Categories
ಸಿನಿ ಸುದ್ದಿ

ಯಜಮಾನರ ಕೈ ಸೇರಿದ ಸೈಮಾ ಕಿರೀಟ !

ಚಾಲೆಂಜಿಂಗ್ ಸ್ಟಾರ್ ದರ್ಶನ್ ಯಜಮಾನ ಚಿತ್ರಕ್ಕೆ ಸೈಮಾ ಪ್ರಶಸ್ತಿ ಸಿಕ್ಕಿದೆ. ಒಡೆಯನ ಅನುಪಸ್ಥಿತಿಯಲ್ಲಿ ಅತ್ಯುತ್ತಮ ನಾಯಕ ನಟ ಪ್ರಶಸ್ತಿಯನ್ನು ಯಜಮಾನ ಚಿತ್ರದ ನಿರ್ಮಾಪಕಿ ಶೈಲಜಾ ನಾಗ್ ‌ಅವರು ಸ್ವೀಕರಿಸಿದ್ದರು. ಹೈದ್ರಾಬಾದ್ ನಿಂದ ಮರಳಿದ ಬೆನ್ನಲ್ಲೇ ಸೈಮಾ ಅವಾರ್ಡ್ ನ ಚಕ್ರವರ್ತಿಗೆ ತಲುಪಿಸಿದ್ದಾರೆ. ಖುಷಿ ಖುಷಿಯಾಗಿ ಕ್ಯಾಮೆರಾಗೆ ಒಂದು ಪೋಸ್ ಕೊಟ್ಟಿದ್ದಾರೆ. ಆ ಸಂತೋಷದ ಗಳಿಗೆಯ ಪಿಕ್ಚರ್ ಇದು.

ಅಂದ್ಹಾಗೇ,2021ರ ಸೈಮಾ ಅವಾರ್ಡ್ ಹೈದ್ರಾಬಾದ್ ಅಖಾಡದಲ್ಲಿ ಅದ್ದೂರಿಯಾಗಿ ತೆರೆಬಿದ್ದಿದೆ. ಯಾವತ್ತೂ ಕೂಡ ಸಿನಿಮಾ ಚಿತ್ರೋತ್ಸವದಲ್ಲಿ ಚಕ್ರವರ್ತಿ ಭಾಗಿಯಾಗಲ್ಲ. ಅದಕ್ಕೆ ಬಲವಾದ ಕಾರಣ ಇದೆ.

ಗುಂಪಲ್ಲಿ ಗೋವಿಂದ ಅಂತ ಎದ್ದುಬರುವ ಜಾಯಮಾನ ಗಂಧದಗುಡಿಯ ಮಂದಿಯ ಕಲಾವಿದರದ್ದಲ್ಲ‌ ಬಿಡಿ.ಯಾವತ್ತು ಕನ್ನಡ ಚಿತ್ರರಂಗದ ಸಿನಿಮಾ ಮಂದಿಗೆ ಫ್ರಂಟ್ ರೋ ನಲ್ಲಿ ಕೂರೋದಕ್ಕೆ ಅವಕಾಶ ಸಿಗುತ್ತೋ, ಅವತ್ತು ಫಿಲ್ಮ್ ಫೆಸ್ಟಿವಲ್ ನಲ್ಲಿ ಭಾಗಿಯಾಗ್ತೇನೆ. ಅಲ್ಲಿವರೆಗೂ, ಯಾವುದೇ ಕಾರಣಕ್ಕೆ ಚಿತ್ರೋತ್ಸವಕ್ಕೆ ಬಂದು ಹಿಂದೆ ಎಲ್ಲೋ ಮೂಲೆಯಲ್ಲಿ ಕನ್ನಡದ ಕಲಾವಿದರೆಲ್ಲ ಕೂರೋದಕ್ಕೆ ನಂಗೆ ಇಷ್ಟವಿಲ್ಲ.

ಹೀಗಾಗಿ, ನಾನು ಬರುವುದಿಲ್ಲ ಎನ್ನುವ ತೀರ್ಮಾನ ಡಿಬಾಸ್ ದರ್ಶನ್ ರದ್ದು. ಅವರ ನಿರ್ಧಾರ ಸರಿಯಾಗಿದೆ ಬಿಡ್ರಿ. ಯಾವತ್ತು ಕನ್ನಡ ಚಿತ್ರರಂಗದ ಸಾಧಕರನ್ನ ಫಿಲ್ಮ್ ಫೆಸ್ಟಿವಲ್ ನಲ್ಲಿ ಮೊದಲ ಸಾಲಿನಲ್ಲಿ ಕೂರಿಸುವ ತೀರ್ಮಾನಕ್ಕೆ ಚಿತ್ರೋತ್ಸವದ ಮಂದಿ ಬರ್ತಾರೋ, ಅಂದೇ ಬಾಕ್ಸ್ ಆಫೀಸ್ ಸುಲ್ತಾನ್ ಹೋಗಲಿ ಅಲ್ಲವೇ.‌

Categories
ಸಿನಿ ಸುದ್ದಿ

ಪೆಟ್ರೋಮ್ಯಾಕ್ಸ್‌ ಟ್ರೇಲರ್‌ನಲ್ಲಿದೆ ಮಜ ಎನಿಸೋ ಡೈಲಾಗ್ಸ್!‌ ನಗುವಿನಷ್ಟೇ, ಬೆಳಕು ಹರಿಸೋ ಸಂದೇಶವೂ ಇಲ್ಲಿದೆಯಂತೆ!!

“ವಾರ್ತೆಗಳು ಓದುತ್ತಿರುವವರು ಗೋಪಾಲ ಉಲ್ಲಾಳ. ಕಂದಕದಲ್ಲಿ ಬೇಸಾಯ ಮಾಡಲು ಸುಮಾರು ೬೫ ವರ್ಷದ ವ್ಯಕ್ತಿ ಮೃತಪಟ್ಟಿರೋದು ಬೆಳಕಿಗೆ ಬಂದಿದೆ. ಸಾಮಾನ್ಯವಾಗಿ ಹೊಲ, ಗದ್ದೆ, ತೋಟಗಳಲ್ಲಿ ಬೇಸಾಯ ಮಾಡುವ ಪದ್ಧತಿ ಬಿಟ್ಟು ನೇರವಾಗಿ ಕಂದಕಕ್ಕೆ ಬಿದ್ದಿರುವ ಬಗ್ಗೆ ಕೃಷಿ ಸಚಿವರು ಬೇಸರ ವ್ಯಕ್ತಪಡಿಸಿದ್ದಾರೆ. ಈಗ ಜಾಹಿರಾತು. ನಂತರ ವಾರ್ತೆಗಳು ಮುಂದುವರೆಯುವುದು…”
ಸದ್ಯದ ಮಟ್ಟಿಗೆ ಮೇಲಿನ ಈ ಡೈಲಾಗ್‌ಗಳು ಸಾಕಷ್ಟು ಸುದ್ದಿ ಮಾಡುತ್ತಿವೆ. ಹೌದು, ಈ ಡೈಲಾಗ್‌ಗಳು ಜೋರು ಸುದ್ದಿಯಾಗಿರೋದಂತೂ ನಿಜ. ಅದು “ಪೆಟ್ರೋಮ್ಯಾಕ್ಸ್”‌ ಸಿನಿಮಾದ್ದು.

“ಪೆಟ್ರೋಮ್ಯಾಕ್ಸ್‌” ಅಂದಾಕ್ಷಣ, ಬೇರೆ ಏನೇನೋ ನೆನಪಾಗುತ್ತೆ. ಆದರೆ, ಇದು ಅದಲ್ಲ. ಬದುಕಿಗೊಂದು ಭರವಸೆ ಮೂಡಿಸಿದ್ದೇ ಈ ಪೆಟ್ರೋಮ್ಯಾಕ್ಸ್‌ ಅನ್ನೋದನ್ನು ಇಡೀ ತಂಡ ಹೇಳುತ್ತಿದೆ. ಅಂದಹಾಗೆ, ಇದು ವಿಜಯ ಪ್ರಸಾದ್‌ ನಿರ್ದೇಶನದ ಚಿತ್ರ. ಇಲ್ಲಿ ನೀನಾಸಂ ಸತೀಶ್‌ ಇದ್ದಾರೆ. ಅವರಿಗೆ ಹರಿಪ್ರಿಯಾ ಜೋಡಿ. ಉಳಿದಂತೆ ಸಾಕಷ್ಟು ಕಲಾವಿದರು ಇಲ್ಲಿ ಕಾಣಿಸಿಕೊಂಡಿದ್ದಾರೆ. ವಿಜಯ್‌ ಪ್ರಸಾದ್‌ ಅಂದಾಕ್ಷಣ, ನೆನಪಾಗೋದೇ ಮತ್ತದೇ “ನೀರ್‌ದೋಸೆ”. ಅಲ್ಲಿ ಬರೀ ಡೈಲಾಗ್‌ನಿಂದಲೇ ಸಾಕಷ್ಟು ಮೋಡಿ ಮಾಡಿದ್ದ ವಿಜಯ್‌ಪ್ರಸಾದ್‌, ಈಗ “ಪೆಟ್ರೋಮ್ಯಾಕ್ಸ್‌” ಹಿಂದೆ ನಿಂತಿದ್ದಾರೆ. ಈ ಚಿತ್ರದ ಟ್ರೇಲರ್‌ ಸೋಮವಾರ ಬಿಡುಗಡೆಯಾಗಿದೆ. ಟ್ರೇಲರ್‌ ಸಾಕಷ್ಟು ವೀಕ್ಷಣೆ ಪಡೆದಿರುವುದಷ್ಟೇ ಅಲ್ಲ, ಅದು ಎಲ್ಲೆಡೆ ಸುದ್ದಿಗೂ ಗ್ರಾಸವಾಗಿದೆ. ಟ್ರೇಲರ್‌ನಲ್ಲಿರುವ ಡೈಲಾಗ್‌ಗಳೇ ಸಿನಿಮಾದ ಜೀವಾಳ ಅನ್ನುವಷ್ಟರ ಮಟ್ಟಿಗೆ ಟ್ರೇಲರ್‌ ಮೂಡಿಬಂದಿದೆ. ಟ್ರೇಲರ್‌ ನೋಡಿದವರಿಗೆ ನಿಜಕ್ಕೂ ಸಿನಿಮಾ ನೋಡಲೇಬೇಕೆನಿಸದೇ ಇರದು. ಅಷ್ಟರಮಟ್ಟಿಗೆ ನಿರ್ದೇಶಕ ವಿಜಯ್‌ಪ್ರಸಾದ್‌ ಅವರು ಅದನ್ನು ಕಟ್ಟಿಕೊಟ್ಟಿದ್ದಾರೆ.

