Categories
ಸಿನಿ ಸುದ್ದಿ

ನೀನು-ನಾನು ಸಿಂಬಲ್‌ ಸ್ಪೆಷಲ್‌ ; ಉಪ್ಪಿ ಮಾಡ್ತಾರೆ ಕಮಾಲ್! ಬರ್ತ್‌ ಡೇಗೆ ಕೊಡ್ತಾರೆ ಹೊಸ ಸುದ್ದಿ!!

ಉಪೇಂದ್ರ ಈ ಹಿಂದೆಯೇ, “ನೀನು” ಮತ್ತು “ನಾನು” ಅನ್ನೋದರ ಅರ್ಥ ಹುಡುಕುವ ಪ್ರಯತ್ನಕ್ಕೆ ಜನರನ್ನು ಬಿಟ್ಟಿದ್ದರು. ನೀನು, ನಾನು ಕುರಿತು ಅದೆಷ್ಟೋ ಬಾರಿ ಅವರ ಸಿನಿಮಾಗಳಲ್ಲಿ ಡೈಲಾಗ್‌ ಹೊಡೆದಿದ್ದರು. ಈಗ ಆಂಗ್ಲ ಭಾಷೆಯಲ್ಲಿ ಗಮನಿಸಿದರೆ, ಯು ಮತ್ತು ಐ ಅನ್ನುವ ಟೈಟಲ್‌ ಕೊಟ್ಟು ಆ ಅರ್ಥದಲ್ಲೇ ಈ ಸಿನಿಮಾ ಮಾಡುತ್ತಿದ್ದಾರೆ ಅನ್ನುವುದನ್ನು ಅವರ ಫ್ಯಾನ್ಸ್‌ ಮತ್ತು ಸಿನಿ ಪ್ರೇಮಿಗಳು ಪತ್ತೆ ಹಚ್ಚಿದ್ದಾರೆ. ಅಲ್ಲಿಗೆ ಉಪೇಂದ್ರ ಈ ಸಲವೂ ಫಿಲಾಸಫಿ ಜೊತೆ ಹೊಸದೇನನ್ನೋ ಹೇಳಲು ಹೊರಟಿದ್ದಾರೆ

ನಟ ಉಪೇಂದ್ರ ಅಂದಾಕ್ಷಣ ಥಟ್ಟನೆ ನೆನಪಾಗೋದೇ ವಿಶೇಷ ಮತ್ತು ವಿಭಿನ್ನ. ಅವರ ಮೊದಲ ನಿರ್ದೇಶನದ “ಎ” ಸಿನಿಮಾದಲ್ಲೇ ಕುತೂಹಲ ಮೂಡಿಸಿ, ನಿರೀಕ್ಷೆ ಹುಸಿಗೊಳಿಸದೆಯೇ ಗೆದ್ದು ತೋರಿಸಿದವರು. ಅವರ ನಿರ್ದೇಶನದ ಸಿನಿಮಾಗಳನ್ನು ಇಲ್ಲಿಯವರೆಗೆ ಸೂಕ್ಷ್ಮವಾಗಿ ಗಮನಿಸುತ್ತ ಬಂದವರಿಗೆ, ಅಲ್ಲೊಂದು ವಿಭಿನ್ನತೆ ಇರೋದು ಗೊತ್ತಾಗುತ್ತೆ. ಉಪೇಂದ್ರ ತಮ್ಮ ನಿರ್ದೇಶನದ ಸಿನಿಮಾಗಳಲ್ಲಿ ಕುತೂಹಲ ಮೂಡಿಸುವ ಮೂಲಕವೇ ಸುದ್ದಿಯಾಗುವುದುಂಟು. ಸಿಂಬಲ್‌ ತೋರಿಸುವ ಮೂಲಕವೇ ಚಿತ್ರವನ್ನು ಒಂದು ಹಂತಕ್ಕೆ ಕೊಂಡೊಯ್ಯುವ ಕಲೆ ಉಪ್ಪಿಗೆ ಸಿದ್ಧಿಸಿದೆ. ಇದುವರೆಗೆ ಅವರು ನಿರ್ದೇಶಿಸಿರುವ ಸಿನಿಮಾಗಳಲ್ಲಿ ವಾಸ್ತವ ಅಂಶಗಳಿವೆ. ಸಮಾಜಕ್ಕೆ ಕನ್ನಡಿ ಎನ್ನುವಂತಹ ಕಥೆಯೂ ಇದೆ. ಈಗ ಉಪೇಂದ್ರ ಮತ್ತೆ ಸುದ್ದಿಯಲ್ಲಿದ್ದಾರೆ. ಹಾಗಂತ, “ಕಬ್ಜ” ಸಿನಿಮಾ ಸುದ್ದಿ ಅಂದುಕೊಳ್ಳಬೇಡಿ. ಅವರೀಗ ಹೊಸ ಸಿನಿಮಾದ ನಿರ್ದೇಶನಕ್ಕೆ ಸಜ್ಜಾಗಿದ್ದಾರೆ.‌

ಹೌದು, ಉಪೇಂದ್ರ ಅವರು ಇತ್ತೀಚೆಗಷ್ಟೇ, ಸದ್ಯಕ್ಕೆ ಎರಡು ಸ್ಕ್ರಿಪ್ಟ್‌ ರೆಡಿ ಇದೆ. ಸಮಯ ಸಿಕ್ಕಾಗಲೇ ನಿರ್ದೇಶನ ಮಾಡ್ತೀನಿ ಅಂತ ಹೇಳಿಕೊಂಡಿದ್ದರು. ಈಗ ಅವರ ಮುಂದಿನ ಸಿನಿಮಾದ ಪೋಸ್ಟರ್‌ವೊಂದು ಸೋಶಿಯಲ್‌ ಮೀಡಿಯಾದಲ್ಲಿ ಜೋರು ಸದ್ದು ಮಾಡುತ್ತಿದೆ. ಹೌದು, ಅವರು ಈ ಬಾರಿಯೂಸಿಂಬಲ್‌ ಇಟ್ಟುಕೊಂಡೇ ಆಟವಾಟಡುವ, ನಿರೀಕ್ಷೆ ಹೆಚ್ಚಿಸುವ ಮೂಲಕ ಮತ್ತೆ ಕುತೂಹಲ ಕೆರಳಿಸಿದ್ದಾರೆ. ಅವರ ಪೋಸ್ಟರ್‌ನಲ್ಲಿ ಕಥೆ, ಚಿತ್ರಕಥೆ, ಸಂಭಾಷಣೆ ನಿರ್ದೇಶನ ಉಪೇಂದ್ರ ಅಂತಿದೆ. ಅದರಲ್ಲೂ ಆ ಸಿನಿಮಾ ಕನ್ನಡ, ತಮಿಳು, ತೆಲುಗು, ಹಿಂದಿ ಮತ್ತು ಮಲಯಾಳಂ ಭಾಷೆಯಲ್ಲಿ ತಯಾರಾಗುತ್ತಿದೆ. ಅಲ್ಲಿಗೆ ಅದೊಂದು ಪ್ಯಾನ್‌ ಇಂಡಿಯಾ ಸಿನಿಮಾನೇ ಅಂದುಕೊಳ್ಳಬೇಕು. ಅಷ್ಟಕ್ಕೂ ಉಪೇಂದ್ರ ಅವರು ಈ ಬಾರಿ ಇಟ್ಟ ಸಿಂಬಲ್‌ ಏನು?

ಅವರ ಹೊಸ ಚಿತ್ರದ ಸಿಂಬಲ್‌ ಅದೊಂದು ರೀತಿ ಕುತೂಹಲವಂತೂ ಹೌದು. ನೋಡಿದವರಿಗೆ ಈ ಬಾರಿ ತಿರುಮಲ ವೆಂಕಟಸ್ವಾಮಿಯ ನಾಮ ಸಿಂಬಲ್‌ ಇದ್ಹಾಗಿದೆಯಲ್ಲ ಅನಿಸುವುದು ನಿಜ. ಯಾಕೆಂದರೆ, ಎರಡು ಬಿಳಿ ಗೆರೆಯ ಮಧ್ಯೆ ಕೆಂಪು ಗೆರೆಯೂ ಇಲ್ಲಿದೆ. ವೆಂಕಟರಮಣ ಸ್ವಾಮಿಯ ಸಿಂಬಲ್‌ ಇಟ್ಟುಕೊಂಡು ಸಿನಿಮಾ ಮಾಡ್ತಾ ಇದ್ದಾರೆಯೇ ಎಂಬ ಪ್ರಶ್ನೆ ಎದುರಾದರೂ ಅಚ್ಚರಿಯಿಲ್ಲ. ಆದರೆ, ಅವರ ಪ್ರಕಾರ ಅದರ್ಥ ಬಿಳಿ ಬಣ್ಣದ ಎರಡು ಗೆರೆ ಗಮನಿಸಿದವರಿಗೆ “ಯು” ಅಂತಾನೂ, ಕೆಂಪು ಬಣ್ಣದ ಒಂದು ಗೆರೆ ಗಮನಿಸಿದವರಿಗೆ “ಐ” ಅಂತಾನೂ ಅನಿಸುತ್ತೆ. ಆದರೆ, ಅದನ್ನು ಬಹಳ ಸೂಕ್ಷ್ಮವಾಗಿ ಗಮನಿಸಿ, ಅರ್ಥೈಸಿಕೊಂಡವರಿಗೆ ಮಾತ್ರ ಅದು ಗೊತ್ತಾಗಲಿದೆ.


ಉಪೇಂದ್ರ ಈ ಹಿಂದೆಯೇ, “ನೀನು” ಮತ್ತು “ನಾನು” ಅನ್ನೋದರ ಅರ್ಥ ಹುಡುಕುವ ಪ್ರಯತ್ನಕ್ಕೆ ಜನರನ್ನು ಬಿಟ್ಟಿದ್ದರು. ನೀನು, ನಾನು ಕುರಿತು ಅದೆಷ್ಟೋ ಬಾರಿ ಅವರ ಸಿನಿಮಾಗಳಲ್ಲಿ ಡೈಲಾಗ್‌ ಹೊಡೆದಿದ್ದರು. ಈಗ ಆಂಗ್ಲ ಭಾಷೆಯಲ್ಲಿ ಗಮನಿಸಿದರೆ, ಯು ಮತ್ತು ಐ ಅನ್ನುವ ಟೈಟಲ್‌ ಕೊಟ್ಟು ಆ ಅರ್ಥದಲ್ಲೇ ಈ ಸಿನಿಮಾ ಮಾಡುತ್ತಿದ್ದಾರೆ ಅನ್ನುವುದನ್ನು ಅವರ ಫ್ಯಾನ್ಸ್‌ ಮತ್ತು ಸಿನಿ ಪ್ರೇಮಿಗಳು ಪತ್ತೆ ಹಚ್ಚಿದ್ದಾರೆ. ಅಲ್ಲಿಗೆ ಉಪೇಂದ್ರ ಈ ಸಲವೂ ಫಿಲಾಸಫಿ ಜೊತೆ ಹೊಸದೇನನ್ನೋ ಹೇಳಲು ಹೊರಟಿದ್ದಾರೆ. “ಉಪ್ಪಿ 2” ಬಳಿಕ ಅವರು ಈ ಸಿನಿಮಾ ನಿರ್ದೇಶನಕ್ಕೆ ಹೊರಟಿದ್ದಾರೆ. ಅವರ ಹುಟ್ಟುಹಬ್ಬಕ್ಕೆ ಅಂದರೆ ಸೆಪ್ಟೆಂಬರ್‌ 18 ರಂದು ಅವರ ನಿರ್ದೇಶನದ ಹೊಸ ಚಿತ್ರದ ಬಗ್ಗೆ ಒಂದಷ್ಟು ಹೊಸ ಮಾಹಿತಿ ಸಿಗಲಿದೆ. ಉಪೇಂದ್ರ ಪ್ರೊಡಕ್ಷನ್ಸ್‌ ಅರ್ಪಿಸುತ್ತಿರುವ ಈ ಚಿತ್ರದಲ್ಲಿ ಅವರೇ ಹೀರೋನಾ? ಅಥವಾ ಬೇರೆ ಯಾರಾದರೂ ನಟಿಸ್ತಾರಾ, ಯಾರೆಲ್ಲಾ ಇರ್ತಾರೆ, ಇಲ್ಲಿ ತಾಂತ್ರಿಕ ವರ್ಗದಲ್ಲಿ ಯಾರೆಲ್ಲ ಇರುತ್ತಾರೆ ಎಂಬಿತ್ಯಾದಿ ಪ್ರಶ್ನೆಗೆ ಸಿನಿಮಾ ಬರೋವರೆಗೆ ಕಾಯಬೇಕು. ಅಂದಹಾಗೆ, ಉಪೇಂದ್ರ ಅವರ ಈ ಹೊಸ ಪೋಸ್ಟರ್‌ ಸಾಕಷ್ಟು ಸೌಂಡು ಮಾಡುತ್ತಿದೆ. ಸಿನಿಮಾ ಕೂಡ ಅಷ್ಟೇ ಸದ್ದು ಮಾಡಲಿ ಅನ್ನೋದು “ಸಿನಿಲಹರಿ” ಆಶಯ.

