಒಳ್ಳೆಯ ಕತೆಗಳ ನಿರೀಕ್ಷೆಯಲ್ಲಿದ್ದೇನೆ ಎನ್ನುತ್ತಾರೆ ಜೊಸಿಟ ಎಂಬ ಗ್ಲಾಮರಸ್ ನಟಿ. ಆಲ್ ದಿ ಬೆಸ್ಟ್ ಜೊಸಿಟ ಅನೂಲ.

Categories
ಸಿನಿ ಸುದ್ದಿ

ಅಭಿಮಾನಿಯನ್ನು ‘ಪದವಿಪೂರ್ವ’ ಕ್ಕೆ ಸೇರಿಸಿದ ಜಗ್ಗೇಶ್

ಯೋಗರಾಜ್ ಭಟ್ಟರ’ ಪದವಿ ಪೂರ್ವ’ ಕ್ಕೆ ಭರ್ಜರಿ ಹೊಸ ಮುಖಗಳು ಸೇರ್ಪಡೆ ಆಗುತ್ತಿವೆ. ಮೊನ್ನೆಯಷ್ಟೆ ಆಳ್ವಾಸ ಕಾಲೇಜು ವಿದ್ಯಾರ್ಥಿನಿ‌, ಮಾಡೆಲಿಂಗ್ ಬೆಡಗಿ ಬೆಂಗಳೂರು ಮೂಲದ ಯಶಾ ಶಿವಕುಮಾರ್ ಸೇರ್ಪಡೆಯಾದ ಬೆನ್ನಲೇ ಮತ್ತೊರ್ವ ಯುವ ಪ್ರತಿಭೆ ಬುಧವಾರ ಪದವಿ ಪೂರ್ವ ಕ್ಕೆ ಜಾಯಿನ್ ಆಗಿದ್ದಾರೆ‌. ಆತನ ಹೆಸರು ವಿಜೇಶ್ ಅಲಿಯಾಸ್ ವೆಂಕಟೇಶ್ ಗಂಗಾಧರಪ್ಪ.

ವಿಜೇಶ್

ಹಾಸನದ ಅರಕಲುಗೂಡಿನ ಯುವ ಪ್ರತಿಭೆ. ನವರಸನಾಯಕ ಜಗ್ಗೇಶ್ ಅಭಿನಯದ ಚಿತ್ರಗಳ ತುಣುಕುಗಳಿಗೆ ತನ್ನ ವಿಚಿತ್ರ ಮ್ಯಾನರಿಸಂ ಮೂಲಕ ಹೊಸ ಟಚ್ ನೀಡಿ ಜನರನ್ನು ನಕ್ಕು ನಗಿಸುತ್ತಿದ್ದ ಹುಡುಗನಿಗೆ ‘ಪದವಿಪೂರ್ವ’ ಚಿತ್ರ ಅದೃಷ್ಟ ಹೊತ್ತು ತಂದಿದೆ. ಸ್ವತಃ ಜಗ್ಗೇಶ್ ಅವರೇ ಈತನ ಅಭಿನಯ ಶೈಲಿಯನ್ನು ಮೆಚ್ಚಿ ‘ಪದವಿಪೂರ್ವ’ ಚಿತ್ರತಂಡಕ್ಕೆ ಪರಿಚಯಿಸುವ ಮೂಲಕ ಹೊಸ ಕಲಾವಿದನಿಗೆ ಆಸರೆಯಾಗಿದ್ದಾರಂತೆ.

ಚಿತ್ರದ ನಾಯಕನಾಗಿ “ಪೃಥ್ವಿ ಶಾಮನೂರ್” ಅಭಿನಯಿಸುತ್ತಿದ್ದು, ನಾಯಕಿಯರಾಗಿ “ಅಂಜಲಿ ಅನೀಶ್” ಹಾಗು “ಯಶ ಶಿವಕುಮಾರ್” ಈಗಾಗಾಲೇ ಆಯ್ಕೆಯಾಗಿದ್ದಾರೆ. ಅರ್ಜುನ್ ಜನ್ಯ, ಸಂತೋಷ್ ರೈ ಪಾತಾಜೆರಂತ ಅತ್ಯುತ್ತಮ ತಂತ್ರಜ್ಞರನ್ನೂಳಗೊಂಡ ‘ಪದವಿಪೂರ್ವ’ ತಂಡಕ್ಕೆ, ‘ಪಂಚತಂತ್ರ ‘ ಚಿತ್ರದ ರೇಸ್ ದೃಶ್ಯಗಳನ್ನು ಅಚ್ಚು’ಕಟ್’ ಆಗಿ ತೆರೆಯ ಮೇಲೆ ಮೂಡುವಂತೆ ಮಾಡಿದ್ದ ಸಂಕಲನಕಾರ “ಮಧು ತುಂಬಕೆರೆ” ಸಂಕಲನದ ಜವಾಬ್ದಾರಿ ಹೊತ್ತಿದ್ದಾರೆ.

ಚಿತ್ರದ ಪೂರ್ವತಯಾರಿ ಕಾರ್ಯಭರದಿಂದ ಸಾಗಿದ್ದು, ಪ್ರಮುಖ ಪಾತ್ರಧಾರಿಗಳಿಗೆ “ಆಕ್ಟಿಂಗ್ ವರ್ಕ್‌ಶಾಪ್” ನಡೆಸಲಾಗುತ್ತಿದೆ. ಶಿವಮೊಗ್ಗ, ಮಂಗಳೂರು ಹಾಗು ಬೆಂಗಳೂರಿನ ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಸಲು ಚಿತ್ರತಂಡ ಆಲೋಚಿಸುತ್ತಿದ್ದು, ನವೆಂಬರ್ ತಿಂಗಳಿನಲ್ಲಿ ಚಿತ್ರೀಕರಣ ಶುರು ಮಾಡಲು ಚಿತ್ರ ಸಿದ್ಧತೆ ನಡೆಸಿದೆ.

Categories
ಸಿನಿ ಸುದ್ದಿ

ರತ್ನನ್ ಪ್ರಪಂಚದಲ್ಲಿ  ಗಟ್ಟಿಗಿತ್ತಿ ಗೌಡ್ತಿಯಾಗಿ‌ ನಟಿ ತಾರಾ

ನಟಿ ತಾರಾ ಕನ್ನಡ ಚಿತ್ರರಂಗದ ಹಿರಿಯ ನಟಿ. ನೂರಾರು ಅಧಿಕ ಸಿನಿಮಾಗಳಲ್ಲಿ ನಟಿಸಿದ ಹೆಗ್ಗಳಿಕೆ ಅವರದ್ದು. ಒಂದಕ್ಕಿಂತ ಒಂದು ಭಿನ್ನ ವಿಭಿನ್ನ ಪಾತ್ರವನ್ನು ಪೋಷಿಸುತ್ತ ಬಂದಿದ್ದಾರವರು. ಆದರೆ, ಆ ಒಂದು ಪಾತ್ರವನ್ನು ಬಿಟ್ಟು! ಅದುವೇ ಗಟ್ಟಿಗಿತ್ತಿ ಗೌಡತಿ ಪಾತ್ರ. ಹೌದು, ಅಂಥ ಒಂದು ವಿಶೇಷ ಪಾತ್ರವನ್ನು ಡಾಲಿ ಧನಂಜಯ್ ನಟಿಸುತ್ತಿರುವ ‘ರತ್ನನ್​ ಪ್ರಪಂಚ’ ಚಿತ್ರ ಅವರಿಗೆ ಕರುಣಿಸಿದೆ.

