Categories
ಸಿನಿ ಸುದ್ದಿ

ಹುಬ್ಳಿ ಹುಡುಗಿ ಕೀರ್ತಿ ಕಲ್ಕೇರಿ ಜತೆಗೆ ನಟ ಶಶಿಕುಮಾರ್‌ ಪುತ್ರನ ಲವ್ವಿ ಡವ್ವಿ !

‘ ಓ ಮೈ ಲವ್‌ ‘ ಅಂತ ಪ್ರೇಮ ಕಾವ್ಯ ಬರೆಯಲು ಹೊರಟ ಯುವ ಜೋಡಿ

ಹಿರಿಯ ನಟ ಶಶಿಕುಮಾರ್‌ ಪುತ್ರ ಅಕ್ಷಿತ್‌ ಶಶಿಕುಮಾರ್‌ ಹೀರೋ ಆಗಿ ಬೆಳ್ಳಿತೆರೆಗೆ ಕಾಲಿಡುವ ಮುನ್ನವೇ ಪ್ರೀತಿಯಲ್ಲಿ ಬಿದ್ದಿದ್ದಾರೆ. ʼ ಓ ಮೈ ಲವ್‌ʼ ಅಂತ ಹುಬ್ಳಿ ಹುಡುಗಿ ಕೀರ್ತಿ ಕಲ್ಕೇರಿ ಜತೆಗೆ ಹೊಸ ಪ್ರೇಮಕಾವ್ಯ ಬರೆಯಲು ರೆಡಿ ಆಗಿದ್ದಾರೆ. ಇಷ್ಟರಲ್ಲಿ ಈ ತರುಣ ಜೋಡಿಯ ಪ್ರೇಮ ಪುರಾಣ ಬಯಲಾಗುವುದು ಖಾತರಿ ಆಗಿದೆ.

ಅರೆ, ಇದೇನು ಹೊಸ ಪ್ರೇಮ ಪುರಾಣ ಅಂತ ಗಾಬರಿಯಾಗುವುದು ಬೇಡ, ಯಾಕಂದ್ರೆ ಇದೊಂದು ಹೊಸ ಸಿನಿಮಾದ ತಾಜಾ ವಿಚಾರ.

ʼಸೀತಾಯಣʼ ಹಾಗೂʼ ಸಮಿತ್‌ʼ ಚಿತ್ರಗಳ ಜತೆಗೀಗ ನಟ ಶಶಿ ಕುಮಾರ್‌ ಪುತ್ರ ಅಕ್ಷಿತ್‌ ಶಶಿಕುಮಾರ್‌ ʼಓ ಮೈ ಲವ್‌ʼ ಹೆಸರಿನ ಮತ್ತೊಂದು ಚಿತ್ರಕ್ಕೆ ನಾಯಕರಾಗಿದ್ದಾರೆ. ಜಿಎಸ್‌ಬಿ ಪ್ರೊಡಕ್ಷನ್‌ ಮೂಲಕ ಜಿ. ರಾಮಾಂಜನಿ ನಿರ್ಮಾಣ ಮಾಡುತ್ತಿರುವ ಈ ಚಿತ್ರಕ್ಕೆ ಸ್ಮೈಲ್‌ ಶ್ರೀನು ಆಕ್ಷನ್‌ ಕಟ್‌ ಹೇಳುತ್ತಿದ್ದು, ಜನವರಿ ೧೫ ರಂದು ಈ ಚಿತ್ರಕ್ಕೆ ಮುಹೂರ್ತ ಕೂಡ ಫಿಕ್ಸ್‌ ಆಗಿದೆ. ಈ ಚಿತ್ರದಲ್ಲಿ ಅಕ್ಷಿತ್‌ ಶಶಿಕುಮಾರ್‌ ಅವರಿಗೆ ಹುಬ್ಬಳ್ಳಿ ಹುಡುಗಿ ಕೀರ್ತಿ ಕಲ್ಕೇರಿ ನಾಯಕಿ ಎನ್ನುವುದು ವಿಶೇಷ.

ನಾಯಕಿ ಕೀರ್ತಿ ಕಲ್ಕೇರಿ ಅವರಿಗೆ ಇದು ಎರಡನೇ ಚಿತ್ರ. ಈಗಾಗಲೇ ಕ್ರೇಜಿ ಸ್ಟಾರ್ ರವಿಚಂದ್ರನ್‌ ಪುತ್ರ ಮನು ರಂಜನ್‌ ಅಭಿನಯದ ‘ಪ್ರಾರಂಭ’ ಚಿತ್ರದೊಂದಿಗೆ ಸ್ಯಾಂಡಲ್‌ ವುಡ್‌ ಗೆ ಎಂಟ್ರಿಯಾಗಿದ್ದು , ಅದಿನ್ನು ತೆರೆ ಕಾಣುವುದು ಬಾಕಿಯಿದೆ. ಅದು ತೆರೆ ಕಾಣುವ ಮುನ್ನವೇ ಮತ್ತೊಂದು ಚಿತ್ರಕ್ಕೆ ನಾಯಕಿ ಆಗುವ ಅವಕಾಶ ಕೀರ್ತಿ ಅವರಿಗೆ ಸಿಕ್ಕಿದೆ‌. ಹೆಸರಾಂತ ಶಹನಾಯಿ ವಾದಕ ಸನಾದಿ ಅಪ್ಪಣ್ಣ ಅವರ ಮೊಮ್ಮಗಳು ಈ ಕೀರ್ತಿ ಕಲ್ಕೇರಿ.

ಹಾಗೊಂದು ಹಿನ್ನೆಲೆ ಅವರಿಗಿದೆ. ಆದರೂ, ಸಿನಿಮಾದ ಮೇಲಿನ ಪ್ರೀತಿ, ನಟನೆಯ ಆಸಕ್ತಿ ಜತೆಗೆ ಒಂದಷ್ಟು ತರಬೇತಿ ಪಡೆದುಕೊಂಡೆ ಸಿನಿಪಯಣ ಆರಂಭಿಸಿರೋ, ಈ ಹುಡುಗಿಗೆ ಮೊದಲ ಸಿನಿಮಾ ತೆರೆ ಕಾಣುವ ಮುನ್ನವೇ ಮತ್ತೊಂದು ಸಿನಿಮಾದ ಅವಕಾಶ ಸಿಕ್ಕಿದೆ. ಓ ಮೈ ಲವ್‌ ಅಂತ ಈಗ ಶಶಿ ಕುಮಾರ್‌ ಪುತ್ರ ಅಕ್ಷಿತ್‌ ಶಶಿಕುಮಾರ್‌ ಜತೆಗೆ ಹೊಸ ಪ್ರೇಮ ಕಾವ್ಯ ಬರೆಯಲು ರೆಡಿಯಾಗಿದ್ದಾರೆ.

‘ ಎಲ್ಲವೂ ಅದೃಷ್ಟವೆ‌. ಮೊದಲ ಸಿನಿಮಾದ ಆಫರ್ ಕೂಡ ಹಾಗೆಯೇ ಬಂತು. ನಿರ್ದೇಶಕ ಮನು ಕಲ್ಯಾಡಿ ಅವರೆ ಕಡೆಯಿಂದ ಚಿತ್ರ ರಂಗಕ್ಕೆ ಬರುವ ಅವಕಾಶ ಸಿಕ್ಕಿತು. ಅದೇ ಮೆಟ್ಟಿಲು ಮೂಲಕ ಈ ಸಿನಿಮಾ ಅವಕಾಶ ಬಂತು. ಒಳ್ಳೆಯ ಅವಕಾಶ ಅಂತ ಒಪ್ಪಿಕೊಂಡೆ. ಒಳ್ಳೆಯ ತಂಡ, ಖುಷಿ ಆಗುತ್ತಿದೆ ‘ ಎನ್ನುತ್ತಾ ಎರಡನೇ ಸಿನಿಮಾದ ಆಫರ್ ಬಗ್ಗೆ ಮನ ಬಿಚ್ಚಿ ಮಾತನಾಡುತ್ತಾರೆ ನಟಿ ಕೀರ್ತೀ ಕಲ್ಕೇರಿ.

Categories
ಸಿನಿ ಸುದ್ದಿ

ರೂಮ್‌ ಬಾಯ್‌ ಗೆಟಪ್‌ನಲ್ಲಿ ನಟ ಲಿಖಿತ್‌ ಸೂರ್ಯ, ನಟನೆಯ ಆಚೆ ಹೊಸ ಸಾಹಸಕ್ಕಿಳಿದ ಮಲೆನಾಡಿನ ಹುಡುಗ

ಮುಹೂರ್ತ ಮುಗಿಸಿಕೊಂಡು ಚಿತ್ರೀಕರಣಕ್ಕಿಳಿದ ಯುವ ಪಡೆ

ಯುವ ನಟ ಲಿಖಿತ್‌ ಸೂರ್ಯ ಅಭಿನಯದ “ರೂಮ್ ಬಾಯ್‌ʼ ಚಿತ್ರ ಅಧಿಕೃತವಾಗಿ ಸೆಟ್ಟೇರಿದೆ. ಬೆಂಗಳೂರಿನ ರಾಜರಾಜೇಶ್ವರಿ ನಗರದ ಗಣೇಶ್‌ ದೇವಸ್ಥಾನದಲ್ಲಿ ಶುಕ್ರವಾರ ಬೆಳಗ್ಗೆ ಮಹೂರ್ತ ಮುಗಿಸಿಕೊಂಡು, ಚಿತ್ರೀಕರಣ ಶುರುಮಾಡಿದೆ. ಐ ಕ್ಯಾನ್‌ ಪ್ರೊಡಕ್ಷನ್ಸ್‌ ಮೂಲಕ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ನಟ ಲಿಖಿತ್‌ ಸೂರ್ಯ ನಿರ್ಮಾಪಕ ಕಮ್‌ ನಾಯಕ ನಟ.

ಇದು ಲಿಖಿತ್‌ ಸೂರ್ಯ ಅಭಿನಯದ  ನಾಲ್ಕನೇ ಸಿನಿಮಾ. “ಲೈಫ್‌ ಸೂಪರ್‌ʼ, ʼಆಪರೇಷನ್‌ ನಕ್ಷತ್ರʼ ಹಾಗೂ ʼಗ್ರಾಮʼ ಹೆಸರಿನ ಚಿತ್ರಗಳಲ್ಲಿ  ನಾಯಕರಾಗಿ ಅಭಿನಯಿಸಿದ್ದಾರೆ.   ಈಗಾಗಲೇ ಲೈಫ್‌ ಸೂಪರ್‌ ಹಾಗೂʼ ಆಪರೇಷನ್‌ ನಕ್ಷತ್ರʼ ತೆರೆ ಕಂಡಿವೆ. “ಗ್ರಾಮʼಬಿಡುಗಡೆಗೆ ಸಜ್ಜಾಗಿದೆ. ಇದೇ ಚಿತ್ರ ” ರಾಮಪುರಂʼ ಹೆಸರಲ್ಲಿ ತೆಲುಗಿನಲ್ಲೂ ನಿರ್ಮಾಣವಾಗಿದೆ. ಅದರಲ್ಲೂ ಲಿಖಿತ್‌ ಸೂರ್ಯ ನಾಯಕ ನಟ. ಅದರಾಚೆ ಈಗ ರೂಮ್‌ ಬಾಯ್‌ ಎನ್ನುವುದು ಹೊಸ ಅವತಾರ. ಈ ಚಿತ್ರಕ್ಕೆ ಲಿಖಿತ್‌ ಸೂರ್ಯ ನಾಯಕ ಕಮ್‌ ನಿರ್ಮಾಪಕ. ಸಿನಿ ಪಯಣದಲ್ಲಿ ನಟನೆಯಾಚೆ ಅವರಿಗಿದು ನಿರ್ಮಾಣದ ಹೊಸ  ಸಾಹಸ.

