Categories
ಸಿನಿ ಸುದ್ದಿ

ಬೆಳ್ಳಿತೆರೆ ಮೇಲೆ ಟಾಮ್‌ ಅಂಡ್‌ ಜರ‍್ರಿ ಸವಾರಿ! ಕೆಜಿಎಫ್ ಡೈಲಾಗ್ ರೈಟರ್ ಹೊಸ ಪ್ರಯತ್ನ; ಗಂಟುಮೂಟೆ ಹುಡುಗ, ಜೋಡಿಹಕ್ಕಿ ಹುಡುಗಿಯ ಡಿಂಗುಡಾಂಗು!!

ಟಾಮ್ ಅಂಡ್ ಜರ‍್ರಿ' ಇದೇ ಶುಕ್ರವಾರ ಬೆಳ್ಳಿತೆರೆ ಮೇಲೆ ಸವಾರಿ ಹೊರಡಲಿರುವ ಚಿತ್ರ. ರಾಜಾದ್ಯಂತ ಬಹುತೇಕ ಎಲ್ಲಾ ಚಿತ್ರಮಂದಿರಕ್ಕೆಟಾಮ್ ಅಂಡ್ ಜರ‍್ರಿ’ ಲಗ್ಗೆ ಇಡ್ತಿದ್ದಾರೆ. ಈಗಾಗಲೇ ಇವರಿಬ್ಬರು ಪ್ರೇಮಿಗಳ ಹೃದಯಕ್ಕೆ, ಪಡ್ಡೆಹೈಕ್ಳ ಹಾರ್ಟ್ಗೆ ಲಗ್ಗೆ ಇಟ್ಟಾಗಿದೆ. ಹೀಗಾಗಿಯೇ, ಲವ್ವಲ್ಲಿರೋರು, ಲವ್ವಲ್ಲಿ ಬೀಳೋರೆಲ್ಲರೂ ಕೂಡ `ಹಾಯಾಗಿದೆ ಎದೆಯೊಳಗೆ ಝಲ್ ಎಂದಿದೆ ಈ ಘಳಿಗೆ.. ನೀ ನೋಡೋ ನೋಟವೆಲ್ಲ… ನನ್ನನ್ನೇ ಕೊಲ್ಲೋ ಹಾಗೇ.. ನೀ ಮೋಡಿ ಮಾಡುವಾಗ.. ನಾ ಸೋತು ನಿಂತ ಹಾಗೇ.. ನಿನೆಂಥಾ ಮಾಯಗಾತಿಯೇ.. ಹೀಗಂತ ಹಾಡುತ್ತಾ ಪ್ರೇಮಲೋಕಕ್ಕೆ ಹೋಗಿಬರುತ್ತಿದ್ದಾರೆ. ಕೇವಲ ಒಂದೇ ಒಂದು ಹಾಡು ಯೂತ್ಸ್ನ ಇಷ್ಟೊಂದು ಇಂಪ್ರೆಸ್ ಮಾಡಿದೆ ಅಂದರೆ ಟಾಮ್ ಅಂಡ್ ಜರ‍್ರಿ ಪೂರ್ತಿ ಸಿನಿಮಾ ಯೂತ್ಸ್ ಮೇಲೆ ಇನ್ನೆಷ್ಟು ಪ್ರಭಾವ ಬೀರಬಹುದು. ಈ ಕೂತೂಹಲಕ್ಕೆ ಇದೇ ಶುಕ್ರವಾರ ತೆರೆಬೀಳಲಿದೆ.

ಸಿನಿಮಾದ ಹಾಡುಗಳು ಒಂದು ಚಿತ್ರಕ್ಕೆ ಇನ್ವಿಟೇಷನ್ ಇದ್ದಂತೆ. ರಿಲೀಸ್‌ಗೂ ಮುನ್ನ ಹಾಡು ಹಿಟ್ಟಾದರೆ ಅರ್ಧ ಸಿನಿಮಾ ಗೆದ್ದಂತೆ ಎನ್ನುವ ಮಾತಿದೆ. ಸದ್ಯ ಟಾಮ್ ಅಂಡ್ ಜರ‍್ರಿ ಮೊದಲ ಹಾಡು ಸೂಪರ್-ಡೂಪರ್ ಹಿಟ್ಟಾಗಿದೆ. ಇತ್ತೀಚೆಗೆ ಬಿಡುಗಡೆಯಾದ ಟ್ರೆöÊಲರ್ ಕೂಡ ಬ್ಲಾಕ್‌ಬಸ್ಟರ್ ಹಿಟ್ಟಾಗಿದೆ. ಇಲ್ಲಿವರೆಗೂ ಸುಮಾರು 12 ಲಕ್ಷ ಮಂದಿ ಟ್ರೇಲರ್ ವೀಕ್ಷಣೆ ಮಾಡಿದ್ದಾರೆ. ಟಾಮ್ ಅಂಡ್ ಜರ‍್ರಿಯ ಕಿತ್ತಾಟ-ಗುದ್ದಾಟ-ಮುದ್ದಾಟದ ಝಲಕ್ ಮಜಾ ಕೊಡ್ತಿದೆ. ಕಾಸು ಕೊಟ್ಟು ಸಿನಿಮಾ ನೋಡೋಕೆ ಬರುವವರಿಗೆ ಎಂಟರ್‌ಟೈನ್ಮೆಂಟ್‌ಗೆ ಬರ ಇರೋದಿಲ್ಲ ಎನ್ನುವುದು ಟ್ರೇಲರ್ ನೋಡಿದ್ರೇನೆ ಗೊತ್ತಾಗುತ್ತೆ.

ಫ್ರೆಂಡ್ಸ್ ಸರ್ಕಲ್‌ನಲ್ಲಿ ಖುಷ್ಕಾ ತಗೊಂಡು ಕಬಾಬ್ ತಗೊಳ್ಳೋಕೆ ಪರದಾಡುವವರನ್ನೂ ನೋಡಿರ‍್ತೀರಾ. ಕಾಲಲ್ಲಿ ಓಡಾಡಿ ಮನುಷ್ಯ ಅನಿಸಿಕೊಳ್ಳೋದಕ್ಕಿಂತ ಕಾರಲ್ಲಿ ಓಡಾಡಿ ದೊಡ್ಡ ಮನುಷ್ಯ ಅನಿಸಿಕೊಳ್ಳೋದು ಬೆಸ್ಟ್ ಅಂತ ಡೈಲಾಗ್ ಬಿಡೋ ಫ್ರೆಂಡ್‌ನೂ ನೀವು ನೋಡರ‍್ತೀರಾ. ಇಂಥಾ ಫ್ರೆಂಡ್ಸ್ಗಳನ್ನು ನಿಮ್ಮ ಸ್ನೇಹಕೂಟದಲ್ಲಿ ನೋಡಿದ್ದರೂ, ನೋಡಿಲ್ಲವಾದರೂ ಕೂಡ ಟಾಮ್ ಅಂಡ್ ಜರ‍್ರಿ'ಯನ್ನು ನೋಡೋದಕ್ಕೆ ಥಿಯೇಟರ್‌ಗೆ ಹೋಗಿ. ಯಾಕಂದ್ರೆ, ಸಾಮಾಜಿಕ ಕಟ್ಟುಪಾಡು ಏನೇ ಇದ್ದರೂ ಕೂಡನಾನ್ ಇರೋದು ಹಿಂಗೆ, ನನ್ನ ಜೀವನ ಹಿಂಗೆ ಅಂತ ಬದುಕುವ ಎರಡು ಕ್ಯಾರೆಕ್ಟರ್‌ನ ಕಮರ್ಷಿಯಲ್ ಎಲಿಮೆಂಟ್ಸ್ ಜೊತೆ ಬ್ಲೆಂಡ್ ಮಾಡಿ `ಟಾಮ್ ಅಂಡ್ ಜರ‍್ರಿ’ಯನ್ನು ನಿಮಗೋಸ್ಕರ ಸಿದ್ದಪಡಿಸಿದ್ದಾರೆ ನಿರ್ದೇಶಕ ರಾಘವ್ ವಿನಯ್ ಶಿವಗಂಗೆ.

ರಾಘವ್ ವಿನಯ್ ಶಿವಗಂಗೆ ಯುವ ನಿರ್ದೇಶಕ. ಆದರೆ, ಸಿನಿಮಾ ಇಂಡಸ್ಟ್ರೀಯಲ್ಲಿ ಇವರಿಗಿರುವ ಅನುಭವ ಹಾಗೂ ಸಿನಿಮಾ ವಿದ್ಯೆ ಇದ್ಯೆಯಲ್ಲ ಅದು ಅಘಾದವಾದದ್ದು. ಹೀಗಾಗಿಯೇ ಇವರಿಗೆ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಇಡೀ ದೇಶ ಮೆಚ್ಚಿಕೊಂಡಂತಹ ಕೆಜಿಎಫ್ ಪಾರ್ಟ್ 1ಗೆ ಡೈಲಾಗ್ ಬರೆಯುವಂತಹ ಅವಕಾಶ ಸಿಕ್ಕಿತ್ತು. ಇಂತಿಪ್ಪ ಡೈರೆಕ್ಟರ್ ರಾಘವ್ ವಿನಯ್ ಶಿವಗಂಗೆಯವರು ಇದೇ ಮೊದಲ ಭಾರಿಗೆ ಡೈರೆಕ್ಟರ್ ಕ್ಯಾಪ್ ತೊಟ್ಟು ಕಥೆ-ಚಿತ್ರಕಥೆ ರಚಿಸಿ `ಟಾ ಮ್ ಅಂಡ್ ಜರ‍್ರಿ’ಯನ್ನು ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ಹೊಸತನವಿದೆ, ಹಳೇ ಫಾರ್ಮುಲ ಇಲ್ಲಿಲ್ಲ. ಪ್ರತಿ 20 ನಿಮಿಷಕ್ಕೆ ಸಿನಿಮಾದ ಜಾಹ್ನರ್ ಚೇಂಜ್ ಆಗುತ್ತೆ, ಮ್ಯೂಸಿಕ್ ಬದಲಾಗುತ್ತೆ, ಕಥೆ ಬೇರೊಂದು ಲೋಕವನ್ನೇ ನಿಮ್ಮ ಮುಂದೆ ಹರವಿಡುತ್ತೆ. ಸಂಪೂರ್ಣ ಹೊಸಬರ ತಂಡ ಸೇರಿಕೊಂಡು ಮಾಡಿರುವ ಚಿತ್ರವಾದರೂ ಸಹಿತ ಕಂಟೆAಟ್ ಹಾಗೂ ಅಪ್ರೋಚ್ ಮಾಡುವ ರೀತಿಯಲ್ಲಿ ಹೊಸತನವಿದೆ. ವಿಷ್ಯೂಯಲ್ ಟ್ರೀಟ್ ಎಕ್ಸ್ಟ್ರಾಡಿನರಿಯಾಗಿದೆ. ಬಿಗ್‌ಸ್ಕ್ರೀನ್‌ನಲ್ಲಿ ನೀವು ಅದನ್ನು ನೋಡಿಯೇ ಸವಿಬೇಕು.

