Categories
ಸಿನಿ ಸುದ್ದಿ

ಗಂಧದಗುಡಿಗೆ ಹೊಂಬಾಳೆ ಫುಲ್‌ಮೀಲ್ಸ್ ; ಹಬ್ಬದೂಟ ಬಡಿಸ್ತಾರೆ ಸಂತೋಷ್-ಜಗ್ಗೇಶ್ ! `ರಾಘವೇಂದ್ರ ಸ್ಟೋರ್ಸ್ʼನ ಮೃಷ್ಟಾನ್ನ ಭೋಜನ !

ಚಿತ್ರಾನ್ನಕ್ಕೆ ಕಾಂಗ್ರೇಸ್ ಕಡ್ಲೇಬೀಜ ಹಾಕದೆ ಹೋದರೂ ಪರವಾಗಿಲ್ಲ ಸೀದಾ ಸಾದಾ ಚಿತ್ರಾನ್ನ ಕೊಟ್ಟರೆ ಸಾಕು ಅಂತ ಹೇಳಿದಾಗ ಗಾಂಧಿನಗರದಲ್ಲಿದ್ದ ಎರಡು ಇಡ್ಲಿ ಒಂದು ವಡಾ ಬ್ರೇಕ್‌ಫಾಸ್ಟ್‌ ಪದ್ದತಿಯನ್ನೇ ಬ್ರೇಕ್ ಮಾಡಿದವರು. ತಿಂಡಿ ಇರಲಿ ತೀರ್ಥ ಇರಲಿ ಎಲ್ಲವೂ ಹೊಟ್ಟೆತುಂಬಾ ಸೇರಬೇಕು ಅಂತ ಮೀಲ್ಸ್ ಕೇಳಿದರೆ ಫುಲ್‌ಮೀಲ್ಸ್ ಕೊಟ್ಟುಕೊಂಡು ಸಿನಿಮಾ ಕಾರ್ಮಿಕರನ್ನು, ಚಿತ್ರರಂಗ ನಂಬಿಕೊಂಡಿರುವವರನ್ನು, ಪ್ರತಿಭೆವುಳ್ಳವರನ್ನು, ಸಿನಿಮಾಗೋಸ್ಕರ ನಿದ್ದೆಗೆ ಚಟ್ಟಕಟ್ಟಿ ಕೆಲಸ ಮಾಡುವವರನ್ನು ಬೆಳೆಸುತ್ತಿದ್ದಾರೆ. ನಮ್ಮ ದಿಗ್ಗಜರು ಕಟ್ಟಿ ಬೆಳೆಸಿದ ಗಂಧದಗುಡಿಯನ್ನ ಮತ್ತೊಂದು ಹಂತಕ್ಕೆ ಕೊಂಡೊಯ್ಯುವುದಕ್ಕೆ `ಹೊಂಬಾಳೆ ಸಂಸ್ಥೆ’ಯವರು ಪಣತೊಟ್ಟಿದ್ದಾರೆ ಅಂದರೆ ಬಹುಶ: ತಪ್ಪಾಗಲಿಕ್ಕಿಲ್ಲ ಎನಿಸುತ್ತೆ.

ಕರ್ನಾಟಕ ಸಿನಿಮಾ ಪ್ರೇಕ್ಷಕರಿಗೆ ಬಾಳೆದೆಲೆಯಲ್ಲಿ ಹಬ್ಬದೂಟ ಬಡಿಸಿ ಸಂತೃಪ್ತಿಪಡಿಸಿರುವ ಹೊಂಬಾಳೆ ಫಿಲಂಸ್‌, ʼಕೆಜಿಎಫ್ʼ ಚಿತ್ರದ ಮೂಲಕ ಕನ್ನಡಿಗರ ಜೊತೆಗೆ ಇಡೀ ಜಗತ್ತಿಗೆ ಬಾಳೆದೆಲೆಯಲ್ಲಿ ಬಾಡೂಟ ಹಾಕ್ಸಿದ್ದು ಇನ್ನೂ ಯಾರು ಮರೆತಿಲ್ಲ. ಮುಂದೆ ಮರೆಯೋದು ಇಲ್ಲ. ಯಾಕಂದ್ರೆ, ಗಂಧದಗುಡಿಯಲ್ಲಿ ಗೊನೆಯೊಡೆದ ಬಾಳೆದೆಲೆಗೆ ಅದರದ್ದೇ ಆದ ಮಹತ್ವವಿದೆ, ಅಂತ ಮಹತ್ವದ ಎಲೆಯ ಮೇಲೆ ಹೊಂಬಾಳೆ ಫಿಲಂಸ್‌ ನವರು' ಬಡಿಸಿದ ಊಟಕ್ಕೆ ಅದರದ್ದೇ ಆದ ಶ್ರೇಷ್ಟತೆಯಿದೆ. ಹೀಗಾಗಿಯೇ, ಇವತ್ತು ಇಡೀ ಭಾರತೀಯ ಚಿತ್ರರಂಗ ಹೊಂಬಾಳೆ ತಯ್ಯಾರಿಸುವ ಮೃಷ್ಟಾನ್ನ ಭೋಜನಕ್ಕಾಗಿ ಎದುರು ನೋಡುತ್ತೆ. ʼಕೆಜಿಎಫ್ ಚಾಪ್ಟರ್-2ʼ ಗಾಗಿ ವರ್ಲ್ಡ್‌ ವೈಡ್ ಕಣ್ಣರಳಿಸಿ ಕಾಯುತ್ತಿರುವ ಕಾಲದಲ್ಲಿಗಂಧದಗುಡಿಗೆ’ ಫುಲ್‌ಮೀಲ್ಸ್ ಹಾಕೋದಕ್ಕೆ `ಹೊಂಬಾಳೆ’ಯ ಅನ್ನದಾತರು ಸಜ್ಜಾಗಿದ್ದಾರೆ.

ಚಿತ್ರಾನ್ನಕ್ಕೆ ಕಾಂಗ್ರೇಸ್ ಕಡ್ಲೇಬೀಜ ಹಾಕದೆ ಹೋದರೂ ಪರವಾಗಿಲ್ಲ ಸೀದಾ ಸಾದಾ ಚಿತ್ರಾನ್ನ ಕೊಟ್ಟರೆ ಸಾಕು ಅಂತ ಹೇಳಿದಾಗ ಗಾಂಧಿನಗರದಲ್ಲಿದ್ದ ಎರಡು ಇಡ್ಲಿ ಒಂದು ವಡಾ ಬ್ರೇಕ್‌ಫಾಸ್ಟ್‌ ಪದ್ದತಿಯನ್ನೇ ಬ್ರೇಕ್ ಮಾಡಿದವರು. ತಿಂಡಿ ಇರಲಿ ತೀರ್ಥ ಇರಲಿ ಎಲ್ಲವೂ ಹೊಟ್ಟೆತುಂಬಾ ಸೇರಬೇಕು ಅಂತ ಮೀಲ್ಸ್ ಕೇಳಿದರೆ ಫುಲ್‌ಮೀಲ್ಸ್ ಕೊಟ್ಟುಕೊಂಡು ಸಿನಿಮಾ ಕಾರ್ಮಿಕರನ್ನು, ಚಿತ್ರರಂಗ ನಂಬಿಕೊಂಡಿರುವವರನ್ನು, ಪ್ರತಿಭೆವುಳ್ಳವರನ್ನು, ಸಿನಿಮಾಗೋಸ್ಕರ ನಿದ್ದೆಗೆ ಚಟ್ಟಕಟ್ಟಿ ಕೆಲಸ ಮಾಡುವವರನ್ನು ಬೆಳೆಸುತ್ತಿದ್ದಾರೆ. ನಮ್ಮ ದಿಗ್ಗಜರು ಕಟ್ಟಿ ಬೆಳೆಸಿದ ಗಂಧದಗುಡಿಯನ್ನ ಮತ್ತೊಂದು ಹಂತಕ್ಕೆ ಕೊಂಡೊಯ್ಯುವುದಕ್ಕೆ `ಹೊಂಬಾಳೆ ಸಂಸ್ಥೆ’ಯವರು ಪಣತೊಟ್ಟಿದ್ದಾರೆ ಅಂದರೆ ಬಹುಶ: ತಪ್ಪಾಗಲಿಕ್ಕಿಲ್ಲ ಎನಿಸುತ್ತೆ.

ಪವರ್‌ಸ್ಟಾರ್ ಜೊತೆ ಯುವ ನಿರ್ಮಾಪಕರಾಗಿ ಅಖಾಡಕ್ಕಿಳಿದವರು ಇವತ್ತು ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ಸದ್ದುಮಾಡುತ್ತಿದ್ದಾರೆ ಮತ್ತು ಸುದ್ದಿಯಾಗ್ತಿದ್ದಾರೆ ಅಂದ್ರೆ ಕಾರಣ ಸಿನಿಮಾ ಮೇಲೆ `ಹೊಂಬಾಳೆ ಫಿಲಂಸ್‌ʼ ನ ಮುಖ್ಯಸ್ಥರಿಗೆ ಸಿನಿಮಾ ಮೇಲಿರುವಂತಹ ಪ್ರೀತಿ ಮತ್ತು ಭಕ್ತಿ. ಕೇವಲ ದುಡ್ಡು ಮಾಡೋದಕ್ಕೆ ಬಂದಿರುವವರಲ್ಲ ಇವರು. ಕೆರೆಯ ನೀರನ್ನು ಕೆರೆಗೆ ಚೆಲ್ಲಿ ಎನ್ನುವಂತೆ ಸಿನಿಮಾದಿಂದ ಬಂದ ಹಣವನ್ನ ಸಿನಿಮಾಗೆ ಸುರಿಯುತ್ತಿದ್ದಾರೆ. ಕೆಜಿಎಫ್ ನಂತರ ಭರ್ತಿ ಆರು ಚಿತ್ರಗಳನ್ನ ಅನೌನ್ಸ್ ಮಾಡಿದ್ದಾರೆ. ʼಕೆಜಿಎಫ್ ಚಾಪ್ಟರ್-2ʼ ಸೇರಿದಂತೆ ಒಟ್ಟು ಹನ್ನೆರಡು ಸಿನಿಮಾಗಳು ಹೊಂಬಾಳೆ ಮುಖ್ಯಸ್ಥರ ಕೈಯಲ್ಲಿವೆ. ಆರಿದ್ದ ಚಿತ್ರಗಳು ಹನ್ನೆರಡು ಆಗಿರುವಾಗ ಗಂಧದಗುಡಿಗೆ ಫುಲ್‌ಮೀಲ್ಸ್ ಹಾಕೋದಕ್ಕೆ ಮುಂದಾಗಿದ್ದಾರೆ. ನವರಸಗಳಿಗೆ ನಾಯಕರಾಗಿರುವ ಜಗ್ಗೇಶ್ ಅವರಿಂದಲೇ ಕರ್ನಾಟಕಕ್ಕೆ ಮೃಷ್ಟಾನ್ನ ಭೋಜನ ಬಡಿಸೋದಕ್ಕೆ ಹೊಂಬಾಳೆ ಸಂಸ್ಥೆ ಸಜ್ಜಾಗಿದೆ.

ಆಗಲೇ ಹೇಳಿದ ಹಾಗೇ ಮೀಲ್ಸ್ ಕೇಳಿದರೆ ಫುಲ್‌ಮೀಲ್ಸ್ ಕೊಡುವ ಬ್ಯಾನರ್ ಹೊಂಬಾಳೆ'. ಚಿತ್ರಾನ್ನ ಕಂಡು ಎಕ್ಸೈಟ್‌ ಆಗುವ ಸಿನಿಪ್ರೇಮಿಗಳಿಗೆ ವೆಜ್‌ಪುಲಾವ್ ಬಡಿಸಿ ಸಂತೃಪ್ತಿಪಡಿಸುವ ನಿರ್ಮಾಣ ಸಂಸ್ಥೆ. ಇದೀಗ ನವರಸನಾಯಕ ಜಗ್ಗೇಶ್ ಹಾಗೂ ಸಂತೋಷ್ ಆನಂದ್‌ರಾಮ್ ಅವರ ಕಾಂಬಿನೇಷನ್‌ನಲ್ಲಿ ಡೆಲಿಷಿಯಸ್ ಫುಲ್‌ಮೀಲ್ ತಯ್ಯಾರಿಸುವ ಸಿದ್ದತೆಯಲ್ಲಿದೆ. ನವೆಂಬರ್ ೨೨ ರಂದು ಕುಕ್ಕಿಂಗ್ ಶುರುವಾಗಲಿದೆ.ʼ ರಾಜಕುಮಾರʼ ಹಾಗೂʼ ಯುವರತ್ನʼ ಚಿತ್ರದ ಸಾರಥಿ ಸಂತೋಷ್ ಆನಂದ್ ರಾಮ್ ರುಚಿಕಟ್ಟಾದ, ಸ್ವಾದಭರಿತ, ಆಹ್ಲಾದಕರವಾ ದಮೃಷ್ಟಾನ್ನ’ವನ್ನು ತಯ್ಯಾರಿಸಲಿದ್ದಾರೆ. ಹಾಸ್ಯ, ಶೃಂಗಾರ, ರೌದ್ರ, ಭಯಾನಕ, ಭೀಭತ್ಸ, ವೀರ, ಕರುಣಾ, ಅದ್ಭುತ, ಶಾಂತ ಹೀಗೆ ಒಂಭತ್ತು ರಸಗಳಿಗೆ ಬ್ರಾಂಡ್ ಅಂಬಾಸೀಡರ್ ಆಗಿರುವ, ನವರಸನಾಯಕ ಎಂತಲೇ ಪ್ರಖ್ಯಾತಿ ಪಡೆದಿರುವ ಜಗ್ಗಣ್ಣ ಇಡೀ ಕರುನಾಡಿಗೆ ಫುಲ್‌ಮೀಲ್ಸ್ ಹಬ್ಬದೂಟ ಬಡಿಸ್ತಾರೆ. ಈಗಾಗಲೇ ಬಿಡುಗಡೆಯಾಗಿರುವ `ರಾಘವೇಂದ್ರ ಸ್ಟೋರ್ಸ್ʼ ಪೋಸ್ಟರ್ ನೋಡಿದ್ರೆ ನಿಮಗೆ ತಿಳಿಯುತ್ತೆ.

ಅಂದ್ಹಾಗೇ,ರಾಘವೇಂದ್ರ ಸ್ಟೋರ್ಸ್ʼ ಪಕ್ಕಾ ಪ್ಯೂರ್ ವೆಜ್ ಖಾನಾವಳಿ. ಎರಡು ಇಡ್ಲಿ ಮೆಣಸಿನಕಾಯಿ ಜೊತೆ ತೂತ್‌ವಡೆ ಸಿಗುತ್ತೆ. ಉಪ್ಪಿಟ್ಟು ಖಾಯಂ, ನೆಂಚಿಗೆ ಬೇಕಾದರೆ ಟೇಬಲ್ ಮೇಲೆ ಈರುಳ್ಳಿ ಇರುತ್ತೆ. ತಿನ್ನೋವಾಗ ಕೂದಲು ಸಿಗ್ಬೋದು ಅರ್ಜೆಸ್ಟ್ ಮಾಡ್ಕೊಬೇಕಾಗುತ್ತದೆ. ಮುಖಕ್ಕೆ ಅಡುಗೆ ಭಟ್ಟ ಹಿಟ್ಟು ಮೆತ್ಕೊಂಡಿದ್ದಾನೆ ಎನ್ನುವ ಕಾರಣಕ್ಕೆ ಕ್ಲೀನ್ ಇಲ್ಲ ಎಂದುಕೊಳ್ಳಬೇಡಿ. ಕ್ಲಿನಿಕ್ ಆಲ್‌ಕ್ಲಿಯರ್ ಶಾಂಪು ಥರ ಈ ಹೋಟೆಲ್ ಪಕ್ಕಾ ಕ್ಲೀನ್ ಅಂಡ್ ಕ್ಲಿಯರ್ ಅದರಲ್ಲೂ,ರಾಘವೇಂದ್ರ ಸ್ಟೋರ್ಸ್ʼ ನಲ್ಲಿ ಅಡುಗೆ ಮಾಡುವ ಭಟ್ಟರು ಹಾಗೂ ಬಡಿಸೋರು ಶ್ರೀ ಗುರು ರಾಘವೇಂದ್ರ ಸ್ವಾಮಿಯ ಪರಮಭಕ್ತರಾಗಿರೋದ್ರಿಂದ ಕ್ಲೀನ್ ಆಗಿರಲೆಬೇಕು ಅಪ್‌ಕೋರ್ಸ್ ಇರುತ್ತಾರೆ ಕೂಡ.

