Categories
ಸಿನಿ ಸುದ್ದಿ

ಅಂತಹ ಸ್ಥಿತಿ ಯಾರಿಗೂ ಬೇಡ, ಅದನ್ನೆಲ್ಲ ಈಗ ನೆನಪಿಸಿಕೊಳ್ಳುವುದಕ್ಕೂ ನಂಗೆ ಕಷ್ಟ – ಹೀಗಂತ ಕನ್ನಡದ ಆ ಉದಯೋನ್ಮುಖ ನಟಿ ಹೇಳಿದ್ದೇಕೆ ಗೊತ್ತಾ?

ಹೆಸರು ನಿಖಿತಾ ಸ್ವಾಮಿ. ಕನ್ನಡದ ಉದಯೋನ್ಮುಖ ನಟಿ. ವೃತ್ತಿಯಲ್ಲಿ ಸಾಫ್ಟವೇರ್‌ ಎಂಜಿನಿಯರ್‌ ಆಗಿದ್ದವರು. ಸಿನಿಮಾ ಮೇಲಿನ ಆಸಕ್ತಿಯಿಂದ ಕೈತುಂಬಾ ಸಂಬಳ ಸಿಕ್ತಿದ್ದ ಆ ಕೆಲಸಕ್ಕೆ ಗುಡ್‌ ಬೈ ಹೇಳಿ ಗಾಂಧಿ ನಗರಕ್ಕೆ ಎಂಟ್ರಿ ಆಗಿದ್ದಾರೆ. ʼಸದ್ದುʼ ಎನ್ನುವುದು ಇವರ ಚೊಚ್ಚಲ ಮೂವೀ. ಕಳೆದ ಎರಡು ವರ್ಷಗಳ ಹಿಂದೆ, ಅಂದ್ರೆ ಕೊರೋನಾ ಬರೋದಿಕ್ಕಿಂತ ಮುಂಚೆ ಈ ಚಿತ್ರ ತೆರೆ ಕಂಡಿತ್ತಾದರೂ, ನಿರೀಕ್ಷೆಯಷ್ಟು ಈ ಸಿನಿಮಾಕ್ಕೆ ಸಕ್ಸಸ್‌ ಸಿಗಲಿಲ್ಲ. ಆಗ ಬಂದ ರಾಶಿ ರಾಶಿ ಚಿತ್ರಗಳ ನಡುವೆ ʼಸದ್ದುʼ ಸದ್ದೇ ಮಾಡಲಿಲ್ಲ. ಹಾಗಂತ, ನಿಖಿತಾ ಸ್ವಾಮಿ, ಅವರಿಗೇನು ನಷ್ಟ ಆಗಲಿಲ್ಲ. ಆ ಸಿನಿಮಾ ಸದ್ದು ಮಾಡದಿದ್ದರೂ, ಅವರು ಮಾತ್ರ ಸ್ಯಾಂಡಲ್‌ವುಡ್‌ ನಲ್ಲಿ ಸಖತ್‌ ಸಂಡ್‌ ಮಾಡಿದರು. ಆ ಸಿನಿಮಾ ಬಂದು ಹೋದ ಮೇಲೆ ಅವರಿಗೆ ಸಾಕಷ್ಟು ಸಿನಿಮಾ ಸಿಕ್ಕವು. ಕನ್ನಡದ ಜತೆಗೆ ತೆಲುಗಿಗೂ ಹೆಜ್ಜೆ ಹಾಕಿದರು. ಸದ್ಯಕ್ಕೀಗ ಅವರ ಕೈಯಲ್ಲಿ ಏಳೆಂಟು ಸಿನಿಮಾ ಇವೆ. ಅವೆಲ್ಲವೂ ಈಗ ರಿಲೀಸ್‌ ಗೆ ರೆಡಿ ಆಗುತ್ತಿವೆ. ಈ ಪೈಕಿ ಈ ವಾರ ʼ ಇದು ಆಕಾಶವಾಣಿ ಬೆಂಗಳೂರು ನಿಲಯʼ ಎನ್ನುವ ಹೆಸರಿನ ಚಿತ್ರ ತೆರೆ ಕಾಣುತ್ತಿದೆ.

ʼಆಕಾಶವಾಣಿ ಬೆಂಗಳೂರು ನಿಲಯʼ ಎನ್ನುವ ಚಿತ್ರದ ಶೀರ್ಷಿಕೆಯೇ ವಿಭಿನ್ನ. ಯಾಕಂದ್ರೆ ʼಆಕಾಶವಾಣಿ ಬೆಂಗಳೂರು ನಿಲಯʼ ಎನ್ನುವ ಪದವನ್ನು ನೀವೆಲ್ಲ ಅದೆಷ್ಟು ಸಲ ಕೇಳಿದ್ದೀರೋ ಗೊತ್ತಿಲ್ಲ. ಸದಾ ರೇಡಿಯೋದಲ್ಲಿ ಇದು ಅನುರಣಿಸುತ್ತಲೇ ಇರುತ್ತದೆ. ಅದೇ ಹೆಸರಲ್ಲಿ ಈ ಸಿನಿಮಾ ರೆಡಿಯಾಗಿ ರಿಲೀಸ್‌ ಆಗುತ್ತಿದೆ. ಹಾಗೆಂದಾಕ್ಷಣ ಇದು ಆಕಾಶವಾಣಿ ಬೆಂಗಳೂರು ನಿಲಯಕ್ಕೆ ಸಂಬಂಧಿಸಿದ ಚಿತ್ರವಲ್ಲ. ಚಿತ್ರಕ್ಕೆ ಕಥೆ ಬರೆದ ವಿಜಯ್‌ ಕುಮಾರ್‌ ಅವರ ಪ್ರಕಾರ, ಈ ಚಿತ್ರದ ಶೀರ್ಷಿಕೆಗೂ, ಆಕಾಶಾವಾಣಿ ಬೆಂಗಳೂರು ನಿಲಯಕ್ಕೂ ಯಾವುದೇ ಕನೆಕ್ಷನ್‌ ಇಲ್ಲ. ಚಿತ್ರದ ನಾಯಕನ ಹೆಸರು ಆಕಾಶ, ಹಾಗೆಯೇ ನಾಯಕಿ ಹೆಸರು ವಾಣಿ. ಜತೆಗೆ ಅವರ ನಿವಾಸ ಬೆಂಗಳೂರು ನಿಲಯ. ಇದೆಲ್ಲವೂ ಇಲ್ಲಿ ಒಟ್ಟಾಗಿ ಆಕಾಶವಾಣಿ ಬೆಂಗಳೂರು ನಿಲಯ ಎನ್ನುವುದಾಗಿದೆ ಅನ್ನೋದು ಅವರ ಸ್ಪಷನೆಯ ಮಾತು. ಅಂದ ಹಾಗೆ, ಇಲ್ಲಿ ವಾಣಿಯಾಗಿ ನಿಮ್ಮ ಮುಂದೆ ಬರುತ್ತಿದ್ದಾರೆ ಗ್ಲಾಮರಸ್‌ ನಟಿ ನಿಖಿತಾ ಸ್ವಾಮಿ.

ʼ ಪಾತ್ರದ ಹೆಸರು ವಾಣಿ ಅಂತ. ಹೆಸರು ಒಂಥರ ಹಳೆಯ ಶೈಲಿಯಲ್ಲಿದ್ದರೂ, ಆಕೆ ಪಕ್ಕಾ ಮಾರ್ಡನ್‌ ಹುಡುಗಿ. ಇದು ಮಹಿಳಾ ಪ್ರದಾನ ಚಿತ್ರ. ವಾಣಿ ಬಾಲ್ಯದಲ್ಲಿ ಇದ್ದಾಗಲೇ ತನ್ನ ಪೋಷಕರನ್ನು ಕಳೆದುಕೊಳ್ಳುತ್ತಾಳೆ. ತುಂಬಾ ಕಷ್ಟ ಅನುಭವಿಸ್ತಾಳೆ. ಅವಳು ಸ್ವಂತ ದುಡಿಯಬೇಕಾಗುತ್ತದೆ. ಇದೇಕಾರಣಕ್ಕೆ ಆಕೆ ಹಳ್ಳಿ ಬಿಟ್ಟು ಬೆಂಗಳೂರಿಗೆ ಬರ್ತಾಳೆ. ಲೈಫ್‌ ಅನ್ನು ಚಾಲೆಂಜ್‌ ಆಗಿ ತೆಗೆದುಕೊಳ್ತಾಳೆ. ಹಾಗಂತ ಆಕೆ, ಸಮಾಜದಲ್ಲಿ ಯಾವುದೇ ತಪ್ಪು ದಾರಿಗೆ ಹೋಗೋದಿಲ್ಲ. ಬದಲಿಗೆ ಸಮಾಜವೇ ಮೆಚ್ಚುಗೆ ಹೇಳುವಂತ ಸ್ವಂತ ದುಡಿಮೆಗೆ ಮುಂದಾಗ್ತಾಳೆ, ಅಲ್ಲಿಂದ ಆಕೆಯ ಬದುಕಿನ ಪಯಣ ಏನು ಅಂತ ಈ ಚಿತ್ರದಲ್ಲಿ ತೋರಿಸಲಾಗಿದೆʼ ಎನ್ನುವ ಮೂಲಕ ಚಿತ್ರದಲ್ಲಿನ ಪಾತ್ರ ಬಗೆಯನ್ನು ವಿವರಿಸುತ್ತಾರೆ ನಟಿ ನಿಖಿತಾ ಸ್ವಾಮಿ.

ಕೊರೋನಾ ಅಂತ ಸಿನಿಮಾ ಚಟುವಟಿಕೆಗಳಲ್ಲಿ ಇಲ್ಲದೆ ಎರಡು ವರ್ಷಗಳೇ ಆಗಿದ್ದವು. ಮೊದಲನೇ ಅಲೆ ಮುಗಿದು ಇನ್ನೇನು ಸಿನಿಮಾ ಇಂಡಸ್ಟ್ರಿ ಸರಿ ದಾರಿಗೆ ಬಂತು ಅನ್ನೋ ಹೊತ್ತಿಗೆ ಮತ್ತೆ ಎರಡನೇ ಅಲೆ ಶುರುವಾಯಿತು. ಅಲ್ಲಿಂದ ಲಾಕ್‌ ಡೌನ್‌ ಬಂತು. ಒಂದಷ್ಟು ದಿನಗಳ ನಂತರ ಪರಿಸ್ಥಿತಿ ಒಂದಷ್ಟು ತಿಳಿಯಾಗುವ ಹಂತಕ್ಕೆ ಬಂತು. ಆಗಲೇʼ ಆಕಾಶವಾಣಿ ಬೆಂಗಳೂರು ನಿಲಯʼ ಚಿತ್ರಕ್ಕೆ ಚಿತ್ರೀಕರಣ ನಡೆದಿದ್ದು. ʼ ಹೌದು, ಇದೊಂದು ಸ್ಪೆಷಲ್‌ ಅಂತಲೇ ಹೇಳಬಹುದು. ಯಾಕಂದ್ರೆ ಕೊರೋನಾ ಸಮಯದಲ್ಲಿ ನಾವೆಲ್ಲ ಹೋರ ಹೋಗುವುದಕ್ಕೂ ಭಯ ಇದ್ದ ದಿನಗಳು. ಆ ಸಮಯದಲ್ಲಿ ಈ ಸಿನಿಮಾಕ್ಕೆ ಶೂಟಿಂಗ್‌ ಶುರುವಾಯ್ತು. ಹೇಗಪ್ಪಾ ಅಂತ ಭಯ ಇತ್ತು. ಆದ್ರೆ ನಮ್ಮ ಚಿತ್ರದ ಕಥೆ ಬರೆದ ವಿಜಯ್‌ ಕುಮಾರ್‌ ಸರ್‌ ಅವರ ಸ್ವಂತ ಊರು ನೊಣವಿನಕೆರೆ ಅಂತ ಇದೆ. ಅಲ್ಲಿನ ಒಂದು ಮನೆಯಲ್ಲಿ ಈ ಚಿತ್ರದ ಬಹುತೇಕ ಚಿತ್ರೀಕರಣ ನಡೆದಿದ್ದು. ಹಾಗಾಗಿ ನಮಗೆ ಅದೆಲ್ಲ ತುಂಬಾ ಕಂಫರ್ಟ್‌ ಅಂತೆನಿಸಿತುʼ ಎನ್ನುವುದರ ಮೂಲಕ ʼಇದು ಆಕಾಶವಾಣಿ ಬೆಂಗಳೂರು ನಿಲಯʼ ಚಿತ್ರದ ಚಿತ್ರೀಕರಣದ ಅನುಭವವನ್ನು ತೆರೆದಿಟ್ಟರು ನಟಿ ನಿಖಿತಾ ಸ್ವಾಮಿ.

ʼಜಲ್ಲಿಕಟ್ಟುʼ,ʼಟಕಿಲಾʼ, ʼಅದೊಂದು ದಿನʼ ಚಿತ್ರಗಳ ಜತೆಗೆ ತೆಲುಗಿನಲ್ಲೂ ಒಂದು ಚಿತ್ರದಲ್ಲಿ ನಿಖಿತಾ ಬಣ್ಣ ಹಚ್ಚಿದ್ದಾರೆ. ಎಂಟ್ರಿಯಲ್ಲಿಯೇ ಸಾಕಷ್ಟು ಬ್ಯುಸಿ ಇದ್ದಾರೆ. ಇನ್ನೊಂದು ವಿಶೇಷ ಅಂದ್ರೆ ಅವರು ನಾಯಕಿಯಾಗಿ ಕಾಣಿಸಿಕೊಳ್ಳುತ್ತಿರುವ ಎಲ್ಲಾ ಸಿನಿಮಾಗಳು ಒಂದಲ್ಲೊಂದು ರೀತಿ ಮಹಿಳಾ ಪ್ರಧಾನ ಚಿತ್ರಗಳೇ ಅಂತೆ. ʼ ಇದೆಲ್ಲ ಹೇಗೋ ಏನೋ ನಂಗೂ ಅಚ್ಚರಿ ಎನಿಸುತ್ತೆ. ಸಿಕ್ಕಿರುವ ಸಿನಿಮಾಗಳೆಲ್ಲವೂ ಒಂದ್ರೀತಿ ಮಹಿಳಾ ಪ್ರಧಾನ ಚಿತ್ರಗಳೆ. ಇದು ನನ್ನ ಪಾಲಿಗೆ ತುಂಬಾ ಸ್ಪೆಷಲ್.‌ ಒಬ್ಬ ನಟಿಗೆ ಇಂತಹ ಅವಕಾಶಗಳು ಬೇಕು. ನಾನು ಸಿನಿಮಾ ಜಗತ್ತಿಗೆ ಬರಬೇಕು ಅಂತ ಯೋಚಿಸುತ್ತಿದ್ದಾಗ ಇಂತಹ ಸಿನಿಮಾಗಳು ಸಿಕ್ಕರೆ ಚೆನ್ನಾಗಿರುತ್ತೆ ಅಂತಂದುಕೊಡಿದ್ದು ಹೌದು. ಅದೃಷ್ಟವೇ ಎನ್ನುವ ಹಾಗೆ ನಾನು ಬಯಸಿದಂತೆಯೇ ಆಗಿದೆʼ ಎನ್ನುತ್ತಾ ಮುದ್ದಾದ ಮುಖದಲ್ಲಿ ನಗು ಚೆಲ್ಲುತ್ತಾರೆ ಈ ನಟಿ.ಇನ್ನು ಕೊರೋನಾ ನಂತರ ಚಿತ್ರಮಂದಿರಗಳಲ್ಲಿ ಹಂಡ್ರಡ್‌ ಪರ್ಸೆಂಟ್‌ ಸೀಟು ಭರ್ತಿಗೆ ಅವಕಾಶ ಸಿಕ್ಕ ಬೆನ್ನಲೇ ನಿಖಿತಾ ಸ್ವಾಮಿ ಅಭಿನಯದ ʼಆಕಾಶವಾಣಿ ಬೆಂಗಳೂರು ನಿಲಯʼ ತೆರೆ ಕಾಣುತ್ತಿದೆ. ಇದು ನಿಖಿತಾ ಸೇರಿದಂತೆ ಇಡೀ ಚಿತ್ರ ತಂಡಕ್ಕೂ ಖುಷಿ ಕೊಟ್ಟಿದೆ. ಅದೇ ಖುಷಿಯನ್ನು ಹಂಚಿಕೊಳ್ಳುವಾಗ, ಸಂಭ್ರಮದ ಜತೆಗೆ ನೋವು ಹೊರ ಹಾಕುತ್ತಾರೆ ನಿಖಿತಾ. ಅದಕ್ಕೆ ಕಾರಣ ಕೊರೋನಾ ಅವರ ಬದುಕಿನಲ್ಲೂ ತಂದಿಟ್ಟ ತಲ್ಲಣ.

