Categories
ಸಿನಿ ಸುದ್ದಿ

ಅಭಿಮಾನಿಗಳ ಜತೆ ನಿಖಿಲ್‌ ಕುಮಾರ್‌ ಹುಟ್ಟು ಹಬ್ಬ, ಕೊರೋನಾ ನಡುವೆ ಇದೆಲ್ಲ ಬೇಕಿತ್ತಾ ಎಂದ ನೆಟ್ಟಿಗ

ನಿಖಿಲ್ ಬರ್ತ್ ಡೇ ಗೆ ಟೀಸರ್‌ ಗಿಫ್ಟ್‌ ನೀಡಿದ ರೈಡರ್‌ ಚಿತ್ರ ತಂಡ, ಟೀಸರ್‌ ತುಂಬಾ ಆಕ್ಷನ್‌ ಸೀನ್‌ ಗಳದ್ದೇ ಅಬ್ಬರ

ʼಜಾಗ್ವಾರ್‌ʼ ಖ್ಯಾತಿಯ ನಟ ನಿಖಿಲ್‌ಕುಮಾರ್‌ ಅವರಿಗೆ ಇಂದು (ಜ.22) ಹುಟ್ಟು ಹಬ್ಬದ ಸಂಭ್ರಮ. ಆದರೆ ಕೊರೋನಾ ಕಾರಣದಿಂದ ಪ್ರತಿ ವರ್ಷದಂತೆ ಈ ವರ್ಷ ಅವರ ಹುಟ್ಟು ಹಬ್ಬ ಇರಲಾರದು ಅಂತ ಸಿನಿಮಾ ಪ್ರೇಕ್ಷಕರು ಅಂದುಕೊಂಡಿದ್ದರ ನಡುವೆಯೇ ಅವರಿಂದು ತಮ್ಮ ನಿವಾಸದಲ್ಲಿ ಕುಟುಂಬದವರು ಹಾಗೂ ಅಭಿಮಾನಿಗಳ ಜತೆಗೆ ಅದ್ದೂರಿಯಾಗಿಯೇ ಹುಟ್ಟು ಹಬ್ಬ ಆಚರಿಸಿಕೊಂಡರು.

ಈ ವರ್ಷದ ಮಟ್ಟಿಗೆ ಎಲ್ಲಾ ಸ್ಟಾರ್‌ಗಳು ತಮ್ಮ ಹುಟ್ಟು ಹಬ್ಬವನ್ನು ಸರಳವಾಗಿಯೇ ಆಚರಿಸಿಕೊಂಡಿದ್ದು ಎಲ್ಲರಿಗೂ ಗೊತ್ತು. ಅದಕ್ಕೆ ಕೊರೋನಾ ಕಾರಣ. ಇದರ ನಡುವೆಯೇ ನಟ ನಿಖಿಲ್‌ ಕುಮಾರ್‌ , ಅಭಿಮಾನಿಗಳ ಜತೆಗೆ ಕೇಕ್‌ ಕತ್ತರಿಸಿ ಹುಟ್ಟು ಹಬ್ಬ ಆಚರಿಸಿಕೊಂಡಿದ್ದು, ಸೋಷನ್‌ ಮೀಡಿಲಾದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಈ ಮಧ್ಯೆ ನಟ ನಿಖಿಲ್‌ ಕುಮಾರ್‌ ಹುಟ್ಟ ಹಬ್ಬಕ್ಕೆ ಬಹು ನಿರೀಕ್ಷಿತ ರೈಡರ್‌ ಚಿತ್ರ ತಂಡ ಟೀಸರ್‌ ಗಿಫ್ಟ್‌ ನೀಡಿದೆ.

46 ಸೆಂಕೆಡುಗಳ ಅವದಿಯ ʼರೈಡರ್‌ʼ ಚಿತ್ರದ ಟೀಸರ್‌ ಜಬರ್ದಸ್ತ್‌ ಆಗಿದೆ. ಟೀಸರ್‌ನಲ್ಲಿ ಯಾವುದೇ ಡೈಲಾಗ್‌ ಇಲ್ಲ, ಬರೀ ಆಕ್ಷನ್‌ ಸೀನ್ ಗಳನ್ನು ಟೀಸರ್‌ನಲ್ಲಿ ಕಟ್‌ ಮಾಡಿದೆ ಚಿತ್ರ ತಂಡ. ಸದ್ಯಕ್ಕೆ ನಿಖಿಲ್‌ ಕುಮಾರ್‌ ಸಿನಿ ಜರ್ನಿಯಲ್ಲಿ ಇದು ಭಾರೀ ಕುತೂಹಲ ಕೆರಳಿಸಿದ ಚಿತ್ರ. ಟೀಸರ್ ತುಂಬಾ ಬರೀ ನಿಖಿಲ್ ಕುಮಾರಸ್ವಾಮಿ ತುಂಬಿಕೊಂಡಿದ್ದಾರೆ. ಟೀಸರ್‌ ನ ಆರಂಭದಿಂದ ಅಂತ್ಯದ ವರೆಗೂ ದುಷ್ಟರನ್ನು ಡಿಸೈನ್-ಡಿಸೈನ್ ಆಗಿ ಹೊಡೆಯುತ್ತಿದ್ದಾರೆ ನಿಖಿಲ್. ಸಿನಿಮಾದ ಟೈಟಲ್ ಹಾಗೂ ಟೀಸರ್ ನೋಡಿದರೆ ಗೊತ್ತಾಗುತ್ತಿದೆ ಇದೊಂದು ಪಕ್ಕಾ ಹೊಡಿ-ಬಡಿ ಸಿನಿಮಾ ಎಂದು. ಪೂರ್ಣ ಪ್ರಮಾಣದ ಆಕ್ಷನ್ ಹೀರೋ ಆಗುವತ್ತ ನಿಖಿಲ್ ಕುಮಾರಸ್ವಾಮಿ ಗಮನ ಹರಿಸಿದಂತಿದೆ. ಟೀಸರ್‌ ನಲ್ಲಿ ತೋರಿಸಲಾಗಿರುವ ಆಕ್ಷನ್ ದೃಶ್ಯಗಳು ತುಂಬಿಕೊಂಡಿವೆ.ಟಿ ಸಿರೀಸ್‌ ಹಾಗೂ ಲಹರಿ ಮ್ಯೂಜಿಕ್‌ ಮೂಲಕ ನಿರ್ಮಾಣವಾಗುತ್ತಿರುವ ಈ ಚಿತ್ರ ಕನ್ನಡ ಹಾಗೂ ತೆಲುಗು ಎರಡು ಭಾಷೆಯಲ್ಲೂ ಬರುತ್ತಿದೆ.

ನಿಖಿಲ್‌ ಹೀರೋ ಆಗಿ ಎಂಟ್ರಿಯಾದ ಚೊಚ್ಚಲ ಚಿತ್ರ ʼ ಜಾಗ್ವಾರ್‌ʼ ಕೂಡ ಕನ್ನಡದ ಜತೆಗೆ ತೆಲುಗಿನಲ್ಲೂ ತೆರೆ ಕಂಡಿತ್ತು. ಎರಡು ಕಡೆ ಅವರೇಜ್‌ ಸಕ್ಸಸ್‌ ಸಿಕ್ಕಿದ್ದು ನಿಮಗೂ ಗೊತ್ತು. ಆದಾದ ನಂತರ ಸೀತಾರಾಮ ಕಲ್ಯಾಣ ಹಾಗೂ ಕುರುಕ್ಷೇತ್ರ ಚಿತ್ರಗಳಲ್ಲಿ ನಿಖಿಲ್‌ ತೆರೆ ಮೇಲೆ ಕಾಣಿಸಿಕೊಂಡರು. ಅಲ್ಲಿಂದ ಒಂದಷ್ಟು ಸಮಯ ರಾಜಕಾರಣ ಅಂತ ಬ್ಯುಸಿ ಆಗಿದ್ದರು. ಮಂಡ್ಯ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಸೋಲು ಕಂಡ ನಂತರ ಮತ್ತೆ ಸಿನಿಮಾದತ್ತ ಮನಸ್ಸು ಮಾಡಿ,” ರೈಡರ್‌ʼ ಮೂಲಕ ಸುದ್ದಿಯಾದರು.

ಇದೇ ಚಿತ್ರ ತಂಡ ಈಗ ನಿಖಿಲ್‌ ಅವರ ಹುಟ್ಟು ಹಬ್ಬಕ್ಕೆ ಟೀಸರ್‌ ಗಿಫ್ಟ್‌ ನೀಡಿ ಭರ್ಜರಿ ಕುತೂಹಲ ಮೂಡಿಸಿದೆ. ಅದೀಗ ಸೋಷಲ್‌ ಮೀಡಿಯಾದಲ್ಲಿ ಭರ್ಜರಿ ಸದ್ದು ಮಾಡುತ್ತಿದೆ. ಅದು ಲಾಂಚ್‌ ಆದ ನಾಲ್ಕು ಗಂಟೆಗಳಲ್ಲಿ 5 ಲಕ್ಷ ವೀಕ್ಷಣೆ ಪಡೆದಿತ್ತು. ಅದು ನಿಖಿಲ್‌ ಜನಪ್ರಿಯತೆಗೆ ಸಾಕ್ಷಿಯಾಯಿತು.ತೆಲುಗು ಚಿತ್ರ ರಂಗದ ಯುವ ನಿರ್ದೇಶಕ ವಿಜಯ್‌ ಕುಮಾರ್‌ ಕೊಂಡ ಆಕ್ಷನ್‌ ಕಟ್‌ ಹೇಳಿರುವ ಚಿತ್ರ ಇದು. ನಿಖಿಲ್ ಕುಮಾರಸ್ವಾಮಿ ಅವರಿಗೆ ಇಲ್ಲಿ ನಾಯಕಿಯಾಗಿ ಕಶ್ಮಿರಾ ಪರದೇಶಿ ಜೋಡಿ. ಉಳಿದಂತೆ ಸಂಪದಾ, ದತ್ತಣ್ಣ, ಅಚ್ಯುತ್ ಕುಮಾರ್, ಚಿಕ್ಕಣ್ಣ, ಶಿವರಾಜ್ ಕೆ.ಆರ್.ಪೇಟೆ, ಅನುಷಾ ರೈ ಇನ್ನೂ ಹಲವರು ನಟಿಸಿದ್ದಾರೆ.

ಟೀಸರ್‌ ಸದ್ದಿನ ಜತೆಗೀಗ ಅವಗು ಗ್ರಾಂಡ್‌ ಆಗಿ ಹುಟ್ಟು ಹಬ್ಬ ಆಚರಿಸಿಕೊಂಡಿದ್ದು ಕೂಡ ಸೋಷಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸುದ್ದಿ ಮಾಡುತ್ತಿದೆ.ಇದೊಂದು ಸಲ ಸರಳವಾಗಿ ಅಚರಿಸಿಕೊಳ್ಳುವುದಕ್ಕೆ ನಿಖಿಲ್‌ ಅವರಿಗೇನಾಗಿತ್ತು ಅಂತ ಕೆಲವರು ಕಾಮೆಂಟ್‌ ಹಾಕಿದ್ದಾರೆ.ಮತ್ತೆ ಕೆಲವರು ಈಗೇನು ಕೊರೋನಾ ಇದೀಯಾ ಅಂತ ಕಾಮೆಂಟ್‌ ಹಾಕಿದವರನ್ನು ಪ್ರಶ್ನಿಸುವ ಮೂಲಕ ನಿಖಿಲ್‌ ಪರವಹಿಸಿರುವುದು ವಿಚಿತ್ರವಾಗಿದೆ.

Categories
ಸಿನಿ ಸುದ್ದಿ

ಇನ್ಮುಂದೆ ಬೇರ್‌ ಬಾಡಿ ತೋರಿಸಲ್ಲ ಅಂದ್ರು ವಿನೋದ್‌ ಪ್ರಭಾಕರ್

ಹೀಗೆ ಹೇಳಲು ಕಾರಣ ಇಲ್ಲಿದೆ…

ಕನ್ನಡದಲ್ಲಿ ಸದ್ಯದ ಮಟ್ಟಿಗೆ ಬೇರ್‌ಬಾಡಿ ಹೀರೋ ಅಂದಾಕ್ಷಣ, ನೆನಪಾಗೋದೇ ವಿನೋದ್‌ ಪ್ರಭಾಕರ್.‌ ಏಯ್ಟ್‌ ಪ್ಯಾಕ್‌ ಹೀರೋ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ವಿನೋದ್‌ ಪ್ರಭಾಕರ್‌, ತಮ್ಮ ಸಿನಿಮಾಗಳಲ್ಲಿ ಬೇರ್‌ಬಾಡಿ ಮೂಲಕವೇ ಸುದ್ದಿಯಾದವರು. ವಾವ್‌ ಎ ಬಾಡಿ ಎಂಬ ಉದ್ಘಾರಕ್ಕೂ ಕಾರಣರಾದವರು. ಇದೀಗ ಸುದ್ದಿಯೊಂದನ್ನು ಹೊರ ಬಿಟ್ಟಿದ್ದಾರೆ.

ಅದು ಬೇರೇನೂ ಅಲ್ಲ, ವಿನೋದ್‌ ಪ್ರಭಾಕರ್‌ ಇನ್ಮುಂದೆ ಬೇರ್‌ ಬಾಡಿ ಮಾಡೋದಿಲ್ಲ. ಇದೇ ಈ ಹೊತ್ತಿನ ಸುದ್ದಿ. ಹೌದು, ಈ ವಿಷಯವನ್ನು ಸ್ವತಃ ವಿನೋದ್‌ ಪ್ರಭಾಕರ್‌ ಅವರೇ ಹೇಳಿಕೊಂಡಿದ್ದಾರೆ. ಹೀಗೆ ಹೇಳಿದ್ದು “ಶ್ಯಾಡೊ” ಪತ್ರಿಕಾಗೋಷ್ಠಿಯಲ್ಲಿ. ಹಾಗಾದರೆ ವಿನೋದ್‌ ಪ್ರಭಾಕರ್‌ ಹೇಳಿದ್ದೇನು ಗೊತ್ತಾ?
ಅವರು “ರಗಡ್‌” ಚಿತ್ರಕ್ಕಾಗಿ ಏಯ್ಟ್‌ ಪ್ಯಾಕ್‌ ಮಾಡಿದ್ದರು. ತಮ್ಮ ಬೇರ್‌ ಬಾಡಿ ಮೂಲಕ ಜೋರು ಸುದ್ದಿಯಾಗಿದ್ದರು ಬಹುತೇಕ ಅವರ ಸಿನಿಮಾ ನಿರ್ದೇಶಕರು ವಿನೋದ್‌ ಪ್ರಭಾಕರ್ ಅವರ ಬೇರ್‌ ಬಾಡಿಯನ್ನೇ ತೋರಿಸಲು ಮುಂದಾದರು.

“ರಗಡ್‌” ಚಿತ್ರಕ್ಕೆ ಬೇರ್‌ ಬಾಡಿ ಮಾಡಿದ್ದ ವಿನೋದ್‌ ಪ್ರಭಾಕರ್‌, ಅವರಿಗೆ ನಮ್ಮ ಚಿತ್ರದಲ್ಲೂ ಮಾಡಿ ಅಂತ ಕೆಲ ನಿರ್ದೇಶಕರು ಹೇಳುತ್ತಿದ್ದಾರೆ. ಹಾಗೆ ಹೇಳಿದವರಲ್ಲಿ “ಶ್ಯಾಡೊʼ ಸಿನಿಮಾ ನಿರ್ದೇಶಕ ರವಿಗೌಡ್ರು ಕೂಡ. ಅವರ ಮಾತಿಗೆ ಓಕೆ ಅಂದ ವಿನೋದ್‌ ಪ್ರಭಾಕರ್‌ ಅವರು, ಅಲ್ಲೊಂದು ಸೀನ್‌ ಮಾಡಿದ್ದಾರೆ. ಆದರೆ, ಅದು ಬೇರ್‌ ಬಾಡಿ ಅಲ್ಲ, ಲೆನಿನ್‌ ಷರ್ಟ್‌ ಮೇಲೆಯೇ ತೋರಿಸುವ ಸೀನ್‌ ಅದು. ಈ ಕುರಿತು ಹೇಳುವ ವಿನೋದ್‌ ಪ್ರಭಾಕರ್‌, “ವರ್ಷಗಟ್ಟಲೆ ಅನ್ನ ನೀರು ಬಿಟ್ಟು, ವಾಟರ್‌ ಕಟ್‌ ಮಾಡಿ ದೇಹ ರೆಡಿಮಾಡಿಕೊಂಡಿದ್ದೇನೆ. ಉಪ್ಪು, ಖಾರ ಇಲ್ಲದೆ ನೀರಲ್ಲೇ ಜೀವಿಸಿದ್ದೇನೆ.

