ದಿಗಂತ್ ಹೊಸ ಚಿತ್ರಕ್ಕೆ ಪೂಜೆ – ಮತ್ತೊಂದು ಶಾರ್ಪ್‌ ಸಿನ್ಮಾ ಹಿಂದೆ ಬಂದ ನಿರ್ದೇಶಕ ಗೌಸ್‌ಪೀರ್‌

ಗೌಸ್‌ಪೀರ್‌ ಮತ್ತು ದಿಗಂತ್‌  ಕಾಂಬಿನೇಷನ್‌ನಲ್ಲಿ ಈ ಹಿಂದೆ “ಶಾರ್ಪ್‌ ಶೂಟರ್‌” ಚಿತ್ರ ಬಂದಿತ್ತು. ಫನ್ನಿ ಎಲಿಮೆಂಟ್ಸ್‌ನೊಂದಿಗೆ ನೋಡುಗರನ್ನು ರಂಜಿಸಿತ್ತು. ಅದೇ ಜೋಡಿ ಈಗ ಮೋಡಿ ಮಾಡುವಂತಹ ಸ್ಕ್ರಿಪ್ಟ್‌ನೊಂದಿಗೆ ಬರುತ್ತಿದೆ. ದಿಗಂತ್‌ ಕೂಡ ಗೌಸ್‌ಪೀರ್‌ ಕಥೆ ಕೇಳಿ ಥ್ರಿಲ್‌ ಅಗಿದ್ದು, ಹೊಸ ಬಗೆಯ ಕಥೆಗೆ ಖುಷಿಯಾಗಿದ್ದಾರೆ

ದೂದ್‌ಪೇಡ ಅಂತಾನೇ ಕರೆಸಿಕೊಳ್ಳುವ ನಟ ದಿಗಂತ್‌, ಸದ್ಯಕೀಗ ಫುಲ್‌ ಬಿಝಿ. ಇತ್ತೀಚೆಗಷ್ಟೇ ದಿಗಂತ್‌ “ಮಾರಿಗೋಲ್ಡ್‌” ಚಿತ್ರಕ್ಕೆ ಡಬ್‌ ಮಾಡುವ ಮೂಲಕ ಸಿನಿಮಾ ಕೆಲಸವನ್ನು ಮುಗಿಸಿದ್ದಾರೆ. ಅದರ ಬೆನ್ನ ಹಿಂದೆಯೇ ಅವರ “ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ” ಚಿತ್ರವನ್ನೂ ಮುಗಿಸಿದ್ದಾರೆ. ಈಗ ಹೊಸ ಚಿತ್ರಕ್ಕೂ ಜೈ ಎಂದಿದ್ದಾರೆ. ಹೌದು, ಗೀತ ರಚನೆಕಾರ, ಸಂಭಾಷಣೆಕಾರ ಕಮ್ ನಿರ್ದೇಶಕ‌ ಗೌಸ್‌ಪೀರ್‌ ನಿರ್ದೇಶನದ ಹೊಸ ಚಿತ್ರಕ್ಕೆ ದಿಗಂತ್‌ ಹೀರೋ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಆ ಚಿತ್ರಕ್ಕೆ ಇತ್ತೀಚೆಗೆ ಸ್ಕ್ರಿಪ್ಟ್‌ ಪೂಜೆ ಕೂಡ ನೆರವೇರಿದೆ.

ಜಯನಗರದ ವಿನಾಯಕ ದೇವಾಲಯದಲ್ಲಿ ಚಿತ್ರಕ್ಕೆ ಪೂಜೆ ನಡೆದಿದ್ದು, ಚಿತ್ರಕ್ಕೆ ಅದ್ಧೂರಿ ಚಾಲನೆಯೂ ದೊರೆತಿದೆ. ಈ ಚಿತ್ರಕ್ಕೆ ಇನ್ನೂ ಶೀರ್ಷಿಕೆ ಪಕ್ಕಾ ಆಗಿಲ್ಲ. ಸದ್ಯ ಸ್ಕ್ರಿಪ್ಟ್‌ಗೆ ಚಾಲನೆ ದೊರೆತಿದ್ದು, ಬರವಣಿಗೆಯ ಕೆಲಸಗಳು ಅಂತಿಮ ಹಂತದಲ್ಲಿವೆ. ದಿಗಂತ್‌ ಸದ್ಯಕ್ಕೆ “ಗಾಳಿಪಟ 2” ಚಿತ್ರಕ್ಕಾಗಿ ವಿದೇಶಕ್ಕೆ ಹಾರಿದ್ದಾರೆ. ಆ ಸಿನಿಮಾದ ಚಿತ್ರೀಕರಣ ಮುಗಿಸಿಕೊಂಡು ಬಂದ ಬಳಿಕ ಗೌಸ್‌ಪೀರ್‌ ನಿರ್ದೇಶನದ ಚಿತ್ರೀಕರಣದಲ್ಲಿ ಕಾಣಿಸಿಕೊಳ್ಳಲಿದ್ದಾರೆ.


