ಕೊರೋನಾ ಯಾವಾಗ ಹೋಗುತ್ತೆ ? ಈ ಪ್ರಶ್ನೆಗೆ ಉತ್ತರ ಯಾರಿಗಾದ್ರು ಗೊತ್ತಾ ? ಖಂಡಿತಾ ಇಲ್ಲ. ಯಾಕಂದ್ರೆ, ಕಳೆದ ಒಂದು- ಒಂದೂವರೆ ವರ್ಷದಿಂದ ಇಡೀ ಜಗತ್ತೇ ಕೊರೋನಾ ಮಹಾಮಾರಿಯ ಅಟ್ಟಹಾಸದಲ್ಲಿ ನಲುಗಿ ಹೋಗಿದೆ. ಒಂದನೇ ಅಲೆ ಮುಗಿದು, ಈಗ ಎರಡನೇ ಅಲೆ ಇದೆಯಂತೆ. ಜನರೆಲ್ಲಾ ಕೊರೋನಾ ಎರಡನೇ ಅಲೆಯೂ ಮುಗಿದಿದೆ ಅಂದ್ಕೊಂಡಿದ್ದಾರೆ. ಆದರೆ, ಸರ್ಕಾರ ಹೇಳುವ ಪ್ರಕಾರ ಇನ್ನು ಎರಡನೇ ಅಲೆಯೇ ಇದೆ. ಇದು ಮುಗಿದ ನಂತ್ರ ಮೂರನೇ ಅಲೆ ಬರುತ್ತೆ ಅಂತ ಹೇಳಲಾಗುತ್ತಿದೆ. ಅಲ್ಲಿಗೆ ಈ ಕೊರೋನಾ ಇನ್ನೇಷ್ಟು ದಿನ ಇರುತ್ತೆ ? ಯಾವಾಗ ಹೋಗುತ್ತೆ ? ಅಂದಾಜು ಕೂಡ ಮಾಡಲಾಗುತ್ತಿಲ್ಲ. ಕೊರೋನಾ ಬಗ್ಗೆ ಎಚ್ಚರಿಕೆ ನೀಡುತ್ತಿರುವ ತಜ್ಜರಿಗೂ ಇದು ಗೊತ್ತಿಲ್ಲ. ಆದರೆ, ಕೊರೋನಾ ಯಾವಾಗ ಹೋಗುತ್ತೆ ಎನ್ನುವುದರ ಬಗ್ಗೆ ಕನ್ನಡ ಚಿತ್ರರಂಗದ ಹಿರಿಯ ನಟ ಕ್ರೇಜಿಸ್ಟಾರ್ ರವಿಚಂದ್ರನ್ ಭವಿಷ್ಯ ನುಡಿದ್ದಾರೆ. ಅವರು ಹೇಳುವ ಪ್ರಕಾರ ಕೊರೋನಾ ತಾನಾಗಿಯೇ ಹೋಗೋದಿಲ್ಲ, ಅದನ್ನು ಜನರೇ ಹೋಗಿಸಬೇಕಂತೆ. ಅದು ಹೇಗೆ ಅಂತ ಅವ್ರು ಕೊಡುವ ಕಾರಣ ಇದು.
‘ಎಲ್ಲರೂ ಕೊರೋನಾ ಕೊರೋನಾ ಅಂತ ಮನೆ ಹಿಡಿದು ಕುಳಿತಿದ್ದಾರೆ. ಏನಾಗುತ್ತೋ ಎನ್ನುವ ಭಯ ಅವರನ್ನು ಆವರಿಸಿಕೊಂಡಿದೆ. ಅದೇ ಕಾರಣಕ್ಕೆ ಎಲ್ಲ ಉದ್ಯಮವೋ ಬಿದ್ದು ಹೋಗಿದೆ. ಇದೆಲ್ಲ ಸರಿ ಆಗಬೇಕಾದ್ರೆ ಕೊರೋನಾ ಹೋಗಬೇಕು. ಕೊರೋನಾ ಹೋಗಬೇಕಾದ್ರೆ ಜನರು ಭಯ ಬಿಡಬೇಕು. ಭಯ ಬಿಟ್ಟು ಫೀಲ್ಡಿಗಿಳಿದರೆ ಕೊರೋನಾ ತಾನಾಗಿಯೇ ಹೊಗುತ್ತೆ’ ಅಂತ ನಟ ರವಿಚಂದ್ರನ್ ಹೇಳ್ತಾರೆ.
‘ದೃಶ್ಯ 2’ ಚಿತ್ರದ ಸುದ್ದಿಗೋಷ್ಠಿಯ ಮೂಲಕ ಮೊನ್ನೆಯಷ್ಟೇ ನಟ ರವಿಚಂದ್ರನ್ ಮಾಧ್ಯಮದ ಮುಂದೆ ಬಂದಿದ್ದರು. ಮಾಧ್ಯಮದವರನ್ನು ನೋಡಿ ಅವರಿಗೆ ಶಾಕ್. ಯಾಕಂದ್ರೆ ಎಲ್ಲರೂ ಕೂಡ ಮಾಸ್ಕ್ ಹಾಕ್ಕೊಂಡೆ ಅಲ್ಲಿಗೆ ಹಾಜರಾಗಿದ್ದರು. ಸರ್ಕಾರದ ರೂಲ್ಸು- ಗಿಲ್ಸು ಅದೆಲ್ಲ ತಮಗ್ಯಾಕೆ ಬೇಕು ಅಂತ ಆ ಬಗ್ಗೆ ಮಾತನಾಡದೆ ಮೊದಲು ‘ದೃಶ್ಯ 2’ ಸಿನಿಮಾದ ಕುರಿತು ಮಾತನಾಡ ಹೊರಟರು. ಮಾತಿನ ಮಧ್ಯೆ ಸಿನಿಮಾ ರಿಲೀಸ್ ಮಾತು ಬಂತು. ಹಾಗೆಯೇ ಈಗಿರುವ ಚಿತ್ರಮಂದಿರಗಳ ಪರಿಸ್ಥಿತಿಯ ಬಗ್ಗೆಯೂ ಮಾತನಾಡಿದರು. ಎಲ್ಲವೂ ಸರಿ ಹೋಗಬೇಕಾದರೆ, ಚಿತ್ರಮಂದಿರಗಳು ಮೊದಲಿನಂತೆ ಒಪನ್ ಆಗ್ಬೇಕು, ಚಿತ್ರಮಂದಿರಗಳಿಗೆ ಜನರು ಬರಬೇಕು. ಅಲ್ಲಿಗೆ ಜನ ಬರಬೇಕಾದರೆ ಜನರಲ್ಲಿ ಕೊರೋನಾ ಭಯ ಹೋಗಬೇಕು, ಆಗ ಮಾತ್ರ ಚಿತ್ರೋದ್ಯಮಕ್ಕೆ ಒಳ್ಳೆಯ ದಿನಗಳು ಬಂದೇ ಬರುತ್ತವೆ ಎಂದರು ಕ್ರೇಜಿಸ್ಟಾರ್.
ಡ್ರಗ್ಸ್ ಮಾಫಿಯಾ ಪ್ರಕರಣದಲ್ಲಿ ನಟಿಯರು ಮಾತ್ರವಲ್ಲ ನಟರು ಇದ್ದಾರೆ ಅಂತ ಕಳೆದ ವರ್ಷವೇ ಹೇಳಿದ್ದೆ ಈಗಲೂ ಹೇಳ್ತೀನಿ. ಶುಕ್ರವಾರ-ಶನಿವಾರ-ಭಾನುವಾರ ಪೇಜ್ ತ್ರಿ ಪಾರ್ಟಿ ಮಾಡ್ತಾರೆ. ಫಾರ್ಮ್ ಹೌಸ್ ಗಳಲ್ಲಿಮಿಡ್ನೈಟ್ ಅಲ್ಲ ಬೆಳಗಿನ ಜಾವದವರೆಗೂ ಮತ್ತಲ್ಲಿ ತೇಲುತ್ತಾರೆಿ.ಇದು ಪ್ರಶಾಂತ್ ಸಂಬರಗಿ ಬಿಚ್ಚಿಟ್ಟ ರೋಚಕ ಕಥೆ
ಸ್ಯಾಂಡಲ್ವುಡ್ಗೆ ಸ್ಯಾಂಡಲ್ವುಡ್ಡೇ ಬೆಚ್ಚುವಂತಹ ಬೆಳವಣಿಗೆಗಳು ಆಗುತ್ತಿವೆ. ಸಂಜನಾ-ರಾಗಿಣಿ ಡ್ರಗ್ಸ್ ಸೇವನೆ ದೃಢಪಟ್ಟ ಬೆನ್ನಲ್ಲೇ ಸಾಮಾಜಿಕ ಕಾರ್ಯಕರ್ತರಾದ ಪ್ರಶಾಂತ್ ಸಂಬರ್ಗಿ ಮತ್ತೊಂದು ಅಚ್ಚರಿಯ ಹೇಳಿಕೆ ಕೊಟ್ಟಿದ್ದಾರೆ. ಸ್ಯಾಂಡಲ್ವುಡ್ ಅಂಗಳದಲ್ಲಿ ನಟಿಮಣಿಯರು ಮಾತ್ರ ಡ್ರಗ್ಸ್ ವ್ಯಸನಿಗಳಾಗಿದ್ದಾರೆಂದು ತಿಳಿದುಕೊಳ್ಳಬೇಡಿ, ನಟರುಗಳು ಕೂಡ ಮಾದಕ ದ್ರವ್ಯಕ್ಕೆ ಮಾರುಹೋಗಿದ್ದಾರೆ. ಮತ್ತಿನ ಮತ್ತಲ್ಲಿ ತೇಲಾಡುತ್ತಾ, ಕೂಗಾಡುತ್ತಾ, ಕಿರುಚಾಡುತ್ತಾ, ಅರಚಾಡುತ್ತಾ, ಸುಮ್ ಸುಮ್ಮನೇ ನಗುತ್ತಾ, ಆವೇಶಭರಿತ ಮಾತುಗಳನ್ನಾಡುತ್ತಾ, ಸಮ್ ಟೈಮ್ಸ್ ಸಪ್ಪೇ ಮೋರೆ ಹಾಕಿಕೊಳ್ಳುತ್ತಾ, ಸಮ್ ಟೈಮ್ಸ್ ಖುಷಿ ಖುಷಿಯಿಂದ ಜಿಗಿದಾಡುತ್ತಾ ಮಾದಕಲೋಕದಲ್ಲಿ ಮೆರೆಯುವ ನಟರುಗಳು ನಮ್ಮಲ್ಲಿದ್ದಾರೆ. ಅವರೆಲ್ಲರ ಅಸಲಿಯತ್ತು ಒಂದಲ್ಲಾ ಒಂದು ದಿನ ಬಟಾಬಯಲಾಗುತ್ತೆ ಎನ್ನುವ ಪ್ರಶಾಂತ್ ಸಂಬರ್ಗಿ, ಸಿನಿಲಹರಿ ಜೊತೆ ಮಾತನಾಡುತ್ತಾ ತೂಕ ಹೆಚ್ಚಿಸಿಕೊಂಡಿರುವ ನಟರುಗಳಿಗೂ- ಡ್ರಗ್ಸ್ ಗೂ ಇರುವ ನಂಟೇನು ಅನ್ನೋದನ್ನ ಬಿಚ್ಚಿಟ್ಟಿದ್ದಾರೆ.
