Categories
ಸಿನಿ ಸುದ್ದಿ

ಮಾಸ್ಕೋ ಫಿಲ್ಮ್ ಫೆಸ್ಟಿವಲ್ ನಲ್ಲಿ ಕನಿ‌ ಕುಸ್ರುತಿ‌ ಅತ್ಯುತ್ತಮ ನಟಿ‌

* ಮಾಸ್ಕೋ ಪ್ರಶಸ್ತಿ ಗೆದ್ದ ಮೊದಲ‌ ಮಲಯಾಳಂ ಚಿತ್ರ

* ಭಾರತದ ಮೊ‌ದಲ‌ ದಲಿತ ನಟಿ‌ ಪಿ.ಕೆ. ರೋಸಿಗೆ ಪ್ರಶಸ್ತಿ ಅರ್ಪಿಸಿದ ಕನಿ‌ಕುಸ್ರುತಿ

* ಚಿತ್ರರಂಗದಲ್ಲೀಗ ಸಾಮಾರ್ಥ್ಯಕ್ಕೆ ತಕ್ಕಂತಹ ಪಾತ್ರ ಸಿಗುತ್ತಿಲ್ಲ ಎನ್ನುವ ಬೇಸರ ಹೊರಹಾಕಿದ ನಟಿ

* ಜಾತಿ, ಧರ್ಮ, ವರ್ಗ, ಮೈಬಣ್ಣದ ಹೊರತಾಗಿ ಎಲ್ಲರಿಗೂ ಸಮಾನ ಅವಕಾಶಗಳು ಸಿಗಲಿ – ಕನಿ‌ಮಾತು

* ಖದೀಜಾ” ಎಂಬ ಪಾತ್ರವನ್ನು ಬರೆಯುವಾಗ ನಾನು ಕೇವಲ ಕನಿ ಕುಸ್ರುತಿ ಅವರನ್ನೇ ಗಮನದಲ್ಲಿಟ್ಟು ಕೊಂಡಿದ್ದೆ- ನಿರ್ದೇಶಕ ಸಜಿನ್ ಬಾಬು

ಬರಹ- ರಮೇಶ್ ಹೆಚ್.ಕೆ. ಶಿವಮೊಗ್ಗ
…………………………………………………….

ಸಜಿನ್ ಬಾಬು ಅವರ “ಬಿರಿಯಾನಿ” ಚಿತ್ರದಲ್ಲಿನ ತಮ್ಮ ಅತ್ಯುತ್ತಮ ನಟನೆಗಾಗಿ ನಟಿ ಕನಿ ಕಸ್ರುತಿ , 42 ನೇ ಮಾಸ್ಕೋ ಅಂತರಾಷ್ಟ್ರೀಯ ಸಿನಿಮೋತ್ಸವದಲ್ಲಿ ಅತ್ಯುತ್ತಮ ನಟಿ ‌ಪ್ರಶಸ್ತಿಗೆ ಭಾಜನರಾಗಿದ್ದಾರೆ. ಹಾಗೆನೇ, ಮಾಸ್ಕೋ ಸಿನಿಮೋತ್ಸವದಲ್ಲಿ ಪ್ರಶಸ್ತಿ‌ ಗೆದ್ದ ಮೊದಲ ಮಲೆಯಾಳಂ ಚಿತ್ರ ಎಂಬ ಹೆಗ್ಗಳಿಕೆ ಬಿರಿಯಾನಿ ಚಿತ್ರದ ಪಾಲಾಗಿದೆ.

ಮೊನ್ನೆ ಮೊನ್ನೆಯಷ್ಟೇ ಮ್ಯಾಂಡ್ರಿಡ್ ಫಿಲ್ಮ್ ಫೆಸ್ಟಿವಲ್ ಪ್ರಶಸ್ತಿ ಗೆ ಪಾತ್ರವಾಗಿದ್ದ ನಟಿ‌ ಕನಿಗೆ ಈಗ ಮಾಸ್ಕೋ‌ ಫೆಸ್ಟಿವಲ್ ಪ್ರಶಸ್ತಿ ಸಂದಿದೆ. ಹಾಗೆಯೇ ಈ ಪ್ರಶಸ್ತಿಯನ್ನು ಮಲಯಾಳಂ ಚಿತ್ರರಂಗದ ಮೊದಲ‌ ನಟಿ ಹಾಗೂ ಭಾರತೀಯ ಚಿತ್ರರಂಗದ ಮೊದಲ ದಲಿತ ನಟಿ ಪಿ.ಕೆ. ರೋಸಿ ಅವರಿಗೆ ಅರ್ಪಿಸಿರುವುದು ವಿಶೇಷ.
ಪ್ರಶಸ್ತಿಯ ಬಗ್ಗೆ ಪ್ರತಿಕ್ರಿಯಿಸಿರುವ ನಟಿ ಕನಿ ‌ಕುಸ್ರುತಿ “ ಈ ಪ್ರಶಸ್ತಿಯನ್ನು ನಾನು ಮಲಯಾಳಂನ ಮೊದಲ ನಾಯಕಿ ನಟಿ, ಹಾಗೂ ಭಾರತದ ಸಿನಿಮಾ ರಂಗದ ಮೊದಲ ದಲಿತ ನಟಿಯಾದ ಪಿಕೆ ರೋಸಿ, ಅವರಿಗೆ ಅರ್ಪಿಸುತ್ತೇನೆ. ಇತ್ತೀಚೆಗೆ ಚಿತ್ರರಂಗದಲ್ಲಿ ಬಹುತೇಕ ನಟ ನಟಿಯರಿಗೆ ಅವರ ಸಾಮರ್ಥ್ಯಕ್ಕೆ ಅನುಗುಣವಾದ ಪಾತ್ರ ದೊರೆಯದೇ ಇರುವಂತಹ ಪರಿಸ್ಥಿತಿಯಿದ್ದು ಸಂಪನ್ಮೂಲಗಳ ಕಾರಣಕ್ಕೇ ಅವರಿಗೆ ಸಿಗಬೇಕಾದ ಪಾತ್ರಗಳು ದೊರೆಯದಂತಾಗಿದೆ. ಹೀಗಾಗಿ ಈ ಪ್ರಶಸ್ತಿಯನ್ನು ಅಂತಹ ಪ್ರತಿಭಾನ್ವಿತ ನಟ ನಟಿಯರೊಂದಿಗೆ ಹಂಚಿಕೊಳ್ಳಲು ಬಯಸುತ್ತೇನೆ. ಈ ಮೂಲಕ ನಾನು ಎಲ್ಲಾ ನಟ ನಟಿಯರಿಗೆ ಜಾತಿ, ಧರ್ಮ, ವರ್ಗ, ಮೈಬಣ್ಣದ ಹೊರತಾಗಿ ಎಲ್ಲರಿಗೂ ಸಮಾನ ಅವಕಾಶಗಳು ಸಿಗಲಿ ಎಂದು ನಾನು ಆಶಿಸುತ್ತೇನೆ” ಎಂದು‌ ನಟಿ ಕನಿ ಪ್ರತಿಕ್ರಿಯೆ ನೀಡಿದ್ದಾರೆ.

“ಬಿರಿಯಾನಿ” ಸಿನಿಮಾವು ಖದೀಜಾ ಎಂಬ ಬಡ ಮುಸ್ಲಿಂ ಮಹಿಳೆಯೊಬ್ಬಳ ಬದುಕಿನ ಪಯಣದ ಕುರಿತಾಗಿದ್ದು ಆಕೆ ಜಾತಿ ಧರ್ಮಾಧಾರಿತವಾಗಿ ರಚನೆಗೊಂಡಿರುವ ಸಮಾಜದಲ್ಲಿ ಇರುವಂತಹ ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ಜೀವಿಸುವ ಚಿತ್ರಣವಿದೆ. ಈ ಚಿತ್ರವು ಸಂಪೂರ್ಣವಾಗಿ ಮಹಿಳೆಯ ದೃಷ್ಟಿಕೋನದಲ್ಲಿ ಇದ್ದು ಯಾವ ಕಾರಣಕ್ಕಾಗಿ ಖದೀಜಾ ಈ ಸಾಮಾಜಿಕ ಹಾಗೂ ಧಾರ್ಮಿಕ ನಿಯಮಗಳ ವಿರುದ್ಧ ಬಂಡೇಳುತ್ತಾಳೆ ಎಂಬುದರ ಕುರಿತಾಗಿದೆ.

ಈ ಸಿನಿಮಾವು ಈ ವರ್ಷ ರೋಮ್ ನಲ್ಲಿ ನಡೆದ ಏಷಿಯಾಟಿಕ್ ಸಿನಿಮೋತ್ಸವದಲ್ಲಿ ಪ್ರದರ್ಶನ ಕಂಡಿದ್ದು ನೆಟ್ ಪ್ಯಾಕ್ ಅತ್ಯುತ್ತಮ ಚಿತ್ರ ಪ್ರಶಸ್ತಿಯನ್ನು ಗಳಿಸಿದೆ.
ಇದಕ್ಕಿಂತ ಮುಂಚೆ ಕನಿ ಅವರು ಮ್ಯಾಡ್ರೀಡ್ ನಲ್ಲಿ ನಡೆದ ಸಿನಿಮೋತ್ಸವದಲ್ಲಿ ಅತ್ಯುತ್ತಮ ನಟಿ ಪ್ರಶಸ್ತಿಗೆ ಪಾತ್ರವಾಗಿದ್ದರು. ನ್ಯೂಯಾರ್ಕ್ ನಲ್ಲಿ ನಡೆದ ಟ್ರುಬೆಕಾ ಸಿನಿಮೋತ್ಸವದಲ್ಲೂ ಅತ್ಯುತ್ತಮ ನಟಿ ಪ್ರಶಸ್ತಿಗೆ ನಾಮ ನಿರ್ದೇಶನಗೊಂಡಿದ್ದರು. ಇನ್ನು ಚಿತ್ರದ ನಿರ್ದೇಶಕ ಸಜಿನ್ ಬಾಬು ಸಂದರ್ಶನವೊಂದೆಲ್ಲಿ ಹೇಳುವಂತೆ “ಇಂತಹ ಪ್ರಭಾವಿ ಚಿತ್ರಕ್ಕೆ “ಖದೀಜಾ” ಎಂಬ ಪಾತ್ರವನ್ನು ಬರೆಯುವಾಗ ನಾನು ಕೇವಲ ಕನಿ ಕುಸ್ರುತಿ ಅವರನ್ನು ಗಮನದಲ್ಲಿ ಇಟ್ಟುಕೊಂಡೇ ಬರೆದಿದ್ದೆ, ಎಂದು ಹೇಳಿಕೊಂಡಿದ್ದಾರೆ


ಕರೋನಾ ಕಾರಣದಿಂದಾಗಿ ಕನಿ ಅವರಿಗೆ ಖುದ್ಧಾಗಿ ತೆರಳಿ ಪ್ರಶಸ್ತಿಯನ್ನು ಸ್ವೀಕರಿಸಲು ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ಪ್ರತಿಕ್ರಿಯಿಸಿರುವ ಕನಿ ಅವರು “ನಾನು ಮನೆಯಲ್ಲೇ ಹಸಿರು ವಾತಾವರಣದ ನಡುವೆ ಇರಲು ಇಷ್ಟ ಪಡುತ್ತೇನೆ, ನನಗೆ ಪ್ರಯಾಣ ಎಂದರೆ ಆಗಿ ಬರುವುದಿಲ್ಲ” ಎಂದಷ್ಟೇ ಹೇಳಿ ನಗುತ್ತಾರೆ.” ಇನ್ನು ಈ ವರ್ಷ “Tryst with Destiny, ಮತ್ತು OK Computer ಎಂಬ ಇವರ ಎರಡು ಚಿತ್ರಗಳು ಬಿಡುಗಡೆಗೊಳ್ಳಲಿದ್ದು ಈ ಚಿತ್ರಗಳನ್ನು ಕ್ರಮವಾಗಿ ಪೂಜಾ ಶೆಟ್ಟಿ, ಹಾಗೂ ನೀಲ್ ಪಾಗೇದಾರ್ ಅವರು ನಿರ್ದೇಶಿಸಿದ್ದಾರೆ. ಆನಂದ್ ಗಾಂಧಿ ನಿರ್ಮಾಣ ಮಾಡಿದ್ದಾರಂತೆ.

Categories
ಸಿನಿ ಸುದ್ದಿ

ಚಿತ್ರರಂಗಕ್ಕೆ‌ ಮತ್ತೊಬ್ಬಳು ಬೇಬಿ ಡಾಲ್‌ ಎಂಟ್ರಿ !

ಪುಟಾಣಿ ಸಿಂಗರ್ ಈಗ ಪುಟಾಣಿ‌ ನಟಿ ! ಯಾರು ಈ ಬಾಲಕಿ? ಈ ಸ್ಟೋರಿ ನೋಡಿ

ಭೀಮ ಸೇನ ಸೆಟ್ ನಲ್ಲಿ ನಟ ಅಚ್ಯುತ್ ಕುಮಾರ್ ಜತೆಗೆ ಆದ್ಯಾ

ಕನ್ನಡ ಸಿನಿಮಾದ‌ ಮಟ್ಟಿಗೆ ಒಂದು‌ ಕಾಲದಲ್ಲಿ‌ ಪುಟಾಣಿ ಬಾಲಕಿ ಅಂದಾಕ್ಷಣ ನೆನಪಾಗುತ್ತಿದದ್ದು ಬೇಬಿ ಶಾಮಿಲಿ. ಯಾಕಂದ್ರೆ, ಆಕೆ‌ ಆಗ ಪರದೆ ಮೇಲಿನ ಫ್ಯಾಮಿಲಿಯ ಖಾಯಂ ಮಗಳು. ಕಾಲ ಬದಲಾದಂತೆ ಶಾಮಿಲಿ ಜಾಗಕ್ಕೆ ಸಾಕಷ್ಟು ಪುಟಾಣಿಗಳು ಬಂದರು. ಆದರೆ ಬೇಬಿ ಶಾಮಿಲಿ‌ಯಷ್ಟು ಯಾರು ಸೌಂಡು ಮಾಡಲಿಲ್ಲ. ಆ ಕತೆ‌ ಬೇರೆ. ಈಗ ಶಾಮಿಲಿ‌ ಜಾಗಕ್ಕೆ‌ ಮತ್ತೊಬ್ಬಳು ಪುಟಾಣಿ ಬೇಬಿ‌ ಡಾಲ್ ಎಂಟ್ರಿ ಆಗುತ್ತಿದ್ದಾಳೆ. ಆಕೆ ಅಭಿನಯಿಸಿದ ಸಿನಿಮಾ‌ ಈ‌ ತಿಂಗಳ‌ 29ಕ್ಕೆ ಆನ್ ಲೈನ್ ಮೂಲಕ‌ ಬಿಡುಗಡೆ ಆಗುತ್ತಿದೆ. ಈ ಸಿನಿಮಾ‌‌ ಮೂಲಕ ಈ ಬೇಬಿ ಡಾಲ್ ಎಷ್ಟು ಸುದ್ದಿ ಮಾಡಬಲ್ಲರು ಎನ್ನುವುದೀಗ ಕುತೂಹಲದ ವಿಷಯ.

