Categories
ಸಿನಿ ಸುದ್ದಿ

ಬೆಳ್ಳಿತೆರೆ ಮೇಲೆ ಹೊಸಬರ ಚಂದ ಮಾಮ, ರವಿ ಕಂಡ ಕನಸು, ಅಭಿಮಾನಿ‌ ಕಣ್ಣಲ್ಲಿ ನನಸು !

80 ರ ದಶಕದ ಕತೆಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ ಮಧು ವೈ.ಜಿ. ಹಳ್ಳಿ

ಬಣ್ಣದ ಲೋಕದಲ್ಲಿ ‘ಚಂದಮಾಮ’ ಅಂದ್ರೆ ಕ್ರೇಜಿಸ್ಟಾರ್ ರವಿಚಂದ್ರನ್ ನೆನಪಾಗ್ತಾರೆ. ಯಾಕಂದ್ರೆ, ಹಿಂದೊಮ್ಮೆ ಅವರು ಅದೇ ಹೆಸರಲ್ಲೊಂದು ಸಿನಿಮಾ ಶುರು ಮಾಡಿದ್ದರು. ಅದ್ಯಾಕೋ ಅದು ಅರ್ಧದಲ್ಲೆ ನಿಂತು ಹೊಯಿತು . ಆದರೇನಂತೆ, ಈಗ ಹೊಸಬರ ತಂಡವೊಂದು ಬೆಳ್ಳಿ ತೆರೆಯ ಮೇಲೆ ಪ್ರೇಕ್ಷಕರಿಗೆ ‘ಚಂದ ಮಾಮ’ ನನ್ನು ತೋರಿಸಲು ಕೈ ಹಾಕಿದೆ. ಅವರ ಪ್ರಯತ್ನ ವೇ ‘ಚಂದಮಾಮ’ ಚಿತ್ರ.

ಮಧು ವೈ.ಜಿ. ಹಳ್ಳಿ ನಿರ್ದೇಶನದ ಚಿತ್ರವಿದು. ಶ್ರೀ ಸಾಯಿ ಭೂಮಿ ಕ್ರಿಯೇಷನ್ಸ್ ಮೂಲಕ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ಯೋಚಿತಾ ಫಿಲ್ಮ್ ಪ್ರೊಡಕ್ಷನ್ ಸಾತ್ ನೀಡಿದೆ. ಚಿಕ್ಕಮಗಳೂರು ಮೂಲದ ತ್ರಿವೇಣಿ ಗಾಂಧಿ, ಹುಬ್ಬಳ್ಳಿ ಯ ಅಸ್ಲಾಂ ಖಾನ್ ಹಾಗೂ ಚಿಕ್ಕಬಳ್ಳಾಪುರ ಮೂಲದ ಸತೀಶ್ ( ಎಚ್ ಎಮ್ ಮಾರ್ಕೆಟ್‌) ಬಂಡವಾಳ ಹಾಕಿ ‘ಚಂದ ಮಾಮ’ ನನ್ನು ಸೃಷ್ಟಿಸುತ್ತಿದ್ದಾರೆ. ಸದ್ದಿಲ್ಲದೆ ‌ಸೆಟ್ಟೇರಿರುವ ಈ ಚಿತ್ರಕ್ಕೀಗ ಅರ್ಧದಷ್ಟು ಚಿತ್ರೀಕರಣವೂ‌ ಮುಗಿದಿದೆ. ಇನ್ನೇನೂ ಪ್ರಚಾರ ಆರಂಭಿಸುವ ಅದರ ಮೊದಲ ಹಂತವಾಗಿ ‘ ಸಂಕ್ರಾಂತಿ ‘ ಹಬ್ಬಕ್ಕೆ ಚಿತ್ರ ಫಸ್ಟ್ ಲುಕ್ ಪೋಸ್ಟರ್ ಲಾಂಚ್ ಆಗಿದೆ.‌ ನಟ ರವಿಚಂದ್ರನ್ ಅವರ ಹಿರಿಯ ಪುತ್ರ ಹಾಗೂ ನಟ ಮನು ರಂಜನ್ ಪೋಸ್ಟರ್ ಲಾಂಚ್ ಮಾಡಿ ಚಿತ್ರಕ್ಕೆ ಶುಭ ಹಾರೈಸಿದರು.

ಚಿತ್ರ ತಂಡ ಪೋಸ್ಟರ್ ಲಾಂಚ್ ಗೆ ನಟ ರವಿಚಂದ್ರನ್ ಅವರ ಪುತ್ರನನ್ನೇ ಆಯ್ಕೆ ಮಾಡಿಕೊಂಡಿದ್ದಕ್ಕೆ ಕಾರಣ , ನಿರ್ದೇಶಕ ಮಧು ವೈ .ಜಿ ಹಳ್ಳಿ ಅವರು ರವಿಚಂದ್ರನ್ ಅವರ ಪಕ್ಕಾ ಆಭಿಮಾನಿ ಆಗಿದ್ದು. ಅದೇ ಕಾರಣ ಕ್ಕಾಗಿಯೇ ಚಂದ ಮಾಮ ಸಿನಿಮಾ ಕೂಡ ಶುರು ವಾಗಿದ್ದಂತೆ. ಹಾಗಂತ ಹೇಳುತ್ತಾರೆ ನಿರ್ದೇಶಕ ಮಧು. ‘ ನನಗಿದು ಚೊಚ್ಚಲ ಸಿನಿಮಾ. ಆದರೂ ಚಿತ್ರೋದ್ಯ ಮದಲ್ಲಿ ಹಲವು ವರ್ಷಗಳಿಂದ ಕೆಲಸ ಮಾಡಿದ ಅನುಭವ ಇದೆ. ಆ ಮೂಲಕವೇ ಸ್ವತಂತ್ರ ವಾಗಿ ಒಂದು ಸಿನಿಮಾ ನಿರ್ದೇಶನ ಮಾಡಬೇಕೆಂದಾಗ ನನಗೆ ಹೊಳೆದ ಮೊದಲ ಶೀರ್ಷಿಕೆ ಯೇ ಚಂದ ಮಾಮ.‌ಅದಕ್ಕೆ ಕಾರಣ ರವಿ ಚಂದ್ರನ್ ಸರ್. ಅವರು ಶುರು ಮಾಡಿ, ಅರ್ಧದಲ್ಲೇ ಕೈ ಬಿಟ್ಟಿದ್ದ ಪ್ರಾಜೆಕ್ಟ್ ಅದು.‌ಅದನ್ನೇ ಮುಂದುವರೆಸೋಣ ಅಂತ ಅದೇ ಹೆಸರಲ್ಲಿ ಈ ಸಿನಿಮಾ‌ ಮಾಡುತ್ತಿದ್ದೇನೆ’ ಎನ್ಜುತ್ತಾರೆ ನಿರ್ದೇಶಕ ಮಧು ವೈ.ಜಿ. ಹಳ್ಳಿ.

ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನವರಾದ ಮಧು ವೈ. ಜಿ. ಹಳ್ಳಿ ಕಿರುತೆರ ಹಾಗೂ ಹಿರಿತೆರೆ ಎರಡರಲ್ಲೂ ಸಹಾಯಕ ನಿರ್ದೇಶಕರಾಗಿ, ಬರಹಗಾರರಾಗಿ ಕೆಲಸ‌ ಮಾಡಿದ್ದಾರಂತೆ. ಧಾರಾವಾಹಿ ನಿರ್ದೇಶನ ಮಾಡಿದ ಅನುಭವ ಕೂಡ ಇದೆಯಂತೆ. ಅದೇ ಅನುಭವದಲ್ಲಿ ತಾವೇ ಒಂದು‌ಕತೆ, ಚಿತ್ರಕತೆ ಹಾಗೂ ಸಂಭಾಷಣೆ ಬರೆದು ಸಿನಿಮಾ ನಿರ್ದೇಶನಕ್ಕೆ ಮುಂದಾದಾಗ, ನಿರ್ಮಾಪಕರಾದ ತ್ರಿವೇಣಿ ಗಾಂಧಿ, ಅಸ್ಲಾಂ ಖಾನ್ ಹಾಗೂ ಸತೀಶ್ ಬೆಂಬಲದಿಂದ ಸಿನಿಮಾ ಸೆಟ್ಟೇರಿ ಅರ್ಧದಷ್ಟು ಚಿತ್ರೀಕರಣ ಮುಗಿಸಿದೆ ಆಂತಾರೆ‌‌ ನಿರ್ದೇಶಕ ಮಧು.

ನಿರ್ಮಾಪಕರು, ನಿರ್ದೇಶಕರ ಹಾಗೆಯೇ ಚಿತ್ರದ ತಾರಾಗಣದಲ್ಲೂ ಬಹುತೇಕ ಹೊಸಬರೇ ಇದ್ದಾರೆ. ರಂಗಭೂಮಿ ಕಲಾವಿದರಾದ ಹುಬ್ಬಳ್ಳಿ ಹುಡುಗ ಆಕಾಶ್ ನಾಯಕರಾಗಿ ಕಾಣಿಸಿಕೊಂಡರೆ, ಮಲಯಾಳಂ ನಟಿ ದೀಪಾ ನಾಯರ್ ಈ ಚಿತ್ರದ ನಾಯಕಿ. ಅವರೊಂದಿಗೆ ಪತ್ರಕರ್ತ ಅಪ್ಜಲ್ ಸೇರಿದಂತೆ ದೊಡ್ಡ ತಂಡವೇ ಚಿತ್ರದಲ್ಲಿದೆ. ಹಾಗೆಯೇ ಶ್ರೀ‌ಪುರಾಣಿಕ್ ಕುಂದಾಪುರ ಛಾಯಾಗ್ರಹಣ, ಕೀರ್ತಿ ಚಂದ್ರ ವರ್ಮ ಅವರ ಸಂಗೀತ ಚಿತ್ರಕ್ಕಿದೆ. ಈಗಾಗಲೇ ಚಿಕ್ಕಬಳ್ಳಾಪುರ, ಶಿಡ್ಲಘಟ್ಟ, ಚಿಂತಾಮಣಿ ಸುತಮುತ್ತ ಚಿತ್ರೀಕರಣ ನಡೆಸಿರುವ ಚಿತ್ರ ತಂಡ, ಶೀಘ್ರದಲ್ಲೇ ಎರಡನೇ ಹಂತದ ಚಿತ್ರೀಕರಣ ಶುರು ಮಾಡಲಿದೆಯಂತೆ.

Categories
ಆಡಿಯೋ ಕಾರ್ನರ್

ಈಗ ಕೃಷ್ಣ ಇನ್ನಷ್ಟು ಮನಮೋಹನ , ಕೇಳುವುದಕ್ಕೆ ಮತ್ತಷ್ಟು ಹೊಸತನ !

ಕೃಷ್ಣ ಟಾಕೀಸ್ ನಿಂದ ಲಾಂಚ್ ಆಯ್ತು ಮತ್ತೊಂದು ಲಿರಿಕಲ್ ವಿಡಿಯೋ ಸಾಂಗ್ 

ನಟ ಅಜೇಯ ರಾವ್ ಅಭಿನಯದ ಬಹುನಿರೀಕ್ಷಿತ ಚಿತ್ರ  ‘ ಕೃಷ್ಣ ಟಾಕೀಸ್’ ‘‌ ನ‌ ಮತ್ತೊಂದು ಲಿರಿಕಲ್ ವಿಡಿಯೋ ಸಾಂಗ್ ಲಾಂಚ್ ಆಗಿದೆ. ಚಿತ್ರ ತಂಡ ಈ ಮೊದಲೇ ಪ್ರಕಟಿಸಿದ ಹಾಗೆ ‘ ಸಂಕ್ರಾಂತಿ ‘ ಹಬ್ಬದಂದು ನಟ ಅಜೇಯ ರಾವ್ ಪುತ್ರಿ ‌ಚೆರ್ರಿ, ಈ ಲಿರಿಕಲ್ ವಿಡಿಯೋ ಅನಾವರಣ ಗೊಳಿಸಿದರು. ನಿರ್ದೇಶಕ ವಿಜಯಾನಂದ್ ಸೇರಿದಂತೆ ಇಡೀ ಚಿತ್ರ ತಂಡ ಇದಕ್ಕೆ ಸಾಥ್ ನೀಡಿ ಸಂಭ್ರಮಿಸಿತು.

ನಿರ್ದೇಶಕ ವಿಜಯಾನಂದ ರಚನೆಯ ‘ ಮನಮೋಹನ, ಮನಮೋಹನ ‘ ಎನ್ನುವ ಗೀತೆಗೆ ರೊಮ್ಯಾಂಟಿಕ್ ಹಾಡುಗಳ ಸರದಾರ ಶ್ರೀಧರ್ ವಿ. ಸಂಭ್ರಮ್ ಸಂಗೀತ ನೀಡಿದ್ದಾರೆ. ಅನ್ವೇಷಾ ಮತ್ತು ವಿಹಾನ್ ಆರ್ಯ ಹಾಡಿದ್ದಾರೆ‌. ಮದನ ಹರಿಣಿ ನೃತ್ಯ ನಿರ್ದೇಶನ‌ ಮಾಡಿದ್ದು,
ಚಿತ್ರದ ನಾಯಕ ಅಜೇಯ್ ರಾವ್ ಹಾಗೂ ನಾಯಕಿ ಅಪೂರ್ವ ಜೋಡಿ ಇಲ್ಲಿ ಮನಸೋತು ಕುಣಿದಿರುವುದೇ ಮೋಹಕವಾಗಿದೆ.