Categories
ಸಿನಿ ಸುದ್ದಿ

ಹೊರಬಂತು ಕರುನಾಡ ಯಜಮಾನ ಡಾ.ವಿಷ್ಣುವರ್ಧನ್‌ ಪುಸ್ತಕ ; ಮಕ್ಕಳಿಗಾಗಿಯೇ ಡಾ.ಶರಣು ಹುಲ್ಲೂರು ಬರೆದ ಕೃತಿ ಇದು

ವಿಷ್ಣುವರ್ಧನ್ ಅವರ 71ನೇ ಜನ್ಮದಿನದ ಅಂಗವಾಗಿ ಡಾ.ವಿಷ್ಣುಸೇನಾ ಸಮಿ ಈ ಕಿರುಹೊತ್ತಿಗೆಯನ್ನು ಶಾಲಾ ಮಕ್ಕಳಿಗೆ ಉಚಿತವಾಗಿ ವಿತರಿಸುವ ದೃಷ್ಠಿಯಿಂದ ಹೊರತಂದಿದ್ದು, ಸುಮಾರು ಒಂದು ಲಕ್ಷ ಮಕ್ಕಳಿಗೆ ವಿತರಿಸುವ ಯೋಜನೆ ಸಮಿತಿಗಿದೆ. ಡಾ.ವಿಷ್ಣು ಸೇನಾ ಸಮಿತಿ ಅಧ್ಯಕ್ಷ ವೀರಕಪುತ್ರ ಅವರು ಪಠ್ಯದಲ್ಲಿ ಕರುನಾಡ ಯಜಮಾನನ ಪಠ್ಯ ಸೇರಿಸಲು ಮಾಡಿದ ಮನವಿಗೆ ಶಿಕ್ಷಣ ಸಚಿವ ನಾಗೇಶ್‌ ಪಠ್ಯಪುಸ್ತಕ ಸಮಿತಿಗೆ ಶಿಫಾರಸ್ಸುಗೊಳಿಸುವುದಾಗಿ ಹೇಳಿದ್ದಾರೆ…

ಡಾ.ವಿಷ್ಣುವರ್ಧನ್‌ ಅವರ ಕುರಿತತಂತೆ ಈಗಾಗಲೇ ಸಾಕಷ್ಟು ಪುಸ್ತಕಗಳು ಕಿರು ಹೊತ್ತಿಗೆ ಹೊರಬಂದಿವೆ. ಆ ಸಾಲಿಗೆ ಈಗ ಡಾ.ಶರಣು ಹುಲ್ಲೂರು ಅವರು ಬರೆದಂತಹ ಕಿರುಹೊತ್ತಿಗೆಯೂ ಬಿಡುಗಡೆಯಾಗಿದೆ. ಹೌದು, “ಕರುನಾಡ ಯಜಮಾನ ಡಾ.ವಿಷ್ಣುವರ್ಧನ್‌” ಎಂಬ ಕಿರುಹೊತ್ತಿಗೆ ಹೊರಬಂದಿದ್ದು, ಆ ಪುಸ್ತಕವನ್ನು ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ ಅವರು ತಮ್ಮ ಕಚೇರಿಯಲ್ಲಿ ಬುಧವಾರ ಬಿಡುಗಡೆ ಮಾಡಿ ಶುಭಹಾರೈಸಿದ್ದಾರೆ.


ಈ ಪುಸ್ತಕದ ವಿಶೇಷವೆಂದರೆ ಡಾ.ವಿಷ್ಣು ಸೇನಾ ಸಮಿತಿ ಪ್ರೀತಿಯಿಂದಲೇ ಈ ಪುಸ್ತಕವನ್ನು ಹೊರತಂದಿದೆ. ಡಾ. ವಿಷ್ಣುವರ್ಧನ್ ಅವರ 71ನೇ ಜನ್ಮದಿನದ ಅಂಗವಾಗಿ ಡಾ.ವಿಷ್ಣುಸೇನಾ ಸಮಿತಿಯು “ಕರುನಾಡ ಯಜಮಾನ ಡಾ.ವಿಷ್ಣುವರ್ಧನ್” ಎಂಬ ಕಿರುಹೊತ್ತಿಗೆಯನ್ನು ಶಾಲಾ ಮಕ್ಕಳಿಗೆ ಉಚಿತವಾಗಿ ವಿತರಿಸುವ ದೃಷ್ಠಿಯಿಂದ ಹೊರತಂದಿದೆ. ಈ ಕೃತಿಯನ್ನು ಸುಮಾರು ಒಂದು ಲಕ್ಷ ಮಕ್ಕಳಿಗೆ ವಿತರಿಸುವ ಯೋಜನೆ ಸಮಿತಿಗಿದೆ. ಇದೇ ವೇಳೆ ಸಚಿವ ನಾಗೇಶ್‌ ಅವರಿಗೆ ಡಾ.ವಿಷ್ಣು ಸೇನಾ ಸಮಿತಿ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ್‌ ಅವರು, ಪಠ್ಯದಲ್ಲಿ ಕರುನಾಡ ಯಜಮಾನನ ಪಠ್ಯ ಸೇರಿಸಲು ಮನವಿ ಮಾಡಿದರು. ಅವರ ಮನವಿಗೆ ಸ್ಪಂದಿಸಿದ ಸಚಿವರು ಪಠ್ಯಪುಸ್ತಕ ಸಮಿತಿಗೆ ಮನವಿಯನ್ನು ಶಿಫಾರಸ್ಸುಗೊಳಿಸುವುದಾಗಿ ತಿಳಿಸಿದರು.


ಸಿನಿಮಾ, ಜನಪರ ಕಾರ್ಯಗಳ ಮೂಲಕ ಡಾ.ವಿಷ್ಣುವರ್ಧನ್ ಅವರು ಯಾವತ್ತಿಗೂ ನಮ್ಮೊಂದಿಗೆ ಇರುತ್ತಾರೆ. ಅವರ ಆದರ್ಶ ಬದುಕು, ನಾಡು, ನುಡಿಯ ಬಗೆಗಿನ ಅಭಿಮಾನ ಮತ್ತು ಜೀವಪರ ಕಾಳಜಿ ನಮಗೆಲ್ಲ ಮಾದರಿಯಾಗಿದೆ. ಅವರು ಜೀವನದಲ್ಲಿ ಸಾಕಷ್ಟು ಕಷ್ಟಗಳನ್ನು ಎದುರಿಸಿದರೂ, ಕೊನೆಗೂ ಗೆದ್ದದ್ದು ಅವರ ಶ್ರಮ. ಹಾಗಾಗಿ ಮಕ್ಕಳಿಗೆ ಡಾ.ವಿಷ್ಣು ಬದುಕಿನ ಕುರಿತು ಪರಿಚಯ ಆಗಬೇಕಿದೆ. ಆ ಕಾರಣದಿಂದ ಡಾ.ವಿಷ್ಣು ಅವರ ಬದುಕು ಸಾಧನೆಗಳನ್ನು ಪಠ್ಯದಲ್ಲಿ ಸೇರಿಸಲು ಡಾ.ವಿಷ್ಣು ಸೇನಾ ಸಮಿತಿ ಮನವಿ ಮಾಡಿಕೊಂಡಿದೆ. ಈ ಸಂದರ್ಭದಲ್ಲಿ ಲೇಖಕರಾದ ಡಾ. ಶರಣು ಹುಲ್ಲೂರು, ವಿಷ್ಣು ಸೇನಾ ಸಮಿತಿಯ ವೀರಕಪುತ್ರ ಶ್ರೀನಿವಾಸ, ಗುರುನಾಥ ರಾಜಗೀರ ಸೇರಿದಂತೆ ಇತರರು ಇದ್ದರು.

Categories
ಸಿನಿ ಸುದ್ದಿ

ಲಕ್ಕಿಮ್ಯಾನ್‌ಗೆ ಅಪ್ಪು ಡ್ಯಾನ್ಸ್!‌ ಸಹೋದರ ನಾಗೇಂದ್ರ ಪ್ರಸಾದ್‌ ನಿರ್ದೇಶನದ ಸಿನಿಮಾದಲ್ಲಿ ಪ್ರಭುದೇವ ಕೂಡ ಸ್ಟೆಪ್ಪು


ಪುನೀತ್‌ ರಾಜಕುಮಾರ್‌ ಈಗಾಗಲೇ ಹಲವಾರು ಸಿನಿಮಾಗಳಲ್ಲಿ ಅತಿಥಿ ಪಾತ್ರ ಮಾಡಿದ್ದಾರೆ. ಅದು ಪ್ರೀತಿಗೆ ಮಾತ್ರ. ಈಗ ಮತ್ತೊಂದು ಸಿನಿಮಾದಲ್ಲಿ ಅದೇ ಪ್ರೀತಿ ವಿಶ್ವಾಸಕ್ಕೆ ಡ್ಯಾನ್ಸ್‌ ಮಾಡಲು ಒಪ್ಪಿದ್ದಾರೆ ಎಂಬ ಸುದ್ದಿ ಇದೆ. ಹೌದು, ಪ್ರಭುದೇವ ಅವರ ಸಹೋದರ ನಾಗೇಂದ್ರ ಪ್ರಸಾದ್‌ ಅವರು ಚಿತ್ರವೊಂದನ್ನು ನಿರ್ದೇಶನ ಮಾಡುತ್ತಿದ್ದು, ಆ ಸಿನಿಮಾದಲ್ಲಿ ಪುನೀತ್‌ ರಾಜಕುಮಾರ್‌ ಮತ್ತು ಪ್ರಭುದೇವ ಇಬ್ಬರೂ ಒಂದು ಹಾಡಲ್ಲಿ ಹೆಜ್ಜೆ ಹಾಕಲಿದ್ದಾರಂತೆ. ಅಂದಹಾಗೆ, ಆ ಸಿನಿಮಾದ ಹೆಸರು. “ಲಕ್ಕಿ ಮ್ಯಾನ್”‌ ಇದು ಕನ್ನಡದಲ್ಲಿ ತಯಾರಾಗುತ್ತಿರುವ ಸಿನಿಮಾ. ತಮಿಳಿನ “ಓ ಮೈ ಕಡುವಲೇ” ಸಿನಿಮಾದ ಪ್ರೇರಣೆಯಿಂದ ಶುರುವಾಗುತ್ತಿರುವ ಸಿನಿಮಾ ಇದು.

