Categories
ಸಿನಿ ಸುದ್ದಿ

ಮನಮೆಚ್ಚಿದ ಹುಡುಗಿ ಸುಧಾರಾಣಿ ಕಣ್ಣಲ್ಲಿ ಹಿರಿಯ ನಟಿ ಲೀಲಾವತಿ ಕಂಡಿದ್ಹೀಗೆ !

ಲೀಲಾವತಿ ಅಮ್ಮ, ಕನ್ನಡ ಚಿತ್ರರಂಗ ಕಂಡ ಅತ್ಯದ್ಭುತ ಕಲಾವಿದೆ ಇವರು. ನೂರಾರು ಸಿನಿಮಾಗಳಲ್ಲಿ ಬೇರೆ ಬೇರೆ ರೀತಿಯ ಪಾತ್ರಗಳ ಮೂಲಕ ನಮ್ಮೆಲ್ಲರನ್ನು ರಂಜಿಸಿದ್ದಾರೆ. ಲೀಲಾವತಿ ಎನ್ನುವುದು ದುರ್ಗಾದೇವಿಯ ಮತ್ತೊಂದು ಹೆಸರು, ಕನ್ನಡದಲ್ಲಿ ಲೀಲಾ ಎನ್ನುವ ಪದಕ್ಕೆ ಮತ್ತೊಂದು ಅರ್ಥ ವಿನೋದ. ಲೀಲಾವತಿ ಅಮ್ಮ ದುರ್ಗೆಯ ಅವತಾರವಾದರು, ಜೀವನದ ಎಲ್ಲಾ ಜವಾಬ್ದಾರಿಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಿ ಇಂದು ಎಲ್ಲಾ ಹೆಣ್ಣುಮಕ್ಕಳಿಗೆ ಮಾದರಿಯಾಗಿ ನಿಂತಿದ್ದಾರೆ.

ಅವರು ವಾಸವಿರುವ ಊರಿನಲ್ಲಿ ಬಡಜನರಿಗಾಗಿ ಆಸ್ಪತ್ರೆ ಕಟ್ಟಿಸಿದ್ದಾರೆ, ಹಸು ಕರುಗಳಿಗೆ ನೀರಿನ ಟ್ಯಾಂಕ್ ಕಟ್ಟಿಸಿ ಅವುಗಳಿಗೆ ಮೇವು ನೀಡಿದ್ದಾರೆ, ಎಷ್ಟೋ ಜನರಿಗೆ ಊಟ ನೀಡಿ ಸಹಾಯ ಮಾಡುತ್ತಾ ಇರುವ ಇವರನ್ನು ಅನ್ನಪೂರ್ಣೇಶ್ವರಿಯ ಸ್ವರೂಪ ಎಂದು ಕರೆಯುವುದೋ ಅಥವಾ ಜೀವನದಲ್ಲಿ ಎಷ್ಟೇ ಕಷ್ಟ ಬಂದರೂ ಅದೆಲ್ಲವನ್ನು ಭೂಮಿ ತಾಯಿಯ ಹಾಗೆ ತನ್ನಲ್ಲಿಯೇ ಹೊತ್ತು, ತಾಳ್ಮೆಯಿಂದ ಎಲ್ಲವನ್ನು ಸಹಿಸಿ, ಲೀಲಾಜಾಲವಾಗಿ ನಿಭಾಯಿಸಿರುವ ಇವರನ್ನು ಭೂಮಿ ತಾಯಿಯ ಸ್ವರೂಪ ಎಂದು ಕರೆಯುವುದೋ..

ಇಂತಹ ವ್ಯಕ್ತಿತ್ವ ಹೊಂದಿರುವ ಲೀಲಾವತಿ ಅಮ್ಮನವರ ಜೊತೆ ಬಾಲನಟಿಯಾಗಿ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸುವ ಅವಕಾಶ ನನಗೆ ಸಿಕ್ಕಿತ್ತು, ನಾಯಕಿಯಾದ ಮೇಲು ಲೀಲಾವತಿ ಅಮ್ಮನವರ ಜೊತೆ ಸುಮಾರು ಸಿನಿಮಾಗಳಲ್ಲಿ ಕೆಲಸ ಮಾಡುವ ಸೌಭಾಗ್ಯ ಸಿಕ್ಕಿದ್ದು ನನ್ನ ಅದೃಷ್ಟ.ಇಲ್ಲಿರುವ ಎರಡು ಫೋಟೋಗಳಲ್ಲಿ ಮೊದಲನೆಯದು ನಾನು ಬಾಲನಟಿಯಾಗಿ ನಟಿಸಿದ ಮೊದಲ ಸಿನಿಮಾ “ಕಿಲಾಡಿ ಕಿಟ್ಟು” ಚಿತ್ರೀಕರಣದ ಸಮಯದ ಫೋಟೋ ಮತ್ತೊಂದು ಇಂದು ಲೀಲಾವತಿ ಅಮ್ಮನವರನ್ನು ಭೇಟಿ ಮಾಡಿದ ಸಂದರ್ಭದ ಫೋಟೋ..

ವರ್ಷಗಳು ಉರುಳಿವೆ ಹೊರತು ನಮ್ಮ ನಡುವೆ ಇರುವ ಬಾಂಧವ್ಯವಲ್ಲ..ಲೀಲಾವತಿ ಅಮ್ಮನವರ ಆರೋಗ್ಯ ವಿಚಾರಿಸಿಕೊಂಡು ಬಂದ ನಟಿ ಸುಧಾರಾಣಿಯವರು, ಹಿರಿಯ ನಟಿ ಲೀಲಾವತಿ ಮೇಲಿರುವ ಪ್ರೀತಿ- ಭಕ್ತಿ- ಕಾಳಜಿ- ಅಭಿಮಾನ ಹಾಗೂ ತಮ್ಮ ಭಾವನೆಯನ್ನ ಪದಗಳಲ್ಲಿ ಕಟ್ಟಿಕೊಟ್ಟಿದ್ದಾರೆ. ಇದಲ್ಲವೇ ಹಿರಿಯ ನಟಿಗೆ ಮಗದೊಬ್ಬ ನಟಿ ಕೊಡುವ ಗೌರವ ಅಂದರೆ…

-ಎಂಟರ್ ಟೈನ್ಮೆಂಟ್ ಬ್ಯೂರೋ ಸಿನಿಲಹರಿ

Categories
ಸಿನಿ ಸುದ್ದಿ

ಮಾಳವಿಕ- ಶ್ರುತಿ- ಸುಧಾರಾಣಿಯ ಈ ಕಾರ್ಯಕ್ಕೆ ಚಪ್ಪಾಳೆ ಹೊಡಿಯಲೆಬೇಕು !

ನಟಿಯರಾದ ಸುಧಾರಾಣಿ, ಶ್ರುತಿ ಹಾಗೂ ಮಾಳವಿಕ ಅವಿನಾಶ್ ಅವರ ಅಂತಃಕರಣದ ಹೃದಯಕ್ಕೆ ಹಾಗೂ ಈ ಕಾರ್ಯಕ್ಕೆ ಚಪ್ಪಾಳೆ ಹೊಡೆ ಯುವ ಮೂಲಕ ಈ‌ ಮೂವರು ನಟಿಯರನ್ನು ಗೌರವಿಸಬೇಕು. ಸುಖ- ಸಂತೋಷ- ಸಂಭ್ರಮ ಅಂದಾಗ ಕರೆಯದೇ ಬರುವವರು ಹೆಚ್ಚು. ‌ಅದೇ, ಕಷ್ಟದಲ್ಲಿದ್ದಾಗ ಕರೆದರೂ ಕೂಡ ಹತ್ತಿರಕ್ಕೂ ಯಾರೂ ಸುಳಿಯಲ್ಲ.‌ ಆದರೆ, ಈ ಮೂವರು ನಟಿಯರು ಅದಕ್ಕೆ ತದ್ವಿರುದ್ಧ.‌ ಕಷ್ಟಕ್ಕೆ- ನೋವಿಗೆ ಎಷ್ಟು ಸ್ಪಂಧಿಸಿದ್ದಾರೋ ಇಲ್ಲವೋ ಗೊತ್ತಿಲ್ಲ‌ ಆದರೆ ಅನಾರೋಗ್ಯಕ್ಕೆ ಒಳಗಾದ ಲೀಲಾವತಿ ಅಮ್ಮನವರ ಕ್ಷೇಮ ಸಮಾಚಾರ ವಿಚಾರಿಸಿದ್ದಾರೆ.

ಲೀಲಾವತಿ ಕನ್ನಡ ಚಿತ್ರರಂಗದ ಮೇರುನಟಿ. ದಶಕಗಳ ಕಾಲ ಬೆಳ್ಳಿಪರ ದೆಯನ್ನಾಳಿದ ಲೀಲಾವತಿಯವರು, ಕೋಟ್ಯಾಂತರ ಅಭಿಮಾನಿಗಳ ಮನಸ್ಸಲ್ಲಿ‌ ಅಚ್ಚಳಿಯದೇ ಕುಳಿತಿದ್ದಾರೆ.ಇತ್ತೀಚೆಗೆ ತಮ್ಮ ತೋಟದ ಮನೆಯಲ್ಲಿ ಸ್ನಾನಕ್ಕೆಂದು ಹೋದಾಗ ಕಾಲು‌ ಜಾರಿ ಬಿದ್ದು ಬೆನ್ನು ಮೂಳೆಗೆ ಪೆಟ್ಟು ಮಾಡಿಕೊಂಡಿದ್ದರು. ಪುತ್ರ ವಿನೋದ್ ರಾಜ್ ತಕ್ಷಣಕ್ಕೆ ತಾಯಿನಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದರು. ಒಂದು ತಿಂಗಳು‌ ಕಾಲ ಬೆಡ್ ರೆಸ್ಟ್ ನಲ್ಲಿರುವಂತೆ ವೈದ್ಯರು ಸೂಚಿಸಿದ್ದರು. ಈ‌ ಸುದ್ದಿ ತಿಳಿದ ಕೂಡಲೇ ದೂರವಾಣಿ ಮೂಲಕ ಮಾತನಾಡಿದ್ದ ನಟಿಯರಾದ ಸುಧಾರಾಣಿ, ಶ್ರುತಿ, ಮಾಳವಿಕಾ ಅವರು, ಎರಡು ದಿನ ಬಿಟ್ಟು ನೇರವಾಗಿ ಲೀಲಾವತಿಯವರ ಸೋಲೆದೇವನಹಳ್ಳಿ ಮನೆಗೆ ಭೇಟಿಕೊಟ್ಟರು.‌

ಅಮ್ಮನ ಆರೋಗ್ಯ ವಿಚಾರಿಸಿ, ಕೆನ್ನೆಗೆ ಸಿಹಿಮುತ್ತು ಕೊಟ್ಟ ನಟಿಯರು, ಕೆಲಕಾಲ ಅಮ್ಮನೊಟ್ಟಿಗೆ ಕಾಲಕಳೆದರು. ಎವರ್ ಗ್ರೀನ್ ‌ಗೀತೆಯೊಂ ದನ್ನು‌ ಹಾಡಿ ಮಕ್ಕಳಂತಿರುವ ಮೂವರು ನಟಿಯರಿಗೂ ಲೀಲಾವತಿ ಅಮ್ಮ ಶುಭಹಾರೈಸಿದರು. ಈ‌ ಸುವರ್ಣ ಕ್ಷಣವನ್ನು ಕ್ಯಾಮರಾದಲ್ಲಿ ಸೆರೆಯಾಗಿಸಿಕೊಂಡ ನಟಿ ಸುಧಾರಾಣಿ ತಮ್ಮ ಸೋಷಿಯಲ್ ಮೀಡಿ ಯಾದಲ್ಲಿ ಹಂಚಿಕೊಂಡಿದ್ದಾರೆ. ಹಿರಿಯ ನಟಿಯ ಕಷ್ಟಕ್ಕೆ- ನೋವಿಗೆ ಮಿಡಿದ ಮೂವರು ನಟಿಯರಿಗೆ ಫ್ಯಾನ್ಸ್ ಉಘೇ ಉಘೇ ಎನ್ನುತ್ತಿದ್ದಾರೆ. ಲೀಲಾವತಿ ಅಮ್ಮನ ಆರೋಗ್ಯ ಬೇಗ ಸುಧಾರಣೆ ಕಾಣಲೆಂದು ಹರಸು ತ್ತಿದ್ದಾರೆ.
ಎಂಟರ್ ಟೈನ್ಮೆಂಟ್ ಬ್ಯೂರೋ ಸಿನಿಲಹರಿ

Categories
ಸಿನಿ ಸುದ್ದಿ

ಪಾವಗಡ ಮಂಜುನಾ ಕೈ ಬಿಡಲಿಲ್ಲ ಧರ್ಮಸ್ಥಳ ಮಂಜುನಾಥಸ್ವಾಮಿ; ಬಿಗ್ಬಾಸ್ ಪಟ್ಟಕ್ಕೇರಿಸಿ ಕೇಕೆ ಹೊಡೆದಿದ್ದು 6 ಕೋಟಿ ಜನ ಸ್ವಾಮಿ !