ತಾರಾಗಣದಲ್ಲಿ ಲಿಖಿತ್‌ ಅವರೊಂದಿಗೆ ಚಿತ್ರದಲ್ಲಿ ಯಶ್‌ ಶೆಟ್ಟಿ, ವರ್ಧನ್‌ ತೀರ್ಥಹಳ್ಳಿ, ವಜರಂಗ್‌ ಶೆಟ್ಟಿ ಹಾಗೂ ರೋಶನ್‌ ಕೊಡಗು ಸೇರಿದಂತೆ ರಜನಿ, ಪದ್ಮಿನಿ, ಚಂದನಾ, ಪ್ರಗ್ಯಾ ಹಾಗೂ ಜನನಿ ನಾಯಕಿರಾಗಿ ಅಭಿನಯಿಸುತ್ತಿದ್ದಾರೆ. ಐವರು ನಾಯಕರು ಹಾಗೂ ಅಷ್ಟೇ ಸಂಖ್ಯೆಯ ನಾಯಕಿಯರ ಸುತ್ತ ನಡೆಯುವ ಕತೆ ಇದು. ಯುವ ಪ್ರತಿಭೆ ರವಿ ನಾಗಡದಿನ್ನಿ ಇದಕ್ಕೆ ಆಕ್ಷನ್‌ ಕಟ್‌ ಹೇಳುತ್ತಿದ್ದಾರೆ. ಅವರಿಗಿದು ಚೊಚ್ಚಲ ಸಿನಿಮಾ. ಸಿನಿಮಾ ಮೇಲಿನ ಪ್ರೀತಿ, ಮೋಹ ಮತ್ತು ಆಸಕ್ತಿಗೆ ಎಂಜಿನಿಯರ್‌ ವೃತ್ತಿಯನ್ನೇ ಬಿಟ್ಟು ಬಂದು ನಿರ್ದೇಶಕ ಹ್ಯಾಟ್‌ ಹಾಕಿಕೊಂಡಿದ್ದಾರೆ.

ಹಲವು ನಿರ್ದೇಶಕರ ಬಳಿ ಸಹಾಯಕ ನಿರ್ದೇಶಕರಾಗಿ ದುಡಿದು, ನಿರ್ದೇಶನದ ಪಟ್ಟು ಕಲಿತುಕೊಂಡು ಈಗ ತಾವೇ ಸ್ವತಂತ್ರ ನಿರ್ದೇಶಕರಾಗಿದ್ದಾರೆ. ನಾಯಕ ನಟ ಲಿಖಿತ್‌ ಅವರಿಗೂ ಇಂತಹದೇ ವೃತ್ತಿ ಬದುಕಿನ ಹಿನ್ನೆಲೆ ಇದೆ. ಒಳ್ಳೆಯ ಕೆಲಸ ಗಿಟ್ಟಿಸಿಕೊಂಡು ವಿದೇಶಕ್ಕೆ ಹಾರಿ, ಕೈತುಂಬಾ ಸಂಪಾದನೆ ಮಾಡಿಕೊಂಡಿದ್ದ ಲಿಖಿತ್‌ ಈಗ ನಟ ಆಗಿದ್ದು ಕೂಡ ಸಿನಿಮಾದ ಮೇಲಿನ ಪ್ರೀತಿಗಾಗಿಯೇ. ಇವರಿಬ್ಬರು ಹಣ ಮಾಡುವುದಕ್ಕಾಗಿ ಸಿನಿಮಾ ಜಗತ್ತಿಗೆ ಬಂದವರಲ್ಲ ಎನ್ನುವುದನ್ನು ಅವರ ವೃತ್ತಿಯ ಹಿನ್ನೆಲೆಯೇ ಹೇಳುತ್ತೆ. ಒಟ್ಟಿನಲ್ಲಿ ಈ ಜೋಡಿ ಸಿನಿಮಾ ಮೇಲಿನ ಪ್ರೀತಿ, ಕಾಳಜಿ, ಮೋಹಕ್ಕಾಗಿಯೇ ಒಂದಾಗಿ ಈಗ ʼರೂಮ್‌ ಬಾಯ್‌ʼ ಚಿತ್ರ ಶುರು ಮಾಡಿದೆ. ಈ ಜೋಡಿಯ ಸಾಹಸಕ್ಕೆ ಸಂಕಲನಕಾರಾಗಿ ಕಿರಣ ಕುಮಾರ್‌, ಛಾಯಾಗ್ರಾಹಕರಾಗಿ ಧನ್‌ಪಾಲ್‌ , ಸಂಗೀತ ನಿರ್ದೇಶಕರಾಗಿ ರೋಣದ ಬಕ್ಕೇಶ್‌ ಸಾಥ್‌ ನೀಡಿದ್ದಾರೆ. ವಿಶೇಷ ಅಂದ್ರೆ ಈ ತಂಡಕ್ಕೆ ʼಸಿನಿ ಲಹರಿʼ ಕೂಡ ಕೈ ಜೋಡಿಸಿದೆ.

ಜ. 8 ರಿಂದಲೇ ಚಿತ್ರೀಕರಣ ಶುರುವಾಗಿದೆ. ನಂದಿಬೆಟ್ಟದ ಬಳಿಯ ರೆಸಾರ್ಟ್‌ ವೊಂದರಲ್ಲಿ ಚಿತ್ರದ ಮೊದಲ ಹಂತದ ಚಿತ್ರೀಕರಣ ಶುರುವಾಗಿದೆ. ಜ. 13 ರವರೆಗೂ ಅಲ್ಲಿಯೇ ಚಿತ್ರೀಕರಣ ನಡೆಯಲಿದೆಂತೆ. ಆ ನಂತರ ಎರಡನೇ ಹಂತದ ಚಿತ್ರೀಕರಣವನ್ನು ಬೆಂಗಳೂರು ಸುತ್ತ ಮುತ್ತ ನಡೆಸಲು ಪ್ಲಾನ್‌ ಹಾಕಿಕೊಂಡಿದೆ. ಇನ್ನು ರೂಮ್‌ ಬಾಯ್‌ ಎನ್ನುವ ಚಿತ್ರದ ಶೀರ್ಷಿಕೆಯೇ ವಿಭಿನ್ನವಾಗಿದೆ. ಉಳಿದಂತೆ ಚಿತ್ರದ ಕತೆ ಹೇಗೆ ಎನ್ನುವುದರ ಕುರಿತು ನಿರ್ದೇಶಕ ರವಿ ನೀಡುವ ವಿವರಣೆ ಏನು? ” ಇದೊಂದು ಸೈಕಾಲಜಿಕಲ್‌ ಸಸ್ಪೆನ್ಸ್‌ ಥ್ರಿಲ್ಲರ್‌ ಸಿನಿಮಾ. ಸಾಮಾನ್ಯವಾಗಿ ರೂಮ್‌ ಬಾಯ್‌ ಅಂದ್ರೆ ಒಂದು ಹೊಟೇಲ್‌ ಅಥವಾ ರೆಸಾರ್ಟ್‌ ನಲ್ಲಿ ನಡೆಯುವ ಕತೆ ಎನ್ನುವುದು ಎಲ್ಲರಿಗೂ ಗೊತ್ತಾಗುವ ವಿಚಾರ. ಆ ಪ್ರಕಾರ ಇಲ್ಲೊಂದು ರೆಸಾರ್ಟ್‌ ನಲ್ಲಿ ಒಂದು ಘಟನೆ ನಡೆಯುತ್ತೆ. ಅದೇನು, ರೂಮ್‌ ಬಾಯ್‌ಗೂ ಅದಕ್ಕೂ ಕನೆಕ್ಷನ್‌ ಎಂತಹದು ಎನ್ನುವುದೇ ಈ ಚಿತ್ರ. ಸೈಕಾಲಜಿಕಲ್‌ ಸಸ್ಪೆನ್ಸ್‌ ಮತ್ತು ಥ್ರಿಲ್ಲರ್‌ ಇದರ ವಿಶೇಷ ಎನ್ನುತ್ತಾರೆ ನಿರ್ದೇಶಕ ರವಿ.

Categories
ಸಿನಿ ಸುದ್ದಿ

ಕೆಜಿಎಫ್ 2 ಟೀಸರ್ ಲೀಕ್ ಆಯ್ತು….!

ನಾಳೆ ಬರಬೇಕಾಗಿದ್ದು, ಇಂದೇ ಬಂದಿದ್ದರ ಹಿಂದಿನ ಕೈಗಳು ಯಾವು? ಇದೇನು ಗಿಮಿಕಾ?

ಬಹು ನಿರೀಕ್ಷಿತ ಕೆಜಿಎಫ್ 2 ಚಿತ್ರದ ಟೀಸರ್ ಲೀಕ್ ಆಗಿದೆ.ರಾಕಿಂಗ್ ಸ್ಟಾರ್ ಯಶ್ ಹುಟ್ಟು ಹಬ್ಬದ ಅಂಗವಾಗಿ ಆಗಿ ನಾಳೆ( ಜ.8) ಬೆಳಗ್ಗೆ 10.18ಕ್ಕೆ ಲಾಂಚ್ ಆಗಬೇಕಿದ್ದ ಇಂದು ( ಜ.7) ರಾತ್ರಿ 9 ಗಂಟೆಗೆ ಸೋಷಲ್ ಮೀಡಿಯಾದಲ್ಲಿ ಕಾಣಿಸಿಕೊಂಡಿದೆ. 2 ನಿಮಿಷ 17ಸೆಕೆಂಡ್ ಗಳ ಈ ಟೀಸರ್ ವಿಡಿಯೋದಲ್ಲಿ ‘ ಕೆಜಿಎಫ್ 2 ‘ ಖದರ್ ಜೋರಾಗಿದೆ. ಚಿತ್ರದ ಕೆಲವು ಪಾತ್ರಗಳ ಪರಿಚಯದ ತುಣುಕುಗಳನ್ನು ತೋರಿಸುವ ಮೂಲಕ ನಾಯಕ ರಾಕಿಂಗ್ ಸ್ಟಾರ್ ಯಶ್ ಗೆ ಹುಟ್ಟು ಹಬ್ಬದ ಶುಭಾಶಯ ಕೋರಲಾಗಿದೆ.