ಟ್ರೇಲರ್‌ ನೋಡಿದವರಿಗೆ ಬರೀ ಪೋಲಿ ಮಾತುಗಳು ಕೇಳಿಸುತ್ತವೆ. ಹಾಗಂತ. ಇಲ್ಲಿ ಬರೀ ಪೋಲಿತನವಿಲ್ಲ. ಸಿನಿಮಾದಲ್ಲಿ ಪೆಟ್ರೋಮ್ಯಾಕ್ಸ್‌ನ ಭರವಸೆಯ ಬೆಳಕೂ ಕೂಡ ಇರಲಿದೆ ಎಂಬುದನ್ನು ಸ್ವತಃ ನಿರ್ದೇಶಕ ವಿಜಯ್‌ ಪ್ರಸಾದ್‌ ಹೇಳಿದ್ದಾರೆ. ಅವರು ಪೋಲಿ ಮಾತುಗಳ ಜೊತೆ ಜೊತೆಯಲ್ಲಿ “ಈ ಪ್ರೆಟ್ರೋಮ್ಯಾಕ್ಸ್‌ ಬದುಕಿನ ಅವಿಭಾಜ್ಯ ಅಂಗ” ಅಂತಾನೂ ಹೇಳಿದ್ದಾರೆ. ಅದು ಹೇಗೆ ಅನ್ನೋದನ್ನು ಸಿನಿಮಾದಲ್ಲೇ ನೋಡಬೇಕು. ಇನ್ನು, ಟ್ರೇಲರ್‌ ಬಗ್ಗೆ ಹೇಳುವುದಾದರೆ, ಒಂದು ಮಜ ಎನಿಸುವ ಟ್ರೇಲರ್‌ ಕಟ್ಟಿಕೊಟ್ಟಿದ್ದಾರೆ. ಅದರಲ್ಲೂ ಸಂಭಾಷಣೆಯೇ ಟ್ರೇಲರ್‌ನ ಹೈಲೈಟ್‌ ಅನ್ನಬಹುದು. ಟ್ರೇಲರ್‌ನ ಒಂದು ಡೈಲಾಗ್‌ ಹೀಗಿದೆ.

” ನಮ್ಮೂರಲ್ಲಿ ಒಬ್ಬ ಹುಡುಗಿ ಇದಾಳೆ. ಬಿಎಸ್ಸಿ ಓದಿದ್ದಾಳೆ. ನೀನು ಏನಾದ್ರೂ ಹೂ ಅಂದ್ರೆ ನಾಳೇನೆ ಕರೆಸಿಬಿಡ್ತೀನಿ” ಅಂತ ಒಂದು ಪಾತ್ರ ಹೀರೋ ಮುಂದೆ ಹೇಳುತ್ತೆ. ಆಗ ಹೀರೋ ಹೇಳುವ ಡೈಲಾಗ್‌ ಇದು. “ದಯವಿಟ್ಟು ಕ್ಷಮಿಸಿ, ನಂದಿಕಂಬ ನಿಲ್ಸೋಕೋಸ್ಕರ ಜಾತ್ರೆನೆ ಮಾಡಿಕೊಳ್ಳೋಕ್ಕಾಗಲ್ಲ…” ಅನ್ನೋ ಮಾತಿಗೆ ಜೋರು ನಗೆ ಬರದೇ ಇರದು. ಟ್ರೇಲರ್‌ನಲ್ಲಿ ಬರುವ ಪ್ರತಿ ಪಾತ್ರಗಳೂ ಕೂಡ ಪಂಚಿಂಗ್‌ ಡೈಲಾಗ್‌ ಹೇಳುವ ಮೂಲಕ ಟ್ರೇಲರ್‌ ಅನ್ನು ಇನ್ನಷ್ಟು ನೋಡಿಸಿಕೊಂಡು ಹೋಗುವಂತೆ ಮಾಡಿವೆ.
ಕೊನೇ ಮಾತು: ನಿರ್ದೇಶಕ ವಿಜಯ್‌ ಪ್ರಸಾದ್‌ ಹೇಳೋದಿಷ್ಟು. “ಪೆಟ್ರೋಮ್ಯಾಕ್ಸ್‌ ಅಂದ್ರೆ ತಾಯಾಣೆ ಅದಲ್ಲ..” ಹೀಗೆ ಅವರು ಹೇಳೋಕೆ ಕಾರಣವೇನು? ಅದನ್ನು ಸಹ ಸಿನಿಮಾದಲ್ಲೇ ನೋಡಬೇಕು. ಮುಖಪುಟದಲ್ಲಿ ಬಂದ ವಿಜಯ್‌ ಪ್ರಸಾದ್‌, ನಮ್ಮ “ಪೆಟ್ರೋಮ್ಯಾಕ್ಸ್‌”ಗೆ ಹೆಗಲು ಕೊಟ್ಟವರಿಗೆಲ್ಲರಿಗೂ ಧನ್ಯವಾದ ತಿಳಿಸಿದ್ದಾರೆ. ಅದರಲ್ಲೂ, ಅಕಾಶದಲ್ಲಿ ಮೋಡಗಳು ಹೇಗೆ ಇರುತ್ತವೋ, ಹಾಗೆಯೇ ಚಿತ್ರದಲ್ಲೂ ಚೇಷ್ಟೇಗಳೂ ಇರುತ್ತವೆ. ನಿಮ್ಮ ಆಶೀರ್ವಾದ ಇರಲಿ ಅಂತಾರೆ ನಿರ್ದೇಶಕರು.

Categories
ಸಿನಿ ಸುದ್ದಿ

ಹ್ಯಾಟ್ರಿಕ್ ಬಾರಿಸೋಕೆ ಮತ್ತೆ ಒಂದಾದ ರಾಜಕುಮಾರ ಜೋಡಿ !

ದೊಡ್ಮನೆ ಅಭಿಮಾನಿ ದೇವರುಗಳು ಹಬ್ಬ ಮಾಡಿ ಸಂಭ್ರಮಿಸುವಂತಹ ಸುದ್ದಿಯೊಂದು ಹೊರಬಿದ್ದಿದೆ.ರಾಜಕುಮಾರ ಹಾಗೂ ಯುವರತ್ನದಂತಹ ಬ್ಲಾಕ್ ಬಸ್ಟರ್ ಹಿಟ್ ಸಿನಿಮಾ ಕೊಟ್ಟಂತಹ ಜೋಡಿ ಮತ್ತೆ ಮತ್ತೆ ಒಂದಾಗಿದೆ. ಮೂರನೇ ಭಾರಿಗೆ ಈ ಜಬರ್ದಸ್ತ್ ಕಾಂಬೋ ಜೊತೆಯಾಗಿರುವುದು ಅಭಿಮಾನಿ ದೇವರುಗಳಲ್ಲಿ ಮಾತ್ರವಲ್ಲ ಮಾಯಬಜಾರ್ ನಲ್ಲೂ ನಿರೀಕ್ಷೆ ಹೆಚ್ಚಿಸಿದೆ.

ಅಪ್ಪು ಮತ್ತು ಸಂತೋಷ್ ಮತ್ತೆ ಒಂದಾಗಬೇಕು ಎನ್ನುವುದು ದೊಡ್ಮನೆ ಭಕ್ತರ ಆಶಯವಾಗಿತ್ತು. ನಿರ್ದೇಶಕ ಸಂತೋಷ್ ಆನಂದ್ ರಾಮ್ ಹೋದಲ್ಲಿ ಬಂದಲ್ಲಿ ಫ್ಯಾನ್ಸ್ ಪವರ್ ಸ್ಟಾರ್ ಗೆ ಮತ್ತೆ ಯಾವಾಗ ಡೈರೆಕ್ಷನ್ ಮಾಡ್ತೀರ ಅಂತ ಕೇಳ್ತಿದ್ದರು. ಫೈನಲೀ, ಪುನೀತ್ ಹಾಗೂ ಸಂತೋಷ್ ಕಾಂಬೋ ಹ್ಯಾಟ್ರಿಕ್ ಬಾರ್ಸೋಕೆ ಸಜ್ಜಾಗಿದೆ.

ರಾಜಕುಮಾರ ಹಾಗೂ ಯುವರತ್ನ ಚಿತ್ರ ನಿರ್ಮಿಸಿದ್ದ ಹೊಂಬಾಳೆ ಸಂಸ್ಥೆಯೇ ಪವರ್ ಫುಲ್ ಕಾಂಬೋ ಚಿತ್ರಕ್ಕೆ ಬಂಡವಾಳ ಹೂಡ್ತಿದೆ. ಈ‌ ಖುಷಿಯ ಸಮಾಚಾರವನ್ನ ಸ್ಟಾರ್ ಡೈರೆಕ್ಟರ್ ಸಂತೋಷ್ ಆನಂದ್ ರಾಮ್ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅಪ್ಪು ಫ್ಯಾನ್ಸ್ ಫುಲ್ ಎಕ್ಸೈಟ್ ಆಗಿದ್ದಾರೆ.