ಇದರಿಂದ ಬೋನ್ಸ್‌ಗೂ ಸಮಸ್ಯೆಯಾಗಿದ್ದುಂಟು. ನೋವು ಪಟ್ಟಿದ್ದುಂಟು. ವೈದ್ಯರು ಕೊನೆಗೆ ಚೆಕ್‌ ಮಾಡಿ, ಉಪ್ಪು-ಖಾರ ತಿನ್ನಿ ಅಂತ ಹೇಳಿದ್ರು. ನಮ್ಮದೂ ಹೊಟ್ಟೆ ಪಾಡಲ್ಲವೇ? ಕಷ್ಟ ಪಟ್ಟು ಹಾಗೆಲ್ಲಾ ಮಾಡಿಕೊಂಡಿದ್ದೇನೆ. ತುಂಬಾ ನೋವು ಅನುಭವಿಸಿದ್ದೂ ಇದೆ. “ವರದ” ಚಿತ್ರೀಕರಣ ಸಮಯದಲ್ಲಿ ಜಂಪ್‌ ಮಾಡುವಾಗ ಬಿದ್ದು ಪೆಟ್ಟು ಮಾಡಿಕೊಂಡಿದ್ದೇನೆ. ಹೀಗಾಗಿ ನಾನು ಇನ್ನು ಮುಂದೆ ಬೇರ್‌ ಬಾಡಿ ಮಾಡೋದಿಲ್ಲ ಎಂದು ತೀರ್ಮಾನಿಸಿದ್ದೇನೆ. ಬಾಡಿ ಫಿಟ್‌ ಆಗಿಟ್ಟುಕೊಂಡೇ ಕೆಲಸ ಮಾಡ್ತೀನಿ” ಎನ್ನುತ್ತಾರೆ ವಿನೋದ್‌ ಪ್ರಭಾಕರ್.‌


ಅವರ “ಶ್ಯಾಡೊ” ಚಿತ್ರ ಫೆಬ್ರವರಿ 5ರಂದು ರಿಲೀಸ್‌ ಆಗುತ್ತಿದೆ. ಈ ಕುರಿತು ಸಂತಸ ಪಡುವ ವಿನೋದ್‌ ಪ್ರಭಾಕರ್‌, ಹಾಗೆಯೇ ಬೇಸರವನ್ನೂ ಹೊರಹಾಕುತ್ತಾರೆ. “ಶ್ಯಾಡೊ” ಚಿತ್ರ 2018ರಲ್ಲಿ ಶುರುವಾಗಿದ್ದು, ರಿಲೀಸ್‌ ಈಗ ಆಗುತ್ತಿದೆ. ಸಿನಿಮಾ ಆಗೋಕೆ ಇಷ್ಟು ವರ್ಷ ಕಾದಿದ್ದೇವೆ. ಆದರೆ, ರಿಲೀಸ್‌ಗೆ ಕಾಯುತ್ತಿಲ್ಲ. ಸಡನ್‌ ಆಗಿ ಹದಿನೈದು ದಿನಗಳಲ್ಲೇ ರಿಲೀಸ್‌ ಮಾಡಿಬಿಟ್ಟರೆ ಹೇಗೆ? ಚಿತ್ರವನ್ನು ಪ್ರಚಾರ ಮಾಡಬಾರದೆ? ಈ ಪ್ರಶ್ನೆ ಅವರದು.


ಇನ್ನು ನನ್ನ ಈ ಸಿನಿಮಾ ಜರ್ನಿಯಲ್ಲಿ ಇದೇ ಮೊದಲ ಸಲ ನರ್ತಕಿ ಥಿಯೇಟರ್ ನಲ್ಲಿ ನನ್ನ “ಶ್ಯಾಡೊ” ಚಿತ್ರ ರಿಲೀಸ್ ಆಗುತ್ತಿದೆ. ಇದು ನನ್ನ 19 ವರ್ಷಗಳ ಸಾಧನೆ ಅನ್ನಬಹುದು. ನಾನು ಪ್ರತಿ ಸಿನಿಮಾ ರಿಲೀಸ್ ವೇಳೆಯೂ ಥಿಯೇಟರ್ ಗೆ ಭೇಟಿ ನೀಡಿ ಅಭಿಮಾನಿಗಳಿಗೆ ಧನ್ಯವಾದ ಹೇಳುತ್ತಾ ಬಂದಿದ್ದೇನೆ. ಈ ಚಿತ್ರದ ಬಿಡುಗಡೆ ಸಂದರ್ಭದಲ್ಲೂ ಥಿಯೇಟರ್ ವಿಸಿಟ್ ಕೊಡ್ತೀನಿ” ಎಂಬುದು ಅವರ ಮಾತು.

Categories
ಸಿನಿ ಸುದ್ದಿ

ನಮ್ಮೂರ ಆಸ್ಪತ್ರೆ, ನಮ್ಮ ಹೆಮ್ಮೆ- ಪಾಂಡವಪುರ ಸರ್ಕಾರಿ ಆಸ್ಪತ್ರೆಗೆ ಥ್ಯಾಂಕ್ಸ್‌ ಹೇಳಿದ ನಟಿ!

 ಸರ್ಕಾರಿ ಆಸ್ಪತ್ರೆ ಸಿಬ್ಬಂದಿಯ ಕಾರ್ಯವನ್ನು ಮೆಚ್ಚಿಕೊಂಡು ಮಾತನಾಡಿರುವ ನಟಿ ಅಕ್ಷತಾ ಪಾಂಡವಪುರ

ರಂಗಭೂಮಿ ಕಲಾವಿದೆ ಹಾಗೂ ಬಿಗ್‌ ಬಾಸ್‌ ಖ್ಯಾತಿಯ ನಟಿ ಅಕ್ಷತಾ ಪಾಂಡವಪುರ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ವಿಶೇಷ ಆಂದ್ರೆ, ಅವರು ಪಾಂಡವಪುರದ ಸರ್ಕಾರಿ ಆಸ್ಪತ್ರೆಯಲ್ಲಿಯೇ ಹೆರಿಗೆ ಆಗಿದ್ದಲ್ಲದೆ, ಅಲ್ಲಿನ ಸಿಬ್ಬಂದಿಯ ಸುರಕ್ಷಿತ ಆರೈಕೆಯಿಂದ ಮಗಳೊಂದಿಗೆ ಖುಷಿಯಿಂದ ಮನೆ ಸೇರಿದ್ದಾರೆ.

ಅದೇ ಸಂತೋಷದೊಂದಿಗೆ ಆಸ್ಪತ್ರೆ ಸಿಬ್ಬಂದಿಗಳಾದ ಡಾ. ಶಿಲ್ಪಾಶ್ರೀ, ಡಾ. ಪೃಥ್ವಿ, ಸಿಸ್ಟರ್‌ ಸೋಪಿಯಾ ರಾಣಿ ಹಾಗೂ ಆಸ್ಪತ್ರೆ ಆಡಳಿತಾಧಿಕಾರಿ ಡಾ. ಕುಮಾರ್‌ ಅವರ ಕಾರ್ಯವನ್ನು ಮೆಚ್ಚಿಕೊಂಡಿದ್ದಾರೆ. ಇದೆಲ್ಲಕ್ಕಿಂತ ಇಂಪಾರ್ಟೆಂಟ್‌ ವಿಷಯ ಎನಂದ್ರೆ,  ಸರ್ಕಾರಿ ಆಸ್ಪತ್ರೆ ಅಂದ್ರೆ ಎಲ್ಲರಿಗೂ ತಾತ್ಸರ. ಅದರಲ್ಲೂ ನಟ-ನಟಿಯರು, ಸೆಲಿಬ್ರಿಟಿಗಳು ಅತ್ತ ಕಣ್ಣೆತ್ತಿಯೂ ನೋಡುವುದಿಲ್ಲ. ಅದಕ್ಕೆ ಕಾರಣ ಅಲ್ಲಿನ ಚಿಕಿತ್ಸಾ ಸೇವೆ ಸರಿಯಲ್ಲ ಎನ್ನುವ ಅಪನಂಬಿಕೆ. ಅದರಲ್ಲೂ ಹೆರಿಗೆ ವಿಷಯದಲ್ಲಾ…. ಅದೊಂದು ನರಕ ಅಂತಲೇ ಜನರ ಮಾತು.

ನಟಿ ಅಕ್ಷತಾ ಕೂಡ ಅವರದೇ ಊರಿನ ಸರ್ಕಾರಿ ಆಸ್ಪತ್ರೆಯಲ್ಲೇ ಹೆರಿಗೆಗೆ ದಾಖಲಾಗುವೆ ಅಂತ ಹೇಳಿದಾಗ ಅವರಿಗೆ ಕೇಳಿ ಮಾತು ಒಂದಲ್ಲ, ಹಲವಾರು ಅಂತೆ.

ಮಕ್ಕಳ ವಿಷಯದಲ್ಲಿ ತಮಾಷೆನಾ ? ನಿಜವಾಗೂ ಸರ್ಕಾರಿ ಅಸ್ಪತ್ರೆ ಯೋಚ್ನೆ ಸರಿನಾ? ಎಷ್ಟೇ ವೆಚ್ಚವಾದರೂ ಸರಿ, ಒಳ್ಳೆಯ ಹಾಸ್ಪಿಟಲ್‌ ನಲ್ಲಿಯೇ ತೋರಿಸಬೇಕು.. ಕಾಸು ಕೊಟ್ಟಂತೆ ಕಜ್ಜಾಯ, ಎನೋ ಮಾಡೋಕೆ ಹೋಗಿ ಇನ್ನೇನೋ ಆದೀತು… ಸರ್ಕಾರಿ ಆಸ್ಪತ್ರೆನಲ್ಲಿ ಅಡ್ಡ ದಿಡ್ಡಿ ನಾರ್ಮಲ್‌ ಮಾಡಿ ಕಳಿಸ್ತಾರೆ, ಅದು ತೆಡೆದುಕೊಳ್ಳೋ ಶಕ್ತಿ ಇರ್ಬೇಕು, ಡಿಲಿವರಿ ಏನೋ ಆಗುತ್ತೆ ಮುಂದೆ ಮಗುವಿನ ಆರೈಕೆ , ಫೀಡಿಂಗ್‌ ಬಗ್ಗೆ ಎಲ್ಲಾ ಏನೂ ಹೇಳಲ್ಲ, ರೋಗಗಳು ಅಂದ್ರೆ ಸ್ವಲ್ಪನೂ ಕೇರ್‌ ಇಲ್ಲ, ಎಲ್ಲೋ ದುಡ್ಡು ಖರ್ಚು ಮಾಡ್ತೀವಿ, ಮಗು ಆಗುವಾಗ ಒಂದೊಳ್ಳೆ ಹಾಸ್ಪಿಟಲ್‌ ಬೇಡ್ವಾ…..

ಅವರು ಪಾಂಡವಪುರ ಸರ್ಕಾರಿ ಆಸ್ಪತ್ರೆನಲ್ಲೇ ಹೆರಿಗೆ ಅಂತ ಅಂದಾಗ ಇಂತಹ ಸಾಕಷ್ಟು ಮಾತು ಅವರ ಕಿವಿಗೆ ಕೇಳಿದವಂತೆ. ಆದರೆ ಅದ್ಯಾವುದಕ್ಕೂ ಅವರು ಭಯ ಪಡದೆ, ಸರ್ಕಾರಿ ಆಸ್ಪತ್ರೆಗೇ ದಾಖಲಾದ್ರಂತೆ.  ಆದರೆ ಅಲ್ಲಿಗೆ ಹೋದಾಗ ಅವರಿಗೆ ಅಲ್ಲಿನ ಸಿಬ್ಬಂದಿ ಕಾಳಜಿ ಕಂಡು ಖುಷಿ ಆಯಿತ್ತಂತೆ. “ ಇವೆಲ್ಲದರ ಮದ್ಯೆ ಅಂತೂ ಇಂತೂ ನಮ್ಮ ಸರ್ಕಾರಿ ಆಸ್ಪತ್ರೆ ನಮ್ಮ ಹೆಮ್ಮೆ ಅಂತಾ ಹೇಳಬಲ್ಲೇ ಅಂದ್ರೆ ಅದಕ್ಕೆ ಇಡೀ ಸಿಬ್ಬಂದಿವರ್ಗವೇ ಕಾರಣ. ಅವರೆಲ್ಲರಿಗೂ ಧನ್ಯವಾದಗಳು ಅಂತ ಇದಿಷ್ಟು ಮಾಹಿತಿಯನ್ನು ನಟಿ ಅಕ್ಷತಾ ಪಾಂಡವಪುರ ಸೋಷಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದು ಅವರ ಖುಷಿಗಾದರೂ, ಇತರ ಕಲಾವಿದರಿಗೂ  ಕೂಡ ಪ್ರೇರಣೆಯಾಗಲಿ. ಆ ಮೂಲಕ ಸರ್ಕಾರಿ ಆಸ್ಪತ್ರೆಗಳ ಮೇಲೆ ಜನರ ನಂಬಿಕೆ ಇನ್ನಷ್ಟು ಗಟ್ಟಿಯಾಗಲಿ.

Categories
ಸಿನಿ ಸುದ್ದಿ

ನಂಗೆ ಕ್ವಾಂಟಿಟಿಗಿಂತ ಕ್ವಾಲಿಟಿ  ಮುಖ್ಯ- 3 ವರ್ಷದ ಗ್ಯಾಪ್‌ಗೆ ಧ್ರುವ ಕೊಟ್ಟರು ಕಾರಣ

– ಧ್ರುವ ಅಂದವರಿಗೆ ನನ್‌ ಸಿನ್ಮಾ ನೆನಪಾಗಬೇಕು

– ಕಂಟೆಂಟ್‌ ಆಧಾರಿತ ಸಿನ್ಮಾ ಮಾಡ್ಬೇಕೆನ್ನೋದು ನನ್ನ ಟಾರ್ಗೆಟ್‌

– ನಂಗೆ ಯೂನಿವರ್ಷಲ್‌ ಆದ ಕಾಡಿಸುವ ಕತೆ ಬೇಕು

– ಪೊಗರು ಅಂದ್ರೆ ಬರೀ ಗಡ್ಡ ಬಿಟ್ಟ ಧ್ರುವ ಮಾತ್ರ ಇಲ್ಲ

– ಸಣ್ಣ ಆಗುವುದು, ದಪ್ಪ ಆಗುವುದಂದ್ರೆ ತಮಾಷೆ ಅಲ್ಲ

ʼಪೊಗರುʼ ರಿಲೀಸ್‌ ಹಿನ್ನೆಲೆಯಲ್ಲಿ ಧ್ರುವ ಸರ್ಜಾ ಜತೆಗೆ ಸಿನಿ ಲಹರಿ ನಡೆಸಿದ ಎಕ್ಸ್‌ ಕ್ಲೂಸಿವ್‌ ಸಂದರ್ಶನ ಇಲ್ಲಿದೆ..