ಉಸಿರುಗಟ್ಟಿ‌ ಕೋಮಾಗೆ ಹೋದಾಗ, ಸಾವು ಬದುಕಿನ ನಡುವೆ ಹೋರಾಟ ಮಾಡುವಾಗ, ಜೀವಕ್ಕೆ ಉಸಿರು ತುಂಬಿ ಬದುಕಿಸಿಕೊಂಡ ಧರ್ಮಸ್ಥಳ‌ ಮಂಜುನಾಥ ಸ್ವಾಮಿ, ಅರಮನೆಯಂತಹ ಸೆರೆಮನೆಯಲ್ಲಿರುವ ನನ್ನನ್ನ ಕೈಬಿಡುವುದುಂಟೇ ? ಹೀಗೊಂದು ಪ್ರಶ್ನೆ ಮಂಜು ಪಾವಗಡ ಮನಸ್ಸಲ್ಲೂ ಕೂಡ ಕಥಕ್ಕಳಿ ಆಡಿತ್ತು.
ಕಲಾವಿದ ಆಗಬೇಕು ಎಂದು ಬೇಡಿಕೊಂಡಾಗ, ನಾಲ್ಕು ಮಂದಿ ನನ್ನನ್ನು ಗುರುತಿಸುವಂತೆ ಮಾಡು ಸ್ವಾಮಿ ಎಂದು ಅಡ್ಡಬಿದ್ದು ಬೇಡಿದಾಗ ಎಲ್ಲವನ್ನೂ ಈಡೇರಿಸಿರುವ ಧರ್ಮಸ್ಥಳ ಮಂಜುನಾಥ ಸ್ವಾಮಿ, ಬಿಗ್ ಬಾಸ್ ಗೆಲ್ಲುವ ಕನಸನ್ನು ಈಡೇರಿಸದೇ ಬಿಡುವನೇ ? ಯಾವುದೇ ಕಾರಣಕ್ಕೂ ಮಂಜುನಾಥ ಸ್ವಾಮಿ ನನ್ನ ಕೈ ಬಿಡಲ್ಲ.. ಗೆದ್ದೇ ಗೆಲ್ತೀನಿ.. ಬಿಗ್ಬಾಸ್ ಗದ್ದುಗೆ ಏರೇ ಏರ್ತೀನಿ, ಹೀಗೊಂದು ಆತ್ಮ ವಿಶ್ವಾಸ ಮಂಜು ಪಾವಗಡ ಮನಸ್ಸಲ್ಲಿತ್ತು. ಆ ಅಚಲವಾದ ಆತ್ಮವಿಶ್ವಾಸಕ್ಕೆ ಬಿಗ್ಬಾಸ್ ವಿಜಯದ ಹಾರ ಹಾಕಿದೆ. ಮಂಜುನಾಥ ಸ್ವಾಮಿಯ ಅಭಯ ಹಸ್ತ ಮಂಜಣ್ಣನ ಮೇಲಿರುವುದು ನಿಜವಾಗಿದೆ.

ಬಿಗ್ಬಾಸ್ ಸೀಸನ್ 8 ರ ವಿನ್ನರ್ ಯಾರಾಗ್ತಾರೆ ಎನ್ನುವ ಆರು ತಿಂಗಳ‌ ಕೂತೂಹಲಕ್ಕೆ ಕೊನೆಗೂ ತೆರೆ ಬಿದ್ದಿದೆ. ದೊಡ್ಮನೆ ಗ್ರ್ಯಾಂಡ್ ಫಿನಾಲೆ ಅದ್ದೂರಿಯಾಗಿ ಅಂತ್ಯಗೊಂಡಿದೆ.
ಮಜಾಭಾರತ ಖ್ಯಾತಿಯ ಮಂಜು ಪಾವಗಡ ಬಿಗ್ ಬಾಸ್ ವಿನ್ನರ್ ಪಟ್ಟಕ್ಕೇರಿ ಗೆಲುವಿನ ಮುತ್ತಿನ ಹಾರ ಹಾಕಿಸಿಕೊಂಡು ಕರುನಾಡ ಅಂಗಳದಲ್ಲಿ‌ ಮೆರವಣಿಗೆ ಹೊರಟಿದ್ದಾರೆ. ಮಂಜು ಗೆಲುವನ್ನು ಕರ್ನಾಟಕದ ಲಕ್ಷಾಂತರ ಮಂದಿ ಸಂಭ್ರಮಿಸುತ್ತಿದ್ದಾರೆ.

ಮಂಜು ಪಾವಗಡ ಗೆಲ್ಲಬೇಕು‌ ಎನ್ನುವುದು ಕೇವಲ ಅವರ ಕುಟುಂಬಸ್ಥರು ಹಾಗೂ ಆಪ್ತರ ಕನಸಾಗಿರಲಿಲ್ಲ. ಕರುನಾಡಿನ ಬಹುತೇಕ ಮಂದಿ ಮಂಜು‌ ಗೆಲುವಿನ‌ ಗದ್ದುಗೆ ಏರಬೇಕೆಂದು ಬಯಸಿದ್ದರು. ಪಾವಗಡ ಮಂಜು‌ ಬಿಗ್ಬಾಸ್ ನಲ್ಲಿ ದಿಗ್ವಿಜಯ ಸಾಧಿಸಿದರೆ ಹಳ್ಳಿ ಜಯಭೇರಿ ಬಾರಿಸಿದಂತೆ ಎಂದು ಮಾತನಾಡಿಕೊಂಡಿದ್ದರು.‌ ಅದರಂತೆ ಕರುನಾಡಿನ 45,03,495 ಲಕ್ಷ ಮಂದಿ
ವೋಟ್ ಹಾಕಿದ್ದಾರೆ. ಫಿನಾಲೆಗೆ ಲಗ್ಗೆ ಇಟ್ಟ ಟಾಪ್ ಫೈವ್ ಸ್ಪರ್ಧಿಗಳ‌ ಪೈಕಿ ಅತೀ ಹೆಚ್ಚು ವೋಟ್ ಪಡೆಯುವ ಮೂಲಕ ಬಿಗ್ಬಾಸ್ ಟ್ರೋಪಿಗೆ ಮಂಜಣ್ಣ ಮುತ್ತಿಕ್ಕಿದ್ದಾರೆ. 53 ಲಕ್ಷ ಕಂತೆ ನೋಟಿಗೆ ಮಂಜಣ್ಣ ಒಡೆಯರಾಗಿದ್ದಾರೆ.‌

ಹಳ್ಳಿಹಕ್ಕಿ.. ಗ್ರಾಮೀಣ ಪ್ರತಿಭೆ ಮಂಜಣ್ಣನ ಯಶಸ್ಸಿಗೆ ಸ್ವಂತ ಪರಿಶ್ರಮ ಹಾಗೂ ಕರ್ನಾಟಕದ ಮಂದಿಯ ಪ್ರೋತ್ಸಾಹ ಹಾಗೂ ಸಹಕಾರದ ಜೊತೆಗೆ ಧರ್ಮಸ್ಥಳದ‌ ಶ್ರೀಮಂಜುನಾಥ ಸ್ವಾಮಿಯ ಅಭಯಹಸ್ತವೂ ಇದೆ ಎನ್ನುವುದು ಪ್ರೂ ಆಗಿದೆ. ಮಂಜಣ್ಣ ಇಲ್ಲಿವರೆಗೂ ಏನೇ ಕೇಳಿಕೊಂಡರೂ ಅದೆಲ್ಲವೂ ಈಡೇರಿದೆಯಂತೆ. ಈಗ ದೊಡ್ಮನೆಯಲ್ಲಿ ಜಯಭೇರಿ ಬಾರಿಸುವ ಕನಸು ಕೂಡ ಸಾಕಾರಗೊಂಡಿದೆ. ಉಸಿರುಗಟ್ಟಿ ಕೋಮದಲ್ಲಿದ್ದ ಮಂಜುನಾ ತೀರ್ಥ ಹಾಗೂ ಪ್ರಸಾದ ಸೇವನೆಯಿಂದ ಬದುಕಿಸಿಕೊಂಡ ಶ್ರೀ ಮಂಜುನಾಥ ಸ್ವಾಮಿ,
ತನ್ನ ನಾಮಧೇಯ ಇಟ್ಟುಕೊಂಡು ಶ್ರದ್ಧಾ ಭಕ್ತಿಯಿಂದ ಸ್ಮರಿಸುವ ಹಾಗೂ ಕಲೆಯನ್ನು ಆರಾಧಿಸುವ ಕಲಾವಿದನ ದೊಡ್ಮನೆ‌ ಕನಸು ನನಸಾಗಿರುವುದರಲ್ಲಿ ಯಾವುದೇ ಡೌಟಿಲ್ಲ‌‌ ಬಿಡಿ.

ಬಿಗ್ಬಾಸ್ ಸೀಸನ್ 8ರ ಗೆಲುವು ಮಂಜಣ್ಣನಿಗೆ ಅಷ್ಟು ಸುಲಭವಾಗಿ ದಕ್ಕಿರುವುದಲ್ಲ. ಹಳ್ಳಿ ಹೈದ ಮಂಜಣ್ಣನಿಗೆ ತುಂಬಾ ಜನ ಕಾಂಪಿಟೇಟರ್ ಗಳು ಇದ್ದರು. ಫೈನಲ್ಸ್ ವರೆಗೆ ನೆಕ್ ಟು ನೆಕ್ ಪೈಪೋಟಿ ಕೊಡುತ್ತಲೇ ಬಂದರು.‌ ಇದ್ಯಾವುದಕ್ಕೂ ಜಗ್ಗದ ಹಳ್ಳಿ ಹಕ್ಕಿ ಮಂಜಣ್ಣ ಪ್ರತಿಸ್ಪರ್ಧಿಗಳ ಜೊತೆ ಫೈಟ್ ಮಾಡುತ್ತಾ, ಟಾಸ್ಕ್ ಕಂಪ್ಲೀಟ್ ಮಾಡುತ್ತಾ, ಬಿಗ್ಬಾಸ್ ವೀಕ್ಷಕರಿಗೆ ಭರ್ ಪೂರ್ ಹಾಸ್ಯದ ಮೂಲಕ ಮನರಂಜನೆ ಕೊಡುತ್ತಾ, ದೊಡ್ಮನೆ ನಾಯಕನಾಗಿಯೂ ಸೈ‌ ಎನಿಸಿಕೊಳ್ಳುತ್ತಾ ಅರಮನೆಯಲ್ಲಿ ಭರ್ತಿ
120 ದಿನ ಪೂರೈಸಿದರು. ಕಿಚ್ಚನ ಪಕ್ಕದಲ್ಲಿ ಬಂದು ನಿಂತರು.‌ ಮಾಣಿಕ್ಯನಿಂದ ಕೈ‌ ಮೇಲೆತ್ತಿಸಿಕೊಂಡು ವಿಜಯದ ಕೀರ್ತಿ ಪತಾಕೆಯನ್ನು ಹಾರಿಸಿದರು. ಅರೆಕ್ಷಣ ಭಾವುಕರಾದರು.

ಸಪೋರ್ಟ್ ಮಾಡಿದವರೆಲ್ಲರಿಗೂ ವೇದಿಕೆಯಿಂದಲೇ ಧನ್ಯವಾದ ಹೇಳಿದರು.
ಕರುನಾಡಿನ‌ ಈ ಋಣವನ್ನು ಕಲಾವಿದನಾಗಿ ತೀರಿಸಬೇಕು ಎನ್ನುವ ಹಠ ತೊಟ್ಟು ಮುಂದೆ ಸಾಗಿದ್ದಾರೆ. ಮಂಜಣ್ಣನ ವಿಜಯದ ಸವಾರಿ ಹೀಗೆ ಸಾಗಲಿ, ಕರುನಾಡನ್ನು ಸದಾ ರಂಜಿಸುತ್ತಿರಲಿ.

ಎಂಟರ್ ಟೈನ್ಮೆಂಟ್ ಬ್ಯೂರೋ ಸಿನಿಲಹರಿ

Categories
ಸಿನಿ ಸುದ್ದಿ

ಕನ್ನಡಿಗ ಸುಧೀರ್ ಅತ್ತಾವರ್ ಪರಿಕಲ್ಪನೆಯಲ್ಲಿ ಹೋರಾಟಗಾರರ ಪರಿಚಯಿಸೋ ಬಾನುಲಿ ಸರಣಿ; ಶುರುವಾಗಿರೋ ಹಮಾರೇ ಸ್ವತಂತ್ರ್ಯ ತಾ ಸೇನಾನಿ ಸರಣಿಗೆ ಮೆಚ್ಚುಗೆ…

ಕನ್ನಡ ನಿರ್ದೇಶಕ ಸುಧೀರ್ ಅತ್ತಾವರ್ ದೂರದ ಮುಂಬೈನಲ್ಲಿದ್ದುಕೊಂಡೇ ಒಂದಷ್ಟು ಸುದ್ದಿ ಮಾಡುತ್ತಿದ್ದಾರೆ. ಈಗಾಗಲೇ ಬಾಲಿವುಡ್ ಅಂಗಳದಲ್ಲಿ ತಮ್ಮದೇ ಆದ ಸಕ್ಸಸ್ ಫಿಲ್ಮ್ಸ್ ಹೆಸರಿನ ಸ್ಟುಡಿಯೊ ಶುರು ಮಾಡಿ ಬಾಲಿವುಡ್ ಮಂದಿಯ ಫೇವರ್ ಎನಿಸಿರುವ ಸುಧೀರ್ ಅತ್ತಾವರ್, ಈಗ ಹೊಸದೊಂದು ಸಾಹಸಕ್ಕೆ ಕೈ ಹಾಕಿದ್ದಾರೆ. ಹಾಗಂತ ಅವರು ಹೊಸ ಹಿಂದಿ ಸಿನಿಮಾ ಶುರು ಮಾಡಿದ್ದಾರಾ? ಈ ಪ್ರಶ್ನೆ ಸಹಜ. ಅವರು ಈಗಾಗಲೇ ಮರಾಠಿ ಹಾಗು ಹಿಂದಿ ಭಾಷೆಯ ಸಿನಿಮಾ ಮಾಡಿದ್ದಾಗಿದೆ. ಹೊಸದೊಂದು ಪ್ಯಾನ್ ಇಂಡಿಯಾ ಚಿತ್ರಕ್ಕೂ ಪ್ಲಾನ್ ಮಾಡಿದ್ದಾರೆ. ಇದರ ಜೊತೆ ಹೊಸ ಕಾರ್ಯಕ್ಕೆ ಮುಂದಾಗಿದ್ದಾರೆ ಅನ್ನೋದೇ ಈ ಹೊತ್ತಿನ ವಿಶೇಷ.

ಹೌದು, ನಿರ್ದೇಶಕ ಸುಧೀರ್ ಅತ್ತಾವರ್ ಅವರು ಈಗ ಕೈ ಹಾಕಿರೋದು ದೇಶದ ಮಹಾನ್ ಸ್ವಾತಂತ್ರ್ಯ ಹೋರಾಟಗಾರರನ್ನು ಪರಿಚಯಿಸುವಂತಹ ಕೆಲಸಕ್ಕೆ. ಈಗಾಗಲೇ ಅದು ಬಾನುಲಿ ಸರಣಿ ಮೂಲಕ ಪ್ರಸಾರವಾಗುತ್ತಿದೆ. ಅಂದಹಾಗೆ, ‘ಹಮಾರೇ ಸ್ವತಂತ್ರ್ಯ ತಾ ಸೇನಾನಿ’ ಶೀರ್ಷಿಕೆಯಡಿ ಹೊಸ ಸರಣಿ ಶುರು ಮಾಡಿದ್ದು, ಎಲ್ಲೆಡೆಯಿಂದ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ.