ಡ್ರಗ್ಸ್ ಮಾಫಿಯಾ ಪ್ರಕರಣದಲ್ಲಿ ನಟಿಯರು ಮಾತ್ರವಲ್ಲ ನಟರು ಇದ್ದಾರೆ ಅಂತ ಕಳೆದ ವರ್ಷವೇ ಹೇಳಿದ್ದೆ ಈಗಲೂ ಹೇಳ್ತೀನಿ. ಶುಕ್ರವಾರ-ಶನಿವಾರ-ಭಾನುವಾರ ಪೇಜ್ ತ್ರಿ ಪಾರ್ಟಿ ಮಾಡ್ತಾರೆ. ಫಾರ್ಮ್ ಹೌಸ್ ಗಳಲ್ಲಿಮಿಡ್ನೈಟ್ ಅಲ್ಲ ಬೆಳಗಿನ ಜಾವದವರೆಗೂ ಮತ್ತಲ್ಲಿ ತೇಲುತ್ತಾರೆ. ಡ್ರಗ್ಸ್ ವ್ಯಾಪಾರ ದಂಧೆ-ದುಡಿಮೆ ಮಾಡುವ ಮನಸ್ಥಿತಿ ನಟರಿಗಿಲ್ಲ, ಆದರೆ ಮೋಜು ಮಸ್ತಿಗೇನು ಕಮ್ಮಿಯಿಲ್ಲ ಎನ್ನುವ ಪ್ರಶಾಂತ್, ಯಾವ್ಯಾವ ನಟರು ಡ್ರಗ್ಸ್ ವ್ಯಸನಿಯಾಗಿದ್ದಾನೆಂದು ನಾನು ಮಾಧ್ಯಮದ ಮುಂದೆ ಓಪನ್ ಆಗಿ ಹೇಳೋದಕ್ಕೆ ಆಗದೇ ಇರ್ಬೋದು ಆದರೆ ಒಂದೇ ಒಂದು ಸುಳಿವನ್ನ ಕೊಡ್ತೀನಿ ಅಂತ ಕೊಟ್ಟಿದ್ದಾರೆ. ನೀವುಗಳೇ ಆ ನಟರು ಯಾರೆಂದು ಪತ್ತೆಹಚ್ಚಬಹುದು ಹೀಗಂತ ಮಾತು ಶುರುಮಾಡಿದ ಪ್ರಶಾಂತ್ ಸಂಬರ್ಗಿಯವರು, ಕಳೆದ ಎರಡು ವರ್ಷಗಳಲ್ಲಿ ಯಾವ ನಟರ ತೂಕ ಹೆಚ್ಚಾಗಿದೆಯೋ ಆ ನಟರು ಡ್ರಗ್ಸ್ ಗೆ ಅಡಿಕ್ಟ್ ಆಗಿದ್ದಾರೆಂದು ಅರ್ಥ ಎಂದಿದ್ದಾರೆ. ಸಂಬರ್ಗಿಯವರ ಈ ಸ್ಟೇಟ್ಮೆಂಟ್ ಕಿವಿಗೆ ಬಿದ್ಮೇಲೆ ಸ್ಯಾಂಡಲ್ವುಡ್ನ ಒಂದಿಷ್ಟು ನಟರುಗಳು ಕಣ್ಮುಂದೆ ಬಂದು ನಿಲ್ತಾರೆ. ಹಾಗೇ ಬಂದುನಿಂತ ನಟರುಗಳು ದಪ್ಪ ಇದ್ದಾರೆ ಎಂದ ಮಾತ್ರಕ್ಕೆ ಅವರು ಡ್ರಗ್ಸ್ ದಾಸರಾಗಿದ್ದಾರೆಂದು ಒಪ್ಪಿಕೊಳ್ಳುವುದಕ್ಕೆ ಆಗಲ್ಲ. ಯಾಕಂದ್ರೆ, ನಟರುಗಳು ದಪ್ಪ ಆಗೋದು.. ಸಣ್ಣ ಆಗೋದು ಮಾಮೂಲಿ.
ಸಿನಿಮಾಗೋಸ್ಕರ ನಟರುಗಳು ಬದಲಾಗುತ್ತಾರೆ, ಬದಲಾಗಬೇಕಾಗುತ್ತದೆ. ಪಾತ್ರಕ್ಕೆ ಜೀವ ತುಂಬಲು ಕೆಲವೊಮ್ಮೆ ತೂಕ ಹೆಚ್ಚಿಸಿಕೊಳ್ಳಬೇಕಾಗು ತ್ತದೆ, ಕೆಲವೊಮ್ಮೆ ತೂಕ ಇಳಿಸಿಕೊಳ್ಳಬೇಕಾಗುತ್ತದೆ. ಒಂದು ಸಿನಿಮಾಗೆ ಕಮಿಟ್ ಆದ್ಮೇಲೆ ಆ ಸಿನಿಮಾದ ಪಾತ್ರ ಎರೆಡೆರಡು ಶೇಡ್ ಇದ್ದಲ್ಲಿ, ಆ ಪಾತ್ರ ತೂಕವನ್ನು ಹೆಚ್ಚು ಕಡಿಮೆ ಕೇಳಿದ್ದಲ್ಲಿ, ಆ ಪಾತ್ರದ ಚಿತ್ರೀಕರಣ ದ ಸಮಯ ವರ್ಷಗಳು ಹಿಡಿದಲ್ಲಿ ಆ ಚಿತ್ರದ ನಾಯಕನ ದೇಹದ ಹೆಚ್ಚುಕಡಿಮೆಯಾಗುತ್ತೆ. ದಪ್ಪಗಾಗೋದಕ್ಕೆ ಹಾಗೂ ಸಣ್ಣಗಾಗೋದಕ್ಕೆ ಜಿಮ್ ಬಾಗಿಲು ಬಡಿಯುತ್ತಾರೋ, ಫಿಟ್ನೆಸ್ ಟ್ರೈನರ್ಗಳ ಸಲಹೆಯಂತೆ ಸ್ಟಿರಾಯ್ಡ್ ಗಳನ್ನು ತೆಗೆದುಕೊಳ್ತಾರೋ ಅಥವಾ ಯಾವುದು ಬೇಡ ಗುರು ಅಂತ ನಾಲ್ಕು ಗೋಡೆಯ ಮಧ್ಯೆ ದೇಹದಂಡಿಸ್ತಾರೋ ಗೊತ್ತಿಲ್ಲ. ಒಟ್ನಲ್ಲಿ, ಸಿನಿಮಾಗೋಸ್ಕರ ಕಟ್ಟುಮಸ್ತಾಗಿ ಮೈಹುರಿಗೊಳಿಸಿಕೊಂಡು ಅಖಾಡಕ್ಕೆ ಧುಮುಕುತ್ತಾರೆ. ಕಮಿಟ್ ಆದಂತೆ ಆ ಮೂವೀನಾ ಮುಗಿಸಿಕೊಡ್ತಾರೆ, ಅನ್ನದಾತರನ್ನ ಉಳಿಸ್ತಾರೆ, ಚಿತ್ರರಂಗವನ್ನ ಬೆಳೆಸ್ತಾರೆ, ಕೋಟ್ಯಾಂತರ ಪ್ರೇಕ್ಷಕರನ್ನ ರಂಜಿಸ್ತಾರೆ. ಇದೆಲ್ಲಾ ಹೊರಜ ಗತ್ತಿಗೆ ಗೊತ್ತಿದೆ. ಇದರಾಚೆಗಿರುವ ಸತ್ಯಾಸತ್ಯತೆ ಸಾಮಾನ್ಯರಿಗೆ ಗೊತ್ತಿಲ್ಲ ಅಷ್ಟು ಸುಲಭವಾಗಿ ತಿಳಿಯೋದು ಇಲ್ಲ ಬಿಡಿ.
ಹಾಗಾದ್ರೆ, ಯಾವುದು ಸತ್ಯ? ಯಾವುದು ಸುಳ್ಳು? ಗೊತ್ತಿಲ್ಲ. ಆದರೆ, ಕೆಲವು ಸತ್ಯ ನನಗೆ ಗೊತ್ತಿದೆ ಎನ್ನುವ ಪ್ರಶಾಂತ್ ಸಂಬರ್ಗಿಯವರು ಕೆಲವು ನಟರು ಸಿನಿಮಾಗಾಗಿ ದಪ್ಪ ಆಗಿದ್ದಾರೆ ಅಂತ ನೀವು ತಿಳಿದುಕೊಂಡಿದ್ದೀರಾ ಅಷ್ಟೇ. ಆದರೆ, ಅವರುಗಳು ದಪ್ಪ ಆಗಿರುವುದು ಮೂವಿಗೋಸ್ಕರ ಅಲ್ಲ, ಬದಲಾಗಿ ಡ್ರಗ್ಸ್ ಅಡಿಕ್ಟ್ ಆಗಿ ತೂಕ ಹೆಚ್ಚಾಗಿದೆ ಎಂದಿದ್ದಾರೆ. ಡ್ರಗ್ಸ್ ನಲ್ಲಿ ಅಪ್ ಡ್ರಗ್ಸ್ ಹಾಗೂ ಡೌನ್ ಡ್ರಗ್ಸ್ ಎನ್ನುವ ಎರಡು ರೀತಿಯದಿದ್ದೇ. ಅಪ್ ಡ್ರಗ್ಸ್ ನಲ್ಲಿ ಗಾಂಜಾ ಬರುತ್ತೆ. ಇದು ತುಂಬಾ ಖುಷಿಪಡಿಸುತ್ತೆ. ಹೊಟ್ಟೆ ತುಂಬಾ ಊಟ ಮಾಡ್ತಾರೆ, ಸದಾ ಹ್ಯಾಪಿಯಾಗಿರುತ್ತಾರೆ. ಸುಮ್ ಸುಮ್ನೆ ನಗ್ತಾರೆ, ಕಿರುಚಾಡುತ್ತಾರೆ, ಹೊಡೆದಾಡುತ್ತಾರೆ, ಆವೇಶಭರಿತ ಮಾತುಗಳನ್ನಾಡುತ್ತಾರೆ. ಅದೇ, ರೀತಿ ಡೌನ್ ಡ್ರಗ್ಸ್ ಅಡಿಕ್ಟ್ ಆದ ನಟರುಗಳು ಇದ್ದಾರೆ. ಕೆಮಿಕಲ್ ಡ್ರಗ್ಸ್ನ ಸೇವನೆ ಮಾಡಿಕೊಂಡು ಗರ ಬಡಿದವರ ಥರ ಇರುತ್ತಾರೆ. ಟೈಮ್ ಟು ಟೈಮ್ ಊಟ ಮಾಡಲ್ಲ, ನಿದ್ದೆ ಮಾಡಲ್ಲ. ಒಂಟಿಯಾಗಿ ಅಲೆಮಾರಿ ಥರ ಇರುವುದು ನಿಲ್ಲಿಸಿಲ್ಲ ಅವರು ಹೀಗಂತ ಪ್ರಶಾಂತ್ ಹಿಂಟ್ ಮೇಲೆ ಹಿಂಟ್ ಕೊಟ್ಟಿದ್ದಾರೆ.