ʼ ಕೊರೋನಾ ಅನೇಕ ರೀತಿಯಲ್ಲಿ ಪ್ರತಿಯೊಬ್ಬರ ಬದುಕನ್ನು ಕಾಡಿದೆ. ಸಿನಿಮಾ ರಂಗವಂತೂ ತಲ್ಲಣಿಸಿ ಹೋಯಿತು. ಹಾಗೆಯೇ ನನ್ನದೇ ಬದುಕಿನಲ್ಲೂ ಕೊರೋನಾದ ಕಠೋರ ಅನುಭವ ಆಯಿತು. ತಂದೆ ಹುಷಾರಿಲ್ಲದಂತೆ ಆಯಿತು. ಪರೀಕ್ಷೆ ಮಾಡಿಸಿದರೆ, ಕೊರೋನಾ ಪಾಸಿಟಿವ್ ಬಂತು. ಆದಾಗಲೇ ಸಿನಿಮಾ ಕೆಲಸ ಇಲ್ಲದೆ ವರ್ಷಗಳೇ ಆಗಿದ್ದವು. ಕೈಯಲ್ಲಿ ಕಾಸಿಲ್ಲ. ಆ ಸಮಯದಲ್ಲಿ ಅಪ್ಪನನ್ನು ಆಸ್ಪತ್ರೆಗೆ ಸೇರಿಸಿ, ಚಿಕಿತ್ಸೆ ಕೊಡಿಸಿ, ಅವರನ್ನು ಸೇಪ್‌ ಆಗಿ ಮನೆಗೆ ಕರೆದುಕೊಂಡು ಬರುವಷ್ಟರಲ್ಲಿ ಸಾಕಷ್ಟು ದುಡ್ಡು ಖರ್ಚಾಯಿತು. ಹಣದ ವಿಷಯ ಇರಲಿ, ಮಾನಸಿಕವಾಗಿ ಸಾಕಷ್ಟು ಕುಗ್ಗಿ ಹೋದೆವು. ಆ ಸಮಯದಲ್ಲಿ ಅನೇಕ ಸಹಾಯಕ್ಕಾಗಿ ಯಾರನ್ನಾದರೂ ಕೇಳೋಣ ಅಂತೆನಿಸಿದರೂ ಮನಸು ಒಪ್ಪಲಿಲ್ಲ. ನಿಜ ಹೇಳ್ತೀನಿ ಅಂತಹ ಜೀವನ ಯಾರಿಗೂ ಬೇಡ. ಅದನ್ನೆಲ್ಲ ನೆನಪಿಸಿಕೊಳ್ಳುವುದಕ್ಕೂ ನಂಗೆ ಕಷ್ಟ ಆಗ್ತಿದೆ ಎನ್ನುತ್ತಾ ದು:ಖ ನುಂಗಿ ಕೊಂಡು ನಕ್ಕರು ನಿಖಿತಾ ಸ್ವಾಮಿ. ಆದರೂ ಈಗ ತಾವು ನಾಯಕಿ ಆಗಿ ಅಭಿನಯಿಸಿರುವ ಆಕಾಶವಾಣಿ ಬೆಂಗಳೂರು ನಿಲಯ ತೆರೆ ಕಾಣುತ್ತಿರುವುದಕ್ಕೆ ಖುಷಿಯಲಿರುವ ಅವರು, ಪ್ರೇಕ್ಷಕರು ಹೆಚ್ಚಿನ ಸುರಕ್ಷತೆ ತೆಗೆದುಕೊಂಡು ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡುವ ಮೂಲಕ ನಮ್ಮನ್ನೆಲ್ಲ ಬೆಳೆಸಬೇಕು ಎಂದು ವಿನಂತಿಸಿಕೊಂಡರು. ಇದೇ ಶುಕ್ರವಾರ ಈ ಚಿತ್ರ ರಾಜ್ಯದ 100 ಕ್ಕೂ ಹೆಚ್ಚು ಚಿತ್ರ ಮಂದಿರಗಳಲ್ಲಿ ಗ್ರಾಂಡ್‌ ಆಗಿ ತೆರೆ ಕಾಣುತ್ತಿದೆ.

  • ಎಂಟರ್‌ಟೈನ್‌ ಮೆಂಟ್‌ ಬ್ಯುರೋ ಸಿನಿ ಲಹರಿ
Categories
ಸಿನಿ ಸುದ್ದಿ

ಅಂದು `ಸಲಗ’ ಮುಹೂರ್ತಕ್ಕೆ ಸುದೀಪ್ ಗೆಸ್ಟ್ : ಇಂದು ಕೋಟಿಗೊಬ್ಬನ ಜೊತೆ `ಸಲಗ’ ಫೈಟ್ !

ಸ್ಯಾಂಡಲ್‌ವುಡ್ ಬಚ್ಚನ್ ಹಾಗೂ ಜಾಕ್ಸನ್ ನಡುವೆ ಬಾಕ್ಸ್ ಆಫೀಸ್ ಅಂಗಳದಲ್ಲಿ ಜಟಾಪಟಿ ನಡೆಯುತ್ತೆ !? ಸ್ಟಾರ್ ವಾರ್ ಜೊತೆಗೆ ಫ್ಯಾನ್ಸ್ ವಾರ್ ಕೂಡ ಧಗಧಗಿಸುತ್ತೆ !? ಎನ್ನುವ ಬೆಂಕಿ ಸಮಾಚಾರ ಈಗಾಗಲೇ ಗಾಂಧಿನಗರದಲ್ಲಿ ಹೊಗೆಯಾಡ್ತಿದೆ. ಈ ಮಧ್ಯೆಯೇ ಅಂದು ಸಲಗ' ಮುಹೂರ್ತಕ್ಕೆ ಸುದೀಪ್ ಗೆಸ್ಟ್, ಇಂದು ಕೋಟಿಗೊಬ್ಬನ ಜೊತೆಸಲಗ’ ಫೈಟ್ ಎನ್ನುತ್ತಾ ಕೆಲವರು ಕುಹುಕವಾಡ್ತಿದ್ದಾರೆ ಅಟ್ ದಿ ಸೇಮ್ ಟೈಮ್ ಕಡ್ಡಿ ಅಲ್ಲಾಡ್ಸೋ ಕೆಲ್ಸ ಮಾಡ್ತಿದ್ದಾರೆ. ಆದರೆ ಅವರಿಗೆ `ಗೋಲ್ಡ್ ಜಿಮ್’ ಕಥೆ ಹಾಗೂ ರಂಗ ಎಸ್‌ಎಸ್‌ಎಲ್‌ಸಿ ಮ್ಯಾಟರ್ ತಿಳಿದಿಲ್ಲ ಅನ್ಸುತ್ತೆ. ಅಥವಾ ತಿಳಿದರೂ ಬೆಂಕಿ ಹಚ್ಚೋದಕ್ಕೆ ನೋಡ್ತಿದ್ದಾರೋ ನಮಗೆ ಗೊತ್ತಿಲ್ಲ. ಯಾವುದಕ್ಕೂ, ಒಮ್ಮೆ ಸಲಗ ಮತ್ತು ಕೋಟಿಗೊಬ್ಬನ ಬಾಂಡೇಜ್ ಬಡಾ ಖಬರ್‌ನ ನೋಡ್‌ಕೊಂಡು ಬರೋಣ.

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಹಾಗೂ ಬ್ಲ್ಯಾಕ್ ಕೋಬ್ರಾ ದುನಿಯಾ ವಿಜಯ್ ಇಬ್ಬರು ಥಿಯೇಟರ್ ಅಂಗಳದಲ್ಲಿ ಮುಖಾಮುಖಿಯಾಗ್ತಿದ್ದಾರೆ. ಕೋಟಿಗೊಬ್ಬನಾಗಿ ಕಿಚ್ಚ ಕಣಕ್ಕಿಳಿದರೆ, ಸಲಗ ನಡೆದಿದ್ದೇ ದಾರಿ ಎನ್ನುತ್ತಾ ವಿಜಯ್ ಫೀಲ್ಡಿಗಿಳಿಯುತ್ತಿದ್ದಾರೆ. ಆಯುಧ ಪೂಜೆಯ ದಿನದಂದು ಒಂದೇ ಅಖಾಡದಲ್ಲಿ ಗಂಧದಗುಡಿಯ ಇಬ್ಬರು ಸೂಪರ್‌ಸ್ಟಾರ್‌ಗಳ ಅಟ್ಟಹಾಸ ಶುರುವಾಗಲಿದೆ. ಸಂತೋಷ್ ಚಿತ್ರಮಂದಿರದಲ್ಲಿ ಸಲಗ ಅಬ್ಬರಿಸಿ ಬೊಬ್ಬಿರಿದರೆ, ನರ್ತಕಿ ಥಿಯೇಟರ್‌ನಲ್ಲಿ ಕೋಟಿಗೊಬ್ಬ-೩ ಚಿತ್ರ ಧಗಧಗಿಸಲಿದೆ. ಒಂದೇ ದಿನ ಇಬ್ಬರು ನಟರು ಅಖಾಡಕ್ಕೆ ಇಳಿಯೋದ್ರಿಂದ ಗಾಂಧಿನಗರದ ರಂಗೇರಲಿದೆ. ಸ್ಟಾರ್‌ನಟರುಗಳ ಅಭಿಮಾನಿ ದೇವರುಗಳು ಥಿಯೇಟರ್ ಮುಂದೆ ಹಬ್ಬ ಅಲ್ಲ ಊರಬ್ಬ ಮಾಡೋದಕ್ಕೆ ಸಜ್ಜಾದಂತೆ ಸಕಲ ತಯ್ಯಾರಿ ಮಾಡಿಕೊಳ್ತಿದ್ದಾರೆ. ಇಂತಹ ಸಂತೋಷದ ಕ್ಷಣದಲ್ಲಿ ಗಾಂಧಿನಗರದ ಕೆಲವು ಮಂದಿ ಅಂದು ಸಲಗ' ಮುಹೂರ್ತಕ್ಕೆ ಸುದೀಪ್ ಗೆಸ್ಟ್ ಆಗಿದ್ದರು. ಆದರೆ, ಇವತ್ತೇನಾಯ್ತುಸಲಗ’ನೊಟ್ಟಿಗೆ ಕೋಟಿಗೊಬ್ಬ ಸೆಣಸಾಡಬೇಕಿದೆ ಎಂದು ಮಾತನಾಡಿಕೊಳ್ತಿದ್ದಾರೆ.

ಉರಿಯೋ ಬೆಂಕಿಗೆ ತುಪ್ಪ ಸುರಿಯುವವರು ನಮ್ಮ ಮಧ್ಯೆ ತುಂಬಾ ಜನ ಇರುತ್ತಾರೆ. ದುಷ್ಮನ್ ಕಹಾ ಹೈ ಅಂದ್ರೆ ಬಗಲ್ ಮೈ ಎನ್ನುವಂತೆ ಇಬ್ಬರು ಮಧ್ಯೆ ಕಡ್ಡಿಗೀರಿ ಸಿಗರೇಟ್ ಹಚ್ಚಿಕೊಂಡ್ರೇನೇ ಕೆಲವರಿಗೆ ಹಾರ್ಟ್-ಲಿವರ್ ಬೆಚ್ಚಗಾಗೋದು. ಅದೇ ಕೆಲಸವನ್ನು ಮುಂದುವರೆಸಿರುವ ಕಿಡಿಗೇಡಿಗಳು ಬಚ್ಚನ್ ಮತ್ತು ಜಾಕ್ಸನ್ ಮಧ್ಯೆ ತಂದಿಡುವುದಕ್ಕೆ ನೋಡ್ತಿದ್ದಾರೆ. ನೋಡಿ ಸಾರ್ ನೀವೇ ಹೋಗಿ ಸಲಗ' ಚಿತ್ರಕ್ಕೆ ಫಸ್ಟ್ ಕ್ಲಾಪ್ ಮಾಡಿ ಬಂದ್ರಿ. ಇವತ್ತು ಆಸಲಗ’ನೇ ನಿಮಗೆ ನೆಕ್ ಟು ನೆಕ್ ಫೈಟ್ ಕೊಡ್ತಿದ್ದಾನೆ. ನಿಮಗೋಸ್ಕರ ಆದರೂ ರಿಲೀಸ್ ಡೇಟ್ ಮುಂದಕ್ಕೆ ಹಾಕಿಕೊಳ್ಳಬಹುದಿತ್ತು ಆದರೆ ಆ `ಸಲಗ’ ಹಂಗ್ ಮಾಡಲಿಲ್ಲ ನೋಡಿ ಎನ್ನುತ್ತಾ ಸುದೀಪ್ ಸಿಡಿದೇಳುವಂತೆ ಮಾಡ್ತಿದ್ದಾರೆ. ಆದರೆ, ಕಿಚ್ಚನಿಗೆ ವಾಸ್ತವ ಏನು ಎನ್ನುವುದರ ಅರಿವಿದೆ. ಕಡ್ಡಿಗೀರುವವರ ಕಥೆ ಏನು ಎನ್ನುವುದು ತಿಳಿದಿದೆ. ಜೊತೆಗೆ ವಿಜಯ್ ಜೊತೆಗಿನ ಗೋಲ್ಡ್ ಜಿಮ್ ದಿನಗಳ ನೆನಪಿದೆ.

ಕೋಟಿಗೊಬ್ಬನ ಮುಂದೆ ಸಲಗ'ನ ಬಗ್ಗೆ ಹಾಕಿಕೊಡುವವರು ಇರುವಂತೆ,ಸಲಗ’ನ ಮುಂದೆ ಕೋಟಿಗೊಬ್ಬನ ಬಗ್ಗೆ ಹಾಕಿಕೊಡುವವರು ಇದ್ದೇ ಇರ್ತಾರೆ. ಅಲ್ಲಾ, ಮುಹೂರ್ತಕ್ಕೆ ಬಂದು ಒಳ್ಳೆಯದಾಗಲಿ ಅಂತ ಹಾರೈಸಿದರು, ರಿಲೀಸ್ ಡೇಟ್‌ನ ಅನೌನ್ಸ್ ಮಾಡಿದಾಗ್ಲೂ ಸೋಷಿಯಲ್ ಮೀಡಿಯಾದಲ್ಲಿ ಶುಭಕೋರಿದರು. ಅವರಿಗೆ ಅಷ್ಟೆಲ್ಲಾ ಒಳ್ಳೆಯ ಮನಸ್ಸಿದೆಯಲ್ಲವಾ, ನಿರ್ಮಾಪಕ ಸೂರಪ್ಪ ಬಾಬು ಅವರ ಹತ್ತಿರ ಮಾತನಾಡಿ ಕೋಟಿಗೊಬ್ಬ-೩ ಬಿಡುಗಡೆ ದಿನಾಂಕವನ್ನು ಮುಂದಕ್ಕೆ ಹಾಕಿಸಬಹುದಿತ್ತು. ಆದರೆ, ಮಾಣಿಕ್ಯ ಹಂಗ್ ಮಾಡಲಿಲ್ಲ ನೋಡಿ ವಿಜಿಯಣ್ಣ ಅಂತ ಬ್ಲ್ಯಾಕ್ ಕೋಬ್ರಾ ಮುಂದೆ ಹೇಳಿಕೊಂಡಿರ್ತಾರೆ. ಆಗ ವಿಜಯ್ ಅವರು ʼರಂಗ ಎಸ್‌ಎಸ್‌ಎಲ್‌ಸಿʼ ದಿನಗಳನ್ನು ಕಣ್ಮುಂದೆ ತಂದುಕೊಂಡಿರ‍್ತಾರೆ. ಹೀಗಾಗಿ ಏನು ರಿಯಾಕ್ಟ್ ಮಾಡಿರಲಿಕ್ಕೆ ಸಾಧ್ಯವಿಲ್ಲ ಅನ್ಸುತ್ತೆ.

