Categories
ಸಿನಿ ಸುದ್ದಿ

ಡಿಸೆಂಬರ್ 18 ಕ್ಕೆ ನಾನೊಂಥರ

ನಾನೊಂಥರ ಅಂದ್ರೆ ನಾಯಕನೇ ಒಂಥರ!

ಕನ್ನಡ  ಚಿತ್ರರಂಗ ಮತ್ತೆ ಟ್ರ್ಯಾಕ್ ಗೆ ಮರಳುತ್ತಿದೆ. ಮುಹೂರ್ತ, ಚಿತ್ರೀಕರಣ, ಟೀಸರ್ ಲಾಂಚ್ ನಂತಹ ಸಿನಿಮಾ ಚಟುವಟಿಕೆಗಳ ನಡುವೆಯೇ ಈಗ ಚಿತ್ರಗಳ ಬಿಡುಗಡೆಗೂ ಚಾಲನೆ‌ ಸಿಕ್ಕಿದೆ. ಈಗಾಗಲೇ ಬಿಡುಗಡೆಗೊಂಡ ಚಿತ್ರಗಳಿಗೆ ಸಿಕ್ಕಅಭೂತ ಪೂರ್ವ ಬೆಂಬಲದ ಬೆನ್ನಲೇ ಈ ವಾರದಿಂದ ಮತ್ತಷ್ಟು ಚಿತ್ರಗಳು ತೆರೆಗೆ ಬರಲು ರೆಡಿ ಆಗಿವೆ. ಈ ಪೈಕಿ ‘ನಾನೊಂಥರ’ ಚಿತ್ರವೂ ಒಂದು.

ಇದೊಂದು  ಹೊಸಬರ ಚಿತ್ರ. ಜೆಜೆ ಮೂವೀಸ್ ಮೂಲಕ ಈ ಚಿತ್ರ ನಿರ್ಮಾಣವಾಗಿದೆ. ವೃತ್ತಿಯಲ್ಲಿ ವೈದ್ಯೆಯಾಗಿ ಅಪಾರ ಜನ ಮನ್ನಣೆ ಪಡೆದಿರುವ ಡಾ. ಜಾಕ್ಲಿನ್ ಫ್ರಾನ್ಸಿಸ್  ಇದರ ನಿರ್ಮಾಪಕರು. ಇವರ ಪುತ್ರ ತಾರಕ್ಇದರ ನಾಯಕ‌ ನಟ. ಇದು ಅವರ ಚೊಚ್ಚಲ ಚಿತ್ರ.ಹಾಗೆಯೇ ನವ ಪ್ರತಿಭೆ ಯು. ರಮೇಶ್ ಇದರ ನಿರ್ದೇಶಕ. ಒಟ್ಟಾರೆ ಒಂದು ಹೊಸ ತಂಡವು, ತುಂಬಾ ಕನಸು ಹೊತ್ತು, ಈ ಚಿತ್ರ ನಿರ್ಮಾಣ ಮಾಡಿದೆ. ಎಲ್ಲವೂ ಅಂದುಕೊಂಡಂ ತಾಗಿದ್ದರೆ ಈ ಚಿತ್ರ ಲಾಕ್ ಡೌನ್ ಮುಂಚೆಯೇ ತೆರೆಗೆ ಬರಬೇಕಿತ್ತು. ಆದರೆ ಕೊರೋನಾ ಬಂತು. ಸಿನಿಮಾ ಟಾಕೀಸ್ ಬಂದ್ ಆದವು.ಹಾಗಾಗಿ ‘ನಾನೊಂಥರ’ ಚಿತ್ರ ತಂಡವು ಸುಮ್ಮನಾಗಿತ್ತು. ಈಗ  ಚಿತ್ರ ರಿಲೀಸ್ ಗೆ ಮತ್ತೆ ಚಾಲನೆ ಸಿಕ್ಕ ಬೆನ್ನಲೇ ನಾನೊಂಥರ ಕೂಡ ಚಿತ್ರಮಂದಿರಕ್ಕೆ ಬರುತ್ತಿದೆ.

ಚಿತ್ರ ತಂಡವೀಗ ರಿಲೀಸ್ ಗೆ ಸಿದ್ದತೆ ನಡೆಸಿರುವ ಬೆನ್ನಲೇ ಶುಕ್ರವಾರ( ಡಿಸೆಂಬರ್‌ 4) ದಂದು ಚಿತ್ರದ ಟ್ರೇಲರ್ ಲಾಂಚ್ ಮಾಡುವ ಮೂಲಕ ಚಿತ್ರದ ವಿಶೇಷತೆ ಕುರಿತು ಮಾತನಾಡಿತು‌. ಹೊಸಬರ ಚಿತ್ರವಾದರೂ ಟ್ರೇಲರ್ ಭರವಸೆ ಮೂಡಿಸುತ್ತದೆ. ಮೇಕಿಂಗ್ ಅದ್ಬುತವಾಗಿದೆ. ಪಕ್ಕಾ ಕಮರ್ಷಿಯಲ್ ಸಿನಿಮಾ ಎನ್ನುವುದಕ್ಕೆಟ್ರೇಲರ್ ಸಾಕ್ಷಿಯಾಗಿದೆ. ಆ ಕುರಿತೇ ಮಾತು ಆರಂಭಿಸಿದರು ನಿರ್ಮಾಪಕಿ ಡಾ. ಜಾಕ್ಲಿನ್ ಫ್ರಾನ್ಸಿಸ್.

ಟ್ರೇಲರ್ ಚೆನ್ನಾಗಿದೆ ಎನ್ನುವ ನಂಬಿಕೆಯಿದೆ. ಹಾಗೆಯೇ ಸಿನಿಮಾ ಅದ್ಬುತ ವಾಗಿ ಮೂಡಿ ಬಂದಿದೆ. ಅದೊಂದೆ ಕಾನ್ಪಿಡೆನ್ಸ್ ಮೇಲೆ ಚಿತ್ರ ಮಂದಿರಕ್ಕೆ ಬರುತ್ತಿದ್ದೇವೆ ಎಂದರು. ಚಿತ್ರದ ನಾಯಕ‌ನಟ ತಾರಕ್ , ನಿರ್ದೇಶಕ ಯು. ರಮೇಶ್ ಕೂಡ ಅದೇ  ವಿಶ್ವಾಸ ವ್ಯಕ್ತಪಡಿಸಿದರು. ನಾಯಕಿ ರಕ್ಷಿಕಾ , ಯುವ ನಟ ಜೈಸನ್, ಖಳ ನಟ ಪ್ರಶಾಂತ್ ರೈ ಮಾತನಾಡಿ, ಚಿತ್ರ ಚೆನ್ನಾಗಿ ಬಂದಿದೆ ಎಂದರು. ವಿಜಯ್ ಫಿಲಂಸ್ ಮೂಲಕ ಈ ಚಿತ್ರ ಬಿಡುಗಡೆ ಆಗುತ್ತಿದೆ. ಸದ್ಯಕ್ಕೆ ಎಷ್ಟು ಚಿತ್ರಮಂದಿರಗಳಲ್ಲಿ ಈ ಚಿತ್ರ ಬಿಡುಗಡೆ ಆಗುತ್ತಿದೆ ಎನ್ನುವುದು ಕನ್ ಫರ್ಮ್ ಆಗಿಲ್ಲ. ಆದರೆ ಬೆಂಗಳೂರಿನ ಮೆಜೆಸ್ಟಿಕ್ ಪ್ರದೇಶದಲ್ಲಿ ಭೂಮಿಕಾ ಚಿತ್ರ ಮಂದಿರವನ್ನು ಪ್ರಧಾನವಾಗಿ ಟ್ಟುಕೊಂಡಯ ರಾಜ್ಯಾದ್ಯಂತ 80 ರಿಂದ 100  ಚಿತ್ರ ಮಂದಿರಗಳಲ್ಲಿ ಈ ಚಿತ್ರವನ್ನು ರಿಲೀಸ್ ಮಾಡುವ ಪ್ಲಾನ್ ಇದೆ ಅಂದ್ರು ವಿತರಕ ವಿಜಯ್.

Categories
ಸಿನಿ ಸುದ್ದಿ

ಅಬ್ಬಕ್ಕ ನ ಮೇಲೆ ಮಂಸೋರೆ ಮನಸು !

ಆಕ್ಟ್ 1978′ ಸಕ್ಸಸ್ ಬೆನ್ನಲೇ ಹೊಸ ಪ್ರಾಜೆಕ್ಟ್ ಅನೌನ್ಸ್ ಮಾಡಿದ ಕ್ರಿಯೇಟಿವ್ ಡೈರೆಕ್ಟರ್, ನಾಲ್ಕನೇ ಸಿನಿಮಾಕ್ಕೆ ಮಂಸೋರೆ ಅವರದ್ದು ಹೊಸ ವರಸೆ

‘ಆಕ್ಟ್ 1978 ‘ಚಿತ್ರಕ್ಕೆ ಸಿಕ್ಕ ಅಭೂತ ಪೂರ್ವ ಬೆಂಬಲದ ಬೆನ್ನಲೇ ನಿರ್ದೇಶಕ ಮಂಸೋರೆ ಮತ್ತೊಂದು ಹೊಸ ಸಾಹಸಕ್ಕೆ ಮುಂದಾಗಿದ್ದಾರೆ. ಶುಕ್ರವಾರ ಬೆಳ್ಳಂಬೆಳಗ್ಗೆಯೇ ಐತಿಹಾಸಿಕ ಸಿನಿಮಾದ ಹೊಸ ಪ್ರಾಜೆಕ್ಟ್ ಅನೌನ್ಸ್ ಮಾಡಿ, ಸಿನಿಮಾ‌ಪ್ರೇಮಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ. ಈ ಹಿಂದಿನ ಮೂರು ಚಿತ್ರಗಳ ಕತೆಗಳಿಗೆ ಹೋಲಿಸಿದರೆ ಇದು ತೀರಾ ಭಿನ್ನ. ಅವಗಳದ್ದೇ ಒಂದು ಕತೆಯಾದರೆ ಇದು ಅದಕ್ಕೆ ತದ್ವಿರುದ್ಧ. ಇದೇ ಮೊದಲ ಬಾರಿಗೆ ಐತಿಹಾಸಿಕ ಕತೆಗೆ ಆ್ಯಕ್ಷನ್ ಕಟ್ ಹೇಳಲು ಹೊರಟಿದ್ದಾರೆ ಮಂಸೋರೆ. ನಿನ್ನೆಯೇ ಘೋಷಣೆ ಮಾಡಿದ್ದ ಹಾಗೆಯೇ ಶುಕ್ರವಾರ ಬೆಳಗ್ಗೆ 8 ಗಂಟೆಗೆ ಅವರ ಹೊಸ ಪ್ರಾಜೆಕ್ಟ್ ಪ್ರಕಟಿಸಿದ್ದು, ಕರಾವಳಿ ನಾಡಿನ ಚರಿತಾರ್ಹ ನಾಯಕಿ ರಾಣಿ ಅಬ್ಬಕ್ಕ ಕುರಿತು ಸಿನಿಮಾ ಮಾಡುವುದಾಗಿ ಹೇಳಿದ್ದಾರೆ. ಚಿತ್ರಕ್ಕೆ ಅಬ್ಬಕ್ಕ ಅಂತಲೇ ಹೆಸರಿಟ್ಟಿದ್ದಾರೆ. ಅದರ ಮೊದಲ ಪೋಸ್ಟರ್ ಕೂಡ ಇಂದೇ ರಿವೀಲ್ ಆಗಿದೆ.

ಅಬ್ಬಕ್ಕ ಎನ್ನುವ ಚಿತ್ರದ ಟೈಟಲ್ ಗೆ ‘ ಅರಬೀ ಸಮುದ್ರದ ಅಭಯರಾಣಿ ‘ ಅಂತ ಸಬ್ ಟೈಟಲ್ ಇಟ್ಟಿದ್ದಾರೆ ಮಂಸೋರೆ. ವಿಶೇಷ ಅಂದ್ರೆ ಈ ಚಿತ್ರವು ಕನ್ನಡದ ಜತೆಗೆ ತುಳು, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿಯಲ್ಲೂ ನಿರ್ಮಾಣ ವಾಗಲಿದೆ ಎನ್ನುವುದು ಮಂಸೋರೆ ಪಾಲಿಗೆ ಭಾರೀ ವಿಶೇಷ. ಇನ್ನು ಚಿತ್ರದ ಕತೆಯಂತೂ ಭಾರೀ ಕುತೂಹಲವೇ. ಯಾಕಂದ್ರೆ, ರಾಣಿ ಅಬ್ಬಕ್ಕ ಕನ್ನಡ ನಾಡಿನ ವಿರೋಚಿತ ಹೋರಾಟದ ನಾಯಕಿ. ಅದರಲ್ಲೂ ಕರಾವಳಿ ತೀರದಲ್ಲಿ ಅಬ್ಬಕ್ಕ ಮನೆ ಮಾತಾದ ಹೆಸರು. ಆಕೆಯ ಹೆಸರಲ್ಲಿ ಚಿತ್ರ ಮಾಡಲು ಹೊರಟ ಮಂಸೋರೆ ಅವರ ಪ್ರಯತ್ನವೇ ಈಗ ಕುತೂಹಲ ಮೂಡಿಸಿದೆ. ಯಾಕಂದ್ರೆ ಈ ಹಿಂದಿನ ಅವರ ಮೂರು ಸಿನಿಮಾ ನೋಡಿದವರಿಗೆ ಅವೆಲ್ಲ ವಿಭಿನ್ನ ಕಥಾ ಹಂದರ ಪ್ರಯೋಗಾತ್ಮಕ ಚಿತ್ರಗಳು ಅನ್ನೋದು ಎಲ್ಲರಿಗೂ ಗೊತ್ತೇ ಇದೆ.

