ನಾನೇನ್ ದೊಡ್ಡ ಸೆಲಿಬ್ರಿಟಿ ಅಲ್ಲ ; ಹಿಂಗ್ಯಾಕ್ ಅಂದ್ರು ಧ್ರುವ ? ವಿಐಪಿಗಳಿಗೆ ಆಕ್ಷನ್ ಪ್ರಿನ್ಸ್ ಕೊಟ್ಟರು ಶಾಕ್ !?

ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಎಷ್ಟು ದೊಡ್ಡ ಸೆಲಿಬ್ರಿಟಿ ಅಂತ ಇಡೀ ಕರ್ನಾಟಕಕ್ಕೆ ಗೊತ್ತು. ಆದರೆ, ಬಹದ್ದೂರ್ ಹುಡುಗ ನಾನೇನ್ ದೊಡ್ಡ ಸೆಲಿಬ್ರಿಟಿ ಅಲ್ಲ ಬಿಡಿ ಅಂತಾರೇ. ಸ್ಟಾರ್ ನಟನಾಗಿ ಬೆಳೆದು ನಿಂತರೂ ಕೂಡ ಈ ರೀತಿ ಹೇಳೋದು ಅವರ ದೊಡ್ಡ ಗುಣ. ಮಾಡಿರುವುದು ನಾಲ್ಕೇ ನಾಲ್ಕು ಸಿನಿಮಾ ಇರ್ಬೋದು ಆದರೆ ಸಾಧನೆ ಮುಗಿಲೆತ್ತರ, ಅಭಿಮಾನಿಗಳು ಕೋಟ್ಯಾಂತರ.

ಇವತ್ತು, ಭರ್ಜರಿ ಹುಡುಗ ತಮ್ಮ ವಿಐಪಿಗಳಿಗೆ ಶಾಕಿಂಗ್ ನ್ಯೂಸ್ ಕೊಟ್ಟಿದ್ದಾರೆ. ಅದ್ದೂರಿ ಹುಡುಗನ ಅಭಿಮಾನಿಗಳು ಈ ನ್ಯೂಸ್ ನ‌ ನಿರೀಕ್ಷೆ ಮಾಡಿರಲಿಲ್ಲ. ‌ಅಕ್ಟೋಬರ್ 06 ರಂದು ಹಬ್ಬ ಮಾಡಬೇಕು, ತಮ್ಮ ನೆಚ್ಚಿನ ನಟ ಆಕ್ಷನ್ ಪ್ರಿನ್ಸ್ ಹುಟ್ಟುಹಬ್ಬವನ್ನು ಗ್ರ್ಯಾಂಡ್ ಆಗಿ ಆಚರಣೆ ಮಾಡಬೇಕು ಅಂತ ಕನಸು‌ ಕಂಡಿದ್ದರು. ಆದರೆ, ಧ್ರುವ ಬರ್ತ್ ಡೇಗೆ ಬ್ರೇಕ್ ಹಾಕಿದ್ದಾರೆ.‌ ಜನ್ಮದಿನ ಆಚರಣೆ ಮಾಡಿಕೊಳ್ಳದಿರಲು ನಿರ್ಧಾರ ಮಾಡಿದ್ದಾರೆ.

ಕಳೆದ ವರ್ಷವೂ ಧ್ರುವ ಹುಟ್ಟುಹಬ್ಬ ಆಚರಣೆ ಮಾಡಿಕೊಂಡಿರಲಿಲ್ಲ. ಅಣ್ಣನನ್ನು ಕಳೆದುಕೊಂಡ ನೋವಲ್ಲೇ ದಿನದೂಡುತ್ತಿದ್ದ, ಈಗಲೂ ಸಹೋದರ ಚಿರು ನೆನಪಲ್ಲೇ ಬದುಕು ಸಾಗಿಸುತ್ತಿರುವ ಧ್ರುವ ಸರ್ಜಾ ತಮ್ಮ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಿಕೊಳ್ಳದಿರಲು ತೀರ್ಮಾನ ಮಾಡಿದ್ದಾರೆ ಅನ್ಸುತ್ತೆ. ಅಷ್ಟಕ್ಕೂ, ಬರ್ತ್ ಡೇ ದಿನ ಧ್ರುವ ಬೆಂಗಳೂರಿನಲ್ಲಿ ಇರೋದಿಲ್ಲ. ʼಮಾರ್ಟಿನ್ʼ ಚಿತ್ರದ ಚಿತ್ರೀಕರಣಕ್ಕಾಗಿ ವೈಜಾಗ್ ಗೆ ತೆರಳುತ್ತಿದ್ದಾರೆ. ಹೀಗಾಗಿ, ಅಭಿಮಾನಿ ದೇವರುಗಳನ್ನು ಭೇಟಿ ಮಾಡುವುದಕ್ಕೆ ಸಾಧ್ಯವಿಲ್ಲ.