ʼಜಯಮ್ಮನ ಮಗʼನ ಸಿನಿಮಾಜರ್ನಿ ಬಗ್ಗೆ ತಿಳಿದವರಿಗೆ ರಂಗಎಸ್‌ಎಸ್‌ಎಲ್‌ಸಿ ಪಾತ್ರ ಏನು ಅಂತ ಗೊತ್ತಿರುತ್ತೆ. ರಂಗಎಸ್‌ಎಸ್‌ಎಲ್‌ಸಿಯೇ ದುನಿಯಾ ವಿಜಯ್ ಅವರು ಬಣ್ಣ ಹಚ್ಚಿದ ಮೊದಲ ಸಿನಿಮಾ. ಅಲ್ಲಿಂದ ಸಾಗಿಬಂದು ಇವತ್ತು ಓನ್ ಬ್ರ್ಯಾಂಡ್ ಆಗಿದ್ದಾರೆ. ಗಂಧದಗುಡಿಯಲ್ಲಿ ಭದ್ರಬುನಾದಿ ಹಾಕಿಕೊಂಡಿದ್ದಾರೆ. ಸೂಪರ್‌ಸ್ಟಾರ್ ಪಟ್ಟಕ್ಕೇರಿದ್ದಾರೆ. ಕರುನಾಡಿನ ತುಂಬೆಲ್ಲಾ ಕೋಟ್ಯಾಂತರ ಅಭಿಮಾನಿ ಬಳಗ ಸಂಪಾದನೆ ಮಾಡಿದ್ದಾರೆ. ಹದಿನೆಂಟು ವರ್ಷಗಳ ಸಿನಿಮಾ ಜರ್ನಿಯಲ್ಲಿ ಇದೇ ಮೊದಲ ಭಾರಿಗೆ ಡೈರೆಕ್ಟರ್ ಹ್ಯಾಟ್ ತೊಟ್ಟು `ಸಲಗ’ ಸಿನಿಮಾ ನಿರ್ದೇಶಿಸಿದ್ದಾರೆ. ಡೈರೆಕ್ಟರ್ ಆದ ಖುಷಿ-ಸಂತೋಷ ವಿಜಯ್‌ಗೆಷ್ಟು ಇದೆಯೋ ಅಷ್ಟೇ ಖುಷಿ-ಸಂತೋಷ ಸುದೀಪ್ ಅವರಿಗೂ ಇದೆ. ಯಾಕಂದ್ರೆ, ವಿಜಯ್‌ರನ್ನು ಸುದೀಪ್ ಆಕ್ಟರ್ ಅಲ್ಲ ಫೈಟರ್ ಆದ ದಿನಗಳಿಂದಲೂ ನೋಡಿದ್ದಾರೆ ಮಾತ್ರವಲ್ಲ ಫೈಟರ್ ಆಗೋದಕ್ಕೂ ಮುನ್ನಾ ದಿನಗಳಿಂದಲೂ ಕಂಡಿದ್ದಾರೆ.

ಹೌದು, ದುನಿಯಾ ವಿಜಯ್ ಆಕ್ಟರ್ ಆಗೋದಕ್ಕೂ ಮುನ್ನ ಫೈಟರ್. ಫೈಟರ್ ಆಗಿ ಫೀಲ್ಡಿಗಿಳಿಯೋದಕ್ಕೆ ಮುನ್ನ ಗೋಲ್ಡ್' ಜಿಮ್‌ನಲ್ಲಿ ಬೆವರಿಳಿಸುತ್ತಿದ್ದರು. ಅಲ್ಲಿಗೆ, ಸುದೀಪ್ ಟೈಂಪಾಸ್‌ಗೋಸ್ಕರ ವರ್ಕೌಟ್ ಮಾಡೋದಕ್ಕೆ ಹೋಗ್ತಿದ್ದರಂತೆ. ಈ ಸಂಗತಿಯನ್ನು ಸ್ವತಃ ಸುದೀಪ್ ಅವರೇಸಲಗ’ ಸಿನಿಮಾದ ಮುಹೂರ್ತದ ಸಂದರ್ಭದಲ್ಲಿ ಬಿಚ್ಚಿಟ್ಟಿದ್ದರು. ವಿಜಯ್ ನಡೆದುಬಂದ ಹಾದಿಯೇ ಅಚ್ಚರಿ ಮತ್ತು ವಿಶೇಷ. ಜೀವನದಲ್ಲಿ ಸಾಕಷ್ಟು ಏಳು-ಬೀಳುಗಳನ್ನು ಕಂಡು ಸ್ಟ್ರಗಲ್ ಮಾಡಿಕೊಂಡೇ ಇಲ್ಲಿವರೆಗೆ ತಲುಪಿರುವ ನಟ ವಿಜಯ್‌ಗೆ ಒಳ್ಳೆಯದಾಗಬೇಕು. ಡೈರೆಕ್ಷನ್‌ಗೆ ಇಳಿದಿರುವುದು ನಿಜಕ್ಕೂ ನನಗೆ ಸಂತಸ ತಂದಿದೆ. ಪ್ರತಿಯೊಬ್ಬ ಕಲಾವಿದನಲ್ಲೂ ಒಬ್ಬ ನಿರ್ದೇಶಕ ಇರ್ತಾನೆ, ಅದರಂತೇ, ಪ್ರತಿಯೊಬ್ಬ ನಿರ್ದೇಶಕನಲ್ಲೂ ಒಬ್ಬ ಕಲಾವಿದ ಇರ್ತಾನೆ. ಅವನಿಗೆ ಅವನೇ ಪ್ರೂ ಮಾಡಿಕೊಳ್ಳಬೇಕು ಈಗ ವಿಜಯ್ ಟೈಮ್. ಹೀಗಂತ ಹೇಳಿಕೊಂಡ ಕಿಚ್ಚ `೨೦೦೦’ ರೂಪಾಯಿ ಕಾಣಿಕೆ ಕೊಟ್ಟು ಇದು ಕೋಟಿಯಾಗಲಿ ಅಂತ ಹರಸಿ ಬಂದಿದ್ದರು.

ನಿಜಕ್ಕೂ ಸಲಗ' ಕೋಟಿ ಕೋಟಿ ಕೊಳ್ಳೆಹೊಡೆಯೋದ್ರಲ್ಲಿ ನೋ ಡೌಟ್. ಯಾಕಂದ್ರೆ, ಘೀಳಿಡೋದಕ್ಕೆ ರೆಡಿಯಾಗಿರುವ ಸಲಗ ಕ್ರೇಜ್ ಜೋರಾಗಿದೆ. ಈಗಾಗಲೇ ಹಲವರುಸಲಗ’ ಭವಿಷ್ಯ ನುಡಿದ್ದಾರೆ. ಲವ್-ಆಕ್ಷನ್-ರೌಡಿಸಂ-ಹಾಸ್ಯ ಹೀಗೆ ಒಂದೊಳ್ಳೆ ಮಾಸ್ ಎಂಟರ್‌ಟೈನರ್ ಒಂಟಿಸಲಗ ಪ್ರೇಕ್ಷಕರಿಗೆ ಹಬ್ಬದೂಟ ಬಡಿಸೋದಕ್ಕೆ ಒಂಟಿಕಾಲಿನಲ್ಲಿಯೇ ನಿಂತಿದೆ. ಅದ್ದೂರಿಯಾಗಿಯೇ ತೆರೆಮೇಲೆ ತರೋದಕ್ಕೆ ನಿರ್ಮಾಪಕ ಕೆ.ಪಿ ಶ್ರೀಕಾಂತ್ ಸಕಲ ತಯ್ಯಾರಿ ಮಾಡಿಕೊಂಡಿದ್ದಾರೆ. ಅದರಂತೇ, ನಿರ್ಮಾಪಕ ಸೂರಪ್ಪ ಬಾಬು ಕೂಡ ಕೋಟಿಗೊಬ್ಬ-೩' ಚಿತ್ರವನ್ನು ಗ್ರ್ಯಾಂಡ್ ಆಗಿ ಬಿಡುಗಡೆ ಮಾಡೋದಕ್ಕೆ ಮುಂದಾಗಿದ್ದಾರೆ. ಇದೇ ಅಕ್ಟೋಬರ್ ೧೪ರಂದುಸಲಗ’ ಹಾಗೂ ಕೋಟಿಗೊಬ್ಬ-೩ ಚಿತ್ರದ ದರ್ಶನವಾಗಲಿದೆ. ಅಷ್ಟಕ್ಕೂ, ಎರಡು ಸಿನಿಮಾಗಳು ಒಟ್ಟಿಗೆ ಲಗ್ಗೆ ಇಡುವುದಕ್ಕೆ ಕಾರಣ ಈ ಎರಡು ಚಿತ್ರಗಳ ನಿರ್ಮಾಪಕರ ಅಭಿಪ್ರಾಯವೇ ಹೊರೆತು ಇದರಲ್ಲಿ ಸುದೀಪ್ ಹಾಗೂ ವಿಜಯ್ ಅವರ ಪಾತ್ರವೇನಿಲ್ಲ.

ಅನ್ನದಾತರ ನಿರ್ಣಯ ಕೈಗೊಂಡ ಮೇಲೆ ಸ್ಟಾರ್‌ಗಳು ಹೂಃ ಎನ್ನಬೇಕಾಗುತ್ತದೆ. ಅದರಂತೇ, ಸುದೀಪ್ ಹಾಗೂ ವಿಜಯ್ ಅವರವರ ಸಿನಿಮಾ ನಿರ್ಮಾಪಕರುಗಳ ಚಿತ್ರ ಬಿಡುಗಡೆಯ ದಿನಾಂಕಕ್ಕೆ ತಲೆಬಾಗಿದ್ದಾರೆ. ಹೀಗಾಗಿ, ಇವರಿಬ್ಬರ ನಡುವೆ ಸ್ಟಾರ್‌ವಾರ್ ಪ್ರಸಂಗ ಬರುವುದಿಲ್ಲ ಆದರೆ ಗಾಂಧಿನಗರದ ಮಂದಿ ಮಾತ್ರ ಇದನ್ನು ಸ್ಟಾರ್‌ವಾರ್ ಅಂತಲೇ ಕರೆಯುತ್ತಿದ್ದಾರೆ. ಸ್ಟಾರ್‌ವಾರ್ ನಡೆಯಲಿದೆ ಅಂತ ಭವಿಷ್ಯ ನುಡಿಯುತ್ತಿದ್ದಾರೆ. ಅಷ್ಟಕ್ಕೂ, ಆಯುಧ ಪೂಜೆಯ ದಿನದಂದು ಅದೇನ್ ಆಗಲಿದೆ ಅನ್ನೋದನ್ನು ಕಾದುನೋಡಬೇಕು ಅಷ್ಟೇ. ಆದರೆ, ಒಂದು ನೆನಪಿರಲಿ ಹೆಬ್ಬುಲಿ ಹಾಗೂ ಕರಿಚಿರತೆಯ ಮಧ್ಯೆ ಒಂದೊಳ್ಳೆ ಬಾಂಡೇಜ್ ಇದೆ. ಹದಿನೆಂಟು ವರ್ಷದ ಸ್ನೇಹವಿದೆ. ಹೀಗಾಗಿಯೇ, ಸುದೀಪ್ ವಿಜಯ್ ಚಿತ್ರಕ್ಕೆ ಶುಭಕೋರಿರುವುದು. ವಿಜಯ್ ಕೂಡ ಇದು ಸಹೋದರರ ಸವಾಲ್ ಅಲ್ಲ ಇದು ಸಹೋದರರ ಪ್ರೀತಿ ಎಂದು ಬಣ್ಣಿಸಿರುವುದು.

  • ವಿಶಾಲಾಕ್ಷಿ, ಎಂಟರ್‌ಟೈನ್ಮೆಂಟ್ ಬ್ಯೂರೋ ಸಿನಿಲಹರಿ
Categories
ಸಿನಿ ಸುದ್ದಿ

ರಕ್ಷಿತ್‌ ಶೆಟ್ಟಿ ಶುರು ಮಾಡ್ತಿದ್ದಾರೆ ಮತ್ತೊಂದು ಸಿನಿಮಾ ? ಇದು ರಿಚರ್ಡ್‌ ಆಂಟನಿ ಅಲ್ಲ !

ಸಿಂಪಲ್‌ ಸ್ಟಾರ್‌ ರಕ್ಷಿತ್‌ ಶೆಟ್ಟಿ ಅದ್ಯಾಕೋ ಸಿಡಿದೆದಿದ್ದಾರೆ. ಕೊರೋನಾ ಕಾಲದಲ್ಲಿ ಕೈ ಕಟ್ಟಿ ಕುಳಿತಿದ್ದು ಸಾಕೆಂದು ಹೊರ ಬಂದ ಬೆನ್ನಲೇ ಅವರು ಕನ್ನಡದ ಪ್ರತಿಷ್ಠಿತ ಹೊಂಬಾಳೆ ಫಿಲಂಸ್‌ ಬ್ಯಾನರ್‌ ನಲ್ಲಿ ‘ರಿಚರ್ಡ್‌ ಆಂಟನಿ’ ಹೆಸರಿನ ಸಿನಿಮಾ ಅನೌನ್ಸ್‌ ಮಾಡಿದ್ದು ನಿಮಗೆಲ್ಲ ಗೊತ್ತೇ ಇದೆ. ಸದ್ಯಕ್ಕೀಗ ಅದರ ಕೆಲಸದಲ್ಲಿಯೇ ಬ್ಯುಸಿ ಆಗಿದ್ದಾರೆ. ಈ ನಡುವೆಯೇ ಮತ್ತೊಂದು ಚಿತ್ರ ಮಾಡಲು ಹೊರಟ್ರಾ ? ಹಾಗೊಂದು ಅನುಮಾನ ಅವರು ಸೋಮವಾರ ತಮ್ಮ ಟ್ವಿಟರ್‌ ಖಾತೆಯಲ್ಲಿ ಹಾಕಿಕೊಂಡಿರುವ ಸ್ಟೇಟಸ್‌ ಕಾರಣವಾಗಿದೆ.

ಸದ್ಯಕ್ಕೆ ಅವರು ಸಿನಿಮಾ ಮಾಡಲು ಹೊರಟಿರೋದು ನಿಜ. ಆದರೆ ಇದು ಅವರೇ ನಿರ್ದೇಶಿಸಿ, ನಾಯಕರಾಗಿ ಅಭಿನಯಿಸುತ್ತಿರುವ ಸಿನಿಮಾವಂತೂ ಅಲ್ಲ. ಲೂಸಿಯಾ, ರಂಗಿ ತರಂಗ, ರಾಮಾ ರಾಮಾ ರೇ ಹಾಗೂ ಒಂದು ಮೊಟ್ಟೆಯ ಕಥೆ, ಕವಲು ದಾರಿ ಹಾಗೂ ದಿಯಾ ಸೇರಿದಂತೆ ಕನ್ನಡದಲ್ಲಿ ಕಳೆದ ಮೂರ್ನಾಲ್ಕು ವರ್ಷಗಳಿಂದ ಹೆಚ್ಚು ಸದ್ದು ಮಾಡಿದ ಹೊಸ ಅಲೆಯ ಸಿನಿಮಾಗಳು ತಮ್ಮಗೆ ಅತೀವವಾಗಿ ಪ್ರಭಾವ ಬೀರಿವೆ. ಆ ರೀತಿಯ ಸಿನಿಮಾಗಳ ಸಮೂಹಕ್ಕೆ ಇದು ಕೂಡ ಸೇರಲಿದೆ ಅಂತ ಅವರು ಹೇಳಿಕೊಂಡಿದ್ದನ್ನು ನೋಡಿದರೆ ಅವರು ತಮ್ಮದೇ ಪರಮವ್ಹ ಸಂಸ್ಥೆಯ ಬ್ಯಾನರ್‌ ಮೂಲಕ ಗಟ್ಟಿ ಕಥೆಯ, ಕಡಿಮೆ ಬಜೆಟ್‌ ಒಂದೊಳ್ಳೆಯ ಸಿನಿಮಾ ನಿರ್ಮಾಣ ಮಾಡುವ ಆಸೆ ಅವರೊಳಗಡೆ ಇರೋದು ನಿಜ. ಅದು ಏನು ಅನ್ನೋದು ಇಂದು ಸಂಜೆಯೇ ಗೊತ್ತಾಗಲಿದೆ.

ಇಂದು ಸಂಜೆ 4.05 ಕ್ಕೆ ಅದು ನಿಮ್ಮ ಮುಂದೆ ಅನಾವರಣಗೊಳ್ಳಲಿದೆ ಎಂಬುದಾಗಿಯೂ ಹೇಳಿಕೊಂಡಿದ್ದಾರೆ. ಅಂದ ಹಾಗೆ, ನಟ ರಕ್ಷಿತ್‌ ಶೆಟ್ಟಿ ಈಗ ಹೊಸ ಬಗೆಯ ಕಥೆಗಳನ್ನು ತಮ್ಮದೇ ಬ್ಯಾನರ್‌ ನಲ್ಲಿ ನಿರ್ಮಾಣ ಮಾಡುವುದಕ್ಕೆ ಮನಸು ಮಾಡಿದ್ದಾರೆ. ಆ ಕುರಿತು ಟ್ವಿಟರ್‌ ಖಾತೆಯಲ್ಲಿ ಹಾಕಿಕೊಂಡ ಸ್ಟೇಟಸ್‌ ಹೀಗಿದೆ.