.‌ಸದ್ಯಕ್ಕೆ ಅದು ಹೇಗೆ ಬಂತು‌ ಅಂತ ಗೊತ್ತಿಲ್ಲ‌. ಆದರೆ ಸೋಷಲ್ ಮೀಡಿಯಾದಲ್ಲಿ ಅದು ವೈರಲ್ ಆಗುತ್ತಿದ್ದಂತೆ ಎಚ್ವೆತ್ತುಕೊಂಡ ಚಿತ್ರ ತಂಡ 9.28ಕ್ಕೆ ಅಧಿಕೃತ ವಾಗಿ ಸೋಷಲ್ ಮೀಡಿಯಾದಲ್ಲಿ  ಟೀಸರ್ ಲಾಂಚ್ ಮಾಡಿತು. ಇದು ತೀವ್ರ ಕುತೂಹಲಕ್ಕೆ ಕಾರಣವಾಯಿತು. ಹೊಂಬಾಳೆ ಫಿಲಂಸ್ ನ‌ ಅಧಿಕೃತ ಯುಟ್ಯೂಬ್ ಮೂಲಕ ಲಾಂಚ್ ಆಗಬೇಕಿದ್ದ  ಈ ಟೀಸರ್, ಸೋಷಲ್ ಮೀಡಿಯಾಕ್ಕೆ ಅನಧಿಕೃತ ವಾಗಿ ಹೇಗೆ ಬಂತು? ಇದೊಂದು ಯಕ್ಷ ಪ್ರಶ್ನೆ.

ರವೀನಾ ಟಂಡನ್

ಚಿತ್ರತಂಡ ಅಧಿಕೃತ ವಾಗಿ ನೀಡಿದ ಮಾಹಿತಿ ಪ್ರಕಾರ ಜ.8 ರಂದು ಬೆಳಗ್ಗೆ 10.18 ಕ್ಕೆ ಲಾಂಚ್ ಆಗಬೇಕಿತ್ತು.‌ಅದಕ್ಕೆ ಚಿತ್ರ ತಂಡ ಭರ್ಜರಿ ತಯಾರಿ‌ನಡೆಸಿತ್ತು. ಅದಕ್ಕಾಗಿಯೇ ಇಂಟ್ರೋಡಕ್ಷನ್ ಟೀಸರ್ ಬಿಟ್ಟಿತ್ತು. ಈ ಲಾಂಚ್ ಕುರಿತು ನಿರ್ದೇಶಕ ಪ್ರಶಾಂತ್ ನೀಲ್ ಟ್ವಿಟ್ಟರ್ ನಲ್ಲೂ ಅಧಿಕೃತ ಮಾಹಿತಿ ನೀಡಿದ್ದರು. ಆದರೆ ಆಗಿದ್ದೇನು?

ಯಾರು ಕಾರಣವೋ ಗೊತ್ತಿಲ್ಲ, ಟೀಸರ್ ಒಂದು ದಿನ ಅಂದ್ರೆ ನಿಗದಿತ ಸಮಯಕ್ಕಿಂತ ಹಲವು ತಾಸುಗಳು ಮುಂಚೆಯೇ  ಅದೀಗ ಸೋಷಲ್ ಮೀಡಿಯಾಕ್ಕೆ ತೂರಿ ಬಂದಿದೆ. ಅದರ ಪರಿಣಾಮ ಅನಿವಾರ್ಯ ಎಂಬಂತೆ ಚಿತ್ರ ತಂಡ‌ಅದನ್ನೇ ಅಧಿಕೃತ ವಾಗಿ ಸೋಷಲ್ ಮೀಡಿಯಾದಲ್ಲಿ  ಶೇರ್ ಮಾಡಿಕೊಂಡಿದೆ. ಅದರಾಚೆ ಅದಕ್ಕೆ ನಿಜವಾಗಿಯೂ ಕಾರಣರಾರು? ಅದು ಹೇಗೆ ಬಂತು? ಇದ್ಯಾವುದಕ್ಕೂ ಚಿತ್ರ ತಂಡ ಪ್ರತಿಕ್ರಿಯೆ ನೀಡಿಲ್ಲ.

ಬದಲಿಗೆ ಸೋಷಲ್ ಮೀಡಿಯಾಕ್ಕೆ ಲೀಕ್ ಆಗಿದ್ದ ಟೀಸರ್ ಅನ್ನೇ ಅಧಿಕೃತ ಗೊಳಿಸಿದ್ದು, ಮೊದಲ ಭಾಗದಷ್ಟೇ’ ಕೆಜಿಎಫ್ 2 ‘ಕೂಡ ಫವರ್ ಫುಲ್ ಆಗಿದೆ ಎನ್ನುವುದರ ಸ್ಯಾಂಪಲ್ ಎನ್ನುವುದನ್ನು ಈ ಟೀಸರ್ ತೋರಿಸಿದೆ. ಆದರೆ ಇದೆಲ್ಲ ನಿಜಕ್ಕೂ ಆಗಿದ್ದಾದರೂ ಹೇಗೆ ಎನ್ನುವುದು ಸೋಜಿಗ. ಇದು ಗಿಮಿಕ್ ಕೂಡ ಆಗಿರಬಹುದು ಎನ್ನುತ್ತಿವೆ ಗಾಂಧಿನಗರದ ಮೂಲಗಳು.

Categories
ಸಿನಿ ಸುದ್ದಿ

ರಾತ್ರೋರಾತ್ರಿ ಹೆದರಿಸಲು ಬಂದ ಹೊಸಬರು !

ಹೀರೋ ಆಗಿ ಬರುತ್ತಿದ್ದಾರೆ ಫೈಟರ್‌ ದಾಸ್‌ ಪುತ್ರ ಪವನ್‌ಕುಮಾರ್‌

ಅಪ್ಪ-ಅಮ್ಮ ಕಲಾವಿದರು ಎನ್ನುವ ಕಾರಣವೋ, ಇಲ್ಲವೇ ನಿರ್ದೇಶಕ ಅಥವಾ ನಿರ್ಮಾಪಕರು ಎನ್ನುವ ಪ್ರಭಾವವೋ, ಸಿನಿಮಾ ರಂಗಕ್ಕೆ ಅವರ ಮಕ್ಕಳು ಬಂದ ಕತೆಗಳಿಗೇನು ಇಲ್ಲಿ ಕಮ್ಮಿ ಇಲ್ಲ. ಅದಕ್ಕೆ ಕಾರಣ ಸಿನಿದುನಿಯಾದ ಆಕರ್ಷಣೆ. ದಾರಿಯಲ್ಲಿ ಸುಮ್ಮನೆ ಹೊರಟವರನ್ನು ತನ್ನತ್ತ ಆಕರ್ಷಿಸುವ ಶಕ್ತಿ ಸಿನಿಮಾ ಜಗತ್ತಿಗಿದೆ. ಆ ಕಾರಣಕ್ಕಾಗಿಯೇ ತುಂಬಾ ಜನ ಇಲ್ಲಿಗೆ ಬಂದಿದ್ದಾರೆನ್ನುವುದು ಹೊಸದೇನಲ್ಲ. ಅಂದ ಹಾಗೆ ಇದಿಷ್ಟು ಯಾಕೆ ಹೇಳಬೇಕಾಗಿ ಬಂತು ಅಂದ್ರೆ, ಫೈಟರ್‌ ದಾಸ್‌ ಪುತ್ರ ಪವನ್‌ ಕುಮಾರ್‌ ಸಿನಿಮಾ ಎಂಟ್ರಿ ಕಾರಣಕ್ಕೆ.

ಅಪ್ಪ ಸಿನಿಮಾರಂಗದಲ್ಲಿದ್ದಾರೆನ್ನುವ ಕಾರಣಕ್ಕೆ ದಾಸ್‌ ಪುತ್ರ ಪವನ್‌ ಕುಮಾರ್‌, ಒಳ್ಳೆಯ ಉದ್ಯೋಗ ಬಿಟ್ಟು ಸಿನಿಮಾ ರಂಗಕ್ಕೆ ಎಂಟ್ರಿ ಆಗುತ್ತಿದ್ದಾರೆ. ಸದ್ದಿಲ್ಲದೆ ಸುದ್ದಿ ಮಾಡದೆ ಗೆಳೆಯರ ಜತೆಗೆ ಸೇರಿಕೊಂಡು ʼರಾತ್ರೋರಾತ್ರಿʼ ಹೆಸರಿನ ಚಿತ್ರವೊಂದನ್ನು ನಿರ್ಮಾಣ ಮಾಡಿದ್ದಾರೆ. ನಿರ್ಮಾಣದ ಜತೆಗೆ ಚಿತ್ರದಲ್ಲಿ ಅವರೇ ನಾಯಕ ನಟರಾಗಿ ಅಭಿನಯಿಸಿದ್ದಾರೆ. ಇದೀಗ ಸಿನಿಮಾ ಚಿತ್ರೀಕರಣ ಅದರ ಜತೆಗೆ ಪೋಸ್ಟ್‌ ಪ್ರೊಡಕ್ಷನ್‌ ಕೆಲಸ ಮುಗಿಸಿ ರಿಲೀಸ್‌ಗೆ ರೆಡಿ ಆಗಿದೆ. ಸದ್ಯಕ್ಕೆ ಚಿತ್ರ ತಂಡ ಘೋಷಿಸಿರುವ ಪ್ರಕಾರ ಸಂಕ್ರಾಂತಿಗೆ ಇದು ಬಿಡುಗಡೆ ಆಗುತ್ತಿದೆ. ಸರಿ ಸುಮಾರು ನೂರು ಚಿತ್ರ ಮಂದಿರಗಳಲ್ಲಿ ತೆರೆ ಕಾಣುವುದಾಗಿಯೂ ಚಿತ್ರ ತಂಡ ಹೇಳಿದೆ.

ಬಹುತೇಕ ಹೊಸಬರೇ ಸೇರಿಕೊಂಡು ಸಿದ್ಧಪಡಿಸಿದ ಚಿತ್ರ ಇದು. ಪವನ್‌ ನಾಯಕರಾಗಿ ಕಾಣಸಿಕೊಂಡರೆ, ರಚಿಕಾ ಹಾಗೂ ಡಯಾನ ಚಿತ್ರದ ನಾಯಕಿಯರು. ತಾಯಿ ಪಾತ್ರದಲ್ಲಿ ಗಂಗಮ್ಮ ಅಭಿನಯಿಸಿದ್ದಾರೆ. ರಾಜ್‌ಕಾಂತ್ ಹಾಗೂ ವಿನಯ್‌ಕುಮಾರ್.ವಿ.ನಾಯಕ್ ಖಳ ನಟರಾಗಿ ಕಾಣಸಿಕೊಂಡಿದ್ದಾರೆ. ಮಂತ್ರವಾದಿ ಪಾತ್ರದಲ್ಲಿ ದಿವಾಕರ್ ಇದ್ದರೆ, ಹಾಸ್ಯ ಪಾತ್ರಗಳಿಗೆ ಹರೀಶ್‌, ಪ್ರಸನ್ನ, ಮನೋಜ್‌, ಸುನೀಲ್‌ ಇದ್ದಾರೆ. ಪವನ್‌ ಚಿತ್ರಾಲಯ ಮೂಲಕ ಪವನ್‌ ಅವರೇ ಚಿತ್ರದ ನಿರ್ಮಾಣಕ್ಕೆ ಬಂಡವಾಳ ಹೂಡಿದ್ದಾರೆ. ಡೀಲ್‌ ಮುರಳಿ ಕತೆ, ಚಿತ್ರಕತೆ ಹಾಗೂ ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ಶ್ರೀಧರ್‌ನರಸಿಂಹನ್‌ ಸಂಗೀತ ನೀಡಿದ್ದಾರೆ. ಕಿರಣ್‌ ಗಜ ಛಾಯಾಗ್ರಣ ಹಾಗೂ ಸಾಲೋಮನ್‌ ಸಂಕಲನ, ಅಕ್ಷಯ್‌ ಮೂರ್ತಿ ಸಾಹಸ ಚಿತ್ರಕ್ಕಿದೆ.