ಈ “ಲಕ್ಕಿ ಮ್ಯಾನ್” ಸಿನಿಮಾದ ಸ್ಪೆಷಲ್‌ ಹಾಡಲ್ಲಿ ಪ್ರಭುದೇವ ಮತ್ತು ಪುನೀತ್ ಸ್ಟೆಪ್‌ ಹಾಕಲಿದ್ದು, ಆ ಹಾಡಿಗೆ ಜಾನಿ ಮಾಸ್ಟರ್ ನೃತ್ಯ ಸಂಯೋಜನೆ ಮಾಡಲಿದ್ದಾರೆ. ಅಂದಹಾಗೆ, ಬೆಂಗಳೂರಲ್ಲಿ ಶೂಟಿಂಗ್‌ ಶುರುವಾಗಿದೆ.
ಈ ಸಿನಿಮಾಗೆ ಕೃಷ್ಣ ಹೀರೋ. ಅವರ ಜೊತೆ ಸಂಗೀತ ಶೃಂಗೇರಿ, ರೋಷನಿ ಪ್ರಕಾಶ್ ಇಬ್ಬರು ನಾಯಕಿಯರು. ಬಹುತೇಕ ಚಿತ್ರೀಕರಣ ಮುಕ್ತಾಯವಾಗಿದ್ದು, ಈ ಹಾಡಿನೊಂದಿಗೆ ಕುಂಬಳಕಾಯಿ ಹೊಡೆಯುವ ಯೋಜನೆ ಚಿತ್ರತಂಡಕ್ಕಿದೆ. ಪ್ರಭುದೇವ ಸಹೋದರ ನಾಗೇಂದ್ರ ಪ್ರಸಾದ್ ಈ ಹಿಂದೆ ಕನ್ನಡದಲ್ಲಿ “ಮನಸೆಲ್ಲಾ ನೀನೇ” ಚಿತ್ರದಲ್ಲಿ ನಾಯಕರಾಗಿದ್ದರು. ಪ್ರಭುದೇವ ನಿರ್ದೇಶನದ ಚಿತ್ರಗಳಲ್ಲಿ ಸಹಾಯಕ ನಿರ್ದೇಶಕರಾಗಿಯೂ ಕೆಲಸ ಮಾಡಿದ್ದರು. ಉಪೇಂದ್ರ ಅವರ “ಎಚ್‌2ಓ” ಚಿತ್ರದೊಂದಿಗೆ ಕನ್ನಡಕ್ಕೆ ಬಂದಿದ್ದಋು. ಆ ನಂತರ “ಮನಸೆಲ್ಲಾ ನೀನೆ” ಮತ್ತು “ಪ್ರಾರಂಭ” “1 2 3” ಚಿತ್ರಗಳಲ್ಲಿ ನಟಿಸಿದ್ದರು. ಬಹಳ ವರ್ಷಗಳ ನಂತರ ಕನ್ನಡ ಸಿನಿಮರಂಗಕ್ಕೆ ಎಂಟ್ರಿಯಾಗಿದ್ದಾರೆ.

Categories
ಸಿನಿ ಸುದ್ದಿ

ನೂರು ವರ್ಷಗಳ ಚಲನಚಿತ್ರ ಸಂಗೀತ ಸಂಶೋಧನೆಗೆ ಡಾಕ್ಟರೇಟ್ ಪಡೆದ ಗಾಯಕಿ ; ಭಾರತದ ಮೊದಲ ಹಿನ್ನೆಲೆ ಗಾಯಕಿ ಪ್ರಿಯದರ್ಶಿನಿ ಮಾಡಿದ ಸಾಧನೆ ಇದು

ಭಾರತೀಯ ಚಿತ್ರರಂಗದ ಇತಿಹಾಸ ದೊಡ್ಡದು. ಈಗಾಗಲೇ ಹಲವು ಸಾಧಕರು ಕಲಾವಿದರ ಕುರಿತು ಸಂಶೋಧನೆ ನಡೆಸಿ, ಪ್ರಬಂಧ ಮಂಡಿಸಿ ಡಾಕ್ಟರೇಟ್‌ ಪಡೆದಿರುವುದುಂಟು. ಈಗ ಹೊಸ ಸುದ್ದಿ ಅಂದರೆ, ಇದೇ ಮೊದಲ ಬಾರಿಗೆ ಭಾರತದ ಮೊದಲ ಹಿನ್ನೆಲೆ ಗಾಯಕಿಯೊಬ್ಬರು ನೂರು ವರ್ಷಗಳ ಚಲನಚಿತ್ರ ಸಂಗೀತ ಸಂಶೋಧನೆಗೆ ಡಾಕ್ಟರೇಟ್‌ ಪಡೆದಿದ್ದಾರೆ. ಬಹುಭಾಷಾ ಹಿನ್ನೆಲೆ ಗಾಯಕಿ ಎನಿಸಿಕೊಂಡಿರುವ ಪ್ರಿಯದರ್ಶಿನಿ ಅವರು ಈ ಸಾಧನೆ ಮಾಡಿದ್ದು, ಇತ್ತೀಚಿಗೆ ಮೈಸೂರು ವಿಶ್ವವಿದ್ಯಾನಿಲಯದ 101ನೇ ಘಟಿಕೋತ್ಸವದಲ್ಲಿ ಕರ್ನಾಟಕ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್‌, ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಆಶ್ವತ್ಥ್ ನಾರಾಯಣ ಹಾಗೂ ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಜಿ. ಹೇಮಂತ ಕುಮಾರ್ ಪ್ರದಾನಮಾಡಿದ್ದಾರೆ.

ಕನ್ನಡ, ತಮಿಳು, ತೆಲುಗು, ಹಿಂದಿ, ಮಲಯಾಳಂ ಚಲನಚಿತ್ರೋದ್ಯಮದಲ್ಲಿ ಅನೇಕ ಹೆಸರಾಂತ ಸಂಗೀತ ನಿರ್ದೇಶಕರಿಗೆ 130 ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಹಿನ್ನಲೆ ಗಾಯಕಿಯಾಗಿ ಕೆಲಸ ಮಾಡಿರುವ ಪ್ರಿಯದರ್ಶಿನಿ ಹಲವಾರು ಭಕ್ತಿ ಗೀತೆಗಳು, ಆಲ್ಬಂಗಳಿಗೆ ಹಾಡಿದ್ದಾರೆ. ಪ್ರಿಯದರ್ಶಿನಿ ಅವರು ಸಿಂಗಾಪುರ್ ನಲ್ಲಿ ಎಂಜಿನಿಯರಿಂಗ್ ಓದುವ ವೇಳೆ ಭಾರದ್ವಾಜ್ ಸಂಗೀತ ನಿರ್ದೇಶನದ “ಕಾದಲ್ ಡಾಟ್ ಕಾಮ್” ಎಂಬ ತಮಿಳು ಚಲನ ಚಿತ್ರದಲ್ಲಿ ಗಾಯಕ ಹರಿಹರನ್ ಜೊತೆ ಯುಗಳಗೀತೆ ಹಾಡುವ ಮೂಲಕ ಅವರು ಚಿತ್ರರಂಗ ಪ್ರವೇಶಿಸಿದ್ದಾರೆ. ನಂತರ ಹಲವು ಸಂಗೀತ ದಿಗ್ಗಜರ ಜೊತೆ ಕೆಲಸ ಮಾಡುವ ಅವಕಾಶ ಪಡೆದುಕೊಂಡಿದ್ದಾರೆ. “ಚೆಲುವಿನ ಚಿತ್ತಾರ”, “ಜ್ಯೂಲಿ” , “ನನ್ನೆದೆಯ ಹಾಡು”, “ಕುಸ್ತಿ” , “ನಂದಿ”, “ಸಿಂಹಬಲುಡು”, “ಮಾಣಿಕ್ಯಮ್ 420”, “ಗಿರಿ”, “ಮುತ್ತಿನ ಮಳೆಯಲಿ”, “ಪ್ರೀತಿಯಿಂದ ರಮೇಶ್” “ನ್ಯೂಸ್” ಹಾಗು ಬಾಲಿವುಡ್ ನಲ್ಲಿ ಅಕ್ಷಯ್ ಕುಮಾರ್ ನಟಿನೆಯ “ಗರಂ ಮಸಾಲ” ಚಿತ್ರದಲ್ಲಿ ಹಾಡಿದ್ದಾರೆ. ಯಶ್ ಅಭಿನಯದ “ರಾಕಿ” ಚಿತ್ರದಲ್ಲಿ ಎಸ್. ಪಿ. ಬಾಲಸುಬ್ರಹ್ಮಣ್ಯಂ ಜೊತೆ ಹಾಡಿದ ಹೆಮ್ಮೆ ಇವರದು. ಮುಂತಾದ ಚಿತ್ರಗಳಲ್ಲಿ ಹಾಡಿದ್ದೇನೆ, ಕನ್ನಡದಲ್ಲಿ ರಾಜೇಶ್ ರಾಮನಾಥ್ ಸಂಗೀತ ನಿರ್ದೇಶನದ “ಅಜ್ಜು” ಇವರ ಮೊದಲ ಹಾಡಿನ ಸಿನಿಮಾ.

ಪ್ರಿಯದರ್ಶಿನಿ ಅವರು, ನಾಲ್ಕನೇ ವಯಸ್ಸಲ್ಲೇ ಗುರು ಶಾರದಾ ಸ್ವಾಮಿನಾಥನ್ ಬಳಿ ಕರ್ನಾಟಕ ಶಾಸ್ತ್ರೀಯ ಸಂಗೀತ ಅಭ್ಯಾಸ ನಡೆಸಿ, 9ನೆೇ ವಯಸ್ಸಿಗೆ ಮೊದಲ ಸಂಗೀತ ಕಛೇರಿ ನೀಡಿದ್ದಾರೆ. ನಂತರ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ ಹಾಗೂ ಗಝಲ್ ಪಂಡಿತ್ ಶ್ರೀ ಚರಣ್ ಬಳಿ ಕಲಿತು, ಮದ್ರಾಸ್ ವಿಶ್ವವಿದ್ಯಾನಿಲಯದಲ್ಲಿ ಸಂಗೀತದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪಾಶ್ಚಾತ್ಯ ಸಂಗೀತವನ್ನು – ಲಂಡನ್ ನ ದಿ ರಾಯಲ್ ಸ್ಕೂಲ್ ಆಫ್ ಮ್ಯೂಸಿಕ್ ನಲ್ಲಿ ಕಲಿತು ಈಗ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಸಿನಿಮಾ ಸಂಗೀತದಲ್ಲಿ ಪಿಎಚ್‌ಡಿ ಪದವಿ ಪಡೆದಿದ್ದಾರೆ.

ಹಿನ್ನಲೆ ಗಾಯಕಿಯಾದ ಇವರು ಭಾರತೀಯ ಚಲನಚಿತ್ರ ಸಂಗೀತ ಬಹು ಆಯಾಮವನ್ನು ಹೊಂದಿದೆ ಅಂದುಕೊಂಡವರು. ಈವರಗೆ ಅವರು ಕಂಡಂತೆ ಸಿನಿಮಾ ಬಗ್ಗೆ ಹಲವಾರು ಗ್ರಂಥಗಳು ಪುಸ್ತಕಗಳಿವೆ. ಆದರೆ, ಸಿನಿಮಾ ಸಂಗೀತದ ಬಗ್ಗೆ ಬೆರಳೆಣಿಕೆಯೆಷ್ಟು ಮಾತ್ರ ಪುಸ್ತಕಳಲ್ಲಿ ಮಾಹಿತಿ ಇದೆ.

ಹೀಗಾಗಿ ಅವರು ಚಲನಚಿತ್ರ ರಂಗಕ್ಕೆ ಚಲನಚಿತ್ರ ಸಂಗೀತದ ಬಗ್ಗೆ ಒಂದು ಮೂಲ ಗ್ರಂಥವನ್ನು ಕೊಡುಗೆಯಾಗಿ ನೀಡುವ ಮಹದಾಸೆಯಿಂದ ಈ ಸಂಶೋಧನ ವಿಷಯವನ್ನು ಆಯ್ಕೆ ಮಾಡಿದ್ದಾರೆ. ಇದು ಖಂಡಿತವಾಗಿಯೂ ಭವಿಷ್ಯದ ಪೀಳಿಗೆಗೆ, ಸಂಗೀತಗಾರರಿಗೆ, ಗಾಯಕರಿಗೆ, ಕಲಾವಿದರಿಗೆ, ತಂತ್ರಜ್ಞರಿಗೆ ಮತ್ತು ಅನೇಕರಿಗೆ ಜ್ಞಾನದ ಮೂಲವಾಗಿದೆ ಎನ್ನುತ್ತಾರೆ ಅವರು.