ʼಲೂಸಿಯಾ, ರಾಮಾ ರಾಮಾ ರೇ, ರಂಗಿತರಂಗ, ಒಂದು ಮೊಟ್ಟೆಯ ಕಥೆ, ಕವಲುದಾರಿ, ದಿಯಾ.. ಈ ಸಿನಿಮಾಗಳು ನನ್ನ ಮೇಲೆ ಉಂಟುಮಾಡಿದ ಪ್ರಭಾವ ಅತಿ ಪ್ರಬಲವಾಗಿತ್ತು ಹಾಗೂ ಅದನ್ನು ಜಗತ್ತಿನ ಜೊತೆ ಹಂಚಿಕೊಳ್ಳಲು ಅತಿ ಸಂತಸವಾದ ವಿಷಯವಾಗಿತ್ತು. ಇಂದು ಇದೇ ರೀತಿ ಪ್ರಭಲವಾದ ಪ್ರಭಾವ ಬೀರುವ ಅಂತದ್ದೇ ಒಂದು ಸಹಯೋಗ ಈ ಸಿನಿಮಾದ ಮೂಲಕ ಕೂಡಿ ಬಂದಿದೆ. ಇದು ನಿಮಗೂ ಸಹ ಭಾವನೆಗಳನ್ನು ಬಡಿದೇಳಿಸುವ ವರ್ಣ ಚಿತ್ರಗಳ ಸಮೂಹವಾ ಗುವುದರಲ್ಲಿ ಎರಡು ಮಾತಿಲ್ಲ. ಇಂದು ಸಂಜೆ ೪.೦೫ ಕ್ಕೆ ನಿಮ್ಮ ಮುಂದೆ ಅನಾವರಣಗೊಳಿಸಲಿದ್ದೇವೆ.. ಇದಿಷ್ಟು ನಟ ರಕ್ಷಿತ್‌ ಶೆಟ್ಟಿ ಹಾಕಿಕೊಂಡಿರೋ ಸ್ಟೇಟಸ್.‌

ಪ್ಯಾನ್‌ ಇಂಡಿಯಾ ಸ್ಟಾರ್‌ ರಕ್ಷಿತ್‌ ಶೆಟ್ಟಿ ಮೇಲೆ ಇತ್ತೀಚೆಗೆ ಹಿಗ್ಗಾ ಮುಗ್ಗಾ ವಾರ್‌ ಆಗಿದ್ದು, ಅವರನ್ನು ಬಡಿದೆಬ್ಬಿಸುವಂತೆ ಮಾಡಿರೋದು ಸತ್ಯ. ಟೀಕೆಗಳನ್ನುಸವಾಲಾಗಿಯೇ ಸ್ವೀಕರಿಸಿರುವ ಅವರೀಗ ತಮ್ಮ ಕೆಲಸಗಳ ಮೂಲಕ ಉತ್ತರಿಸಲು ಹೊರಟಂತಿದೆ. ಅದರ ಮೊದಲ ಕೌಂಟರ್‌ ರಿಚರ್ಡ್‌ ಆಂಟನಿ. ಸಿಂಪಲ್‌ ಸ್ಟಾರ್‌ ರಕ್ಷಿತ್ ಶೆಟ್ಟಿ ದೊಡ್ಡ ಟೀಕೆಗೆ ಒಳಗಾದ ದಿನದಲ್ಲಿಯೇ ಅದಕ್ಕೆ ದೊಡ್ಡದಾಗಿ ಕೌಂಟರ್‌ ಕೊಟ್ಟರು. ಹೊಂಬಾಳೆ ಫಿಲಂಸ್‌ ಬ್ಯಾನರ್‌ ನಲ್ಲಿ ಅವರು ರಿಚರ್ಡ್‌ ಆಂಟನಿ ಮೂಲಕ ನಿರ್ದೇಶನ ಮತ್ತು ನಟನೆಗೆ ಇಳಿದಾಗ ಎಲ್ಲರೂ ನಿಬ್ಬೆರಗಾಗಿ ನಿಂತರು. ಅಲ್ಲಿಂದ ಈಗ ತಮ್ಮದೇ ಸಂಸ್ಥೆಯ ಮೂಲಕ ಹೊಸ ಅಲೆಯ ಸಿನಿಮಾ ನಿರ್ಮಾಣಕ್ಕೆ ಇಳಿಯುತ್ತಿದ್ದಾರೆ. ಆ ಸಿನಿಮಾದ ನಿರ್ದೇಶಕ, ನಾಯಕ ನಟ, ಉಳಿದಂತೆ ಕಲಾವಿದರು, ತಂತ್ರಜ್ಜರ ವಿವರ ಇಂದು ಸಂಜೆಯೇ ಬಹಿರಂಗವಾಗುವುದು ಗ್ಯಾರಂಟಿ.
– ಎಂಟರ್‌ ಟೈನ್‌ ಮೆಂಟ್‌ ಬ್ಯೂರೋ ಸಿನಿಲಹರಿ

Categories
ಸಿನಿ ಸುದ್ದಿ

ನಾನೇನ್ ದೊಡ್ಡ ಸೆಲಿಬ್ರಿಟಿ ಅಲ್ಲ ; ಹಿಂಗ್ಯಾಕ್ ಅಂದ್ರು ಧ್ರುವ ? ವಿಐಪಿಗಳಿಗೆ ಆಕ್ಷನ್ ಪ್ರಿನ್ಸ್ ಕೊಟ್ಟರು ಶಾಕ್ !?

ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಎಷ್ಟು ದೊಡ್ಡ ಸೆಲಿಬ್ರಿಟಿ ಅಂತ ಇಡೀ ಕರ್ನಾಟಕಕ್ಕೆ ಗೊತ್ತು. ಆದರೆ, ಬಹದ್ದೂರ್ ಹುಡುಗ ನಾನೇನ್ ದೊಡ್ಡ ಸೆಲಿಬ್ರಿಟಿ ಅಲ್ಲ ಬಿಡಿ ಅಂತಾರೇ. ಸ್ಟಾರ್ ನಟನಾಗಿ ಬೆಳೆದು ನಿಂತರೂ ಕೂಡ ಈ ರೀತಿ ಹೇಳೋದು ಅವರ ದೊಡ್ಡ ಗುಣ. ಮಾಡಿರುವುದು ನಾಲ್ಕೇ ನಾಲ್ಕು ಸಿನಿಮಾ ಇರ್ಬೋದು ಆದರೆ ಸಾಧನೆ ಮುಗಿಲೆತ್ತರ, ಅಭಿಮಾನಿಗಳು ಕೋಟ್ಯಾಂತರ.

ಇವತ್ತು, ಭರ್ಜರಿ ಹುಡುಗ ತಮ್ಮ ವಿಐಪಿಗಳಿಗೆ ಶಾಕಿಂಗ್ ನ್ಯೂಸ್ ಕೊಟ್ಟಿದ್ದಾರೆ. ಅದ್ದೂರಿ ಹುಡುಗನ ಅಭಿಮಾನಿಗಳು ಈ ನ್ಯೂಸ್ ನ‌ ನಿರೀಕ್ಷೆ ಮಾಡಿರಲಿಲ್ಲ. ‌ಅಕ್ಟೋಬರ್ 06 ರಂದು ಹಬ್ಬ ಮಾಡಬೇಕು, ತಮ್ಮ ನೆಚ್ಚಿನ ನಟ ಆಕ್ಷನ್ ಪ್ರಿನ್ಸ್ ಹುಟ್ಟುಹಬ್ಬವನ್ನು ಗ್ರ್ಯಾಂಡ್ ಆಗಿ ಆಚರಣೆ ಮಾಡಬೇಕು ಅಂತ ಕನಸು‌ ಕಂಡಿದ್ದರು. ಆದರೆ, ಧ್ರುವ ಬರ್ತ್ ಡೇಗೆ ಬ್ರೇಕ್ ಹಾಕಿದ್ದಾರೆ.‌ ಜನ್ಮದಿನ ಆಚರಣೆ ಮಾಡಿಕೊಳ್ಳದಿರಲು ನಿರ್ಧಾರ ಮಾಡಿದ್ದಾರೆ.

ಕಳೆದ ವರ್ಷವೂ ಧ್ರುವ ಹುಟ್ಟುಹಬ್ಬ ಆಚರಣೆ ಮಾಡಿಕೊಂಡಿರಲಿಲ್ಲ. ಅಣ್ಣನನ್ನು ಕಳೆದುಕೊಂಡ ನೋವಲ್ಲೇ ದಿನದೂಡುತ್ತಿದ್ದ, ಈಗಲೂ ಸಹೋದರ ಚಿರು ನೆನಪಲ್ಲೇ ಬದುಕು ಸಾಗಿಸುತ್ತಿರುವ ಧ್ರುವ ಸರ್ಜಾ ತಮ್ಮ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಿಕೊಳ್ಳದಿರಲು ತೀರ್ಮಾನ ಮಾಡಿದ್ದಾರೆ ಅನ್ಸುತ್ತೆ. ಅಷ್ಟಕ್ಕೂ, ಬರ್ತ್ ಡೇ ದಿನ ಧ್ರುವ ಬೆಂಗಳೂರಿನಲ್ಲಿ ಇರೋದಿಲ್ಲ. ʼಮಾರ್ಟಿನ್ʼ ಚಿತ್ರದ ಚಿತ್ರೀಕರಣಕ್ಕಾಗಿ ವೈಜಾಗ್ ಗೆ ತೆರಳುತ್ತಿದ್ದಾರೆ. ಹೀಗಾಗಿ, ಅಭಿಮಾನಿ ದೇವರುಗಳನ್ನು ಭೇಟಿ ಮಾಡುವುದಕ್ಕೆ ಸಾಧ್ಯವಿಲ್ಲ.

ಅಣ್ಣನ ಅಗಲಿಕೆಯ ನೋವು ಒಂದು ಕಡೆಯಾದರೆ, ಕೊರೋನಾ ಆತಂಕವೂ ಇನ್ನೂ ಇರೋದ್ರಿಂದ ಗುಂಪು ಸೇರಿಸುವುದು ಬೇಡ ಎನ್ನುವುದು ಆಕ್ಷನ್ ಪ್ರಿನ್ಸ್ ನಿರ್ಧಾರ. ಹೀಗಾಗಿ, ಮನೆ ಮುಂದೆ ಸಂಭ್ರಮಾಚರಣೆ ಬೇಡವೆಂದು ಡಿಸೈಡ್ ಮಾಡಿದ್ದಾರೆ. ಇದ್ದಲಿಂದಲೇ ಶುಭಾಶಯ ಕೋರುವಂತೆ ತಿಳಿಸಿದ್ದಾರೆ. ಬಹದ್ದೂರ್ ಹುಡುಗನ‌ ನಿಲುವು ವಿಐಪಿಗಳಿಗೆ ಬೇಸರ ತಂದರೂ ಅದನ್ನು ಒಪ್ಪಿಕೊಳ್ತಾರೆ. ತಾವಿರುವ ಜಾಗದಿಂದಲೇ ಶುಭಾಶಯ ಹೇಳಲಿದ್ದಾರೆ.

ಮಾರ್ಟಿನ್ ನಿಮ್ಮೆಲ್ಲರಿಗೂ ಗೊತ್ತಿರುವಂತೆ ಬಹು ನಿರೀಕ್ಷೆಯ ಸಿನಿಮಾ. ಅದ್ದೂರಿ ಕಾಂಬೋ ಜೊತೆಯಾಗಿ ಮಾಡ್ತಿರುವ ಮಹಾಮೂವೀ. ಹೀಗಾಗಿ, ನಿರೀಕ್ಷೆ ಗರಿಗೆದರಿದೆ. ಚಿತ್ರಪ್ರೇಮಿಗಳ ನಿರೀಕ್ಷೆಯನ್ನೂ ಮೀರಿ ಸಿನಿಮಾ ನಿರ್ಮಾಣ ಮಾಡೋದಕ್ಕೆ ಇಡೀ ಮಾರ್ಟಿನ್ ಟೀಮ್ ಶ್ರಮವಹಿಸಿ ಕೆಲಸ‌ ಮಾಡ್ತಿದೆ. ಪ್ರತಿ‌ ಸಿನಿಮಾದಂತೆ ʼಮಾರ್ಟಿನ್‌ʼ ಗೂ ನಿಮ್ಮ ಪ್ರೀತಿ ಪ್ರೋತ್ಸಾಹ ಇರಲೆಂದು ಧ್ರುವ ವಿಐಪಿಗಳಿಗೆ ಕೇಳಿಕೊಂಡಿದ್ದಾರೆ. ಬಹದ್ದೂರ್ ಹುಡುಗರು ಮಾರ್ಟಿನ್ ಚಿತ್ರವನ್ನು ತಲೆ ಮೇಲೆ ಹೊತ್ತು ಮೆರೆಸೋಕೆ ಕಾತುರರಾಗಿದ್ದಾರೆ ಅದರಲ್ಲಿ ನೋ‌ಡೌಟ್.

ವಿಶಾಲಾಕ್ಷಿ, ಎಂಟರ್ಟೈನ್ಮೆಂಟ್ ಬ್ಯೂರೋ ಸಿನಿಲಹರಿ

Categories
ಸಿನಿ ಸುದ್ದಿ

ಹಿಂಗ್ ಆಗ್ಬಾರ್ದಿತ್ತು ಬಿಡಿ ; ಸಮಂತಾ-ಚೈತನ್ಯ ಕೊನೆಗೂ ದೂರವಾದರಲ್ರಿ!? ಫ್ಯಾನ್ಸ್‌ ಹೊಟ್ಟೆಗೆ ಬೆಂಕಿ

ತೆಲುಗು ತಾರಾ ದಂಪತಿ ಸಮಂತಾ ಹಾಗೂ ಅಕ್ಕಿನೇನಿ ನಾಗಚೈತನ್ಯ ತಮ್ಮ ದಾಂಪತ್ಯ ಜೀವನಕ್ಕೆ ಗುಡ್ ಬೈ ಹೇಳಿದ್ದಾರೆ. ನಾಲ್ಕು ವರ್ಷದ ವೈವಾಹಿಕ ಬದುಕಿಗೆ ಎಳ್ಳುನೀರು ಬಿಟ್ಟಿದ್ದಾರೆ. ೧೧ ವರ್ಷಗಳ ಕಾಲ ಪ್ರೀತ್ಸಿ ಮದುವೆಯಾದ ಈ ಜೋಡಿ ಕೊನೆಗೂ ಸಂಸಾರ ಸಾಗರದ ಬಂಧನದಿಂದ ಬೇರ್ಪಟ್ಟಿದ್ದಾರೆ. ರೀಲ್ ಅಂಡ್ ರಿಯಲ್ ಲೈಫ್‌ನಲ್ಲಿ ಸೈ ಎನಿಸಿಕೊಂಡ ಚೈ ಅಂಡ್ ಸ್ಯಾಮ್ ಅದ್ಯಾಕೆ ವಿಚ್ಚೇದನದಂತಹ ನಿರ್ಧಾರಕ್ಕೆ ಬಂದ್ರು ? ೧೦ ಕೋಟಿ ಖರ್ಚು ಮಾಡಿ ಇಡೀ ಸೌತ್-ನಾರ್ತ್ ಸಿನಿಮಾ ಇಂಡಸ್ಟ್ರಿ ನಿಬ್ಬೆರಗಾಗುವಂತೆ ಹಸೆಮಣೆ ಏರಿದ ಈ ಕ್ಯೂಟ್ ಕಪಲ್ಸ್ ಕೇವಲ ನಾಲ್ಕೇ ನಾಲ್ಕು ವರ್ಷಕ್ಕೆ ಅದ್ಯಾಕೆ ದಾಂಪತ್ಯ ಜೀವನವನ್ನು ಕೊನೆಗೊಳಿಸಿಕೊಂಡ್ರು? ಈ ಪ್ರಶ್ನೆಗೆ ಕೇವಲ ಒಂದೇ ಸಾಲಿನ ಉತ್ತರ ನಿಡೋದಕ್ಕೆ ಸಾಧ್ಯವಿಲ್ಲ. ಫ್ಯಾಮಿಲಿಮ್ಯಾನ್ ವೆಬ್‌ಸಿರೀಸೇ ಮಜಿಲಿ ಜೋಡಿಯನ್ನು ದೂರ ದೂರ ಮಾಡ್ತು ಎಂತಲೂ ಹೇಳೋದಕ್ಕೆ ಆಗಲ್ಲ. ಆದರೆ, ಮಾಧರಿಯಾಗಬೇಕಿದ್ದ ಈ ಇಬ್ಬರು ತಾರಾಜೋಡಿಗಳು ನಾನೊಂದು ತೀರಾ, ನೀನೊಂದು ತೀರಾ ಅಂತ ಬೇರ್ಪಟ್ಟಿದ್ದು ಮಾತ್ರ ಅರಗಿಸಿಕೊಳ್ಳೋದಕ್ಕೆ ಸಾಧ್ಯವಾಗ್ತಿಲ್ಲ.

ಸ್ಯಾಮ್ ಅಂಡ್ ಚೈ ದೂರವಾಗ್ತಿರೋದು ಅವರ ಕುಟುಂಬಕ್ಕೆ ಎಷ್ಟು ನೋವುಂಟು ಮಾಡಿದೆಯೋ ಅಷ್ಟೇ ನೋವು ಮನಂ ಜೋಡಿಯ ಕೋಟ್ಯಾಂತರ ಅಭಿಮಾನಿಗಳಿಗೆ ಆಗಿದೆ. ಮಜಿಲಿ ಜೋಡಿಯ ವಿಚ್ಚೇದನದ ಸುದ್ದಿ ಕೇಳಿ ಅಭಿಮಾನಿಗಳ ಹೊಟ್ಟೆಗೆ ಬೆಂಕಿ ಬಿದ್ದಂತಾಗಿದೆ.