ಈಗಾಗಲೇ ಕೃಷ್ಣ ಟಾಕೀಸ್ ಚಿತ್ರದ ಒಂದು ಹಾಡಿನ ಲಿರಿಕಲ್ ವಿಡಿಯೋ ಯುಟ್ಯೂಬ್ ಮೂಲಕ ಲಾಂಚ್ ಆಗಿತ್ತು. ಈಗ ಎರಡನೇ ಸಾಂಗ್ ಲಿರಿಕಲ್ ವಿಡಿಯೋ ಲಾಂಚ್ ಮಾಡುವ ಮೂಲಕ‌ ಚಿತ್ರ ತಂಡ ಸ್ಯಾಂಡಲ್ ವುಡ್ ನಲ್ಲಿ ಭರ್ಜರಿ ಸೌಂಡ್ ಮಾಡಲು ಸಜ್ಜಾಗಿದೆ. ಕೃಷ್ಣ ಟಾಕೀಸ್ ಎನ್ನುವ ಶೀರ್ಷಿಕೆ ಯೇ ಹೇಳುವ ಹಾಗೆ ಇದೊಂದು ರೊಮ್ಯಾಂಟಿಕ್ ಥ್ರಿಲ್ಲರ್ ಕಥಾ ಹಂದರದ ಸಿನಿಮಾ. ಕೃಷ್ಣ ಅಜೇಯ್ ರಾವ್, ಅಪೂರ್ವ ಹಾಗೂ ಸಿಂಧು ಲೋಕನಾಥ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ಆನಂದ ಪ್ರಿಯಾ ಅಲಿಯಾಸ್ ವರ್ಷದ ವಿಜಯಾನಂದ್ ನಿರ್ದೇಶನ ಮಾಡಿದ್ದು, ಗೋವಿಂದ ರಾಜು ಬಂಡವಾಳ ಹಾಕಿದ್ದಾರೆ.

ಅಜೇಯ ರಾವ್ ನಟನೆಯ ಕೃಷ್ಣ ಸಿರೀಸ್ ನಲ್ಲಿ ಸೂಪರ್ ಡೂಪರ್ ಹಿಟ್ ಸಾಂಗ್ ಕೊಟ್ಟ ಖ್ಯಾತಿ ಸಂಗೀತ ನಿರ್ದೇಶಕ ಶ್ರೀಧರ್ ವಿ. ಸಂಭ್ರಮ್ ಅವರದ್ದು. ಈಗ ಕೃಷ್ಣ ಟಾಕೀಸ್ ಮೂಲಕ ಮತ್ತೊಮ್ಮೆ ಮೋಡಿ ಮಾಡಲು ರೆಡಿ ಆಗಿದ್ದಾರೆ. ಸದ್ಯಕ್ಕೀಗ ಲಿರಿಕಲ್ ವಿಡಿಯೋ ದೊಂದಿಗೆ ಹವಾ ಎಬ್ಬಿಸಲು ಬರುತ್ತಿದ್ದಾರೆ‌. ಕೃಷ್ಷ ಟಾಕೀಸ್ ಎನ್ನುವ ಹೆಸರೇ ಹೇಳುವಂತೆ, ಇದು ಕೃಷ್ಷ ಹೆಸರಿನ ಟಾಕೀಸ್ ವೊಂದರಲ್ಲಿ‌ನಡೆಯುವ ಕತೆ. ಅದೇನು? ಯಾರಿಗೂ ಗೊತ್ತಿಲ್ಲ.‌ಅದು ಗೊತ್ತಾಗುವುದು ತೆರೆ ಮೇಲೆಯೇ. ಇದಕ್ಕೆ ಇನ್ನಷ್ಟು ದಿನ ಕಾಯಬೇಕಿದೆ.

Categories
ಸಿನಿ ಸುದ್ದಿ

ಲಂಕೆಗೆ ಖಳನಟಿ ಈ ನಾಯಕಿ ,ʼಸಿಲಿಕಾನ್‌ ಸಿಟಿʼ ಬೆಡಗಿ, ತೆರೆ ಮೇಲೆ ವಿಲನ್‌ ಆದ ಸ್ಟಾರ್‌ ನಟಿ !

ಗ್ಲಾಮರಸ್‌ ನಟಿ ಕಾವ್ಯ ಶೆಟ್ಟಿ ಈಗ ಬೆಳ್ಳಿ ತೆರೆಗೆ ವಿಲನ್‌ 

ಗ್ಲಾಮರಸ್‌ ನಟಿ ಕಾವ್ಯ ಶೆಟ್ಟಿ ಒಂದಷ್ಟು ಗ್ಯಾಪ್‌ ನಂತರ ಮತ್ತೆ ತೆರೆ ಮೇಲೆ ಬರಲು ರೆಡಿ ಆಗಿದ್ದಾರೆ. ೨೦೧೮ರಲ್ಲಿ ಸಂಹಾರ ಚಿತ್ರದೊಂದಿಗೆ ತೆರೆ ಮೇಲೆ ಕಾಣಿಸಿಕೊಂಡವರು, ಮತ್ತೇಲ್ಲೂ ಸದ್ದು ಮಾಡಿರಲಿಲ್ಲ. ಈಗ “ಲಂಕೆʼ ಹೆಸರಿನ ಚಿತ್ರದ ಮೂಲಕ ಹೊಸ ಅವತಾರದೊಂದಿಗೆ ತೆರೆ ಬರಲು ರೆಡಿ ಅಗಿದ್ದಾರೆ ಕಾವ್ಯ ಶೆಟ್ಟಿ. ಹೌದು, ಇಷ್ಟು ದಿನ ನಾಯಕಿಯಾಗಿ ತೆರೆ ಮೇಲೆ ಗ್ಲಾಮರಸ್‌ ಪಾತ್ರಗಳ ಮೂಕಕ ಮಿಂಚಿದ್ದ ಕಾವ್ಯ ಶೆಟ್ಟಿ, ಈಗ ತೆರೆ ಮೇಲೆ ವಿಲನ್‌ ಆಗಿ ಕಾಣಿಸಿಕೊಂಡಿದ್ದಾರಂತೆ. “ಲಂಕೆʼ ಚಿತ್ರ ಅದೇ ಕಾರಣಕ್ಕೆ ತಮಗೆ ವಿಶೇಷ ಎನ್ನುತ್ತಾರೆ.


ಅಂದ ಹಾಗೆ ಇದು ಲೂಸ್‌ ಮಾದ ಯೋಗೇಶ್‌ ನಾಯಕರಾಗಿ ಅಭಿನಯಿಸಿದ ಚಿತ್ರ. ಸಂಚಾರಿ ವಿಜಯ್‌ ಕಾವ್ಯ ಶೆಟ್ಟಿ, ಬಿಗ್‌ ಬಾಸ್‌ ಖ್ಯಾತಿಯ ಕೃಷಿ ತಾಪಂಡ, ಏಸ್ತರ್‌ ನರೋನಾ ಸೇರಿದಂತೆ ದೊಡ್ಡ ತಾರಾಗಣವೇ ಚಿತ್ರದಲ್ಲಿದೆ. ಕಳೆದ ವರ್ಷವೇ ಸೆಟ್ಟೇರಿ ಚಿತ್ರೀಕರಣ ಮುಗಿಸಿದ ಚಿತ್ರ ಇದು. ಸದ್ಯಕ್ಕೀಗ ಟೈಟಲ್‌ ಲಾಂಚ್‌ ಮಾಡುವ ಮೂಲಕ ಸುದ್ದಿ ಮಾಡಿದೆ. ಇದೇ ವೇಳೆ, ಗ್ಲಾಮರಸ್‌ ನಟಿ ಕಾವ್ಯ ಶೆಟ್ಟಿ ಅವರ ಪಾತ್ರದ ವಿಶೇಷತೆಯೂ ಇಲ್ಲಿ ರಿವೀಲ್‌ ಆಗಿದೆ. ಇದೇ ಮೊದಲ ತಾವು ತೆರೆ ಮೇಲೆ ವಿಲನ್‌ ಆಗಿ ಕಾಣಿಸಿಕೊಳ್ಳುತ್ತಿರುವುದನ್ನು ಅವರೇ ರಿವೀಲ್‌ ಮಾಡಿದ್ದಾರೆ.

” ನನ್ನ ಮಟ್ಟಿಗೆ ಇದೊಂದಉ ವಿಶೇಷವಾದ ಪಾತ್ರ, ಫಸ್ಟ್‌ ಟೈಮ್‌ ವಿಲನ್‌ ಆಗಿ ಕಾಣಸಿಕೊಳ್ಳುತ್ತಿದ್ದೇನೆ. ಲಂಕೆಯಲ್ಲಿ ಒಂಥರ ನಾನು ರಾವಣ. ನಿಜಕ್ಕು ಅದು ಹೇಗಿದೆ ಅನ್ನೋದು ಚಿತ್ರ ನೋಡಿದಾಗ ಗೊತ್ತಾಗಲಿದೆʼ ಎಂದರು ಕಾವ್ಯ ಶೆಟ್ಟಿ. ಹಾಗೆ ನೋಡಿದರೆ ನೆಗೆಟಿವ್‌ ಶೇಡ್‌ ಪಾತ್ರ ಅನ್ನೋದು ಹೊಸದಲ್ಲ. ನಾಗತಿ ಹಳ್ಳಿ ಚಂದ್ರಶೇಖರ್‌ ನಿರ್ದೇಶನದ ಇಷ್ಟಕಾಮ್ಯ ಚಿತ್ರದಲ್ಲಿಯೇ ಅವರ ಪಾತ್ರಕ್ಕೆ ನೆಗೆಟಿವ್‌ ಶೇಡ್‌ ಇತ್ತು. ಈಗ ಇನ್ನೊಂದು ಬಗೆಯಂತೆ. ಅದು ಹೇಗೆ ಅನ್ನೋದಕ್ಕೆ ಚಿತ್ರ ನೋಡಬೇಕಂತೆ. ರಾಮ್‌ ಪ್ರಸಾದ್‌ ನಿರ್ದೇಶನದ ಈ ಚಿತ್ರಕ್ಕೆ ಪಟೇಲ್‌ ಶ್ರೀನಿವಾಸ್‌ ಹಾಗೂ ಸುರೇಖಾ ನಿರ್ಮಾಣ ಮಾಡಿದ್ದಾರೆ.

Categories
ಸಿನಿ ಸುದ್ದಿ

ನಾಟ್‌ ಪ್ರೀಪೇರ್‌, ನಂಗೇನು ಗೊತ್ತಿಲ್ಲ ! ಹಾಗಿದ್ಮೇಲೆ ಈ ನಟ-ನಟಿಯರು ಅಲ್ಲಿಗ್ಯಾಕೆ ಬರ್ಬೇಕು?

ಲಂಕೆ  ಟೈಟಲ್‌  ಲಾಂಚ್‌ ನಲ್ಲೂ ಒಬ್ಬ ನಟಿಯ ಮಾತು ಮುಗಿದಿದ್ದೇ  ಹೀಗೆ…

ಎಲ್ಲಿಗೆ ? ತಕ್ಷಣ ಹೀಗೊಂದು ಪ್ರಶ್ನೆ ನಿಮ್ಮಲ್ಲೂ ಕಾಡಬಹುದು. ವಿಷಯ ಇನ್ನೇನೂ ಅಲ್ಲ. ಇಲ್ಲಿ ಹೇಳ ಹೊರಟಿದ್ದು ಸಿನಿಮಾ ಪ್ರಚಾರ ಕಾರ್ಯಕ್ರಮ ಅಥವಾ ಸಿನಿಮಾ ಸಂಬಂಧಿತ ಪ್ರೆಸ್‌ಮೀಟ್‌ಗಳಲ್ಲಿನ ಅವಾಂತರಗಳ ಕುರಿತು. ಅದ್ಹೇಂಗೆ ಅಂತ ವಿವರಿಸಿ ಹೇಳುವುದಕ್ಕೂ ಮುಂಚೆ ಈ ʼಪ್ರೆಸ್‌ಮೀಟ್‌ʼ ಎನ್ನುವುದರ ಬಗ್ಗೆ ಒಂದಷ್ಟು ಮಾಹಿತಿ ಅಗತ್ಯ. ಇದೆಲ್ಲ ಸಿನಿಮಾ ಮಂದಿಗೆ, ರಾಜಕಾರಣಿಗಳಿಗೆ, ಸಾರ್ವಜನಿಕ ಕ್ಷೇತ್ರಗಳಲ್ಲಿರುವವರೆಗೆ ಗೊತ್ತು. ಅದರಾಚೆ ತೀರಾ ಸಾಮಾನ್ಯ ಜನರಿಗೆ ಹೆಚ್ಚಾಗಿ ಮಾಹಿತಿ ಇರೋದಿಲ್ಲ ಅನ್ನೋದು ಅಷ್ಟೇ ಸತ್ಯ. ಆ ದೃಷ್ಟಿಯಿಂದ ʼ ಪ್ರೆಸ್‌ಮೀಟ್‌ʼ ಬಗ್ಗೆ ವಿವರಿಸುವುದಾದರೆ, ಇದೊಂದು ಮಾಧ್ಯಮ ಹಾಗೂ ಪ್ರಚಾರ ಬಯಸುವವರ ಮುಖಾಮುಖಿ. ಆ ಮೂಲಕ ಜನರಿಗೆ ತಲುಪುವ ಪ್ರಯತ್ನ.