ಅದು ಬಿಟ್ಟು ಐತಿಹಾಸಿಕ ಕತೆಗೆ ಅವರು ಆ್ಯಕ್ಷನ್ ಕಟ್ ಹೇಳುತ್ತಿರುವುದು ಇದೇ ಮೊದಲು. ಹಾಗಾಗಿ ಹೇಗಿರುತ್ತೆ ಅವರ ಕೈ ಚಳಕ ಅನ್ನೋದು ಅವರ ನಿರ್ದೇಶನದ ಬಗೆಗಿರುವ ಮತ್ತೊಂದು ಕುತೂಹಲ. ಸದ್ಯಕ್ಕೆ‌ಇದರ ಕಲಾವಿದರ ವಿವರ ನಿಗೂಢವಾಗಿದೆ. ಅದು ಬಿಟ್ಟರೆ, ಸತ್ಯ ಹೆಗಡೆ ಛಾಯಾಗ್ರಹಣ, ಅಜನೀಶ್ ಲೋಕನಾಥ್ ಸಂಗೀತ ಈ ಚಿತ್ರಕ್ಕಿದೆ. ಹಾಗೆಯೇ ಮಹಾವೀರ್ ಸಾಬಣ್ಣರ್, ಸಂತೋಷ್ ಪಾಂಜಾಲ್ ಹಾಗೂ ವಿರೇಂದ್ರ ಮಲ್ಲಣ್ಣ ಸೇರಿದಂತೆ ಮಂಸೋರೆ ಅವರ ಟೀಮ್ ಇಲ್ಲೂ ಮುಂದುವರೆದಿದೆ. ಇದೆಲ್ಲ ಓಕೆ, ಮಂಸೋರೆ ಅವರ ಇಷ್ಟು ದೊಡ್ಡ ಪ್ರಾಜೆಕ್ಟ್ ಗೆ ಬಂಡವಾಳ ಹಾಕುತ್ತಿರುವ ನಿರ್ಮಾಪಕ ಯಾರು ? ಸದ್ಯಕ್ಕೆ ಅದು ನಿಗೂಢ. ಆ‌ಬಗ್ಗೆ ನಿರ್ದೇಶಕ ಮಂಸೋರೆ ಅವರನ್ನು ಕೇಳಿದರೆ, ಎರಡು ದೊಡ್ಡ ನಿರ್ಮಾಣ ಸಂಸ್ಥೆಗಳೇ ಆಸಕ್ತಿ ವಹಿಸಿವೆ. ಇಷ್ಟರಲ್ಲಿಯೇ ಅದು ರಿವೀಲ್ ಆಗಲಿದೆ ಎನ್ನುತ್ತಾರೆ. ಹಾಗೆಯೇ ಕಲಾವಿದರ ಬಗೆಗಿನ ಕುತೂಹಲಕ್ಕೂ ಅವರು ಹಾಗೆಯೇ ಹೇಳುತ್ತಾರೆ. ಏನೇ ಆಗಲಿ ಮಂಸೋರೆ ಅವರ ಇಷ್ಟು ದೊಡ್ಡ ಪ್ರಯತ್ನಕ್ಕೆ ಸಿನಿ‌ಲಹರಿ‌ಕಡೆಯಿಂದ ಆಲ್ ದಿ ಬೆಸ್ಟ್.

ಮೋಡಗಳೆಲ್ಲಾ ರಕ್ತವರ್ಣ.. ಸಮುದ್ರವೆಲ್ಲ ಅಗ್ನಿಕುಂಡ.. ಭೂಭಾಗದ ತುಂಬೆಲ್ಲಾ ಅಧಿಕಾರದ ದಾಹ, ಸ್ವಾರ್ಥದ ವಿಷದುಸಿರು.. ಬೆನ್ನ ಹಿಂದೆ ಇರಿಯುವ, ಕಣ್ಣ ಮುಂದೆಯೂ ಗುಂಡಿಕ್ಕುವ ಶತ್ರುಗಳು…! ತಾಯಿನಾಡು, ತಮ್ಮತನ, ತನ್ನವರಿಗಾಗಿ ಉಪ್ಪಿನ ಹಬೆಯಲ್ಲಿ ಬಿಸಿನೆತ್ತರ ಹರಿಸಿ ಹೋರಾಡಿ ಇತಿಹಾಸದ ಪುಟಗಳಲ್ಲಿ ಕಂಡು ಕಾಣದಂತೆ ಉಳಿದುಹೋದ ವೀರಚರಿತ್ರೆ – ಅರಬ್ಬೀ ಸಮುದ್ರದ ಅಭಯರಾಣಿ ಅಬ್ಬಕ್ಕ..!!” ನಿಮ್ಮೆಲ್ಲರ ಪ್ರೀತಿ, ಬೆಂಬಲ, ಪ್ರೋತ್ಸಾಹ ಈ ಹೊಸ ಸಾಹಸಕ್ಕೆ ಪ್ರೇರೇಪಿಸಿದೆ. ಎಂದಿನಂತೆ ನಿಮ್ಮ ಆಶೀರ್ವಾದ ಬೆಂಬಲ ನಮ್ಮ ತಂಡದ ಮೇಲಿರಲಿ 

– ಮಂಸೋರೆ, ನಿರ್ದೇಶಕ

Categories
ಸಿನಿ ಸುದ್ದಿ

ಕನ್ನಡದ ನಟರಂದ್ರೆ ಬರೀ ‌ಲೋಕಲ್ ಸ್ಟಾರಾ?

ಯಶ್ ಅವರನ್ನೇ ಹಾಕಿ ಕೊಂಡು ಪ್ಯಾನ್ ಇಂಡಿಯಾ ಸಿನಿಮಾ‌ ಮಾಡಿ‌ಗೆದ್ದವರು ಈಗ ತೆಲುಗು ನಟ ಪ್ರಭಾಸ್ ಮೊರೆ ಹೋಗಿದ್ದೇಕೆ? ಅದರ ಅಸಲಿ ಕತೆ ಏನು?

ನಿರ್ಮಾಪಕ ವಿಜಯ್ ಕಿರಗಂದೂರು ಹೀಗೇಕೆ ಮಾಡಿದ್ರು? ‘ಕೆಜಿಎಫ್’ ನೋಡಿ ಖುಷಿ ಪಟ್ಟ ಕನ್ನಡದ ಸಿನಿ ಪ್ರೇಕ್ಷಕನಿಗೆ ಹಿಗೊಂದು ಪ್ರಶ್ನೆ ಶುರುವಾಗದೆ ಉಳಿದಿಲ್ಲ. ಅದಕ್ಕೆ ಕಾರಣ ಅವರೀಗ ಅನೌನ್ಸ್ ಮಾಡಿರುವ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ., ಮತ್ತದಕ್ಕೆ ಅವರು ಆಯ್ಕೆ ಮಾಡಿಕೊಂಡಿರುವ ನಾಯಕ ನಟ.

ಡಿಸೆಂಬರ್ 2 ಕ್ಕೆ ಹೊಂಬಾಳೆ ಫಿಲಂಸ್ ಕನ್ನಡದ ಸಿನಿ ಪ್ರೇಕ್ಷಕ ರಿಗೆ ದೊಡ್ಡದೊಂದು ಸಿಹಿ ಸುದ್ದಿ ಕೊಡಲಿದೆ ಎನ್ನುವ ಮಾಹಿತಿ ರಿವೀಲ್ ಆದಾಗ, ನಿರ್ಮಾಪಕ ವಿಜಯ್ ಕಿರಗಂದೂರು ಈ ಬಾರಿ ಕನ್ನಡದ ಯಾವ ಸ್ಟಾರ್ ನಟನ ಜತೆಗೆ ಸಿನಿಮಾ ಮಾಡಲಿದ್ದಾರೆನ್ನುವ ಕುತೂಹಲ ಬೆಟ್ಟದಷ್ಟಿತ್ತು. ಕನ್ನಡದ ಸಿನಿ ಪ್ರೇಕ್ಷಕರ ಮನಸ್ಸಲ್ಲಿ ಅರೆ ಘಳಿಗೆ ಶಿವರಾಜ್ ಕುಮಾರ್, ಸುದೀಪ್, ದರ್ಶನ್, ಪುನೀತ್ ಸೇರಿದಂತೆ ಒಂದಷ್ಟು ಬಹು ಬೇಡಿಕೆ ನಟರ ಹೆಸರು ಹಾದು ಹೋಗಿದ್ದು ಸುಳ್ಳಲ್ಲ.

ಬಹಳಷ್ಟು ಜನರಿಗೆ ದರ್ಶನ್ ಹಾಗೂ ಸುದೀಪ್ ಟಾರ್ಗೆಟ್ ಆಗಿದ್ದರು.ಆದರೆ ಡಿಸೆಂಬರ್ 2 ಕ್ಕೆ ಹೊಂಬಾಳೆ ಹೊರಗೆಡವಿದ ಸುದ್ದಿಯೇ ಬೇರೆ. ಕನ್ನಡದ ಸಿನಿ ಪ್ರೇಕ್ಷಕರು ಖುಷಿ ಪಡುವ ಬದಲಿಗೆ ಶಾಕ್ ಆಗುವಂತಹ ಸುದ್ದಿಯೇ ಹೊರ ಬಿತ್ತು. ಹೊಂಬಾಳೆ ಫಿಲಂಸ್ ನಿರ್ಮಾಣದ ಮತ್ತೊಂದು ಅದ್ದೂರಿ ವೆಚ್ಚದ ಪ್ಯಾನ್ ಇಂಡಿಯಾ ಸಿನಿಮಾಕ್ಕೆ ಪ್ರಶಾಂತ್ ನೀಲ್ ಆ್ಯಕ್ಷನ್ ಕಟ್ ಹೇಳುತ್ತಿದ್ದರೂ, ಈ ಬಾರಿ ಅವರು ಸೆಲೆಕ್ಟ್ ಮಾಡಿಕೊಂಡ ನಟ ಬಾಹುಬಲಿ ಖ್ಯಾತಿಯ ಪ್ರಭಾಸ್. ಪ್ಯಾನ್ ಇಂಡಿಯಾ ಮಾತ್ರವಲ್ಲ, ಅಂತಾರಾಷ್ಟ್ರೀಯ ಮಾರುಕಟ್ಟೆ ದೃಷ್ಟಿಯಿಂದ ಹೊಂಬಾಳೆ ಫಿಲಂಸ್ ನ ಆಯ್ಕೆ ಸರಿ ಇತ್ತೇನೋ ಆದರೆ, ಕನ್ನಡದ ಸಿನಿ ಪ್ರೇಕ್ಷಕರಿಗೆ ಅದೇ ಆಕ್ರೋಶಕ್ಕೆ ಕಾರಣವಾಯ್ತು.‌ ಸುದ್ದಿ ಹೊರ ಬೀಳುತ್ತಿದ್ದಂತೆ ಸೋಷಲ್ ಮೀಡಿಯಾದಲ್ಲಿ ಪ್ರಶಾಂತ್ ನೀಲ್ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾದ್ರು.


ಪ್ಯಾನ್ ಇಂಡಿಯಾ ಕ್ಕೆ ನಟನಾಗಬಲ್ಲ ನಟ ಕನ್ನಡದಲ್ಲಿ ಇಲ್ಲವೇ? ಪ್ರಶಾಂತ್ ನೀಲ್ ಯಾವ ಭಾಷೆ ಸಿನಿಮಾ ಮಾಡಲು ಹೊರಟಿದ್ದಾರೆ? ಇತ್ಯಾದಿ ರೀತಿಯಲ್ಲಿ ನೆಟ್ಟಿಗರು ಕಿಡಿಕಾರಿದರು. ಅಂತಹ ಸಿಟ್ಟು ಸ್ಪೋಟವಾಗುವುದಕ್ಕೆ ಪ್ರಭಾಸ್ ಹಾಗೂ ಪ್ರಶಾಂತ್ ನೀಲ್ ಜೋಡಿಯ ಸಿನಿಮಾದ ಟೈಟಲ್ ಕೂಡ ಕಾರಣವಾಯಿತು. ಸಾಲಾರ್ ಅನ್ನೋದು ಆ ಚಿತ್ರದ ಹೆಸರು. ಸಾಲಾರ್ ಅಂದ್ರೆ ಕನ್ನಡದ ಪದವೇ? ಇದು ನೆಟ್ಟಿಗರ ಪ್ರಶ್ನೆ . ಅಸಲಿಗೆ ಸಾಲಾರ್ ಅನ್ನುವ ಪದವೇ ಕನ್ನಡದಲ್ಲಿ ಇಲ್ಲ. ಇದೊಂದು ಅರೇಬಿಯಾ ಪದ. ಇದು ಕೂಡ ಪ್ಯಾನ್ ಇಂಡಿಯಾ ಜತೆಗೆ ಅಂತಾರಾಷ್ಟ್ರೀಯ ಮಾರುಕಟ್ಟೆ ಯ ತಂತ್ರ. ಜಾಗತಿಕವಾಗಿ ಸಿನಿಮಾ ಮಾಡಲು ಹೊರಟ ಪ್ರಶಾಂತ್ ನೀಲ್ ಗೆ ಒಂದು ಯುನಿವರ್ಷಲ್ ಟೈಟಲ್ ಬೇಕಿತ್ತು. ಅದಕ್ಕಾಗಿ ಅವರು ಆ ಪದ ಆಯ್ಕೆ ಮಾಡಿಕೊಂಡ್ರು.ಆದರೆ ಅದನ್ನು ಕನ್ನಡಿಗರು ಒಪ್ಪಿಕೊಳ್ಳುತ್ತಾರಾ?


