ಪುನೀತ್ ಅವರ ನುಡಿ ನಮನ ಕಾರ್ಯಕ್ರಮದಲ್ಲಿ ಪುನೀತ್ ರಾಜ್ ಕುಮಾರ್ ಅವರ ಬೆಳ್ಳಿ ನಾಣ್ಯ ಬಿಡುಗಡೆ ಮಾಡಲಾಯಿತು. ಸಾಯಿ ಗೋಲ್ಡ್ ಪ್ಯಾಲೇಸ್ ನ ಶರವಣ ಅವರು ಅಪ್ಪು ನೆನಪಿಗಾಗಿ ಬೆಳ್ಳಿ ನಾಣ್ಯ ಬಿಡುಗಡೆಯನ್ನು ಸಿಎಂ ಬಸವರಾಜ ಬೊಮ್ಮಾಯಿ ಅವರಿಂದ ಮಾಡಿಸಿದರು.
ಈ ವೇಳೆ ಸಿದ್ಧರಾಮಯ್ಯ, ಡಿ.ಕೆ.ಶಿವಕುಮಾರ್, ಸುಧಾಕರ್, ಆರಗ ಜಾನೇಂದ್ರ, ಅಶೋಕ್ ಇತರರು ಇದ್ದರು. ಈ ಕಾರ್ಯಕ್ರಮ ನಂತರ ಗಾಯಕರಾದ ವಿಜಯಪ್ರಕಾಶ್, ಮಂಜುಳ ಗುರುರಾಜ್, ಗುರುಕಿರಣ್, ಅನುರಾಧ ಭಟ್, ಹೇಮಂತ್ ಕುಮಾರ್, ಶಮಿತಾ ಮಲ್ನಾಡ್, ರಾಜೇಶ್ ಕೃಷ್ಣ, ಚೈತ್ರಾ, ಚೇತನ್ ಸೇರಿದಂತೆ ಇತರೆ ಗಾಯಕರೆಲ್ಲರೂ ಪುನೀತ ನಮನ ಕಾರ್ಯಕ್ರಮದಲ್ಲಿ ಗೀತನಮನ ಅರ್ಪಿಸಿದರು. ಕಾಣದಂತೆ ಮಾಯವಾದನು ಹಾಡನ್ನು ತರ್ಜುಮೆ ಮಾಡಿ ಎಲ್ಲರೂ ಮನದುಂಬಿ ದುಃಖಭರಿತವಾಗಿಯೇ ಹಾಡಿದರು.
ನನಗೆ ಗೊತ್ತಿರುವಂತೆ ಅಪ್ಪು ರೀತಿ ಯಾರೂ ಇಷ್ಟೊಂದು ಜನಪ್ರಿಯತೆ ಗಳಿಸಿರಲಿಲ್ಲ. ಅವರು ನಯ, ವಿನಯ, ಮಾನವೀಯ ಮೌಲ್ಯ ಮೈಗೂಡಿಸಿಕೊಂಡಿದ್ದ ಅಪರೂಪದ ವ್ಯಕ್ತಿ ಎಂದು ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದ್ದಾರೆ. ಅಪ್ಪು ನಮನ ಕಾರ್ಯಕ್ರಮದಲ್ಲಿ ನಮನ ಸಲ್ಲಿಸಿದ ಅವರು ಮಾತಾಡಿದ್ದು ಹೀಗೆ. “ನಾನು ಅಪ್ಪು ನಿಧನರಾದಾಗ ದೂರದಲ್ಲಿದ್ದೆ. ಆ ವಿಷಯ ನಂಬಲಿಲ್ಲ. ಚಿಕ್ಕವಯಸ್ಸಲ್ಲೇ ಸಾವು ಹೇಗೆ ಸಾಧ್ಯ? ದೇಹವನ್ನು ಚೆನ್ನಾಗಿ ಇಟ್ಟುಕೊಂಡಿದ್ದರು. ನಿಧನಕ್ಕೂ ಅವರ ಸಾವು ಅಚ್ಚರಿ ಆಯ್ತು. ಅವರ ಸಾವಿನ ದುಃಖ ತಡೆಯೋಕೆ ಸಾಧ್ಯವಾಗಲಿಲ್ಲ. ನಮ್ಮ ಮನೆಯವರೇ ನಿಧನರಾದಷ್ಟು ನೋವಾಯಿತು. ಆ ದುಃಖ ನನ್ನನ್ನು ಆವರಿಸಿತ್ತು. ನನಗೂ ಡಾ.ರಾಜಕುಮಾರ್ ಅವರ ಕುಟುಂಬಕ್ಕೆ ಮೊದಲಿನಿಂದಲೂ ಆತ್ಮೀಯತೆ ಇದೆ. ರಾಜಕುಮಾರ್ ಅವರು ನಮ್ಮ ಜಿಲ್ಲೆಯವರು. ಈಗ ಚಾಮರಾಜನಗರಕ್ಕೆ ಸೇರಿದೆ. ನನ್ನನ್ನು ನೋಡಿದಾಗ ಅವರು ಬನ್ನಿ ಬನ್ನಿ ನಮ್ಮ ಕಾಡಿನವರು ಬಂದ್ರು ಅಂತ ಪ್ರೀತಿಯಿಂದ ಹೇಳುತ್ತಿದ್ದರು. ರಾಜಕುಮಾರ್ ಅವರಲ್ಲಿದ್ದ ಮಾನವೀಯ ಲಕ್ಷಣ, ನಯ, ವಿನಯ, ಸಜ್ಜನಿಕೆ ಮತ್ತು ಮನುಷ್ಯರನ್ನು ಪ್ರೀತಿಸುತ್ತಿದ್ದ ರೀತಿ, ಅಭಿಮಾನಿಗಳನ್ನು ಕಾಣುತ್ತಿದ್ದ ರೀತಿ ದೊಡ್ಡದು. ಪುನೀತ್ ಅವರ ನಗು, ವಿನಯತೆ, ಸರಳತೆ, ಮರೆಯೋಕೆ ಸಾಧ್ಯವಿಲ್ಲ. ಎಲ್ಲರನ್ನೂ ಬಹಳ ಗೌರವದಿಂದಲೇ ಕಾಣುತ್ತಿದ್ದರು ಎಂದರು ಸಿದ್ಧರಾಮಯ್ಯ.