Categories
ಸಿನಿ ಸುದ್ದಿ

ಬಿಗ್ ಬಾಸ್ ಬೆಡಗಿಯ ಆನ್ ಲೈನ್ ಎಂಗೇಜ್ ಮೆಂಟ್ ; ಅಂದು ದೊಡ್ಮನೆಯಲ್ಲಿಈ ನಟಿ ಕಿಚ್ಚನಿಗೆ ಕೇಳಿದ್ದೇನು ಗೊತ್ತಾ ?

ಇದು ಕಲಿಯುಗ ಮಾತ್ರವಲ್ಲ ಸೋಷಿಯಲ್ ಯುಗ. ಕೊರೊನಾ ಬಂದ್ಮೇಲಂತೂ ಸಾಮಾಜಿಕ ಜಾಲತಾಣಕ್ಕೆ ಸಿಕ್ಕಾಪಟ್ಟೆ ಬೇಡಿಕೆ ಇದೆ. ಎಲ್ಲವೂ ಆನ್ ಲೈನ್ ಮಯವಾಗುತ್ತಿದೆ. ಇಂತಹ ಹೊತ್ತಲ್ಲಿ ಬಿಗ್ ಬಾಸ್ ಬೆಡಗಿ ಆನ್ ಲೈನ್ ನಲ್ಲೇ ಎಂಗೇಜ್ಮೆಂಟ್ ಮಾಡಿಕೊಂಡು ಸುದ್ದಿಯಾಗಿದ್ದಾರೆ.

ಬಿಗ್ ಬಾಸ್ ಅತೀ ದೊಡ್ಡ ರಿಯಾಲಿಟಿ ಶೋ. ಕಲರ್ಸ್ ಸಂಸ್ಥೆಯ ಹೆಮ್ಮೆಯ ಕಾರ್ಯಕ್ರಮ. ದೊಡ್ಮನೆಯ ಲ್ಲಿ ನಡೆಯುವ ಈ ಜಬರ್ದಸ್ತ್ ಪ್ರೋಗ್ರಾಂಗೆ ಹಾಗೂ ಕಿಚ್ಚನ ವೀಕೆಂಡ್ ಮಾತಿಗೆ ಮತ್ತು ಮಸ್ತಿಗೆ ವೀಕ್ಷಕರು ಕಣ್ಣರಳಿಸಿ ಕಾಯ್ತಾರೆ. ಇಂತಿಪ್ಪ ಈ ಬಿಗ್ ಹೌಸ್ ಶೋ ಎಂಟು ಸೀಸನ್ ಗಳನ್ನ ಯಶಸ್ವಿಯಾಗಿ ಮುಗಿಸಿದೆ. ಒಂಭತ್ತನೇ ಸೀಸನ್ ಗಾಗಿ ಕಿರುತೆರೆ ವೀಕ್ಷಕರು ಎದುರುನೋಡ್ತಿದ್ದಾರೆ.‌ ಈ ಮಧ್ಯೆ ಬಿಗ್ ಬಾಸ್ ಸೀಸನ್ 8ರ ಸ್ಪರ್ಧಿ ವೈಜಯಂತಿ ಅಡಿಗ ಆನ್ ಲೈನ್ ನಲ್ಲೇ ಎಂಗೇಜ್ ಆಗಿ ಸಪ್ರೈಸ್ ಕೊಟ್ಟಿದ್ದಾರೆ.

ವೈಜಯಂತಿ ಅಡಿಗ ಕೆಲವೇ ಕೆಲವು ದಿನಗಳ ಕಾಲ ಬಿಗ್ ಬಾಸ್ ನಲ್ಲಿದ್ದಂತವರು. ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ದೊಡ್ಮನೆ ಪ್ರವೇಶಿಸಿದ ವೈಜಯಂತಿ, ಅರಮನೆಯಂತಿರುವ ಸೆರೆಮನೆಯಲ್ಲಿ ನನ್ನ ಕೈಲಿ ಇರೋದಕ್ಕೆ ಆಗಲ್ಲ ಅಂತ ಕಣ್ಣೀರಿಟ್ಟಿದ್ದರು. ದಿನಪ್ರತಿಕಣ್ಮಣಿ ಕ್ಯಾಮರಾ ಮುಂದೆ ನಿಂತು ನನ್ನ ಕಳುಹಿಸಿಕೊಡಿ ನನಗೆ ಬಿಗ್ ಬಾಸ್ ಮನೆಯಲ್ಲಿ ಇರೋದಕ್ಕೆ ಆಗ್ತಿಲ್ಲ‌ ಅಂತ ಬೇಡಿಕೊಳ್ತಿದ್ದರು. ಹೀಗಾಗಿ, ಕಿಚ್ಚ ವೈಜಯಂತಿಯವರಿಗೆ ಬಿಗ್ ಬಾಸ್ ಮಹತ್ವ ತಿಳಿಸಿಕೊಟ್ಟು ಬಿಳ್ಕೊಟ್ಟರು. ಇದರಿಂದ ಬ್ರೋಗೌಡ ಶಮಂತ್ ಸೇಫ್ ಆದರು. ಫೈನಲ್ಸ್ ವರೆಗೂ ಟಕ್ಕರ್ ಕೊಟ್ಟರು ಇದೆಲ್ಲ‌ ನಿಮಗೆ ಗೊತ್ತಿದೆ.

ಅಂದು ಬಿಗ್ ಬಾಸ್ ಮನೆಯಿಂದ ಹೊರಬಂದು ಸುದ್ದಿಯಾಗಿದ್ದ ವೈಜಯಂತಿಯವರು ಇಂದು ಆನ್ ಲೈನ್‌ನಲ್ಲೇ ಪ್ರಿಯಕರನ ಜೊತೆಗೆ ನಿಶ್ಚಿತಾರ್ಥ ಮಾಡಿಕೊಂಡು ಸದ್ದು ಮಾಡುತ್ತಿದ್ದಾರೆ. ವೈಜಯಂತಿ ಪ್ರೀತ್ಸಿರುವ ಹುಡುಗ ಸೂರಜ್ ಫಾರಿನ್ ನಲ್ಲಿ ಸೆಟಲ್ ಆಗಿದ್ದಾರೆ. ಕೊರೊನಾ ಆವಾಂತರದಿಂದ ಕರ್ನಾಟಕಕ್ಕೆ ಬರಲಾಗುತ್ತಿಲ್ಲ. ಹೀಗಾಗಿ, ಆನ್ ಲೈನ್ ನಲ್ಲಿ ಲೈವ್ ಬಂದು ನಟಿ ಹಾಗೂ ಬಿಗ್ ಬಾಸ್ ಸ್ಪರ್ಧಿ ಜೊತೆ ಸೂರಜ್ ಎಂಗೇಜ್ ಆಗಿದ್ದಾರೆ. ವೈಜಯಂತಿ ಕುಟುಂಬಸ್ಥರ ಸಮ್ಮುಖದಲ್ಲಿ ನಿಶ್ಚಿತಾರ್ಥ ನೆರವೇರಿದೆ. ಈ ಸುಂದರ ಕ್ಷಣಗಳನ್ನ ಫೋಟೋದಲ್ಲಿ ಸೆರೆಹಿಡಿದು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ನಟಿ ವೈಜಯಂತಿ ಅಡಿಗ ಹಂಚಿಕೊಂಡಿದ್ದಾರೆ.

ನಟಿ ವೈಜಯಂತಿ ಅಡಿಗ ಖ್ಯಾತ ಹೋಟೆಲ್ ಉದ್ಯಮಿ ವಾಸುದೇವ ಅಡಿಗ ಅವರ ಮಗಳು. ಅಮ್ಮಚ್ಚಿಯೆಂಬ ನೆನಪು ಸಿನಿಮಾದಲ್ಲಿ ವೈಜಯಂತಿ ಅಭಿನಯಿಸಿದ್ದಾರೆ. ವೈಲ್ಡ್ ಕಾರ್ಡ್ ಮೂಲಕ ಬಿಗ್ ಬಾಸ್ ಅನುಭವ ಪಡೆದುಕೊಂಡರು. ಈಗ ಬ್ಯಾಚುಲರ್ ಲೈಫ್ ಗೆ ಗುಡ್ ಬೈ ಹೇಳುವ ತವಕದಲ್ಲಿದ್ದಾರೆ. ಪ್ರಿಯಕರ ಸೂರಜ್ ಜೊತೆ ವೈಜಯಂತಿ ದಾಂಪತ್ಯ ಜೀವನಕ್ಕೆ‌ ಕಾಲಿರಿಸಲಿದ್ದಾರೆ. ಸದ್ಯಕ್ಕೆ ಎಂಗೇಜ್ ಆಗಿದ್ದಾರೆ, ಶೀಘ್ರದಲ್ಲೇ ಮದುವೆಯ ಅಪ್ ಡೇಟ್ ನೀಡ್ತಾರೆ.

  • ಎಂಟರ್ ಟೈನ್ಮೆಂಟ್ ಬ್ಯೂರೋ ಸಿನಿಲಹರಿ

Categories
ಸಿನಿ ಸುದ್ದಿ

ಉಪೇಂದ್ರ ಅಂದ್ರೆ ಬರೀ ಸೂಪರ್ ಸ್ಟಾರ್ ಅಲ್ಲ… ಆರ್. ಚಂದ್ರು ಬಿಚ್ಚಿಟ್ಟರು ಉಪೇಂದ್ರ ಅವರ ಇನ್ನೊಂದು ಮುಖ !