ಚಿತ್ರಕ್ಕೆ ಬಿಡದಿ, ರಾಮನಗರ, ಮಂಡ್ಯ ಹಾಗೂ ಮೈಸೂರು ಸುತ್ತಮುತ್ತ ಚಿತ್ರೀಕರಣ ನಡೆದಿದೆ. ಚಿತ್ರದ ಶೀರ್ಷಿಕೆಯೇ ಹೇಳುವ ಹಾಗೆ ಇದೊಂದು ಹಾರರ್‌, ಥ್ರಿಲ್ಲರ್‌ ಕಥಾ ಹಂದರದ ಚಿತ್ರ. ಸಾಯಂಕಾಲ ಆರು ಗಂಟೆಯಿಂದ ಬೆಳಿಗ್ಗೆ ಆರು ಗಂಟೆವರೆಗೆ ನಡೆಯುವ ಕತೆ. ಟೆಂಪೋ ಚಾಲಕನಾದ ಚಿತ್ರದ ಕಥಾ ನಾಯಕ ಒಮ್ಮೆ ಸಂಕಷ್ಟಕ್ಕೆ ಸಿಲುಕಿರುತ್ತಾನೆ. ಆತನ ತಾಯಿ ಅನಾರೋಗ್ಯದಲ್ಲಿರುತ್ತಾಳೆ. ಚಿಕಿತ್ಸೆಗೆ ಸುಮಾರು 50 ಸಾವಿರದ ರೂ. ಗಳ ಅಗತ್ಯ ವಿರುತ್ತದೆ. ಯಾರಿಂದಲೂ ಸಹಾಯ ದೊರೆಯದಿದ್ದಾಗ ಆತ ದೇವರ ಮೊರೆ ಹೋಗುತ್ತಾನೆ. ಅಲ್ಲಿ ಒಬ್ಬ ಪರಿಚಿತ ಸಿಗುತ್ತಾನೆ. ಒಂದು ಹೆಣ ಇದೆ. ಅದನ್ನು ತಾನು ಹೇಳಿದ ಜಾಗಕ್ಕೆ ಸಾಗಿಸಿದರೆ, ಕೇಳಿದಷ್ಟು ಹಣ ಸಿಗಲಿದೆ ಎನ್ನುತ್ತಾನೆ. ಆತ ಅದಕ್ಕೆ ಓಕೆ ಎನ್ನುತ್ತಾನೆ. ಅಲ್ಲಿಂದ ಮುಂದೇನಾಗುತ್ತೆ ಎನ್ನುವುದೇ ಚಿತ್ರದ ಕತೆಯಂತೆ.

Categories
ಸಿನಿ ಸುದ್ದಿ

ಭಟ್ಟರ ಸಿನಿಮಾಗೆ ನಟರಾಜ್‌ʼ ಮೇಷ್ಟ್ರುʼ !

ʼರಾಮಾ ರಾಮಾ ರೇ ʼ ಖ್ಯಾತಿಯ ನಟ ಈಗ ಫುಲ್‌ ಬ್ಯುಸಿ

ʼರಾಮಾ ರಾಮಾ ರೇʼ ಚಿತ್ರದ ಖ್ಯಾತಿಯ ನಟ ನಟರಾಜ್‌ ಈಗ ಯೋಗರಾಜ್‌ ಭಟ್‌ ಅಂಗಳಕ್ಕೆ ಜಿಗಿದಿದ್ದಾರೆ. ಯೋಗರಾಜ್‌ ಸಿನಿಮಾಸ್‌ ಹಾಗೂ ರವಿ ಶಾಮನೂರ್‌ ಫಿಲಂಸ್‌ ಜಂಟಿಯಾಗಿ ನಿರ್ಮಾಣ ಮಾಡುತ್ತಿರುವ “ಪದವಿ ಪೂರ್ವʼ ಚಿತ್ರಕ್ಕೆ ನಟರಾಜ್‌ ಎಂಟ್ರಿ ಆಗಿದ್ದಾರೆ. ಹರಿ ಪ್ರಸಾದ್‌ ಜಯಣ್ಣ ನಿರ್ದೇಶನದ ಈ ಚಿತ್ರದಲ್ಲಿ, ನಟರಾಜ್‌ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಈಗಾಗಲೇ ಚಿತ್ರದ ಚಿತ್ರೀಕರಣದಲ್ಲಿ ಪಾಲ್ಗೊಂಡು ತಂಡದ ಉತ್ಸಾಹ ಮತ್ತು ಚಿತ್ರೀಕರಣದ ಕಾರ್ಯ ವೈಖರಿಗೆ ಮಾರು ಹೋಗಿದ್ದಾರಂತೆ. ಸದ್ಯಕ್ಕೆ ಈ ಚಿತ್ರದಲ್ಲಿ ನಟರಾಜ್‌ ಅವರ ಪಾತ್ರ ಎಂತಹದು ಎನ್ನುವುದನ್ನು ಚಿತ್ರ ತಂಡ ರಿವೀಲ್‌ ಮಾಡಿಲ್ಲ. ಆದರೆ ಚಿತ್ರ ತಂಡದಿಂದಲೇ ರಿವೀಲ್‌ ಆಗಿರುವ ನಟರಾಜ್‌ ಅವರ ಪಾತ್ರದ ಫಸ್ಟ್‌ ಲುಕ್‌ ಫೋಟೋ ನೋಡಿದರೆ ಅವರೊಬ್ಬ ಕಾಲೇಜ್‌ ಉಪನ್ಯಾಸಕ ಎನ್ನುವುದು ಗ್ಯಾರಂಟಿ.

ಈ ಚಿತ್ರದಲ್ಲಿ ಅಭಿನಯಿಸಲು ಅವಕಾಶ ಸಿಕ್ಕಿದ್ದಕ್ಕೆ ಸಂತಸ ವ್ಯಕ್ತಪಡಿಸಿರುವ ನಟ ನಟರಾಜ್‌, ಇದೊಂದು ಸುವರ್ಣಾವಕಾಶ ಅಂತ ಹೇಳಿದರು. ” ಇದೆಲ್ಲ ಹೇಗಾಯಿತು ಗೊತ್ತಿಲ್ಲ. ಟೀಮ್ ಕಡೆಯಿಂದ ಆಫರ್‌ ಬಂತು. ಒಳ್ಳೆಯ ಅವಕಾಶ, ಯಾಕೆ ಬಿಡುವುದು ಅಂತ ಒಂದೇ ಮಾತಿನಲ್ಲಿ ಓಕೆ ಅಂದೆ. ಜತೆಗೆ ಯೋಗರಾಜ್‌ ಮೂವೀಸ್‌ ನಿರ್ಮಾಣದ ಚಿತ್ರ ಎನ್ನುವುದು ಕೂಡ ಹೆಚ್ಚು ಇಂಪ್ರೆಸ್‌ ಮಾಡಿತು. ಚಿತ್ರದಲ್ಲಿ ಪಾತ್ರವೂ ಅದ್ಭುತವಾಗಿದೆ. ಒಂದೊಳ್ಳೆಯ ಸಿನಿಮಾ ಹಾಗೂ ಟೀಮ್‌ ನಲ್ಲಿ ಅಭಿನಯಿಸಿದ ಖುಷಿಯಿದೆʼ ಎನ್ನುತ್ತಾರೆ ನಟರಾಜ್.‌ ಈಗಾಗಲೇ ಈ ಚಿತ್ರಕ್ಕೆ ಎರಡನೇ ಹಂತದ ಚಿತ್ರೀಕರಣವು ಮುಗಿದಿದೆ. ಮಲೆನಾಡಿನ ಸುತ್ತಮುತ್ತಲಿನ ಅತ್ಯಂತ ಸುಂದರ ತಾಣಗಳಲ್ಲಿ ಚಿತ್ರದ ಸಂದರ ದೃಶ್ಯಗಳನ್ನು ಚಿತ್ರ ತಂಡ ಚಿತ್ರೀಕರಿಸಿಕೊಂಡು ಬಂದಿದೆ. ಇದೀಗ ಮೂರನೇ ಹಂತದ ಚಿತ್ರೀಕರಣಕ್ಕಾಗಿ ಚಿತ್ರ ತಂಡ ಭರ್ಜರಿ ತಯಾರಿ ನಡೆಸಿದೆ. ಈ ಹಂತದಲ್ಲಿ ನಟರಾಜ್‌ ಎಂಟ್ರಿ ಬಹಿರಂಗಗೊಂಡಿದೆ.

Categories
ಸಿನಿ ಸುದ್ದಿ

ಲಡ್ಡು ಸವಿಯಲು ರೆಡಿ, ರಿಲೀಸ್‌ಗೆ ರೆಡಿಯಾದ ಹೊಸಬರ ಚಿತ್ರ

ಉದ್ಯಮಿ ಮೇಘನಾ ನಿರ್ಮಾಣದ ಮೊದಲ  ಸಿನಿಮಾ 

ʼಲಡ್ಡುʼ ಸವಿಯಲು ರೆಡಿಯಾಗಿದೆ. ಇದು ಕನ್ನಡದ ಸಿನಿಮಾ ಪ್ರೇಕ್ಷಕರಿಗೆ ಹೊಸಬರು ನೀಡುತ್ತಿರುವ ಮನಜರಂಜನೆಯ “ಲಡ್ಡುʼ. ಉದ್ಯಮಿ ವಿ. ಮೇಘನಾ ಇದೇ ಮೊದಲು ನಿರ್ಮಾಣ ಮಾಡಿರುವ ಈ ಚಿತ್ರಕ್ಕೆ ರಮಾನಂದ್‌ ನಿರ್ದೇಶಕ. ಹಲವು ವರ್ಷಗಳಿಂದ ನಿರ್ದೇಶಕರಾದ ಕೆ. ರಾಮ್‌ ನಾರಾಯಣ್‌, ಮದನ್‌ ಹಾಗೂ ಕಿಶನ್‌ ಬಳಿ ಕೆಲಸ ಮಾಡಿದ್ದ ಅನುಭವ ರಮಾನಂದ್‌ ಅವರಿಗಿದೆ. ಅದೇ ಅನುಭವದಲ್ಲೀಗ ಸ್ವತಂತ್ರ ನಿರ್ದೇಶಕರಾಗಿ ಆಕ್ಷನ್‌ ಕಟ್‌ ಹೇಳಿದ್ದಾರೆ. ಇದೊಂದು ರೊಮ್ಯಾಂಟಿಕ್ ಕಾಮಿಡಿ ಹಾಗೂ ಸಸ್ಪೆನ್ಸ್ ಕಥಾಹಂದರ ಹೊಂದಿರುವ ಈ ಚಿತ್ರ. ಐವರು ಯುವಕರು ಹಾಗೂ ಒಬ್ಬ ಯುವತಿಯ ಸುತ್ತ ನಡೆಯುವ ಕತೆ. ಇಂತಹ ಕತೆಯ ಚಿತ್ರವು ʼಲಡ್ಡುʼ ಅಂತ ಟೈಟಲ್‌ ಹೊತ್ತಿದ್ದು ಯಾಕೆ ಅನ್ನೋದು ಸಸ್ಪೆನ್ಸ್.‌ ಇದು ಬಹುತೇಕ ಹೊಸಬರ ಪಯತ್ನದ ಫಲ.

