ಪುನೀತ್ ರಾಜಕುಮಾರ್ ಅಂದಾಕ್ಷಣ ಎಲ್ಲರ ಕಣ್ಣ ಮುಂದೆ ಹಾದು ಹೋಗೋದು ಸದಾ ಹಸನ್ಮುಖಿ, ಪಾಸಿಟಿವ್ ವ್ತಕ್ತಿತ್ವ , ಯಾವಾಗಲೂ ನೀಟ್ ಶೇವ್ ಮಾಡಿದ ನಗು ಮುಖ. ಅಷ್ಟೇ ಅಲ್ಲ ಪ್ರೀತಿಯ ಮಾತುಕತೆ ಜೊತೆಗೆ ಅಪ್ಪುಗೆ. ಸದ್ಯ ಪುನೀತ್ ಗೆಟಪ್ ಬದಲಾಗಿದೆ. ಅವರೀಗ ಗಡ್ಡ ಬಿಟ್ಟಿದ್ದಾರೆ. ಈಗಾಗಲೇ ಕೆಲವು ಸಿನಿಮಾ ಪಾತ್ರಕ್ಕಾಗಿ ಅವರು ದಾಡಿ ಬಿಟ್ಟಿದ್ದುಂಟು. ಆದರೆ, ಈಗ ಯಾವ ಚಿತ್ರದ ಚಿತ್ರೀಕರಣ ಯಾವುದೂ ಇಲ್ಲ. ಆದರೂ ಅಪ್ಪು ಹೀಗೆ ದಾಡಿ ಬಿಡೋಕೆ ಕಾರಣ ಬೇರೆ ಇದೆ. ಯುವರತ್ನ ಈಗ ಬಿಡುಗಡೆಗೆ ಸಜ್ಜಾಗುತ್ತಿದೆ. ಈ ನಡುವೆ ಅವರು ಹೊಸ ಚಿತ್ರಗಳತ್ತವೂ ಗಮನ ಹರಿಸಿದ್ದಾರೆ. ಶಶಾಂಕ್ ಹಾಗೂ ಪವನ್ ಒಡೆಯರ್ ಜೊತೆಯಲ್ಲಿ ಸಿನಿಮಾ ಮಾಡಲಿದ್ದಾರೆ. ಅದಲ್ಲದೆ ಇನ್ನೂ ಕೈ ತುಂಬಾ ಚಿತ್ರಗಳಿವೆ. ಆ ಚಿತ್ರಗಳ ಪಾತ್ರಕ್ಕಾಗಿ ಅಪ್ಪು ಗಡ್ಡ ಬಿಟ್ಟಿರಬಹುದು. ಅದೇನೆ ಇರಲಿ, ಅಪ್ಪು ಫುಲ್ ಶೇವ್ ಮಾಡ್ಕೊಂಡು ಸದಾ ನಗುಮೊಗದಲ್ಲಿ ನೋಡೋದೆ ಚಂದ. ಅಪ್ಪು ಫ್ಯಾನ್ಸ್ ಮಾತ್ರ ಪವರ್ ಹೇಗಿದ್ರೂ ಸರಿ ಅವರ ಸಿನಿಮಾ ಮೂಲಕ ರಂಜಿಸುತ್ತಿರಬೇಕಷ್ಟೇ ಅಂತ ಯುವರತ್ನನ ಆಗಮನದ ನಿರೀಕ್ಷೆಯಲ್ಲಿದ್ದಾರೆ. ಗಡ್ಡ ಬಿಟ್ಟಿರೋದಕ್ಕೆ ಕಾರಣ ಇಷ್ಟರಲ್ಲೇ ಗೊತ್ತಾಗಲಿದೆ. ಆ ಮೂಲಕ ಅವರು ಬಿಗ್ ಬ್ರೇಕಿಂಗ್ ನ್ಯೂಸ್ ಕೊಡಲಿದ್ದಾರೆ. ಅಲ್ಲಿಯವರೆಗೆ ಕಾಯಬೇಕು
Author: ವಿಜಯ್ ಭರಮಸಾಗರ
ಮಳೆಯ ಹಾಡಲ್ಲಿ ಮಿಂದೆದ್ದ ಸಲಗ