ಒಮ್ಮೆ ಮೈಸೂರಿನಲ್ಲಿ ಪುನೀತ್ ಸಿಕ್ಕಿದ್ದರು. ಆಗ ರಾಜಕುಮಾರ ಸಿನಿಮಾ ಬಿಡುಗಡೆಯಾಗಿದೆ ನೋಡಿ ಮಾಮ ಅಂದಿದ್ದರು. ಅವರು ನನ್ನನ್ನು ಮಾಮ ಅನ್ನುತ್ತಿದ್ದರು. ನಾನು ಸಕ್ರಿಯ ರಾಜಕಾರಣಕ್ಕೆ ಬಂದ ಮೇಲೆ ಹೆಚ್ಚು ಸಿನಿಮಾ ನೋಡಿರಲಿಲ್ಲ. ಅದಕ್ಕೂ ಮೊದಲು ರಾಜಕುಮಾರ್ ಅವರ ಸಿನಿಮಾಗಳನ್ನು ವಿದ್ಯಾರ್ಥಿಯಾಗಿದ್ದ ವೇಳೆ ಸೈಕಲ್ ಮೇಲೆ ಹೋಗಿ ನೋಡುತ್ತಿದ್ದೆ. ಹಾಗಾಗಿ ನಾನು ಪುನೀತ್ ಅವರ ರಾಜಕುಮಾರ ಸಿನಿಮಾವನ್ನು ಮೈಸೂರಲ್ಲಿ ಸರಸ್ವತಿ ಥಿಯೇಟರ್ ನೋಡಿದ್ದೆ. ಅದೊಂದು ಅದ್ಭುತ ಸಿನಿಮಾ. ಒಳ್ಳೆಯ ನಟನೆ ಮಾಡಿದ್ದರು. ಅವರು ಕೇವಲ ಸಿನಿಮಾಗಾಗಿ ಸೀಮಿತವಾಗಿರಲಿಲ್ಲ. ಸಾಮಾಜಿಕ ರಂಗದಲ್ಲೂ ತೊಡಗಿಸಿಕೊಂಡಿದ್ದರು. ಸರಕಾರದ ಪ್ರತಿ ಕಾರ್ಯಕ್ರಮಗಳು ಜನರಿಗೆ ತಲುಪಬೇಕು ಎಂದು ಸರ್ಕಾರದ ಜೊತೆ ನಿಲ್ಲುತ್ತಿದ್ದರು. ಸದ್ದಿಲ್ಲದೆಯೇ ಸಮಾಜ ಸೇವೆ ಮಾಡಿದ್ದರು.
ಅವರ ತಾಯಿ ಪಾರ್ವತಮ್ಮ ಅವರು ಶಕ್ತಿಧಾಮ ಸ್ಥಾಪಿಸಿ, ಅಲ್ಲಿ ಸಾವಿರಾರು ಮಕ್ಕಳಿಗೆ, ಅಶಕ್ತಿ ಮಹಿಳೆಯರಿಗೆ ಸೂರು ಕಲ್ಪಿಸಿದ್ದರು. ರಾಜ್ ಕುಟುಂಬ ಅಂಥದ್ದೊಂದು ಜವಾಬ್ದಾರಿ ಹೊತ್ತುಕೊಂಡಿತ್ತು. ನಿಜಕ್ಕೂ ಅದು ಶ್ಲಾಘನೀಜಯ ಎಂದರು. ಒಬ್ಬ ನಟ ನಿಧನರಾದಾಗ ಕೋಟಿ ಜನರು ಕಣ್ಣೀರು ಹಾಕಿದ್ದನ್ನು ನಿಜಕ್ಕೂ ನಾನು ನೋಡಿರಲಿಲ್ಲ. ಅಷ್ಟರಮಟ್ಟಿಗೆ ಪುನೀತ್ ಅವರ ಜನಪ್ರಿಯತೆ ಹೊಂದಿದ್ದರು. ಜನಾನುರಾಗಿಯಾಗಿದ್ದರು. ಅವರು ಇನ್ನೂ ಇರಬೇಕಿತ್ತು. ಆದರೆ ವಿಧಿ ಆಟ. ದೊಡ್ಡ ಹೆಜ್ಜೆ ಗುರುತು ಬಿಟ್ಟು ಹೋಗಿದ್ದಾರೆ. ಬದುಕಿನ ಆದರ್ಶ, ಯುವ ಜನರಿಗೆ ದಾರಿದೀಪ ಎಂದು ಭಾವಿಸಿದ್ದೇನೆ. ಅವರಿಗೆ ಗೌರವಿಸಬೇಕಾದರೆ, ಅವರ ಸರಳತೆ, ವಿನಯ, ಜನಸೇವೆ, ಅವರ ಬದುಕನ್ನು ಅಳವಡಿಸಿಕೊಳ್ಳುವ ಪ್ರಯತ್ನ ಮಾಡಬೇಕು. ಇನ್ನು, ರಾಜ್ಯ ಸರ್ಕಾರದ ಮುಖ್ಯಮಂತ್ರಿಗಳು ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ಘೋಷಣೆ ಮಾಡಿರುವುದು ಸ್ವಾಗತಾರ್ಹ. ಹಾಗಾಗಿ ನಾನು ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ನಾನು ಪುನೀತ್ ನಿಧನರಾದ ಸಂದರ್ಭದಲ್ಲಿ ಮರಣೋತ್ತರ ಪದ್ಮಶ್ರೀ ಕೊಡಬೇಕು ಎಂದು ಹೇಳಿದ್ದೆ. ಸಿಎಂ ಇಲ್ಲೇ ಇದ್ದಾರೆ. ಸಂಪುಟದಲ್ಲಿ ತೀರ್ಮಾನಿಸಿ, ಕೇಂದ್ರಕ್ಕೆ ಶಿಫಾರಸ್ಸು ಮಾಡಿ ಒತ್ತಾಯಿಸಬೇಕು ಎಂದರು.
ಅಪ್ಪು ನಮ್ಮೆಲ್ಲರಿಗೂ ಬಹಳ ಆತ್ಮಿಯ. ಅವನನ್ನು ಬಾಲ್ಯದಿಂದ ನಾನು ಬಲ್ಲೆ. ಬಾಲ್ಯದಲ್ಲೇ ಪ್ರತಿಭೆಯ ಚಿಲುಮೆ ಹೊಂದಿದವರು. ಕರ್ನಾಟಕದ ಇತಿಹಾಸದಲ್ಲಿ ಬಾಲನಟರಾಗಿ ರಾಷ್ಟ್ರಪ್ರಶಸ್ತಿ ಪಡೆದ ಏಕಮಯ ನಟ ಪುನೀತ್ ರಾಜಕುಮಾರ್. ಅಪ್ಪು ಸಾಧನೆಯ ಶಿಖರ. ಅಂತಹ ಶಿಖರವನ್ನು ಕಳೆದುಕೊಂಡಿದ್ದೇವೆ. ನಾನು, ಸುಮ್ಮನೆ ಅವನ ಚಿತ್ರಗಳನ್ನು ನೋಡುತ್ತಿದ್ದೆ. ಅವನ ತಂದೆ, ಈ ಕನ್ನಡ ನಾಡು ಕಂಡಂತಹ ಶ್ರೇಷ್ಠ ಕಲಾವಿದರು ಡಾ.ರಾಜಕುಮಾರ್. ಅವರ ಜೊತೆ ನಟನೆ ಮಾಡುವಾಗ, ಪಾತ್ರದ ಅನುಗುಣವಾಗಿ, ತಮ್ಮ ಸಂಬಂಧ ಬಿಟ್ಟು ನಟನೆ ಮಾಡ್ತಾರೆ. ಚಿಕ್ಕವಯಸ್ಸಲ್ಲಿ ಅವರು ಜಾಗೃತಿ ಇರುವುದಂಥದ್ದು ಸುಲಭವಲ್ಲ.