ವಿಶೇಷವಾಗಿ ಸಿನಿಮಾ ಮಂದಿಗೆ ಈ ರೀತಿಯ ಪ್ರಚಾರ ಅತ್ಯಗತ್ಯ. ತಾವು ಮಾಡಿದ ಸಿನಿಮಾದ ಕುರಿತು ಮಾಹಿತಿ ನೀಡಿ, ಅವರನ್ನು ಚಿತ್ರಮಂದಿರಕ್ಕೆ ಕರೆತರಬೇಕಾದ್ರೆ ಮಾಧ್ಯಮದವರೊಂದಿಗಿನ ಸಿನಿಮಾದವರ ಮುಖಾಮುಖಿ ಬೇಕೇ ಬೇಕು. ಹಾಗಂತ ಈ ಪ್ರೆಸ್‌ಮೀಟ್‌ ಕರೆಯೋದು ಅಂದ್ರೆ ಅಷ್ಟು ಸುಲಭ ಅಲ್ಲ. ಈ ಕಾಲಮಾನಕ್ಕೆ ಇದೊಂದು ದುಬಾರಿಯ ಮೀಟ್ !‌ ಆದರೂ, ಕಷ್ಟಪಟ್ಟು ಸಿನಿಮಾ ಮಾಡಿದ ನಿರ್ಮಾಪಕ ಅದನ್ನು ಜನರ ಬಳಿಗೆ ಒಯ್ಯಬೇಕಾದರೆ ಈಗ ಪ್ರಚಾರ ಅನ್ನೋದು ಅಷ್ಟೆ ಅಗತ್ಯ. ಅದಕ್ಕಾಗಿ ಅವರು ಒಂದು ಪ್ರೆಸ್‌ಮೀಟ್‌ ಆಯೋಜಿಸಬೇಕಾದ್ರೆ, ಅದಕ್ಕೊಂದು ಸುಸಜ್ಜಿತವಾದ ಜಾಗ ಫಿಕ್ಸ್‌ ಮಾಡ್ಬೇಕು. ಅದಕ್ಕೆ ಹಲವು ದಿನಗಳಿಂದ ಸಿದ್ಧತೆ ನಡೆಸಬೇಕು. ಸಿನಿಮಾ ಕಲಾವಿದರೆಲ್ಲರನ್ನು ಒಂದೆಡೆ ಸೇರಿಸಬೇಕು, ಇದಕ್ಕೆಲ್ಲ ಲಕ್ಷಾಂತರ ರೂ. ಖರ್ಚು ಮಾಡಬೇಕು, ಇದೆಲ್ಲ ಹೆಣಗಾಟದರ ನಡುವೆ ನಿರ್ಮಾಪಕ ಸುಸ್ತಾಗಿ ಮಾತನಾಡದೆ ಮೌನವಹಿಸುವಾಗ, ನಿರ್ದೇಶಕರು ಸೇರಿ ಕಲಾವಿದರೇ ಆ ಚಿತ್ರದ ಬಗ್ಗೆ ಮಾಧ್ಯಮಕ್ಕೆ ಸಮಗ್ರ ಸುದ್ದಿ ನೀಡಬೇಕು. ಅದು ಬಿಟ್ಟು, ಗ್ಲಾಮರಸ್‌ ಆಗಿ ಬಂದು ವೇದಿಕೆಯ ಮೇಲೆ ಕುಳಿತು, ಮೋಜಿನಲ್ಲಿ ಚುಯಿಂಗ್‌ ಗಮ್‌ ಜಿಗಿಯುತ್ತಾ ಕೈಗೆ ಮೈಕ್‌ ಹಿಡಿದು ಮಾತನಾಡುವಾಗ ” ನಾಟ್‌ ಪ್ರೀಪೇರ್‌, ನಂಗೇನು ಗೊತ್ತಿಲ್ಲʼ ಅಂತ ಮೈಕ್‌ ಕೆಳಗಿಟ್ಟರೆ, ಅಷ್ಟೇಲ್ಲ ಖರ್ಚು ಮಾಡಿ ಸುದ್ದಿಗೋಷ್ಠಿ ಕರೆಯುವ ನಿರ್ಮಾಪಕರ ಕತೆಯೇನು?

ಒಂದು ಪ್ರೆಸ್‌ಮೀಟ್‌ ಆಯೋಜಿಸಬೇಕಾದ್ರೆ, ಅದಕ್ಕೊಂದು ಸುಸಜ್ಜಿತವಾದ ಜಾಗ ಫಿಕ್ಸ್‌ ಮಾಡ್ಬೇಕು. ಅದಕ್ಕೆ ಹಲವು ದಿನಗಳಿಂದ ಸಿದ್ಧತೆ ನಡೆಸಬೇಕು. ಸಿನಿಮಾ ಕಲಾವಿದರೆಲ್ಲರನ್ನು ಒಂದೆಡೆ ಸೇರಿಸಬೇಕು, ಇದಕ್ಕೆಲ್ಲ ಲಕ್ಷಾಂತರ ರೂ. ಖರ್ಚು ಮಾಡಬೇಕು, ಇದೆಲ್ಲ ಹೆಣಗಾಟದರ ನಡುವೆ ನಿರ್ಮಾಪಕ ಸುಸ್ತಾಗಿ ಮಾತನಾಡದೆ ಮೌನವಹಿಸುವಾಗ, ನಿರ್ದೇಶಕರು ಸೇರಿ ಕಲಾವಿದರೇ ಆ ಚಿತ್ರದ ಬಗ್ಗೆ ಮಾಧ್ಯಮಕ್ಕೆ ಸಮಗ್ರ ಸುದ್ದಿ ನೀಡಬೇಕು.

ಅ ಬಗ್ಗೆ ಎಷ್ಟು ಜನ ಕಲಾವಿದರು ಯೋಚಿಸುತ್ತಾರೋ ಇಲ್ಲವೋ ಗೊತ್ತಿಲ್ಲ, ಇತ್ತೀಚೆಗೆ ಸಿನಿಮಾ ಸುದ್ದಿಗೋಷ್ಠಿಗಳಲ್ಲಿ “ನಾಟ್‌ ಪ್ರೀಪೇರ್‌, ನಂಗೇನು ಗೊತ್ತಿಲ್ಲʼ ಎನ್ನುವ ಮಾತು ತುಂಬಾ ಕಾಮನ್‌ ಅಗಿದೆ. ಅತ್ಯಂತ ದುಬಾರಿ ಎನಿಸುವ ಸ್ಟಾರ್ ಹೊಟೇಲ್‌ ಗಳಲ್ಲಿನ ಸುದ್ದಿಗೋಷ್ಠಿಗಳಲ್ಲೂ ಕೆಲವರು ಸಿನಿಮಾದಲ್ಲಿನ ತಮ್ಮ ಪಾತ್ರ, ಸಿನಿಮಾದ ವಿಶೇಷತೆ ಕುರಿತು ಮಾತನಾಡುವ ಬದಲಿಗೆ ನಾಟ್‌‌ ಪ್ರೀಪೆರ್‌ ಅಂತ ಮಾತು ಮುಗಿಸಿ ಬಿಡುತ್ತಾರೆ. ಇಲ್ಲವೇ ಬರೀ ಥ್ಯಾಂಕ್ಸ್‌ ಗಿವಿಂಗ್‌ ಗಷ್ಟೇ ತಮ್ಮ ಮಾತು ಮೀಸಲಿರಿಸಿ, ಮೈಕ್‌ ಕೆಳಗಿಟ್ಟು ಕ್ಯಾಮೆರಾ ಕಡೆ ಮುಖ ಮಾಡುತ್ತಾರೆ. ಮಂಗಳವಾರದ ಸಂಜೆ ಕರೆದಿದ್ದ ʼಲಂಕೆʼ ಸಿನಿಮಾ ಟೈಟಲ್‌ ಲಾಂಚ್‌ ಕಾರ್ಯಕ್ರಮದಲ್ಲೂ ಒಬ್ಬ ನಟಿ ಮಾತು ಇದೇ ಆಗಿತ್ತು. ಸದ್ಯಕ್ಕೆ ಇಲ್ಲಿ ಅವರ ಹೆಸರು ಬೇಡ. ಮುಂದಿನ ದಿನವೂ ಅವರು ಹೀಗೆ ಮಾಡಿದರೆ, ಅವರ ಹೆಸರು ಬಹಿರಂಗ. ಅವರನ್ನ ಬಿಟ್ಟು ಬಿಡಿ, ಕೊನೆ ಪಕ್ಷ ನಿರ್ದೇಶಕರು, ನಿರ್ಮಾಪಕರಿಗೂ ಬುದ್ಧಿ ಬೇಡವೇ? ಹಾಗಂತ ಅನೇಕ ಸುದ್ದಿ ಗೋಷ್ಠಿಗಳಲ್ಲಿ ಆಕ್ಷೇಪಗಳು ಕೇಳಿಬಂದಿದ್ದ ಸತ್ಯ.

Categories
ಸಿನಿ ಸುದ್ದಿ

200 ಎಕರೆ ಎಸ್ಟೇಟು, ನಿರ್ಜನ ಪ್ರದೇಶ, 24 ಜನ, ಒಂದು ತಿಂಗಳು, ನನ್‌ ಲೈಫ್‌ಲ್ಲಿ ಆ ಅನುಭವ ಕಂಡಿದ್ದೇ ಅದೇ ಫಸ್ಟು…!..

  ಆ  ” ಹೀರೋ ʼ ಕುರಿತು ನಟ, ನಿರ್ದೇಶಕ ರಿಷಬ್‌ ಶೆಟ್ಟಿ ಹೀಗೆ ಹೇಳಿದ್ದರ ಹಿಂದಿನ ಕತೆಯೇ ರೋಚಕ…!!!.

ವಿಷಯಕ್ಕೆ ಬರೋಣ, ರಿಷಬ್‌ ಶೆಟ್ಟಿ ಹೇಳಿದ ಈ ಕತೆ ಯಾವುದಕ್ಕೆ ಸಂಬಂಧಿಸಿದ್ದು? ಎಲ್ಲೋ ಹೋಗಿ ಲಾಕ್‌ ಆಗಿ ಅನುಭವಿಸಿದ ಹಾರರ್‌ ಕತೆಯಾ ಅಥವಾ ನಕ್ಸಲೈಟೋ, ಇಲ್ಲವೇ ಯಾವುದಾದ್ರೂ ದರೋಡೆ ಗ್ಯಾಂಗ್‌ನವರ ಕೈಗೆ ಸಿಲುಕಿ, ತಪ್ಪಿಸಿಕೊಂಡು ಬಂದಿದ್ದರ ರಾಬಿನ್‌ ಹುಡ್‌ ಥರದ ಸ್ಟೋರಿಯಾ ? ಅಸಲಿಗೆ, ಈ ಕತೆ ಅದ್ಯಾವುದಕ್ಕೂ ಲಿಂಕ್‌ ಆಗಿದ್ದಲ್ಲ. ಬದಲಿಗೆ ಇದು ಅವರ ” ಹೀರೋʼ ಸಿನಿಮಾದ ಚಿತ್ರೀಕರಣಕ್ಕೆ ಸಂಬಂಧಿಸಿದ್ದು. ರಿಷಬ್‌ ಶೆಟ್ಟಿ ಫಿಲಂಸ್‌ ಮೂಲಕ ಭರತ್‌ ರಾಜ್‌ ನಿರ್ದೇಶನ ಹಾಗೂ ರಿಷಬ್‌ ಶೆಟ್ಟಿ ನಾಯಕರಾಗಿ ಅಭಿನಯಿಸಿರುವ ʼಹೀರೋʼ ಚಿತ್ರ ಈಗ ಚಿತ್ರೀಕರಣ ಮುಗಿಸಿ, ರಿಲೀಸ್‌ಗೆ ರೆಡಿ ಆಗಿದೆ. ನಾಳೆ( ಜ.14) ಸಂಕ್ರಾಂತಿ ಹಬ್ಬಕ್ಕೆ ಈ ಚಿತ್ರದ ಮೊದಲ ಅಫೀಷಿಯಲ್‌ ಟ್ರೈಲರ್‌, ಯುಟ್ಯೂಬ್‌ ಚಾನೆಲ್ ಮೂಲಕ ಲಾಂಚ್‌ ಆಗುತ್ತಿದೆ. ಸಹಜವಾಗಿಯೇ ಅದರ ಬಗ್ಗೆ ದೊಡ್ಡ ನಿರೀಕ್ಷೆಯೂ ಇದೆ.