ದುನಿಯಾ ವಿಜಯ್ ಇದೇ ಮೊದಲ ಸಲ ನಿರ್ದೇಶನ ಮಾಡಿರುವ ಸಲಗ ಚಿತ್ರ ಇನ್ನೇನು ಬಿಡುಗಡೆಗೆ ರೆಡಿಯಾಗಿದೆ. ಈಗಾಗಲೇ ನಾಲ್ಕು ಕ್ವಾರ್ಟರ್ ಕುಡಿದ್ರು ಸ್ಟಡಿಯಾಗಿ ನಿಲ್ತಿದ್ದೆ ಸೂರಿಯಣ್ಣ ಹಾಡು ಸಿಕ್ಕಾಪಟ್ಟೆ ವೈರಲ್ ಆಗಿದೆ. ಈಗ ಮತ್ತೊದು ಮಳೆಯ ಹಾಡು ಹೊರ ಬಂದಿದೆ. ಮಳೆಯೇ ಮಳೆಯೇ ಲೊರಿಕಲ್ ಸಾಂಗ್ ರಿಲೀಸ್ ಆಗಿದ್ದು, ಒಳ್ಳೆಯ ಮೆಚ್ಚುಗೆ ಪಡೆಯುತ್ತಿದೆ.

#mugilpete
ಕ್ರೇಜಿ ಪುತ್ರನ ಚಿತ್ರದ ಕಲರ್ ಫುಲ್ ಪೋಸ್ಟರ್ ರಿಲೀಸ್
ಮನುರಂಜನ್ ಅಭಿನಯದ ಮುಗಿಲ್ ಪೇಟೆ ಚಿತ್ರತಂಡ
“ಗೌರಿ -ಗಣೇಶ” ಹಬ್ಬದಲ್ಲಿನಮ್ಮ ಹೊಸ ಪೋಸ್ಟರ್ ಬಿಡುಗಡೆ ಮಾಡಿದೆ.
ಭರತ್ ನಾವುಂದ ನಿರ್ದೇಶನದ ಈ ಚಿತ್ರ ಈಗ ಬಿಡುಗಡೆಗೆ ಸಜ್ಜಾಗುತ್ತಿದೆ.
ರಕ್ಷಾ ವಿಜಯಕುಮಾರ್ ನಿರ್ಮಾಣದ ಈ ಚಿತ್ರದಲ್ಲಿ ರಂಗಾಯಣ ರಘು, ತಾರಾ, ಸಾಧುಕೋಕಿಲ ಇತರರು ಇದ್ದಾರೆ.
ಮಳೆ ಮಳೆ ಹಾಡಿಗೆ ಮೈ ಮನವೆಲ್ಲಾ ತಂಪು

ಯುವ ನಟ ಸೂರಜ್ ಗೌಡ ಅಭಿನಯದ ನಿನ್ನ ಸನಿಹಕೆ ಸಿನಿಮಾ ಈಗ ಮತ್ತೆ ಜೋರಾಗಿ ಸದ್ದು ಮಾಡುತ್ತಿದೆ. ಇದೇ ಮೊದಲ ಸಲ ನಿರ್ದೇಶನ ಮಾಡಿರುವ ಸೂರಜ್ ಅವರ ಚಿತ್ರದ ಲಿರಿಕಲ್ ಹಾಡು ಬಿಡುಗಡೆಯಾಗಿದೆ. ಮಳೆ ಮಳೆ ಎಂಬ ಬ್ಯೂಟಿಫುಲ್ ಹಾಡಿಗೆ ರಘುದೀಕ್ಷಿತ್ ಸಂಗೀತವಿದೆ. ಜೊತೆಗೆ ಆ ಹಾಡಿಗೆ ಧ್ವನಿಯನ್ನೂ ನೀಡಿದ್ದಾರೆ. ಇನ್ನು ವಾಸುಕಿ ವೈಭವ್ ಅವರ ಸಾಹಿತ್ಯವಿದೆ.
ಈ ಚಿತ್ರದಲ್ಲಿ ಡಾ.ರಾಜ್ ಮೊಮ್ಮಗಳು ಧನ್ಯಾ ರಾಮ್ ಕುಮಾರ್ ನಾಯಕಿ.
ನಟ ರವಿಶಂಕರ್ ಗೌಡ ಪುತ್ರ ಈಗ ನಿರ್ದೇಶಕ