ಇನ್ನೂ ಟಾಮ್ ಅಂಡ್ ಜರ‍್ರಿಯಾಗಿ ನಿಶ್ಚಿತ್ ಕೊರೋಡಿ ಹಾಗೂ ಚೈತ್ರಾ ರಾವ್ ಮಿಂಚಿದ್ದಾರೆ. ಗಂಟುಮೂಟೆ ಚಿತ್ರದಲ್ಲಿ ಮಿಂಚಿ ಸೈ ಎನಿಸಿಕೊಂಡಿದ್ದ ನಿಶ್ಚಿತ್ ಇಲ್ಲಿ ಹೀರೋ ಆಗಿದ್ದಾರೆ. ಜೋಡಿಹಕ್ಕಿ ಜಾನಕಿಯಾಗಿ ಕಿರುತೆರೆ ಪ್ರೇಕ್ಷಕರನ್ನು ಸೆಳೆದಿದ್ದ ಚೈತ್ರಾ ರಾವ್ ಮಾಯಬಜಾರ್ ಮೂಲಕ ಬೆಳ್ಳಿತೆರೆಗೆ ಬಂದಿದ್ದರು. ಇದೀಗ ಟಾಮ್ ಅಂಡ್ ಜರ‍್ರಿಯಲ್ಲಿ ಸತ್ಯ ಪಾತ್ರದ ಮೂಲಕ ಕಮಾಲ್ ಮಾಡೋದಕ್ಕೆ ಹೊರಟಿದ್ದಾರೆ. ಧರ್ಮ ಪಾತ್ರದ ಮೂಲಕ ಹವಾ ಎಬ್ಬಿಸೋಕೆ ನಿಶ್ಚಿತ್ ಒಂಟಿಕಾಲಿನಲ್ಲಿ ನಿಂತಿದ್ದಾರೆ. ಹಾಡು ಹಾಗೂ ಟ್ರೇಲರ್‌ನಲ್ಲೇ ಈ ಜೋಡಿಯ ಕೆಮಿಸ್ಟ್ರೊ ವರ್ಕೌಟ್ ಆಗಿದ್ದು ಫ್ಯಾನ್ಸ್ ಹುಟ್ಟಿಕೊಂಡಿದ್ದಾರೆ. ಇಡೀ ಸಿನಿಮಾ ಹೊರಬಂದ್ಮೇಲೆ `ಟಾಮ್ ಅಂಡ್ ಜೆರ್ರಿಗೆ ಸಂಘ-ಸಂಸ್ಥೆಗಳು ದುಪ್ಪಟ್ಟಾಗ್ಬೋದು.

ಹೀರೋ ನಿಶ್ಚಿತ್ ಸದ್ಯಕ್ಕೆ ಆಟಿಟ್ಯೂಡ್ ತೋರಿಸುತ್ತಿಲ್ಲ. ಮೊನ್ನೆ ಸುದ್ದಿಗೋಷ್ಟಿಯಲ್ಲಿ ಮಾತನಾಡುತ್ತಾ, ಕೆಲಸದ ಆಳಿನ ಕ್ಯಾರೆಕ್ಟರ್ ಕೊಟ್ಟರೂ ಮಾಡ್ತೀನಿ, ರೊಮ್ಯಾನ್ಸ್ ಮಾಡೂ ಅಂದರೂ ಮಾಡ್ತೀನಿ. ಯಾಕಂದ್ರೆ, ಪ್ರತಿ ಪಾತ್ರಕ್ಕೂ ಅದರದ್ದೇ ಆದ ಪಾವಿತ್ರ್ಯತೆ ಇದೆ ಅಂದರು. ನಿಶ್ಚಿತ್ ಡೌಂಟ್ ಟು ಅರ್ಥ್ ನೇಚರ್ ನೋಡಿದರೆ ಮುಂದೊಂದು ದಿನ ಸ್ವಂತ ಬ್ರ್ಯಾಂಡ್ ಆಗೋದು ಗ್ಯಾರಂಟಿ ಬಿಡಿ. ಕಲಾವಿದ ನೀರಿದ್ದ ಹಾಗೇ, ಯಾವುದೇ ಪಾತ್ರೆಗೆ ಹಾಕಿದರೂ ಅದೇ ಆಕಾರ ಪಡಿಬೇಕು ಪಡಿತೀನಿ ಅಂತ ಬೇರೆ ಹೇಳಿದ್ದಾರೆ. ಅಭಿಮಾನಿ ದೇವರುಗಳ ಆಶೀರ್ವಾದ ಹೀರೋ ಮೇಲಿದ್ದುಟಾಮ್ ಅಂಡ್ ಜರ‍್ರಿ’ ಹಿಟ್ಟಾದರೆ ಹೀರೋ ನಿಶ್ಚಿತ್ ಈಗ ಹೇಗಿದ್ದಾರೋ ಹಾಗೆಯೇ ಇರುತ್ತಾರಾ ಇಲ್ಲವಾ ಕಾದುನೋಡಬೇಕು.‌

ಅಂದ್ಹಾಗೇ, ಟಾಮ್ ಅಂಡ್ ಜರ‍್ರಿಯಲ್ಲಿ ಅತೀ ದೊಡ್ಡ ತಾರಾಬಳಗವೇ ಇದೆ. ತಾರಾ ಅನುರಾಧ, ಜೈ ಜಗದೀಶ್, ಕೋಟೆ ಪ್ರಭಾಕರ್, ಕಡ್ಡಿಪುಡ್ಡಿ ಚಂದ್ರು, ರಾಕ್‌ಲೈನ್ ಸುಧಾಕರ್, ಸಂಪತ್ ಮೈತ್ರೇಯ, ಪದ್ಮಜಾ ರಾವ್, ಪ್ರಕಾಶ್ ತುಮ್ಮಿನಾಡು, ಪ್ರಶಾಂತ್ ನಟನ, ಮೈತ್ರಿ ಜಗ್ಗಿ ಇತರರು ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಚಿತ್ರದಲ್ಲಿ ಒಟ್ಟು ಐದು ಹಾಡುಗಳಿದ್ದು, ಮ್ಯಾಥ್ಯೂಸ್ ಮನು ಸಂಗೀತ ಸಂಯೋಜಿಸಿದ್ದಾರೆ.

ಸಂಕೇತ್ ಕ್ಯಾಮೆರಾ ವರ್ಕ್, ಸೂರಜ್ ಅಂಕೊಲೇಕರ್ ಸಂಕಲನ, ಅರ್ಜುನ್ ರಾಜ್ ಸಾಹಸ ಚಿತ್ರಕ್ಕಿದೆ. ರಾಜು ಶೇರಿಗಾರ್ ಬಂಡವಾಳ ಹೂಡಿದ್ದು ರಿದ್ಧಿ ಸಿದ್ಧಿ ಫಿಲಂಸ್ ಬ್ಯಾನರ್ ಅಡಿಯಲ್ಲಿ ಸಿನಿಮಾ ಅದ್ಬೂತವಾಗಿ ಮೂಡಿಬಂದಿದೆ. ಇಲ್ಲಿವರೆಗೂ ಹೊಸಬರ ಪ್ರಯತ್ನಕ್ಕೆ ಪ್ರೇಕ್ಷಕ ಮಹಾಷಯರು ಜೈಕಾರ ಹಾಕಿದ್ದಾರೆ. ಈಗ ಸಂಪೂರ್ಣ ಹೊಸಬರಟಾಮ್ ಅಂಡ್ ಜರ‍್ರಿ’ಯನ್ನು ಸಿನಿರಸಿಕರು ಒಪ್ಪಿಕೊಳ್ತಾರಾ ? ಜಸ್ಟ್ ವೇಯ್ಟ್ ಅಂಡ್ ಸೀ…

ವಿಶಾಲಾಕ್ಷಿ,ಎಂಟರ್‌ಟೈನ್ಮೆಂಟ್ ಬ್ಯೂರೋ ಸಿನಿಲಹರಿ

Categories
ಸಿನಿ ಸುದ್ದಿ

ಟಾಮ್ ಅಂಡ್ ಜರ‍್ರಿ ಆಟ ಶುರು ಗುರು…! ನವೆಂಬರ್‌ 12 ರಂದು ಪ್ಯಾಕೇಜ್‌ ಧಮಾಕ!!


ಜೋಡಿಹಕ್ಕಿ ಖ್ಯಾತಿಯ ಚೈತ್ರಾರಾವ್, ನಿಶ್ಚಿತ್ ಕರೋಡಿ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿರುವ ಚಿತ್ರ ಟಾಮ್ ಅಂಡ್ ಜರ‍್ರಿ. ರಿದ್ಧಿಸಿದ್ಧಿ ಬ್ಯಾನರ್ ಅಡಿಯಲ್ಲಿ, ರಾಜು ಶೇರಿಗಾರ್ ಅವರು ನಿರ್ಮಿಸಿರುವ ಈ ಚಿತ್ರಕ್ಕೆ ರಾಘವ್ ವಿನಯ್ ಶಿವಗಂಗೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ನವೆಂಬರ್ 12ರಂದು ತೆರೆಕಾಣಲಿರುವ ಈ ಚಿತ್ರದ ಟ್ರೇಲರ್‌ ಬಿಡುಗಡೆಯಾಗಿದ್ದು, ಸಿಕ್ಕಾಪಟ್ಟೆ ಸದ್ದು ಮಾಡಿದೆ.


ತಮ್ಮ ಚೊಚ್ಚಲ ನಿರ್ಮಾಣದ ಚಿತ್ರದ ಕುರಿತಂತೆ ಮಾತನಾಡುವ ನಿರ್ಮಾಪಕರು, “ಕಾಮಿಡಿ. ಫೈಟ್ ಎಲ್ಲಾ ಥರದ ಎಲಿಮೆಂಟ್ಸ್ ಇದೆ. ತಾಯಿ ಮಗನ ಸಂಬಂಧದ ಕಥೆ ಮನಸಿಗೆ ನಾಟುತ್ತದೆ. ಯೂಥ್‌ಗೆ ಸಪೋರ್ಟ್ ಮಾಡಬೇಕೆಂದು ಚಿತ್ರರಂಗಕ್ಕೆ ಬಂದೆ. ಆರಂಭದಿಂದಲೂ ವೆಂಕಟೇಶಗೌಡ್ರು ನಮ್ಮ ಜೊತೆ ಕೈಜೋಡಿಸಿದ್ದಾರೆ, ಈವಾರ ಎಷ್ಟೇ ಸಿನಿಮಾ ಬಂದರೂ ನಮ್ಮ ಚಿತ್ರಕ್ಕೆ ತೊಂದರೆಯಿಲ್ಲ ಎಂದು ಹೇಳಿದರು. ನಂತರ ನಿರ್ದೇಶಕ ರಾಘವ ಮಾತನಾಡಿ, ಈ ಮೊದಲು ನಮ್ಮ ಚಿತ್ರದ ಟ್ರೇಲರನ್ನು ಪುನೀತ್ ಅವರ ಕೈಲೇ ರಿಲೀಸ್ ಮಾಡಿಸಬೇಕೆಂಬ ಪ್ಲಾನ್ ಇತ್ತು. ಅವರು ನಮ್ಮ ಒಂದಷ್ಟು ಕನಸುಗಳ ಭಾಗವೂ ಆಗಿದ್ದರು. ಹೊಸತನ ಇಷ್ಟಪಡುವವರಿಗೆ ನಮ್ಮ ಚಿತ್ರ ಹಿಡಿಸುತ್ತದೆ. 2 ಪಾತ್ರಗಳು ಅವರವರ ವ್ಯಕ್ತಿತ್ವಕ್ಕೆ ಅನುಸಾರವಾಗಿ ಹೋಗುತ್ತಿರುತ್ತವೆ, ಟಾಮ್ ಅಂಡ್ ಜೆರ‍್ರಿ ನಡುವೆ ಆಗಾಗ ಜಗಳ ನಡೆಯುತ್ತಲೇ ಇರುತ್ತೆ, ಹುಚ್ಚನ ಪಾತ್ರ ಇವರಿಬ್ಬರಿಗೂ ಬ್ರಿಡ್ಜ್ ಆಗಿರುತ್ತದೆ ಎಂದು ಹೇಳಿದರು.