ಕಾರ್ತಿಕ್​ ಗೌಡ ಮತ್ತು ಯೋಗಿ ಜಿ. ರಾಜ್​ ನಿರ್ಮಾಣ ಮಾಡುತ್ತಿರುವ ರತ್ನನ್​ ಪ್ರಪಂಚ ಸಿನಿಮಾವನ್ನು ‘ದಯವಿಟ್ಟು ಗಮನಿಸಿ’ ಸಿನಿಮಾ ಖ್ಯಾತಿಯ ರೋಹಿತ್​ ಪದಕಿ ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ಅತೀ ವಿಶೇಷವಾದ ಪಾತ್ರದಲ್ಲಿ ತಾರಾ ಕಾಣಿಸಿಕೊಳ್ಳಲಿದ್ದಾರೆ. ಉತ್ತರ ಕರ್ನಾಟಕ ಮೂಲದ ಊರೊಂದರ ಗಟ್ಟಿಗಿತ್ತಿ ಗೌಡತಿಯಾಗಿ ಅವರನ್ನು ತೋರಿಸುತ್ತಿದ್ದಾರೆ ನಿರ್ದೇಶಕರು.


‘ಕಥೆಯ ಒಂದೆಳೆ ಹೇಳುತ್ತಿದ್ದಂತೆ, ನನಗೆ ಇಷ್ಟವಾಯ್ತು.ಆದರೆ ಜೊತೆಗೆ ಆಳಕು ಆಯ್ತು..ಅದರಲ್ಲೂ ನಾನು ಈ ರೀತಿಯ ಪಾತ್ರವನ್ನು ಇಲ್ಲಿಯವರೆಗೂ ಮಾಡಿಲ್ಲ. ಖಡಕ್​ ಉತ್ತರ ಕರ್ನಾಟಕ ಭಾಷೆಯನ್ನು ಮಾತನಾಡುವ ಹೆಣ್ಣುಮಗಳಾಗಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಮಹಿಳೆಯಾಗಿ ನನ್ನ ಪಾತ್ರ ಸಾಗಲಿದೆ. ನೆಗೆಟಿವ್​ ಶೇಡ್​ ಅಲ್ಲದ, ದೇವತೆಯಂತೆ ಬಿಂಬಿಸುವ ಪಾತ್ರ ಇದು. ಇಂಥ ಪಾತ್ರ ನೀಡಿದಕ್ಕೆ ನಿರ್ದೇಶಕರಿಗೆ ನನ್ನ ಧನ್ಯವಾದ’ ಎನ್ನುವ ತಾರಾ, ಉತ್ತರ ಕರ್ನಾಟಕ ಭಾಷೆ ಕಲಿಯುವುದಕ್ಕೂ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.ಇಡೀ ಸಿನಿಮಾದಲ್ಲಿ ತಾರಾ ಪಾತ್ರ ಮುಖ್ಯವಾಗಿರುವುದರಿಂದ ಬಹುಪಾಲು ಸಿನಿಮಾದಲ್ಲಿ ಅವರೂ ಕಾಣಿಸಿಕೊಳ್ಳುತ್ತಾರೆ. ಉತ್ತರ ಕರ್ನಾಟಕದ ಜವಾರಿ ಭಾಷೆಯಲ್ಲಿಯೇ ಸಂಭಾಷಣೆ ಒಪ್ಪಿಸಬೇಕಿರುವುದರಿಂದ ಅದಕ್ಕಾಗಿ ತಯಾರಿ ನಡೆಸಿದ್ದಾರೆ. ಆ ಸೊಗಡನ್ನು ಉಚ್ಚರಿಸುವುದಕ್ಕೆ ತರಬೇತಿಯನ್ನೂ ಪಡೆದುಕೊಳ್ಳುತ್ತಿದ್ದಾರೆ.

” ‘ಈವರೆಗೂ 500ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದೇನೆ. ಪ್ರತಿ ಪಾತ್ರದಲ್ಲಿಯೂ ಕಲಿಯುವುದಕ್ಕೆ ಸಾಕಷ್ಟಿತ್ತು. ಇಷ್ಟು ವರ್ಷಗಳಾದರೂ ಈಗಲೂ ನನಗೆ ಕಲಿಯುವುದಕ್ಕೆ ಇಂಥ ಪಾತ್ರಗಳ ಮೂಲಕ ಅವಕಾಶ ಸಿಗುತ್ತಿದೆ. ಆ ರೀತಿಯ ಪಾತ್ರ ಹಿಡಿದು ಬರುವ ನಿರ್ದೇಶಕರಿಗೆ, ನೀವೇ ನಟಿಸಬೇಕು ಎನ್ನುವ ನಿರ್ಮಾಪಕರಿಗೆ ನನ್ನ ನಮನಗಳು’’

–  ತಾರಾ

ಇನ್ನು ಲಾಕ್​ಡೌನ್​ ಮುಗಿಯುತ್ತಿದ್ದಂತೆ ಟಾಮ್​ ಆ್ಯಂಡ್​ ಜೆರ್ರಿ ಮತ್ತು ಬಡವ ರಾಸ್ಕಲ್ ಚಿತ್ರದ ಶೂಟಿಂಗ್​ ಮುಗಿಸಿರುವ ತಾರಾ, ನವೆಂಬರ್​ನಲ್ಲಿ ರತ್ನನ್​ ಪ್ರಪಂಚ ಸಿನಿಮಾದಲ್ಲಿ ಭಾಗಿಯಾಗಲಿದ್ದಾರೆ. ಇದರ ಜತೆಗೆ ಹೊಸದಾಗಿ ಐದಾರು ಚಲನಚಿತ್ರಗಳನ್ನೂ ಒಪ್ಪುಕೊಂಡಿದ್ದಾರೆ.

Categories
ಬ್ರೇಕಿಂಗ್‌ ನ್ಯೂಸ್

ಹೆಸರಿಡದ ಚಿತ್ರಕ್ಕೆ ವಸಿಷ್ಠ ಸಿಂಹ ಹೀರೋ!

ಕನ್ನಡದ ಜತೆಗೆ ತೆಲುಗಿನಲ್ಲೂ ಬ್ಯುಸಿಯಾದ ಚಿಟ್ಟೆ

ಚಿಟ್ಟೆ ಖ್ಯಾತಿಯ ನಟ  ವಸಿಷ್ಠ ಸಿಂಹ ಸಿಕ್ಕಾಪಟ್ಟೆ ಬ್ಯುಸಿ ಯಾಗಿದ್ದಾರೆ. ಕನ್ನಡದ ಜತೆಗೀಗ ಅವರು ತೆಲುಗಿನಲ್ಲೂ ಬಹು ಬೇಡಿಕೆ ನಟ. ಈ‌‌ಮಧ್ಯೆ ಕನ್ನಡದಲ್ಲೇ ಸಾಲು ಸಾಲು ಸಿನಿಮಾಗಳಿಗೆ ಹೀರೋ ಆಗುತ್ತಿದ್ದು, ಈಗ ಹೆಸರಿಡದ ಚಿತ್ರವೊಂದಕ್ಕೆ ಹೀರೋ ಆಗಿದ್ದು, ಅದು ಈ ತಿಂಗಳ ಕೊನೆಯಲ್ಲಿ ಶುರುವಾಗಲಿದೆಯಂತೆ.