ನಾಲ್ಕು ದಿನ ಕಳೆದರೆ ಚೈ ಅಂಡ್ ಸ್ಯಾಮ್ ಗುಡ್ ನ್ಯೂಸ್ ಕೊಡ್ತಾರೆ, ವಾರ್ಷಿಕೋತ್ಸವಕ್ಕೆ ಸಿಹಿ ಸುದ್ದಿ ಸಿಗುತ್ತೆ ಅಂತ ಕಾಯ್ತಿದ್ದ ಫ್ಯಾನ್ಸ್‌ ಗೆ ನಿರಾಶೆಯಾಗಿದೆ. ಬರೀ ನಿರಾಸೆ ಅಲ್ಲ ಆಕಾಶವೇ ಕಳಚಿ ತಲೆಮೇಲೆ ಬಿದ್ದಾಗಿದೆ ಅಂದರೆ ತಪ್ಪಾಗಲಿಕ್ಕಿಲ್ಲ. ಯಾಕಂದ್ರೆ, ಮಜಿಲಿ ಜೋಡಿ ದೂರವಾಗೋದನ್ನ ಸಹಿಸೋ ಶಕ್ತಿ ಅಭಿಮಾನಿಗಳಿಗಿರಲಿಲ್ಲ. ಇಬ್ಬರು ಬೇರೆಯಾಗ್ತಿದ್ದಾರೆ ಅನ್ನೋ ಸುದ್ದಿ ಹೊರಬಿದ್ದಾಗಿನಿಂದಲೂ ಅಭಿಮಾನಿಗಳ ಪ್ರಾರ್ಥನೆ ಒಂದೇ ಆಗಿತ್ತು ಅದು ಸ್ಯಾಮ್ ಅಂಡ್ ಚೈ ಡಿವೋರ್ಸ್ ಸುದ್ದಿ ಸುಳ್ಳಾಗಬೇಕು, ಅವರಿಬ್ಬರು ಒಂದಾಗಬೇಕು ಎನ್ನುವುದು. ಆದ್ರೆ, ಇವತ್ತು ಈ ತಾರಾ ಜೋಡಿ ಅಧಿಕೃತವಾಗಿ ವಿಚ್ಚೇದನವನ್ನು ಅಧಿಕೃತವಾಗಿ ಘೋಷಿಸಿಕೊಂಡಿದ್ದಾರೆ. ಆದರೆ, ಅಭಿಮಾನಿಗಳು ಮಾತ್ರ ಈಗ್ಲೂ ಹೇಳ್ತಿರೋದು ಒಂದೇ ಇನ್ನೂ ಕಾಲ ಮಿಂಚಿಲ್ಲ ನಿಮ್ಮ ನಿರ್ಧಾರ ಬದಲಾಯಿಸಿಕೊಳ್ಳಿ ಅಂತ.

ಒಡೆದ ಹಾಲು, ಚೂರಾದ ಕನ್ನಡಿ ಮತ್ತೆ ಒಂದು ಗೂಡಿಸೋದಕ್ಕೆ ಆಗಲ್ಲ ಅಂತಾರೇ. ಅಷ್ಟಕ್ಕೂ, ಸ್ಟಾರ್ ಕಪಲ್‌ಗಳಾದ ಅಕ್ಕಿನೇನಿ ನಾಗಚೈತನ್ಯ ಹಾಗೂ ಸಮಂತಾ ವೈವಾಹಿಕ ಸಂಬಂಧ ಹೊಡೆದು ಚೂರಾಗಿದೆಯೋ ಅಥವಾ ನುಚ್ಚುನೂರಾಗಿದೆಯೋ ಗೊತ್ತಿಲ್ಲ. ಸದ್ಯಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಇಬ್ಬರು ವೈವಾಹಿಕ ಬದುಕಿನಿಂದ ದೂರವಾಗ್ತಿರುವುದಾಗಿ ಹೇಳಿಕೊಂಡಿದ್ದಾರೆ. ತೆಗೆದುಕೊಂಡಿರುವ ತೀರ್ಮಾನದಿಂದ ಹಿಂದೆ ಸರಿಯುತ್ತಾರೋ ಇಲ್ಲವೋ ಗೊತ್ತಿಲ್ಲ. ಹಿಂದೆ ಸರಿಬೇಕು ಒಂದಾಗಿ ಬದುಕಬೇಕು ಎನ್ನುವುದು ಅಕ್ಕಿನೇನಿ ಫ್ಯಾಮಿಲಿ-ಸಮಂತಾ ಕುಟುಂಬದ ಕಳಕಳಿ ಮಾತ್ರವಲ್ಲ ಕೋಟ್ಯಾಂತರ ಭಕ್ತರ ಆಶಯ. ಆ ಆಸೆ ಈಡೇರುತ್ತೋ ಇಲ್ಲವೋ ಕೂತೂಹಲದಿಂದ ಕಾಯಬೇಕು. ಭಗ್ತವಂತ ಅವರಿಬ್ಬರ ಮನಸನ್ನು ಬದಲಾಯಿಸಬೇಕು ಹಾಗಾದ್ರೆ ಮಾತ್ರ ಏ ಮಾಯ ಚೇಸ್ಯಾವೆ ಜೋಡಿ ಒಂದಾಗಲು ಸಾಧ್ಯ.

  • ಎಂಟರ್‌ಟೈನ್ಮೆಂಟ್ ಬ್ಯೂರೋ ಸಿನಿಲಹರಿ
Categories
ಸಿನಿ ಸುದ್ದಿ

ಸ್ಯಾಂಡಲ್ ವುಡ್ ಗೆ ರಣಬೀರ್ ಕಪೂರ್ ಎಂಟ್ರಿ;ಸುಮುಖ ಥೇಟ್ ಚಾಕಲೇಟ್ ಹೀರೋನೇ ಕಣ್ರೀ !ಲುಕ್ಕಲೇ ಲಾಕ್ ಮಾಡ್ತಾರೆ ಫಿಸಿಕ್ಸ್ ಟೀಚರ್ ಸುಮುಖ !

ಗಂಧದಗುಡಿಗೆ ರಣಬೀರ್ ಕಪೂರ್ ಆಗಮನ ಎಂದಾಕ್ಷಣ ವಾವ್ ಅಂತೀರಿ? ಯಾವ್ ಸಿನಿಮಾ ? ಏನ್ ಕಥೆ? ಡೈರೆಕ್ಟರ್ ಯಾರು? ಪ್ರೊಡ್ಯೂಸರ್ ಯಾರು ? ಹೀಗೆ ಬ್ಯಾಕ್ ಟು ಬ್ಯಾಕ್ ಕೊಶ್ಚನ್ಸ್ ನೀವೇ ಹಾಕಿಕೊಳ್ತೀರಿ. ಆದರೆ, ನಾವು ಹೇಳಲಿಕ್ಕೆ ಹೊರಟಿರುವುದು ಬಿಟೌನ್ ರಣಬೀರ್ ಬಗ್ಗೆ ಅಲ್ಲ ಸ್ಯಾಂಡಲ್ ವುಡ್ ರಣಬೀರ್ ಕಪೂರ್ ಕುರಿತಾಗಿ. ಬಾಲಿವುಡ್ ಹ್ಯಾಂಡ್ಸಮ್ ಹಂಕ್ ರಣಬೀರ್ ಕಪೂರ್ ನ ಹೋಲುವಂತಹ ಚಾರ್ಮಿಂಗ್ ಹೀರೋ ಚಂದನವನದಲ್ಲಿದ್ದಾರೆ. ಅವರು ನಮ್ಮ ಕನ್ನಡದವರೇ, ಬೆಂಗಳೂರಲ್ಲೇ ಹುಟ್ಟಿ ಬೆಳೆದಿದ್ದಾರೆ. ಆ ಸುರಸುಂದರಾಂಗ ಸುಮುಖರ ಪರಿಚಯ ಮತ್ತು ಸಿನಿಜರ್ನಿಯ ವರದಿ.

ಬಾಲಿವುಡ್ ಬಾದ್ ಷಾ ಅಮಿತಾಬ್ ಆದರೆ, ಸ್ಯಾಂಡಲ್ ವುಡ್ ಬಾದ್ ಷಾ ಕಿಚ್ಚ ಸುದೀಪ್‌ ಅವರು. ಬಿಟೌನ್ ಕಿಂಗ್ ಖಾನ್ ಶಾರುಖ್, ಸ್ಯಾಂಡಲ್ ಕಿಂಗ್ ಶಿವರಾಜ್ ಕುಮಾರ್, ಬಿಟೌನ್ ಸುಲ್ತಾನ್ ಸಲ್ಮಾನ್, ಸ್ಯಾಂಡಲ್ ವುಡ್ ಸುಲ್ತಾನ್ ದರ್ಶನ್, ಬಾಲಿವುಡ್ ಮಿಸ್ಟರ್ ಪರ್ಫೆಕ್ಟನಿಸ್ಟ್ ಆಮೀರ್, ಸ್ಯಾಂಡಲ್ ಮಿಸ್ಟರ್ ಪರ್ಫೆಕ್ಷನಿಸ್ಟ್ ಪವರ್ ಸ್ಟಾರ್, ಬಿಟೌನ್ ಖಿಲಾಡಿ ಅಕ್ಷಯ್, ಸ್ಯಾಂಡಲ್ ವುಡ್ ಟು ಪ್ಯಾನ್ ಇಂಡಿಯಾ ಕಿಲಾಡಿ ರಾಕಿಂಗ್ ಸ್ಟಾರ್, ಬಾಲಿವುಡ್ ಚಾಕೊಲೇಟ್ ಹೀರೋ ರಣಬೀರ್, ಸ್ಯಾಂಡಲ್ ವುಡ್ ಚಾಕೊಲೇಟ್ ಹೀರೋ ಒನ್ ಅಂಡ್ ಓನ್ಲೀ ಸುಮುಖ ಅಂದರೆ ಬಹುಷಃ ಅತಿಶಯೋಕ್ತಿಯಲ್ಲ.

ಸುಮುಖ ಹೆಸರೇ ಹೇಳುವಂತಹ ಸುಂದರವಾದ ಮುಖವುಳ್ಳ ಸುರಸುಂದರಾಂಗ. ಹೆಸರಿಗೆ ತಕ್ಕನಾಗಿರುವ ನಟ. ಥೇಟ್ ರಣಬೀರ್ ಕಪೂರ್ ಥರ ಕಾಣಿಸ್ತಾರೆ. ಬಿಟೌನ್ ಬರ್ಫಿಯಷ್ಟೇ ಹ್ಯಾಂಡ್ಸಮ್ ಆಗಿರುವ ಸುಮುಖ ಕಣ್ಣೋಟದಲ್ಲೇ ಲಾಕ್ ಮಾಡ್ತಾರೆ ಅದಂತೂ ಸತ್ಯ. ನಿಮಗೆ ಡೌಟ್ ಇದ್ರೆ ಒಂದು ಸಲ‌ ಯೂಟ್ಯೂಬ್ ನಲ್ಲಿ ಅಪ್ ಲೋಡ್ ಆಗಿರುವ ‘ ಫಿಸಿಕ್ಸ್ ಟೀಚರ್’ ಟೀಸರ್ ನ ನೋಡಿ ಆಗ ನೀವೇ ಅಚ್ಚರಿಪಡುತ್ತೀರಿ.

ಬಿಟೌನ್ ಚಾಕೊಲೇಟ್ ಹೀರೋ ರಣಬೀರ್ ನ ಹೋಲುವ ನಟ ಸುಮುಖ. ಶಶಿಕುಮಾರ್ ಹಾಗೂ ನಂದಿತ ಯಾದವ್ ಅವರ ಪುತ್ರ. ಅಪ್ಪ- ಅಮ್ಮನಂತೆ ಕಲೆಯ ಸೆಳೆತ. ಬಾಲ್ಯದಿಂದಲೂ ಬಣ್ಣದ ಲೋಕವನ್ನು ನೋಡುತ್ತಾ ‌ಬೆಳೆದ‌‌ ಸುಮುಖ ಈಗ ಹೊಸ ಸವಾಲೊಂ ದನ್ನು ಸ್ವೀಕರಿಸಿದ್ದಾರೆ. ನಾಯಕನಟ ಪ್ಲಸ್ ನಿರ್ದೇಶಕನಾಗಿ‌ ಗಂಧದಗುಡಿಯ ಅಖಾಡಕ್ಕೆ ಧುಮ್ಕಿದ್ದಾರೆ. ಫಿಸಿಕ್ಸ್ ಟೀಚರ್ ಸಿನಿಮಾದ ಮೂಲಕ ಗಾಂಧಿನಗರದ ಮಂದಿಗೆ ಇನ್ನಷ್ಟು ಚಿರಪರಿಚಿತಗೊಳ್ತಿದ್ದಾರೆ.

ಸುಮುಖರ ತಂದೆ ತಾಯಿ ಬಗ್ಗೆ ಬಹುಷಃ‌ ನಿಮ್ಮೆಲ್ಲರಿಗೂ ತಿಳಿದಿರುತ್ತೆ. ರಂಗಭೂಮಿ- ಕಿರುತೆರೆ- ಬೆಳ್ಳಿತೆರೆಗೆ ಸುಮುಖ ತಂದೆತಾಯಿಯ‌ ಕೊಡುಗೆ ಅಪಾರ. ಕಿರುತೆರೆ ಲೋಕದಲ್ಲಿ ನಿರ್ದೇಶಕಿಯಾಗಿ, ನಿರ್ಮಾಪಕಿಯಾಗಿ ನಂದಿತ ಯಾದವ್ ಸಾಕಷ್ಟು ಹೆಸರು ಮಾಡಿದ್ದಾರೆ. ಶಶಿಕುಮಾರ್ ಸ್ಮಾಲ್‌ಸ್ಕ್ರೀನ್ ಹಾಗೂ ಬಿಗ್ ಸ್ಕ್ರೀನ್ ನಲ್ಲಿ ತರಹೇವಾರಿ ಪಾತ್ರಗಳಿಗೆ ಜೀವತುಂಬಿ‌ ನಟಿಸಿದ್ದಾರೆ. ಇದೀಗ ಮಗ‌ ಸುಮುಖ ಅವರ ಸರದಿ. ಯಾನ ಚಿತ್ರದಿಂದ ಸಿನಿಜರ್ನಿ ಶುರುಮಾಡಿ ಅಮ್ಮ ನಂದಿತಾ ನಿರ್ದೇಶಿಸಿರುವ ರಾಜಸ್ತಾನ್ ಡೈರೀಸ್ ನಲ್ಲಿ ಆಕ್ಟ್ ಮಾಡಿರುವ ಸುಮುಖ ಈಗ’ ಫಿಸಿಕ್ಸ್ ಟೀಚರ್’ ಹೆಸರಿನ ಸಿನಿಮಾ ನಿರ್ದೇಶನಕ್ಕೆ ಕೈಹಾಕಿದ್ದಾರೆ ಜೊತೆಗೆ ಅಭಿನಯ ಕೂಡ ಮಾಡ್ತಿದ್ದಾರೆ.

ಫಿಸಿಕ್ಸ್ ಟೀಚರ್ ಅಂದಾಕ್ಷಣ ಓಹೋ ಭೌತಶಾಸ್ತ್ರದ ಭೋದನೆನಾ ಅನ್ಕೊಬೇಡಿ, ಸೈನ್ಸ್ ಫಿಕ್ಷನ್ ಸಿನಿಮಾ ಇರ್ಬೋದಾ‌ ಎಂದು ಅಂದಾಜಿಸಬೇಡಿ. ಸುಮುಖ ಆಕ್ಷನ್ ಕಟ್ ಹೇಳಿ ಆಕ್ಟ್ ಮಾಡ್ತಿರುವ ಈ ಫಿಸಿಕ್ಸ್ ಟೀಚರ್ ಸಿನಿಮಾ ಊಹೆಗೆ ಮೀರಿದ್ದಂತೆ. ಫಸ್ಟ್ ಲುಕ್ ನಲ್ಲಿ‌ ಬುಕ್ಸ್ ಹಿಡಿದು ಕುಳಿತಿದ್ದಾರೆ, ಚಿತ್ರದಲ್ಲಿ ಬ್ಯಾಚುಲರ್ ಫಿಸಿಕ್ಸ್ ಟೀಚರ್ ಆಗಿ ಕಾಣಿಸಿಕೊಳ್ತಿದ್ದಾರೆ. ಇವ್ರಿಗೆ ಜೊತೆಯಾಗಿ ಕಾಣಿಸಿಕೊಳ್ತಿರುವ ನಟಿ ಪ್ರೇರಣಾ ಕಂಬಂ ಸೈಕಲಾಜಿ ಟೀಚರ್ ಪಾತ್ರ ಪ್ಲೇ ಮಾಡ್ತಿದ್ದಾರೆ. ಮಂಡ್ಯ, ರಮೇಶ್, ರಾಜೇಶ್ ನಟರಂಗ್ ತಾರಾಬಳಗದಲ್ಲಿದ್ದಾರೆ. ಒಂದು ಹಂತದ ಚಿತ್ರೀಕರಣ ಮುಗಿದಿದೆ, ಇದೇ ಅಕ್ಟೋಬರ್ 07 ರಿಂದ ಮತ್ತೆ ಶೂಟಿಂಗ್ ಶುರುವಾಗಲಿದೆ.‌ ಸದ್ಯ ಟೀಸರ್ ಬಿಡುಗಡೆಯಾಗಿದ್ದು, ಕ್ಯೂರಿಯಾಸಿಟಿ ಹುಟ್ಟಿಸಿದೆ.

