ಸುವರ್ಣದಲ್ಲಿ ಶುರುವಾಗಿದೆ ‘ ಸರಸು’

ಮುಗಿಲು ಮುಟ್ಟುವ ಮನಸ್ಸು
ಆಕೆಗಿದೆ ಬೆಟ್ಟದಷ್ಟು ಕನಸು …


ಲಾಕ್ ಡೌನ್ ಸಮಯದಲ್ಲಿ ಡಬ್ಬಿಂಗ್ ಧಾರಾವಾಹಿಗಳತ್ತ ಮನಸ್ಸು ಮಾಡಿದ್ದ ಸ್ಟಾರ್ ಸುವರ್ಣ ವಾಹಿನಿ ಈಗ ಸ್ವಮೇಕ್ ಧಾರಾವಾಹಿಗಳತ್ತ ಮುಖ ಮಾಡಿದೆ. ಇದೀಗ ಸುವರ್ಣದಲ್ಲಿ ಹೆಣ್ಣುಮಕ್ಕಳ ಆಶೋತ್ತರಗಳನ್ನು ಪ್ರತಿನಿಧಿಸುವ ಹೊಚ್ಚ ಹೊಸ ಧಾರಾವಾಹಿ ಸರಸು ನವೆಂಬರ್ 11 ರಿಂದಲೇ ಶುರುವಾಗಿದೆ‌. ಅದರಲ್ಲೂ ಈ ಧಾರಾವಾಹಿಗೆ ಚಾನೆಲ್ ಪ್ರೈಂ ಸಮಯ, ಅಂದ್ರೆ ರಾತ್ರಿ 9 ಗಂಟೆ ಮೀಸಲಿಟ್ಟಿರುವುದು ವಿಶೇಷವಾಗಿದೆ‌.

ಸಮಾನತೆ, ಹಕ್ಕು ಮತ್ತು ಸ್ವಾತಂತ್ರ್ಯದ ವಿಷಯದಲ್ಲಿ ಇಂದಿಗೂ ಸವಾಲು ಎದುರಿಸುತ್ತಿರುವ ಹೆಣ್ಣು ಮಕ್ಕಳ ಪ್ರತಿನಿಧಿ ಯುವತಿಯ ಕತೆಯೇ ‘ಸರಸು’. ತೀರ್ಥಹಳ್ಳಿಯ ಪ್ರಕೃತಿ ಮಡಿಲಲ್ಲಿ ಬೆಳದ ಸರಸು ಮತ್ತು ಮೆಟ್ರೋ ಸಿಟಿಯ ಮಾಡರ್ನ್ ಹುಡುಗ ಅರವಿಂದನ ಕತೆ ಅದು. ಇಂದಿನ ಕಾಲ‌ಮಾನಕ್ಕೆ‌ತಕ್ಕಂತೆ ಅದನ್ನು ತೆರೆಗೆ ತರಲಾಗುತ್ತಿದೆ. ಈಗಾಗಲೇ ಇದರ ಪ್ರೋಮೋ, ಸಾಮಾಜಿಕ ತಾಣದಲ್ಲಿ ಟ್ರೆಂಡ್ ಆಗಿದೆ . ಕಿರುತೆರೆ ವೀಕ್ಷಕರ ಮನಸ್ಸು ಗೆದ್ದಿವೆ. ಜನ ಹೇಗೆ ಸ್ವೀಕರಿಸುತ್ತಾರೆನ್ನುವ ಕುತೂಹಲ ಹೆಚ್ಚಾಗಿದೆ.

ಒಂದು‌ಮುದ್ದಾದ ಕತೆಯ ಕುತೂಹಲದ ಜತೆಗೆ ಇದರ ತಾರಾಗಣವೂ ಸೊಗಸಾಗಿದೆ. ಸುಪ್ರಿತಾ ಸತ್ಯನಾರಾಯಣ್ ಮತ್ತು ಸ್ಕಂದ ಅಶೋಕ್ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡರೆ, ಖ್ಯಾತ ಕಲಾವಿದ ಅಭಿಜಿತ್, ‘ಸರಸು ‘ ಧಾರಾವಾಹಿಯ ಮೂಲಕ ಕಿರುತೆರೆ ಪ್ರವೇಶಿಸಿದ್ದಾರೆ. ಹಾಗೆಯೇ ಹಿರಿತೆರೆ ಹಾಗೂ ಕಿರುತೆರಡಯ ಹೆಸರಾಂತ ನಟರಾದ ವೀಣಾ ಸುಂದರ್ ಮತ್ತು ಧರ್ಮೇಂದ್ರ ಅರಸ್ ಇದರ ಪ್ರಮುಖ ಆಕರ್ಷಣೆ.ಮೈಸೂರು ಮಂಜು ನಿರ್ದೇಶನದ ಜತೆಗೆ ಜೀವ ಅವರ ಛಾಯಾಗ್ರಹಣ ಮತ್ತು ಸುನಾದ್ ಗೌತಮ್ ಅವರ ಸಂಗೀತವಿದೆ.

Related Posts

error: Content is protected !!