ಚಿತ್ರದ ಶೀರ್ಷಿಕೆ ಗೌಪ್ಯವಾಗಿಟಿರುವ ಚಿತ್ರತಂಡ ಮಾಸಾಂತ್ಯಕ್ಕೆ ಮುಹೂರ್ತ ನಡೆಸಿ, ಚಿತ್ರದ ಶೀರ್ಷಿಕೆ ಅನಾವರಣ ಗೊಳಿಸುವುದಾಗಿ‌ ತಿಳಿಸಿದೆ. ಜನರತ್ನ ಪ್ರೊಡಕ್ಷನ್ಸ್ ಲಾಂಛನದಲ್ಲಿ ಜನಾರ್ದನ ವಿ ಅವರು ನಿರ್ಮಿಸುತ್ತಿರುವ ಈ ಚಿತ್ರವನ್ನು ವಚನ್ ನಿರ್ದೇಶಿಸುತ್ತಿದ್ದಾರೆ. ನಿರ್ದೇಶಕ ಪವನ್ ಕುಮಾರ್ ಜೊತೆಗೆ ‘ಲೂಸಿಯಾ’ ಚಿತ್ರದಲ್ಲಿ ಸಹ ನಿರ್ದೇಶಕರಾಗಿ ಕಾರ್ಯನಿರ್ವಹಿಸಿರುವ ವಚನ್ ಅವರಿಗೆ ಇದು ಚೊಚ್ಚಲ ನಿರ್ದೇಶನದ ಚಿತ್ರ.

ಅನೂಪ್ ಸೀಳಿನ್ ಸಂಗೀತವಿರುವಈ ಚಿತ್ರಕ್ಕೆ ‘ಮಫ್ತಿ’ ಖ್ಯಾತಿಯ ನವೀನ್ ಕುಮಾರ್  ಛಾಯಾಗ್ರಹಣವಿದೆ. ‘ಟಗರು’ ಖ್ಯಾತಿಯ ಮಾಸ್ತಿ  ಸಂಬಾಷಣೆ ಬರೆಯುತ್ತಿದ್ದಾರೆ. ವಸಿಷ್ಠ ಸಿಂಹ ನಾಯಕರಾಗಿ ನಟಿಸುತ್ತಿರುವ ಈ‌ ಚಿತ್ರದ ಮುಖ್ಯ ಭೂಮಿಕೆಯಲ್ಲಿ ‌ಖ್ಯಾತ ನಟ ಕಿಶೋರ್ ಕೂಡ ಕಾಣಿಸಿಕೊಳುತ್ತಿದ್ದಾರೆ. ಸಾಕಷ್ಟು ಪ್ರಸಿದ್ದ ಕಲಾವಿದರು ಈ ಚಿತ್ರದಲ್ಲಿ ನಟಿಸುತ್ತಿದ್ದು, ಈ ಕುರಿತು ಹೆಚ್ಚಿನ ಮಾಹಿತಿ ಸದ್ಯದಲ್ಲೇ ತಿಳಿಸಲಾಗುವುದು.

Categories
ಸಿನಿ ಸುದ್ದಿ

ಟಾಲಿವುಡ್ ,‌ಮಾಲಿವುಡ್ ನಲ್ಲೂ ‘ ಸಿಂಹ ‘ ಘರ್ಜನೆ, ವಸಿಷ್ಠ ಬರ್ತ್ ಡೇ ಗೆ ಸಿಕ್ಕ ಗಿಫ್ಟ್ ಏನು ಗೊತ್ತಾ?

ಕೊರೋನಾ ಕಾರಣ ಬರ್ತ್ ಡೇ ಗ್ರಾಂಡ್  ಆಚರಣೆಯಿಂದ ದೂರವುಳಿದ ನಟನಿಗೆ ‘ಕಾಲಚಕ್ರ’ದ ಭರ್ಜರಿ ಸಂಭ್ರಮ

ಸರಿ ಸುಮಾರು ಆರಡಿ ಹೈಟು, ಖಡಕ್ ಲುಕು, ಕಂಚಿ‌ನ ಕಂಠ, ‌ಯುಂಗ್ ವಿಲನ್ ಅಂದಾಕ್ಷಣ ನೆನಪಾಗುವ ಹೆಸರು ಚಿಟ್ಟೆ ಅಲಿಯಾಸ್ ವಸಿಷ್ಟ ಸಿಂಹ. ಸ್ಯಾಂಡಲ್ ವುಡ್ ಮಟ್ಟಿಗೆ ಅವರೊಬ್ಬ ಪ್ರತಿಭಾನ್ವಿತ ಯುವ ನಟ. ಗಾಯಕರಾಗಲು ಬೆಂಗಳೂರಿಗೆ ಬಂದು ನಟನಾಗಿ‌ಮಿಂಚುತ್ತಿರುವ ಅವರ ಸಿನಿಜರ್ನಿಯೇ ಒಂದು ಇಂಟೆರೆಸ್ಟಿಂಗ್. ‘ರಾಜಾಹುಲಿ ‘ ಚಿತ್ರದೊಂದಿಗೆ ಕನ್ನಡದಲ್ಲಿ ಬಹುಬೇಡಿಕೆಯ ವಿಲನ್ ಆಗಿದ್ದು, ಆ ಜನಪ್ರಿಯತೆಯ ಮೂಲಕವೇ ಗಾಯಕರಾಗಿದ್ದು, ಅಲ್ಲಿಂದೀಗ ನಾಯಕರಾಗಿಯೂ ಮಿಂಚುತ್ತಿರುವುದು ಅವರ ಸಿನಿ ಜರ್ನಿಯ ವಿಶೇಷ. ಅವರಿಗಿಂದು ಹುಟ್ಟು ಹಬ್ಬ( ಅಕ್ಟೋಬರ್ 19) .

ಬೇಡಿಕೆಯ‌‌ ಹೀರೋ ಆಗಿದ್ದೇ ಬರ್ತ್ ಡೇ ಗಿಫ್ಟ್ !