ಬೇಬಿ ಡಾಲ್ ಅಂದ್ರೆ‌ ಇವಳೇ‌….!!

ಅಂದ ಹಾಗೆ, ಈ ಬೇಬಿ ಡಾಲ್ ಬೇರಾರು‌ ಅಲ್ಲ, ಝೀ‌ ಕನ್ನಡದ‌ ‘ ಸರಿಗಮಪ ಲಿಟಲ್ ಚಾಂಪ್ಸ್ ‘ ಖ್ಯಾತಿಯ ಬೇಬಿ ಡಾಲ್ ಪುಟಾಣಿ ಆದ್ಯಾ. ಕಿರುತೆರೆಯಲ್ಲಿ ಸಿಂಗರ್ ಆಗಿ ಸಿಕ್ಕಾಪಟ್ಟೆ ಜನಪ್ರಿಯತೆ ಪಡೆದ ಬಾಲಕಿ ಇವಳು. ಆಕೆಯ‌ ಮುದ್ದು ಮುದ್ದಾದ ಮಾತು, ಕ್ಯೂಟ್ ಫೇಸು, ಮಧುರವಾದ ಧ್ವನಿಗೆ ಫಿದಾ ಆಗದವರೇ ಇಲ್ಲ. ಅದೇ ಜನಪ್ರಿಯತೆಯೊಂದಿಗೆ ಸಿನಿಮಾ‌ ರಂಗದಲ್ಲೋ ಈಕೆ ಮೋಡಿಬಲ್ಲಳೇ ಎನ್ನುವುದು ಕಿರುತೆರೆ ವೀಕ್ಷಕರಲ್ಲಿ ಸಹಜವಾಗಿ ಮೂಡುವ ಕ್ಯೂರಿಯಾಸಿಟಿ

ನಿರ್ಮಾಪಕ ಪುಷ್ಕರ್ ಜತೆಗೆ ಆದ್ಯಾ

ಭೀಮಸೇನ ದೊಂದಿಗೆ ತೆರೆ ಮೇಲೆ ಆದ್ಯಾ!
ಇನ್ನು, ‘ಸರಿಗಮಪ ಲಿಟಲ್ ಚಾಂಪ್ಸ್’ ರಿಯಾಲಿಟಿ ಶೋ ನಂತರ ಪುಟಾಣಿ ಆದ್ಯಾ ಅಭಿನಯಿಸಿದ ಮೊದಲ‌ ಚಿತ್ರ ‘ ಭೀಮಸೇನ ನಳ‌ಮಹಾರಾಜ’ . ಈ ಚಿತ್ರ ಅಂದುಕೊಂಡಿದ್ದಕ್ಕಿಂತ ಕೊಂಚ ತಡವಾಗಿಯೇ ತೆರೆಗೆ ಬರುತ್ತಿದೆ. ಎಲ್ಲವೂ ಸರಿಯಾಗಿಯೇ ನಡೆದಿದ್ದರೆ, ಈ ಚಿತ್ರ ತೆರೆಗೆ ಬಂದು‌ ಹಳೇ ಮಾತೇ ಆಗಿರುತ್ತಿತ್ತೇನೋ, ಆದರೆ ಕೆಲವು ತಾಂತ್ರಿಕ ಕೆಲಸಗಳ ಜತೆಗೆ‌ ಕೋರೋನಾ ಕಾರಣದಿಂದಲೂ ಈಗ ಆನ್ ಲೈನ್ ಮೂಲಕ‌ ಬಿಡುಗಡೆ ಆಗುತ್ತಿದೆ. ಚಿತ್ರ ಮಂದಿರಕ್ಕೆ ಬರುತ್ತಿಲ್ಲ ಎನ್ನುವುದನ್ನು‌ಬಿಟ್ಟರೆ ಈ ಚಿತ್ರ ಹಲವು ಕಾರಣಕ್ಕೆ ಕುತೂಹಲ ಮೂಡಿಸಿ, ಅಕ್ಟೋಬರ್ 29 ಕ್ಕೆ ಬಿಡುಗಡೆ ಆಗುತ್ತಿದೆ. ಅಮೆಜಾನ್ ಪ್ರೈಮ್ ಗೆ ದೊಡ್ಡ ಮೊತ್ತಕ್ಕೆ ಸೇಲ್ ಆಗಿದೆ ಎನ್ನುವ ಸುದ್ದಿಯೂ ಇದೆ.
ಪ್ರತಿಷ್ಟಿತ ಸಂಸ್ಥೆಯ ಚಿತ್ರ ಎನ್ನುವುದರ ಜತೆಗೆ ಕಥೆ ಇಲ್ಲಿನ ಕುತೂಹಲ ಅಂಶ‌. ಇಂತಹ ಚಿತ್ರದ ಮೂಲಕ‌ ಆದ್ಯಾ‌ಕನ್ನಡ ಚಿತ್ರರಂಗಕ್ಮೆ ಪರಿಚಯವಾಗುತ್ತಿದ್ದಾಳೆ ಎನ್ನುವುದು ಆಕೆಯ ಪೋಷಕರಲ್ಲಿ ಸಾಕಷ್ಟು ಎಕ್ಸೈಟ್ ಮೆಂಟ್ ಮೂಡಿಸಿದೆ.

ಪ್ರತಿಷ್ಟಿತ ಸಂಸ್ಥೆ ಅನ್ನೋದೆ ಕಾರಣ…
ಆದ್ಯಾಳನ್ನು ಸಿನಿಮಾ‌ರಂಗಕ್ಕೆ ಪರಿಚಯಿಸಬೇಕೆಂದು ನಾವು ಅಂದುಕೊಂಡವರೇ ಅಲ್ಲ.‌ಸರಿಗಮಪ‌‌ಲಿಟಲ್ ಚಾಂಪ್ಸ್ ಮುಗಿದ ತಕ್ಷಣ ಸಾಕಷ್ಟು ಫೋನ್ ಕಾಲ್ ಬಂದರೂ ನಾವು ಮನಸು‌ಮಾಡಿರಲಿಲ್ಲ. ಆದರೆ‌ ಒಂದಿನ ನಿರ್ಮಾಪಕ‌ ಪುಷ್ಕರ್ ಹಾಗೂ‌ನಿರ್ದೇಶಕ ಕಾರ್ತಿಕ್ ಮನೆಗೇ ಬಂದು, ‌ನಿಮ್ಮ‌ಮಗಳು‌ನಮ್ಮ ಸಿನಿಮಾದಲ್ಲಿ‌ ಅಭಿನಯಿಸಬೇಕು ಅಂತ ಪಟ್ಟು‌ಹಿಡಿದರು. ಆನಂತರ ಕತೆ ಹೇಳಿದರು. ಹಾಗಾಗಿ ಆಕೆಯನ್ನು ‌ಭೀಮಸೇನ ನಳ‌ಮಹಾರಾಜ‌ ಚಿತ್ರಕ್ಕೆ ಕಳುಹಿಸಬೇಕಾಯಿತು. ಅಲ್ಲಿಂದ
ಉಪೇಂದ್ರ ಅಭಿನಯದ ‘ಹೋಮ್ ಮಿನಿಸ್ಟರ್‌’ , ಸುದೀಪ್ ಅಭಿನಯದ ‘ಕೋಟಿಗೊಬ್ಬ 3 ‘ನಲ್ಲೂ‌ ಇದ್ದಾಳೆ. ಒಳ್ಳೆಯ‌ಸಂಸ್ಥೆಯ ಸಿನಿಮಾ, ಸ್ಟಾರ್ ಸಿನಿಮಾಗಳು ಎನ್ನುವ ಕಾರಣಕ್ಕೆ ನಾವು ಒಪ್ಪಿಕೊಂಡೆವು. ಅದು‌ಬಿಟ್ಟರೆ
ಆಕೆಯ ಶಿಕ್ಷಣಕ್ಕೆ ತೊಂದರೆವೊಡ್ಡಿ ಸಿನಿಮಾ‌ಕ್ಕೆ ಕಳುಹಿಸುವುದಕ್ಕೆ‌ನಮಗೂ‌ ಇಷ್ಟ ಇಲ್ಲ.‌ ಉಳಿದಂತೆ ಈ‌ಮೂರರಲ್ಲಿ ಈಗ ‘ಭೀಮಸೇನ‌ ನಳ ಮಹಾರಾಜ ‘ ಮೊದಲ ಸಿನಿಮಾವಾಗಿ ತೆರೆಗೆ ಬರುತ್ತಿದೆ.‌ಆಕೆಯನ್ನು‌ಜನ‌ ಹೇಗೆ ಸ್ವೀಕರಸುತ್ತಾರೆನ್ನುವ ಕುತೂಹಲ , ಒಂಥರ ಭಯ ನಮಗೂ‌ಇದೆ ‘ ಎನ್ನುತ್ತಾರೆ ಬೇಬಿ‌ ಆದ್ಯಾಳ ತಾಯಿ‌ ಅಶ್ವಿನಿ ಉಡುಪಿ.

ಭೀಮಸೇನನ ಮಗಳು…
ಭೀಮ‌ಸೇನ‌ ನಳ‌ಮಹಾರಾಜ‌ ಶೀರ್ಷಿಕೆ ಯೇ ಹೇಳುವ ಹಾಗೆ ಇದು ನಳ ಪಾಕದ ಸಿನಿಮಾ.‌ಇಲ್ಲಿ ಅರವಿಂದ್ ಅಯ್ಯರ್, ಪ್ರಿಯಾಂಕಾ ತಿಮ್ಮೇಶ್, ಆರೋಹಿ ನಾರಾಯಣ್ ಸೇರಿ ಹಲವರ ತಾರಗಣ ಈ ಚಿತ್ರಕ್ಕಿದೆ. ಇಲ್ಲಿ ಆದ್ಯಾ ನಾಯಕ‌ ಅರವಿಂದ್ ಅಯ್ಯರ್ ಮಗಳು. ಉಳಿದಂತೆ‌ಇಬ್ಬರು‌ನಾಯಕಿಯರಲ್ಲಿ ಆಕೆಯ ತಾಯಿ ಯಾರು ಎನ್ನುವುದು ಸಸ್ಪೆನ್ಸ್ . ಕತೆಯಲ್ಲಿ ಹಾಗೊಂದು‌ ಟರ್ನ್ ಆ್ಯಂಡ್ ಟ್ವಿಸ್ಟ್ ಇರುವ ಪಾತ್ರ ಆದ್ಯಾ ಳದು. ಪಾತ್ರ‌ತುಂಬಾ ಚೆನ್ನಾಗಿದೆ. ಚಿತ್ರವೂ ಸೊಗಸಾಗಿ ಬಂದಿದೆ. ಸರಿ ಸುಮಾರು 30 ದಿನ ಚಿತ್ರೀಕರಣಕ್ಕೆ ಹೋಗಿದ್ದೆವು. ಕೊಡಚಾದ್ರಿ, ಬೆಂಗಳೂರಿನಲ್ಲಿ ಚಿತ್ರೀಕರಣ ಇತ್ತು.‌ ಚಿತ್ರ ತಂಡ ನಮ್ಮನ್ನು ಒಂದು ಫ್ಯಾಮಿಲಿ‌ಮೆಂಬರ್ ಥರ ಟ್ರಿಟ್ ಮಾಡಿತು ಎನ್ನುವ ಮೂಲಕ ಮಗಳ‌ಸಿನಿಮಾ‌ಬಗ್ಗೆ ಅತೀವ ಭರವಸೆ ಹೊರ ಹಾಕುತ್ತಾರೆ ಅಶ್ಬಿನಿ. ಅವರು ಬಯಸಿದಂತೆ ಪುಟಾಣಿ ಆದ್ಯಾ ‘ಸಿನಿಲಹರಿ‌’ ಕಡೆ ಯಿಂದಲೂ‌ ಬೆಸ್ಟ್ ವಿಶಷ್.

ಹೋಮ್ ಮಿನಿಸ್ಟರ್ ಚಿತ್ರದಲ್ಲಿ ಆದ್ಯಾ
Categories
ಸಿನಿ ಸುದ್ದಿ

ದರ್ಶನ್ ಪಾಲಿಗೆ ಕಭಿ ‌ಖುಷಿ , ಕಭಿ ಗಮ್ !

ಡಿಸೆಂಬರ್ ನಲ್ಲಿ ರಾಬರ್ಟ್, ಡಿ.ಬಾಸ್ ಅಭಿಮಾನಿಗಳಿಗೆ  ಭರ್ಜರಿ ಹಬ್ಬ 


ದರ್ಶನ್ ಅವರಿಗೂ ಬೇಮೊದಲುಸರ ಇದೆ‌. ಹಾಗಂತ ಅದೊಂದು ವಿಚಾರಕ್ಕೆ ಖುಷಿಯೂ ಇದೆ. ಅದೇನು ವಿಚಾರ ?ಈ ಸ್ಟೋರಿ ನೋಡಿ.

ಕನ್ನಡದ ಬಹುತೇಕ ಸ್ಟಾರ್ ಗಳು ಇಂದು ಬೇಸರದಲ್ಲಿದ್ದಾರೆ. ಅಂತಹದೇ ಒಂದು ಬೇಸರ ದರ್ಶನ್ ಅವರಿಗೂ ಇದೆ. 2020 ರ ಈ ದಿನದವರೆಗೂ  ಅವರ ಅಭಿನಯದ ಒಂದೇ ಒಂದು‌ ಸಿನಿಮಾ ಅಭಿಮಾನಿಗಳ ಮುಂದೆ ಬರದೇ ಹೊಯಿತ್ತಲ್ಲ ಎನ್ನುವುದೇ ಅದಕ್ಕೆ ಕಾರಣ. ಯಾಕಂದ್ರೆ, ದರ್ಶನ್ ಅವರ ಸಿನಿ‌ಜರ್ನಿಯ ಇಷ್ಟು ವರ್ಷಗಳಲ್ಲಿ ಯಾವತ್ತಿಗೂ ಹೀಗೆ ಆಗಿರಲಿಲ್ಲ. 2014 ರಲ್ಲಿ ಒಮ್ಮೆ ಹೀಗಾಗಿತ್ತಾದರೂ, ಆಗೆಲ್ಲ ಅವರು ಚಿತ್ರೀಕರಣದಲ್ಲಿ ಬ್ಯುಸಿಯಿದ್ದರು. ಶೂಟಿಂಗ್ ಅಂತಲೋ, ಟೀಸರ್ ಲಾಂಚ್ ಅಂತಲೋ ಸದಾ ಒಂದಲ್ಲೊಂದು‌ ಕಾರಣಕ್ಕೆ ಸುದ್ದಿಯಲ್ಲಿದ್ದರು. ಹಾಗಾಗಿ ಆ ವರ್ಷ ಅವರು ತೆರೆ ಮೇಲೆ ಕಾಣಿಸಿಕೊಳ್ಳದಿದ್ದರೂ, ಅಭಿಮಾನಿಗಳಿಗೆ ಬೇಸರ ಎನಿಸಲಿಲ್ಲ. ಆದರೂ ಬೇಸರ ದೂರವಾಗುವ ಕಾಲ ಸನಿಹವಾಗಿದೆ‌.