ಸುಧೀರ್ ಅತ್ತಾವರ್ ಅವರು ಮುಂಬೈನಲ್ಲಿರೋ ತಮ್ಮಸಕ್ಸಸ್ ಫಿಲ್ಮ್ಸ್ ಮೂಲಕ ಈ ಬಾನುಲಿ ಸರಣಿಯನ್ನು ನಿರ್ಮಾಣ ಮಾಡಿದ್ದಾರೆ. ಡಿ.ಕೆ ಫ್ಲ್ಯಾಗ್ ಫೌಂಡೇಷನ್ ಈ ಕಾರ್ಯಕ್ರಮವನ್ನು ಅರ್ಪಿಸಿದ್ದು, ಡಿ.ಕೆ. ಫ್ಲ್ಯಾಗ್ ಫೌಂಡೇಷನ್ ನ ಡಾ. ರಾಕೇಶ್ ಬಕ್ಷಿ ಈ ಸರಣಿಯನ್ನು ನಡೆಸಿಕೊಡಲಿದ್ದಾರೆ. ಖ್ಯಾತ ಹಿನ್ನೆಲೆ ಗಾಯಕರಾದ ಶಾನ್, ಶರೋನ್ ಪ್ರಭಾಕರ್, ಆರತಿ ಮುಖರ್ಜಿ, ಡಾ.ಸಂದೇಶ್ ಮಾಯೆಕರ್, ಹಾಕಿ ಪ್ಲೇಯರ್ ಧನರಾಜ್ ಪಿಳೈ, ಹಜ್ ಹೌಸ್ ಅಧ್ಯಕ್ಷ ಮಕ್ಸೂದ್ ಅಹ್ಮದ್ ಖಾನ್, ಬೀನಾ ಸಂತೋಷ್ ಸೇರಿದಂತೆ ಇತರರು ಇಲ್ಲಿ ಭಾಗವಹಿಸುತ್ತಿದ್ದಾರೆ ಅನ್ನೋದು ವಿಶೇಷ.

ಅಂದಹಾಗೆ, ಈ ಕಾರ್ಯಕ್ರಮ ದೆಹಲಿ, ಮುಂಬೈ, ಕೋಲ್ಕತಾ, ಚೆನೈ,ಹೈದರಾಬಾದ್, ಫೋರ್ಟ್ ಬ್ಲೇರ್, ಚಂಡೀಘರ್,ಲಕ್ನೋ, ಅಹಮದಾಬಾದ್,ಪೂನಾ, ನಾಗ್ಪುರ, ಬೆಂಗಳೂರು, ಮಂಗಳೂರು ಸೇರಿ ದೇಶದ ಪ್ರಮುಖ ಬಾನುಲಿ ಕೇಂದ್ರಗಳಲ್ಲಿ ಈಗಾಗಲೇ ಶರುವಾಗಿದೆ. ಆಗಸ್ಟ್ 15ರವರೆಗೆ ಪ್ರತಿ ದಿನ ಸಂಜೆ4.30ರಿಂದ ಪ್ರಸಾರವಾಗುತ್ತಿದೆ. ವಿಶೇಷವೆಂದರೆ, ಈ ಬಾನುಲಿ ಸರಣಿ ಕಾರ್ಯಕ್ರಮ 75ನೇ ಸ್ವಾತಂತ್ರ್ಯ ಹೋರಾಟಗಾರರ ಕುರಿತಾಗಿದ್ದು, 15 ಕಂತುಗಳಲ್ಲಿ ಪ್ರಸಾರವಾಗಲಿದೆ.

ಅದೇನೆ ಇರಲಿ, ಕನ್ನಡಿಗ ಸುಧೀರ್ ಅತ್ತಾವರ್, ದೂರದ ಮುಂಬೈನಲ್ಲಿದ್ದುಕೊಂಡೇ ತಮ್ಮ ಪ್ರತಿಭಾವಂತರ ತಂಡ ಕಟ್ಟಿಕೊಂಡು, ಹೊಸ ಪ್ರಯತ್ನ ಮಾಡುತ್ತಲೇ ಇದ್ದಾರೆ. ಆ ಸಾಲಿಗೆ ಈ ಬಾನುಲಿ ಸರಣಿ ಕೂಡ ವಿನೂತನ ಪ್ರಯತ್ನ. ಇದು ಆ ತಂಡದ ದೇಶಾಭಿಮಾನಕ್ಕೊಂದು ಸಾಕ್ಷಿ ಅಲ್ಲದೆ ಮತ್ತೇನು? ಇನ್ನು ಇಂತಹ ಹಲವು ವಿಶೇಷ ಕಾರ್ಯಕ್ರಮಗಳು ಅವರ ಸಕ್ಸಸ್ ಫಿಲ್ಮ್ಸ್ ಮೂಲಕ ಬರಲಿ. ಹಾಗೆಯೇ ಅವೆಲ್ಲವೂ ಸಕ್ಸಸ್ ಆಗಲಿ ಅನ್ನೋದು ‘ಸಿನಿಲಹರಿ’ ಆಶಯ.

Categories
ಸಿನಿ ಸುದ್ದಿ

ಡಾಲಿ ಜೊತೆ ಹೆಡ್- ಬುಷ್ ಆಡಲು ಬಂದಳಲ್ಲ ತೆಲುಗು ಪಿಲ್ಲಾ !

ಡಾಲಿ ಧನಂಜಯ್ ಗಂಧದಗುಡಿಯ ಹೆಮ್ಮೆಯ ಕಲಾವಿದ. ತಮ್ಮ ಅಘಾದವಾದ ಪ್ರತಿಭೆಯಿಂದ ಗಡಿದಾಟಿ ಗುರ್ತಿಸಿಕೊಂಡಿದ್ದಾರೆ. ಸ್ಯಾಂಡಲ್ ವುಡ್ ಗಷ್ಟೇ ಸೀಮಿತವಾಗಿದ್ದ ಧನಂಜಯ್ ಈಗ ಸೌತ್ ಸಿನಿಮಾ ಇಂಡಸ್ಟ್ರಿ ತುಂಬೆಲ್ಲಾ ಹೆಸರು ಮಾಡೋದಕ್ಕೆ ಅವಕಾಶ ಸಿಕ್ಕಿದೆ. ಪರಭಾಷಾ ಅಂಗಳದಲ್ಲಿ ಬ್ರ್ಯಾಂಡ್ ಆಗುವತ್ತ ಲಗ್ಗೆ ಇಡುತ್ತಿರುವ ಡಾಲಿ ಹೆಡ್ ಬುಷ್ ಮೂಲಕ ಪ್ಯಾನ್ ಇಂಡಿಯಾ ತಲುಪಲಿದ್ದಾರೆ. ಆಲ್ ಓವರ್ ಇಂಡ್ಯಾ ಡಾಲಿ ಸ್ಟಾರ್ ಆಗುವಂತಹ ಹೆಡ್ ಬುಷ್ ಚಿತ್ರಕ್ಕೆ ತೆಲುಗು ಪಿಲ್ಲಾ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಆ ನಟಿಯ ಹೆಸರು ಪಾಯಲ್ ರಜಪೂತ್.

ಪಾಯಲ್ ರಜಪೂತ್ ಹೆಸರು ಕೇಳಿದರೆ ಥಟ್ ಅಂತ ಆಕೆ ನೆನಪಾಗದೇ ಇರಬಹುದು. ಆದರೆ, ‘ಆರ್ ಎಕ್ಸ್ 100’ ಅಂದಾಕ್ಷಣ ಆಕೆ ನಿಮ್ಮ ಕಣ್ಮುಂದೆ ಬಂದು ನಿಲ್ಲೋದು ಪಕ್ಕಾ. ಆ ಸೆಕ್ಸಿ ಸುಂದರಿಯನ್ನೇ ಹೆಡ್ ಬುಷ್ ಚಿತ್ರತಂಡ ಕನ್ನಡಕ್ಕೆ ಕರೆತರುತ್ತಿದ್ದಾರೆ. ಸೆನ್ಸೇಷನಲ್ ಡಾಲಿ ಪಕ್ಕದಲ್ಲಿ ನಿಂತು ಹಲ್ ಚಲ್ ಎಬ್ಬಿಸೋಕೆ ಪಾಯಲ್ ಒಪ್ಪಿಕೊಂಡಿದ್ದಾರೆ. ವಿಕ್ಟರಿ ವೆಂಕಟೇಶ್, ನಾಗಚೈತನ್ಯ, ಮಾಸ್ ಮಹರಾಜ ರವಿತೇಜ ಸೇರಿದಂತೆ ಹಲವು ಸ್ಟಾರ್ ಗಳ ಚಿತ್ರಗಳಲ್ಲಿ ಪಾಯಲ್ ನಟಿಸಿದ್ದಾರೆ.

ಹೆಡ್- ಬುಷ್ ಬೆಂಗಳೂರಿನ ಭೂಗತ ದೊರೆ ಎಂ.ಪಿ. ಜಯರಾಜ್ ಅವರ ಜೀವನಾಧರಿತ ಚಿತ್ರ.‌
ಮಾಜಿ ಡಾನ್ ಪಾತ್ರದಲ್ಲಿ ಡಾಲಿ ಧನಂಜಯ್ ಅಟ್ಟಹಾಸ ಮೆರೆಯಲಿದ್ದಾರೆ. ಅಗ್ನಿ ಶ್ರೀಧರ್ ಅವರು ಕಥೆ ಚಿತ್ರಕಥೆ ಎಣೆದಿದ್ದು, ಶೂನ್ಯ ಎನ್ನುವ ಹೊಸ ಪ್ರತಿಭೆ ಆಕ್ಷನ್ ಕಟ್ ಹೇಳ್ತಿದ್ದಾರೆ. ನಾಳೆಯಿಂದ ಅಂದರೆ ಆಗಸ್ಟ್ 09 ರಿಂದ ಚಿತ್ರೀಕರಣ ಶುರುವಾಗಲಿದೆ. ಮೈ ಕೊಡವಿಕೊಂಡು ಹೆಡ್ ಬುಷ್ ಚಿತ್ರತಂಡ ಅಖಾಡಕ್ಕೆ ಇಳಿಯಲಿದೆ.

ಡಾಲಿಯ ಹೆಡ್ ಬುಷ್ ಚಿತ್ರಕ್ಕೆ ಪವರ್ ಸ್ಟಾರ್ ಪುನೀತ್ ಚಾಲನೆ ಕೊಟ್ಟಿದ್ದರು. ಟೈಟಲ್ ಅನೌನ್ಸ್ ಮಾಡಿ ಶುಭಕೋರಿದ್ದರು. ಅಶು ಬೆದ್ರ ಚಿತ್ರದ ನಿರ್ಮಾಣದ ಹೊಣೆ ಹೊತ್ತಿದ್ದರು. ಆದ್ರೀಗ ಹೆಡ್ ಬುಷ್ ಚಿತ್ರವನ್ನು ಕೈಬಿಟ್ಟಿದ್ದಾರೆ. ಆದ್ದರಿಂದ ಡಾಲಿ ಧನಂಜಯ್ ಹೆಡ್ ಬುಷ್ ನ ಟೇಕಾಫ್ ಮಾಡ್ತಿದ್ದಾರೆ. ಡಾಲಿ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಸಿನಿಮಾ ನಿರ್ಮಾಣ ಗೊಳ್ಳುತ್ತಿದ್ದು ಡಾಲಿ ಜೊತೆಗೆ ತ್ರಿವಿಕ್ರಮ ಚಿತ್ರದ ನಿರ್ಮಾಪಕ ಸೋಮಣ್ಣ ಕೈಜೋಡಿಸ್ತಿದ್ದಾರೆ. ಈ ಹಿಂದೆ ಹೇಳಿದಂತೆ ಹೆಡ್ ಬುಷ್ ಆರು ಭಾಷೆಯಲ್ಲಿ ನಿರ್ಮಾಣಗೊಳ್ತಿದೆ. ಎರಡು ಚಾಪ್ಟರ್ ಗಳಾಗಿ ತಯ್ಯಾರಾಗುತ್ತಿದ್ದು, ಆಗಸ್ಟ್ 23 ರಂದು ಡಾಲಿ ಬರ್ತ್ ಡೇ ದಿನ ಹೆಡ್ ಬುಷ್ ಫಸ್ಟ್ ಲುಕ್ ರಿಲೀಸ್ ಆಗಲಿದೆ. ಶೀಘ್ರದಲ್ಲೇ ಚಿತ್ರದ ಅತೀ ದೊಡ್ಡ ತಾರಾ ಬಳಗದ ಲಿಸ್ಟ್ ಹೊರಬೀಳಲಿದೆ.

ಎಂಟರ್ ಟೈನ್ಮೆಂಟ್ ಬ್ಯೂರೋ ಸಿನಿಲಹರಿ

Categories
ಸಿನಿ ಸುದ್ದಿ

ಚಿತ್ರರಂಗದ ಮೇಲೆ ಮತ್ತೆ ಕೊರೊನಾ ಕರಿ ನೆರಳು! ಚಿತ್ರಮಂದಿರ ಮಾಲೀಕರಲ್ಲಿ ಆತಂಕ- ನಿರ್ಮಾಪಕರಲ್ಲಿ ಗೊಂದಲ!!