– ಮೂರು ವರ್ಷದ ಬಳಿಕ ತೆರೆ ಮೇಲೆ ಬರ್ತೀದ್ದೀರಿ, ಆದ್ರೆ ಬೇಡಿಕೆಯುಳ್ಳ ಒಬ್ಬ ಸ್ಟಾರ್‌ ದೃಷ್ಟಿಯಲ್ಲಿ ಇದು ದೊಡ್ಡ ಗ್ಯಾಪ್‌ ಅಲ್ವಾ?

ನಿಜ, ಅದ್ರೆ ಅದಕ್ಕೆ ಸಾಕಷ್ಟು ಕಾರಣ ಇವೆ. ಒಬ್ಬ ಆಕ್ಟರ್ ಆಗಿ ನಾನೇನು ಹೇಳೋದಿಕ್ಕೆ ಬಯಸುತ್ತೇನೆಂದ್ರೆ, ‌ನಾವೇನು ಮಾಡ್ತೀವಿ ಅಂತಂದುಕೊಳ್ಳುತ್ತೇವೋ, ಅದಕ್ಕೆ ನಾನಿದ್ದೀನಿ ಅಂತ ಹೇಳೋ ತಂಡಬೇಕು. ಅಂತಹ ಸಪೋರ್ಟ್‌ ಈ ಸಿನಿಮಾ ಟೀಮ್‌ನಲ್ಲಿತ್ತು. ಮೇಲಾಗಿ, ನನ್ನ ಪಾತ್ರಕ್ಕಿಲ್ಲಿ ಸಾಕಷ್ಟು ಶೇಡ್ಸ್‌ ಇವೆ. ಸಣ್ಣ ಆಗಿದ್ದರಿಂದ ಹಿಡಿದು, ಮತ್ತೆ ದಪ್ಪ ಆಗುವುದಂದ್ರೆ ಅದು ಸುಮ್ನೆ ಅಲ್ಲ. ಅದಕ್ಕೆ ಒಂದಷ್ಟು ಟೈಮ್‌ ಹಿಡಿತು. ಜತೆಗೆ ಯಾರನ್ನಾದ್ರೂ ಆಚೆ ಕಡೆಯಿಂದ ಕರೆಸಿಕೊಳ್ಳುವುದಕ್ಕೂ ತುಂಬಾ ಪ್ರೊಸಿಜರ್‌ ಇದ್ವು. ಅದಕ್ಕೂ ಒಂಷ್ಟು ಸಮಯ ಬೇಕಾಯಿತು. ತುಂಬಾ ಎಕ್ಸ್‌ಕ್ಲೂಸಿವ್‌ ಸೀನ್ಸ್‌ ಈ ಸಿನಿಮಾದಲ್ಲಿದೆ. ಬರೀ ಗಡ್ಡ ಬಿಟ್ಕೊಂಡು ನಾನಿಲ್ಲಿ ಕಾಣಿಸಿಕೊಂಡಿಲ್ಲ, ಅದರಾಚೆ, ಆಡಿಯನ್ಸ್‌ಗೆ ಇಷ್ಟ ಆಗುವಂತಹ ಎಲಿಮೆಂಟ್ಸ್‌ ಸಾಕಷ್ಟಿವೆ. ಜತೆಗೆ ಕ್ವಾಂಟಿಟಿಗಿಂತ ಕ್ವಾಲಿಟಿ ಇಂಪಾರ್ಟೆಂಟ್ ನಂಗೆ.

– ಒಬ್ಬ ಆರ್ಟಿಸ್ಟ್‌ ಮೂರು ವರ್ಷ ಒಂದೇ ಪಾತ್ರದಲ್ಲೇ ತೊಡಗಿಸಿಕೊಳ್ಳುವುದಂದ್ರೆ, ಕಷ್ಟ ಅನಿಸೋದಿಲ್ವಾ?

ನಾನೇ ಅಂತಲ್ಲ, ಯಾವುದೇ ಆಕ್ಟರ್‌ಗೂ ಇರಬಹುದಾದ ಅಂತಿಮ ಉದ್ದೇಶ ಆಡಿಯನ್ಸ್‌ಗೆ ರೀಚ್‌ ಆಗ್ಬೇಕು ಅನ್ನೋದು. ಅದರಿಂದ ನಾನೂ ಕೂಡ ಹೊರತಾಗಿಲ್ಲ. ಜತೆಗೆ ಒಂದು ಪಾತ್ರ ಏನು ಕೇಳುತ್ತೋ, ಅದಕ್ಕೆ ತಕ್ಕಂತೆ ನಾವು ಕೂಡ ತೊಡಗಿಸಿಕೊಂಡಾಗಲೇ ಆ ಪಾತ್ರಕ್ಕೆ ಜೀವ ತುಂಬುವುದಕ್ಕೆ ಸಾಧ್ಯ. ಸಣ್ಣವರಿರಲಿ, ದೊಡ್ಡವರಿರಲಿ ಅದನ್ನು ತಲೆಯಲ್ಲಿ ಇಟ್ಕೊಂಡು ಸಿನಿಮಾ ಮಾಡಿದ್ರೇ ಅದೆಲ್ಲ ಕಷ್ಟ ಅಂತ ಎನಿಸುವುದೇ ಇಲ್ಲ.

ಅದು ಸರಿ, ಪಾತ್ರದಲ್ಲಿ ತೊಡಗಿಸಿಕೊಳ್ಳಬೇಕೆನ್ನುವುದರ ಆಚೆ ನೀವು, ನಿಮ್ಮ ಖರ್ಚು-ವೆಚ್ಚಗಳ ಲಾಭ-ನಷ್ಟದ ಬಗ್ಗೆ ಯೋಚಿಸೋದಿಲ್ವಾ?

ನೀವು, ಏನೇ ಕಟ್ಟಬೇಕಾದ್ರೂ ಗಟ್ಟಿಯಾದ ಅಡಿಪಾಯ ಇಂಪಾರ್ಟೆಂಟ್.‌ ಯುಟಿಲಿಟಿ ಬಿಲ್ಡಿಂಗ್‌ ಕಟ್ಟಬೇಕಾದ್ರೂ ಅದಕ್ಕೆ ಗಟ್ಟಿ ಅಡಿಪಾಯ ಬೇಕು. ಆಗಲೇ ಗಟ್ಟಿಯಾದ ಒಂದು ಮಲ್ಟಿಸ್ಟೋರ್‌ ಬಿಲ್ಡಿಂಗ್‌ ಎದ್ದು ನಿಲ್ಲುತ್ತದೆ. ನಂಗೂ ಅಷ್ಟೆ. ಧ್ರುವ ಯಾರು ಅಂತ ಕೇಳಿದ್ರೆ ಅದು, ಇದು ಎನ್ನುವುದಕ್ಕಿಂತ ನಾನು ಮಾಡಿರುವ ಸಿನಿಮಾ ನೆನಪಾಗಬೇಕು. ಆ ಮೂಲಕ ಅವರಿಗೂ ಒಂದು ನಂಬಿಕೆ ಬರಬೇಕು. ಆ ಮೇಲೆ ಇದ್ದಿದ್ದೇ, ಹೈ ಸ್ಪೀಡ್‌ ಜರ್ನಿ! ಅದನ್ನೇ ಗಮನದಲ್ಲಿಟ್ಟುಕೊಂಡು ಮಾಡಿದ ಸಿನಿಮಾ ಇದು. ಇದು ಮಾತ್ರವಲ್ಲ ಹಿಂದಿನ ಸಿನಿಮಾಗಳು ಕೂಡ. ಕಂಟೆಂಟ್‌ ಅಧಾರಿತ ಸಿನಿಮಾ ಮಾಡ್ಬೇಕು ಅನ್ನೋದಿತ್ತು, ಅದಕ್ಕಾಗಿಯೇ ಈ ಟೈಮ್‌ ತಗೊಂಡೆ.

ಅಂದ್ರೆ ಕಂಟೆಂಟ್‌ ಆಯ್ಕೆ ಮಾಡಿಕೊಳ್ಳುವಾಗಲೇ ಇದು ಎರಡ್ಮೂರು ವರ್ಷ ಆಗುತ್ತೆ ಅಂತ ನೀವೇ ಫಿಕ್ಸ್‌ ಆಗಿರ್ತೀರಾ?

ಸರ್‌, ಇವಾಗ ನಾಗರ ಹಾವು ಸಿನಿಮಾವನ್ನೇ ತೆಗೆದುಕೊಳ್ಳಿ, ಆ ಸಿನಿಮಾ ಮಾಡಿದ ಬಹಳಷ್ಟು ಕಲಾವಿದರು ಈಗಿಲ್ಲ. ಆದ್ರೂ ಆ ಸಿನಿಮಾ ನೋಡೋ ಜನ ಇದ್ದಾರೆ.  ಯಾಕಂದ್ರೆ ಕತೆ, ಜತೆಗೆ ಕಲಾವಿದರ ಅಭಿನಯ. ಅಂದ್ರೆ ಆ ಸಿನಿಮಾವನ್ನು ಆ ಕಾಲದಲ್ಲೇ ಅಷ್ಟು ಕಷ್ಟಪಟ್ಟು, ಅಷ್ಟು ಮುದ್ದಾಗಿ ಮಾಡಿದ್ದರು. ಅಂದ್ರೆ ಸಿನಿಮಾ ಅಂದ್ರೆ ಕಷ್ಟ ಪಟ್ಟು ಮಾಡ್ಬೇಕು ಅನ್ನೋದನ್ನು ನಂಬಿದವನು ನಾನು. ಯಾರು ಇಲ್ಲ ಅಂದ್ರುನೂ ಸಿನಿಮಾ ಇರುತ್ತೆ. ಸಿನಿಮಾ ನೋಡುವ ಪ್ರೇಕ್ಷಕರು ಇರ್ತಾರೆ. ಅದ್ಕಸ್ಕೋರ ಕಷ್ಟಪಟ್ಟು ಸಿನಿಮಾ ಮಾಡ್ಬೇಕು ಅನ್ನೋದು ನನ್ನ ಸಿದ್ದಾಂತ.

– ಅಂದ್ರೆ, ಒಂದು ಕಂಟೆಂಟ್‌ ಆಧಾರಿತ ಸಿನಿಮಾ ಮಾಡೋದಕ್ಕೆ  ಇಷ್ಟು ಟೈಮ್‌ ಬೇಕು ಅಂತೀರಾ?

ಒಂದು ಪಾತ್ರಕ್ಕೆ ಸಣ್ಣ ಆಗೋದು, ಮತ್ತೆ ದಪ್ಪ ಆಗೋದು ಅಷ್ಟು ಸುಲಭ ಅಲ್ಲ. ಇದೆಲ್ಲ ಲಾಂಗ್‌ ಪ್ರೊಸೆಸ್.‌ ಅದಕ್ಕೆ ಟೈಮ್‌ ಬೇಕು. ಹಾಗೆ ಟೈಮ್‌ ತಗೊಂಡು ಸಿನಿಮಾ ಮಾಡಿದ್ರೇ ಜನರಿಗೆ ಇಷ್ಟ ಆಗುತ್ತೆ. ಆ ರೀತಿಯಲ್ಲಿ ನಾನು ಟೈಮ್‌ ಬೇಕು ಅನ್ನೋದು.

– ನೀವೇನೋ, ಕಂಟೆಂಟ್‌ ಆಧಾರಿತ ಸಿನ್ಮಾ ಮಾಡ್ಬೇಕು ಅಂತ ಟೈಮ್‌ ಬೇಕು ಅಂತೀರಾ ಆದ್ರೆ ಫ್ಯಾನ್ಸ್‌ ಕೇಳ್ಬೇಕೆ, ವರ್ಷಕ್ಕೆ ಒಂದಾಂದ್ರೂ ಸಿನಿಮಾ ಮಾಡಿ ಅಂತಾರೆ…?

ಪ್ರಶ್ನೆ ಇದಿಷ್ಟೇ ಆಗಿದ್ದರೆ ಮುಗಿಯುತ್ತಿತ್ತು, ಅದ್ರೆ ಅದು ಮುಂದುವರೆಯುತ್ತೆ, ಹ್ಯಾಗೆ ಗೊತ್ತಾ? ವರ್ಷಕ್ಕೆ ಒಂದೋ ಎರಡೋ ಸಿನಿಮಾ ಮಾಡಿ ಎನ್ನುವ ಫ್ಯಾನ್ಸ್‌, ಒಳ್ಳೆಯ ಸಿನಿಮಾ ಮಾಡಿ ಅಂತಲೂ ಹೇಳ್ತಾರೆ. ಅದು ಕೂಡ ಇಂಪಾರ್ಟೆಂಟ್‌ ಅಲ್ವಾ?  ಅದನ್ನು ನಾನು ತಲೆಯಲ್ಲಿ ಇಟ್ಕೊಂಡು ಸಿನಿಮಾ ಮಾಡ್ಬೇಕು ಅಲ್ವಾ?

– ಖರಾಬು ಹಾಡಿನ ಬಗ್ಗೆ ಕೆಲವು ಕಾಮೆಂಟ್‌ ಬಂದಿದ್ವು, ನಾಯಕಿಯನ್ನು ಕೆಟ್ಟದಾಗಿ ನಡೆಸಿಕೊಳ್ಳಲಾಗಿದೆ ಅನ್ನೋದು ಆರೋಪ..

ಅವರಿಗೆ ಹಾಗೆನಿಸಿರಬಹದು, ಆದ್ರೆ ನಮಗೆ ಅದು ಹಾಗೆನಿಸಿಲ್ಲ. ನೆಗೆಟಿವ್‌ ಕಾಮೆಂಟ್‌ ಹಾಕಿದವರೆಲ್ಲ ಆ ಹಾಡು ನೋಡಿದ್ದಾರೆ, ಇಷ್ಟ ಪಟ್ಟಿದ್ದಾರೆ. ಅದೇ ಕಾರಣದಿಂದ ಅಲ್ವಾ, ಅದು ಅಷ್ಟು ದೊಡ್ಡ ಸಕ್ಸಸ್‌ ಕಂಡಿದ್ದು. ನಾನು ಪಾಸಿಟಿವ್‌ ಆಗಿಯೇ ತೆಗೆದುಕೊಂಡಿದ್ದೇನೆ. ಯಾಕೆ ಗೊತ್ತಾ, ಸಿನಿಮಾ ನೋಡಿದಾಗ ಅದರ ವಾಸ್ತವ ಗೊತ್ತಾಗುತ್ತದೆ. ಅದೇನು ಅಂತ ನಮಗೆ ಗೊತ್ತಿದೆ, ಹಾಗಾಗಿ ನಾನೇನು ಬೇಸರ ಪಟ್ಟುಕೊಂಡಿಲ್ಲ.

– ಸಿನಿಮಾ ಜರ್ನಿ ಶುರುವಾಗಿ ಹತ್ತು ವರ್ಷ, ಇಷ್ಟು ವರ್ಷದಲ್ಲಿ ನೀವು ಮಾಡಿರೋ ಸಿನಿಮಾಗಳ ಸಂಖ್ಯೆ ತುಂಬಾ ಕಮ್ಮಿ, ಆದ್ರೆ, ಸಿನಿಮಾ ಮಾಡ್ಮೇಕು ಅಂತ ಇಷ್ಟು ವರ್ಷದಲ್ಲಿ ಎಷ್ಟು ಕತೆ ಕೇಳಿದ್ದೀರಿ, ಎಷ್ಟು ರಿಜೆಕ್ಟ್‌ ಮಾಡಿದ್ದೀರಿ?