 

 

ಎಲ್ಲದಕ್ಕೂ ‘ಅದೇ ‘ ಕಾರಣ !

ಅದು ಬಿಟ್ಟರೆ ಪ್ರತಿ ವರ್ಷ ಒಂದೋ ಅಥವಾ ಅದಕ್ಕಿಂತ ಹೆಚ್ಚೋ ಸಿನಿಮಾಗಳ ಮೂಲಕ ಅವರು ತೆರೆ ಮೇಲೆ‌ ಬಂದು‌ ಆಭಿಮಾನಿಗಳನ್ನು‌ ರಂಜಿಸುತ್ತಿದ್ದರು. ಸೂಪರ್ ಹಿಟ್ ಸಿನಿಮಾ‌ ಕೊಟ್ಟು ಬಾಕ್ಸ್ ಆಫೀಸ್ ಸುಲ್ತಾನ್ ಎನ್ನುವುದನ್ನು ಸಾಬೀತು ಮಾಡುತ್ತಿದ್ದರು. ಅವರ ಅಭಿಮಾನಿಗಳೂ ಖುಷಿ ಪಡುತ್ತಿದ್ದರು. ಅವರನ್ನು ಇಷ್ಟ ಪಡುತ್ತಿದ್ದವರಿಗೆ ಅದೇ ಸಮಾಧಾನ ಇರುತ್ತಿತ್ತು. ಆದರೆ ಈ ವರ್ಷ ಈ ತನಕ ಹಾಗೆ ಆಗಿಲ್ಲ. ಕೊರೋನಾ ಬಂದು‌ ಎಲ್ಲವನ್ನು ತೆಲೆ ಕೆಳಗು ಮಾಡಿತು. ಬಹು ಬೇಡಿಕೆಯ ನಟ ದರ್ಶನ್ ಸಿನಿಮಾ ಕೂಡ ಈ ವರ್ಷದಲ್ಲಿ ತೆರೆಗೆ ಬರದಂತಾಯಿತು.ಚಿತ್ರೀಕರಣದಲ್ಲಿದ್ದ ‘ರಾಜಾವೀರ ಮದಕರಿ ನಾಯಕ ‘ ಚಿತ್ರಕ್ಕೂ ಅದು ಅಡ್ಡಿಯಾಯಿತು. ಹೊಸ ಸಿನಿಮಾದ ಆರಂಭಕ್ಕೂ‌ಅಡಚಣೆಯಾಗಿದ್ದು ನಿಮಗೂ ಗೊತ್ತು. ಇದು ದರ್ಶನ್ ಅವರಿಗೆ ಮಾತ್ರವಲ್ಲ ಅವರ ಅಭಿಮಾನಿಗಳಿಗೂ ಬೇಸರವೇ ಹೌದು‌.

ಕೊರೋನಾ ಬರದಿದ್ದರೆ..‌‌

ಒಂದು ವೇಳೆ ಕೊರೋನಾ ಬರದಿದ್ದರೆ, ಎಲ್ಲವೂ ಅಂದುಕೊಂಡಂತೆಯೇ ಆಗುತ್ತಿದ್ದವು. ದರ್ಶನ್ ಅಭಿನಯದ ಬಹು ನಿರೀಕ್ಷಿತ ಚಿತ್ರ ‘ರಾಬರ್ಟ್’ ಈ ವರ್ಷದ ಆರಂಭದಲ್ಲೇ ತೆರೆಗೆ ಬರುತ್ತಿತ್ತು. ವರ್ಷದ ಆರಂಭದಲ್ಲೆ ಈ‌ ಚಿತ್ರದ ಬಿಡುಗಡೆಯ ಸುದ್ದಿ ಹರಡಿತ್ತು.
ಕೊನೆಗೆ ಫೆಬ್ರವರಿ ಗೆ ಬರುತ್ತೆ ಅಂತಾಯಿತು‌. ‘ ರಾಮನವಮಿ’ ಗೆ ಖಚಿತ ಅಂತಲೂ ಹೇಳಲಾಯಿತು. ಅದಕ್ಕೆ ಪೂರಕವಾಗಿಯೇ ಚಿತ್ರ ತಂಡ ಸಿದ್ದತೆಯೂ ನಡೆಸಿತು.ಅಲ್ಲಿಂದ ಮಾರ್ಚ್ ತಿಂಗಳಿಗೆ ಕನಫರ್ಮ್ ಆಗಿತ್ತು. ಮತ್ತೊಂದೆಡೆ ರಾಕ್ ಲೈನ್ ವೆಂಕಟೇಶ್ ನಿರ್ಮಾಣ ಹಾಗೂ ರಾಜೇಂದ್ರ ಸಿಂಗ್ ಬಾಬು ನಿರ್ದೇಶನದ ರಾಜವೀರ ಮದಕರಿ ನಾಯಕ ಚಿತ್ರಕ್ಕೂ ಚಿತ್ರೀಕರಣ ಶುರುವಾಗಿತ್ತು. ಚಿತ್ರ ತಂಡದ ದುರ್ಗ ಭೇಟಿ ದರ್ಶನ್ ಅಭಿಮಾನಿಗಳಲ್ಲಿ ದೊಡ್ಡ ಕ್ರೇಜ್ ಹುಟ್ಟಿಸಿತ್ತು. ಅದರ ಜತೆಗಯೇ ನಿರ್ಮಾಪಕ ಉಮಾಪತಿ ಹಾಗೂ ನಿರ್ದೇಶಕ ತರುಣ್ ಸುದೀರ್ ಕಾಂಬಿನೇಷನ್ ಮೂಲಕವೇ ದರ್ಶನ್ ಅಭಿನಯದ‌‌ ಮತ್ತೊಂದು ಚಿತ್ರಕ್ಕೂ ತಯಾರಿ‌ ನಡೆದಿತ್ತು. ಎಲ್ಲವೂ ಇನ್ನೇನು ಕೊರೋನಾ ಬಂದು ಎಲ್ಲವನ್ನು ತಲೆ ಕೆಳಗು ಮಾಡಿತು.

 

ಅದೊಂದು ಬೇಸರ ದರ್ಶನ್ ಅವರಿಗೂ ಇದೆ…

ಎಲ್ಲವೂ ಅಂದುಕೊಂಡಂತಾಗಿದ್ದರೆ ಈ ವರ್ಷದಲ್ಲಿ ದರ್ಶನ್ ಅಭಿನಯದ ‘ರಾಬರ್ಟ್’ ತೆರೆಗೆ ಬರಲಿತ್ತು. ವರ್ಷದ ಆಭದಿಂದಲೂ‌ ದರ್ಶನ್ ಅಭಿಮಾನಿಗಳು ಅದರ ಆಗಮನಕ್ಕೆ ತುದಿಗಾಲ ಮೇಲೆ ನಿಂತಿದ್ದರು. ದರ್ಶನ್ ಅಭಿನಯದ ಚಿತ್ರ ಎನ್ನುವುದಕ್ಕಷ್ಟೇ ಅಲ್ಲ,ಹಲವು ಕಾರಣಕ್ಕೆ ಈ ಚಿತ್ರ ದೊಡ್ಡ ಸದ್ದು ಮಾಡಿತ್ತು. ಚಿತ್ರದ ಪೋಸ್ಟರ್ ಗಳೆಲ್ಲವೂ ವೈರಲ್ ಆಗಿದ್ದವು. ಹಾಗೆಯೇ ಚಿತ್ರದ ದೊಡ್ಡ ತಾರಾಗಣವೂ ಕುತೂಹಲ ಮೂಡಿಸಿತ್ತು. ಕೊನೆ ಪಕ್ಷ ಮಾರ್ಚ್ ತಿಂಗಳಲ್ಲಾದರೂ ಕಣ್ತುಂಬಿ ಕೊಳ್ಳಬಹುದೆನ್ನುವ ಅಭಿಮಾನಿಗಳ‌‌ನಿರೀಕ್ಷೆ ಹುಸಿಯಾಗಿದ್ದ ಕೊರೋನಾ ಕಾರಣಕ್ಕೆ‌ . ಅಂದು‌ ಹುಸಿಯಾದ ನಿರೀಕ್ಷೆ ಈಗಲೂ ಕೈ ಗೂಡುತ್ತಿಲ್ಲ. ಈ ಇನ್ನೇನು ಅಕ್ಟೋಬರ್‌ ಕಳೆದು ನವೆಂಬರ್ ಬಂದರೂ ಚಿತ್ರ ಮಂದಿರಗಳು ಶುರುವಾಗುವುದು ಡೌಟು. ಚಿತ್ರ ಮಂದಿರಗಳು ತೆರೆದರೂ ಆಡಿಯನ್ಸ್ ಬರುವುದು ಕಷ್ಟ. ಅದೆಲ್ಲ ಕಾರಣಕ್ಕೆ ಈ ವರ್ಷದ ಮಟ್ಟಿಗೆ ಅಭಿಮಾನಿಗಳ ಪಾಲಿಗೆ ದರ್ಶನ್ ಅಭಿನಯದ ಸಿನಿಮಾ‌ತೆರೆ ಮೇಲೆ ಕಾಣಿಸಿಕೊಳ್ಳುವ ಬಗ್ಗೆ ಖಚಿತತೆ ಇಲ್ಲ. ಅದೊಂದು ಬೇಸರ ದರ್ಶನ್ ಅವರಿಗೂ ಇದೆ.

ಮತ್ತೊಂದೆಡೆ ಖುಷಿಯೂ ಇದೆ..
ಈ ವರ್ಷದ ಈ ದಿನದವರೆಗೂ ಸಿನಿಮಾ ಬರಲಿಲ್ಲ ಎನ್ನುವ ನೋವು ದರ್ಶನ್ ಅವರಿಗಿದ್ದರೂ, ಮತ್ತೊಂದೆಡೆ‌ ಅವರಿಗೆ ಖುಷಿಯೂ ಇದೆ. ಹಾಗಂತ ಅವರೇ ಹೇಳಿದ್ದಾರೆ. ‘ ಇಡೀ ಜಗತ್ತಿಗೇ ಕೊರೋನಾ ಬಂದಿದೆ. ಯಾರೇನು‌ಮಾಡುವುದಕ್ಕೆ ಆಗೋದಿಲ್ಲ. ಎಲ್ಲರೂ ಜೀವ ಉಳಿಸಿಕೊಳ್ಳುವುಸಕ್ಕಾಗಿಯೇ ಹೋರಾಡಬೇಕಾದ ಸಂದರ್ಭದಲ್ಲಿ ನನ್ನ ಸಿನಿಮಾ‌ಬಿಡುಗಡೆ ಆಗಲಿಲ್ಲ ಬೇಸರ ಯಾಕೆ ಆಗಬೇಕು. ಹಾಗೆ ನೋಡಿದರೆ ಈ‌ ಸಮಯದಲ್ಲಿ ಕೃಷಿ ಕೆಲಸದಲ್ಲಿ ಹೆಚ್ಚು ತೊಡಗಿಸಿಕೊಳ್ಳುವುದಕ್ಕೆ ಸಾಧ್ಯವಾಯಿತು ಎನ್ನುವ ಖುಷಿ ನನಗಿದೆ ‘ ಅಂತ ದರ್ಶನ್ ಅವರೇ ಹೇಳಿಕೊಂಡಿದ್ದರು. ಅದು ನಿಜವೂ ಹೌದು‌. ಕೊರೋನಾ ಕಾರಣಕ್ಕೆ ಆದ ಲಾಕ್ ಡೌನ್ ಸಮಯದಲ್ಲಿ ‌ದರ್ಶನ್ ಫಾರಂ ಹೌಸ್ ನಲ್ಲಿದ್ದರು. ಒಂದಷ್ಟು ದಿನ ವ್ಯವಸಾಯ ಅಂತ ಬ್ಯುಸಿಯಾಗಿದ್ದರು. ಕುದುರೆ ಸಾಕಾಣೆ, ಹಸುಗಳ ಆರೈಕೆ ಅಂತ‌ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದರು. ಲಾಕ್ ಡೌನ್ ತೆರೆವಾದ ನಂತರ ತಮ್ಮ‌ನೆಚ್ಚಿನ ಪೋಟೋ ಗ್ರಪಿಗಾಗಿ ಭದ್ರ ಅಭಯಾರಣ್ಯ, ಡಾರ್ಜಿಲಿಂಗ್ ಕಾಡು ಸುತ್ತಿದರು. ಅಲ್ಲಿಂದ ಬಂದು ಕುರಿ‌ಖರೀದಿ, ಎಮ್ಮೆ ಖರೀದಿ ಅಂತ ಉತ್ತರ ಕರ್ನಾಟಕ ಪ್ರವಾಸ ಮಾಡಿದರು. ಇದೆಲ್ಲವೂ ಅವರ ಖುಷಿಯ ಕಾರ್ಯಕ್ರಮ ಗಳು. ಕೊರೋನಾ‌ ಕಾರಣಕ್ಕೆ‌ಅವರ ಸಿನಿಮಾ‌ ಬಂದಿಲ್ಲ‌ಎನ್ನುವ ಅಭಿಮಾನಿಗಳಿಗಿದ್ದರೂ , ಕೃಷಿ ಕಡೆ ಗಮನ ಹರಿಸಲು ಒಂದಷ್ಟು ಸಮಯ ಸಿಕ್ಕಿತ್ತೇನು ಖುಷಿ ದರ್ಶನ್ ಅವರಿಗಿದೆ. ಆದರೆ ಸಿನಿಮಾ ಅವರ ಮುಖ್ಯ ಕ್ಷೇತ್ರ. ಅದಷ್ಟು ಬೇಗ ಅದು ಶುರುವಾಗಬೇಕೆನ್ನುವ ಕಾತರ ಅವರಲ್ಲೂ ಇದೆ.

Categories
ಸಿನಿ ಸುದ್ದಿ

ಜಗ್ಗೇಶ್ ಅಂದ್ರೆ ನವರಸಗಳ‌ ಕಲಾಕಾರ ಮನಸ್ಸು ಪರಿವರ್ತಿಸುವ ಮಾತುಗಾರ…!

ನವರಸ ನಾಯಕ ಜಗ್ಗೇಶ್ ಕನ್ನಡದ ಅಪರೂಪದ ನಟ.‌ ನೂರಾರು ಸಿನಿಮಾ‌, ಹತ್ತಾರು ಗೆಟಪ್, ವಿಭಿನ್ನ ಪಾತ್ರಗಳ ಮೂಲಕ ಕನ್ನಡಿಗರನ್ನು ಭರಪೂರ ರಂಜಿಸಿದ ಪಕ್ಕಾ ದೇಸಿ ಪ್ರತಿಭೆ. ಅದು‌ ಬಿಟ್ಟರೆ, ನಟನೆಯ ಆಚೆ ಈಗವರು ಮನಸ್ಸು ಪರಿವರ್ತಿಸೋ ಮಾತುಗಾರ. ಅವರ ಮಾತು ಬರೀ‌ ಮಾತಲ್ಲ.‌‌ ಅವು ವಾಸ್ತವ ಬದುಕಿನ ನೀತಿ‌ಪಾ‌ಠ.‌ ಒಂಥರ ಬೋಧನೆ. ಇದು ಅವರ ಇನ್ನೊಂದು ಅವತಾರ. ಅದಕ್ಕೆ ವೇದಿಕೆ ಆಗಿದೆ ‘ ಕಾಮಿಡಿ ಕಿಲಾಡಿಗಳು‌ ‘ ಹೆಸರಿನ ಒಂದು‌ ರಿಯಾಲಿಟಿ ಶೋ.