ಮುಂದೆ ಅವನು, ಸ್ಟಾರ್ ಆಗುವಂಥದ್ದು ನಿಶ್ಚಿತ, ಪವರ್ ಸ್ಟಾರ್ ಆಗುವಂಥದ್ದು ನಿಶ್ಚಿತವಾಗಿತ್ತು. ಆ ನಟನೆ, ಯಶಸ್ಸಿನ ನಡುವೆ, ಸಿಲ್ವರ್ ಲೈನಿಂಗ್ ಅಂತ ಏನು ಕರೀತಿವೆ. ಅವನ ನುಡಿ ವಿನಯ ಯಾರಿಂದಲೂ ಸಾಧ್ಯವಿಲ್ಲ. ಅಣ್ಣ್ರಾವ್ರಿಗೆ ಇದ್ದಂತಹ ನಯ, ವಿನಯ ಯಾರಲ್ಲಿ ಇದ್ದರೆ ಅದು ಪುನೀತ್ ಅವರಲ್ಲಿ ಕಾಣಬೇಕು. ರಾಘಣ್ಣ ಜೊತೆ ಅದ್ಭುತ ಸಂಬಂಧ. ಆಸ್ಪತ್ರೆಯಲ್ಲಿರುವಾಗ, ಧೈರ್ಯವಾಗಿ ಹೇಳುತ್ತಿದ್ದರು. ತನ್ನ ಅಭಿಮಾನಿಗಳಿಗೆ ಸೂಜಿಗಲ್ಲಿನಂತೆ ಅವನು ಆಕರ್ಷಣೆ ಮಾಡಿರುವುದು ಸಹಜ. ಎಲ್ಲರು ಮಾಡ್ತಾರೆ. ಆದರೆ, ಆ ಆಕರ್ಷಣೆ ಹಿಡಿದಿಟ್ಟುಕೊಳ್ಳುವುದು ದೊಡ್ಡ ಕಲೆ. ಆದು ಅಪ್ಪುಗಿತ್ತು. ಇಷ್ಟೆಲ್ಲಾ ಇದ್ದು, ಮಾಡಿಯೂ ಮಾಡದಂತಿರುವ ಪರೋಪಕಾರಿಯಾಗಿರುವ ಕೆಲಸಗಳು ನಮ್ಮ ಕನ್ನಡ ನಾಡಿನ ಶರಣರು ಹೇಳ್ತಾರೆ,
ಶರಣರನ್ನು ಮರಣದಲ್ಲಿ ನೋಡಿ, ಮರಣದ ನಂತರ, ಜನ ಯಾವ ರೀತಿ ಭಾವನೆಗಳನ್ನು, ಅನುಭವಗಳನನು ವ್ಯಕ್ತಪಡಿಸ್ತಾರೆ, ಅದು ಮನುಷ್ಯನ ವ್ಯಕ್ತಿತ್ವ ಬಿಂಬಿಸುತ್ತದೆ. ಅಪ್ಪು ನಮ್ಮನ್ನು ಅಗಲಿದ ಮೇಲೆ ಪ್ರತಿಯೊಬ್ಬರು ಆಡಿರುವ ಮಾತುಗಳು, ಮುತ್ತುಗಳು ಅವನ ಪರಿಪೂರ್ಣ ವ್ಯಕ್ತಿತ್ವ ನಮ್ಮ ನಾಡಿಗೆ ಪರಿಚಯವಾಗಿದೆ. ನಾನು ಅವನ ಅಗಲಿಕೆಯ ಸುದ್ದಿ ಕೇಳಿದಾಗ, ನಂಬಲೇ ಇಲ್ಲ. ಅರ್ಧ ಗಂಟೆ ಬೇರೆ ಕಡೆ ಮಾಹಿತಿ ಪಡೆದೆ ಸಣ್ಣ ವಯಸ್ಸಲಿ ಆಗಲು ಸಾಧ್ಯವೇ ಅಂತ, ನಿಜವಾಯ್ತು. ಆ ಘಟನೆ ನಾವ್ಯಾರೂ ಮರೆಯೋಕೆ ಸಾಧ್ಯವೇ ಇಲ್ಲ. ಒಂದು ಮಾತನ್ನು ಹೇಳೋಕೆ ಇಷ್ಟಪಡ್ತೀನಿ.
ಆದ ಘಟನೆಯಿಂದ ಅಂತಿಮ ಕ್ರಿಯೆವರೆಗೆ ಡಾ.ರಾಜಕುಮಾರ್ ಅವರ ಕುಟುಂಬದ ಪ್ರತಿಯೊಬ್ಬ ಸದಸ್ಯರು ನಡೆದುಕೊಂಡಿರುವ ರೀತಿ ಇದೆಯಲ್ಲ. ಅತ್ಯಂತ ಆದರ್ಶಪ್ರಾಯವಾಗಿದೆ ಕನ್ನಡಿಗರ ಪರವಾಗಿ ನಾನು ಆ ಕುಟುಂಬಕ್ಕೆ ನಮನ ಸಲ್ಲಿಸ್ತೀನಿ. ಅವರ ಸಹಕಾರ ಒಂದು ಕಡೆ ಇನ್ನೊಂದು ಕಡೆ ಅಭಿಮಾನಿಗಳದ್ದು, ಅಪ್ಪು ಅವರ ವಿನಯಶೀಲತೆಗೆ ತಕ್ಕಂತೆ ಅವರ ಅಂತಿಮಯಾತ್ರೆಯನ್ನು ನಡೆಸಿಕೊಡಲು ಸಾಧ್ಯವಾಯ್ತು. ಕೋಟಿ ಕೋಟಿ ಅಭಿಮಾನಿಗಳಿಗೂ ನಮನ ಸಲ್ಲಿಸ್ತೀನಿ. ಸರ್ಕಾರದ ಎಲ್ಲಾ ಇಲಾಖೆ ಅಧಿಕಾರಿಗಳು ಹಗಲಿರುಳು ಕೆಲಸ ಮಾಡಿದ್ದಾರೆ. ಅವರಿಗೂ ವಿಶೇಷ ಧನ್ಯವಾದ ಹೇಳೋಕೆ ಇಷ್ಟಪಡ್ತೀನಿ ಎಂದರು ಸಿಎಂ ಬೊಮ್ಮಾಯಿ.
ಪುನೀತ್ ರಾಜಕುಮಾರ್ ಅವರಿಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ಘೋಷಣೆ ಮಾಡಲಾಗಿದೆ. ಮಂಗಳವಾರ ಆಯೋಜಿಸಿದ್ದ ಪುನೀತ್ ನಮನ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬೊಮ್ಮಾಯಿ ಮಾತನಾಡಿ, ಅಪ್ಪು ಅವರ ಹೆಸರು ಚಿರಸ್ಥಾಯಿ ಆಗಬೇಕು ಎಂಬ ಅಭಿಲಾಶೆ ಏನಿದೆ, ಅದು ನಮ್ಮ ಸರ್ಕಾರದ ಅಭಿಲಾಶೆಯೂ ಕೂಡ. ಅವರ ಸಂಪೂರ್ಣ ಅಂತಿಮ ಸ್ಥಳವೇನಿದೆ. ಅದನ್ನು ಸಂಪೂರ್ವಣವಾಗಿ ನಾವು ರಾಜ್ ಕುಮಾರ್ ಮತ್ತು ಪಾರ್ವತಮ್ಮ ಅವರ ಸ್ಮಾರಕರಂತೆಯೇ, ನಾವು ಅಪ್ಪು ಅವರ ಸ್ಮಾರಕ ನಿರ್ಮಾಣ ಮಾಡ್ತೀವಿ. ಇದರೊಂದಿಗೆ ನಾನು ಹಲವು ಜನರ ಜೊತೆ ಚರ್ಚೆ ಮಾಡಿದ್ದೇವೆ. ಅದರಂತೆ, ಕರ್ನಾಟಕ ರತ್ಮ ಘೋಷಣೆ ಮಾಡ್ತಾ ಇದ್ದೇನೆ ಎಂದು ಹೇಳಿದ್ದಾರೆ.