ಇಷ್ಟಕ್ಕೆ ಸುಮ್ಮನಾಗದ ಪ್ರಶಾಂತ್ ಸಂಬರ್ಗಿಯವರು, ಗಾಂಜಾ ಸೇವನೆ ಮಾಡಿದವರು ಹೆಚ್ಚು ಊಟ ಮಾಡ್ತಾರೆ, ನಾನ್ ವೆಜ್ ತಿನ್ನುತ್ತಾರೆ ಇದರಿಂದ ಐದಲ್ಲ ಹತ್ತಲ್ಲ ೧೫ ಕೆಜಿ ತೂಕ ಜಾಸ್ತಿಯಾಗುತ್ತೆ ಎಂದಿದ್ದಾರೆ. ನಾನು ಕಾಗಕ್ಕ ಗುಬ್ಬಕ್ಕ ಸ್ಟೋರಿ ಹೇಳುತ್ತಿಲ್ಲ ಕಳೆದ ಎರಡು ವರ್ಷದಿಂದ ಡ್ರಗ್ಸ್ ದಾಸರ ಮೇಲೆ ವರ್ಕ್ ಮಾಡಿದ್ದೇನೆ. ೧೫೦ ರಿಯಾಬಿಲಿಟೇಷನ್ ಮಾಡಿ ಅದರ ಬಗ್ಗೆ ತಿಳಿದುಕೊಂಡಿದ್ದೇನೆ. ಮಾದಕ ವ್ಯಸನಕ್ಕೆ ಒಳಗಾದವರ ಮನಸ್ತಿತಿ ಹೇಗಿರುತ್ತೆ ಎಂದು ಅರಿತುಕೊಂಡಿದ್ದೇನೆ. ನಾನು ಯಾರೊಬ್ಬರನ್ನೂ ಟಾರ್ಗೆಟ್ ಮಾಡಿ ಹೇಳುತ್ತಿಲ್ಲ. ಸಮಾಜಕ್ಕೆ ಕಂಟಕವಾಗಿರುವ ಡ್ರಗ್ಸ್ ಮಾಫಿಯಾ ತೊಡೆದು ಹಾಕುವುದಕ್ಕೆ ತನ್ನ ಕೈಲಾದ ಪ್ರಯತ್ನ ಮಾಡುತ್ತಿದ್ದೇನೆ. ತನಗೆ ಗೊತ್ತಿರುವ ಹೆಚ್ಚಿನ ಮಾಹಿತಿಯನ್ನ ಪೊಲೀಸರಿಗೆ ಒಪ್ಪಿಸಲಿದ್ದೇನೆ ಎಂದಿದ್ದಾರೆ ಪ್ರಶಾಂತ್.
ಜಾಮೀನ ಮೇಲೆ ಜೈಲಿನಿಂದ ಹೊರ ಬಂದ ಮೇಲೆ ರಾಗಿಣಿ, ಸಂಜನಾ ಇಬ್ಬರೂ ಫ್ರೀ ಬರ್ಡ್ ನಂತೆಯೇ ಹಾರಾಡಿಕೊಂಡಿದ್ದರು. ಪ್ರಕರಣದ ಬಗ್ಗೆ ಮಾತನಾಡದೆ, ದೇವರಿದ್ದಾನೆ ಅಂತ ನಂಬಿಕೊಂಡಿದ್ದರು. ಆದರೆ ಈಗ ರಿಯಾಲಿಟಿ ರಿವೀಲ್ ಆಗಿದೆ. ಇಬ್ಬರಿಗೂ ಈಗ ಸಂಕಷ್ಟ ಬಂದಾಗಿದೆ..
ಸ್ಯಾಂಡಲ್ವುಡ್ ಮತ್ತೆ ಬೆಚ್ಚಿ ಬಿದ್ದಿದೆ. ಡ್ರಗ್ಸ್ ಮಾಫಿಯಾ ಪ್ರಕರಣದಲ್ಲಿ ಬಂಧಿತರಾಗಿ ಜಾಮೀನಿನ ಮೇಲೆ ಹೊರಬಂದಿದ್ದ ನಟಿಯರಾದ ರಾಗಿಣಿ ದ್ವಿವೇದಿ ಹಾಗೂ ಸಂಜನಾ ಗಲ್ರಾನಿ ಇಬ್ಬರಿಗೂ ಈಗ ಮತ್ತೆ ಸಂಕಷ್ಟ ಎದುರಾಗಿದೆ. ಇಬ್ಬರೂ ನಟಿಯರು ಡ್ರಗ್ಸ್ ಸೇವನೆ ಮಾಡಿರುವುದು ಈಗ ಎಫ್ಎಸ್ಎಲ್ ಪರೀಕ್ಷೆಯಲ್ಲಿ ದೃಢ ಪಟ್ಟಿದೆ. ಪ್ರಕರಣ ಕುರಿತು ತನಿಖೆ ನಡೆಸಿದ್ದ ಸಿಸಿಬಿ ಪೊಲೀಸರು, ಎಫ್ಎಸ್ಎಲ್ ವರದಿಯನ್ನು ಈಗಾಗಲೇ ಕೋರ್ಟ್ಗೂ ಸಲ್ಲಿಕೆ ಮಾಡಿದ್ದಾರೆ. ಈಗ ಶುರುವಾಗಿರೋದು ಈ ಇಬ್ಬರು ನಟಿಮಣಿಯರ ಕಥೆ ಮುಂದೇನು ಅಂತ.
ಡ್ರಗ್ಸ್ ಸೇವನೆ ದೃಢ ಪಟ್ಟಿರೋದ್ರಿಂದ ಮುಂದೆ ಇಬ್ಬರಿಗೂ ಮತ್ತೆ ಜೈಲಾ ಅಥವಾ ಇನ್ನೇನಾದರೂ ಶಿಕ್ಷಗೆ ಗುರಿಯಾಗಿ ಜೈಲಿಗೆ ಹೋಗದೆ ಉಳಿಯುತ್ತಾರಾ? ಎಫ್ಎಸ್ಎಲ್ ವರದಿ ಬಹಿರಂಗವಾದ ಬೆನ್ನಲೇ ಚಿತ್ರರಂಗದಲ್ಲಿ ಇಂತಹ ಪ್ರಶ್ನೆಗಳು ಹುಟ್ಟಿಕೊಂಡಿವೆ. ಸದ್ಯಕ್ಕೆ ಎಫ್ಎಸ್ಎಲ್ ಪರೀಕ್ಷಾ ವರದಿ ಈಗ ಕೋರ್ಟ್ಗೆ ಹೋಗಿದೆ. ಕೋರ್ಟ್ ಅದನ್ನು ಹೇಗೆ ತೆಗೆದುಕೊಳ್ಳುತ್ತದೆ ಎನ್ನುವುದು ಕುತೂಹಲ ಮೂಡಿಸಿದೆ. ಆದರೆ ಡ್ರಗ್ಸ್ ಮಾಫಿಯಾ ಪ್ರಕರಣದಲ್ಲಿ ಇದು ದೊಡ್ಡ ಸಾಕ್ಷಿ ಆಗುವ ಸಾಧ್ಯತೆ ಇದೆ. ಇದೆಲ್ಲ ನೋಡಿದರೆ ಇಬ್ಬರೂ ನಟಿಯರಿಗೆ ಸಂಕಷ್ಟ ಎದುರಾಗುವುದು ಖಚಿತ ಅಂತಲೂ ಹೇಳಲಾಗುತ್ತಿದೆ. ಆ ಮೂಲಕ ಡ್ರಗ್ಸ್ ಮಾಫಿಯಾ ಪ್ರಕರಣ ಇನ್ನೊಂದು ಹಂತಕ್ಕೆ ಕಾಲಿಡಲಿದೆ.
ಹೆಚ್ಚು ಕಡಿಮೆ ಒಂದು ವರ್ಷದ ಹಿಂದೆ ಸ್ಯಾಂಡಲ್ ವುಡ್ ನಲ್ಲಿ ಭಾರೀ ಸಂಚಲನ ಸೃಷ್ಟಿಸಿದ ಪ್ರಕರಣ ಇದು. ಡ್ರಗ್ಸ್ ಮಾಫಿಯಾ ಪ್ರಕರಣ ಹೊರ ಬಂದ ದಿನಗಳಲ್ಲಿ ಸ್ಯಾಂಡಲ್ವುಡ್ ಮಂದಿಯ ಕೆಲವು ಹೆಸರುಗಳು ಒಂದೊಂದಾಗಿಯೇ ಹೊರಬರುತ್ತಿದ್ದಂತೆ ಇಡೀ ಚಿತ್ರರಂಗವೇ ಒಂದು ಕ್ಷಣ ನಡುಗಿ ಹೋಯಿತು. ಯಾಕಂದ್ರೆ ಸ್ಯಾಂಡಲ್ ವುಡ್ ಮಟ್ಟಿಗೆ ಇಂತಹ ಪ್ರಕರಣ ದೊಡ್ಡದಾಗಿ ಸುದ್ದಿ ಆಗಿದ್ದೇ ಅದೇ ಮೊದಲು. ಹಾಗೆ ನೋಡಿದರೆ ಇವತ್ತು ಕನ್ನಡ ಚಿತ್ರರಂಗವೂ ಕೂಡ ಟಾಲಿವುಡ್, ಕಾಲಿವುಡ್ ಮಟ್ಟಿಗೆ ಬೆಳೆದಿದೆ ಎನ್ನುವುದು ನಿಜವೇ ಆದರೂ, ಬಾಲಿವುಡ್ ನಲ್ಲಿರುವ ಮೋಜು ಮಸ್ತಿಯ ಸಂಸ್ಕೃತಿ ಇಲ್ಲಿ ಇಲ್ಲ ಅಂತಲೇ ಕನ್ನಡ ಸಿನಿಮಾ ಪ್ರೇಕ್ಷಕರು ನಂಬಿದ್ದರು. ಆದರೆ ಡ್ರಗ್ಸ್ ಮಾಫಿಯಾ ಪ್ರಕರಣ ಹೊರ ಬಂದ ಬೆನ್ನಲೇ ಅದರಲ್ಲಿ ನಟಿಯರಾದ ರಾಗಿಣಿ ದ್ವಿವೇದಿ, ಸಂಜನಾ ಗಲ್ರಾನಿ ಸೇರಿದಂತೆ ಕೆಲವರ ಹೆಸರು ಬಯಲಾಗುತ್ತಿದ್ದಂತೆ ಚಿತ್ರರಂಗ ಮಂದಿ ಮಾತ್ರವಲ್ಲ ಕನ್ನಡದ ಸಿನಿಮಾ ಪ್ರೇಕ್ಷಕಮೂಗಿನ ಮೇಲೆ ಬೆರಳಿಟ್ಟುಕೊಂಡರು.
ಅದು ಇನ್ನೊಂದು ಹೆಜ್ಜೆ ಮುಂದೆ ಹೋಗಿ ನಟಿಯರಾದ ರಾಗಿಣಿ ದ್ವಿವೇದಿ ಹಾಗೂ ಸಂಜನಾ ಗಲ್ರಾನಿ ಇಬ್ಬರನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದು ಜೈಲಿಗೆ ಕಳುಹಿಸಿದಾಗ ಚಿತ್ರರಂಗದ ನಟ-ನಟಿಯರ ಬಗ್ಗೆ ಜನರಲ್ಲಿದ್ದ ವಿಶ್ವಾಸಗಳೇ ಕಳೆದು ಹೋಗಿದ್ದು ಹೌದು. ಇಷ್ಟಾಗಿಯೂ ಆ ಹೊತ್ತಿಗೆ ಈ ಇಬ್ಬರು ನಟಿಯ ಮೇಲಿನ ಆರೋಪ ಸಾಬೀತು ಆಗಿರಲಿಲ್ಲ, ಜತೆಗೆ ಅವರ ಡ್ರಗ್ಸ್ ಸೇವನೆ ಮಾಡಿದ್ದು ಕೂಡ ದೃಢಪಟ್ಟಿರಲಿಲ್ಲ. ಅದೇ ಕಾರಣಕ್ಕೆ ಅವರಿಬ್ಬರೂ ಕೂಡ ಕೋರ್ಟ್ ಕೊಟ್ಟ ಜಾಮೀನಿನ ಮೇಲೆ ಹೊರ ಬಂದಿದ್ದು ನಿಮಗೂ ಗೊತ್ತು. ಅದರ ಜತೆಗೆ ಅವರೊಂದಿಗೆ ರಾತ್ರಿ ಪಾರ್ಟಿಗಳಲ್ಲಿ ಪಾಲ್ಗೊಳ್ಳುತ್ತಿದ್ದವರು, ಅವರನ್ನು ಇಂತಹ ಪೇಜ್ ತ್ರಿ ಪಾರ್ಟಿಗಳಿಗೆ ಇನ್ವೇಟ್ ಮಾಡುತ್ತಿದ್ದರ ಬಗ್ಗೆಯಾಗಲಿ ಅನುಮಾನಿ ಸುವುದು ಕಷ್ಟವೇ ಆಗಿತ್ತು. ಪರಿಸ್ಥಿತಿ ಈಗ ಬದಲಾಗುತ್ತಿದೆ. ಯಾಕಂದ್ರೆ ಈ ಇಬ್ಬರೂ ನಟಿಯರು ಡ್ರಗ್ಸ್ ಸೇವನೆ ಮಾಡಿರುವುದು ದೃಢಪಟ್ಟಿದೆ. ಪ್ರಕರಣದಲ್ಲಿ ಕೋರ್ಟ್ ಇದನ್ನು ಪ್ರಮುಖ ಸಾಕ್ಷಿಯಾಗಿ ಸ್ವೀಕರಿಸಿದರೆ, ಇಬ್ಬರಿಗೂ ಯಾವುದೇ ಬಗೆಯ ಕಠಿಣ ಶಿಕ್ಷೆ ನೀಡಬಹುದು. ಇದೇ ವಿಚಾರದಲ್ಲಿ ಈಗ ಜೈಲು ಹಕ್ಕಿಗಳಿಬ್ಬರಿಗೂ ಸಂಕಷ್ಟವೋ ಸಂಕಷ್ಟ.