ನಾನು ಲೆಕ್ಕ ಹೇಳೋದಿಲ್ಲ. ಯಾಕಂದ್ರೆ, ನಾನು ಕೇಳಿದ ಕತೆಗಳೆಲ್ಲವೂ ಅತ್ಯುತ್ತಮ ಕತೆಗಳೆ, ಯಾವುದು ಸರಿ ಇರಲಿಲ್ಲ ಅಂತ ನಂಗಂತೂ ಅನಿಸಿಲ್ಲ. ಆದ್ರೆ, ನನಗೆ ಕಾಡುವ ಕತೆ ಬೇಕು ಅಂತ ನಿರೀಕ್ಷೆ ಮಾಡುತ್ತಿದೆ. ಅಂತಹ ಕತೆಗಳು ಸಿಕ್ಕಾಗ ಸಿನಿಮಾ ಮಾಡ್ತಾ ಬಂದಿದ್ದೇನೆ. ಮುಂದೆ ಕೂಡ ನಂದು ಇದೇ ಪಾಲಿಸಿ.

– ಕತೆ ಕೇಳುವಾಗ ಈಗಲೂ ನಟ ಅರ್ಜುನ್‌ ಸರ್ಜಾ ಅವರು ಇರ್ತಾರಾ?

ಖಂಡಿತಾ, ಅವರ ಅನುಭವಕ್ಕೆ ನಾನೇನು ಅಲ್ಲ. ಯಾವುದೇ ಸಿನಿಮಾ ಒಪ್ಪಿಕೊಳ್ಳುವಾಗ ಮೊದಲು ಅಂಕಲ್‌ ಜತೆಗೆ ಕುಳಿತು ಕತೆ ಕೇಳ್ತೀನಿ. ಆಮೇಲೆ ಸರಿ -ತಪ್ಪು ಯೋಚಿಸಿ ಡಿಸೈಡ್‌ ಮಾಡ್ತೀವಿ.

– ಮುಂದೆ ನೀವು ನಿರೀಕ್ಷೆ ಮಾಡುವ ಕತೆಗಳ ಆಯ್ಕೆ ಕೂಡ ಕಂಟೆಂಟ್‌ ಆಧಾರಿತವಾಗಿರುತ್ತಾ?

ಈಗ ಇರೋದೇ ಯೂನಿವರ್ಷನ್‌ ಸಬ್ಜೆಕ್ಟ್‌ ಆಧಾರಿತ ಕತೆಗಳು. ಯಾಕಂದ್ರೆ. ಕಾಲಕ್ಕೆ ತಕ್ಕಂತೆ ನಾವೇವಾದ್ರೂ ಮಾಡ್ಬೇಕು ಅಂದ್ರೆ ಅಂತಹ ಕತೆಗಳು ಬೇಕು. ಅಳೋದು, ನಗೋದು ಯುನಿವರ್ಷಲ್‌ ಅಲ್ವಾ? ಅದಕ್ಕೆ ಭಾಷೆ, ದೇಶದ ಗಡಿ ಇಲ್ಲ. ಅಂತಹ ಕತೆಗಳು ಬಂದ್ರೆ, ಬೇರೆ ಭಾಷೆಯ ಸಿನಿಮಾಗಳ ಹಾಗೆ ಬೇರೆ ಕಡೆ ಕೂಡ ಹೋಗಬಹುದು.

– ʼದುಬಾರಿʼ ಚಿತ್ರದ ಜತೆಗೆ ಮುಂದೆ ಯಾವೆಲ್ಲ ನಿರ್ದೇಶಕರ ಜತೆಗೆ ಸಿನಿಮಾ ಮಾಡ್ತಿದ್ದೀರಿ?

ಸದ್ಯಕ್ಕೀಗ ದುಬಾರಿ. ಮುಂದೆ ನಿರ್ದೇಶಕ ರಾಘವೇಂದ್ರ ಹೆಗಡೆ ಅವರ ಜತೆಗೆ ಒಂದು ಪ್ರಾಜೆಕ್ಟ್‌ ಇದೆ. ಇದಿಷ್ಟು ಮಾತ್ರ.

– ಚಿತ್ರದ ನಾಯಕಿ ರಶ್ಮಿಕಾ ಮಂದಣ್ಣ ನಿಮ್ಮ ಸಿನಿಮಾದ ಪ್ರಚಾರಕ್ಕೆ ಬರುತ್ತಿಲ್ವಂತೆ ಯಾಕೆ?

ಅದೇನು ನಂಗೆ ಗೊತ್ತಿಲ್ಲ. ಅವರು ಅವರದೇ ಕೆಲಸಗಳಲ್ಲಿ ಬ್ಯುಸಿಯಾಗಿರಬಹುದು. ಮುಂದೆ ಬರಬಹುದು. ಅಷ್ಟೇ ನಂಗೆ ಗೊತ್ತು.

– ಪೊಗರು ಚಿತ್ರದ ಹೈಲೈಟ್ಸ್‌ ಏನು ?

ಮೊದಲಿಗೆ ಕತೆ. ಅದರ ಜತೆಗೆ ಮೇಕಿಂಗ್.‌ ಉಳಿದಂತೆ ತುಂಬಾ ವಿಷಯ ಇವೆ. ಅದೆಲ್ಲದ್ದಕ್ಕೂ ಸಿನಿಮಾ ನೋಡಿದ್ರೆ ಉತ್ತರ ಸಿಗುತ್ತೆ.

– ಕೊರೋನಾ ಭಯದ ನಡುವೆಯೇ ನಿಮ್ಮ ಸಿನಿಮಾ ರಿಲೀಸ್‌ ಆಗುತ್ತಿದೆ ಅಂದಾಗ ಹೇಗನಿಸಿತು?

ಮೊದಲಿಗೆ ಭಯ ಇತ್ತು. ಆಮೇಲೆ ಸಿನಿಮಾ ಮೇಲೆ ನಂಬಿಕೆ ಇತ್ತು. ಜನರಿ ಸಿನಿಮಾ ಇಷ್ಟವಾಗುತ್ತೆ ಎನ್ನುವ ಕಾನ್ಪೆಡೆನ್ಸ್‌ ಬಂತು. ಈಗ ಓಕೆ.

Categories
ಸಿನಿ ಸುದ್ದಿ

ಎ ವಿಲನ್‌ ಫ್ರಮ್‌ ಕುಂದಾಪುರ! ಭಲೇ ವಜ್ರಾಂಗ್

ಕನ್ನಡಕ್ಕೆ ಮತ್ತೊಬ್ಬ ವಜ್ರದಂತಹ ಖಳನಟ

ಹೀರೋನೇ ಆಗಬೇಕಿಲ್ಲ, ವಿಲನ್‌ ಪಾತ್ರಕ್ಕೂ ಸೈ

ನಾನು ಇಲ್ಲಿಗೆ ಬಂದಿರೋದೇ ಒಬ್ಬ ಕಲಾವಿದ ಆಗಬೇಕು ಅಂತಾನೇ ಹೊರತು, ನಾನೊಬ್ಬ ಹೀರೋ ಆಗಬೇಕು ಅಂತಲ್ಲ. ಹೀರೋ ಪಾತ್ರಗಳೇ ಬೇಕು ಎಂಬ ಡಿಮ್ಯಾಂಡ್‌ ಕೂಡ ಇಲ್ಲ. ವಿಲನ್‌ ಪಾತ್ರವಿರಲಿ, ಹೀರೋ ಪಾತ್ರವಿರಲಿ ಎರಡರಲ್ಲೂ ನಟನೆ ಇದೆ. ಹಾಗಾಗಿ ಅಲ್ಲಿ ವಿಭಿನ್ನ ಎನಿಸಲ್ಲ. ಪಾತ್ರದಲ್ಲಿ ತೂಕವಿದೆಯಾ ಎಂಬುದನ್ನು ನೋಡಿ ನಾನು ಪಾತ್ರ ಆಯ್ಕೆ ಮಾಡಿಕೊಳ್ತೀನಿ. ಒಟ್ಟಾರೆ, ಮಾಡುವ ಪಾತ್ರ ಜನರಿಗೆ ಇಷ್ಟವಾಗಬೇಕು, ಗುರುತಿಸುವಂತಿದ್ದರೆ ಸಾಕು.

ಮಾಡೆಲ್‌ನಿಂದ ಸಿನಿಮಾವರೆಗೂ…
ಕನ್ನಡ ಚಿತ್ರರಂಗಕ್ಕೆ ಮಾಡೆಲ್‌ ಕ್ಷೇತ್ರದಿಂದ ಬಂದವರ ಸಂಖ್ಯೆಗೇನೂ ಕಮ್ಮಿ ಇಲ್ಲ. ಸಾಕಷ್ಟು ಮಂದಿ ಮಾಡೆಲ್‌ನಿಂದ ಎಂಟ್ರಿಯಾದವರ ಪೈಕಿ, ಕೆಲವರಷ್ಟೇ ಇಲ್ಲಿ ಗಟ್ಟಿನೆಲೆ ಕಂಡುಕೊಳ್ಳಲು ಸಾಧ್ಯವಾಗಿದೆ. ಅಂತಹವರ ಸಾಲಿಗೆ ವಜ್ರಾಂಗ್‌  ಶೆಟ್ಟಿ ಕೂಡ ಒಬ್ಬರು. ಅಜಾನುಬಾಹುನಂತಿರುವ ವಜ್ರಾಂಗ್‌  ಶೆಟ್ಟಿ , ಕನ್ನಡ ಚಿತ್ರರಂಗಕ್ಕೆ ಬಂದು ಆರು ವರ್ಷಗಳು ಗತಿಸಿವೆ. ಈ ಆರು ವರ್ಷಗಳಲ್ಲಿ ಅವರು ಹದಿನೈದು ಸಿನಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ಹೊಸಬರಿಂದ ಹಿಡಿದು ಸ್ಟಾರ್‌ ನಟರ ಸಿನಿಮಾಗಳಲ್ಲಿ ವಿಲನ್‌ ಆಗಿ ಮಿಂಚಿದ್ದಾರೆ ಅನ್ನೋದು ವಿಶೇಷ. ತಮ್ಮ ಸಿನಿಜರ್ನಿ ಕುರಿತು ಸ್ವತಃ ವಜ್ರಾಂಗ್‌  ಶೆಟ್ಟಿ  “ಸಿನಿಲಹರಿ” ಜೊತೆ ಒಂದಷ್ಟು ಮಾತನಾಡಿದ್ದಾರೆ.

ಓವರ್‌ ಟು ವಜರಂಗ್‌ ಶೆಟ್ಟಿ…
“ನಾನು ಮೂಲತಃ ಕುಂದಾಪುರ ತಾಲೂಕಿನ ಟೆಕ್ಕಟ್ಟೆ ಗ್ರಾಮದ ಸಾಮಾನ್ಯ ಹುಡುಗ. ಬಿಸಿಎ ಓದು ಮುಗಿಸಿ, ನೇರವಾಗಿ ಬೆಂಗಳೂರಿಗೆ ಬಂದವನು. ಸಿನಿಮಾ ಎಂಬ ಕನಸೇ ಕಾಣದ ನನಗೆ ಸಿನಿಮಾ ಅನ್ನೋ ಅವಕಾಶ ತಾನಾಗಿಯೇ ಬಂತು. 2014ರಲ್ಲಿ ನಾನು ಈ ಬಣ್ಣದ ಲೋಕವನ್ನು ಪ್ರವೇಶ ಮಾಡಿದೆ. “ಸಿದ್ಧಾರ್ಥ” ನನ್ನ ಅಭಿನಯದ ಮೊದಲ ಚಿತ್ರ. ವಿನಯ್‌ರಾಜಕುಮಾರ್‌ ಎದುರು ವಿಲನ್‌ ಆಗಿ ನಟಿಸಿದ ಖುಷಿ ಆ ಸಿನಿಮಾ ಮೂಲಕ ಹೆಚ್ಚಿತು. ಖಳನಾಯಕನಾಗಿ ಮೊದಲ ಸಲ ತೆರೆ ಮೇಲೆ ರಾರಾಜಿಸಿದ ಆ ಕ್ಷಣ ನಿಜಕ್ಕೂ ಅದ್ಭುತ.

ಆ ಸಿನಿಮಾ ಇನ್ನೇನು ಶೂಟಿಂಗ್‌ ನಡೆಯುತ್ತಿರುವಾಗಲೇ ನನಗೆ “ನಮಕ್‌ ಹರಾಮ್‌” ಚಿತ್ರದಲ್ಲೂ ಖಳನಟನಾಗಿ ನಟಿಸುವ ಅವಕಾಶ ಸಿಕ್ಕಿತು. ಆ ಚಿತ್ರದ ಚಿತ್ರೀಕರಣ ಇರುವಾಗಲೇ, “ಮಂತ್ರಂ” ಎಂಬ ಹೊಸ ಚಿತ್ರಕ್ಕೆ ನಾನು ಹೀರೋ ಆಗಿಯೂ ನಟಿಸಿದೆ. ಅದಾದ ಬಳಿಕ ವೆಂಕಟ್‌ ಭಾರಧ್ವಜ್‌ ಅವರ ನಿರ್ದೇಶನದ “ಬಬ್ಲೂಷ” ಚಿತ್ರದಲ್ಲಿ ಬಬ್ಲೂಷ ಎಂಬ ಮೇಜರ್‌ ಪಾತ್ರ ನಿರ್ವಹಿಸಿದೆ. ಆ ಸಿನಿಮಾದ ನಟನೆಗೆ ಎಲ್ಲೆಡೆಯಿಂದ ಒಳ್ಳೆಯ ಮೆಚ್ಚುಗೆಯೂ ಸಿಕ್ಕಿತು. ನಂತರ “ಮಾದ ಮತ್ತು ಮಾನಸಿ” ಚಿತ್ರದಲ್ಲಿ ಸೆಕೆಂಡ್‌ ಲೀಡ್‌ ಮಾಡಿದೆ. ಅದರೊಂದಿಗೆ “ಕಿನಾರೆ” ಸಿನಿಮಾದಲ್ಲೂ ಸೆಕೆಂಡ್‌ ಲೀಡ್ ಪಾತ್ರ ಮಾಡಿದೆ. ಮಾಲಾಶ್ರೀ ಅವರ “ಉಪ್ಪು ಹುಳಿ ಖಾರ” ಚಿತ್ರದಲ್ಲಿ ಅವರ ಎದುರು ವಿಲನ್‌ ಆಗಿಯೂ ನಟಿಸಿದ್ದೇನೆ. ಉಳಿದಂತೆ ಹೊಸಬರ “ಕಿಸ್‌” ಚಿತ್ರದಲ್ಲೂ ವಿಲನ್.‌ ಅದೇನೋ ಗೊತ್ತಿಲ್ಲ. ಬಹುತೇಕ ಸಿನಿಮಾಗಳಲ್ಲಿ ಖಳನಟನ ಪಾತ್ರಗಳೇ ಹುಡುಕಿ ಬರುತ್ತಿವೆ” ಎನ್ನುತ್ತಾರೆ ವಜ್ರಾಂಗ್‌  ಶೆಟ್ಟಿ .