ಇನ್ನು, ಈ ಚಿತ್ರವನ್ನು ಗೌಸ್‌ಪೀರ್‌ ಗೆಳೆಯರು ಸೇರಿ ನಿರ್ಮಾಣ ಮಾಡುತ್ತಿದ್ದಾರೆ. ಹರಿಸಿರಿ ಎಂಟರ್‌ಟೈನರ್‌ನ ಉಮಾಶಂಕರ್‌ ಎಂ.ಜಿ.(ಆನಂದ್) ಪ್ರಕೃತಿ ಪ್ರೊಡಕ್ಷನ್ಸ್‌ನ ಶರಣಪ್ಪ, ಗೌರಮ್ಮ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ದಿಗಂತ್‌ ಹೀರೋ ಎನ್ನುವುದು ಪಕ್ಕಾ ಆಗಿದೆ. ಇನ್ನುಳಿದಂತೆ ಚಿತ್ರದಲ್ಲಿ ಯಾರೆಲ್ಲಾ ಇರಲಿದ್ದಾರೆ, ಶೀರ್ಷಿಕೆ ಏನು, ಎಲ್ಲೆಲ್ಲಿ ಚಿತ್ರೀಕರಣ ನಡೆಯಲಿದೆ, ತಾಂತ್ರಿಕ ವರ್ಗದಲ್ಲಿ ಯಾರೆಲ್ಲ ಇರುತ್ತಾರೆ ಎನ್ನುವುದಕ್ಕೆ ಇಷ್ಟರಲ್ಲೇ ಮಾಹಿತಿ ಕೊಡುವುದಾಗಿ ಹೇಳುತ್ತಾರೆ ನಿರ್ದೇಶಕ ಗೌಸ್‌ಪೀರ್.‌

ಗೌಸ್‌ಪೀರ್‌, ಶರಣಪ್ಪ,ಆನಂದ್

ಅಂದಹಾಗೆ, ಗೌಸ್‌ಪೀರ್‌ ನಿರ್ದೇಶನದ ಈ ಚಿತ್ರ ವಿಭಿನ್ನ ಜಾನರ್‌ನಲ್ಲಿದ್ದು, ಸಸ್ಪೆನ್ಸ್‌ ಥ್ರಿಲ್ಲರ್‌ ಅಂಶಗಳೇ ಇಲ್ಲಿ ಹೈಲೈಟ್ ಆಗಿವೆಯಂತೆ. ಈಗಿನ ಟ್ರೆಂಡ್‌ಗೆ ತಕ್ಕಂತಹ ಕಥೆ ಇದಾಗಿದ್ದು, ದಿಗಂತ್‌ ಅವರನ್ನಿಲ್ಲಿ ಹೊಸ ರೂಪದಲ್ಲಿ ತೋರಿಸುವ ಯೋಚನೆ ನಿರ್ದೇಶಕರಗಿದೆಯಂತೆ. ಈ ಪಾತ್ರದಲ್ಲಿ ದಿಗಂತ್‌ ಹೊಸ ರೂಪ ತಾಳಲಿದ್ದಾರೆ ಎನ್ನುವ ನಿರ್ದೇಶಕರು, ದಿಗಂತ್‌ ಅವರು ಇದೇ ಮೊದಲ ಬಾರಿಗೆ ಅಂಥದ್ದೊಂದು ಪಾತ್ರ ನಿರ್ವಹಿಸುತ್ತಿದ್ದಾರೆ ಎನ್ನುತ್ತಾರೆ ನಿರ್ದೇಶಕ ಗೌಸ್‌ಪೀರ್.‌


ಗೌಸ್‌ಪೀರ್‌ ಮತ್ತು ದಿಗಂತ್‌ ಅವರ ಕಾಂಬಿನೇಷನ್‌ನಲ್ಲಿ ಈ ಹಿಂದೆ “ಶಾರ್ಪ್‌ ಶೂಟರ್‌” ಚಿತ್ರ ಬಂದಿತ್ತು. ಅದೊಂದು ಫನ್ನಿ ಎಲಿಮೆಂಟ್ಸ್‌ನೊಂದಿಗೆ ನೋಡುಗರನ್ನು ರಂಜಿಸಿತ್ತು. ಪುನಃ ಅದೇ ಜೋಡಿ ಈಗ ಮೋಡಿ ಮಾಡುವಂತಹ ಸ್ಕ್ರಿಪ್ಟ್‌ನೊಂದಿಗೆ ಬರುತ್ತಿದೆ. ದಿಗಂತ್‌ ಕೂಡ ಗೌಸ್‌ಪೀರ್‌ ಕಥೆ ಕೇಳಿ ಥ್ರಿಲ್‌ ಅಗಿದ್ದು, ಹೊಸ ಬಗೆಯ ಕಥೆಯಲ್ಲಿ ಕೆಲಸ ಮಾಡುತ್ತಿರುವುದಕ್ಕೆ ಖುಷಿಯಾಗಿದ್ದಾರೆ. ಅದೇನೆ ಇರಲಿ, ದಿಗಂತ್‌ ಈಗ ಎಚ್ಚರದ ಆಯ್ಕೆಯಲ್ಲಿದ್ದಾರೆ. ಹಾಗಾಗಿಯೇ, ತಮಗೆ ಇಷ್ಟವಾಗುವಂತಹ ಕಥೆಗಳನ್ನು ಆಯ್ಕೆ ಮಾಡಿಕೊಂಡು ಸಿನಿಮಾ ಮಾಡುತ್ತಿದ್ದಾರೆ. “ಶಾರ್ಪ್‌ ಶೂಟರ್‌” ಮೂಲಕ ಎಲ್ಲರನ್ನು ಸೆಳೆದಿದ್ದ ಗೌಸ್‌ಪೀರ್‌ ಮತ್ತು ದಿಗಂತ್‌, ಈಗ ಸಸ್ಪೆನ್ಸ್‌ ಥ್ರಿಲ್ಲರ್‌ ಕಥೆಯೊಂದಿಗೆ ಬರುತ್ತಿದ್ದಾರೆ. “ಗಾಳಿಪಟ 2” ಚಿತ್ರದ ಚಿತ್ರೀಕರಣ ಮುಗಿಸಿಕೊಂಡು ಬಂದ ಬಳಿಕ ಚಿತ್ರಕ್ಕೆ ಚಾಲನೆ ದೊರೆಯಲಿದೆ.

Related Posts

error: Content is protected !!