ಫಿಕ್ಚರ್ ರಿಲೀಸ್ ಮುಂದಿದೆ. ಅದೇನಾಗುತ್ತೋ ಗೊತ್ತಿಲ್ಲ. ಆದರೆ, ಇವರಿಬ್ಬರು ಡ್ರಗ್ಸ್ ಸೇವನೆ ಮಾಡಿದ್ದು ದೃಢಪಟ್ಟಿರುವುದರ ಮೂಲಕ ಹೊಸ ವಿಚಾರಗಳು ಈಗ ಬಯಲಾಗಬೇಕಿದೆ. ಯಾಕಂದ್ರೆ ಇದೊಂದು ದೊಡ್ಡ ಮಾಫಿಯಾ ಅನ್ನೋದು ಮೊದಲಿನಿಂದಲೂ ಸದ್ದು ಮಾಡುತ್ತಾ ಬಂದಿದೆ. ದೊಡ್ಡ ದೊಡ್ಡ ರಾಜಕಾರಣಿಗಳು, ಪ್ರತಿಷ್ಟಿತ ಉದ್ಯಮಿಗಳು, ಸ್ಯಾಂಡಲ್ವುಡ್ನ ದಪ್ಪಗಿರುವ ಸ್ಟಾರ್ ಗಳು ಈ ಪ್ರಕರಣದಲ್ಲಿದ್ದಾ ರೆಂದೇ ಹೇಳಲಾಗುತ್ತಿದೆ. ಅದು ಮೊದಲು ಬಯಲಾಗಬೇಕು. ಆ ನಿಟ್ಟಿನಲ್ಲಿ ಡ್ರಗ್ಸ್ ಮಾಫಿಯಾ ಪ್ರಕರಣಕ್ಕೆ ಮುಂದೆ ಒಂದು ತಾರ್ಕಿಕ ಅಂತ್ಯ ಸಿಗಬಹುದಾ ಎನ್ನುವುದು ದೊಡ್ಡ ಕುತೂಹಲಸ ಸಂಗತಿ. ಸದ್ಯಕ್ಕೆ ರಾಗಿಣಿ, ಸಂಜನಾ ಅವರ ಮುಂದಿನ ಕಥೆ ಏನು ಅನ್ನೋದೇ ದೊಡ್ಡ ಪ್ರಶ್ನೆ. ಹಾಗೊಂದು ವೇಳೆ ಅವರಿಬ್ಬರಿಗೂ ಮತ್ತೆ ಜೈಲಿಗೆ ಹೋಗುವ ಪರಿಸ್ಥಿತಿ ಬಂದರೆ, ಅವರ ಬಣ್ಣದ ಬದುಕು ಏನಾಗುತ್ತೆ? ಎಲ್ಲವನ್ನು ಕಾಲವೇ ನಿರ್ಧರಿಸುತ್ತೆ.
ಕೊಟ್ರೇಶಿ ಕನಸು ಮೊದಲ್ಗೊಂಡು, ಸಾಹಿತಿ ಕುಂವೀ ಅವರ ಅನೇಕ ಕಥೆಗಳು, ಕಾದಂಬರಿಗಳು ಬೆಳ್ಳಿ ತೆರೆ ಮೇಲೆ ಮೂಡಿ ಬಂದಿವೆ. ಈಗ ಆ ಸಾಲಿಗೆ ಅವರೇ ಬರೆದ ʼಕುಬುಸʼ ಕಥೆ ಕೂಡ ಸಿನಿಮಾ ಆಗ್ತಿದೆ. ಇದರ ಫುಲ್ ಡಿಟೈಲ್ಸ್ ಇಲ್ಲಿದೆ.
ಸಾಹಿತಿ ಕುಂವೀ ವೀರಭದ್ರಪ್ಪ ಅವರಿಗೂ ಸಿನಿಮಾ ಜಗತ್ತಿಗೂ ಅವಿನಾಭಾವ ನಂಟು. ಯಾಕಂದ್ರೆ, ಅವರು ಬರೆದ ಅನೇಕ ಕಥೆಗಳು, ಕಾದಂಬರಿಗಳು ಸಿನಿಮಾ ಆಗಿವೆ. ಈಗ ಆ ಸಾಲಿಗೆ ಮತ್ತೊಂದು ಕಥೆ ಸೇರಿಕೊಂಡಿದೆ. ಆ ಕಥೆಯ ಹೆಸರು ಕುಬುಸ. ಇದು ಸಾಹಿತಿ ಕುಂವೀ ಅವರು ಬರೆದ ಜನಪ್ರಿಯ ಕಥೆಗಳಲ್ಲಿ ಒಂದು. ಈ ಕಥೆಯನ್ನಾಧರಿಸಿ ಈಗ ಯುವ ನಿರ್ದೇಶಕ ರಮೇಶ್ ಹಡಗಲಿ ಅವರು ಸಿನಿಮಾ ಮಾಡುತ್ತಿದ್ದು, ಸದ್ದಿಲ್ಲದೆ ಸುದ್ದಿ ಮಾಡದೆ ಲಾಕ್ಡೌನ್ ನಡುವೆ ಈ ಚಿತ್ರಕ್ಕೀಗ ಚಿತ್ರೀಕರಣವೂ ಮುಗಿದಿದೆ.
ಕುಂವೀ ಕಥೆ ಅಂದ್ರೆ ಹೆಚ್ಚೇನು ಹೇಳಬೇಕಿಲ್ಲ, ಅದರಲ್ಲಿ ಗ್ರಾಮೀಣ ಹಿನ್ನೆಲೆ ಯ ಜತೆಗೆ ಬಳ್ಳಾರಿಯ ಸೊಗಡು ಇದ್ದೇ ಇರುತ್ತೆ ಅನ್ನೋದು ಅಷ್ಟೇ ಸತ್ಯ. ಅದೇ ಹಿನ್ನೆಲೆಯಲ್ಲೀಗ ಚಿತ್ರ ತಂಡ ಚಿತ್ರಕ್ಕೆ ಹೊಸಪೇಟೆ ಸುತ್ತಮುತ್ತಲೇ ಚಿತ್ರೀಕರಣ ಮುಗಿಸಿಕೊಂಡು ಬಂದಿದೆ. ಪ್ರಮುಖವಾಗಿ ಎರಡು ಪಾತ್ರಗಳಿರುವ ಕಥೆ ಇದು. ತಾಯಿ-ಮಗನ ನಡುವೆ ನಡೆಯುವ ಮನ ಮೀಡಿಯುವ ಕಥಾ ಹಂದರ. ಅದರಲ್ಲಿ ʼರಾಮಾ ರಾಮಾ ರೇʼ ಖ್ಯಾತಿಯ ಯುವ ನಟ ನಟರಾಜ್ ಭಟ್ ಹಾಗೂ ರಂಗ ಕಲಾವಿದೆ ಬಳ್ಳಾರಿ ಮೂಲದ ಹನುಮಕ್ಕ ತಾಯಿ-ಮಗನಾಗಿ ಕಾಣಿಸಿಕೊಂಡಿದ್ದಾರೆ. ಹಾಗೆಯೇ ಮಹಾಲಕ್ಷ್ಮಿ ನಾಯಕಿ ಆಗಿ ಕಾಣಿಸಿಕೊಂಡಿದ್ದಾರೆ. ಮಂಜುಗೌಡ,ರಮ್ಯಾ, ಮಂಜಮ್ಮ ಜೋಗುತಿ, ಹುಲಗಪ್ಪ ಕಟ್ಟಿಮನಿ ಹಾಗೂ ಚಂದ್ರಶೇಖರ್ ಪೋಷಕ ಪಾತ್ರಗಳಲ್ಲಿದ್ದಾರೆ. ಈ ಚಿತ್ರಕ್ಕಿನ್ನು ಟೈಟಲ್ ಫೈನಲ್ಆಗಿಲ್ಲ. ಶೂಟಿಂಗ್ ಮಾತ್ರ ಮುಗಿದಿದೆ.
ಸುಮಾರು 35 ದಿನಗಳ ಕಾಲ ಚಿತ್ರೀಕರಣ ನಡೆದಿದೆ. ಚಿತ್ರೀಕರಣ ಮುಗಿಸಿಕೊಂಡು ಬಂದಿರುವ ನಟ ಪಾಲ್ಗೊಂಡಿರುವ ನಟರಾಜ್, ಸಿನಿ ಲಹರಿ ಜತೆಗೆ ಚಿತ್ರೀಕರಣದ ಅನುಭವ ಹಂಚಿಕೊಂಡರು.ʼ ಗ್ರಾಮೀಣ ಸೊಗಡಿನ ಅದ್ಬುತ ಕಥೆ ಇದು. ಅವಕಾಶ ಸಿಕ್ಕಿದ್ದೇ ನನ್ನ ಪುಣ್ಯ. ದೊಡ್ಡ ಕಮರ್ಷಿಯಲ್ ಸಿನಿಮಾ ಅಲ್ಲ ಎನ್ನುವುದಕ್ಕಿಂತ, ಅಭಿನಯಕ್ಕೆ ಒಂದೊಳ್ಳೆಯ ಅವಕಾಶ ಇರುವಂತಹ ಪಾತ್ರ. ಹೊಸಪೇಟೆ ಸುತ್ತಮುತ್ತ ಚಿತ್ರೀಕರಣ ನಡೆದಿದೆ. ಚಿತ್ರೀಕರಣ ನಡೆದಿದ್ದೇ ಗೊತ್ತಾಗಲಿಲ್ಲ. ನಾನು ಹಳ್ಳಿಯಿಂದಲೇ ಬಂದವನು. ಅದೇ ಅನುಭವ ಚಿತ್ರೀಕರಣದಲ್ಲೂ ಇತ್ತು. ಚಿತ್ರ ತುಂಬಾ ಚೆನ್ನಾಗಿ ಮೂಡಿ ಬಂದಿದೆ ಎಂದರು ನಟರಾಜ್. ನಿರ್ದೇಶಕ ರಮೇಶ್ ಅವರೇ ಚಿತ್ರಕ್ಕೆ ಚಿತ್ರಕಥೆ, ಸಂಭಾಷಣೆ ಬರೆದಿದ್ದು, ಸಾಹಿತ್ಯ ರಚನೆಯ ಜತೆಗೆ ಪ್ರದ್ರೀಪ್ಚಂದ್ರ ಸಂಗೀತ ನೀಡಿದ್ದಾರೆ.ಚೇತನ್ ಶರ್ಮಾ ಛಾಯಾಗ್ರಹಣ ವಿದೆ.ಅರ್ಜುನ್ ಕಿಟ್ಟು ಸಂಕಲನ ಮಾಡುತ್ತಿದ್ದಾರೆ. -ಎಂಟರ್ ಟೈನ್ ಮೆಂಟ್ ಬ್ಯೂರೋ ಸಿನಿಲಹರಿ
ಯುದ್ಧದಲ್ಲಿ ಹೋರಾಡಿ ಹುತಾತ್ಮರಾದರೆ ಸ್ವರ್ಗದ ಬಾಗಿಲು ತೆರೆದಿರುತ್ತೆ. ಅದೇ ರೀತಿ ಯುದ್ಧದಲ್ಲಿ ಕಾದಾಡಿ ಗೆದ್ದರೆ ಅಲಂಕರಿಸೋದಕ್ಕೆ ಸಿಂಹಾಸನ ರೆಡಿಯಾಗಿರುತ್ತೆ. ಹೀಗಾಗಿ, war is always good ಹೀಗಂತ ವಿಲನ್ ಡೈರೆಕ್ಟರ್ ಹೇಳಿದ್ದಾಗಿದೆ.ತೋಳ್ ತುಂಬಾ ತಾಕತ್ತಿದ್ರೂ ತಕರಾರ್ ಮಾಡಲ್ಲ. ಎದೆ ತುಂಬಾ ನಿಯತ್ತಿದ್ರೂ ಗುಲಾಮ ಆಗಿರಲ್ಲ. ಗೂಳಿ ಸೈಲೆಂಟಾಗಿದೆ ಅಂತ ಗಾಂಚಾಲಿ ಮಾಡೋಕೆ ಬಂದರೆ, ಗುದ್ದೋ ಏಟಿಗೆ ಗೂಗಲ್ ನಲ್ಲಿ ಹುಡುಕಿದರೆ ಸಿಗಲ್ಲ. ಏಯ್ ಐ ಆಮ್ ನಟೋರಿಯಸ್ ಹೀಗಂತ ಆಕ್ಷನ್ ಪ್ರಿನ್ಸ್ ಗುಡುಗಿದ್ದಾಗಿದೆ. ಇನ್ನೇನಿದ್ರೂ ಯುದ್ಧ ಶುರು ಮಾಡೋದಷ್ಟೇ ಬಾಕಿ.