ಅವು ಬರೀ‌ ಮಾತಲ್ಲ…

 

ಅಲ್ಲಿ ಅವರು ಮಾತನಾಡುತ್ತಾರಂದ್ರೆ , ಕೇಳ್ಬೇಕು‌ ನೀವು. ಯಾಕಂದ್ರೆ, ಆ ಮಾತುಗಳೇ ಹಾಗೆ. ಅವು ಮೌಲ್ಯಯುತ ಬದುಕಿನ‌‌ ಅಣಿ‌ ಮುತ್ತು. ಮೌಲ್ಯಗಳೇ ಕಳೆದು ಹೋಗುತ್ತಿರುವ ಈ ಸಮಾಜಕ್ಕೆ ಅವರ ಪ್ರತಿ ಮಾತು , ಮನೆ‌ ಮದ್ದು‌ ಇದ್ದಂತೆ. ಸುತ್ತಲ‌ ಸಮಾಜದ ಆಗು- ಹೋಗು, ಮಕ್ಕಳಿಗೆ ತಂದೆ- ತಾಯಿ ಮೇಲಿರಬೇಕಾದ ಗೌರವ, ಅವರ ಲಾಲನೆ-ಪಾಲನೆ, ದೇವರ ಮೇಲಿನ ನಂಬಿಕೆ, ಸಿನಿಮಾ ಬದುಕು, ಸಿನಿಮಾ‌ ಎನ್ನುವ ಕಲಾ ಸೇವೆಗೆ ಇರುವ ಶಕ್ತಿ, ಅದನ್ನು ತಾವು ಶ್ರದ್ದೆಯಿಂದ ಒಲಿಸಿಕೊಂಡ ಪರಿ, ಪ್ರಸಕ್ತ ವಿದ್ಯಮಾನ, ಸಿದ್ಧಾಂತ ಇಲ್ಲದ ರಾಜಕಾರಣ, ಅಕ್ರಮ ಸಂಪಾದನೆಯ ಕೆಡಕು, ಡ್ರಗ್ಸ್ ಮಾಫಿಯಾಕ್ಕೆ ಬಲಿಯಾಗುತ್ತಿರುವ ಯುವ ಜಗತ್ತು…ಹೀಗೆ ಎಲ್ಲದರ ಕುರಿತು ಅವರು ಮಾತನಾಡುತ್ತಾರೆ. ಸಮಾಜದ ಕೆಡುಕುಗಳ ಮೇಲೆ ತಮ್ಮದೇ ಮಾತುಗಳ ಮೂಲಕ ಬೆಳಕು ಚೆಲ್ಲಿ ವೀಕ್ಷಕರ‌‌ ಮನ ಗೆಲ್ಲುತ್ತಾ ಹೋಗುತ್ತಾರೆ ಜಗ್ಗೇಶ್.

ಇದು ರಿಯಾಲಿಟಿ ಶೋ‌ ವಿಶೇಷ..

‘ ಕಾಮಿಡಿ ಕಿಲಾಡಿಗಳು ‘ ಎನ್ನುವ ಶಿರ್ಷಿಕೆಯೇ ಹೇಳುವ ಹಾಗೆ ಇದೊಂದು‌ ಕಾಮಿಡಿ‌ ಪ್ರಧಾನ ರಿಯಾಲಿಟಿ ಶೋ. ನವ ನವೀನ ಪರಿಕಲ್ಪನೆಗಳ ಮೂಲಕ ವೀಕ್ಷರನ್ನು ರಂಜಿಸುವುದು ಈ ಕಾರ್ಯಕ್ರಮ ದ ಉದ್ದೇಶ. ಇನ್ನು‌ ಜಗ್ಗೇಶ್ ಅವರದ್ದು ಕೂಡ ಕಾಮಿಡಿಯೇ ಟ್ರಂಪ್ ಕಾರ್ಡ್. ಅವರೇ ಈ ಶೋ‌ ತೀರ್ಪುಗಾರರಾದರೆ ವೀಕ್ಷರು ಇನ್ನಷ್ಟು ನಗಬಹುದು, ಕಾರ್ಯಕ್ರಮ ಕೂಡ ಸಕ್ಸಸ್ ಆಗಬಹುದು ಎನ್ನುವುದು ಚಾನೆಲ್ ನ‌ ನಿರೀಕ್ಷೆಯೂ ಆಗಿತ್ತೇನೋ. ಆದರೆ ಅದು ಜಗ್ಗೇಶ್ ಅವರ ಎಂಟ್ರಿ‌ ಮೂಲಕ ಅಷ್ಟಕ್ಕೆ ಮಾತ್ರ ಸೀಮಿತವಾಗದೆ ಪರಿಣಾಮಕಾರಿ‌ ಮಾತುಗಳ ಮೂಲಕ ಜನ ಮನ ಗೆದಿದ್ದು ಅದರ ಇನ್ನೊಂದು ಹೆಗ್ಗಳಿಕೆ.ಅಷ್ಟೇ ಅಲ್ಲ, ಅದು ಕಿರುತೆರೆಯೊಂದರ ರಿಯಾಲಿಟಿ ಶೋ ನ ವಿಶೇಷತೆಯೂ ಹೌದು‌.

ಕಿರುತೆರೆ ವೀಕ್ಷಕರಿಗೆ ಗೊತ್ತಿರುವಂತೆ ‘ ಕಾಮಿಡಿ‌ಕಿಲಾಡಿಗಳು ‘ ರಿಯಾಲಿಟಿ‌ ಶೋ ಈಗಾಗಲೇ ಮೂರು ಸೀಸನ್ ಮುಗಿಸಿದೆ. ಈ‌ ಮೂರು ಸೀಸನ್ ಗಳಲ್ಲೂ‌‌ ನಿರ್ದೇಶಕ ಯೋಗರಾಜ್ ಭಟ್, ನಟಿ ರಕ್ಷಿತಾ ಅವರ ಜತೆಗೆ ನಟ ಜಗ್ಗೇಶ್ ಕೂಡ ಅದರ ಖಾಯಂ ಜಡ್ಜ್. ಹಾಗೆ ನೋಡಿದರೆ ಅವರೇ ಅಲ್ಲಿ ಹೈಲೈಟ್. ಶೋ‌ ವೇದಿಕೆ ಮೇಲೆ ಪ್ರತಿ‌ವಾರ ನಡೆಯುವ ಕಂಟೆಸ್ಟೆಡ್ ಗಳ ಅಭಿನಯ ಅಥವಾ ಪ್ರದರ್ಶನಕ್ಕೆ‌ ಅಯ್ಕೆ ಮಾಡಿಕೊಂಡ ಕಾನ್ಸೆಪ್ಟ್ ಬಗ್ಗೆ ಯೋಗರಾಜ್ ಭಟ್ ಅಥವಾ ರಕ್ಷಿತಾ ಏನ್ ಹೇಳ್ತಾರೆ ಎನ್ನುವುದಕ್ಕಿಂತ ಜಗ್ಗೇಶ್ ಅವರ ಮಾತುಗಳ ಬಗ್ಗೆಯೇ ದೊಡ್ಡ ಕುತೂಹಲ ಇರುತ್ತೆ.

ಮನಸ್ಸು ಪರಿವರ್ತಿಸುವ ಮಾತು..

ಅಂತಹದೊಂದು ಸಂದರ್ಭವನ್ನೆ ಬಳಸಿಕೊಂಡು ಮಾತಿಗಿಳಿಯುವ ಜಗ್ಗೇಶ್ , ಅಲ್ಲಿನ‌ ಸನ್ನಿವೇಶಕ್ಕೆ ತಕ್ಕಂತೆ ತಮ್ಮ ಅನುಭದ ಮಾತುಗಳನ್ನು ಪೋಣಿಸಿ, ಹಾಸ್ಯದ ಜತೆಗೆ ಗಂಭೀರತೆಯೂ ತುಂಬಿಕೊಳ್ಳುವಂತೆ ಮಾಡುತ್ತಾರೆ. ಅದು ವೀಕ್ಷಕರಿಗೆ ತುಂಬಾ ಹಿಡಿಸುತ್ತದೆ.’ ನಾನು ಕಾಮಿಡಿ‌ ಕಿಲಾಡಿಗಳು’ ಶೋ ನ ಖಾಯಂ ವೀಕ್ಷಕ. ಪ್ರತಿ ವಾರ ಮಿಸ್ ಮಾಡೋದಿಲ್ಲ. ಅದಕ್ಕೆ ಎರಡು ಕಾರಣ. ನಕ್ಕು ಹಗುರಾಗಬೇಕೆನ್ನುವುದರ ಜತೆಗೆ ಜಗ್ಗೇಶ್ ಅವರ ವಾಸ್ತವದ ಮಾತುಗಳನ್ನು ಕೇಳಬೇಕು. ಅವರ ಅಲ್ಲಿ ಆಡುವ ಪ್ರತಿ ಮಾತು ವೇದವಾಕ್ಯ. ನನಗೇ ಗೊತ್ತಿರುವಂತೆ ಒಂದಿಬ್ಬರು ಗೆಳೆಯರು ಜಗ್ಗೇಶ್ ಅವರ ಮಾತಿನಿಂದ ಮನಸ್ಸು ಪರಿವರ್ತನೆ ಮಾಡಿಕೊಂಡಿದ್ದಾರೆ. ವೃದ್ದಾಶ್ರಮದಲ್ಲಿದ್ದ ತಮ್ಮ ತಂದೆ- ತಾಯಿಯನ್ನು ಮನೆಗೆ ಕರೆದುಕೊಂಡು‌ ಬಂದೀಗ ಸಂತೋಷದಲ್ಲಿದ್ದಾರೆ. ಆ ಮಟ್ಟಿಗೆ ಮನಪರಿವರ್ತನೆ ಮಾಡಿಸುವ ಶಕ್ತಿ ಜಗ್ಗೇಶ್ ಅವರ ಮಾತುಗಳಲ್ಲಿರುತ್ತವೆ. ಒಂದೆಡೆ ನಗು, ಮತ್ತೊಂದೆಡೆ ಮನಪರಿವರ್ತಿಸುವ ಮಾತು ಈ ಕಾರ್ಯಕ್ರಮದಲ್ಲಿ ಸಿಗುತ್ತದೆ’ ಎನ್ನುತ್ತಾರೆ ಕಲಬುರಗಿ ನಿವಾಸಿ ಅನಿಲ್ ಕುಮಾರ್ ಕೋಟೆ‌.

ಇತಿ ಮಿತಿಯ ಪರಧಿಯಾಚೆ…

ರಿಯಾಲಿಟಿ ಶೋ ಗಳಲ್ಲಿ ಚಾನೆಲ್ ಕಡೆಯಿಂದ ತೀರ್ಪುಗಾರರಿಗೂ ಕೆಲವು ಷರತ್ತು ವಿಧಿಸುವುದು ಸಹಜ. ಅವರ ಇತಿ ಮಿತಿಗಳ ಪರಿಧಿಯೊಳಗೆಯೇ ಅವರೆಲ್ಲ ಮಾತನಾಡ ಬೇಕಾಗುತ್ತದೆ. ಅಂತಹ ಅನೇಕ ರಿಯಾಲಿಟಿ ಶೋ ಗೆ ಕನ್ನಡದ ಸ್ಟಾರ್ ಗಳೇ ತೀರ್ಪುಗಾರರಾಗಿದ್ದು ಗೊತ್ತೇ ಇದೆ. ಅವರೆಲ್ಲ ಆ ಪರಿಮಿತಿಯೊಳಗೆ ತಮ್ಮ ಅಭಿಪ್ರಾಯ ಮಂಡಿಸಿ, ಶೋ ಮುಗಿಸಿದ್ದಾರೆ.ಆದರೆ ಜಗ್ಗೇಶ್ ಹಾಗಲ್ಲ,ಅಲ್ಲಿನ ಮಿತಿಗಳನ್ನು ದಾಟಿ ತಮ್ಮ ಅನುಭವ ಸೇರಿಸಿ ಅದಕ್ಕೊಂದು ಹೊಸ ನೋಟ ಸಿಗುವಂತೆ ಮಾಡುತ್ತಾರೆ.‌ ಹಾಗೆಯೇ ಹೊಸ ಪ್ರತಿಭೆಗಳಿಗೂ ದೊಡ್ಡ ಪ್ರೋತ್ಸಾಹ ‌ನೀಡುತ್ತಾರೆ.