ಎಲ್ಲಾ ಕ್ಷೇತ್ರಕ್ಕೂ ಹೀಗೇನಾ ಅಥವಾ ಸಿನಿಮಾ ರಂಗಕ್ಕೆ ಮಾತ್ರ ಹೀಗೇನಾ…?
– ಹೀಗಂತ ಗಾಂಧಿನಗರದ ಮಂದಿ ಮಾತಾಡಿಕೊಳ್ಳುವಂತಾಗಿದೆ. ಹೌದು, ಇದಕ್ಕೆ ಕಾರಣ, ಕೊರೊನಾ ಭಯ. ಕೊರೊನಾ ಹಾವಳಿಯಿಂದ ಚಿತ್ರರಂಗಕ್ಕೇ ದೊಡ್ಡ ಹೊಡೆತ ಬಿದ್ದಿರುವುದಂತೂ ನಿಜ. ಕೊರೊನಾ ಹೊಡೆತಕ್ಕೆ ತತ್ತರಿಸಿದ್ದ ಚಿತ್ರರಂಗ ಮೆಲ್ಲನೆ ಚೇತರಿಸಿಕೊಂಡಿದೆ. ಇನ್ನೇನು ಚಿತ್ರಮಂದಿರಗಳಲ್ಲಿ ಮತ್ತೆ ಅಬ್ಬರಿಸಬೇಕು ಎಂಬ ಉತ್ಸಾಹದಲ್ಲಿರುವಾಗಲೇ, ಕೊರೊನಾ ಹಿನ್ನೆಲೆಯಲ್ಲಿ ಚಿತ್ರಮಂದಿರಗಳು ಸಂಪೂರ್ಣ ಬಂದ್‌ ಆಗಿದ್ದೂ ಗೊತ್ತೇ ಇತ್ತು. ಲಾಕ್‌ಡೌನ್‌ ಬಳಿಕ ಸರ್ಕಾರ ಅನುಮತಿ ಕೊಟ್ಟಿದ್ದೇನೋ ನಿಜ. ಆದರೆ, ಚಿತ್ರಮಂದಿರಗಳು ಬಾಗಿಲು ತೆರೆದರೂ, ಅದೇಕೋ ಏನೋ, ಸ್ಟಾರ್‌ ಸಿನಿಮಾಗಳು ಬಿಡುಗಡೆ ಮಾಡುವ ಆಸಕ್ತಿ ತೋರಲೇ ಇಲ್ಲ. ಬಿಡುಗಡೆಯಾದ ಸಿನಿಮಾಗಳೇ ಮರು ಬಿಡುಗಡೆಯಾಗುತ್ತಿವೆಯಾದರೂ, ಜನರು ಚಿತ್ರಮಂದಿರ ಒಳ ಬರುತ್ತಿಲ್ಲ. ಇದಕ್ಕೆ ಕಾರಣ ಮತ್ತದೇ ಕೊರೊನಾ ಭಯ!

ಹೌದು, ಕೊರೊನಾ ಭಯ ಒಂದು ಕಡೆಯಾದರೆ, ಸರ್ಕಾರ ಈಗ ಶೇ.೫೦ರಷ್ಟು ಮಾತ್ರ ಆಸನ ಭರ್ತಿಗೆ ಅವಕಾಶ ನೀಡಿದೆ. ಈ ಹಿನ್ನೆಲೆಯಲ್ಲಿ ಪ್ರೇಕ್ಷಕ ಪ್ರಭುಗಳು ಕೂಡ ಚಿತ್ರಮಂದಿರದತ್ತ ಮುಖ ಮಾಡುತ್ತಿಲ್ಲ. ಸಿನಿಮಾಗಳು ಕೂಡ ತೆರೆಗೆ ಅಪ್ಪಳಿಸಲು ಮನಸ್ಸು ಮಾಡುತ್ತಿಲ್ಲ. ಸರ್ಕಾರ ಒಂದು ವೇಳೆ ಶೇ.100 ಆಸನ ಭರ್ತಿಗೆ ಅವಕಾಶ ಕೊಟ್ಟರೆ, ಸ್ಟಾರ್‌ ನಟರ ಒಂದೊಂದೇ ಸಿನಿಮಾಗಳು ತೆರೆಮೇಲೆ ಮೂಡುತ್ತವೆ. ಆಗ ಜನ ಕೂಡ ಉತ್ಸಾಹದಲ್ಲೇ ಚಿತ್ರಮಂದಿರದತ್ತ ಮುಖ ಮಾಡುತ್ತಾರೆ ಎಂಬ ದೊಡ್ಡ ಆಸೆ ಚಿತ್ರರಂಗಕ್ಕಿದೆ. ಆದಾಗ್ಯೂ ಸರ್ಕಾರ ಈಗ ಶೇ.೧೦೦ರಷ್ಟು ಭರ್ತಿಗೆ ಅವಕಾಶ ಕೊಟ್ಟಿಲ್ಲ. ಕೊಡುತ್ತದೆ ಎಂಬ ಆಶಾಭಾವದಲ್ಲೇ ಸಿನಿಮಾ ಮಂದಿ ಇದ್ದಾರೆ. ಹಾಗೇನಾದರೂ, ಶೇ.೧೦೦ ರಷ್ಟು ಅನುಮತಿ ಸಿಕ್ಕರೆ, ನಿರ್ಮಾಪಕರು ತಮ್ಮ ಸಿನಿಮಾ ಬಿಡುಗಡೆಯ ದಿನಾಂಕವನ್ನು ಘೋಷಣೆ ಮಾಡಲಿದ್ದಾರೆ. ಅದಕ್ಕಾಗಿಯೇ ಈಗ ಎದುರು ನೋಡುತ್ತಿದ್ದಾರೆ.

ಬಿಡುಗಡೆ ಮಾತು ದೂರ…
ಈಗ ಪರಿಸ್ಥಿತಿ ಮೊದಲಿನಂತಿಲ್ಲ. ಶೇ.50ರಷ್ಟು ಕೊಟ್ಟರೂ, ಚಿತ್ರಮಂದಿರದತ್ತ ಯಾವೊಬ್ಬ ಸ್ಟಾರ್‌ ಸಿನಿಮಾನೂ ತಿರುಗಿ ನೋಡಿಲ್ಲ. ಹಾಗೊಂದು ವೇಳೆ ಶೇ.100ರಷ್ಟು ಅನುಮತಿ ಕೊಟ್ಟರೂ. ಬಿಡುಗಡೆಗೆ ಸಾಧ್ಯವಾ? ಈ ಪ್ರಶ್ನೆ ಈಗ ಎದ್ದಿದೆ. ಕಾರಣ, ಸರ್ಕಾರ ಈಗ ಹೊಸದೊಂದು ನಿಯಮ ಜಾರಿ ಮಾಡಿದೆ. ಗಡಿ ರಾಜ್ಯಗಳಲ್ಲಿ ಕೊರೊನಾ ಸೋಂಕು ತೀವ್ರಗೊಂಡಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಕರ್ನಾಟಕದಲ್ಲೂ ಎಚ್ಚರಿಕೆ ಕ್ರಮ ಜರುಗಿಸಿದೆ. ಗಡಿ ಜಿಲ್ಲೆಗಳಲ್ಲಿ ವೀಕೆಂಡ್‌ ಲಾಕ್‌ಡೌನ್‌ ಮತ್ತು ನೈಟ್‌ ಕರ್ಫ್ಯೂ ಜಾರಿ ಮಾಡಿ ಆದೇಶಿಸಿದೆ. ಇದರಿಂದಾಗಿ ರಾಜ್ಯದ ಗಡಿ ಜಿಲ್ಲೆಗಳಲ್ಲಿ ರಾತ್ರಿ ಪ್ರದರ್ಶನಗಳು ರದ್ದಾಗಿವೆ. ಇದರೊಂದಿಗೆ ವೀಕೆಂಡ್‌ ಪ್ರದರ್ಶನಗಳೂ ರದ್ದಾಗಿವೆ. ಹೀಗಾಗಿ ಚಿತ್ರರಂಗ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿರುವುದಂತೂ ದಿಟ.

ಹೇಗೋ ಶೇ.50ರಷ್ಟು ಭರ್ತಿಗೆ ಆದೇಶ ಕೊಟ್ಟಿತ್ತು. ಇರುವ ಆಸನಗಳು ತುಂಬುವುದೇ ಕಷ್ಟ ಇದ್ದ ಸಂದರ್ಭದಲ್ಲಿ ಈಗ ರಾತ್ರಿ ಕರ್ಫ್ಯೂ ಜಾರಿ ಮಾಡಿರುವುದರಿಂದ ಇದ್ದ ಸಣ್ಣ ಆಸೆಗೂ ಕಲ್ಲು ಬಿದ್ದಂತಾಗಿದೆ. ನಿರ್ಮಾಪಕರು ಹೇಗೋ ಬಂದಷ್ಟು ಬರಲಿ ಅಂತ ತಮ್ಮ ಸಿನಿಮಾ ರಿಲೀಸ್‌ಗೆ ರೆಡಿಯಾಗುತ್ತಿದ್ದರು. ಪೂರ್ಣ ಪ್ರದರ್ಶನಕ್ಕೆ ಅವಕಾಶ ಸಿಗುತ್ತೆ ಅನ್ನುವಾಗಲೇ ಈಗ ಸಮಸ್ಯೆ ಎದುರಾಗಿದೆ. ಮತ್ತೆ ಕೊರೊನಾ ತೀವ್ರತೆಯಾಗಿ, ಲಾಕ್‌ಡೌನ್‌ ಆಗಿಬಿಟ್ಟರೆ, ಸಿನಿಮಾರಂಗದ ಕಥೆ ಏನು? ಎಂಬ ಆತಂಕ ಕೂಡ ಸಿನಿಮಾ ಮಂದಿಯಲ್ಲಿ ಶುರುವಾಗಿದೆ. ಇಡೀ ಚಿತ್ರರಂಗ ಈಗ ಶೇ.100ರಷ್ಟು ಅವಕಾಶವನ್ನೇ ಎದುರು ನೋಡುತ್ತಿದೆ. ಇಂತಹ ಸಂದರ್ಭದಲ್ಲೇ ಕೊರೊನಾ ಮತ್ತೆ ಆವರಿಸಿಕೊಳ್ಳುವ ಸೂಚನೆ ನೀಡುತ್ತಿದೆ. ಹೀಗೇ ಮುಂದುವರೆದರೆ, ಚಿತ್ರರಂಗದ ಮೇಲೆ ಕರಿನೆರಳು ಗ್ಯಾರಂಟಿ.

ಸರ್ಕಾರ ಶೇ.100ರಷ್ಟು ಅನುಮತಿ ಕೊಟ್ಟ ಬಳಿಕ ಸ್ಟಾರ್‌ ಸಿನಿಮಾಗಳು ತೆರೆಗೆ ಬರಲು ಸಜ್ಜಾಗಿದ್ದವು. ಆದರೆ, ಈಗ ಎಲ್ಲಾ ಸಿನಿಮಾಗಳೂ ಗೊಂದಲದಲ್ಲಿವೆ. ದುನಿಯಾ ವಿಜಯ್‌ ಅಭಿನಯದ ಸಲಗ ವರಮಹಾಲಕ್ಷ್ಮಿ ಹಬ್ಬಕ್ಕೆ ಬರುವುದಾಗಿ ಹೇಳಿತ್ತು. ಅಂದೇ ನಿನ್ನ ಸನಿಹಕೆ ಸಿನಿಮಾ ಕೂಡ ಬರುವುದಾಗಿ ಹೇಳಿಕೊಂಡಿತ್ತು. ಆದರೆ, ಈಗ ರಾತ್ರಿ ಕರ್ಫ್ಯೂ ಜಾರಿ ಮಾಡಿ, ಗಡಿ ಭಾಗದಲ್ಲಿ ವೀಕೆಂಡ್‌ ಲಾಕ್‌ಡೌನ್‌ ಮಾಡಿರುವುದರಿಂದ ಅದಕ್ಕೂ ಕಲ್ಲು ಬಿದ್ದಂತಾಗಿದೆ. ಅಲ್ಲಿಗೆ ಸಿನಿಮಾ ಬಿಡುಗಡೆ ಮಾಡುವ ನಿರ್ಧಾರ ಕೂಡ ಹಿಂದಕ್ಕೆ ಹೋಗಿದೆ. ಅದೇನೆ ಇರಲಿ, ಚಿತ್ರರಂಗಕ್ಕೆ ಮಾತ್ರ ಕಳೆದ ಎರಡು ವರ್ಷಗಳಿಂದ ದೊಡ್ಡ ನಷ್ಟವೇ ಆಗಿದೆ. ಈ ವರ್ಷ ಕೂಡ ಅದೇ ಆತಂಕದಲ್ಲಿದೆ. ಮುಂದಿನ ದಿನಗಳಲ್ಲಿ ಮತ್ತದೇ ಗತವೈಭವ ನೋಡಲು ಸಿನಿಮಾ ಮಂದಿ ಉತ್ಸುಕರಾಗಿದ್ದಾರೆ. ಅಂತಹ ದಿನಗಳು ಬರಲಿ ಎಂಬುದೇ ಸಿನಿಲಹರಿ ಆಶಯ.

Categories
ಸಿನಿ ಸುದ್ದಿ

ಕೋಮಾದಲ್ಲಿರುವಾಗಲೇ ಬದುಕಿಸಿದ `ಮಂಜು’ನಾಥ ಸ್ವಾಮಿ! ಬಿಗ್‌ಬಾಸ್‌ ಮನೇಲಿರುವಾಗ ಕೈ ಬಿಡೋದುಂಟೆ ?