ಯಸ್, ಈ ಕಾಂಬೋ ಬಗ್ಗೆ ಸೋಷಿಯಲ್ ಮೀಡಿಯಾನೇ ಗೆಸ್ ಮಾಡಿತ್ತು. ಯುದ್ಧ ಒಳ್ಳೆಯದೇ ಬಿಡಿ ಅಂತ ಪ್ರೇಮ್ ಸಾಹೇಬ್ರು ಸಾಮಾಜಿಕ ಜಾಲತಾಣದಲ್ಲಿ ಗೀಚಿದಾಗಲೇ ಪೊಗರು ಸ್ಟಾರ್ ಗೆ ಜೋಗಿ ಪ್ರೇಮ್ ಡೈರೆಕ್ಟ್ ಮಾಡ್ತಾರೆ ಅಂತ ಸುದ್ದಿಯಾಯ್ತು. ಈ ಮಧ್ಯೆ ‘ಗೆಟ್ ರೆಡಿ ಫಾರ್ ಡಿಎಸ್ 6’ ಅಂತ ಆಕ್ಷನ್ ಪ್ರಿನ್ಸ್ ಅನೌನ್ಸ್ ಮಾಡಿದಾಗ ವಿಲನ್ ಡೈರೆಕ್ಟರ್ ಹಾಗೂ ಬಹದ್ದೂರ್ ಹೀರೋ ಕಾಂಬೋ ಜೊತೆಯಾಗ್ತಿರುವುದು. ಬಹುತೇಕ ಪಕ್ಕಾ ಆಗಿತ್ತು. ಈಗ ಹಂಡ್ರೆಡ್ ಪರ್ಸೆಂಟ್ ಕ್ಲಿಯರ್ ಆಗಿದೆ. ಪ್ರೇಮ್ – ಧ್ರುವ ಜೋಡಿ ಫಸ್ಟ್ ಟೈಮ್ ಜೊತೆಯಾಗಿದೆ.
ಯುದ್ಧದ ಮುನ್ನುಡಿ ಇಲ್ಲಿಂದ ಆರಂಭ, ನಿಮ್ಮ ಪ್ರೀತಿ ಪ್ರೋತ್ಸಾಹ ಅಭಿಮಾನ ಆಶೀರ್ವಾದ ಸದಾ ಹೀಗೆ ಇರಲಿ ಹೀಗಂತ ಟ್ವೀಟ್ ಮಾಡಿ ಆಕ್ಷನ್ ಪ್ರಿನ್ಸ್ ಜೊತೆಗೆ ಸಿನಿಮಾ ಮಾಡ್ತಿರುವುದಾಗಿ ಪ್ರೇಮ್ ಅನೌನ್ಸ್ ಮಾಡಿದ್ದಾರೆ. ಲೆಜೆಂಡರಿ ಡೈರೆಕ್ಟರ್ ಹಾಗೂ ಪ್ರೆಸ್ಟೀಜಿಯಸ್ ಬ್ಯಾನರ್ ಜೊತೆಗಿನ ತಮ್ಮ ಸಿನಿಮಾದ ಬಗ್ಗೆ ಧ್ರುವ ಎಕ್ಸೈಟ್ ಆಗಿದ್ದಾರೆ. ಇಂಟ್ರೆಸ್ಟಿಂಗ್ ಅಂದರೆ ನಟನೆಯಲ್ಲಿ ಧ್ರುವಾಗೆ ಆರನೇ ಸಿನಿಮಾ ಇತ್ತ ಪ್ರೇಮ್ ಗೆ ನಿರ್ದೇಶನದಲ್ಲಿ ಒಂಭತ್ತನೇ ಮೂವೀ.
ಯಸ್, ಕರಿಯ ಸಿನಿಮಾಗೆ ಡೈರೆಕ್ಟರ್ ಹ್ಯಾಟ್ ತೊಟ್ಟು ಮೊದಲ ಸಿನಿಮಾದಲ್ಲೇ ಹಿಟ್ ಕೊಟ್ಟ ಶೋಮ್ಯಾನ್ ಪ್ರೇಮ್, ಇಲ್ಲಿವರೆಗೂ ಎಂಟು ಸಿನಿಮಾಗಳ ನಿರ್ದೇಶನ ಮಾಡಿದ್ದಾರೆ. ಎಕ್ಸ್ ಕ್ಯೂಸ್ ಮೀ, ಜೋಗಿ,ಜೋಗಯ್ಯದಂತಹ ಬ್ಲಾಕ್ ಬಸ್ಟರ್ ಹಿಟ್ ಚಿತ್ರಗಳನ್ನು ಗಂಧದಗುಡಿಗೆ ಕೊಡುಗೆಯಾಗಿ ನೀಡಿದಂತಹ ಮದ್ದೂರಿನ ಭೈರೇಗೌಡ್ರು ಸ್ಟಾರ್ ಡೈರೆಕ್ಟರ್ ಅಲ್ಲ ಸೆನ್ಸೇಷನಲ್ ಡೈರೆಕ್ಟರ್ ಆಗಿ ಸಂಚಲನ ಸೃಷ್ಟಿಸಿದ್ದಾರೆ. ಸೌತ್ ಸಿನಿ ದುನಿಯಾ ಮಂದಿ ಹಿಂತಿರುಗಿ ನೋಡುವಂತಹ ಮೂವಿಗಳನ್ನು ಕೊಡುತ್ತಾ ಬರ್ತಿದ್ದಾರೆ. ಅಲ್ಲದೇ ಸ್ವಂತ ಬ್ರ್ಯಾಂಡ್ ಆಗಿದ್ದಾರೆ. ಇದೀಗ ತಮ್ಮ ನಿರ್ದೇಶನದ ಒಂಭತ್ತನೇ ಸಿನಿಮಾದ ಮೂಲಕ ದಶದಿಕ್ಕುಗಳಲ್ಲೂ ಹವಾ ಎಬ್ಬಿಸೋಕೆ ಹೊರಟಿದ್ದಾರೆ. ಈ ಮಧ್ಯೆ ಏಕ್ ಲವ್ ಯಾ ಸಿನಿಮಾ ರಿಲೀಸ್ ಗಾಗಿ ಎದುರು ನೋಡ್ತಿದ್ದಾರೆ.
ದಿ ವಿಲನ್ ಸಿನಿಮಾ ಮೂಲಕ ಪ್ರೇಮ್ ಕೂಡ ಗಡಿದಾಟಿದ್ದಾರೆ. ಪೊಗರು ಮೂಲಕ ಪರಭಾಷಾ ಅಂಗಳದಲ್ಲಿ ಧ್ರುವ ಕೂಡ ಖದರ್ ತೋರಿಸಿದ್ದಾರೆ. ಹೀಗೆ, ಗಡಿದಾಟಿ ಘರ್ಜಿಸಿರುವ ಇಬ್ಬರು ಮಾಸ್ ಸ್ಟಾರ್ಸ್ ಫಸ್ಟ್ ಟೈಮ್ ಕೈಜೋಡಿಸಿದ್ದಾರೆ. ಹೀಗಾಗಿ ಈ ಡೆಡ್ಲಿ ಕಾಂಬೋ ಮೇಲೆ ನಿರೀಕ್ಷೆ ಹೆಚ್ಚಿದೆ. ಯುದ್ದ ಒಳ್ಳೆಯದೇ ಅಂತ ಜೋಗಿ ನಿರ್ದೇಶಕರು ಹೇಳಿರೋದ್ರಿಂದ ಬಹದ್ದೂರ್ ಗಂಡು ಅಲಿಯಾಸ್ ಬೆಂಕಿಚೆಂಡನ್ನ ವಾರ್ ಫೀಲ್ಡಿಗಿಳಿಸೋದು ಪಕ್ಕಾ. ತೋಳ್ ತುಂಬಾ ತಾಕತ್ತು ತುಂಬಿಕೊಂಡಿರುವ ಪೊಗರು ಸ್ಟಾರ್ ಯುದ್ಧಕ್ಕೆ ಸಜ್ಜಾಗೋದು ಸತ್ಯಾ.
ಇನ್ಮೇಲೆ ಉದ್ದುದ್ದ ಡೈಲಾಗ್ ಹೊಡೆಯಲ್ಲ ಅಂತ ಬಹದ್ದೂರ್ ಹೀರೋ ಖಡಕ್ಕಾಗಿ ಹೇಳಿಬಿಟ್ಟಿದ್ದಾರೆ.ಅದ್ದೂರಿ ಸಾರಥಿ ಜೊತೆ ಮತ್ತೆ ಒಂದಾಗಿದ್ದು, ಮಾರ್ಟಿನ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಆಕ್ಷನ್ ಸೀಕ್ವೆನ್ಸ್ ಚಿತ್ರೀಕರಣ ನಡೆಯುತ್ತಿದೆ. ಈ ಮಧ್ಯೆ ಪ್ರೇಮ್ ಸಾಹೇಬ್ರಿಗೆ ಧ್ರುವ ಕಾಲ್ ಶೀಟ್ ಕೊಟ್ಟಿದ್ದಾರೆ. ಮಾರ್ಟಿನ್ ಜೊತೆಜೊತೆಗೆ ದಿ ವಿಲನ್ ಸಾರಥಿಯ ಅಖಾಡಕ್ಕೆ ಧ್ರುವ ಧುಮುಕ್ತಾರಾ ಅಥವಾ ಮಾರ್ಟಿನ್ ಕಂಪ್ಲೀಟಾಗಿ ಮುಗಿದ್ಮೇಲೆ ಪ್ರೇಮ್ ಜೊತೆ ಯುದ್ಧಕ್ಕೆ ಸಜ್ಜಾಗ್ತಾರೋ ಗೊತ್ತಿಲ್ಲ. ಆದರೆ, ಯುದ್ದದ ಮೇಲಿನ ನಿರೀಕ್ಷೆಯಂತೂ ಲೋಡೆಡ್ ಗನ್ನಿನಂತಾಗಿದೆ.