ಸದ್ಯಕ್ಕೆ ರಿಲೀಸ್‌ಗೆ ರೆಡಿಯಾಗಿರುವ ಚಿತ್ರದ ಟ್ರೈಲರ್‌ ಕಳೆದ ವಾರವಷ್ಟೇ ಬಿಡುಗಡೆ ಆಗಿದೆ. ಈಗಾಗಲೇ ಸೋಷಲ್‌ ಮೀಡಿಯಾದಲ್ಲಿ ಎರಡು ಲಕ್ಷಕ್ಕೂ ತಲುಪಿದೆ. ಚಿತ್ರ ತಂಡಕ್ಕೆ ಇದು ಖುಷಿ ಕೊಟ್ಟಿದೆ. ಹರ್ಷಿತ್, ನವೀನ್, ಸಮೀರ್ ನಗರದ್, ಮಧು ಮತ್ತು ವಿಶಾಲ್ ಈ ಚಿತ್ರದ ನಾಯಕರು. ಹಾಗೆಯೇ ಬಿಂದುಶ್ರೀ ಈ ಚಿತ್ರದ ನಾಯಕಿ. ಉಳಿದಂತೆ ʼಪಾರುʼ ಖ್ಯಾತಿಯ ಪವಿತ್ರಾ ಬಿ. ನಾಯಕ್‌, ಮಂಜುಳಾ ರೆಡ್ಡಿ , ರಾಕ್‌ಲೈನ್‌ ಸುಧಾಕರ್‌ ಚಿತ್ರದ ಪೋಷಕ ಪಾತ್ರಗಳಿಗೆ ಬಣ್ಣ ಹಚ್ಚಿದ್ದಾರೆ. ಬೆಂಗಳೂರು, ಶನಿವಾರಸಂತೆ, ಭಟ್ಕಳ ಸುತ್ತಮುತ್ತ ಸುಮಾರು 45 ದಿನಗಳ ಕಾಲ ಚಿತ್ರೀಕರಣ ನಡೆದಿದೆ. ಚಿತ್ರದಲ್ಲಿ ೩ ಹಾಡುಗಳಿದ್ದು, ನಂದು ತಿಪ್ಪು ಸಂಗೀತ ಸಂಯೋಜನೆ ಮಾಡಿದ್ದಾರೆ. ಪುರುಷೋತ್ತಮ್‌ ಛಾಯಾಗ್ರಹಣ ಮಾಡಿದ್ದಾರೆ. ನಿಖಿಲ್‌ ಸಂಭಾಷಣೆ ಬರೆದಿದ್ದಾರೆ. ಚಿತ್ರಕತೆಗೆ ರುದ್ರೇಶ್‌ ಸಾಥ್‌ ನೀಡಿದ್ದಾರೆ. ವೆಂಕಿ ಸಂಕಲನ ಮಾಡಿದ್ದಾರೆ.

Categories
ಸಿನಿ ಸುದ್ದಿ

ನಮಗಿಲ್ಲದ ಧೈರ್ಯ, ತಮಿಳು ಸಿನ್ಮಾ ಮಂದಿಗೆ  ಬಂದಿದ್ದಾರೂ  ಹೇಗೆ   ?

ಪೊಂಗಲ್‌ ಗೆ ಮಾಸ್ಟರ್‌ ಎಂಟ್ರಿ, ಇದು ಸಿಹಿಯೋ, ಕಾರವೋ…..

ಕನ್ನಡದ ಸ್ಟಾರ್‌ ಸಿನಿಮಾಗಳು ಈಗಲೂ ಚಿತ್ರಮಂದಿರಕ್ಕೆ ಬರಲು ಮೀನಾಮೇಷ ಎಣಿಸುತ್ತಿವೆ. ಕೊರೋನಾ ಆತಂಕದಿಂದ ಚಿತ್ರಮಂದಿರಕ್ಕೆ ಪ್ರೇಕ್ಷಕರು ಬರುತ್ತಾರೋ, ಇಲ್ಲವೋ ಎನ್ನುವ ಭಯ ಕನ್ನಡದ ನಿರ್ಮಾಪಕರನ್ನು ಕಾಡುತ್ತಿದೆ. ಸ್ಟಾರ್‌ ನಟರು ಕೂಡ ಅದೇ ಆತಂಕದಲ್ಲಿದ್ದಾರೆ. ಆದರೆ, ನೆರೆ ರಾಜ್ಯಗಳ ಸ್ಟಾರ್‌ ಸಿನಿಮಾಗಳು ಈಗ ಕನ್ನಡದ ಪ್ರೇಕ್ಷಕರನ್ನು ಭರಪೂರ ರಂಜಿಸಲು ಚಿತ್ರಮಂದಿರಕ್ಕೆ ಲಗ್ಗೆ ಹಾಕುತ್ತಿವೆ. ಇದೇ ಸಂಕ್ರಾಂತಿಗೆ ತಮಿಳಿನ ಸೂಪರ್‌ ಸ್ಟಾರ್‌ ದಳಪತಿ ವಿಜಯ್‌ ಅಭಿನಯದ ʼಮಾಸ್ಟರ್‌ʼ ಕನ್ನಡದಲ್ಲೂ ತೆರೆ ಕಾಣುತ್ತಿದೆ.

ತಮಿಳು, ತೆಲುಗು, ಹಿಂದಿ ಹಾಗೂ ಮಲಯಾಳಂ ವರ್ಷನ್‌ ಜತೆಗೆ ಇದು ಕನ್ನಡಕ್ಕೂ ಡಬ್‌ ಆಗಿದೆ. ರಾಜ್ಯದಲ್ಲಿ ಇದರ ವಿತರಣೆಯ ಹಕ್ಕನ್ನು ಧೀರಜ್‌ ಎಂಟರ್‌ ಪ್ರೈಸಸ್‌ ಪಡೆದಿದೆ. ತಮಿಳುನಾಡು ಮಾದರಿಯಲ್ಲೇ, ಈ ಚಿತ್ರದ ಪ್ರದರ್ಶನಕ್ಕೆ ಬೆಂಗಳೂರಿನಲ್ಲೂ ನಾಳೆ (ಜ.6)ಯಿಂದಲೇ ಮಲ್ಟಿಪ್ಲೆಕ್ಸ್‌ ಸೇರಿದಂತೆ ಎಲ್ಲಾ ಚಿತ್ರ ಮಂದಿರಗಳಲ್ಲಿ ಆನ್‌ಲೈನ್‌ ಬುಕ್ಕಿಂಗ್‌ ಶುರುವಾಗಲಿದೆ. ಸದ್ಯಕ್ಕೆ ಸಿಕ್ಕ ಮಾಹಿತಿ ಪ್ರಕಾರ ಈ ಚಿತ್ರವು ರಾಜ್ಯಾದ್ಯಂತ 150 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ತೆರೆ ಕಾಣುವುದು ಗ್ಯಾರಂಟಿ ಆಗಿದೆ. ಇಲ್ಲಿ ಮೂಡುವುದು ಒಂದೇ ಪ್ರಶ್ನೆ, ಕನ್ನಡ ಸಿನಿಮಾ ಮಂದಿಗೆ ಇಲ್ಲದ ಧೈರ್ಯ, ತಮಿಳು ಸಿನಿಮಾ ಮಂದಿಗೆ ಹೇಗೆ ಬಂತು ಅಂತ.

ಅದು ಬಿಡಿ, ” ಮಾಸ್ಟರ್‌ʼ ಸಿನಿಮಾದ ಮಾದರಿಯಲ್ಲೇ ಅನ್ಯ ಭಾಷೆಯ ಸ್ಟಾರ್‌ ಸಿನಿಮಾಗಳೆಲ್ಲ ಬ್ಯಾಕ್‌ ಟು ಬ್ಯಾಕ್ ಹೀಗೆಯೇ ಡಬ್‌ ಆಗಿ ಕನ್ನಡಕ್ಕೆ ಬರುತ್ತಿದ್ದರೆ, ಕನ್ನಡ ಚಿತ್ರೋದ್ಯಮದ ಪರಿಸ್ಥಿತಿ ಹೇಗಾಗಬಹುದು ? ಹತ್ತಾರು ಕೋಟಿ ಸಂಭಾವನೆ ಪಡೆದು ವರ್ಷಕ್ಕೆ ಒಂದೋ, ಎರಡೋ ಅಂತ ಸಿನಿಮಾ ಮಾಡಿಕೊಂಡು ಕೂರುವ ಸ್ಟಾರ್ಸ್‌ ಗತಿ ಏನಾಗಬಹುದು ? ಕನ್ನಡ ಚಿತ್ರರಂಗ ಅದೆಷ್ಟರ ಮಟ್ಟಿಗೆ ಗಮನಿಸಿದೆಯೋ ಗೊತ್ತಿಲ್ಲ, ಡಬ್ಬಿಂಗ್‌ ಹಾಗೂ ಕೊರೋನಾ ಕಾರಣದ ಲಾಕ್‌ಡೌನ್‌ ನಂತರ ಮನರಂಜನಾ ಉದ್ಯಮದಲ್ಲಿ ಸಾಕಷ್ಟು ಬದಲಾವಣೆ ಆಗಿವೆ.

ಈ ಹಿಂದಿನಂತೆ ಈಗ ಕನ್ನಡದ ಪ್ರೇಕ್ಷಕರಿಗೆ ಪರಭಾಷೆಗಳ ಸಿನಿಮಾ ನೋಡಲು ಭಾಷೆಯ ತೊಂದರೆ ಇಲ್ಲ. ಅಲ್ಲಿನ ಸೂಪರ್‌ ಸ್ಟಾರ್‌ ಸಿನಿಮಾಗಳೆಲ್ಲ ಕನ್ನಡಕ್ಕೆ ಡಬ್‌ ಆಗಿ ಬರುತ್ತಿವೆ. ಸಹಜವಾಗಿಯೇ ಅಲ್ಲಿನ ಸ್ಟಾರ್‌ಗಳೆಲ್ಲ ಇಲ್ಲಿನವರಿಗೂ ಪರಿಚಯ ಇರೋದ್ರಿಂದ ಅವರ ಸಿನಿಮಾ ಕನ್ನಡದ ಪ್ರೇಕ್ಷಕರಿಗೂ ತಲುಪುವುದರಲ್ಲಿ ಅನುಮಾನ ಇಲ್ಲ. ಡಬ್ಬಿಂಗ್‌ ಸಿನಿಮಾ ಕನ್ನಡದಲ್ಲಿ ಇದುವರೆಗೂ ಗೆದ್ದಿಲ್ಲ ಅಂತೆನ್ನುವ ಜಂಭ ಇಲ್ಲಿನ ನಿರ್ಮಾಪಕರು ಹಾಗೂ ಸ್ಟಾರ್‌ಗಳಿಗಿದೆ. ಆದರೆ ಕೊರೋನಾ ನಂತರದ ಪರಿಣಾಮ ಬೇರೆಯೇ ಆಗಲಿದೆ. ಅದು ವಿಜಯ್‌ ಅಭಿನಯದʼ ಮಾಸ್ಟರ್‌ʼ ಮೂಲಕ ಗೊತ್ತಾಗಲಿದೆ. ಇದು ಗೆದ್ದರೆ ಕನ್ನಡಕ್ಕೆ ನಿಜಕ್ಕೂ ಮಾಸ್ಟರ್‌ ಸ್ಟ್ರೋಕ್!