ನಾಯಕ ನಿಶ್ಚಿತ್ ಮಾತನಾಡಿ ಕೊಟ್ಟ ಪಾತ್ರಕ್ಕೆ ನ್ಯಾಯ ಒದಗಿಸಿದ್ದೇವೆ ಎಂದು ಹೇಳಿಕೊಂಡರೆ, ನಾಯಕಿ ಚೈತ್ರಾರಾವ್, ಚಿತ್ರದಲ್ಲಿ ನಾನು ಎನ್‌ಜಿಓದಲ್ಲಿ ಕೆಲಸ ಮಾಡುವ ಹುಡುಗಿ, ತನಗೇನು ಇಷ್ಟವೋ ಅದೇ ರೀತಿ ಬದುಕುತ್ತಿರುವಂಥ ಹುಡುಗಿ ಎಂದು ಹೇಳಿದರು.

ಟ್ರೇಲರ್‌ಗೆ ವಿಠಲ್ ಮ್ಯೂಸಿಕ್ ಕಂಪೋಜ್ ಮಾಡಿದ್ದಾರೆ. ನಿರ್ದೇಶಕ ಮ್ಯಾಥ್ಯೂಸ್ ಮನು ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ. ಈ ಚಿತ್ರದ ಹಾಯಾಗಿದೆ ಎದೆಯೊಳಗೆ ಎಂಬ ಹಾಡಿಗೆ ಹಿನ್ನೆಲೆ ಗಾಯಕ ಸಿದ್ ಶ್ರೀರಾಮ್ ಅವರು ದನಿಯಾಗಿದ್ದಾರೆ. ಚಿತ್ರದ ಛಾಯಾಗ್ರಾಹಕರಾಗಿ ಸಂಕೇತ್ ಕೆಲಸ ಮಾಡಿದರೆ, ಸೂರಜ್ ಅಂಕೋಲೆಕರ್ ಸಂಕಲನ ಮಾಡಿದ್ದಾರೆ.


ಹಿರಿಯ ಕಲಾವಿದರಾದ ಜೈಜಗದೀಶ್, ತಾರಾ ಅನುರಾಧಾ, ರಾಕ್‌ಲೈನ್ ಸುಧಾಕರ್, ಪದ್ಮಜಾ ರಾವ್, ಕಡ್ಡಿಪುಡಿ ಚಂದ್ರು ಸೇರಿದಂತೆ ಕವಲುದಾರಿ ಖ್ಯಾತಿಯ ಸಂಪತ್ ಮೈತ್ರೇಯ, ಕೆಜಿಎಫ್ ಖ್ಯಾತಿಯ ಶೇಖರ್ ಹೀಗೆ ಸಾಕಷ್ಟು ಕಲಾವಿದರ ದಂಡೇ ಚಿತ್ರದಲ್ಲಿ ಅಭಿನಯಿಸಿದೆ.

Categories
ಸಿನಿ ಸುದ್ದಿ

ಪುನೀತ್ ಪ್ರೇರಣೆಯಿಂದ ‌ನೇತ್ರದಾನ‌ ಮಾಡುವ ಮೂಲಕ ‌ನಾಡಿಗೇ ಮಾದರಿಯಾದ ಕೋಟೆನಾಡಿನ ಕುಗ್ರಾಮ !


ಪುನೀತ್ ರಾಜಕುಮಾರ್ ಈಗಿಲ್ಲ. ಆದರೆ, ಅವರ ಸಿನಿಮಾಗಳ ಮೂಲಕ ಸದಾ ಜೊತೆಗಿದ್ದಾರೆ. ರಾಜ್‌ ಫ್ಯಾಮಿಲಿ ನೇತ್ರದಾನ ಮಾಡುವ ಮೂಲಕ ಮಾದರಿಯಾಗಿದ್ದು ಗೊತ್ತೇ ಇದೆ. ಈಗ ಪುನೀತ್‌ ರಾಜಕುಮಾರ್‌ ಅವರ ಪ್ರೇರಣೆಯಿಂದ ರಾಜ್ಯದಲ್ಲಿ ನೇತ್ರದಾನದ ದೊಡ್ಡ ಆಂದೋಲನ ಶುರುವಾಗಿದೆ.‌ ಇದಕ್ಕೆ‌ ಸಾಕ್ಷಿ ಎಂಬಂತೆ ಚಿತ್ರದುರ್ಗ ಜಿಲ್ಲೆಯ ದಾಸಯ್ಯನ‌ಹಟ್ಟಿ ಗ್ರಾಮದ 150 ಕ್ಕೂ ಹೆಚ್ಚು ಜನರು ನೇತ್ರದಾನ ಮಾಡುವ‌ ಮೂಲಕ ಇಡೀ ನಾಡಿಗೆ ಮಾದರಿಯಾಗಿದ್ದಾರೆ.


ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನಲ್ಲಿರುವ ದಾಸಯ್ಯ ಹಟ್ಟಿಯು 150 ಕ್ಕೂ ಹೆಚ್ಚು ಮನೆಗಳಿರುವ ಪುಟ್ಟ ಗ್ರಾಮ. ಹಾಗೆಯೇ ಇದು ಬಹುತೇಕ ಪರಿಶಿಷ್ಟ ಜಾತಿಯ ಜ‌ನರಿರುವ ಅಭಿವೃದ್ದಿಗೆ ಕಾಯುತ್ತಿರುವ ಪುಟ್ಟ ಹಳ್ಳಿಯೂ ಹೌದು. ಅಚ್ಚರಿ ಅಂದ್ರೆ ಅಭಿಮಾನಿಗಳ ಪ್ರೀತಿಯ ಅಪ್ಪು ಪುನೀತ್ ರಾಜಕುಮಾರ್ ಅಂದ್ರೆ ಈಗ್ರಾಮದ ಯುವ ಜನರಿಗೆ ಅಚ್ಚು ಮೆಚ್ಚು.‌

ಸೋಮವಾರ ಪುನೀತ್ ರಾಜ್ ಕುಮಾರ್ ಅವರ ಪುಣ್ಯ ಸ್ಮರಣೆಯ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಶ್ರದ್ಧಾಂಜಲಿ ಕಾರ್ಯಕ್ರಮವಿತ್ತು. ಅದರ ಅಂಗವಾಗಿ ಅನ್ನ ಸಂತರ್ಪಣೆ ‌ಆಯೋಜಿಸಲಾಗಿತ್ತು. ಪುನೀತ್ ಅವರ ಪ್ರೇರಣೆಯಿಂದ ಈ ಗ್ರಾಮದ 150ಕ್ಕೂ ಹೆಚ್ಚು ಜನರು‌ ನೇತ್ರದಾನ ಮಾಡಿದ್ದಾರೆ.‌ ಅಷ್ಟು ಜನರು ಸ್ವಯಂ ಪ್ರೇರಣೆಯಿಂದ ನೇತ್ರದಾನಕ್ಕೆ ಸಹಿ ಹಾಕಿದ್ದಾರೆ. ಇದರಲ್ಲಿ ಮಹಿಳೆಯರು, ಯುವಕರು ಸೇರಿದಂತೆ ಗ್ರಾಮದ ಹಿರಿಯರು ಇದ್ದಾರೆ.

‘ ನಮಗೆ ನಟ ಪುನೀತ್ ಅವರ ಅಕಾಲಿಕ‌ ಸಾವನ್ನು ಅರಗಿಸಿಕೊಳ್ಳಲಾಗುತ್ತಿಲ್ಲ. ಪುನೀತ್ ಅಂದ್ರೆ ನಮಗೆ‌ ಅಚ್ಚು‌ ಮೆಚ್ಚು. ಅವರ ಸಿನಿಮಾ‌ ಪಯಣದ ಜತೆಗೆ ಅವರ ಸಾಮಾಜಿಕ‌ ಕೆಲಸಗಳಿಂದ ಪ್ರೇರಣೆಯಾದವರು‌ ನಾವು. ಅದೇ ಕಾರಣಕ್ಕೆ ನಾವು ಮೊದಲಿನಿಂದಲು‌ ಅವರನ್ನು ಅನುಸರಿಸುತ್ತಾ ಬಂದವರು.‌ ಆದರೆ ಅವರ ಅಕಾಲಿಕ ಸಾವನ್ನು ನಾವು ಅರಗಿಸಿಕೊಳ್ಳಲು ಆಗುತ್ತಿಲ್ಲ. ಆದರೆ ಈಗ ಅವರಿಲ್ಲ ಎನ್ನುವ ವಾಸ್ತವ ವನ್ನುನಾವು ಒಪ್ಪಿಕೊಳ್ಳಲೇ ಬೇಕಿದೆ.‌

ಅದರೆ ಅವರನ್ನು ಜೀವಂತವಾಗಿಸಲು ಅವರು‌ ನಮಗೆ‌ ಅನೇಕ‌ ಸಾಮಾಜಿಕ ಕೆಲಸಗಳನ್ನು ಬಿಟ್ಟು‌ ಹೋಗಿದ್ದಾರೆ. ಅದರಲ್ಲಿ ನೇತ್ರದಾನವು ಒಂದು. ಅದನ್ನು‌ ಮುಂದುವರೆಸಿಕೊಂಡು‌ ಹೋಗುವುದಕ್ಕಾಗಿ ನಾವೀಗ ನೇತ್ರದಾನ ಮಾಡಿದ್ದೇವೆ.‌ ಇದು ನಮ್ಮ ಅಳಿಲು ಸೇವೆ ಮಾತ್ರ ಎನ್ನುತ್ತಾರೆ‌ ದಾಸಯ್ಯನ‌ಹಟ್ಟಿ‌ ಗ್ರಾಮ‌ ಪಂಚಾಯತ್ ಸದಸ್ಯ ಚಂದ್ರಶೇಖರ್.

Categories
ಸಿನಿ ಸುದ್ದಿ

ಎಲ್ಲರೂ ಫಸ್ಟ್‌ ನೈಟ್‌ನಲ್ಲಿ ಏನ್ಮಾಡ್ತಾರೋ ನಾವು ಅದ್ನೇ ಮಾಡಿದ್ದೀವಿ! ಡಿಂಪಲ್‌ಕ್ವೀನ್ ರಚ್ಚು ರೊಚ್ಚಿಗೇಳಿಸೋ ಬೆಡ್‌ರೂಮ್ ಮಾತು !!