ಪ್ರಶಾಂತ್ ನೀಲ್ ಹಾಗೂ ಪ್ರಭಾಸ್ ಜೋಡಿಯ ಸಿನಿಮಾ ಚಿತ್ರದ ಕತೆ ಏನು ಅನ್ನೊದು ಇನ್ನು ಗೊತ್ತಾಗಿಲ್ಲ. ಟೈಟಲ್ ಮಾತ್ರ ಈ ರಿವೀಲ್ ಆಗಿದೆ. ಅದೇ ಸಾಲಾರ್. ಸಾಲಾರ್ ಅಂದ್ರೆ ಅರೇಬಿಯಾದಲ್ಲಿ ಲೀಡರ್. ಅರೇಬಿಯಾಕ್ಕೂ ಕತೆಗೂ ಒಂದು ನಂಟಿರುವ ಹಾಗೆ ಕಾಣಿಸುತ್ತೆ. ಅದು ಟೆರರಿಸ್ಟ್ ಲಿಂಕೇ ಆಗಿರುತ್ತೆ. ಅದೀಗ ಯುನಿವರ್ಷಲ್ ವಿಷಯವೂ ಹೌದು. ಅದರ ವಿರುದ್ಧ ಒಬ್ಬ ನಾಯಕನನ್ನು ಸೃಷ್ಟಿಸಿರುವ ಪ್ರಶಾಂತ್ ನೀಲ್ ಅದಕ್ಕೆ ಪ್ರಭಾಸ್ ಅವರನ್ನು ಸೆಲೆಕ್ಟ್ ಮಾಡಿಕೊಂಡು ಸಾಲಾರ್ ಅಂತ ಹೆಸರಿಟ್ಟಿದ್ದಾರೆ. ಆದರೆ ಅದು ಕನ್ನಡಕ್ಕೆ ಒಗ್ಗಿತಾ? ಸದ್ಯದ ವಿರೋಧ ನೋಡಿದರೆ ಪ್ರಶಾಂತ್‌ನೀಲ್ ಈಗ ಎಡವಿದ್ರಾ ಎನ್ನುವ ಅನುಮಾನ ಶುರುವಾಗಿದೆ. ಅದರ ವಾಸ್ತವ ಮುಂದೆ ಗೊತ್ತಾಗಲಿದೆ. ಸದ್ಯಕ್ಕೆ ಫಿಚ್ಚರ್ ಬಾಕಿ ಇದೆ.

Categories
ಸಿನಿ ಸುದ್ದಿ

ಮರಿ ಟೈಗರ್ ಗೆ ಸಿಗ್ತು ಭರ್ಜರಿ ಗಿಫ್ಟ್!

ನಟ  ವಿನೋದ್ ಪ್ರಭಾಕರ್ ಗೆ ಇಂದು ಹುಟ್ಟು ಹಬ್ಬ

ಮರಿ ಟೈಗರ್ ವಿನೋದ್ ಪ್ರಭಾಕರ್ ಅವರಿಗೆ ಇಂದು ಹುಟ್ಟು ಹಬ್ಬ. ಸದ್ಯ ಅವರೀಗ ಕನ್ನಡದ ಬಹು ಬೇಡಿಕೆಯ ನಟ. ಅವರು ನಾಯಕರಾಗಿ ಅಭಿನಯಿಸಿರುವ ‘ಫೈಟರ್’ ಮತ್ತು ‘ಶ್ಯಾಡೋ’ ಸಿನಿಮಾಗಳು ರಿಲೀಸ್ ಗೆ ರೆಡಿಯಾಗಿದೆ. ಎರಡು ಚಿತ್ರಗಳು ಚಿತ್ರೀಕರಣ ಮುಗಿಸಿ ತೆರೆಗೆ ಬರಲು ಕಾಯುತ್ತಿದೆ. ಇನ್ನು ಹೆಸರಿಡದ ಚಿತ್ರವೊಂದು ಕೂಡ ಚಿತ್ರೀಕರಣ ಮುಗಿಸಿದೆ.ಈ ಮಧ್ಯೆ ಹೊಸ ಸಿನಿಮಾವೊಂದಕ್ಕೂ ಕಾಲ್ ಶೀಟ್ ನೀಡಿದ್ದು , ಇತ್ತೀಚೆಗಷ್ಟೆ ರಿವೀಲ್ ಆಗಿದೆ. ಹಾಗೆಯೇ ದರ್ಶನ್ ಅಭಿನಯದ ಬಹು ನಿರೀಕ್ಷಿತ ಚಿತ್ರ ರಾಬರ್ಟ್ ನಲ್ಲೂ ವಿನೋದ್ ಪ್ರಭಾಕರ್ ಕಾಣಿಸಿಕೊಂಡಿದ್ದು, ಈಗ ಅವರ ಹುಟ್ಟು ಹಬ್ಬಕ್ಕೆ ರಾಬರ್ಟ್ ಚಿತ್ರ ತಂಡ ವಿನೋದ್ ಪ್ರಭಾಕರ್ ಅವರ ಪಾತ್ರದ ಫಸ್ಟ್ ಲುಕ್ ಲಾಂಚ್ ಮಾಡಿದೆ.


ನಟ ದರ್ಶನ್ ಬಳಗದಲ್ಲಿ ವಿನೋದ್ ಪ್ರಭಾಕರ್ ತುಂಬಾನೆ‌ ಆಪ್ತರು. ವಿನೋದ್ ಪ್ರಭಾಕರ್ ಅಭಿನಯದ ಸಿನಿಮಾಗಳಿಗೆ ದರ್ಶನ್ ಆರಂಭದಿಂದಲೂ ಸಾಥ್ ನೀಡುತ್ತಾ ಬಂದಿದ್ದು, ಈಗ ರಾಬರ್ಟ್ ನಲ್ಲೂ ಒಟ್ಟಾಗಿ ಕಾಣಿಸಿಕೊಂಡು ಅಭಿಮಾನಿಗಳಿಗೆ ಭರ್ಜರಿ ಮನರಂಜನೆ‌ ನೀಡಲು ಮುಂದಾಗಿದ್ದಾರೆ.

ಈ ನಡುವೆಯೇ ಹುಟ್ಟು ಆಚರಿಸಿಕೊಳ್ಳುತ್ತಿರುವ ವಿನೋದ್ ಪ್ರಭಾಕರ್ ಅವರಿಗೆ ದರ್ಶನ್ ಆ್ಯಂಡ್ ಟೀಮ್ ಫಸ್ಟ್ ಲುಕ್ ಕೊಡುಗೆ ನೀಡಿರುವುದು ವಿಶೇಷ. ಇದೇ ರೀತಿ ಶ್ಯಾಡೋ ಹಾಗೂ ಪೈಟರ್ ಚಿತ್ರ ತಂಡಗಳು ಕೂಡ ನಟ ವಿನೋದ್ ಪ್ರಭಾಕರ್ ಅವರಿಗೆ ತಮ್ಮ ಚಿತ್ರಗಳ ಸ್ಪೆಷಲ್ ಪೋಸ್ಟರ್ ಕೊಡುಗೆನೀಡಿವೆ.

Categories
ಸಿನಿ ಸುದ್ದಿ

ಗೆಲ್ಲಬೇಕಿತ್ತು ಗೀತಾ…ಗೆಲ್ಲಲಾರಳು ಗೀತಾ ! ————————————————————–

( ಆಕ್ಟ್ 1978 ಆಡಿಯನ್ಸ್ ರಿವಿವ್ಯೂ) 

ಶಿವಕುಮಾರ ಮಾವಲಿ,  ಲೇಖಕರು ಹಾಗೂ ಪ್ರಾಧ್ಯಾಪಕರು

ಸಿನಿಮಾ ನೋಡುವಾಗ ನಮ್ಮನ್ನು ನಾವು ಯಾವುದೋ ಒಂದು ಪಾತ್ರದೊಂದಿಗೆ ಹೋಲಿಸಿಕೊಂಡೇ ನೋಡುತ್ತೇವೆ. ಒತ್ತೆಯಾಳಾಗಿ‌ ಇಟ್ಟುಕೊಂಡು‌ ಸರ್ಕಾರವನ್ನು ಬೆದರಿಸುವಂಥ ಸಿನಿಮಾಗಳಲ್ಲಿ ನಾವು ಸರ್ಕಾರದ ಜೊತೆ ಗುರುತಿಸಿಕೊಂಡು ಒತ್ತೆಯಾಳಾದವರಿಗೆ ಮರುಗುತ್ತೇವೆ. ಹಾಗೆ ಒತ್ತೆಯಾಳಾಗಿ ಇಟ್ಟುಕೊಂಡುವನು ವಿಲನ್ ಆಗಿರುತ್ತಾನೆ. ಆದರೆ Act 1978 ಸಿನಿಮಾ ನೋಡುವಾಗ ಹಾಗೆ ಒತ್ತೆಯಾಳಾಗಿ ಇಟ್ಟುಕೊಂಡ ಪಾತ್ರದೊಂದಿಗೇ ನಾವು ಗುರುತಿಸಿಕೊಂಡು ಆ ಪಾತ್ರದ ಎದುರು ಸರ್ಕಾರ ಸೋಲುವುದನ್ನೂ ಸ್ವಾಗತಿಸಲು ಕಾಯುತ್ತೇವೆ. ಏಕೆಂದರೆ ಅದು ವ್ಯವಸ್ಥೆಯಿಂದ ರೋಸಿಹೋದ ಪಾತ್ರ. ಎಷ್ಟೇ ಖಾಸಗೀಕರಣ, ಜಾಗತೀಕರಣಗಳು ಬಂದರೂ ಸರ್ಕಾರ ಜನರ ಮೇಲಿನ ತನ್ನ ನಿಯಂತ್ರಣವನ್ನು ಇಟ್ಟುಕೊಂಡೇ ಇರುತ್ತದೆ. ತಮ್ಮ ಕೆಲಸಗಳಿಗಾಗಿ , ದಾಖಲಿಗಳಿಗಾಗಿ , ಪರವಾನಿಗಿಗಳಿಗಾಗಿ , ಆದಾಯ ಪ್ರಮಾಣ ಪತ್ರ ಇನ್ನೂ ಮುಂತಾದ ಸೇವೆಗಳಿಗಾಗಿ ಸರ್ಕಾರಿ ಕಛೇರಿಗಳಿಗೆ ಅಲೆಯುವ ಪ್ರತಿಯೊಬ್ಬರೂ ಈ ಚಿತ್ರದ ಗೀತಾಳೊಂದಿಗೆ ಗುರುತಿಸಿಕೊಳ್ಳುತ್ತಾರೆ.

ತನ್ನ ತಂದೆಯ ಸಾವಿಗೆ ಬರಬೇಕಾದ ಪರಿಹಾರಕ್ಕಾಗಿ ತಿಂಗಳುಗಟ್ಟಲೆ ಕಛೇರಿಗೆ ಅಲೆದ ಗೀತಾ,ವ್ಯವಸ್ಥೆಯ ಮೇಲೆ ಸೇಡು ತೀರಿಸಿಕೊಳ್ಳಲು ಇನ್ನೊಬ್ಬ ಶೋಷಿತನೊಂದಿಗೆ ಸೇರಿ ಬಾಂಬ್ ಕಟ್ಟಿಕೊಂಡು ಕಛೇರಿಗೆ ಬರಿತ್ತಾಳೆ. ಅಲ್ಲಿ ಆಕೆ ಹೇಳುವ I need respect ಎನ್ನುವ ಮಾತು. ಸಾಮಾನ್ಯನೊಬ್ಬನನ್ನು ಸರ್ಕಾರಿ ಅಧಿಕಾರಿಗಳು ಹೇಗೆ ನಡೆಸಿಕೊಳ್ಳುತ್ತಾರೆಂಬುದಕ್ಕೆ‌ ಉದಾಹರಣೆಯಾಗಿದೆ.‌ ಟೇಬಲ್ಲಿಂದ ಟೇಬಲ್ಲಿಗೆ ಫೈಲು ಹಾರಿಕೊಂಡು ಹೋಗಲಾರದು ಅದಕ್ಕೆ ‘ಸೂಕ್ತ’ ಪೋಷಕಾಂಶ ಬೇಕು ಎನ್ನುವ ಎಲ್ಲಾ ಅಧಿಕಾರಿಗಳು ತಮ್ಮ ತಮ್ಮ ಜೀವನದ ಕಮಿಟ್ ಮೆಂಟ್ ಗಳನ್ನು ಗೀತಾ ಮುಂದೆ ಹೇಳಿಕೊಂಡು ತಾವೂ ಅಸಾಹಯಕರೆಂಬಂತೆ ಬಿಂಬಿಸಲು ಮುಂದಾಗುತ್ತಾರೆ. ಆದರೆ ಅದಕ್ಕೆ ಗೀತಾ ಹೇಳುವ ಮಾತು; ನಿಮ್ಮ ಸಂಬಳಕ್ಕಿಂತ ಹೆಚ್ಚು ಕಮಿಟ್ ಮೆಂಟ್ ಮಾಡಿಕೊಳ್ಳಲು ಮತ್ತು ನಾವು ಪ್ರತೀ ಕೆಲಸಕ್ಕೂ ಲಂಚ ಕೊಡ್ತೀವಿ ಅಂತ ಏನಾದರೂ ಸ್ಟಾಂಪ್ ಪೇಪರ್ ಮೇಲೆ ಬರೆದು ಕೊಟ್ಟಿದ್ವಾ ?