ಕೊರೋನಾ ಕಾರಣಕ್ಕೆ ಅವರಿಂದು ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿಲ್ಲ. ಆದರೆ ಈ ವರ್ಷದ ಅವರ ಹುಟ್ಟುಹಬ್ಬ ಎರಡು ಕಾರಣಕ್ಕೆ ಗಮನಾರ್ಹ. ‘ಇಂಗ್ಲೆಂಡ್ ವರ್ಸಸ್ ಲಂಡನ್’ ಚಿತ್ರದ ಮೂಲಕ ಕನ್ನಡದಲ್ಲಿ ಹೀರೋ ಆಗಿಯೂ ಬಡ್ತಿ ಪಡೆದ ಟಗರು ಖ್ಯಾತಿಯ ‘ಚಿಟ್ಟೆ ‘ ಇವತ್ತು ಭರ್ಜರಿ ಬ್ಯುಸಿ. ಕಾಲಚಕ್ರ, ತಲ್ವಾರ್ ಪೇಟೆ, ಗ್ಯಾಂಗ್ ಸ್ಟರ್, ‘ಪಂಥ’ ಸೇರಿದಂತೆ ಸಾಲು ಸಾಲು ಚಿತ್ರಗಳಿಗೆ ನಾಯಕ‌ನಟ‌. ಇದರ ಜತೆಗೆ ಸಾಕಷ್ಟು ಸಿನಿಮಾ‌ಗಳಿಗೂ ವಿಲನ್ ಆಗಿ ಅಭಿನಯಿಸಿದ್ದಾರೆ‌. ಮತ್ತೊಂದೆಡೆ ಹೀರೋ ಆಗಿ ಟಾಲಿವುಡ್ ಗೂ ಎಂಟ್ರಿ ಆಗಿದ್ದಾರೆ. ಒಂದಲ್ಲ ಅಲ್ಲಿ‌ಅವರೀಗ ಎರಡು ಚಿತ್ರಕ್ಕೆ ನಾಯಕ. ‘ಓದೆಲ್ಲಾ ರೈಲ್ವೆ ಸ್ಟೇಷನ್ ‘ಜತೆಗೆ ಕನ್ನಡದ‌ ‘ಗ್ಯಾಸ್ ಸ್ಟರ್’ ಕೂಡ ತೆಲುಗಿನಲ್ಲೂ ನಿರ್ಮಾಣವಾಗುತ್ತಿದೆ.ಹಾಗೆಯೇ ‘ ಕಾಲ ಚಕ್ರ ‘ ಮಲಯಾಳಂ ಗೂ‌ ಕಾಲಿಡುತ್ತಿದೆ.
ಈಗಷ್ಟೇ ಹೀರೋ‌ ಆಗಿ ಗುರುತಿಸಿಕೊಳ್ಳುತ್ತಿರುವ ವಸಿಷ್ಠ ಸಿಂಹ ಅವರಿಗೆ ಇದಕ್ಕಿಂತ ಇನ್ನೇನು ಬೇಕು? ಇವೆಲ್ಲ ಅವರ ವರ್ಷದ ಹುಟ್ಟು ಹಬ್ಬದ ಭರ್ಜರಿ ಗಿಫ್ಟ್.

 

ನಿಮ್ಮ‌ಹಾರೈಕೆ , ನೀವಿರುವಲ್ಲಿಂದಲೇ ಕೊಡಿ

ಪ್ರತಿ ವರ್ಷ ವಸಿಷ್ಠ ಅವರ ಹುಟ್ಟು ಹಬ್ಬ ಅಂದ್ರೆ ಅವರ ಮನೆ ಮುಂದೆ ಅಭಿಮಾನಿಗಳ ದಂಡು‌ ಸೇರುತ್ತಿತ್ತು. ತಮ್ಮ‌ನೆಚ್ಚಿನ ಹುಟ್ಟು ಹಬ್ಬಕ್ಕೆ ಶುಭಾಶಯ ಹೇಳಲು ದೂರದೂರುಗಳಿಂದ ಫ್ಯಾನ್ಸ್ ಬರುತ್ತಿದ್ದರು. ಆದರೆ ಈ ವರ್ಷ ಅದಕ್ಕೆ ಅವಕಾಶ ಇಲ್ಲ. ಯಾಕಂದ್ರೆ ಕೊರೋನಾ ಕಾರಣಕ್ಕೆ ಅವರು ಹುಟ್ಟು ಹಬ್ಬವನ್ನು ಗ್ರಾಂಡ್ ಆಗಿ ಆಚರಿಸಿಕೊಳ್ಳುತ್ತಿಲ್ಲ.’ ಕೊರೊನಾದಿಂದಾಗಿ ಇದು ಸಾಧ್ಯವಾಗುತ್ತಿಲ್ಲ. ಎಲ್ಲರ ಆರೋಗ್ಯ ಹಿತದೃಷ್ಟಿಯಿಂದ ಹುಟ್ಟುಹಬ್ಬ ಆಚರಣೆಯನ್ನು ಕ್ಯಾನ್ಸಲ್ ಮಾಡಲಾಗಿದೆ. ನೀವೆಲ್ಲಿ ಇರುತ್ತಿರೋ, ಅಲ್ಲಿಂದಲೇ ತಮ್ಮ ಆಶೀರ್ವಾದ, ಪ್ರೀತಿ, ಹಾರೈಕೆಯನ್ನು ಕೊಡಿ. ನಾವೆಲ್ಲರೂ ಒಗ್ಗಟ್ಟಾಗಿ ಈ ಕೊರೊನಾ ವೈರಸ್ ವಿರುದ್ಧ ಹೋರಾಡೋಣ. ಆದಷ್ಟು ಬೇಗ ನಮ್ಮ ಜನಜೀವನ ಮೊದಲಿನ ಸ್ಥಿತಿಗೆ ಬರಲಿ’ ಎಂದು ನಟ ವಸಿಷ್ಠ ಸಿಂಹ‌ ಅಭಿಮಾನಿಗಳಲ್ಲಿ‌ ಮನವಿ‌ಮಾಡಿದ್ದಾರೆ.

ಕಾಲ ಚಕ್ರದಲ್ಲಿ ವಸಿಷ್ಠ

ಹುಟ್ಟು ಹಬ್ಬಕ್ಕೆ ‘ಕಾಲಚಕ್ರ’ ದ ಸಂಭ್ರಮ ..

ಕನ್ನಡದಲ್ಲಿ ವಸಿಷ್ಠ ಸಿಂಹ‌ ನಾಯಕರಾಗಿ ಅಭಿನಯಿಸಿರುವ ಚಿತ್ರಗಳ ಪೈಕಿ ಈಗ ಕಾಲಚಕ್ರ ರಿಲೀಸ್ ಗೆ ರೆಡಿ ಆಗಿದೆ. ವಸಿಷ್ಠ ಅವರಿಗೆ ಇದೊಂದು‌ಸ್ಪೆಷಲ್ ಸಿನಿಮಾ. ಅದಕ್ಕೆ ಕಾರಣ ಅವರ ಪಾತ್ರ. ಸುಮಾರು ಎಂಟು ಗೆಟಪ್, ನಾಲಹಬ್ಬ
ವಿಭಿನ್ನ ಪಾತ್ರ ಗಳಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ‌. ಹಾಗೆಯೇ ಇದೊಂದು ವಿಭಿನ್ನ ಹಂದರದ ಚಿತ್ರ ಎನ್ನುವುದು ಅವರ ವಿಶ್ವಾಸದ ಮಾತು. ಈ ಮಧ್ಯೆ :ಕಾಲ ಚಕ್ರ’ ಮಲಯಾಳಂನಲ್ಲೂನಿರ್ಮಾಣವಾಗುತ್ತಿದೆ. ‘ಕಾಲಚಕ್ರ’ ಚಿತ್ರದ
ರಿಮೇಕ್ ಹಕ್ಕು ಮಲೆಯಾಳಂ ಭಾಷೆಗೆ ಮಾರಾಟವಾಗುತ್ತಿದೆ. ಅಲ್ಲಿನ ಹೆಸರಾಂತ ನಿರ್ಮಾಪಕರೊಬ್ಬರು ‘ಕಾಲಚಕ್ರ’ ಚಿತ್ರದ ಕಥೆ ಇಷ್ಟಪಟ್ಟು ಮಲೆಯಾಳಂ ನಲ್ಲಿ ಚಿತ್ರ ನಿರ್ಮಾಣ ಮಾಡಲು ಮುಂದಾಗಿದ್ದಾರಂತೆ. ಇದೊಂದು ಸಂತಸದ ವಿಷಯ ಎನ್ನುತ್ತಿದೆ‌ ಚಿತ್ರ ತಂಡ.