ಸ್ಯಾಂಡಲ್‌ವುಡ್‌ನ ಡೇರಿಂಗ್ ಅಂಡ್ ಡ್ಯಾಶಿಂಗ್ ಹುಡುಗಿ ಅಂದ್ರೆ ಒನ್ ಅಂಡ್ ಓನ್ಲೀ ರಚಿತರಾಮ್. ಗುಳಿಕೆನ್ನೆ ಚೆಲುವಿನಿಂದ, ಮನಮೋಹಕ ಅಭಿನಯದಿಂದ ಎಲ್ಲರ ಹಾಟ್‌ಫೇವರಿಟ್ ಆಗಿರೋ ರಚ್ಚು ಈಗ ಹಾಟ್‌ನ್ಯೂಸ್ ಆಗಿದ್ದಾರೆ. `ಎಲ್ಲರೂ ಫಸ್ಟ್ನೈಟ್‌ನಲ್ಲಿ ಏನ್ಮಾಡ್ತಾರೋ ನಾವು ಅದನ್ನೇ ಮಾಡಿದ್ದೀವಿ’ ಅಂತೇಳಿ ಸೆನ್ಸೇಷನ್ ಸೃಷ್ಟಿಸಿದ್ದಾರೆ. ಅಷ್ಟಕ್ಕೂ, ಸಿಂಗಲ್ಲಾಗಿರೋ ರಚಿತರಾಮ್ ಹಿಂಗ್ಯಾಕ್ ಸ್ಟೇಟ್‌ಮೆಂಟ್ ಕೊಟ್ಟರು? ಏನಿದರ ಅಸಲಿಯತ್ತು ಹೇಳ್ತೀವಿ ಕೇಳಿ

ಗಂಧದಗುಡಿಯ ಬಹುತೇಕ ಎಲ್ಲಾ ಸೂಪರ್‌ಸ್ಟಾರ್‌ಗಳೊಟ್ಟಿಗೆ ಅಭಿನಯಿಸಿ ಸೈ ಎನಿಸಿಕೊಂಡಿರುವ ನಟಿ ರಚಿತರಾಮ್ ಗಡಿ ದಾಟಿದ್ದಾರೆ. ಇನ್ನೇನು ಕೆಲವೇ ದಿನಗಳಲ್ಲಿ ಪರಭಾಷಾ ಮಂದಿ ರಚ್ಚುನಾ ಸೂಪರ್ ಮಚ್ಚಿ' ಎನ್ನಲಿದ್ದಾರೆ. ಈ ಮಧ್ಯೆ ಸ್ಯಾಂಡಲ್‌ವುಡ್‌ನ ಕೃಷ್ಣ ಅಜಯ್ ರಾವ್ಲವ್ ಯೂ ರಚ್ಚು’ ಎಂದಿದ್ದಾರೆ. ಹೀಗಾಗಿ, ಗಂಧದಗುಡಿಯಲ್ಲಿ ರಚ್ಚು ಹವಾ ಜೋರಾಗಿದೆ. ಒಂದಲ್ಲ.. ಎರಡಲ್ಲ.. ಭರ್ತಿ ಹದಿನೈದು ಸಿನಿಮಾಗಳನ್ನು ಒಪ್ಪಿಕೊಂಡು ಬಹುಬೇಡಿಕೆಯ ನಟಿಯಾಗಿರುವ ರಚಿತರಾಮ್, `ಲವ್ ಯೂ ರಚ್ಚು’ ಚಿತ್ರದಲ್ಲಿ ಬೋಲ್ಡ್ ಅಂಡ್ ಬ್ಯೂಟಿಫುಲ್ಲಾಗಿ ಕಾಣಿಸಿಕೊಂಡಿದ್ದಾರೆ. ಪೋಸ್ಟರ್‌ನಲ್ಲೇ ಅಜಯ್ ಜೊತೆ ಕಿಚ್ಚು ಹಚ್ಚಿದ್ದ ರಚ್ಚು ಈಗ ರೊಮ್ಯಾಂಟಿಕ್ ಸಾಂಗ್ ಮೂಲಕ ಹಾರ್ಟ್ನ ಸೀಸ್ ಮಾಡಿದ್ದಾರೆ. ಮಾತ್ರವಲ್ಲ ಸಾಂಗ್ ರಿಲೀಸ್ ಸಂದರ್ಭದಲ್ಲಿ ಎಲ್ಲರೂ ಫಸ್ಟ್ನೈಟ್‌ನಲ್ಲಿ ಏನ್ಮಾಡ್ತಾರೋ ನಾವು ಅದನ್ನೇ ಮಾಡಿದ್ದೀವಿ ಅಂತೇಳಿ ಪಡ್ಡೆಹೈಕ್ಳ ಹಾರ್ಟ್ಟೆಂಪ್ರೇಚರ್‌ನ ಜಾಸ್ತಿ ಮಾಡೋದಲ್ಲದೇ ಹಾಟ್ ನ್ಯೂಸ್ ಕೂಡ ಆಗಿದ್ದಾರೆ.

ಹೌದು, ಲವ್ ಯೂ ರಚ್ಚು' ಫಿಲ್ಮ್ ಟೀಮ್ ಹೊಸ ಸಾಂಗ್‌ನ ರಿಲೀಸ್ ಮಾಡಿದೆ. ಮಣಿಕಾಂತ್ ಖದ್ರಿಯವರ ಸಂಗೀತ-ನಾಗಾರ್ಜುನ್ ಶರ್ಮಾರ ಸಾಹಿತ್ಯವಿರುವ ಮುದ್ದು ನೀನು… ಎದೆಯ ನಡೆಸೋ ಸದ್ದು ನೀನು’ ಹಾಡಿನಲ್ಲಿ ನಟ ಅಜಯ್‌ರಾವ್ ಹಾಗೂ ರಚಿತರಾಮ್ ಬೊಂಬಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಇನ್ಮೇಲೆ ಹಸಿಬಿಸಿ ದೃಶ್ಯಗಳಲ್ಲಿ ಕಾಣಿಸಿಕೊಳ್ಳಲ್ಲ ತುಂಬಾ ಹಾಟ್ ಆಗಿ ಮಿಂಚಲ್ಲ ಅಂತ `ಐ ಲವ್ ಯೂ ‘ ಸಿನಿಮಾ ಪ್ರಮೋಷನ್ ವೇಳೆ ಹೇಳಿಕೊಂಡು ಕಣ್ಣೀರಾಕಿದ್ದ ರಚ್ಚು ಈಗ ಮತ್ತೊಮ್ಮೆ ಸಿಕ್ಕಾಪಟ್ಟೆ ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದಾರೆ. ಏನ್ ಮೇಡಂ ಇಷ್ಟೊಂದು ಬೋಲ್ಡ್ ಆಗಿ ಮಿಂಚಿದ್ದೀರಾ? ಹಿಂದೆ ನೀವು ಇನ್ಮೇಲೆ ಈ ರೀತಿ ಕಾಣಿಸಿಕೊಳ್ಳಲ್ಲ ಅಂತೇಳಿದ್ರಲ್ಲ ಏನ್ ಸಮಾಚಾರ ಮೇಡಂ ಅಂತ ಮಾಧ್ಯಮಮಿತ್ರರೊಬ್ಬರು ಕೇಳಿದ್ದಕ್ಕೆ ರಚ್ಚು ಹೇಳಿದ್ದಿಷ್ಟು.

`ಸಿಕ್ಕಾಪಟ್ಟೆ ಹಾಟ್ ಆಗಿ ಕಾಣಿಸಿಕೊಳ್ಳಲ್ಲ ಅಂತ ಹೇಳಿದ್ದೆ ನಿಜ. ಆದರೆ, ಈಗ ಕಾಣಿಸಿಕೊಂಡಿದ್ದೇನೆ ಅಂದರೆ ಅದರಲ್ಲಿ ಏನೋ ವಿಶೇಷತೆ ಮತ್ತು ವಿಷಯ ಇರಬೇಕು ಮತ್ತು ಇರುತ್ತೆ ಅಲ್ಲವಾ. ಅಷ್ಟಕ್ಕೂ, ಮದುವೆಯಾದ್ಮೇಲೆ ಎಲ್ಲರೂ ಏನ್ ಮಾಡ್ತಾರೆ ರೊಮ್ಯಾನ್ಸ್ ಮಾಡ್ತಾರೆ ಅಲ್ಲವಾ? ಅದನ್ನೇ ನಾವು ಮಾಡಿದ್ದೇವೆ. ಡೀಟೈಲ್ ಆಗಿ ಹೋಗಿಲ್ಲ ಬೇಸಿಕ್ ಅಷ್ಟೇ ಮಾಡಿದ್ದೇವೆ. ಅಷ್ಟಕ್ಕೂ, ಸೀನ್‌ನಲ್ಲಿ ಹಾಗೂ ಶಾಟ್‌ನಲ್ಲಿ ಅಷ್ಟೇ ಇರೋದು ಹೀಗಾಗಿ ಅದನ್ನೇ ನಾವು ಮಾಡಿದ್ದೇವೆ. ಸೋ, ಮಾಡಲ್ಲ ಅಂದವರು ಯಾಕ್ ಹಾಟ್ ಸೀನ್ ಮಾಡಿದರು ಎನ್ನುವುದು ನೀವು ಸಿನಿಮಾ ನೋಡಿದ್ಮೇಲೆ ಗೊತ್ತಾಗುತ್ತೆ’

ಡಿಂಪಲ್‌ಕ್ವೀನ್ ರಚ್ಚು ಎಷ್ಟು ಹಾಟೋ ಅಷ್ಟೇ ಘಾಟು ಕೂಡ ಹೌದು. ಹಿಂದೆ ಒಂದು, ಮುಂದೆ ಒಂದು ಮಾತನಾಡಲ್ಲ. ಏನೇ ಇದ್ದರೂ ನೇರಾ-ನೇರಾ. ಪಕ್ಕಾ ಸ್ಟೇಟ್ಫಾ ಫಾರ್ವಡ್ ವ್ಯಕ್ತಿತ್ವ, ಏಕ್ ಮಾರ್ ದೋ ತುಕಡ ಎನ್ನುವ ಪಾಲಿಸಿ. ಅದರಂತೇ, ಕ್ಯಾಮೆರಾ ಮುಂದೆ ಬಂದಾಗ ಪಾತ್ರಕ್ಕೆ ನ್ಯಾಯ ಸಲ್ಲಿಸೋದಕ್ಕೆ ಮಡಿವಂತಿಕೆಯನ್ನು ಎಡಗೈನಲ್ಲಿ ಸರಿಸಿ ಅಭಿನಯಿಸ್ತಾರೆ. ಅದೇ ರೀತಿ ಸಿನಿಮಾದ ಬಗ್ಗೆ ಮಾತನಾಡಲಿಕ್ಕೆ ಕ್ಯಾಮೆರಾ ಮುಂದೆ ಬಂದಾಗ ಮುಕ್ತವಾಗಿ ಮಾತನಾಡುತ್ತಾರೆ. ಈಗಲೂ ಅದನ್ನೇ ಮಾಡಿದ್ದಾರೆ ಅಷ್ಟೇ.

ಅಂದ್ಹಾಗೇ, ಬಿಡುಗಡೆಯಾಗಿರುವ ಲವ್ ಯೂ ರಚ್ಚು' ಚಿತ್ರದಮುದ್ದು ನೀನು… ಎದೆಯ ನಡೆಸೋ ಸದ್ದು ನೀನು’ ಹಾಡನ್ನು ನೋಡಿದರೆ ಗೊತ್ತಾಗುತ್ತೆ. ಪ್ರೀತಿ-ಪ್ರೇಮ-ಪ್ರಣಯ ಎಲ್ಲವೂ ಒಂದೇ ಹಾಡಿನಲ್ಲಿ ಬಂದೋಗುವುದರಿಂದ, ಹಸ್ಬೆಂಡ್ ಅಂಡ್ ವೈಫ್ ಆಗಿ ಕಾಣಿಸಿಕೊಳ್ಳೋದಿಂದ ರೊಮ್ಯಾನ್ಸ್ ಸೀಕ್ವೆನ್ಸ್ ಇರಲೇಬೇಕು ಸೋ ಪಾತ್ರಕ್ಕೆ ನ್ಯಾಯ ಸಲ್ಲಿಸೋ ಸಲುವಾಗಿ ಗುಳಿಕೆನ್ನೆ ಚೆಲುವೆ ಹಾಟ್ ಸೀಕ್ವೆನ್ಸ್ ಒಪ್ಪಿಕೊಂಡು ಅಭಿನಯಿಸಿದ್ದಾರೆ. ಇದೊಂದು ರೊಮ್ಯಾಂಟಿಕ್ ಲವ್‌ಸ್ಟೋರಿ ಚಿತ್ರವಾಗಿದ್ದು, ಶಂಕರ್ ಎಸ್. ರಾಜ್. ನಿರ್ದೇಶನದಲ್ಲಿ ಮೂಡಿರ‍್ತಿದೆ. ನಿರ್ದೇಶಕ ಶಶಾಂಕ್ ಕಥೆ-ಸಂಭಾಷಣೆ ಬರೆದಿದ್ದು, ಗುರುದೇಶ್ ಪಾಂಡೆಯವರು ಕ್ರಿಯೇಟೀವ್ ಡೈರೆಕ್ಟರ್ ಆಗಿ ಕೆಲಸ ಮಾಡಿದ್ದಾರೆ ಮತ್ತು ಸಿನಿಮಾ ನಿರ್ಮಾಣದ ಹೊಣೆ ಹೊತ್ತಿದ್ದಾರೆ. ಹಾಡುಗಳಿಂದ ಬಜಾರ್‌ನಲ್ಲಿ ಸೌಂಡ್ ಮಾಡ್ತಿರೋ ಲವ್ ಯೂ ರಚ್ಚು ಸಿನಿಮಾ ಇನ್ನೇನು ಕೆಲವೇ ದಿನಗಳಲ್ಲಿ ಸಿನಿರಸಿಕರ ಮುಂದೆ ಬರಲಿದೆ.