ಅವಳ ಬೇಡಿಕೆಯೆಂದರೆ ಆ ಎಲ್ಲಾ ನೌಕರರನ್ನು ಆ ದಿನವೇ ಸರ್ಕಾರ ಕೆಲಸದಿಂದ ವಜಾ ಮಾಡಬೇಕೆಂಬುದು. ಇದಕ್ಕೆ ಒಪ್ಪಬೇಕೇ ಬೇಡವೇ ಎಂಬುದು ಸರ್ಕಾರದ ಮಟ್ಟದಲ್ಲಿ ಚರ್ಚೆಯಾಗುತ್ತದೆ. ಅವಳ ಮಾತಿಗೆ ಒಪ್ಪುವ ರೀತಿಯಲ್ಲಿಯೇ ಪ್ರತಿಕ್ರಿಯಿಸುವ ಸರ್ಕಾರ ಪ್ರತಿತಂತ್ರವನ್ನೂ ಉಪಯೋಗಿಸಿ ಕೊನೆಗೂ ಅವಳನ್ನು Zero Causality ಯೊಂದಿಗೆ ಬಂಧಿಸುವಲ್ಲಿ ಯಶಸ್ವಿಯಾಗುತ್ತದೆ. ಗರ್ಭಿಣಿಯಾಗಿದ್ದ ಗೀತಾ ಹೆಣ್ಣು ಮಗುವಿಗೆ ಜನ್ಮವಿತ್ತು ಕೊನೆಯುಸಿರೆಳೆಯುತ್ತಾಳೆ. ತನ್ನ ಮಗುವಿನ ಭವಿಷ್ಯಕ್ಕಾದರೂ ಈ ವ್ಯವಸ್ಥೆ ಸರಿಯಾಗಬೇಕು ಎಂಬುದು ಗೀತಾಳ ಕನಸಾಗಿಯೇ ಉಳಿಯುತ್ತದೆ. ಮೌನದಲ್ಲಿಯೇ ಮಾತಾಡುವ ಮುದುಕ‌ ಮತ್ತು ಗೀತಾ ತಮ್ಮ ಅಭಿನಯದಿಂದ ನಮ್ಮನ್ನು ಆವರಿಸುತ್ತಾರೆ.

ಇಂಥ ಕಥೆಯನ್ನು ಸಿನಿಮಾ ಮಾಡುವಾಗ ಸಾಕಷ್ಟು ರೂಪಕಗಳನ್ನು ಬಳಸಬೇಕಾಗುತ್ತದೆ‌. ಅದನ್ನೂ ನಿರ್ದೇಶಕರು ಸಮರ್ಥವಾಗಿ ಮಾಡಿದ್ದಾರೆ. ಅದೇ ಕಛೇರಿಯ ಮುಂದೆ ಗಾಂಧಿ ಮಾರ್ಗದಲ್ಲಿ ಪ್ರತಿಭಟನೆಗೆ ಕೂತಿರುವ ವ್ಯಕ್ತಿ ಈ ಪ್ರಖರಣದ ನಂತರ ಎದ್ದು ಹೋಗುವುದು ವಿಶೇಷವಾಗಿದೆ. ಭಾವನಾತ್ಮಕವಾಗಿ ಇಡೀ ಚಿತ್ರ ಕಟ್ಟಿರುವುದರಿಂದ ಎಲ್ಲೂ ಪ್ರೇಕ್ಷಕನಿಗೆ ಒತ್ತೆಯಾಳುಗಳ ಜೀವದ ಬಗ್ಗೆ ಆತಂಕ ಮೂಡುವುದೇ ಇಲ್ಲ.‌ ಹೆದರಿಸಲು ಬಂದ ಗೀತಾ ಕಟ್ಟಿಕೊಂಡಿರುವುದು ಕೂಡ ಹುಸಿ ಬಾಂಬ್ ! ತನ್ಮೂಲಕ ವ್ಯವಸ್ಥೆಯ ನೀಚರ ಮನ ಪರಿವರ್ತನೆ ಮಾಡುವುದಷ್ಟೆ ಅವಳ ಉದ್ದೇಶವಾಗಿತ್ತೆಂಬುದು ಸ್ಪಷ್ಟ. ಇಂಥ ಘಟನೆಯೊಂದು ನಡೆದಾಗ ನ್ಯೂಸ್ ಚಾನೆಲ್ ನವರು ಹೇಗೆ ವರ್ತಿಸುತ್ತಾರೆ. ಅನ್ಯಾಯದ ವಿರುದ್ಧ ಸಿಡಿದವರನ್ನು ಎಷ್ಟು ಸಲೀಸಾಗಿ ಟೆರರಿಸ್ಟ್ , ನಕ್ಸಲೈಟ್ , ದೇಶದ್ರೋಹಿ ಎಂದೆಲ್ಲ ಲೇಬಲ್ ಮಾಡಿ ಬಿಡುತ್ತಾರೆ ಎಂಬುದನ್ನು ಚಿತ್ರದಲ್ಲಿ ಮಾರ್ಮಿಕವಾಗಿ ತೋರಿಸಲಾಗಿದೆ.

1978 ರ ಆ್ಯಕ್ಟ್ ಪ್ರಕಾರ ಸರ್ಕಾರಿ ನೌಕರರನ್ನು ವಜಾ ಗೊಳಿಸುವುದು ಎಷ್ಟು ಕಷ್ಟವಿದೆ ಎಂಬುದರೊಂದಿಗೆ ಇದೇ ಅವರ ಆಟಾಟೋಪಕ್ಕೆ ಕಾರಣವೂ ಇರಬಹುದೆಂಬುದು ಮನವರಿಕೆಯಾಗುತ್ತದೆ. ಸರ್ಕಾರ ಒಪ್ಪಿದ ಮೇಲೂ ಅದನ್ನು ಹೈಕೋರ್ಟ್ ನಲ್ಲಿ ಮತ್ತೆ ತಡೆ ಹಿಡಿಯಬಹುದೆಂದಾಗ ನಾವು ರೂಪಿಸಿಕೊಂಡ ಕಾನೂನುಗಳು ಭ್ರಷ್ಟರನ್ನು ಹೇಗೆ ರಕ್ಷಿಸಬಲ್ಲವು ಎಂದು ಅರ್ಥ ಮಾಡಿಕೊಳ್ಳಬಹುದು.

ಅದೊಂದನ್ನು ಬಿಟ್ಟರೆ ಇಡೀ ಸಿನಿಮಾ ನಮ್ಮನ್ನು ಹೊರಬಂದಮೇಲೂ ಕಾಡುತ್ತದೆ. ಮಂಸೋರೆ ಅವರ ನಿರ್ದೇಶನ ಮತ್ರು ದಯಾನಂದ್ ಹಾಗೂ ವೀರು ಮಲ್ಲಣ್ಣ ಅವರ ಬರವಣಿಗೆ ಚಿತ್ರವನ್ನು ಸಶಕ್ತಗೊಳಿಸಿದೆ. ಚಿತ್ರದ ಭಾಗವಾಗಿರುವ ಬಿ ಸುರೇಶ್ , ಸಂಚಾರಿ ವಿಜಯ್ , ಸತೀಶ್ ಚಂದ್ರ ಮುಂತಾದ ಗೆಳೆಯರೆಲ್ಲರಿಗೂ ಅಭಿನಂದನೆಗಳು … ಕೊರೋನಾ ನಂತರ ಥಿಯೇಟರ್ ನಲ್ಲಿ ನೋಡಿದ ಈ ಸಿನಿಮಾ ಬಹಳ ಕಾಲ ನೆನಪಿನಲ್ಲಿ ಉಳಿಯುತ್ತದೆ …ಆದರೆ ಆ ಗೀತಾ ಗೆಲ್ಲಬೇಕು … ಅವಳನ್ನು ನಾವೆಲ್ಲ ಗೆಲ್ಲಿಸೋಣ …

Categories
ಸಿನಿ ಸುದ್ದಿ

ಆಕ್ಟ್ 1978 ಅನ್ನೋದು ಅನುಭವದ ಕತೆ – ಮಂಸೋರೆ

ಐಟಂ ಸಾಂಗ್ ಇಲ್ಲ‌ ಅನ್ನೋದನ್ನ ಬಿಟ್ಟರೆ ಇದು ಪಕ್ಕಾ ಕಮರ್ಷಿಯಲ್ ಆ್ಯಂಡ್ ಮಾಸ್ ಸಿನಿಮಾ ಅಂದ್ರು ಅವಾರ್ಡ್ಸ್ ವಿನ್ನರ್ ಡೈರೆಕ್ಟರ್

ಕನ್ನಡದಲ್ಲಿ ಪ್ರಯೋಗಾತ್ಮಕ ಚಿತ್ರಗಳ ಮೂಲಕ ಗಮನ‌ಸೆಳೆದ ನಿರ್ದೇಶಕರ ಪೈಕಿ ಮಂಸೋರೆ ಕೂಡ ಒಬ್ಬರು. ಹರಿವು, ನಾತಿ ಚೆರಾಮಿ’ ಚಿತ್ರಗಳ ನಂತರ ಈಗ ವಿಭಿನ್ನ ಶೀರ್ಷಿಕೆ ಹಾಗೂ ವಿಶಿಷ್ಟ ಕಥಾ ಹಂದರದ ‘ಆಕ್ಟ್ 1978 ‘ ಚಿತ್ರದೊಂದಿಗೆ ಸುದ್ದಿಯಲ್ಲಿದ್ದಾರೆ. ಹಲವು ಕಾರಣಕ್ಕೆ ಈ ಚಿತ್ರ ಕುತೂಹಲ‌ ಮೂಡಿಸಿದೆ. ವಿಶೇಷವಾಗಿ ಈ ಚಿತ್ರ ಲಾಕ್ ಡೌನ್ ನಂತರ ತೆರೆ ಕಾಣುತ್ತಿರುವ ಮೊದಲ‌ಚಿತ್ರ ಎನ್ನುವುದು ದೊಡ್ಡ ಕ್ಯೂರಿಯಾಸಿಟಿ ಮೂಡಿಸಿದೆ. ನವೆಂಬರ್ 20 ರಂದು ರಾಜ್ಯಾದ್ಯಂತ ತೆರೆ ಕಾಣುತ್ತಿರುವ ಈ ಚಿತ್ರದ ವಿಶೇಷತೆ ಕುರಿತು ಅವರೊಂದಿಗೆ ‘ಸಿನಿ ಲಹರಿ’ ನಡೆಸಿದ ವಿಶೇಷ ಸಂದರ್ಶನ ಇಲ್ಲಿದೆ.

– ಲಾಕ್ ಡೌನ್ ನಂತರ ತೆರೆ ಕಾಣುತ್ತಿರುವ ಮೊದಲ ಸಿನಿಮಾ ನಿಮ್ದು. ಇದೊಂಥರ ಸಾಹಸ. ಹಾಗೆಯೇ ಸವಾಲು. ಇದು ಯಾಕೆ, ಹೇಗೆ, ಅಷ್ಟು ಕಾನ್ಪಿಡೆನ್ಸ್ ಏನು ?

ಕಾನ್ಫಿಡೆನ್ಸ್ ಅಂದ್ರೆ ಸಿನಿಮಾ‌. ಅದರಾಚೆ ಸಾಹಸ, ಸವಾಲು ಎನ್ನುವುದಕ್ಕಿಂತ, ಇದೇ ನಮಗೆ ಸರಿಯಾದ ಸಮಯ. ಸೋಲೋ, ಗೆಲ್ಲವೋ ಇಂತಹ ಟೈಮ್ ಮತ್ತೆ ಸಿಗಲ್ಲ ಎನ್ನುವುದು ನನ್ನ ಭಾವನೆ. ಯಾಕಂದ್ರೆ ಹತ್ತಾರು ಸಿನಿಮಾಗಳ ನಡುವೆ ಬಂದು ಕಳೆದು ಹೋಗುವುದಕ್ಕಿಂತ ವಿಶಾಲವಾದ ಈ ಸಂದರ್ಭದಲ್ಲಿ ಬಂದು ಜನರನ್ನು ತಲುಪಲು ಪ್ರಮಾಣಿಕವಾಗಿ ಪ್ರಯತ್ನ ಮಾಡೋಣ ಎನ್ನುವುದು ನಮ್ಮ ಲೆಕ್ಕಚಾರ. ಗೊತ್ತಿಲ್ಲ, ಇದು ಎಷ್ಟರ ಮಟ್ಟಿಗೆ ಸಕ್ಸಸ್ ಆಗುತ್ತೋ ಅಂತ‌. ಆದ್ರೆ ಇಲ್ಲಿ ತನಕ ಸಿಕ್ಕಿರುವ ರೆಸ್ಪಾನ್ಸ್ ನೋಡಿದ್ರೆ, ಪಾಸಿಟಿವ್ ವೈಬ್ರೇಷನ್ ಅಂತೂ ಇದ್ದೇ ಇದೆ.

ಆಕ್ಟ್ 1978 ಹೆಸರಲ್ಲಿ ಏನನ್ನು ಹೇಳಲು ಹೊರಟ್ಟಿದ್ದೀರಿ, ಇದು ಯಾರ ಮತ್ತು ಯಾವ ಕಾನೂನಿನ ಪರವಾದ ಸಿನಿಮಾ?