ಡಾ.ಸಿ.ಎ. ಶ್ರೀಧರ ಅವರ ಮಾರ್ಗದರ್ಶನದಲ್ಲಿ ಸಂಶೋಧನಾ ಅಧ್ಯಯನ ನಡೆಸಿದ್ದು “ಮ್ಯೂಸಿಕ್ ಇನ್ ಕನ್ನಡ ಅಂಡ್ ತಮಿಳ್ ಸಿನಿಮಾ- ಸ್ಟಡಿ” ಎಂಬ ವಿಷಯದಲ್ಲಿ ಇವರು ಸಂಶೋಧನೆ ಮಾಡಿದ್ದಾರೆ. ಇವರ ಮಹಾ ಪ್ರಬಂಧವು (1917-2020) ಸರಿಸುಮಾರು 100 ವರ್ಷಗಳ ಕನ್ನಡ ಹಾಗೂ ತಮಿಳು ಸಿನಿಮಾದಲ್ಲಿನ ಸಂಗೀತಕ್ಕೆ ಸಂಬಂಧಪಟ್ಟಿದ್ದು , ಚಿತ್ರಗೀತೆಯ ಹುಟ್ಟು, ಮೂಕಿ ಹಾಗೂ ಟಾಕಿ ಚಿತ್ರಗಳಲ್ಲಿನ ಸಂಗೀತ, ಹಿನ್ನಲೆ ಗಾಯನ, ಹಿನ್ನಲೆ ಸಂಗೀತ, ಆಯ್ದ ಗೀತೆಗಳ ವಿವಿಧ ದೃಷ್ಟಿಕೋನದಲ್ಲಿ ವಿಶ್ಲೇಷಣೆ, ಚಿತ್ರ ಸಂಗೀತದಲ್ಲಿನ ಶಾಸ್ತ್ರೀಯತೆ ಹಾಗೂ ಜಟಿಲತೆಗಳು, ರೆಕಾರ್ಡಿಂಗ್ ಮತ್ತು ರೆಕಾರ್ಡಿಂಗ್ ತಂತ್ರಜ್ಞಾನ ಹಾಗೂ ಅನೇಕ ವಿಚಾರಗಳನ್ನೊಳಗೊಂಡಿದೆ.

ಇನ್ನು, ಈ ಸಂಶೋಧನೆಯ ಅಧ್ಯಯನಕ್ಕೆ ಇವರು ಅನೇಕ ಸಂಗೀತ ದಿಗ್ಗಜರನ್ನು ವೈಯಕ್ತಿಕವಾಗಿ ಭೇಟಿ ಮಾಡಿ ಸಂದರ್ಶನ ಮಾಡಿದ್ದಾರೆ. ಎ.ಆರ್. ರೆಹಮಾನ್, ಎಸ್. ಜಾನಕಿ, ಇಳಯರಾಜ, ಎಂ. ಬಾಲಮುರಳಿಕೃಷ್ಣ, ವಾಣಿ ಜಯರಾಮ್, ರಾಮಕುಮಾರ್ ಗಣೇಶನ್, ಧೀನ, ರಾಜನ್ (ರಾಜನ್-ನಾಗೇಂದ್ರ), ಪಿ. ಸುಶೀಲ, ಎಸ್. ಪಿ. ಬಾಲಸುಬ್ರಹ್ಮಣ್ಯಂ, ಕೆ. ಎಸ್. ಚಿತ್ರ, ಆರ್. ರತ್ನ, ಬಿ. ಕೆ. ಸುಮಿತ್ರ, ವಿ. ಮನೋಹರ್, ಭಾರದ್ವಾಜ್ ಸೇರಿದಂತೆ ಹಲವರ ಜೊತೆ ವಿಷಯ ಹಂಚಿಕೊಂಡಿದ್ದಾರೆ.

ಸದ್ಯ ಡಾಕ್ಟರೇಟ್‌ ಪಡೆದಿರುವ ಇವರು, ಮುಂದೆಯೂ ಹಿನ್ನಲೆ ಗಾಯನ ಮುಂದುವರಿಸುವುದರ ಜೊತೆಯಲ್ಲಿ ಈ ಮಹಾ ಪ್ರಬಂಧವನ್ನು ಪುಸ್ತಕವಾಗಿ ಪ್ರಕಟಿಸುವ ಉದ್ದೇಶ ಹೊಂದಿದ್ದಾರೆ. ಇಂಗ್ಲಿಷ್‌ನಿಂದ ಇತರ ಭಾಷೆಗಳಿಗೆ ಅನುವಾದಿಸುವ ಬಗ್ಗೆಯೂ ಯೋಚಿಸಿದ್ದಾರೆ. ಇದು ಚಲನಚಿತ್ರ ಸಂಗೀತದಲ್ಲಿ 1080 ಪುಟಗಳ ಸುದೀರ್ಘವಾದ ಪ್ರಬಂಧವಾದ್ದರಿಂದ ಇದನ್ನು “ಗಿನ್ನೆಸ್ ವಿಶ್ವ ದಾಖಲೆಗಳು” ಮತ್ತು ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್‌ಗೆ ಕಳುಹಿಸಲು ಯೋಜಿಸಿದ್ದಾರೆ.

Categories
ಸಿನಿ ಸುದ್ದಿ

ಲಾಂಗ್ ಹಿಡಿದು ಎಂಟ್ರಿಕೊಟ್ಟ `ರಾಣ’ ; ಕೆ.ಮಂಜು ಮಗನ ಬಗ್ಗೆ ಹೀಗಂದ್ರು ಉಪ್ಪಿ !?

ಲಾಂಗ್ ತಯಾರಾದ್ಮೇಲೆ ನಾನ್ ಕೊಟ್ಟೆ ನೀನ್ ಕೊಟ್ಟೆ ನಾನ್ ಹಿಡ್ದೆ ನೀನ್ ಹಿಡ್ದೆ ಅಲ್ಲ. ಲಾಂಗ್‌ನ ಬಿಸಿ ಕುಲುಮೆಯಲ್ಲಿ ಹಾಕಿ ತಯಾರ್ ಮಾಡಿದ್ದನ್ನ ಯಾರು ಮರೆತಿಲ್ಲ. ನೋ ಎಕ್ಸ್ ಕ್ಯೂಸ್ ಮೀ ಪ್ಲೀಸ್, ಎಲ್ಲರ ಕಾಳ್ ಎಳೀತದೆ ಕಾಲ..ಇದು ಉಪ್ಪಿ-2 ಚಿತ್ರದ ಕೆಂಡದಂತಹ ಡೈಲಾಗ್. ರಿಯಲ್‌ಸ್ಟಾರ್ ಉಪ್ಪಿಯವರ ಈ ಜಬರ್ದಸ್ತ್ ಡೈಲಾಗ್‌ನ ಅವರ ಫ್ಯಾನ್ಸ್ ಮಾತ್ರವಲ್ಲ ಇಂಡಸ್ಟಿçಯ ಮಂದಿಯೂ ಮರೆಯೋ ಹಂಗಿಲ್ಲ ಬಿಡಿ

ಲಾಂಗ್' ಬಗ್ಗೆ ಮಾತನಾಡುವಾಗ ರಿಯಲ್‌ಸ್ಟಾರ್ ಉಪ್ಪಿನಾ ಹಾಗೂ ಶಿವಣ್ಣನ್ನ ಕಣ್ತುಂಬಿಕೊಳ್ಳಲೆಬೇಕು. ಯಾಕಂದ್ರೆ, ಮಾಯಬಜಾರ್‌ನಲ್ಲಿಲಾಂಗ್’ ಮೂಲಕ ಓಂಕಾರ ಬರೆದವರು ಈ ಇಬ್ಬರು ಧ್ರುವತಾರೆಗಳು. ಇವತ್ತಿಗೂ ಲಾಂಗ್ ಹಿಡ್ಕೊಂಡು ಫೀಲ್ಡ್ ಗೆ ಎಂಟ್ರಿಕೊಡುವವರು ಶಿವಣ್ಣ ಹಾಗೂ ಉಪ್ಪಿಯವರ ಸಜೆಷನ್ ತಗೋತ್ತಾರೆ. ಇತ್ತೀಚೆಗೆ ಕನ್ನಡ ಚಿತ್ರರಂಗದ ಹೆಸರಾಂತ ನಿರ್ಮಾಪಕ ಕೆ. ಮಂಜು ಅವರ ಪುತ್ರ ಶ್ರೇಯಸ್ ಮಂಜುಗೆ ಶಿವಣ್ಣ ಲಾಂಗ್ ಹಿಡಿಯೋದನ್ನ ಹೇಳಿಕೊಟ್ಟಿದ್ದರು. ಸೆಂಚುರಿಸ್ಟಾರ್ ಕೈನಿಂದ ಲಾಂಗ್ ಹಿಡಿಯೋ ವಿದ್ಯೆ ಕಲಿತ ಶ್ರೇಯಸ್ `ರಾಣ’ ಅಖಾಡಕ್ಕೆ ಧುಮ್ಕಿದ್ದರು.

ರಾಣ' ಶ್ರೇಯಸ್ ಮಂಜು ಅಭಿನಯದ ಹೈವೋಲ್ಟೇಜ್ ಸಿನಿಮಾ. ಟೈಟಲ್‌ನಿಂದಲೇ ಸಂಚಲನ ಸೃಷ್ಟಿಸಿರುವರಾಣ’ ಚಿತ್ರ ಈಗ ಫಸ್ಟ್ ಲುಕ್ ಟೀಸರ್ ಮೂಲಕ ಹವಾ ಎಬ್ಬಿಸಿದೆ. ದೊಡ್ಮನೆ ಯುವರಾಜನಿಂದ ಲಾಂಗ್ ಹಿಡಿಯೋದನ್ನ ಹೇಳಿಸಿಕೊಂಡು ರಾಣ' ಶೂಟಿಂಗ್ ಸೆಟ್‌ಗೆ ಎಂಟ್ರಿಕೊಟ್ಟಿದ್ದ ನಟ ಶ್ರೇಯಸ್, ಟೀಸರ್‌ನಲ್ಲಿ ಲಾಂಗ್ ಹಿಡಿದುಕೊಂಡೇ ದರ್ಶನ ನೀಡಿದ್ದಾರೆ. ಮೈಹುರಿಗೊಳಿಸಿಕೊಂಡು, ಕಣ್ಣಲ್ಲಿ ಬೆಂಕಿನೋಟ ಇಟ್ಟುಕೊಂಡು, ಶ್ರೇಯಸ್ರಾಣ’ನಾಗಿ ಧಗಧಗಿಸ್ತಿರುವುದನ್ನ ನೋಡಿ, ಪಡ್ಡೆಹುಲಿ ಫ್ಯಾನ್ಸ್ ಥ್ರಿಲ್ಲಾಗಿದ್ದಾರೆ. `ರೊಚ್ಚಿಗೆದ್ದ ಸಿಂಹ ಇವನು. ಚಂಡಪ್ರಚಂಡ ಇವನು. ಬೆಚ್ಚಿಬೀಳಿಸೋ ಸಿಂಹ ಇವನು ದೂರ ನಿಲ್ಲಲೆ. ರ‍್ಯಾಪರ್ ಚಂದನ್ ಶೆಟ್ಟಿ ಟ್ಯೂನ್ ಹಾಕಿರೋ ಲಿರಿಕ್ಸ್ ನ ಶ್ರೇಯಸ್ ಫ್ಯಾನ್ಸ್ ಹಮ್ಮಿಂಗ್ ಮಾಡ್ತಿದ್ದಾರೆ.