ನಟ, ನಿರ್ದೇಶಕ, ಸಂಭಾಷಣೆಕಾರ, ಗೀತ ರಚನೆಕಾರ ಹಾಗೂ ನಿರ್ಮಾಪಕರು ಆದ ಉಪೇಂದ್ರ ಅವರಿಗೆ ಇಂದು ಹುಟ್ಟು ಹಬ್ಬ. ಅವರಿಗೆ ನಾನಾ ನಾಮಶೇಷಣಗಳಿವೆ. ಅವೆಲ್ಲಕ್ಕಿಂದ ಮುಖ್ಯವಾಗಿ ಅವರೊಬ್ಬ ಪ್ರಾಮಾಣಿಕ, ಒಳ್ಳೆಯರು ಎನ್ನುವುದು ನಿರ್ದೇಶಕ ಚಂದ್ರು ಅವರ ಬಣ್ಣನೆ. ಅದು ಹೇಗೆ? ಯಾಕೆ? ಆ ಬಗ್ಗೆ ಆರ್. ಚಂದ್ರು ಹೇಳಿದ್ದೇನು ಎನ್ನುವ ಸ್ಟೋರಿ ಇಲ್ಲಿದೆ ನೋಡಿ….

ಎಲ್ಲರೂ ನಿಮ್ಮನ್ನು ಬುದ್ಧಿವಂತ ಅಂತಾರೆ, ಅದ್ಭುತ ನಿರ್ದೇಶಕ ಅಂತಾರೆ, ರಿಯಲ್ ಸ್ಟಾರ್, ಸೂಪರ್ ಸ್ಟಾರ್ ಅಂತ ಎಲ್ಲ ಹೇಳುತ್ತಾರೆ, ಅದೆಲ್ಲವೂ ಸತ್ಯ. ಆದರೆ ಅದೆಲ್ಲಕ್ಕೂ ಮಿಗಿಲಾಗಿ ನೀವು ಪ್ರಾಮಾಣಿಕರು ಮತ್ತು ಒಳ್ಳೆಯ ಮನುಷ್ಯ….
ನಟ, ನಿರ್ದೇಶಕ ಉಪೇಂದ್ರ ಅವರ ಹುಟ್ಟು ಹಬ್ಬದ ಸಂದರ್ಭದಲ್ಲಿ ಉಪ್ಪಿ ಅವರ ಅಂತರ್ಯದ ಇನ್ನೊಂದು ವ್ಯಕ್ತಿತ್ವವನ್ನು ಹೀಗೆ ಬಿಚ್ಚಿಟ್ಟವರು ‘ಕಬ್ಜ ‘ ಚಿತ್ರದ ನಿರ್ದೇಶಕ ಹಾಗೂ ನಿರ್ಮಾಪಕ ಆರ್. ಚಂದ್ರು. ಅದು ಅವರಿಗೆ ಗೊತ್ತಾಗಿದ್ದು ಉಪೇಂದ್ರ ಅವರೊಂದಿಗಿದ್ದ ಆತ್ಮೀಯ ಒಡನಾಟ. ಅದಕ್ಕೆ ಸಾಕ್ಷಿ ʼಬ್ರಹ್ಮʼ, ʼಐ ಲವ್ ಯೂʼ ಜತೆಗೀಗ’ ಕಬ್ಜ’ ಚಿತ್ರ. ಕನ್ನಡದ ಚಿತ್ರರಂಗದ ಮಟ್ಟಿಗೆ ಆರ್. ಚಂದ್ರು ಒಬ್ಬ ಸಾಹಸಿ ನಿರ್ದೇಶಕ ಕಮ್ ನಿರ್ಮಾಪಕ. ಕಡು ಕಷ್ಟದಲ್ಲಿಯೇ ಸಿನಿಮಾ ಬದುಕನ್ನು ಅಪ್ಪಿ, ಒಪ್ಪಿ ತಲೆಗೆ ನಿರ್ದೇಶಕನ ಹ್ಯಾಟ್ ತೊಟ್ಟು ಗೆದ್ದು ಅಪರೂಪದ ವ್ಯಕ್ತಿ. ಅವರ ಸಾಹಸದ ಸ್ವಭಾವದಿಂದಲೇ ಅವರೀಗ ನಿರ್ಮಾಪಕರೂ‌ ಆಗಿದ್ದಾರೆನ್ನುವುದು ಎಲ್ಲರಿಗೂ ಗೊತ್ತು. ಅದರ ದೊಡ್ಡ ಸಾಹಸವೇ ಈಗ ‘ ಕಬ್ಜ’ ಚಿತ್ರ.

ಕನ್ನಡದ ಮಟ್ಟಿಗೀಗ ಬಹು ನಿರೀಕ್ಷಿತ ಸಿನಿಮಾವೇ ಆಗಿರುವ ʼಕಬ್ಜʼ ಚಿತ್ರವು ಆರ್. ಚಂದ್ರು ಹಾಗೂ ನಟ ಉಪೇಂದ್ರ ಜೋಡಿಯ ಮೂರನೇ ಸಿನಿಮಾ. ಹಾಗೆ ನೋಡಿದರೆ ಅವರ ಹಿಂದಿನ ಅವೆರೆಡು ಸಿನಿಮಾಗಳಿಗೆ ಹೋಲಿಸಿದರೆ ಈ ಸಿನಿಮಾ ಹಲವು ಕಾರಣಕ್ಕೆ ವಿಶೇಷ ಹೊಂದಿರುವ ಸಿನಿಮಾ. ಬಿಗ್‌ ಬಜೆಟ್‌ ಸಿನಿಮಾ ಮಾತ್ರವಲ್ಲ ಚಂದ್ರು ಸಿನಿಮಾ ಕೆರಿಯರ್‌ ನಲ್ಲಿ ಮೊದಲ ಬಾರಿಗೆ ಪ್ಯಾನ್‌ ಇಂಡಿಯಾ ಎನ್ನುವ ಹೆಗ್ಗಳಿಕೆ ಕೂಡ ಅದಕ್ಕಿದೆ. ಹಾಗೆಯೇ ಅದರ ಕಥೆಯ ಜತೆಗೆ ಕಲರ್‌, ಸೆಟ್‌, ಟಿಂಟ್‌ ಜತೆಗೆ ಹಲವು ವೈಶಿಷ್ಟ್ಯಗಳು ಇಲ್ಲಿವೆ. ಅದೇ ಕಾರಣಕ್ಕೆ ಈ ಸಿನಿಮಾ ಶುರುವಾಗಿ ಫಸ್ಟ್‌ ಲುಕ್‌ ರಿವೀಲ್‌ ಆದಾಗಿನಿಂದಲೂ ಸಾಕಷ್ಟು ಕುತೂಹಲ ಮೂಡಿಸಿದೆ. ಅದೇ ಕಾರಣಕ್ಕೆ ಉಪೇಂದ್ರ ಅವರ ಹುಟ್ಟುಹಬ್ಬಕ್ಕೆ ಕಬ್ಜದ ವಿಶೇಷ ಏನು ಅಭಿಮಾನಿಗಳಿಗೆ ನಿರೀಕ್ಷೆಗೆ ಈಗ ಉತ್ತರ ಸಿಕ್ಕಿದೆ.

ಆರ್.‌ ಚಂದ್ರು ಅವರು ಶುಕ್ರವಾರ ಅನೌನ್ಸ್‌ ಮಾಡಿದ್ದ ಹಾಗೆ, ಶನಿವಾರ ಬೆಳಗ್ಗೆಯೇ ಉಪ್ಪಿ ಬರ್ತ್‌ ಡೇ ಗಿಫ್ಟ್‌ ಆಗಿ ಕಬ್ಜ ಚಿತ್ರದ ಸ್ಪೆಷಲ್‌ ಮೋಷನ್‌ ಪೋಸ್ಟರ್‌ ರಿವೀಲ್‌ ಮಾಡಿದ್ದಾರೆ. ಅವರೇ ಹೇಳಿದ್ದ ಹಾಗೆಯೇ ಈ ಪೋಸ್ಟರ್‌ ನಲ್ಲಿ ಕಬ್ಜ ಚಿತ್ರದ ಸೆಟ್‌, ಕಲರ್‌, ಟಿಂಟ್‌ ಎಲ್ಲವನ್ನು ತೋರಿಸುವ ಹಾಗೆ ಪೋಸ್ಟರ್‌ ಡಿಸೈನ್‌ ಮಾಡಿಸಿ, ಸೋಷಲ್‌ ಮೀಡಿಯಾ ಮೂಲಕ ಲಾಂಚ್‌ ಮಾಡಿದ್ದಾರೆ. ಎರಡು ಭಾಷೆಗಳಲ್ಲಿ ಈ ಪೋಸ್ಟರ್‌ ಔಟ್‌ ಆಗಿದೆ. ಆ ಮೂಲಕ ಉಪೇಂದ್ರ ಅವರಿಗೆ ಹುಟ್ಟು ಹಬ್ಬದ ಶುಭಾಶಯ ಕೋರಿದ್ದಾರೆ. ಅದರ ಜತೆಗೆ ಕಜ್ಬ ಚಿತ್ರದ ಬಹುನಿರೀಕ್ಷಿತ ಟೀಸರ್‌ ರಿಲೀಸ್‌ ಡೇಟ್‌ ಅನ್ನು ರಿವೀಲ್‌ ಮಾಡಿದ್ದಾರೆ. ದೀಪಾವಳಿಗೆ ಕಬ್ಜ ಚಿತ್ರದ ಮೋಸ್ಟ್‌ ಎಕ್ಸ್‌ಪೆಕ್ಟೆಡ್‌ ಟೀಸರ್‌ ಲಾಂಚ್‌ ಆಗುತ್ತಿದೆ. ಮೋಷನ್‌ ಪೋಸ್ಟರ್‌ ಲಾಂಚ್‌ ಜತೆಗೆ ಟೀಸರ್‌ ಲಾಂಚ್‌ ಡೇಟ್‌ ಅನ್ನು ಸೋಷಲ್‌ ಮೀಡಿಯಾದಲ್ಲಿ ಅನೌನ್ಸ್‌ ಮಾಡುವ ಸಂದರ್ಭದಲ್ಲಿ ನಿರ್ದೇಶಕ ಚಂದ್ರು ಅವರು ತಾವು ಹತ್ತಿರದಿಂದ ಕಂಡ ಉಪೇಂದ್ರ ಅವರ ವ್ಯಕ್ತಿತ್ವದ ಇನ್ನೊಂದು ಮುಖವನ್ನು ಇಲ್ಲಿ ಬಿಚ್ಚಿಟ್ಟಿರುವುದು ವಿಶೇಷ.