ಅಣ್ಣಾವ್ರು ಮಂತ್ರಾಲಯ ಮಹಾತ್ಮೆ' ಸಿನಿಮಾ ಮಾಡುವಾಗ ಮಡಿಮೈಲಿಗೆಯಿಂದ ಇದ್ದರು ಜೊತೆಗೆ ನಾನ್‌ವೆಜ್ ತ್ಯಜಿಸಿದ್ದರು. ಅದರಂತೇ, ಜಗ್ಗಣ್ಣ ಕೂಡರಾಘವೇಂದ್ರ ಸ್ಟೋರ್ಸ್ʼಗಾಗಿ ನಾನ್‌ವೆಜ್ ಬಿಡ್ತಾರೆ ಅನ್ಸುತ್ತೆ. ಮೇಲ್ನೋಟಕ್ಕೆ ರಾಘವೇಂದ್ರ ಸ್ಟೋರ್ಸ್‌ʼ ಪ್ಯೂರ್ ವೆಜ್ ರೀತಿ ಕಾಣುತ್ತಿದೆ, ಪೋಸ್ಟರ್‌ನಲ್ಲಿ ಪಕ್ಕಾ ವೆಜ್ ಐಟಮ್ ಇರೋದ್ರಿಂದ ಪ್ಯೂರ್ ವೆಜಿಟೇರಿಯನ್ ಸಿನಿಮಾ ಅನ್ಸುತ್ತೆ. ಹೀಗಾಗಿ, ನಾನ್‌ವೆಜ್ ಬಿಡುವ ಸಂದರ್ಭ ಬರೋದಿಲ್ಲ ಆದರೂ ಕೂಡ ಜಗ್ಗಣ್ಣ ರಾಯರನ್ನ ಆರಾಧನೆ ಮಾಡೋದ್ರಿಂದ ರಾಘವೇಂದ್ರ ಸ್ಟೋರ್ಸ್‌ʼಗಾಗಿ ಬಾಡೂಟ ಬಿಟ್ಟರೂ ಬಿಡ್ಬೋದು ಕಾದುನೋಡಬೇಕು. ಒಟ್ನಲ್ಲಿ ರಾಘವೇಂದ್ರ ಸ್ಟೊರ್ಸ್‌ʼ ಮೇಲೆ ನಿರೀಕ್ಷೆಗಳು ಗರಿಗೆದರಿವೆ. ಫುಲ್‌ಮೀಲ್ಸ್ ಕೊಡ್ಬೇಕು ಅಂತ ಹೊಂಬಾಳೆ ನಿರ್ಧರಿಸಿದರೇ,ನಗಬೇಕು-ನಗಿಸಬೇಕು ಇದೇ ನನ್ನ ಧರ್ಮ’ ಫುಲ್‌ಮೀಲ್ಸ್ ಹಬ್ಬದೂಟ ಬಡಿಸ್ತೀನಿ ಎಂದು ಜಗ್ಗಣ್ಣ ರೆಡಿಯಾಗಿದ್ದಾರೆ. ಸಂತೋಷ್-ಜಗ್ಗೇಶ್ ತಯ್ಯಾರಿಸಲಿರುವ ಮೃಷ್ಟಾನ್ನ ಹೇಗಿರಲಿದೆ ಜಸ್ಟ್ ವೇಯ್ಟ್ ಅಂಡ್ ವಾಚ್

  • ವಿಶಾಲಾಕ್ಷಿ, ಎಂಟರ್‌ಟೈನ್ಮೆಂಟ್ ಬ್ಯೂರೋ ಸಿನಿಲಹರಿ
Categories
ಸಿನಿ ಸುದ್ದಿ

ಹೊಂಬಾಳೆ ಫಿಲಂಸ್ ಮನಸ್ಸು ಮಾಡಿದ್ರೆ ಇದೇನು ಮಹಾ ಕಷ್ಟ-ವಿಜಯ್‌ ಕಿರಗಂದೂರು ಮನಸ್ಸು ಮಾಡುವರೇ?

ವಿಶೇಷ ಲೇಖನ: ದೇಶಾದ್ರಿ ಹೊಸ್ಮನೆ

ಕೊರೋನಾವೂ ಸೇರಿದಂತೆ ಅನೇಕ ಕಾರಣಗಳಿಗೆ ರಾಜ್ಯದಲ್ಲೀಗ ಚಿತ್ರಮಂದಿರಗಳು ಶಾಶ್ವತವಾಗಿ ಬಾಗಿಲು ಹಾಕುತ್ತಿವೆ. ಆಗೊಂದು ಸಂದರ್ಭದಲ್ಲಿ ಸಾವಿರಕ್ಕೂ ಹೆಚ್ಚಿದ್ದ ಚಿತ್ರಮಂದಿರಗಳ ಸಂಖ್ಯೆ ಈಗ ೫೦೦ಕ್ಕೆ ಬಂದಿದೆ ಎನ್ನುತ್ತವೆ ಮೂಲಗಳು. ಭವಿಷ್ಯದ ದಿನಗಳಲ್ಲಿ ಈ ಸಂಖ್ಯೆ ನೂರಿನ್ನೂರಕ್ಕೆ ಇಳಿದರೂ ಅಚ್ಚರಿ ಇಲ್ಲ. ಇದಕ್ಕೆ ಪರ್ಯಾಯವಾಗಿ ಸಿನಿಮಾದ ಹೊಸ ಮಾರುಕಟ್ಟೆ ಓಟಿಟಿ. ಅಮೆಜಾನ್‌, ನೆಟ್‌ ಫ್ಲಿಕ್ಸ್‌ ಸೇರಿದಂತೆ ಇದಕ್ಕೂ ಈಗ ಹತ್ತಾರು ಪ್ಲಾಟ್‌ ಫಾರ್ಮ್‌ ಇವೆ. ಆದರೂ ಕನ್ನಡಕ್ಕೆ ಯೋಗ್ಯವಾದ್ದದೊಂದು ಓಟಿಟಿ ಫ್ಲಾಟ್‌ ಫಾರ್ಮ್‌ ಈಗಲೂ ಇಲ್ಲ. ಅದೇ ಕಾರಣಕ್ಕೆ ಹೊಂಬಾಳೆ ಫಿಲಂಸ್‌ ನಂತಹ ಒಂದು ದೊಡ್ಡ ಸಂಸ್ಥೆ ಕನ್ನಡ ಸಿನಿಮಾಗಳಿಗೇ ಮೀಸಲಾಗಿ ಒಂದು ಒಟಿಟಿ ಪ್ಲಾಟ್‌ ಫಾರ್ಮ್‌ ಶುರು ಮಾಡಿದರೆ ಕನ್ನಡ ಸಿನಿಮಾ ಉಳಿಯುತ್ತೆ, ಹಾಗೆಯೇ ಕನ್ನಡ ಸಿನಿಮಾ ನಂಬಿ ಬಂದ ನಿರ್ಮಾಪಕರೂ ಉಳಿಯಬಲ್ಲರು ಅಲ್ಲವೇ?

ಹೊಂಬಾಳೆ ಫಿಲಂಸ್‌… ಸದ್ಯಕ್ಕೆ ಭಾರತೀಯ ಚಿತ್ರರಂಗದಲ್ಲಿಯೇ ಅತೀ ಹೆಚ್ಚು ಸೌಂಡ್‌ ಮಾಡುತ್ತಿರುವ ಚಿತ್ರ ನಿರ್ಮಾಣ ಸಂಸ್ಥೆ. ಇದು ಕನ್ನಡದ ಪ್ರತಿಷ್ಠಿತ ಪ್ರೊಡಕ್ಷನ್‌ ಹೌಸ್‌ ಅನ್ನೋದು ಮತ್ತೊಂದು ಹೆಮ್ಮೆ. ಅದಕ್ಕೆ ಕಾರಣ ʼಕೆಜಿಎಫ್‌ʼ ಚಿತ್ರ. ಕನ್ನಡ ಮಾತ್ರವಲ್ಲ ಭಾರತೀಯ ಚಿತ್ರರಂಗದಲ್ಲಿಯೇ ʼಕೆಜಿಎಫ್‌ʼ ಸಂಚಲನ ಸೃಷ್ಟಿ ಮಾಡಿದ ರೀತಿ ಈಗಲೂ ಸೋಜಿಗ. ಸಮುದ್ರದೊಳಗೆ ಇದಕ್ಕಿದ್ದಂತೆ ದೊಡ್ಡ ಅಲೆಯೇ ಎದ್ದು ಬಂದಂತೆ ಭಾರತೀಯ ಚಿತ್ರರಂಗಕ್ಕೆ ಸುನಾಮಿಯಂತೆ ಅಪ್ಪಳಿಸಿದ್ದು ಕೆಜಿಎಫ್‌ ಚಿತ್ರ. ಈ ಸಿನಿಮಾ ಸೃಷ್ಟಿಸಿದ ಅಬ್ಬರಕ್ಕೆ ಇಡೀ ಭಾರತೀಯ ಚಿತ್ರರಂಗವೇ ಅರೆಕ್ಷಣ ಕನ್ನಡದತ್ತ ತಿರುಗಿ ನೋಡಿದ್ದೀಗ ಇತಿಹಾಸ. ಕನ್ನಡದ ಚಿತ್ರವೊಂದು ಆ ಮಟ್ಟಿಗೆ ಭಾರತೀಯ ಚಿತ್ರರಂಗದಲ್ಲಿ ಸದ್ದು ಮಾಡಿದ್ದು ಅದೇ ಮೊದಲು. ಅದರ ಕೀರ್ತಿ ಹೊಂಬಾಳೆ ಫಿಲಂಸ್‌ನ ರೂವಾರಿ ವಿಜಯ್‌ ಕಿರಗಂದೂರು ಹಾಗೂ ನಿರ್ದೇಶಕ ಪ್ರಶಾಂತ್‌ ನೀಲ್‌ ಅವರದ್ದು.

ಕೆಜಿಎಫ್‌ ಮೂಲಕ ನಿರ್ದೇಶಕ ಪ್ರಶಾಂತ್‌ ನೀಲ್‌ ಸೃಷ್ಟಿಸಿದ ಆ ಮ್ಯಾಜಿಕ್‌ ಬಗ್ಗೆ ಎಷ್ಟು ವರ್ಣಿಸಿದರು ಕಮ್ಮಿಯೇ. ಅದರ ದೊಡ್ಡ ಪ್ರಭಾವವೇ ಕನ್ನಡ ಸಿನಿಮಾರಂಗದಲ್ಲೂ ಎದ್ದು ನಿಂತ ಪ್ಯಾನ್‌ ಇಂಡಿಯಾ ಟ್ರೆಂಡ್. ಅದೇ ಕಾರಣಕ್ಕೆ ಇವತ್ತು ಇಡಿಯಾ ಲೆವೆಲ್‌ ನಲ್ಲಿ ಕನ್ನಡ ಸಿನಿಮಾ ಅಂದ್ರೆ ಹೊಂಬಾಳೆ ಫಿಲಂಸ್‌ ಎನ್ನುವಷ್ಟರ ಮಟ್ಟಿಗೆ ಕೆಜಿಎಫ್‌ ದೊಡ್ಡ ಹವಾ ಸೃಷ್ಟಿಸಿದೆ. ಹಾಗಂತ ಕನ್ನಡ ಸಿನಿಮಾ ಅಂದ್ರೆ ಹೊಂಬಾಳೆ ಫಿಲಂಸ್‌ ಅಂತ ನಾವು ಹೇಳುತ್ತಿಲ್ಲ. ಅಷ್ಟೇ ಯಾಕೆ, ಈ ಮಾತನ್ನು ಹೊಂಬಾಳೆ ಫಿಲಂಸ್‌ ನ ರೂವಾರಿ ವಿಜಯ್‌ ಕಿರಗಂದೂರು ಕೂಡ ಒಪ್ಪುವುದಿಲ್ಲ. ಯಾಕಂದ್ರೆ ಕನ್ನಡ ಸಿನಿಮಾದ ಇತಿಹಾಸ ದೊಡ್ಡದಿದೆ. ಆದರೆ ಬದಲಾದ ಕಾಲದ ಸಿನಿಮಾ ಮಾರ್ಕೆಟ್‌ ದೃಷ್ಟಿಯಲ್ಲಿ ಕನ್ನಡ ಸಿನಿಮಾ ಅಂದ್ರೆ ಬಾಲಿವುಡ್‌ ಸೇರಿದಂತೆ ಇಡೀ ಭಾರತೀಯ ಚಿತ್ರರಂಗ ಒಂದು ಕ್ಷಣ ಅಚ್ಚರಿಯಾಗುವಂತೆ ಮಾಡಿದ್ದು ಕೆಜಿಎಫ್‌ ಚಿತ್ರ ಎನ್ನುವುದಕ್ಕೆ ಬಹುಶ: ಯಾರದೇ ತಕರಾರು ಇರದು.‌

ಅಷ್ಟು ಮಾತ್ರವಲ್ಲ, ʼಕೆಜಿಎಫ್‌ʼ ಬಂದು ಹೋದ ನಂತರ ಉಂಟಾದ ಪ್ರಭಾವ ಸಾಕಷ್ಟಿದೆ. ಆನಂತರ ಕನ್ನಡದಲ್ಲಿ ಶುರುವಾದ ಪ್ಯಾನ್‌ ಇಂಡಿಯಾಗಳ ದೊಡ್ಡ ಪಟ್ಟಿಯೇ ಅದಕ್ಕೆ ಸಾಕು. ಇರಲಿ, ಅದು ಕೆಜಿಎಫ್‌ ನ ತಾಕತ್ತು. ಅಲ್ಲಿಂದೀಗ ಕನ್ನಡದ ಸಿನಿಮಾ ಪ್ರೇಕ್ಷಕ ಮಾತ್ರವಲ್ಲ ಇಡೀ ಭಾರತೀಯ ಚಿತ್ರೋದ್ಯಮವೇ ʼಕೆಜಿಎಫ್‌ ೨ʼ ಚಿತ್ರದ ರಿಲೀಸ್‌ ದಿನಕ್ಕೆ ಕಾಯುತ್ತಿದೆ. ಹಾಗೆಯೇ ದೊಡ್ಡ ಕುತೂಹಲ ಹೊಂಬಾಳೆ ಫಿಲಂಸ್‌ ಬ್ಯಾನರ್‌ನ ಇತರೆ ಸಿನಿಮಾಗಳ ಮೇಲೂ ಇದೆ. ಪ್ರಭಾಸ್‌ ಅಭಿನಯದ ʼಸಲಾರ್ʼ ಮೊದಲ್ಗೊಂದು ಬುಧವಾರವಷ್ಟೇ ಅನೌನ್ಸ್‌ ಆದ ಹೊಂಬಾಳೆ ಫಿಲಂಸ್‌ ನ 12 ನೇ ಚಿತ್ರ ʼರಾಘವೇಂದ್ರ ಸ್ಟೋರ್ಸ್‌ʼ ಮೇಲೂ ಅಷ್ಟೇ ನಿರೀಕ್ಷೆ ಇದೆ. ಹೊಂಬಾಳೆ ಫಿಲಂಸ್‌ ಅಂದ್ರೆ ಸಿನಿಮಾ ಪ್ರೇಕ್ಷಕ ಪಾಲಿಗೆ ಅಂತಹ ಕುತೂಹಲ ಹಾಗೂ ನಿರೀಕ್ಷೆಗೆ ಕಾರಣವಾಗಿದ್ದು ʼಕೆಜಿಎಫ್‌ʼ ಚಿತ್ರ.