ವಿಶಾಲಾಕ್ಷಿ, ಎಂಟರ್‌ಟೈನ್ಮೆAಟ್ ಬ್ಯೂರೋ ಸಿನಿಲಹರಿ

Categories
ಸಿನಿ ಸುದ್ದಿ

ಸಾರಿ ಅಂತಿದಾರೆ ರಾಗಿಣಿ! ಕಹಿ ಘಟನೆಗೆ ಸಾರಿ ಅಲ್ಲರೀ ; ಇದು ಅವರ ಹೊಸ ಚಿತ್ರದ ಹೆಸರು!!

ರಾಗಿಣಿ ಡ್ರಗ್ಸ್‌ ಪ್ರಕರಣದಲ್ಲಿ ಜೈಲುವಾಸ ಅನುಭವಿಸಿದ್ದು ಎಲ್ಲರಿಗೂ ಗೊತ್ತಿದೆ. ಅಲ್ಲಿಂದ ಹೊರಬಂದ ರಾಗಿಣಿ, ಆ ಸಿನಿಮಾ ಮಾಡ್ತಾರೆ, ಈ ಚಿತ್ರದಲ್ಲಿ ನಟಿಸಲಿದ್ದಾರೆ ಅಂತೆಲ್ಲಾ ಸುದ್ದಿ ಆಯ್ತು. ಆದರೆ, ಅಸಲಿಗೆ ಅವರು ಯಾವ ಸಿನಿಮಾವನ್ನು ಒಪ್ಪಿಕೊಂಡಿರಲಿಲ್ಲ. ಈಗ ಹೊಸ ಸುದ್ದಿ ಅಂದರೆ, ರಾಗಿಣಿ, ಜೈಲಿನಿಂದ ಬಿಡುಗಡೆಯಾದ ಬಳಿಕ ಒಂದು ಸಿನಿಮಾವನ್ನು ಒಪ್ಪಿಕೊಂಡಿದ್ದಾರೆ. ಆ ಸಿನಿಮಾಗೆ ಮುಹೂರ್ತವೂ ನಡೆದಿದೆ. ರಾಗಿಣಿ ಹೌದು, ರಾಗಿಣಿ ಈಗ ಸಾರಿ ಕೇಳುತ್ತಿದ್ದಾರೆ. ಅರೇ, ಕಹಿ ಘಟನೆಗಳಿಗಾಗಿಯೇ ಅವರು ಸಾರಿ ಕೇಳುತ್ತಿದ್ದಾರಾ ಹಾಗಾದರೆ ಅವರು ಕೇಳುತ್ತಿರುವ ಸಾರಿ ಯಾರಿಗೆ? ಈ ಪ್ರಶ್ನೆ ಎದುರಾದರೆ ಅಚ್ಚರಿ ಇಲ್ಲ. ಆದರೆ, ರಾಗಿಣಿ ಸಾರಿ ಕೇಳುತ್ತಿಲ್ಲ ಅನ್ನೋದು ನಿಜ. ಸಾರಿ ಅನ್ನೋದು ಅವರ ಹೊಸ ಚಿತ್ರದ ಹೆಸರು.

ಈಗ ರಾಗಿಣಿ ಒಂದು ಆ್ಯಕ್ಷನ್, ಕ್ರೈಂ, ಥ್ರಿಲ್ಲರ್ ಕಥಾಹಂದರ ಇರುವ ಸಿನಿಮಾ ಒಪ್ಪಿಕೊಂಡಿದ್ದಾರೆ. ಅದೇ ಸಾರಿ (ಕರ್ಮ ರಿಟರ್ನ್ಸ್) ಎಂಬ ನಾಯಕಿ ಪ್ರಧಾನ ಚಿತ್ರದ ಮೂಲಕ ನಟಿ ರಾಗಿಣಿ ದ್ವಿವೇದಿ ಅವರು ಬಹಳ ದಿನಗಳ ನಂತರ ಮತ್ತೆ ಬಣ್ಣ ಹಚ್ಚುತ್ತಿದ್ದಾರೆ. ಅನ್ನೋದು ವಿಶೇಷ. ಈ ಹಿಂದೆ ಮಾಡಿರದ ವಿಶೇಷ ಪಾತ್ರದಲ್ಲಿ ರಾಗಿಣಿ ಕಾಣಿಸಿಕೊಳ್ಳಲಿದ್ದಾರೆ. ಕಿಸ್ ಇಂಟರ್ನ್ಯಾಷನಲ್ ಪ್ರೊಡಕ್ಷನ್ (ಕೆನಡ) ಅಡಿಯಲ್ಲಿ ನವೀನ್ ಕುಮಾರ್ (ಕೆನಡಾ ) ಅವರು ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಬ್ರಹ್ಮ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಚಿತ್ರದ ಮುಹೂರ್ತ ಸಮಾರಂಭ ಮಾಗಡಿ ರಸ್ತೆಯ,ಮಾಚೋಹಳ್ಳಿ ಸಮೀಪದ ಲಕ್ಕೇನಹಳ್ಳಿ ಗ್ರಾಮದೇವತೆ ದೇವಸ್ಥಾನದಲ್ಲಿ ಮಂಗಳವಾರ ನೆರವೇರಿದೆ. ಕಳೆದ ವಾರವೇ ನಡೆಯಬೇಕಿದ್ದ ಈ ಕಾರ್ಯಕ್ರಮವನ್ನು ಪುನೀತ್ ರಾಜ್‍ಕುಮಾರ್ ಅವರ ಅಗಲಿಕೆಯ ದುಃಖದಲ್ಲಿ ಮುಂದೂಡಲಾಗಿತ್ತು.

ಈ ಹಿಂದೆ ಇದೇ ನಿರ್ಮಾಪಕ, ನಿರ್ದೇಶಕರ ನಿರ್ಮಾಣದ ಸಿದ್ದಿಸೀರೆ ಎಂಬ ಚಿತ್ರವು ನ್ಯೂಯಾರ್ಕ್, ಟೋಕಿಯೋ ಚಲನಚಿತ್ರೋತ್ಸವದಲ್ಲಿ ಭಾಗವಹಿಸಿ ಪ್ರಶಸ್ತಿ ಗಳಿಸಿತ್ತು. ಸಕಲೇಶಪುರ, ಬೆಂಗಳೂರು ಹಾಗೂ ಕಗ್ಗಲೀಪುರದ ಸುತ್ತಮುತ್ತ ಸಾರಿ ಚಿತ್ರದ ಶೂಟಿಂಗ್ ನಡೆಯಲಿದ್ದು, ಅಫ್ಜಲ್(ಸೂಪರ್‌ಸ್ಟಾರ್) ಈ ಚಿತ್ರಕ್ಕೆ ಕಾರ್ಯಕಾರಿ ನಿರ್ಮಾಪಕರಾಗಿದ್ದು, ಜಾನ್ ಜಾರ್ಜ್ ಹಾಗೂ ಜೈ ಕೃಪಲಾನಿ ಅವರ ಸಹನಿರ್ಮಾಪಕರಾಗಿದ್ದಾರೆ.

ಅದ್ದೂರಿ ವೆಚ್ಚದ ಈ ಚಿತ್ರಕ್ಕೆ ರಾಜು ಎಮ್ಮಿಗನೂರು ಅವರ ಸಂಗೀತ, ರಾಜೀವ್ ಗಣೇಸನ್ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ. ಅಲ್ಟಿಮೇಟ್ ಶಿವು ಸಾಹಸ ನಿರ್ದೇಶನ, ಭೂಪತಿರಾಜ್ ಸಂಕಲನ, ಇಮ್ರಾನ್, ಮನು ಅವರ ನೃತ್ಯ ನಿರ್ದೇಶನವಿರುವ ಈ ಚಿತ್ರದಲ್ಲಿ ಇತರೆ ಪಾತ್ರಗಳಲ್ಲಿ ರಾಗಿಣಿ ಅವರ ಜೊತೆಗೆ ಅಫ್ಜಲ್ (ಸೂಪರ್‌ಸ್ಟಾರ್ಸ್) ವಿ.ಜೆ.ಮನೋಜ್, ರಣವೀರ್, ಯುಕ್ತ ಪೆರ್ವಿ, ಪೂಜಾ ಪಾಟೀಲ್ ನಟಿಸುತ್ತಿದ್ದಾರೆ.

Categories
ಸಿನಿ ಸುದ್ದಿ

ನೈಜ ಘಟನೆಯ ಲಕ್ಷ್ಯ ಟ್ರೇಲರ್‌ ರಿಲೀಸ್; ನವೆಂಬರ್‌ 18 ರಂದು ಚಿತ್ರ ಬಿಡುಗಡೆ

ಬಹುತೇಕ ಉತ್ತರ ಕರ್ನಾಟಕದವರೇ ಸೇರಿ ನಿರ್ಮಿಸಿರುವ ಲಕ್ಷ್ಯ ಚಿತ್ರ ಮುಂದಿನವಾರ ತೆರೆ ಕಾಣಲಿದೆ. ರವಿ ಸಾಸನೂರ್ ಅವರು ಕಥೆ ಬರೆದು ನಿರ್ದೇಶನ ಮಾಡಿರುವ ಲಕ್ಷ್ಯ ಚಿತ್ರದ ಟ್ರೈಲರನ್ನು ಗೂಗ್ಲಿ ಖ್ಯಾತಿಯ ನಿರ್ದೇಶಕ ಪವನ್ ಒಡೆಯರ್ ಕುಮಾರ್ ಅವರು ಬಿಡುಗಡೆಗೊಳಿಸಿದರು. ನೈಜ ಘಟನೆಗಳನ್ನು ಆಧರಿಸಿ ‌ಒಂದು ಸೋಷಿಯಲ್ ಕಂಟೆಂಟ್ ಇಟ್ಟುಕೊಂಡು ನಿರ್ಮಾಣವಾದ ಈ ಚಿತ್ರ ಇದೇ 18ರಂದು ರಾಜ್ಯಾದ್ಯಂತ ತೆರೆಕಾಣಲಿದೆ. 2018 ಮೀಡಿಯಾದಲ್ಲಿ ಕೆಲಸ ಮಾಡುತ್ತಿದ್ದ ರವಿ 2 ಪುಸ್ತಕಗಳನ್ನು ಸಹ ಬರೆದಿದ್ದಾರೆ. ಅವರು ಹೇಳುವುದಿಷ್ಟು.

18 ವರ್ಷದ ನಂತರ ಪ್ರತಿಯೊಬ್ಬರ ಜೀವನದಲ್ಲೂ ನಡೆಯುವಂಥ ಘಟನೆಗಳೇ ಈ ಚಿತ್ರದಲ್ಲಿದ್ದು ಎಲ್ಲರಿಗೂ ಚಿತ್ರ ಕನೆಕ್ಟ್ ಆಗುತ್ತದೆ. ಚಿತ್ರದಲ್ಲಿ ಗೋಕಾಕ್ ಫಾಲ್ಸ್ ನ್ನು ವಿಭಿನ್ನವಾಗಿ ತೋರಿಸಿದ್ದೇವೆ. ಬೆಳಗಾವಿ, ಸಾಂಗ್ಲಿ, ಗೋಕಾಕ್ ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ, ಕರೆಪ್ಷನ್ ಇಶ್ಯೂ ಇಟ್ಟುಕೊಂಡು ಮಾಡಿದಂಥ ಕಮರ್ಷಿಯಲ್ ಚಿತ್ರವಿದು ಎಂದು ಹೇಳಿದರು.

