ಅಪಾರ್ಟ್‌ಮೆಂಟ್ಸ್‌ನಲ್ಲಿ ರೋಚʼಕಥೆʼ! ಸಸ್ಪೆನ್ಸ್-‌ಥ್ರಿಲ್ಲರ್‌ ಬಿಡುಗಡೆಗೆ ʼಅಮೃತʼ ಘಳಿಗೆ! ಬೆಂಗಳೂರಿಗರ ಕಥೆ-ವ್ಯಥೆಯ ಚಿತ್ರಣವಿದು…

ಗುರುರಾಜ ಕುಲಕರ್ಣಿ ನಿರ್ಮಾಣದಲ್ಲಿ ಆಸಕ್ತಿ ಹೊಂದಿ ಸದಭಿರುಚಿಯ ಸಿನಿಮಾ ಕೊಡಬೇಕು ಅನ್ನುವ ಉತ್ಸಾಹದಲ್ಲಿದ್ದವರು. ಈಗಾಗಲೇ “ಆಕ್ಸಿಡೆಂಟ್”‌ ಮತ್ತು “ಲಾಸ್ಟ್‌ ಬಸ್‌” ಸಸ್ಪೆನ್ಸ್‌ , ಥ್ರಿಲ್ಲರ್‌ ಕಥಾ ಹಂದರ ಚಿತ್ರಗಳಿಗೆ ನಿರ್ಮಾಣದಲ್ಲೂ ಸಾಥ್‌ ಕೊಟ್ಟವರು. ಈಗ ಗುರುರಾಜ ಕುಲಕರ್ಣಿ ಅವರು ಮೊದಲ ಬಾರಿಗೆ ನಿರ್ದೇಶನದ ಪಟ್ಟ ಅಲಂಕರಿಸಿದ್ದಾರೆ. ಅದರೊಂದಿಗೆ ಜಿ 9 ಕಮ್ಯುನಿಕೇಷನ್ಸ್‌ ಮೀಡಿಯಾ ಅಂಡ್‌ ಎಂಟರ್‌ಟೈನ್‌ಮೆಂಟ್ಸ್‌ ಬ್ಯಾನರ್‌ನಡಿ ನಿರ್ಮಾಣದ ಜವಾಬ್ದಾರಿಯೂ ಅವರದೇ ಅನ್ನೋದು ವಿಶೇಷ.

ಸಿನಿಮಾದ ಸೆಳೆತವೇ ಹಾಗೆ. ಇಲ್ಲಿ ಯಾರು ಯಾವಾಗ ಏನ್‌ ಬೇಕಾದರೂ ಆಗಬಹುದು. ಅಂಥದ್ದೊಂದು ಮ್ಯಾಜಿಕ್‌ ಈ ಬಣ್ಣದ ಲೋಕದಲ್ಲಿದೆ. ಹೌದು, ಇಲ್ಲಿ ನಿರ್ದೇಶಕರಾದವರು ಹೀರೋ ಆಗಿದ್ದಾರೆ. ಹೀರೋ ಆಗಿದ್ದವರು ನಿರ್ದೇಶಕರಾಗಿದ್ದಾರೆ. ನಿರ್ಮಾಪಕರು ಹೀರೋ ಆಗಿರುವ ಉದಾಹರಣೆ ಬೇಕಾದಷ್ಟಿದೆ. ಆದರೆ, ನಿರ್ಮಾಪಕರು ನಿರ್ದೇಶಕರಾದ ಉದಾಹರಣೆ ಬೆರಳೆಣಿಕೆಯಷ್ಟು ಮಾತ್ರ. ಆ ಸಾಲಿಗೆ ಗುರುರಾಜ ಕುಲಕರ್ಣಿ ಕೂಡ ಸೇರಿದ್ದಾರೆ. ಹೌದು, ಗುರುರಾಜ ಕುಲಕರ್ಣಿ ನಿರ್ಮಾಣದಲ್ಲಿ ಆಸಕ್ತಿ ಹೊಂದಿ ಸದಭಿರುಚಿಯ ಸಿನಿಮಾ ಕೊಡಬೇಕು ಅನ್ನುವ ಉತ್ಸಾಹದಲ್ಲಿದ್ದವರು. ಈಗಾಗಲೇ “ಆಕ್ಸಿಡೆಂಟ್”‌ ಮತ್ತು “ಲಾಸ್ಟ್‌ ಬಸ್‌” ಸಸ್ಪೆನ್ಸ್‌ , ಥ್ರಿಲ್ಲರ್‌ ಕಥಾ ಹಂದರ ಚಿತ್ರಗಳಿಗೆ ನಿರ್ಮಾಣದಲ್ಲೂ ಸಾಥ್‌ ಕೊಟ್ಟವರು. ಈಗ ಗುರುರಾಜ ಕುಲಕರ್ಣಿ ಅವರು ಮೊದಲ ಬಾರಿಗೆ ನಿರ್ದೇಶನದ ಪಟ್ಟ ಅಲಂಕರಿಸಿದ್ದಾರೆ. ಅದರೊಂದಿಗೆ ಜಿ೯ ಕಮ್ಯುನಿಕೇಷನ್ಸ್‌ ಮೀಡಿಯಾ ಅಂಡ್‌ ಎಂಟರ್‌ಟೈನ್‌ಮೆಂಟ್ಸ್‌ ಬ್ಯಾನರ್‌ನಡಿ ನಿರ್ಮಾಣದ ಜವಾಬ್ದಾರಿಯೂ ಅವರದೇ ಅನ್ನೋದು ವಿಶೇಷ. ಅಂದಹಾಗೆ, ಅವರ ರಚನೆಯ ಚೊಚ್ಚಲ ನಿರ್ದೇಶನದ ಸಿನಿಮಾ “ಅಮೃತ್‌ ಅಪಾರ್ಟ್‌ಮೆಂಟ್ಸ್‌”.