ಇನ್ನು ಕನ್ನಡದ ಸ್ಟಾರ್‌ಗಳೆಲ್ಲ ಹಿಂದಿನ ದಿನಗಳ ಮೂಡ್‌ನಲ್ಲಿಯೇ ಇದ್ದಾರೆ. ಕೊರೋನಾ ಮಾಯವಾಗಿ, ಮತ್ತೆ ಚಿತ್ರಮಂದಿರಗಳು ತೆರೆದುಕೊಂಡರೆ ಹಿಂದಿನ ಹಾಗೆಯೇ ಚಿತ್ರಮಂದಿರಗಳಲ್ಲಿ ತಮ್ಮ ಕಟೌಟ್‌ ಗಳಿಗೆ ಅಭಿಮಾನಿಗಳಿಂದ ಹಾರ, ತೂರಾಯಿಗಳು ಬೀಳುತ್ತವೆ. ಸಿನಿಮಾ ಹೇಗಿದ್ರೂ ಸರಿಯೇ ಚಿತ್ರ ಮಂದಿರಗಳು ತುಂಬಿಕೊಳ್ಳುತ್ತವೆ, ಕಲೆಕ್ಷನ್‌ ಜೋರಾಗಿರುತ್ತೆ ಅಂತಲೇ ಭಾವಿಸಿಕೊಂಡಂತಿದೆ. ಅದೇ ಕಾರಣಕ್ಕೆ ಸ್ಟಾರ್‌ ಸಿನಿಮಾಗಳನ್ನು ನಿರ್ಮಾಪಕರು ತಮ್ಮ ತಿಜೂರಿಗಳಲ್ಲಿ ಭದ್ರವಾಗಿಟ್ಟುಕೊಂಡಿದ್ದಾರೆ. ಕೊರೋನಾ ಆತಂಕ ದೂರವಾದ ತಕ್ಷಣವೇ ತೆರೆಗೆ ತರೋಣ ಅಂತ ಹೇಳುತ್ತಿದ್ದಾರೆ. ಆದರೆ ಲೆಕ್ಕಾಚಾರ ಹಾಗೆಯೇ ಇರುತ್ತಾ ?

ಸದ್ಯಕ್ಕೆ ಕನ್ನಡದ ಪ್ರೇಕ್ಷಕನ ಮನರಂಜನೆಯ ಅಭಿರುಚಿ ಈಗ ಈ ಹಿಂದೆ ಇದ್ದಂತೆ ಇಲ್ಲ. ಚಿತ್ರಮಂದಿರಗಳು ಬಂದ್‌ ಆಗಿ, ಸಿನಿಮಾ ಬಿಡುಗಡೆಯಾಗದೆ ಇಷ್ಟು ದಿನವಾದರೂ, ಕನ್ನಡ ಸಿನಿಮಾ‌ ಬಿಡುಗಡೆ ಆಗುತ್ತಿಲ್ಲ, ಸ್ಟಾರ್ ಸಿನಿಮಾ ಬರುತ್ತಿಲ್ಲ ಅಂತ‌ ಪ್ರೇಕ್ಷಕರಾರು ಸ್ಟಾರ್ ನಟರ ಮನೆ ಬಾಗಿಲಿಗೆ ಬಂದು‌ ಧರಣಿ ಕುಳಿತಿಲ್ಲ. ಬದಲಿಗೆ, ಮನರಂಜನೆ ಎನ್ನುವುದಕ್ಕೆ ಆತನಿಗೀಗ ಹಲವು ಮಾರ್ಗಗಳು ಲಭ್ಯ ಇವೆ. ಹಾಗಾಗಿ ಚಿತ್ರಮಂದಿರ ಎನ್ನುವುದು ಇನ್ನು ಮುಂದೆ ಆತನಿಗೆ ಕೊನೆಯ ಆಪ್ಸೆನ್ ಕೂಡ ಆಗಬಹುದು.‌

 

ಬರಬೇಕಾದವರು ಇವರು..

ಕನ್ನಡದಲ್ಲೀಗ ಬಹುನಿರೀಕ್ಷಿತ ಸ್ಟಾರ್‌ ಸಿನಿಮಾಗಳದ್ದು ದೊಡ್ಡ ಪಟ್ಟಿ ಇದೆ. ದರ್ಶನ್‌ ಅಭಿನಯದ “ರಾಬರ್ಟ್‌ʼ, ಪುನೀತ್‌  ಅಭಿನಯದ “ಯುವರತ್ನʼ, ಧ್ರುವಸರ್ಜಾ ಅಭಿನಯದ “ ಪೊಗರುʼ, ಸುದೀಪ್‌ ಅಭಿನಯದ “ಕೋಟಿಗೊಬ್ಬ 3ʼ , ಶಿವರಾಜ್‌ ಕುಮಾರ್‌ ಅಭಿನಯದʼ ಭಜರಂಗಿ 2ʼ ಯಶ್‌ ಅಭಿನಯದ ʼಕೆಜಿಎಫ್‌ 2ʼ ತೆರೆ ಕಾಣಬೇಕಿದೆ. ಕನ್ನಡ ಸಿನಿಮಾ ಪ್ರೇಕ್ಷಕ ಈ ಸಿನಿಮಾಗಳ ರಿಲೀಸ್‌ಗೆ ಕಾಯುತ್ತಿದ್ದಾರೆ. ಆದರೆ ಇವೆಲ್ಲ ಬರುವುದು ಯಾವಾಗ?

ಅದರಲ್ಲೂ ಲಾಕ್‌ಡೌನ್‌ ದಿನಗಳಿಂದ ಒಟಿಟಿ ಪ್ಲಾಟ್‌ ಫಾರ್ಮ್‌ ಎನ್ನುವುದು ಸಿನಿಮಾಸಕ್ತರ ತಾಣವಾಗಿದೆ. ಅಲ್ಲಿಯೇ ಸಿನಿಮಾ ನೋಡುವವರ ಸಂಖ್ಯೆ ಹೆಚ್ಚಾಗಿದೆ. ಅಮೆಜಾನ್‌, ನೆಟ್‌ಫ್ಲಿಕ್ಸ್ ಸೇರಿದಂತೆ ಒಟಿಟಿ ಆಪ್‌ಗಳು ಪ್ರತಿಯೊಬ್ಬರ ಮೊಬೈಲ್‌ನಲ್ಲೂ ಇವೆ. ಅಲ್ಲಿಯೇ ಈಗ ಒಳ್ಳೆಯ ಸಿನಿಮಾ ಸಿಗುವಾಗ ಇನ್ಯಾಕೆ ಚಿತ್ರಮಂದಿರ ಅಂದೊಕೊಳ್ಳುತ್ತಿರುವವರ ಸಂಖ್ಯೆ ದಿನೇ ದಿನೆ ಹೆಚ್ಚಾಗುತ್ತಿದೆ. ಲಾಕ್‌ಡೌನ್‌ ನಂತರ ಈ ಸಂಖ್ಯೆ ದುಪ್ಪಟ್ಟು ಆಗಿದೆ ಎನ್ನುತ್ತಿವೆ ಮೂಲಗಳು.

ಹಾಗೆಯೇ ಭಾಷೆ ಯಾವುದಾದರೇನು ಮನರಂಜನೆ ಸಿಕ್ಕರೆ ಸಾಕು ಎನ್ನುವರೂ ಹೆಚ್ಚಾಗುತ್ತಿದ್ದಾರೆ. ಇದಿಷ್ಟರ ನಡುವೆ ನಮ್ಮ ಸ್ಟಾರ್‌ಗಳು, ನಮ್ಮದೇ ಭಾಷೆ ಅಂತೆಲ್ಲ ಅಭಿಮಾನ ಇಟ್ಟುಕೊಂಡವರನ್ನು ಮತ್ತೆ ಚಿತ್ರಮಂದಿರಗಳಿಗೆ ಕರೆ ತರಬೇಕಾದ್ರೆ, ಎಲ್ಲಾ ರೀತಿಯಲ್ಲೂ ಗುಣಮಟ್ಟದ ಸಿನಿಮಾಗಳು ಬರಬೇಕು. ಜತೆಗೆ ಆದಷ್ಟು ಬೇಗ ಸ್ಟಾರ್‌ ಸಿನಿಮಾಗಳು ತೆರೆ ಕಾಣಬೇಕಿದೆ ಎನ್ನುವ ಮಾತು ಸಿನಿಮಾ ತಜ್ಣರಿಂದಲೇ ಕೇಳಿಬರುತ್ತಿದೆ. ಅದರ ಜತೆಗೆಯೇ ಈಗ ಪರಭಾಷೆಯ ಸ್ಟಾರ್‌ ಸಿನಿಮಾಗಳಿಗೆ ಪೈಪೋಟಿಯಾಗಿ ಕನ್ನಡ ಸಿನಿಮಾಗಳು ಬರಬೇಕಿದೆ. ಸ್ಟಾರ್‌ಗಳು ಕೂಡ ತಾವು ಕೋಟಿ ಸಂಭಾವನೆಯ ಶೂರರು ಎನ್ನುವ ಜಂಭ ಬಿಟ್ಟು, ವರ್ಷಕ್ಕೆ ಎಷ್ಟು ಸಾಧ್ಯವೋ ಅಷ್ಟು ಕಂಟೆಂಟ್‌ ಆಧರಿತ ಸಿನಿಮಾಗಳಲ್ಲಿ ಕಾಣಿಸಿಕೊಳ್ಳಬೇಕಿದೆ. ಆಗ ಮಾತ್ರ, ಕನ್ನಡ ಚಿತ್ರೋದ್ಯಮ ಉಳಿಯುತ್ತೆ, ಕನ್ನಡದ ಪ್ರೇಕ್ಷಕ ಇರುತ್ತಾನೆ.  ಅದು ʼಮಾಸ್ಟರ್‌ʼ ನಂತಹ ಪರಭಾಷೆಯ ಸಿನಿಮಾದೆದುರು ಕೂಡ.