ಇವುಗಳೊಂದಿಗೆ ಹಲವು ಸಲಹೆಗಳಿವೆ. ಬೇರೆ ಬೇರೆಯ ರಾಷ್ಟ್ರಮಟ್ಟದ ಪ್ರಶಸ್ತಿ ಬಗ್ಗೆ, ಅವುಗಳ ಬಗ್ಗೆಯೂ ಸರ್ಕಾರ ಮುಕ್ತ ಮನಸ್ಸಿನಲ್ಲಿದೆ. ಬರುವ ಸಂಪುಟ ಸಭೆಯಲ್ಲಿ ಆ ಬಗ್ಗೆ ನಿರ್ಧಾರ ಮಾಡ್ತೀವಿ. ಮುತ್ತುರಾಜ ಅವರ ಅಪ್ಪುಗೆ ಮರಣೋತ್ತರವಾಗಿ ಕರ್ನಾಟಕ ರತ್ನ ಪ್ರಶಸ್ತಿ ಘೋಷಣೆ, ಅಪ್ಪು ತೋರಿರುವ ಚಾರಿತ್ರ್ಯ ಚರಿತ್ರೆಗೆ ಸೇರುತ್ತದೆ.
ನಾನು ಪುನೀತ್ ಅವರಿಗೆ ಮುತ್ತು ಕೊಟ್ಟಾಗ ಬಹಳಷ್ಟು ಜನ ಬೇರೆ ಬೇರೆ ವಿಶ್ಲೇಷಣೆ ಕೊಟ್ಟಿದ್ದಾರೆ. ಅದು ನನ್ನೊಳಗಿನ ಭಾವನೆ. ನಾನು ಕನ್ನಡ ನಾಡಿನ ಜನರ ಪರವಾಗಿ ಮುತ್ತು ನೀಡಿದ್ದೇನೆ. ಮುತ್ತುರಾಜನಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡಿರುವುದು ಎಷ್ಟು ಸಂತೋಷವಾಗಿದೆಯೋ ಅಷ್ಟೇ ಅವರಿಗೆ ನಾನು ಮುತ್ತನಿಟ್ಟಿರುವುದೂ ಸಂತಸ ತಂದಿದೆ. ಚಂದ್ರ ಇರೋವರೆಗೆ ಪುನೀತ್ ಕರ್ನಾಟಕ ರತ್ನರಾಗಿ ಇರ್ತಾರೆ ಎಂದಿದ್ದಾರೆ ಸಿಎಂ ಬಸವರಾಜ ಬೊಮ್ಮಾಯಿ.
ಪಕ್ಕಾ ಫ್ಯಾಮಿಲಿ ಕಮ್ ಲವ್ ಕಾಮಿಡಿ ಎಂಟರ್ಟೈನರ್ ಕಥಾಹಂದರ ಹೊಂದಿರುವ ಸುಕನ್ಯ ದ್ವೀಪ ಈಗಾಗಲೇ ಚಿತ್ರದ ಮೊದಲನೇ ಹಂತದ ಚಿತ್ರೀಕರಣ ಮುಗಿದಿದ್ದು ಕಳಸ, ಚಿಕ್ಕಮಗಳೂರು,ದೇವರಮನೆ ಹಾಗೂ ಮೂಡಿಗೆರೆ, ಸುತ್ತಮುತ್ತ ಎರಡನೇ ಹಂತದ ಚಿತ್ರೀಕರಣ ನಡೆಸಲಾಗುವುದು. ಉಳಿದಂತೆ 2ಹಾಡುಗಳ ಚಿತ್ರೀಕರಣಕ್ಕಾಗಿ ಚಿತ್ರತಂಡ ಮುಂದಿನವಾರ ದುಬೈಗೆ ಪ್ರಯಾಣ ಬೆಳೆಸಲಿದೆ.
ನಾಯಕ ರಾಜ್ ಪ್ರಭು, ಶ್ರೇಯಾವಸಂತ್ ಹಾಗೂ ಡ್ಯಾನ್ಸ್ ಮಾಸ್ಟರ್ ಜಗ್ಗು ತೆರಳಲಿದ್ದಾರೆ. ಉಳಿದೆರಡು ಹಾಡುಗಳನ್ನು ಶಿಮ್ಲಾದಲ್ಲಿ ಶೂಟ್ ಮಾಡೋ ಪ್ಲಾನ್ ಇದೆ. ನಿರ್ಮಾಣದ ಜವಾಬ್ದಾರಿಯನ್ನು ರಾಜ್ ಪ್ರಭು ವಹಿಸಿಕೊಂಡಿದ್ದಾರೆ. ಮೂವರು ಅಕ್ಕ-ತಂಗಿಯರ ಸುತ್ತ ನಡೆಯುವ ಕಥೆ ಹೇಳಹೊರಟಿದ್ದಾರೆ.
ನಾಯಕನ ಪಾತ್ರದಲ್ಲಿ ರಾಜ್ಪ್ರಭು ಕಾಣಿಸಿಕೊಂಡಿದ್ದಾರೆ. ಫ್ಯಾಮಿಲಿ, ಲವ್ಸ್ಟೋರಿ ಇರೋ ಈ ಚಿತ್ರದಲ್ಲಿ ಕಾಮಿಡಿಗೆ ಹೆಚ್ಚು ಒತ್ತು ನೀಡಲಾಗಿದೆ, ಸುಕನ್ಯ ಎಂದರೆ ಹೆಣ್ಣು, ದ್ವೀಪ ಎಂದರೆ ಅವರಿರುವ ಮನೆಗೆ ಹೋಲಿಸಲಾಗಿದೆ.
ವೀರಬಾಹು ಈ ಚಿತ್ರದ ನಿರ್ಮಾಪಕರು. ಈ ಚಿತ್ರಕ್ಕೆ ಸಂಗೀತ ನಿರ್ದೇಶಕನಾಗಿ ಕೌಶಿಕ್ ಹರ್ಷ ಕೆಲಸ ಮಾಡಿದ್ದು. 5 ಹಾಡುಗಳನ್ನು ಕಂಪೋಜ್ ಮಾಡಿದ್ದಾರೆ. ವಿಘ್ನೇಶ್ ನಾಗೇಂದ್ರ ಚಿತ್ರದ ಕ್ಯಾಮೆರಾ ನಿಭಾಯಿಸಿದ್ದಾರೆ.