ರಿಯಲ್‌ಸ್ಟಾರ್ ಉಪೇಂದ್ರ ಅವರು ರಾಣ' ಫಸ್ಟ್ ಲುಕ್ ಟೀಸರ್‌ನ ರಿಲೀಸ್ ಮಾಡಿಕೊಟ್ಟಿದ್ದಾರೆ. ಶ್ರೇಯಸ್ ಇನ್ನೋಸೆಂಟ್ ಫೇಸ್‌ನಲ್ಲಿ ವೈಲೆಂಟ್ ಲುಕ್ ತೋರಿಸಿದ್ದೀರಿ ನಿರ್ದೇಶಕರೇ ಗುಡ್‌ಜಾಬ್ ಅಂತ ಡೈರೆಕ್ಟರ್ ನಂದಕಿಶೋರ್‌ಗೆ ಕಾಂಪ್ಲಿಮೆಂಟ್ ಕೊಟ್ಟರು. ಪಡ್ಡೆಹುಲಿ ಹಾಗೂ ವಿಷ್ಣುಪ್ರಿಯ ಎರಡು ಸಿನಿಮಾಗಿಂತರಾಣ’ ಚಿತ್ರಕ್ಕೆ ತುಂಬಾ ಹಾರ್ಡ್ ವರ್ಕ್ ಮಾಡಿದ್ದೀಯಾ ಅದು ಸ್ಕ್ರೀನ್ ಮೇಲೆ ಕಾಣುತ್ತಿದೆ ಒಳ್ಳೆಯದಾಗಲಿ ಹೀರೋ ಅಂತ ಶ್ರೇಯಸ್‌ಗೆ ಉಪ್ಪಿ ವಿಶ್ ಮಾಡಿದ್ರು. ಸೂಪರ್‌ರಂಗ ಸಿನಿಮಾದಿಂದ ನಾನು ನಿಮ್ಮ ದೊಡ್ಡ ಅಭಿಮಾನಿ. ನಿಮ್ಮ ಎ' ಸಿನಿಮಾನ ನನ್ನೆಲ್ಲಾ ಟಾಲಿವುಡ್ ಫ್ರೆಂಡ್ಸ್ ಗೆ ತೋರಿಸಿದ್ದೆ ಹಾಗೂಸೂಪರ್’ ಚಿತ್ರಕ್ಕೆ ಇಡೀ ಕ್ಲಾಸ್‌ಮೆಟ್ಸ್ ಎಲ್ಲಾ ಹೋಗಿದ್ವಿ ಎಂದು ನೆನಪು ಮಾಡಿಕೊಂಡರು.

ನಿರ್ಮಾಪಕ ಗುಜ್ಜಾಲ್ ಜೊತೆ ಸೇರಿ ಮಗನ ರಾಣ' ಚಿತ್ರಕ್ಕೆ ಕೆ. ಮಂಜು ಕೂಡ ಬಂಡವಾಳ ಹೂಡಿದ್ದಾರೆ. ಫಸ್ಟ್ ಲುಕ್ ಟೀಸರ್ ಸಂದರ್ಭದಲ್ಲಿ ಹಾಜರಿದ್ದ ನಿರ್ಮಾಪಕರಾದ ಕೆ.ಮಂಜು, ರಿಯಲ್‌ಸ್ಟಾರ್ ಗೆ ಕೃತಜ್ಞತೆ ಸಲ್ಲಿಸಿದರು.ರಾಣ’ ಚಿತ್ರದ ಮುಹೂರ್ತಕ್ಕೆ ಕರೆದ್ವಿ ಬಂದರು. ಈಗ ಟೀಸರ್ ರಿಲೀಸ್‌ಗೆ ಬಂದು ಶುಭಹಾರೈಸಿದ್ದಾರೆ. ಸಿನಿಮಾಗೋಸ್ಕರ ಕಷ್ಟಪಟ್ಟಿದ್ದೇನೆ ಅಂತ ಶ್ರೇಯಸ್ ಹೇಳ್ತಿದ್ದಾನೆ ಆದರೆ ಉಪ್ಪಿ ಸಿಕ್ಕಾಪಟ್ಟೆ ಕಷ್ಟಪಟ್ಟಿರುವುದನ್ನ ನಾನು ನೋಡಿದ್ದೇನೆ. ಆಗೆಲ್ಲಾ ಜಿಮ್ ಇಲ್ಲ ಏನು ಇಲ್ಲ ಅಂತಹ ಹೊತ್ತಲ್ಲೇ ಫಿಟ್ ಆಗಿರುವುದಕ್ಕೆ ಸಾಕಷ್ಟು ಕಸರತ್ತು ನಡೆಸಿದ್ದಾರೆ ಎಂದರು.

ರಾಣ' ಔಟ್ ಅಂಡ್ ಔಟ್ ಮಾಸ್ ಸಿನಿಮಾ. ಪವರ್‌ಪ್ಯಾಕ್ಡ್ ಆಕ್ಷನ್ ಸೀಕ್ವೆನ್ಸ್ ಗಳನ್ನೊಳಗೊಂಡಿರುವರಾಣ’ ಚಿತ್ರಕ್ಕೆ ಪೊಗರು ಡೈರೆಕ್ಟರ್ ಆಕ್ಷನ್ ಕಟ್ ಹೇಳಿದ್ದಾರೆ. ಪಡ್ಡೆಹುಲಿ ಹೀರೋ ಪೊಗದಸ್ತಾದ ಬಾಡಿಬಿಲ್ಡ್ ಮಾಡಿದ್ದಾರೆ. ನಾಯಕ ಶ್ರೇಯಸ್‌ಗೆ ರೀಷ್ಮಾ ನಾಣಯ್ಯ- ರಜಿನಿ ಭಾರದ್ವಾಜ್ ಜೊತೆಯಾಗಿದ್ದಾರೆ. ಶೇಖರ್ ಚಂದ್ರ ಛಾಯಾಗ್ರಹಣ, ಕೆ.ಎಂ ಪ್ರಕಾಶ್ ಸಂಕಲನ ಚಿತ್ರಕ್ಕಿದೆ. ಪೊಗರು ಚಿತ್ರದ ಟೆಕ್ನಿಷಿಯನ್ಸ್ ರಾಣ ಚಿತ್ರಕ್ಕೆ ಬೆವರು ಸುರಿಸುತ್ತಿದ್ದು ಮೂವೀ ಅದ್ದೂರಿಯಾಗಿ ಮೂಡಿಬರಲಿದೆ.

ವಿಶಾಲಾಕ್ಷಿ, ಎಂಟರ್‌ಟೈನ್ಮೆಂಟ್ ಬ್ಯೂರೋ ಸಿನಿಲಹರಿ

Categories
ಸಿನಿ ಸುದ್ದಿ

ಕಿರಾತಕ-2 ಲೆಕ್ಕ ಚುಪ್ತ ಮಾಡಿದ್ರಂತೆ ಯಶ್ ! ಬಡ್ಡಿ ಸಮೇತ 13 ಕೋಟಿ ಸೆಟ್ಲ್ ಮೆಂಟ್ ಮಾಡಿದ್ದು ನಿಜವೇನು ?

ಸಾಮಾಜಿಕ ಜಾಲತಾಣದಲ್ಲಿ ಕಿರಾತಕ 2 ಸೆಟಲ್ ಮೆಂಟ್ ವಿಚಾರವಾಗಿ ಚರ್ಚೆಗಳಾಗ್ತಿದೆ. ಕೆಲವರು ಈ‌ ಸುದ್ದಿ ನಿಜ ಅಂತ ಒಪ್ಕೊಂಡ್ರೆ, ಇನ್ನೂ ಕೆಲವರು ಫೇಕ್ ನ್ಯೂಸ್ ಬಿಟ್ಟಾಕ್ರಿ ಅಂತಿದ್ದಾರೆ. ನಿಜಕ್ಕೂ ರಾಕಿಭಾಯ್ ಸೆಟಲ್ ಮೆಂಟ್ ಮಾಡಿದ್ರಾ ? ಮೈ ನೇಮ್ ಈಸ್ ಕಿರಾತಕ ಚಿತ್ರದ ಅನ್ನದಾತನಿಗೆ ಬಡ್ಡಿ ಸಮೇತ 13 ಕೋಟಿ ಕೊಟ್ಟರಾ? ಆ ಬಡಾ ಖಬರ್ ಸ್ಟೋರಿ ಇಲ್ಲಿದೆ

ಕೆಜಿಎಫ್.. ಕೆಜಿಎಫ್..ಕೆಜಿಎಫ್ ಈ ಮೂರಕ್ಷರದ ಮಹಾ ಸಿನಿಮಾದ ಅಬ್ಬರ ಆರ್ಭಟದ ನಡುವೆ ಕಿರಾತಕ 2 ಚಿತ್ರದ ಸುದ್ದಿಯೊಂದು ಸಲಾಂ ರಾಕಿಭಾಯ್ ಎನ್ನುತ್ತಿದೆ. ಸೆಲ್ಫ್ ಮೇಡ್ ಷೆಹಜಾದನನ್ನ ತಲೆ ಮೇಲೆ ಹೊತ್ತು ಕುಣಿಯುತ್ತಿದೆ. ಅನ್ನದಾತನಿಗೆ ಬಡ್ಡಿ ಸಮೇತ ಕೊಟ್ಟರೆನ್ನುವ ಬಡಾಬ್ರೇಕಿಂಗ್ ನ್ಯೂಸು ಸೆನ್ಸೇಷನ್ ಸೃಷ್ಟಿಸಿದೆ. ಅಣ್ತಮ್ಮನ ಫ್ಯಾನ್ಸ್ ಕಾಲರ್ ಪಟ್ಟಿ ಎಗರಿಸುವಂತೆ ಮಾಡಿದೆ.

ಕೆಜಿಎಫ್‌ ಚಿತ್ರ ತೆರೆಕಂಡಾಗಿನಿಂದಲೂ ಅಣ್ತಮ್ಮನ ಫ್ಯಾನ್ಸ್ ಕಾಲರ್ ಪಟ್ಟಿ ಟೈಟ್ ಮಾಡಿಕೊಳ್ಳುತ್ತಲೇ ಇದ್ದಾರೆ. ಅಪ್‌ಕೋರ್ಸ್ ಮಾಡಿಕೊಳ್ಳಲೆಬೇಕು. ಇದೀಗ ಮತ್ತೊಮ್ಮೆ ರಾಕಿಂಗ್ ಭಕ್ತರು ಕಣ್ಣುಬ್ಬು ಎಗರಿಸುತ್ತಾ ಸೀಟಿ ಹೊಡೆಯೋದಕ್ಕೆ ಕಾರಣ
‘ಮೈ ನೇಮ್ ಈಸ್ ಕಿರಾತಕ’ ಚಿತ್ರದ ಅನ್ನದಾತ ಜಯ್ಯಣ್ಣ ಅವರಿಗೆ ಯಶ್ 13 ಕೋಟಿ‌ ಸೆಟಲ್ ಮೆಂಟ್ ಮಾಡಿರುವುದು.