ಉಸಿರಾಟದ ತೊಂದರೆಯಿಂದ ಬಾಲ್ಯದಲ್ಲೇ ಮಂಜಣ್ಣ ಕೋಮಾಗೆ ಹೋಗಿದ್ದರು. ಆಸ್ಪತ್ರೆಗೆ ಹೋದರೂ ಮಂಜಣ್ಣ ಉಸಿರಾಡಿದ್ದು ಶ್ರೀಮಂಜುನಾಥಸ್ವಾಮಿ ತೀರ್ಥ- ಪ್ರಸಾದ ಸೇವಿಸಿದ ಮೇಲೆ! ಮಗನ ಆರೋಗ್ಯ ಹದಗೆಟ್ಟಿದ್ದೇ ತಡ, ಮಂಜಣ್ಣ ತಂದೆ ಧರ್ಮಸ್ಥಳದ ಮಂಜುನಾಥನ ಸನ್ನಿಧಿಗೆ ತೆರಳಿ, ನನ್ನ ಕುಡಿಯನ್ನು ಉಳಿಸಿಕೊಡು ಭಗವಂತ ಅಂತ ಶಿರಸಾಷ್ಟಾಂಗ ಹಾಕಿ ಬೇಡಿದ್ದರು. ಸ್ವಾಮಿಯ ತೀರ್ಥ -ಪ್ರಸಾದ ತಂದು ಪುತ್ರ ಮಂಜಣ್ಣನಿಗೆ ಕೊಟ್ಟರು. ಅದಾಗಿ ಸ್ವಲ್ಪ ಹೊತ್ತಲ್ಲೇ ಮಂಜಣ್ಣ ನಿಟ್ಟುಸಿರು ಬಿಟ್ಟರು…

  • ವಿಶಾಲಾಕ್ಷಿ

ನಂಬಿದ ಭಕ್ತರನ್ನು ಭಗವಂತ ಯಾವುದೇ ಕಾರಣಕ್ಕೂ ಕೈಬಿಡುವುದಿಲ್ಲ ಎನ್ನುವ ಮಾತಿದೆ. ತನ್ನನ್ನು ಆರಾಧಿಸುವ, ಪೂಜಿಸುವ, ಸ್ಮರಿಸುವ ಭಕ್ತ ಬಳಗವನ್ನು ಭಗವಂತ ಕಣ್ಣಲ್ಲಿ ಕಣ್ಣಿಟ್ಟು ಕಾಪಾಡುತ್ತಾನೆ ಅಂತ ಪೂರ್ವಜರು ಹೇಳ್ತಾರೆ, ಪುರಾಣಗಳು ಹೇಳುತ್ತವೆ. ಅಷ್ಟಕ್ಕೂ, ನಾವು ಇವತ್ತು ಭಗವಂತ-ದೇವರು ಅಂತ ಬರೆಯುತ್ತಿರುವುದಕ್ಕೆ ಕಾರಣ ಮಂಜು ಪಾವಗಡ. ಬಿಗ್‌ಬಾಸ್ ಫೈನಲ್‌ಗೆ ಲಗ್ಗೆ ಇಟ್ಟಿರುವ ಮಂಜಣ್ಣ, ತಮ್ಮ ಬದುಕಿನಲ್ಲಿ ಧರ್ಮಸ್ಥಳದ ಶ್ರೀಮಂಜುನಾಥಸ್ವಾಮಿಯ ಪವಾಡ ಎಂತಹದ್ದು ಅನ್ನೋದನ್ನು ವಿವರಿಸಿದ್ದಾರೆ. ಸಾವು-ಬದುಕಿನ ನಡುವೆ ಹೋರಾಟ ಮಾಡುತ್ತಿದ್ದಾಗ, ಮಂಜುನಾಥ ಸ್ವಾಮಿ ಬದುಕಿಸಿದ ಘಟನೆಯನ್ನು ನೆನೆದು ಭಾವುಕರಾಗಿದ್ದಾರೆ. ಆ ಅಚ್ಚರಿಯ ಕಥೆಯನ್ನ ಈ ಕ್ಷಣ ನಿಮ್ಮ ಮುಂದೆ ಇಡಲಿದ್ದೇವೆ.

ಮಂಜು ಪಾವಗಡ ಕಡು ಬಡತನದ ಕುಟುಂಬಕ್ಕೆ ಸೇರಿದ ಕುಡಿ. ತಂದೆ ಹನುಮಂತರಾಯಪ್ಪ, ತಾಯಿ ಲಕ್ಷ್ಮಮ್ಮ. ಕೂಲಿನಾಲಿ ಮಾಡಿಕೊಂಡು ಜೀವನ ಮಾಡುವಂತಹ ಕುಟುಂಬ. ಹೀಗೆ ಬದುಕು ಸಾಗುತ್ತಿರುವಾಗ ಮಂಜಣ್ಣ ತೀರಾ ಚಿಕ್ಕವನು. ಆಗಿನ್ನೂ ಹೆಸರಿಟ್ಟಿರಲಿಲ್ಲ. ಮಗನ ನಾಮಕರಣಕ್ಕೆ ಸಕಲ ತಯ್ಯಾರಿ ನಡೆದಿತ್ತು. ಮಂಜು ಅವರ ತಂದೆ ರೇಷ್ಮೆಗೂಡನ್ನು ಹಾಕಿಕೊಂಡು ರಾಮನಗರಕ್ಕೆ ಹೋಗಿದ್ದರು. ಅಲ್ಲಿಂದ ಅವರು ಬರುವಷ್ಟರಲ್ಲಿ ಮಂಜಣ್ಣನಿಗೆ ತೀರಾ ಸೀರಿಯಸ್ಸ್ ಆಗಿಬಿಟ್ಟಿತ್ತು. ಉಸಿರಾಟಕ್ಕೆ ತೊಂದರೆಯಾಗಿ ಬಾಲ್ಯದಲ್ಲೇ ಮಂಜಣ್ಣ ಕೋಮಾಗೆ ಹೋಗಿ ಬಿಟ್ಟಿದ್ದ. ಆಸ್ಪತ್ರೆಗೆ ತೋರಿಸಿದರಾದರೂ ಕೂಡ ಮಂಜಣ್ಣ ಉಸಿರಾಡಿದ್ದು ಶ್ರೀಮಂಜುನಾಥಸ್ವಾಮಿಯ ತೀರ್ಥ ಹಾಗೂ ಪ್ರಸಾದ ಹೊಟ್ಟೆಗೆ ಹೋದ್ಮೇಲೆ.

ಹೌದು, ಮಗನ ಆರೋಗ್ಯ ಹದಗೆಟ್ಟಿದ್ದೇ ತಡ, ಮಂಜಣ್ಣ ಅವರ ತಂದೆ ಧರ್ಮಸ್ಥಳ ಬಸ್ ಏರಿ ಶ್ರೀಮಂಜುನಾಥನ ಸನ್ನಿಧಿಗೆ ತೆರಳಿದರು. ಸಾವು-ಬದುಕಿನ ಮಧ್ಯೆ ಹೋರಾಡುತ್ತಿರುವ ನನ್ನ ಕುಡಿಯನ್ನು ಉಳಿಸಿಕೊಡು ಭಗವಂತ ಅಂತ ಶಿರಸಾಷ್ಟಾಂಗ ನಮಸ್ಕಾರ ಹಾಕಿ ಬೇಡಿಕೊಂಡರು. ವಿಶೇಷ ಪೂಜೆ ಮಾಡಿಸಿಕೊಂಡು ತೀರ್ಥ-ಪ್ರಸಾದ ತೆಗೆದುಕೊಂಡು ಬಂದರು. ಉಸಿರಾಡೋದಕ್ಕೆ ಕಷ್ಟಪಡುತ್ತಿದ್ದ ಪುತ್ರ ಮಂಜಣ್ಣನಿಗೆ ಮಂಜುನಾಥ ಸ್ವಾಮಿ ತೀರ್ಥ ಸೇವನೆ ಮಾಡಿಸಿದರು. ಇದಾಗಿ ಸ್ವಲ್ಪ ಹೊತ್ತಲ್ಲೇ ಮಂಜಣ್ಣ ನಿಟ್ಟುಸಿರು ಬಿಟ್ಟ. ಅಂದಿನಿಂದ ಇಂದಿನಿವರೆಗೂ ಮಂಜಣ್ಣ ಧರ್ಮಸ್ಥಳದ ಶ್ರೀಮಂಜುನಾಥಸ್ವಾಮಿಗೆ ನಡೆದುಕೊಳ್ತಾರೆ. ಕಷ್ಟ-ಸುಖ-ಸಂತೋಷ ಯಾವುದೇ ಇರಲಿ ಅಲ್ಲಿಗೆ ಹೋಗಿ ಆಶೀರ್ವಾದ ಬೇಡಿಕೊಂಡು ಬರುತ್ತಾರಂತೆ.

ಹಸನಾದ ಬದುಕು…

ಸಾವು-ಬದುಕಿನ ಮಧ್ಯೆ ಹೋರಾಡುತ್ತಿದ್ದ ಮಂಜಣ್ಣನನ್ನು ಬದುಕಿಸಿಕೊಟ್ಟ ಮಂಜುನಾಥಸ್ವಾಮಿ, ಮಂಜಣ್ಣನಿಗೆ ಹಸನಾದ ಬದುಕು ಕಟ್ಟಿಕೊಟ್ಟಿದ್ದಾನೆ. ನಾನು ಕಲಾವಿದ ಆಗ್ಬೇಕು ಎನ್ನುವುದು ಬಾಲ್ಯದ ಕನುಸು ಮಂಜುನಾಥ ದಯವಿಟ್ಟು ಅದೊಂದು ಮಹದಾಸೆಯನ್ನು ಈಡೇರಿಸಿಕೊಡೆಂದು ಒಮ್ಮೆ ಧರ್ಮಸ್ಥಳಕ್ಕೆ ಹೋಗಿ ಅಡ್ಡಬಿದ್ದು ಮಂಜಣ್ಣ ಬೇಡಿಕೊಂಡಿದ್ದತೆ. ಆ ಕನಸು ಮಜಾ ಭಾರತದ ಮೂಲಕ ಕೊನೆಗೂ ಈಡೇರಿಬಿಡ್ತು. ಕಲರ್ಸ್ ಕನ್ನಡದ ಮಜಾ ಅಂಗಳಕ್ಕೆ ಬರುವುದಕ್ಕೂ ಮೊದಲು ಲ್ಯಾಂಗ್ ಮಂಜಣ್ಣ ಬೇಜಾನ್ ಸೈಕಲ್ ಹೊಡೆದಿದ್ದಾರೆ. ತಾನೊಬ್ಬ ಕಲಾವಿದ ಎಂದು ಸಾಬೀತುಪಡಿಸುವುದಕ್ಕೆ ಸಾಕಷ್ಟು ಕಷ್ಟ-ನೋವು-ಅವಮಾನ-ಅಪಮಾನ-ನಿಂದನೆ ಎದುರಿಸಿದ್ದಾರೆ. ಅದಕ್ಕೆ ಇವತ್ತು ದೊಡ್ಮನೆ ಅಂಗಳದಲ್ಲಿ ನಿಂತಿದ್ದಾರೆ. ನಾಲ್ಕು ಜನ ನನ್ನ ಗುರ್ತಿಸಿದರೇ ಸಾಕು ಎನ್ನುತ್ತಿದ್ದ ಲ್ಯಾಂಗ್ ಮಂಜಣ್ಣರನ್ನ ಇವತ್ತು ಇಡೀ ಕರುನಾಡಿನ ಏಳುಕೋಟಿ ಜನರು ಗುರ್ತಿಸುತ್ತಿದ್ದಾರೆ ಜೊತೆಗೆ ತಲೆಮೇಲೆ ಹೊತ್ತುಕೊಂಡು ಮೆರೆಸುತ್ತಿದ್ದಾರೆ.

ಕೆಲವೇ ಗಂಟೆಯಲ್ಲಿ ಬಿಗ್‌ಬಾಸ್‌ ಯಾರೆಂಬ ಉತ್ತರ!

ದೊಡ್ಮನೆ ಅಂಗಳಕ್ಕೆ ಗ್ರ್ಯಾಂಡ್ ಎಂಟ್ರಿಪಡೆಯವುದು ಅಷ್ಟು ಸುಲಭವಲ್ಲ. ಅಲ್ಲಿಗೆ ಜಿಗಿದ್ಮೇಲೆ ಎದುರಾಳಿ ಸ್ಪರ್ಧಿಗಳಿಗೆ ಟಕ್ಕರ್ ಕೊಡುತ್ತಾ, ಗೇಮ್ಸ್ ಗಳಲ್ಲಿ ಜೆನ್ಯೂನ್ ಆಗಿ ಆಡುತ್ತಾ, ಕರುನಾಡ ಮಂದಿಯನ್ನು ರಂಜಿಸುತ್ತಾ ಗ್ರ್ಯಾಂಡ್ ಫಿನಾಲೆವರೆಗೂ ಬರೋದು ತಮಾಷೆ ಮಾತಲ್ಲ. ಅಂತದ್ರಲ್ಲಿ ಲ್ಯಾಗ್ ಮಂಜಣ್ಣ ಬಿಗ್‌ಬಾಸ್ ಫೈನಲ್ಸ್ ತಲುಪಿದ್ದಾರೆ. ಬಿಗ್‌ಬಾಸ್ ಗೆಲ್ತಾರೆ, ಕಿರೀಟ ಮುಡಿಗೇರಿಸಿಕೊಂಡು ಕರುನಾಡ ಅಂಗಳದಲ್ಲಿ ಮೆರವಣಿಗೆ ಹೊರಡ್ತಾರೆ ಎನ್ನುವ ಸುದ್ದಿ ಕೂಡ ಟಪ್ಪಾಂಗುಚ್ಚಿ ಸ್ಟೆಪ್ ಹಾಕ್ತಿದೆ. ಇನ್ನು ಕೆಲವೇ ಕೆಲವು ಗಂಟೆಗಳಲ್ಲಿ ಬಿಗ್‌ಬಾಸ್ ಸೀಸನ್ 8ರ ವಿನ್ನರ್-ರನ್ನರ್ ಯಾರಾಗ್ತಾರೆ ಎನ್ನುವ ಮಿಲಿಯನ್ ಡಾಲರ್ ಪ್ರಶ್ನೆಗೆ ಉತ್ತರ ಸಿಗಲಿದೆ.

ಆ ಅಂತಿಮ ಉತ್ತರಕ್ಕೂ ಮೊದಲೇ ಕರ್ನಾಟಕದ ಬಹುತೇಕ ಮಂದಿ ಮಂಜು ಪಾವಗಡ ಅವರೇ ಗೆಲ್ಲಬೇಕು ಅಂತ ಆಶಿಸುತ್ತಿದ್ದಾರೆ. ಕೋಮಾದಲ್ಲಿದ್ದಾಗ ಶ್ರೀಮಂಜುನಾಥ ಸ್ವಾಮಿಯೇ ಬದುಕಿಸಿದ್ದು ಅಂತ ಮಂಜಣ್ಣ ಹೇಳಿದ್ಮೇಲಂತೂ ಹಲವು ಮಂದಿ ಬಾಯಲ್ಲಿ ಅದೇ ಮಂಜುನಾಥ ಸ್ವಾಮಿ ಬಿಗ್‌ಬಾಸ್‌ನಲ್ಲಿ ಮಂಜಣ್ಣನ್ನು ಗೆಲ್ಲಿಸೋದು ಖಚಿತವೆಂದು ಮಾತನಾಡಿಕೊಳ್ತಿದ್ದಾರೆ. ನೋಡೋಣ ಮಂಜುನಾಥಸ್ವಾಮಿಯ ಅಭಯಹಸ್ತ ಟಾಪ್ ಫೈವ್ ಕಂಟೆಸ್ಟೆಂಟ್‌ಗಳಲ್ಲಿ ಯಾರ ಮೇಲಿದೆ ಅಂತ.