ಮೂಡಲಮನೆ ಖ್ಯಾತಿಯ ಸಂತೋಷ್ ರಾಜ್ ಜಾವರೆ ಈ ಚಿತ್ರದ ನಾಯಕ ಹಾಗೂ ಕಾರ್ಯಕಾರಿ ನಿರ್ಮಾಪಕರಾಗಿ ಕೆಲಸ ಮಾಡಿದ್ದಾರೆ. 4 ವರ್ಷದ ಹಿಂದೆ ಶುರುವಾಗಿದ್ದ ಚಿತ್ರ. ಮೂಡಲಮನೆ ಸೇರಿದಂತೆ 25 ಮೆಗಾಸೀರಿಯಲ್ ಗಳಲ್ಲೂ ಆ್ಯಕ್ಟ್ ಮಾಡಿದ್ದೇನೆ. ದುಡ್ಡಿನ ಹಿಂದೆ ಬಿದ್ದಿರುವ ವ್ಯಕ್ತಿಯಿಂದ ಇತರರಿಗೆ ಯಾವರೀತಿ ಪರಿಣಾಮ ಬೀರುತ್ತೆ. ಅದು ಆತನಿಗೆ ಹೇಗೆ ಎಫೆಕ್ಟ್ ಆಗುತ್ತೆ ಎಂಬುದನ್ನು ತುಂಬಾ ಪರಿಣಾಮಕಾರಿಯಾಗಿ ಈ ಚಿತ್ರದಲ್ಲಿ ಹೇಳಲಾಗಿದೆ ಎಂದು ಸಂತೋಷರಾಜ್ ಜಾವರೆ ಹೇಳಿಕೊಂಡರು.

ಕಿರುತೆರೆ ಧಾರಾವಾಹಿಗಳಲ್ಲಿ ನಟಿಸಿರುವ ನಿತಿ ನಾದ್ವಿ ಮತ್ತೊಂದು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ನನ್ನದು ಪಿಕೆ ಎನ್ನುವ ಪಾತ್ರ, ಸಮಾಜದಲ್ಲಿ ಜವಾಬ್ದಾರಿ ಇರುವಂಥ ವ್ಯಕ್ತಿಗಳು ಅದನ್ನು ಮರೆತಾಗ ಅವರಿಗೆ ಬುದ್ದಿ ಕಲಿಸುವಂಥ ಪಾತ್ರ ಎಂದು ಪರಿಚಯಿಸಿಕೊಂಡರು. ಹಿರಿಯನಟಿ ಮಾಲತಿಶ್ರೀ ಮೈಸೂರು ಮಾತನಾಡಿ ನಾನೂ ಸಹ ಉತ್ತರ ಕರ್ನಾಟಕದವಳು, ಅದೇ ನೆಲದ ಮಹಿಳೆಯಾಗಿ ಚಿಕ್ಕ ಪಾತ್ರ ಮಾಡಿದ್ದೇನೆ ಎಂದರು.

ಬೆಳಗಾವಿಯ ಪ್ರಕಾಶ ಚಿತ್ರ ಮಂದಿರದಲ್ಲಿ 14ನೇ ನವಂಬರ್ ರಂದು,ಬೆಳಿಗ್ಗೆ 9 ಗಂಟೆಗೆ ಈ ಚಿತ್ರದ ಪ್ರೀಮಿಯರ್ ಷೋ ನಡೆಯಲಿದ್ದು ಬಹಳಷ್ಟು ಸೆಲೆಬ್ರಿಟಿಗಳು ಹಾಜರಾಗಲಿದ್ದಾರೆ. ಜುವಿನ್ ಸಿಂಗ್ ಈ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿದ್ದಾರೆ. ಬನಹಟ್ಟಿಯ ಆನಂದ್ ಶಿವಯೋಗಪ್ಪ ಕೊಳಕಿ, ಸುಧೀರ್ ದೇವೇಂದ್ರ ಹುಲ್ಲೋಳಿ, ಶಿವಕುಮಾರ್ ಎ, ರವಿ ಸಾಸನೂರ್ ಈ ಚಿತ್ರದ ಸಹ ನಿರ್ಮಾಣ ಮಾಡಿದ್ದಾರೆ.

Categories
ಸಿನಿ ಸುದ್ದಿ

ದೊಡ್ಮನೆ ಹುಡುಗನ ನೆನೆದ ಸ್ಯಾಂಡಲ್‌ವುಡ್ ಸಿಂಡ್ರೆಲಾ; ಹೃದಯ ಒಪ್ಪಿಕೊಳ್ತಿಲ್ಲ ಅಪ್ಪು ಸಾರ್- ರಾಧಿಕಾ ಭಾವುಕ !

ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅಗಲಿಕೆ ದೊಡ್ಮನೆಗೆ ಮಾತ್ರವಲ್ಲ ಕರುನಾಡಿಗೆ ಮತ್ತು ಕನ್ನಡ ಇಂಡಸ್ಟ್ರಿಗೆ ತುಂಬಲಾರದ ನಷ್ಟ. ಮನೆ ಮಗನನ್ನು ಕಳೆದುಕೊಂಡು ದೊಡ್ಮನೆ ಅದೆಷ್ಟು ನೋವು-ಸಂಕಟ-ದುಃಖ ಪಡುತ್ತಿದೆಯೋ, ಅಷ್ಟೇ ದುಃಖ-ನೋವು-ಸಂಕಟವನ್ನು ಇಡೀ ಕರುನಾಡು ಅನುಭವಿಸುತ್ತಿದೆ. ಇದಕ್ಕೆ ಗಂಧದಗುಡಿ ಕೂಡ ಹೊರತಾಗಿಲ್ಲ. ಚೆಂದದ ಚಂದನವನದಲ್ಲಿ ಒಂದೇ ಕುಟುಂಬದಂತಿದ್ದ ಕಲಾವಿದರೆಲ್ಲರೂ ಕೂಡ ತಮ್ಮ ಮನೆಯ ಸದಸ್ಯನನ್ನು ಕಳೆದುಕೊಂಡು ಕಣ್ಣೀರಾಗುತ್ತಿದ್ದಾರೆ. ಅಪ್ಪು ಇಲ್ಲ ಎನ್ನುವ ಸತ್ಯವನ್ನು ಅರಗಿಸಿಕೊಳ್ಳಲಾಗದೇ ಒದ್ದಾಡುತ್ತಿದ್ದಾರೆ. ಅಂಜನಿಪುತ್ರನೊಟ್ಟಿಗೆ ಕಳೆದ ಸುಮಧುರ ಕ್ಷಣಗಳನ್ನು ಕಣ್ಮುಂದೆ ತಂದುಕೊಂಡು ದುಃಖಿತರಾಗುತ್ತಿದ್ದಾರೆ. ಸ್ಯಾಂಡಲ್‌ವುಡ್ ಸಿಂಡ್ರೆಲಾ ರಾಧಿಕಾ ಪಂಡಿತ್ ಪವರ್‌ಸ್ಟಾರ್ ನೆನೆದು ಭಾವುಕರಾಗಿದ್ದಾರೆ.

ರಾಧಿಕಾ ಪಂಡಿತ್ ಮನಸ್ಸಿನ ಮಾತು

ನಮ್ಮ ಮಧ್ಯೆ ನೀವಿಲ್ಲ, ಇನ್ಮುಂದೆ ದೈಹಿಕವಾಗಿ ನಮ್ಮೊಡನೆ ಇರುವುದಿಲ್ಲ ಎನ್ನುವುದನ್ನು ಒಪ್ಪಿಕೊಳ್ಳೋದಕ್ಕೆ ನಮ್ಮ ಹೃದಯಾನೇ ತಯ್ಯಾರಿಲ್ಲ ಅಪ್ಪು ಸಾರ್. ಅಂದ್ಹಾಗೇ, ಈ ಕಟು ಸತ್ಯವನ್ನು ನಂಬೋದಕ್ಕೂ- ಅರಗಿಸಿಕೊಳ್ಳೋದಕ್ಕೆ ಧೈರ್ಯ ಸಾಲುತ್ತಿಲ್ಲ. ನೀವಿಲ್ಲದ ಇಂಡಸ್ಟ್ರಿಯನ್ನು ನೆನಪಿಸಿಕೊಳ್ಳೋದಕ್ಕೆ ಅಸಾಧ್ಯ. ಎಲ್ಲವೂ ಮೊದಲಿನಂತೆ ಇರೋದಕ್ಕೆ ಸಾಧ್ಯವೇ ಇಲ್ಲ ಬಿಡಿ. ನಿಮ್ಮೊಟ್ಟಿಗೆ ಅಭಿನಯಿಸೋದಕ್ಕೆ ಅವಕಾಶ ಸಿಕ್ಕಿದ್ದಕ್ಕೆ ಮತ್ತು ಕೊಟ್ಟಿದ್ದಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ. ನಿಮ್ಮನ್ನು ನಾವು ಎಷ್ಟು ಮಿಸ್‌ಮಾಡಿಕೊಳ್ಳುತ್ತಿದ್ದೇವೋ ನೀವು ನಮ್ಮೆಲ್ಲರನ್ನು ಅಷ್ಟೇ ಮಿಸ್ ಮಾಡಿಕೊಳ್ತೀರಿ ಎನ್ನುವ ಭಾವನೆ ನನ್ನದು. ನೆನಪುಗಳ ಮೂಲ ಎಂದಿಗಿಂತಕೂ ನೀವೀಗ ಸನಿಹವಾಗಿದ್ದೀರಿ ಅಪ್ಪು ಸಾರ್.

ತಮ್ಮ ಮನಸ್ಸಿನ ಭಾವನೆಯನ್ನು ಈ ರೀತಿಯಾಗಿ ಬರಹದ ಮೂಲಕ ಹೊರಹಾಕಿರುವ ರಾಧಿಕಾ, ದೊಡ್ಮನೆ ಹುಡುಗ ಪ್ರೆಸ್ಮೀಟ್ ಹಾಗೂ ಸೀಮಂತದ ಪಟಗಳನ್ನು ಹಂಚಿಕೊಂಡಿದ್ದಾರೆ. ಪವರ್‌ಸ್ಟಾರ್‌ಗೆ ರಾಧಿಕಾ ಕೋ ಸ್ಟಾರ್ ಮಾತ್ರವಲ್ಲ ದೊಡ್ಮನೆ ಕುಟುಂಬದ ಜೊತೆಗೆ ರಾಕಿಂಗ್ ದಂಪತಿಗೆ ಅವಿನಾಭಾವ ಸಂಬಂಧವಿದೆ ಹಾಗೂ ಆತ್ಮೀಯವಾದ ನಂಟಿದೆ. ಅಂದ್ಹಾಗೇ, ರಾಧಿಕಾ ಹಾಗೂ ಪವರ್ ಜೋಡಿ `ದೊಡ್ಮನೆ ಹುಡುಗ’ ಸಿನಿಮಾದ ಮೂಲಕ ಮಾಡಿದ ಮೋಡಿ ಎಂತಹದ್ದು ಎನ್ನುವುದು ನಿಮಗೆಲ್ಲ ಗೊತ್ತೆಯಿದೆ. ಇವರಿಬ್ಬರ ಜೋಡಿನಾ ಅಭಿಮಾನಿಗಳಿಗಿಂತ ಮೊದಲೇ ರಾಕಿಂಗ್‌ಸ್ಟಾರ್ ಮೆಚ್ಚಿಕೊಂಡಿದ್ದರು. ಯುವರತ್ನನ ಜೊತೆಗೆ ಹೆಜ್ಜೆಹಾಕಿ ಬೆಳ್ಳಿತೆರೆಗೆ ಕಿಚ್ಚು ಹಚ್ಚಿದ್ದನ್ನು ಕಂಡು ರಾಕಿಂಗ್‌ಸ್ಟಾರ್ ಬೆಕ್ಕಸ ಬೆರಗಾಗಿದ್ದರು.