ಎಲ್ಲರೂ ನಿಮ್ಮನ್ನು ಬುದ್ಧಿವಂತ ಅಂತಾರೆ, ಅದ್ಭುತ ನಿರ್ದೇಶಕ ಅಂತಾರೆ, ರಿಯಲ್ ಸ್ಟಾರ್, ಸೂಪರ್ ಸ್ಟಾರ್ ಅಂತ ಎಲ್ಲ ಹೇಳುತ್ತಾರೆ, ಅದೆಲ್ಲವೂ ಸತ್ಯ. ಆದರೆ ಅದೆಲ್ಲಕ್ಕೂ ಮಿಗಿಲಾಗಿ ನೀವು ಪ್ರಾಮಾಣಿಕರು ಮತ್ತು ಒಳ್ಳೆಯ ಮನುಷ್ಯ… ಅಂತ ಚಂದ್ರು ಅವರು ಉಪೇಂದ್ರ ಅವರನ್ನು ಬಣ್ಣಿಸಿದ್ದಾರೆ. ಚಂದ್ರು ಕಂಡಂತೆ ಉಪೇಂದ್ರ ಅವರ ನಿಜವಾದ ವ್ಯಕ್ರಿತ್ವ ಇರೋದೇ ಹಾಗೆ. ಉಪೇಂದ್ರ ಅಂದ್ರೆ ಬುದ್ದಿವಂತ, ಸೂಪರ್‌ ಸ್ಟಾರ್‌, ರಿಯಲ್‌ ಸ್ಟಾರ್‌, ಫಿಲ್ಟರ್‌ ಲೆಸ್‌ ಆಕ್ಟರ್‌ ಎನ್ನುವವುದು ಎಷ್ಟು ನಿಜವೋ ಹಾಗೆಯೇ ಪ್ರಾಮಾಣಿಕರು ಹಾಗೂ ಒಳ್ಳೆಯರು ಹೌದು. ಅವರಿಗೆ ಸಿನಿಲಹರಿ ಕಡೆಯಿಂದಲೂ ಹುಟ್ಟು ಹಬ್ಬದ ಶುಭಾಶಯ.

  • ಎಂಟರ್‌ ಟೈನ್‌ ಮೆಂಟ್‌ ಬ್ಯುರೋ ಸಿನಿ ಲಹರಿ
Categories
ಸಿನಿ ಸುದ್ದಿ

ದೇವರ ಮೊರೆ ಹೋದ ನಟಿ ಸಮಂತಾ ; ಪ್ರಶ್ನೆ ಮಾಡಿದವರಿಗೆ ಬುದ್ದಿ ಇದೆಯಾ ಎಂದ ಸ್ಯಾಮ್ ?

ನಟಿ ಸಮಂತಾ ದೇವರ ಮೊರೆ ಹೋಗಿದ್ದಾರೆ. ತಿರುಪತಿ ತಿಮ್ಮಪ್ಪನ ಸನ್ನಿಧಿಗೆ ಭೇಟಿಕೊಟ್ಟಿದ್ದಾರೆ. ದಾಂಪತ್ಯದಲ್ಲಿ ಕಲಹ, ಅಕ್ಕಿನೇನಿ ಕುಟುಂಬ ತೊರೆದಿದ್ದಾರೆ ಎನ್ನುವ ಅಂತೆ- ಕಂತೆ ಸಮಾಚಾರದ ನಡುವೆ ತಿರುಪತಿ ತಿಮ್ಮಪ್ಪನ ದರ್ಶನ‌ ಪಡೆದು ವಿಶೇಷ ಪೂಜೆ ಸಲ್ಲಿಸಿದ್ದಾರೆ

ಸೌತ್ ಸಿನಿಮಾ ಬ್ಯೂಟಿ, ಮಾಯಬಜಾರ್ ನ ಬಹುಬೇಡಿಕೆಯ ನಟಿ ಸಮಂತಾ ಈಗೀಗ ಹೆಚ್ಚು ಸುದ್ದಿಯಾಗುತ್ತಿದ್ದಾರೆ. ಸಮಂತಾ ಅಕ್ಕಿನೇನಿ ಅಂತ ಇದ್ದ ಹೆಸರನ್ನ ಬದಲಿಸಿಕೊಂಡು ಬರೀ ಎಸ್ ಅಂತ ಹಾಕಿಕೊಂಡಿದ್ದೇ ಬಂತು ದಿನಕ್ಕೊಂದು ರೀತಿ ಸುದ್ದಿಗಳು ಸಮಂತಾ ಸುತ್ತ ಹಬ್ಬುತ್ತವೆ. ಅಕ್ಕಿನೇನಿ ಕುಟುಂಬದಿಂದ ದೂರವಾಗಿರಬಹುದು, ನಾಗಚೈತನ್ಯ ಜೊತೆಗಿನ ಸಂಬಂಧಕ್ಕೆ ಎಳ್ಳುನೀರು ಬಿಟ್ಟಿರಬಹುದು ಅಂತೆಲ್ಲಾ ಮಾತನಾಡಿಕೊಳ್ತಿದ್ದಾರೆ. ಆದರೆ, ಗಾಸಿಪ್ ಟೋಪಿ ಹಾಕಿಕೊಂಡು ಕುಣಿಯುತ್ತಿರುವ ಯಾವ ಸುದ್ದಿಗೂ ಸಮಂತಾ ಆಗಲೀ, ಅಕ್ಕಿನೇನಿ ಕುಟುಂಬಸ್ಥರಾಗಲಿ ಕ್ಲ್ಯಾರಿಟಿ ಕೊಡ್ತಿಲ್ಲ.

ಸಮಂತಾ- ನಾಗಚೈತನ್ಯ ಮಾಧರಿ ಜೋಡಿಯಾಗಬೇಕಿದ್ದವರು. ಲವ್ ಲೈಫ್ ಲೀಡ್ ಮಾಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟವರು. ಇದ್ದರೆ ಇವ್ರಂತ ಜೋಡಿ ಇರಬೇಕು ಅಂತ ಸ್ಯಾಮ್ ಹಾಗೂ ಚೈ ಫ್ಯಾನ್ಸ್ ಗರ್ವದಿಂದ ಹೇಳಿಕೊಂಡಿದ್ದುಂಟು. ರೀಲ್ ನಲ್ಲಿ ಸೈ ಎನಿಸಿಕೊಂಡಿದ್ದ ತಾರಾಜೋಡಿ ರಿಯಲ್ ಲೈಫ್ ನಲ್ಲೂ ಜೈಕಾರ ಹಾಕಿಸಿಕೊಂಡಿದ್ದು ಸತ್ಯ. ಆದರೆ, ಏಕಾಏಕಿ ಮನಂ ಕಪಲ್ಸ್ ಮಧ್ಯೆ ಏನಾಯ್ತು? ಏಕಾಏಕಿ ಎಸ್ ಅಂತ ಸಮಂತಾ ಹೆಸರು ಬದಲಾಯಿಸಿಕೊಳ್ಳೋಕೆ ಕಾರಣ ಏನು? ಇದ್ಯಾವುದಕ್ಕೂ ಸದ್ಯಕ್ಕೆ ಉತ್ತರ ಇಲ್ಲ.

ನಿಜಕ್ಕೂ, ಮಜಿಲಿ ಸಂಸಾರದಲ್ಲಿ ಬಿರುಗಾಳಿ ಎದ್ದಿದೆಯಾ? ಮಹಾನಟಿಯ ಸುಂದರ ದಾಂಪತ್ಯದಲ್ಲಿ ಬಿರುಕು ಮೂಡಿದೆಯಾ? ಕೋಲಾಹಲ ಸೃಷ್ಟಿಯಾಗಿದೆಯಾ? ಒಂದ್ವೇಳೆ ಅಕ್ಕಿನೇನಿ ಕುಟುಂಬದಿಂದ ಬೇರಾಗುವ ಸಂದರ್ಭ- ಸನ್ನಿವೇಶ ಸೃಷ್ಟಿಯಾಗಿದ್ರೆ ಮಾವ ನಾಗಾರ್ಜುನ್‌ ಅವರ ಹುಟ್ಟುಹಬ್ಬಕ್ಕೆ ಶುಭಾಶಯ ತಿಳಿಸುತ್ತಿರಲಿಲ್ಲ ಅನ್ಸುತ್ತೆ, ನಾಗಚೈತನ್ಯ ಲವ್ ಸ್ಟೋರಿಗೆ ವಿಶ್ ಮಾಡ್ತಿರಲಿಲ್ಲ. ಆದರೆ, ಸಮಂತಾ ಈ ಎರಡು ಮಾಡಿದ್ದಾರೆ. ಹೀಗಾಗಿ, ಅಕ್ಕಿನೇನಿ ಕುಟುಂಬಕ್ಕೆ ಗುಡ್ ಬೈ ಹೇಳ್ತಾರೆ ಎನ್ನುವುದು ಡೌಟು. ಗುಡ್ ಬೈ ಹೇಳದಿರಲಿ, ಮನಂ ಫ್ಯಾಮಿಲಿಯ ಜೊತೆಗೆ ಮನಸಾರೆ ಜೀವಿಸಲಿ ಎನ್ನುವುದೇ ಎಲ್ಲರ ಆಶಯ.