 

 

‘ ‌ನಟ ಜಗ್ಗೇಶ್ ಅಂದ್ರೆ ಒಂದು ಸ್ಪೂರ್ತಿಯ ವ್ಯಕ್ತಿತ್ವ. ಕಾಮಿಡಿ ಕಿಲಾಡಿಗಳ ಶೋ ಗೆ ನಾನು ‌ಆಯ್ಕೆಯಾದಾಗ ನೆಚ್ಚಿನ ನಟ ಜಗ್ಗೇಶ್ ಅವರನ್ನು ಹತ್ತಿರದಿಂದ ನೋಡುವ ಸಿಕ್ಕಿತ್ತಲ್ಲ ಅಂತಲೇ ಖುಷಿ ಪಟ್ಟಿದ್ದೆ. ಅಷ್ಟರವರೆಗೆ ಅವರನ್ನು ನಟನಾಗಿ ಕಂಡಿದ್ದ ನನಗೆ ಅಲ್ಲಿಗೆ ಹೋದಾಗ ಗೊತ್ತಾಗಿದ್ದ ಅವರೊಬ್ಬ ಗುರು ಅಂತ. ಹಳ್ಳಿಗರಂದ್ರೆ ಅವರಿಗೆ ವಿಶೇಷ ಪ್ರೀತಿ. ಶೋ‌ಮೊದಲ ದಿನವೇ ನನ್ನ ಅಭಿನಯ ಮೆಚ್ವಿಕೊಂಡು ಮಾತನಾಡಿದ್ದು ದೊಡ್ಡ ಹುಮ್ಮಸ್ಸು ತುಂಬಿತು‌. ನನ್ನ ಹಾಗೆ ಅವರು ಪ್ರತಿಭಾವಂತ ಪ್ರತಿಯೊಬ್ಬರನ್ನು ಇಷ್ಟಪಡುತ್ತಾರೆ. ಅವರು ಕೂಡ ಹಳ್ಳಿಯಿಂದ ಬಂದವರು. ಹಳ್ಳಿಯ ಜೀವನದ ಕಷ್ಟ-ಸುಖದ ಮಾತುಗಳನ್ನು ಹೇಳುತ್ತಲೇ, ನಮ್ಮನ್ನು ಮತ್ತಷ್ಟು ಪ್ರೇರೆಪಿಸುತ್ತಿದ್ದರು. ಒಂದು ಸ್ಟ್ರಿಪ್ ನಲ್ಲಿನ ನನ್ನ ಅಭಿನಯ ನೋಡಿ, ಜೂನಿಯರ್ ಶ್ರೀನಿವಾಸ ಮೂರ್ತಿ ಕಣೋ ನೀನು ಅಂತ ಬಿರುದು ಕೊಟ್ಟರು. ಅದು ನನ್ನೊಳಗಿನ‌‌ ನಟನೆಯ ಆಸೆಯನ್ನು ದುಪ್ಪಟ್ಟು ಮಾಡಿತು. ಹಾಗೆಯೇ ಕಾಮಿಡಿ‌ಕಿಲಾಡಿಗಳು ಎನ್ನುವ ಒಂದು ಕಾಮಿಡಿ‌ ಶೋ ಪ್ರತಿಯೊಬ್ಬರಿಗೂ ಇಷ್ಟವಾಗುವುದಕ್ಕೆ ಮುಖ್ಯ ಕಾರಣ ಜಗ್ಗೇಶ್ ಅವರ ಮಾತು, ಜತೆಗೆ ಸ್ಕಿಟ್ ಗಳ ಕೊನೆಯಲ್ಲಿ ಹೇಳುವ ಮೆಸೇಜ್. ನನಗೆ ತಿಳಿದಿರುವಂತೆ ಅದು ಅಲ್ಲಿ ಸೇರಿಕೊಂಡಿದ್ದೇ ಜಗ್ಗೇಶ್ ಅವರ ಕಾರಣಕ್ಕೆ. ಶೋ‌ ಯಶಸ್ಸಿನಲ್ಲಿ ಅದು ಕೂಡ ಕಾರಣ ಎಂದರೆ ತಪ್ಪಲ್ಲ’ ಎನ್ನುತ್ತಾರೆ ‘ ಕಾಮಿಡಿ ಕಿಲಾಡಿಗಳು’ ಸೀಸನ್ 3 ಕಂಟೆಸ್ಟೆಡ್ ಆಗಿದ್ದ ದಾವಣಗೆರೆ ಜಿಲ್ಲೆ ಹಿರೇಗೊಣಿಗೆರೆಯ ಚಂದ್ರ ಶೇಖರ್.

Categories
ಸಿನಿ ಸುದ್ದಿ

ಮಹಾ‌ಭಾರತ, ಮಹಾ‌ನಾಯಕ – ರೇಟಿಂಗ್ ನಲ್ಲಿ ಇವರೇ ‘ಮಹಾ’!


ಅದರಲ್ಲೂ ನಂಬರ್ ಒನ್ ಯಾರು ?
ಉತ್ತರಕ್ಕೆ ಈ ಸ್ಟೋರಿ ನೋಡಿ.

ಕೊರೋನಾ ಸೃಷ್ಟಿಸಿದ ಅವಾಂತರಗಳಲ್ಲಿ ಡಬ್ಬಿಂಗ್ ಕೂಡ ಒಂದು.‌ ಇದು ವರವೋ, ಶಾಪವೋ ಗೊತ್ತಿಲ್ಲ, ಆದರೆ, ಕನ್ನಡ ಕಿರುತೆರೆ ಮಾತ್ರ ಈಗ ಫುಲ್ ಡಬ್ಬಿಂಗ್ ಮಯ. ಹಾಗೆಯೇ ಡಬ್ಬಿಂಗ್ ಧಾರಾವಾಹಿಗಳೇ ಈಗ ಕನ್ನಡದ ಹೈಯೆಸ್ಟ್ ರೇಟಿಂಗ್ ಧಾರಾವಾಹಿಗಳು.ಕಥಾ ವಿಷಯದಾಚೆ ಕನ್ನಡ ಕಿರುತೆರೆ ಉದ್ಯಮದ ಭವಿಷ್ಯಕ್ಕೆ ಡಬ್ಬಿಂಗ್ ಬೆಳವಣಿಗೆ ಅಷ್ಟೇನು ಹಿತಕರ ಅಲ್ಲ. ಅದರೂ ಈಗ ಅದೇ ದೊಡ್ಡ ಟ್ರೆಂಡ್. ಇದನ್ನು ದುರಂತ ಎನ್ನಬೇಕೋ, ಒಳ್ಳೆಯದು ಅಂತ ಖುಷಿ ಪಡಬೇಕೋ ಗೊತ್ತಾಗುತ್ತಿಲ್ಲ ಬಿಡಿ.
ಅಂದ ಹಾಗೆ , ಇಲ್ಲಿ ಹೇಳ ಹೊರಟ ವಿಷಯ ಅದಲ್ಲ. ಕೊರೋನಾ ಬಂದ ನಂತರ ಕನ್ನಡ ಕಿರುತೆರೆಯ ಟಿಆರ್ ಪಿ ಟ್ರೆಂಡ್ ಗಗನಕ್ಕೇರಿದೆ. ಕೊರೋನಾ ಎನ್ನುವ ಮಹಾಮಾರಿ ಜನರನ್ನು ತೀವ್ರವಾಗಿ ಕಾಡಿದರೂ, ಬಹುದಿನಗಳ‌ ಕಾಲ‌ ಜ‌ನರು ಗೃಹ ಬಂಧನಕ್ಕೆ ಸಿಲುಕಿದ ಪರಿಣಾಮ ಧಾರಾವಾಹಿಗಳನ್ನು ಎಡೆ ಬಿಡದೆ ನೋಡಿದ್ದಾರೆ.‌ ಅದಕ್ಕೆ ಸಾಕ್ಷಿ ಮುಗಿಲಿಗೆ ಚಿಮ್ಮಿದ ಸೀರಿಯಲ್ ಟಿಆರ್ ಪಿ. ಅದರ ಪರಿಣಾಮ ಒಂದಕ್ಕಿಂತ ಒಂದು ಧಾರಾವಾಹಿಗಳು ಪೈಪೋಟಿಯಲ್ಲಿವೆ.
ಕೊರೋನಾ ಕಾರಣಕ್ಕೆ ಕನ್ನಡ ಕಿರುತೆರೆ ದೊಡ್ಡ ಬದಲಾವಣೆ ಕಂಡಿದೆ. ಹಿಂದಿಯ‌ ಸೂಪರ್ ಹಿಟ್ ಧಾರಾವಾಹಿಗಳೆಲ್ಲ ಕನ್ನಡ‌ ಕಿರುತೆರೆಗೆ ಬಂದಿವೆ. ಸಿನಿಮಾ ಶೂಟಿಂಗ್ ನಿಂತ ಹಾಗೆ, ಇಲ್ಲಿ ಸೀರಿಯಲ್‌ ಶೂಟಿಂಗ್ ಕೂಡ ಬಂದ್ ಆಗಿದ್ದು, ಡಬ್ಬಿಂಗ್ ಪ್ರಕ್ರಿಯೆಗೆ ಮುಕ್ತ ಅವಕಾಶ ನೀಡಿದೆ.ಅದೇ ಕಾರಣಕ್ಕೆ ಕನ್ನಡದಲ್ಲೀಗ ಹಿಂದಿಯ ಸೂಪರ್ ಹಿಟ್ ಧಾರಾವಾಹಿಗಳೆಲ್ಲ ಸಖತ್ ಸೌಂಡ್ ಮಾಡುತ್ತಿವೆ.ಅದಕ್ಕೆ ಸಾಕ್ಷಿ ಮಹಾಭಾರತ ಹಾಗೂ ಮಹಾನಾಯಕ.


ಸ್ಟಾರ್ ಸುವರ್ಣದಲ್ಲಿ ‘ಮಹಾಭಾರತ’ ಬಂದರೆ, ಝೀ‌ಕನ್ನಡದಲ್ಲಿ‌’ ಮಹಾ‌ನಾಯಕ’ ಪ್ರಸಾರವಾಗುತ್ತಿದೆ. ಒಂದ್ರೀತಿ ಎರಡು ಪೈಪೋಟಿ ಗೆ ಬಿದ್ದು ಜನರನ್ನು ತಲುಪುತ್ತಿವೆ‌. ಅಷ್ಟೇ ಅಲ್ಲ, ಜನರನ್ನು‌ಆಕರ್ಷಿಸಲು ಈ‌ ಚಾನೆಲ್ ಹಲವು ಗಿಮಿಕ್ ಮಾಡಿರುವುದು ನಿಮಗೆ ಗೊತ್ತು. ಮುಖ್ಯಮಂತ್ರಿಗಳೇ ಮಹಾಭಾರತ ಧಾರಾವಾಹಿ‌ ನೋಡುತ್ತಾರೆಂಬ ಒಂದು‌‌ ಸಂದೇಶ‌ ಸ್ಟಾರ್ ಸುವರ್ಣ ಕಡೆಯಿಂದ ಬಂದರೆ, ಮಹಾ ನಾಯಕ ನಿಲ್ಲಿಸಲು ಬೆದರಿಕೆ‌ ಕರೆಗಳು ಬರುತ್ತಿವೆ ಅಂತ ಝೀ‌ ಕನ್ನಡ‌ ಬಡಬಡಿಸಿದ್ದು, ಧಾರಾವಾಹಿ‌ ಪರವಾದ ದೊಡ್ಡ ಅಲೆಯೇ ಸೃಷ್ಟಿಯಾಗುವಂತೆ ಮಾಡಿತು. ಎಂದಿಗೂ ಧಾರಾವಾಹಿ‌ ನೋಡದ ಒಂದು ವರ್ಗವೇ ಝೀ‌ಕನ್ನಡದ ಪರವಾಗಿ ಎದ್ದು ಕುಳಿತು ಕೊಂಡಿತು. ಇದು ತಮ್ಮ‌ನಾಯಕನಿಗೆ ಮಾಡಿದ ಅವಮಾನ ಅಂತ ದಲಿತ‌ ಮುಖಂಡರು ಹೇಳಿಕೆ‌ ನೀಡಿದ್ದು ಝೀ ಕನ್ನಡಕ್ಕೆ ಹೊಸ ವರ್ಗವೇ ವೀಕ್ಷಕರಾಗಿ ಸಿಗುವಂತೆ ಮಾಡಿತು.


ಸ್ಟಾರ್ ಸುವರ್ಣ ತಂದ ಡಬ್ಬಿಂಗ್ ವರ್ಷನ್ ‘ಮಹಾಭಾರತ ‘ ಧಾರಾವಾಹಿಯ ಕತೆ ಇದಕ್ಕಿಂದ ಭಿನ್ನವಾಗಿಲ್ಲ. ಮಹಾಭಾರತ ಎನ್ನುವುದು ಮೊದಲೇ ಜನ ಜನಿತ ಮಹಾಕಾವ್ಯ. ಪುಸ್ತಕಗಳ‌ ಮೂಲಕ, ಸಣ್ಣ ಪುಟ್ಟ ಕಿರು ಚಿತ್ರಗಳ‌‌ ಮೂಲಕ , ಇಲ್ಲವೇ ದೊಡ್ಡಾಟಗಳ‌ ಮೂಲಕ ಅಷ್ಟೋ‌ ಇಷ್ಟೋ ಸನ್ನಿವೇಶಗಳನ್ನು‌ ಕಣ್ತುಂಬಿಕೊಂಡವರಿಗೆ ಇಡೀ‌’ಮಹಾಭಾರತ’ ವೇ ದಿನ‌ನಿತ್ಯ ನಮ್ಮದೇ ಮನೆ‌ಬಾಗಿಲಿಗೆ ಬರುತ್ತೆ ಎಂದಾಗ ಆದ ಸಂತೋಷ ಅಷ್ಟಿಷ್ಟಲ್ಲ.‌ ಸ್ಟಾರ್ ಸುವರ್ಣ ತಂದ ಡಬ್ಬಿಂಗ್ ವರ್ಷನ್ ಮಹಾಭಾರತ ಮನೆ‌ ಮಾತಾಯಿತು. ಜನ ಯಾವ ಪರಿ‌ನೋಡುತ್ತಾ ಬಂದರೆಂದರೆ, ಮಹಾಭಾರತ ಪ್ರಸಾರದ ಹೊತ್ತಿಗೆ ಯಾವುದೇ ಚಾನೆಲ್ ಆನ್ ಆಗಿಲ್ಲ.ಅಷ್ಟು ದೊಡ್ಡ ಕ್ರೇಜ್ ಈ ಧಾರಾವಾಹಿಗೆ ಸಿಕ್ಕಿದ್ದು ವಿಶೇಷ.

ಸದ್ಯಕ್ಕೆ‌ ಸ್ಟಾರ್ ಸುವರ್ಣದ ‘ಮಹಾಭಾರತ‌‌’ ಕ್ಲೈಮ್ಯಾಕ್ಸ್ ಹಂತಕ್ಕೆ‌ಬಂದಿದೆ. ಇನ್ನಷ್ಟು ದಿನ ಬಾಕಿಯಿದೆ. ಉಳಿದಂತೆ ‌ಝೀ‌ಕನ್ನಡದ ‘ ಮಹಾನಾಯಕ‌’. ಇನ್ಜು ಹಲವು ದಿನ ಪ್ರಸಾರವಾಗಲಿದೆ. ಉಳಿದಂತೆ, ಇವರೆಡುಬಧಾರಾವಾಹಿಗಳ ಪೈಕಿ ಹೈಯೆಸ್ಟ್ ರೇಟಿಂಗ್ ಧಾರಾವಾಹಿ ಯಾವುದು? ಕಿರುತೆರೆಯ ಮೂಲಗಳ ಪ್ರಕಾರ ಇವೆರೆಡು ಧಾರಾವಾಹಿಗಳೇ ಕಿರುತೆರೆಯ ಹೈಯೆಸ್ಟ್ ರೇಟಿಂಗ್ ಧಾರಾವಾಹಿಗಳು. ಡಬ್ಬಿಂಗ್ ವರ್ಷನ್ ಧಾರಾವಾಹಿಗಳಾದರೂ, ಇವು ಜನರಿಗೆ ತಲುಪಿರುವ ರೀತಿ ರೋಚಕ. ಪೈಪೋಟಿಗೆ ಬಿದ್ದಂತೆ ಜನರನ್ನು ತಲುಪುತ್ತಿವೆ. ಆದರೂ ರೇಟಿಂಗ್ ಅಂಕೆ- ಸಂಖ್ಯೆಯಲ್ಲಿ ‘ ಮಹಾಭಾರತ’ ನಂಬರ್ ಸ್ಥಾನದಲ್ಲಿದೆ ಎನ್ನುತ್ತಿವೆ.