ಅಣ್ಣನ ಅಗಲಿಕೆಯ ನೋವು ಒಂದು ಕಡೆಯಾದರೆ, ಕೊರೋನಾ ಆತಂಕವೂ ಇನ್ನೂ ಇರೋದ್ರಿಂದ ಗುಂಪು ಸೇರಿಸುವುದು ಬೇಡ ಎನ್ನುವುದು ಆಕ್ಷನ್ ಪ್ರಿನ್ಸ್ ನಿರ್ಧಾರ. ಹೀಗಾಗಿ, ಮನೆ ಮುಂದೆ ಸಂಭ್ರಮಾಚರಣೆ ಬೇಡವೆಂದು ಡಿಸೈಡ್ ಮಾಡಿದ್ದಾರೆ. ಇದ್ದಲಿಂದಲೇ ಶುಭಾಶಯ ಕೋರುವಂತೆ ತಿಳಿಸಿದ್ದಾರೆ. ಬಹದ್ದೂರ್ ಹುಡುಗನ‌ ನಿಲುವು ವಿಐಪಿಗಳಿಗೆ ಬೇಸರ ತಂದರೂ ಅದನ್ನು ಒಪ್ಪಿಕೊಳ್ತಾರೆ. ತಾವಿರುವ ಜಾಗದಿಂದಲೇ ಶುಭಾಶಯ ಹೇಳಲಿದ್ದಾರೆ.

ಮಾರ್ಟಿನ್ ನಿಮ್ಮೆಲ್ಲರಿಗೂ ಗೊತ್ತಿರುವಂತೆ ಬಹು ನಿರೀಕ್ಷೆಯ ಸಿನಿಮಾ. ಅದ್ದೂರಿ ಕಾಂಬೋ ಜೊತೆಯಾಗಿ ಮಾಡ್ತಿರುವ ಮಹಾಮೂವೀ. ಹೀಗಾಗಿ, ನಿರೀಕ್ಷೆ ಗರಿಗೆದರಿದೆ. ಚಿತ್ರಪ್ರೇಮಿಗಳ ನಿರೀಕ್ಷೆಯನ್ನೂ ಮೀರಿ ಸಿನಿಮಾ ನಿರ್ಮಾಣ ಮಾಡೋದಕ್ಕೆ ಇಡೀ ಮಾರ್ಟಿನ್ ಟೀಮ್ ಶ್ರಮವಹಿಸಿ ಕೆಲಸ‌ ಮಾಡ್ತಿದೆ. ಪ್ರತಿ‌ ಸಿನಿಮಾದಂತೆ ʼಮಾರ್ಟಿನ್‌ʼ ಗೂ ನಿಮ್ಮ ಪ್ರೀತಿ ಪ್ರೋತ್ಸಾಹ ಇರಲೆಂದು ಧ್ರುವ ವಿಐಪಿಗಳಿಗೆ ಕೇಳಿಕೊಂಡಿದ್ದಾರೆ. ಬಹದ್ದೂರ್ ಹುಡುಗರು ಮಾರ್ಟಿನ್ ಚಿತ್ರವನ್ನು ತಲೆ ಮೇಲೆ ಹೊತ್ತು ಮೆರೆಸೋಕೆ ಕಾತುರರಾಗಿದ್ದಾರೆ ಅದರಲ್ಲಿ ನೋ‌ಡೌಟ್.

ವಿಶಾಲಾಕ್ಷಿ, ಎಂಟರ್ಟೈನ್ಮೆಂಟ್ ಬ್ಯೂರೋ ಸಿನಿಲಹರಿ

Related Posts

error: Content is protected !!