ಕಾರಣ ಇಷ್ಟೇ, “ಬೆಲ್ ಬಾಟಮ್‌‌ʼ ಚಿತ್ರದ ಬಹುದೊಡ್ಡ ಸಕ್ಸಸ್‌ ನಂತರ ರಿಷಬ್‌ ಶೆಟ್ಟಿ ನಾಯಕರಾಗಿ ಕಾಣಿಸಿಕೊಳ್ಳುತ್ತಿರುವ ಚಿತ್ರ ಇದು. ಹಾಗೆಯೇ ನಿರ್ಮಾಪಕರಾಗಿ ” ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆʼ ಚಿತ್ರದ ಮೂಲಕ ಕಂಡ ಬಹುದೊಡ್ಡ ಗೆಲುವಿನ ನಂತರ ನಿರ್ಮಾಣ ಮಾಡಿದ ಚಿತ್ರ ʼಹೀರೋʼ. ವಿಶೇಷ ಅಂದ್ರೆ ಈ ಚಿತ್ರ ಶುರುವಾಗಿದ್ದೂ, ಚಿತ್ರೀಕರಣ ಮುಗಿಸಿಕೊಂಡು ಬಂದಿದ್ದೂ ಎರಡು ಚಿತ್ರ ತಂಡಕ್ಕೆ ಗೊತ್ತೇ ಆಗಿಲ್ಲವಂತೆ. ಅಂದ್ರೆ, ಶುರುವಾಗಿದ್ದಷ್ಟೇ ಬೇಗ, ಚಿತ್ರೀಕರಣವೂ ಮುಗಿದಿದೆಯಂತೆ. ಅದರಲ್ಲೂ ಲಾಕ್‌ ಡೌನ್‌ ಸಮಯದಲ್ಲೇ ಈ ಚಿತ್ರಕ್ಕೆ ಚಿತ್ರೀಕರಣ ನಡೆದಿದೆ. ಇದು ಪಕ್ಕಾ ಕಮರ್ಷಿಯಲ್‌ ಚಿತ್ರವಾದರೂ, ಆ ಸಿನಿಮಾಗಳ ಚಿತ್ರೀಕರಣದ ಹಾಗೆ ಸೆಟ್‌ನಲ್ಲೂ ಇರುವಷ್ಟು ಜನರೇ ಇಲ್ಲದೆ, ಕೇವಲ ೨೪ ಜನ ಸೆಟ್‌ನಲ್ಲಿದ್ದು ನಿಗದಿತ ಸಮಯದಲ್ಲಿ ಶೂಟಿಂಗ್‌ ಮುಗಿಸಿಕೊಂಡು ಬಂದಿದ್ದು, ರಿಷಬ್‌ ಶೆಟ್ಟಿ ಸಿನಿ ಜರ್ನಿಯಲ್ಲೇ ಇದು ಫಸ್ಟ್‌ ಅಂತೆ. ಟ್ರೈಲರ್‌ ಲಾಂಚ್‌ ಹಿನ್ನೆಲೆಯಲ್ಲಿ ಜ. 13 ರಂದು ಬುಧವಾರ ಚಿತ್ರ ತಂಡದೊಂದಿಗೆ ಮಾಧ್ಯಮದ ಮುಂದೆ ಬಂದಿದ್ದ ನಟ, ನಿರ್ದೇಶಕ ಕಮ್‌ ನಿರ್ಮಾಪಕ ರಿಷಬ್‌ ಶೆಟ್ಟಿ, ʼಹೀರೋʼ ಚಿತ್ರೀಕರಣದ ಆ ರೋಚಕ ಸಂಗತಿಗಳನ್ನು ತೆರೆದಿಟ್ಟರು.

” ಈ ಚಿತ್ರದ ಆಗಿದ್ದೇ ಲಾಕ್‌ ಡೌನ್‌ ಸಮಯದಲ್ಲಿ. ಲಾಕ್‌ಡೌನ್‌ ಇದೆ ಅಂತ ಊರಿಗೆ ಹೋದಾಗ ಎರಡು ತಿಂಗಳು ಕೆಲಸ ಇಲ್ದೆ ಒದ್ದಾಡಿ ಬಿಟ್ಟೆ. ಏನೋ ಮಿಸ್‌ ಮಾಡಿಕೊಳ್ಳುತ್ತಿದ್ದೇನೆ ಅಂತೆನಿಸಿತು. ಹಾಗಾಗಿ ಅಲ್ಲಿಂದ ಮಿಸೆಸ್‌ ಕರ್ಕೊಂಡು ಬೆಂಗಳೂರಿಗೆ ಬಂದು ಬಿಟ್ಟೆ. ಬಂದ್ಮೇಲೆ ಒಂದಷ್ಟು ಗೆಳೆಯರನ್ನು ಅವರಿದ್ದ ಜಾಗಗಳಿಂದಲೇ ಫೋನ್‌ ಮೂಲಕ ಸಂಪರ್ಕಿಸಿ, ಈ ಸಿನಿಮಾದ ಬಗ್ಗೆ ಹೇಳಿದೆ. ಆಗಲೇ ನಿರ್ದೇಶಕ ಭರತ್‌ ರಾಜ್‌ ಕತೆ ಬರೆದಿದ್ರು. ಉಳಿದಂತೆ ಸ್ಕ್ರಿಫ್ಟ್‌ ವರ್ಕ್‌ ತುಂಬಾನೆ ಅರ್ಜೆಂಟ್‌ ಆಗಿ ನಡೆದು ಹೋದವು. ಕಲಾವಿದರು ಬೇಕಲ್ವಾ ಅಂತ ಯೋಚಿಸುತ್ತಿದ್ದಾಗ, ಯಾರೆಲ್ಲ ಕೆಲಸ ಇಲ್ದೆ ಮನೆಯಲ್ಲೇ ಕುಳಿತಿದ್ದಾರೋ ಅವರನ್ನೇ ಆಯ್ಕೆ ಮಾಡ್ಕೊಳೋಣ ಅಂತ ಡಿಸೈಡ್‌ ಮಾಡಿದೆವು. ಜತೆಗೆ ಅವರ ಸೇಫ್ಟಿ ಬಗ್ಗೆಯೋ ಅಷ್ಟೇ ಕೇರ್‌ ವಹಿಸಿದೆವು, ಶೂಟಿಂಗ್‌ ಮುಗಿಯೋ ತನಕ ಮನೆಗೆ ಬರೋ ಹಾಗಿಲ್ಲ ಅಂತ ಸೂಚನೆ ಕೊಟ್ಟೆವು. ಅದಕ್ಕೆ ತಕ್ಕಂತೆ ಲೊಕೇಷನ್‌ ಹಂಟಿಂಗ್‌ ಶುರುವಾಯ್ತು. ನಿರ್ಜನವಾದ 200 ಎಕರೆ ಪ್ರದೇಶದ ಒಂದು ಕಾಫಿ ಎಸ್ಟೇಟ್‌ ಸಿಕ್ಕಿತು. ಕಲಾವಿದರು, ತಾಂತ್ರಿಕ ವರ್ಗದವರು ಸೇರಿ ೨೪ ಜನರ ತಂಡದೊಂದಿಗೆ ಅಲ್ಲಿಗೆ ಹೋದೆವು. ಅಲ್ಲಿಗೆ ಹೋದ ನಂತರ ಆದ ಅನುಭವೇ ಅದ್ಭುತʼ ಎನ್ನುತ್ತಾ ಮುಂದೆ ಹೇಳಲಿದ್ದ ತಮ್ಮ ಅನುಭವದ ಕತೆಗೆ ಮತ್ತಷ್ಟು ಕುತೂಹಲದ ಟ್ವಿಸ್ಟ್‌ ಕೊಟ್ಟರು ನಟ ರಿಷಬ್‌ ಶೆಟ್ಟಿ.

ಲಾಕ್‌ ಡೌನ್‌ ಸಮಯದಲ್ಲಿ ಅನೇಕರಿಗೆ ಹತ್ತಾರು ರೀತಿಯ ಅನುಭವ ಆಗಿವೆ. ಪ್ರತಿಯೊಬ್ಬರದು ಒಂದೊಂದು ಬಗೆ. ಒಬ್ಬ ಸಿನಿಮಾ ಮೇಕರ್‌ ಆಗಿ ರಿಷಬ್‌ ಕಂಡಿದ್ದು ಕೂಡ ಒಂದು ಸಿನಿಮ್ಯಾಟಿಕ್‌ ಅನುಭವವೇ. ಅದನ್ನವರು ಹೀಗೆ ವಿವರಿಸುತ್ತಾರೆ..” ಕತೆಯಲ್ಲಿ ಅಶೋಕ ವನದ ಸನ್ನಿವೇಶ ಇದೆ. ಅದಕ್ಕೆ ತಕ್ಕಂತೆಯೇ ಇರಲಿ ಅಂತ ನಾವು ಊರ ಹೊರಗಿನ ಆ ಎಸ್ಟೇಟ್‌ ಹುಡುಕಿಕೊಂಡಿದ್ದೆವು. ಊರಿನಿಂದ ಅದು ತುಂಬಾ ದೂರ ಅದು. ಏನಾದ್ರೂ ಬೇಕಿದ್ದರೆ, ಸಿಟಿ ಗೆ ಹೋಗಿ ಬರೋದಿಕ್ಕೆ ಒಂದಿನ ಬೇಕಿತ್ತು. ಹಾಗಾಗಿ ನಾವು ಮತ್ತೆ ಸಿಟಿಗೆ ಹೋಗಿ ಬರುವ ತಾಪತ್ರಯಗಳನ್ನು ದೂರ ವಿಟ್ಟು, ವಾಸ್ತವ್ಯ, ಅಡುಗೆ-ಉಡುಗೆಯ ಸರಕು ಸರಂಜಾಮುಗಳ ಸಮೇತ ಅಲ್ಲಿಗೆ ಹೋಗಿದ್ದೆವು. ತಂಡದ ಹಿರಿಕರು, ಅನುಭವಿಗಳು ಆದ ಪ್ರಮೋದ್‌ ಶೆಟ್ಟಿ ಹಾಗೂ ನಟ ಮಂಜುನಾಥ್‌ ಗೌಡ ಒಂದೇ ದಿನದಲ್ಲಿ ಸೆಟ್‌ ಪ್ರಾಪರ್ಟಿ ತಂದುಕೊಟ್ಟರು. ಸುಹಾಸ್‌ ಅಡುಗೆ ನೋಡಿಕೊಂಡರು. ಕೇವಲ ೨೪ ಜನ ಮಾತ್ರ ನಾವಲ್ಲಿದ್ದೆವು. ಕಲಾವಿದರಾಗಿ ಕ್ಯಾಮೆರಾ ಎದುರಿಸಿದವರೇ, ಸೆಟ್‌ ಬಾಯ್‌ ಆಗಿ ಕೆಲಸ ಮಾಡಿದರು. ಬಹುಶಃ, ಒಂದು ಕಮರ್ಷಿಯಲ್‌ ಸಿನಿಮಾಕ್ಕೆ ಇಷ್ಟು ಕಡಿಮೆ ಜನ ಇಟ್ಕೊಂಡು ಚಿತ್ರೀಕರಣ ಮಾಡಿದ್ದು ಇದೇ ಮೊದಲಿರಬೇಕು. ನನ್ನ ಸಿನಿ ಜರ್ನಿಗೆ ಇದೇ ಮೊದಲು. ಲೈಫ್‌ ನಲ್ಲಿ ಅಂತಹ ಅನುಭವ ಕಂಡೇ ಇರಲಿಲ್ಲ. ಸಿನಿಮಾದಲ್ಲಿ ರಕ್ತ ಇದೆ, ಹಾಗೆಯೇ ಅದರ ಚಿತ್ರೀಕರಣಕ್ಕೂ ಕೆಲವರು ರಕ್ತ ಹರಿಸಿದ್ದಾರೆ. ನಿದ್ದೆ – ನೀರಡಿಕೆ  ಬಿಟ್ಟು ಚಿತ್ರೀಕರಣ ಮಾಡಿದ್ದೇವೆ. ಮಜಾ ಮಾಡ್ಲಿಕ್ಕೆ ಬಂದಿದ್ದೇವೆ ಅಂತ ಯಾರಿಗೂ ಎನಿಸಲಿಲ್ಲ. ಅದೆಲ್ಲದರ ಪ್ರತಿಫಲವೇ ʼಹೀರೋʼ. ಅಂತ ಅದರ ಚಿತ್ರೀಕರಣದ ಅನುಭವ ಹೇಳಿಕೊಂಡರು ರಿಷಬ್‌ ಶೆಟ್ಟಿ.

ಅಂದ ಹಾಗೆ,  ರಿಲೀಸ್‌ ಗೆ ರೆಡಿಯಾಗಿರುವ ಹೀರೋ ಸಿನಿಮಾ ಅತೀ ಶೀಘ್ರದಲ್ಲೇ ತೆರೆಗೆ ಬರಲಿರುವುದು ಗ್ಯಾರಂಟಿ ಅಂತೆ.