Categories
ಸಿನಿ ಸುದ್ದಿ

ಚಿತ್ರರಂಗಕ್ಕೆ ಮಂಜೂ ಇರಲಿ, ಮಳೆಯೂ ಬರಲಿ…


ಕೊರೋನಾ ನಡುವೆಯೂ ಸಿನಿಮಾ‌ ರಿಲೀಸ್ , ಉದ್ಯಮದ‌ ಹಿತಕ್ಕಾಗಿ ಈ ರಿಸ್ಕ್ –  ನಿರ್ಮಾಪಕ  ಜಾಕ್ ಮಂಜು

Categories
ಸಿನಿ ಸುದ್ದಿ

ಆ್ಯಕ್ಟರ್ ಆಗಲು ಬಂದು ಡೈರೆಕ್ಟರ್ ಆದ ಎಳ್ಳಂಪಳ್ಳಿ ಹುಡುಗನ ‘ಬಹುಕೃತವೇಷಂ’

ಹಸಿವು ನಿರ್ದೇಶಕನ್ನನಾಗಿಸಿತು- ಪ್ರಶಾಂತ್ ಎಳ್ಳಂಪಳ್ಳಿ


ಸಿನಿಮಾ ಅಂದ್ರೆ ಸಿಕ್ಕಾ ಪಟ್ಟೆ ಕ್ರೇಜು. ವಾರಕ್ಕೆ ಮೂರು ಸಿನಿಮಾ ನೋಡುತ್ತಿದ್ದೆ. ನೋಡ್ತಾ ನೋಡ್ತಾ ನಟನೆಯ ಕನಸು ಕಂಡೆ. ಆ ಕನಸು ನನಸಾಗಿಸಿಕೊಳ್ಳಲು ನನ್ನೂರು ಎಳ್ಳಂಪಳ್ಳಿಯಿಂದ ಬೆಂಗಳೂರು ಬಸ್ಸು ಹಿಡಿದೆ‌‌. ಅಲ್ಲಿಂದ ಬಂದು ಇಲ್ಲಿಗೆ ೧೮ ವರ್ಷ. ಹತ್ತಾರು ಅವತಾರ ಗಳಾದವು. ಕೊನೆಗೆ ನಿರ್ದೇಶನವೇ ಸೂಕ್ತ ಎನಿಸಿತು. ಹಾಗೆ ಆಗಲು ಪಟ್ಟ ಶ್ರಮ ಮಾತ್ರ ಭೀಕರವಾದದ್ದು….

ಯುವ ನಿರ್ದೇಶಕ ಪ್ರಶಾಂತ್ ಎಳ್ಳಂಪಳ್ಳಿ ಇಷ್ಟು ಹೇಳಿ ಒಂದು ಕ್ಷಣ ಮೌನಕ್ಕೆ ಜಾರಿದರು. ಸುದೀರ್ಘ 18 ವರ್ಷದ ಹಾದಿಯನ್ನು ನೆನಪಸಿಕೊಳ್ಳುವಾಗ ಅವರ ಕಣ್ಣಲ್ಲಿ ನೀರು ಜಿನುಗಿತು. ಏನೇನೋ ಆಗಿ, ಕೊನೆಗೆ ನಿರ್ದೇಶಕನಾದೆ ಎನ್ನುವ ಸಮಾಧಾನವೂ ಇತ್ತು. ಆದರೆ ಅಂತಹದೊಂದು ಪವಿತ್ರವಾದ ಜವಾಬ್ದಾರಿ ಯ ಕೆಲಸಕ್ಕೆ ತನ್ನನ್ನು ತಾನು ಪಕ್ವವಾಗಿಸಿಕೊಳ್ಳಲು ಅವರು ಪಟ್ಟ ಶ್ರಮ ಅತ್ಯಂತ ಕಠಿಣವಾಗಿತ್ತು ಅಂತ ಪ್ಲಾಷ್ ಬ್ಯಾಕ್ ಕಡೆ ಜಾರಿದರು. ನಮ್ಮಿಬ್ಬರ ನಡುವೆ ಈ ಮಾತಿನ ಲಹರಿ ಶುರುವಾಗಿದ್ದು ‘ ಬಹುಕೃತವೇಷಂ’ ಚಿತ್ರದ ಚಿತ್ರೀಕರಣದ ಸೆಟ್ ನಲ್ಲಿ.

ಬಹುಕೃತವೇಷಂ…..

‘ಗೌಡ್ರು ಸೈಕಲ್’ ಚಿತ್ರದ ನಂತರ ಯುವ ನಿರ್ದೇಶಕ ಪ್ರಶಾಂತ್ ಎಳ್ಳಂಪಳ್ಳಿ ಈಗ ‘ಬಹುಕೃತವೇಷಂ ‘ಹೆಸರಿನ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಇದು ಅವರ ಎರಡನೇ ಸಿನಿಮಾ. ಹೊಸ ಪ್ರತಿಭೆ ಶಶಿಕಾಂತ್ ಈ‌ ಚಿತ್ರದ ನಾಯಕ. ‘ಅಗ್ನಿ ಸಾಕ್ಷಿ’ ಧಾರಾವಾಹಿಯ ಖ್ಯಾತಿಯ ನಟಿ ವೈಷ್ಣವಿ ಇದರ ನಾಯಕಿ. ಚಿತ್ರಕ್ಕೆ ಲಾಕ್ ಡೌನ್ ಗೂ ಮುಂಚೆಯೇ ಚಾಲನೆ ಸಿಕ್ಕಿತ್ತು. ಲಾಕ್ ಡೌನ್ ಶುರುವಾದ ಕಾರಣ ಚಿತ್ರೀಕರಣ ಸ್ಥಗಿತ ಗೊಂಡಿತು. ಒಂದಷ್ಟು ಗ್ಯಾಪ್ ನಂತರವೀಗ ಮತ್ತೆ ಚಿತ್ರೀಕರಣ ಶುರುವಾಗಿದೆ. ಬೆಂಗಳೂರಿನ ಕೆಂಗೇರಿಯ ಮನೆಯೊಂದರಲ್ಲಿ ಆ ದಿನ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದ ಪ್ರಶಾಂತ್ ಎಳ್ಳಂಪಳ್ಳಿ ಮಾತಿಗೆ ಸಿಕ್ಕರು. ತಾವು ನಿರ್ದೇಶಕನಾದ ಹಿಂದಿನ ರೋಚಕ ಸ್ಟೋರಿ ತೆರೆದಿಟ್ಟರು.

ಎಳ್ಳಂ‌ಪಳ್ಳಿ ಎಂಬ ಪಕ್ಕಾ ಹಳ್ಳಿ ಪ್ರತಿಭೆ….

‘ನನ್ನೂರು ಎಳ್ಳಂಪಳ್ಳಿ. ಉಡುಪಿ ಜಿಲ್ಲೆ ಕುಂದಾಪುರ ತಾಲೂಕು. ಅಷ್ಟೇನು ಅಭಿವೃದ್ಧಿ ಕಾಣದ ಕುಗ್ರಾಮ. ಅಲ್ಲಿ ಸಾಮಾನ್ಯ ರೈತ ಕುಟುಂಬದಲ್ಲಿ ಹುಟ್ಟಿ ಬೆಳೆದ ನನಗೆ ಬಾಲ್ಯದಿಂದಲೇ ಸಿನಿಮಾ ಹುಚ್ಚು. ಗೆಳೆಯರೆಲ್ಲಾ ತಾವು ಡಾಕ್ಟರ್ ಆಗ್ಬೇಕು, ಇಂಜಿನಿಯರ್ ಆಗ್ಬೇಕು, ಮೇಸ್ಟ್ರು ಆಗ್ಬೇಕು ಅಂತೆಲ್ಲ ಹೇಳುತ್ತಿದ್ದಾಗ ನಾನು ಆ್ಯಕ್ಟರ್ ಆಗ್ಬೇಕು ಅಂತಿದ್ದೆ. ಹಾಗೆ ಶುರುವಾಗಿದ್ದ ನಟನೆಯ ಕನಸು‌ ನನಸಾಗಿಸಿಕೊಳ್ಳಲು ಕಾಲೇಜು ಶಿಕ್ಷಣ ಮುಗಿಸಿದೆ. ಆನಂತರ ಊರಲ್ಲಿ ಟೈಲರಿಂಗ್ ಕೆಲಸ ಮಾಡುತ್ತಿದ್ದೆ‌. ಅಲ್ಲಿಂದ ಬೆಂಗಳೂರಿಗೆ ಬಸ್ಸು ಹತ್ತಿದೆ. ಅಲ್ಲಿ ನನ್ನ ದೊಡ್ಡಪ್ಪನ ಮಗನ‌ ಅಂಗಡಿಯಲ್ಲಿ ಕೆಲಸ‌ ಮಾಡಿದೆ.ಅಲ್ಲಿಂದ ಯು.ವಿ. ನಂಜಪ್ಪ ಎಂಬುವರು ಪರಿಚಯವಾದರು. ಅವರ ಮೂಲಕ ಬೆನಕ ರಂಗ ತಂಡಕ್ಕೆ ಪರಿಚಯವಾಯಿತು. ಅಲ್ಲಿ ಯಶ್ ಕೂಡ ಇದ್ದರು. ನಾವೆಲ್ಲ ಒಟ್ಟಿಗೆ ನಟನೆಯ ತರಬೇತಿ ಪಡೆಯು ತ್ತಿದ್ದೇವು‌.‌ ಅಲ್ಲಿಂದ ಹಲವು ಧಾರಾವಾಹಿಗಳಲ್ಲಿ ನಟಿಸಿದೆ. ಸಿನಿಮಾಗಳಿಗೂ ಬಣ್ಣ ಹಚ್ಚಿದೆ‌. ಹಿರಿಯರಾದ ಸುಧಾಕರ್ ಬನ್ನಂಜೆ ಸೇರಿದಂತೆ ಹಲವರಿಗೆ ಸಹಾಯಕ ನಿರ್ದೇಶಕನಾದೆ.‌ ಹಾಗೆಯೇ ನನಗೂ ಸ್ವತಂತ್ರ ನಿರ್ದೇಶಕನಾಗುವ ಅವಕಾಶ ಬಂತು. ‘ಗೌಡ್ರು ಸೈಕಲ್’ ಮೂಲಕ‌ ಅಂತ ಅದೃಷ್ಟ ಒಲಿದು ಬಂತು’ ಎನ್ನುತ್ತಾ ನಿರ್ದೇಶಕನಾದೆ ಬಗೆಯನ್ನು ಪ್ರಶಾಂತ್ ಮನಬಿಚ್ಚಿ ಹೇಳಿಕೊಂಡರು.

ಸೈಕಲ್ ಏರಿ ಬಂದ್ರು…

‘ಗೌಡ್ರು ಸೈಕಲ್’ ಪ್ರಶಾಂತ್ ಎಳ್ಳಂಪಳ್ಳಿ‌ನಿರ್ದೇಶನದ ಚೊಚ್ವಲ ಸಿನಿಮಾ. ಹೊಸಬರನ್ನು ಹಾಕಿಕೊಂಡು‌ ಆ ಸಿನಿಮಾ ಮಾಡಿದ್ದರು. ಆದರೆ ಚಿತ್ರಕ್ಕೆ ನಿರೀಕ್ಷಿತ ಪ್ರಚಾರ ಸಿಗಲಿಲ್ಲ. ಒಂದಷ್ಟು ಕೊರತೆಗಳ ನಡುವೆಯೇ ಈ ಚಿತ್ರ ಚಿತ್ರ ಮಂದಿರಕ್ಕೆ ಬಂತು. ಕತೆ ಚೆನ್ನಾಗಿತ್ತು ಎನ್ನುವ ಅಭಿಪ್ರಾಯ ವ್ಯಕ್ತವಾಯಿತು. ಅದರೆ ನಿರೀಕ್ಷಿತ ಸಕ್ಸಸ್ ಸಿನಿಮಾಕ್ಕೆ ಸಿಗದೆ ಹೋಯಿತು.‌ ಅದರೂ ಪ್ರಶಾಂತ್ ಮೇಲೆ ಕೆಲವರು ಇಟ್ಟಿದ್ದ ನಂಬಿಕೆಗೆ ಅದು ದಕ್ಕೆ ತರಲಿಲ್ಲ. ಅವರ ವರ್ಚಸ್ಸು ಕೂಡ ಕಮ್ಮಿ ಆಗಲಿಲ್ಲ. ಆಗ ಶುರುವಾಗಿದ್ದು ‘ಬಹುಕೃತವೇಷಂ’. ಚಿತ್ರ.

ಕಷ್ಟ ಇಲ್ಲಿಗೆ ಬಂದಾಗಲೇ ಗೊತ್ತಾಗಿದ್ದು…

‘ಸರ್ , ನಾನು ನಿರ್ದೇಶಕನಾಗಿದ್ದು ಇಲ್ಲಿಗೆ ಬಂದ 18 ವರ್ಷಗಳ ಬಳಿಕ. ಇದು ನಾವಂದುಕೊಂಡಷ್ಟು ಸುಲಭದ ಹಾದಿಯಲ್ಲ. ಕಡು ಕಷ್ಟ.‌ ಯಾವುದೇ ಹಿನ್ನೆಲೆ ಇಲ್ಲದೆ, ಹಣ ಬಲ ಇಲ್ಲದೆ ಇಲ್ಲಿ ಒಂದು ಹಂತಕ್ಕೇರಿದ್ದು ಅತ್ಯಂತ ಕಠಿಣ. ಬಾಲ್ಯದಲ್ಲಿ ನಾನೇನೋ ಆ್ಯಕ್ಟರ್ ಆಗ್ಬೇಕು ಅಂತ ಕನಸು ಕಂಡೆ. ಆದರೆ ಅದನ್ನು ನನಸಾಗಿಸಿಕೊಳ್ಳುವುದು ಎಷ್ಟು ಕಷ್ಟ ಅಂತ ಇಲ್ಲಿಗೆ ಬಂದಾಗಲೇ ಗೊತ್ತಾಗಿದ್ದು. ಕೊನೆಗೆ ನಿರ್ದೇಶಕನಾಗಲು ಹೊರಟೆ. ಆಗ ನನಗೆ ಸಹಕಾರ, ಸಲಹೆ ನೀಡಿದ್ದು ಗುರುಗಳಾದ ಸುಧಾಕರ್ ಬನ್ನಂಜೆ ಹಾಗೂ‌ ಟಿ.ಎಸ್. ನಾಗಭರಣ. ಅವರಿಂದಲೇ ನಾನಿಲ್ಲಿಗೆ ಬಂದೆ ‘ ಎನ್ನುತ್ತಾರೆ ಪ್ರಶಾಂತ್.