ಅಂದ್ಹಾಗೇ, ಅಂತೆ- ಕಂತೆ ಸಮಾಚಾರ ಧಗಧಗಿಸುತ್ತಿರುವ ಹೊತ್ತಲ್ಲಿ
ನಟಿ ಸಮಂತಾ ದೇವರ ಮೊರೆ ಹೋಗಿದ್ದಾರೆ. ತಿರುಪತಿ ತಿಮ್ಮಪ್ಪನ ಸನ್ನಿಧಿಗೆ ಭೇಟಿಕೊಟ್ಟಿದ್ದಾರೆ. ಈ ಹೊತ್ತಲ್ಲಿ ಸಮಂತಾಗೆ ಮಾಧ್ಯಮದವರು ಪ್ರಶ್ನೆ ಮಾಡಿದ್ದಾರೆ.‌ ದೇವಸ್ಥಾನಕ್ಕೆ ಬಂದಾಗ ಪ್ರಶ್ನೆ ಮಾಡಿದ್ದಕ್ಕೆ ಸ್ಯಾಮ್ ಗರಂ ಆಗಿದ್ದಾರೆ. ಬುದ್ದಿ ಇದೆಯಾ ಇಲ್ಲವಾ ಹೇಳಿಬಿಡಿ ಎನ್ನುತ್ತಲೇ ದೇವಸ್ತಾನದ ಒಳಗೆ ಎಂಟ್ರಿಕೊಟ್ಟಿದ್ದಾರೆ. ಸಾಮಾಜಿಕ ಲೋಕದಲ್ಲಿರುವವರಿಗೆ ಹೋದಲ್ಲಿ ಬಂದಲ್ಲಿ ಪ್ರಶ್ನೆಗಳು ಎದುರಾಗುವುದು ಸಹಜ. ಆದರೆ, ನೆಮ್ಮದಿ ಅರಸಿ ದೇಗುಲಕ್ಕೆ ಹೋದಾಗ ವೈಯಕ್ತಿಕವಾಗಿ ಕೆದಕಿ ಕೊಶ್ಚನ್ ಮಾಡಿದಾಗ ಬೇಸರವಾಗೋದು ಸಹಜ.‌ ಆ ಬೇಸರವನ್ನ ಕ್ಯಾಮೆರಾ ಮುಂದೆಯೇ ವ್ಯಕ್ತಪಡಿಸಿದ್ದಾರೆ. ಆದಷ್ಟು ಬೇಗ ಮಹಾನಟಿಯ ಬೇಸರ ದೂರಾಗಲಿ, ವೈಯಕ್ತಿಕ ಬದುಕಲ್ಲಿ ಏನಾದರೂ ಏರುಪೇರಾಗಿದ್ದಲ್ಲಿ ತಿರುಪತಿ ತಿಮ್ಮಪ್ಪ‌ ಅದನ್ನೆಲ್ಲ ಸರಿಪಡಿಸಲಿ. ಮನಂ ಜೋಡಿ ನೂರು ಕಾಲ ಒಂದಾಗಿ ಬಾಳಲಿ ಅಲ್ಲವೇ.

  • ಎಂಟರ್ ಟೈನ್ಮೆಂಟ್ ಬ್ಯೂರೋ ಸಿನಿಲಹರಿ
Categories
ಸಿನಿ ಸುದ್ದಿ

ನಟಿ ಶ್ರುತಿ ಹುಟ್ಟು ಹಬ್ಬಕ್ಕೆ ಭಜರಂಗಿ-2 ಟೀಮ್ ಸ್ಪೆಷಲ್ ಗಿಫ್ಟ್ !

32 ವರ್ಷಗಳ ಸಿನಿಜರ್ನಿಯಲ್ಲಿ ಇದೇ ಮೊದಲ ಭಾರಿಗೆ ಹಿಂದೆಂದೂ‌ ಎತ್ತಿರದ ಅವತಾರ ಎತ್ತಿದ್ದಾರೆ. ಬಹುನಿರೀಕ್ಷೆಯ ಭಜರಂಗಿ 2 ಚಿತ್ರದಲ್ಲಿ ಖಡಕ್ಕಾಗಿ ಕಾಣಿಸಿಕೊಂಡಿದ್ದಾರೆ. ಕೈಯಲ್ಲಿ ಸಿಗಾರ್ ಹಿಡಿದು
ಲುಕ್ ಕೊಟ್ಟಿರುವ ಪೋಸ್ಟರ್ ಈಗಾಗಲೇ ರಿಲೀಸ್ ಆಗಿ ಹವಾ ಎಬ್ಬಿಸಿತ್ತು. ಈಗ ಬರ್ತ್ ಡೇ ಗೆ ಬಿಡುಗಡೆಯಾಗಿರುವ ಮಗದೊಂದು ಲುಕ್ ಧಮ್ ಗಿಂತ ಹೆಚ್ಚೇ ಹುಚ್ಚೆಬ್ಬಿಸಿದೆ.

ಚಂದನವನ ಕಂಡ‌ ಚೆಂದದ ಚೆಲುವೆ ನಟಿ ಶ್ರುತಿ ಬರ್ತ್ ಡೇ ಸಂಭ್ರಮದಲ್ಲಿದ್ದಾರೆ. 45 ನೇ ವಸಂತಕ್ಕೆ ಕಾಲಿಟ್ಟಿರುವ ಶ್ರುತಿ, ಕುಟುಂಬದ ಜೊತೆ ತಿರುಪತಿ ತಿಮ್ಮಪ್ಪನ‌ ದರ್ಶನ ಪಡೆದಿದ್ದಾರೆ. ಅಭಿಮಾನಿಗಳು, ಸ್ನೇಹಿತರು,ಹಿತೈಷಿಗಳು ಸೇರಿದಂತೆ ಎಲ್ಲರಿಂದ ನಟಿ ಶ್ರುತಿಗೆ ಶುಭಾಶಯಗಳ ಮಹಾಪೂರ ಹರಿದುಬರ್ತಿದೆ.

32 ವರ್ಷಗಳ ಸಿನಿಜರ್ನಿಯಲ್ಲಿ ಇದೇ ಮೊದಲ ಭಾರಿಗೆ ಹಿಂದೆಂದೂ‌ ಎತ್ತಿರದ ಅವತಾರ ಎತ್ತಿದ್ದಾರೆ. ಬಹುನಿರೀಕ್ಷೆಯ ಭಜರಂಗಿ 2 ಚಿತ್ರದಲ್ಲಿ ಖಡಕ್ಕಾಗಿ ಕಾಣಿಸಿಕೊಂಡಿದ್ದಾರೆ.
ಕೈಯಲ್ಲಿ ಸಿಗಾರ್ ಹಿಡಿದು ಲುಕ್ ಕೊಟ್ಟಿರುವ ಪೋಸ್ಟರ್ ಈಗಾಗಲೇ ರಿಲೀಸ್ ಆಗಿ ಹವಾ ಎಬ್ಬಿಸಿತ್ತು. ಈಗ ಬರ್ತ್ ಡೇ ಗೆ ಬಿಡುಗಡೆಯಾಗಿರುವ ಮಗದೊಂದು ಲುಕ್ ಧಮ್ ಗಿಂತ ಹೆಚ್ಚೇ ಹುಚ್ಚೆಬ್ಬಿಸಿದೆ.

ಶ್ರುತಿಯವರ ಲುಕ್-ಗೆಟಪ್ ಖಡಕ್ ಖಳನಾಯಕಿ ಅನ್ನೋದು ಮೇಲ್ನೋಟಕ್ಕೆ ಗೊತ್ತಾಗುತ್ತೆ. ಕಾಟನ್ ಸೀರೆ,ಹಣೆಗೆ ಚಂದಿರನಂತಹ ಬಿಂದಿ, ಕೈ ಬೆರಳಿಗೆ ಸಿಲ್ವರ್ ಉಂಗುರ, ಕೈ ಖಡಗ ತೊಟ್ಟು ಸುರಳಿ ಕೂದಲ ಬಿಟ್ಟುಕೊಂಡು ಖಡಕ್ಕಾಗಿಯೇ ಪೋಸ್ ಕೊಟ್ಟಿದ್ದಾರೆ.‌ ನಟಿ ಶ್ರುತಿ ಫ್ಯಾನ್ಸ್ ಮಾತ್ರವಲ್ಲ ಚಿತ್ರಪ್ರೇಮಿಗಳೆಲ್ಲ ಕಾತುರರಾಗಿದ್ದಾರೆ.
ಭಜರಂಗಿ ಅಖಾಡಲ್ಲಿ ಹೇಗಿರಲಿದೆ ನಟಿ ಶ್ರುತಿಯ ಅಬ್ಬರ ಆರ್ಭಟ ಜಸ್ಟ್ ವೇಯ್ಟ್ ಅಂಡ್ ವಾಚ್. ಅತೀ ಶೀಘ್ರದಲ್ಲೇ ಭಜರಂಗಿ 2 ಸಿನಿಮಾ ರಿಲೀಸ್ ಡೇಟ್ ಅನೌನ್ಸ್ ಆಗಲಿದೆ.

Categories
ಸಿನಿ ಸುದ್ದಿ

ಕಡ್ಡಿ ಅಲ್ಲಾಡಿಸಿ ಗೆದ್ದರಾ ಚಡ್ಡಿದೋಸ್ತ್ ; ವರ್ಕೌಟ್ ಆಯ್ತಾ ಸೆವೆನ್ ರಾಜ್ ‘7’ ಸೀಕ್ರೆಟ್‌!?

