ಅಪ್ಪುಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ; ಸಿಎಂ ಬೊಮ್ಮಾಯಿ ಘೋಷಣೆ

ಪುನೀತ್‌ ರಾಜಕುಮಾರ್‌ ಅವರಿಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ಘೋಷಣೆ ಮಾಡಲಾಗಿದೆ. ಮಂಗಳವಾರ ಆಯೋಜಿಸಿದ್ದ ಪುನೀತ್‌ ನಮನ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬೊಮ್ಮಾಯಿ ಮಾತನಾಡಿ, ಅಪ್ಪು ಅವರ ಹೆಸರು ಚಿರಸ್ಥಾಯಿ ಆಗಬೇಕು ಎಂಬ ಅಭಿಲಾಶೆ ಏನಿದೆ, ಅದು ನಮ್ಮ ಸರ್ಕಾರದ ಅಭಿಲಾಶೆಯೂ ಕೂಡ. ಅವರ ಸಂಪೂರ್ಣ ಅಂತಿಮ ಸ್ಥಳವೇನಿದೆ. ಅದನ್ನು ಸಂಪೂರ್ವಣವಾಗಿ ನಾವು ರಾಜ್‌ ಕುಮಾರ್‌ ಮತ್ತು ಪಾರ್ವತಮ್ಮ ಅವರ ಸ್ಮಾರಕರಂತೆಯೇ, ನಾವು ಅಪ್ಪು ಅವರ ಸ್ಮಾರಕ ನಿರ್ಮಾಣ ಮಾಡ್ತೀವಿ. ಇದರೊಂದಿಗೆ ನಾನು ಹಲವು ಜನರ ಜೊತೆ ಚರ್ಚೆ ಮಾಡಿದ್ದೇವೆ. ಅದರಂತೆ, ಕರ್ನಾಟಕ ರತ್ಮ ಘೋಷಣೆ ಮಾಡ್ತಾ ಇದ್ದೇನೆ ಎಂದು ಹೇಳಿದ್ದಾರೆ.


ಇವುಗಳೊಂದಿಗೆ ಹಲವು ಸಲಹೆಗಳಿವೆ. ಬೇರೆ ಬೇರೆಯ ರಾಷ್ಟ್ರಮಟ್ಟದ ಪ್ರಶಸ್ತಿ ಬಗ್ಗೆ, ಅವುಗಳ ಬಗ್ಗೆಯೂ ಸರ್ಕಾರ ಮುಕ್ತ ಮನಸ್ಸಿನಲ್ಲಿದೆ. ಬರುವ ಸಂಪುಟ ಸಭೆಯಲ್ಲಿ ಆ ಬಗ್ಗೆ ನಿರ್ಧಾರ ಮಾಡ್ತೀವಿ. ಮುತ್ತುರಾಜ ಅವರ ಅಪ್ಪುಗೆ ಮರಣೋತ್ತರವಾಗಿ ಕರ್ನಾಟಕ ರತ್ನ ಪ್ರಶಸ್ತಿ ಘೋಷಣೆ,
ಅಪ್ಪು ತೋರಿರುವ ಚಾರಿತ್ರ್ಯ ಚರಿತ್ರೆಗೆ ಸೇರುತ್ತದೆ.


ನಾನು ಪುನೀತ್‌ ಅವರಿಗೆ ಮುತ್ತು ಕೊಟ್ಟಾಗ ಬಹಳಷ್ಟು ಜನ ಬೇರೆ ಬೇರೆ ವಿಶ್ಲೇಷಣೆ ಕೊಟ್ಟಿದ್ದಾರೆ. ಅದು ನನ್ನೊಳಗಿನ ಭಾವನೆ. ನಾನು ಕನ್ನಡ ನಾಡಿನ ಜನರ ಪರವಾಗಿ ಮುತ್ತು ನೀಡಿದ್ದೇನೆ. ಮುತ್ತುರಾಜನಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡಿರುವುದು ಎಷ್ಟು ಸಂತೋಷವಾಗಿದೆಯೋ ಅಷ್ಟೇ ಅವರಿಗೆ ನಾನು ಮುತ್ತನಿಟ್ಟಿರುವುದೂ ಸಂತಸ ತಂದಿದೆ. ಚಂದ್ರ ಇರೋವರೆಗೆ ಪುನೀತ್‌ ಕರ್ನಾಟಕ ರತ್ನರಾಗಿ ಇರ್ತಾರೆ ಎಂದಿದ್ದಾರೆ ಸಿಎಂ ಬಸವರಾಜ ಬೊಮ್ಮಾಯಿ.

Related Posts

error: Content is protected !!