ಜನ ಮೆಚ್ಚುವ ಸಿನಿಮಾವೇ ಟಾರ್ಗೆಟ್‌…

ಸಿನಿಮಾ‌ ನಿರ್ದೇಶವನ್ನೇ ಮುಂದೆ ವೃತ್ತಿಯಾಗಿಸಿಕೊಳ್ಳುವ ಹುಮ್ಮಸ್ಸಿನಲ್ಲಿರುವ ಪ್ರಶಾಂತ್ ಅವರಿಗೆ ಪ್ರೇಕ್ಷಕರಿಗೆ‌ ಒಳ್ಳೆಯ ಸಿನಿಮಾ ಕೊಡಬೇಕೆನ್ನುವುದೇ ಮೊ‌ದಲ ಟಾರ್ಗೆಟ್ ಅಂತೆ. ಆ ನಿಟ್ಟಿನಲ್ಲೇ ತಮ್ನ ಎರಡನೇ ಸಿನಿಮಾ ‘ಬಹುಕೃತವೇಷಂ ‘ಮೂಡಿಬರಲಿದೆ ಎನ್ನುತ್ತಾರೆ‌. ತಮ್ಮ ಆಶಯಕ್ಕೆ ಚಿತ್ರದ ನಿರ್ಮಾಪಕರು ಹಾಗೂ ಚಿತ್ರದ ನಾಯಕ ಶಶಿಕಾಂತ್ ತಂಡ ಸಾಥ್ ನೀಡಿದ್ದಾರೆ ಎನ್ನುತ್ತಾ ನಗು ಬೀರುತ್ತಾರೆ ಪ್ರಶಾಂತ್. ಅವರು ಅಂದುಕೊಂಡಂತೆ ‘ ಬಹುಕೃತವೇಷಂ’ ಒಂದೊಳ್ಳೆಯ ಸಿನಿಮಾವಾಗಿ‌ ಮೂಡಿ‌ಬರಲಿ. ಪ್ರಶಾಂತ್ ಸ್ಟಾರ್‌ ನಿರ್ದೇಶಕರಾಗಲಿ ಎನ್ನುವುದು ‘ಸಿನಿ ಲಹರಿ’ಯ ಹಾರೈಕೆ.

Categories
ಸಿನಿ ಸುದ್ದಿ

ಅದಿತಿ ಪ್ರಭುದೇವ್ ಈಗ ಪರ್ಫೆಕ್ಟ್ ಗರ್ಲ್!


ಶ್ಯಾನೆ ಅಲ್ಲ, ಸಿಕ್ಕಾಪಟ್ಟೆ ಟಾಪಗೌಳೆ ಈ ಹುಡುಗಿ

ಶ್ಯಾನೆ‌ ಟಾಪಗೌಳೆ ನಮ್ಮುಡುಗಿ ಅಂದ್ರೆ ಸಾಕು ಸಿನಿ ದುನಿಯಾದಲ್ಲಿ ತಟ್ಟಂತೆ ನೆನಾಪಾಗುವ ಹೆಸರು ಅದಿತಿ ಪ್ರಭುದೇವ್. ಈಗ ಇನ್ನೂ ಟಾಪಗೌಳೆ ಈ ಹುಡುಗಿ ಅಂದ್ರೆ ಸಾಕು ಸಿನಿ ಜಗತ್ತಿನಲ್ಲಿ ಅವರೇ ನೆನಪಾಗುವುದು ಕೂಡ ಅಷ್ಟೇ ಸಹಜ. ಯಾಕಂದ್ರೆ, ಈಗ ಅದಿತಿ ಪ್ರಭುದೇವ್ ಇರುವುದೇ ಹಾಗೆ. ಅದಕ್ಕೆ ಸಾಕ್ಷಿ ಈ ಫೋಟೋಸ್. ಕ್ಯಾಮೆರಾ ಕಣ್ಣಿಗೆ ಅವರಿಲ್ಲಿ ಕೊಟ್ಟ ಹಾಟ್ ಲುಕ್ಕು, ಖಡಕ್ ಫೋಸು. ಅಬ್ಬಾ, ಪಡ್ಡೆ ಹುಡುಗರ ಕಣ್ಣಿಗೆ ಮಸ್ತ್ ಮಸ್ತ್ !

ಪರ್ಫೆಕ್ಟ್ ಗರ್ಲ್ :

ಅಂದ ಹಾಗೆ, ಇದ್ಯಾವುದೋ ಅವರ ಹೊಸ ಸಿನಿಮಾದ ಫೋಟೋಶೂಟ್ ಅಲ್ಲ. ಹಾಗೆಯೇ ಅವರೇನು ಹೊಸದಾಗಿ ಮಾಡಿಸಿದ ಫೋಟೋಗಳು ಕೂಡ ಅಲ್ಲ. ಬದಲಿಗೆ ಹೊಸದೊಂದು ವಿಡಿಯೋ ಸಾಂಗ್ ಆಲ್ಬಂ ನಲ್ಲಿ ನಟಿ ಅದಿತಿ‌ ಪ್ರಭುದೇವ್ ಕಾಣಿಸಿಕೊಂಡಿದ್ದು ಹೀಗೆ‌. ಸುಜುಕಿ ಬೈಕು, ರೈಡರ್ ಲುಕ್ಕು, ‘ತೋತಾಪುರಿ’ ಚೆಲುವೆಯ ಖದರೇ ಬೇರೆ. ಯಾಕಂದ್ರೆ ,ಅವರೀಗ ಪರ್ಫೆಕ್ಟ್ ಗರ್ಲ್. ಇದೇ ಮೊದಲು ಅದಿತಿ ಪ್ರಭುದೇವ್ ಕಾಣಿಸಿಕೊಂಡ ವಿಡಿಯೋ ಸಾಂಗ್ ಆಲ್ಬಂ ಹೆಸರೇ ಪರ್ಫೆಕ್ಟ್ ಗರ್ಲ್. ಇದೊಂದು ಕಾಕತಾಳೀಯ. ಮಿಸ್ಟರ್ ಪರ್ಫೆಕ್ಟ್ ಥರ , ಸ್ಯಾಂಡಲ್ ವುಡ್ ನಲ್ಲಿ ಅದಿತಿ‌ ಪ್ರಭುದೇವ್ ಪರ್ಫೆಕ್ಟ್ ನಟಿ. ಕಾಕತಾಳೀಯ ಎನ್ನುವಂತೆ ಅವರ ಮೊದಲ ವಿಡಿಯೋ ಸಾಂಗ್ ಆಲ್ಬಂ ಹೆಸರು ಕೂಡ ‘ಪರ್ಫೆಕ್ಟ್ ಗರ್ಲ್’.

ಫೋಟೋಗಳದ್ದೇ ಸದ್ದು:

ಅಭಿ ಮುಲ್ಟಿ ನಿರ್ಮಾಣ ಹಾಗೂ ಅಭಿಷೇಕ್ ಮಠದ್ ನಿರ್ದೇಶನದ ಈ ವಿಡಿಯೋ ಸಾಂಗ್ ಆಲ್ಬಂ ಇನ್ನು ಹೊರ ಬಂದಿಲ್ಲ. ಅಕ್ಟೋಬರ್ ಫಸ್ಟ್ ವೀಕ್ ಆನಂದ್ ಆಡಿಯೋ ಸಂಸ್ಥೆಯ ಅಧಿಕೃತ ಯುಟ್ಯೂಬ್ ಚಾನೆಲ್ ಮೂಲಕ ಲಾಂಚ್ ಆಗುತ್ತಿದೆ. ಸದ್ಯ ಅದು ನಟಿ ಅದಿತಿ ಪ್ರಭುದೇವ್ ಅವರ ಭರ್ಜರಿ ಬೈಕ್ ರೈಡಿಂಗ್ ಪೋಸು, ಖಡಕ್ ಲುಕ್ಕು, ಆ್ಯಟ್ರ್ಯಾಕ್ಟಿವ್ ಫೇಸ್ ನ ಫೋಟೋಸ್ ಮೂಲಕ ಸೋಷಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸೌಂಡು ಮಾಡುತ್ತಿದೆ. ಅದಿತಿ ಪ್ರಭುದೇವ್ ಅವರ ಸಿನಿ ಜರ್ನಿಯ‌ ಮಟ್ಟಿಗೆ ಇಂತಹದೊಂದು ಕಾಸ್ಟ್ಯೂಮ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದು ಇದೇ ಮೊದಲು. ಟಾಮ್ ಬಾಯ್ ಥರ ಬೈಕ್ ರೈಡಿಂಗ್ ಲುಕ್ ನಲ್ಲಿ ಭರ್ಜರಿ ಪೋಸು‌ ನೀಡಿರುವುದು ವಿಶೇಷ.

ಪ್ರೇಕ್ಷಕರೆದುರು ಬಾರದ ಕೊರಗು:

ಕೊರೋನಾ‌ ಕಾರಣಕ್ಕೆ‌‌ಕನ್ನಡದ ಬಹಳಷ್ಟು ನಟ-ನಟಿಯರು ಈ ವರ್ಷವಿನ್ನು ಬೆಳ್ಳಿಪರದೆ ಮೇಲೆ ಕಾಣಿಸಿಕೊಂಡಿಲ್ಲ. ಅಂತಹ ಸಾಧ್ಯತೆಯೂ ಈಗ ಕಾಣುತ್ತಿಲ್ಲ. ಬಹಳಷ್ಟು ಜನ ಕಲಾವಿದರಿಗೆ ಅಂತಹದೊಂದು ಬೇಸರ, ನೋವು ಇದ್ದೇ ಇದೆ. ಇನ್ನು 2019ಕ್ಕೆ ಸಾಲು ಸಾಲು ಸಿನಿಮಾಗಳ ಮೂಲಕ ತೆರೆ ಮೇಲೆ ಕಾಣಿಸಿಕೊಂಡಿದ್ದ ಅದಿತಿ ಪ್ರಭುದೇವ್ ಅವರಿಗೂ ಅದು ಹೊರತಾಗುಳಿದಿಲ್ಲ. ತೆರೆ ಕಾಣಬೇಕಿರುವ ಸಾಕಷ್ಟು ಸಿನಿಮಾಗಳಿದ್ದರೂ, ಕೊರೋನಾ ಕಾರಣ ಅವು ಬಹುತೇಕ 2021ಕ್ಕೆ ತೆರೆಗೆ ಬರುವುದು ಗ್ಯಾರಂಟಿ.ಆದರೆ ಈ ವರ್ಷ ಪ್ರೇಕ್ಷಕರ ಮುಂದೆ ಬರಲಾಗಿಲಿಲ್ಲ ಎನ್ನುವ ಕೊಡಗನ್ನು ‘ಪರ್ಫೆಕ್ಟ್ ಗರ್ಲ್’ ವಿಡಿಯೋ‌ಸಾಂಗ್ ಆಲ್ಬಂ ಮೂಲಕ ನಿಗಿಸಿಕೊಳ್ಳುವ ತವಕದಲ್ಲಿದ್ದಾರೆ ನಟಿ ಅದಿತಿ ಪ್ರಭುದೇವ್.

ಇದೊಂಥರ ಆಕಸ್ಮಿಕ:

‘ ಇದೊಂಥರ ಆಕಸ್ಮಿಕ. ಕೊರೋನಾ ಕಾರಣ ಶೂಟಿಂಗ್ ಇಲ್ದೇ ಮನೆಯಲ್ಲಿದ್ದೇವು. ಆಗ ಕ್ಯಾಮೆರಾಮೆನ್ ಶಿವು ಸರ್ ಅವರು ಈ ಪ್ರಾಜೆಕ್ಟ್ ಬಗ್ಗೆ ಹೇಳಿದರು. ನಾನು ಕೂಡ ವಿಡಿಯೋ ಸಾಂಗ್ ಆಲ್ಭಂನಲ್ಲಿ ಕಾಣಿಸಿಕೊಂಡಿರಲಿಲ್ಲ. ಆರಂಭದಲ್ಲಿ‌ಕಾಸ್ಟ್ಯೂಮ್, ಗೆಟಪ್ ಬಗ್ಗೆ ಹೇಳಿದ್ರು. ಏನೋ ಹೊಸತೆನಿಸಿತು. ಚೆನ್ನಾಗಿರುತ್ತೆ ಅಂತ ಎಕ್ಸೈಟ್ ಆಯ್ತು. ಹಾಗಾಗಿ ಒಪ್ಪಿಕೊಂಡೆ.‌ತುಂಬಾ ಚೆನ್ನಾಗಿ ಬಂದಿದೆ. ಸೋಷಲ್ ಮೀಡಿಯಾದಲ್ಲಿ‌ಲಾಂಚ್ ಆಗುತ್ತಿದೆ. ನಂಗೂ ಈ ವರ್ಷ ಜನರ‌ ಕಾಣಿಸಿಕೊಳ್ಳಲು ಆಗಲಿಲ್ಲ ಅಂತ ಬೇಸರ ಇತ್ತು. ಅದು ಈ ಮೂಲಕವಾದರೂ ಸಾಧ್ಯವಾಗುತ್ತಿದೆಯೆಲ್ಲ ಅಂತ ಖುಷಿಯಾಗುತ್ತಿದೆ’ ಎನ್ನುತ್ತಾರೆ ನಟಿ‌ ಅದಿತಿ ಪ್ರಭುದೇವ್‌.

ಉತ್ಸಾಹಿಗಳ ಪ್ರಯತ್ನ:

‘ಪರ್ಫೆಕ್ಟ್ ಗರ್ಲ್ ‘ವಿಡಿಯೋ ಸಾಂಗ್ ಆಲ್ಬಂ‌ನ‌ ನಿರ್ಮಾಣದ ಹಿಂದೆ ಒಂದು ಉತ್ಸಾಹಿ ಯುವಕರ ಶ್ರಮವಿದೆ. ಅಭಿ‌ಮುಲ್ಟಿ ಅವರೇ ಇದಕ್ಕೆ ಸಾಹಿತ್ಯ, ಸಂಗೀತ ಹಾಗೂ ನಿರ್ಮಾಣದ ಜತೆಗೆ ತಾವೇ ಹಾಡಿದ್ದಾರೆ. ಅವರೊಂದಿಗೆ ಹರ್ಷಿಲ್ ರೆಡ್ಡಿ ಸಹ‌ ನಿರ್ಮಾಪಕರಾಗಿ ಸಾಥ್ ನೀಡಿದ್ದಾರೆ. ನಿರ್ದೇಶಕ ಅಭಿಷೇಕ್ ನಿರ್ದೇಶನದ ಜತೆಗೆ ನೃತ್ಯ ನಿರ್ದೇಶನ‌ ಮಾಡಿದ್ದಾರೆ. ಶಿವಸೇನಾ ಛಾಯಾಗ್ರಹಣ ಮಾಡಿದ್ದಾರೆ. ಮಹೇಶ್ ಸಂಕಲನವಿದೆ. ಚಂದನ್ ಗೌಡ ವಸ್ತ್ರ ವಿನ್ಯಾಸ ಮಾಡಿದ್ದಾರೆ. ಇನ್ನೇನು ಆನಂದ್ ಆಡಿಯೋ ಆಲ್ಬಂ ಲಾಂಚ್ ಗೆ ಸಜ್ಜಾಗಿದೆ.‌ ಅಕ್ಟೋಬರ್ ಮೊದಲ‌ ವಾರ ಸೋಷಲ್ ಮೀಡಿಯಾದಲ್ಲಿ ಕಾಣಿಸಿಕೊಳ್ಳಲಿದೆ.

