ಹಿಂಗ್ ಆಗ್ಬಾರ್ದಿತ್ತು ಬಿಡಿ ; ಸಮಂತಾ-ಚೈತನ್ಯ ಕೊನೆಗೂ ದೂರವಾದರಲ್ರಿ!? ಫ್ಯಾನ್ಸ್‌ ಹೊಟ್ಟೆಗೆ ಬೆಂಕಿ

ತೆಲುಗು ತಾರಾ ದಂಪತಿ ಸಮಂತಾ ಹಾಗೂ ಅಕ್ಕಿನೇನಿ ನಾಗಚೈತನ್ಯ ತಮ್ಮ ದಾಂಪತ್ಯ ಜೀವನಕ್ಕೆ ಗುಡ್ ಬೈ ಹೇಳಿದ್ದಾರೆ. ನಾಲ್ಕು ವರ್ಷದ ವೈವಾಹಿಕ ಬದುಕಿಗೆ ಎಳ್ಳುನೀರು ಬಿಟ್ಟಿದ್ದಾರೆ. ೧೧ ವರ್ಷಗಳ ಕಾಲ ಪ್ರೀತ್ಸಿ ಮದುವೆಯಾದ ಈ ಜೋಡಿ ಕೊನೆಗೂ ಸಂಸಾರ ಸಾಗರದ ಬಂಧನದಿಂದ ಬೇರ್ಪಟ್ಟಿದ್ದಾರೆ. ರೀಲ್ ಅಂಡ್ ರಿಯಲ್ ಲೈಫ್‌ನಲ್ಲಿ ಸೈ ಎನಿಸಿಕೊಂಡ ಚೈ ಅಂಡ್ ಸ್ಯಾಮ್ ಅದ್ಯಾಕೆ ವಿಚ್ಚೇದನದಂತಹ ನಿರ್ಧಾರಕ್ಕೆ ಬಂದ್ರು ? ೧೦ ಕೋಟಿ ಖರ್ಚು ಮಾಡಿ ಇಡೀ ಸೌತ್-ನಾರ್ತ್ ಸಿನಿಮಾ ಇಂಡಸ್ಟ್ರಿ ನಿಬ್ಬೆರಗಾಗುವಂತೆ ಹಸೆಮಣೆ ಏರಿದ ಈ ಕ್ಯೂಟ್ ಕಪಲ್ಸ್ ಕೇವಲ ನಾಲ್ಕೇ ನಾಲ್ಕು ವರ್ಷಕ್ಕೆ ಅದ್ಯಾಕೆ ದಾಂಪತ್ಯ ಜೀವನವನ್ನು ಕೊನೆಗೊಳಿಸಿಕೊಂಡ್ರು? ಈ ಪ್ರಶ್ನೆಗೆ ಕೇವಲ ಒಂದೇ ಸಾಲಿನ ಉತ್ತರ ನಿಡೋದಕ್ಕೆ ಸಾಧ್ಯವಿಲ್ಲ. ಫ್ಯಾಮಿಲಿಮ್ಯಾನ್ ವೆಬ್‌ಸಿರೀಸೇ ಮಜಿಲಿ ಜೋಡಿಯನ್ನು ದೂರ ದೂರ ಮಾಡ್ತು ಎಂತಲೂ ಹೇಳೋದಕ್ಕೆ ಆಗಲ್ಲ. ಆದರೆ, ಮಾಧರಿಯಾಗಬೇಕಿದ್ದ ಈ ಇಬ್ಬರು ತಾರಾಜೋಡಿಗಳು ನಾನೊಂದು ತೀರಾ, ನೀನೊಂದು ತೀರಾ ಅಂತ ಬೇರ್ಪಟ್ಟಿದ್ದು ಮಾತ್ರ ಅರಗಿಸಿಕೊಳ್ಳೋದಕ್ಕೆ ಸಾಧ್ಯವಾಗ್ತಿಲ್ಲ.

ಸ್ಯಾಮ್ ಅಂಡ್ ಚೈ ದೂರವಾಗ್ತಿರೋದು ಅವರ ಕುಟುಂಬಕ್ಕೆ ಎಷ್ಟು ನೋವುಂಟು ಮಾಡಿದೆಯೋ ಅಷ್ಟೇ ನೋವು ಮನಂ ಜೋಡಿಯ ಕೋಟ್ಯಾಂತರ ಅಭಿಮಾನಿಗಳಿಗೆ ಆಗಿದೆ. ಮಜಿಲಿ ಜೋಡಿಯ ವಿಚ್ಚೇದನದ ಸುದ್ದಿ ಕೇಳಿ ಅಭಿಮಾನಿಗಳ ಹೊಟ್ಟೆಗೆ ಬೆಂಕಿ ಬಿದ್ದಂತಾಗಿದೆ.