ಪಾಸಿಟಿವ್-ನೆಗೆಟಿವ್‌ ಎರಡಕ್ಕೂ ಸೈ
ದರ್ಶನ್‌ ಜೊತೆ ಎರಡು ಸಿನಿಮಾಗಳಲ್ಲಿ ವಿಲನ್‌ ಆಗಿ ನಟಿಸಿರುವ ವಜ್ರಾಂಗ್‌  ಶೆಟ್ಟಿ ಅವರಿಗೆ ಹೆಮ್ಮೆ ಇದೆ. “ಯಜಮಾನ” ಚಿತ್ರದಲ್ಲೊಂದು ಸಣ್ಣ ಪಾತ್ರ ನಿರ್ವಹಿಸಿದ ಬಳಿಕ ಪುನಃ, “ರಾಬರ್ಟ್‌” ಚಿತ್ರದಲ್ಲಿ ಒಂದು ನೆಗೆಟಿವ್‌ ರೋಲ್‌ ಮಾಡಿದ್ದೇನೆ. ಯಾವಾಗ “ಯಜಮಾನʼ ಸಿನಿಮಾದಲ್ಲಿ ಸಣ್ಣದ್ದಾಗಿ ಕಾಣಿಸಿಕೊಂಡೆನೋ, ಅಲ್ಲಿಂದ ಸಾಕಷ್ಟು ಅವಕಾಶಗಳು ಹುಡುಕಿ ಬಂದಿದ್ದುಂಟು. ಅವೆಲ್ಲವೂ ನೆಗೆಟಿವ್‌ ಪಾತ್ರಗಳೇ. ನನಗೆ ನೆಗೆಟಿವ್‌, ಪಾಸಿಟಿವ್‌ ಬಗ್ಗೆ ಗೊತ್ತಿಲ್ಲ. ಒಂದೊಳ್ಳೆಯ ಪಾತ್ರವಿದ್ದರೆ, ಅದು ನೆಗೆಟಿವ್‌ ಇರಲಿ, ಪಾಸಿಟಿವ್‌ ಆಗಿರಲಿ ಮಾಡ್ತೀನಿ. ಪಾತ್ರದಲ್ಲಿ ತೂಕವಿರಬೇಕಷ್ಟೇ.

ಯಾವುದೇ ಪಾತ್ರವಿದ್ದರೂ ಬ್ಯಾಲೆನ್ಸ್‌ ಮಾಡಿಕೊಂಡು ಕೆಲಸ ಮಾಡ್ತೀನಿ. ಸದ್ಯಕ್ಕೆ ರಿಲೀಸ್‌ಗೆ ಈಗ ನಾಲ್ಕು ಚಿತ್ರಗಳಿವೆ. ಈಗ ಪುನೀತ್‌ರಾಜಕುಮಾರ್‌ ಅಭಿನಯದ “ಜೇಮ್ಸ್‌” ಸಿನಿಮಾದಲ್ಲಿ ನಟಿಸುತ್ತಿದ್ದೇನೆ. ದಿಗಂತ್‌ ಅವರ “ಮಾರಿಗೋಲ್ಡ್‌” ಚಿತ್ರದಲ್ಲೂ ನೆಗೆಟಿವ್‌ ರೋಲ್.‌ “ರೂಮ್‌ಬಾಯ್‌” ಸಿನಿಮಾದಲ್ಲೂ ನೆಗೆಟಿವ್‌ ಶೇಡ್‌ ಇದೆ. ಉಳಿದಂತೆ ಎರಡು ಹೊಸ ಚಿತ್ರಗಳ ಮಾತುಕತೆ ನಡೆಯುತ್ತಿದೆ. ಆ ಪೈಕಿ ಒಂದು ಲೀಡ್‌ ಪಾತ್ರ, ಇನ್ನೊಂದು ದೊಡ್ಡ ಬ್ಯಾನರ್‌ನ ಚಿತ್ರ” ಎಂದು ವಿವರ ಕೊಡುತ್ತಾರೆ ವಜ್ರಾಂಗ್‌  ಶೆಟ್ಟಿ .‌

ಗಾಡ್‌ ಫಾದರ್‌ ಇಲ್ಲದೇ ಬಂದವನು
ನಾನು ಇಲ್ಲಿಗೆ ಬಂದಿರೋದೇ ಒಬ್ಬ ಕಲಾವಿದ ಆಗಬೇಕು ಅಂತಾನೇ ಹೊರತು, ನಾನೊಬ್ಬ ಹೀರೋ ಆಗಬೇಕು ಅಂತಲ್ಲ. ಹೀರೋ ಪಾತ್ರಗಳೇ ಬೇಕು ಎಂಬ ಡಿಮ್ಯಾಂಡ್‌ ಕೂಡ ಇಲ್ಲ. ವಿಲನ್‌ ಪಾತ್ರವಿರಲಿ, ಹೀರೋ ಪಾತ್ರವಿರಲಿ ಎರಡರಲ್ಲೂ ನಟನೆ ಇದೆ. ಹಾಗಾಗಿ ಅಲ್ಲಿ ವಿಭಿನ್ನ ಎನಿಸಲ್ಲ. ಪಾತ್ರದಲ್ಲಿ ತೂಕವಿದೆಯಾ ಎಂಬುದನ್ನು ನೋಡಿ ನಾನು ಪಾತ್ರ ಆಯ್ಕೆ ಮಾಡಿಕೊಳ್ತೀನಿ. ಒಟ್ಟಾರೆ, ಮಾಡುವ ಪಾತ್ರ ಜನರಿಗೆ ಇಷ್ಟವಾಗಬೇಕು, ಗುರುತಿಸುವಂತಿದ್ದರೆ ಸಾಕು. ನಿಜ ಹೇಳುವುದಾದರೆ, ನಾನಿಲ್ಲಿಗೆ ಬರುವ ಮುನ್ನ, ಸಿನಿಮಾ ಕನಸು ಕಂಡವನಲ್ಲ.

2014 ರಲ್ಲಿ ನಾನು “ಮಿಸ್ಟರ್‌ ‌ ಕುಂದಾಪುರ” ಆದವನು. ಅಲ್ಲಿಂದ ಬೆಂಗಳೂರು ಬರುವುದಕ್ಕೆ ಒಂದು ಕಾರಣ ಸಿಕ್ತು. ಇಲ್ಲಿಗೆ ಬಂದು ಒಂದು ಕಂಪೆನಿಯಲ್ಲಿ ವರ್ಷ ಕೆಲಸ ಮಾಡಿದೆ. ಆದರೆ, ಅದೇಕೋ ನನಗೆ ಇಂಟ್ರೆಸ್ಟ್‌ ಎನಿಸಲಿಲ್ಲ. ನನ್ನ ಕೆಲಸ ಇದಲ್ಲ ಅನ್ನಿಸತೊಡಗಿತು. ಮಾಡೆಲ್‌ ಕ್ಷೇತ್ರದಿಂದ ಬಂದವನಾಗಿದ್ದರಿಂದ ಕ್ರಮೇಣ ನನಗೂ ಎಲ್ಲೋ ಒಂದ ಕಡೆ ಸಿನಿಮಾ ಮೇಲೆ ಒಲವು ಮೂಡ ತೊಡಗಿತು. ಆದರೆ, ಗಾಡ್‌ಫಾದರ್‌ ಅನ್ನೋರು ನನಗೆ ಯಾರೂ ಇಲ್ಲ. ಹೇಗೆ ಸಿನಿಮಾರಂಗವನ್ನು ತಲುಪುವುದು ಎಂಬ ಪ್ರಶ್ನೆ ಕಾಡಿದ್ದು ನಿಜ. ಹೀಗಿರುವಾಗಲೇ ಗೆಳೆಯರೊಬ್ಬರ ಗೆಳೆಯರ ಮಗನ ಸಿನಿಮಾವೊಂದು ನಡೆಯುತ್ತಿತ್ತು. ಅಲ್ಲಿಗೆ ಕರೆದುಕೊಂಡು ಹೋದ ಗೆಳೆಯನಿಂದ ಒಂದು ಸಣ್ಣ ಪಾತ್ರ ಮಾಡುವ ಅವಕಾಶ ಸಿಕ್ಕಿತು. ನಂತರ “ಸಿದ್ಧಾರ್ಥ” ಸಿನಿಮಾದ ಆಡಿಷನ್‌ಗೆ ಹೋದೆ. ಸ್ವಲ್ಪ ದಿನಗಳ ಬಳಿಕ ಆ ತಂಡದಿಂದ ಆಯ್ಕೆಯಾದ ಬಗ್ಗೆ ಫೋನ್‌ ಬಂತು. ಆ ಸಿನಿಮಾದಲ್ಲಿ ನಟಿಸಿದ್ದೇ ತಡ, ಅಲ್ಲಿಂದ ಇಲ್ಲಿಯವರೆಗೆ ತಿರುಗಿ ನೋಡಿಲ್ಲ. ಬಂದ ಪಾತ್ರಗಳನ್ನು ಇಷ್ಟಪಟ್ಟು, ಪ್ರೀತಿಯಿಂದ ಮಾಡುತ್ತಿದ್ದೇನೆ.

ಗಟ್ಟಿನೆಲೆ ಕಾಣೋ ಆಸೆ
ಈವರೆಗೆ ನನಗೆ ಸಿನಿಮಾ ಅತೀವ ತೃಪ್ತಿ ಕೊಟ್ಟಿದೆ. ಇಷ್ಟವಾದ ಕೆಲಸ ಬಿಟ್ಟು ಬಂದಿದ್ದಕ್ಕೂ ಈ ಕಲೆ ನನ್ನ ಕೈ ಹಿಡಿದಿದೆ. ಸಿನಿಮಾ ನನಗೆ ಅನ್ನ ಕೊಟ್ಟಿದೆ. ಒಳ್ಳೆಯ ಗೌರವವನ್ನೂ ಕೊಟ್ಟಿದೆ. ಅಪಾರ ಜನರ ಪ್ರೀತಿಯನ್ನೂ ನೀಡಿದೆ. ಇದಕ್ಕಿಂತ ಬೇರೇನು ಬೇಕು. ಸದ್ಯಕ್ಕೆ ಬೇರೆ ಭಾಷೆಯಿಂದ ಅವಕಾಶ ಬಂದಿಲ್ಲ. ಹಾಗೊಂದು ವೇಳೆ ಒಳ್ಳೆಯ ಪಾತ್ರ ಬಂದರೆ ಖಂಡಿತ ಮಾಡ್ತೀನಿ. ಆದರೆ, ಮೊದಲು ಕನ್ನಡಕ್ಕೆ ಆದ್ಯತೆ ನೀಡ್ತೀನಿ. ಇಲ್ಲೇ ಗಟ್ಟಿನೆಲೆಯೂರಬೇಕು ಎಂಬ ಮಹಾದಾಸೆ ನನ್ನದು. ಸಿನಿಮಾಗೆ ಬರುವ ಮುನ್ನ ಯಾವುದರಲ್ಲೂ ಪಕ್ವತೆ ಇರಲಿಲ್ಲ.

ಇಲ್ಲಿ ಅವಕಾಶಗಳು ಬರತೊಡಗಿದ ಮೇಲೆ, ನಟನೆ ಕಲಿತೆ, ಡ್ಯಾನ್ಸ್‌ ಕಲಿತೆ, ಸ್ಟಂಟ್‌ ಕೂಡ ಕಲಿತಿದ್ದೇನೆ. ಒಬ್ಬ ನಟನಿಗೆ ಬೇಕಾದ ಎಲ್ಲಾ ಕ್ವಾಲಿಟೀಸ್‌ ಬಗ್ಗೆಯೂ ತಿಳಿದುಕೊಂಡು ಅದನ್ನೇ ಫಾಲೋ ಮಾಡುತ್ತಿದ್ದೇನೆ. ರೆಗ್ಯುಲರ್‌, ವ್ಯಾಯಾಮ, ಜಿಮ್‌ ಮಾಡುತ್ತಿದ್ದೇನೆ. ಒಂದಷ್ಟು ಹೊಸ ಬಗೆಯ ಚಿತ್ರಗಳನ್ನು ನೋಡುತ್ತಲೇ ಕಲಿಯುತ್ತಿದ್ದೇನೆ. ಇವತ್ತು ನಾನೇನೆ ಆಗಿದ್ದರೂ, ಅದು ನನ್ನ ಅಪ್ಪ, ಅಮ್ಮ, ಅಕ್ಕಂದಿರ ಸಹಕಾರದಿಂದ. ಅವರ ಸಹಕಾರ ಇರದಿದ್ದರೆ ನಾನು ಇಲ್ಲಿಗೆ ಬರುತ್ತಿರಲಿಲ್ಲ. ನಟ ಆಗುತ್ತಿರಲಿಲ್ಲ. ಹಾಗೆಯೇ ನನಗೆ ಅವಕಾಶ ಕೊಟ್ಟ ನಿರ್ದೇಶಕ, ನಿರ್ಮಾಪಕರ ಸಹಕಾರವನ್ನು ಎಂದಿಗೂ ಮರೆಯೋದಿಲ್ಲ ಎನ್ನುತ್ತಾರೆ ವಜ್ರಾಂಗ್‌  ಶೆಟ್ಟಿ .

Categories
ಸಿನಿ ಸುದ್ದಿ

ರಚಿತಾಗೆ ಐ ಲವ್‌ ಯೂ ರಚ್ಚು ಅಂದ ಅಜೇಯ್‌ ರಾವ್‌

ಪೆಂಟಗನ್‌ ಬೆನ್ನಲೇ ಜೀ ಸಿನಿಮಾಸ್‌ ಮೂಲಕ ಮೂರನೇ ಸಿನಿಮಾ ಅನೌನ್ಸ್‌ ಮಾಡಿದ ಗುರು ದೇಶ ಪಾಂಡೆ

ನಿರ್ದೇಶಕ ಗುರು ದೇಶಪಾಂಡೆ ಮತ್ತೊಂದು ಸಿನಿಮಾದ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಈಗಾಗಲೇ ʼಜಂಟಲ್‌ಮನ್‌ʼ ಚಿತ್ರದ ಬೆನ್ನಲಶ ಅವರು ಪೆಂಟಗನ್‌ ಹೆಸರಿನ ಆಂಥಾಲಜಿ ಸಿನಿಮಾ ನಿರ್ಮಿಸಿ ತೆರೆಗೆ ತರಲು ರೆಡಿಯಾಗಿರುವುದು ನಿಮಗೂ ಗೊತ್ತು. ಮೊನ್ನೆಯಷ್ಟೇ ಆ ಚಿತ್ರದ ಮೋಷನ್‌ ಪೋಸ್ಟರ್‌ ಕೂಡ ಲಾಂಚ್‌ ಆಯಿತು. ಅವತ್ತೇ ಗುರು ದೇಶಪಾಂಡೆ ತಮ್ಮದೇ ನಿರ್ಮಾಣದಲ್ಲಿ ಮತ್ತೊಂದು ಚಿತ್ರ ಶುರುವಾಗಲಿದೆ ಅಂದಿಂದ್ರು. ಅಂತೆಯೇ ಈಗ ಆ ಚಿತ್ರದ ಮಾಹಿತಿ ಈಗ ರಿವೀಲ್‌ ಆಗಿದೆ. ಅದಕ್ಕೆ ” ಐ ಲವ್‌ ಯೂ ರಚ್ಚುʼ ಎನ್ನುವ ಟೈಟಲ್‌ ಕೂಡ ಫಿಕ್ಸ್‌ ಆಗಿದೆ.

ವಿಶೇಷ ಅಂದ್ರೆ, ಕೃಷ್ಣ ಅಜೇಯ್‌ ರಾವ್‌ ನಾಯಕ. ಅವರಿಗೆ ಇಲ್ಲಿ ಜೋಡಿ ಡಿಂಪಲ್‌ ಕ್ವೀನ್‌ ರಚಿತಾ ರಾಮ್.‌ ಇನ್ನು ವಿಶೇಷ ಅಂದ್ರೆ ಅಜೇಯ್‌ ರಾವ್‌ ಹಾಗೂ ರಚಿತಾ ರಾಮ್‌ ಕಾಂಬಿನೇಷನ್‌ ಫಸ್ಟ್‌ ಟೈಮ್‌ ಜೋಡಿ ಆಗಿದೆ. ಈ ಚಿತ್ರಕ್ಕೆ ಹೆಸರಾಂತ ನಿರ್ದೇಶಕ ಶಶಾಂಕ್‌ ರಾಜ್‌ ಕತೆ ಬರೆದಿದ್ದಾರೆ. ಅಜೇಯ್‌ ರಾವ್‌ ಹಾಗೂ ನಿರ್ದೇಶಕ ಶಶಾಂಕ್‌ ಕಾಂಬಿನೇಷನ್‌ ಸಕ್ಸಸ್‌ ಕಂಡ ಜೋಡಿ. ಇವರಿಬ್ಬರ ಜೋಡಿಯಲ್ಲಿ ಕೃಷ್ಣ ಸರಣಿಗಳಉ ಈಗಾಗಲೇ ಸಾಕಷ್ಟು ಗೆಲುವು ಕಂಡಿವೆ. ಅದೇ ಕತೂಹಲ ಈಗ ಈ ಚಿತ್ರದ ಮೇಲೂ ಇದೆ.