ಚಿತ್ರ: ಚಡ್ಡಿ ದೋಸ್ತ್‌ ಕಡ್ಡಿ ಅಲ್ಲಾಡಸ್ಬುಟ್ಟ

ನಿರ್ಮಾಪಕ: ಸೆವೆನ್‌ ರಾಜ್‌

ನಿರ್ದೇಶಕ : ಆಸ್ಕರ್‌ ಕೃಷ್ಣ

ತಾರಾಗಣ: ಲೋಕೇಂದ್ರ ಸೂರ್ಯ, ಗೌರಿ ನಾಯರ್‌ ಆಸ್ಕರ್ ಕೃಷ್ಣ, ಸೆವೆನ್‌ ರಾಜ್‌, ಹರ್ಷಿತಾ ಕಲ್ಲಿಂಗಲ್‌‌, ಮಾ.ರಾಕಿನ್ ಇತರರು

ಚಿತ್ರ ವಿಮರ್ಶೆ: ವಿಶಾಲಾಕ್ಷಿ

ಲಾಂಗು- ಮಚ್ಚು ಝಳಪಿಸಲ್ಲ, ಕತ್ತಿ-ಗುರಾಣಿ ಹಿಡಿದು ಬಡಿದಾಡಲ್ಲ ಗುರು ಬರೀ ಕಡ್ಡಿ ಅಲ್ಲಾಡಿಸಿ ಚಿತ್ರಪ್ರೇಮಿಗಳಿಂದ ಜೈಕಾರ ಹಾಕಿಸಿಕೊಳ್ತೀವಿ ಅಂತ ಚಡ್ಡಿದೋಸ್ತ್ ಗಳಿಬ್ಬರು ಡಿಸೈಡ್ ಮಾಡಿದ್ದರು. ಅದರಂತೇ, ಅಖಾಡಕ್ಕೆ ಇಳಿದಿದ್ದಾರೆ. ಕರ್ನಾಟಕದಾದ್ಯಂತ ಅಬ್ಬರ ಆರ್ಭಟ ಶುರುವಾಗಿದೆ. ಚಿತ್ರಮಂದಿರಕ್ಕೆ ಚಡ್ಡಿದೋಸ್ತ್ ಕಡ್ಡಿ ಅಲ್ಲಾಡುಸ್ಬುಟ್ಟ ಸಿನಿಮಾ ಗ್ರ್ಯಾಂಡ್ ಆಗಿಯೇ ಎಂಟ್ರಿಕೊಟ್ಟಿದೆ. ಹೇಗಿದೆ ಸಿನಿಮಾ? ಚಡ್ಡಿದೋಸ್ತ್ ಚಮಕ್ ಮಾಡಿದ್ರಾ? ಬೆಳ್ಳಿತೆರೆ ಹಾಗೂ ಬಾಕ್ಸ್ ಆಫೀಸ್ ಡಬ್ಬದಲ್ಲಿ ಸೆವೆನ್ ರಾಜ್ ‘7’ ಸಸ್ಪೆನ್ಸ್ ಸೀಕ್ರೇಟ್
ವರ್ಕೌಟ್ ಆಯ್ತಾ? ಗಾಂಧಿನಗರದಲ್ಲಿ ಫಸ್ಟ್ ಡೇ ಫಸ್ಟ್ ಶೋ ರೆಸ್ಪಾನ್ಸ್ ಹೇಗಿತ್ತು? ಅದರ ರಿವ್ಯೂ ಪ್ಲಸ್ ರಿಪೋರ್ಟ್ ಇಲ್ಲಿದೆ ನೋಡಿ

ಕೊರೊನಾ ಕಾರಣದಿಂದ ಕಳೆಗುಂದಿದ್ದ ಚಿತ್ರಮಂದಿರಗಳಿಗೆ ಮದುವಣಗಿತ್ತಿಯ ಕಳೆಬಂದಿದೆ. ಥಿಯೇಟರ್ ಮುಂಭಾಗದಲ್ಲಿ ಕಟೌಟ್ ಗಳು ತಲೆ ಎತ್ತಿವೆ, 50 ಪರ್ಸೆಂಟ್ ಅಕ್ಯೂಪೆನ್ಸಿಯಲ್ಲೂ ಹೌಸ್ ಫುಲ್ ಆಗುವಷ್ಟು ಜನ ಚಿತ್ರಮಂದಿರದ ಕಡೆ ಮುಖಮಾಡ್ತಿದ್ದಾರೆ. ಇದರಿಂದ ಬಿಗ್ ಸ್ಕ್ರೀನ್ ವಿಸಿಲ್ ಹೊಡೆಯುತ್ತಿದೆ, ಬಾಕ್ಸ್ ಆಫೀಸ್ ಹಣ ಬಾಚಿಕೊಳ್ಳೋಕೆ ಎದುರುನೋಡ್ತಿದೆ. ಇಂತಹ ಹೊತ್ತಲ್ಲಿ ಚಡ್ಡಿದೋಸ್ತ್ ಗಳು ಕಣಕ್ಕಿಳಿದಿದ್ದಾರೆ.‌

‘ಚಡ್ಡಿದೋಸ್ತ್ ಕಡ್ಡಿ ಅಲ್ಲಾಡುಸ್ಬುಟ್ಟ’ ಸಿನಿಮಾ ಕರ್ನಾಟಕದಾದ್ಯಂತ ಅದ್ದೂರಿಯಾಗಿ ತೆರೆಕಂಡಿದೆ. ಸುಮಾರು 50 ಕ್ಕೂ ಹೆಚ್ಚು ಚಿತ್ರಮಂದಿರಗಳಿಗೆ ಲಗ್ಗೆ ಇಟ್ಟಿದೆ. ಗಾಂಧಿನಗರದ ತ್ರಿವೇಣಿ ಮುಖ್ಯ ಚಿತ್ರಮಂದಿರವಾಗಿದ್ದು, ರೆಡ್ ಅಂಡ್ ವೈಟ್ ಕಾಂಬಿನೇಷನ್‌ ನಲ್ಲಿ ಅಲಂಕಾರಗೊಂಡಿತ್ತು. ಚಿತ್ರತಂಡದ ನಿರೀಕ್ಷೆಗೂ‌ ಮೀರಿದ ಜನ ಸೇರಿದ್ದರು. ಸಾಮಾಜಿಕ ಅಂತರ ಕಾಯ್ದುಕೊಂಡೇ ಫಸ್ಟ್ ಡೇ ಫಸ್ಟ್ ಶೋ ಮುಗೀತು. ಸಿನಿಮಾ ನೋಡಿ ಥಿಯೇಟರ್ ನಿಂದ ಹೊರಬಂದ ಫ್ಯಾನ್ಸ್ ಗಡಾರಿ ಗುಂಗಿನಲ್ಲಿದ್ದರು. ಕುಯ್ಯ ಎಲ್ಲಿ ಎನ್ನುತ್ತಾ? ಫ್ಯಾಷನ್ ರಾಜ್ ನ ಹುಡುಕಾಡುತ್ತಿದ್ದರು. ಅಷ್ಟಕ್ಕೂ , ಆ ಫ್ಯಾಷನ್ ರಾಜ್ ಬೇರಾರು ಅಲ್ಲ ನಿರ್ದೇಶಕ ಆಸ್ಕರ್ ಕೃಷ್ಣ. ಆಸ್ಕರ್ ಕೃಷ್ಣ ಅವರ ಸಿನಿಮಾ ಅಭಿರುಚಿ ಹೇಗೆ ಅಂತ ಗೊತ್ತಿದ್ದವರಿಗೆ ಚಡ್ಡಿದೋಸ್ತ್ ಗಳು ಕಡ್ಡಿ ಅಲ್ಲಾಡಿಸೋದು ಹೇಗೆ ಅಂತ ಗೊತ್ತಿತ್ತು.

ಆದರೆ, ನ್ಯೂ ಕಾಮರ್ಸ್ ಗೆ ಆಸ್ಕರ್ ಅಭಿರುಚಿ ಗೊತ್ತಿರಲಿಲ್ಲ. ಕ್ಯಾಚಿ ಟೈಟಲ್ ವೊತ್ತಿದ್ದ, ಕಿಕ್ಕೇರಿಸಿದ್ದ ಚಡ್ಡಿದೋಸ್ತ್ ಮೇಲೆ ಒಂದಿಷ್ಟು ನಿರೀಕ್ಷೆ ಇಟ್ಟುಕೊಂಡೇ ಚಿತ್ರಮಂದಿರ ಪ್ರವೇಶ ಮಾಡಿದರು. ಹಾಗೇ ಎಂಟ್ರಿಕೊಟ್ಟವರಿಗೆ ಫಸ್ಟ್ ಹಾಫ್‌ಕಿಕ್ ಕೊಡಲಿಲ್ಲ. ಚಡ್ಡಿದೋಸ್ತ್ ಅದ್ಯಾವ ಕಡ್ಡಿ ಅಲ್ಲಾಡಿಸುತ್ತಿದ್ದಾರೆನ್ನುವುದಕ್ಕೆ ಕ್ಲ್ಯಾರಿಟಿ ಸಿಗಲಿಲ್ಲ. ಆದರೆ, ಗಡಾರಿ ಪಾತ್ರಧಾರಿ ಲೋಕೇಂದ್ರ ಸೂರ್ಯ ಹುಡ್ಗೀರ್ ಜೊತೆ ಚೇಷ್ಟೆ ಮಾಡಿಕೊಂಡೇ ತುಂಡೈಕ್ಳಿಗೆ ಮಜಾ ಕೊಟ್ಟರು. ಫ್ಯಾಷನ್ ರಾಜ್ ಕ್ಯಾರೆಕ್ಟರ್ ಮಾಡಿದ್ದ ಆಸ್ಕರ್ ಕೃಷ್ಣ ಅವರು ನ್ಯಾಚುರಲ್ ಸ್ಟಾರ್ ಎನಿಸಿಕೊಳ್ಳುವಂತಹ ಆಕ್ಟಿಂಗ್ ಮಾಡ್ತಿದ್ದರು.
ಕೆಲವೇ ಕೆಲವು ಸೀನ್ ಗಳಲ್ಲಿ ಮಿಂಚಿದ ಕುಯ್ಯ ಪಾತ್ರಧಾರಿ ನೋಡುಗರ ಗಮನ ಸೆಳೆಯುತ್ತಾ ಹೋದ. ಪ್ರೇಕ್ಷಕರಿಗೆ ಪಾಪ್ ಕಾರ್ನ್ ಬೇಕಿತ್ತು‌ ಎನಿಸುವಷ್ಟರಲ್ಲಿ ಡಿ.ಸಿ‌ ಮರ್ಡರ್ ಮೂಲಕ ಇಂಟರ್ ವಲ್‌ಬಿಡ್ತು.