ತೆಲುಗು ಚಿತ್ತ ಒದೆಲಾ ರೈಲ್ವೆ ಸ್ಟೇಷನ್ ಪೋಸ್ಟರ್

ಟಾಲಿವುಡ್ ಗೆ ಹಾರಿದ‌ ಚಿಟ್ಟೆ…
ವಸಿಷ್ಠ ಸಿಂಹ‌ ಈಗ ಟಾಲಿವುಡ್ ನಲ್ಲೂ ಹೀರೋ. ವಿಲನ್ ಆಗಿ ಈಗಾಗಲೇ ಅಲ್ಲೂ ತಮ್ನ ಖಡಕ್ ಲುಕ್ ತೋರಿಸಿದ ಅವರಿಗೀಗ ಹೀರೋ ಆಗಿ ಕಾಣಿಸಿಕೊಳ್ಳುವ ಬಂಪರ್ ಅವಕಾಶವೂ ಸಿಕ್ಕಿದೆ. ಅದರಲ್ಲೂ ಪ್ರತಿಷ್ಟಿತ ಬ್ಯಾನರ್ ಗಳ ಸಿನಿಮಾಗಳಿಗೇ ಅವರು ಹೀರೋ ಆಗಿದ್ದಾರೆ. ಕನ್ನಡದ ‘ ಗ್ಯಾಂಗ್ ಸ್ಟರ್ ‘ ನ ತೆಲುಗು ವರ್ಷನ್ ಸೇರಿದಂತೆ ಓದೆಲ್ಲಾ ರೈಲ್ವೆಸ್ಟೇಷನ್ ಹೆಸರಿನ ಮತ್ತೊಂದು ಚಿತ್ರದ ಚಿತ್ರೀಕರಣ ಮುಗಿಸಿದ್ದಾರೆ. ಅಷ್ಟೇ ಅಲ್ಲ, ಅಲ್ಲಿಯೇ ಇನ್ನೆರೆಡು ಸಿನಿಮಾ‌ಮಾತುಕತೆ ಹಂತದಲ್ಲಿವೆಯಂತೆ. ಕನ್ನಡದ ಹಾಗೆಯೇ ಟಾಲಿವುಡ್ ನಲ್ಲೂ ಸಿಂಹ, ಹೀರೋ‌ಆಗಿ ಬ್ಯುಸಿ ಆಗುತ್ತಿರುವುದು ವಿಶೇಷ.

Categories
ಸಿನಿ ಸುದ್ದಿ

‘ಐ ಆ್ಯಮ್ ಕಲ್ಕಿ ‘ ಗೆ ಕತೆ ಬರೆದು ಮುಗಿಸಿದ ಚಂದ್ರಚೂಡ್!

ಜೋಗಿ ಪ್ರೇಮ್ ಬರ್ತ್ ಡೇ ಗೆ ಮೋಷನ್ ಪೋಸ್ಟರ್ ಗಿಫ್ಟ್ !

ಪತ್ರಕರ್ತ ಚಕ್ರವರ್ತಿ ಚಂದ್ರಚೂಡ್, ಚಿತ್ರ ನಿರ್ದೇಶಕ ಕಮ್ ನಟರಾಗಿ ಮತ್ತೊಂದು ಅವತಾರ ತಾಳುವುದಕ್ಕೆ ರೆಡಿಯಾಗುತ್ತಿದ್ದಾರೆ. ಸದ್ಯಕ್ಕೆ‌‌ ಚಿತ್ರ ನಿರ್ದೇಶನದ‌ ಅವತಾರ
ನಿಮ್ಗೆಲ್ಲ ಗೊತ್ತೇ ಇದೆ.‌ ಅದು ‘ಕಲ್ಕಿ’ ಅವತಾ‌ರ ! ಉಳಿದಂತೆ ಇನ್ನೊಂದು ಅವತಾರಕ್ಕೂ ತೆರೆಮರೆಯಲ್ಲಿ ಭರ್ಜರಿ ಸಿದ್ಧತೆ ನಡೆಸಿದ್ದಾರೆ. ಅದೇನು ಅನ್ನೋದು ಸದ್ಯಕ್ಕೆ ಸಸ್ಪೆನ್ಸ್. ಅವರ ಪ್ರಕಾರವೇ ಅದಕ್ಕೆ ಇನ್ನಷ್ಟು ದಿನ ಕಾಯಬೇಕಿದೆ. ಉಳಿದಂತೆ, ನಿರ್ದೇಶಕ ಹಾಗೂ ನಟ ಜೋಗಿ ಪ್ರೇಮ್ ಜತೆಗೆ ಸಿನಿಮಾ ಮಾಡಲು ಹೊರಟಿರುವ ಅವರ ಪ್ರಯತ್ನವೀಗ ಒಂದು ಹಂತಕ್ಕೆ ತಲುಪಿದೆ. ಕತೆ, ಚಿತ್ರಕತೆ ಸೇರಿದಂತೆ ಚಿತ್ರದ‌ ಸ್ಕ್ರಿಫ್ಟ್ ವರ್ಕ್ ಬರೆದು ಮುಗಿಸಿದ್ದಾರೆ. ಅಕ್ಟೋಬರ್ 22 ಕ್ಕೆ ಈ ಚಿತ್ರದ ತಾಜಾ ಮಾಹಿತಿ ಯೊಂದನ್ನು ರಿವೀಲ್ ಮಾಡಲು ಅಣಿಯಾಗಿದ್ದಾರೆ. ಸದ್ಯಕ್ಕೆ‌ ಆ‌ ಕೆಲಸದಲ್ಲೇ ಬ್ಯುಸಿಯಾಗಿದ್ದಾರಂತೆ.