Categories
ಆಡಿಯೋ ಕಾರ್ನರ್ ಸಿನಿ ಸುದ್ದಿ

‘ ಸಲಗ’ ಟೈಟಲ್ ಟ್ರ್ಯಾಕ್ ಗೆ ಚೆನ್ನೈ‌ನಲ್ಲಿ ಫೈನಲ್ ಟಚ್

ಸ್ಯಾಂಡಲ್ ವುಡ್ ನಲ್ಲಿ ಭರ್ಜರಿ ಧೂಳೆಬ್ಬಿಸುವುದು ಖಾತರಿ ಆಗಿದೆ ದುನಿಯಾ ವಿಜಯ್ ನಿರ್ದೇಶನದ ಮೊದಲ ಸಿನಿಮಾ

ನಟ ದುನಿಯಾ ವಿಜಯ್ ನಿರ್ದೇಶಿಸಿ, ನಾಯಕರಾಗಿ ಅಭಿನಯಿಸಿರುವ ‘ಸಲಗ’ ರಿಲೀಸ್ ಗೆ ರೆಡಿಯಾಗುತ್ತಿದೆ. ಅದಕ್ಕೆ ತಕ್ಕಂತೆ ಚಿತ್ರ ತಂಡ ಎಲ್ಲಾ ರೀತಿಯಲ್ಲೂ ರೆಡಿಯಾಗುತ್ತಿದೆ. ಸದ್ಯಕ್ಕೆ ಚಿತ್ರ ತಂಡ ಚಿತ್ರದ ಟೈಟಲ್ ಟ್ರ್ಯಾಕ್ ಫೈನಲ್ ಕಂಪೋಸಿಂಗ್ ಕೆಲಸದಲ್ಲಿ ಬ್ಯುಸಿಯಾಗಿದೆ. ಚಿತ್ರ ತಂಡದ ಮಾಹಿತಿ ಪ್ರಕಾರ ಟ್ರೇಲರ್ ಲಾಂಚ್ ಗೂ ಮುನ್ನ ಟೈಟಲ್ ಟ್ರ್ಯಾಕ್ ಹೊರ ತಂದು, ಅದರದ್ದೇ ಒಂದು ಹವಾ ಸೃಷ್ಟಿಸಿದ ನಂತರವೇ ಚಿತ್ರ ತೆರೆಗೆ ಬರಲಿದೆಯಂತೆ. ಹಾಗಾಗಿಯೇ ಚಿತ್ರದ ನಿರ್ದೇಶಕ ಕಮ್ ನಾಯಕ ನಟ ದುನಿಯಾ ವಿಜಯ್,ಸಂಗೀತ ನಿರ್ದೇಶಕ ಚರಣ್ ರಾಜ್ ಮತ್ತತವರ ತಂಡ ಚೆನ್ನೈಗೆ ಪ್ರಯಾಣ ಬೆಳಸಿ, ಅಲ್ಲಿ ಟೈಟಲ್ ಟ್ರ್ಯಾಕ್ ಗೆ ಫೈನಲ್ ಟಚ್ ನೀಡುವ ಕೆಲಸದಲ್ಲಿ ಬ್ಯುಸಿಯಾಗಿದೆ. ಆ ಕೆಲಸದ ಒಂದು ಝಲಕ್ ಇಲ್ಲಿದೆ.


‘ ಟಗರು ‘ ಖ್ಯಾತಿಯ ನಿರ್ಮಾಪಕ ಕೆ.ಪಿ ಶ್ರೀಕಾಂತ್ ನಿರ್ಮಾಣದಲ್ಲಿ ತಯಾರಾಗಿರೋ ಈ ಚಿತ್ರ ಈಗಾಗ್ಲೇ ಹತ್ತು ಹಲವು ವಿಶೇಷಗಳಿಂದ ಚಿತ್ರೋದ್ಯಮದಲ್ಲಿ ಹಾಗೂ ಸಿನಿಮಾಸಕ್ತರಲ್ಲಿ ದೊಡ್ಡ ನಿರೀಕ್ಷೆ ಹುಟ್ಟಿಸಿದೆ. ಅದಕ್ಕೆ ಕಾರಣ ದುನಿಯಾ ವಿಜಯ್ ಜತೆಗೆ ಸಂಗೀತ ನಿರ್ದೇಶಕ. ಚರಣ್ ರಾಜ್. ಇದುವರೆಗೂ ಬೆಳ್ಳಿತೆರೆಯಲ್ಲಿ ನಾಯಕರಾಗಿ ಅಬ್ಬರಿಸಿದ ನಟ ದುನಿಯಾ ವಿಜಯ್, ಇದೇ ಮೊದಲು ಆ್ಯಕ್ಷನ್ ಕಟ್ ಹೇಳಿದ ಸಿನಿಮಾ‌. ಹಾಗೆಯೇ ಟಗರು ಚಿತ್ರದೊಂದಿಗೆ ಸ್ಯಾಂಡಲ್ ವುಡ್ ನಲ್ಲಿ ಸೆನ್ಸೆಷನಲ್ ಸಂಗೀತ ನಿರ್ದೇಶಕ ಎಂದೆನಿಸಿಕೊಂಡ ಯುವ ಸಂಗೀತ ನಿರ್ದೇಶಕ ಚರಣ್ ರಾಜ್, ಸಲಗ ಮೂಲಕವೂ ದೊಡ್ಡ ಹವಾ ಎಬ್ಬಿಸುತ್ತಾರೆನ್ನುವ ನಿರೀಕ್ಷೆ ಇದೆ‌.

Categories
ಸಿನಿ ಸುದ್ದಿ

ನಮ್ಮವರಿಗೂ ಬಂತಾ ಬಯೋಪಿಕ್‌ ಛಲ ? ಸಾಧಕರ ಬೆನ್ನತ್ತಿದ ಸಿನ್ಮಾ ಮಂದಿ

ಇದು ಸಿನಿಲಹರಿ ವಿಶೇಷ

“ಸೂರರೈ ಪಟ್ರುʼ ಬೆನ್ನಲೇ ಸಿನಿಮಾ ಆಗುವ ಹಾದಿಯಲ್ಲಿವೆ ಹಲವು ಸಾಧಕರ ಬಯೋಪಿಕ್‌

ಅಯ್ಯೋ…ನಮ್ಮವರಿಗ್ಯಾಕೆ ಇದು ಹೊಳಿಲಿಲ್ಲ ? ತಮಿಳಿನ ಸೂಪರ್‌ ಸ್ಟಾರ್‌ ನಟ ಸೂರ್ಯ ಅಭಿನಯದʼ ಸೂರರೈ ಪಟ್ರು ʼ ಚಿತ್ರ ಭಾಕ್ಸ್‌ ಆಫೀಸ್‌ನಲ್ಲಿ ಭರ್ಜರಿ ಸಕ್ಸಸ್‌ ಕಂಡಾಗ ಕನ್ನಡದ ಸಿನಿಮಾ ಪ್ರೇಕ್ಷಕರಿಂದ ಇಂತಹ ಮಾತು ಕೇಳಿ ಬಂತು. ಗಾಂಧಿನಗರದಲ್ಲೂ ಇದು ಭಾರೀ ಚರ್ಚೆಗೆ ಗ್ರಾಸವಾಯಿತು. ಆ ಕತೆ ನಾವೇ ಮಾಡಿದ್ದರೆ, ಅದೇ ಕನೆಕ್ಷನ್‌ ನಮ್ದೆ ಆಗ್ತಿತಲ್ವಾ  ಅಂತ ಕೆಲವು ನಿರ್ಮಾಪಕರು ಅಂದುಕೊಂಡ್ರಂತೆ.

ಕ್ಯಾಪ್ಟನ್‌ ಗೋಪಿನಾಥ್

ಅದು ಯಾಕೆ ಗೊತ್ತಾ, ʼಸೂರರೈ ಪಟ್ರುʼ ಸಿನಿಮಾ ಕತೆ ಕನ್ನಡದ್ದೇ. ಅದು ಕನ್ನಡದವರೇ ಆದ ಕ್ಯಾಫ್ಟನ್‌ ಗೋಪಿನಾಥ್‌ ಅವರ ಜೀವನ ಆಧರಿತ ಸಿನಿಮಾ. ಅದೇ ರೀತಿ ಇನ್ಫೋಸಿಸ್‌ ನಾರಾಯಣ ಮೂರ್ತಿ ಅವರ ಜೀವನ ಕೂಡ ಸಿನಿಮಾ ಆಗುತ್ತಿದೆ. ಅವರು ೫ ರೂ. ಇಟ್ಕೊಂಡು ಇನ್ಫೋಸಿಸ್‌ ಅಂತಹ ದೊಡ್ಡ ಸಂಸ್ಥೆ ಕಟ್ಟಿದವರು. ಅವರೇನು ಅನ್ನೋದು ಇಡೀ ಜಗತ್ತಿಗೆ ಗೊತ್ತು. ಅವರ ಸಿನಿಮಾ ಅಂದ್ರೆ ಅದು ಬರೀ ಪ್ಯಾನ್‌ ಇಂಡಿಯಾ ಅಲ್ಲ, ವರ್ಲ್ಡ್ ವೈಡ್‌ ಮಾರ್ಕೆಟ್‌ ಕಾಣುವ ಸಿನಿಮಾ. ಆದ್ರೆ ಅದು ಆಗುತ್ತಿರುವುದು ಕನ್ನಡದಲಲ್ಲ, ಹಿಂದಿಯಲ್ಲಿ ಎನ್ನುವುದು ಕನ್ನಡಿಗರಿಗಾದ ಬೇಸರ.

ನಾರಾಯಣ ಮೂರ್ತಿ

ಕನ್ನಡದ ಸಿನಿಮಾ ಮಂದಿಗೆ ಎಚ್ಚರ ಆಗುವುದು ಹೀಗೆಯೇ ? ಯಾರಾದ್ರೂ, ನಮ್ದೆ ಊರಿನ ಸಾಧಕರ ಕತೆ ಅಥವಾ ಸಂಪನ್ಮೂಲ ಬಳಸಿಕೊಂಡು ದೊಡ್ಡಮಟ್ಟದಲ್ಲಿ ಗೆದ್ದಾಗ, ಇಲ್ಲವೇ ಹಣ ಮಾಡಿಕೊಂಡಾಗ ನಾವು ನಿದ್ದೆಯಿಂದ ಏಳುತ್ತೇವೆ. ಅರರೆ…ಅದು ನಮ್ದೆ ಕತೆ ಅಲ್ವಾ , ನಮ್ದೇ ಸಂಪನ್ಮೂಲ ಅಲ್ವೇ, ಅದನ್ನು ನಾವೇ ಬಳಸಿಕೊಂಡಿದ್ರೇ, ಅಷ್ಟು ದುಡ್ಡು ನಾವೇ ದುಡಿದುಕೊಳ್ಳಬಹುದಾಗಿತ್ತು ಅಲ್ವಾ , ಅಂತೆಲ್ಲ ಯೋಚಿಸುತ್ತೇವೆ. ಈಗಲೂ ಅದೇ ಆಗಿದೆ !

