ಲೂಸ್ ಮಾದ ಯೋಗಿ ಬಗ್ಗೆ ಇಂಡಸ್ಟ್ರಿ ನವರು ಯಾಕೆ ಹಾಗೆ ಹೇಳಿದ್ರು? ನಿರ್ದೇಶಕ ರಾಮ್ ಪ್ರಸಾದ್ ರಿವೀಲ್ ಮಾಡಿದ ಸುದ್ದಿ ಹೀಗಿದೆ…..

ಲಂಕೆ ಟೈಟಲ್ ಅನಾವರಣ ಕಾರ್ಯಕ್ರಮದಲ್ಲಿ ರಿವೀಲ್ ಆದ ಸುದ್ದಿ


ನಟ ಲೂಸ್ ಮಾದ ಯೋಗೇಶ್ ಈಗ’ ಲಂಕೆ ‘ ಚಿತ್ರದೊಂದಿಗೆ ತೆರೆ ಮೇಲೆ ಕಾಣಿಸಿಕೊಳ್ಳಲು ರೆಡಿಯಾಗಿದ್ದಾರೆ. ಈಗಾಗಲೇ ಈ ಚಿತ್ರ ಚಿತ್ರೀಕರಣ ಮುಗಿಸಿ, ಸೆನ್ಸಾರ್ ಹಂತಕ್ಕೆ ಕಾಲಿಟ್ಟಿದೆ. ಎಲ್ಲವೂ ಅಂದುಕೊಂಡಂತಾದರೆ, ಫೆಬ್ರವರಿ ಅಥವಾ ಮಾರ್ಚ್ ತಿಂಗಳಲ್ಲಿ ಈ ಚಿತ್ರ ಬಿಡುಗಡೆ ಆಗುವ ಸಾಧ್ಯತೆಗಳಿವೆ. ಲೂಸ್ ಮಾದ ಯೋಗೇಶ್, ಸಂಚಾರಿ ವಿಜಯ್, ಕಾವ್ಯ ಶೆಟ್ಟಿ ಸೇರಿದಂತೆ ದೊಡ್ಡ ತಾರಾಗಣವೇ ಈ ಚಿತ್ರದಲ್ಲಿದೆ. ಇನ್ನು ಶೀರ್ಷಿಕೆ ಯೇ ಹೇಳುವ ಹಾಗೆ ಇದು ರಾಮಾಯಣ ಕ್ಕೆ ಸಣ್ಣದೊಂಡು ಲಿಂಕ್ ಹೊಂದಿರುವ ಕತೆ.

ಅದೆಲ್ಲದರಾಚೆ ಇಂಟೆರೆಸ್ಟಿಂಗ್ ಸಂಗತಿ ಅಂದ್ರೆ ಲೂಸ್ ಮಾದ ಯೋಗೇಶ್ ಅವರು ಈ ಚಿತ್ರಕ್ಕೆ ನಾಯಕರಾಗಿದ್ದೇ ವಿಚಿತ್ರವಂತೆ. ಯಾಕಂದ್ರೆ ನಿರ್ದೇಶಕ ರಾಮ್ ಪ್ರಸಾದ್ ಅವರು ಚಿತ್ರಕ್ಕೆ ನಾಯಕ ಆಗ್ಬೇಕು ಅಂತ ಯೋಗೇಶ್ ಅವರ ಬಳಿಗೆ ಹೋಗುವ ಮುನ್ನ ಇಂಡಸ್ಟ್ರಿ ಅವರ ಬಗ್ಗೆ ಎನೇನೋ ಹೇಳಿತ್ತಂತೆ. ಹಾಗಾಗಿ ಅವರನ್ನು ಅಪ್ರೋಚ್ ಮಾಡೋದು ಹೇಗೋ ಏನೋ ಅಂತ ಯೋಚ್ನೆ ಮಾಡಿದ್ರಂತೆ. ಕೊನೆಗೆ ಭಯದಿಂದಲೇ ನಟ‌ಯೋಗಿ ಅವರನ್ನು ಭೇಟಿ ಮಾಡಿದಾಗ ಅವರ ನಿಜವಾದ ಪರಿಚಯ ವಾಯಿತ್ತಂತೆ. ಅವರ ಪ್ರಕಾರ ಯೋಗಿ ಅಂದ್ರೆನೇ ಬೇರೆ.


‘ ಯೋಗಿ ಅಂದ್ರೆ ಸಹೋದರ, ಯೋಗಿ ಅಂದ್ರೆ ಗೆಳೆಯ,ಯೋಗಿ ಅಂದ್ರೆ ಅಡೋರೆಬಲ್…ಏನ್ ಹೇಳಿದ್ರು ಕಮ್ಮಿನೇ…ಯೋಗಿ ಅಂದ್ರೆ ಏನು ಅಂತ ನಂಗೆ ಅವರನ್ನು ಭೇಟಿ ಮಾಡಿದ ಮೊದಲ ದಿನವೇ ಗೊತ್ತಾಯಿತು.ಯಾರೇರೋ ಏನೇನೋ ಹೇಳಿದ್ರಲ್ಲಾ ಅಂತ ನಂಗೆ ನಾನೇ ಅಚ್ಚರಿ ಪಟ್ಟೆ. ಅವರ ಜತೆಗೆ ಬೇಕಾದ್ರೆ ಇನ್ನು ಹತ್ತು ಸಿನಿಮಾ ಮಾಡಬಲ್ಲೆ. ಅಷ್ಟು ಸಹಕಾರದ ಮನೋಭಾವ ಇರುವ ನಟ’ ಅಂತ ಯೋಗಿ ಅವರನ್ನು ಮುಕ್ತ ಕಂಠದಿಂದ ಬಣ್ಣಿಸಿದರು ನಿರ್ದೆಶಕ ರಾಮ್ ಪ್ರಸಾದ್. ಕೊನೆಗೆ ಯೋಗಿ ಮಾತನಾಡುತ್ತಾ, ಯಾರು ಹಂಗೆ ಹೇಳಿದ್ದು ಅವ್ರ ನಂಬರ್ ಕೊಡಿ, ನಾನೇ ಅವರಿಗೆ ಕಾಟ ಕೊಡ್ತೀನಿ’ ಅಂತ ಕಾಮಿಡಿ ಮೂಲಕ ತಮ್ಮ ವಿರುದ್ಧ ಹೇಳಿದವರಿಗೆ ತಿರುಗೇಟು ಕೊಟ್ಟರು ಯೋಗೇಶ್.

Related Posts

error: Content is protected !!