ಅಂದ್ಹಾಗೇ, ಹೀರೋ ಸುಮುಖ ಅವರು ಸ್ಟೂಡೆಂಟ್ ಥರ ಇದ್ದಾರೆ. ಆದರೆ, ಸಿನಿಮಾದಲ್ಲಿ ಟೀಚರ್ ಪಾತ್ರ ನಿರ್ವಹಿಸ್ತಿದ್ದಾರೆ. ಕ್ಲೀನ್ ಶೇವ್ ನಲ್ಲಿ‌ ಸುದ್ದಿಗೋಷ್ಟಿಗೆ ಆಗಮಿಸಿದ್ದರು, ಅವರ ಲುಕ್-ಸ್ಟೈಲ್- ಸ್ಮೈಲ್ -ಫಿಸಿಕ್ -ಟಾಕು ಎಲ್ಲವೂ ರಣಬೀರ್ ಕಪೂರ್ ಅವರನ್ನು ಹೋಲುವಂತಿತ್ತು. ಕಣ್ಣೋಟದಲ್ಲಿ ರಣಬೀರ್ ಛಾಯೆ‌ ಎದ್ದು ಕಾಣ್ತಿತ್ತು. ಈ‌ ಬಗ್ಗೆ ಸಿನಿಲಹರಿ ಟೀಮ್ ಮಾತನಾಡಿಸಿದಾಗ ಸುಮುಖ ಹೇಳಿದ್ದಿಷ್ಟು ನೋಡಿ.

ನಾನು ರಣಬೀರ್ ಕಪೂರ್ ಥರ ಕಾಣ್ತೀನಿ ಅಂತ ಹೇಳಿದ್ದಕ್ಕೆ ಥ್ಯಾಂಕ್ಸ್. ನಾನು ರಣಬೀರ್ ಕಪೂರ್‌ ನ ಫಾಲೋ ಮಾಡಲ್ಲ. ಆದರೆ, ಅವರ ಸಿನಿಮಾಗಳಿಗೆ ಬಿಗ್ ಫ್ಯಾನ್ ನಾನು. ಬರೀ ರೊಮ್ಯಾಂಟಿಕ್ ಹೀರೋ ಕ್ಯಾರೆಕ್ಟರ್ ಗೆ ಸ್ಟಿಕ್ ಆನ್ ಆಗಿಲ್ಲ.‌ ಬದಲಾಗಿ ಚಾಲೆಂಜಿಂಗ್ ಪಾತ್ರಗಳನ್ನೂ ಮಾಡಿದ್ದಾರೆ. ಅವರ ಒಂದೊಂದು ಸಿನಿಮಾದ ಪಾತ್ರ ಕೂಡ ಪ್ರೇಕ್ಷಕರ ಮನಮುಟ್ಟುತ್ತದೆ. ಹೀಗಾಗಿ ರಣಬೀರ್ ಕಪೂರ್ ನನಗೆ ಇಷ್ಟವಾಗ್ತಾರೆ. ಅಷ್ಟಕ್ಕೂ ಸ್ಯಾಂಡಲ್ ವುಡ್ ರಣಬೀರ್ ಕಪೂರ್ ಅಂತ ಟ್ಯಾಗ್ ಮಾಡಿಕೊಳ್ಳಲಿಕ್ಕೆ ಇಷ್ಟವಿಲ್ಲ ನಾನೇ ಸ್ವಂತ ಬ್ರ್ಯಾಂಡ್ ಆಗ್ತೀನಿ ಅಂತ ಹೆಮ್ಮೆಯಿಂದ‌ ಹೇಳಿಕೊಂಡರು ಸುಮುಖ.

ಫಿಸಿಕ್ಸ್ ಟೀಚರ್ ಸುಮುಖ ಅವರೇ ಹೇಳಿಕೊಂಡಂತೆ ಯಾರ ಐಡೆಂಟಿಟಿಗೂ‌ ನಾವು ಸ್ಟಿಕ್ ಆನ್ ಆಗದೇ ಇರೋದು‌ ಬೆಸ್ಟು. ಅಖಾಡಕ್ಕೆ ಇಳಿದಾಗ ಓನ್ ಬ್ರ್ಯಾಂಡ್ ಆಗಬೇಕು. ಅದೇ ದಾರಿಯಲ್ಲಿ ಯುವ ನಟ ಸುಮುಖ ನಡೆಯುತ್ತಿದ್ದಾರೆ. ಎನಿವೇ, ಕನ್ನಡ ಚಿತ್ರರಂಗಕ್ಕೆ ಚಾಕೊಲೇಟ್ ಹೀರೋ ಸಿಕ್ಕಂತಾಯ್ತು. ಜೊತೆಗೆ ಯೂನಿಕ್ ಟ್ಯಾಲೆಂಟ್ ಇರೋ ಮತ್ತೊಬ್ಬ ಪ್ರತಿಭೆ ಗಂಧದಗುಡಿಗೆ ಆಗಮನವಾಯ್ತು ಅದರಲ್ಲಿ ಎರಡು‌ ಮಾತಿಲ್ಲ‌ ಎನ್ನುವುದಕ್ಕಿಂತ ಸಿನಿಮಾ ಮೇಲಿರುವ ಪ್ರೀತಿ ಭಕ್ತಿ ಶ್ರದ್ಧೆ ಜೊತೆಗೆ ಕಲಾಲೋಕಕ್ಕೆ ವಿಶಿಷ್ಟವಾದ ಕೊಡುಗೆ ನೀಡಲು ಹಾತೊರೆಯುತ್ತಿರುವ ಸುಮುಖ ಅವರ ಮನವೇ ಸಾಕ್ಷಿ.

  • ವಿಶಾಲಾಕ್ಷಿ, ಎಂಟರ್ ಟೈನ್ಮೆಂಟ್ ಬ್ಯೂರೋ ಸಿನಿಲಹರಿ
Categories
ಸಿನಿ ಸುದ್ದಿ

ಗಾಂಧಿವಾದಿ ಆಗಿ ಕಾಣಿಸಿಕೊಂಡ ಪರಿಸರವಾದಿ : ಕುತೂಹಲ ಹುಟ್ಟಿಸುತ್ತಿದೆ ನಟ, ನಿರ್ದೇಶಕ ಸುರೇಶ್ ಹೆಬ್ಬೀಕರ್ ಲುಕ್ !

ಗಾಂಧಿ ಜಯಂತಿಗೆ’ ಗುರು ಶಿಷ್ಯರು’ ಚಿತ್ರ ತಂಡ ಸ್ಪೆಷಲ್ ಸಂಗತಿಯೊಂದನ್ನು ರಿವೀಲ್ ಮಾಡಿದೆ. ಕನ್ನಡದ ಹೆಸರಾಂತ ನಟ, ನಿರ್ದೇಶಕ, ಪರಿಸರವಾದಿ ಸುರೇಶ್ ಹೆಬ್ಳೀಕರ್ ಅವರು ‘ ಗುರು ಶಿಷ್ಯರು’ ಚಿತ್ರದಲ್ಲಿ ನಿರ್ವಹಿಸಿದ ಪಾತ್ರದ ಸ್ಪೆಷಲ್ ಲುಕ್ ಅನ್ನು ರಿವೀಲ್ ಮಾಡಿದೆ. ಗಾಂಧಿ ವೇಷದಲ್ಲಿ ಕಾಣಿಸಿಕೊಂಡಿರುವ ನಟ ಸುರೇಶ್ ಹೆಬ್ಬೀಕರ್ ಅವರದ್ದು ಇಲ್ಲಿ ವಿಶೇಷ ಪಾತ್ರ. ಚಿತ್ರ ತಂಡ ಹೇಳುವ ಪ್ರಕಾರ, ಅದು ಗಾಂಧಿ ತತ್ವ ಪರಿಪಾಲಿಸುವ ಪಾತ್ರ ಎನ್ನುವುದು ವಿಶೇಷ. ಗಾಂಧಿ ಜಯಂತಿ ಸಂದರ್ಭದಲ್ಲಿ ಆ ಪಾತ್ರದ ಕುರಿತು ಚಿತ್ರ ತಂಡ ತನ್ನ ಅನಿಸಿಕೆ ಹಂಚಿಕೊಂಡಿದೆ.

ಮಹಾತ್ಮ ಗಾಂಧಿಯ ಬದುಕಿಗೂ ಮತ್ತು ಸುರೇಶ್ ಹೆಬ್ಳೀಕರ್ ಅವರು ನಿರ್ವಹಿಸುತ್ತಿರುವ ಪಾತ್ರಕ್ಕೂ ಸಾಕಷ್ಟು ಹೋಲಿಕೆಗಳಿವೆ. ಅಲ್ಲದೇ, ಗಾಂಧಿ ಬದುಕನ್ನೇ ಆದರ್ಶವಾಗಿ ತಗೆದುಕೊಂಡು ಬದುಕುವ ಪಾತ್ರ ಕೂಡ ಅದಾಗಿದೆ. ಗಾಂದಿಯ ಮೌಲ್ಯ, ಜೀವನ, ಸಾಧನೆಯನ್ನು ಈ ಪಾತ್ರದ ಮೂಲಕ ಸಮೀಕರಿಸಬಹುದಾಗಿದೆ. ಈ ಪಾತ್ರದ ಕುರಿತು ಗುರು ಶಿಷ್ಯರು ಸಿನಿಮಾದ ಕ್ರಿಯೇಟಿವ್ ಹೆಡ್ ಮತ್ತು ಕೋ ಪ್ರೊಡ್ಯುಸರ್ ತರುಣ್ ಕಿಶೋರ್ ಹೇಳುವುದು ಹೀಗೆ ” ನಮ್ಮ ಈ ಸಿನಿಮಾದಲ್ಲಿ ಸುರೇಶ್ ಹೆಬ್ಳೀಕರ್ ಅವರು ಗಾಂಧಿ ತತ್ವವನ್ನು ಪಾಲಿಸುವ ವ್ಯಕ್ತಿಯಾಗಿ ಮತ್ತು ಹಳ್ಳಿಯೊಂದರಲ್ಲಿ ಶಾಲೆ ನಡೆಸುವ ಅಪ್ಪಟ ಗಾಂಧಿವಾದಿಯಾಗಿ ನಟಿಸುತ್ತಿದ್ದಾರೆ. ಪಾತ್ರ ಮತ್ತು ಸಿನಿಮಾದ ಬಗೆಗಿರುವ ಅವರ ಪ್ರೀತಿ ಎಂದಿಗೂ ಮಾದರಿ. ಪರಿಸರ ಹೋರಾಟಗಾರರಾಗಿ, ರಾಷ್ಟ್ರ ಪ್ರಶಸ್ತಿ ಪುರಸ್ಕೃತರಾಗಿ ನಮ್ಮೊಂದಿಗೆ ಅವರು ಬೆರೆತ ರೀತಿ ಹೆಮ್ಮೆ ಮೂಡಿಸುವಂಥದ್ದು. ಸಾಮಾನ್ಯವಾಗಿ ವ್ಯಾಪಾರಿ ಗುಣದ ಚಿತ್ರಗಳಲ್ಲಿ ಕಾಣಿಸಿಕೊಳ್ಳದ ಇವರು, ಇದೇ ಮೊದಲ ಬಾರಿಗೆ ನಮ್ಮ ಸಿನಿಮಾದಲ್ಲಿ ನಟಿಸಿದ್ದು ಖುಷಿ ತಂದಿದೆ”.

ಜಂಟಲ್ ಮನ್ ಖ್ಯಾತಿಯ ನಿರ್ದೇಶಕ ಜಡೇಶ್ ಕೆ ಹಂಪಿ ಈ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದು ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ. ಸುಧಾಕರ್ ಶೆಟ್ಟಿ ಅವರ ಸಿನಿಮಾಟೋಗ್ರಫಿ ಚಿತ್ರಕ್ಕಿದೆ. ನಟ ಶರಣ್ ಅವರ ಲಡ್ಡು ಸಿನಿಮಾಸ್ ಮತ್ತು ತರುಣ್ ಕಿಶೋರ್ ಅವರ ಕ್ರಿಯೇಟಿವಿಸ್ ಬ್ಯಾನರ್ ನಲ್ಲಿ ಗುರು ಶಿಷ್ಯರು ಚಿತ್ರ ತಯಾರಾಗಿದೆ. ಈಗಾಗಲೇ ಶೇಕಡಾ ಎಂಬತ್ತರಷ್ಟು ಸಿನಿಮಾದ ಶೂಟಿಂಗ್ ಮುಗಿದಿದ್ದು, ಕೊನೆಯ ಹಂತದ ಚಿತ್ರೀಕರಣಕ್ಕಾಗಿ ಬೆಂಗಳೂರಿನಲ್ಲಿ ಸಿದ್ದತೆ ನಡೆದಿದೆ. ಎಂದಿನಂತೆ ಮಾಧ್ಯಮದ ಮಿತ್ರರ ಸಹಕಾರವನ್ನು ಕೋರುತ್ತೇವೆ. ಈ ಸಿನಿಮಾದಲ್ಲಿ ಶರಣ್ ನಾಯಕನಾಗಿ ನಟಿಸಿದ್ದು, ಇಲ್ಲಿ ಅವರು ಪಿಟಿ ಮಾಸ್ಟರ್ ಪಾತ್ರ ಮಾಡಿದ್ದಾರೆ. ನಿಶ್ವಿಕಾ ನಾಯಕಿ. ಹಿರಿಯ ನಟ ದತ್ತಣ್ಣ ಸೇರಿದಂತೆ ಹೆಸರಾಂತ ಕಲಾವಿದರು ನಟಿಸಿದ್ದಾರೆ.

  • ಎಂಟರ್‌ ಟೈನ್‌ ಮೆಂಟ್‌ ಬ್ಯೂರೋ ಸಿನಿಲಹರಿ
Categories
ಸಿನಿ ಸುದ್ದಿ

ಕನ್ನಡತಿ ರಂಜಿನಿ ರಾಘವನ್ ಅವರ ಕತೆ ಡಬ್ಬಿ ಹೊರ ಬಂತು : ನಟಿ ಈಗ ಲೇಖಕಿ ಆಗಿ ಬಡ್ತಿ !

ಪುಟ್ಟಗೌರಿ ಮದುವೆ ಸೀರಿಯಲ್ ಖ್ಯಾತಿಯ ಜನಪ್ರಿಯ ನಟಿ, ನಿರ್ದೇಶಕಿ ರಂಜನಿ ರಾಘವನ್ ಈಗ ಕತೆಗಾರ್ತಿ ಆಗಿ ಬಡ್ತಿ ಪಡೆದಿದ್ದಾರೆ. ಆ ಮೂಲಕ ಲೇಖಕಿ ಆಗಿ ಬಣ್ಣದ ಜಗತ್ತಿನಿಂದ ಸಾಹಿತ್ಯಕ್ಕೆ ಕ್ಷೇತ್ರಕ್ಕೂ ಪ್ರವೇಶ ಮಾಡಿದ್ದಾರೆ. ಹೆಸರಾಂತ ಪತ್ರಕರ್ತ ಜಿ.ಎನ್. ಮೋಹನ್ ಅವರ “ಅವದಿ’ ವೆಬ್ ಪತ್ರಿಕೆಯಲ್ಲಿ ನಟಿ ರಂಜನಿ ರಾಘವನ್ ಇದುವರೆಗೂ ಬರೆದ ಅವರ ಕಥೆಗಳ ಸಂಗ್ರಹ ಈಗ ‘ಕತೆ ಡಬ್ಬಿ’ರೂಪದಲ್ಲಿ ಹೊರ ಬಂದಿದೆ. ಬಹುರೂಪಿ ಪ್ರಕಾಶನ ಈ ಕೃತಿಯನ್ನು ಹೊರ ತಂದಿದೆ. ಇತ್ತೀಚೆಗಷ್ಟೇ ‘ಕತೆ ಡಬ್ಬಿ’ ಕೃತಿ ಬಿಡುಗಡೆ ಆಗಿದೆ.