ಆ ಕತೆ ಇರಲಿ, ಕನ್ನಡದ ಸಿನಿಮಾ ಚೈತನ್ಯ ಕೊರೋನಾ ಕಾಲದಲ್ಲೂ ಕಿಂಚಿತ್ತು ಉಡುಗದಂತೆ ಮಾಡಿದ್ದು ಹೊಂಬಾಳೆ ಫಿಲಂಸ್‌ ಇನ್ನೊಂದು ಮಹತ್ಕಾರ್ಯ. ಯಾಕಂದ್ರೆ, ಕೊರೋನಾ ಅಂತ ಇಡೀ ಉದ್ಯಮ ಈಗಲೂ ಕೈ ಕಟ್ಟಿ ಕುಳಿತಿದೆ. ಅವಕಾಶ ಇದ್ದಾಗ್ಯೂ ಈಗ ಸಿನಿಮಾ ರಿಲೀಸ್‌ ಮಾಡೋದಿಕ್ಕೆ ಹಿಂದೆ ಮುಂದೆ ನೋಡಬೇಕಾದ ಸ್ಥಿತಿ ಇದೆ. ಇನ್ನು ದೊಡ್ಡ ದೊಡ್ಡ ಚಿತ್ರ ನಿರ್ಮಾಣ ಸಂಸ್ಥೆಗಳೇ ಹೊಸ ಸಿನಿಮಾಗಳ ನಿರ್ಮಾಣಕ್ಕೆ ಮನಸ್ಸು ಮಾಡದೆ, ತಲೆ ಮೇಲೆ ಕೈ ಹೊತ್ತು ಕುಳಿತಿವೆ. ಕೊರೋನಾದ ಈ ಕಾಲದಲ್ಲಿ ದುಡ್ಡು ಹಾಕಿ ಸಿನಿಮಾ ಮಾಡಿದರೆ, ಮುಂದೆ ಹೇಗೋ ಎನೋ ಎನ್ನುವ ಆತಂಕ ಅವರಿಗೆ ಮನೆ ಮಾಡಿದೆ. ಆದರೆ ಹೊಂಬಾಳೆ ಫಿಲಂಸ್‌ ಮಾತ್ರ, ಕೊರೋನಾ ಕಾಲದಲ್ಲೂ ಬ್ಯಾಕ್‌ ಟು ಬ್ಯಾಕ್‌ ಸಿನಿಮಾ ಅನೌನ್ಸ್‌ ಮಾಡುತ್ತಾ, ಕನ್ನಡ ಚಿತ್ರೋದ್ಯಮಕ್ಕೆ ಹೊಸ ಚೈತನ್ಯ ತುಂಬಿದ್ದು ಮಾತ್ರವಲ್ಲ, ನೆರೆ ಚಿತ್ರೋದ್ಯಮದ ಮಂದಿ ಅಚ್ಚರಿಯಾಗುವಂತೆ ಮಾಡಿದೆ.

ಇದು ಸ್ವಂತಕ್ಕೋ, ಸ್ವಾರ್ಥಕ್ಕೋ ಅದು ಏನೇ ಆಗಿದ್ದರೂ, ಒಂದು ಸಿನಿಮಾ ನಿರ್ಮಾಣವಾಗುತ್ತಿದೆ ಅಂದರೆ ಅದರಿಂದ ಅದೆಷ್ಟೋ ಕಾರ್ಮಿಕರಿಗೆ ಕೆಲಸ ಸಿಗುತ್ತದೆ. ಹಾಗೆಯೇ ಉದ್ಯಮ ಕೂಡ ಜೀವಂತವಾಗುಳಿದಿರುತ್ತದೆ ಎನ್ನುವುದು ಅಷ್ಟೇ ಸತ್ಯ. ಒಂದಲ್ಲ ಎರಡಲ್ಲ ಇವತ್ತು ಆರು ಸಿನಿಮಾಗಳು ಹೊಂಬಾಳೆ ಫಿಲಂಸ್‌ ಮೂಲಕ ಪ್ರೊಡಕ್ಷನ್‌ ಹಂತದಲ್ಲಿವೆ. ಅಲ್ಲಿಗೆ ನೂರು, ಇನ್ನೂರು ಮಾತ್ರವಲ್ಲ ಸಾವಿರಾರು ಕಾರ್ಮಿಕರಿಗೆ ಉದ್ಯೋಗ ಸಿಗುತ್ತಿದೆ. ಹಾಗೆಯೇ ಕೊರೋನಾ ಎಂಬ ಸಂಕಷ್ಟದಿಂದ ಚಿತ್ರೋದ್ಯಮ ಹೊರ ಬರುವುದಕ್ಕೆ ಇದು ದೊಡ್ಡ ಸಹಕಾರಿ ಆಗಿದೆ. ಆ ಮಟ್ಟಿಗೆ ಹೊಂಬಾಳೆ ಫಿಲಂಸ್‌ ನ ಸಿನಿಮಾ ಮೇಲಿನ ಕಾಳಜಿಗೆ ಒಂದು ಸೆಲ್ಯೂಟ್‌.

ಯಾಕಂದ್ರೆ, ಇದು ಸಿನಿಮಾ ಮೇಲಿನ ಪ್ರೀತಿಗಾಗಿ ಮಾಡುತ್ತಿರುವ ಕೆಲಸ. ಅದೊಂದೇ ಕಾರಣಕ್ಕೆ ದುಡ್ಡಿಗಿಂತ ಹೆಚ್ಚಾಗಿ ಕಲೆಗೆ ಬೆಲೆ ಕೊಟ್ಟು ಹೊಂಬಾಳೆ ಫಿಲಸ್‌ ಕನ್ನಡದ ಸ್ಟಾರ್ ಗಳಿಗೆ, ಪ್ರತಿಭಾವಂತ ನಿರ್ದೇಶಕರನ್ನೆಲ್ಲ ತನ್ನ ಕುಟುಂಬಕ್ಕೆ ಸೇರಿಸಿಕೊಂಡು ಸಿನಿಮಾ ಕಟ್ಟುವ ಕೆಲಸದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದೆ. ಅದೇ ಹಾದಿಯಲ್ಲಿ ಅದೀಗ ಇನ್ನೊಂದು ಸಾಹಸ ಮಾಡಿದರೆ ಉದ್ಯಮವೂ ಉಳಿಯುತ್ತದೆ. ಆ ಕೆಲಸವೇ ಒಟಿಟಿ ಪ್ಲಾಟ್‌ ಫಾರ್ಮ್.‌ ಹಾಗಂತ ಕನ್ನಡ ಸಿನಿಮಾಗಳ ಮಾರುಕಟ್ಟೆಗೆ ಬೇರಾವುದೇ ಒಟಿಟಿ ಪ್ಲಾಟ್‌ ಫಾರ್ಮ್‌ ಇಲ್ಲಿಲ್ಲ ಅಂತಲ್ಲ. ಅಮೆಜಾನ್‌, ನೆಟ್‌ ಪ್ಲಿಕ್ಸ್‌ ಸೇರಿದಂತೆ ಸಾಕಷ್ಟು ಒಟಿಟಿ ಪ್ಲಾಟ್‌ ಫಾರ್ಮ್‌ ಇಲ್ಲಿವೆ. ಆದರೆ ಕನ್ನಡಕ್ಕೆ ಯೋಗ್ಯವಾದ ಒಂದು ಒಟಿಟಿ ಪ್ಲಾಟ್‌ ಫಾರ್ಮ್‌ ಇಲ್ಲ. ಇದ್ದವರು ಕೂಡ ಕನ್ನಡದ ನಿರ್ಮಾಪಕರಿಗೆ ಪೂರಕವಾಗಿಲ್ಲ. ಅದೊಂದು ಬೇಸರ ಈಗ ಇಡೀ ಚಿತ್ರೋದ್ಯಮವನ್ನು ಆವರಿಸಿಕೊಂಡಿದೆ.

ಅದು ದೂರವಾಗಬೇಕಾದರೆ ಕನ್ನಡದ ನಿರ್ಮಾಪಕರನ್ನು ಉಳಿಸುವಂತಹ, ಕಂಟೆಂಟ್‌ ಆಧರಿತ ಸಿನಿಮಾಗಳನ್ನು ಪ್ರೇಕ್ಷಕರಿಗೆ ನೀಡುವಂತಹ ಒಂದು ಚೆಂದದ ಉದ್ಯಮ ಸ್ನೇಹಿ ಪ್ಲಾಟ್‌ ಫಾರ್ಮ್‌ ಕನ್ನಡಕ್ಕೆ ಬೇಕಿದೆ. ಆ ಕೆಲಸವನ್ನು ಹೊಂಬಾಳೆ ಫಿಲಂಸ್‌ಗೆ ಮಾಡುವ ಸಾಮಾರ್ಥ್ಯವಿದೆ.ತೆಲುಗಿನಲ್ಲೀಗ ನಟ ಅಲ್ಲು ಅರ್ಜುನ್‌ ಆಹಾ ಹೆಸರಲ್ಲೊಂದು ಒಟಿಟಿ ಪ್ಲಾಟ್‌ ಫಾರ್ಮ್‌ ಶುರು ಮಾಡಿದ್ದಾರೆ. ಅದು ತೆಲುಗು ಸಿನಿಮಾ, ವೆಬ್‌ ಸೀರಿಸ್‌ ಗೆ ಮಾತ್ರ ಸೀಮಿತವಾಗಿದೆ. ಅಂತಹದೇ ಒಂದು ಪ್ಲಾಟ್‌ ಫಾರ್ಮ್‌ ಅನ್ನು ಹೊಂಬಾಳೆ ಫಿಲಂಸ್‌ ಶುರು ಮಾಡಿದರೆ, ಕನ್ನಡದ ಅದೆಷ್ಟೋ ಸ್ಟಾರ್ ಗಳು, ನಿರ್ದೇಶಕರು, ತಂತ್ರಜ್ಜರಿಗೆ ಕೆಲಸ ಕೊಟ್ಟ ಹಾಗೆಯೇ, ಕನ್ನಡದ ಅದೆಷ್ಟೋ ನಿರ್ಮಾಪಕರನ್ನು ಉಳಿಸುವ ಕೆಲಸ ಆಗುತ್ತದೆ. ಹೊಂಬಾಳೆ ಫಿಲಂಸ್‌ ನಂತಹ ದೈತ್ಯ ಸಂಸ್ಥೆಗೆ ಇದೇನು ಕಷ್ಟದ ಕೆಲಸವೇನು ಅಲ್ಲ. ಮನಸ್ಸು ಮಾಡಬೇಕು ಅಷ್ಟೇ.

  • ಎಂಟರ್‌ ಟೈನ್‌ ಮೆಂಟ್‌ ಬ್ಯೂರೋ ಸಿನಿಲಹರಿ
Categories
ಸಿನಿ ಸುದ್ದಿ

ಡಾರ್ಲಿಂಗ್‌ ಕೃಷ್ಣನ ಜೊತೆ ಜೊತೆಯಲಿ ಮೇಘಾ ಶೆಟ್ಟಿ; ಶಿವತೇಜಸ್ ನಿರ್ದೇಶನದ ಚಿತ್ರಕ್ಕೆ ನಾಯಕಿ


ಶಿವತೇಜಸ್‌ ನಿರ್ದೇಶನದ ಈ ಚಿತ್ರದಲ್ಲಿಇಬ್ಬರು ನಾಯಕಿಯರು. ಆ ಪೈಕಿ ಒಬ್ಬರು ಈಗ ಅಂತಿಮಗೊಂಡಿದ್ದಾರೆ. ಅದು ಬೇರಾರು ಅಲ್ಲ, “ಜೊತೆ ಜೊತೆಯಲಿ” ಖ್ಯಾತಿಯ ಮೇಘಾಶೆಟ್ಟಿ. ಈಗಾಗಲೇ ಗಣೇಶ್‌ ಅಭಿನಯದ “ತ್ರಿಬಲ್‌ ರೈಡಿಂಗ್‌” ಸಿನಿಮಾಗೆ ನಾಯಕಿಯಾಗಿಋುವ ಮೇಘಾಶೆಟ್ಟಿ, ಈಗ ಶಿವತೇಜಸ್‌ ನಿರ್ದೇಶನದ ಸಿನಿಮಾಗೆ ನಾಯಕಿ. ಇಲ್ಲಿ ಮೇಘಾಶೆಟ್ಟಿ ಪಾತ್ರವೇನು? ಎಂಬುದನ್ನು ಸಿನಿಮಾದಲ್ಲೇ ಕಾಣಬೇಕು

ನಿರ್ದೇಶಕ ಶಿವತೇಜಸ್‌ ಅವರು “ಡಾರ್ಲಿಂಗ್‌” ಕೃಷ್ಣ ಅವರಿಗೆ ಹೊಸ ಸಿನಿಮಾ ಮಾಡುತ್ತಿದ್ದಾರೆ ಅನ್ನೋದು ಎಲ್ಲರಿಗೂ ಗೊತ್ತಿದೆ. ಆ ಚಿತ್ರಕ್ಕೆ ಸುಮಂತ್‌ ಕ್ರಾಂತಿ ನಿರ್ಮಾಣ ಮಾಡುತ್ತಿರುವುದು ಗೊತ್ತು. ಆ ಚಿತ್ರದ ಶೀರ್ಷಿಕೆ ಏನೆಂಬುದನ್ನು ನಿರ್ದೇಶಕರು ಗೌಪ್ಯವಾಗಿಟ್ಟಿದ್ದಾರೆ. ಸೆಪ್ಟೆಂಬರ್‌ 27ರಂದು ಸಂಜೆ 6.30ಕ್ಕೆ ಐಪಿಎಸ್‌ ಅಧಿಕಾರಿ ರವಿ ಡಿ.ಚನ್ನಣ್ಣವರ್ ಚಿತ್ರದ ಶೀರ್ಷಿಕೆ ಅನಾವರಣ‌ ಮಾಡಲಿದ್ದಾರೆ. ಈಗ ಹೊಸ ಸುದ್ದಿ ಅಂದರೆ, ಚಿತ್ರದಲ್ಲಿ ಇಬ್ಬರು ನಾಯಕಿಯರಿದ್ದಾರೆ. ಆ ಪೈಕಿ ಒಬ್ಬರು ಅಂತಿಮಗೊಂಡಿದ್ದಾರೆ. ಅದು ಬೇರಾರು ಅಲ್ಲ, “ಜೊತೆ ಜೊತೆಯಲಿ” ಖ್ಯಾತಿಯ ಮೇಘಾಶೆಟ್ಟಿ. ಹೌದು, ಈಗಾಗಲೇ ಮೇಘಾಶೆಟ್ಟಿ ಅವರು ಗಣೇಶ್‌ ಅಭಿನಯದ “ತ್ರಿಬಲ್‌ ರೈಡಿಂಗ್‌” ಸಿನಿಮಾಗೆ ನಾಯಕಿಯಾಗಿದ್ದಾರೆ. ಈಗ ಶಿವತೇಜಸ್‌ ನಿರ್ದೇಶನದ ಸಿನಿಮಾಗೆ ನಾಯಕಿ. ಈ ಚಿತ್ರದಲ್ಲಿ ಮೇಘಾಶೆಟ್ಟಿ ಅವರ ಪಾತ್ರವೇನು? ಅದನ್ನು ಬಿಟ್ಟುಕೊಡದ ನಿರ್ದೇಶಕರು, ಸಿನಿಮಾದಲ್ಲೇ ಅದನ್ನು ಕಾಣಬೇಕು ಎನ್ನುತ್ತಿದ್ದಾರೆ.