ನಟ ರವಿಶಂಕರ್ ಗೌಡ ಪುತ್ರ ಸೂರ್ಯ ತೇಜಸ್ವಿ ಈಗ ಸಿನಿಮಾರಂಗಕ್ಕೆ ಎಂಟ್ರಿಯಾಗಿದ್ದಾನೆ. ಹೌದು ಇದೇ ಮೊದಲಸಲ ಸೂರ್ಯ ತೇಜಸ್ವಿ ವೈ… ಫೈ? ಎಂಬ ಪುಟಾಣಿ ಹಾಸ್ಯ ಕಿರುಚಿತ್ರ ನಿರ್ದೇಶನ ಮಾಡುವುದರ ಜೊತೆಗೆ ನಟನೆಯನ್ನೂ ಮಾಡಿದ್ದಾನೆ. ಸದ್ಯಕ್ಕೆ ಯೂಟ್ಯೂಬ್ ಚಾನೆಲ್ ನಲ್ಲಿ ಕಿರುಚಿತ್ರಕ್ಕೆ ಒಳ್ಳೆಯ ಮೆಚ್ಚುಗೆ ಸಿಗುತ್ತಿದೆ.ಈ ಕಿರುಚಿತ್ರದಲ್ಲಿ ಸೂರ್ಯ ಜೊತೆ ನಿಖಿಲ್ ನರೇಶ್ ನಟಿಸಿದ್ದಾರೆ. ಅಜಯ್ ಜಮದಗ್ನಿ ಸಂಕಲನವಿದೆ.
ವಾಸಂತಿ ನಲಿದಾಗ ಚಿತ್ರಕ್ಕೆ ಚಾಲನೆ

#ವಾಸಂತಿ_ನಲಿದಾಗ ಇದು ಹೊಸಬರ ಚಿತ್ರ. ಸೋಮವಾರ ಅದ್ದೂರಿಯಾಗಿ ಮುಹೂರ್ತ ನೆರವೇರಿದೆ.
ರವೀಂದ್ರ ವಂಶಿ ನಿರ್ದೇಶಕರು. ಜೇನುಗೂಡು ಕೆ.ಎನ್ ಶ್ರೀಧರ್ ಚಿತ್ರದ ನಿರ್ಮಾಪಕರು. ಶ್ರೀದೇವಿ ಮಂಜುನಾಥ ಸಂಭಾಷಣೆ ಇದೆ. ಶ್ರೀ ಗುರು ಸಂಗೀತವಿದೆ. ಯೋಗರಾಜ್ ಭಟ್, ನಾಗೇಂದ್ರ ಪ್ರಸಾದ್, ಗೌಸ್ ಪೀರ್ ಸಾಹಿತ್ಯವಿದೆ.
ಡಾಲಿ ಧನಂಜಯ ಹುಟ್ಟುಹಬ್ಬದ ಸಂಭ್ರಮ


ಲೂಸ್ ಮಾದ ಯೋಗಿ ಅಭಿನಯದ ಕಿರಕ್ ಶಂಕರ್ ಸಿನಿಮಾ ಬಗ್ಗೆ ಈಗಾಗಲೇ ಎಲ್ಲರಿಗೂ ಗೊತ್ತೇ ಇದೆ.
ಸದ್ದಿಲ್ಲದೆಯೇ ಚಿತ್ರೀಕರಣ ಮುಗಿಸಿರುವ ಚಿತ್ರತಂಡ ಗಣೇಶ ಹಬ್ಬದಂದು ಲಿರಿಕಲ್ ವಿಡಿಯೊ ಬಿಡುಗಡೆ ಮಾಡಿದೆ.
ಎಂ.ಎನ್. ಕುಮಾರ್ ನಿರ್ಮಾಣದ ಈ ಚಿತ್ರವನ್ನು ಅನಂತ್ ರಾಜು ನಿರ್ದೇಶನ ಮಾಡಿದ್ದಾರೆ. ವೀರ್ ಸಮರ್ಥ್ ಸಂಗೀತ ಇರುವ ‘ದರ್ಬಾರ್ ದರ್ಬಾರ್ ನಮ್ದೇ ದರ್ಬಾರ್ ದರ್ಬಾರ್…’ ಎಂಬ ಹಾಡನ್ನು ರಾಮ್ ನಾರಾಯಣ್ ಬರೆದಿದ್ದಾರೆ. ಪಕ್ಕಾ ಮಾಸ್ ಫೀಲ್ ಇರುವ ಈ ಹಾಡು ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಸಿಕ್ಕಾಪಟ್ಟೆ ಮೆಚ್ಚುಗೆ ಪಡೆದುಕೊಂಡಿದೆ.