ನಟನೆಯಲ್ಲಿಯೇ ಬ್ಯುಸಿ ಆಗಿದ್ದ ನಟಿ ರಂಜಿನಿ ರಾಘವನ್, ಕಲರ್ಸ್ ಕನ್ನಡದಲ್ಲಿ ಪ್ರಸಾರವಾದ ‘ಇಷ್ಟದೇವತೆ’ ಧಾರಾವಾಹಿಗೆ ಕಥೆ, ಚಿತ್ರಕಥೆ ಬರೆಯುವ ಮೂಲಕ ಬರಹಗಾರ್ತಿಯೂ ಆಗಿದ್ದರು. ಅಲ್ಲಿಂದ ಬರವಣಿಗೆಯ ಪಯಣದಲ್ಲೀಗ ಕಥಾ ಸಂಕಲನ ಹೊರ ತಂದು ಲೇಖಕಿಯೂ ಆಗಿದ್ದಾರೆ. ಇಷ್ಟಕ್ಕೂ ಕುತೂಹಲ ಇರೋದು ಅವರಲ್ಲಿ ಬರವಣಿಗೆಯ ಕಲೆ ಸಿದ್ದಿಸಿದ್ದು ಹೇಗೆ ಅಂತ.’ನಂಗೆ ಮೊದಲಿನಿಂದಲೂ ಓದುವುದರಲ್ಲಿ ಹೆಚ್ಚು ಆಸಕ್ತಿ. ಓದಿನ ದಿನಗಳಲ್ಲಿಯೇ ಸಾಹಿತ್ಯದ ಪುಸ್ತಕಗಳನ್ನು ಹೆಚ್ಚಾಗಿ ಓದುತ್ತಾ ಬರುತ್ತಿದೆ. ಹಾಗಾಗಿಯೇ ಬರವಣಿಗೆಯ ಬಗ್ಗೆಯೂ ಆಸಕ್ತಿ ಮೂಡಿತ್ತು. ಆದರೆ ಮುಂದೆ ನಟನೆಯಲ್ಲಿ ಬ್ಯುಸಿ ಆದೆ. ಅಲ್ಲಿಯೇ ಹೆಚ್ಚು ಗಮನ ಹರಿಸಿದೆ. ಆದರೆ ಇಷ್ಟ ದೇವತೆ ಧಾರಾವಾಹಿಗೆ ನಾನೇ ಕಥೆ, ಚಿತ್ರಕಥೆ ಬರೆಯೋ ಅವಕಾಶ ಸಿಕ್ಕಿತು. ಅಲ್ಲಿಂದ ಬರವಣಿಗೆ ಶುರು ಮಾಡಿದೆ. ನಾನು ಬರೆದಿದ್ದಕ್ಕೆ ದೊಡ್ಡ ವೇದಿಕೆ ಆಗಿದ್ದ ಅವದಿ ವೆಬ್ ಪತ್ರಿಕೆ. ʻಅವಧಿʼ ವೆಬ್‌ ಪತ್ರಿಕೆಯಲ್ಲಿ ವಾರಕ್ಕೊಮ್ಮೆ ಕತೆಗಳನ್ನು ಬರೆದೆ. ಅದಕ್ಕೆ ಬಂದ ಪ್ರತಿಕ್ರಿಯೆಗಳು ನನಗೆ ಉತ್ಸಾಹ ತುಂಬಿತು ಅದೇ ಕಾರಣವಾಗಿ ‘ಕತೆ ಡಬ್ಬಿ’ ಪುಸ್ತಕವಾಗಿ ರೂಪುಗೊಂಡಿತು. ಪುಸ್ತಕ ಬರೆಯುವ ಕನಸೊಂದು ನನ್ನ ಮನಸಿನ ಮೂಲೆಯಲ್ಲಿ ಕುಳಿತಿತ್ತು. ಅದೀಗ ಕತೆ ಡಬ್ಬಿ ಮೂಲಕ ಇದು ಸಾಕಾರಗೊಂಡಿದೆ. ಮೊದಲ ಪುಸ್ತಕವಾಗಿದ್ದರಿಂದ ತುಂಬಾ ಸಂಭ್ರಮದಲ್ಲಿರುವೆ.ಮುಂದೆ ಕಾದಂಬರಿಯನ್ನು ಬರೆಯುವ ಹಸಿವು ಇದೆ ಎನ್ನುವ ಮಾತುಗಳನ್ನು ನಟಿ ರಂಜಿನಿ ರಾಘವನ್ ಕಥಾ ಸಂಕಲನ ʻಕತೆ ಡಬ್ಬಿʼ ಬಿಡುಗಡೆ ಸಮಾರಂಭದಲ್ಲಿ ಹಂಚಿಕೊಂಡರು.

ಹಿರಿಯ ಪತ್ರಕರ್ತ, ಲೇಖಕ ಜೋಗಿ ಕೃತಿ ಬಿಡುಗಡೆ ಮಾಡಿದರು. ಆನಂತರ ಅವರು ಮಾತನಾಡುತ್ತಾ, ಕತೆ ಹೇಳುವ ಶೈಲಿ ಮತ್ತು ವಯಸ್ಸನ್ನು ಮೀರಿ ಆಲೋಚನೆ, ಸೊಗಸಾದ ತಂತ್ರಗಾರಿಕೆಯ ಬಳಕೆ ಮತ್ತು ಇಂದಿನ ಕಾಲದ ಭಾಷೆಯನ್ನು ಹಿಡಿದಿಡುವ ನೈಜತೆ ʻಕನ್ನಡತಿʼ ರಂಜನಿ ರಾಘವನ್‌ ಅವರ ಕಥೆಗಳ ಹೆಚ್ಚುಗಾರಿಕೆ ಎಂದರು.ಮನುಷ್ಯನ ಪಿಪಾಸುತನ ಮತ್ತು ದಾಹವನ್ನು ಹಿಡಿದಿಟ್ಟಿದ್ದಾರೆ. ಗಾಢವಾಗಿರುವ ಕತೆಗಳನ್ನು ಕಟ್ಟಿಕೊಟ್ಟಿದ್ದಾರೆ. ಬದುಕನ್ನು ಸುಂದರಗೊಳಿಸುವ ಮತ್ತು ಕತೆಯಲ್ಲಿ ಬರುವ ಸೂಕ್ಷ್ಮಗಳನ್ನು ಬಹುವಾಗಿ ಹಿಡಿದಿದ್ದಾರೆ ಎಂದು ಶ್ಲಾಘಿಸಿದರು.

ಚಿತ್ರ ನಿರ್ದೇಶಕ ಜಯತೀರ್ಥ ಕೃತಿ ಬಿಡುಗಡೆಗೆ ಅತಿಥಿಯಾಗಿದ್ದರು. ‘ ಸಂಪ್ರದಾಯದ ಹೊರೆ ಕಳಚಿ ಸತ್ಯಕ್ಕೆ ಹತ್ತಿರವಾಗುವ ಪ್ರಾಮಾಣಿಕ ಪ್ರಯತ್ನಪಟ್ಟಿದ್ದಾರೆ’ ಎಂದರು. ಹಾಗೆಯೇ ಚಿತ್ರ ನಟ ಋಷಿ ಅತಿಥಿಯಾಗಿ ಬಂದಿದ್ದರು.’ಬಹುರೂಪಿ’ ಯ ಜಿ ಎನ್‌ ಮೋಹನ್‌, ಬಹುರೂಪಿ ಬುಕ್‌ ಹಬ್‌ ನಿರ್ದೇಶಕರಾದ ಶ್ರೀಜಾ ವಿ ಎನ್, ಧೀರಜ್‌ ಹನುಮೇಶ್ ಉಪಸ್ಥಿತರಿದ್ದರು.

  • ಎಂಟರ್‌ ಟೈನ್‌ ಮೆಂಟ್‌ ಬ್ಯೂರೋ ಸಿನಿಲಹರಿ

Categories
ಸಿನಿ ಸುದ್ದಿ

ವಿಜಯಾನಂದ ಆಡಿಷನ್ಸ್ ಗೆ‌ ಕಲಾವಿದರ‌ ನೂಕು‌ನುಗ್ಗಲು : ಬಂದವರ ಸಂಖ್ಯೆ ಕಂಡು ಚಿತ್ರ ತಂಡವೇ ಕಂಗಾಲು !

ವಿಆರ್‌ ಎಲ್‌ ಸಂಸ್ಥೆಯ ಮಾಲೀಕ ವಿಜಯ ಸಂಕೇಶ್ವರ ಅವರ ಬಯೋಫಿಕ್‌ ವಿಜಯಾನಂದ ಚಿತ್ರ ಸೆಟ್ಟೇರಲು ರೆಡಿ ಆಗಿದೆ. ಅಕ್ಟೋಬರ್‌ ೨೪ಕ್ಕೆ ಗ್ರಾಂಡ್‌ ಮುಹೂರ್ತಕ್ಕೆ ದಿನ ಫಿಕ್ಸ್‌ ಆಗಿದೆ. ಅಲ್ಲಿಂದ ಶೂಟಿಂಗ್‌ ಸ್ಟಾರ್ಟ್‌ ಆಗ್ತಿದೆ.

ಯುವ ನಿರ್ದೇಶಕಿ ರಿಷಿಕಾ ಶರ್ಮಾ ನಿರ್ದೇಶನದ ಬಹುನಿರೀಕ್ಷಿತ ಚಿತ್ರ ʼವಿಜಯಾನಂದʼ ಸೆಟ್ಟೇರಲು ಸಜ್ಜಾಗಿದೆ. ಎಲ್ಲವೂ ಅಂದುಕೊಂ ಡಂತೆಯೇ ಆಗಿದ್ದರೆ ಚಿತ್ರಕ್ಕೆ ಸೆಪ್ಟೆಂಬರ್‌ ಕೊನೆ ವಾರದಲ್ಲಿಯೇ ಮುಹೂರ್ತ ಮುಗಿದು ಹಳೇ ಮಾತೇ ಆಗುತ್ತಿತ್ತೇನೋ, ಆದರೆ ತಾಂತ್ರಿಕ ಕಾರಣದಿಂದ ಮುಹೂರ್ತದ ದಿನಾಂಕ ಪೋಸ್ಟ್‌ ಪೋನ್ಡ್‌ ಆಯಿತು. ಈಗ ಅಕ್ಟೋಬರ್‌ ೨೪ಕ್ಕೆ ಗ್ರಾಂಡ್‌ ಮುಹೂರ್ತಕ್ಕೆ ದಿನ ಫಿಕ್ಸ್‌ ಆಗಿದೆ. ಸದ್ಯಕ್ಕೆ ಚಿತ್ರ ತಂಡ ಅದೇ ಕೆಲಸದಲ್ಲಿ ಬ್ಯುಸಿ ಆಗಿದೆ. ಈ ನಡುವೆ ಪ್ರೀ ಪ್ರೊಡಕ್ಷನ್‌ ಕೆಲಸಗಳಲ್ಲಿಯೇ ತೊಡಗಿಸಿಕೊಂಡಿರುವ ಚಿತ್ರ ತಂಡ, ಕಳೆದ ನಾಲ್ಕೈದು ದಿನಗಳ ಹಿಂದಷ್ಟೇ ಹುಬ್ಬಳ್ಳಿಯಲ್ಲಿ ದೊಡ್ಡದೊಂದು ಆಡಿಷನ್ಸ್‌ ಶೋ ಮುಗಿಸಿಕೊಂಡು ಬಂದಿದೆ. ಚಿತ್ರತಂಡ ಹೇಳುವ ಮಟ್ಟಿಗೆ ಅದೊಂದು ದಾಖಲೆಯ ಆಡಿಷನ್ಸ್‌ ಶೋ. ಆಡಿಷನ್ಸ್‌ ಗೆ ಬಂದ ಕಲಾವಿದರ ಸಂಖ್ಯೆಯೇ ಅದಕ್ಕೆ ಸಾಕ್ಷಿಯಂತೆ.

ಹೌದು, ಹುಬ್ಬಳ್ಳಿಯ ಸವಾಯಿ ಗಂಧರ್ವ ಕಲಾಮಂದಿರಕ್ಕೆ ಆ ದಿನ ಕಲಾವಿದರ ದಂಡೇ ಆಗಮಿಸಿತ್ತು. ನೋಡಿದವರಿಗೆಲ್ಲ ಅಲ್ಲೆನೋ ರಾಜಕೀಯ ಸಮಾವೇಶವೇ ಜರುಗಿದೆ ಅಂತಲೇ ಅನಿಸುವಂತಿತ್ತು ಆಡಿಷನ್ಸ್‌ ಶೋ. ನೂರಿನ್ನೂರು ಅಲ್ಲ, ಅಲ್ಲಿಗೆ ಬಂದವರ ಸಂಖ್ಯೆ ಕನಿಷ್ಠ ೫ ಸಾವಿರಕ್ಕೂ ಹೆಚ್ಚಿತ್ತು. ಅಷ್ಟು ಕಲಾವಿದರಿಗೂ ಆಡಿಷನ್ಸ್‌ ಅವಕಾಶ ಕೊಟ್ಟ ಚಿತ್ರ ತಂಡ, ಚಿತ್ರದ ಪಾತ್ರಗಳಿಗೆ ಸೂಕ್ತವಾಗುವ ೪೦ ಕ್ಕೂ ಹೆಚ್ಚು ಕಲಾವಿದರನ್ನು ಆಯ್ಕೆ ಮಾಡಿಕೊಂಡು ಬಂದಿದೆ. ಅಂದ ಹಾಗೆ ʼವಿಜಯಾನಂದʼ ಚಿತ್ರವು ವಿಆರ್‌ ಎಲ್‌ ಸಂಸ್ಥೆಯ ಮಾಲೀಕ, ನಾಡಿನ ಉದ್ಯಮಿ ವಿಜಯ ಸಂಕೇಶ್ವರ ಅವರ ಬಯೋಫಿಕ್.‌ ಅದೇ ಕಾರಣಕ್ಕೆ ಹುಬ್ಬಳ್ಳಿಯ ಆಡಿಷನ್ಸ್‌ ಜಾತ್ರೆಯಂತೆ ನಡೆಯಿತು ಅನ್ನೋದು ಚಿತ್ರ ತಂಡದ ಮಾತು ಕೂಡ.

ʼಚಿತ್ರದ ಮುಖ್ಯ ಪಾತ್ರಗಳನ್ನು ಹೊರತು ಪಡಿಸಿ, ಒಂದಷ್ಟು ಸಹ ಕಲಾವಿದರು ಚಿತ್ರಕ್ಕೆ ಬೇಕಿದೆ. ಅವರೆಲ್ಲ ಉತ್ತರ ಕರ್ನಾಟಕದ ಭಾಷೆ ಬಲ್ಲವರೇ ಆಗಬೇಕಿದೆ. ಅದೇ ಕಾರಣಕ್ಕೆ ನಾವು ಒಂದು ದಿನ ಕಾಲ ಹುಬ್ಬಳ್ಳಿಯಲ್ಲಿ ಆಡಿಷನ್ಸ್‌ ಆಯೋಜಿಸಿದ್ದೇವು. ಇದನ್ನು ಮೊದಲೇ ಅನೌನ್ಸ್‌ ಮಾಡಿದ್ದೆವು. ಅದೇ ಕಾರಣಕ್ಕೆ ಇರಬೇಕು, ಆಡಿಷನ್ಸ್‌ ಗೆ ನಾವು ನಿರೀಕ್ಷೆ ಮಾಡಿದ್ದಕ್ಕಿಂತ ಮೂರು ಪಟ್ಟು ಕಲಾವಿದರು ಆಗಮಿಸಿದ್ದರು. ರಾಜ್ಯದ ವಿವಿಧ ಜಿಲ್ಲೆಗಳಿಂದ ಮಾತ್ರವಲ್ಲದೆ ಗೋವಾ, ಮುಂಬೈನಿಂದಲೂ ಒಂದಷ್ಟು ಕಲಾವಿದರು ಬಂದಿದ್ದರು. ಬಂದವರ ಸಂಖ್ಯೆ ಹೆಚ್ಚಿದೆ ಅಂತ ಯಾವರನ್ನು ಯಾರನ್ನು ವಾಪಸ್‌ ಕಳುಹಿಸಿಲ್ಲ. ಆಡಿಷನ್ಸ್‌ ಗೆ ನಾವು ನಾಲ್ಕು ತಂಡಗಳಲ್ಲಿ ಸಿದ್ದತೆ ಮಾಡಿಕೊಂಡಿದ್ದೆವು. ಅಂದು ಅಲ್ಲಿಗೆ ಬಂದವರೆನ್ನೆಲ್ಲ ಆಡಿಷನ್ಸ್‌ ಅವಕಾಶ ಕೊಟ್ಟು, ನಮ್ಮ ಚಿತ್ರದ ಪಾತ್ರಗಳಿಗೆ ಬೇಕಿದ್ದ ಕಲಾವಿದರನ್ನೇ ಆಯ್ಕೆ ಮಾಡಿಕೊಂಡಿದ್ದೇವೆʼ ಎನ್ನುತ್ತಾರೆ ನಿರ್ದೇಶಕಿ ರಿಷಿಕಾ ಶರ್ಮಾ.