ಆಕ್ಷನ್ ಪ್ರಿನ್ಸ್- ಪ್ರೇಮ್ ಕಾಂಬೋ ಸಿನಿಮಾಗೆ ಇನ್ನೂ ಹೆಸರಿಟ್ಟಿಲ್ಲ.ಆಗಸ್ಟ್ 09 ರಂದು ಪ್ರೇಮ್ ಅವರ ನಿವಾಸದಲ್ಲೇ ಸಿನಿಮಾ ಸ್ಕ್ರಿಪ್ಟ್ ಪೂಜೆ ನೆರವೇರಿದೆ. ಶೀಘ್ರದಲ್ಲೇ ಟೈಟಲ್ ಅನೌನ್ಸ್ ಮಾಡುವುದಾಗಿ ಪ್ರೇಮ್ ಹೇಳಿಕೊಂಡಿದ್ದಾರೆ. ಕೆವಿಎನ್ ಪ್ರೊಡಕ್ಷನ್ ನಲ್ಲಿ ಸಿನಿಮಾ ಮೂಡಿಬರಲಿದೆ. ಅತೀ ಶೀಘ್ರದಲ್ಲೇ ಹೆಚ್ಚಿನ ಅಪ್ ಡೇಟ್ಸ್ ಲಭ್ಯವಾಗಲಿದೆ.
ಡಾಲಿ ಧನಂಜಯ್ ಡಾನ್ ಆಗಿ ಕಾಣಿಸಿಕೊಂಡಿರುವ ʼಹೆಡ್ ಬುಷ್ʼ ಸ್ಯಾಂಡಲ್ ವುಡ್ ಅಂಗಳದಲ್ಲಿ ಸಖತ್ ಸೌಂಡ್ ಮಾಡತೊಡಗಿದೆ. ನಟ ಡಾಲಿ ಧನಂಜಯ್ ಹುಟ್ಟು ಹಬ್ಬಕ್ಕೆ ಭಾನುವಾರ ಅದರ ಫಸ್ಟ್ ಲುಕ್ ಟೀಸರ್ ಲಆಂಚ್ ಆಗಿದೆ. ಡಾಲಿ ಧನಂಜಯ್ ಅವರ ಕ್ಯಾರೆಕ್ಟರ್ ಒಂದು ಲುಕು ಇಲ್ಲಿ ರಿವೀಲ್ ಆಗಿದೆ. ಸಹಜವಾಗಿಯೇ ಇದು ಚಿತ್ರದ ಬಗ್ಗೆ ದೊಡ್ಡ ಕೌತುಕ ಹುಟ್ಟಿಸಿದೆ. ಈ ನಡುವೆಯೇ ಹೆಡ್ ಬುಷ್ ಚಿತ್ರದ ಬಗೆಗಿನ ಮತ್ತೊಂದು ಸಂಗತಿ ರಿವೀಲ್ ಆಗಿದೆ. ಇದೀಗ ಡಾಲಿ ಧನಂಜಯ್ ಹಾಗೂ ಲೂಸ್ ಮಾದ ಯೋಗಿ ಒಂದಾಗಿದ್ದಾರೆ. ಇಬ್ಬರು ಈಗ ಬೆಳ್ಳಿತೆರೆ ಮೇಲೆ ‘ಹೆಡ್ ಬುಷ್’ ಆಡಲು ರೆಡಿ ಆಗಿದ್ದಾರೆ.
ಹೌದು, ಪತ್ರಕರ್ತ ಅಗ್ನಿಶ್ರೀಧರ್ ಕಥೆ ಬರೆದು, ಶೂನ್ಯ ನಿರ್ದೇಶನ ಮಾಡುತ್ತಿರುವ ʼಹೆಡ್ ಬುಷ್ ʼ ಚಿತ್ರದಲ್ಲಿ ಧನಂಜಯ್ ಜತೆಗೆ ಲೂಸ್ ಮಾದ ಯೋಗೇಶ್ ಕೂಡ ಪ್ರಮುಖ ಪಾತ್ರದಲ್ಲಿ ಕಾಣಸಿಕೊಳ್ಳುತ್ತಿ ದ್ದಾರಂತೆ. ಈ ಸಂಗತಿಯನ್ನು ‘ಹೆಡ್ ಬುಷ್ ‘ಚಿತ್ರದ ನಾಯಕ ನಟ ಧನಂಜಯ್ ಅವರೇ ರಿವೀಲ್ ಮಾಡಿದ್ದಾರೆ. ಈಗಾಗಲೇ ರಿವೀಲ್ ಆಗಿರುವಂತೆ ಹೆಡ್ ಬುಷ್ ಸಿನಿಮಾ ಡಾನ್ ಜಯರಾಮ್ ಜೀವನ ಕುರಿತದ್ದು. ಅಂಡರ್ ವರ್ಲ್ಡ್ ಜಗತ್ತಿನ ಕಥೆ. ಇಲ್ಲಿ ಧನಂಜಯ್ ಜಯರಾಜ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅವರ ಜತೆಗೀಗ ಯೋಗಿ ಜತೆಯಾಗಿದ್ದಾರಂದ್ರೆ ಕುತೂಹಲ ಇರೋದು ಯೋಗಿ ಪಾತ್ರದ ಬಗ್ಗೆ. ಹಾಗಾದ್ರೆ ಯೋಗಿ ಅವರ ಪಾತ್ರ ಏನು? ಸದ್ಯಕ್ಕೆ ಅದೆಲ್ಲ ಮಾಹಿತಿ ಇನ್ನು ನಿಗೂಢ. ಬಟ್, ಹೆಡ್ ಬುಷ್ ನಲ್ಲಿ ಯೋಗಿ ಇದ್ದಾರೆನ್ನುವುದು ನಟ ಧನಂಜಯ್ ಅವರೇ ರಿವೀಲ್ ಮಾಡಿರುವ ಸಂಗತಿ.
ಲೂಸ್ ಮಾದ ಯೋಗೇಶ್ ಅಭಿನಯದ ಲಂಕೆ ಚಿತ್ರದ ಆಡಿಯೋ ಲಾಂಚ್ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು. ನಟ ಧನಂಜಯ್ ಇಲ್ಲಿಗೆ ಅತಿಥಿಯಾಗಿ ಆಗಮಿಸಿ, ಆಡಿಯೋ ಲಾಂಚ್ ಮಾಡಿದರು.ಅದೇ ವೇಳೆ ಯೋಗೇಶ್ ಜತೆಗಿನ ಒಡನಾಟದ ಕುರಿತು ಮಾತನಾಡಿದ ಅವರು, ‘ಯೋಗಿ ನನ್ನ ಸ್ನೇಹಿತ. ಸ್ನೇಹಕ್ಕಾಗಿ ಇಲ್ಲಿಗೆ ಬಂದಿದ್ದೀನಿ. ನಾನು ಹಾಗೂ ಯೋಗಿ ಹೆಡ್ & ಬುಷ್ ಚಿತ್ರದಲ್ಲಿ ಒಟ್ಟಾಗಿ ನಟಿಸುತ್ತಿದ್ದೇವೆ. ಆತನೊಂ ದಿಗೆ ಕಾಣಸಿಕೊಳ್ಳುತ್ತಿರುವುದೇ ಖುಷಿ ಸಮಾಚಾರ ಎಂಬುದಾಗಿ ನಟ ಧನಂಜಯ್ ಲಂಕೆ ಚಿತ್ರದ ಆಡಿಯೋ ಬಿಡುಗಡೆಯ ವೇದಿಕೆಯಲ್ಲಿ ಹೇಳಿಕೊಂಡರು. ಲೂಸ್ ಮಾದ ಯೋಗಿ ಅಲಿಯಾಸ್ ಯೋಗೇಶ್ ಅಭಿನಯದ ಚಿತ್ರ ‘ಲಂಕೆ’. ಇದೀಗ ರಿಲೀಸ್ ರೆಡಿ ಆಗಿದೆ.
ಒಂದಷ್ಟು ಗ್ಯಾಪ್ ನಂತರ ಮತ್ತೆ ಮುಖಕ್ಕೆ ಬಣ್ಣ ಹಚ್ಚಿರುವ ನಟ ಲೂಸ್ ಮಾದ ಯೋಗಿ, ಈ ಚಿತ್ರದ ಮೇಲೆ ಸಾಕಷ್ಟು ಭರವಸೆ ಇಟ್ಟುಕೊಂಡಿದ್ದಾರೆ. ಅದರ ಜತೆಗೆ ಈಗ ಯೋಗೇಶ್ ಅಭಿನಯದ ʼಒಂಭತ್ತನೆ ದಿಕ್ಕುʼ ರಿಲೀಸ್ ಗೆ ಸಿದ್ದತೆ ನಡೆಸಿದೆ. ಹಾಗೆಯೇ ಪರಿಮಳ ಲಾಡ್ಜ್ ಚಿತ್ರೀಕರಣದ ಹಂತದಲ್ಲಿದೆ.ಕಿರಿಕ್ ಶಂಕರ್ ಹೆಸರಿನ ಒಂದು ಸಿನಿಮಾ, ಹಾಗೆಯೇ ನಾನು ಮತ್ತು ಸರೋಜ ಎನ್ನುವ ಮತ್ತೊಂದು ಸಿನಿಮಾಕ್ಕೂ ಯೋಗಿ ನಾಯಕರಾಗಿದ್ದು, ಅವೆಲ್ಲ ಕೊರೋನಾ ಹಿನ್ನೆಲೆಯಲ್ಲಿ ಸೈಲೆಂಟ್ ಆಗಿದ್ದು, ಇನ್ನೇನು ಚಿತ್ರೀಕರಣಕ್ಕೆ ಹೊರಡಬೇಕಿದೆ. ಈ ನಡುವೆ ಈಗ ಹೆಡ್ ಬುಷ್ ಚಿತ್ರದಲ್ಲಿ ಧನಂಜಯ್ ಜತೆಗೆ ಕಾಣಿಸಿಕೊಳ್ಳುತ್ತಿದ್ದಾರಂತೆ.
ಜುಮ್ಮಂತ ಜಾರುವ ಬಾ… ಜುಮ್ಮಂತ ಹಾರುವ ಬಾ..ಮುಂಜಾನೆಲೆ.. ಮಂಜಿನಲೆ ಉಬ್ಬಿ ತಬ್ಬಿ ಹಬ್ಬ ಮಾಡೋಣ… ಹೀಗಂತ ಸೊಂಟ ಬಳುಕಿಸಿಕೊಂಡು ದಚ್ಚು ಜೊತೆ ‘ಸ್ವಾಮಿ’ ಚಿತ್ರದಲ್ಲಿ ಹಾಡಿಕುಣಿದ ನಟಿ ಗಾಯತ್ರಿ ಜಯರಾಮನ್ ಮತ್ತೆ ಕನ್ನಡಕ್ಕೆ ಬಂದಿದ್ದಾರೆ. ಯಸ್.. ‘ಸ್ವಾಮಿ’ ಸುಂದರಿ ಸ್ಯಾಂಡಲ್ ವುಡ್ ಗೆ ಕಮ್ ಬ್ಯಾಕ್ ಮಾಡಿದ್ದಾರೆ. ಭರ್ತಿ ಹದಿನೈದು ವರ್ಷಗಳು ಕಳೆದಮೇಲೆ ಮತ್ತೆ ಚಂದನವನಕ್ಕೆ ಹಿಂತಿರುಗಿದ್ದಾರೆ. ಲೂಸ್ ಮಾದ ಯೋಗಿ ಅಭಿನಯದ ‘ಲಂಕೆ’ ಸಿನಿಮಾದ ಮೂಲಕ ಸ್ವಾಮಿ ಚಿತ್ರನಟಿ ಗಾಯತ್ರಿ ಜಯರಾಮನ್ ಸೆಕೆಂಡ್ ಇನ್ನಿಂಗ್ಸ್ ಶುರುಮಾಡಿದ್ದಾರೆ.