ಯುವ ನಿರ್ದೇಶಕ ಮಮ್ಮಿ ಹಾಗೂ ದೇವಕಿ ಖ್ಯಾತಿಯ ಲೋಹಿತ್ ತಮ್ಮ ಫ್ರೈಡೇ ಫಿಲ್ಮ್ಸ್ ಮೂಲಕ ತಯಾರಿಸುತ್ತಿರುವ ಹೊಸ ಚಿತ್ರಕ್ಕೆ ಚಾಲನೆ ಸಿಗುತ್ತಿದ್ದು,
ಗಣೇಶ ಚತುರ್ಥಿಯ ಈ ಶುಭ ದಿನದಂದು ಮೊದಲ ನಿರ್ಮಾಣದಚಿತ್ರ ಘೋಷಿಸಲು ತಂಡ ಉತ್ಸುಕತೆ ತೋರಿದೆ. ಅಗಸ್ಟ್ 24 ರಂದು ಚಿತ್ರದ ಶೀರ್ಷಿಕೆಯನ್ನು ಅನಾವರಣಗೊಳ್ಳಲಿದೆ. ಅಂದು ಬೆಳಿಗ್ಗೆ 10 ಗಂಟೆಗೆ ಡಾಲಿ ಲ ಧನಂಜಯ ಅವರು ಚಿತ್ರದ ಟೈಟಲ್ ಲಾಂಚ್ ಮಾಡಲಿದ್ದಾರೆ.
ಅಂದಹಾಗೆ, ಲೋಹಿತ್ ಅವರ ಮೊದಲ ನಿರ್ಮಾಣದ ಚಿತ್ರದಲ್ಲಿ ದಿಯಾ ಖ್ಯಾತಿಯ ಪೃಥ್ವಿ ಅಂಬರ್ ಕಾಣಿಸಿಕೊಳ್ಳುತ್ತಿದ್ದಾರೆ.
ರಾಗಿಣಿ ಮನೆಯಲ್ಲಿ ಗಣಪತಿ ಹಬ್ಬ ಜೋರು

ಕೊರೋನಾ ನಡುವೆಯೂ ನೆಗಳಲ್ಲಿ ಗಣೇಶೋತ್ಸವ ಜೋರಾಗಿದೆ. ಕೊರೋನಾ ಕಾರಣ ಹಬ್ಬದ ಅಬ್ಬರ ಕಾಣಿಸದಿದ್ದರೂ, ಗಣೇಶ ವಿಗ್ರಹ ತಂದು ಸಡಗರ, ಸಂಭ್ರಮದಿಂದಲೇ ಆಚರಣೆ ಮಾಡುತ್ತಿದ್ದಾರೆ. ಪ್ರತಿ ವರ್ಷ ದಂತೆ ಈ ವರ್ಷ ವೂ ನಟಿ ರಾಗಿಣಿ ಅವರ ಮನೆಯಲ್ಲಿ ಹಬ್ಬದ ಸಡಗರ ಕಳೆಗಟ್ಟಿದೆ. ಸುರಕ್ಷತೆ ದೃಷ್ಟಿಯಿಂದ ನೆರೆ ಹೊರೆಯವರಿಗೆ ಅವಕಾಶ ಇಲ್ಲದಿದ್ದರೂ, ತಮ್ಮ ಮನೆಯ ಕುಟುಂಬದ ಸದಸ್ಯರ ನಡುವೆ ಹಬ್ಬವನ್ನು ಪೂಜೆಗಳ ಮೂಲಕ ಸಂಭ್ರಮದಿಂದ ಆಚರಿಸುತ್ತಿದ್ದಾರೆ.