ಗುರು ದೇಶ ಪಾಂಡೆ ತಮ್ಮದೇ ಜೀ ಸಿನಿಮಾಸ್‌ ಮೂಲಕ ನಿರ್ಮಾಣ ಮಾಡುತ್ತಿರುವ ಮೂರನೇ ಸಿನಿಮಾ ಇದು. ಇನ್ನು ಜೀ ಸಿನಿಮಾಸ್‌ ಈಗಾಗಲೇ ಹೊಸಬರಿಗೆ ಅವಕಾಶ ಕೊಟ್ಟ ಸಂಸ್ಥೆ. ಅಂತೆಯೇ ಈ ಚಿತ್ರಕ್ಕೆ ನವ ಪ್ರತಿಭೆ ಶಂಕರ್‌ ರಾಜ್‌ ಆಕ್ಷನ್‌ ಕಟ್‌ ಹೇಳುತ್ತಿದ್ದಾರೆ. ಈಗಾಗಲೇ ಗುರುದೇಶ ಪಾಂಡೆ ಸಿನಿಮಾಗಳಲ್ಲೂ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ ಅನುಭವ ಇದೆ. ಖ್ಯಾತ ಸಂಗೀತ ನಿರ್ದೇಶಕ ಮಣಿಕಾಂತ್‌ ಕದ್ರಿ ಸಂಗೀತ ನೀಡುತ್ತಿದ್ದಾರೆ. ಚಿತ್ರಕ್ಕೆ ಇಷ್ಟರಲ್ಲಿಯೇ ಚಿತ್ರಕ್ಕೆ ಚಿತ್ರೀಕರಣಕ್ಕೆ ಚಾಲನೆ ಸಿಗಲಿದೆಯಂತೆ.

Categories
ಸಿನಿ ಸುದ್ದಿ

ಸ್ಕೂಲ್‌ ಬಾಯ್‌ ಧ್ರುವ ! ಪೊಗರು ಚಿತ್ರದ ಸ್ಟುಡೆಂಟ್‌ ಪಾತ್ರದ ಗೆಟಪ್‌ ಇದು

ಈ ಪಾತ್ರಕ್ಕಾಗಿ  ವರ್ಷಗಟ್ಟಲೆ ಶ್ರಮ

ಯಾವುದೇ ಒಬ್ಬ ಹೀರೋ ಇರಲಿ, ತನ್ನ ಪಾತ್ರಕ್ಕೆ ತಕ್ಕಂತೆ ರೆಡಿಯಾಗಿಬಿಡುತ್ತಾನೆ. ಅದು ಗೆಟಪ್‌ ಆಗಿದ್ದರೆ ಸ್ವಲ್ಪ ಸುಲಭ. ಆದರೆ, ಇಡೀ ದೇಹವನ್ನೇ ವರ್ಕೌಟ್‌ ಮಾಡಿಕೊಂಡು ಕ್ಯಾಮೆರಾ ಮುಂದೆ ನಿಲ್ಲುವುದೆಂದರೆ ಸುಮ್ಮನೇನಾ? ಧ್ರುವ ಸರ್ಜಾ, “ಪೊಗರು” ಚಿತ್ರದಲ್ಲಿ ಹತ್ತನೇ ತರಗತಿ ಹುಡುಗನ ಪಾತ್ರ ಮಾಡಿದ್ದಾರೆ. ಹೌದು, ಧ್ರುವ ಸರ್ಜಾ ಅವರು ಆ ಪಾತ್ರಕ್ಕಾಗಿಯೇ ಸಾಕಷ್ಟ ತಯಾರಿ ಮಾಡಿಕೊಂಡೇ ಕ್ಯಾಮೆರಾ ಮುಂದೆ ನಿಂತಿದ್ದಾರೆ. ಎಲ್ಲರಿಗೂ ಒಂದು ಪ್ರಶ್ನೆ ಸಹಜವಾಗಿಯೇ ಎದುರಾಗಬಹುದು.

ಧ್ರುವ ಸರ್ಜಾ ಅವರು, ಸಿಕ್ಕಾಪಟ್ಟೆ ದಪ್ಪಗಿದ್ದಾರೆ, ಅವರು ಸ್ಕೂಲ್‌ ಪಾತ್ರ ಮಾಡೋಕೆ ಸಾಧ್ಯನಾ? ಅದರಲ್ಲೂ ಎಸ್ಸೆಸ್ಸೆಲ್ಸಿ ಹುಡುಗನ ಪಾತ್ರ ಅಂದರೆ ಅಸಾಧ್ಯ ಅಂತೆಲ್ಲಾ ಮಾತಾಡಿಕೊಳ್ಳಬಹುದು. ಆದರೆ, ಧ್ರುವ ಸರ್ಜಾ ಅವರು ಆ ಪಾತ್ರದಲ್ಲಿ ಜೀವಿಸಿದ್ದಾರೆ ಎಂದರೆ ನಂಬಲೇಬೇಕು. ಅವರು ತಮ್ಮ ದೇಹದ ತೂಕ ಇಳಿಸಿಕೊಂಡೇ ಪಾತ್ರ ನಿರ್ವಹಿಸಿದ್ದಾರೆ. ಅದಕ್ಕಾಗಿ ಅವರು ವರ್ಷಗಟ್ಟಲೇ ತಯಾರಿ ಮಾಡಿಕೊಂಡಿದ್ದುಂಟು.


ಧ್ರುವ ಸರ್ಜಾ ಅವರು “ಪೊಗರು” ಚಿತ್ರದಲ್ಲಿ ಸ್ಕೂಲ್ ಬಾಯ್ ಅಂದರೆ, ಜನರು ನಂಬಲಕ್ಕಿಲ್ಲ. ಇದು ನಂಬಲು ಅಸಾದ್ಯವಾದರೂ ನಂಬಲೇ ಬೇಕು. ಆ ಪಾತ್ರಕ್ಕಾಗಿಯೇ ಅವರು ಮೂರು ವರ್ಷ ಸಮಯ ತೆಗೆದುಕೊಂಡಿದ್ದಲ್ಲದೆ, ಮೂರು ವರ್ಷಗಳ ಕಾಲ ಯಾವ ಸಿನಿಮಾ ಮುಂದೆ ಬಂದರೂ ಅವರು ಒಪ್ಪದೆ, ಆ ಪಾತ್ರಕ್ಕಾಗಿಯೇ ಬಂದ ಸಿನಿಮಾ ಮುಂದೂಡಿದ್ದು ನಿಜಕ್ಕೂ ಮೆಚ್ಚಲೇಬೇಕು. ಇದುವರೆಗೂ ಬೇರೆ ಸಿನಿಮಾಗಳನ್ನು ಅವರು ಯಾಕೆ ಒಪ್ಪಿಕೊಂಡಿಲ್ಲ ಎಂಬುದಕ್ಕೆ ಇದೇ ಕಾರಣವಂತೆ. ಸ್ಕೂಲ್‌ ಬಾಯ್‌ ಪಾತ್ರಕ್ಕಾಗಿಯೇ ಧ್ರುವ ಅವರು ೬೫ ಕೆಜಿ ತೂಕ ಇಳಿಸಿಕೊಂಡಿದ್ದಾರೆ. ಸಿನಿಮಾ ಪ್ರೀತಿ ಅಂದರೆ ಇದೇ ಅಲ್ಲವೇ?

 

Categories
ಸಿನಿ ಸುದ್ದಿ

ಸಾವಿರ ಪರದೆ ಮೇಲೆ ಪೊಗರು ಅಬ್ಬರ! ಫೆ.19 ರಿಂದ ಕನ್ನಡ ಚಿತ್ರರಂಗದಲ್ಲಿ ಸಿನಿಮಾ ಹಬ್ಬ

3 ವರ್ಷಗಳ ಬಳಿಕ ತೆರೆ ಮೇಲೆ ಧ್ರುವ ಸರ್ಜಾ ಸಿನ್ಮಾ

ಕೊರೋನಾ ನಂತರ ಚಿತ್ರರಂಗಕ್ಕೆ ಬಹುದೊಡ್ಡ ಎನರ್ಜಿ ತುಂಬಲು ಧ್ರುವ ಸರ್ಜಾ ಅಭಿನಯದ ಬಹುನಿರೀಕ್ಷೆಯ ಸಿನಿಮಾ “ಪೊಗರು” ಸಜ್ಜಾಗಿದೆ. ಈಗಾಗಲೇ ಚಿತ್ರ ತಂಡ ಪ್ರಕಟಿಸಿರುವಂತೆ, ಫೆಬ್ರವರಿ 19 ರಂದು ಈ ಚಿತ್ರ ದೇಶಾದ್ಯಂತ ಅದ್ಧೂರಿಯಾಗಿಯೇ ಬಿಡುಗಡೆಯಾಗುತ್ತಿದೆ. ಸದ್ಯಕ್ಕೆ ಇದು ಕನ್ನಡದ ಜತೆಗೆ ತಮಿಳು ಹಾಗೂ ತೆಲುಗಿನಲ್ಲೂ ಬರುತ್ತಿದೆ ಎಂಬುದೇ ಈ ಹೊತ್ತಿನ ಸುದ್ದಿ.

ಇನ್ನೂ ಒಂದು ವಿಶೇಷವೆಂದರೆ, ಕೊರೋನಾ ನಂತರ ಬರುತ್ತಿರುವ ಮೊದಲ ಸ್ಟಾರ್ ಸಿನಿಮಾ ಯಾವುದು ಅಂತ ಪ್ರೇಕ್ಷಕರು ಎದುರು ನೋಡುತ್ತಿದ್ದಾಗ, ನಿರೀಕ್ಷೆಯಂತೆಯೇ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ “ಪೊಗರು” ತೆರೆಗೆ ಬರುತ್ತಿದೆ. ಅಲ್ಲಿಗೆ ಕೊರೊನಾ ಭಯ ದೂರವಾಗುತ್ತಿದ್ದಂತೆಯೇ, ಮೊದಲು ತನ್ನ “ಪೊಗರು” ತೋರಿಸಲು ಚಿತ್ರ ರೆಡಿಯಾಗಿದೆ.

ಕೊರೋನಾ ಆತಂಕ ಈಗಲೂ ಇರುವಾಗ ಈ ಚಿತ್ರದ ಬಿಡುಗಡೆ ಇಡೀ ಚಿತ್ರ ತಂಡವೇ ಬೆಂಬಲ ಕೊಟ್ಟಿದೆ. ನಿರ್ಮಾಪಕ ಗಂಗಾಧರ್ ಭರ್ಜರಿಯಾಗಿಯೇ ಚಿತ್ರವನ್ನು ಬಿಡುಗಡೆ ಮಾಡಲು ಜೋರಾದ ಸಿದ್ದತೆ ನಡೆಸಿದ್ದಾರೆ. ಮೂಲಗಳ ಪ್ರಕಾರ ಒಂದು ಸಾವಿರ ಸ್ಕ್ರೀನ್‌ಗಳಿಗೂ ಹೆಚ್ಚು “ಪೊಗರು” ತೆರೆ ಮೇಲೆ ಕಾಣಿಸಿಕೊಳ್ಳುತ್ತಿದೆ. ಕನ್ನಡದ ಮಟ್ಟಿಗೆ ಕೊರೋನಾ ನಂತರ ಇಷ್ಟು ಪ್ರಮಾಣದಲ್ಲಿ ತೆರೆಗೆ ಬರುತ್ತಿರುವ ಮೊದಲ ಸಿನಿಮಾ ಎನ್ನುವ ಹೆಸರು “ಪೊಗರು” ಚಿತ್ರಕ್ಕೆ ಸಲ್ಲುತ್ತದೆ.

ಹಾಗೆಯೇ ವಿಜಯ್ ಅಭಿನಯದ ತಮಿಳಿನ “ಮಾಸ್ಟರ್” ಸಿನಿಮಾ ಹೊರತುಪಡಿಸಿದರೆ ತಮಿಳು ಮತ್ತು ತೆಲುಗಿನಲ್ಲೂ ಇದೇ ಮೊದಲು ಅತೀ ಹೆಚ್ಚು ಪರದೆಗಳ ಮೇಲೆ ರಾರಾಜಿಸುತ್ತಿರುವ ಬಿಗ್‌ ಬಜೆಟ್‌ ಚಿತ್ರ. ಅಂದಹಾಗೆ, ಚಿತ್ರವನ್ನು ರಿಲೀಸ್‌ ಮಾಡುತ್ತಿರುವ ಕುರಿತು ಮಾಹಿತಿ ಹಂಚಿಕೊಳ್ಳಲೆಂದೇ ಚಿತ್ರತಂಡ ಮಾಧ್ಯಮ ಎದುರು ಬಂದಿತ್ತು. ನಿರ್ಮಾಪಕ ಗಂಗಾಧರ್‌, ನಿರ್ದೇಶಕ ನಂದ ಕಿಶೋರ್, ಧ್ರುವ ಸರ್ಜಾ, ಕಲಾವಿದರಾದ ಕರಿ ಸುಬ್ಬು, ಧರ್ಮ, ಗಿರಿಜಾ ಲೋಕೇಶ್, ರಾಘವೇಂದ್ರ ರಾಜ್ ಕುಮಾರ್ ಇತರರು ತಮ್ಮ ಚಿತ್ರದ ಅನುಭವ ಹಂಚಿಕೊಂಡರು.

ಪೊಗರು ಚಿತ್ರದಲ್ಲಿ ರಾಘಣ್ಣ
ಈ ಸಿನಿಮಾದಲ್ಲಿ ಹಲವು ವಿಶೇಷತೆಗಳಿವೆ. ಆ ವಿಶೇಷತೆಗಳಲ್ಲಿ ಒಂದನ್ನು ಹೆಸರಿಸುವುದಾದರೆ, ಈ ಮಾಸ್‌ ಸಿನಿಮಾದಲ್ಲಿ ರಾಘವೇಂದ್ರ ರಾಜಕುಮಾರ್‌ ಕೂಡ ನಟಿಸಿದ್ದಾರೆ ಎಂಬುದೇ ದೊಡ್ಡ ಸುದ್ದಿ. ಇಡೀ ಭಾರತ ಚಿತ್ರರಂಗವೇ ತಿರುಗಿ ನೋಡುವಂತೆ ಕನ್ನಡ ಸಿನಿಮಾರಂಗ ಬೆಳೆದು ನಿಂತಿದೆ. ಆ ಕುರಿತಂತೆ ಖುಷಿ ಹಂಚಿಕೊಂಡ ರಾಘವೇಂದ್ರ ರಾಜಕುಮಾರ್‌, “ಪೊಗರು” ಚಿತ್ರತಂಡದಲ್ಲಿ ನಾನಿದ್ದೇನೆ ಅನ್ನುವುದೇ ಖುಷಿ. ಇಲ್ಲಿ ನನಗೆ ಇಷ್ಟವಾದ ಪಾತ್ರವಿದೆ. ಅದೊಂದು ರೀತಿಯ ವಿಭಿನ್ನ ಪಾತ್ರವಾಗಿದೆ. ಧ್ರುವ ಸರ್ಜಾ ಅವರಲ್ಲಿ ನಾನು ಶಿವಣ್ಣ ಮತ್ತು ಅಪ್ಪು ಅವರನ್ನು ಕಂಡಿದ್ದೇನೆ. ಇಡೀ ದೇಶವೇ ತಿರುಗಿ ನೋಡುವಂತಹ ಸಿನಿಮಾ ಮಾಡಿದ್ದಾರೆ. ಖಂಡಿತವಾಗಿಯೂ ಈ ಚಿತ್ರ ದೊಡ್ಡ ಗೆಲುವು ಕೊಡುತ್ತದೆ ಎಂಬ ವಿಶ್ವಾಸ ನನಗಿದೆ ಎಂಬುದು ರಾಘಣ್ಣ ಅವರ ಮಾತು.