ನಾಗಾಭರಣ್ ನಿರ್ದೇಶನದ ‘ ನೀಲ’ ಗಾಯತ್ರಿ ಜಯರಾಮನ್ ಮೊದಲ ಕನ್ನಡದ ಸಿನಿಮಾ. ಕೊನೆಯ ಚಿತ್ರ ‘ಸ್ವಾಮಿ’ ಈಗ ಲಂಕೆಗೆ ಬಂದಿದ್ದಾರೆ. ಪಾತ್ರದ ಬಗ್ಗೆ ಗುಟ್ಟುಬಿಟ್ಟುಕೊಡದ ನಟಿ ಗಾಯತ್ರಿ ಜಯರಾಮನ್, ಹಿಂದೆಂದೂ ಕಾಣಿಸಿಕೊಂಡಿರದ ಪಾತ್ರಕ್ಕೆ ಜೀವತುಂಬಿದ್ದೇನೆ. ಅವಕಾಶ ಕೊಟ್ಟ ‘ಲಂಕೆ’ ಟೀಮ್ ಗೆ ಧನ್ಯವಾದ ತಿಳಿಸಿದ ನಟಿ ಕನ್ನಡ ಸಿನಿಮಾ ಇಂಡಸ್ಟ್ರಿಯ ಬಗ್ಗೆ ಹೊಗಳಿದರು ಪರ್ಫಾಮೆನ್ಸ್ ಓರಿಯೆಂಟೆಡ್ ಸಿನಿಮಾಗಳು ಬರುತ್ತಿವೆ, ಲಂಕೆಯಲ್ಲಿ ತನ್ನ ಪಾತ್ರಕ್ಕೂ ಸ್ಕೋಪ್ ಇದೆ ಎಂದು ಖುಷಿವ್ಯಕ್ತಪಡಿಸಿದರು.
‘ಲಂಕೆ’ ಲೂಸ್ ಮಾದ ಯೋಗಿ ಅಭಿನಯದ ಹೈವೋಲ್ಟೇಜ್ ಸಿನಿಮಾ. ಈ ಚಿತ್ರದ ಮೂಲಕ ಯೋಗಿ ಗಾಂಧಿನಗರಲ್ಲಿ ಹೊಸ ಮೇನಿಯಾ ಸೃಷ್ಟಿಸ್ತಾರೆ ಎನ್ನುವ ಮಾತು ಜೋರಾಗ್ತಿದೆ. ಟ್ರೈಲರ್ ಮೂಲಕ ಭರವಸೆ ಮೂಡಿಸಿದ್ದಾರೆ. ಹಾಡುಗಳು ಸಖತ್ ಸೌಂಡ್ ಮಾಡ್ತಿವೆ. ಕಾರ್ತಿಕ್ ಶರ್ಮಾರ ಸಂಗೀತ ಚಿತ್ರಕ್ಕಿದ್ದು ಇತ್ತೀಚಿಗೆ ಆಡಿಯೋ ಬಿಡುಗಡೆ ಮಾಡಲಾಯ್ತು. ಡಾಲಿ ಧನಂಜಯ್ ಸ್ಪೆಷಲ್ ಗೆಸ್ಟ್ ಆಗಿ ಬಂದು ಲಂಕೆಗೆ ಸಾಥ್ ಕೊಟ್ಟರು. ಯೋಗಿಗೆ ಕೃಷಿ ತಾಪಂಡ ಹಾಗೂ ಕಾವ್ಯಾಶೆಟ್ಟಿ ಜೋಡಿಯಾಗಿದ್ದಾರೆ. ದಿ ಗ್ರೇಟ್ ಎಂಟರ್ ಟೈನರ್ ಲಾಂಛನದಲ್ಲಿ ಪಟೇಲ್ ಶ್ರೀನಿವಾಸ್ ಹಾಗೂ ಸುರೇಖಾ ರಾಮಪ್ರಸಾದ್ ನಿರ್ಮಾಣದಲ್ಲಿ ಲಂಕೆ ಅದ್ದೂರಿಯಾಗಿ ನಿರ್ಮಾಣವಾಗಿದೆ.ಸರ್ಕಾರ 100 ಪರ್ಸೆಂಟ್ ಅನುಮತಿ ಕೊಟ್ಟರೆ ಲಂಕಾರ್ಭಟ ಶುರುವಾಗಲಿದೆ
ಬಿಗ್ ಬಾಸ್ ಸೀಸನ್ 8 ರಲ್ಲಿನ ಕಂಟೆಸ್ಟೆಂಟ್ ಗಳಲ್ಲಿ ಒಬ್ಬರಾಗಿದ್ದ ನಟ ರಾಜೀವ್ ಈಗ ಉಸಿರೇ ಉಸಿರೇ ಚಿತ್ರದಲ್ಲಿ ಬ್ಯುಸಿ ಆಗಿದ್ದಾರೆ. ಈ ಚಿತ್ರದಲ್ಲಿ ಅವರು ನಾಯಕರಾಗಿ ಅಭಿನಯಿಸುತ್ತಿದ್ದು, ಅದರ ಮೋಷನ್ ಪೋಸ್ಟರ್ ಈಗ ಲಾಂಚ್ ಆಗಿದೆ. ಇತ್ತೀಚೆಗೆ ನಗರದ ಖಾಸಗಿ ಹೋಟೆಲ್ ನಲ್ಲಿ ಉಸಿರೇ ಉಸಿರೇ ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆ ಸಮಾರಂಭ ಅದ್ದೂರಿಯಾಗಿ ನೆರವೇರಿತು. ಬಾದ್ ಷಾ ಕಿಚ್ಚ ಸುದೀಪ ಮೋಷನ್ ಪೋಸ್ಟರ್ ಬಿಡುಗಡೆ ಮಾಡಿದರು.ಪದೀಪ್ ಈ ಚಿತ್ರದ ನಿರ್ಮಾಣಕ್ಕೆ ಬಂಡವಾಳ ಹೂಡಿದ್ದಾರೆ. ನಟ ರಾಜೀವ್ ಮಾತನಾಡಿ, ʼನಾನು ಈ ತನಕ ಕೆಲವು ಚಿತ್ರಗಳಲ್ಲಿ ನಟಿಸಿದ್ದರೂ, ಇಂತಹ ವೇದಿಕೆ ಸಿಗಲು 10 ವರ್ಷ ಬೇಕಾಯಿತು. ಈ ಅವಕಾಶ ಮಾಡಿಕೊಟ್ಟ ನಿರ್ಮಾಪಕ, ನಿರ್ದೇಶಕರಿಗೆ ಧನ್ಯವಾದ ಹೇಳಿದರು.
ಮೋಷನ್ ಪೋಸ್ಟರ್ ಬಿಡುಗಡೆಗೆ ಆಗಮಿಸಿರುವ ಸುದೀಪ್ ಅವರಿಗೆ ವಿಶೇಷ ಧನ್ಯವಾದ ತಿಳಿಸಿದರು. ʼನಾನು ಸುದೀಪ್ ಸರ್ ಜೊತೆ ಕಾರಿನಲ್ಲಿ ಬರುತ್ತಿದ್ದಾಗ, ಅವರ ನಟನೆಯ ಚಿತ್ರದ “ಉಸಿರೇ ಉಸಿರೇ” ಹಾಡು ಕೇಳಿದ್ದೆ. ನನಗೆ ಈ ಚಿತ್ರದ ಗೊತ್ತಿದ್ದರಿಂದ ನಿರ್ದೇಶಕರಿಗೆ ಫೋನ್ ಮಾಡಿ ನಮ್ಮ ಚಿತ್ರಕ್ಕೆ ಇದೇ ಶೀರ್ಷಿಕೆ ಇಡೋಣ. ಈಗಲೇ ನೊಂದಾಯಿಸಿ ಎಂದು ಹೇಳಿದೆ. ಚಿತ್ರಕ್ಕಾಗಿ ನಾನು ಹೆಚ್ಚು ವರ್ಕ್ ಔಟ್ ಏನು ಮಾಡಿಲ್ಲ. ಸಹಜವಾಗಿರುವ ಪಾತ್ರ. ನಮ್ಮ ನಾಲ್ಕುವರ್ಷಗಳ ಶ್ರಮಕ್ಕೆ ಈಗ ಉತ್ತಮ ಕಾಲ ಕೂಡಿ ಬಂದಿದೆ. ಎಲ್ಲರ ಹಾರೈಕೆಯು ನಮಗಿರಲಿ ಎಂದರು ರಾಜೀವ್.
ಇದೊಂದು ಪಕ್ಕಾ ಪ್ರೇಮಕಥೆ. ಇಲ್ಲಿಯವರೆಗೂ ಅನೇಕ ಪ್ರೇಮಕಥೆಯುಳ್ಳ ಚಿತ್ರಗಳು ಬಂದಿವೆಯಾದರೂ ಇದು ವಿಭಿನ್ನ. ಅಮರಪ್ರೇಮಿಗಳು ಎಂದರೆ ಎಲ್ಲರೂ ರೋಮಿಯೋ – ಜೂಲಿಯಟ್, ಸಲೀಂ – ಅನಾರ್ಕಲಿ ಅನ್ನುತ್ತಾರೆ. ಈ ಚಿತ್ರ ನೋಡಿದ ಮೇಲೆ ಪ್ರೇಕ್ಷಕರು ನಮ್ಮ ಕಥಾನಾಯಕ – ನಾಯಕಿಯನ್ನು ಈ ಸಾಲಿಗೆ ಸೇರಿಸಬಹುದು ಎಂದ ನಿರ್ದೇಶಕ ಸಿ.ಎಂ.ವಿಜಯ್ ಸೆಪ್ಟೆಂಬರ್ ಅಂತ್ಯದಲ್ಲಿ ಚಿತ್ರೀಕರಣ ಆರಂಭಿಸುವುದಾಗಿ ಹೇಳಿದ್ದಾರೆ. ಎನ್ ಗೊಂಬೆ ಪ್ರೊಡಕ್ಷನ್ಸ್ ಲಾಂಛನದಲ್ಲಿ ಪ್ರದೀಪ್ ಯಾದವ್ ಈ ಚಿತ್ರ ನಿರ್ಮಿಸುತ್ತಿದ್ದಾರೆ. ರಾಜೀವ್ ಅವರಿಗೆ ಇಲ್ಲಿ ಶ್ರೀಜಿತ ಘೋಷ್ ನಟಿಸುತ್ತಿದ್ದು, ಅವರು ಸಹ ತಮ್ಮ ಪಾತ್ರದ ಬಗ್ಗೆ ಮೆಚ್ಚುಗೆ ಮಾತನಾಡಿದರು. ಬೇರೆ ಭಾಷೆಯ ಚಿತ್ರಗಳಲ್ಲಿ ನಟಿಸಿರುವ ಶ್ರೀಜಿತ ಅವರಿಗೆ ಕನ್ನಡದಲ್ಲಿ ಇದು ಚೊಚ್ಚಲ ಚಿತ್ರ. ಸುಮಧುರ ಹಾಡುಗಳಿರುವ ಈ ಚಿತ್ರಕ್ಕೆ ವಿವೇಕ್ ಚಕ್ರವರ್ತಿ ಸಂಗೀತ ನೀಡುತ್ತಿದ್ದಾರೆ. ಸರವಣನ್ ಅವರ ಕ್ಯಾಮೆರಾ ಕೈಚಳಕ ಈ ಚಿತ್ರಕ್ಕಿದೆ.