Categories
ಗ್ಲಾಮರ್‌ ಕಾರ್ನರ್

ಅಲ್ಟ್ರಾ‌ಮಾರ್ಡನ್ ಲುಕ್ ನಲ್ಲಿ‌ ಸಾತ್ವಿಕಾ

  • ಹಿತ್ತಲ ಗಿಡ ಮದ್ದಲ್ಲ ಅಂತಾರೆ. ಕನ್ನಡದ ಕೆಲವು ನಟಿಯರ ವಿಚಾರಕ್ಕೆ ಈ ಮಾತು ಅಕ್ಷರಶಃ ಸತ್ಯ.‌ಪ್ರತಿಭೆ ಇದ್ದರೂ ಹುಟ್ಟೂರಿನಲ್ಲಿ ಅವಕಾಶ ಸಿಗದೆ ಪಕ್ಕದ ಭಾಷೆಗಳಿಗೆ ಹೋಗಿ ಬೇಡಿಕೆಯ ನಟಿಯಾಗಿ ಗುರುತಿಸಿ ಕೊಂಡವರು ಹಲವರು.ಆ ಪೈಕಿ ಬೆಂಗಳೂರು ಹುಡುಗಿ ಸಾತ್ವಿಕ್ ಕೂಡ ಒಬ್ಬರು. ಈಗ ಕನ್ನಡದಲ್ಲೇ ಮಿಂಚಬೇಕೆಂದು ಬಂದಿದ್ದಾರೆ. ಒಂದೆರೆಡು ಸಿನಿಮಾ ಅವಕಾಶವೂ ಸಿಕ್ಕಿವೆ. ಹೊಸ ಅವಕಾಶಗಳತ್ತ ಮುಖ‌ ಮಾಡಿರುವ ಈ ಮೋಹಕ ತಾರೆ, ಚೆಂದದ ಫೋಟೋಶೂಟ್ ‌ನಲ್ಲಿ ಅಲ್ಟ್ರಾ ಮಾರ್ಡನ್ ಹುಡುಗಿಯಾಗಿ ಮಿರ ಮಿರ ಮಿಂಚಿದ್ದು ಹೀಗೆ…
  • ನಾನೇ ಬೇರೆ, ನನ್ ಸ್ಟೈಲೇ ಬೇರೆ
  • ಹೆಂಗಿದೆ ಲುಕ್..

     

  •  

 

Categories
ಸಿನಿ ಸುದ್ದಿ

ಸಾಧಕಿ‌ ಈ ‌ಸುಂದರಿ !

ನಟಿಯಾಗಿಯೂ ಮಿಂಚುತ್ತಿರುವ ಸಾತ್ವಿಕಾ ಎಂಬ ಕನಸು ಕಂಗಳ ಚೆಲುವೆ

…………………………………………………………………….

ಕಪ್ಪು- ಬಿಳಿಕಣ್ಣಲ್ಲಿ ಕಲರ್ ಫುಲ್ ಕನಸು, ಸಿನಿ ಜಗತ್ತಿನತ್ತ ಮೋಹಕ ಬೆಡಗಿಯ ಚಿತ್ತ, ಅಲ್ಟ್ರಾ ಮಾರ್ಡನ್ ಹುಡುಗಿಗೆ ಬಣ್ಣದ ಲೋಕದಲ್ಲಿ ಮಿಂದೇಳುವ ಬಯಕೆ

ಹಿತ್ತಲ ಗಿಡ ಮದ್ದಲ್ಲ ಅಂತಾರೆ. ಕನ್ನಡದ ಕೆಲವು ನಟಿಯರ ವಿಚಾರಕ್ಕೆ ಈ ಮಾತು ಅಕ್ಷರಶಃ ಸತ್ಯ.‌ಪ್ರತಿಭೆ ಇದ್ದರೂ ಹುಟ್ಟೂರಿನಲ್ಲಿ ಅವಕಾಶ ಸಿಗದೆ ಪಕ್ಕದ ಭಾಷೆಗಳಿಗೆ ಹೋಗಿ ಬೇಡಿಕೆಯ ನಟಿಯಾಗಿ ಗುರುತಿಸಿ ಕೊಂಡವರು ಹಲವರು.ಆ ಪೈಕಿ ಬೆಂಗಳೂರು ಹುಡುಗಿ ಸಾತ್ವಿಕ್ ಕೂಡ ಒಬ್ಬರು. ಈಗ ಕನ್ನಡದಲ್ಲೇ ಮಿಂಚಬೇಕೆಂದು ಬಂದಿದ್ದಾರೆ. ಒಂದೆರೆಡು ಸಿನಿಮಾ ಅವಕಾಶವೂ ಸಿಕ್ಕಿವೆ. ಹೊಸ ಅವಕಾಶಗಳತ್ತ ಮುಖ‌ ಮಾಡಿರುವ ಈ ಮೋಹಕ ತಾರೆ, ಚೆಂದದ ಫೋಟೋಶೂಟ್ ‌ನಲ್ಲಿ ಅಲ್ಟ್ರಾ ಮಾರ್ಡನ್ ಹುಡುಗಿಯಾಗಿ ಮಿರ ಮಿರ ಮಿಂಚಿದ್ದು ಹೀಗೆ…( Exclusive photos)

ಈಕೆ ಬೆಳ್ಳಿತೆರೆಯ ಕನಸು ಕಂಗಳ‌ ಚೆಲುವೆ. ಸಿನಿ‌ದುನಿಯಾ ಎಂಬ ಕಲರ್ ಫುಲ್ ಜಗತ್ತಿನಲ್ಲಿ ಕಲರ್ ಫುಲ್ ಕನಸು‌ ಕಂಡ ಮೋಹಕ ಬೆಡಗಿ. ನಾಯಕಿಯೋ, ಸಹ ನಟಿಯೋ ಯಾವುದೇ ಪಾತ್ರಕ್ಕೂ ಸೈ ಎನ್ನುವ ಅಲ್ಟ್ರಾ ಮಾರ್ಡನ್ ಹುಡುಗಿ. ಹೆಸರು ಸಾತ್ವಿಕಾ. ಕನ್ನಡ ಸಿನಿಮಾ ಮತ್ತು ಸೀರಿಯಲ್ ಜಗತ್ತಿಗೆ ಈಗಷ್ಟೇ ಪರಿಚಯವಾಗುತ್ತಿರುವ ಹೆಸರು. ಆದರೆ ತೆಲುಗು ಸೀರಿಯಲ್ ಜಗತ್ತಿನಲ್ಲಿ ಸಾಕಷ್ಟು ಹೆಸರು‌ ಮಾಡಿದ‌ ಪ್ರತಿಭಾವಂತೆ. ತೆಲುಗು ಈ ಟಿವಿಯಲ್ಲಿ ಪ್ರಸಾರವಾದ ದ’ ಅತ್ತಾರಿಂಟಿಕಿ ದಾರೆದಿ’ ಹೆಸರಿನ ಧಾರಾವಾಹಿಯಲ್ಲಿ ಸಾತ್ವಿಕಾ ಖಡಕ್ ವಿಲನ್ ಮಿಂಚಿದವರು‌. ವಿಲನ್ ಅಂದ್ರೆ ಬರೀ ವಿಲನ್ ಅಲ್ಲ, ಅದೇ ಅಲ್ಲಿನ ಮೈನ್ ಕ್ಯಾರೆಕ್ಟರ್. ಅವರ ಇನ್ಸ್ಟಾಗ್ರಾಮ್ ಅಕೌಂಟ್ ನಲ್ಲಿದ್ದ ಫೋಟೋ ನೋಡಿಯೇ ಸಾತ್ವಿಕಾ, ಆ ಕ್ಯಾರೆಕ್ಟರ್ ಗೆ ಸೆಲೆಕ್ಟ್ ಆಗಿದ್ರಂತೆ. ಸಾತ್ವಿಕಾ ಮೊದಲೇ ಛಲಗಾತಿ. ಅದೃಷ್ಟವೇ ಎನ್ನುವ ಹಾಗೆ ಸಿಕ್ಕ ಅವಕಾಶವನ್ನು ಸಮರ್ಥವಾಗಿ‌ ಬಳಸಿಕೊಂಡರು. ಆ ಮೂಲಕ ಅಲ್ಲಿ ಮನೆ ಮಾತಾದರು. ಹಾಗಂತ ಪಕ್ಕದೂರು ಎಷ್ಟು ದಿನ?

ಕನ್ನಡವೇ ನನ್ನಮ್ಮ ..

ಕನ್ನಡದವಳಾಗಿ ಕನ್ನಡದಲ್ಲೇ ನಟಿಯಾಗಿ ಮಿಂಚ ಬೇಕೆನ್ನುವ ಮಹಾದಾಸೆ ಹೊತ್ತು, ಈಗ ಸ್ಯಾಂಡಲ್ ವುಡ್ ಅಂಗಳಕ್ಕೂ ದಾಂಗುಡಿಯಿಟ್ಟಿದ್ದಾರೆ. ಎಂಟ್ರಿಯಲ್ಲೇ ನಟ ದಿಗಂತ್ ಅಭಿನಯದ ‘ ಮಾರಿಗೋಲ್ಡ್’ ಹೆಸರಿನ ಒಂದು ಚಿತ್ರದಲ್ಲಿ ಪ್ರಮುಖ‌ ಪಾತ್ರವೊಂದಕ್ಕೂ ಬಣ್ಣ ಹಚ್ಚಿದ್ದಾರೆ. ಆ ಚಿತ್ರ ರಿಲೀಸ್ ಗೂ ರೆಡಿ ಆಗುತ್ತಿದೆ. ಹಾಗೆಯೇ ಶಿವು ಜಮಖಂಡಿ ನಿರ್ದೇಶನದ ಮತ್ತೊಂದು ಚಿತ್ರಕ್ಕೂ ಸೆಲೆಕ್ಟ್ ಆಗಿದ್ದಾರಂತೆ. ಸದ್ಯಕ್ಕೆ ಕನ್ನಡ ಸಿನಿ‌ ದುನಿಯಾದಲ್ಲೆ ನಟಿಯಾಗಿ ಗುರುತಿಸಿಕೊಳ್ಳುವ ಮಹಾದಾಸೆ ಅವರದು. ಹಾಗಾಗಿಯೇ ಈಗ ಹೊಸ ಅವಕಾಶಗಳತ್ತ ಮುಖ ಮಾಡಿರುವ ಸಾತ್ವಿಕಾ, ಒಂದು ಚೆಂದದ ಫೋಟೋಶೂಟ್ ಮಾಡಿಸಿದ್ದಾರೆ. ಹೈಟು, ವೈಟು, ಲುಕು, ಫೇಸು…ಉಹುಂ ಯಾವುದರಲ್ಲೂ ಕಮ್ಮಿಯಿಲ್ಲ ಈ ನಟಿ.

ಕ್ಯಾರೆಕ್ಟರ್ ಮುಖ್ಯ..

ಸಿನಿಮಾ‌ ಅಥವಾ ಸೀ‌ರಿಯಲ್ ಎಲ್ಲದ್ದಕ್ಕೂ ಸೈ ಎನ್ನುವಂತಿರುವ ಪಕ್ಕಾ ಅಲ್ಟ್ರಾ ಮಾಡ್ರನ್ ಹುಡುಗಿ. ದುಂಡು ಮುಖದ ಈ ಚೆಲುವೆ, ತನ್ನ ಅಂದದ ನೋಟದೊಂದಿಗೆ ಬಣ್ಣದ ಲೋಕದಲ್ಲಿ ಹೊಸ ಖದರ್ ತೋರಿಸುವ ತವಕದ. ಪಕ್ಕಾ ಮಾರ್ಡನ್ ಲುಕ್ ಕ್ಯಾರೆಕ್ಟರ್ ಗಳಿಗೆ ಹೇಳಿ ಮಾಡಿಸಿದಂತಿದ್ದರೂ, ಸೀರಿಯಲ್ ದುನಿಯಾದಲ್ಲಿ ಹೋಮ್ಲಿ‌ಗರ್ಲ್ ಆಗಿಯೂ ಮಿಂಚಿದವರು. ಯಾವುದೇ ಪಾತ್ರವಾದರೂ ಸರಿ ಎನ್ನುವ ಪ್ರತಿಭಾವಂತೆ.’ ನಟಿ‌ ಎನ್ನುವುದಕ್ಕಿಂತ ನನಗಿರುವ ಆಸೆ, ಒಬ್ಬ ಕಲಾವಿದೆಯಾಗಿ ಗುರುತಿಸಿಕೊಳ್ಳಬೇಕೆನ್ನುವುದು. ಹಾಗಾಗಿ ಇಂತಹದೇ ಪಾತ್ರ ಬೇಕು ಎನ್ನುವ ಯಾವುದೇ ನಿಬಂಧನೆ ನನ್ನಲ್ಲಿಲ್ಲ. ಪಾತ್ರ ಚೆನ್ನಾಗಿರಬೇಕು, ನನ್ನ ಮನಸ್ಸಿಗೆ ಹಿಡಿಸಬೇಕು, ಜನರಿಗೂ ಅದು ಇಷ್ಟ ಆಗಬೇಕು’ ಎನ್ನುತ್ತಾರೆ ನಟಿ ಸಾತ್ವಿಕಾ.

ಸಾಧನೆಯ ಸಾಹಸಿ..

ಸಾತ್ವಿಕಾ ಬರೀ‌ ನಟಿ ಯಲ್ಲ! ಹೊಸ ತಲೆಮಾರಿನ ಯುವತಿಯರಿಗೆ ಮಾದರಿಯಾಗಬಲ್ಲ ಸಾಧನೆಯ ಛಲಗಾತಿ. ನಟನೆಯ ಮೇಲಿನ ಆಸಕ್ತಿ ಕತೆ ಒಂದು ಕಡೆಯಾದರೆ, ಮತ್ತೊಂದಡೆ ಬಣ್ಣದ ಲೋಕದಲ್ಲೆ ಏನಾದರೂ ಸಾಧಿಸಬೇಕೆನ್ನುವ ಅವರ ಸಾಹಸವೇ ರೋಚಕವಾಗಿದೆ‌. ಸಿನಿಮಾ‌ ಮತ್ತು ಸಿರೀಯಲ್ ಚಿತ್ರೀಕರಣಕ್ಕೆ ಬೇಕಾಗುವ ಸುಂದರ ಮನೆಗಳನ್ನು ಬಾಡಿಗೆ ಆಧಾರದಲ್ಲಿ ಒದಗಿಸುವುದು ಅವರ ಪ್ರಮುಖ ಉದ್ಯೋಗ. ಅದು ಬಿಟ್ಟರೆ ಈಗ ತಮ್ಮದೇ ಒಂದು ಪ್ರೊಡಕ್ಷನ್ ಹೌಸ್ ತೆರೆಯುವ ಸಾಹಸದಲ್ಲಿದ್ದಾರೆ‌.‌ ಒಳ್ಳೆಯ ಸಿನಿಮಾ, ಸೀರಿಯಲ್ ನಿರ್ಮಾಣ ಮಾಡ್ಬೇಕು, ಹೊಸ ಪ್ರತಿಭೆಗಳಿಗೆ ಅವಕಾಶ ಕಲ್ಪಿಸಿಕೊಡ ಬೇಕೆನ್ನುವುದು ಅವರ ಕನಸು. ಅಂದುಕೊಂಡಂತೆ ಅವರ ಆ ಕನಸು ಈಡೇರಲಿ, ನಟಿಯಾಗಿಯೂ ಸಾತ್ವಿಕಾ ಮಿಂಚಲಿ ಎನ್ನುವುದು ಸಿನಿಲಹರಿ ಹಾರೈಕೆ.

error: Content is protected !!