Categories
ಸಿನಿ ಸುದ್ದಿ

ಸಂಕ್ರಾಂತಿಗೆ ಕೃಷ್ಣ ಟಾಕೀಸ್ ನಲ್ಲಿ ಸಂ – ಕ್ರಾಂತಿ, ಲಿರಿಕಲ್ ವಿಡಿಯೋ ಲಾಂಚ್ ಗೆ ನಟ ಅಜೇಯ ರಾವ್ ಪುತ್ರಿಯೇ ಗೆಸ್ಟ್ ! !

ಸಂಕ್ರಾಂತಿ ಗೆ ಸಂಗೀತದ ಸಂ-ಕ್ರಾಂತಿ

ನಟ ಅಜೇಯ ರಾವ್ ಈಗ  ‘ ಕೃಷ್ಣ ಟಾಕೀಸ್’ ‘‌  ಚಿತ್ರದ ಗುಂಗಿನಲ್ಲಿದ್ದಾರೆ. ಈ ವರ್ಷದ ಆರಂಭದ ಮಟ್ಟಿಗೆ ಇದು ಅವರಿಗೆ ಬಹು ನಿರೀಕ್ಚಿತ ಚಿತ್ರ. ಅವರ ಹಾಗೆಯೇ ‌ ಇಡೀ ಚಿತ್ರ ತಂಡಕ್ಕೂ ಕೂಡ. ಅದರಲ್ಲೂ ನಾಳಿನ‌ ( ಜ.14) ಸಂಕ್ರಾಂತಿ ‘ಕೃಷ್ಷ ಟಾಕೀಸ್ ‘ಚಿತ್ರ ತಂಡಕ್ಕೆ ತುಂಬಾನೆ ವಿಶೇಷ.ಯಾಕಂದ್ರೆ, ಸಂಕ್ರಾಂತಿ‌ಗೆ ಈ ಚಿತ್ರದ ಎರಡನೇ ಹಾಡಿನ ಲಿರಿಕಲ್ ವಿಡಿಯೋ ಲಾಂಚ್ ಆಗುತ್ತಿದೆ. ಸಂಕ್ರಾಂತಿ ಹಬ್ಬದ ಕೊಡುಗೆಯಾಗಿ ಸೋಷಲ್ ಮೀಡಿಯಾದಲ್ಲಿ ಲಾಂಚ್ ಆಗುತ್ತಿರುವ ಈ ಲಿರಿಕಲ್ ವಿಡಿಯೋ ವನ್ನು ಕೃಷ್ಷ ಅಜೇಯ ರಾವ್ ಪುತ್ರಿ ಪುಟಾಣಿ ಚೆರ್ರಿ ಲಾಂಚ್ ಮಾಡುತ್ತಿದ್ದಾಳೆ. ಅದೇ ಕಾರಣಕ್ಕೆ ಚಿತ್ರ ತಂಡ ಕಾತರದಲ್ಲಿದೆ.

ಗೋಕುಲ್ ಎಂಟರ್ಟೈನರ್ ಬ್ಯಾನರ್ ನಲ್ಲಿ ಗೋವಿಂದ್ ರಾಜು ನಿರ್ಮಾಣ ಮಾಡಿರುವ ಈ ಚಿತ್ರಕ್ಕೆ ವಿಜಯಾನಂದ್ ಆಕ್ಷನ್ ಕಟ್ ಹೇಳಿದ್ದಾರೆ. ಜನಪ್ರಿಯ ಸಂಗೀತ ನಿರ್ದೇಶಕ ಶ್ರೀಧರ್ ವಿ. ಸಂಭ್ರಮ್ ಸಂಗೀತ ಸಂಯೋಜನೆ ಮಾಡಿದ್ದು, ಸೊಗಸಾದ ಹಾಡುಗಳನ್ನು ಕೊಟ್ಟ ಖುಷಿ ಅವರಿಗೂ ಇದೆ. ಈಗ ಈ ಚಿತ್ರದ ಎರಡನೇ ಹಾಡಿನ ಲಿರಿಕಲ್ ವಿಡಿಯೋ ಲಾಂಚ್ ಆಗುತ್ತಿದೆ. ಹಾಡಿಗೆ ವಿಜಯಾನಂದ ರಚನೆ ಇದೆ.  ‘ ಚಿತ್ರದಲ್ಲೇ ಹೈಲೈಟ್ ಎನ್ನುವಂತಹ ತುಂಬಾ ಮುದ್ದಾದ ಹಾಡು ಇದು.


ಬಹಳ ಸೊಗಸಾಗಿ‌ ಮೂಡಿ ಬಂದಿದೆ. ಇದರ ಲಿರಿಕಲ್ ವಿಡಿಯೋ ವನ್ನು ಈಗ ಚಿತ್ರದ ನಾಯಕ ನಟ ಕೃಷ್ಷ ಅಜೇಯ್ ರಾವ್ ಪುತ್ರಿ ಚೆರ್ರಿ ಲಾಂಚ್ ಮಾಡುತ್ತಿರುವುದು ತುಂಬಾ ತುಂಬಾ‌ ಖುಷಿ ತಂದಿದೆ’ ಎನ್ನುತ್ತಾರೆ ಸಂಗೀತ ನಿರ್ದೇಶಕ ಶ್ರೀಧರ್ ವಿ. ಸಂಭ್ರಮ್.

ಅಜೇಯ್ ರಾವ್ ಪುತ್ರಿ ಚೆರ್ರಿ

ಅಜೇಯ ರಾವ್ ನಟನೆಯ ಕೃಷ್ಣ ಸಿರೀಸ್ ನಲ್ಲಿ ಸೂಪರ್ ಡೂಪರ್ ಹಿಟ್ ಸಾಂಗ್ ಕೊಟ್ಟ ಖ್ಯಾತಿ ಸಂಕ್ರಾಂತಿ, ನಿರ್ದೇಶಕ ಶ್ರೀಧರ್ ಅವರದು‌. ಈಗ ಕೃಷ್ಣ ಟಾಕೀಸ್ ಮೂಲಕ ಮತ್ತೊಮ್ಮೆ ಮೋಡಿ ಮಾಡಲು ರೆಡಿ ಆಗಿದ್ದಾರೆ. ಸದ್ಯಕ್ಕೀಗ ಲಿರಿಕಲ್ ವಿಡಿಯೋ ದೊಂದಿಗೆ ಹವಾ ಎಬ್ಬಿಸಲು ಬರುತ್ತಿದ್ದಾರೆ‌. ಕೃಷ್ಷ ಟಾಕೀಸ್ ಎನ್ನುವ ಹೆಸರೇ ಹೇಳುವಂತೆ, ಇದು ಕೃಷ್ಷ ಹೆಸರಿನ ಟಾಕೀಸ್ ವೊಂದರಲ್ಲಿ‌ನಡೆಯುವ ಕತೆ. ಅದೇನು? ಯಾರಿಗೂ ಗೊತ್ತಿಲ್ಲ.‌ಅದು ಗೊತ್ತಾಗುವುದು ತೆರೆ ಮೇಲೆಯೇ. ಈ ಕತೆಯಲ್ಲಿ ಅಜೇಯ್ ರಾವ್ ಅವರಿಗೆ ಜೋಡಿಯಾಗಿ ಸಿಂಧು ಲೋಕನಾಥ್, ಅಪೂರ್ವ ಇದ್ದಾರೆ‌. ಉಳಿದಂತೆ ದೊಡ್ಡ ತಾರಾಗಣವೇ ಇದೆ.

Categories
ಸಿನಿ ಸುದ್ದಿ

ಲೂಸ್ ಮಾದ ಯೋಗಿ ಬಗ್ಗೆ ಇಂಡಸ್ಟ್ರಿ ನವರು ಯಾಕೆ ಹಾಗೆ ಹೇಳಿದ್ರು? ನಿರ್ದೇಶಕ ರಾಮ್ ಪ್ರಸಾದ್ ರಿವೀಲ್ ಮಾಡಿದ ಸುದ್ದಿ ಹೀಗಿದೆ…..

ಲಂಕೆ ಟೈಟಲ್ ಅನಾವರಣ ಕಾರ್ಯಕ್ರಮದಲ್ಲಿ ರಿವೀಲ್ ಆದ ಸುದ್ದಿ


ನಟ ಲೂಸ್ ಮಾದ ಯೋಗೇಶ್ ಈಗ’ ಲಂಕೆ ‘ ಚಿತ್ರದೊಂದಿಗೆ ತೆರೆ ಮೇಲೆ ಕಾಣಿಸಿಕೊಳ್ಳಲು ರೆಡಿಯಾಗಿದ್ದಾರೆ. ಈಗಾಗಲೇ ಈ ಚಿತ್ರ ಚಿತ್ರೀಕರಣ ಮುಗಿಸಿ, ಸೆನ್ಸಾರ್ ಹಂತಕ್ಕೆ ಕಾಲಿಟ್ಟಿದೆ. ಎಲ್ಲವೂ ಅಂದುಕೊಂಡಂತಾದರೆ, ಫೆಬ್ರವರಿ ಅಥವಾ ಮಾರ್ಚ್ ತಿಂಗಳಲ್ಲಿ ಈ ಚಿತ್ರ ಬಿಡುಗಡೆ ಆಗುವ ಸಾಧ್ಯತೆಗಳಿವೆ. ಲೂಸ್ ಮಾದ ಯೋಗೇಶ್, ಸಂಚಾರಿ ವಿಜಯ್, ಕಾವ್ಯ ಶೆಟ್ಟಿ ಸೇರಿದಂತೆ ದೊಡ್ಡ ತಾರಾಗಣವೇ ಈ ಚಿತ್ರದಲ್ಲಿದೆ. ಇನ್ನು ಶೀರ್ಷಿಕೆ ಯೇ ಹೇಳುವ ಹಾಗೆ ಇದು ರಾಮಾಯಣ ಕ್ಕೆ ಸಣ್ಣದೊಂಡು ಲಿಂಕ್ ಹೊಂದಿರುವ ಕತೆ.

ಅದೆಲ್ಲದರಾಚೆ ಇಂಟೆರೆಸ್ಟಿಂಗ್ ಸಂಗತಿ ಅಂದ್ರೆ ಲೂಸ್ ಮಾದ ಯೋಗೇಶ್ ಅವರು ಈ ಚಿತ್ರಕ್ಕೆ ನಾಯಕರಾಗಿದ್ದೇ ವಿಚಿತ್ರವಂತೆ. ಯಾಕಂದ್ರೆ ನಿರ್ದೇಶಕ ರಾಮ್ ಪ್ರಸಾದ್ ಅವರು ಚಿತ್ರಕ್ಕೆ ನಾಯಕ ಆಗ್ಬೇಕು ಅಂತ ಯೋಗೇಶ್ ಅವರ ಬಳಿಗೆ ಹೋಗುವ ಮುನ್ನ ಇಂಡಸ್ಟ್ರಿ ಅವರ ಬಗ್ಗೆ ಎನೇನೋ ಹೇಳಿತ್ತಂತೆ. ಹಾಗಾಗಿ ಅವರನ್ನು ಅಪ್ರೋಚ್ ಮಾಡೋದು ಹೇಗೋ ಏನೋ ಅಂತ ಯೋಚ್ನೆ ಮಾಡಿದ್ರಂತೆ. ಕೊನೆಗೆ ಭಯದಿಂದಲೇ ನಟ‌ಯೋಗಿ ಅವರನ್ನು ಭೇಟಿ ಮಾಡಿದಾಗ ಅವರ ನಿಜವಾದ ಪರಿಚಯ ವಾಯಿತ್ತಂತೆ. ಅವರ ಪ್ರಕಾರ ಯೋಗಿ ಅಂದ್ರೆನೇ ಬೇರೆ.


‘ ಯೋಗಿ ಅಂದ್ರೆ ಸಹೋದರ, ಯೋಗಿ ಅಂದ್ರೆ ಗೆಳೆಯ,ಯೋಗಿ ಅಂದ್ರೆ ಅಡೋರೆಬಲ್…ಏನ್ ಹೇಳಿದ್ರು ಕಮ್ಮಿನೇ…ಯೋಗಿ ಅಂದ್ರೆ ಏನು ಅಂತ ನಂಗೆ ಅವರನ್ನು ಭೇಟಿ ಮಾಡಿದ ಮೊದಲ ದಿನವೇ ಗೊತ್ತಾಯಿತು.ಯಾರೇರೋ ಏನೇನೋ ಹೇಳಿದ್ರಲ್ಲಾ ಅಂತ ನಂಗೆ ನಾನೇ ಅಚ್ಚರಿ ಪಟ್ಟೆ. ಅವರ ಜತೆಗೆ ಬೇಕಾದ್ರೆ ಇನ್ನು ಹತ್ತು ಸಿನಿಮಾ ಮಾಡಬಲ್ಲೆ. ಅಷ್ಟು ಸಹಕಾರದ ಮನೋಭಾವ ಇರುವ ನಟ’ ಅಂತ ಯೋಗಿ ಅವರನ್ನು ಮುಕ್ತ ಕಂಠದಿಂದ ಬಣ್ಣಿಸಿದರು ನಿರ್ದೆಶಕ ರಾಮ್ ಪ್ರಸಾದ್. ಕೊನೆಗೆ ಯೋಗಿ ಮಾತನಾಡುತ್ತಾ, ಯಾರು ಹಂಗೆ ಹೇಳಿದ್ದು ಅವ್ರ ನಂಬರ್ ಕೊಡಿ, ನಾನೇ ಅವರಿಗೆ ಕಾಟ ಕೊಡ್ತೀನಿ’ ಅಂತ ಕಾಮಿಡಿ ಮೂಲಕ ತಮ್ಮ ವಿರುದ್ಧ ಹೇಳಿದವರಿಗೆ ತಿರುಗೇಟು ಕೊಟ್ಟರು ಯೋಗೇಶ್.