ಹೆಸರೇ ಹೇಳುವಂತೆ ಇದೊಂದು ಕಾನೂನಿನ ಸುತ್ತಲ ಕತೆ ಎನ್ನುವುದು ಸತ್ಯ, ಆದರೆ ಅದೇ ಚಿತ್ರದ ಪ್ರಧಾನ‌ಕತೆ ಅಲ್ಲ. ಒಂದು ಕಾನೂನಿನ ಸುತ್ತ ಬೇರೆಯದೇ ಆದ ಅನೇಕ ಸಂಗತಿಗಳಿವೆ. ಅವೆಲ್ಲವೂ ಹೊಸತಾದ ಅಂಶಗಳು. ಒಂದಂತೂ ಸತ್ಯ, ಇವೆಲ್ಲ ಜನರ ಮನಸ್ಸಿಗೆ ಹತ್ತಿರವಾದ ವಿಷಯ. ಒಂದಲ್ಲೊಂದು ರೀತಿಯಲ್ಲಿ ಸಾಮಾನ್ಯ ಜನರು ಅಧಿಕಾರಿ‌ಶಾಹಿ ವ್ಯವಸ್ಥೆಯಲ್ಲಿ ನಲುಗಿರುತ್ತಾರೆ. ಅವರಿಗೆ ಇದು ಬಹುಬೇಗ ಕನೆಕ್ಟ್ ಆಗುತ್ತದೆ ಎನ್ನುವ ನಂಬಿಕೆ ನಮ್ಮದು.

ಈ ಕತೆಗೆ ಸ್ಪೂರ್ತಿ ಏನು? ಇದನ್ನೇ ಸಿನಿಮಾ ಮಾಡ್ಬೇಕು ಅಂತೆನಿಸಿದ್ದು ಯಾಕೆ?

ಒಂದೇ ಮಾತಿನಲ್ಲಿ ಹೇಳುವುದಾದರೆ ಅಧಿಕಾರಿ ಶಾಹಿಯೇ ಈ ಕತೆಗೆ ಸ್ಪೂರ್ತಿ. ಈ ದೇಶದಲ್ಲಿ ಯಾರೆಲ್ಲ, ಹೇಗೆಲ್ಲ ಬದಲಾದರೂ ಅಧಿಕಾರಿ ಶಾಹಿ ಮಾತ್ರ ಬದಲಾಗದು. ಅವರೆಲ್ಲ ಜನರಿಗೆ ತಾವು ಸೇವಕರು ಎನ್ನುವುದಕ್ಕಿಂತ ಜನರೇ ತಮಗೆ ಸೇವಕರೆಂ ದುಕೊಂಡಿದ್ದಾರೆ. ಹೀಗಾಗಿ ಸಾಮಾನ್ಯ ಜನರು ಒಂದಲ್ಲೊಂದು ರೀತಿಯಲ್ಲಿ ಹಲವಾರು ವರ್ಷಗಳಿಂದ ಅಧಿಕಾರಿ ಶಾಹಿ ದೌರ್ಜನ್ಯದಡಿ ನಲುಗಿದವರೆ‌ . ಇಂತಹದೇ ಒಂದು ಅನುಭವ ನನಗೂ ಆಯಿತು. ತಂದೆಯವರ ಪೆನ್ಸೆಷನ್ ಗೆ ಅಂತ ಓಡಾಡುವಾಗ ಸಾಕಷ್ಟು ನೋವಿನ ಅನುಭವ ಆಯ್ತು‌. ನನ್ನಂತಹ ವಿದ್ಯಾವಂತ ಯುವಕನ ಸ್ಥಿತಿಯೇ ಹೇಗಾದರೆ, ಏನು ಅರಿಯದ ಸಾಮಾನ್ಯರ ಜನರ ಗತಿಯೇನು ಅಂತ ಯೋಚಿಸುತ್ತಿದ್ದೆ. ಆಗ ಹುಟ್ಟಿದ ಕತೆ ಇದು‌.

ಅನುಭವದ ಕತೆಗಳು ಕೆಲವೊಮ್ಮೆ ಡಾಕ್ಯುಮೆಂಟರಿ ರೂಪದಲ್ಲೇ ತೆರೆಗ ಬಂದು ಬಿಡುವ ಸಾಧ್ಯತೆಗಳೇ ಹೆಚ್ಚು. ಅದನ್ನು ಇದು ಮೀರಿ ರಂಜಿಸುವುದು ಹೇಗೆ?

ಹಾಗೆ ಆಗೋದಿಕ್ಕೆ ಇದನ್ನ ಬಿಟ್ಟಿಲ್ಲ. ಇದರ ಚಿತ್ರಕತೆ ಶೈಲಿಯೇ ವಿಭಿನ್ನ. ಅನೇಕ ಸಿನಿಮ್ಯಾಟಿಕ್ ರೂಪಗಳನ್ನು ಇಲ್ಲಿ ಅಳವಡಿಸಿಕೊಂಡಿದ್ದೇವೆ. ಥ್ರಿಲ್ಲರ್ ಶೈಲಿಯಾಗಿರ ಬಹುದು,ಪಾತ್ರಗಳನ್ನು ತಂದ ಬಗೆಯಾಗಲಿ, ಸಂಭಾಷಣೆಯಾಗಲಿ, ಎಲ್ಲವನ್ನು ಒಂದು ಪಕ್ಕಾ ಕಮರ್ಷಿಯಲ್ ಸಿನಿಮಾದ ರೂಪದಲ್ಲೇ ತೆರೆಗೆ ತಂದಿದ್ದೇವೆ. ಅದೊಂದೇ ಕಾರಣಕ್ಕೆ ಇದೊಂದು ಪಕ್ಕಾ ಮಾಸ್ ಸಿನಿಮಾವೂ ಹೌದು. ಹಾಗೆಯೇ ಇದೊಂದು  ಹೊಸ್ಟೇಜ್ ಥ್ರಿಲರ್ ಕತೆ.

ಪೋಸ್ಟರ್ ಮೂಲಕ ಕುತೂಹಲ‌ಮೂಡಿದ್ದು ಇದೊಂದು ಮಹಿಳಾ ಪ್ರಧಾನ ಸಿನಿಮಾವೇ ಎನ್ನುವ ಬಗ್ಗೆ, ಇದು ಹೇಗೆ?

ಇಲ್ಲ, ಇದು ಮಹಿಳಾ ಪ್ರಧಾನ ಸಿನಿಮಾ ಅಲ್ಲ. ಬದಲಿಗೆ ಮಹಿಳಾ ಕೇಂದ್ರಿತ ಸಿನಿಮಾ. ಸಾಮಾನ್ಯವಾಗಿ ಮಾಲಾಶ್ರೀ‌ಸಿನಿಮಾಗಳು, ತೆಲುಗಿನಲ್ಲಿ‌ವಿಜಯ ಶಾಂತಿ ಅಭಿನಯದ ಸಿನಿಮಾಗಳು ಹೇಗೆ ಹೆಣ್ಣಿನ ರೂಪದ ಗಂಡು ಸಿನಿಮಾಗಳಾಗಿ ಗಮನ ಸೆಳೆಯುತ್ತವೆಯೋ, ಹಾಗೆಯೇ ಇದು ಕೂಡ ಮಹಿಳಾ ಕೇಂದ್ರಿತ ಸಿನಿಮಾ‌.‌ನಟಿ ಯಜ್ಞಾ ಶೆಟ್ಟಿ ಇದರ ಕೇಂದ್ರ ಬಿಂದು‌. ಬಹುತೇಕ ಕತೆಗಳು ಹೀರೋ ಮೂಲಕ ತೆರೆದುಕೊಳ್ಳುವುದು ನಿಮಗೂ ಗೊತ್ತು. ನಾವ್ಯಾಕೆ ಒಬ್ಬ ಮಹಿಳೆಯ ಮೂಲಕ ಹೇಳಬಾರದು ಅಂತ ಯೋಚಿಸಿ, ಹಾಗೆ ಮಾಡಿದೆವು. ಅದರಲ್ಲೂ ಇನ್ನೊಂಚೂರು ವಿಶೇಷ ಇರಲಿ, ಅಂತ ಒಬ್ಬ ತುಂಬು ಗರ್ಭಿಣಿ ರೂಪ ತೊಡಿಸಿದ್ದೇವು. ಅದೇ ರೀತಿ ಸಿನಿಮಾ ಕೂಡ ತುಂಬು ಗರ್ಭಿಣಿ ಯ ಹಾಗೆ ಎಲ್ಲಾ ವಿಶೇಷತೆ ತುಂಬಿಕೊಂಡು ಆಕರ್ಷಣೆ ಮೂಡಿಸುತ್ತದೆ‌.

ಪಾತ್ರಗಳ ವಿಚಾರದಲ್ಲಿ ಇದೊಂದು ದೊಡ್ಡ ತಾರಾಗಣ ಇರುವ ಸಿನಿಮಾ.‌ಅಷ್ಟೂ ಪಾತ್ರಗಳ ಪ್ರಾಧಾನ್ಯತೆ ಹೇಗೆ?

ನನ್ನ ಹಿಂದಿನ ಸಿನಿಮಾ ನೋಡಿದವರಿಗೆ ಪಾತ್ರಗಳ ಸೃಷ್ಟಿಯ ವಿಚಾರದಲ್ಲಿ ನಾನು ತೆಗೆದುಕೊಳ್ಳುವ ಎಚ್ಚರ ಗೊತ್ತೇ ಇರುತ್ತೆ. ಚಿಕ್ಕದೊಂದು ಪಾತ್ರವೂ ಇಲ್ಲಿ ಅನವಶ್ಯಕ ಎನಿಸುವುದಿಲ್ಲ. ಪ್ರತಿ ಪಾತ್ರಕ್ಕೂ‌ ಅದರದ್ದೇಯಾದ ಪ್ರಾಮುಖ್ಯತೆ ಇರುತ್ತದೆ. ಆ ಕಾರಣಕ್ಕೂ ಇದೊಂದು ವಿಶೇಷವಾದ ಸಿನಿಮಾ. ಚಿತ್ರದ ನಾಯಕಿ ಯಜ್ಞಾ‌ಶೆಟ್ಟಿ ಅವರ ಪಾತ್ರಕ್ಕಿರುವ ಪ್ರಾಮುಖ್ಯತೆ ಸುರೇಶ್ ಸರ್, ವಿಜಯ್ ಸರ್, ಮೊದಲ್ಗೊಂಡು ಉಳಿದವರ ಪಾತ್ರಕ್ಕೂ ಇದೆ‌ . ಅದು ಈ ಸಿನಿಮಾ‌ದ ಸ್ಪೆಷಲ್. ಹಾಗೆಯೇ ಹಾಸ್ಟೆಜ್ ಥ್ರಿಲ್ಲರ್ ಇದರ ಇನ್ನೊಂದು ವಿಶೇಷ. ನಿಷ್ಕರ್ಷ ಸಿನಿಮಾದ ಶೈಲಿಯಲ್ಲಿ ಇದರ ಕಥಾ ಹಂದರವೂ ಇದೆ.ಆದರೆ ಇದು ವಿಭಿನ್ನ.‌ಅದು ಹೇಗೆ ಅನ್ನೋದಿಕ್ಕೆ ಸಿನಿಮಾ ನೋಡಬೇಕು.

ಇದೊಂದು ಪಕ್ಕಾ ಮಾಸ್ ಅಥವಾ ಕಮರ್ಷಿಯಲ್ ಸಿನಿಮಾ ಹೇಗೆ?

ಮೊದಲಿಗೆ ಅದಕ್ಕೆ ಪೂರಕವಾಗುವುದು ಕತೆ. ಇದೊಂದು ಥ್ರಿಲ್ಲರ್ ಸಿನಿಮಾ. ತುಂಬಾ ಅಪರೂಪಕ್ಕೆ ಇಂತಹ ಕತೆ ಕಾಣಲು ಸಾಧ್ಯ. ಜತೆಗೆ ಚಿತ್ರಕತೆ. ನನ್ನ ಹಿಂದಿನ ಸಿನಿಮಾಗಳಿಗಿಂತ ತುಂಬಾ ವಿಭಿನ್ನವಾದ ಶೈಲಿಯಲ್ಲಿ ಇದೆ ಇದರ ಚಿತ್ರಕತೆ. ವಾಸ್ತದ ಜತೆಗೆ ಸಿನಿಮ್ಯಾಟಿಕ್ ತುಂಬಾ ಇದೆ. ಐಟಂ ಸಾಂಗ್ ಇಲ್ಲ ಎನ್ನುವುದನ್ನು ಬಿಟ್ಟರೆ, ಅನೇಕ ಮಾಸ್ ಎಲಿಮೆಂಟ್ಸ್ ಚಿತ್ರದಲ್ಲಿವೆ.

Categories
ಸಿನಿ ಸುದ್ದಿ

ಅಂಬೇಡ್ಕರ್ ಎನ್ನುವ ಹೆಸರು ಟಿವಿ ಚಾನೆಲ್ ಗಳಿಗೆ ಬರೀ ಟಿಆರ್ ಪಿ ಸರುಕಾ?

ಒಂದು ಕಾಲದಲ್ಲಿ ಅಂಬೇಡ್ಕರ್ ಅವರನ್ನು ವಿರೋಧಿಸಿದ ಮನಸ್ಸು ಗಳೇ ಇವತ್ತು ಅವರನ್ನು ಕೊಂಡಾಡುತ್ತಿವೆ‌ . ಮತ್ತೊಂದಿಷ್ಟು ಮನಸ್ಸು ಗಳು ಅವರ ಹೆಸರನ್ನು ಟಿಆರ್ ಪಿ ಸರಕನ್ನಾಗಿ ಮಾಡಿಕೊಂಡಿವೆ. ಅವರ ಉದ್ದೇಶ ನಿಜಕ್ಕೂ ಅದಲ್ಲ ಎನ್ನುವುದಾದರೆ, ಅಂಬೇಡ್ಕರ್ ಹೆಸರಲ್ಲಿ ದಲಿತ ಸಮಯದಾಯಕ್ಕೆ ಮಹತ್ತರವಾದ ಒಂದು ಕೊಡುಗೆ ಯಾಕೆ ನೀಡಬಾರದು? ಕೊರೋನಾ‌ ನೆರವಿಗೆ 5 ಕೋಟಿ ನೀಡುವ ‘ಜೀ ‘ ಕನ್ನಡ, ರಾಜ್ಯದ ದಲಿತ ಸಮಯದಾಯಕ್ಕೆ ನೆರವು ಯಾಕೆ ನೀಡಿ, ಹೊಸ ದಾಖಲೆ ಯಾಕೆ ಮಾಡಬಾರದು?