ಎಂಟರ್‌ಟೈನ್ಮೆಂಟ್ ಬ್ಯೂರೋ ಸಿನಿಲಹರಿ

Categories
ಸಿನಿ ಸುದ್ದಿ

ಅದಿತಿ ರೈತೋಭವ! ಹಳ್ಳಿ ಸುಂದರಿಯ ಕೃಷಿ ಕೆಲಸ!! ಹೊಲ ಬಿತ್ತಿದರು, ಸಗಣಿ ಬಾಚಿದರು, ಹಾಲು ಕರೆದರು, ರೊಟ್ಟಿ ತಟ್ಟಿದರು…

ಯಾರು ಎಷ್ಟೇ ಎತ್ತರಕ್ಕೆ ಬೆಳೆದರೂ ತನ್ನೂರು, ತನ್ನ ಜನರನ್ನ ಒಂದಲ್ಲ ಒಂದು ದಿನ ನೆನಪಿಸಿಕೊಳ್ಳೋದು ಸಹಜ. ಕನ್ನಡ ಚಿತ್ರರಂಗದ ಅನೇಕ ಸ್ಟಾರ್‌ ನಟ, ನಟಿಯರು ಕೂಡ ತಮ್ಮ ಊರು, ಅಲ್ಲಿನ ಪರಿಸರ, ತಾವು ಬಾಲ್ಯದಲ್ಲಿ ಓಡಾಡಿಕೊಂಡ ಬೀದಿ, ಜೊತೆಯಾಗಿದ್ದ ಗೆಳೆಯರು, ಪ್ರೀತಿ ತೋರಿದ ಜನರ ಬಗ್ಗೆ ಹೇಳಿಕೊಂಡಿದ್ದಾರೆ. ಈಗಲೂ ಹಲವರು ಬಿಡುವು ಸಿಕ್ಕಾಗೆಲ್ಲ, ತನ್ನೂರಿಗೆ ತೆರಳಿ ಒಂದಷ್ಟು ಸಮಯ ಕಳೆದು ಬರುತ್ತಾರೆ. ಆ ಸಾಲಿಗೆ ಈಗ ನಟಿ ಅದಿತಿ ಪ್ರಭುದೇವ ಕೂಡ ತನ್ನ ಹಳ್ಳಿ ಕಡೆ ಒಂದು ಸುತ್ತು ಹೋಗಿ ಬಂದಿದ್ದಾರೆ. ಹಾಗಂತ, ಹಳ್ಳಿಗೆ ಸುಮ್ಮನೆ ವಿಸಿಟ್‌ ಹಾಕಿಬಂದಿಲ್ಲ. ಅವರು, ಹಳ್ಳಿಯಲ್ಲಿರೋ ತಮ್ಮ ಹೊಲಕ್ಕೆ ಭೇಟಿ ನೀಡಿದ್ದಾರೆ. ಅಷ್ಟೇ ಅಲ್ಲ, ಕೃಷಿ ಮಾಡಿಯೂ ಸೈ ಎನಿಸಿಕೊಂಡಿದ್ದಾರೆ. ಎಷ್ಟೇ ಆಗಲಿ, ಹಳ್ಳಿ ಹುಡುಗಿ ಅಲ್ಲವೇ?


ಅದಿತಿ ಪ್ರಭುದೇವ ಅವರು ಇತ್ತೀಚೆಗೆ ದಾವಣಗೆರೆ ಸಮೀಪದ ತಮ್ಮ ಹಳ್ಳಿಗೆ ಹೋಗಿ ಒಂದಷ್ಟು ಸಮಯ ಕಳೆದುಬಂದಿದ್ದಾರೆ. ಅವರ ಊರಲ್ಲಿರುವ ಹೊಲದಲ್ಲಿ ಓಡಾಡಿ, ಒಂದಷ್ಟು ಕೃಷಿ ಚಟುವಟಕೆಯಲ್ಲಿ ತೊಡಗಿ ಖುಷಿಗೊಂಡಿದ್ದಾರೆ. ಸದ್ಯ ಅದಿತಿ ಪ್ರಭುದೇವ ಅವರು ಅವರದೇ ಆದ ಯುಟ್ಯೂಬ್‌ ಚಾನೆಲ್‌ನಲ್ಲಿ ಭೂಮಿ ಉಳುಮೆ ಮಾಡಿ, ಮನೆಗೆಲಸ ಮಾಡುತ್ತಿರುವ ವಿಡಿಯೋವನ್ನು ಹಾಕಿಕೊಂಡಿದ್ದಾರೆ. ಅವರ ಕೃಷಿ ಪ್ರೀತಿ ಹಾಗು ಹಳ್ಳಿಯಲ್ಲಿ ಸಮಯ ಕಳೆದ ಬಗ್ಗೆ ಅವರ ಫ್ಯಾನ್ಸ್‌ ಸಾಕಷ್ಟು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹಾಗೆ ನೋಡಿದರೆ, ಅದಿತಿ ಪ್ರಭುದೇವ ಅವರು ಕೃಷಿ ಹಿನ್ನೆಲೆಯ ಕುಟುಂಬದಿಂದ ಬಂದವರು. ಹೇಗೋ, ಆರಂಭದ ದಿನಗಳಲ್ಲಿ ವೇದಿಕೆ ಮೇಲೇರಿ ನಿರೂಪಣೆ ಮಾಡುತ್ತಿದ್ದ ಅದಿತಿ ಅವರಿಗೆ ಕಿರುತೆರೆ ಪ್ರವೇಶಿಸುವ ಅವಕಾಶ ಸಿಕ್ತು. ಅಲ್ಲಿಂದ ಬೆಳ್ಳಿತೆರೆಗೂ ಜಂಪ್‌ ಮಾಡಿದ ಅವರು, ಸ್ಯಾಂಡಲ್‌ವುಡ್‌ನಲ್ಲಿ ಗಟ್ಟಿ ನೆಲೆ ಕಂಡಿದ್ದು ಎಲ್ಲರಿಗೂ ಗೊತ್ತೇ ಇದೆ. ಸಾಲು ಸಾಲು ಸಿನಿಮಾಗಳಲ್ಲಿ ನಟಿಸಿ, ಈಗಲೂ ಕೈ ತುಂಬಾ ಸಿನಿಮಾಗಳಿರುವ ಅದಿತಿ ಸದ್ಯದ ಮಟ್ಟಿಗೆ ಬ್ಯುಝಿ.


ಅದಿತಿ ಪ್ರಭುದೇವ ಅವರು, ಬೇಡಿಕೆ ನಟಿಯಾಗಿದ್ದರೂ, ಅವರ ಸರಳತೆ ಎಲ್ಲರಿಗೂ ಇಷ್ಟವಾಗುತ್ತೆ. ಯಾರೇ ಮಾತಾಡಿಸಿದರೂ, ಆ ಕ್ಷಣಕ್ಕೆ ಸ್ಪಂದಿಸುವ ಗುಣ ಅವರದು. ಹಳ್ಳಿ ಬದುಕಿನ ಬಗ್ಗೆ ಅಪಾರವಾಗಿ ತಿಳಿದಿರುವ ಅವರು, ರೈತರ ಶ್ರಮದ ಬಗ್ಗೆಯೂ ಅರಿತಿದ್ದಾರೆ. ಸಮಯ ಸಿಕ್ಕಾಗೆಲ್ಲಾ ಹಳ್ಳಿಗೆ ಹೋಗಿ ಬರುವ ಅದಿತಿ, ಈ ಬಾರಿ, ಅವರ ಹೊಲದಲ್ಲಿ ತಾವೇ ಕೆಲಸ ಮಾಡಿದ್ದಾರೆ. ಹೊಲ ಬಿತ್ತುವ ಸಂದರ್ಭದಲ್ಲಿ ಅದಿತಿ ಕೂಡ ಟ್ರಾಕ್ಟರ್ ಏರಿ ಬಿತ್ತನೆಗೆ ಮುಂದಾಗಿದ್ದಾರೆ. ಎತ್ತುಗಳನ್ನು ಓಡಿಸುವ ಮೂಲಕ ಹೊಲವನ್ನು ಉಳುಮೆ ಮಾಡಿದ್ದಾರೆ. ಈ ವಿಡಿಯೋ ಸದ್ಯ ಸಾಕಷ್ಟು ಮೆಚ್ಚುಗೆ ಪಡೆಯುತ್ತಿದೆ.


ಇದರೊಂದಿಗೆ ಅದಿತಿ ಅವರು, ಹೊಲದ ಮನೆಯಲ್ಲಿ ಸಾಕಿರುವ ಹಸುಗಳ ಸಗಣಿ ಬಾಚಿದ್ದಾರೆ. ನಂತರ ಹಾಲು ಕರೆದು ಸೈ ಎನಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ, ಆ ಹೊಲದ ಮನೆಯಲ್ಲೇ ಕಟ್ಟಿಗೆ ಒಲೆ ಮುಂದೆ ಕೂತು ರೊಟ್ಟಿ ತಟ್ಟಿದ್ದಾರೆ. ಅದೇನೆ ಇರಲಿ, ಕೃಷಿ ಕುಟುಂಬದ ಹುಡುಗಿಯಾಗಿ, ರೈತ ಮಾಡುವ ಕೆಲಸವನ್ನು ಪ್ರೀತಿಸಿ, ತಾನೂ ಒಂದಷ್ಟು ಸಮಯ ಹೊಲದಲ್ಲಿ ಕಳೆದು ಖುಷಿಯಾಗಿರುವ ಅದಿತಿ ಅವರ ಕೆಲಸಕ್ಕೆ ಎಲ್ಲಡೆಯಿಂದ ಮೆಚ್ಚುಗೆ ಸಿಗುತ್ತಿದೆ.

Categories
ಸಿನಿ ಸುದ್ದಿ

ಬೆಳ್ಳಿತೆರೆಗೆ `ಕಲಿವೀರ’ ಲಗ್ಗೆ; ಸಿನಿ ಪ್ರೇಮಿಗಳು ಏನಂದ್ರು ? ಕೈ ಹಿಡಿದು ಕಾಪಾಡ್ಬೇಕಿದೆ ಮುಕ್ಕೋಟಿ ಒಡೆಯ !?

ಚಿತ್ರ ವಿಮರ್ಶೆ

  • ವಿಶಾಲಾಕ್ಷಿ

ಶುಭ ಶುಕ್ರವಾರ ಸಿನಿ ಶುಕ್ರವಾರ ಚಿತ್ರಮಂದಿರಕ್ಕೆ ಸಿನಿಮಾವೊಂದು ಲಗ್ಗೆ ಇಟ್ಟಿದೆ. ಚಿತ್ರಮಂದಿರಗಳು ಮದುವಣಗಿತ್ತಿಯಂತೆ ಕಂಗೊಳ್ಳಿಸುತ್ತಿವೆ, ಪ್ರೇಕ್ಷಕ ಮಹಾಷಯರು ಸಾಗರೋಪಾದಿಯಲ್ಲಿ ಥಿಯೇಟರ್‌ನತ್ತ ದೌಡಾಯಿಸುತ್ತಿದ್ದಾರೆ. ಈಗಾಗಲೇ ಹೌಸ್‌ಫುಲ್ ಬೋರ್ಡ್ಬಿದ್ದಿದೆ. ಫಿಲಂ ಟೀಮ್‌ ಮೊಗದಲ್ಲಿ ಮಂದಹಾಸ ಮೂಡಿದೆ. ಈ ರೀತಿ ಬರೆಯುವ ಸಂದರ್ಭ ಆದಷ್ಟು ಬೇಗ ಬರಬೇಕು. ಸದ್ಯದ ಪರಿಸ್ಥಿತಿಯನ್ನು ನೋಡಿದ್ರೆ, ಕೊರೊನಾ ಮೂರನೇ ಅಲೆಯ ಅವಾಂತರವನ್ನು ಸೂಕ್ಷವಾಗಿ ಗಮನಿಸಿದರೆ ಅಂತಹದ್ದೊಂದು ಸಂದರ್ಭ ಹಾಗೂ ಸನ್ನಿವೇಶ ಸದ್ಯಕ್ಕಿಲ್ಲ ಎನ್ನುವ ಸೂಚನೆ ಸಿಕ್ಕರೂ ಕೂಡ ಹುಂಬು ಧೈರ್ಯ ಮಾಡಿ ಮಲ್ಟಿಪ್ಲೆಕ್ಸ್ ಅಖಾಡಕ್ಕೆ ಧುಮ್ಕಿರುವ `ಕಲಿವೀರ’ನ ಕಾನ್ಫಿಡೆನ್ಸ್‌ಗೆ ಉಘೇ ಉಘೇ ಎನ್ನಲೆಬೇಕು.

ಕಲಿವೀರ ಕೊರೊನಾ ಎರಡನೇ ಅಲೆಯ ನಂತರ ಬಿಡುಗಡೆಯಾಗಿರುವ ಕನ್ನಡದ ಮೊದಲ ಚಿತ್ರ. ಕೊರೊನಾ ಮೂರನೇ ಅಲೆ ಶುರುವಾಗುತ್ತಂತೆ, ಮತ್ತೆ ಲಾಕ್‌ಡೌನ್ ಮಾಡ್ತಾರಂತೆ ಎನ್ನುವ ಸದ್ದುಗದ್ದಲ್ಲದ ನಡುವೆಯೂ ಕೂಡ `ಕಲಿವೀರ’ ಚಿತ್ರವನ್ನು ರಿಲೀಸ್ ಮಾಡಿದ್ದಾರೆ. ಚಿತ್ರಮಂದಿರಕ್ಕೆ ಸರ್ಕಾರ ಶೇಕಡ 100ರಷ್ಟು ವಿನಾಯಿತಿಯನ್ನು ನೀಡದ ಕಾರಣ ಸಿಂಗಲ್ ಸ್ಕ್ರೀನಿಂಗ್‌ ಚಿತ್ರಮಂದಿರಗಳು ಇನ್ನೂ ಬಾಗಿಲು ತೆರೆದಿಲ್ಲ. ಆದರೆ, ಮಾಲ್ ಮಂದಿ 50 ಪರ್ಸೆಂಟ್ ಆದರೂ ಪರವಾಗಿಲ್ಲ ಸಿನಿಮಾ ಹಾಕೋದಕ್ಕೆ ರೆಡಿ ಇರೋದ್ರಿಂದ ಕಲಿವೀರ ಚಿತ್ರತಂಡ ಕರ್ನಾಟಕದಾದ್ಯಂತ ಬಹುತೇಕ ಮಲ್ಟಿಪ್ಲೆಕ್ಸ್‌ ಗಳಲ್ಲಿ ತಮ್ಮ ಚಿತ್ರವನ್ನು ಬಿಡುಗಡೆಗೊಳಿಸಿದೆ.