Categories
ಸಿನಿ ಸುದ್ದಿ

ಬೆಳ್ಳಿತೆರೆಯ ಮೇಲೆ ಅಬ್ಬರಿಸುವ ಕಿಚ್ಚ ಸುದೀಪ್‌ ಇವರೆನಾ  ?  ಫೆಟ್ಟಲ್‌ ಕೋರ್ಟ್‌ ನಲ್ಲಿ ಸುದೀಪ್‌ ಅವರನ್ನು ಕಂಡು ನಟ ಸಂಚಾರಿ ವಿಜಯ್‌ ಹೀಗೇಕೆ ಹೇಳಿದರು?

ಸೋಮವಾರ ಸಂಜೆಯ  ಸುಂದರ  ಸವಿಗಾನ,  ಸುದೀಪ್‌ ಅವರ ಜತೆಗಿನ ಸವಿ ಮಾತು 

ನಟ ಕಿಚ್ಚ ಸುದೀಪ್‌ ಅಂದ್ರೆ ಬರೀ ನಟರು ಮಾತ್ರವಲ್ಲ, ಅತ್ಯಾದ್ಬುತ ನಿರೂಪಕ ಎನ್ನುವುದು ಎಷ್ಟು ಸತ್ಯವೋ ಹಾಗೆಯೇ ಎಕ್ಸಾಟಾರ್ಡಿನರಿ ‌ ಸ್ಪೋರ್ಟ್‌ ಪರ್ಸನ್‌ ಕೂಡ ಹೌದು. ಅದಕ್ಕೆ ಸಾಕ್ಷಿ ಕಳೆದ ಮೂರ್ನಾಲ್ಕು ವರ್ಷಗಳಿಂದ ಸ್ಯಾಂಡಲ್‌ ವುಡ್‌ ನಲ್ಲಿ ಭಾರೀ ಸದ್ದು ಮಾಡಿದ ಸೆಲೆಬ್ರಿಟಿ ಕ್ರಿಕೆಟ್‌ ಲೀಗ್.‌

ಕ್ರಿಕೆಟ್‌ ಅಂದ್ರೆ ಅವರಿಗೆ ಅಷ್ಟೊಂದು ಕ್ರೇಜ್.‌ ಆ ಮೂಲಕ ಅವರು ಇಂಡಿಯಾ ಕ್ರಿಕೆಟ್‌ ಟೀಮ್‌ ನ ಹಲವು ಆಟಗಾರರ ಸ್ನೇಹ ಬೆಳೆಸಿದ್ದು, ಲಂಡನಿನ ಲಾರ್ಡ್ಸ್‌ ಕ್ರೀಡಾಂಗಣದಲ್ಲಿ ಕ್ರಿಕೆಟ್‌ ಆಡಿ ಬಂದಿದ್ದು ಎಲ್ಲವೂ ದಾಖಲೆ. ಬರೀ ಕ್ರಿಡಾಂಗಣದಲ್ಲಿ ಮಾತ್ರವಲ್ಲ, ಶೂಟಿಂಗ್‌ ಸಮಯದ  ಬಿಡುವಿನ ವೇಳೆಯಲ್ಲೂ ಅವರು ಬೀದಿಯಲ್ಲೇ ಗಲ್ಲಿ ಬಾಯ್ಸ್‌ ಥರ ಕೈಗೆ ಬ್ಯಾಟ್‌ ಹಿಡಿದು ಆಟಕ್ಕೆ ನಿಲ್ಲುತ್ತಾರಂತೆ. ಇತ್ತೀಚೆಗೆ “ಫ್ಯಾಂಟಮ್‌ʼ ಶೂಟಿಂಗ್‌ ಟೈಮ್ನ್‌ ನಲ್ಲೂ ಕ್ರಿಕೆಟ್‌ ಆಡಿದ್ದು ಅದಕ್ಕೆ ಮತ್ತೊಂದು ಸಾಕ್ಷಿ.

ಅದರಾಚೆ ಅಂದ್ರೆ, ಕ್ರಿಕೆಟ್‌ ಮಾತ್ರವಲ್ಲದೆ ಬ್ಯಾಡ್ಮಿಂಟನ್ ಆಟದಲ್ಲೂ ಅವರದು ಎತ್ತಿದ ಕೈ. ಬ್ಯಾಟ್‌ ಹಿಡಿದು ಕೋರ್ಟ್‌ ನಲ್ಲಿ ನಿಂತರೆ, ಎದುರಾಳಿಗೆ ನಡುಕ ಶುರುವಾಗುವುದು ಗ್ಯಾರಂಟಿ. ಬೆಂಗಳೂರಿನ ಫೆಟ್ಟಲ್‌ ಬ್ಯಾಡ್ಮಿಂಟನ್‌ ಕೋರ್ಟ್‌ ಸೋಮವಾರ ಸಂಜೆ, ಸುದೀಪ್‌ ಅವರು ಪ್ರದರ್ಶಿಸಿದ ಅಂತಹದೊಂದು ಅತ್ಯಾದ್ಭುತ ಬ್ಯಾಡ್ಮಿಂಟನ್‌ ಆಟವನ್ನು ಕಣ್ಣಾರೆ ಕಂಡು, ಒಂದು ತಾಸು ತಾವು ಅವರೊಂದಿಗೆ ಬ್ಯಾಡ್ಮಿಂಟನ್‌ ಅಡಿದ ಅನುಭವವನ್ನು ರಾಷ್ಟ್ರ ಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್‌ ಇಲ್ಲಿ ಹೀಗೆ ವಿವರಿಸುತ್ತಾರೆ.

ಒವರ್‌ ಟು ಸಂಚಾರಿ ವಿಜಯ್…

ಸೋಮವಾರ ಸಂಜೆ ಎಂದಿನಂತೆ ನಾನು ನನ್ನ ಗೆಳೆಯರು ಫೆಟ್ಟಲ್ ಬ್ಯಾಡ್ಮಿಂಟನ್ ಕೋರ್ಟ್ನಲ್ಲಿ ಬ್ಯಾಡ್ಮಿಂಟನ್ ಆಡುತ್ತಿದ್ದೆವು. ಹೊರಗೆ ಇಳಿ ಸಂಜೆಯಾಗಿ ಮಂದ ಬೆಳಕು ಚೆಲ್ಲಿತ್ತು. ಇನ್ನೇನು ನಾವು ಒಂದು ಸುತ್ತಿನ ಆಟ ಮುಗಿಸಿ, ಎರಡನೇ ಸುತ್ತಿಗೆ ರೆಡಿಯಾಗಬೇಕೆನ್ನುವಾಗ ಇದ್ದಕ್ಕಿದ್ದ ಹಾಗೆ ಬ್ಯಾಡ್ಮಿಂಟನ್ ಕೋರ್ಟಿನ ಬಾಗಿಲು ತೆರೆಯಿತು. ಅಲ್ಲಿಂದ ೬ ಅಡಿಯ ಕಟೌಟ್‌ನ ಕಟ್ಟುಮಸ್ತಾದ ದೇಹಾಕೃತಿಯ ಆಕೃತಿಯೊಂದು ಅಸ್ಪಷ್ಟವಾಗಿ ಕಾಣಿಸಿತು. ನನಗೆ ಈ ಆಕೃತಿಯನ್ನು ಎಲ್ಲೋ ನೋಡಿದ ಹಾಗೆ ಕಾಣುತ್ತಿದೆಯಲ್ಲಾ ಎಂದು ದಿಟ್ಟಿಸಿದೆ. ಹತ್ತಿರ ಹೋಗಿ ನೋಡಿದೆ. ಮಂದನೆಯ ಆ ಲೈಟ್ ಬೆಳಕಿಗೆ ಪ್ರಜ್ವಲಮಾನವಾಗಿ ನಮಗೆ ಕಂಡದ್ದು ಕಿಚ್ಚ ಸುದೀಪ್ ಸರ್. ನಮಗೋ…ಆಶ್ಚರ್ಯವೋ ಆಶ್ಚರ್ಯ. ಸಾಮಾನ್ಯವಾಗಿ ಸಾರ್ವಜನಿಕವಾಗಿ ಎಲ್ಲೂ ಕಾಣಿಸಿಕೊಳ್ಳದ ಸುದೀಪ್‌ ಸರ್‌, ಹೀಗೆ ಧಿಡೀರನೆ ಕಾಣಿಸಿಕೊಂಡಿದ್ದನ್ನು ನೋಡಿ ಒಂದು ಕ್ಷಣ ಮೂಕವಿಸ್ಮಿತರಾದೆವು.

ನಮಗೇನೋ ಭಯ, ಆದ್ರೆ ಅವರು ಕೇಳ್ಬೇಕೆ, ಎಲ್ಲರೊಡನೆ ಒಂದಾಗಿ ಆತ್ಮೀಯವಾಗಿ ನಮ್ಮೆಲ್ಲರ ಯೋಗಕ್ಷೇಮ ವಿಚಾರಿಸಿದರು. ಹಾಗೆ ಮಾತನಾಡುತ್ತಾ ಅತ್ಯಂತ ಆತ್ಮೀಯತೆಯಲ್ಲಿ ಒಂದಾದರು. ಹಾಗೆಯೇ ಮಾತನಾಡುತ್ತಾ ಅವರು ಕೋರ್ಟ್‌ ಒಳಗಡೆ ಬರುತ್ತಿದ್ದಾಗ, ಇವರೇನಾ ತೆರೆಯ ಮೇಲೆ ಅಬ್ಬರಿಸೋ ಕಿಚ್ಚ ಸರ್ ಅನ್ನಿಸಿದ್ದು ಸುಳ್ಳಲ್ಲ.ಆನಂತರ ಸುಮಾರು ಒಂದು ಗಂಟೆಗಳ ಕಾಲ ನಮ್ಮೊಡನೆ ಆಟವಾಡಿದರು. ಒಂದಷ್ಟು ದೈಹಿಕ ಕಸರತ್ತಿನ ಬಗ್ಗೆ ಮಾತನಾಡಿದರು. ಅದೇ ಎನರ್ಜಿ, ಅಷ್ಟೇ ತೂಕದ ಮಾತುಗಳು. ಯಾವ ಹಮ್ಮು-ಬಿಮ್ಮು ಇಲ್ಲದೆ ಎಲ್ಲರ ಜೊತೆಗೂಡಿ ಅವರ ಅಮೂಲ್ಯವಾದ ಸಮಯವನ್ನು ಕಳೆದದ್ದು ಒಂದು ಸುಂದರ ಸಂಜೆಗೆ ಸಾಕ್ಷಿಯಾಯಿತು. ಮತ್ತೆ ಯಾವ ಸಿನೆಮಾ ಮಾಡ್ತಾ ಇದ್ದೀರಿ? ” ಆಕ್ಟ್ 1978ʼ ಸಿನಿಮಾವನ್ನು ಮನೆಯಲ್ಲೇ ನೋಡಿದೆ ತುಂಬಾ ಚೆನ್ನಾಗಿದೆ. ಇಂತಹ ಸಿನಿಮಾಗಳು ಬರಬೇಕು ಅಂತ ಆಕ್ಟ್‌ 1978 ಚಿತ್ರ ತಂಡದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು.