ಕನ್ನಡ‌‌ ಕಿರುತೆರೆ ಮಟ್ಟಿಗೆ ಇತ್ತೀಚೆಗೆ ಹಲವು ಕೌತುಕಗಳು ಘಟಿಸಿವೆ. ವಿಶೇಷವಾಗಿ ‘ಜೀ ಕನ್ನಡ ‘ ವಾಹಿನಿಯ ‘ ಮಹಾನಾಯಕ’ ಧಾರಾವಾಹಿ ಮನೆ ಮಾತಾಗಿದ್ದು ಕನ್ನಡ ಕಿರುತೆರೆಯ ಮಟ್ಟಿಗೆ ಸಂಚಲನದ ಸುದ್ದಿ. ಇದರೊಂದಿಗೆ ‘ಜೀ ‘ಕನ್ನಡ ಹೊಸ ವೀಕ್ಷಕ ವರ್ಗವನ್ನೇ ತನ್ನ ಬುಟ್ಟಿಗೆ ಹಾಕಿಕೊಂಡಿದೆ.‌ ಒಂದೇ ಒಂದು ಘಟನೆಯ ಮೂಲಕ ರಾಜ್ಯದ ದಲಿತ ಸಮುದಾಯ ‘ಮಹಾನಾಯಕ ‘ಧಾರಾವಾಹಿ ತನ್ನದೇ ಕಾರ್ಯಕ್ರಮ‌ ಅನ್ನುಷ್ಟರ ಮಟ್ಟಿಗೆ ಅಪ್ಪಿ, ಒಪ್ಪಿ ,ಸ್ವೀಕರಿಸಿ ಮನೆ ಮಾತಾಗಿಸಿದೆ. ಇದಕ್ಕೆ ಪ್ರತಿಯಾಗಿ’ ಜೀ‌ ‘ ಕನ್ನಡ ಆ‌ ಸಮುದಾಯಕ್ಕೆ ಕೊಟ್ಟಿದ್ದೇನು ಎನ್ನುವ ಪ್ರಶ್ನೆ‌ ಸಹಜವಾಗಿಯೇ ಈಗ ಹುಟ್ಟಿಕೊಂಡಿದೆ.

ಇದು ಯಾಕೆ, ಹೇಗೆ ಎನ್ನುವ ಮುಂಚೆ’ ಜೀ ಕನ್ನಡದ ಹಿನ್ನೆಲೆ ಏನು ಅನ್ನೋದು ಒಂದಷ್ಟು ದಲಿತ ಸಮುದಾ ಯದ ಜನರಿಗೆ ತಿಳಿಯುವುದು ಒಳ್ಳೆಯದು. ‘ಜೀ’ ಕನ್ನಡ ಸದ್ಯಕ್ಕೆ ಕನ್ನಡ ಕಿರುತೆರೆಯ ಒಂಬರ್ ಒನ್ ಚಾನೆಲ್. ಅದರಲ್ಲೂ ಇತ್ತೀಚಿನ ಕೆಲ ವರ್ಷಗಳ ಈಚೆಗೆ ಕನ್ನಡ ಕಿರುತೆರೆ ವೀಕ್ಷಕರ ಮುಂದೆ ಅದು ತಂದ ಕೆಲವು ರಿಯಾಲಿಟಿ ಶೋ‌ ಗಳು ಭಾರೀ ಜನ ಮೆಚ್ಚುಗೆ ಮೂಲಕ ಲಾಭದಾಯಕ ಕಾರ್ಯಕ್ರಮ‌ ಆಗಿವೆ.

ಈಚೆಗೆ ಅದರ ಧಾರಾವಾಹಿಗಳೂ ಅಷ್ಟೇ ಜನಪ್ರಿಯತೆ ಪಡೆದಿರುವುದು ಕೂಡ ಗೊತ್ತಿರುವ ವಿಚಾರ. ಅದರ ನಡುವೆಯೇ ಮಹಾನಾಯಕ ಧಾರಾವಾಹಿಯೂ ಕೂಡ ಅದರ ಯಶಸ್ವಿ ಧಾರಾವಾಹಿಗಳಲ್ಲಿ ಒಂದಾಗಿದ್ದು, ವಿಶೇಷ. ಅದಕ್ಕೆ ಕಾರಣ ಮಹಾ ನಾಯಕ ಅಂಬೇಡ್ಕರ್ ಅವರ ಮೇಲೆ ದಲಿತ ಸಮುದಾಯಕ್ಕಿದ್ದ ಅಭಿಮಾನ.

ಕನ್ನಡದ ಮಹಾನಾಯಕ ಧಾರಾವಾಹಿಯ ಮೂಲ ಹಿಂದಿ.‌ ಅಂಬೇಡ್ಕರ್ ಮೇಲಿನ ಅಭಿಮಾನಕ್ಕೆ ಉಜ್ವಲ್ ಸುಶೀಲ್ ಕುಮಾರ್ ಶಿಂಧೆ ಹಾಗೂ ಸ್ಮೃತಿ ಸುಶೀಲ್ ಕುಮಾರ್ ಶಿಂಧೆ ನೇತ್ವತ್ವದ ಸೊಬೋ ಫಿಲ್ಮ್ಸ್ ನಿರ್ಮಾಣ ಸಂಸ್ಥೆ ಮಹಾ ನಾಯಕ ಧಾರಾವಾಹಿ ಯನ್ನು ಹಿಂದಿಯ ‘ಜೀ’ ಟಿವಿಗೆ ನಿರ್ಮಾಣ ಮಾಡಿತ್ತು.

ಮಹಾರಾಷ್ಟ್ರವು ಮೊದಲೇ ಅಂಬೇಡ್ಕರ್ ಹುಟ್ಟಿದ ನೆಲ. ಇನ್ನು ಅಂಬೇಡ್ಕರ್ ಅವರ ಬದುಕು ಕಿರುತೆರೆ ಯಲ್ಲಿ ಬರುತ್ತದೆ ಅಂದರೆ, ನೋಡದೆ ಇರುತ್ತಾ? ನಿರೀಕ್ಷೆ ಯಂತೆ ಕಿರುತೆರೆಯಲ್ಲಿ ದೊಡ್ಡ ಬೆಂಬಲ ಸಿಕ್ಕಿತು. ಒಂದೆಡೆ ನಿರ್ಮಾಣ ಸಂಸ್ಥೆ , ಮತ್ತೊಂದೆಡೆ ಜೀ ಟಿವಿ ಇಬ್ಬರು ಅದ್ಬುತ ಲಾಭ ಪಡೆದರು.‌ಅದರ ರುಚಿ ಕಂಡ ‘ಜೀ ‘ಕನ್ನಡ ಕೂಡ ಮಹಾ ನಾಯಕ‌ ಧಾರಾವಾಹಿಯನ್ನು ಕನ್ನಡಕ್ಕೆ ತಂತು. ಅದಕ್ಕೆ ನೆಪವಾಗಿದ್ದು ಲಾಕ್ ಡೌನ್ .

ಕನ್ನಡಕ್ಕೆ ಬಂದ ಹಲವು ಧಾರಾವಾಹಿಗಳಿಗೆ ಲಾಕ್ ಡೌನ್ ಒಂದು ನೆಪವಾಯಿತು. ಮಹಾ‌ನಾಯಕ ಧಾರಾವಾಹಿ ಕನ್ನಡಕ್ಕೆ ಬಂದಿದ್ದು ಕೂಡ ಹಾಗೆಯೇ. ಅಂಬೇಡ್ಕರ್ ಅವರ ಮೇಲಿನ ದೊಡ್ಡ ಅಭಿಮಾನಕ್ಕಾಗಲಿ, ರಾಜ್ಯದ ದಲಿತ ಸಮುದಾಯಕ್ಕೆ ಅಂಬೇಡ್ಕರ್ ಅವರನ್ನ ಪರಿಚಯಿಸಬೇಕೆನ್ನುವ ಮಹತ್ವಾಕಾಂಕ್ಷೆಯಿಂದಾಗಲಿ ಅಲ್ಲ. ಅದೊಂದು ಟಿಆರ್ ಪಿ ಧಾರಾವಾಹಿ. ಅದು ಕನ್ನಡದಲ್ಲೂ ಟಿಆರ್ ಪಿ ತರಬಲ್ಲದು ಎನ್ನುವ ಒಂದೇ ಉದ್ದೇಶದೊಂದಿಗೆ ಶುರುವಾದ ‘ಮಹಾನಾಯಕ’ ಧಾರಾವಾಹಿ ರಾತ್ರೋರಾತ್ರಿ ಮನೆ ಮಾತಾಗಿದ್ದು ಆ ಒಂದು ಘಟನೆಯ ಮೂಲಕ.

ಅದೆಷ್ಟರ ಮಟ್ಟಿಗೆ ಸತ್ಯವೋ ಗೊತ್ತಿಲ್ಲ, ಅವತ್ತು ಜೀ ಕನ್ನಡದ ಬಿಸಿನೆಸ್ ಹೆಡ್ ರಾಘವೇಂದ್ರ ಹುಣಸೂರು ತಮ್ಮ ಪೇಸ್ ಬುಕ್ ಖಾತೆಯಲ್ಲಿ ‘ಮಹಾನಾಯಕ’ ಧಾರಾವಾಹಿ‌‌ ನಿಲ್ಲಿಸುವಂತೆ ಬೆದರಿಕೆ ಕರೆ ಬರುತ್ತಿವೆ ಅಂದಿದ್ದು ಸೋಷಲ್ ಮೀಡಿಯಾದಲ್ಲಿ ವೈರಲ್ ಆಯ್ತು. ಆ ಹೇಳಿಕೆ ದಲಿತ ಸಂಘಟನೆಗಳ ನಿದ್ದೆ ಗೆಡಿಸಿತು. ರಾಜ್ಯದ ದಲಿತ ಸಂಘಟನೆಗಳು ಎದ್ದು ಕುಳಿತವು. ಧಾರಾವಾಹಿಗೆ ಬೆಂಬಲಕ್ಕೆ ನಿಂತವು. ರಾಜ್ಯದ‌ ಮೂಲೆ ಮೂಲೆಗೂ ಧಾರಾವಾಹಿ ಪರವಾದ ಅಲೆ ಎದ್ದಿತು.

ಧಾರಾವಾಹಿ ಬೆಂಬಲಿಸಿ, ಬ್ಯಾನರ್, ಪೋಸ್ಟರ್ ಎದ್ದು ನಿಂತವು.‌ಮಹಾನಾಯಕ ಧಾರಾವಾಹಿ ತಮ್ಮದೇ ಕಾರ್ಯಕ್ರಮವೆಂದೇ ಸ್ವೀ’ಕರಿಸಿದರು.’ ಜೀ’ ಕನ್ನಡಕ್ಕೆ‌ ದಲಿ‌ತ ಸಮುದಾಯದ ಹೊಸ ವರ್ಗವೇ ಸಿಕ್ಕಿತು‌. ಎಂದೂ ಧಾರಾವಾಹಿ ನೋಡದ ಒಂದು ಸಮುದಾಯ’ ಜೀ’ ಕನ್ನಡ ದ ಪಾಲಾಯಿತು‌. ಜೀ ಕನ್ನಡದ ಬಿಸಿನೆಸ್ ಹೆಡ್ ರಾಘವೇಂದ್ರ ಹುಣಸೂರು ಸನ್ಮಾನ ಕಾರ್ಯಕ್ರಮಗಳು‌ ನಡೆದವು.

” ಅಂಬೇಡ್ಕರ್ ಅವರ ಬದುಕಿನ ಕುರಿತ ‘ಮಹಾನಾಯಕ’ ಧಾರಾವಾಹಿಯ ಮೂಲಕ ದಲಿತ ಸಮುದಾಯದ ಹೊಸ ವರ್ಗವನ್ನು ತನ್ನ ತೆಕ್ಕೆಗೆ ಹಾಕಿಕೊಂಡು ಭಾರೀ ಲಾಭ ಮಾಡಿಕೊಂಡ ‘ಜೀ ಕನ್ನಡ’ ವಾಹಿನಿ, ಆ ಸಮುದಾಯದ ಪರ ನಿಜಕ್ಕೂ ಏನನ್ನಾದರೂ ಮಾಡಬೇಕಿತ್ತು ಅನ್ನೋದು ದಲಿತ ಮುಖಂಡರ ಮಾತು.” 