ನಟ ಉಪೇಂದ್ರ ಅವರ ಅಣ್ಣನ ಮಗ ನಿರಂಜನ ಸುದೀಂದ್ರ ಹೀರೋ ಆಗಿ ಎಂಟ್ರಿ ಆಗುತ್ತಿರುವುದು ಹಳೇ ಮಾತು. ಈಗಾಗಲೇ ನಿರಂಜನ್ ಸುಧೀಂದ್ರ ಅಭಿನಯದ ‘ಸೂಪರ್ ಸ್ಟಾರ್’ ರಿಲೀಸ್ ಗೆ ರೆಡಿಯಿದೆ. ಅದರ ನಡುವೆ ಯೇ ನಿರಂಜನ್ ಪಾಲಿಗೆ ಅದೃಷ್ಟ ಖುಲಾಯಿಸಿದೆ. ಡೆಬ್ಯೂ ಚಿತ್ರ ರಿಲೀಸ್ ಮುನ್ನವೇ ಹಂಟರ್ ಆಗಿಯೂ ನಿರಂಜನ್ ಸುಧೀಂದ್ರ ಬೆಳ್ಳಿತೆರೆಗೆ ಎಂಟ್ರಿಆಗುತ್ತಿದ್ದಾರೆ. ಹೌದು, ನಿರಂಜನ್ ಸುಧೀಂದ್ರ ಈಗ ಹಂಟರ್ ಹೆಸರಿನ ಚಿತ್ರವೊಂದರಲ್ಲೂ ಹೀರೋ ಆಗಿ ಅಭಿನಯಸುತ್ತಿದ್ದು, ಆ ಚಿತ್ರದ ಟೈಟಲ್ ಮೊನ್ನೆಯಷ್ಟೇ ನಿರಂಜನ ಹುಟ್ಟು ಹಬ್ಬದಂದು ಲಾಂಚ್ ಆಗಿದೆ. ಚಿತ್ರದ ಫಸ್ಟ್ ಲುಕ್ ಹಾಗೂ ಶೀರ್ಷಿಕೆಯನ್ನು ಸೂಪರ್ ಸ್ಟಾರ್ ಉಪೇಂದ್ರ ಹಾಗೂ ಪ್ರಿಯಾಂಕ ಉಪೇಂದ್ರ ಅನಾವರಣಗೊಳಿಸಿ ಶುಭ ಕೋರಿದ್ದಾರೆ.
ಸದ್ಯಕ್ಕೆ ಚಿತ್ರ ತಂಡ ನೀಡಿದ ಮಾಹಿತಿ ಪ್ರಕಾರ ಇದು ಕೂಡ ಪ್ಯಾನ್ ಇಂಡಿಯಾ ಸಿನಿಮಾ. ತ್ರಿವಿಕ್ರಮ ಸಾಫಲ್ಯ ನಿರ್ಮಾಣ ಮಾಡುತ್ತಿದ್ದು, ವಿನಯ್ ಕೃಷ್ಣ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ. ಈ ಹಿಂದೆ ಇವರು’ಸೀಜರ್’ ಹೆಸರಿನ ಚಿತ್ರ ನಿರ್ದೇಶಿಸಿದ್ದರು. ಆನಂತರವೀಗ ಇದು ಅವರ ಎರಡನೇ ಚಿತ್ರ. ಹಾಗೆಯೇ ನಿರ್ಮಾಪಕ ತ್ರಿವಿಕ್ರಮ ಸಾಫಲ್ಯ ಅವರಿಗೂ ಇದು ಮೂರನೇ ಚಿತ್ರ. ಪರಿ ಹಾಗೂ ಸೀಜರ್ ನಂತರ ಈಗ ಹಂಟರ್. ಕನ್ನಡ, ತೆಲುಗು, ತಮಿಳು, ಮಲೆಯಾಳಂ ಹಾಗೂ ಹಿಂದಿ ಭಾಷೆಗಳಲ್ಲೂ ಈ ಚಿತ್ರ ನಿರ್ಮಾಣವಾಗುತ್ತಿದೆ. ಹೆಸರಾಂತ ಗಾಯಕ ಹಾಗೂ ಸಂಗೀತ ನಿರ್ದೇಶಕ ಚಂದನ್ ಶೆಟ್ಟಿ ಈ ಚಿತ್ರಕ್ಕೆ ಸಂಗೀತ ನೀಡುತ್ತಿದ್ದು, ರಘು ನಿಡುವಳ್ಳಿ ಸಂಭಾಷಣೆ ಬರೆದಿದ್ದಾರೆ. ಆಕ್ಷನ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಚಿತ್ರದ ಚಿತ್ರೀಕರಣ ಸೆಪ್ಟೆಂಬರ್ ಅಂತ್ಯದ ವೇಳೆಗೆ ಶುರುವಾಗಲಿದೆ. ಕೇರಳದ ಸೌಮ್ಯ ಮೆನನ್ ಈ ಚಿತ್ರದ ನಾಯಕಿ. ಉಳಿದ ತಾರಾಬಳಗ ಹಾಗೂ ತಾಂತ್ರಿಕವರ್ಗದ ಮಾಹಿತಿ ಸದ್ಯದಲ್ಲೇ ಹೊರಬೀಳಲಿದೆ.
ಮನುಷ್ಯನಿಗೆ ಎರಡ್ಸಲ ಮೈ ನಡುಗುತ್ತೆ, ಒಂದು ತುಂಬಾ ಚಳಿ ಅಂದಾಗ, ಇನ್ನೊಂದು ತುಂಬಾ ಭಯ ಅದಾಗ … ಹೀಗಂತ ಬೆಂಕಿ ಡೈಲಾಗ್ ಉಗುಳಿ ಕಣ್ಣು ಹುಬ್ಬು ಹಾರಿಸಿದ್ದ ಖಡಕ್ ವಿಲನ್ ಜಗಪತಿ ಬಾಬು ಈಗ ಮೂಗಿಗೆ ರಿಂಗ್ ಸಿಕ್ಕಿಸಿಕೊಂಡು ಬಾಯಲ್ಲಿ ಸಿಗರೇಟ್ ಹಚ್ಚಿ ಹೊಗೆ ಬಿಡುತ್ತಾ ಎದುರಾಳಿಯನ್ನು ಕೆಕ್ಕರಿಸಿಕೊಂಡು ನೋಡುತ್ತಿದ್ದಾರೆ. ಜಗ್ಗು ಲುಕ್ ನೋಡಿದರವೆಲ್ಲ ದೆವುಡಾ ಅಂತ ನಿಬ್ಬೆರಗಾಗಿ ನೋಡ್ತಿದ್ದಾರೆ.
ರಾಜಮನಾರ್ ಅಂದರೆ ಏನು ? ರಾಜಮನಾರ್ ಅಂದರೆ ಯಾರು ? ಹೀಗೆ ತಲೆಗೆ ಹುಳಬಿಟ್ಕೊಂಡು ಸೌತ್ ಸಿನಿಮಾದ ಎಲ್ಲಾ ಸಿನಿಮಾ ಪ್ರೇಕ್ಷಕರು ಕೂತೂಹಲದಿಂದ ಕಾಯ್ತಿದ್ದರು. ಸಲಾರ್ ಚಿತ್ರತಂಡ ಪರಿಚಯಿಸ ಲಿರುವ ‘ರಾಜಮನಾರ್’ ಗಾಗಿ ಕಣ್ಣರಳಿಸಿ ಕಾಯ್ತಿದ್ದರು. ಹೀಗೆ ಕೂತೂಹಲ ದಿಂದ ಕಾಯ್ತಿದ್ದವರಿಗೆ ‘ಸಲಾರ್’ ಚಿತ್ರತಂಡ ಭರ್ಜರಿ ಸಪ್ರೈಸ್ ಕೊಟ್ಟಿದೆ. ರಾಜಮನಾರ್ ಬೇರಾರು ಅಲ್ಲ ಒನ್ ಆಂಡ್ ಓನ್ಲೀ ಜಗಪತಿ ಬಾಬು ಅನ್ನೋದನ್ನ ರಿವೀಲ್ ಮಾಡಿದೆ. ಭೀಕರ ರಣಭಯಂ ಕರ ಪೋಸ್ಟರ್ ರಿಲೀಸ್ ಮಾಡುವ ಮೂಲಕ ಮಾಯಬಜಾರ್ ನಲ್ಲಿ ಸಂಚಲನ ಸೃಷ್ಟಿಸಿದೆ.
ಜಗಪತಿ ಬಾಬು ಸಿನಿಮಾ ಪ್ರೇಕ್ಷಕರು ಮಾತ್ರವಲ್ಲ ಬೆಳ್ಳಿತೆರೆ ಹಾಗೂ ಬಾಕ್ಸ್ ಆಫೀಸ್ ಶೇಕ್ ಆಗುವಂತಹ ಖಡಕ್ ಖಳನಾಯಕ. ಜಗಪತಿ ಬಾಬು ಹೆಸರು ಕೇಳಿದರೆ ಸಿನಿಮಾ ಸೌತ್ ಸಿನಿಮಾ ಜಗತ್ತೇ ಕೇಕೆ ಹಾಕುತ್ತೆ ಅಷ್ಟರ ಮಟ್ಟಿಗೆ ಖಡಕ್ ವಿಲನ್ ಕ್ಯಾರೆಕ್ಟರ್ ಗೆ ಬ್ರ್ಯಾಂಡ್ ಆಗಿರೋ ಜಗಪತಿ ಬಾಬು ರಾಜಮನಾರ್ ಪಾತ್ರದ ಮೂಲಕ ʼಸಲಾರ್ʼ ಸಿನಿಮಾದಲ್ಲಿ ಸುನಾಮಿ ಎಬ್ಬಿಸಲಿದ್ದಾರೆ. ಅಮರೇಂದ್ರ ಬಾಹುಬಲಿ ಅಖಾಡದಲ್ಲಿ ಕಾದಾಡಲಿದ್ದಾರೆ.
ನ್ಯಾಷನಲ್ ಸ್ಟಾರ್ ಪ್ರಭಾಸ್, ನ್ಯಾಷನಲ್ ಡೈರೆಕ್ಟರ್ ಪ್ರಶಾಂತ್ ನೀಲ್’ ಸಲಾರ್’ ಚಿತ್ರದಲ್ಲಿ ಪ್ಯಾನ್ ಇಂಡಿಯಾ ಲೆವೆಲ್ ನಲ್ಲಿ ಹವಾ ಕ್ರಿಯೇಟ್ ಮಾಡಿಕೊಂಡಿರುವ ಖಳನಾಯಕ ಜಗಪತಿ ಬಾಬು ‘ಸಲಾರ್’ ಅಡ್ಡಕ್ಕೆ ಎಂಟ್ರಿಕೊಟ್ಟಿರುವುದರಿಂದ ಸಿನಿಮಾ ಮೇಲಿನ ನಿರೀಕ್ಷೆ ಒಂದು ತೂಕ ಜಾಸ್ತಿಯಾಗಿದೆ. ಕನ್ನಡಿಗ ಪ್ರಶಾಂತ್ ನೀಲ್ ನಿರ್ದೇಶನದ, ಕನ್ನಡದ ಹೆಮ್ಮೆಯ ಸಂಸ್ಥೆ ಹೊಂಬಾಳೆ ನಿರ್ಮಾಣದ ‘ಸಲಾರ್’ ವರ್ಲ್ಡ್ ವೈಡ್ ಮತ್ತೊಮ್ಮೆ ಧೂಳೆಬ್ಬಿಸೋದು ಖಚಿತ ಎನ್ನುವುದು ಪಾತ್ರವರ್ಗ ಹಾಗೂ ಮೇಕಿಂಗ್ ನಿಂದಲೇ ಗೊತ್ತಾಗ್ತಿದೆ. ʼಸಲಾರ್ʼ ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದ್ದು ಇನ್ನಷ್ಟು ಬಿಗ್ ಅಪ್ ಡೇಟ್ ಒನ್ ಬೈ ಒನ್ ರಿವೀಲ್ ಆಗಲಿದೆ.