ರಾಜ್ ಪ್ರಭು, ಸಚಿನ್ ಪುರೋಹಿತ್,ರಘು ರಂಜನ್,ನಾಯಕರು. ಶ್ರೇಯ ವಸಂತ್, ಅಕ್ಷಿತ ನಾಗರಾಜ್, ಚುಂಬಿತ ನಾಯಕಿಯರು. ಹಿರಿಯನಟ ಎಂಡಿ ಕೌಶಿಕ ಕುಟುಂಬದ ಹಿರಿಯನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಗಾಂಧಿನಗರಕ್ಕೆ ಹಲವು ಮಂದಿ ಆಸೆಯ ಕಂಗಳಲ್ಲೇ ಎಂಟ್ರಿಯಾಗುತ್ತಾರೆ. ತಾನೂ ಹೀರೋ ಆಗಬೇಕು, ನಿರ್ದೇಶಕ ಆಗಬೇಕು ಅಂತ. ಆದರೆ, ಕಲೆ ಕೆಲವರನ್ನು ಮಾತ್ರ ಕೈ ಬೀಸಿ ಕರೆಯುತ್ತೆ. ಆ ಸಾಲಿಗೆ ಮಾಧ್ಯಮ ಗೆಳೆಯ ಕಿರಣ್ ಹಾವೇರಿ ಮತ್ತು ಅವರ ಗೆಳೆಯರು ಸೇರಿದ್ದಾರೆ. ಹೌದು, ಕಿರಣ್ ಹಾವೇರಿ ಅವರು ಅವರು ಹೀರೋ ಆಗಿರೋದು ಗೊತ್ತೇ ಇದೆ. “ಗೋರಿ” ಸಿನಿಮಾ ಮೂಲಕ ತಮ್ಮ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ.
ಚಿತ್ರ ಈಗ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದೆ. “ಗೋರಿ” ಎಂಬ ಹೆಸರೇ ಒಂದು ರೀತಿ ಕುತೂಹಲ ಹುಟ್ಟಿಸುತ್ತೆ. ಹಾಗೆಯೇ ಸಿನಿಮಾದ ಕಥೆ ಕೂಡ ಅಷ್ಟೇ ನಿರೀಕ್ಷೆ ಹೆಚ್ಚಿಸಿದೆ. ಕಾರಣ, ಇದೊಂದು ಪ್ರೇಮಕಥೆ. ಅದರಲ್ಲೂ ಸಮಾನ ಮನಸ್ಕ ಗೆಳೆಯರೆಲ್ಲರೂ ಕೂಡಿ ಮಾಡಿರುವ ಚಿತ್ರವಿದು. ಕಷ್ಟಪಟ್ಟು ಅನ್ನುವುದಕ್ಕಿಂತ ತುಂಬಾನೇ ಇಷ್ಟಪಟ್ಟು ಮಾಡಿರುವ ಚಿತ್ರ. ಆ ಕಾರಣಕ್ಕೆ, “ಗೋರಿ” ಒಂದು ಹೊಸ ಬಗೆಯ ಸಿನಿಮಾ ಅನ್ನಬಹುದು. ಈಗಾಗಲೇ ಚಿತ್ರ ಒಂದಷ್ಟು ಸದ್ದು ಮಾಡಿದೆ. ಆ ಸಾಲಿಗೆ ಮತ್ತೊಂದು ಹಾಡಿನ ಮೂಲಕವೂ ಸೌಂಡು ಮಾಡುತ್ತಿದೆ.
“ನೀನಿರದೇ ನೀನಿರದೇ ನಾನು, ನಿಂತಲ್ಲೇ ಶವವಾದೆ ಗೊತ್ತೇನು…” ಎಂಬ ಹಾಡು ರಿಲೀಸ್ ಆಗಿದ್ದು, ಅದೊಂದು ಎಮೋಷನಲ್ ಸಾಂಗ್. ಈ ಹಾಡನ್ನು ಸೆಂಚುರಿ ಸ್ಟಾರ್ ಶಿವರಾಜಕುಮಾರ್ ಅವರು, ರಿಲೀಸ್ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ಗೀತ ಸಾಹಿತಿ ಕೆ.ಕಲ್ಯಾಣ್ ಅವರ ಸಾಹಿತ್ಯ ಇರುವ ಈ ಗೀತೆಗೆ ವಿನು ಮನಸು ಅವರ ಸಂಗೀತವಿದೆ. ಕಿರಣ್ ಹಾವೇರಿ ನಟಿಸಿರುವ ಈ ಚಿತ್ರವನ್ನು ಗೋಪಾಲಕೃಷ್ಣ ಹೊಮ್ಮರಡಿ ನಿರ್ದೇಶನ ಮಾಡಿದ್ದಾರೆ.
ಸದ್ಯ ತೆರೆಗೆ ಅಪ್ಪಳಿಸಲು ಸಜ್ಜಾಗಿರುವ ಈ ಸಿನಿಮಾ ಯು/ಎ ಸರ್ಟಿಫಿಕೆಟ್ ಪಡೆದಿದೆ. “ಪ್ರೀತಿಯ ಸಮಾದಿ” ಎಂಬುದು ಶೀರ್ಷಿಕೆಯ ಅಡಿಬರಹ. ಈ ಅಡಿಬರಹ ಓದಿದರೆ, ಇದೊಂದು ಅಪ್ಪಟ ಪ್ರೇಮಿಗಳ ಕಥೆ ಅನ್ನುವುದು ಗೊತ್ತಾಗುತ್ತೆ. ಎಲ್ಲಾ ಲವ್ಸ್ಟೋರಿಗಳಲ್ಲೂ ನೋವು ಸಹಜ. ಈ “ಗೋರಿ” ಸಿನಿಮಾದಲ್ಲೂ ಆ ನೋವು ಇದೆಯಾ? ಗೊತ್ತಿಲ್ಲ.
ಆದರೆ, ಸಿನಿಮಾ ನೋಡಿದವರಿಗೆ ಆ ಪ್ರೀತಿಯ ಕಥೆ, ವ್ಯಥೆ ಮತ್ತು ಪ್ರೇಮಿಗಳ ಮನದೊಳಗಿರುವ ಗಾಢವಾದ ನೋವು ಏನೆಂಬುದು ಗೊತ್ತಾಗುತ್ತೆ. ಸದ್ಯ ಆನಂದ್ ಆಡಿಯೋದ ಚಾನೆಲ್ನಲ್ಲಿ ಬಿಡುಗಡೆಯಾಗಿರುವ ಈ ಹಾಡಿಗೆ ಎಲ್ಲೆಡೆಯಿಂದ ಮೆಚ್ಚುಗೆ ಸಿಗುತ್ತಿದೆ. ಇನ್ನು, ಈ ಹಾಡಿಗೆ ಸರಿಗಮಪ ಖ್ಯಾತಿಯ ಮೆಹಬೂಬ್ ಸಾಬ್ ಅವರು ಹಾಡಿದ್ದಾರೆ.
ಈಗಂತೂ ಎಲ್ಲೆಡೆ ವೆಬ್ಸೀರೀಸ್ಗಳದ್ದೇ ಮಾತು. ಅದರಲ್ಲೂ ಕಂಟೆಂಟ್ ಇರುವ ವೆಬ್ಸೀರಿಸ್ಗಳ ಬಗ್ಗೆಯಂತೂ ಎಲ್ಲಿಲ್ಲದ ಮಾತು. ಹಲವು ಭಾಷೆಗಳಲ್ಲಿ ಈಗಾಗಲೇ ವೆಬ್ಸೀರೀಸ್ಗಳ ಹವಾ ಜೋರಾಗಿದೆ. ಅದು ಕನ್ನಡಕ್ಕೂ ಹೊರತಲ್ಲ. ಹೌದು, ಇತ್ತೀಚೆಗೆ ಕನ್ನಡದಲ್ಲಿ ಸಾಕಷ್ಟು ವೆಬ್ಸೀರೀಸ್ಗಳು ಪ್ರಸಾರವಾಗುತ್ತಿವೆ. ಯುವಕರೇ ಹೆಚ್ಚಾಗಿ ವೆಬ್ಸೀರೀಸ್ಗಳತ್ತ ಮುಖ ಮಾಡುತ್ತಿದ್ದಾರೆ. ಆ ಮೂಲಕ ಅವರೆಲ್ಲರೂ ಗುರುತಿಸಿಕೊಳ್ಳುತ್ತಿದ್ದಾರೆ. ಆ ಸಾಲಿಗೆ ಈಗ ಮತ್ತೊಂದು ಹೊಸ ವೆಬ್ಸೀರೀಸ್ ಶುರುವಾಗುತ್ತಿದೆ.