ಇದು ಧಾರಾವಾಹಿ ಮನೆ ಮಾತಾಗುವಂತೆ ಮಾಡಿತು.
ನಗರ, ಪಟ್ಟಣ, ಊರು ಹೀಗೆ ರಾಜ್ಯದ ಯಾವುದೇ ಮೂಲೆಗೂ ಹೋದರೂ ಇವತ್ತು ಮಹಾನಾಯಕ ಧಾರಾವಾಹಿ ಪರವಾಗಿ ದಲಿತ‌ ಸಂಘಟನೆಗಳು ಹಾಕಿರುವ ಬೃಹತ್ ಪ್ರಮಾಣದ ಬ್ಯಾನರ್ ಹಾಗೂ ಪೋಸ್ಟರ್ ಗಳು ನಿಮಗೆ ಕಾಣುತ್ತವೆ. ಎಲ್ಲಿಯಾ ಜೀ ಕನ್ನಡ, ಇನ್ನೆಲ್ಲಿಯಾ ದಲಿತ ಸಮುದಾಯ? ಟಿಆರ್ ಪಿ ದೃಷ್ಟಿಯಿಂದಲೂ ಜೀ ಕನ್ನಡ ದೊಡ್ಡ ಲಾಭ ಪಡೆಯಿತು.‌

ಇದೆಲ್ಲ ವೂ ಸಾಧ್ಯವಾಗಿದ್ದು ಅಂಬೇಡ್ಕರ್ ಹೆಸರು. ಅವರ ಮೇಲೆ ದಲಿತ ಸಮುದಾಯಕ್ಕಿರುವ ಅಭಿಮಾನ. ಹಾಗಾದರೆ ಅಂಬೇಡ್ಕರ್ ತಮ್ಮವರೇ ಎಂದು ಧಾರಾವಾಹಿ ಸ್ವೀಕರಿಸಿದ ದಲಿತ ಸಮುದಾಯಕ್ಕೆ ‘ಜೀ ‘ಕನ್ನಡ ಕೊಟ್ಟಿದ್ದೇನು ಅನ್ನೋದು ಸದ್ಯದ ಪ್ರಶ್ನೆ. ಮುಂದಾದರೂ ಇದಕ್ಕೆ ಉತ್ತರ ಸಿಗಬಹುದೇ

Categories
ಸಿನಿ ಸುದ್ದಿ

ರಾಜ್ಯದಲ್ಲಿ ‘ಆಕ್ಟ್ 1978’ ಜಾರಿಗೆ ಕ್ಷಣಗಣನೆ..!

  • ನಿರೀಕ್ಷೆಯಂತೆ ಈ ಸಿನಿಮಾ ಗೆದ್ದರೆ  ಹೊಸ ದಾಖಲೆ

ಮಂಸೋರೆ ನಿರ್ದೇಶನದ ‘ಆಕ್ಟ್ 1978’  ಹೊಸ ಮುನ್ನುಡಿ ಬರೆಯಲು ಇನ್ನೇನು‌ ಕೆಲವೇ ದಿನ ಬಾಕಿ ಇವೆ.ನಿರ್ದೇಶಕರ ಹಿನ್ನೆಲೆ, ದೊಡ್ಡ ತಾರಾಗಣ, ಸಮಕಾಲೀನ ಸಂಗತಿಯ ಕಥಾವಹಂದರ , ಜತೆಗೆ ವಿಭಿನ್ನ ಮಾದರಿಯ ಪ್ರಚಾರದೊಂದಿಗೆ ಸಾಕಷ್ಟು ನಿರೀಕ್ಷೆ ಮೂಡಿಸಿರುವ ಸಿನಿಮಾ ಇದು.  ನಿರೀಕ್ಷೆಯಂತೆ‌ ಚಿತ್ರ ಮಂದಿರದಲ್ಲಿ ಸಿನಿಮಾ‌ ಗೆದ್ದರೆ ಹೊಸ ದಾಖಲೆ ಗ್ಯಾರಂಟಿ.


ಲಾಕ್ ಡೌನ್ ತೆರವಾದ ನಂತರ ಚಿತ್ರ ಮಂದಿರಗಳಲ್ಲಿ ತೆರೆ ಕಾಣುತ್ತಿರುವ ಮೊಟ್ಟ ಮೊದಲ‌ ಕನ್ನಡ‌ ಸಿನಿಮಾ‌ ಇದು. ಇದು ಕನ್ನಡ ದಲ್ಲಿ ಮಾತ್ರವಲ್ಲ, ದಕ್ಷಿಣ ಭಾರತದಲ್ಲೇ ಮೊದಲು. ಹಾಗೊಂದು ದೊಡ್ಡ ಕುತೂಹಲ ‘ ಆಕ್ಟ್ 1978’
ಮೇಲಿದೆ. ಕೊರೋನಾ ಬಂದು ಈ ಬಾರಿಯ ದೀಪಾವಳಿಗೆ ಸ್ಯಾಂಡಲ್ ವುಡ್ ಕಳೆ ಕಳೆದುಕೊಂಡಿತು ಎನ್ನುವ ಆತಂಕದ‌ ನಡುವೆಯೇ  ಚಿತ್ರ ತಂಡ ದೊಡ್ಡ ಸವಾಲಿನೊಂದಿಗೆ ಇದು ತೆರೆ ಕಾಣುತ್ತಿದೆ. ಈ ಮೂಲಕ ರಾಜ್ಯದ  ಚಿತ್ರಮಂದಿರಗಳಲ್ಲಿ ಕನ್ನಡ ಸಿನಿಮಾಗಳ ಪ್ರದರ್ಶನದ ಮೆರವಣಿಗೆ ಶುರುವಾಗುತ್ತಿರುವುದು ಸದ್ಯದ ಕುತೂಹಲ.

ಲಾಕಡೌನ್ ನಂತರ ಅಕ್ಟೋಬರ್ 15  ರಿಂದಲೇ  ಚಿತ್ರ ಮಂದಿರಗಳ ಆರಂಭಕ್ಕೆ ಅನುಮತಿ ಸಿಕ್ಕಿದೆ. ಅಂತೆಯೇ ಮಲ್ಟಿಪ್ಲೆಕ್ಸ್ ಸೇರಿ ಹಲವೆಡೆ ಚಿತ್ರಮಂದಿರಗಳು ಒಪನ್ ಆಗಿದ್ದೂ ಕೂಡ‌ ನಿಮಗೆ ಗೊತ್ತು. ಆದರೆ ಚಿತ್ರಮಂದಿರಕ್ಕೆ‌ಜನ ಬರುವ ಯಾವುದೇ ಖಾತರಿ ಇಲ್ಲದ ಕಾರಣ, ರಿಲೀಸ್ ಆಗಿದ್ದ ಸಿನಿಮಾಗಳೇ ಮರು ಪ್ರದರ್ಶನ ಕಂಡವು.‌ ಪ್ರೇಕ್ಷಕ ರ ಬೆಂಬಲ ಸಿಗದ ಭಯಕ್ಕೆ ಹೊಸ ಸಿನಿಮಾಗಳೆ ಬಿಡುಗಡೆ ಆಗಿರಲಿಲ್ಲ‌ .ಆದರೆ ಈಗ  ಮಂಸೋರೆ ನಿರ್ದೇಶನದ ‘ ಆಕ್ಟ್ 1978 ‘  ಚಿತ್ರ ತಂಡ ದೊಡ್ಡ ಸವಾಲಿನೊಂದಿಗೆ ನವೆಂಬರ್ 20 ಕ್ಕೆ ಚಿತ್ರ ರಿಲೀಸ್ ಮಾಡಲು ಮುಂದಾಗಿದೆ.

ಲಾಕ್ ಡೌನ್ ನಂತರ ಬಿಡುಗಡೆ ಆಗುತ್ತಿರುವ ಕನ್ನಡದ ಮೊದಲು  ಸಿನಿಮಾ‌ ಎನ್ನುವುದು  ಇದಕ್ಕಿರುವ ಹೆಗ್ಗಳಿಕೆ . ಅದರ ಜತೆಗೆ ದೊಡ್ಡ ಕುತೂಹಲ‌. ಆದರೆ ಅದು ಅಂದುಕೊಂಡಷ್ಟು ಸುಲಭವೇನಿಲ್ಲ. ಇದೊಂದು ಕಡುಕಷ್ಟದ ಸವಾಲು.‌ ಆದರೂ‌ ಮಂಸೋರೆ ಆ್ಯಂಡ್ ಟೀಮ್ ಯಾಕಿಂತ ರಿಸ್ಕ್ ತೆಗೆದುಕೊಂಡಿತು ಅನ್ನೋದು ಹಲವರ ಪ್ರಶ್ನೆ. ಆದರೆ ಯಾರೇ ಆದರೂ ಒಬ್ಬರು ಇಂತಹ‌ ರಿಸ್ಕ್ ತೆಗೆದುಕೊಳ್ಳದಿದ್ದರೆ, ಕನ್ನಡ ಚಿತ್ರ ರಂಗದ ಗತಿಯೇನು?

ಪ್ರಚಾರಕ್ಕೆ ಚಿತ್ರ ತಂಡ ರೂಪಿಸಿದ ನವನವೀನ ಪೊಸ್ಟರ್

ಇದು ಚಿತ್ರ ತಂಡ ಮಾತು.ಅದಕ್ಕೆ ಪೂರಕವಾಗಿಯೇ ಚಿತ್ರ ತಂಡ ಸೋಷಲ್ ಮೀಡಿಯಾ ಮೂಲಕ ವಿಭಿನ್ನವಾದ ಪ್ರಚಾರ ನಡೆಸಿದೆ. ಅದರ ಜತೆಗೆ  ಮಂಸೋರೆ ಈಗ ಹೊಸ ಮಾದರಿ ಸಿನಿಮಾ‌ ಮಾಡಿದ್ದಾರೆನ್ನುವುದಕ್ಕೆ ಚಿತ್ರದ ಟ್ರೇಲರ್ ಗೆ ಸಿಕ್ಕ ದೊಡ್ಡ ಬೆಂಬಲವೇ ಸಾಕ್ಷಿ ಆಗಿದೆ. ಚಿತ್ರಮಂದಿರದಲ್ಲಿಇದು ಎಷ್ಟರ ಮಟ್ಟಿಗೆ ಫಲ‌ನೀಡುತ್ತೆ ಎನ್ನುವ ಕುತೂಹಲ‌ ಮನೆ‌ ಮಾಡಿದೆ.‌

Categories
ಸಿನಿ ಸುದ್ದಿ

ರವಿ ಬೆಳಗೆರೆ ಅಂದ್ರೆ ಬೆರಗು ಮೂಡಿಸಿದ ವರ್ಣರಂಜಿತ ವ್ಯಕ್ತಿತ್ವ!

   ಅಕ್ಷರ ಮಾಂತ್ರಿಕ ಇನ್ನಿಲ್ಲ

ಒಂದು ಕಾಲದಲ್ಲಿ ಬಳ್ಳಾರಿಯೆಂಬ ಬೆಂಗಾಡಿನಿಂದ ಹೊರಟ ಹುಡುಗ ಆತ. ಮೋಟಾರ್ ಬೈಕ್ ಏರಿ ಬೆಂಗಳೂರಿಗೆ ಬಂದ. ಯೌವನದ ದಿನಗಳಲ್ಲಿ ದಿನ‌ಪತ್ರಿಕೆಯೊಂದರಲ್ಲಿ ಪತ್ರಕರ್ತನಾಗಿದ್ದ. ಆನಂತರದ ದಿನಗಳಲ್ಲಿ ತನ್ನದೇ ವಾರ ಪತ್ರಿಕೆ ಶುರು ಮಾಡಿ, ಬರವಣಿಗೆ, ಸಿನಿಮಾ, ನಿರೂಪಣೆ, ಭಾಷಣ, ನಟನೆಯೂ ಸೇರಿ ಹೆಸರು ಮತ್ತು ಹಣದ ಸಂಪಾದನೆಯಲ್ಲಿ ದೈತ್ಯಾಕಾರವಾಗಿ ಬೆಳೆದ. ಅಲ್ಲಿಂದಲೇ ಪತ್ರಿಕೋದ್ಯಮ, ಸಾಹಿತ್ಯ, ಸಿನಿಮಾ‌ಲೋಕಗಳನ್ನು ಗಾಢವಾಗಿ ಆವರಿಸಿಕೊಂಡು, ಇಡೀ‌ ನಾಡನ್ನೇ ಬೆಚ್ಚಿ ಬೀಳಿಸಿದ. ಆ ಹುಡುಗ ಬೇರಾರು ಅಲ್ಲ, ಆತನ ಹೆಸರೇ ರವಿ‌ಬೆಳಗೆರೆ.

ಬಹುಮುಖ ಪ್ರತಿಭೆಯ ಇಂತಹ ರವಿ ಬೆಳಗೆರೆ ಇನ್ನಿಲ್ಲ. ಗುರುವಾರ ತಡ ರಾತ್ರಿ ಅವರು ತಮ್ಮ ಕಚೇರಿಯಲ್ಲಿಯೇ ತೀವ್ರ ಹೃದಯಾಘಾತದಿಂದ ನಿಧನರಾ ಗಿದ್ದಾರೆ. ಬಹುಕಾಲದಿಂದ ಅನಾರೋಗ್ಯದಲ್ಲಿದ್ದ ರವಿ ಬೆಳಗೆರೆ ಅದನ್ನೇ ಮೀರಿ ಬರವಣಿಗೆಯೂ ಸೇರಿ ತಮ್ಮಿಷ್ಟದ ಕೆಲಸಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಸಮಕಾಲೀನ ಸಂಗತಿಗಳಿಗೆ ಪ್ರತಿಕ್ರಿಯಿಸುತ್ತಾ ಅಭಿಮಾನಿಗಳನ್ನು ಬೆಚ್ಚಿಬೀಳಿಸುತ್ತಿದ್ದರು. ವಿರೋಧಿಗಳಲ್ಲಿ ನಡುಕ ಹುಟ್ಟಿಸುತ್ತಿದ್ದರು. ಇಷ್ಟಾಗಿ ಅವರು ಗುರುವಾರ ರಾತ್ರಿ ವಿಧಿಯಾಟದಲ್ಲಿ ಭಾರದ ಲೋಕಕ್ಕೆ ಪ್ರಯಾಣ ಬೆಳೆಸಿರುವುದು ಕನ್ನಡ ಪತ್ರಿಕೋದ್ಯಮ ಮತ್ತು ಸಾಹಿತ್ಯ ಲೋಕಕ್ಕೆ ಅಪಾರ ಪ್ರಮಾಣದ ನಷ್ಟ ಉಂಟು ಮಾಡಿದೆ.