ಆ ಪಾತ್ರಕ್ಕಾಗಿ ಮೂರು ವರ್ಷ ಯಾವ ಚಿತ್ರ ಒಪ್ಪಿಲ್ಲ ಧ್ರುವ

ಪೊಗರು ಸಿನಿಮಾದಲ್ಲಿ ಧ್ರುವ ಸ್ಕೂಲ್ ಬಾಯ್. ಆಗಿ ನಟಿಸಿದ್ದಾರೆ ಎಂಬುದು ಎಲ್ಲರಿಗೂ ಗೊತ್ತು. ಅದರಲ್ಲೂ ಅವರು ಅದು ಕೂಡ 10 ನೇ ತರಗತಿ ಹುಡುಗ. ಕೆಲವರಿಗೆ ಇದು ನಂಬಲು ಅಸಾದ್ಯವಾದರೂ ನಂಬಲೇ ಬೇಕು. ಹೌದು, “ಪೊಗರು” ಸಿನಿಮಾದಲ್ಲಿ ಈ ಪಾತ್ರಕ್ಕಾಗಿಯೇ ಅವರು ಮೂರು ವರ್ಷ ಸಮಯ ತೆಗೆದುಕೊಂಡಿದ್ದಂತೆ. ಅದಿನ್ಜು ಎಲ್ಲಿಯೂ ರಿವೀಲ್ ಆಗಿಲ್ಲವಂತೆ. ಆ ಪಾತ್ರಕ್ಕಾಗಿಯೇ ಧ್ರುವ ಸರ್ಜಾ ಮೂರು ವರ್ಷ ಯಾವುದೇ ಸಿನಿಮಾ ಒಪ್ಪುಕೊಂಡಿಲ್ಲವಂತೆ. ಅವರೇಕೆ ಇದುವರೆಗೂ ಬೇರೆ ಸಿನಿಮಾ ಒಪ್ಪಿಕೊಂಡಿಲ್ಲ ಎಂಬುದಕ್ದಿಕೆ ಇದೇ ಕಾರಣವಂತೆ. ಮೊದಲು ಅವರು 65ಕೆಜಿಗೆ ದೇಹದ ತೂಕ ಇಳಿಸಿಕೊಂಡಿದ್ದಾರೆ.  ಆಮೇಲೆ 120 ಕೆಜಿ ಆದರಂತೆ. ಹಾಗಾಗಿಯೇ ಬೇರೆ ಸಿನಿಮಾ ಒಪ್ಪಿಕೊಂಡಿಲ್ಲ.  ಅದೇನೆ ಇರಲಿ, ಧ್ರುವ ಅವರ ಈ ಶ್ರದ್ಧೆಯನ್ನು  ಇಡೀ ಚಿತ್ರ ತಂಡ ಕೊಂಡಾಡಿದೆ.

ಪೊಗರು ವಿತರಣೆಗೆ ಸಾಥ್
ಒಂದು ಸಿನಿಮಾ ಅಂದಮೇಲೆ ವಿತರಣೆ ಭರ್ಜರಿಯಾಗಿಯೇ ಇರಬೇಕು. ಅದರಲ್ಲೂ ಬಹುನಿರೀಕ್ಷೆಯ “ಪೊಗರು” ಚಿತ್ರದ ಬಿಡುಗಡೆ ಅಂದಮೇಲೆ ಕೇಳಬೇಕೆ, ಭರ್ಜರಿಯಾಗಿಯೇ ಇರುತ್ತೆ. ಈ ಚಿತ್ರದ ವಿತರಣೆಯಲ್ಲಿ ಪುಷ್ಕರ್‌ ಮಲ್ಲಿಕಾರ್ಜುನ್‌, ಕೆ.ಪಿ.ಶ್ರೀಕಾಂತ್‌ ಅವರು ಸಾಥ್‌ ಕೊಡುತ್ತಿರುವುದು ವಿಶೇಷ. ಕನ್ನಡದ ಮಟ್ಟಿಗೆ “ಪೊಗರು” ದೊಡ್ಡ ಸ್ಕೇಲ್‌ ಸಿನಿಮಾ. ಹೀಗಾಗಿ ಬಿಡುಗಡೆ ಕೂಡ ಅಷ್ಟೇ ದೊಡ್ಡ ಮಟ್ಟದಲ್ಲಿರಲಿದೆ. ಸಾವಿರಾರು ಪರದೆ ಮೇಲೆ ಪೊಗರು ಅಬ್ಬರಿಸುತ್ತದೆ ಅಂದಮೇಲೆ ಕೇಳಬೇಕೆ, ಅದಕ್ಕೆ ಸರಿಯಾದ ವ್ಯಕ್ತಿಗಳು ಜೊತೆ ಇರಬೇಕು. ಕನ್ನಡದ ಮಟ್ಟಿಗೆ ಇದೊಂದು ಮೈಲಿಗಲ್ಲು ಆಗುವಂತಹ ಚಿತ್ರ.

ಧ್ರುವ ಸರ್ಜಾ ಅವರ ಈ ಚಿತ್ರ ಆರಂಭದಿಂದಲೂ ಸಾಕಷ್ಟು ನಿರೀಕ್ಷೆ ಹೆಚ್ಚಿಸಿತ್ತು. ಅದೇ ನಿರೀಕ್ಷೆ ಬಿಡುಗಡೆಯವರೆಗೂ ಕಾಯ್ದುಕೊಂಡು ಬಂದಿದೆ. ಅಂದಹಾಗೆ, ಧ್ರುವ ಸರ್ಜಾ ಅವರ ಚಿತ್ರ ಈ ಹಿಂದೆ ತೆರೆಕಂಡು ಮೂರು ವರ್ಷ ಆಗಿತ್ತು. ಮೂರು ವರ್ಷದ ಬಳಿಕ “ಪೊಗರು” ತೆರೆ ಕಾಣುತ್ತಿದೆ ಎಂಬುದೇ ವಿಶೇಷ.

ಬಾಡಿಗೆ ವ್ಯವಸ್ಥೆ ಮುಂದುವರೆಯಲಿ

ಇದು ಓದು ಗೌಡರಿಗೆ ನಿರ್ಮಾಪಕ ಸೂರಪ್ಪ ಬಾಬು ಅವರಿ ಮಾಡಿದ ವಿನಂತಿ. “ನಾವೆಲ್ಲ ಇಷ್ಟು ಜನ ಒಟ್ಟಾಗಿ ಬಂದಿದ್ದೇವೆ. ಇಂತಹ ಕಷ್ಟಕಾಲದಲ್ಲೂ ಸಿನಿಮಾ ಬಿಡುಗಡೆ ಮಾಡಲು ಬಂದಿದ್ದೇವೆ. ಅದರಲ್ಲೂ “ಪೊಗರು” ಚಿತ್ರ ಮೊದಲು ಬಿಡುಗಡೆಯಾಗುತ್ತಿದೆ. ಅವರಿಗೆ ನಾವೆಲ್ಲಾ ಕೈ ಜೋಡಿಸಿ, ಬೆಂಬಲಕ್ಕೆ ನಿಂತಿದ್ದೇವೆ. ಕಳೆದ ಒಂಭತ್ತು ತಿಂಗಳಿನಿಂದಲೂ ಭಾರೀ ಬಜೆಟ್ ನ ಚಿತ್ರ ನಿರ್ಮಾಪಕರು  ತುಂಬಾ ಕಷ್ಟ ಪಟ್ಟಿದ್ದಾರೆ. ಉತ್ಥರ ಕರ್ನಾಟಕ ಕಡೆಯಿಂದ ಸಿಕ್ಕಾಪಟ್ಟೆ ಸಮಸ್ಯೆ ಆಗುತ್ತಿದೆ.  ವಿನಂತಿ ಮಾಡುತ್ತಿದ್ದೇವೆ. ಹಿಂದೆ ಹೇಗೆ ನಡೆದುಕೊಂಡು ಬಂದಿತ್ತೋ, ಅದನ್ನೇ ಮುಂದುವರೆಸಿಕೊಂಡು ಬನ್ನಿ. ನೀವು ಯೋಚನೆ ಮಾಡಿ, ನಾವೆಲ್ಲಾ ನಿಮ್ಮೊಂದಿಗೆ ಇದ್ದೇವೆ. ಶಿವಣ್ಣ ಅವರ ಜೊತೆಗೂ ಚರ್ಚೆ ಮಾಡಿದ್ದೇವೆ. ಓದುಗೌಡರೆ ಇದನ್ನೆಲ್ಲ ಬಿಟ್ಟು ಬಿಡಿ.  ಬಾಡಿಗೆ ವ್ಯವಸ್ಥೆಯನ್ನೇ ಮುಂದುವರೆಸಿಕೊಂಡು ಹೋಗಬೇಕು. ಯಾವುದೇ ಕಾರಣಕ್ಕೂ ಶೇರ್ ಬೇಡ. ಅದನ್ನು ಕೊಡೋದಿಕ್ಕೆ ಶುರು ಮಾಡಿದರೆ ಬಿಗ್ ಬಜೆಟ್ ಸಿನಿಮಾ ಮಾಡೋದಿಕ್ಕೆ ಆಗೋದಿಲ್ಲ. ಬಾಡಿಗೆ ವ್ಯವಸ್ಥೆ ಮುಂದುವರೆಯಬೇಕು” ಎಂಬ ಮನವಿ ಇಟ್ಟರು.

ಇನ್ಮುಂದೆ  ರಿಲೀಸ್ ಫೈಟ್‌ ಇಲ್ಲ

ಯಾವುದೇ ನಿರ್ಮಾಪಕ ಇರಲಿ, ಇನ್ನು ಮುಂದೆ ರಿಲೀಸ್‌ಗೆ ಫೈಟಿಂಗ್‌ ಮಾಡೋದು ಬೇಡ. ಯಾರದ್ದೋ ಒತ್ತಡದ ಆಸೆಗೆ ಸಿನಿಮಾ ರಿಲೀಸ್‌ ಮಾಡಬೇಡಿ. ಇದು ಎಲ್ಲರಿಗೂ ಒಳಿತು ಎಂಬ ಮಾತು ಕೂಡ ಇದೇ ವೇಳೆ ಕೇಳಿಬಂತು. ಅಂದಹಾಗೆ, ಮಾರ್ಚ್‌ ‌11ಕ್ಕೆ “ರಾಬರ್ಟ್” ಬಂದರೆ, ನಂತರದ ದಿನಗಳಲ್ಲಿ, ಏಪ್ರಿಲ್‌ 1 ರಂದು  “ಯುವರತ್ನ”, ಏಪ್ರಿಲ್‌ 15 ಕ್ಕೆ “ಸಲಗ”, ಏಪ್ರಿಲ್‌ 25 ಕ್ಕೆ “ಕೋಟಿಗೊಬ್ಬ” ,  ಮೇ 15ಕ್ಕೆ “ಭಜರಂಗಿ ೨”  ಹೀಗೆ  ಬಿಡುಗಡೆಯಾಗಲಿವೆ.   ಜೂನ್‌ನಲ್ಲಿ “ವಿಕ್ರಾಂತ್‌ ರೋಣ”, “ಕೆಜಿಎಫ್-‌೨” , ಆಗಸ್ಟ್‌ ನಲ್ಲಿ “ಚಾರ್ಲಿ” ಇತ್ಯಾದಿ ಚಿತ್ರಗಳು ಬರಲಿವೆ.

Categories
ಸಿನಿ ಸುದ್ದಿ

ಎನ್.‌ ಕುಮಾರ್‌, ಇಂದ್ರಜಿತ್‌ ಲಂಕೇಶ್‌ ಸೇರಿ  ನಾಲ್ವರು ಗಣ್ಯರಿಗೆ ಈ ಬಾರಿಯ ರಾಘವೇಂದ್ರ ಚಿತ್ರವಾಣಿ ಪ್ರಶಸ್ತಿ

ಜನವರಿ 25ಕ್ಕೆ ಫಿಕ್ಸ್‌ ಆಗಿದೆ ಸಿಂಪಲ್‌ ಪ್ರಶಸ್ತಿ ಪ್ರಧಾನ ಸಮಾರಂಭ

ಪ್ರತಿ ವರ್ಷದಂತೆ ಈ ವರ್ಷ ಕೂಡ ” ಶ್ರೀ ರಾಘವೇಂದ್ರ ಚಿತ್ರವಾಣಿʼ ಸಂಸ್ಥೆ ತನ್ನ ವಾರ್ಷಿಕ ಪ್ರಶಸ್ತಿ ಪ್ರಕಟಿಸಿದೆ. ಆದರೆ ಕೊರೋನಾ ಕಾರಣ ಈ ಬಾರಿ ನಾಲ್ಕು ಪ್ರಶಸ್ತಿಗಳನ್ನು ಮಾತ್ರ ಅರ್ಹ ಗಣ್ಯರಿಗೆ ನೀಡಿ ಸನ್ಮಾನಿಸಲು  ನಿರ್ಧರಿಸಿದೆ. ಅಂತೆಯೇ ಆ ನಾಲ್ಕು ಪ್ರಶಸ್ತಿಗಳ ಪೈಕಿ ಪ್ರತಿಷ್ಠಿತ “ಶ್ರೀ ರಾಘವೇಂದ್ರ ಚಿತ್ರವಾಣಿ ʼ ಪ್ರಶಸ್ತಿಗೆ ನಿರ್ಮಾಪಕ ಎನ್‌. ಕುಮಾರ್‌ ಹಾಗೂ ಹಿರಿಯ ಪತ್ರಕರ್ತರಾದ ಬಾಬು ಕೃಷ್ಣಮೂರ್ತಿ ಅವರನ್ನು ಸಂಸ್ಥೆ ಆಯ್ಕೆ ಮಾಡಿದೆ.

ಕನ್ನಡ ಚಿತ್ರರಂಗದಲ್ಲಿ ಎನ್.‌ ಕುಮಾರ್‌ ನಿರ್ಮಾಪಕರಾಗಿ, ವಿತರಕರಾಗಿ ಹೆಸರು ಮಾಡಿದವರು. ಹಾಗೆಯೇ ಹಿರಿಯ ಪತ್ರಕರ್ತರಾದ ಬಾಬು ಕೃಷ್ಣಮೂರ್ತಿ ಅವರು ಹಲವು ವರ್ಷ ಪತ್ರಕರ್ತರಾಗಿ ಸೇವೆ ಸಲ್ಲಿಸಿದ್ದಾರೆ. ಅವರಿಬ್ಬರ ಸೇವೆ ಮತ್ತು ಪರಿಶ್ರಮ ಪರಿಗಣಿಸಿ ಶ್ರೀರಾಘವೇಂದ್ರ ಚಿತ್ರವಾಣಿ ಸಂಸ್ಥೆ ತನ್ನ2021  ಸಾಲಿನ ವಾರ್ಷಿಕ ಪ್ರಶಸ್ತಿ ನೀಡುತ್ತಿದೆ.ಹಾಗೆಯೇ ರಾಘವೇಂದ್ರ ಚಿತ್ರವಾಣಿ ಸಂಸ್ಥೆ ಕೊಡಮಾಡುವ ʼಡಾ. ರಾಜ್‌ ಕುಮಾರ್‌ ಪ್ರಶಸ್ತಿʼಗೆ ಹೆಸರಾಂತ ಗಾಯಕಿ ಶ್ರೀಮತಿ ಇಂದು ವಿಶ್ವನಾಥ್‌ ಪಾತ್ರರಾಗಿದ್ದಾರೆ. ಹಿರಿಯ ನಟಿ ಶ್ರೀಮತಿ ಡಾ. ಭಾರತಿ ವಿಷ್ಣುವರ್ದನ್‌ ಅವರು ರಾಘವೇಂದ್ರ ಚಿತ್ರವಾಣಿ ಸಂಸ್ಥೆ ಮೂಲಕ ನೀಡುವ ನಿರ್ದೇಶಕ ʼದಿ. ಆರ್‌. ಶೇಷಾದ್ರಿ ಪ್ರಶಸ್ತಿʼಗೆ ಪತ್ರಕರ್ತ ಹಾಗೂ ನಿರ್ದೇಶಕ ಇಂದ್ರಜಿತ್‌ ಲಂಕೇಶ್‌ ಅವರನ್ನು ಆಯ್ಕೆ ಮಾಡಲಾಗಿದೆ.