ಈ ಶೀರ್ಷಿಕೆ ಕೇಳಿದವರಿಗೆ ಎಲ್ಲೋ ಒಂದು ಕಡೆ ಕುತೂಹಲ ಮೂಡಿಸುವುದು ನಿಜ. ಹೌದು, ಈಗಾಗಲೇ ಚಿತ್ರದ ಟೀಸರ್‌ ಬಿಡುಗಡೆಯಾಗಿದ್ದು, ಸಾಕಷ್ಟು ಕುತೂಹಲ ಕೆರಳಿಸಿದ್ದಲ್ಲದೆ, ಮೆಚ್ಚುಗೆಯನ್ನೂ ಪಡೆದುಕೊಂಡಿದೆ. ಇತ್ತೀಚೆಗೆ ಆಪ್ತರಿಗೊಂದು ಪ್ರದರ್ಶನ ಏರ್ಪಡಿಸಿದ್ದ ನಿರ್ದೇಶಕ ಗುರುರಾಜ ಕುಲಕರ್ಣಿ ಅವರ ಕೆಲಸವನ್ನು ಚಿತ್ರರಂಗದ ಹಲವು ತಾಂತ್ರಿಕ ವರ್ಗದವರು ಮೆಚ್ಚಿಕೊಂಡಿದ್ದಾರೆ. ಸಹಜವಾಗಿಯೇ ಚಿತ್ರತಂಡಕ್ಕೆ ಆ ಮೆಚ್ಚುಗೆ ಮತ್ತಷ್ಟು ಆತ್ಮವಿಶ್ವಾಸವನ್ನು ಹೆಚ್ಚಿಸಿದೆ. ಇದಕ್ಕೂ ಮೊದಲು “ಅಮೃತ‌ ಅಪಾರ್ಟ್‌ಮೆಂಟ್ಸ್‌ʼ ಚಿತ್ರದ ಫಸ್ಟ್‌ ಲುಕ್‌ ಹಾಗೂ ಟೀಸರ್‌ ಹೊರ ಬಂದಿದ್ದು, ಚಿತ್ರದ ಬಗ್ಗೆ ತೀವ್ರ ರೋಚಕತೆ ಮೂಡಿಸುವ ಟೀಸರ್‌ ಸೋಷಲ್‌ ಮೀಡಿಯಾದಲ್ಲಿ ಸಖತ್‌ ಸದ್ದು ಮಾಡಿದ್ದು ಎಲ್ಲರಿಗೂ ಗೊತ್ತಿದೆ. ಈಗ ಸಿನಿಮಾ ಅಕ್ಟೋಬರ್‌ನಲ್ಲಿ ಪ್ರೇಕ್ಷಕರ ಮುಂದೆ ಬರಲು ತಯಾರಾಗುತ್ತಿದೆ. ಸದ್ಯ ನಿರ್ದೇಶಕರು ಬಿಡುಗಡೆಗೆ ಸಜ್ಜಗೊಳ್ಳುತ್ತಿದ್ದು, ಇಷ್ಟರಲ್ಲೇ ಬಿಡುಗಡೆಯ ದಿನವನ್ನು ಘೋಷಣೆ ಮಾಡಲಿದ್ದಾರೆ.

ಇನ್ನು, “ಅಮೃತ‌ ಅಪಾರ್ಟ್‌ ಮೆಂಟ್ಸ್‌ʼ ಚಿತ್ರವನ್ನು ಕನ್ನಡದ ಪ್ರೇಕ್ಷಕರ ಮುಂದೆ ತರಲು ರೆಡಿಯಾಗಿರುವ ನಿರ್ದೇಶಕ ಗುರುರಾಜ ಕುಲಕರ್ಷಣಿ, ಒಂದೊಳ್ಳೆಯ ಸಂದೇಶ ಕೊಡುವ ಹುಮ್ಮಸ್ಸಿನಲ್ಲಿದ್ದಾರೆ. ಅಂದಹಾಗೆ, ಇದೊಂದು ಕಾಮಿಡಿ, ಸಸ್ಪೆನ್ಸ್, ಥ್ರಿಲ್ಲರ್ ಅಂಶಗಳನ್ನೊಳಗೊಂಡ ಚಿತ್ರ. ಬಾಲಾಜಿ ಮನೋಹರ್‌ ಈ ಚಿತ್ರದಲ್ಲಿ ಪ್ರಮುಖ ಪಾತ್ರಧಾರಿ. ತಾರಕ್ ಪೊನ್ನಪ್ಪ ನಾಯಕರಾಗಿದ್ದಾರೆ.