‘ಮೈ ನೇಮ್ ಈಸ್ ಕಿರಾತಕ’ ಅಣ್ತಮ್ಮ ಯಶ್ ಅಭಿನಯಿಸಬೇಕಿದ್ದ ಚಿತ್ರ. ಕೆಜಿಎಫ್ ಪಾರ್ಟ್ 1 ರಿಲೀಸ್ ಟೈಮ್ ನಲ್ಲಿ ‘ ಮೈ ನೇಮ್ ಈಸ್’ ಕಿರಾತಕ ಚಿತ್ರ ಸೆಟ್ಟೇರಿತ್ತು. ಗಡ್ಡ- ಮೀಸೆಗೆ ಕತ್ತರಿ ಹಾಕಿಸಿಕೊಂಡು ಸ್ಟೈಲಿಷ್ ಹೇರ್ ಸ್ಟೈಲ್ ಮಾಡಿಸಿಕೊಂಡು ಪಂಕಾಗಿ ಯಶ್ ಕ್ಯಾಮೆರಾ ಮುಂದೆ ಬಂದಿದ್ದರು. ವೈಟ್ ವೈಟ್ ಪಂಚೆ ತೊಟ್ಟು ಬ್ಲೂ ಕಲರ್ ಶರ್ಟ್ ನಲ್ಲಿ ಅಣ್ತಮ್ಮನ ‘ ಮೈ ನೇಮ್ ಈಸ್’ ಕಿರಾತಕ ಫೋಟೋಶೂಟ್ ಕೂಡ ನಡೆದಿತ್ತು. ಈ ಮಧ್ಯೆ ಕೆಜಿಎಫ್ ಸಿನಿಮಾ ಬಿಡುಗಡೆಯಾಗಿ ರಾಜ್ಯದ ಗಡಿ ದಾಟುವುದಲ್ಲದೇ ರಾಷ್ಟ್ರವನ್ನ ದಾಟಿತು. ರಾಕಿಂಗ್ ಸ್ಟಾರ್ ಗೆ ನ್ಯಾಷನಲ್ ಸ್ಟಾರ್ ಕಿರೀಟಮುಡಿಗೇರಿತು. ನೋಡ ನೋಡುತ್ತಲೇ ಯಶ್ ಇಮೇಜ್ ಏಕ್ದಮ್ ನರಾಚಿ ಲೋಕ ದಾಟಿ ಚಿನ್ನದ ಸಾಮ್ರಾಜ್ಯ ಅಲಂಕರಿಸಿತ್ತು.ಕೆಜಿಎಫ್ ಚಾಪ್ಟರ್ 2 ಗಾಗಿ ಬೇಡಿಕೆ ಹೆಚ್ಚಾಯ್ತು.

ಮೈ ನೇಮ್ ಈಸ್ ಕಿರಾತಕ ಆರಂಭಿಸುವ ಹೊತ್ತಲ್ಲಿ ಕೆಜಿಎಫ್‌ ಸಿನಿಮಾನ‌ ಎರಡು ಚಾಪ್ಟರ್ ನಲ್ಲಿ ತೆರೆಗೆ ತರಬೇಕು ಎನ್ನುವ ಪ್ಲ್ಯಾನ್ ಆಗಿತ್ತೋ ಇಲ್ಲವೋ ನಮಗೆ ಗೊತ್ತಿಲ್ಲ. ಕೆಜಿಎಫ್ ಬಿಡುಗಡೆಗೆ ಮೊದಲೇ ‘ ಮೈ ನೇಮ್ ಈಸ್’ ಕಿರಾತಕ ಚಿತ್ರಕ್ಕೆ ಚಾಲನೆ‌ ಕೊಡಲಾಗಿತ್ತು. ಫೋಟೋಶೂಟ್ ನಂತರ ಕೆಜಿಎಫ್ ಪ್ರಮೋಷನ್ ನಲ್ಲಿ ಯಶ್ ಬ್ಯುಸಿಯಾದ ಕಾರಣಕ್ಕೆ ಕಿರಾತಕ 2 ಗೆ ಬ್ರೇಕ್ ಹಾಕಿದರು. ಕೆಜಿಎಫ್ ಬಿಡುಗಡೆಗೊಂಡು ಸುನಾಮಿ ಎಬ್ಬಿಸಿದಾಗ ಸ್ವತಃ ಯಶ್ ಕಿರಾತಕ 2 ಚಿತ್ರ ಮಾಡುವುದಾಗಿ ಹೇಳಿಕೊಂಡರಾದರೂ ಕೆಜಿಎಫ್ ಚಾಪ್ಟರ್ 2 ಸುನಾಮಿಯ ನಡುವೆ ಮೈ ನೇಮ್ ಈಸ್ ಕಿರಾತಕ ಸಿನಿಮಾ ಸೈಲೆಂಟ್ ಆಯ್ತು. ಇದೀಗ ಸೆಟ್ಲ್ ಮೆಂಟ್ ಸುದ್ದಿ ಕಿರಾತಕ 2 ಚಿತ್ರಕ್ಕೆ ಫುಲ್ ಸ್ಟಾಪ್ ಹಾಕ್ತಿದೆ.

ಹೌದು, ‘ಮೈ ನೇಮ್ ಈಸ್ ಕಿರಾತಕ’ ಚಿತ್ರಕ್ಕೆ ಯಶ್ ಬಣ್ಣ ಹಚ್ಚೋದು ಇನ್ನೂ ಕನಸಿನ ಮಾತಾ? ಗೊತ್ತಿಲ್ಲ ಕಣ್ರೀ. ಆದರೆ, ಶೂಟಿಂಗ್ ಗೆ 3 ಕೋಟಿ ಖರ್ಚಾಗಿತ್ತಂತೆ. ನಿರ್ಮಾಪಕರಾದ ಜಯ್ಯಣ್ಣ ಯಶ್ ಗೆ ಅಡ್ವಾನ್ಸ್ ಕೂಡ ಕೊಟ್ಟಿದ್ದರಂತೆ. ಚಿತ್ರೀಕರಣಕ್ಕೆ ಖರ್ಚಾದ ಮೂರು ಕೋಟಿ ಹಾಗೂ ಅಡ್ವಾನ್ಸ್ ಆಗಿ ತೆಗೆದುಕೊಂಡ ಹಣ ಎಲ್ಲದಕ್ಕೂ ಶೇಕಡ 3 ರಷ್ಟು ಬಡ್ಡಿ ಸೇರಿಸಿ ಒಟ್ಟು 13 ಕೋಟಿ ಹಣವನ್ನ ಅನ್ನದಾತ ಜಯ್ಯಣ್ಣ ಅವರಿಗೆ ಯಶ್ ವಾಪಾಸ್ ನೀಡಿದ್ದಾರಂತೆ. ಹೀಗೊಂದು ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸುದ್ದಿ ಮಾಡ್ತಿದೆ.

ಹೀಗೆ ಹರಿದಾಡ್ತಿರುವ ಸುದ್ದಿ ನಿಜಾನೋ? ಸುಳ್ಳೋ ? ಗೊತ್ತಿಲ್ಲ. ಆದರೆ, ಬೆಂಕಿ ಇಲ್ಲದೇ ಹೊಗೆ ಆಡಲ್ಲ ಅಲ್ಲವೇ.‌ಎನಿವೇ, ಇಂತಹದ್ದೊಂದು ಬೆಳವಣಿಗೆ ಆಗಿದ್ದರೆ ನಿಜಕ್ಕೂ ಒಳ್ಳೆಯದೇ. ಅನ್ನದಾತರ ಕಣ್ಣೀರು ಒರೆಸಿದಂತಾಗುತ್ತೆ, ಕೈಹಿಡಿದಂತಾಗುತ್ತೆ. ಕಲಾವಿದರು ಯಾರೇ ಇರಲಿ ಸಿನಿಮಾ ಮಾಡೋದಕ್ಕೆ ಇಷ್ಟ ಇಲ್ಲ ಅಂದರೆ, ಡೇಟ್ ಕ್ಲ್ಯಾಷ್ ಆಗ್ತಿದೆ ಅಂದರೆ, ಚಿತ್ರತಂಡದಿಂದ ಹೊರಬರುವ ನಿರ್ಧಾರ ತೆಗೆದುಕೊಂಡರೆ, ಅಟ್ ಲೀಸ್ಟ್ ಅಡ್ವಾನ್ಸ್ ಹಣವನ್ನಾದರೂ ವಾಪಾಸ್ ಮಾಡುವ ಪ್ರವೃತ್ತಿಯನ್ನ ಬೆಳೆಸಿಕೊಳ್ಳುವುದಕ್ಕೆ ರಾಕಿಭಾಯ್ ಪ್ರೇರಣೆಯಾಗ್ತಾರೆ. ಮೈ ನೇಮ್ ಈಸ್ ಕಿರಾತಕ ಕೈಬಿಟ್ಟಿದ್ದು ನಿಜವೇ ಆದರೆ
ಅದಕ್ಕೆ ಕಾರಣ ನ್ಯಾಷನಲ್ ಸ್ಟಾರ್ ಕಿರೀಟವಾ? ಅಥವಾ ಇಂಟರ್ ನ್ಯಾಷನಲ್ ಸ್ಟಾರ್ ಪಟ್ಟಕ್ಕೇರುವ ಹೊತ್ತಲ್ಲಿ ಹಳ್ಳಿ ಸೊಗಡಿನ ಚಿತ್ರ ಮಾಡಬಾರದು ಎನ್ನುವ ನಿರ್ಧಾರವಾ ?ಸ್ವತಃ ಅಣ್ತಮ್ಮನೇ ಸತ್ಯವನ್ನ ಕ್ಯಾಮರಾ ಮುಂದೆ ಹೇಳೋವರೆಗೂ ಕಾಯಬೇಕು ಕಾಯೋಣ ಅಲ್ಲವೇ.

ಎಂಟರ್ ಟೈನ್ಮೆಂಟ್ ಬ್ಯೂರೋ ಸಿನಿಲಹರಿ

Categories
ಸಿನಿ ಸುದ್ದಿ

ಅನಿರುದ್ಧ್ ವಾಯ್ಸ್!‌‌ ಆಪರೇಶನ್ D ಸಾಂಗ್ಸ್; ಫಸ್ಟ್‌ ಟೈಮ್‌ ಎಲ್ಲಾ ಸಾಂಗ್‌ ಹಾಡಿದ್ರು ಶಾಸ್ತ್ರಿ

ಅದ್ವಿತ ಫಿಲಂ ಫ್ಯಾಕ್ಟರಿ ಬ್ಯಾನರ್‌ನಲ್ಲಿ ನಿರ್ಮಾಣವಾಗಿರುವ “ಆಪರೇಶನ್ D” ಚಿತ್ರದ ಹಾಡುಗಳ ಧ್ವನಿಮುದ್ರಣ ಪೂರ್ಣಗೊಂಡಿದೆ. ಈ ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು, ನಾಲ್ಕನ್ನು ಅನಿರುದ್ಧ್ ಶಾಸ್ತ್ರಿ ಅವರೇ ಹಾಡಿರುವುದು ವಿಶೇಷ. ಚಿತ್ರದ ಎಲ್ಲಾ ಹಾಡುಗಳನ್ನು ತಾವೇ ಹಾಡಿರುವುದು ಇದೇ ಮೊದಲು ಎಂಬುದು ಅನಿರುದ್ಧ್ ಶಾಸ್ತ್ರಿ ಮಾತು. ವೇದಿಕ ಹಾಗೂ ಪೃಥ್ವಿ ಭಟ್ (ಸರಿಗಮಪ ಖ್ಯಾತಿ) ಸಹ ಅನಿರದ್ಧ್ ಅವರೊಂದಿಗೆ ಈ ಚಿತ್ರದ ಹಾಡುಗಳನ್ನು ಹಾಡಿದ್ದಾರೆ.

ಸದ್ಯದಲ್ಲೇ ಆಡಿಯೋ ರಿಲೀಸ್ ಆಗಲಿದೆ. ಈಗಾಗಲೇ ಮಾತಿನ ಭಾಗದ ಚಿತ್ರೀಕರಣ ಮುಗಿದಿದೆ. ನಾಲ್ಕು ಹಾಡು ಹಾಗೂ ಮೂರು ಸಾಹಸ ಸನ್ನಿವೇಶಗಳ ಚಿತ್ರೀಕರಣ ಬಾಕಿಯಿದೆ. ಕಲಾವಿದರಾಗಿ ಕನ್ನಡ ಚಿತ್ರರಂಗ ಪ್ರವೇಶಿಸಿದ ತಿರುಮಲೇಶ್, ಕನ್ನಡದ ಸಾಕಷ್ಟು ಚಿತ್ರಗಳಲ್ಲಿ ನಟಿಸಿದ್ದಾರೆ. ಈ ಚಿತ್ರದ ಮೂಲಕ ನಿರ್ದೇಶಕರಾಗಿದ್ದಾರೆ. ಕ್ರೈಂ ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ನಿರ್ದೇಶಕರೆ ಕಥೆ, ಚಿತ್ರಕಥೆ ಬರೆದಿದ್ದಾರೆ. ರಾಜ ರವಿಶಂಕರ್, ತಿರುಮಲೇಶ್, ಸಿದ್ದರಾಜು, ಪ್ರಶಾಂತ್ ಸಂಭಾಷಣೆ ಬರೆದಿದ್ದಾರೆ.