ಫೆಟ್ಟಲ್‌ ಬ್ಯಾಡ್ಮಿಂಟನ್‌ ಕೋರ್ಟ್‌ ನಲ್ಲಿ ಸೋಮವಾರ ನಟ ಕಿಚ್ಚ ಸುದೀಪ್‌ ಅವರೊಂದಿಗೆ ಕಳೆದ ಆ ಸುಂದರ ಸಮಯವನ್ನು ನಟ ಸಂಚಾರಿ ವಿಜಯ್‌ ಹೀಗೆ ಕಟ್ಟಿಕೊಟ್ಟರು. ಇನ್ನು ತಾವು ಒಬ್ಬ ಸ್ಟಾರ್‌ ನಟರಾದರೂ, ಕಿಂಚಿತ್ತು ಅಹಂ ಇಟ್ಟುಕೊಳ್ಳದೆ ತಾವಾಯಿತು, ತಮ್ಮ ಕೆಲಸವಾಯಿತು ಎನ್ನುವಂತಹ ಮನಸ್ಥಿತಿ ನಡುವೆಯೇ ಸಾಮಾಜಿಕ ಕೆಲಸಗಳಲ್ಲೂ ತೊಡಗಿಸಿಕೊಂಡಿರುವ ನಟ ಸಂಚಾರಿ ಅವರಿಗೂ ಕನ್ನಡದ ಸ್ಟಾರ್‌ ಮೇಲೆ ಅಪಾರ ಪ್ರೀತಿ. ಶಿವರಾಜ್‌ ಕುಮಾರ್‌, ದರ್ಶನ್‌, ಸುದೀಪ್‌, ಪುನೀತ್‌, ಯಶ್‌ ಸೇರಿದಂತೆ ಎಲ್ಲಾ ನಟರ ಪ್ರೀತಿಗೆ ಅವರು ಪಾತ್ರರಾಗಿದ್ದಾರೆ. ವಿಶೇಷವಾಗಿ ಸುದೀಪ್‌ ಅವರ ಬಹು ಮುಖ ಪ್ರತಿಭೆಗೆ ಮಾರು ಹೋಗಿರುವ ಅವರು, ಸುದೀಪ್‌ ಅವರ ಜತೆಗೆ ಸಮಯ ಕಳೆಯುವುದೇ ಸುಂದರ ಎನ್ನುತ್ತಾರೆ. ಇಷ್ಟಾಗಿಯೂ ಬೆಳ್ಳಿ ತೆರೆ ಮೇಲೆ ಕಿಚ್ಚ ಸುದೀಪ್‌ ಅವರೊಂದಿಗೆ ಸಂಚಾರಿ ವಿಜಯ್‌ ಇದುವರೆಗೂ ಕಾಣಿಸಿಕೊಂಡಿಲ್ಲ. ವಿಜಯ್‌ ಅವರಂತಹ ಪ್ರತಿಭಾವಂತಹ ನಟಿನಿಗೂ ಅದ್ಯಾಕೋ ಅಂತಹ ಅವಕಾಶ ಇದುವರೆಗೂ ಸಿಕ್ಕಿಲ್ಲ. ಈಗಲಾದರೂ ಸಿಗಲಿ.

ಮಲಯಾಳಂ ನ ಹೆಸರಾಂತ ನಟ ಮೋಹನ್‌ ಲಾಲ್‌ ಜತೆಗೆ ಸಂಚಾರಿ ವಿಜಯ್
Categories
ಸಿನಿ ಸುದ್ದಿ

ಟಾಲಿವುಡ್‌ಗೆ ಕಾಲಿಟ್ಟ ಮತ್ತೊಬ್ಬಳು ಕನ್ನಡತಿ,’ ಭರಾಟೆ’ ಬೆಡಗಿ ಶ್ರೀಲೀಲಾಗೆ ಸಿಕ್ತು ಬಂಪರ್‌ ಆಫರ್‌!

“ಪೆಳ್ಳಿ ಸಂದಡಿ’ಯಲ್ಲಿ ನಟ ಶ್ರೀಕಾಂತ್‌ ಪುತ್ರ ರೋಷನ್ ಗೆ ಜೋಡಿಯಾದ ʼಕಿಸ್‌ʼ ಖ್ಯಾತಿಯ ಸುಂದರಿ

ಟಾಲಿವುಡ್ ಅಂಗಳದಲ್ಲಿ ಕನ್ನಡದ ನಟಿಯರಿಗೆ ಭಾರೀ ಡಿಮ್ಯಾಂಡ್ ಕ್ರಿಯೇಟ್ ಆಗಿದೆ. ‘ಕಿರಿಕ್ ಪಾರ್ಟಿ’ ಚಿತ್ರದ ಖ್ಯಾತಿಯ ನಟಿ, ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಅಲ್ಲಿ ಮನೆ ಮಾತಾಗಿರುವ ಬೆನ್ನಲೇ ‘ವಜ್ರಕಾಯ’ ಚಿತ್ರದ ಖ್ಯಾತಿಯ ನಟಿ ನಭಾ ನಟೇಶ್ ಕೂಡ ಅಲ್ಲಿ ಕನ್ನಡದ ಬ್ಯುಸಿ ನಟಿ. ಈಗ ಆ ಸಾಲಿಗೆ ಹೊಸ ಸೇರ್ಪಡೆ ‘ಕಿಸ್’ ಖ್ಯಾತಿಯ ಚೆಲುವೆ ಶ್ರೀಲೀಲಾ. ಮೂಲತಃ ಕನ್ನಡದವರೇ ಆದ ಟಾಲಿವುಡ್ ನ ಹೆಸರಾಂತ ನಟ ಶ್ರೀಕಾಂತ್ ಪುತ್ರ ರೋಷನ್ ಅಭಿನಯದ ಹೊಸ ಚಿತ್ರಕ್ಕೆ ಶ್ರೀ ಲೀಲಾ ನಾಯಕಿ ಆಗಿ ಆಯ್ಕೆಯಾಗಿದ್ದಾರೆ. ತೆಲುಗಿನಲ್ಲಿ ಇದು ಶ್ರೀಲೀಲಾ ಆಭಿನಯದ ಚೊಚ್ಚಲ ಚಿತ್ರ. ಇದೇ ತಿಂಗಳು ಅದಕ್ಕೆ ಚಿತ್ರೀಕರಣ ಕೂಡ ಆರಂಭ.

‘ಪೆಳ್ಳಿ ಸಂದಡಿ’ ಎನ್ನುವುದು ಈ ಚಿತ್ರದ ಹೆಸರು. ರೋಷನ್ ಹಾಗೂ ಶ್ರೀಲೀಲಾ ಇಲ್ಲಿ ಜೋಡಿ. ಇದು ಶ್ರೀಕಾಂತ್ ಅಭಿನಯಿಸಿದ್ದ ಚಿತ್ರದ ಹೆಸರು ಕೂಡ. 1996 ರಲ್ಲಿ ಶ್ರೀಕಾಂತ್ ಅಭಿನಯದ ‘ಪೆಳ್ಳಿ ಸಂದಡಿ’ ಚಿತ್ರ ತೆರೆಗೆ ಬಂದಿತ್ತು. ಆ ಕಾಲಕ್ಕೆ ಇದು ಸೂಪರ್ ಡೂಪರ್ ಹಿಟ್ ಚಿತ್ರ. ತೆಲುಗು ಚಿತ್ರರಂಗದಲ್ಲಿ ಶ್ರೀಕಾಂತ್ ದೊಡ್ಡ ಸ್ಟಾರ್ ಆಗಿ ಸಕ್ಸಸ್ ಕಂಡ ಸಿನಿಮಾ. ಅಲ್ಲಿಂದ ಅವರ ತಾರಾ ವರ್ಚಸ್ಸೇ ಬದಲಾಗಿದ್ದು ಇತಿಹಾಸ. ಅದೀಗ ಬಂದು ಹೋಗಿ ಇಲ್ಲಿಗೆ 25 ವರ್ಷ. ಅದೇ ಚಿತ್ರದ ಹೆಸರಲ್ಲಿ ಶ್ರೀಕಾಂತ್ ಪುತ್ರ ಕೂಡ ಅಭಿನಯಿಸುತ್ತಿದ್ದಾರೆ. ಅವರಿಗೆ ಇಲ್ಲಿ ಶ್ರೀಲೀಲಾ ನಾಯಕಿ ಎನ್ನುವುದು ವಿಶೇಷ.

 

” ಸುಮಾರು ಏಳು ತಿಂಗಳ ಹಿಂದೆ ಬಂದ ಆಫರ್ ಇದು. ಅಲ್ಲಿಂದ ಇದು ಮಾತುಕತೆ ಹಂತದಲ್ಲಿತ್ತು. ಕೊನೆಗೊಂದು ದಿನ ಕತೆ ಕೇಳಿ ಓಕೆ ಕೂಡ ಆಯಿತು. ಆದರೆ ಸಿನಿಮಾ ಶುರುವಾಗುವುದಕ್ಕೆ ಕೊರೋನಾ ಆತಂಕ ಇತ್ತಲ್ವಾ,, ಹಾಗಾಗಿ ಒಂದಷ್ಟು ತಡವಾಯಿತು. ಆದರೂ ಚಿತ್ರ ತಂಡ ಸಿನಿಮಾ ಪ್ರೀ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿ ಆಗಿತ್ತು. ಈಗ ಎಲ್ಲವೂ ರೆಡಿ. ಇದೇ ತಿಂಗಳಿನಿಂದ ಚಿತ್ರೀಕರಣ ಶುರು. ಫಸ್ಟ್ ಟೈಮ್ ಟಾಲಿವುಡ್ ಗೆ ಎಂಟ್ರಿ ಆಗುತ್ತಿದ್ದೇನೆ. ಖುಷಿ ಆಗುತ್ತಿದೆ. ಹಾಗೆ ಒಂದ್ರೀತಿ ಭಯವೂ ಇದೆ. ಆದರೂ ಒಳ್ಳೆಯ ತಂಡ ಸಿಕ್ಕಿರೋದು ಖುಷಿ ತರಿಸಿದೆ’ ಎನ್ನುವ ಮೂಲಕ ಇದೇ ಮೊದಲು ಕನ್ನಡದಿಂದ ಟಾಲಿವುಡ್ ಗೆ ಹೋಗುತ್ತಿರುವ ಖುಷಿ ಹಂಚಿಕೊಳ್ಳುತ್ತಾರೆ ನಟಿ ಶ್ರೀಲೀಲಾ. ಸದ್ಯಕ್ಕೆ ಶ್ರೀಲೀಲಾ ಕನ್ನಡದಲ್ಲಿ ನಂದ್ ಕಿಶೋರ್ ನಿರ್ದೇಶನ ಹಾಗೂ ಧ್ರುವ ಸರ್ಜಾ ಅಭಿನಯದ ‘ದುಬಾರಿ’ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ.

 

ಒಂದು ಸಿನಿಮಾದ ಸೆಟ್ ನಲ್ಲಿ ನಟ ಶ್ರೀಕಾಂತ್ ಅವರನ್ನು ಭೇಟಿ ಮಾಡಿದ್ದೆ. ಟಾಲಿವುಡ್ ಆಕ್ಟರ್ ಅಲ್ವಾ ಅಂತ ನಾನು ತೆಲುಗಿನಲ್ಲಿ ಮಾತನಾಡಲು ಹೋದ್ರೆ, ಅವರೇ ಕನ್ನಡದಲ್ಲಿ ಮಾತನಾಡಿ ಅಚ್ಚರಿ ಮೂಡಿಸಿದ್ರು. ಅವತ್ತಿನಿಂದ ಅವರೊಂದಿಗೆ ಮಾತನಾಡುವುದಕ್ಕೆ ಖುಷಿ ಎನಿಸಿತು. ಕಾಕಕಾಳೀಯ ಎನ್ನುವಂತೆ ಅವರ ಪುತ್ರನ ಸಿನಿಮಾಕ್ಕೆ ನಾಯಕಿ ಆಗುವ ಆಫರ್ ಬಂದಾಗ ನಂಗೆ ಶ್ರೀಕಾಂತ್ ಸರ್ ಜೊತೆ ಮಾತನಾಡಿದ್ದೆ ನೆನಪಾಯಿತು. ಹೈದ್ರಾಬಾದ್ ನಲ್ಲಿ ಅವರನ್ನು ಭೇಟಿಯಾದಾಗ ಅದೇ ಖುಷಿ ಹಂಚಿಕೊಂಡೆ. ಅವರು ಕೂಡ ತುಂಬಾ ಸಂತೋಷ ಪಟ್ಟರು.
-ಶ್ರೀಲೀಲಾ, ನಟಿ

ಶ್ರೀಕಾಂತ್ ಅಭಿನಯದ ‘ಪೆಳ್ಳಿ ಸಂದಡಿ’ ಚಿತ್ರಕ್ಕೆ ತೆಲುಗಿನ ಹೆಸರಾಂತ ನಿರ್ದೇಶಕ ಕೆ. ರಾಘವೇಂದ್ರ ರಾವ್ ಆಕ್ಷನ್ ಕಟ್ ಹೇಳಿದ್ದರು. ಅವರೇ ಕತೆ, ಚಿತ್ರಕತೆ ಬರೆದಿದ್ದರು. ಈಗ ಅದೇ ಹೆಸರಿನಲ್ಲಿ ನಿರ್ಮಾಣ ವಾಗುತ್ತಿರುವ ಶ್ರೀಕಾಂತ್ ಪುತ್ರನ ಸಿನಿಮಾಕ್ಕೆ ಗೌರಿ ರಣಂಕಿ ಆಕ್ಷನ್ ಕಟ್ ಹೇಳುತ್ತಿದ್ದರೂ, ನಿರ್ದೇಶನದ ಉಸ್ತುವಾರಿ ಕೆ. ರಾಘವೇಂದ್ರ ರಾವ್ ಅವರೇ ವಹಿಸಿಕೊಂಡಿದ್ದಾರಂತೆ. ಪುತ್ರನಿಗೆ ದೊಡ್ಡ ಸಕ್ಸಸ್ ಕೊಡಿಸುವ ಕಾರಣಕ್ಕೆ ಶ್ರೀಕಾಂತ್ ಅವರೇ ರಾಘವೇಂದ್ರ ರಾವ್ ಅವರ ಮೊರೆ ಹೋಗಿದ್ದಾರಂತೆ. ಇನ್ನು ರೋಷನ್ ಗೆ ಇದು ಎರಡನೇ ಚಿತ್ರ. ಮೂರು ವರ್ಷಗಳ ಹಿಂದೆ ‘ನಿರ್ಮಲಾ ಕಾನ್ವೆಂಟ್’  ಹೆಸರಿನ ಚಿತ್ರದಲ್ಲಿ ಅಭಿನಯಿಸಿದ್ದರು. ಅದೇನು ಅಂತಹ ಸಕ್ಸಸ್ ಕಂಡಿರಲಿಲ್ಲ.