ಜನವರಿ 25 ಕ್ಕೆ ಶ್ರೀರಾಘವೇಂದ್ರ ಚಿತ್ರವಾಣಿ ಸಂಸ್ಥೆಯ 44 ನೇ ವಾರ್ಷಿಕೋತ್ಸವ ಹಾಗೆಯೇ ಚಿತ್ರವಾಣಿ ಸಂಸ್ಥೆಯ ಸ್ಥಾಪಕ ದಿ.ಡಿ.ವಿ. ಸುಧೀಂದ್ರ ಅವರ ಹುಟ್ಟು ಹಬ್ಬ. ಅದೇ ಕಾರಣಕ್ಕೆ ಸಂಸ್ಥೆಯು ಜನವರಿ 25ರಂದು ಸೋಮವಾರ ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ರೇಣುಕಾಂಬ ಸ್ಟುಡಿಯೋದಲ್ಲಿ ಪ್ರಶಸ್ತಿ ಪ್ರಧಾನ ಸಮಾರಂಭ ಅಯೋಜಿಸಿದೆ. ಇನ್ನು ಪ್ರತಿ ವರ್ಷ ನೀಡುತ್ತಿದ್ದ 11 ಪ್ರಶಸ್ತಿಗಳ ಪೈಕಿ ನಾಲ್ಕು ಪ್ರಶಸ್ತಿಗಳನ್ನು ಮಾತ್ರ ನೀಡುತ್ತಿರುವುದಕ್ಕೆ ಕೊರೋನಾ ಕಾರಣ ಅಂತಲೂ ಸಂಸ್ಥೆಯ ಮುಖ್ಯಸ್ಥರಾದ ಸುಧೀಂದ್ರ ವೆಂಕಟೇಶ್‌ ಹೇಳಿದ್ದಾರೆ.

Categories
ಸಿನಿ ಸುದ್ದಿ

ತರುಣನ ತಳಮಳ, ತರುಣಿಯ ಕಳವಳ -ಇದು , ವಿಜಯ್ -ರಂಜನಿಯ ಅವಸ್ಥಾಂತರ !

ಪ್ಲೀಸ್‌, ಮುಂದೆ ಬಂದರೆ ಹಾಯಬೇಡಿ, ಹಿಂದೆ ಬಂದರೆ ಒದೆಯಬೇಡಿ…

ನಟ ಸಂಚಾರಿ ವಿಜಯ್‌ ಈಗ ಅವಸ್ಥೆಗೆ ಸಿಲುಕಿದ್ದಾರೆ. ಅವರ ಜತೆಗೆ ಅಲ್ಲಿ ಪುಟ್ಟ ಗೌರಿ ಖ್ಯಾತಿಯ ರಂಜನಿ ರಾಘವನ್‌ ಕೂಡ ಇದ್ದಾರೆ. ಅಂದ ಹಾಗೆ, ಅವರಿಬ್ಬರದು ಈಗ “ಅವಸ್ಥಾಂತರʼ ದ ಅವಸ್ಥೆ. ಅರೆ, ಇದೇನೂ ಸಮಾಚಾರ ಅಂತ ಕಣ್ಣರಳಿಸಿ ಕೂರಬೇಡಿ, ಅಂತಹದೇನು ಗಾಸಿಪ್‌ ಕೂಡ ಇಲಿಲ್ಲ. ಬದಲಿಗೆ ಇದು ಈ ಜೋಡಿಯ ಹೊಸ ಸಿನಿಮಾದ ವಿಚಾರ. ಆ ಚಿತ್ರದ ಹೆಸರು “ಅವಸ್ಥಾಂತರʼ. ಈ ಶೀರ್ಷಿಕೆಯೇ ಇಲ್ಲಿ ವಿಶೇಷ.

ʼಅವಸ್ಥಾಂತರʼ ಅಂದಾಗ ಒಂದು ಕ್ಷಣ ಅವಸ್ಥೆಗೆ ಸಿಲುಕುವುದು ಸಹಜ. ಟೈಟಲ್ ಕ್ಯಾಚಿ ಆರ್ಗಿಬೇಕು, ಸಿಂಪಲ್ ಆರ್ಗಿರಬೇಕು, ಜನರಿಗೆ ಅರ್ಥವಾಗುವಂತಿರಬೇಕು ಅಂತ ಸಿನಿಮಾ ಮಂದಿ ಲೆಕ್ಕಚಾರ ಹಾಕುವಾಗ ಇದೇನು ಇವರದು ಅವಸ್ಥಾಂತರ ಅಂತ ನಿಮಗೂ ಅನ್ನಿಸಿದ್ದರಲ್ಲಿ ಅಚ್ಚರಿ ಏನಿಲ್ಲ. ಆದ್ರೆ ಸಿನಿಮಾ ಜಗತ್ತಿಗೆ ಎಂಟ್ರಿಯಾದ ಹೊಸಬರಿಗೆ ತಮ್ಮನ್ನು ತಾವು ಗುರುತಿಸಿಕೊಳ್ಳುವುದಕ್ಕೆ ಸವಾಲು ಇರುತ್ತದೆ. ಅದನ್ನು ಎದುರಿಸಲು ಅವರಿಗೆ ಹೊಳೆಯುವುದು ಡಿಫೆರೆಂಟ್ ಕಾನ್ಸೆಫ್ಟ್. ಅದರ ಮೊದಲ ಸ್ಯಾಂಪಲ್ ಚಿತ್ರದ ಟೈಟಲ್.ಅದಕ್ಕೊಂದು ಅಷ್ಟೇ ಡಿಫೆರೆಂಟ್ ಆದ ಟ್ಯಾಗ್ ಲೈನ್ ಕೂಡ ಇದೆ. ” ಮುಂದೆ ಬಂದರೆ ಹಾಯಬೇಡಿ, ಹಿಂದೆ ಬಂದರೆ ಒದೆಯಬೇಡಿ’ ಅಂತ. ಇಲ್ಲಿ ಯಾರು ಹಾಯ್ತಾರೆ, ಯಾರು ಒದೆತಾರೋ ಸಿನಿಮಾ ನೋಡಿದಾಗ ಗೊತ್ತಾಗುವ ವಿಚಾರ. ಉಳಿದಂತೆ ಈ ಚಿತ್ರಕ್ಕೆ ಮೊನ್ನೆಯಷ್ಟೇ ಮುಹೂರ್ತ ಮುಗಿಯಿತು. ಬೆಂಗಳೂರಿನ ಎನ್. ಆರ್. ಕಾಲೋನಿಯ ರಾಯರ ಮಠದಲ್ಲಿ ಚಿತ್ರ ತಂಡ ಸಿಂಪಲ್ ಆಗಿಯೇಮುಹೂರ್ತ ನೆರವೇರಿಸಿತು.

ತುಮಕೂರು ಹುಡುಗನ ಸಿನಿಮಾ…

ಅದಕ್ಕೊಂದು ಅಷ್ಟೇ ಡಿಫೆರೆಂಟ್ ಆದ ಟ್ಯಾಗ್ ಲೈನ್ ಕೂಡ ಇದೆ. ” ಮುಂದೆ ಬಂದರೆ ಹಾಯಬೇಡಿ, ಹಿಂದೆ ಬಂದರೆ ಒದೆಯಬೇಡಿ’ ಅಂತ. ಇಲ್ಲಿ ಯಾರು ಹಾಯ್ತಾರೆ, ಯಾರು ಒದೆತಾರೋ ಸಿನಿಮಾ ನೋಡಿದಾಗ ಗೊತ್ತಾಗುವ ವಿಚಾರ. ಉಳಿದಂತೆ ಈ ಚಿತ್ರಕ್ಕೆ ಮೊನ್ನೆಯಷ್ಟೇ ಮುಹೂರ್ತ ಮುಗಿಯಿತು. ಬೆಂಗಳೂರಿನ ಎನ್. ಆರ್. ಕಾಲೋನಿಯ ರಾಯರ ಮಠದಲ್ಲಿ ಚಿತ್ರ ತಂಡ ಸಿಂಪಲ್ ಆಗಿಯೇಮುಹೂರ್ತ ನೆರವೇರಿಸಿತು. ಈ ಚಿತ್ರಕ್ಕೆ ಆಕ್ಷನ್ ಹೇಳುತ್ತಿರುವವರು ಜಿ. ದೀಪಕ್ ಕುಮಾರ್. ಇವರದು ಮೂಲತಃ ತುಮಕೂರು. ಅಲ್ಲಿನ ಪ್ರತಿಷ್ಠಿತ ಹಣಕಾಸು ಸಂಸ್ಥೆಯೊಂದರಲ್ಲಿ ರಿಲೇಶನ್ ಶಿಪ್ ಮ್ಯಾನೇಜರ್ ಆಗಿದ್ದರಂತೆ. ಜತೆಗೆ ಕೆಲವು ಸಾಕ್ಷ್ಯ ಚಿತ್ರ ಜಾಹೀರಾತು ಆಕ್ಷನ್ ಕಟ್ ಹಾಗೂ ಕಾರ್ಪೊರೇಟ್ ಕಂಪನಿಗೆ ಆಡ್ ಮೇಕರ್ ಆಗಿದ್ದರಂತೆ. ಅದೇ ಅನುಭವದಲ್ಲಿ ನಿರ್ದೇಶಕ ಮಠ ಗುರುಪ್ರಸಾದ್ ಅವರ ಬಳಿ ಒಂದಷ್ಟು ಕಾಲ ಸಹಾಯಕ ನಿರ್ದೇಶಕರಾಗಿದ್ದರು. ಅಲ್ಲಿಂದೀಗ “ಅವಸ್ಥಾಂತರ’ ದೊಂದಿಗೆ ಪೂರ್ಣ ಪ್ರಮಾಣದ ನಿರ್ದೇಶಕ.

ತರುಣನೊಬ್ಬನ ತಳಮಳದ ಕತೆ…

ಮೂವೀ ವಾಕ್ಸ್ ಎನ್ನುವ ಸಂಸ್ಥೆ ಈ ಚಿತ್ರದ ನಿರ್ಮಾಣದ ಜವಾಬ್ದಾರಿ ಹೊತ್ತುಕೊಂಡಿದೆ. ಉಳಿದಂತೆ ಸಿನಿಮಾದ ಶೀರ್ಷಿಕೆ ಹಾಗೂ ಕತೆಯ ವಿಶೇಷತೆ ಕುರಿತು ಮಾತನಾಡಿದ ನಿರ್ದೇಶದ ದೀಪಕ್ ಕುಮಾರ್, ಇದು ಹದಿಹರೆಯದ ಯುವಕನೊಬ್ಬನ ಸುತ್ತಣ ಕತೆ. ಆತನಲ್ಲಿ ಬಯಕೆ ಹಾಗೂ ಕಾಮನೆಗಳು ಅರಿವಿಲ್ಲದೆ ಹುಟ್ಟಿಕೊಂಡು, ಹೇಗೆ ಆತನನ್ನು ಅತಂತ್ರ ಸ್ಥಿತಿಗೆ ತಂದು ನಿಲ್ಲಿಸುತ್ತವೆ, ಅದರಿಂದ ಆತ ಏನೆಲ್ಲಾ ಕಷ್ಟ ಮತ್ತು ಅವಸ್ಥೆ ಸಿಲುಕಿಕೊಂಡು ಎಷ್ಟೇಲ್ಲ ತೊಂದರೆ ಅನುಭವಿಸುತ್ತಾನೆನ್ನುವುದನ್ನೇ ಚಿತ್ರದಲ್ಲಿ ತಿಳಿ ಹಾಸ್ಯದ ಮೂಲಕ ಹೇಳುವ ಪ್ರಯತ್ನ ಮಾಡಿದ್ದೇವೆ. ಅದಕ್ಕಾಗಿಯೇ ಚಿತ್ರಕ್ಕೆ ಅವಸ್ಥಾಂತರ ಅಂತ ಟೈಟಲ್ ಇಟ್ಟಿದ್ದೇವೆ. ಅವಸ್ಥಾಂತರ ಅಂದ್ರೆ ಅವಸ್ಥೆಯ ನಂತರದ ಪರಿಸ್ಥಿತಿ’ ಎಂಬುದಾಗಿ ದೀಪಕ್ ವಿವರಣೆ ನೀಡುತ್ತಾರೆ.


ಸಂಪ್ರದಾಯಸ್ಥ ಕುಟುಂಬದ ಪುಟ್ಟಗೌರಿ..

ಕತೆಯಲ್ಲಿ ಈ ಅವಸ್ಥಾಂತರ ಯಾರದು ಅಂತ ಬಿಡಿಸಿ ಹೇಳಬೇಕಿಲ್ಲ, ಅದು ಕಥಾ ನಾಯಕನ ಪರಿಸ್ಥಿತಿ. ಆ ಪಾತ್ರದಲ್ಲಿ ನಟ ಸಂಚಾರಿ ವಿಜಯ್ ಇದ್ದಾರೆ. ಅವರ ಪ್ರಕಾರ ಇದೊಂದು ಒಳ್ಳೆಯ ಸಂದೇಶ ನೀಡುವಂತಹ ಪಾತ್ರ ಮತ್ತು ಚಿತ್ರ. ಇನ್ನು ರಂಜನಿ ರಾಘವನ್ ಅವರಿಗೆ ಜೋಡಿ, ಅಂದ್ರೆ ಕಥಾ ನಾಯಕಿ. ಅವರಿಗೆ ಇಲ್ಲಿ ಒಬ್ಬ ಸಂಪ್ರದಾಯಸ್ಥ ಕುಟುಂಬದಲ್ಲಿ ಮುಗ್ದ ಹುಡುಗಿಯ ಪಾತ್ರ ಸಿಕ್ಕಿದೆ. ಅಂತಹ ಹುಡುಗಿ ಆಕಸ್ಮಾತ್ ಪ್ರೀತಿಗೆ ಸಿಲುಕಿದಾಗ ಆಗುವ ಅವಸ್ಥೆಗಳು, ಅದನ್ನವಳು ನಿಭಾಯಿಸುವ ಬಗೆ ತುಂಬಾ ಚೆನ್ನಾಗಿದೆಯಂತೆ. ಅವರೊಂದಿಗೆ ಚಿತ್ರದಲ್ಲಿ ದಿಶಾ ಕೃಷ್ಣಯ್ಯ, ಪ್ರದೀಪ್, ರೋಹಿಣಿ , ಲಕ್ಷ್ಮಿ ಭಾಗವತರ್ ಮುಂತಾದವರಿದ್ದಾರೆ. ಚಿತ್ರೀಕರಣ ಶುರುವಾಗಿದೆ. ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಸಲು ತಂಡವು ಯೋಜನೆ ಹಾಕಿಕೊಂಡಿದೆ. ಬಿ.ಜೆ.ಭರತ್ ಸಂಗೀತ ನೀಡುತ್ತಿದ್ದಾರೆ. ಛಾಯಾಗ್ರಹಣ ನಂದಕಿಶೋರ್, ಸಂಕಲನ ಶೇಷು ಅವರದ್ದು.

 

error: Content is protected !!