ಬಿ. ಎಸ್.‌ ಯಡಿಯೂರಪ್ಪ

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥೆ ಕಟ್ಟಿ ದೊಡ್ಡ ಸಕ್ಸಸ್‌ ಕಂಡಿದ್ದ ಕ್ಯಾಪ್ಟನ್‌ ಗೋಪಿನಾಥ್‌ ಅವರ ಜೀವನ ಆಧರಿತ ʼಸೂರರೈ ಪಟ್ರುʼ ಬಂದು ಹೋದ ಮೇಲೆ ಕನ್ನಡದ ಸಿನಿಮಾ ಮಂದಿ ಕೊಂಚ ಎಚ್ಚೇತ್ತುಕೊಂಡ ಹಾಗೆ ಕಾಣುತ್ತಿದೆ. ನಮ್ಮವರ ಕತೆಗಳನ್ನು ನಾವೇ ಬೆಳ್ಳಿತೆರೆಗೆ ತರಬೇಕೆನ್ನುವ ಛಲವೋ, ಅಥವಾ ನಮ್ಮ ಸಾಧಕರ ಮೇಲಿನ ಕಾಳಜಿಯೋ ಗೊತ್ತಿಲ್ಲ, ಒಟ್ಟಿನಲ್ಲಿ ಕನ್ನಡದ ಹಲವು ಅಗ್ರಗಣ್ಯ ಸಾಧಕರ ಜೀವನದ ಕತೆಗಳ ಮೇಲೆ ಸಿನಿಮಾ ಮಂದಿ ಕಣ್ಣು ಬಿದ್ದಿದೆ.

ಮೂಲಗಳ ಪ್ರಕಾರ ಈಗ ಹಿರಿಯ ನಟಿ ಹಾಗೂ ಸಂಸದೆ ಸುಮಲತಾ ಅಂಬರೀಶ್‌ ಅವರ ಜೀವನ ಆಧರಿಸಿ ಯಾರೋ ಸಿನಿಮಾ ಮಾಡಲು ಹೊರಟಿದ್ದಾರೆನ್ನುವ ಸುದ್ದಿಯಿದೆ. ಅದು ಎಷ್ಟರ ಮಟ್ಟಿಗೆ ಸತ್ಯವೋ, ಇನ್ನು ಗೊತ್ತಾಗಿಲ್ಲ. ಆದರೆ ಯಾರೇ ಸಿನಿಮಾ ಮಾಡಲು ಹೊರಟರು ಅದಕ್ಕೆ ಸುಮಲತಾ ಅವರ ಒಪ್ಪಿಗೆ ಬೇಕು, ಜತೆಗೆ ಯಾವ ವಿಚಾರದ ಮೇಲೆ ಸಿನಿಮಾ ಮಾಡಲು ಹೊರಟಿದ್ದಾರೆಂಬ ಬಗ್ಗೆ ಮಾಹಿತಿ ಪಡೆಯಬೇಕು, ಇದೆಲ್ಲ ಮುಗಿದ ಮೇಲೆ ಸಿನಿಮಾ ಆಗುವುದು ವಾಡಿಕೆ. ಸದ್ಯಕ್ಕೆ ಹಾಗೊಂದು ಸುದ್ದಿ ಗಾಂಧಿನಗರದಲ್ಲಿ ಹರಿದಾಡುತ್ತಿದೆ.

ಸುಮಲತಾ ಅಂಬರೀಶ್

ಗೊತ್ತಿಲ್ಲ, ಇದು ಗಾಸಿಪ್‌ ಕೂಡ ಆಗಿರಬಹುದು. ಅದರಾಚೆ, ಬಹಳಷ್ಟು ಸಾಧಕರ ಜೀವನ ಕತೆಗಳ ಮೇಲೆ ಸಿನಿಮಾ ಮಂದಿ ಕಣ್ಣಿಟ್ಟಿದ್ದಾರೆ. ಈಗಾಗಲೇ ಆ ನಿಟ್ಟಿನಲ್ಲಿ ಕೆಲವರು ಕೆಲಸ ಕೂಡ ಶುರು ಮಾಡಿರುವ ಬಗ್ಗೆ ಮಾತುಗಳು ಕೇಳಿ ಬಂದಿವೆ. ಸದ್ಯಕ್ಕೆ ಬಯೋಪಿಕ್‌ ಸಿನಿಮಾಗಳ ಸಾಲಿನಲ್ಲಿ ಮುಖ್ಯಮಂತ್ರಿ ಬಿ.ಎಸ್.‌ ಯಡಿಯೂರಪ್ಪ, ಮಾಜಿ ಸಿಎಂ ಸಿದ್ದರಾಮಯ್ಯ ಅವರ ಜತೆಗೆ ವಿಆರ್‌ಎಲ್‌ ಸಂಸ್ಥೆಯ ಸ್ಥಾಪಕ ವಿಜಯ್‌ ಸಂಕೇಶ್ವರ ಹೆಸರು ಕೂಡ ಚಾಲ್ತಿಯಲ್ಲಿವೆ.

ಸಿದ್ದರಾಮಯ್ಯ

ಈ ಪ್ರಯತ್ನಗಳ ಹಿಂದೆ ಯಾರೆಲ್ಲ ಇದ್ದಾರೆನ್ನುವುದು ಸದ್ಯಕ್ಕೆ ನಿಗೂಢ. ಯಾವುದೇ ಮಾಹಿತಿಗಳು ರಿವೀಲ್‌ ಆಗಿಲ್ಲ. ಆದರೆ ಈ ಇಬ್ಬರು ಸಾಧಕರ ಕುರಿತು ಸಿನಿಮಾ ಆಗುತ್ತಿರುವುದು ನಿಜ ಎನ್ನುತ್ತಿವೆ ಮೂಲಗಳು. ಹಾಗೆ ನೋಡಿದರೆ, ಈ ಇಬ್ಬರು ಸಾಧಕರ ಜೀವನ ಕತೆಗಳು ʼಸೂರರೈ ಪಟ್ರುʼ ಸಿನಿಮಾ ಕತೆಗೇನು ಕಮ್ಮಿ ಇಲ್ಲ. ಕರ್ನಾಟಕ ಕಂಡ ರಾಜಕಾರಣಿಗಳಲ್ಲಿ ಯಡುಯೂರಪ್ಪ ಹಾಗೂ ಸಿದ್ದರಾಮಯ್ಯ ಬರೀ ಜನ ನಾಯಕರು ಮಾತ್ರವಲ್ಲ, ವರ್ಣರಂಜಿತ ರಾಜಕಾರಣಿಗಳು ಕೂಡ. ಅವರ ಕುರಿತು ಸಿನಿಮಾ ಮಾಡುವುದು ಒಂದು ಕ್ರೇಜ್.‌ ಸದ್ಯಕ್ಕೆ ಇವುಗಳ ಹಿಂದಿರುವವರು ಯಾರು? ಸಸ್ಪೆನ್ಸ್.‌

ವಿಜಯ ಸಂಕೇಶ್ವರ್
Categories
ಸಿನಿ ಸುದ್ದಿ

ಭಾಸ್ಕರ್ ಮನೆ ಹೋಳಿಗೆ ಕುರುಕ್ ತಿಂಡಿ ಮಳಿಗೆಯಲ್ಲಿ ನಟ ಶೈನ್‌ ಶೆಟ್ಟಿ…!

ಸಿನಿಮಾ ಮಂದಿಗೆ  ಹೋಳಿಗೆ ರುಚಿ ತೋರಿಸಿದ ಭಾಸ್ಕರ್‌ ಮನೆ ಹೋಳಿಗೆ ಹಾಗೂ ಕುರುಕ್‌ ತಿಂಡಿ ಮಳಿಗೆ 

ಬಿಗ್‌ಬಾಸ್‌ ಖ್ಯಾತಿಯ ನಟ ಶೈನ್‌ಶೆಟ್ಟಿ, ಎಲ್ಲಾ ಬಿಟ್ಟು ಮನೆ ಹೋಳಿಗೆ ಕುರುಕ್‌ ತಿಂಡಿ ಮಾರಾಟ ಮಳಿಗೆ ತೆರೆದ್ರಾ ? ಬೆಂಗಳೂರಿನ ಬನಶಂಕರಿಯಲ್ಲಿ ಮೊನ್ನೆ ” ಭಾಸ್ಕರ್‌ ಮನೆ ಹೋಳಿಗೆ ಹಾಗೂ ಕುರುಕ್‌ ತಿಂಡಿʼ ಮಾರಾಟ ಮಳಿಗೆ ಮುಂದೆ ನಟ ಶೈನ್‌ ಶೆಟ್ಟಿ ಅವರನ್ನು ಕಂಡಾಗ ಎಲ್ಲರೂ ಅಂದುಕೊಂಡಿದ್ದೇ ಹಾಗೆ. ಆದರೆ ಅದು ಹಾಗಲ್ಲ. ʼಭಾಸ್ಕರ್‌ ಮನೆ ಹೋಳಿಗೆ ಹಾಗೂ ಕುರುಕ್‌ ತಿಂಡಿʼ ಮಾರಾಟ ಮಳಿಗೆಯ ಹತ್ತನೇ ಶಾಖೆ ಅಂದು ಉದ್ಘಾಟನೆ ಗೊಂಡಿತು. ಅಲ್ಲಿಗೆ ಮುಖ್ಯ ಅತಿಥಿಯಾಗಿ ಬಂದಿದ್ದು ಬಿಗ್‌ ಬಾಸ್‌ ಖ್ಯಾತಿಯ ಶೈನ್‌ ಶೆಟ್ಟಿ. ಅವರೊಂದಿಗೆ ಒಗ್ಗರಣೆ ಡಬ್ಬಿ ಖ್ಯಾತಿಯ ಮುರುಳಿ, ಬಿಜೆಪಿ ಮುಖಂಡ ಉಮೇಶ್‌ (ಕಟ್ಟಾಳ್), ಬಿಬಿಎಂಪಿ ವಿರೋಧ ಪಕ್ಷದ ನಾಯಕ ಬಸವರಾಜ್‌, ಧರ್ಮಗಿರಿ ದೇವಸ್ಥಾನದ ಸ್ಥಾಪಕ ವೆಂಕಟೇಶ್‌ ಗೆಸ್ಟ್‌ ಆಗಿ ಬಂದಿದ್ದರು. ಅವರೆಲ್ಲ ಭಾಸ್ಕರ್‌ ಮನೆ ಹೋಳಿಗೆ ಹಾಗೂ ಕುರುಕ್‌ ತಿಂಡಿ ಹೊಸ ಶಾಖೆಗೆ ಶುಭ ಕೋರಿದರು.

ಇನ್ನು ಭಾಸ್ಕರ್‌ ಮನೆ ಹೋಳಿಗೆ ಹಾಗೂ ಕುರುಕ್‌ ತಿಂಡಿ ಮಾರಾಟ ಮಳಿಗೆಗೂ ಸಿನಿಮಾ ಮಂದಿಗೂ ಅಪಾರವಾದ ನಂಟು. ಅದಕ್ಕೆ ಕಾರಣ ಅದರ ಗುಣಮಟ್ಟ. ಬೆಂಗಳೂರು, ಹುಬ್ಬಳ್ಳಿ, ಮಂಗಳೂರಿನಲ್ಲಿ ಅದು ಶಾಖೆಗಳನ್ನು ಹೊಂದಿದ್ದು, ಗ್ರಾಹಕರ ಪಾಲಿಗೆ ಮನೆ ಮಾತು. ನೂತನ ಶಾಖೆಯ ಆರಂಭದ ನೆನಪಿಗಾಗಿ ಅಂದು ಒಂದು ರೂಪಾಯಿಗೆ ಒಂದು ಹೋಳಿಗೆ ಮಾರಾಟ ‌ಮಾಡಿದ್ದು ವಿಶೇಷವಾಗಿತ್ತು.

error: Content is protected !!