ಹೌದು, ಈಗಾಗಲೇ “ರಂಕಲ್ ರಾಟೆ” ಮತ್ತು “ಮದುವೆ ಮಾಡ್ರೀ ಸರಿ ಹೋಗ್ತಾನೆ” ಸಿನಿಮಾಗಳನ್ನು ನಿರ್ದೇಶಿಸಿರುವ ಗೋಪಿ ಕೆರೂರ್ ಅವರು, ಹೊಸದೊಂದು ವೆಬ್ಸೀರೀಸ್ಗೆ ಕೈ ಹಾಕಿದ್ದಾರೆ. ಅದಕ್ಕೆ “ಕಿಟ್ಟಿ ಸಂಸಾರದಲ್ಲಿ ಸಿಡಿಮಿಡಿ” ಎಂದು ನಾಮಕರಣ ಮಾಡಿದ್ದಾರೆ. ಈ ವೆಬ್ಸೀರೀಸ್ ನಿರ್ದೇಶನದ ಜೊತೆಗೆ ಅವರು ಹೀರೋ ಆಗಿಯೂ ಕಾಣಿಸಿಕೊಳ್ಳುತ್ತಿರುವುದು ವಿಶೇಷ. ಸದ್ಯ ವೆಬ್ಸೀರೀಸ್ ಚಿತ್ರೀಕರಣ ಜೋರಾಗಿಯೇ ನಡೆಯುತ್ತಿದೆ. ಗೋಪಿ ಕೆರೂರ್ ಅವರಿಗೆ ನಾಯಕಿಯಾಗಿ ಐಶ್ವರ್ಯ ಇದ್ದಾರೆ.
ಉಳಿದಂತೆ ಸಿದ್ಧಿ ವಿನಾಯಕ ಕಾಣಿಸಿಕೊಳ್ಳುತ್ತಿದ್ದಾರೆ. ಆಶಾ ಅವರು ಇತ್ತೀಚೆಗೆ ಕ್ಯಾಮೆರಾ ಆನ್ ಮಾಡುವ ಮೂಲಕ ಚಿತ್ರೀಕರಣಕ್ಕೆ ಚಾಲನೆ ನೀಡಿದ್ದಾರೆ. ಇನ್ನು, ಈ ವೆಬ್ಸೀರೀಸ್ ಅನ್ನು ಝೇಂಕಾರ್ ಮ್ಯೂಸಿಕ್ ಕಂಪನಿ ನಿರ್ಮಿಸುತ್ತಿದೆ.
ಎಂಟರ್ಟೈನ್ಮೆಂಟ್ ಈಗ ಮೊದಲಿಗಿಂತಲೂ ಹೊಸತನದಿಂದ ಕೂಡಿದೆ. ಹೊಸಬರು ಹೊಸ ಹೊಸ ಅಲೋಚನೆಗಳಲ್ಲಿ ಕಥೆ ಹೆಣೆಯುತ್ತಿದ್ದಾರೆ. ಎಲ್ಲಾ ವರ್ಗಕ್ಕೂ ಇಷ್ಟವಾಗುವಂತಹ ವೆಬ್ಸೀರೀಸ್ಗಳು ಮೂಡಿ ಬರುತ್ತಿವೆ. ಆ ಸಾಲಿಗೆ ಈಗ ಕಿಟ್ಟಿ ಸಂಸಾರದಲ್ಲಿ ಸಿಡಿಮಿಡಿ ಕೂಡ ಸೇರುತ್ತಿದೆ.
ಪುನೀತ್ ರಾಜಕುಮಾರ್ ಇಲ್ಲವೆಂಬ ಭಾವ ಯಾರಿಗೂ ಇಲ್ಲ. ದೈಹಿಕವಾಗಿ ಅವರಿಲ್ಲದಿದ್ದರೂ, ಎಲ್ಲರ ಹೃದಯದಲ್ಲಿ ಪುನೀತ್ ರಾಜಕುಮಾರ್ ನೆಲೆಸಿದ್ದಾರೆ. ಇದು ನಿಜ. ಅವರು ಏನೇ ಮಾಡಿದರೂ ದೊಡ್ಡ ಸುದ್ದಿಯೇ ಆಗುತ್ತಿತ್ತು. ಅವರು ಸಿನಿಮಾ ಮಾಡಲಿ, ಹಾಡು ಹಾಡಲಿ, ಡೈಲಾಗ್ ಹೇಳಲಿ, ಡ್ಯಾನ್ಸ್ ಮಾಡಲಿ, ಫೈಟ್ ಮಾಡಲಿ ಏನೂ ಮಾಡಿದರೂ ಜನ ಸೈ ಎನ್ನುತ್ತಿದ್ದರು. ಖುಷಿಯಿಂದಲೇ ಚಪ್ಪಾಳೆ ತಟ್ಟಿ, ಶಿಳ್ಳೆ ಹಾಕಿ ಸಂಭ್ರಮಿಸುತ್ತಿದ್ದರು. ಅವರಿಲ್ಲದಿದ್ದರೂ, ಆ ಸಂಭ್ರಮ ನಿರಂತರವಾಗಿರುತ್ತೆ ಅನ್ನುವುದನ್ನು ಪ್ರತ್ಯೇಕವಾಗಿ ಹೇಳುವ ಅಗತ್ಯವಿಲ್ಲ.
ಪುನೀತ್ ಇಲ್ಲ ಅಂದುಕೊಳ್ಳದ ಅವರ ಅಭಿಮಾನಿಗಳು ಮತ್ತು ನಾಡಿನ ಜನ, ಅವರ ಸಿನಿಮಾಗಳನ್ನು ಮತ್ತೆ ಮತ್ತೆ ನೋಡುತ್ತಿದ್ದಾರೆ. ಹಾಡುಗಳನ್ನು ಪುನಃ ಕೇಳುತ್ತಲೇ ಇದ್ದಾರೆ. ಅವರ ಮಾತುಗಳನ್ನು ಕೇಳಿ ಅದೆಷ್ಟೋ ಮಂದಿ ಕಣ್ಣೀರಾಗಿದ್ದಾರೆ. ಈಗ ಮತ್ತೊಂದು ದಾಖಲೆಯ ವಿಷಯ ಏನೆಂದರೆ, ಅವರ ರಾಜಕುಮಾರ ಚಿತ್ರದ ಬೊಂಬೆ ಹೇಳುತ್ತೈತೆ ಹಾಡು ದೊಡ್ಡ ದಾಖಲೆ ಬರೆದಿದೆ.