Categories
ಸಿನಿ ಸುದ್ದಿ

ಬಳ್ಳಾರಿಯ ಗಣಿ ಧೂಳಿನಲ್ಲಿ ಅಬ್ಬರಿಸುತ್ತಿದೆ ʼವೀರಂʼ !

ಇದು ಪ್ರಜ್ವಲ್‌ ಸಿನಿಮಾ ಅಲ್ಲ, ಹೊಸಬರ ಟೆಲಿ ಮೂವೀ…

ವೀರಂʼ ಹೆಸರಲ್ಲೊಂದು ಸಿನಿಮಾ ಬರುತ್ತಿದೆ. ಅದು ಡೈನಾಮಿಕ್‌ ಪ್ರಿನ್ಸ್‌ ಪ್ರಜ್ವಲ್‌ ದೇವರಾಜ್‌ ಅಭಿನಯದ ಸಿನಿಮಾ. ಅದಿನ್ನು ಚಿತ್ರೀಕರಣದ ಹಂತದಲ್ಲಿದೆ. ಈ ನಡುವೆಯೇ ಸ್ಯಾಂಡಲ್‌ವುಡ್‌ ನಲ್ಲೊಂದು ಅದೇ ಹೆಸರಲ್ಲೊಂದು ಮತ್ತೊಂದು ಸಿನಿಮಾ ಬರುತ್ತಿದೆ. ಈಗ ಅದರ ಟ್ರೈಲರ್‌ ಲಾಂಚ್‌ ಆಗಿದೆ.

ಅರೆ, ಒಂದೇ ಹೆಸರಿನ ಎರಡು ಸಿನಿಮಾವೇ? ಅದು ಸಿನಿಮಾ, ಇದು ಟೆಲಿ ಸಿನಿಮಾ. ಹೌದು, ಬಳ್ಳಾರಿ ಮೂಲದ ಯುವಕರ ಒಂದು ಗಂಪು “ವೀರಂʼ ಹೆಸರಲ್ಲೊಂದು ಟೆಲಿ ಸಿನಿಮಾ ಮಾಡಿದೆ. ಸುಮಾರು 1 ಗಂಟೆಯಷ್ಟು ಅವದಿಯ ಟೆಲಿ ಚಿತ್ರ ಇದು.ಯಾವುದೇ ಬಿಗ್‌ ಬಜೆಟ್‌ ಸಿನಿಮಾಕ್ಕೂ ಕಮ್ಮಿ ಇಲ್ಲದಂತೆ ಮೂಡಿ ಬಂದಿದೆ. ಸದ್ಯಕ್ಕೆ ಅದರ ಅದ್ದೂರಿ ಮೇಕಿಂಗ್‌ ಗೆ ಒಂದು ಸ್ಯಾಂಪಲ್‌ 1 ನಿಮಿಷ 46 ಸೆಕೆಂಡ್‌ ಗಳ ಟ್ರೈಲರ್.‌

ಇದು ಪಕ್ಕಾ ಮಾಸ್‌ ಸಿನಿಮಾ. ರೌಡಿಸಂನ ಶುದ್ಧ ರಾ ಲುಕ್ ಇಲ್ಲಿದೆ.‌ ಇದರ ಹಿಂದೆ ಇದ್ದವರು ಬಳ್ಳಾರಿಯವರು ಅಂದ್ರೆ ಕೇಳಬೇಕೆ, ಅಲ್ಲಿನ ಗಣಿ ಧೂಳು ಹಾರುವಂತೆ ಖಡಕ್‌ ಡೈಲಾಗ್‌ ಪೊಣಿಸಿ, ಜಬರ್ದಸ್ತ್‌ ಆಗಿಯೇ ಟ್ರೈಲರ್‌ ಕಟ್‌ ಮಾಡಿಸಿದೆ ಚಿತ್ರ ತಂಡ. ರೌಡಿಸಂ, ಗೂಡಾಯಿಸಂ, ದಾದಾಗಿರಿ… ಎನ್ನುವ ಮೂರು ಪದಗಳ ಅರ್ಥ ಒಂದೆ, ನಾನು ಎನ್ನುವ ಸ್ವಾರ್ಥ, ಅಹಂ ಎನ್ನುವ ಖಡಕ್‌ ಡೈಲಾಗ್‌ ಮೂಲಕ ಟ್ರೈಲರ್‌ ನಲ್ಲಿ ಭರ್ಜರಿ ಅಬ್ಬರಿಸಿದ್ದಾರೆ ಚಿತ್ರದ ನಾಯಕ ಸುಭಾಸ್‌ ಚಂದ್ರ.

ಅಂದ ಹಾಗೆ, “ವೀರಂʼ ಟೆಲಿ ಚಿತ್ರದ ನಾಯಕ ಸುಭಾಷ್‌ ಚಂದ್ರ ಸೇರಿದಂತೆ ಇದರ ಸೃಷ್ಟಿಕರ್ತರೆಲ್ಲರೂ ಹೊಸಬರು. ಶಿವಚಂದ್ರ ಪ್ರೊಡಕ್ಷನ್‌ ಮೂಲಕ ನಿರ್ಮಾಣವಾದ ಈ ಟೆಲಿ ಚಿತ್ರಕ್ಕೆ ಶಿವ ಚಂದ್ರ ಹಾಗೂ ಭೀಮನಾಯ್ಕ ಬಂಡಾವಾಳ ಹೂಡಿದ್ದಾರೆ. ಲಕ್ಷ್ಮಣ್‌ ಕೇಸರಿ ಆಕ್ಷನ್‌ ಕಟ್‌ ಹೇಳಿದ್ದಾರೆ. ನಿರ್ದೇಶಕರಾಗಿ ಇವರಿಗೆ ಇದು ಚೊಚ್ಚಲ ಚಿತ್ರ. ಹಾಗಂತ ಬಣ್ಣದ ಲೋಕ ಹೊಸದಲ್ಲ. ಸಾಕಷ್ಟು ವರ್ಷಗಳಿಂದ ಸಿನಿಮಾ ರಂಗದಲ್ಲಿದ್ದು ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ ಅನುಭವ ಅವರದು. ಈಗ ಅಲ್ಲಿಂದ ಸ್ವತಂತ್ರ ನಿರ್ದೇಶಕರಾಗಿ ಬಡ್ತಿ ಪಡೆಯಲು ಮುಂದಾಗಿದ್ದಾರೆ. ಅದೇ ಪ್ರಯತ್ನದಲ್ಲೀಗ ʼವೀರಂʼ ಹೆಸರಿನ ಟೆಲಿ ಚಿತ್ರ ನಿರ್ದೇಶಿಸಿ, ರಿಲೀಸ್‌ ಮಾಡಲು ರೆಡಿ ಆಗಿದ್ದಾರೆ. ಹಾಗಾದ್ರೆ, ಇದರಿಂದ ಅವರಿಗೇನು ಲಾಭ?

” ಕಿರು ಚಿತ್ರ ಅಥವಾ ಟೆಲಿ ಚಿತ್ರಗಳ ನಿರ್ಮಾಣ ಅನ್ನೋದು ಕನ್ನದ ಮಟ್ಟಿಗೆ ಈಗಲೂ ಆದಾಯದ ಮೂಲ ಆಗಿಲ್ಲ. ಸೋಷಲ್‌ ಮೀಡಿಯಾ ಬಲಿಷ್ಟ ಆದ ನಂತರ ಅಲ್ಲಿ ಇವು ತೆರೆ ಕಂಡರೆ ಲೈಕ್ಸ್‌ , ಕಾಮೆಂಟ್‌ ಆಧರಿಸಿ ಒಂದಷ್ಟು ಆದಾಯ ಬರುತ್ತೆ ಎನ್ನುವುದನ್ನು ಬಿಟ್ಟರೆ, ಬಹುತೇಕ ಈ ಪ್ರಯತ್ನಗಳೆಲ್ಲ ನಮ್ಮನ್ನು ನಾವು ಪ್ರದರ್ಶಿಸಿಕೊಳ್ಳುವುದಕ್ಕಾಗಿಯೇ ಎನ್ನುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಇದು ಕೂಡ ಅಂತಹದೇ ಒಂದು ಪ್ರಯತ್ನವೇ ಹೌದು. ಲಾಕ್‌ ಡೌನ್‌ ಸಮಯದಲ್ಲಿ ನಾವೆಲ್ಲ ಕೆಲಸ ಕಾರ್ಯಗಳಿಲ್ಲದೆ ಮನೆಯಲ್ಲಿದ್ದಾಗ, ಹೊಸತೇನಾದರೂ ಮಾಡೋಣ ಅಂತ ಯೋಚಿಸಿದೆವು. ಆಗ ಹೊಳೆದಿದ್ದು ವೀರಂ ಟೆಲಿ ಮೂವೀ. ಅವತ್ತು ನಾವು ಅಂದುಕೊಂಡಿದ್ದಕ್ಕಿಂತ ಈಗದು ತೆರೆ ಮೇಲೆ ಚೆನ್ನಾಗಿ ಬಂದಿದೆ. ಯಾವುದೇ ಬಿಗ್‌ ಬಜೆಟ್‌ ಸಿನಿಮಾಕ್ಕೂ ಕಮ್ಮಿ ಇಲ್ಲದಂತೆ ಮೂಡಿ ಬಂದಿದೆ ಅಂತ ಟ್ರೈಲರ್‌ ನೋಡಿದವರು ಹೇಳುತ್ತಿದ್ದಾರೆ. ಇದು ಖುಷಿ ತಂದಿದೆʼ ಎನ್ನುತ್ತಾರೆ ನಿರ್ದೇಶಕ ಲಕ್ಷ್ಮಣ್‌ ಕೇಸರಿ.

ಇದು ನಿಜವೂ ಹೌದು. ಟ್ರೈಲರ್ ನೋಡಿದವರಿಗೆ ಅವರ ನಿರ್ದೇಶನದ ಕೌಶಲ್ಯ ಗೊತ್ತಾಗುತ್ತದೆ. ಲಾಂಚ್‌ ಆಗಿ ಮೂರ್ನಾಲ್ಕು ದಿನಗಳಲ್ಲಿ ಸೋಷಲ್‌ ಮೀಡಿಯಾದಲ್ಲಿ ಅದು ವೈರಲ್‌ ಆಗಿದೆ. ವಿಶೇಷ ಅಂದ್ರೆ ಇಷ್ಟು ಗುಣಮಟ್ಟದ ಒಂದು ಟೆಲಿ ಮೂವೀ , ಕೇವಲ ಒಂದು ರೂ. ವೆಚ್ಚದಲ್ಲಿ ನಿರ್ಮಾಣವಾಗಿದೆ ಅಂದ್ರೆ ನಿಮಗೂ ಅಚ್ಚರಿ ಆಗಬಹುದು. ಏಳು ದಿನಗಳ ಕಾಲ ಚಿತ್ರೀಕರಣ ನಡೆದಿದೆಯಂತೆ. ತಾರಾಗಣದಲ್ಲಿ ಸುಭಾಷ್‌ ಚಂದ್ರ ಅವರೊಂದಿಗೆ ವರುಣ್‌ ವರಧಿ, ಮನೋಹರ್‌, ಶ್ರೀ ನಿಧಿ, ಟ್ಯಾಟು ಮಂಜು, ಪುರುಷೋತ್ತಮ್‌ ಸೇರಿದಂತೆ ದೊಡ್ಡ ದಂಡೇ ಇದೆ. ಹಾಗೆಯೇ ನುರಿತ ತಾಂತ್ರಿಕ ವರ್ಗವೇ ಇಲ್ಲಿ ಸಾಥ್‌ ನೀಡಿದೆ. ನವೀನ್‌ ನಾಯ್ಡು ಛಾಯಾಗ್ರಹಣ ಮಾಡಿದ್ದರೆ, ಸಾಯಿ ವಂಶಿ ಸಂಗೀತ, ವಿನೋದ್‌ ಸಂಕಲನ ಮಾಡಿದ್ದು, ರಾ ಲುಕ್‌ ಗೆ ಹೆಚ್ಚು ಆದ್ಯತೆ ನೀಡಿದೆ. ಇಷ್ಟರಲ್ಲೇ ಇದನ್ನು ಯುಟ್ಯೂಬ್‌ ಮೂಲಕ ಲಾಂಚ್‌ ಮಾಡಲು ಚಿತ್ರ ತಂಡ ಸಿದ್ದತೆ ನಡೆಸಿದೆಯಂತೆ. ಸಿನಿಮಾದತ್ತ ಮುಖ ಮಾಡಿರುವ ಹೊಸಬರ ತಂಡಕ್ಕೆ ಒಳ್ಳೆಯದಾಗಲಿ.

error: Content is protected !!