ಅಂದ ಹಾಗೆ, ಜೋಗಿ ಪ್ರೇಮ್ ಹಾಗೂ ಚಕ್ರವರ್ತಿಚಂದ್ರಚೂಡ್ ಕಾಂಬಿನೇಷನ್ ಮೂಲಕ‌ ಬರಲಿರುವ ಚಿತ್ರದ ಹೆಸರು ‘ಐ ಆ್ಯಮ್ ಕಲ್ಕಿ’. ತುಂಬಾ ದಿನಗಳ ಹಿಂದೆಯೇ ಚಂದ್ರಚೂಡ್ ತಮ್ಮ ಚಿತ್ರದ ಟೈಟಲ್ ಜತೆಗೆ, ಜೋಗಿ ಪ್ರೇಮ್ ಈ ಚಿತ್ರದ ಹೀರೋ‌ ಅಂತಲೂ ಅನೌನ್ಸ್ ‌ಮಾಡಿದ್ದರು. ಹಾಗೆಯೇ ಈ ಚಿತ್ರಕ್ಕೆ ‘ಆನೆ‌ಪಟಾಕಿ ‘ ಚಿತ್ರದ ಖ್ಯಾತಿಯ ನಿರ್ಮಾಪಕ‌ ಸುರೇಶ್ ಬಂಡವಾಳ ಹೂಡುತ್ತಿರುವ ವಿಷಯ ಕೂಡ ಹಂಚಿಕೊಂಡಿದ್ದರು. ಈ‌ಮಧ್ಯೆ ‌ಕೊರೋನಾ ಕಾಟ ಶುರುವಾಯಿತು. ಸಿನಿಮಾ‌ ಚಟುವಟಿಕೆಗಳಿಗೂ ಅಡ್ಡಿಯಾಯಿತು. ಅಲ್ಲಿಂದ ಇಲ್ಲಿ ತನಕ ತೆರೆ ಮರೆಯಲ್ಲೇ ತಾವು ನಿರ್ದೇಶಿಸುತ್ತಿರುವ ಚಿತ್ರದ ಕೆಲಸದಲ್ಲಿ ಹೇಗೆ ಬ್ಯುಸಿಯಾಗಿದ್ದರು,ಏನೆಲ್ಲ ತಯಾರಿ ಮಾಡಿಕೊಂಡರು ಎನ್ನುವುದರ ಕುರಿತು ‘ ಸಿನಿ‌ಲಹರಿ’ ಜತೆಗೆ ಮಾತನಾಡಿದರು.

ರಿಸರ್ಚ್ ಮಾಡಿ ಬರೆದ ಕತೆ…

‘ ಕತೆ, ಚಿತ್ರಕತೆ ಹಾಗೂ ಸಂಭಾಷಣೆ ಸೇರಿದಂತೆ ಚಿತ್ರದ ಎಲ್ಲಾ ಬರವಣಿಗೆ ಕೆಲಸ ಮುಗಿದಿದೆ. ಇವೆಲ್ಲವನ್ನು‌ ನಾನೇ ಮಾಡಿದ್ದೇನೆ. ಇದಕ್ಕೆಲ್ಲ ತುಂಬಾ ದಿನ‌ ಹಿಡಿದಿದೆ. ಏನೇ ಮಾಡಿದರೂ ನಾನು ಆಳವಾದ ಅಧ್ಯಯನ, ಪೂರ್ವ ತಯಾರಿ ಇಲ್ಲದೆ ಮಾಡುವುದಿಲ್ಲ. ಈ‌ ಚಿತ್ರದ ಕತೆಗೆ ದೊಡ್ಡ‌‌ ರಿಸರ್ಚ್ ನಡೆದಿದೆ. ಯಾಕಂದ್ರೆ ಈ ಕತೆಯೇ ಹಾಗಿದೆ. ತೆರೆ ಮೇಲೆ ನೋಡಿದಾಗ ನಮ್ಮ‌ ಶ್ರಮ‌ ಗೊತ್ತಾಗಲಿದೆ’ ಎನ್ನುತ್ತಾರೆ ನಿರ್ದೇಶಕ‌ ಚಂದ್ರಚೂಡ್. ಈಗಾಗಲೇ ಅವರೇ ಮಾಹಿತಿ ಕೊಟ್ಟ ಪ್ರಕಾರ ಇದು ಬಾಂಬರ್ ಆದಿತ್ಯ ರಾವ್ ಸುತ್ತಣ ಕತೆ. ಅವರಿಗೆ ಇಂತಹ ವಿವಾದಿತ ಮತ್ತು ನಿಗೂಢ ಕತೆಗಳ ಮೇಲೆ‌ ಹೆಚ್ಚು ಆಸಕ್ತಿ. ಅವರೇ ಕತೆ, ಚಿತ್ರ ಕತೆ ಬರೆದಿರುವ ‘ ಮೆಲ್ಲೊಬ್ಬ ಮಾಯಾವಿ ‘ ಚಿತ್ರದ ಕತೆ ಕೂಡ ಒಂದು ನಿಗೂಢ ಮಾಫಿಯಾಕ್ಕೆ‌ ಸಂಬಂಧಿಸಿದ್ದು.‌ ವಿಚಿತ್ರ ಅಂದ್ರೆ ಅದು ಕೂಡ ಮಂಗಳೂರು ಸುತ್ತ ಮುತ್ತ ನಡೆದ ನೈಜ ಘಟನೆ.‌ ಈಗ ಮತ್ತೆ ಅಂಥಹದೇ ಒಂದು ರೋಚಕ ಕತೆಯನ್ನು ‘ಐ ಆ್ಯಮ್ ಕಲ್ಕಿ‌’ಮೂಲಕ ತೋರಿಸಲು ಹೊರಟಿದ್ದಾರಂತೆ.

ಬಾಬಿ ಸಿಂಹ ಬರ್ತಾರೆ…

‘ ಹೌದು, ಇಂತಹ ಕತೆ ಸಿಗದೇ ಹೋಗಿದ್ದರೆ ನಾನು ಸಿನಿಮಾ‌ ಮಾಡುವುದೇ ಡೌಟಿತ್ತು. ಯಾಕಂದ್ರೆ, ಅಂತಹ ಘಟನೆಗಳು‌ ನಂಗೆ ಬೇಕು.‌ಆ‌ಅಲೋಚನೆಯಲ್ಲಿದ್ದಾಗ ನಂಗೆ‌ ಸಿಕ್ಕಿದ್ದು‌‌ ಬಾಂಬರ್ ಆದಿತ್ಯ ರಾವ್ ಪ್ರಕರಣ.‌ವ್ಯವಸ್ಥೆಯೊಳಗಡೆ ಈ ಪ್ರಕರಣ ಏನಾಯ್ತು, ಎಂಥಾಯ್ತು ಅನ್ನೋದು ಬೇರೆ ವಿಚಾರ. ಆದರೆ ಬಾಂಬರ್ ಆದಿತ್ಯ ರಾವ್ ಎನ್ನುವ ವ್ಯಕ್ತಿತ್ವವೇ ಒಂದು‌ ನಿಗೂಢತೆಯ ರೂಪ. ಯಾಕಂದ್ರೆ ಆ‌ಬಗ್ಗೆ ನಾನು ರಿಸರ್ಚ್ ಮಾಡಿದ್ದೇನೆ.‌ಅದಕ್ಕಾಗಿ ಹೇಳುತ್ತಿದ್ದೇನೆ. ಆ ಪಾತ್ರಕ್ಕೆ ಯಾರು? ಸದ್ಯಕ್ಕೆ‌ನಾನು‌ಈಗಲೇ ಏನನ್ನು ಹೇಳುವುದಿಲ್ಲ.‌ನನ್ನ‌ಕತೆಯ ಹೀರೋ ಜೋಗಿ ಪ್ರೇಮ್. ಉಳಿದಂತೆ‌‌ ಬಾಲಿವುಡ್ ನಟ ಬಾಬಿ‌ಸಿಂಹ‌ ಚಿತ್ರದ ಪ್ರಮುಖ‌ ವಿಲನ್. ಈಗಾಗಲೇ ಅವರೊಂದಿಗೆ ಒಂದು ಹಂತದ ಮಾತುಕತೆ ನಡೆದಿದೆ. ಫೈನಲ್ ಆಗಬೇಕಿದೆ. ಹಾಗೆಯೇ ನಾಯಕಿ ಸೇರಿದಂತೆ ಉಳಿದ‌ ಕಲಾವಿದರನ್ನು ಆಯ್ಕೆ‌ಮಾಡಿಕೊಂಡು ಚಿತ್ರೀಕರಣಕ್ಕೆ ಹೊರಡುವುದಷ್ಟೇ ಬಾಕಿಯಿದೆ ಎನ್ನುತ್ತಾರೆ ಚಂದ್ರಚೂಡ್.