ಸುದ್ದಿಗೋಷ್ಟಿಯಲ್ಲಿ ಯಶ್ ಒಮ್ಮೆ ಮಾತನಾಡುತ್ತಾ ರಾಧಿಕಾ ಹಿಂದೆಂದಿಗಿಂತಲೂ ಚೆನ್ನಾಗಿ ಕಾಣಿಸಿಕೊಂಡಿದ್ದಾಳೆ ಮಾತ್ರವಲ್ಲ ನಟಸಾರ್ವಭೌಮನ ಎನರ್ಜಿಗೆ ಮ್ಯಾಚ್ ಆಗುವಂತೆ ಡ್ಯಾನ್ಸ್ ಕೂಡ ಮಾಡಿದ್ದಾಳೆ ಎಂದು ಕೊಂಡಾಡಿದ್ದರು. ಪತಿದೇವರ ಕಾಂಪ್ಲಿಮೆಂಟ್ ಕೇಳಿ ರಾಧಿಕಾ ದಿಲ್ ಖುಷ್ ಆಗಿದ್ದರು. ಫ್ಯಾನ್ಸ್ ಬಾಯಲ್ಲಿತ್ರಾಸ್ ಅಕ್ಕತಿ’ ಹಾಡು ನಲಿದಾಡಿದ್ಮೇಲಂತೂ ಇನ್ನೂ ಸಂಭ್ರಮಪಟ್ಟರು. ಇದಾಗಿ ಮೂರು ತಿಂಗಳು ಅಷ್ಟೇ ರಾಕಿಭಾಯ್ ಜೊತೆ ರಾಧಿಕಾ ಹಸೆಮಣೆ ಏರಿದರು. ರಾಮಾಚಾರಿನಾ ಕೈ ಹಿಡಿದ್ಮೇಲೆ `ಆದಿಲಕ್ಷ್ಮಿ ಪುರಾಣ’ ಚಿತ್ರವೊಂದಕ್ಕೆ ಬಣ್ಣ ಹಚ್ಚಿದರು. ಸದ್ಯ, ಬಣ್ಣದ ಲೋಕದಿಂದ ಕೊಂಚ ದೂರ ಉಳಿದಿದ್ದಾರೆ. ಮನೆ-ಮಕ್ಕಳು-ಸಂಸಾರ ಅಂತ ಫ್ಯಾಮಿಲಿ ಟೈಮ್ ಸ್ಪೆಂಡ್ ಮಾಡ್ತಿದ್ದಾರೆ. ನಟಿ ರಮ್ಯಾರಂತೆ ರಾಧಿಕಾಗೂ ಪವರ್‌ಸ್ಟಾರ್ ಜೊತೆ ಮತ್ತೊಂದು ಚಿತ್ರ ಮಾಡುವ ಆಸೆ ಇತ್ತೋ ಇಲ್ಲವೋ ಗೊತ್ತಿಲ್ಲ? ಆದರೆ, ದೊಡ್ಮನೆ ಹುಡುಗ ಚಿತ್ರದಲ್ಲಿ ನಟಿಸಿದ ಅನುಭವ ಹಾಗೂ ಕರುನಾಡಿನ ರಾಜರತ್ನ ಅಪ್ಪು ಜೊತೆಗೆ ಕಳೆದು ನೆನಪುಗಳಿವೆ ಅಲ್ಲವಾ ಅವುಗಳೆಲ್ಲವೂ ಅಷ್ಟು ಸುಲಭವಾಗಿ ಮರೆಯೋದಕ್ಕೆ ಆಗೋದಿಲ್ಲ. ಹೀಗಾಗಿ, ಅಪ್ಪು ಮರೆಯಾದರೂ ಪವರ್ ಬಿಟ್ಟೋದ ನೆನಪುಗಳು ಸದಾ ಜೀವಂತ

ಎಂಟರ್‌ಟೈನ್ಮೆಂಟ್ ಬ್ಯೂರೋ

Categories
ಸಿನಿ ಸುದ್ದಿ

ಕೋರ್ಟ್ ಕಟಕಟೆಯಲ್ಲಿ ನಿಂತ ನಿರ್ದೇಶಕ ಸಿಂಪಲ್ ಸುನಿ..!

ಸಿಂಪಲ್ ಆಗಿ‌ ಒಂದು ಲವ್ ಸ್ಟೋರಿ ಕಥೆ ಹೇಳಿ ಸ್ಯಾಂಡಲ್ ವುಡ್ ಗೆ ಬಹುಪರಾಕ್ ಹಾಕಿ ಸಿಂಪಲ್ ಆಗಿ ಇನ್ನೊಂದು‌ ಲವ್ ಸ್ಟೋರಿ ಅಂತಾ ಚಮಕ್ ಕೊಟ್ಟ ಬಜಾರ್ ನಲ್ಲಿ ಸಖತ್ ಸುದ್ದಿಯಲ್ಲಿರುವ ವಿಭಿನ್ನ ಸಿನಿಮಾಗಳ ನಿರ್ದೇಶಕ ಸಿಂಪಲ್ ಸುನಿ. ಸುನಿ ಸಿನಿಮಾಗಳು ಅಂದ್ರೆ ಚಿತ್ರಪ್ರೇಮಿಗಳು ಸಖತ್ ಕ್ಯೂರಿಯಾಸಿಟಿಯಿಂದ ನೋಡ್ತಾರೆ. ಅದಕ್ಕೆ ಕಾರಣ ಸದಾ ಹೊಸತನ, ಹೊಸಬಗೆ ಹಾಗೂ ವಿಶೇಷತೆಗಳಿಂದ ಕೂಡಿರುತ್ತವೆ. ಸ್ಟಾರ್ ಹೀರೋಗಳಿಗೆ ಆಕ್ಷನ್ ಕಟ್ ಹೇಳಿ ಸಕ್ಸಸ್ ಕಂಡಿರುವ ಸಿಂಪಲ್ ಸುನಿ, ಈಗ ಕೋರ್ಟ್ ಕಟಕಟೆಯಲ್ಲಿ ನಿಂತಿದ್ದಾರೆ!

ಅರೇ…ಸಿಂಪಲ್ ಸುನಿ ಕೋರ್ಟ್ ಕಟಕಟೆಯಲ್ಲಿ ನಿಂತಿರೋದಿಕ್ಕೆ ಕಾರಣವೇನು? ಅನ್ನೋ ಪ್ರಶ್ನೆ ಎಲ್ಲರ ಮನಸ್ಸಿನಲ್ಲಿ ಕಾಡೋದಿಕ್ಕೆ ಶುರುವಾಗುತ್ತೆ. ಅದಕ್ಕೆ ಉತ್ತರ ಸಖತ್ ಪ್ರಮೋಷನ್ಸ್. ಹೌದು.. ಸಿಂಪಲ್ ಸುನಿ.. ಗೋಲ್ಡನ್ ಸ್ಟಾರ್ ಗಣೇಶ್ ಕಾಂಬಿನೇಷನ್. ಈ ಜೋಡಿ ಜೊತೆಯಾಗಿ ಪ್ರೇಕ್ಷಕರಿಗೆ ಸಖತ್ ಕಾಮಿಡಿ ಹೂರಣ ಬಡಿಸಲು ಸಜ್ಜಾಗಿದ್ದಾರೆ. ಸಖತ್ ಸಿನಿಮಾ ಮೂಲಕ ಸಿನಿಪ್ರೇಕ್ಷಕ ಕುಲವನ್ನು‌ ನಗುವಿನ ಅಲೆಯಲ್ಲಿ ತೇಲಿಸಲಿದ್ದಾರೆ.

ಈಗಾಗ್ಲೇ ರಿಲೀಸ್ ಆಗಿರುವ‌ ಸಖತ್ ಸಿನಿಮಾದ ಮೋಷನ್ ಪೋಸ್ಟರ್, ಟೀಸರ್ ಹಾಗೂ ಸಾಂಗ್ ಕುತೂಹಲದ ಚಿಟ್ಟಿಯಾಗಿವೆ. ಈ ನಡುವೆ ಸಖತ್ ಸಿನಿಮಾ ಬಳಗ ಪ್ರಮೋಷನ್ ಗೆ ಸಖತ್ ಆಗಿರುವ
ಐಡಿಯಾವೊಂದನ್ನು ಮಾಡಿದೆ. ಪ್ರತಿ ಮಾಲ್ ಗಳಲ್ಲಿ ಕೋರ್ಟ್ ಕಟಕಟೆ ನಿರ್ಮಿಸಿದ್ದಾರೆ. ಅಷ್ಟಕ್ಕೂ ಸಖತ್ ಸಿನಿಮಾಕ್ಕೂ ಕೋರ್ಟ್ ಕಟಕಟೆಗೂ ಏನು ಸಂಬಂಧ ಅಂದ್ರೆ ಸಖತ್ ಸಿನಿಮಾದ ಟೀಸರ್ ನಲ್ಲಿ ಕೋರ್ಟ್ ಸೀನ್ ಇದೆ. ಗಣೇಶ್ ಕೋರ್ಟ್ ಕಟಕಟೆಯಲ್ಲಿ ನಿಂತು ನಟಿಸಿರುವ ಒಂದು ದೃಶ್ಯವಿದೆ. ಅಲ್ಲದೇ ಸಖತ್ ಸಿನಿಮಾ ಕೋರ್ಟ್ ಸುತ್ತ ನಡೆಯುವ ಕಥೆ. ಹೀಗಾಗಿ ಚಿತ್ರತಂಡ ಪ್ರಮೋಷನ್ ಗೆ ಈ ವಿಧಾನ‌ ಬಳಸಿದೆ. ಮಾಲ್ ಅಂಗಳದಲ್ಲಿ‌‌ ಕೋರ್ಟ್ ಕಟಕಟೆಯಲ್ಲಿ ನಿರ್ಮಿಸಿದೆ ಸಖತ್ ಸಿನಿಮಾ ತಂಡ. ಈ ಕಟಕಟೆಯಲ್ಲಿ ನಿಂತು ಮಕ್ಕಳು, ಪ್ರತಿಯೊಬ್ಬರು ಫೋಟೋಗೆ ಫೋಸ್ ಕೊಡ್ತಿದ್ದಾರೆ. ಬರೋ 14 ರಂದು ಸಖತ್ ಸಿನಿಮಾದ ಟ್ರೇಲರ್ ರಿಲೀಸ್ ಆಗ್ತಿದೆ.

ಕಾಮಿಡಿ ಜೊತೆ ರಿಯಾಲಿಟಿ ಸುತ್ತ ಹೆಣೆಯಲಾಗಿರುವ ಸಖತ್ ಸಿನಿಮಾದಲ್ಲಿ ಗಣೇಶ್ ಗೆ ಜೋಡಿಯಾಗಿ ನಿಶ್ವಿಕಾ ನಾಯ್ಡು ಹಾಗೂ ಸುರಭಿ ನಟಿಸಿದ್ದಾರೆ. ಉಳಿದಂತೆ ರಂಗಾಯಣ ರಘು, ಸಾಧುಕೋಕಿಲ, ಧರ್ಮಣ್ಣ ಕಡೂರು ಸೇರಿದಂತೆ ಮುಂತಾದವರು ನಟಿಸಿದ್ದಾರೆ.