ಪತ್ರಕರ್ತರಾಗಿ ಕನ್ನಡಿಗರ ಮನೆ ಮಾತಾದ ರವಿ ಬೆಳಗೆರೆ ಅವರದು ಬಹುಮುಖ ವ್ಯಕ್ತಿತ್ವ. ಒಂಥರ ವರ್ಣ ರಂಜಿತ ಬದುಕು. ಆಡು ಮುಟ್ಟದ ಸೊಪ್ಪಿಲ್ಲ ಎನ್ನುವ ಹಾಗೆ ಬೆಳೆಗೆರೆ ಕೆಲಸ‌ ಮಾಡದ ಕ್ಷೇತ್ರವೇ ಇಲ್ಲ. ಆರಂಭಿಕ‌ ದಿನಗಳಲ್ಲಿ ‘ಸಂಯುಕ್ತ ಕರ್ನಾಟಕ’ ದ ಕರ್ಮವೀರ ವಾರ ಪತ್ರಿಕೆಯ ಮೂಲಕ ಪತ್ರಕರ್ತರಾಗಿ ಸಾರ್ವಜನಿಕ ಕ್ಷೇತ್ರಕ್ಕೆ ಕಾಲಿಟ್ಟವರು. ತದ‌ನಂತರ ಅಲ್ಲಿಂದ ಹೊರಬಂದು ‘ ಹಾಯ್ ಬೆಂಗಳೂರ್ ‘ ಎನ್ನುವ ವಾರ ಪತ್ರಿಕೆ ಶುರು ಮಾಡಿ, ಕನ್ನಡ ಪತ್ರಿಕೋದ್ಯಮದಲ್ಲಿ ದೊಡ್ಡ ಹವಾ ಎಬ್ಬಿಸಿ ಬಿಟ್ಟರು.

ಕಲರ್ಸ್ ಕನ್ನಡ ಬಿಗ್ ಬಾಸ್ ರಿಯಾಲಿಟಿ ಶೋ ಗೆ ಹೋಗಿ ಬಂದಿದ್ದ ಸಂದರ್ಭದಲ್ಲಿ ರವಿ ಬೆಳಗೆರೆ ಅವರನ್ನು ನಾನು ಸಂದರ್ಶಿಸಿದ ವೇಳೆ

 

‘ಹಾಯ್ ಬೆಂಗಳೂರ್ ‘ ಎಂಬ ಕಪ್ಪು ಸುಂದರಿ ಕೇವಲ ವಾರಪತ್ರಿಕೆಯಾಗದೆ, ಓದುಗನ ಒಡನಾಡಿ ಆಯಿತು. ಯಾವುದೋ ಸ್ಪೋಟಕ ಸುದ್ದಿ ಮಾತ್ರವಲ್ಲದೆ, ರವಿ ಬೆಳಗೆರೆ ಬರವಣಿಗೆಯಿಂದಲೇ ದಾಖಲೆಯ ಪ್ರಸಾರ ಸಂಖ್ಯೆ ಹೊಂದಿತು. ಅದು ಬರವಣಿಗೆ ಎನ್ನುವುದಕ್ಕಿ‌ಂತ ಓದು ಪ್ರಭುಗಳಿಗೆ ಡ್ರಗ್ಸ್ ತರಹ ಅಡಿಕ್ಟ್ ಆಯಿತು.ಯುವ ಜನತೆಯಂತೂ ‘ಓ‌ಮನಸೇ’ ಪತ್ರಿಕೆಯ ದಾಸ್ಯರಾದರು. ಅದೇ ರವಿ ಬೆಳಗರೆಯವರ ದೊಡ್ಡ ವರ್ಚಸ್ಸಿಗೆ ವೇದಿಕೆಯಾಯಿತು.‌ ಜತೆಗದು ಪತ್ರಿಕೋದ್ಯಮದ ಆಚೆಯೂ ರವಿ ಬೆಳೆಗೆರೆ ಆಲದ‌ಮರದಂತೆ‌ ಆವರಿಸಿಕೊಂಡು, ಎಲ್ಲರ ಕಣ್ಣು ಅವರತ್ತ ಬೀಳುವಂತೆ ಮಾಡಿದ್ದು ಸೋಜಿಗ.

ರವಿ ಬೆಳಗೆರೆಯವರ ಬಗ್ಗೆ ಬರೆಯುತ್ತಾ ಹೋದರೆ ಅದೊಂದು ದಾಖಲೆಯ ಪುಸ್ತಕ ಆದೀತು. ತತ್ವ , ಸಿದ್ದಾಂತಗಳಾಚೆ ತನಿಗಿಷ್ಟದ ಹಾಗೆಯೇ ಬರೆಯುತ್ತಾ ಬಂದ ಬೆಳಗೆರೆ ಅದೆಷ್ಟೋ ಜನತ ಕೆಂಗಣ್ಣಿಗೆ ಗುರಿಯಾದರು. ಸತ್ಯ, ನಿಖರ ಎನ್ನುವುದಕ್ಕಿಂತ ರಂಜನೆಗೆ ಹೆಚ್ಚು ಆದ್ಯತೆ ಕೊಟ್ಟು, ದೊಡ್ಡ ಅಭಿಮಾನಿಗಳ ಬಳಗ ಸೃಷ್ಟಿಸಿಕೊಂಡರು.‌ಹಾಗೆಯೇ ವಿರೋಧಿಗಳನ್ನು ಹೊಂದಿದ್ದರು. ಒಂದು ಕಾಲದಲ್ಲಿ ಯಾರನ್ನು ಬಿಡದೆ ಝಾಡಿಸುತ್ತಿದ್ದ ಬೆಳಗೆರೆ ಹಣ್ಣಾಗುವ ಹೊತ್ತಿಗೆ ಸಿನಿಮಾದ ನಂಟು ಹೊಂದಿ, ಮುಖ‌ಭಂಗ ಅನುಭವಿಸಿದರು.

ಸಿನಿಮಾ‌ಮತ್ತು ರವಿ ಬೆಳಗೆರೆ ಅವರದು ಇತ್ತೀಚಿನಂಟು. ಅಷ್ಟೋತ್ತಿಗಾಗಲೇ ರವಿ ಬೆಳಗೆರೆ ಈ ಟಿವಿಯ ಎದೆ ತುಂಬಿ ಹಾಡುವೆನು ಕಾರ್ಯಕ್ರಮದ ಮೂಲಕ ಸಾಕಷ್ಟು ಜನಪ್ರಿಯತೆ ಹೊಂದಿದ್ದರು. ಜತೆಗೆ ರೇಡಿಯೋ ಕಾರ್ಯಕ್ರಮಗಳ ಮೂಲಕ ಲಕ್ಷಾಂತರ ಶೂತೃಗಳ ಮನ ಗೆದಿದ್ದರು. ಅದೇ ಜನಪ್ರಿಯತೆಯಿಂದಲೇ ಸಿನಿಮಾ ರಂಗಕ್ಕೆ ಬರುತ್ತೇನೆನ್ನುವಾಗ ಕುಮಾರ ಸ್ವಾಮಿ ಅವರ ಮೆಲೊಂದು ಸಿನಿಮಾ ಮಾಡಲು ಹೋಗಿ ಸಾಕಷ್ಟು ಸುದ್ದಿ ಆಗಿದ್ದರು.‌ದೊಡ್ಡ ವಿವಾರ ಎಬ್ಬಿಸಿತು.

ಮುಂದೆ ನಟಿ‌ಲೀಲಾವತಿ ಅವರ ಕುರಿತು ಬರೆದ ರಾಜ್ ಲೀಲಾ ವಿನೋದ್ ಪುಸ್ತಕ ಸಿನಿಮಾ‌ಲೋಕದಲ್ಲಿ ಸಂಚಲನ‌ಮೂಡಿಸಿತು. ಅವರ ಬರಹದ ಪ್ರಭಾವವೇ ಹಲವು ಸಿನಿಮಾಗಳಿಗೆ ಪ್ರೇರಣೆ ನೀಡಿತ್ತು. ಭೀಮಾ ತೀರದ ಹಂತಕರು ಪುಸ್ತಕವೇ ಅದಕ್ಕೆ ಸಾಕ್ಷಿ. ಹಾಗೆಯೇ ‘ ಒಮಾರ್ಟಾ ‘ಕೂಡ ಈಗ ಸಿನಿಮಾ ಆಗುವ ಹಂತದಲ್ಲಿತ್ತು. ಬಿಗ್ ಬಾಸ್ ಮೂಲಕ ಮತ್ತೆ ಬಣ್ಣದ ಜಗತ್ತಿನಲ್ಲಿ ಸಾಕಷ್ಡು ಸುದ್ದಿಯಲ್ಲಿದ್ದರು. ಈಗ ಅವರಿಲ್ಲ ಎನ್ನುವುದು ತೀವ್ರ ದುಃಖದ ಸಂಗತಿ.

 

Categories
ಸಿನಿ ಸುದ್ದಿ

ಸುವರ್ಣದಲ್ಲಿ ಶುರುವಾಗಿದೆ ‘ ಸರಸು’

ಮುಗಿಲು ಮುಟ್ಟುವ ಮನಸ್ಸು
ಆಕೆಗಿದೆ ಬೆಟ್ಟದಷ್ಟು ಕನಸು …


ಲಾಕ್ ಡೌನ್ ಸಮಯದಲ್ಲಿ ಡಬ್ಬಿಂಗ್ ಧಾರಾವಾಹಿಗಳತ್ತ ಮನಸ್ಸು ಮಾಡಿದ್ದ ಸ್ಟಾರ್ ಸುವರ್ಣ ವಾಹಿನಿ ಈಗ ಸ್ವಮೇಕ್ ಧಾರಾವಾಹಿಗಳತ್ತ ಮುಖ ಮಾಡಿದೆ. ಇದೀಗ ಸುವರ್ಣದಲ್ಲಿ ಹೆಣ್ಣುಮಕ್ಕಳ ಆಶೋತ್ತರಗಳನ್ನು ಪ್ರತಿನಿಧಿಸುವ ಹೊಚ್ಚ ಹೊಸ ಧಾರಾವಾಹಿ ಸರಸು ನವೆಂಬರ್ 11 ರಿಂದಲೇ ಶುರುವಾಗಿದೆ‌. ಅದರಲ್ಲೂ ಈ ಧಾರಾವಾಹಿಗೆ ಚಾನೆಲ್ ಪ್ರೈಂ ಸಮಯ, ಅಂದ್ರೆ ರಾತ್ರಿ 9 ಗಂಟೆ ಮೀಸಲಿಟ್ಟಿರುವುದು ವಿಶೇಷವಾಗಿದೆ‌.

ಸಮಾನತೆ, ಹಕ್ಕು ಮತ್ತು ಸ್ವಾತಂತ್ರ್ಯದ ವಿಷಯದಲ್ಲಿ ಇಂದಿಗೂ ಸವಾಲು ಎದುರಿಸುತ್ತಿರುವ ಹೆಣ್ಣು ಮಕ್ಕಳ ಪ್ರತಿನಿಧಿ ಯುವತಿಯ ಕತೆಯೇ ‘ಸರಸು’. ತೀರ್ಥಹಳ್ಳಿಯ ಪ್ರಕೃತಿ ಮಡಿಲಲ್ಲಿ ಬೆಳದ ಸರಸು ಮತ್ತು ಮೆಟ್ರೋ ಸಿಟಿಯ ಮಾಡರ್ನ್ ಹುಡುಗ ಅರವಿಂದನ ಕತೆ ಅದು. ಇಂದಿನ ಕಾಲ‌ಮಾನಕ್ಕೆ‌ತಕ್ಕಂತೆ ಅದನ್ನು ತೆರೆಗೆ ತರಲಾಗುತ್ತಿದೆ. ಈಗಾಗಲೇ ಇದರ ಪ್ರೋಮೋ, ಸಾಮಾಜಿಕ ತಾಣದಲ್ಲಿ ಟ್ರೆಂಡ್ ಆಗಿದೆ . ಕಿರುತೆರೆ ವೀಕ್ಷಕರ ಮನಸ್ಸು ಗೆದ್ದಿವೆ. ಜನ ಹೇಗೆ ಸ್ವೀಕರಿಸುತ್ತಾರೆನ್ನುವ ಕುತೂಹಲ ಹೆಚ್ಚಾಗಿದೆ.

ಒಂದು‌ಮುದ್ದಾದ ಕತೆಯ ಕುತೂಹಲದ ಜತೆಗೆ ಇದರ ತಾರಾಗಣವೂ ಸೊಗಸಾಗಿದೆ. ಸುಪ್ರಿತಾ ಸತ್ಯನಾರಾಯಣ್ ಮತ್ತು ಸ್ಕಂದ ಅಶೋಕ್ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡರೆ, ಖ್ಯಾತ ಕಲಾವಿದ ಅಭಿಜಿತ್, ‘ಸರಸು ‘ ಧಾರಾವಾಹಿಯ ಮೂಲಕ ಕಿರುತೆರೆ ಪ್ರವೇಶಿಸಿದ್ದಾರೆ. ಹಾಗೆಯೇ ಹಿರಿತೆರೆ ಹಾಗೂ ಕಿರುತೆರಡಯ ಹೆಸರಾಂತ ನಟರಾದ ವೀಣಾ ಸುಂದರ್ ಮತ್ತು ಧರ್ಮೇಂದ್ರ ಅರಸ್ ಇದರ ಪ್ರಮುಖ ಆಕರ್ಷಣೆ.ಮೈಸೂರು ಮಂಜು ನಿರ್ದೇಶನದ ಜತೆಗೆ ಜೀವ ಅವರ ಛಾಯಾಗ್ರಹಣ ಮತ್ತು ಸುನಾದ್ ಗೌತಮ್ ಅವರ ಸಂಗೀತವಿದೆ.

error: Content is protected !!