ಮೋಷನ್ ಪೋಸ್ಟರ್ ಲಾಂಚ್..
ಉಳಿದಂತೆ, ಇಲ್ಲಿ‌ ಕುತೂಹಲ ಇರೋದು ಅಕ್ಟೋಬರ್ 22. ಅವತ್ತು ಜೋಗಿ ಪ್ರೇಮ್ ಬರ್ತ್ ಡೇ. ಅವತ್ತು ಅವರಿಗೆ ಚಂದ್ರಚೂಡ್ , ಚಿತ್ರ ತಂಡದ ಕಡೆಯಿಂದ ಸ್ಪೆಷಲ್ ಗಿಫ್ಟ್ ನೀಡಲು ಮುಂದಾಗಿದ್ದಾರೆ. ಅದೇ ‘ಐ ಆ್ಯಮ್ ಕಲ್ಕಿ‌’ ಚಿತ್ರದ ಮೋಷನ್ ಪೋಸ್ಟರ್. ಅದೆಲ್ಲ ಹೀಗಿರುತ್ತೆ, ಎಂತಿರುತ್ತೆ. ಮುಂದೇನು ಎನ್ನುವುದರ ಕುರಿತು ಅವತ್ತೇಮಾಧ್ಯಮದವರು ಜತೆಗೆ ಹಂಚಿಕೊಳ್ಳುವುದಾಗಿ ಭರವಸೆ ನೀಡುತ್ತಾರೆ ಪತ್ರಕರ್ತ ಕಮ್ ನಿರ್ದೇಶಕ ಚಕ್ರವರ್ತಿ ಚಂದ್ರಚೂಡ್.

Categories
ಸಿನಿ ಸುದ್ದಿ

ಗೋಧ್ರಾ ಈಗ ಗೋಧ್ರಾನ್ !

 ಮಂಡಳಿ ನೋಂದಣಿಗೆ ಮಾನ್ಯತೆ ಇಲ್ಲವೇ? ಸೆನ್ಸಾರ್ ಮಂಡಳಿ ಮಾತು ಕೇಳಿ ಕಕ್ಕಾಬಿಕ್ಕಿಯಾದ ಗೋಧ್ರಾ ಚಿತ್ರತಂಡ


ನಟ ನೀನಾಸಂ ಸತೀಶ್ ಅಭಿನಯದ ಬಹು ನಿರೀಕ್ಷಿತ ಸಿನಿಮಾ ‘ಗೋಧ್ರಾ’. ಟೈಟಲ್ ಜತೆಗೆ ಅದು ಒಂದು ವಿಭಿನ್ನ ಕಥಾ ಹಂದರದ ಕಾರಣಕ್ಕೆ ಸಾಕಷ್ಟು ಸದ್ದು ಮಾಡಿತ್ತು. ಹಾಗೆಯೇ ಅದರ ಪೋಸ್ಟರ್ ಗಳಂತೂ ಸೋಷಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು.‌ಆದರೆ ಈಗ ಚಿತ್ರ ತಂಡವೇ ಒಂದು ಸುದ್ದಿ ಹೊರ ಹಾಕಿದೆ. ನಟ ನೀನಾಸಂ ಸತೀಶ್ ಅಭಿಮಾನಿಗಳ‌ ಪಾಲಿಗೆ ಇದು ನಿಜಕ್ಕೂ ಬೇಸರದ ಸುದ್ದಿ. ಯಾಕಂದ್ರೆ ಸಾಕಷ್ಟು ಸುದ್ದಿಯಾಗಿದ್ದ ‘ಗೋಧ್ರಾ ‘ ಟೈಟಲ್ ಬದಲಾಗಿದೆ. ಮುಂದೆ ಈ ಚಿತ್ರ ‘ಗೋಧ್ರಾನ್ ‘ ಹೆಸರಲ್ಲಿ ಚಿತ್ರೀಕರಣ ಮುಗಿಸಿ, ಬಿಡುಗಡೆ ಆಗಲಿದೆ.

ಟೈಟಲ್ ಬದಲಾವಣೆಗೆ ಅದೇ ಕಾರಣ….

ಚಿತ್ರದ ಸೆನ್ಸಾರ್ ಅಂತ ಇತ್ತೀಚೆಗೆ ಚಿತ್ರ ತಂಡ ಸೆನ್ಸಾರ್ ಮಂಡಳಿಗೆ ಅರ್ಜಿ ಸಲ್ಲಿಸಿದೆ. ಅಂತೆಯೇ ಸೆನ್ದಾರ್ ಮಂಡಳಿಯ ಸದಸ್ಯರು, ಚಿತ್ರ ವೀಕ್ಷಿಸಿದ ನಂತರ‌ ಚಿತ್ರದ  ಶೀರ್ಷಿಕೆ ಬದಲಾಯಿಸುವಂತೆ ಸೂಚಿಸಿದ್ದಾರೆ. ಅವರ ಪ್ರಕಾರ ಚಿತ್ರದಲ್ಲಿನ ಕೆಲವು ವಿಷಯವೇ ಅದಕ್ಕೆ ಕಾರಣ.
ಚಿತ್ರದ ನಿಲುವು, ಕಥಾವಸ್ತು ಮತ್ತು ನೇರವಂತಿಕೆಯ ಕೆಲವು ವಿಷಯಗಳ ಕುರಿತಾದ ಆಕ್ಷೇಪಣೆ ಅವರದು.
ಅದಕ್ಕಾಗಿ ಶೀರ್ಷಿಕೆಯನ್ನು ಬದಲಾಯಿಸಬೇಕು ಎನ್ನುವ ಸಲಹೆ ಬಂತು‌ಎನ್ನುವುದು ಚಿತ್ರ ತಂಡದ ಮಾತು.
‘ಕೆಲವೊಮ್ಮೆ‌ನೇರ- ನಿಷ್ಟುರ ಮಾತುಗಳು ಕಹಿಯಾಗಿರುತ್ತವೆ. ನಮ್ಮ ಸಿನಿಮಾ ವಿಚಾರದಲ್ಲೂ ಹಾಗೆ ಆಗಿದೆ. ಗೋಧ್ರಾ ಘಟನೆಗೂ, ನಮ್ಮ ಸಿನಿಮಾಕ್ಕೂ ಯಾವುದೇ ಸಂಬಂಧವಿಲ್ಲ .ಆದರೆ ಸೆನ್ಸಾರ್ ಮಂಡಳಿ‌ ಸದಸ್ಯರು‌ಮತ್ತು ಅಧಿಕಾರಿಗಳಿಗೆ ಅದೇ ಅನುಮಾನ.‌ಅದು ಹಾಗಲ್ಲ ಅಂತ ನಾವು ಮನವಿ‌ ಮಾಡಿದೆವು. ವಸ್ತು ಸ್ಥಿತಿ ಏನು ಅಂತ ಮನವರಿಕೆ ಮಾಡಿಕೊಡಲು ಪ್ರಯತ್ನಿಸಿದೆವು.ಆದರೆ ಅವರು ನಮ್ಮ‌ಮನವಿ ಪುರಸ್ಕರಿಸಲಿಲ್ಲ’ ಎನ್ನುವ ಬೇಸರ , ಸಿಟ್ಟು‌ ಚಿತ್ರ ತಂಡದ್ದು.