ಹಾಗಾದ್ರೆ, ಕಲಿವೀರ ಚಿತ್ರ ಹೇಗಿದೆ? ಕಥೆಯ ತಿರುಳೇನು? ಮಲ್ಟಿಪ್ಲೆಕ್ಸ್‌ನಲ್ಲಿ ಸಿನಿಮಾ ನೋಡಿದ ಕ್ಲಾಸ್ ಮಂದಿ ಏನಂದ್ರು? ಹುಂಬು ಧೈರ್ಯ ಮಾಡಿ ರಿಲೀಸ್ ಮಾಡಿದ ಚಿತ್ರತಂಡ ಖುಷಿಯಾಗಿದೆಯಾ? ಕಲಿವೀರನ ಹುಚ್ಚು ಸಾಹಸಕ್ಕೆ ಮೆಚ್ಚುಗೆ ಸಿಕ್ಕಿತಾ? ಏಕಲವ್ಯನ ಚೊಚ್ಚಲ ಅಭಿನಯಕ್ಕೆ ಸಿನಿರಸಿಕರು ಉಘೇ ಉಘೇ ಎಂದರಾ? ಈ ರೀತಿ ಒಂದಿಷ್ಟು ಪ್ರಶ್ನೆಗಳು ಕಾಡುತ್ತವೆ. ಕಲಿವೀರನ ಬಗ್ಗೆ ಹೇಳುವುದಾದರೆ..,

ಕಲಿವೀರ' ಸ್ಯಾಂಡಲ್‌ವುಡ್ ಅಂಗಳದಲ್ಲಿ ಟೀಸರ್ ಹಾಗೂ ಟ್ರೇಲರ್‌ನಿಂದಲೇ ಕೂತೂಹಲ ಕೆರಳಿಸಿದ್ದ ಚಿತ್ರ. ಕಥೆ-ಚಿತ್ರಕಥೆ ಹೇಗಿರಬಹುದು ಎನ್ನುವ ಲೆಕ್ಕಚ್ಚಾರಕ್ಕಿಂತ ನಾಯಕ ಏಕಲವ್ಯನ ಆಕ್ಷನ್ ಧಮಾಕ ನೋಡುವುದಕ್ಕೆ ಒಂದಿಷ್ಟು ಮಂದಿ ಕೌತುಕದಿಂದ ಕಾಯ್ತಿದ್ದರು. ಆ ಕೂತೂಹಲಕ್ಕೆ ಇವತ್ತು ತೆರೆಬಿದ್ದಿದೆ. ಡ್ಯೂಪ್-ರೋಪ್ ಹಾಕಿಸಿಕೊಳ್ಳದೆ ಕಲಿವೀರ ಹೊಡೆದಾಡಿರುವುದನ್ನು ನೋಡಿದರೆ ಎದೆ ಝಲ್ ಎನಿಸುತ್ತೆ. ಕಳರಿಪಯಟ್ಟು ಸಮರ ಕಲೆಯಲ್ಲಿ ಪ್ರವೀಣರಾಗಿರುವ ಏಕಲವ್ಯ ʼಕಲಿವೀರ’ನಾಗಿ ಕಮಾಲ್ ಮಾಡಿದ್ದಾರೆ. ಚೊಚ್ಚಲ ಸಿನಿಮಾ ಆದರೂ ಕೂಡ ಹತ್ತಾರು ಸಿನಿಮಾ ಮಾಡಿರುವ ನಟರಂತೆ ಕ್ಯಾಮೆರಾ ಎದುರಿಸಿದ್ದಾರೆ. ಏನಾದರೊಂದು ಸಾಧನೆ ಮಾಡೋವರೆಗೂ ಗಡ್ಡ ತೆಗಿಯಲ್ಲ-ಮೀಸೆ ಬೋಳಿಸಲ್ಲ ಅಂತ ಪಣತೊಟ್ಟು ಸಾಧಿಸಿ ತೋರಿಸಿದ್ದಾರೆ. ಭರ್ತಿ ಮೂವತ್ತು ವರ್ಷದ ಕನಸನ್ನು ನನಸು ಮಾಡಿದ್ದಾರೆ. ಜೀವಂತವಾಗಿ ಉಳಿದಿಲ್ಲದ ಹೆತ್ತವ್ವನ ಮಹದಾಸೆಯೊಂದನ್ನು ಈಡೇರಿಸಿ ಬೆಳ್ಳಿಪರದೆ ಮೇಲೆ ಮೆರವಣಿಗೆ ಹೊರಟಿದ್ದಾರೆ.

ಇಷ್ಟೆಲ್ಲಾ ಹೇಳಿದ್ಮೇಲೆ ಕಲಿವೀರ' ಕಥೆ ಏನು? ಕೊರೊನಾ ಆತಂಕಬಿಟ್ಟು ನಾವ್ಯಾಕೆ ಮಲ್ಟಿಪ್ಲೆಕ್ಸ್‌ಗೆ ಹೋಗಿ ಸಿನಿಮಾ ನೋಡ್ಬೇಕು? ಒಂದು ವೇಳೆ ದುಡ್ಡು ಕೊಟ್ಟು ಮಾಲ್‌ಗೆ ಹೋಗಿ ಸಿನಿಮಾ ನೋಡಿದರೆಕಲಿವೀರ’ ನಮ್ಮನ್ನು ರಂಜಿಸುತ್ತಾನೆಯೇ? ಕೊಟ್ಟ ದುಡ್ಡಿಗೆ ನಮಗೆ ಮೋಸ ಆಗುವುದಿಲ್ಲವೇ? ಕಂಪ್ಲೀಟ್ ಫ್ಯಾಮಿಲಿ ಕರೆದುಕೊಂಡು ಹೋಗಿ ಸಿನಿಮಾ ನೋಡಬಹುದೇ? ಹಂಡ್ರೆಡ್‌ ಪರ್ಸೆಂಟ್ ಅಲ್ಲ ಅಂದರೂ ಕೂಡ ೫೦ ಪರ್ಸೆಂಟ್ ಶ್ಯೂರಿಟಿ ಕೊಡಬಹುದು. `ಕಲಿವೀರ’ ನಿಮ್ಮನ್ನ ಸೀಟಿನಲ್ಲಿ ಕೂರಿಸುತ್ತಾನೆ. ಕಣ್ಣುಬ್ಬು ಎಗಿರಿಸುತ್ತಾ, ಕಣ್ಣಲ್ಲೇ ಅಭಿನಯಿಸುತ್ತಾ, ಜಬರ್ದಸ್ತ್ ಆಕ್ಷನ್ ಮಾಡುವ ಜೊತೆಗೆ ಪ್ರಾಣಿ-ಪಕ್ಷಿಯಂತೆ ಸೌಂಡ್ ಮಾಡುತ್ತಾ ರಂಜಿಸುತ್ತಾನೆ. ತಬಲನಾಣಿಯವರ ಕಾಮಿಡಿ, ಅನಿತಾಭಟ್‌ ಅವರ ಗ್ಲಾಮರ್ ನೋಟ ಕಿಕ್ ಕೊಡುತ್ತೆ. ಪಾವನಗೌಡ-ಚಿರಶ್ರೀ ಅಂಚನ್ ಇಬ್ಬರು ನಟಿಯರು ಗಮನ ಸೆಳೆಯುತ್ತಾರೆ. ಡ್ಯಾನಿ ಕುಟ್ಟಪ್ಪ ಖಳನಾಯಕರಾಗಿ, ರಮೇಶ್ ಪಂಡಿತ್ ಮಂತ್ರವಾದಿಯಾಗಿ ಮಂತ್ರಮುಗ್ದಗೊಳಿಸ್ತಾರೆ.

ಯಾರು ಈ ಕಲಿ?

ʼಕಲಿ' ಒಬ್ಬ ಆದಿವಾಸಿ ಜನಾಂಗಕ್ಕೆ ಸೇರಿದವ. ತಮ್ಮ ಸಮುದಾಯಕ್ಕೆ ಆಗುವ ಅನ್ಯಾಯದ ವಿರುದ್ದ ಸಿಡಿದೆದ್ದು ಪ್ರತಿಕಾರ ತೀರಿಸಿಕೊಳ್ತಾನೆ. ವಜ್ರದ ಶಿವಲಿಂಗವೇ ಕಲಿವೀರ’ ಚಿತ್ರ ಕಥೆಯ ಪ್ರಮುಖ ತಿರುಳು. ಆದಿವಾಸಿ ಸಮುದಾಯ ಈ ವಜ್ರದ ಶಿವಲಿಂಗವನ್ನು ಕಣ್ಣಲ್ಲಿ ಕಣ್ಣಿಟ್ಟು ಕಾಪಾಡಿಕೊಳ್ಳುತ್ತಿತ್ತು. ಈ ವಜ್ರದ ಶಿವಲಿಂಗದ ಮೇಲೆ ಆಫ್ಗಾನ್ ದೊರೆ ಘಡಾಫು ಕಣ್ಣಿಟ್ಟು ಸಂಚು ರೂಪಿಸ್ತಾನೆ. ಹೇಗಾದರೂ ಮಾಡಿ ಆದಿವಾಸಿ ಸಮುದಾಯವನ್ನು ಮಟ್ಟ ಹಾಕಿ ವಜ್ರದ ಶಿವಲಿಂಗ ವಶಪಡಿಸಿಕೊಳ್ಳೋಕೆ ಪ್ಲಾನ್ ರೂಪಿಸ್ತಾನೆ. ಅದರಂತೇ ಎಲ್ಲರನ್ನೂ ನಾಶಪಡಿಸುತ್ತಾನೆ. ಆದರೆ, ಕಲಿಯನ್ನು ಮಟ್ಟ ಹಾಕೋದಕ್ಕೆ ಸಾಧ್ಯವಾಗೋದಿಲ್ಲ. ವಜ್ರದ ಶಿವಲಿಂಗ ಆಫ್ಗಾನ್ ದೊರೆ ಘಡಾಫು ಕೈ ಸೇರಲ್ಲ. ಅದು ಹೇಗೆ ಎಂತ ಅನ್ನೋದಕ್ಕೆ ನೀವು ಚಿತ್ರಮಂದಿರಕ್ಕೆ ಹೋಗಿ ಸಿನಿಮಾ ನೋಡ್ಬೇಕು. ಅಂದ್ಹಾಗೇ,
ಮೊಹಮ್ಮದ್ ಘಜ್ನಿ ಹಾಗೂ ಮೊಹಮ್ಮದ್ ಘೋರಿ ಹಿಂದೂ ಸ್ಥಾನದ ಮೇಲೆ ದಂಡೆತ್ತಿ ಬಂದು ಎಷ್ಟೋ ದೇವಸ್ತಾನಗಳನ್ನು ಹೊಡೆದುರುಳಿಸಿ ಬೆಲೆಬಾಳುವ ವಸ್ತುಗಳನ್ನು ದೋಚಿದ್ದಾರೆನ್ನುವುದಕ್ಕೆ ಇತಿಹಾಸ ಪುಟದಲ್ಲಿ ಪುರಾವೆಗಳಿವೆ. ಆ ಪುರಾವೆಯನ್ನ ಇಟ್ಕೊಂಡು ಕಾಲ್ಪನಿಕವಾಗಿ ಕಥೆ ಮಾಡಿಟ್ಟುಕೊಂಡ ನಿರ್ದೇಶಕ ಅವಿಯವರು, `ಕಲಿವೀರ’ ಚಿತ್ರ ಮಾಡಿದ್ದಾರೆ. ಕಥೆಯಷ್ಟೇ ನಿರೂಪಣೆ ಕೂಡ ಸೊಗಸಾಗಿದೆ. ಅಲ್ಲಿ ದೇಸಿ ಸೊಗಡನ್ನು ಅಷ್ಟೇ ಅರ್ಥಪೂರ್ಣವಾಗಿ ಬಿಂಬಿಸಿದ್ದಾರೆ ಕೂಡ. ಇನ್ನು, ಚಿತ್ರಕ್ಕೆ ಪೂರಕವಾಗಿ ಕ್ಯಾಮೆರಾ ಕಣ್ಣು ಏಕಲವ್ಯನ ಸ್ಪೀಡ್‌ಗೆ ತಕ್ಕಂತೆ ವರ್ತಿಸಿದೆ. ಸಂಗೀತ ಕೂಡ ಚಿತ್ರದ ವೇಗಕ್ಕೆ ಹೆಗಲು ಕೊಟ್ಟಿದೆ. ಸಿನಿಮಾಗೆ ಸಂಕಲನ ಕೂಡ ಮುಖ್ಯ. ಇಲ್ಲಿ ಕತ್ತರಿ ಪ್ರಯೋಗವೂ ತನ್ನ ವೇಗ ಕಳೆದುಕೊಂಡಿಲ್ಲ. ಇಷ್ಟಾಗಿಯೂ ಈ ಕಲಿವೀರನ ಬಗ್ಗೆ ನೋಡುವ ಕುತೂಹಲವೇನಾದರೂ ಇದ್ದರೆ, ಥಿಯೇಟರ್‌ನತ್ತ ಮುಖಮಾಡಬಹುದು.

ಚಿತ್ರ : ಕಲಿವೀರ
ನಿರ್ದೇಶಕ : ಅವಿನಾಶ್‌ ಭೂಷಣ್
ನಿರ್ಮಾಪಕ:‌ ಹನುಮಂತಪ್ಪ, ರಾಜು ಪೂಜಾರ್
ಸಂಗೀತ- ವಿ.ಮನೋಹರ್
ತಾರಾಗಣ: ಏಕಲವ್ಯ, ತಬಲಾನಾಣಿ, ಚಿರಶ್ರೀ ಅಂಚನ್‌, ನೀನಾಸಂ ಅಶ್ವತ್ಥ್‌, ಪಾವನಾ, ಅನಿತಾಭಟ್‌, ಡ್ಯಾನಿ ಕುಟ್ಟಪ್ಪ, ಮೋಹನ್‌ ಜುನೇಜಾ ಇತರರು.

Categories
ಸಿನಿ ಸುದ್ದಿ

ಡೈರೆಕ್ಟರ್‌ ವರ್ಸಸ್‌ ಡೈರೆಕ್ಟರ್‌ – ಅಲ್ಲಿ ಶಿವಣ್ಣ , ಇಲ್ಲಿ ಶೆಟ್ರು : ಕಾಂಟ್ರೋವರ್ಸಿ ಹುಟ್ಟು ಹಾಕ್ತಾ ಕಾಂತಾರ ಪೋಸ್ಟರ್‌ ?