ಊರ್ವಶಿ ಗೋರ್ವಧನ್‌ ಅವರಿಗೆ ನಾಯಕಿಯಾಗಿದ್ದಾರೆ. ಉಳಿದಂತೆ ನಟಿ ಮಾನಸ ಜೋಷಿ ಇಲ್ಲೊಂದು ವಿಶೇಷ ಪೊಲೀಸ್‌ ಅಧಿಕಾರಿ [ಪಾತ್ರ ಮಾಡಿದ್ದಾರೆ. ಸೀತಾ ಕೋಟೆ ಲಾಯರ್‌ ಆಗಿದ್ದಾರೆ. ಸಂಪತ್‌ ಕುಮಾರ್‌, ಮಾಲತೇಶ್, ಸಿತಾರಾ, ಜಗದೀಶ್ ಜಾಲಾ, ಅರುಣ ಮೂರ್ತಿ, ರಾಜು ನೀನಾಸಂ, ಶಂಕರ್ ಶೆಟ್ಟಿ ರಂಗಸ್ವಾಮಿ ಇತರರು ನಟಿಸಿದ್ದಾರೆ.

ಚಿತ್ರದ ಬಗ್ಗೆ ನಿರ್ದೇಶಕರು ಅಪಾರ ನಿರೀಕ್ಷೆ ಇಟ್ಟುಕೊಂಡಿದ್ದಾರೆ.”ಇದು ಬೆಂಗಳೂರಿನ ಕಥೆ. ಐಟಿಬಿಟಿ ಅನ್ನೋ ಈ ಜಮಾನಾದ ಕಥೆ. ಬೆಂಗಳೂರಿಗರು ಸದ್ಯ ಏನಾಗುತ್ತಿದ್ದಾರೆ ಎಂಬುದನ್ನು ಈ ಸಿನಿಮಾ ಮೂಲಕ ಸಸ್ಪೆನ್ಸ್ ಶೈಲಿಯಲ್ಲಿ ತೋರಿಸಲು ಹೊರಟಿದ್ದಾರೆ. ಒಡೆದು ಹೋದ ಮನಸ್ಸುಗಳನ್ನು ಒಂದು ಮಾಡುವ ಕೆಲಸ ಈ ಸಿನಿಮಾದಲ್ಲಿ ಆಗಿದೆ ಅನ್ನೋದು ನಿರ್ದೇಶಕರ ಮಾತು.


ಮಲಯಾಳಂ ಚಿತ್ರರಂಗದಲ್ಲಿ ಕೆಲಸ ಮಾಡಿರುವ ಅರ್ಜುನ್ ಅಜಿತ್ ಚಿತ್ರಕ್ಕೆ ಕ್ಯಾಮೆರಾ ಹಿಡಿದಿದ್ದಾರೆ. ಕನ್ನಡದ ನೂರಾರು ಸಿನಿಮಾಗಳಿಗೆ ಕತ್ತರಿ ಹಾಕಿರುವ ಕೆಂಪರಾಜ್ ಅರಸ್ ಅವರ ಸಂಕಲನ ಇಲ್ಲಿದೆ. ಎಸ್.ಡಿ ಅರವಿಂದ್ 3 ಹಾಡುಗಳಿಗೆ ಸಂಗೀತ ಸಂಯೋಜಿಸಿದ್ದಾರೆ. ಕೆ.ಕಲ್ಯಾಣ್, ಡಾ. ಬಿ.ಆರ್ ಪೊಲೀಸ್ ಪಾಟೀಲ್ , ವಿ.ಮನೋಹರ್‌ ಅವರ ಸಾಹಿತ್ಯವಿದೆ.

ಚಿತ್ರಕ್ಕೆ ಮಹೇಶ್‌ ಎಸ್‌.ಪಿ.ಸಹ ನಿರ್ದೇಶಕರಾದರೆ, ಸುನೀಲ್‌ ವೈ.ಕೆ ನಿರ್ದೇಶನದ ವಿಭಾಗದಲ್ಲಿ ಕೆಲಸ ಮಾಡಿದ್ದಾರೆ. ಹರೀಶ ಮೂರ್ತಿ ಕಾರ್ಯಕಾರಿ ನಿರ್ಮಾಪಕರಾಗಿದ್ದಾರೆ. ಚಿತ್ರಕ್ಕೆ ಸುನೀಲ್‌ ಆರ್.‌ ಡಿ ಮತ್ತು ನರಸಿಂಹ ಕುಲಕರ್ಣಿ ಅವರು ಸಹ ನಿರ್ಮಾಪಕರಾಗಿದ್ದಾರೆ.
ತೇಜಸ್ ಹರಿದಾಸ್, ವಾಣಿ ಹರಿಕೃಷ್ಣ, ಅರವಿಂದ್ ಹಾಡುಗಳಿಗೆ ಧ್ವನಿ ನೀಡಿದ್ದಾರೆ.

Related Posts

error: Content is protected !!