ಶಿವತೇಜಸ್‌ ಹೆಣೆದಿರುವ ಬ್ಯೂಟಿಫುಲ್‌ ಲವ್‌ಸ್ಟೋರಿ ಕೇಳಿದ “ಡಾರ್ಲಿಂಗ್‌” ಕೃಷ್ಣ ಅದಕ್ಕೆ ಒಪ್ಪಿಕೊಂಡು ಬೇಕಾದ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಈಗಾಗಲೇ ಧರ್ಮಸ್ಥಳದ ಶ್ರೀಮಂಜುನಾಥ ಸ್ವಾಮಿಯ ಸನ್ನಿಧಿಯಲ್ಲಿ ಸ್ಕ್ರಿಪ್ಟ್ ಪೂಜೆ ನಡೆದಿದೆ. ಈ ಚಿತ್ರದಲ್ಲಿ ಹಲವು ವಿಶೇಷತೆಗಳೇ ತುಂಬಿವೆ. ಆ ವಿಶೇಷತೆಗಳಲ್ಲಿ ಮೊದಲ ಸ್ಪೆಷಲ್‌ ಅಂದರೆ, ನಿರ್ದೇಶಕ ಶಿವತೇಜಸ್‌ ಅವರನ್ನು ನಂಬಿ, ಅವರು ಮಾಡಿಕೊಂಡಿರುವ ಲವ್‌ಸ್ಟೋರಿಯನ್ನು ಒಪ್ಪಿ, ಚಿತ್ರವನ್ನು ಅದ್ಧೂರಿಯಾಗಿ ನಿರ್ಮಾಣ ಮಾಡಲು ಮುಂದಾಗಿರೋದು ನಿರ್ಮಾಪಕ ಸುಮಂತ್‌ ಕ್ರಾಂತಿ ಇದು ಅವರ ರಶ್ಮಿ ಫಿಲಂಸ್‌ ಬ್ಯಾನರ್‌ನಲ್ಲಿ ನಿರ್ಮಾಣವಾಗುತ್ತಿದೆ.‌

ಸುಮಂತ್‌ ಕ್ರಾಂತಿ ನಿರ್ದೇಶಕರು. ಈಗ ಶಿವತೇಜಸ್‌ ಕಥೆಗೆ ಹಣ ಹಾಕುವ ಮೂಲಕ ನಿರ್ಮಾಪಕರಾಗಿಯೂ ಗುರುತಿಸಿಕೊಂಡಾಗಿದೆ. ಈ ಹಿಂದೆಯೇ ಸುಮಂತ್‌ ಕ್ರಾಂತಿ “ಕಾಲಚಕ್ರ” ಸಿನಿಮಾ ನಿರ್ದೇಶನದ ಜೊತೆಗೆ ನಿರ್ಮಾಣವನ್ನೂ ಮಾಡಿದ್ದಾರೆ.

ಆ ಚಿತ್ರ ಬಿಡುಗಡೆಗೆ ಸಜ್ಜಾಗಿದೆ. ಇನ್ನು, “ಬರ್ಕ್ಲಿ” ಎಂಬ ಮತ್ತೊಂದು ಫೆಂಟಾಸ್ಟಿಕ್‌ ಸಿನಿಮಾ ಮಾಡಿದ್ದು, ಅದರ ಹಿಂದೆಯೇ ಅವರು ಪ್ರಜ್ವಲ್‌ ದೇವರಾಜ್‌ ಅವರಿಗೊಂದು ಸಿನಿಮಾ ಮಾಡಲೂ ಮುಂದಾಗಿದ್ದಾರೆ.

ಒಬ್ಬ ನಿರ್ದೇಶಕರಾಗಿ ಮತ್ತೊಬ್ಬ ನಿರ್ದೇಶಕರಿಗೆ ಅವಕಾಶ ಕೊಟ್ಟಿರುವುದೇ ವಿಶೇಷ. ಶಿವತೇಜಸ್ ಈ ಬಾರಿ ಪುನಃ ಬ್ಯೂಟಿಫುಲ್‌ ಲವ್‌ಸ್ಟೋರಿ ಜೊತೆ ಬರುತ್ತಿದ್ದಾರೆ. ನವೆಂಬರ್‌ನಿಂದ ಸಿನಿಮಾ ಶುರುವಾಗಲಿದೆ. ಚಿತ್ರಕ್ಕೆ ಅರ್ಜುನ್‌ ಜನ್ಯ ಸಂಗೀತ ನೀಡುತ್ತಿದ್ದಾರೆ. ಉಳಿದಂತೆ ಇನ್ನಿತರೆ ಕಲಾವಿದರ ಆಯ್ಕೆ ನಡೆಯುತ್ತಿದೆ.

Categories
ಸಿನಿ ಸುದ್ದಿ

ಹೊಸಬರ ಸುಕನ್ಯ ದ್ವೀಪ; ಫಸ್ಟ್‌ ಶೆಡ್ಯೂಲ್‌ ಮುಗಿಸಿದ ಚಿತ್ರತಂಡ

ಸುಕನ್ಯ ದ್ವೀಪ ಎನ್ನುವ ಟೈಟಲ್ ಕೇಳಿದೊಡನೆ ಇದೊಂದು ಸಸ್ಪೆನ್ಸ್ ಚಿತ್ರ ಇರಬದುದೇನೋ ಎಂಬ ಪ್ರಶ್ನೆ ಎದುರಾಗುತ್ತೆ. ಆದರೆ, ಇದು ಸಸ್ಪೆನ್ಸ್‌ ಸಿನಿಮಾವಂತೂ ಅಲ್ಲ. ಇದೊಂದು ಪಕ್ಕಾ ಫ್ಯಾಮಿಲಿ ಮತ್ತು ಲವ್‌ ಜಾನರ್‌ ಕಥೆ ಹೊಂದಿರುವ ಸಿನಿಮಾ. ಇದರೊಂದಿಗೆ ಹಾಸ್ಯದ ಲೇಪನವೂ ಇಲ್ಲಿದೆ. ಅಂದಹಾಗೆ, ಈ ಚಿತ್ರವನ್ನು ಎಂ.ಡಿ. ಅಫ್ಜಲ್ ನಿರ್ದೇಶನ ಮಾಡಿದ್ದಾರೆ. ಈಗಾಗಲೇ “ಮೊಬೈಲ್ ರಾಜʼ ಸಿನಿಮಾ ನಿರ್ದೇಶಿಸಿರುವ ಅಫ್ಜಲ್‌, ಆ ಚಿತ್ರದ ಬಿಡುಗಡೆ ಎದುರು ನೋಡುತ್ತಿದ್ದಾರೆ. ಅದರ ಬೆನ್ನಲ್ಲೇ, ಇದೀಗ “ಸುಕನ್ಯ ದ್ವೀಪ” ಸಿನಿಮಾದ ಮೊದಲ ಹಂತದ ಚಿತ್ರೀಕರಣ ಮುಗಿಸಿದ್ದಾರೆ.


ನಿರ್ದೇಶಕ ಅಫ್ಜಲ್ ಅವರು, ಇದುವರೆಗೆ 18 ಚಿತ್ರಗಳಲ್ಲಿ ನಟಿಸಿದ್ದಾರೆ. ಅವರ ನಿರ್ದೇಶನದ ‌ಎರಡನೇ ಸಿನಿಮಾ ಇದಾಗಿದ್ದು, ರಾಜ್‌ಪ್ರಭು ಅವರ ಮೂಲಕ ಈ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಮೂವರು ಅಕ್ಕ-ತಂಗಿಯರ ಸುತ್ತ ನಡೆಯುವ ಕಥಾಹಂದರ ಇಲ್ಲಿದೆ. ಇಲ್ಲಿ ವಿಶೇಷ ಪಾತ್ರದಲ್ಲಿ ರಾಜ್‌ಪ್ರಭು ಕಾಣಿಸಿಕೊಂಡಿದ್ದಾರೆ. ಫ್ಯಾಮಿಲಿ ಸಬ್ಜೆಕ್ಟ್ ನಲ್ಲಿ ಲವ್‌ಸ್ಟೋರಿ ಕೂಡ ಇದೆ. ಕಾಮಿಡಿಗೆ ಹೆಚ್ಚು ಒತ್ತು ನೀಡಿರುವುದು ಇನ್ನೊಂದು ವಿಶೇಷ. ಈಗಾಗಲೇ ಬೆಂಗಳೂರು ಸುತ್ತಮುತ್ತ ಒಂದು ಹಂತದ ಶೂಟಿಂಗ್ ಮುಗಿಸಿದ್ದು, ಮುಂದಿನ ಹಂತದಲ್ಲಿ ಹಾಸನ, ಕಳಸ, ಬೇಲೂರು ಹೀಗೆ ಪ್ರಮುಖ ಸ್ಥಳಗಳಲ್ಲಿ ಚಿತ್ರೀಕರಿಸುವ ಯೋಜನೆ ಚಿತ್ರತಂಡದ್ದು. “ಸುಕನ್ಯ” ಎಂದರೆ ಹೆಣ್ಣು, ದ್ವೀಪ ಎಂದರೆ ಅವರಿರುವ ಮನೆಗೆ ಹೋಲಿಸಲಾಗಿದೆ. ಆ ಮೂವರು ಹೆಣ್ಣು ಮಕ್ಕಳು ಪ್ರೇಮದ ಬಲೆಗೆ ಬಿದ್ದಾಗ ಫ್ಯಾಮಿಲಿಯಿಂದ ಅಡ್ಡಿಯಾಗುತ್ತದೆ, ನಂತರ ಚಿತ್ರದಲ್ಲೊಂದು ಮೇಜರ್ ಟ್ವಿಸ್ಟ್ ಇದೆ. ಹಾಗಂತ, ಕೊಲೆ, ಸಸ್ಪೆನ್ಸ್ ಅಂಥದ್ದೇನೂ ಇಲ್ಲ. ಸ್ನೇಹಿತ ಅಲ್ವಿನ್ ಸೊಗಸಾದ ಡೈಲಾಗ್‌ಗಳನ್ನು ಬರೆದುಕೊಟ್ಟಿದ್ದಾರೆ ಎಂದು ಮಾಹಿತಿ ಕೊಡುತ್ತಾರೆ ನಿರ್ದೇಶಕ ಅಫ್ಜಲ್.

ಕಾರ್ಯಕಾರಿ ನಿರ್ಮಾಪಕ ರಾಜ್ ಪ್ರಭು ಅವರು, ತಮಿಳಿನ ಹಾಸ್ಯನಟ ದಿ. ವಿವೇಕ್ ಅವರಿಂದ ಸ್ಫೂರ್ತಿ ಪಡೆದು ಈ ಈ ಕಥೆ ಮಾಡಿಕೊಳ್ಳಲಾಗಿದೆ. ಚಿತ್ರದಲ್ಲಿ ನನ್ನ ಪಾತ್ರ ಸೆಕೆಂಡ್ ಹಾಫ್ ನಲ್ಲಿ ಬರುತ್ತೆ, ಅದರಲ್ಲಿ ಒಂದಷ್ಟು ಕುತೂಹಲವೂ ಇದೆ ಅನ್ನುತ್ತಾರೆ ಅವರು. ಸಂಗೀತ ನಿರ್ದೇಶಕ ಕೌಶಿಕ್ ಹರ್ಷ ಅವರಿಗೆ ರಾಜ್‌ಪ್ರಭು ಕಥೆ ಹೇಳಿದಾಗ ಇಷ್ಟವಾಯ್ತು, ಚಿತ್ರದ ೫ ಹಾಡುಗಳಿಗೆ ಸಂಗೀತ ನೀಡಲಾಗಿದೆ ಎಂಬ ಮಾಹಿತಿ ಕೊಡುತ್ತಾರೆ.
ನಿರ್ಮಾಪಕ ವೀರಬಾಹು, ರಾಜಪ್ರಭು ಒಂದೊಳ್ಳೆ ಕಥೆ ರೆಡಿ ಇದೆ. ಸಿನಿಮಾ ಮಾಡೋಣ ಅಂದರು. ಒನ್ ಲೈನ್ ಕಥೆ ಕೇಳಿಯೇ ನಾನು ನಿರ್ಮಾಣಕ್ಕೆ ಒಪ್ಪಿದೆ. ಮಚ್ಚು, ಲಾಂಗು ಇಲ್ಲದ ನೀಟ್ ಫ್ಯಾಮಿಲಿ ಎಂಟರ್‌ಟೈನರ್ ಸಿನಿಮಾ ಇದು ಎಂದರು.

ಚಿತ್ರದ ನಾಯಕರಲ್ಲೊಬ್ಬರಾದ ಸಚಿನ್ ಪುರೋಹಿತ್, “ಸ್ಟೂಡೆಂಟ್ʼ, “ಚರಂತಿ”, “ಗಡಿಯಾರ” ನಂತರ ಇದು ನನ್ನ ನಾಲ್ಕನೇ ಚಿತ್ರ, “ತಮಸ್‌”ನಲ್ಲಿ ನಾನು ರಾಜ್‌ಪ್ರಭು ಒಟ್ಟಿಗೇ ಕೆಲಸ ಮಾಡಿದ್ದೆವು. ನನ್ನದು ಲವರ್ ಬಾಯ್ ಥರದ ಪಾತ್ರ ಅಂದರು. ಮತ್ತೊಬ್ಬ ನಟ ರವಿ ಅನುಭವ ಹಂಚಿಕೊಂಡರು. ಛಾಯಾಗ್ರಾಹಕ ವಿಘ್ನೇಶ್ ನಾಗೇಂದ್ರ, ನಾಯಕಿಯರಾದ ಶ್ರೇಯಾ ವಸಂತ್, ಅಕ್ಷಿತ ನಾಗರಾಜ್, ಚುಂಬಿತ ಮಾತನಾಡಿದರು. ಇಲ್ಲಿ ಎಂ.ಡಿ. ಕೌಶಿಕ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

Categories
ಸಿನಿ ಸುದ್ದಿ

ರಾಯರ ಮಗನ ರಾಘವೇಂದ್ರ ಸ್ಟೋರ್ಸ್ : ಹೊಂಬಾಳೆ ಫಿಲಂಸ್‌ ನಲ್ಲಿ‌ ನಟನೆಯ ಅಖಾಡಕ್ಕಿಳಿದ ನವರಸನಾಯಕ ಜಗ್ಗೇಶ್ !

ಹೊಂಬಾಳೆ ಫಿಲಂಸ್‌ ಅಚ್ಚರಿ ಹುಟ್ಟಿಸುತ್ತಿದೆ. ಕೊರೋನಾ ಅಂತ ಉದ್ಯಮವೇ ಸೈಲೆಂಟ್‌ ಆಗಿರುವಾಗ ಹೊಂಬಾಳೆ ಫಿಲಂಸ್‌ ಮಾತ್ರ ಬ್ಯಾಕ್‌ ಟು ಬ್ಯಾಕ್‌ ಸಿನಿಮಾ ಅನೌನ್ಸ್‌ ಮಾಡುತ್ತಿದೆ. ಲಾಕ ಡೌನ್‌ ನಂತರದ ದಿನಗಳಲೇ ಪ್ರಭಾಸ್‌ ಆಯ್ತು, ಅಲ್ಲಿಂದ ಪವರ್‌ ಸ್ಟಾರ್‌ ಪುನೀತ್‌ ರಾಜ್‌ ಕುಮಾರ್‌ ಆಯ್ತು, ಜತೆಗೆ ರಿಷಬ್‌ ಶೆಟ್ಟಿ , ರಕ್ಷಿತ್‌ ಶೆಟ್ಟಿ ಅವರಿಗೂ ಸಿನಿಮಾ ಅನೌನ್ಸ್‌ ಮಾಡಿ ಆಯ್ತು. ಈಗ ಕನ್ನಡದ ಹಿರಿಯ ನಟ ನವರಸ ನಾಯಕ ಜಗ್ಗೇಶ್‌ ಕಾಂಬಿನೇಷನ್‌ ಮೂಲಕ ಮತ್ತೊಂದು ಸಿನಿಮಾ ಅನೌನ್ಸ್‌ ಮಾಡಿ ಕುತೂಹಲ ಮೂಡಿಸಿದೆ ʼಕೆಜಿಎಫ್‌ʼ ಖ್ಯಾತಿಯ ಹೊಂಬಾಳೆ ಫಿಲಂಸ್.‌

ಸಿನಿಮಾ ಪ್ರೇಮಿಗಳ ಕುತೂಹಲಕ್ಕೆ ತೆರೆ ಬಿದ್ದಿದೆ. ಕನ್ನಡದ ಪ್ರತಿಷ್ಟಿತ ಚಿತ್ರ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲಂಸ್‌ ನ 12 ನೇ ಸಿನಿಮಾದ ಟೈಟಲ್‌ ಏನು, ಅದರ ನಾಯಕ ಯಾರು ಎನ್ನುವ ಕ್ಯೂರಿಯಾಸಿಟಿಗೆ ಇಂದು ಉತ್ತರ ಸಿಕ್ಕಿದೆ. ಈ ಮೊದಲೇ ಹೇಳಿದಂತೆ ಹೊಂಬಾಳೆ ಫಿಲಂಸ್‌ ತನ್ನ 12ನೇ ಸಿನಿಮಾದ ಟೈಟಲ್‌ ಜತೆಗೆ ಫಸ್ಟ್‌ ಲುಕ್‌ ಪೋಸ್ಟರ್‌ ಲಾಂಚ್‌ ಮೂಲಕ ಅದರ ನಾಯಕ ಯಾರು ಎನ್ನುವುದನ್ನು ರಿವೀಲ್‌ ಮಾಡಿದೆ. ಒಂದ್ರೀತಿ ಇದು ಅಚ್ಚರಿಯನ್ನೇ ಹೊತ್ತು ಬಂದಿರುವುದು ವಿಶೇಷ.