ಅಂದ ಹಾಗೆ, ‘ವಿಜಯಾನಂದ’ ಚಿತ್ರ ಕನ್ನಡದ ಮಟ್ಟಿಗೆ ಒಂದು ವಿಶೇಷ ಚಿತ್ರವಾಗುವುದಂತೂ ಹೌದು. ಒಂದು ಲಾರಿಯಿಂದ ಇವತ್ತು ಸಾವಿರಾರು ಬಸ್ಸು ಹಾಗೂ ಲಾರಿಗಳನ್ನು ಹೊಂದಿದ್ದು ಮಾತ್ರವಲ್ಲ ದೊಡ್ಡ ಉದ್ಯಮಿಯಾಗಿ ಹೊರ ಹೊಮ್ಮಿರುವ ವಿಜಯ ಸಂಕೇಶ್ವರ ಅವರ ಬಯೋಪಿಕ್‌ ಎನ್ನುವುದು ಅದಕ್ಕೆ ಕಾರಣ. ದೊಡ್ಡ ಸಾಧನೆಯ ಮೂಲಕವೇ ಕನ್ನಡಿಗರ ಮನೆ ಮಾತನಾದ ವಿಜಯ ಸಂಕೇಶ್ವರ ಅವರ ಸಾಹಸದ ಬದುಕು ಈಗ ತೆರೆ ಮೇರೆ ಬರುತ್ತಿದೆಅಂದರೆ ಕೂತೂಹಲ ಇಲ್ಲದೆ ಇರುತ್ತಾ? ಹುಬ್ಬಳ್ಳಿ ಸೇರಿ ಈಗ ಉತ್ತರ ಕರ್ನಾಟಕದಲ್ಲಿ ದೊಡ್ಡ ಹವಾ ಶುರುವಾಗಿದೆ.

ಅಂದ ಹಾಗೆ, ವಿಜಯ ಸಂಕೇಶ್ವರ ಅವರ ಪಾತ್ರದಲ್ಲಿ ಭರವಸೆಯ ಯುವ ನಟ ನಿಹಾಲ್‌ ರಜಪೂತ್‌ ಕಾರಣಿಸಿಕೊಳ್ಳುತ್ತಿದ್ದಾರೆ. ಹಿರಿಯ ನಟ ಅನಂತನಾಗ್‌ ಕೂಡ ಚಿತ್ರದಲ್ಲಿದ್ದಾರೆ. ಉಳಿದಂತೆ ದೊಡ್ಡ ತಾರಾಗಣವೇ ಚಿತ್ರದಲ್ಲಿದೆ. ಅದೆಲ್ಲವೂ ಇಷ್ಟರಲ್ಲಿಯೇ ರಿವೀಲ್‌ ಆಗಲಿದೆಯಂತೆ. ಆಡಿಷನ್ಸ್‌ ನಲ್ಲಿ ವಿಆರ್‌ಎಲ್‌ ಸಂಸ್ಥೆಯ ಎಂಡಿ ಆನಂದ್‌ ಸಂಕೇಶ್ವರ್‌ ಕೂಡ ಭಾಗವಹಿಸಿದ್ದರು.

  • ಎಂಟರ್‌ಟೈನ್‌ಮೆಂಟ್‌ ಬ್ಯೂರೋ ಸಿನಿಲಹರಿ
Categories
ಸಿನಿ ಸುದ್ದಿ

ಅವಕಾಶ ಸಿಗಲಿಲ್ಲ ಅಂದ್ರೆ ಆ ನಟಿಗೆ ಆತ್ಮಹತ್ಯೆಯೇ ಪರಿಹಾರ ಆಗಬೇಕಿತ್ತಾ?

ಬೆಳೆದ ಬೆಳೆ ಬರಲಿಲ್ಲ ಅಂತನೋ, ಬೆಳೆದ ಬೆಳೆಗೆ ನ್ಯಾಯಯುತ ಬೆಲೆ ಸಿಗಲಿಲ್ಲ ಅಂತಲೋ ಇಲ್ಲಿ ರೈತರ ಅತ್ಮಹತ್ಯೆ ನಡೆದಿವೆ. ಕಾರ್ಮಿಕರು ಕಾರ್ಖಾನೆ ಮುಚ್ಚಿ ತಮಗೆ ಕೆಲಸ ಇಲ್ಲದಂತಾಗಿದೆ ಅಂತ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪಡೆದ ಸಾಲ ತೀರಿಸಲಾಗದೆ ಅದೆಷ್ಟೋ ಬಡ ಕುಟುಂಬಗಳು ಕೂಡ ಅತ್ಮಹತ್ಯೆ ಮಾಡಿಕೊಂಡಿವೆ.ಹಾಗೆಯೇ ಪರೀಕ್ಷೆಯಲ್ಲಿ ಫೇಲಾದೆ ಅಂತಲೋ, ಒಳ್ಳೆಯ ಅಂಕಬಂದಿಲ್ಲೋ ಅಂತಲೋ ಬೆಳೆಯಬೇಕಿದ್ದ ವಿದ್ಯಾರ್ಥಿಗಳು ಕೂಡ ನೇಣಿಗೆ ಶರಣಾಗಿದ್ದಾರೆ. ವರದಕ್ಷಿಣೆ ಕಿರುಕುಳ ತಾಳಲಾರದೆ ಅದೆಷ್ಟೋ ವಿವಾಹಿತ ಹೆಣ್ಣು ಮಕ್ಕಳು ತವರಿಗೆ ಬಾರಲಾರದೆ ಸ್ಮಶಾನದ ಪಾಲಾಗಿದ್ದಾರೆ. ಆದರೂ ಸಮಾಜ ಯಾವುದನ್ನು ಗಂಭೀರವಾಗಿ ತೆಗೆದುಕೊಂಡಿಲ್ಲ. ಬದಲಿಗೆ ಅವೆಲ್ಲ ಪ್ರಕರಣಗಳಿಗೆ ಇನ್ನಾವುದೋ ಕಾರಣ ಸೇರಿಸಿ, ಅರ್ಥಕ್ಕೆ ಅಪಾರ್ಥ ಬರುವಂತೆಯೇ ಮಾಡಿದೆ. ಹಾಗಾಗಿ ಆತ್ಮಹತ್ಯೆಗಳ ಹಿಂದಿನ ನಿಜ ಕಾರಣಗಳು ಇಲ್ಲಿಮಣ್ಣು ಪಾಲಾಗಿ, ಯಾರಿಗೂ ನ್ಯಾಯ ಸಿಕ್ಕಿಲ್ಲ ಎನ್ನುವ ಕಟು ಸತ್ಯದ ನಡುವೆಯೇ ಕನ್ನಡದ ನಟಿಯೊಬ್ಬಳು ನಟಿಸಲು ಅವಕಾಶ ಸಿಗದೆ ಅತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ವರದಿ ಆಗಿದೆ.

ಆಕೆಯ ಹೆಸರು ಸೌಜನ್ಯ ಅಲಿಯಾಸ್ ಸವಿ ಮಾದಪ್ಪ. ಕೊಡಗು ಮೂಲದ ನಟಿ. ಒಂದೆರೆಡು ಸಿನಿಮಾಗಳಲ್ಲೂ ಅಭಿನಯಿಸಿದ್ದಳಂತೆ. ಈಗೀಗ ನಟಿಸಲು ಅವಕಾಶ ಸಿಗದೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ಹೇಳಲಾಗಿದೆ. ಇದು ಬಿಟ್ಟರೆ ಇನ್ನೇನೋ ಕಾರಣವೂ ಇರಬಹುದು. ಅಥವಾ ಅದೇನಿಜವಾದ ಕಾರಣವೇ ಇರಬಹುದು. ಇರಲಿ, ಆಕೆ ಅವಕಾಶ ಸಿಗದ ಕಾರಣಕ್ಕಾಗಿಯೇ ಆತ್ಮಹತ್ಯೆ ಮಾಡಿಕೊಂಡಿ ದ್ದಾಳೆನ್ನುವುದೇ ನಿಜವಾಗಿದ್ದರೂ, ಚಿತ್ರರಂಗ ಅದನ್ನು ಗಂಭೀರವಾಗಿ ಪರಿಗಣಿಸುತ್ತೆ ಅಂತ ನಮಗೇನು ಅನಿಸೋದಿಲ್ಲ. ಯಾಕಂದ್ರೆ ಈ ಚಿತ್ರರಂಗವೂ ಸೇರಿ ಈ ಕಟ್ಟ ಸಮಾಜದ ಆಲೋಚನೆಗಳೇ ಬೇರೆ. ವಿವಾಹಿತವೋ ಅಥವಾ ಅವಿವಾಹಿತವೋ ವಯಸ್ಸಿನ ಒಂದು ಹುಡುಗಿ ಆತ್ಮಹತ್ಯೆ ಮಾಡಿಕೊಂಡಳು ಅಂದ್ರೆ ಸಮಾಜದಲ್ಲಿ ಮೊದಲು ಕೇಳಿ ಬರುವ ಮಾತೇ ಆಕೆಯ ಇತರೆ ರಿಲೇಷನ್ ಶಿಫ್ ಗಳ ಬಗ್ಗೆ. ಇದೇ ಮಾತು ಚಿತ್ರರಂಗಕ್ಕೂಅನ್ವಯವೇ ಹೌದು.

ಈ ವಾಸ್ತವ ಸಿನಿಮಾ ರಂಗಕ್ಕೆ ಹೊಸದಾಗಿ ಬರುವ ಪ್ರತಿಭೆಗಳಿಗೆ ಗೊತ್ತಿರಲಿ. ಹೋದವರು ಹೋದರಷ್ಟೇ ಅಂತಲೇ ನೋಡುತ್ತೆ ಈ ವ್ಯವಸ್ಥೆ. ಇನ್ನು ಹೊಸಪ್ರತಿಭೆಗಳನ್ನು ಚಿತ್ರೋದ್ಯಮ ನೋಡುವ ರೀತಿಯೇ ಇಲ್ಲಿ ವಿಚಿತ್ರ. ಹೊಸಪ್ರತಿಭೆಗಳು ಇಲ್ಲಿ ಒಂದು ಅವಕಾಶ ಪಡೆಯಬೇಕಾದರೆ ಸಿಕ್ಕಾಪಟ್ಟೆ ಸರ್ಕಸ್ ಮಾಡ್ಬೇಕು. ನಿರ್ಮಾಪಕರು, ನಿರ್ದೇಶಕರ ಮನೆ ಬಾಗಿಲಿಗೆ ತಿರುಗಬೇಕು. ಇನ್ನು ಒಂದು ಹೆಜ್ಜೆ ಮುಂದೆ ಹೋಗಿ ಅವರ ಆಸೆ- ಆಕಾಂಕ್ಷೆಗಳನ್ನು ಈಡೇರಿಸಬೇಕು. ಅಂತಹದರಲ್ಲಿ ಒಂದು ಅವಕಾಶ ಸಿಕ್ಕರೂ, ಅದರಲ್ಲಿಯೇ ಇಲ್ಲಿ ನೆಲೆ ಕಂಡುಕೊಳ್ಳುವುದು ಅಷ್ಟೇನು ಸುಲಭ ಇಲ್ಲ. ಅದೊಂಥರ ಅದೃಷ್ಟದಾಟ. ಅಂತಹದರಲ್ಲಿ ಅವಕಾಶಕ್ಕಾಗಿ ಅದೆಷ್ಟು ಹೊಸ ಪ್ರತಿಭೆಗಳು, ಇಲ್ಲಿಗೆ ಬಂದು ವಾಪಾಸ್ ಹೋಗಿವೆಯೋ ಗೊತ್ತಿಲ್ಲ. ಆದರೆ ಅವರೆಲ್ಲ ಮನನೊಂದು ಆತ್ಮಹತ್ಯೆ ಮಾಡಿಕೊಂಡಿಲ್ಲ.ಈ ಹುಡುಗಿ ಮಾತ್ರ, ಬದುಕೋದಿಕ್ಕೆಆಗುತ್ತಿಲ್ಲ ಅಂತ ಮತ್ತೆ ಬಾರದ ಲೋಕಕ್ಕೆಪಯಣ ಬೆಳೆಸಿಬಿಟ್ಟಿದ್ದಾಳೆ. ಪಾಪಾ, ಆಕೆಯ ಅಪ್ಪ- ಅಮ್ಮ ಕುಟುಂಬ ಅದೆಷ್ಟು ನೊಂದಿದೆಯೋ, ಇಂತಹ ಸ್ಥಿತಿ ಇನ್ನಾರಿಗೂ ಇಲ್ಲಿ ಬರುವುದು ಬೇಡ . ಯಾಕಂದ್ರೆ, ಅವಕಾಶ ಸಿಕ್ಕಿಲ್ಲ ಮನನೊಂದರೆ ಅದಕ್ಕೆ ಆತ್ಮಹತ್ಯೆಯೇ ಪರಿಹಾರ ಅಲ್ಲ. ಹೊಸ ದಾರಿ, ಅವಕಾಶಗಳ ಕಡೆಗೆ ಆಲೋಚಿಸಬೇಕು, ಸಿಕ್ಕರೆ ಅಲ್ಲಿಗೆ ಜಂಪ್ ಆಗಬೇಕು.

ನಿಜ, ಚಿತ್ರೋದ್ಯಮ ಇವತ್ತು ಅನೇಕ ಬಿಕ್ಕಟ್ಟು ಗಳ ನಡುವಿದೆ. ಅನೇಕ ಲೋಪದೋಷಗಳನ್ನು ತುಂಬಿಕೊಂಡಿದೆ. ಹೊಸಬರು ಅವಕಾಶಕ್ಕೆ ಪರದಾಡುವ ಪರಿಸ್ಥಿತಿಯೂ ಇಲ್ಲಿದೆ. ಬಿದ್ದವರಿಗೆ ಇಲ್ಲಿ ಅವಮಾನ, ಅಪಮಾನ, ನಿಂದನೆ ಇದ್ದೆ ಇದೆ. ಅವೆಲ್ಲವನ್ನು ಸಹಿಸೋದಿಕ್ಕೆ ಆಗುತ್ತಿಲ್ಲ ಅಂದ್ರೆ ಹೊಸ ಪ್ರತಿಭೆಗಳಿಗೆ ಇನ್ನೇನೋ ಹೊಸ ಕೆಲಸ ಹುಡುಕುವತ್ತ ಬೇರೆಯವರು ಪ್ರೇರಣೆ ಆಗಲಿ. ಅದು ಬಿಟ್ಟು ಆತ್ಮಹತ್ಯೆ ಯೇ ಪರಿಹಾರ ಅಂತಂದುಕೊಂಡರೆ, ರೈತರ ಆತ್ಮಹತ್ಯೆಗಳ ಹಾಗೆ ಇಲ್ಲೂ ಸರಣಿ ಆತ್ಮಹತ್ಯೆ ಗಳು ನಡೆದು ಹೋದವಾ? ಸಮಾಜ ಕೂಡ ತನ್ನ ಮನಸ್ಥಿತಿ ಬದಲಾಯಿಸಿಕೊಳ್ಳಲಿ, ನಡೆಯಬಾರದ ಆತ್ಮಹತ್ಯೆಗಳು ನಡೆದು ಹೋದಾಗ, ಅವುಗಳಿಗೆ ಇನ್ನಾವುದೋ ಕಾರಣದ ಗಾಳಿ ಸುದ್ದಿ ಹರಿಬಿಟ್ಟು, ಅವರ ಕುಟುಂಬದವರನ್ನು ನೋಯಿಸುವುದು ಕೈ ಬಿಡಬೇಕು. ಹಾಗೆಯೇ ಯಾವಾವುದೋ ಕನಸು ಹೊತ್ತು ಸಿನಿಮಾರಂಗಕ್ಕೆ ಬರುವ ಯುವ ಮನಸ್ಸು ಗಳು ಬಂದು ಹತಾಸೆ ಸಿಲುಕದಂತೆನೋಡಿಕೊಳ್ಳಬೇಕಿದೆ. ಹಾಗೆಯೇ ಎಲ್ಲೋ ಒಂದು ಅವಕಾಶ ಸಿಕ್ಕಿತು ಅಂತ ಬಣ್ಣದ ಜಗತ್ತಿಗೆ ಬರುವ ಯುವ ಜನರು ಕೂಡ, ಭ್ರಮೆಯಿಂದ ಹೊರ ಬಂದು ಇಲ್ಲಿ ವಾಸ್ತವ ಲೋಕ ಏನೆಂದು ಅರ್ಥ ಮಾಡಿಕೊಳ್ಳಲಿ.
ಎಂಟರ್‌ ಟೈನ್‌ ಮೆಂಟ್‌ ಬ್ಯೂರೋ ಸಿನಿಲಹರಿ

error: Content is protected !!