ಕೆವಿಎನ್ ಪ್ರೊಡಕ್ಷನ್ ನಡಿ ಅದ್ಧೂರಿಯಾಗಿ ತಯಾರಾಗಿರುವ ಸಖತ್ ಸಿನಿಮಾಗೆ ನಿಶಾ ವೆಂಕಟ್ ಕೋನಾಂಕಿ ಹಾಗೂ ಸುಪ್ರಿತ್ ಬಂಡವಾಳ ಹೂಡಿದ್ದಾರೆ. ಸದ್ಯ ಸ್ಯಾಂಪಲ್ಸ್ ನಲ್ಲಿ ಕ್ಯೂರಿಯಾಸಿಟಿ ಹುಟ್ಟಿಸಿರುವ ಸಖತ್ ಸಿನಿಮಾ ನವೆಂಬರ್ 26 ರಂದು ಬಿಗ್ ಸ್ಕ್ರೀನ್ ಗೆ ಎಂಟ್ರಿ ಕೊಡಲಿದೆ.

Categories
ಸಿನಿ ಸುದ್ದಿ

ಹಾಡುಗಳ ಒಪ್ಪಂದ; ಅರ್ಜುನ್ ಸರ್ಜಾ – ರಾಧಿಕಾ ಅಭಿನಯದ ಚಿತ್ರ ಇದೇ ತಿಂಗಳಲ್ಲಿ ರಿಲೀಸ್

ಬಹುಭಾಷಾ ನಟ ಅರ್ಜುನ್ ಸರ್ಜಾ – ರಾಧಿಕಾ ಕುಮಾರಸ್ವಾಮಿ ಹಾಗೂ ಖ್ಯಾತ ನಟ ಜೆ ಡಿ ಚಕ್ರವರ್ತಿ ಪ್ರಮುಖಪಾತ್ರದಲ್ಲಿ ನಟಿಸಿರುವ “ಒಪ್ಪಂದ” ಚಿತ್ರದ ಹಾಡುಗಳು ಇತ್ತೀಚೆಗೆ ಬಿಡುಗಡೆಯಾಗಿವೆ. ಇದೇ ವೇಳೆ ಚಿತ್ರದ ಟ್ರೇಲರ್ ಕೂಡ ಹೊರಬಂದಿದೆ.

ನಿರ್ಮಾಪಕರಾದ ರೆಹಮಾನ್(ಯಜಮಾನ), ಕೆ.ಮಂಜು, ಸೆವೆನ್ ರಾಜ್, ಫ್ಯಾಷನ್ ಡಿಸೈನರ್ ರಾಜೇಶ್ ಶೆಟ್ಟಿ, ಭವ್ಯಗೌಡ, ಮೋಹಿನಿ ಚೌಧರಿ ಮುಂತಾದವರು ಸಾಂಗ್ಸ್ ರಿಲೀಸ್ ಮಾಡಿ ಶುಭ ಕೋರಿದರು.

ಈ ಚಿತ್ರ ಉತ್ತಮವಾಗಿ ಮೂಡಿಬರಲು ಅರ್ಜುನ್ ಸರ್ಜಾ, ಜೆ ಡಿ ಚಕ್ರವರ್ತಿ ಹಾಗೂ ರಾಧಿಕಾ ಕುಮಾರಸ್ವಾಮಿ ಅವರ ಸಹಕಾರ ಬಹಳ ಮುಖ್ಯ. ಅವರೆಲ್ಲರೂ ಚಿತ್ರದಲ್ಲಿ ಅಮೋಘವಾಗಿ ನಟಿಸಿದ್ದಾರೆ. ನಾಲ್ಕು ಭಾಷೆಗಳಲ್ಲಿ ಈ ಸಿನಿಮಾ ನಿರ್ಮಾಣವಾಗಿದೆ. ಇದೇ ತಿಂಗಳಲ್ಲಿ ಚಿತ್ರ ತೆರೆಗೆ ಬರಲಿದೆ. ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು ಚಿತ್ರದ ನಿರ್ಮಾಪಕ ಹಾಗೂ ನಿರ್ದೇಶಕ ಸಮೀರ್‌‌.

ಚಿತ್ರದಲ್ಲಿ ಆರು ಹಾಡುಗಳಿವೆ. ಉತ್ತಮವಾಗಿ ಮೂಡಿ ಬರಲು ಸಹಕಾರಿಯಾದ ಗೀತರಚನೆಕಾರರಿಗೆ, ಗಾಯಕ, ಗಾಯಕಿಯರಿಗೆ ಹಾಗೂ ಚಿತ್ರದ ನಿರ್ದೇಶಕರಿಗೆ ಧನ್ಯವಾದ ತಿಳಿಸಿದರು ಸಂಗೀತ ನಿರ್ದೇಶಕ ಸುಭಾಷ್ ಆನಂದ್.

ನನ್ನ ಪಾತ್ರ ತುಂಬಾ ಚೆನ್ನಾಗಿದೆ. ಅರ್ಜುನ್ ಸರ್ಜಾ, ಜೆ ಡಿ ಚಕ್ರವರ್ತಿ ಹಾಗೂ ರಾಧಿಕಾ ಕುಮಾರಸ್ವಾಮಿ ಅವರಂತಹ ನಟರೊಂದಿಗೆ ನಟಿಸಲು ಅವಕಾಶ ನೀಡಿದ ನಿರ್ದೇಶಕರಿಗೆ ನನ್ನ ಧನ್ಯವಾದ ಎಂದರು ನಟಿ ಸೋನಿ ಚರಿಶ್ಟಾ.

ಚಿತ್ರದ ಸಹ ನಿರ್ಮಾಪಕ ಶಶಿಧರ್ ಹಾಗೂ ಕಲಾವಿದ ದುಬೈ ರಫಿಕ್ ತಮ್ಮ ಅನುಭವ ಹಂಚಿಕೊಂಡರು. ಅರ್ಜುನ್ ಸರ್ಜಾ ಅವರು ವಿಡಿಯೋ ಮೂಲಕ ಚಿತ್ರತಂಡಕ್ಕೆ ಶುಭಕೋರಿದರು.

ಸಮೀರ್ ಅವರೆ ನಿರ್ಮಿಸಿ, ನಿರ್ದೇಶಿಸಿರುವ ಈ ಚಿತ್ರಕ್ಕೆ ಅಮೀರ್ ಲಾಲ್ ಛಾಯಾಗ್ರಹಣ, ಸುಭಾಷ್ ಆನಂದ್ ಸಂಗೀತ ನಿರ್ದೇಶನ, ರಾಘು ಕುಲಕರ್ಣಿ ಕಲಾ ನಿರ್ದೇಶನ, ಅಮ್ಮ ರಾಜಶೇಖರ್ ನೃತ್ಯ ನಿರ್ದೇಶನ, ಖಾಲಿ ಕಿಕಾಸ್ ಸಾಹಸ ನಿರ್ದೇಶನ ಹಾಗೂ ಪ್ರಭು ಅವರ ಸಂಕಲನವಿದೆ.

ಅರ್ಜುನ್ ಸರ್ಜಾ, ರಾಧಿಕಾ ಕುಮಾರಸ್ವಾಮಿ, ಜೆ.ಡಿ.ಚಕ್ರವರ್ತಿ, ಅಮೀರ್ ಖಾನ್ ಸಹೋದರ ಫೈಸಲ್ ಖಾನ್ , ಸೋ‌ನಿ ಚರಿಶ್ಟಾ, ವಿಶ್ವನಾಥ್ ಮುಂತಾದವರು ಈ ಚಿತ್ರದಲ್ಲಿದ್ದಾರೆ.

Categories
ಸಿನಿ ಸುದ್ದಿ

ಭಾವಚಿತ್ರ ಮೂಲಕ ಭಾವನೆಗಳ ಅನಾವರಣ; ಯಾನ ಹುಡುಗ ಚಕ್ರವರ್ತಿ ಹೀರೋ ಮಗಳು ಜಾನಕಿ ಖ್ಯಾತಿಯ ಗಾನವಿ ಲಕ್ಷ್ಮಣ್ ನಾಯಕಿ

ಗಿರೀಶ್ ಕುಮಾರ್ ಬಿ ಕಥೆ ಬರೆದು ನಿರ್ದೇಶಿಸಿರುವ ಚಿತ್ರ “ಭಾವಚಿತ್ರ”. ಸದ್ಯ ಈ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ಬೆಂಗಳೂರು, ಹಾವೇರಿ, ಚಿಕ್ಕಮಗಳೂರು, ಶಿವಮೊಗ್ಗ, ತುಮಕೂರು ಮುಂತಾದ ಕಡೆ 55ದಿನಗಳ ಚಿತ್ರೀಕರಣವಾಗಿದೆ.

ಈ ಹಿಂದೆ ” ಆವಾಹಯಾಮಿ” ಚಿತ್ರ ನಿರ್ದೇಶಿಸಿದ್ದ, ಗಿರೀಶ್ ಕುಮಾರ್ ನಿರ್ದೇಶಿಸುತ್ತಿರುವ ಎರಡನೇ ಚಿತ್ರವಿದು‌. ನಿರ್ದೇಶಕರೆ ಕಥೆ ಬರೆದಿದ್ದಾರೆ. ಗಿರೀಶ್ ಕುಮಾರ್ – ಗಿರೀಶ್ ಬಿಜ್ಜಳ ಸೇರಿ ಚಿತ್ರಕಥೆ ರಚಿಸಿದ್ದಾರೆ.

ಮೊಬೈಲ್ ಬಂದಾಗಿನಿಂದ ಎಲ್ಲರಿಗೂ “ಭಾವಚಿತ್ರ” ದ ಮೇಲೆ ಹೆಚ್ಚಿನ ಒಲವು. ಕ್ಯಾಮೆರಾ ಹಾಗೂ ಭಾವಚಿತ್ರದ ಮೇಲೆ ನಮ್ಮ ಚಿತ್ರದ ಕಥೆ ಸಾಗುತ್ತದೆ. ಇದನ್ನು ಟೆಕ್ನೋ ಥ್ರಿಲ್ಲರ್ ಅಂತಲೂ ಕರೆಯಬಹುದು. ಇದಷ್ಟೇ ಅಲ್ಲ. ಪ್ರೀತಿ ಹಾಗೂ ಸೆಂಟಿಮೆಂಟ್ ಸನ್ನಿವೇಶಗಳು ನಮ್ಮ ಚಿತ್ರದಲ್ಲಿದೆ ಎನ್ನುತ್ತಾರೆ ನಿರ್ದೇಶಕ ಗಿರೀಶ್ ಕುಮಾರ್.

Wood creepers ಸಂಸ್ಥೆ ನಿರ್ಮಾಣದ ಈ ಚಿತ್ರದಲ್ಲಿ ನಾಲ್ಕು ಹಾಡುಗಳಿವೆ. ಶಿವು ಬೇರಗಿ ಹಾಗೂ ವಿಶ್ವಜಿತ್ ರಾವ್ ಬರೆದಿರುವ ಹಾಡುಗಳಿಗೆ ಗೌತಮ್ ಶ್ರೀವತ್ಸ ಸಂಗೀತ ನೀಡಿದ್ದಾರೆ. ಅಜೇಯ್ ಕುಮಾರ್ ಛಾಯಾಗ್ರಹಣ ಹಾಗೂ ರತೀಶ್ ಕುಮಾರ್ ಸಂಕಲನ ಈ ಚಿತ್ರಕ್ಕಿದೆ.

ಚಕ್ರವರ್ತಿ, ಗಾನವಿ ಲಕ್ಷ್ಮಣ್, ಅವಿನಾಶ್, ಕಾರ್ತಿಕ್ ಸುಂದರಂ, ಗಿರೀಶ್ ಬಿಜ್ಜಳ ಮುಂತಾದವರು ಈ ಚಿತ್ರದಲ್ಲಿದ್ದಾರೆ.

error: Content is protected !!