ವೇದಿಕ ಹಾಗೂ ದ್ವೇಪಾಯನ‌ ಸಿಂಗ ನಾಲ್ಕು ಹಾಡುಗಳಿರುವ ಈ ಚಿತ್ರಕ್ಕೆ ಸಂಗೀತ ನೀಡುತ್ತಿದ್ದಾರೆ. ಕೆಂಪಗಿರಿ ಹಾಗೂ ವೇದಿಕ ಹಾಡುಗಳನ್ನು ರಚಿಸಿದ್ದಾರೆ. ಕಾರ್ತಿಕ್ ಪ್ರಸಾದ್ ಛಾಯಾಗ್ರಹಣವಿದೆ. ವಿಕ್ರಮ್ ಶ್ರೀಧರ್ ಸಂಕಲನವಿದೆ. ತರ್ಮಾಕೋಲ್ ಶ್ರೀನಿವಾಸ್ ಅವರ ಕಲಾ ನಿರ್ದೇಶನವಿರುವ ಈ ಚಿತ್ರದ ಕ್ರಿಯೇಟಿವ್ ಹೆಡ್ ಸುರೇಶ್ ಜಯ ಹರಿಪ್ರಸಾದ್ (ಜೆರ್ರಿ ಮಾಸ್ಟರ್‌) ನೃತ್ಯ ನಿರ್ದೇಶನವಿದೆ. ವಿನೋದ್ ದೇವ್, ಸುಹಾಸ್ ಆತ್ರೇಯ (ಕಮಲಿ ಧಾರಾವಾಹಿ), ರುದ್ರೇಶ್ ಬುದನೂರು ಈ ಚಿತ್ರದ ನಾಯಕರಾಗಿ ನಟಿಸುತ್ತಿದ್ದು, ನಾಯಕಿಯರಾಗಿ ಸ್ನೇಹ ಭಟ್, ಇಂಚರ ಬಿ ಚನ್ನಪ್ಪ ಇದ್ದಾರೆ. ಶಿವಮಂಜು, ವೆಂಕಟಾಚಲ, ರಂಗನಾಥ ಬಿ, ಶ್ರೀಧರ್ ಟಿ ಎಸ್, ಸುರೇಶ್ ಬಿ, ಶಿವಾನಂದ, ಮಹೇಶ್ ಎಸ್ ಕಲಿ ಮುಂತಾದವರು ಈ ಚಿತ್ರದಲ್ಲಿದ್ದಾರೆ.

Categories
ಸಿನಿ ಸುದ್ದಿ

ವ್ಹೀಲ್ ಚೇರ್‌ ರೋಮಿಯೊ ಚಿತ್ರದ ಲಿರಿಕಲ್‌ ಸಾಂಗ್‌ ರಿಲೀಸ್‌ ರಂಗುರಾಟೆ ಹಾಡಿಗೆ ಭರಪೂರ ಮೆಚ್ಚುಗೆ

ಕನ್ನಡದಲ್ಲಿ ವಿಭಿನ್ನ ಕಥೆಯುಳ್ಳ ಸಿನಿಮಾಗಳು ಬಂದಿವೆ. ಬರುತ್ತಲೂ ಇವೆ. ಆ ಸಾಲಿಗೆ ಈಗ ಮತ್ತೊಂದು ನಿರೀಕ್ಷೆ ಹುಟ್ಟಿಸಿರುವ ಸಿನಿಮಾ ಅಂದರೆ, ಅದು “ವ್ಹೀಲ್‌ ಚೇರ್‌ ರೋಮಿಯೊ”. ಹೌದು, ಈ ಚಿತ್ರದ ಹಾಡೊಂದು ರಿಲೀಸ್‌ ಆಗಿದೆ. ವಿಜಯ್ ಪ್ರಕಾಶ್ ಕಂಠಸಿರಿಯಲ್ಲಿ “ರಂಗುರಾಟೆ” ಎಂಬ ಹಾಡು ಇದೀಗ ರಿಲೀಸ್‌ ಆಗಿದ್ದು, ಎಲ್ಲೆಡೆ ಮೆಚ್ಚುಗೆಗೆ ಪಾತ್ರವಾಗಿದೆ.


ವಿಭಿನ್ನ ಕಥಾಹಂದರ ಹೊಂದಿರುವ “ವ್ಹೀಲ್ ಚೇರ್ ರೋಮಿಯೋ” ಚಿತ್ರದ ಈ ಹಾಡಿಗೆ .ನಾಗೇಂದ್ರ ಪ್ರಸಾದ್ ಸಾಹಿತ್ಯವಿದೆ. ಝೇಂಕಾರ್‌ ಮ್ಯೂಸಿಕ್ ಮೂಲಕ ಹಾಡು ರಿಲೀಸ್‌ ಆಗಿದೆ. ಚಿತ್ರಕ್ಕೆ ಬಿ.ಜೆ.ಭರತ್ ಸಂಗೀತವಿದೆ. ಸದ್ಯದಲ್ಲೇ “ವ್ಹೀಲ್ ಚೇರ್ ರೋಮಿಯೋ” ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ವಿಕಲ ಚೇತನವೊಬ್ಬನ ಲವ್‌ಸ್ಟೋರಿ ಚಿತ್ರದ ಹೈಲೈಟ್.‌ ಕಾಲು ಕಳೆದುಕೊಂಡಿರುವ ಹುಡುಗನ ಪಾತ್ರದಲ್ಲಿ ರಾಮ್ ಚೇತನ್ ಅಭಿನಯಿಸಿದ್ದಾರೆ. ಕಣ್ಣಿಲ್ಲದಿರುವ ಹುಡುಗಿಯ ಪಾತ್ರದಲ್ಲಿ ಮಯೂರಿ ಕಾಣಿಸಿಕೊಂಡಿದ್ದಾರೆ. ಸುಚೇಂದ್ರ ಪ್ರಸಾದ್, ರಂಗಾಯಣ ರಘು, ತಬಲ ನಾಣಿ, ಗಿರೀಶ್ ಶಿವಣ್ಣ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.


ತಂದೆ-ಮಗನ‌ ಬಾಂಧವ್ಯದ ಸನ್ನಿವೇಶಗಳು ಚಿತ್ರದ ಮತ್ತೊಂದು ಹೈಲೈಟ್.‌ .ನಟರಾಜ್ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿರುವ ಈ ಚಿತ್ರಕ್ಕೆ ಗುರು ಕಶ್ಯಪ್ ಸಂಭಾಷಣೆ ಬರೆದಿದ್ದಾರೆ. ಅಗಸ್ತ್ಯ ಕ್ರಿಯೇಷನ್ಸ್ ಮೂಲಕ ಟಿ.ವೆಂಕಟಾಚಲಯ್ಯ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. .ನಾಗೇಂದ್ರ ಪ್ರಸಾದ್ ಹಾಗೂ ಜಯಂತ್ ಕಾಯ್ಕಿಣಿ ಅವರು ಬರೆದಿರುವ ನಾಲ್ಕು ಹಾಡುಗಳು ಈ ಚಿತ್ರದಲ್ಲಿದೆ. ಸಂತೋಷ್ ಪಾಂಡಿ ಛಾಯಾಗ್ರಹಣ, ಕಿರಣ್ ಸಂಕಲನ, ಪಳನಿರಾಜ್ ಸಾಹಸ ನಿರ್ದೇಶನ ಹಾಗೂ ಕಂಬಿರಾಜು ನೃತ್ಯ ನಿರ್ದೇಶನವಿದೆ.

Categories
ಸಿನಿ ಸುದ್ದಿ

1980 ಚಿತ್ರದ ಟ್ರೇಲರ್ ಬಿಡುಗಡೆ ಮಾಡಿದ ಸುದೀಪ್;‌ ಇದು ಪ್ರಿಯಾಂಕ ಉಪೇಂದ್ರ ನಟನೆಯ ಚಿತ್ರ

ಪ್ರಿಯಾಂಕ ಉಪೇಂದ್ರ ಅಭಿನಯದ 1980 ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ವಿಶೇಷವೆಂದರೆ, ಈ ಚಿತ್ರದ ಟ್ರೇಲರ್‌ ಅನ್ನು ನಟ ಸುದೀಪ್‌ ಬಿಡುಗಡೆ ಮಾಡಿದ್ದಾರೆ. ಈ ವೇಳೆ ಮಾತಿಗಿಳಿದ ಸುದೀಪ್‌, “ನಾನು ಎರಡು ವರ್ಷಗಳಿಂದ ದೊಡ್ಡ ಪರದೆಯ ಮೇಲೆ ಚಿತ್ರವನ್ನಾಗಲಿ, ಟ್ರೇಲರ್ ಆಗಲಿ ನೋಡಿಲ್ಲ.‌ ತುಂಬಾ ದಿನಗಳ ನಂತರ ಈ ಅವಕಾಶ ತಂದುಕೊಟ್ಟ ಚಿತ್ರತಂಡಕ್ಕೆ ಧನ್ಯವಾದ. ಚಿತ್ರದ ಬಿಡುಗಡೆ ವೇಳೆಗೆ ಈಗಿರುವ ಸಂಕಷ್ಟದ ಪರಿಸ್ಥಿತಿ ದೂರವಾಗಿ, ಜನರಿಂದ ‌ಚಿತ್ರಮಂದಿರ ತುಂಬಿ ತುಳುಕುವಂತಾಗಲಿ ಎಂದು ಶುಭ ಕೋರಿದರು. ಇನ್ನು, ನಟ ಉಪೇಂದ್ರ ಕೂಡ ಈ ವೇಳೆ ಮಾತಿಗಿಳಿದರು. “ವಿಭಿನ್ನ ಕಥೆ ಇಟ್ಟುಕೊಂಡು, ನಿರ್ದೇಶಕರು ಹೊಸತನ್ನು ಹೇಳ ಹೊರಟ್ಟಿದ್ದಾರೆ. ಚಿತ್ರ ನಮ್ಮ ಫ್ಲಿಕ್ಸ್ ನಲ್ಲಿ ಬಿಡುಗಡೆಯಾಗುತ್ತಿದೆ. ಎಲ್ಲರೂ ನೋಡಿ ಹರಸಿ ಅಂದರು.

ಅಂದು ನಟಿ ಪ್ರಿಯಾಂಕ ಉಪೇಂದ್ರ ಹೈಲೈಟ್‌ ಆಗಿದ್ದರು. ಟ್ರೇಲರ್ ಬಿಡುಗಡೆ ಮಾಡಿದ ಸುದೀಪ್ ಹಾಗೂ ಉಪೇಂದ್ರ ಅವರಿಗೆ ಧನ್ಯವಾದ ಹೇಳಿದ ಪ್ರಿಯಾಂಕ, “ನಿರ್ದೇಶಕರು ಆಯ್ಕೆ ಮಾಡಿಕೊಂಡಿರುವ ಕಥೆ ತುಂಬಾ ಚೆನ್ನಾಗಿದೆ. ಪ್ಯಾರಲಲ್ ಯುನಿವರ್ಸಲ್ ನ ಈ ಕಥಾಹಂದರ ನೋಡುಗರ ಮನ ಗೆಲ್ಲಲಿದೆ. ಚಿತ್ರೀಕರಣದ ವೇಳೆ ಲಾಕ್ ಡೌನ್ ಮುಂತಾದ ಸಮಸ್ಯೆ ಎದುರಾದವು. ಇಲ್ಲದಿದ್ದರೆ ಕಳೆದ ಮೇನಲ್ಲಿ ಈ ಚಿತ್ರ ತೆರೆಗೆ ಬರಬೇಕಿತ್ತು. ಇದೇ ಅಕ್ಟೋಬರ್ ೧೫ ಚಿತ್ರ ನಮ್ಮ ಫ್ಲಿಕ್ಸ್ ನಲ್ಲಿ ಬಿಡುಗಡೆಯಾಗಲಿದೆ. ಎಲ್ಲರೂ ನೋಡಿ ಹಾರೈಸಿ ಅನ್ನೋದು ಪ್ರಿಯಾಂಕ ಮಾತು.