ಹೌದು, ರಾಜಕುಮಾರ ಸಿನಿಮಾ ಪುನೀತ್ ರಾಜ್ಕುಮಾರ್ ಅವರ 42ನೇ ಹುಟ್ಟುಹಬ್ಬ ಸಂಭ್ರಮದ ಬಳಿಕ ರಿಲೀಸ್ ಆಗಿತ್ತು. ಸಂತೋಷ್ ಆನಂದ್ರಾಮ್ ನಿರ್ದೇಶಿಸಿದ್ದ ಈ ಚಿತ್ರ ದೊಡ್ಡ ಸುದ್ದಿ ಮಾಡಿತ್ತು. ಅನೇಕ ದಾಖಲೆಗಳನ್ನೂ ಬರೆದಿತ್ತು. ಈ ಸಿನಿಮಾ ರಿಲೀಸ್ ಆಗುವ ಮೊದಲೇ ದೊಡ್ಡ ಸೌಂಡ ಮಾಡಿತ್ತು. ಅದಕ್ಕೆ ಕಾರಣ, ಬೊಂಬೆ ಹೇಳುತೈತೆ ಹಾಡು. ಹೌದು, ಈ ಹಾಡಿಗೆ ವಿ.ಹರಿಕೃಷ್ಣ ಸಂಗೀತ ಸಂಯೋಜಿಸಿದ್ದರು. ಗಾಯಕ ವಿಜಯ್ ಪ್ರಕಾಶ್ ಹಾಡಿದ್ದರು.
ಬೊಂಬೆ ಹೇಳುತೈತೆ ಹಾಡಿನ ಮೇಕಿಂಗ್ ಝಲಕ್ ರಿಲೀಸ್ ಮಾಡಿದ್ದರಿಂದ ಜನರು ಈ ಹಾಡನ್ನೇ ಗುನುಗುವ ಮೂಲಕ ಸಿನಿಮಾ ರಿಲೀಸ್ಗೆ ಕಾದಿದ್ದರು. ನಂತರ ಸಿನಿಮಾ ಬಿಡುಗಡೆಯಾದ ಬಳಿಕ ಹಾಡು ಸೂಪರ್ ಹಿಟ್ ಲಿಸ್ಟ್ಗೆ ಸೇರಿತ್ತು. ಈ ಹಾಡು ಈಗ ಮತ್ತಷ್ಟು ಜನಪ್ರಿಯವಾಗಿದೆ ಅನ್ನೋದೇ ವಿಶೇಷ. ಯುಟ್ಯೂಬ್ನಲ್ಲಿ ಬರೋಬ್ಬರಿ 100 ಮಿಲಿಯನ್ ವೀಕ್ಷಣೆ ಕಂಡು ದಾಖಲೆ ಬರೆದಿದೆ. ಭಾರತದಲ್ಲಿ ಮೇಕಿಂಗ್ ವಿಡಿಯೋಗೆ ಇಷ್ಟೊಂದು ವೀವ್ಸ್ ಸಿಕ್ಕಿರುವುದು ವಿಶೇಷತೆಗಳಲ್ಲೊಂದು. ಅದೇನೆ ಇರಲಿ, ಅಪ್ಪು ಫ್ಯಾನ್ಸ್ ಮಾತಲ್ಲಿ ಅಪ್ಪು ಸದಾ ರಾಜಕುಮಾರ.
ಮದಗಜ ಸಿನಿಮಾ ರಿಲೀಸ್ ಡೇಟ್ ಅನೌನ್ಸ್ ಮಾಡಿದ್ದೇ ತಡ, ಶ್ರೀಮುರಳಿ ಫ್ಯಾನ್ಸ್ ಸಿಕ್ಕಾಪಟ್ಟೆ ಖುಷಿಯಲ್ಲಿದ್ದಾರೆ. ಅಷ್ಟೇ ಅಲ್ಲ, ಸಿನಿಮಾ ನೋಡೋಕೆ ತುದಿಗಾಲ ಮೇಲೆ ನಿಂತಿದ್ದಾರೆ. ಇದಿಷ್ಟೇ ಆಗಿದ್ದರೆ ಹೇಳುವ ಅಗತ್ಯ ಇರುತ್ತಿರಲಿಲ್ಲ. ಈಗ ಹೊಸ ಸುದ್ದಿ ಅಂದರೆ, ಮದಗಜ ಸಿನಿಮಾ ನೋಡಲು ಕಾಲೇಜಿಗೆ ರಜೆ ಕೊಡಿ ಅಂತ ಕಾಲೇಜಿನಿ ವಿದ್ಯಾರ್ಥಿಯೊಬ್ಬ ಪ್ರಾಂಶುಪಾಲರಿಗೆ ಪತ್ರ ಬರೆದಿದ್ದಾನೆ…
ಹೌದು, ಶ್ರೀಮುರಳಿಯ ಅಪ್ಪಟ ಅಭಿಮಾನಿಯೊಬ್ಬ ಮದಗಜ ಚಿತ್ರ ನೋಡಲು ಮೈಸೂರಿನ ಜ್ಞಾನೋದಯ ಕಾಲೇಜಿಗೆ ರಜೆ ಕೊಡಬೇಕು ಎಂದು ವಿದ್ಯಾರ್ಥಿ ವಿಕ್ರಮ್ ಎಂಬಾತ ಪ್ರಿನ್ಸಿಪಾಲ್ಗೆ ಪತ್ರ ಬರೆದಿದ್ದಾನೆ. ಆತ ಬರೆದಿರುವ ಪತ್ರದಲ್ಲಿ, “ಡಿಯರ್ ಪ್ರಿನ್ಸಿಪಾಲ್, ಡಿಸೆಂಬರ್ ೩ ರಂದು ಕಾಲೇಜಿಗೆ ರಜೆ ಘೋಷಣೆ ಮಾಡಿ. ಯಾಕೆಂದರೆ, ಅಂದು ರೋರಿಂಗ್ ಸ್ಟಾರ್ ಶ್ರೀಮುರಳಿ ಅವರ “ಮದಗಜ” ಸಿನಿಮಾ ರಿಲೀಸ್ ಆಗುತ್ತಿದೆ.
ಹಾಗಾಗಿ, ಎಲ್ಲರೂ ಅವರ ಸಿನಿಮಾ ನೋಡಲು ಕಾತುರರಾಗಿದ್ದಾರೆ. ಅದರಲ್ಲೂ, ಅದೊಂದು ಬಹುನಿರೀಕ್ಷೆಯ ಚಿತ್ರ. ಹೀಗಾಗಲಿ, ಜನರು ಕೂಡ ಸಿನಿಮಾ ನೋಡಲು ಕಾಯುತ್ತಿದ್ದಾರೆ. ನಾವೆಲ್ಲರೂ ಕೂಡ ಕಾಯುತ್ತಿದ್ದೇವೆ. ಆದ್ದರಿಂದ, ಡಿಸೆಂಬರ್ ೩ ರಂದು ಮದಗಜ ಸಿನಿಮಾ ರಿಲೀಸ್ ಆಗುತ್ತಿರುವುದರಿಂದ ಅಂದು ಕಾಲೇಜಿಗೆ ರಜೆಯನ್ನು ಘೋಷಿಸಬೇಕು ಎಂದು ಪತ್ರ ಬರೆದು, ಪೋಸ್ಟ್ ಮಾಡಿದ್ದಾನೆ. ಈ ರೀತಿಯ ಅಭಿಮಾನಿಗಳ ಪತ್ರಗಳು ಹೊಸದೇನಲ್ಲ.