ಅಂದ ಹಾಗೆ, ಹೊಂಬಾಳೆ ಫಿಲಂಸ್‌ ನಿರ್ಮಾಣದ 12 ನೇ ಚಿತ್ರದ ಹೆಸರು ರಾಘವೇಂದ್ರ ಸ್ಟೋರ್ಸ್‌ʼ ಇದರ ನಾಯಕ ನಟ ಜಗ್ಗೇಶ್.‌ ನಿರ್ದೇಶಕ ಸಂತೋಷ್‌ ಆನಂದ್‌ ರಾಮ್.‌ ಕನ್ನಡದ ಹಿರಿಯ ನಟ ನವರಸ ನಾಯಕ ಜಗ್ಗೇಶ್‌ ಇದೇ ಮೊದಲು ಹೊಂಬಾಳೆ ಫಿಲಂಸ್‌ ಬ್ಯಾನರ್‌ ಮೂಲಕ ನಟನೆಯ ಅಖಾಡಕ್ಕೆ ಇಳಿದಿದ್ದಾರೆ. ಅವರಿಗೆ ಇಲ್ಲಿ ನಿರ್ದೇಶಕ ಸಂತೋಷ್‌ ಆನಂದ್‌ ರಾಮ್‌ ಜತೆಯಾಗಿದ್ದಾರೆ. ಇದೇ ಮೊದಲು ಇವರಿಬ್ಬರ ಜುಗಲ್‌ ಬಂಧಿ ರಾಘವೇಂದ್ರ ಸ್ಟೋರ್ಸ್‌ ನಲ್ಲಿ ಆಗಿದೆ.

ಹೊಂಬಾಳೆ ಫಿಲಂಸ್‌ ಇದೆಲ್ಲ ವಿವರವನ್ನು ಬುಧವಾರ ಅಧಿಕೃತವಾಗಿ ಪ್ರಕಟಿಸಿದೆ. ಟೈಟಲ್‌ ಮೂಲಕವೇ ಕುತೂಹಲ ಹುಟ್ಟಿಸುವ ಈ ಸಿನಿಮಾ ಇದು. ರಾಘವೇಂದ್ರ ಅಂದಾಕ್ಷಣ ಅದು ಜಗ್ಗೇಶ್‌ ಅವರಿಗೆ ಕನೆಕ್ಟ್.‌ ಅದೇ ಕಾರಣಕ್ಕೆ ನಟ ಜಗ್ಗೇಶ್‌ ಅವರ ಪಾಲಿಗೆ ಇದು ಸಾಕಷ್ಟು ವಿಶೇಷತೆ ಹೊಂದಿದ ಸಿನಿಮಾ. ಯಾಕಂದ್ರೆ, ನಟ ಜಗ್ಗೇಶ್‌ ಅವರು ಗುರು ರಾಘವೇಂದ್ರ ಪರಮ ಭಕ್ತರು. ರಾಯರ ಮಗ ಅಂತಲೇ ನಂಬಿಕೆ. ಕಾಕತಾಳೀಯ ಎನ್ನುವ ಹಾಗೆ ಈಗವರು ರಾಯರ ಹೆಸರಿನ ಚಿತ್ರಕ್ಕೆ ನಾಯಕರಾಗಿದ್ದಾರೆ. ಅದರ ನಂಟಿನ ಬಗ್ಗೆಯೇ ಅವರು ಮೊದಲ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ʼ ರಾಯರ ಮಗನಿಗೆ ರಾಘವೇಂದ್ರ ಸ್ಟೋರ್ಸ್ ʼ ಚಿತ್ರ ಬದುಕಿನ ಪರಿಪೂರ್ಣ ಅವರ್ಥ. ನಗಿಸುತ್ತ ಬಿಡಿಸಿ ಹೇಳುವ ಅದ್ಭುತ ಕೃತಿ.‌ ಹೊಂಬಾಳೆ ಸಿನಿಮಾದ್‌ ಜತೆಗೆ ಇದು ನನ್ನ ಮೊದಲ ಸಿನಿಮಾವಾಗಿದ್ದು, ಈ ಹೊಸ ಪ್ರಯತ್ನವನ್ನು ಪ್ರೇಕ್ಷಕರು ಮೆಚ್ಚಿ ಆಶೀರ್ವದಿಸುತ್ತಾರೆ ಎಂಬ ನಂಬಿಕೆ ಇದೆʼ ಎನ್ನುವುದರ ಮೂಲಕ ʼರಾಘವೇಂದ್ರ ಸ್ಟೋರ್ಸ್‌ʼ ಬಗ್ಗೆ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ ನಟ ಜಗ್ಗೇಶ್. ಇನ್ನು ರಾಘವೇಂದ್ರ ಸ್ಟೋರ್ಸ್‌ ಬಗ್ಗೆ ಹೊಂಬಾಳೆ ಫಿಲಂಸ್‌ ಎರಡು ದಿನಗಳ ಮುಂಚೆಯೇ ಕೊಟ್ಟ ಹಿಂಟ್ಸ್‌ ಏನು ಅಂತ ನಿಮಗೆಲ್ಲ ಗೊತ್ತೇ ಇದೆ. ಬಾಳೆ ಏಲೆ, ಅದರ ಮೇಲೆ ಒಂದಷ್ಟು ಅಕ್ಷರ. ಪ್ರತಿಯೊಬ್ಬರಲ್ಲೂ ಹಸಿವಿದೆ, ಪ್ರತಿ ಅಗಳಿನಲ್ಲೂ ತಿನ್ನುವವರ ಹೆಸರಿದೆ. ಅನ್ನದಾತೋ ಸುಖೀಭವ ಎಂಬುದಾಗಿ ಬರೆದು, ಚಿತ್ರದ ಟೈಟಲ್‌ ಅನೌನ್ಸ್‌ ಜತೆಗೆ ಅದರ ನಾಯಕ ಯಾರು ಎನ್ನುವುದರ ಬಗ್ಗೆ ದೊಡ್ಡ ಕ್ಯೂರಿಯಾಸಿಟಿ ಹುಟ್ಟಿಸಿತ್ತು ಹೊಂಬಾಳೆ ಫಿಲಂಸ್.‌

ಆ ಕುತೂಹಲಕ್ಕೆ ಈಗ ತೆರೆ ಎಳೆದಿದೆ. ಮೊದಲೇ ಹೇಳಿದಂತೆ ಬುಧವಾರ ಟೈಟಲ್‌ ಜತೆಗೆ ಅದರ ಫಸ್ಟ್‌ ಲುಕ್‌ ಪೋಸ್ಟರ್‌ ಕೂಡ ರಿವೀಲ್‌ ಆಗಿದೆ. ಕಳೆದೆರೆಡು ದಿನಗಳಿಂದ ಏನೇನೋ ಕಲ್ಪಿಸಿಕೊಂಡವರಿಗೆ ಇವತ್ತು ನಿಜಕ್ಕೂ ಶಾಕ್.‌ ಯಾಕಂದ್ರೆ ʼರಾಜಕುಮಾರʼ ಖ್ಯಾತಿಯ ನಿರ್ದೇಶಕ ಸಂತೋಷ್‌ ಆನಂದ್‌ ರಾಮ್‌ ಅವರಿಗೆ ಇಲ್ಲಿ ಜೋಡಿಯಾಗಿದ್ದು ಕನ್ನಡದ ಹಿರಿಯ ನಟ, ನವರಸನಾಯಕ ಜಗ್ಗೇಶ್.‌ ಇನ್ನು ಟೃಟಲ್‌ ಅನೌನ್ಸ್‌ ಗೆ ಬಾಳೆ ಎಲೆ ಹಾಸಿ, ಒಂದಷ್ಟು ಕುತೂಹಲದ ಕೊಟೇಷನ್‌ ಹಾಕಿದ್ದ ಹೊಂಬಾಳೆ ಫಿಲಂಸ್‌ ನ 12 ನೇ ಚಿತ್ರದ ಕಥೆ ಬಗೆಗಿನ ಕುತೂಹಲಕ್ಕೂ ಒಂದಷ್ಟು ಮಾಹಿತಿ ಇಲ್ಲಿ ರಿವೀಲ್‌ ಆಗಿದೆ. ಅದಕ್ಕಿಂತ ಮೊದಲು ಹೊಂಬಾಳೆ ಫಿಲಂಸ್‌ ನಲ್ಲಿ ನಟ ಜಗ್ಗೇಶ್‌ ಇದೇ ಮೊದಲು ನಟನೆಯ ಅಖಾಡಕ್ಕೆ ಇಳಿದಿರುವುದು ಇಲ್ಲಿ ವಿಶೇಷ. ಆ ಬಗ್ಗೆ ನಿರ್ಮಾಪಕ ವಿಜಯ್‌ ಕಿರಗಂದೂರು ಕೂಡ ಹರ್ಷ ವ್ಯಕ್ತಪಡಿಸುತ್ತಾರೆ.

ʼ ಹಿರಿಯ ನಟರಾದ ಜಗ್ಗೇಶ್‌ ಅವರು ಇದೇ ಮೊದಲು ನಮ್ಮ ಬ್ಯಾನರ್‌ ನಲ್ಲಿ ನಟಿಸುತ್ತಿರುವುದು ನಮ್ಮನ್ನು ಪುಳಕಿತರನ್ನಾಗಿ ಮಾಡಿದೆ. ಇದು ನಮಗೆ ಹೆಮ್ಮೆಯ ವಿಷಯವೂ ಹೌದು.ಕನ್ನಡ ಚಲನಚಿತ್ರರಂಗ ಕೀರ್ತಿಯಲ್ಲಿ ಜಗ್ಗೇಶ್‌ ಅವರ ಪಾತ್ರಾಪಾರವಾದದ್ದು.ಕನ್ನಡ ಚಿತ್ರರಂಗಕ್ಕೆ ಅವರ ಕೊಡುಗೆ ಅವೀಸ್ಮರಣಿಯ. ಅವರು ಚಿತ್ರರಂಗದ ಬಹುದೊಡ್ಡ ಆಸ್ತಿ. ಹೀಗಾಗಿ ಹೊಂಬಾಳೆ ಟೀಮ್‌ ಗೆ ನವರಸನಾಯಕ ಜಗ್ಗೇಶ್‌ ಅವರ ಸೇರ್ಪಡೆ ನಮ್ಮ ಸೌಭಾಗ್ಯʼ ಎನ್ನುವ ಮಾತುಗಳೊಂದಿಗೆ ತಮ್ಮ ಸಂಸ್ಥೆಯ ಸಿನಿಮಾಕ್ಕೆ ಅದ್ಧೂರಿ ಸ್ವಾಗತ ನೀಡಿದ್ದಾರೆ ನಿರ್ಮಾಪಕ ವಿಜಯ್‌ ಕಿರಗಂದೂರು. ಹಾಗೆಯೇ ರಾಜಕುಮಾರ, ಯುವರತ್ನ ಚಿತ್ರದ ನಂತರ ಮತ್ತೆ ಈಗ ಮೂರನೇ ಸಿನಿಮಾದೊಂದಿಗೆ ಹೊಂಬಾಳೆ ಫಿಲಂಸ್‌ ಮೂಲಕ ಹ್ಯಾಟ್ರಿಕ್‌ ಬಾರಿಸುತ್ತಿರುವ ನಿರ್ದೇಶಕ ಸಂತೋಷ್‌ ಆನಂದ್‌ ರಾಮ್‌ ಅವರ ಬಗ್ಗೆಯೂ ಅಪಾರ ಮೆಚ್ಚುಗೆ ವ್ಯಕ್ತಪಡಿಸಿರುವ ನಿರ್ಮಾಪಕ ವಿಜಯ್‌ ಕಿರಗಂದೂರು, ಹೊಸ ಚಲನಚಿತ್ರವನ್ನು ಚಿತ್ರ ರಸಿಕರ ನಿರೀಕ್ಷೆಗೆ ತಕ್ಕಂತೆ ರೂಪಿಸಲಿದ್ದಾರೆಂಬ ಆತ್ಮವಿಶ್ವಾಸ, ನಂಬಿಕೆ ನನಗಿದೆ ಎಂದಿದ್ದಾರೆ.

  • ಎಂಟರ್‌ ಟೈನ್‌ ಮೆಂಟ್‌ ಬ್ಯೂರೋ ಸಿನಿಲಹರಿ
Categories
ಸಿನಿ ಸುದ್ದಿ

ಛೇ, ಅವರು ಇರಲೇಬೇಕಿತ್ತು….ಅಂತ ನಿಮಗೂ ಅನಿಸುತ್ತೆ : ಸೆ.24ಕ್ಕೆ ಬೆಳ್ಳಿತೆರೆ ಮೇಲೆ ಪುಕ್ಸಟ್ಟೆ ಲೈಪು ಪುರ್ ಸೊತ್ತೇ ಇಲ್ಲ !

ನಟ ಸಂಚಾರಿ ವಿಜಯ್‌ ಈಗಿಲ್ಲ ಅನ್ನೋದನ್ನು ಈಗಲೂ ಅರಗಿಸಿಕೊಳ್ಳಲಾಗದ ಸಂಗತಿ. ಆದರೂ ಅದು ವಾಸ್ತವ. ಅವರು ಕಡೆಯದಾಗಿ ಅಭಿನಯಿಸಿದ ಸಿನಿಮಾಗಳು ಈಗ ಬೆಳ್ಳಿತೆರೆ ಮೇಲೆ ಚಿಮ್ಮಲು ಕಾದಿವೆ. ಆ ಪೈಕಿ ಸೆ.24 ಕ್ಕೆ ಪುಕ್ಸಟ್ಟೆ ಲೈಪು ಪುರ್‌ ಸೊತ್ತೇ ಇಲ್ಲ ಸಿನಿಮಾ ರಿಲೀಸ್‌ ಆಗುತ್ತಿದೆ. ಈ ಸಿನಿಮಾ ಅನೇಕ ಕಾರಣಕ್ಕೆ ತುಂಬಾ ಸ್ಪೆಷಲ್.‌ ಅದರಲ್ಲಿ ವಿಜಯ್‌ ಅವರ ಪಾತ್ರ, ನಟನೆಯೂ ಕೂಡ ಕಾರಣ.

ಛೇ, ಅವರು ಇರಲೇಬೇಕಿತ್ತು…ಹೌದು, ಆ ಚಿತ್ರದ ಟ್ರೇಲರ್‌ನಲ್ಲಿ ಕಾಣುವ ಅವರ ನಟನೆಯನ್ನು ನೋಡಿದಾಗ ನಮ್ಮೊಳಗೆ ಅಂತಹದೊಂದು ವೇದನೆ ಗಾಢವಾಗಿ ಕಾಡುತ್ತದೆ. ಕೇವಲ ಎರಡೇ ನಿಮಿಷದ ಆ ಟ್ರೇಲರ್‌ ನಲ್ಲಿನ ಅವರ ಅಭಿನಯ ನೋಡ ನೋಡುತ್ತಲೇ ಛೇ, ಅವರು ನಮ್ಮೊಂದಿಗೆ ಇರಲೇಬೇಕಿತ್ತು ಅಂತ ಮನಸ್ಸು ಪರಿತಪಿಸತೊಡಗುತ್ತದೆ. ಒಂದ್ರೀತಿಯ ಬೇಸರ ನಮ್ಮನ್ನೇ ಆವರಿಸಿಕೊಳ್ಳುತ್ತದೆ. ಟ್ರೇಲರ್‌ ಮುಗಿಯುತಾ ಬಂದಾಗ ಒಂದು ಡೈಲಾಗ್‌ ಕೇಳುತ್ತದೆ. ʼಎಲ್ಲಾದರೂ ಕಾಣದಂತೆ ಆರು ತಿಂಗಳು ಹೊರಟು ಹೋಗು, ಯಾರ ಕಣ್ಣಿಗೂ ಕಾಣಬೇಡʼ ಅಂತ ಪೊಲೀಸ್‌ ಪಾತ್ರದಾರಿ ಅಚ್ಯುತ್‌ ಕುಮಾರ್‌ ಹೇಳುತ್ತಾರೆ. ಹಾಗೆಯೇ ನಟ ಸಂಚಾರಿ ವಿಜಯ್‌ ಹೊರಟು ಹೋಗಿದ್ದಾರೆಯೇ ಎನ್ನುವ ಕೊಂಚ ಸಮಾಧಾನದ ಮಾತು ಅಲ್ಲಿ ಕೇಳಿದರೂ ವಾಸ್ತವದಲ್ಲಿ ಅವರಿಲ್ಲ ಎನ್ನುವ ಗಾಢ ಬೇಸರದಲ್ಲಿಯೇ ಟ್ರೇಲರ್‌ ನಲ್ಲಿನ ಅವರ ಅಭಿನಯ ನಮ್ಮೆನ್ನೆಲ್ಲ ಮಂತ್ರ ಮುಗ್ದಗೊಳಿಸುತ್ತದೆ. ಅಂದ ಹಾಗೆ ಆ ಟ್ರೇಲರ್‌ ʼಪುಕ್ಸಟ್ಟೆ ಲೈಪು ಪುರ್‌ ಸೊತ್ತೇ ಇಲ್ಲʼ ಚಿತ್ರದ್ದು.