ನಾಲ್ಕು ದಿನ ಕಳೆದರೆ ಚೈ ಅಂಡ್ ಸ್ಯಾಮ್ ಗುಡ್ ನ್ಯೂಸ್ ಕೊಡ್ತಾರೆ, ವಾರ್ಷಿಕೋತ್ಸವಕ್ಕೆ ಸಿಹಿ ಸುದ್ದಿ ಸಿಗುತ್ತೆ ಅಂತ ಕಾಯ್ತಿದ್ದ ಫ್ಯಾನ್ಸ್‌ ಗೆ ನಿರಾಶೆಯಾಗಿದೆ. ಬರೀ ನಿರಾಸೆ ಅಲ್ಲ ಆಕಾಶವೇ ಕಳಚಿ ತಲೆಮೇಲೆ ಬಿದ್ದಾಗಿದೆ ಅಂದರೆ ತಪ್ಪಾಗಲಿಕ್ಕಿಲ್ಲ. ಯಾಕಂದ್ರೆ, ಮಜಿಲಿ ಜೋಡಿ ದೂರವಾಗೋದನ್ನ ಸಹಿಸೋ ಶಕ್ತಿ ಅಭಿಮಾನಿಗಳಿಗಿರಲಿಲ್ಲ. ಇಬ್ಬರು ಬೇರೆಯಾಗ್ತಿದ್ದಾರೆ ಅನ್ನೋ ಸುದ್ದಿ ಹೊರಬಿದ್ದಾಗಿನಿಂದಲೂ ಅಭಿಮಾನಿಗಳ ಪ್ರಾರ್ಥನೆ ಒಂದೇ ಆಗಿತ್ತು ಅದು ಸ್ಯಾಮ್ ಅಂಡ್ ಚೈ ಡಿವೋರ್ಸ್ ಸುದ್ದಿ ಸುಳ್ಳಾಗಬೇಕು, ಅವರಿಬ್ಬರು ಒಂದಾಗಬೇಕು ಎನ್ನುವುದು. ಆದ್ರೆ, ಇವತ್ತು ಈ ತಾರಾ ಜೋಡಿ ಅಧಿಕೃತವಾಗಿ ವಿಚ್ಚೇದನವನ್ನು ಅಧಿಕೃತವಾಗಿ ಘೋಷಿಸಿಕೊಂಡಿದ್ದಾರೆ. ಆದರೆ, ಅಭಿಮಾನಿಗಳು ಮಾತ್ರ ಈಗ್ಲೂ ಹೇಳ್ತಿರೋದು ಒಂದೇ ಇನ್ನೂ ಕಾಲ ಮಿಂಚಿಲ್ಲ ನಿಮ್ಮ ನಿರ್ಧಾರ ಬದಲಾಯಿಸಿಕೊಳ್ಳಿ ಅಂತ.

ಒಡೆದ ಹಾಲು, ಚೂರಾದ ಕನ್ನಡಿ ಮತ್ತೆ ಒಂದು ಗೂಡಿಸೋದಕ್ಕೆ ಆಗಲ್ಲ ಅಂತಾರೇ. ಅಷ್ಟಕ್ಕೂ, ಸ್ಟಾರ್ ಕಪಲ್‌ಗಳಾದ ಅಕ್ಕಿನೇನಿ ನಾಗಚೈತನ್ಯ ಹಾಗೂ ಸಮಂತಾ ವೈವಾಹಿಕ ಸಂಬಂಧ ಹೊಡೆದು ಚೂರಾಗಿದೆಯೋ ಅಥವಾ ನುಚ್ಚುನೂರಾಗಿದೆಯೋ ಗೊತ್ತಿಲ್ಲ. ಸದ್ಯಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಇಬ್ಬರು ವೈವಾಹಿಕ ಬದುಕಿನಿಂದ ದೂರವಾಗ್ತಿರುವುದಾಗಿ ಹೇಳಿಕೊಂಡಿದ್ದಾರೆ. ತೆಗೆದುಕೊಂಡಿರುವ ತೀರ್ಮಾನದಿಂದ ಹಿಂದೆ ಸರಿಯುತ್ತಾರೋ ಇಲ್ಲವೋ ಗೊತ್ತಿಲ್ಲ. ಹಿಂದೆ ಸರಿಬೇಕು ಒಂದಾಗಿ ಬದುಕಬೇಕು ಎನ್ನುವುದು ಅಕ್ಕಿನೇನಿ ಫ್ಯಾಮಿಲಿ-ಸಮಂತಾ ಕುಟುಂಬದ ಕಳಕಳಿ ಮಾತ್ರವಲ್ಲ ಕೋಟ್ಯಾಂತರ ಭಕ್ತರ ಆಶಯ. ಆ ಆಸೆ ಈಡೇರುತ್ತೋ ಇಲ್ಲವೋ ಕೂತೂಹಲದಿಂದ ಕಾಯಬೇಕು. ಭಗ್ತವಂತ ಅವರಿಬ್ಬರ ಮನಸನ್ನು ಬದಲಾಯಿಸಬೇಕು ಹಾಗಾದ್ರೆ ಮಾತ್ರ ಏ ಮಾಯ ಚೇಸ್ಯಾವೆ ಜೋಡಿ ಒಂದಾಗಲು ಸಾಧ್ಯ.

  • ಎಂಟರ್‌ಟೈನ್ಮೆಂಟ್ ಬ್ಯೂರೋ ಸಿನಿಲಹರಿ

Related Posts

error: Content is protected !!