ಆದರೆ, ಮೈಸೂರಿನ ಜ್ಞಾನೋದಯ ಕಾಲೇಜು ವಿದ್ಯಾರ್ಥಿಯೊಬ್ಬ, ಈ ರೀತಿ ಪರಿ ಪರಿಯಾಗಿ ತನ್ನ ಕಾಲೇಜಿನ ಪ್ರಾಂಶುಪಾಲರಿಗೆ , ಸಿನಿಮಾ ನೋಡುವ ಸಲುವಾಗಿಯೇ ರಜೆ ಕೊಡಬೇಕು ಎಂದು ಮನವಿ ಮಾಡಿಕೊಳ್ಳುವ ಮೂಲಕ ಪತ್ರವೊಂದನ್ನು ಬರೆದಿರುವುದು ನಿಜಕ್ಕೂ ವಿಶೇಷ. ಅದೇನೆ ಇರಲಿ, ಇಂತಹ ಅಭಿಮಾನಿಗಳೂ ಇದ್ದಾರೆ ಅನ್ನುವುದಕ್ಕೆ ಇದೊಂದು ಉದಾಹರಣೆಯಷ್ಟೇ. ಶ್ರೀಮುರಳಿ ಅವರಿಗೆ ಈಗ ಸಾಕಷ್ಟು ಅಭಿಮಾನಿ ಬಳಗವಿದೆ. ಅವರೆಲ್ಲರೂ ಮದಗಜ ಚಿತ್ರವನ್ನು ನೋಡಲು ತುದಿಗಾಲ ಮೇಲೆ ನಿಂತಿದ್ದಾರೆ.
ಅದರಲ್ಲೂ ಶ್ರೀಮುರಳಿ ಅವರಿಗೆ ಕಾಲೇಜು ಸ್ಟುಡೇಂಟ್ಸ್ ಹೆಚ್ಚು ಫ್ಯಾನ್ಸ್. ಯೂಥ್ಗೆ ಫೇವರೇಟ್ ಹೀರೋ ಎನಿಸಿರುವ ಶ್ರೀಮುರಳಿ ಅವರು, ಎಲ್ಲರನ್ನೂ ಅಷ್ಟೇ ಪ್ರೀತಿಯಿಂದ ಕಾಣುತ್ತಾರೆ. ಫ್ಯಾನ್ಸ್ ಅಂದರೆ ಸಾಕು, ಎಲ್ಲಿಲ್ಲದ ಪ್ರೀತಿ ಅವರಿಗೆ. ಸದಾ ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿರುವ ಶ್ರೀಮುರಳಿ ಅವರು, ತಮ್ಮ ಅಭಿಮಾನಿಗಳಿಗಾಗಿಯೇ ವಿಶೇಷ ಪಾತ್ರವನ್ನು ಮದಗಜ ಚಿತ್ರದಲ್ಲಿ ನಿರ್ವಹಿಸಿದ್ದಾರೆ.
ಈಗಾಗಲೇ ಮದಗಜ ಸಾಕಷ್ಟು ಸುದ್ದಿಯಲ್ಲಿದೆ. ಇತ್ತೀಚೆಗೆ ಬಿಡುಗಡೆಯಾದ ಟೈಟಲ್ ಸಾಂಗ ಭರ್ಜರಿ ಹಿಟ್ ಆಗಿದೆ. ಆ ಹಾಡು ನೋಡಿದವರಿಗೆ ಸಿನಿಮಾ ನೋಡಲೇಬೇಕು ಅನ್ನುವಷ್ಟರ ಮಟ್ಟಿಗೆ ಸಾಂಗು ಸೂಪರ್ ಆಗಿದೆ. ಚಿತ್ರತಂಡ, ಡಿಸೆಂಬರ್ ೩ರಂದು ರಿಲೀಸ್ ಮಾಡಲು ಜೋರಾದ ತಯಾರಿ ಮಾಡಿಕೊಂಡಿದೆ.
ಹರಿಹರ ಪಿಚ್ಚರ್ಸ್ ನಿರ್ಮಾಣದ ‘ಡಿಆರ್ 56’ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಹೀರೋ “ಪಿಆರ್” ಹಾಗು “ಪ್ರಿಯಾಮಣಿ” ಅಭಿನಯದ “ಡಿಆರ್ 56” ಚಿತ್ರದ ಟೀಸರ್ ಬಿಡುಗಡೆಗೆ ಕಾರಣ, ನಟ “ಪಿಆರ್” ಅವರ ಹುಟ್ಟು ಹಬ್ಬ. ಹಾಗಾಗಿ ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ನವೆಂಬರ್ 11ರಂದು ಬಿಡುಗಡೆ ಮಾಡಲಾಗಿದೆ.
ಈ ಚಿತ್ರ ಕನ್ನಡ ಹಾಗೂ ತಮಿಳ್ ನಲ್ಲಿ ಏಕಕಾಲದಲ್ಲಿ ಚಿತ್ರೀಕರಣ ಮಾಡಲಾಗಿದ್ದು ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ. ಚಿತ್ರ ತೆರೆಗೆ ಬರಲು ಸಜ್ಜಾಗಿದೆ. ಇದೊಂದು ಸೈನ್ಸ್ ಫಿಕ್ಷನ್ ಆಕ್ಷನ್ ಥ್ರಿಲ್ಲರ್ ಚಿತ್ರವಾಗಿದ್ದು ಸಮಾಜದಲ್ಲಿ ನಡೆಯುತ್ತಿದ್ದ, ನಡೆಯುತ್ತಿರುವ, ಮುಂದೆಯು ನಡೆಯುವ ವಂಚನೆಯನ್ನು ಜನರಿಗೆ ಮನದಟ್ಟು ಮಾಡಿಸಲು ಹೊರಟಿರುವ ಚಿತ್ರ.
ಕಥೆ ಹಾಗೂ ಚಿತ್ರಕಥೆ ನಾಯಕನಟ “ಪಿಆರ್” ಅವರೆ ರೂಪಿಸಿದ್ದು, ನಿರ್ದೇಶನದ ಜವಾಬ್ದಾರಿಯನ್ನು “ರಾಜೇಶ್ ಆನಂದ ಲೀಲಾ” ಅವರು ನಿರ್ವಹಿಸಿದ್ದಾರೆ ರಾಕೇಶ್ ಸಿ ತಿಲಕ್ ಅವರ ಛಾಯಾಗ್ರಹಣ ನೋಬಿನ್ ಪಾಲ್ ಅವರ ಸಂಗೀತ ಹಾಗೂ ಹಿನ್ನೆಲೆ ಸಂಗೀತ ವಿಶ್ವ ಎನ್ ಎಂ” ಅವರ ಸಂಕಲನ “ಶಂಕರ್ ರಾಮನ್” ಅವರ ಸಂಭಾಷಣೆ ನಾಗೇಂದ್ರ ಪ್ರಸಾದ್ ಅವರ ಸಾಹಿತ್ಯವಿದೆ.
ರಾಷ್ಟ್ರಪ್ರಶಸ್ತಿ ವಿಜೇತ “ವಿಕ್ರಂ ಮೋರ್” ಅವರ ಸಾಹಸ ನಿರ್ದೇಶನವಿದೆ. ಕಾರ್ಯಕಾರಿ ನಿರ್ಮಾಪಕ “ಶ್ರೀಕಾಂತ್ ಕಶ್ಯಪ್” ಅವರ ನಿರ್ವಹಣೆ ಚಿತ್ರಕ್ಕಿದೆ.