ನಟ ಸಂಚಾರಿ ವಿಜಯ್‌ ಈಗಿಲ್ಲ. ಆದರೆ ಅವರ ಅಭಿನಯದ ಕೊನೆಯ ಸಿನಿಮಾಗಳು ಈಗ ಬೆಳ್ಳಿತೆರೆಯ ಮೇಲೆ ಅಬ್ಬರಿಸಲು ಕಾದಿವೆ. ಆ ಪೈಕಿ ʼಪುಕ್ಸಟ್ಟೆ ಲೈಪು ಪುರ್‌ ಸೊತ್ತೇ ಇಲ್ಲʼ ಸಿನಿಮಾ ಕೂಡ ಒಂದು. ಆರಂಭದಿಂದಲೂ ಟೈಟಲ್‌ ಮೂಲಕವೇ ಕುತೂಹಲ ಮೂಡಿಸಿದ ಸಿನಿಮಾ ಇದು. ಜತೆಗೆ ಟೀಸರ್‌ ಹಾಗೂ ಟ್ರೇಲರ್‌ ಮೂಲಕವೂ ಮತ್ತಷ್ಟು ಸದ್ದು ಮಾಡಿ, ಈಗ ಪ್ರೇಕ್ಷಕರ ಮುಂದೆ ಬರುತ್ತಿದೆ. ಸೆ.24 ಕ್ಕೆ ಈ ಚಿತ್ರ ಗ್ರಾಂಡ್ ರಿಲೀಸ್‌‌ ಗೆ ರೆಡಿ ಆಗಿದೆ. ಶೇಕಡಾ 50 ರಷ್ಟು ಸೀಟು ಭರ್ತಿಯ ಅವಕಾಶದ ನಡುವೆಯೇ ಈ ಚಿತ್ರ ಇದೇ ವಾರ ಚಿತ್ರಮಂದಿರಗಳಿಗೆ ದಾಂಗುಡಿ ಇಡುತ್ತಿದೆ. ಕೊರೋನಾ ಆರಂಭಕ್ಕೂ ಮುನ್ನ ಇದ್ದ ಸಿನಿಮಾ ವಾತಾವರಣ ಈಗಿಲ್ಲ ಎನ್ನುವುದು ಸತ್ಯವೇ ಆಗಿದ್ದರೂ, ಸಂಕಷ್ಟದ ಪರಿಸ್ಥಿತಿ ಈಗ ತಿಳಿಯಾಗುತ್ತಿದೆ. ಈ ವಾರದಲ್ಲಿಯೇ ಚಿತ್ರಮಂದಿರಗಳಲ್ಲಿ ಶೇ. 100 ರಷ್ಟು ಸೀಟು ಭರ್ತಿಗೂ ಅವಕಾಶ ಸಿಗುವ ಸಾಧ್ಯತೆಗಳಿವೆ.

ಚಿತ್ರರಂಗದ ಪಾಲಿಗೆ ಇದು ದೊಡ್ಡ ಆಶಾಭಾವನೆ ಹುಟ್ಟು ಹಾಕಿದೆ. ಆ ದಿನಗಳು ಮತ್ತೆ ಬಂದೇ ಬರಬಹುದು ಎನ್ನುವ ದೊಡ್ಡ ಭರವಸೆ ಮೂಲಕ ರಿಲೀಸ್‌ ಗೆ ರೆಡಿ ಇರುವ ಸಿನಿಮಾಗಳು, ಚಿತ್ರಮಂದಿರಗಳಿಗೆ ನುಗ್ಗಲು ತಯಾರಿ ನಡೆಸಿವೆ. ಈ ಪೈಕಿ ಈಗ ಬೆಳ್ಳಿತೆರೆಯಲ್ಲಿ ಅಬ್ಬರಿಸಲು ತುದಿಗಾಲ ಮೇಲೆ ನಿಂತಿರೋ ಸಿನಿಮಾ ʼಪುಕ್ಸಟ್ಟೆ ಲೈಪು ಪರುಸೊತ್ತೇ ಇಲ್ಲʼ. ನಟ ಸಂಚಾರಿ ವಿಜಯ್‌ ಅಭಿನಯದ ಕಾರಣಕ್ಕೆ ದೊಡ್ಡ ಕುತೂಹಲ ಹುಟ್ಟು ಹಾಕಿರೋ ಸಿನಿಮಾ ಇದು. ಅವರೊಂದಿಗೆ ಇಲ್ಲಿ ಅಚ್ಯುತ್ ಕುಮಾರ್‌, ರಂಗಾಯಣ ರಘು, ಜಯಶ್ರೀ ಸೇರಿದಂತೆ ರಂಗಭೂಮಿಯ ದೊಡ್ಡ ಕಲಾವಿದರ ಸಮಾಗಮವೇ ಇಲ್ಲಿದೆ. ಸರ್ವಸ್ವ ಪ್ರೊಡಕ್ಷನ್‌ ಮೂಲಕ ನಿರ್ಮಾಣವಾಗಿರೋ ಈ ಸಿನಿಮಾಕ್ಕೆ ಅರವಿಂದ್‌ ಕುಪ್ಲೀಕರ್‌ ನಿರ್ದೇಶಕ. ರಂಗಭೂಮಿಯ ದೊಡ್ಡ ಅನುಭವ ಅವರಿಗಿದೆ. ಟ್ರೇಲರ್‌ ನೋಡಿದಾಗ ಈ ಸಿನಿಮಾದ ತಿರುಳು ಕೊಂಚ ನಿಮಗೂ ಅರ್ಥವಾಗಿರಬಹುದು. ʼಬೇಲಿಯೇ ಎದ್ದು ಹೊಲ ಮೇಯ್ದದಂತೆ ʼಎನ್ನುವ ಗಾದೆ ಮಾತಿನಂತೆ ಇಲ್ಲಿ ಪೊಲೀಸರೇ ಕಳ್ಳರ ಜತೆ ಸೇರಿ ಕಳ್ಳತನ ಮಾಡಿದ್ರೆ ಹೇಗಿರುತ್ತೆ ಎನ್ನುವ ಸಣ್ಣ ಎಳೆಯೊಂದನ್ನು ಇಟ್ಟುಕೊಂಡು ನಿರ್ಮಾಣ ಮಾಡಿರುವ ಸಿನಿಮಾ ಇದು.

ಅಚ್ಯುತ್‌ ಕುಮಾರ್‌ ಪೊಲೀಸ್‌ ಪಾತ್ರದಲ್ಲಿ, ರಂಗಾಯಣ ಮಾಲೀಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಅವರ ಪಾತ್ರಗಳೇ ಇಲ್ಲಿ ವಿಭಿನ್ನ, ವಿಶಿಷ್ಟವಾಗಿವೆ. ಚಿತ್ರದ ಪ್ರಮುಖ ಪಾತ್ರದಾರಿ ವಿಜಯ್‌ ಅವರದ್ದು ಈಲ್ಲಿ ಬೀಗ ರಿಪೇರಿ ಮಾಡುವ ಒಬ್ಬ ಯುವಕ. ಆತನ ಹೆಸರು ಶಹಜಹಾನ್.‌ ಆತ ಬೀಗ ರಿಪೇರಿಯಿಂದ ಬರುವ ಸಂಪಾದನೆಯಿಂದ ಜೀವನ ನಡೆಸಲು ಕಷ್ಟ ಆದಾಗ, ಕಳ್ಳತನಕ್ಕೆ ಕೈ ಹಾಕುತ್ತಾರೆ. ಅಲ್ಲಿಂದ ಏನೆಲ್ಲ ಘಟನೆಗಳು ಘಟಿಸುತ್ತವೆ ಎನ್ನುವ ಕಥಾನಕವೇ ಈ ಚಿತ್ರದ್ದು. ವಿಜಯ್‌ ಅವರಿಗೆ ಇಲ್ಲಿ ಜೋಡಿಯಾಗಿ ಮಾತಂಗಿ ಪ್ರಸನ್ನ ನಟಿಸಿದ್ದಾರೆ. ಅವರೆಲ್ಲ ಟ್ರೇಲರ್‌ ನಲ್ಲಿ ಕಾಣಿಸಿಕೊಂಡು ಭಾರೀ ಕುತೂಹಲ ಮೂಡಿಸಿರುವುದು ವಿಶೇಷ.

ಅಷ್ಟು ಮಾತ್ರವಲ್ಲ,ರಿಲೀಸ್‌ ಹಿನ್ನೆಲೆಯಲ್ಲೀಗ ಚಿತ್ರ ತಂಡ ಪ್ರಚಾರಕ್ಕಾಗಿ ಮೊನ್ನೆಯಷ್ಟೇ ವಿಶೇಷವಾದ ಆನಿಮೇಟೆಡ್‌ ವಿಡಿಯೊವೊಂದನ್ನು ಲಾಂಚ್‌ ಮಾಡಿದೆ. ಆ ವಿಡಿಯೋ ಮೂಲಕ ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಆಹ್ವಾನಿಸುವ ವಿಶಿಷ್ಟ ಪ್ರಯೋಗವನ್ನು ಚಿತ್ರ ತಂಡ ಮಾಡಿದೆ. ಇದು ತುಂಬಾನೆ ಡಿಫೆರೆಂಟ್‌ ಆಗಿದೆ.ಆನಿಮೇಟೆಡ್‌ ವಿಡಿಯೋದಲ್ಲಿ ದಿವಂಗತ ನಟರಾದ ರಾಜ್‌ ಕುಮಾರ್‌, ಶಂಕರ್‌ ನಾಗ್‌, ವಿಷ್ಣುವರ್ದನ್‌, ಅಂಬರೀಷ್‌ ಸೇರಿ ಹಲವು ಕಲಾವಿದರ ಜೊತೆಗೆ ನನ ದಿವಂಗತ ಸಂಚಾರಿ ವಿಜಯ್‌ ಅವರು ಮಾತುಕತೆ ನಡೆಸುತ್ತಾ ತಮ್ಮ ಹೊಸ ಚಿತ್ರದ ಬಗ್ಗೆ ವಿವರಿಸುವ ದೃಶ್ಯವದು.

ಈ ವಿಡಿಯೋ ಮೂಲಕ ವಿಜಯ್‌ ಅವರನ್ನು ಹಲವರು ನೆನಪಿಸಿಕೊಂಡಿದ್ದಾರೆ. ಅದು ಕೂಡ ಚಿತ್ರದ ಬಗ್ಗೆ ದೊಡ್ಡ ಕ್ಯೂರಿಯಾಸಿಟಿ ಹುಟ್ಟುವಂತೆ ಮಾಡಿದೆ. ಚಿತ್ರ ತಂಡ ಹೇಳುವ ಪ್ರಕಾರ 100 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಈ ಸಿನಿಮಾ ರಿಲೀಸ್‌ ಆಗುತ್ತಿದೆ. ನಟ ವಿಜಯ್‌ ಅಭಿಮಾನಿಗಳು ಕೂಡ ದೊಡ್ಡ ಕಾತರದಲ್ಲಿದ್ದಾರೆ. ಕಥೆ ಜತೆಗೆ ಕಲಾವಿದರ ಅಭಿನಯವೂ ಕೂಡ ಇಲ್ಲಿ ಸಾಕಷ್ಟು ಕುತೂಹಲ ಹುಟ್ಟು ಹಾಕಿವೆ. ಆ ಕಾರಣಕ್ಕೆ ಸಿನಿಮಾಕ್ಕೆ ದೊಡ್ಡ ರೆಸ್ಪಾನ್ಸ್‌ ಸಿಗುವ ನಿರೀಕ್ಷೆ ಕೂಡ ಚಿತ್ರ ತಂಡಕ್ಕಿದೆ. ಚಿತ್ರ ತಂಡ ಅಂದುಕೊಂಡಂತೆ ಸಿನಿಮಾ ಕನ್ನಡ ಸಿನಿಮಾ ರಸಿಕರ ಆಶೀರ್ವಾದವೂ ಸಿಗಲಿ.

  • ಎಂಟರ್‌ ಟೈನ್‌ಮೆಂಟ್‌ ಬ್ಯೂರೋ ಸಿನಿಲಹರಿ

Categories
ಸಿನಿ ಸುದ್ದಿ

ಅಪಾರ್ಟ್‌ಮೆಂಟ್ಸ್‌ನಲ್ಲಿ ರೋಚʼಕಥೆʼ! ಸಸ್ಪೆನ್ಸ್-‌ಥ್ರಿಲ್ಲರ್‌ ಬಿಡುಗಡೆಗೆ ʼಅಮೃತʼ ಘಳಿಗೆ! ಬೆಂಗಳೂರಿಗರ ಕಥೆ-ವ್ಯಥೆಯ ಚಿತ್ರಣವಿದು…

ಗುರುರಾಜ ಕುಲಕರ್ಣಿ ನಿರ್ಮಾಣದಲ್ಲಿ ಆಸಕ್ತಿ ಹೊಂದಿ ಸದಭಿರುಚಿಯ ಸಿನಿಮಾ ಕೊಡಬೇಕು ಅನ್ನುವ ಉತ್ಸಾಹದಲ್ಲಿದ್ದವರು. ಈಗಾಗಲೇ “ಆಕ್ಸಿಡೆಂಟ್”‌ ಮತ್ತು “ಲಾಸ್ಟ್‌ ಬಸ್‌” ಸಸ್ಪೆನ್ಸ್‌ , ಥ್ರಿಲ್ಲರ್‌ ಕಥಾ ಹಂದರ ಚಿತ್ರಗಳಿಗೆ ನಿರ್ಮಾಣದಲ್ಲೂ ಸಾಥ್‌ ಕೊಟ್ಟವರು. ಈಗ ಗುರುರಾಜ ಕುಲಕರ್ಣಿ ಅವರು ಮೊದಲ ಬಾರಿಗೆ ನಿರ್ದೇಶನದ ಪಟ್ಟ ಅಲಂಕರಿಸಿದ್ದಾರೆ. ಅದರೊಂದಿಗೆ ಜಿ 9 ಕಮ್ಯುನಿಕೇಷನ್ಸ್‌ ಮೀಡಿಯಾ ಅಂಡ್‌ ಎಂಟರ್‌ಟೈನ್‌ಮೆಂಟ್ಸ್‌ ಬ್ಯಾನರ್‌ನಡಿ ನಿರ್ಮಾಣದ ಜವಾಬ್ದಾರಿಯೂ ಅವರದೇ ಅನ್ನೋದು ವಿಶೇಷ.