“ನನ್ನ ಈ ಕಥೆಗೆ ಕೆಲವು ಇಂಗ್ಲೀಷ್ ಸಿನಿಮಾಗಳು ಸ್ಪೂರ್ತಿ ಎನ್ನಬಹುದು. ಪ್ಯಾರಲಲ್ ಯುನಿವರ್ಸಲ್ ಕಥೆ ಆಧಾರಿತ ಚಿತ್ರ ನನಗೆ ತಿಳಿದ ಮಟ್ಟಿಗೆ ಇದೇ ಮೊದಲು ಎನ್ನಬಹುದು. ಚಿತ್ರ ಚೆನ್ನಾಗಿ ಮೂಡಿ ಬಂದಿದೆ ಎಂಬ ಭರವಸೆ ಇದೆ. ಎಲ್ಲರ ಹಾರೈಕೆ ಇರಲಿ ಎಂಬುದು ನಿರ್ದೇಶಕ ರಾಜ್ ಕಿರಣ್ ಮಾತು. ನಟ ನಿರಂಜನ್ ಸುಧೀಂದ್ರ, ನಿರ್ಮಾಪಕ ಜಾಕ್ ಮಂಜು, ನಮ್ಮ ಫ್ಲಿಕ್ಸ್ ನ ವಿಜಯ ಕುಮಾರ್ ಇದ್ದರು. ಈ ಚಿತ್ರವನ್ನು ಆರ್ ಕೆ ಪ್ರೊಡಕ್ಷನ್ಸ್ ಬ್ಯಾನರ್‌ನಲ್ಲಿ ಪೂಜಾಶ್ರೀ ಹಾಗೂ ಸ್ವಾಮಿರಾಜ್ ನಿರ್ಮಿಸಿದ್ದಾರೆ. ಬಹುತೇಕ ಈ ಚಿತ್ರದ ಚಿತ್ರೀಕರಣ ಶನಿವಾರಸಂತೆ ಸುತ್ತಮುತ್ತ ನಡೆದಿದೆ. ಚಿತ್ರಕ್ಕೆ ರಾಜ್ ಕಿರಣ್ ಕಥೆ, ಚಿತ್ರಕಥೆ ಬರೆದಿದ್ದಾರೆ. ಅರವಿಂದ್ ರಾವ್, ಶ್ರೀಧರ್, ಮುರಳಿ ಶರ್ಮ ಇತರರು ನಟಿಸಿದ್ದಾರೆ. ಚಿಂತನ್ ವಿಕಾಸ್ ಸಂಗೀತವಿದೆ. ಜೀವನ್ ಆಂತೋಣಿ ಛಾಯಾಗ್ರಹಣ ಹಾಗೂ ಶ್ರೀಕಾಂತ್ ಅವರ ಸಂಕಲನವಿದೆ.

Categories
ಸಿನಿ ಸುದ್ದಿ

ಡೈಲಾಗ್ ರೈಟರ್ ಗುರುಗೆ ಹೃದಯಘಾತ; ಕಂಬನಿ ಮಿಡಿದ ಕನ್ನಡ ಚಿತ್ರರಂಗ !

ವಿಧಿ ಅಕ್ಷರಶಃ ಕ್ರೂರಿ ಬಿಡ್ರಿ. ಸ್ಯಾಂಡಲ್‌ವುಡ್ ಗುರುನಾ ಏಕಾಏಕಿ ಕಿತ್ಕೊಂಡ ಆ ವಿಧಿಗೆ ಹಿಡಿಶಾಪ ಹಾಕ್ಲೆಬೇಕು. ತಾವಾಯ್ತು ತಮ್ಮ ಕೆಲಸ ಆಯ್ತು ಅಂತ ಇದ್ದ, ಕಲಾಸರಸ್ವತಿಯನ್ನ ಆರಾಧನೆ ಮಾಡುತ್ತಿದ್ದ, ಅಕ್ಷರಗಳಿಗೆ ಜೀವತುಂಬಿ ಬರೆಯುತ್ತಿದ್ದ, ಗಂಧದಗುಡಿಯಲ್ಲಿ ಬಹುಬೇಡಿಕೆಯ ಸಂಭಾಷಣೆಕಾರರಾಗಿ ಗುರ್ತಿಸಿಕೊಂಡಿದ್ದ, ಗುರುಕಶ್ಯಪ್‌ನ ಜವರಾಯ ಏಕ್ದಮ್ ಕಿತ್ಕೊಂಡಿದ್ದಾನೆ. ಮುಂದೆಂದೂ ತಿರುಗಿ ಬಾರದ ಲೋಕಕ್ಕೆ ಎಳೆದೊಯ್ದಿದ್ದಾನೆ. ಗುರುನಾ ಕಳೆದುಕೊಂಡ ಚಂದನವನ ಕಂಬನಿ ಮಿಡಿಯುತ್ತಿದೆ.

ಗುರುಕಶ್ಯಪ್ ಸ್ಯಾಂಡಲ್‌ವುಡ್ ಅಂಗಳದಲ್ಲಿ ಸಂಭಾಷಣೆಕಾರರಾಗಿ ಹೆಸರು ಮಾಡಿದ್ದರು. ರಮೇಶ್ ಅರವಿಂದ್ ನಟನೆಯ ಪುಷ್ಪಕ ವಿಮಾನ', ಸುಂದರಾಂಗ ಜಾಣ, ೧೦೦ ಚಿತ್ರಗಳಿಗೆ ಸಂಭಾಷಣೆ ಬರೆದಿದ್ದರು. ಪ್ರಿಯಾಂಕ ಉಪೇಂದ್ರ ಅಭಿನಯದದೇವಕಿ’ ಚಿತ್ರಕ್ಕೆ ಡೈಲಾಗ್ಸ್ ಗೀಚಿದ್ದರು. ಇದಲ್ಲದೇ ಸುಮಾರು ೧೫ಕ್ಕೂ ಹೆಚ್ಚು ಚಿತ್ರಗಳಿಗೆ ಸಂಭಾಷಣೆ ಒದಗಿಸಿದ್ದರು. ಗುರುಕಶ್ಯಪ್ ನಿಧನಕ್ಕೆ ರಮೇಶ್ ಅರವಿಂದ್ ಸಂತಾಪ ಸೂಚಿಸಿದ್ದಾರೆ. `ನಾನು ಕಂಡಂತ ಅತಿ ಪ್ರತಿಭಾವಂತರಲ್ಲಿ ಗುರುಕಶ್ಯಪ್ ಕೂಡ ಒಬ್ಬರು. ಒಬ್ಬ ಒಳ್ಳೆಯ ವ್ಯಕ್ತಿ, ಶ್ರೇಷ್ಟ ಬರಹಗಾರರನ್ನು ಕಳೆದುಕೊಂಡಿದ್ದೇವೆ ಓಂ ಶಾಂತಿ’ ಎಂದು ಟ್ವೀಟ್ ಮಾಡಿದ್ದಾರೆ.

ತಾವು ಜೀವತುಂಬಿ ಸಂಭಾಷಣೆ ಒದಗಿಸುತ್ತಿದ್ದ ಸಿನಿಮಾಗಳು ಬೆಳ್ಳಿಪರದೆ ಮೇಲೆ ತೆರೆಕಾಣುವ ಮೊದಲೇ ಗುರುಕಶ್ಯಪ್ ಇಹಲೋಕ ತ್ಯಜಿಸಿದ್ದಾರೆ. ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಭೈರಾಗಿ', ಡಾಲಿ ಧನಂಜಯ್ ಅಭಿನಯಿಸಿರುವಮಾನ್ಸೂನ್ ರಾಗ’, ವ್ಹೀಲ್‌ಚೇರ್ ರೋಮಿಯೋ, ಸತ್ಯಮಂಗಲ ಸೇರಿದಂತೆ ಸಾಕಷ್ಟು ಚಿತ್ರಗಳಿಗೆ ಡೈಲಾಗ್ ಬರೆಯುತ್ತಿದ್ದರು. ಗುರುಕಶ್ಯಪ್ ಅವ್ರದ್ದು ಸಾಯೋ ವಯಸ್ಸಲ್ಲ. ೪೫ ವರ್ಷ ವಯಸ್ಸಾಗಿತ್ತಷ್ಟೇ, ಸೋಮವಾರ ರಾತ್ರಿ ಹೃದಯಘಾತವಾಗಿ ಆಸ್ಪತ್ರೆಗೆ ದಾಖಲಿಸುವ ಮಾರ್ಗ ಮಧ್ಯದಲ್ಲಿ ಕೊನೆಯುಸಿರೆಳೆದಿದ್ದಾರೆ. ಪತ್ನಿ ಹಾಗೂ ಮಗಳನ್ನ ಅಗಲಿದ್ದಾರೆ. ಡಾಲಿ ಧನಂಜಯ್ ಸೋಷಿಯಲ್ ಮೀಡಿಯಾದಲ್ಲಿ ಗುರುಗೆ ಶ್ರದ್ದಾಂಜಲಿ ಅರ್ಪಿಸಿದ್ದಾರೆ.

ಗುರುಕಶ್ಯಪ್ ನಿಧನಕ್ಕೆ ಕನ್ನಡ ಚಿತ್ರರಂಗದ ಹಲವರು ಕಂಬನಿ ಮಿಡಿದಿದ್ದಾರೆ. ಪುಷ್ಪಕ ವಿಮಾನ' ನಿರ್ದೇಶಕ ರವೀಂದ್ರನಾಥ್ಗುರು ದೇವ್ರಂತ ಮನುಷ್ಯರಾಗಿದ್ದರು ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದಿದ್ದಾರೆ’. ಇನ್ಸ್ಪೆಕ್ಟರ್ ವಿಕ್ರಮ್ ಚಿತ್ರಕ್ಕೆ ಗುರು ಸಂಭಾಷಣೆ ಬರೆದುಕೊಟ್ಟಿದ್ದರು. `ಗುರುನಾ ಕಳೆದುಕೊಂಡಿದ್ದು ಕನ್ನಡ ಚಿತ್ರರಂಗಕ್ಕೆ ದೊಡ್ಡ ನಷ್ಟವೇ ಸರಿ ‘ನಟ ರಘುಮುಖರ್ಜಿ ಟ್ವೀಟ್ ಮಾಡಿದ್ದಾರೆ. ಇವರಷ್ಟೇ ಅಲ್ಲ ಕಲಾವಿದರಾದ ಧರ್ಮಣ್ಣ ಕಡೂರ್, ನಟಿ ಆರೋಹಿ ನಾರಾಯಣ್, ಮಮ್ಮಿ ನಿರ್ದೇಶಕ ಲೋಹಿತ್, ನಿರ್ದೇಶಕ ಆಕಾಶ್ ಶ್ರೀವತ್ಸ ಸೇರಿದಂತೆ ಹಲವರು ಗುರು ಅಗಲಿಕೆ ಕಣ್ಣೀರು ಹಾಕಿದ್ದಾರೆ.

  • ಎಂಟರ್‌ಟೈನ್ಮೆಂಟ್ ಬ್ಯೂರೋ ಸಿನಿಲಹರಿ
error: Content is protected !!