ನಮಗೊಂದು ಅನುಮಾನ ಇದೆ…

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ (ಕೆಎಫ್‌ಸಿಸಿ) ಯಲ್ಲಿ ನಾವು ಚಿತ್ರದ ಟೈಟಲ್ ನೋಂದಣಿ ಮಾಡಿಸಿದ್ದೇವೆ. ಗೋಧ್ರಾ ಹೆಸರಲ್ಲೇ ಅದು ನೋಂದಣಿ ಆಗಿದೆ. ವಾಣಿಜ್ಯ ಮಂಡಳಿ ಕೂಡ ಅದಕ್ಕೆ ಅನುಮತಿ‌ ನೀಡಿದೆ. ಅನುಮೋದಿ ತ ಮತ್ತು ನೋಂದಾಯಿಸಿದ ಈ  ಶೀರ್ಷಿಕೆಗೆ ಯಾವುದೇ ಸಿಂಧುತ್ವವಿಲ್ಲ ಎಂದು ಸೆನ್ಸಾರ್ ಮಂಡಳಿ ( ಸಿಬಿಎಫ್‌ಸಿ) ಹೇಳುವುದು ಮಂಡಳಿ ಹೇಳುವುದು ಎಷ್ಟು ಸರಿ? ಅಷ್ಟೇ ಅಲ್ಲ ವಾಣಿಜ್ಯ ಮಂಡಳಿಯಲ್ಲಿ ನೊಂದಣಿ ಗೊಂಡ ಟೈಟಲ್ ಗೆ ಯಾವುದೇ ಸಿಂಧುತ್ವ ಇಲ್ಲ ಅಂತ ಸೆನ್ಸಾರ್‌ಹೇಳಿತು.  ಕೆಎಫ್‌ಸಿಸಿ ಶೀರ್ಷಿಕೆಗಳನ್ನು ನೀಡಲು ಅಂತಹ ಯಾವುದೇ ಅಧಿಕಾರ ಹೊಂದಿರುವುದಿಲ್ಲ ಮತ್ತು ಅದು ಅನುಮತಿಸಿದ ಶೀರ್ಷಿಕೆಯನ್ನು ಸಿಬಿಎಫ್ ಸಿ ಒಪ್ಪಬೇಕಿಲ್ಲ ಎಂದು ಮಂಡಳಿಯು ಹೇಳಿದಾಗ ಅಚ್ಚರಿ ಮತ್ತು ಅಘಾತವಾಯಿತು. ಹಾಗಾದ್ರೆ ಇದರ ಸತ್ಯಾಸತ್ಯತೆ ಏನು? ವಾಣಿಜ್ಯ ಮಂಡಳಿ ಉತ್ತರಿಸಬೇಕಿದೆ ಎನ್ನುವುದು ಚಿತ್ರ ತಂಡದ ಮನವಿ.

ಹಣ  ಹಾಕಿದವರ ಗತಿಯೇನು?

ಸಿನಿಮಾದ ಹೆಸರು ಬದಲಾಯಿಸುವುದಾಗಿ ನಾವು ಸೆನ್ಸಾರ್ ಮಂಡಳಿಗೆ ಭರವಸೆ ನೀಡಿದ್ದೇವೆ. ಆದರೆ ಈ ಹೆಸರು ಬದಲಾಯಿಸುವ ಮೂಲಕ ನಾವು ಈಗ ಅನುಭವಿಸ‌‌ಬೇ ಕಾದ ಎಲ್ಲಾ ನಷ್ಟಗಳನ್ನು ಯಾರು ಸರಿದೂಗಿಸಲಿದ್ದಾರೆ? ಕಳೆದ ಎರಡು ವರ್ಷಗಳಲ್ಲಿ ನಾವು ಕೈಗೊಂಡ ಎಲ್ಲ ಪ್ರಚಾರದ ಗತಿಯೇನು? ವಾಣಿಜ್ಯ ಮಂಡಳಿಯೇ ನಮಗೆ ಧೈರ್ಯ ತುಂಬಬೇಕಿದೆ. ಆಗಿರುವ ಈ ಗೊಂದಲ ತಿಳಿಗೊಳಿಸಬೇಕಿದೆ. ಜವಾಬ್ದಾರಿಯುತ ಚಲನಚಿತ್ರ ನಿರ್ಮಾಪಕರಾಗಿ, ನಾವು ಉತ್ತರಗಳನ್ನು ಕೋರುತ್ತೇವೆ. ನಿರ್ಮಾಪಕರು ಮತ್ತು ನಿರ್ದೇಶಕರು ಹಾಗೂ ನೂರಾರು ಕಲಾವಿದರು ಮತ್ತು ತಂತ್ರಜ್ಞರನ್ನು ಕೆಎಫ್‌ಸಿಸಿಯು ಒಳಗೊಳ್ಳುವುದರಿಂದ,ನೀವು ಕೊಟ್ಟ ಶೀರ್ಷಿಕೆಗಳನ್ನೇ ನಂಬಿಕೊಂಡು ಶ್ರಮ ಪಡುವುದರಿಂದ, ಕೊನೆಗೆ ನೀವುಕೊಡುವ ಶೀರ್ಷಿಕೆಗೆ ಯಾವುದೇ ಬೆಲೆ ಇಲ್ಲ ಅಂದಾಗ ನಾವು ಯಾರನ್ನು ನಂಬಬೇಕು?

ಚಿತ್ರದಲ್ಲಿ ಇವರೆಲ್ಲ ಇದ್ದಾರೆ..

ಸತೀಶ್ ನಾಯಕರಾದರೆ, ಶ್ರದ್ಧಾ ಶ್ರೀನಾಥ್ ನಾಯಕಿ. ಅಚ್ಯುತ್ ಕುಮಾರ್, ವಸಿಷ್ಠ ಸಿಂಹ, ರಕ್ಷ ಸೋಮಶೇಖರ್ ಮತ್ತು ಸೋನು ಗೌಡ ಮುಂತಾದವರ ತಾರಾ ಬಳಗವಿದೆ. ಜುಡಾ ಸ್ಯಾಂಡಿ ಸಂಗೀತ ನೀಡಿದ್ದಾರೆ, ಕೆ.ಪಿ. ಇನ್ನೆಲೆ ಸಂಗೀತ ಕೊಟ್ಟಿದ್ದಾರೆ. ಕೆ.ಎಸ್.ನಂದೀಶ್ ನಿರ್ದೇಶನದಲ್ಲಿ ಸಿನಿಮಾ ಮೂಡಿ ಬಂದಿದೆ. ಸದ್ಯದಲ್ಲೇ ಚಿತ್ರವನ್ನು ತೆರೆಗೆ ತರುವ ಸಿದ್ಧತೆ ಕೂಡ ನಡೆಸಲಾಗಿದೆ.

error: Content is protected !!