ಸಿನಿಮಾದ ಸೆಳೆತವೇ ಹಾಗೆ. ಇಲ್ಲಿ ಯಾರು ಯಾವಾಗ ಏನ್‌ ಬೇಕಾದರೂ ಆಗಬಹುದು. ಅಂಥದ್ದೊಂದು ಮ್ಯಾಜಿಕ್‌ ಈ ಬಣ್ಣದ ಲೋಕದಲ್ಲಿದೆ. ಹೌದು, ಇಲ್ಲಿ ನಿರ್ದೇಶಕರಾದವರು ಹೀರೋ ಆಗಿದ್ದಾರೆ. ಹೀರೋ ಆಗಿದ್ದವರು ನಿರ್ದೇಶಕರಾಗಿದ್ದಾರೆ. ನಿರ್ಮಾಪಕರು ಹೀರೋ ಆಗಿರುವ ಉದಾಹರಣೆ ಬೇಕಾದಷ್ಟಿದೆ. ಆದರೆ, ನಿರ್ಮಾಪಕರು ನಿರ್ದೇಶಕರಾದ ಉದಾಹರಣೆ ಬೆರಳೆಣಿಕೆಯಷ್ಟು ಮಾತ್ರ. ಆ ಸಾಲಿಗೆ ಗುರುರಾಜ ಕುಲಕರ್ಣಿ ಕೂಡ ಸೇರಿದ್ದಾರೆ. ಹೌದು, ಗುರುರಾಜ ಕುಲಕರ್ಣಿ ನಿರ್ಮಾಣದಲ್ಲಿ ಆಸಕ್ತಿ ಹೊಂದಿ ಸದಭಿರುಚಿಯ ಸಿನಿಮಾ ಕೊಡಬೇಕು ಅನ್ನುವ ಉತ್ಸಾಹದಲ್ಲಿದ್ದವರು. ಈಗಾಗಲೇ “ಆಕ್ಸಿಡೆಂಟ್”‌ ಮತ್ತು “ಲಾಸ್ಟ್‌ ಬಸ್‌” ಸಸ್ಪೆನ್ಸ್‌ , ಥ್ರಿಲ್ಲರ್‌ ಕಥಾ ಹಂದರ ಚಿತ್ರಗಳಿಗೆ ನಿರ್ಮಾಣದಲ್ಲೂ ಸಾಥ್‌ ಕೊಟ್ಟವರು. ಈಗ ಗುರುರಾಜ ಕುಲಕರ್ಣಿ ಅವರು ಮೊದಲ ಬಾರಿಗೆ ನಿರ್ದೇಶನದ ಪಟ್ಟ ಅಲಂಕರಿಸಿದ್ದಾರೆ. ಅದರೊಂದಿಗೆ ಜಿ೯ ಕಮ್ಯುನಿಕೇಷನ್ಸ್‌ ಮೀಡಿಯಾ ಅಂಡ್‌ ಎಂಟರ್‌ಟೈನ್‌ಮೆಂಟ್ಸ್‌ ಬ್ಯಾನರ್‌ನಡಿ ನಿರ್ಮಾಣದ ಜವಾಬ್ದಾರಿಯೂ ಅವರದೇ ಅನ್ನೋದು ವಿಶೇಷ. ಅಂದಹಾಗೆ, ಅವರ ರಚನೆಯ ಚೊಚ್ಚಲ ನಿರ್ದೇಶನದ ಸಿನಿಮಾ “ಅಮೃತ್‌ ಅಪಾರ್ಟ್‌ಮೆಂಟ್ಸ್‌”.

ಈ ಶೀರ್ಷಿಕೆ ಕೇಳಿದವರಿಗೆ ಎಲ್ಲೋ ಒಂದು ಕಡೆ ಕುತೂಹಲ ಮೂಡಿಸುವುದು ನಿಜ. ಹೌದು, ಈಗಾಗಲೇ ಚಿತ್ರದ ಟೀಸರ್‌ ಬಿಡುಗಡೆಯಾಗಿದ್ದು, ಸಾಕಷ್ಟು ಕುತೂಹಲ ಕೆರಳಿಸಿದ್ದಲ್ಲದೆ, ಮೆಚ್ಚುಗೆಯನ್ನೂ ಪಡೆದುಕೊಂಡಿದೆ. ಇತ್ತೀಚೆಗೆ ಆಪ್ತರಿಗೊಂದು ಪ್ರದರ್ಶನ ಏರ್ಪಡಿಸಿದ್ದ ನಿರ್ದೇಶಕ ಗುರುರಾಜ ಕುಲಕರ್ಣಿ ಅವರ ಕೆಲಸವನ್ನು ಚಿತ್ರರಂಗದ ಹಲವು ತಾಂತ್ರಿಕ ವರ್ಗದವರು ಮೆಚ್ಚಿಕೊಂಡಿದ್ದಾರೆ. ಸಹಜವಾಗಿಯೇ ಚಿತ್ರತಂಡಕ್ಕೆ ಆ ಮೆಚ್ಚುಗೆ ಮತ್ತಷ್ಟು ಆತ್ಮವಿಶ್ವಾಸವನ್ನು ಹೆಚ್ಚಿಸಿದೆ. ಇದಕ್ಕೂ ಮೊದಲು “ಅಮೃತ‌ ಅಪಾರ್ಟ್‌ಮೆಂಟ್ಸ್‌ʼ ಚಿತ್ರದ ಫಸ್ಟ್‌ ಲುಕ್‌ ಹಾಗೂ ಟೀಸರ್‌ ಹೊರ ಬಂದಿದ್ದು, ಚಿತ್ರದ ಬಗ್ಗೆ ತೀವ್ರ ರೋಚಕತೆ ಮೂಡಿಸುವ ಟೀಸರ್‌ ಸೋಷಲ್‌ ಮೀಡಿಯಾದಲ್ಲಿ ಸಖತ್‌ ಸದ್ದು ಮಾಡಿದ್ದು ಎಲ್ಲರಿಗೂ ಗೊತ್ತಿದೆ. ಈಗ ಸಿನಿಮಾ ಅಕ್ಟೋಬರ್‌ನಲ್ಲಿ ಪ್ರೇಕ್ಷಕರ ಮುಂದೆ ಬರಲು ತಯಾರಾಗುತ್ತಿದೆ. ಸದ್ಯ ನಿರ್ದೇಶಕರು ಬಿಡುಗಡೆಗೆ ಸಜ್ಜಗೊಳ್ಳುತ್ತಿದ್ದು, ಇಷ್ಟರಲ್ಲೇ ಬಿಡುಗಡೆಯ ದಿನವನ್ನು ಘೋಷಣೆ ಮಾಡಲಿದ್ದಾರೆ.

ಇನ್ನು, “ಅಮೃತ‌ ಅಪಾರ್ಟ್‌ ಮೆಂಟ್ಸ್‌ʼ ಚಿತ್ರವನ್ನು ಕನ್ನಡದ ಪ್ರೇಕ್ಷಕರ ಮುಂದೆ ತರಲು ರೆಡಿಯಾಗಿರುವ ನಿರ್ದೇಶಕ ಗುರುರಾಜ ಕುಲಕರ್ಷಣಿ, ಒಂದೊಳ್ಳೆಯ ಸಂದೇಶ ಕೊಡುವ ಹುಮ್ಮಸ್ಸಿನಲ್ಲಿದ್ದಾರೆ. ಅಂದಹಾಗೆ, ಇದೊಂದು ಕಾಮಿಡಿ, ಸಸ್ಪೆನ್ಸ್, ಥ್ರಿಲ್ಲರ್ ಅಂಶಗಳನ್ನೊಳಗೊಂಡ ಚಿತ್ರ. ಬಾಲಾಜಿ ಮನೋಹರ್‌ ಈ ಚಿತ್ರದಲ್ಲಿ ಪ್ರಮುಖ ಪಾತ್ರಧಾರಿ. ತಾರಕ್ ಪೊನ್ನಪ್ಪ ನಾಯಕರಾಗಿದ್ದಾರೆ.

ಊರ್ವಶಿ ಗೋರ್ವಧನ್‌ ಅವರಿಗೆ ನಾಯಕಿಯಾಗಿದ್ದಾರೆ. ಉಳಿದಂತೆ ನಟಿ ಮಾನಸ ಜೋಷಿ ಇಲ್ಲೊಂದು ವಿಶೇಷ ಪೊಲೀಸ್‌ ಅಧಿಕಾರಿ [ಪಾತ್ರ ಮಾಡಿದ್ದಾರೆ. ಸೀತಾ ಕೋಟೆ ಲಾಯರ್‌ ಆಗಿದ್ದಾರೆ. ಸಂಪತ್‌ ಕುಮಾರ್‌, ಮಾಲತೇಶ್, ಸಿತಾರಾ, ಜಗದೀಶ್ ಜಾಲಾ, ಅರುಣ ಮೂರ್ತಿ, ರಾಜು ನೀನಾಸಂ, ಶಂಕರ್ ಶೆಟ್ಟಿ ರಂಗಸ್ವಾಮಿ ಇತರರು ನಟಿಸಿದ್ದಾರೆ.

ಚಿತ್ರದ ಬಗ್ಗೆ ನಿರ್ದೇಶಕರು ಅಪಾರ ನಿರೀಕ್ಷೆ ಇಟ್ಟುಕೊಂಡಿದ್ದಾರೆ.”ಇದು ಬೆಂಗಳೂರಿನ ಕಥೆ. ಐಟಿಬಿಟಿ ಅನ್ನೋ ಈ ಜಮಾನಾದ ಕಥೆ. ಬೆಂಗಳೂರಿಗರು ಸದ್ಯ ಏನಾಗುತ್ತಿದ್ದಾರೆ ಎಂಬುದನ್ನು ಈ ಸಿನಿಮಾ ಮೂಲಕ ಸಸ್ಪೆನ್ಸ್ ಶೈಲಿಯಲ್ಲಿ ತೋರಿಸಲು ಹೊರಟಿದ್ದಾರೆ. ಒಡೆದು ಹೋದ ಮನಸ್ಸುಗಳನ್ನು ಒಂದು ಮಾಡುವ ಕೆಲಸ ಈ ಸಿನಿಮಾದಲ್ಲಿ ಆಗಿದೆ ಅನ್ನೋದು ನಿರ್ದೇಶಕರ ಮಾತು.

https://youtu.be/QmEYglxzN80


ಮಲಯಾಳಂ ಚಿತ್ರರಂಗದಲ್ಲಿ ಕೆಲಸ ಮಾಡಿರುವ ಅರ್ಜುನ್ ಅಜಿತ್ ಚಿತ್ರಕ್ಕೆ ಕ್ಯಾಮೆರಾ ಹಿಡಿದಿದ್ದಾರೆ. ಕನ್ನಡದ ನೂರಾರು ಸಿನಿಮಾಗಳಿಗೆ ಕತ್ತರಿ ಹಾಕಿರುವ ಕೆಂಪರಾಜ್ ಅರಸ್ ಅವರ ಸಂಕಲನ ಇಲ್ಲಿದೆ. ಎಸ್.ಡಿ ಅರವಿಂದ್ 3 ಹಾಡುಗಳಿಗೆ ಸಂಗೀತ ಸಂಯೋಜಿಸಿದ್ದಾರೆ. ಕೆ.ಕಲ್ಯಾಣ್, ಡಾ. ಬಿ.ಆರ್ ಪೊಲೀಸ್ ಪಾಟೀಲ್ , ವಿ.ಮನೋಹರ್‌ ಅವರ ಸಾಹಿತ್ಯವಿದೆ.

ಚಿತ್ರಕ್ಕೆ ಮಹೇಶ್‌ ಎಸ್‌.ಪಿ.ಸಹ ನಿರ್ದೇಶಕರಾದರೆ, ಸುನೀಲ್‌ ವೈ.ಕೆ ನಿರ್ದೇಶನದ ವಿಭಾಗದಲ್ಲಿ ಕೆಲಸ ಮಾಡಿದ್ದಾರೆ. ಹರೀಶ ಮೂರ್ತಿ ಕಾರ್ಯಕಾರಿ ನಿರ್ಮಾಪಕರಾಗಿದ್ದಾರೆ. ಚಿತ್ರಕ್ಕೆ ಸುನೀಲ್‌ ಆರ್.‌ ಡಿ ಮತ್ತು ನರಸಿಂಹ ಕುಲಕರ್ಣಿ ಅವರು ಸಹ ನಿರ್ಮಾಪಕರಾಗಿದ್ದಾರೆ.
ತೇಜಸ್ ಹರಿದಾಸ್, ವಾಣಿ ಹರಿಕೃಷ್ಣ, ಅರವಿಂದ್ ಹಾಡುಗಳಿಗೆ ಧ್ವನಿ ನೀಡಿದ್ದಾರೆ.

Categories
ಸಿನಿ ಸುದ್ದಿ

ಎರಡ್ಮೂರು ದಿನಗಳಲ್ಲಿ ಚಿತ್ರ ರಂಗಕ್ಕೆ ಗುಡ್‌ ನ್ಯೂಸ್‌! ಚಿತ್ರಮಂದಿರಗಳಲ್ಲಿ‌ನೂರರಷ್ಟು ಸೀಟು ಭರ್ತಿಗೆ ಮನವಿ

ಸಿನಿಮಾ‌ರಂಗ ಹೊಸ ಮನ್ವಂತರಕ್ಕೆ ತೆರೆದುಕೊಳ್ಳಲು ರೆಡಿಯಾಗುತ್ತಿದೆ.ಇಷ್ಟರಲ್ಲಿಯೇ ಚಿತ್ರಮಂದಿರಗಳಲ್ಲಿನ ನೂರರಷ್ಟು ಸೀಟು ಭರ್ತಿಗೆ ಸರ್ಕಾರ ಅವಕಾಶ‌ನೀಡುವ ಸಾದ್ಯತೆ ಇದೆ. ಹಾಗೊಂದು ಸುಳಿವು ಮಂಗಳವಾರ ಸರ್ಕಾರದಿಂದ ಸಿಕ್ಕಿದೆ. ಮಂಗಳವಾರ ಸಿನಿಮಾ ರಂಗವನ್ನು ಪ್ರತಿನಿಧಿಸಿ ನಿರ್ಮಾಪಕರಾದ ಸೂರಪ್ಪ ಬಾಬು, ಕೆ.ಪಿ.ಶ್ರೀಕಾಂತ್ ಹಾಗೂ ಜಯಣ್ಣ ಸೇರಿದಂತೆ ಒಂದು ನಿಯೋಗವು ಆರೋಗ್ಯ ಸಚಿವ ಸುಧಾಕರ್ ಅವರನ್ನು ಭೇಟಿ ಮಾಡಿತ್ತು‌ . ಈ ಸಂದರ್ಭದಲ್ಲಿ ಚಿತ್ರರಂಗದ ಸದ್ಯದ ಸ್ಥಿತಿಗತಿ ಹಾಗೂ ಸದ್ಯಕ್ಕೆ ಇರುವ ವಾತಾವರಣ ವನ್ನು ವಿವರಿಸಿ, ಶೇಕಡಾ ನೂರರಷ್ಟು ಸೀಟು ಭರ್ತಿಗೆ ಅವಕಾಶ ನೀಡುವಂತೆ ಮನವಿ‌ಮಾಡಿತು.ನಿರ್ಮಾಪಕರ ಜತೆಗಿನ ಮಾತುಕತೆ ನಂತರ ಸಚಿವ ಸುಧಾಕರ್ ಸುದ್ದಿಗಾರರೊಂದಿಗೆ ಮಾತನಾಡಿ, ಕೊರೋನಾ ಕಾರಣಕ್ಕೆ ಸಿನಿಮಾ ರಂಗ ಆನುಭವಿಸಿದ ಕಷ್ಟದ ಅರಿವು ನಮಗೂ ಇದೆ. ಎರಡು ಮೂರು ದಿನಗಳಲ್ಲಿ ತಾಂತ್ರಿಕ ತಜ್ಞರ ಜೊತೆ ಮಾತನಾಡುತ್ತೇವೆ. ಬಹುತೇಕ ತಾಂತ್ರಿಕ ಸಮಿತಿ ಕೂಡ ಚಿತ್ರಮಂದಿರಗಳಲ್ಲಿ ಶೇಕಡಾ ನೂರರಷ್ಟು ಸೀಟು ಭರ್ತಿಗೆ ಇಷ್ಟರಲ್ಲಿಯೇ ಅವಕಾಶ ನೀಡುವ ಆಶಾಭಾವನೆ ನಮಗೂ ಇದೆ ಎಂದರು.