ಎರಡು ಸಿನಿಮಾದ್ದು ಒಂದೇ ಕಥೆನಾ ? ಹೌದು, ಹೀಗೊಂದು ಪ್ರಶ್ನೆ ಹುಟ್ಟು ಹಾಕಿದ್ದು ರಿಷಬ್‌ ಶೆಟ್ಟಿ ಆಕ್ಷನ್‌ ಕಟ್‌ ಹೇಳುವುದಿಕ್ಕೆ ಹೊರಟಿರುವ ʼಕಾಂತಾರʼ ಸಿನಿಮಾ. ಅಂದ ಹಾಗೆ, ಇದು ಹೊಂಬಾಳೆ ಫಿಲಂಸ್‌ ಬ್ಯಾನರ್‌ ನಲ್ಲಿ ನಿರ್ಮಾಣವಾಗುತ್ತಿರುವ ಸಿನಿಮಾ. ʼಬೆಲ್‌ ಬಾಟಮ್‌ʼ ಖ್ಯಾತಿಯ ನಟ ರಿಷಬ್‌ ಶೆಟ್ಟಿ ನಿರ್ದೇಶಿಸಿ, ನಾಯಕರಾಗಿ ಕಾಣಿಸಿಕೊಳ್ಳಲು ಹೊರಟಿದ್ದಾರೆ. ಶುಕ್ರವಾರವಷ್ಟೇ ಈ ಚಿತ್ರದ ಟೈಟಲ್‌ ಲಾಂಚ್‌ನ ಆಟ್ರ್ಯಾಕ್ಟಿವ್‌ ಪೋಸ್ಟರ್‌ ಬಂದಿದೆ. ಹಾಗೆಯೇ ಅದರಲ್ಲಿ ಒಂದಷ್ಟು ವಿವರ ರಿವೀಲ್‌ ಆಗಿದೆ. ಈಗ ಅದರ ಪೋಸ್ಟರ್‌ ಕುರಿತು ದೊಡ್ಡ ಸುದ್ದಿ ಆಗಿದೆ. ಅದಕ್ಕೆ ಕಾರಣ ಕಂಬಳ ಹಿನ್ನೆಲೆಯಲ್ಲಿ ಬಂದ ಪೋಸ್ಟರ್.‌ ಈ ಪೋಸ್ಟರ್‌ನಲ್ಲಿ ಕೋಣನ ಓಟದಲ್ಲಿ ರಿಷಬ್‌ ಶೆಟ್ಟಿ ಕಾಣಿಸಿಕೊಂಡಿದ್ದಾರೆ. ಅಲ್ಲಿಗೆ ಇದು ಕೂಡ ಕರಾವಳಿಯ ಜನಪ್ರಿಯ ಜಾನಪದ ಕ್ರೀಡೆ ʼಕೋಣನ ಓಟʼ ಕುರಿತದ್ದೇ ಆಗಿರಬಹುದು ಅನ್ನೋದು ನೋಡುಗರ ಉಹೆ. ಅದೇ ಕಾರಣಕ್ಕೀಗ ಸೋಷಲ್‌ ಮೀಡಿಯಾದಲ್ಲಿ ಒಂದಷ್ಟು ಚರ್ಚೆ ಹುಟ್ಟಿಕೊಂಡಿದೆ. ಅದಕ್ಕೆ ಕಾರಣ ಎರಡು ವರ್ಷಗಳ ಹಿಂದೆ ʼರಥಾವರʼ ಖ್ಯಾತಿಯ ನಿರ್ದೇಶಕ ಚಂದ್ರಶೇಖರ್ ಬಂಡಿಯಪ್ಪ ರಿವೀಲ್‌ ಮಾಡಿದ್ದ ಆ ಪೋಸ್ಟರ್.

ಇಷ್ಟಕ್ಕೂ ಅಲ್ಲೇನಿತ್ತು ಗೊತ್ತಾ? ʼವೈರಮುಡಿʼ ಹೆಸರಲ್ಲಿ ಅವರು ತೆರೆಗೆ ತರಲು ಹೊರಟಿದ್ದ ಸಿನಿಮಾದ ಮೊದಲ ಪೋಸ್ಟರ್‌ ಅದು. ಅದರಲ್ಲಿ ನಟ ಶಿವರಾಜ್‌ ಕುಮಾರ್‌ ಕಂಬಳದ ಕೋಣವನ್ನು ಓಡಿಸುವ ಪೈಲ್ವಾನ್‌ ಲುಕ್‌ ಕೊಟ್ಟಿದ್ದರು. ಹಾಗೆಯೇ ಅವರ ಭಾವಚಿತ್ರದ ಹಿನ್ನೆಲೆಯಲ್ಲಿ ಕಂಬಳ ಓಟದ ಕೋಣಗಳು ನಿಂತಿದ್ದವು. ಅಲ್ಲಿಗೆ ಇದು ಕೂಡ ಕಂಬಳ ಕುರಿತ ಕಥಾ ಹಂದರದ ಸಿನಿಮಾವೇ ಎನ್ನುವುದಕ್ಕೆ ಈ ಪೋಸ್ಟರ್‌ ಸಾಕ್ಷಿ ಆಗಿತ್ತು. ಆ ಹೊತ್ತಿಗೆ ನಿರ್ದೇಶಕ ಚಂದ್ರಶೇಖರ್‌ ಬಂಡಿಯಪ್ಪ ಕಥೆ, ಚಿತ್ರಕಥೆ ರೆಡಿ ಮಾಡಿಕೊಂಡು ಚಿತ್ರೀಕರಣಕ್ಕೆ ಹೊರಡುವ ಸಿದ್ದತೆಯಲ್ಲಿದ್ದರು. ದುರಾದೃಷ್ಟ ಅಂದ್ರೆ, ಆ ಹೊತ್ತಿಗೆ ಕೊರೋನಾ ಬಂತು. ಸಿನಿಮಾ ಚಿತ್ರೀಕರಣದ ಪ್ಲಾನ್‌ ಅಷ್ಟಕ್ಕೆ ನಿಂತಿದ್ದು ಉದ್ಯಮದ ಜನರಿಗೆ ಗೊತ್ತು. ಈಗ ನೋಡಿದರೆ ಅದೇ ಕಥಾಹಂದರವನ್ನೇ ಇಟ್ಟುಕೊಂಡಿರಬಹುದಾದ ಸಿನಿಮಾ ಎನ್ನುವ ಶಂಕೆ ರಿಷಬ್‌ ಶೆಟ್ಟಿ ನಿರ್ದೇಶನ ಹಾಗೂ ನಟನೆಯʼ ಕಾಂತಾರʼ ಚಿತ್ರದ ಪೋಸ್ಟರ್‌ ಮೂಲಕ ಹುಟ್ಟಿದೆ.

ಈ ಬಗ್ಗೆ ಸೋಷಲ್‌ ಮೀಡಿಯಾದಲ್ಲಿ ದೊಡ್ಡ ಚರ್ಚೆ ಶುರುವಾಗಿದೆ. ಈ ಹಿನ್ನೆಲೆಯಲ್ಲಿ ಸಿನಿಲಹರಿ ಗೆ ಪ್ರತಿಕ್ರಿಯೆ ನೀಡಿದ ನಿರ್ದೇಶಕ ಚಂದ್ರಶೇಖರ್‌ ಬಂಡಿಯಪ್ಪ, ಕಾಂತಾರ ಚಿತ್ರದ ಕಥೆ ನಿರ್ದಿಷ್ಟವಾಗಿ ಕಂಬಳಕ್ಕೆ ಸಂಬಂಧಿಸಿದ್ದಾ, ಅಥವಾ ಇನ್ನಾವುದೋ ಕಥೆಯೋ ನಂಗಿನ್ನು ಗೊತ್ತಿಲ್ಲ. ಆದರೆ ಅದೇ ಕಂಬಳವನ್ನೇ ಪ್ರಧಾನವಾಗಿಟ್ಟುಕೊಂಡು ರಿಷಬ್‌ ಅವರು ಸಿನಿಮಾ ಮಾಡಲು ಹೊರಟರೆ, ಒಬ್ಬ ನಿರ್ದೇಶಕನ ಶ್ರಮಕ್ಕೆ ಮಾಡಿದ ಅವಮಾನ ಆಗಲಿದೆ. ಯಾಕಂದ್ರೆ, ಒಂದು ಕಥೆ ಬರೆಯುವ ಕಷ್ಟ ಹೇಗಿರುತ್ತೆ ಅಂತ ಅವರಿಗೂ ಗೊತ್ತಿರುತ್ತದೆ. ಅದರಲ್ಲೂ ನಾನು ಒಂದು ಸಿನಿಮಾ ಕಥೆ ಮಾಡುವಾಗ ಯಾವುದೇ ನಿರ್ಮಾಪಕರನ್ನು ಅವಲಂಬಿಸಿ ಬರೆಯೋದಿಲ್ಲ. ನನ್ನದೇ ಖರ್ಚು ವೆಚ್ಚದಲ್ಲಿ ವರ್ಷಗಟ್ಟಲೆ ಸಂಶೋಧನೆ ಮಾಡಿ ಒಂದು ಸಿನಿಮಾದ ಕಥೆ ರೆಡಿ ಮಾಡುತ್ತೇನೆ. ಈ ನೋವಿನಿಂದ ಹೇಳೋದಾದ್ರೆ, ಇದೊಂದು ಕೃತಿಚೌರ್ಯವೇ ಹೌದುʼ ಎಂದು ಸಿಟ್ಟಾದರು.

ʼ ನಾನು ಕಂಬಳ ಕುರಿತು ಸಿನಿಮಾ ಮಾಡ್ಬೇಕು ಅಂತ ಹೋರಾಟಾಗ ಅದರ ಹಿನ್ನೆಲೆಯನ್ನು ವರ್ಷಗಟ್ಟಲೆ ಸಂಶೋಧಿಸಿದ್ದೇನೆ. ಆಮೇಲೆ ಒಂದು ಕಥೆ ರೆಡಿ ಮಾಡಿಕೊಂಡು, ಅದಕ್ಕೆ ತಕ್ಕಂತೆ ದೊಡ್ಡ ಸ್ಟಾರ್‌ ಇಟ್ಟುಕೊಂಡೇ ಸಿನಿಮಾ ಮಾಡಬೇಕು ಅಂತ ಶಿವಣ್ಣ ಅವರನ್ನು ಆಯ್ಕೆ ಮಾಡಿಕೊಂಡೇ. ಇದೆಲ್ಲ ರಿಷಬ್‌ ಅವರಿಗೂ ಗೊತ್ತಿರುತ್ತದೆ. ಯಾಕಂದ್ರೆ ಅವರು ಕೂಡ ಹಲವಾರು ವರ್ಷಗಳಿಂದ ಸಿನಿಮಾ ಜಗತ್ತಿನಲ್ಲಿಯೇ ಇದ್ದಾರೆ. ಅವರಿಗೆ ನಮ್ಮ ಕಷ್ಟಗಳು ಗೊತ್ತಿದ್ದರೆ ನಾನು ಮಾಡ ಹೊರಟ ಸಿನಿಮಾದ ಕಥೆಯನ್ನೇ ಕಾಫಿ ಮಾಡುವ ಹಾಗೆ ಸಿನಿಮಾ ಮಾಡೋದಿಲ್ಲ ಅಂತ ಭಾವಿಸಿದ್ದೇನೆ. ಇಷ್ಟಾಗಿಯೂ ಅವರು ಒಂದು ಸೌಜನ್ಯಕ್ಕಾದರೂ ನನ್ನ ಕೇಳಬಹುದಾಗಿತ್ತು ಎನ್ನುವ ನೋವಿದೆʼ ಎನ್ನುತ್ತಾರೆ ನಿರ್ದೇಶಕ ಚಂದ್ರಶೇಖರ್‌ ಬಂಡಿಯಪ್ಪ.

ಶುಕ್ರವಾರ ರಿವೀಲ್‌ ಆಗಿರುವ ʼಕಾಂತಾರʼ ಚಿ ತ್ರದ ಫಸ್ಟ್‌ ಲುಕ್‌ ನಲ್ಲಿ ಕಿರಿಕ್‌ ಪಾರ್ಟಿ ಖ್ಯಾತಿಯ ರಿಷಬ್‌ ಶೆಟ್ಟಿ ಕಂಬಳದ ಕೋಣ ಓಡಿಸುವ ಜಟ್ಟಿಯ ವೇಷದಲ್ಲಿದ್ದಾರೆ. ಕೋಣಗಳು ಓಟ ಕಿತ್ತಿವೆ. ಈ ಪೋಸ್ಟರ್‌ ಕೂಡ ಹೀಗಿದೆ ಅಂದ್ಮೇಲೆ ಇದು ಕೂಡ ಕಂಬಳ ಕುರಿತಾದ ಸಿನಿಮಾ ಅನ್ನೋದ್ರಲ್ಲಿ ನೋ ಡೌಟ್.‌ ಹಾಗಂತ ನಿರ್ದೇಶಕ ರಿಷಬ್‌ ಶೆಟ್ಟಿ ಅವರಾ ಗಲಿ, ಹೊಂಬಾಳೆ ಫಿಲಂಸ್‌ ಕಡೆಯಿಂದಾಗಲಿ ಯಾವುದೇ ಸ್ಪಷ್ಟನೆ ಸಿಕ್ಕಿಲ್ಲ. ಆದರೆ ಮೇಲ್ನೋಟದಲ್ಲಿಯೇ ಪೋಸ್ಟರ್‌ ಕಂಬಳದ ಕಥೆ ಹೇಳುವು ದರಿಂದ ಸಹಜವಾಗಿಯೇ ಸೋಷಲ್‌ ಮೀಡಿಯಾದಲ್ಲಿ ಚರ್ಚೆ ಶುರುವಾಗಿದ್ದು ಹೌದು. ಆದರೆ ರಿಷಬ್‌ ಶೆಟ್ಟಿ ಅವರ ಆಪ್ತವಲಯದ ಪ್ರಕಾರ ಕಾಂತಾರ ಎನ್ನುವುದೊಂದು ದಂತಕಥೆ. ಕಂಬಳದ ಕಥೆಗೂ ಅದಕ್ಕೂ ಸಂಬಂಧವೇ ಇಲ್ಲವಂತೆ.

error: Content is protected !!