ಸಂಕ್ರಾಂತಿಗೆ ಕೃಷ್ಣ ಟಾಕೀಸ್ ನಲ್ಲಿ ಸಂ – ಕ್ರಾಂತಿ, ಲಿರಿಕಲ್ ವಿಡಿಯೋ ಲಾಂಚ್ ಗೆ ನಟ ಅಜೇಯ ರಾವ್ ಪುತ್ರಿಯೇ ಗೆಸ್ಟ್ ! !

ಸಂಕ್ರಾಂತಿ ಗೆ ಸಂಗೀತದ ಸಂ-ಕ್ರಾಂತಿ

ನಟ ಅಜೇಯ ರಾವ್ ಈಗ  ‘ ಕೃಷ್ಣ ಟಾಕೀಸ್’ ‘‌  ಚಿತ್ರದ ಗುಂಗಿನಲ್ಲಿದ್ದಾರೆ. ಈ ವರ್ಷದ ಆರಂಭದ ಮಟ್ಟಿಗೆ ಇದು ಅವರಿಗೆ ಬಹು ನಿರೀಕ್ಚಿತ ಚಿತ್ರ. ಅವರ ಹಾಗೆಯೇ ‌ ಇಡೀ ಚಿತ್ರ ತಂಡಕ್ಕೂ ಕೂಡ. ಅದರಲ್ಲೂ ನಾಳಿನ‌ ( ಜ.14) ಸಂಕ್ರಾಂತಿ ‘ಕೃಷ್ಷ ಟಾಕೀಸ್ ‘ಚಿತ್ರ ತಂಡಕ್ಕೆ ತುಂಬಾನೆ ವಿಶೇಷ.ಯಾಕಂದ್ರೆ, ಸಂಕ್ರಾಂತಿ‌ಗೆ ಈ ಚಿತ್ರದ ಎರಡನೇ ಹಾಡಿನ ಲಿರಿಕಲ್ ವಿಡಿಯೋ ಲಾಂಚ್ ಆಗುತ್ತಿದೆ. ಸಂಕ್ರಾಂತಿ ಹಬ್ಬದ ಕೊಡುಗೆಯಾಗಿ ಸೋಷಲ್ ಮೀಡಿಯಾದಲ್ಲಿ ಲಾಂಚ್ ಆಗುತ್ತಿರುವ ಈ ಲಿರಿಕಲ್ ವಿಡಿಯೋ ವನ್ನು ಕೃಷ್ಷ ಅಜೇಯ ರಾವ್ ಪುತ್ರಿ ಪುಟಾಣಿ ಚೆರ್ರಿ ಲಾಂಚ್ ಮಾಡುತ್ತಿದ್ದಾಳೆ. ಅದೇ ಕಾರಣಕ್ಕೆ ಚಿತ್ರ ತಂಡ ಕಾತರದಲ್ಲಿದೆ.

ಗೋಕುಲ್ ಎಂಟರ್ಟೈನರ್ ಬ್ಯಾನರ್ ನಲ್ಲಿ ಗೋವಿಂದ್ ರಾಜು ನಿರ್ಮಾಣ ಮಾಡಿರುವ ಈ ಚಿತ್ರಕ್ಕೆ ವಿಜಯಾನಂದ್ ಆಕ್ಷನ್ ಕಟ್ ಹೇಳಿದ್ದಾರೆ. ಜನಪ್ರಿಯ ಸಂಗೀತ ನಿರ್ದೇಶಕ ಶ್ರೀಧರ್ ವಿ. ಸಂಭ್ರಮ್ ಸಂಗೀತ ಸಂಯೋಜನೆ ಮಾಡಿದ್ದು, ಸೊಗಸಾದ ಹಾಡುಗಳನ್ನು ಕೊಟ್ಟ ಖುಷಿ ಅವರಿಗೂ ಇದೆ. ಈಗ ಈ ಚಿತ್ರದ ಎರಡನೇ ಹಾಡಿನ ಲಿರಿಕಲ್ ವಿಡಿಯೋ ಲಾಂಚ್ ಆಗುತ್ತಿದೆ. ಹಾಡಿಗೆ ವಿಜಯಾನಂದ ರಚನೆ ಇದೆ.  ‘ ಚಿತ್ರದಲ್ಲೇ ಹೈಲೈಟ್ ಎನ್ನುವಂತಹ ತುಂಬಾ ಮುದ್ದಾದ ಹಾಡು ಇದು.


ಬಹಳ ಸೊಗಸಾಗಿ‌ ಮೂಡಿ ಬಂದಿದೆ. ಇದರ ಲಿರಿಕಲ್ ವಿಡಿಯೋ ವನ್ನು ಈಗ ಚಿತ್ರದ ನಾಯಕ ನಟ ಕೃಷ್ಷ ಅಜೇಯ್ ರಾವ್ ಪುತ್ರಿ ಚೆರ್ರಿ ಲಾಂಚ್ ಮಾಡುತ್ತಿರುವುದು ತುಂಬಾ ತುಂಬಾ‌ ಖುಷಿ ತಂದಿದೆ’ ಎನ್ನುತ್ತಾರೆ ಸಂಗೀತ ನಿರ್ದೇಶಕ ಶ್ರೀಧರ್ ವಿ. ಸಂಭ್ರಮ್.

ಅಜೇಯ್ ರಾವ್ ಪುತ್ರಿ ಚೆರ್ರಿ

ಅಜೇಯ ರಾವ್ ನಟನೆಯ ಕೃಷ್ಣ ಸಿರೀಸ್ ನಲ್ಲಿ ಸೂಪರ್ ಡೂಪರ್ ಹಿಟ್ ಸಾಂಗ್ ಕೊಟ್ಟ ಖ್ಯಾತಿ ಸಂಕ್ರಾಂತಿ, ನಿರ್ದೇಶಕ ಶ್ರೀಧರ್ ಅವರದು‌. ಈಗ ಕೃಷ್ಣ ಟಾಕೀಸ್ ಮೂಲಕ ಮತ್ತೊಮ್ಮೆ ಮೋಡಿ ಮಾಡಲು ರೆಡಿ ಆಗಿದ್ದಾರೆ. ಸದ್ಯಕ್ಕೀಗ ಲಿರಿಕಲ್ ವಿಡಿಯೋ ದೊಂದಿಗೆ ಹವಾ ಎಬ್ಬಿಸಲು ಬರುತ್ತಿದ್ದಾರೆ‌. ಕೃಷ್ಷ ಟಾಕೀಸ್ ಎನ್ನುವ ಹೆಸರೇ ಹೇಳುವಂತೆ, ಇದು ಕೃಷ್ಷ ಹೆಸರಿನ ಟಾಕೀಸ್ ವೊಂದರಲ್ಲಿ‌ನಡೆಯುವ ಕತೆ. ಅದೇನು? ಯಾರಿಗೂ ಗೊತ್ತಿಲ್ಲ.‌ಅದು ಗೊತ್ತಾಗುವುದು ತೆರೆ ಮೇಲೆಯೇ. ಈ ಕತೆಯಲ್ಲಿ ಅಜೇಯ್ ರಾವ್ ಅವರಿಗೆ ಜೋಡಿಯಾಗಿ ಸಿಂಧು ಲೋಕನಾಥ್, ಅಪೂರ್ವ ಇದ್ದಾರೆ‌. ಉಳಿದಂತೆ ದೊಡ್ಡ ತಾರಾಗಣವೇ ಇದೆ.

Related Posts

error: Content is protected !!