ಚಿತ್ರಮಂದಿರಗಳಲ್ಲಿ ಈಗಾಗಲೇ ಶೇ.೫೦ರಷ್ಟು ಮಾತ್ರ ಸೀಟು ಭರ್ತಿಗೆ ಅವಕಾಶ ನೀಡಲಾಗಿದೆ. ಈಗಷ್ಟೇ ನಿರ್ಮಾಪಕರು ನನ್ನನ್ನ ಭೇಟಿ ಮಾಡಿದ್ದರು. ಅವರು ಚಿತ್ರಮಂದಿರಗಳಲ್ಲಿ ಶೇಕಡಾ ನೂರರಷ್ಟು ಸೀಟು ಭರ್ತಿಗೆ ಅವಕಾಶ ನೀಡುವಂತೆ ಮನವಿ ಮಾಡಿದ್ದಾರೆ. ಕೊರೊನಾ ಕಾರಣಕ್ಕೆ ಸಿನಿಮಾ ರಂಗಕ್ಕಾದ ನಷ್ಟದ ಬಗ್ಗೆ ಅವರು ಹೇಳಿದ್ದಾರೆ. ಸಿನಿಮಾ ರಂಗದವರು ಸಾಕಷ್ಟು ನಷ್ಟ ಅನುಭವಿಸುತ್ತಿರುವುದರ ಬಗ್ಗೆ ನಮಗೂ ಅರಿವಿದೆ. ಇದನ್ನು ಮುಖ್ಯಮಂತ್ರಿಗಳ ಜತೆಗೂ ಮಾತನಾಡುತ್ತೇನೆ. ಆದಷ್ಟು ಬೇಗ ಒಳ್ಳೆಯ ದಿನಗಳು ಬರಲಿವೆ ಎಂದು ಹೇಳಿದರು.


ಕೊರೋನಾ ಈಗಲೂ ಪೂರ್ಣ ಪ್ರಮಾಣದಲ್ಲಿ ಹೋಗಿಲ್ಲ. ಈಗಲೂ ಒಂದಷ್ಟು ಪಾಸಿಟಿವ್‌ ಕೇಸುಗಳು ಬರುತ್ತಿವೆ. ಈಗ ನಾವು ಯಾವುದೇ ನಿರ್ಧಾರ ತೆಗೆದುಕೊಳ್ಳಬೇಕಾದರೂ ತಜ್ಞರ ಸಲಹೆಯೇ ಅಂತಿಮ. ಈ ನಿಟ್ಟಿನಲ್ಲಿಯೇ ಈಗಾಗಲೇ ತಾಂತ್ರಿಕ ಪರಿಣಿತರ ಜೊತೆ ದೂರವಾಣಿ ಮೂಲಕ ಮಾತನಾಡಿದ್ದೇವೆ. ಮುಂದಿನ ಎರಡು ಮೂರು ದಿನಗಳಲ್ಲಿ ತಾಂತ್ರಿಕ ತಜ್ಞರ ಜೊತೆ ಮತ್ತೆ ಮಾತನಾಡುತ್ತೇವೆ. ಆ ಸಮಿತಿ ಯಾವ ಅಭಿಪ್ರಾಯ ನೀಡಬಹುದು ಎನ್ನುವ ಬಗ್ಗೆ ನಮಗೂ ಕುತೂಹಲ ಇದೆ. ಸದ್ಯಕ್ಕೆ ಕೊರೋನಾ ಪಾಸಿಟಿವ್‌ ಸಂಖ್ಯೆ ಕಮ್ಮಿ ಆಗುತ್ತಿರುವುದರಿಂದ ಸಿನಿಮಾ ಮಂದಿರಗಳಿಗೆ ಶೇ.100 ರಷ್ಟು ಅವಕಾಶ ಸಿಗಬಹುದು ಎಂಬ ಆಶಾಭಾವನೆ ಇದೆ ಎಂದರು.


ಪೂರ್ಣಪ್ರಮಾಣದ ಸೀಟು ಭರ್ತಿಗೆ ಅವಕಾಶ ನೀಡುವುದಕ್ಕೂ ಮೊದಲು ಚರ್ಚೆ ನಡೆಸಬೇಕಿದೆ. ಬಳಿಕ ಸೋಂಕಿತರ ಸಂಖ್ಯೆ ನೋಡಿಕೊಂಡು ತೀರ್ಮಾನ ಮಾಡಲಿದ್ದೇವೆ. ಸೋಂಕು ಮತ್ತೆ ಹೆಚ್ಚಳವಾಗದಂತೆ ಕ್ರಮ ವಹಿಸಬೇಕಾಗುತ್ತದೆ. ಸಿಎಂ, ನಾನು ಹಾಗೂ ಎಲ್ಲರೂ ಚರ್ಚೆ ಮಾಡಿ ಅಂತಿಮ ನಿರ್ಧಾರ ಕೈಗೊಳ್ಳುತ್ತೇವೆ ಎಂದರು.

Categories
ಸಿನಿ ಸುದ್ದಿ

ಚಿತ್ರೀಕರಣ ಮುಗಿಸಿಕೊಂಡ ರಗಡ್ ಕಥೆಯ ‘ಬಯಲುಸೀಮೆ’!

ಉತ್ತರ ಕರ್ನಾಟಕ ಶೈಲಿಯ ರಗಡ್ ಕಥೆಗಳ ಬಗ್ಗೆ ಕನ್ನಡದ ಪ್ರೇಕ್ಷಕರಲ್ಲಿ ಯಾವತ್ತಿಗೂ ಒಂದು ರೀತಿಯ ಕುತೂಹಲ ಮತ್ತು ವಿಶೇಷವಾದ ಪ್ರೀತಿ ಇದ್ದೇ ಇರುತ್ತದೆ. ಅದೇ ಹಿನ್ನೆಲೆಯಲ್ಲೀಗ ಅದೇ ಸೊಗಡಿನ ಪಕ್ಕಾ ರಗಡ್ ಕಥಾನಕ ಹೊಂದಿರೋ ಚಿತ್ರವೊಂದು ಚಿತ್ರೀಕರಣ ಮುಗಿಸಿಕೊಂಡು ರಿಲೀಸ್‌ ಗೆ ರೆಡಿಯಾಗುತ್ತಿದೆ. ಆ ಸಿನಿಮಾವೇ ʼಬಯಲು ಸೀಮೆʼ

ಪೊಲಿಟಿಕಲ್ ಕ್ರೈಂ ಥ್ರಿಲ್ಲರ್ ಜಾನರ್‌ ಕಥಾ ಹಂದರದ ಸಿನಿಮಾ ಇದು. ಪಕ್ಕಾ ಉತ್ತರ ಕರ್ನಾಟಕ ಶೈಲಿಯಲ್ಲಿ ತಯಾರಾಗಿದೆ. ನಾನಾ ಮಜಲುಗಳ, ಮೈನವಿರೇಳಿಸೋ ತಿರುವುಗಳ ಮೂಲಕ ಪ್ರೇಕ್ಷಕರನ್ನು ಬೇರೆಯದ್ದೇ ಜಗತ್ತಿಗೆ ಕೊಂಡೊಯ್ಯುವಂತಹ ಕಥೆಯ ಈ ಚಿತ್ರ ಪ್ರೇಕ್ಷಕರನ್ನು ಪಕ್ಕಾ ರಂಜಿಸುವುದು ಗ್ಯಾರಂಟಿ ಎನ್ನುತ್ತಿದೆ ಚಿತ್ರ ತಂಡ.

ಲಕ್ಷ್ಮಣ್ ಸಾ ಶಿಂಗ್ರಿ ನಿರ್ಮಾಣದಲ್ಲಿ ಮೂಡಿ ಬಂದಿರುವ ಬಯಲುಸೀಮೆಯನ್ನು ವರುಣ್ ಕಟ್ಟೀಮನಿ ನಿರ್ದೇಶನ ಮಾಡಿದ್ದಾರೆ. ಎಂಭತ್ತರ ದಶಕ ಮತ್ತು ಈವತ್ತಿನ ಕಾಲಮಾನದೊಂದಿಗೆ ಜುಗಲ್ ಬಂಧಿ ಹೊಂದಿರೋ ಈ ಕಥೆ, ಆ ಎರಡು ಕಾಲಘಟ್ಟಗಳನ್ನೂ ಉತ್ತರ ಕರ್ನಾಟಕದ ಜವಾರಿ ಶೈಲಿಯಲ್ಲಿ ಕಟ್ಟಿಕೊಟ್ಟಿದೆಯಂತೆ.

ಸಾಹೂರಾವ್ ಶಿಂಧೆ ಎಂಬ ಶ್ರೀಮಂತ ವ್ಯಕ್ತಿಯ ಸುತ್ತ ಬಯಲು ಸೀಮೆಯ ಕಥೆ ಚಲಿಸುತ್ತೆ. ಆತನ ಸುತ್ತ ಹಬ್ಬಿಕೊಳ್ಳುವ ಅಕ್ರಮ ಸಂಬಂಧ, ಅದರ ಹಿನ್ನೆಲೆಯಲ್ಲೊಂದು ಲವ್ ಸ್ಟೋರಿ ಹಾಗೂ ಅದರ ಗರ್ಭದಲ್ಲಿಯೇ ಹುಟ್ಟಿಕೊಳ್ಳುವ ದ್ವೇಷ… ಕ್ಷಣ ಕ್ಷಣವೂ ಪ್ರೇಕ್ಷಕರನ್ನು ತುದಿ ಸೀಟಿಗೆ ತಂದು ಕೂರಿಸುವಂತಹ ಗಟ್ಟಿ ಕಥೆಯೊಂದಿಗೆ ಚಿತ್ರತಂಡ ಪ್ರೇಕ್ಷಕರನ್ನು ಮುಖಾಮುಖಿಯಾಗುವ ಉತ್ಸಾಹದಲ್ಲಿದೆ.

ಈ ಸಿನಿಮಾದಲ್ಲಿ ಭಯ ಹುಟ್ಟಿಸೋ ಪಾತ್ರಗಳಿವೆ. ಅದಕ್ಕೆ ಅತಿರಥ ಮಹಾರಥ ಕಲಾವಿದರುಗಳು ಜೀವ ತುಂಬಿದ್ದಾರೆ. ಬೃಹತ್ ತಾರಾಗಣ ಹೊಂದಿರುವ ಬಯಲು ಸೀಮಿಯಲ್ಲಿ ಬಿಸಿಲ ನಾಡ ಪ್ರತಿಭೆಗಳೂ ಮಿಂಚಲು ಅಣಿಯಾಗಿದ್ದಾರೆ. ಟಿ.ಎಸ್ ನಾಗಾಭರಣ, ರವಿಶಂಕರ್, ಸಂಯುಕ್ತ ಹೊರನಾಡು, ಯಶ್ ಶೆಟ್ಟಿ, ಭವಾನಿ ಪ್ರಕಾಶ್, ಅರ್ಚನಾ ಕೊಟ್ಟಿಗೆ, ವರುಣ್ ಕಟ್ಟೀಮನಿ, ಲಕ್ಷ್ಮೀ ನಾಡಗೌಡರ್, ಸಂತೋಷ್ ಉಪ್ಪಿನ್, ನಾಗರಾಜ ಭಟ್, ಮಹೇಶ್ ದೊಡ್ಡಕೈನವರ್, ಪ್ರದೀಪ್ ರಾಜ್ ಮುಂತಾದವರ ತಾರಾಗಣ ಈ ಸಿನಿಮಾದಲ್ಲಿದೆ.

ಸುಜಯ್ ಕುಮಾರ್ ಬಾವಿಕಟ್ಟಿ ಛಾಯಾಗ್ರಹಣ, ಮಾನಸಾ ಹೊಳ್ಳ ಸಂಗೀತ ನಿರ್ದೇಶನ, ಕಿರಣ್ ಕುಮಾರ್ ಸಂಕಲನ ಮತ್ತು ರಾಮು ಅವರ ನೃತ್ಯ ಸಂಯೋಜನೆಯಿಂದ ಬಯಲುಸೀಮೆ ಸಿಂಗರಿಸಿಕೊಂಡಿದೆ.

  • ಎಂಟರ್‌ ಟೈನ್‌ ಮೆಂಟ್‌ ಬ್ಯುರೋ ಸಿನಿಲಹರಿ
Categories
ಸಿನಿ ಸುದ್ದಿ

ಚಡ್ಡಿ ದೋಸ್ತ್ ಚಿತ್ರ ನೋಡಿದವರಿಗೆ ಚಿನ್ನದ ನಾಣ್ಯ ಉಚಿತ! ಯಾರಿಗುಂಟು ಇಂಥಾ ಅದೃಷ್ಟ!!

ಕನ್ನಡದ ಸಿನಿಪ್ರೇಮಿಗಳಿಗೆ ಗೋಲ್ಡನ್ ಆಪರ್ಚುನಿಟಿ. “ಚಡ್ಡಿದೋಸ್ತ್ ಕಡ್ಡಿ ಅಲ್ಲಾಡುಸ್ಬುಟ್ಟ” ಚಿತ್ರದ ನಿರ್ಮಾಪಕರಾದ ರೆಡ್ ಅಂಡ್ ವೈಟ್ ಸೆವೆನ್ ರಾಜ್ ರವರು, ಮಾಗಡಿ ರಸ್ತೆಯ ವೀರೇಶ್ ಚಿತ್ರ ಮಂದಿರದಲ್ಲಿ ಚಡ್ಡಿದೋಸ್ತ್ ಚಿತ್ರ ವೀಕ್ಷಿಸಿದವರಿಗೆ ಉಚಿತವಾಗಿ ಬಂಗಾರದ ನಾಣ್ಯ ವನ್ನು ಕೊಡುವುದಾಗಿ ಘೋಷಿಸಿದ್ದಾರೆ.

ಹೌದು, ಈ ಕೊಡುಗೆ ಪ್ರತಿ ಪ್ರದರ್ಶನಕ್ಕೂ ಅನ್ವಯಿಸಲಿದೆ. ಒಂದು ಪ್ರದರ್ಶನದಲ್ಲಿ ಎಷ್ಟು ಜನ ಸಿನಿಮಾ ನೋಡುತ್ತಾರೋ ಅವರಲ್ಲಿ ಒಬ್ಬರನ್ನು ಲಕ್ಕಿ ಡಿಪ್ ಮೂಲಕ ಆರಿಸಿ ಅವರಿಗೆ ಅರ್ಧ ಗ್ರಾಂ ಚಿನ್ನದ ನಾಣ್ಯವನ್ನು ಬಹುಮಾನವಾಗಿ ಕೊಡಲಿದ್ದಾರೆ.

ಸ್ವತಃ ನಿರ್ಮಾಪಕ ಸೆವೆನ್ ರಾಜ್ ಅವರು ಈ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ಆಸ್ಕರ್ ಕೃಷ್ಣ ನಿರ್ದೇಶಿಸಿ, ಅವರೊಂದಿಗೆ ಲೋಕೇಂದ್ರ ಸೂರ್ಯ ನಾಯಕ ನಟರಾಗಿ ಅಭಿನಯಿಸಿರುವ “ಚಡ್ಡಿದೋಸ್ತ್ ಕಡ್ಡಿ ಅಲ್ಲಾಡುಸ್ಬುಟ್ಟ” ಚಿತ್ರವು ಎಲ್ಲಾ ಕಡೆ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಈ ಯಶಸ್ಸಿನ ಖುಷಿಯಲ್ಲಿ ನಿರ್ಮಾಪಕ ಸೆವೆನ್ ರಾಜ್ ರವರು ಈ ಕೊಡುಗೆ ನೀಡಲು ಮುಂದಾಗಿದ್ದಾರೆ.

ಈ ಕೊಡುಗೆಯು 21-09-2021 ರಿಂದ ವೀರೇಶ್ ಚಿತ್ರಮಂದಿರದಲ್ಲಿ “ಚಡ್ಡಿದೋಸ್ತ್ ಕಡ್ಡಿ ಅಲ್ಲಾಡುಸ್ಬುಟ್ಟ” ಚಿತ್ರ ವೀಕ್ಷಿಸುವ ಪ್ರೇಕ್ಷಕರಿಗೆ ಮಾತ್ರ ಅನ್ವಯಿಸಲಿದೆ.

ಇನ್ನೇಕೆ ತಡ, ನಾಳೆಯಿಂದ ‘ಚಡ್ಡಿ ದೋಸ್ತ್’ ಸಿನಿಮಾ ನೋಡಿ, ಬಂಗಾರದ ನಾಣ್ಯ ಗೆಲ್ಲಿ.

error: Content is protected !!