ಪಪ್ಸ್- ಜ್ಯೂಸ್ ತಗೊಂಡು ಬಂದು ಮತ್ತದೇ ಸೀಟ್ ಮೇಲೆ ಕುಳಿತವರಿಗೆ ಸೆಕೆಂಡ್ ಆಫ್‌ ಒಂದಿಷ್ಟು ಇಂಟ್ರೆಸ್ಟಿಂಗ್ ಎನಿಸಿಸ್ತು. ಡಿ.ಸಿ‌ ಕೊಲೆ, ಎಂ.ಎಲ್.ಎ ಸುಫಾರಿ, ದೋಸ್ತಿಗಳ ನಡುವೆ ಬರುವ ಹುಡ್ಗಿ, ಹುಡ್ಗೀರ್ ಶೋಕಿಯಿಂದ ಗೆಳೆಯ ಗಡಾರಿನಾ ಆಚೆ ತರಬೇಕು ಅಂತ ಟ್ರೈ ಮಾಡುವ ಫ್ಯಾಷನ್, ಗಡಾರಿಗೆ ದುಡ್ಡು ಕೊಟ್ಟು ಬೆನ್ನ ಹಿಂದೆ ಕತ್ತಿಮಸೆದ ಎಂಎಲ್‌ಎ, ಗಡಾರಿಗೆ ಲಾಠಿ ರುಚಿ, ಫ್ಯಾಷನ್ ಗೆ ದೀಪಾ ಜೊತೆ ಪ್ರೀತಿ, ಮಾತ್ ಎತ್ತಿದರೆ ರಿಯಲ್ ಎಸ್ಟೇಟ್ ಬ್ಯುಸಿನೆಸ್ ಎನ್ನುವ ಗಡಾರಿಗೆ ಹುಡ್ಗೀರ್ ಶೋಕಿಯಿಂದ ಚಡ್ಡಿದೋಸ್ತ್ ಗಳ ಬುಡಕ್ಕೆ ಬರುತ್ತೆ. ಆಗ ದೋಸ್ತಿಗಳಿಬ್ಬರು ಏನ್ಮಾಡ್ತಾರೆ? ಹೊಡೆದಾಡ್ತಾರಾ ಅಥವಾ ಹೋರಾಡ್ತಾರಾ? ನಿಮ್ಮ ಈ ಕೂತೂಹಲದ ಪ್ರಶ್ನೆಗೆ ಉತ್ತರ ಸಿಗಬೇಕು ಅಂದರೆ ಚಿತ್ರಮಂದಿರಕ್ಕೆ ಹೋಗಿ ಸಿನಿಮಾ ನೋಡಬೇಕು.

ಚಡ್ಡಿದೋಸ್ತ್ ಗಳು ಏನೇ ಆಗಲೀ, ಎಂತಹದ್ದೇ ಸಂದರ್ಭ- ಸನ್ನಿವೇಶ ಎದುರಾಗಲಿ ಎದುರಿಸಿ ನಿಲ್ತಾರೆ. ಹಾಗೆಯೇ, ಒಬ್ಬರನ್ನೊಬ್ಬರು ಬಿಟ್ಟುಕೊಡಲ್ಲ. ಅದೇ ರೀತಿ ಚಡ್ಡಿದೋಸ್ತ್ ಗಳು ಕೂಡ. ಅದ್ಹೇಗೆ‌ ಎನ್ನುವದನ್ನ ನೀವು ಥಿಯೇಟರ್ ನಲ್ಲೇ ನೋಡಬೇಕು.‌ ಆಸ್ಕರ್ ಕೃಷ್ಣ ನಿರ್ದೇಶನ ಮಾಡಿ ಫ್ಯಾಷನ್ ರಾಜ್ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಕಥೆ- ಚಿತ್ರಕಥೆ- ಸಂಭಾಷಣೆ ಬರೆದಿರುವ ಲೋಕೇಂದ್ರ ಸೂರ್ಯ ಗಡಾರಿ ಪಾತ್ರದ ಮೂಲಕ‌ ಕಿಕ್ಕೇರಿಸಿದ್ದಾರೆ. ಚಡ್ಡಿದೋಸ್ತ್ ಗಳಿಗೆ ಬಂಡವಾಳ‌ ಹೂಡಿರುವ ನಿರ್ಮಾಪಕ ಸೆವೆನ್ ರಾಜ್ ಖಳನಾಯಕನಾಗಿ ಮಿಂಚಿದ್ದಾರೆ. ಮನುಷ್ಯನಾಗಿ‌ ಹುಟ್ಟಿದ್ಮೇಲೆ ತಿಂದು ಸಾಯಬೇಕು, ಇಲ್ಲ ಕುಡಿದು ಸಾಯಬೇಕು‌ ಅಂತ ಐಟಂ ಹಾಡಿನಲ್ಲಿ ಹರ್ಷಿತಾ ಕಲ್ಲಿಂಗಲ್‌ ಜೊತೆ ಕುಣಿದು ಕುಪ್ಪಳಿಸಿದ್ದಾರೆ. ಅನಂತ್ ಆರ್ಯನ್ ಒಳ್ಳೆ ಮ್ಯೂಸಿಕ್ ಕೊಟ್ಟಿದ್ದಾರೆ. ಕ್ಯಾಮೆರಾ ಕೈಚಳಕ ತೋರ್ಸೋಕೆ ಒಳ್ಳೆ ಕ್ಯಾಮೆರಾ ಕೊಟ್ಟಿಲ್ಲ ಅನ್ಸುತ್ತೆ. ಕ್ವಾಲಿಟಿ ಕಣ್ಣಿಗೆ ಹೊಡೆಯಲ್ಲ. ಆದರೆ, ಸೆವೆನ್ ಸಂಖ್ಯಾಶಾಸ್ತ್ರದ ಮೇಲೆ ನಂಬಿಕೆ ಇಟ್ಟು 17 ರಂದು ಸೆವೆನ್ ರಾಜ್ ತೆರೆಗೆ ತಂದಿದ್ದಾರೆ. ಬೆಳ್ಳಿತೆರೆ ಹಾಗೂ ಬಾಕ್ಸ್ ಆಫೀಸ್ ನಲ್ಲಿ‌ ಸಂಖ್ಯಾ ಶಾಸ್ತ್ರ ವರ್ಕ್ ಆಗುತ್ತಾ ಕಾದುನೋಡಬೇಕು.

ಸೆವೆನ್ ರಾಜ್ ಅಂತ ಹೆಸರಿಟ್ಟುಕೊಂಡಿದ್ದೇನೆ, ಹೆಸರಿಗೆ ತಕ್ಕಂತೆ
ಕನ್ನಡ ಚಿತ್ರರಂಗಕ್ಕೆ ಏಳು‌ ಸಿನಿಮಾ ಕೊಡಬೇಕು‌ ಅಂತ
ನಿರ್ಧರಿಸಿದ್ದಾರೆ. ಚಡ್ಡಿದೋಸ್ತ್ ಕಡ್ಡಿ ಅಲ್ಲಾಡುಸ್ಬುಟ್ಟ ಚಿತ್ರಾನಾ ಪ್ರೇಕ್ಷಕರು ಕೈಹಿಡಿದರೆ ಮುಂದೆ ಆರು ಸಿನಿಮಾ ಮಾಡ್ತಾರಂತೆ. ಇವತ್ತಿಗೆ ಫಸ್ಟ್ ಡೇ ಫಸ್ಟ್ ಶೋ ನೋಡಿ ಪ್ರೊಡ್ಯೂಸರ್ ಸೆವೆನ್ ರಾಜ್ ಖುಷಿಯಲ್ಲಿದ್ದಾರೆ. ಒಂದು ವಾರ ಕಳೆದ ಮೇಲೂ ಜನರಿಂದ ಚಿತ್ರಕ್ಕೆ ಇದೇ ರೀತಿ ಪ್ರತಿಕ್ರಿಯೆ ಸಿಕ್ಕರೆ ಹಂಡ್ರೆಡ್ ಪರ್ಸೆಂಟ್ ಸೆವೆನ್ ರಾಜ್ ಸಿನಿಮಾ ಇಂಡಸ್ಟ್ರಿಯಲ್ಲಿ ಉಳಿದುಕೊಳ್ತಾರೆ. ಅವರನ್ನ ಕನ್ನಡ ಪ್ರೇಕ್ಷಕರು ಉಳಿಸಿಕೊಳ್ಳಲಿ ಅನ್ನೋದೇ ಸಿನಿಲಹರಿ‌ ಆಶಯ

ಎಂಟರ್ ಟೈನ್ಮೆಂಟ್ ಬ್ಯೂರೋ ಸಿನಿಲಹರಿ

Categories
ಸಿನಿ ಸುದ್ದಿ

ಉಪ್ಪಿ ಬರ್ತ್‌ಡೇ ಗೆ ಅನೌನ್ಸ್‌ ಆಗುತ್ತೆ ʼಕಬ್ಜʼ ಚಿತ್ರದ ಟೀಸರ್‌ ರಿಲೀಸ್‌ ಡೇಟ್‌ : ಮೋಷನ್‌ ಪೋಸ್ಟರ್‌ ಮೂಲಕ ಚಿತ್ರ ಸ್ಪೆಷಲ್‌ ಏನು ಅಂತ ತೋರಿಸುತ್ತಾರಂತೆ ನಿರ್ದೇಶಕ ಆರ್.‌ ಚಂದ್ರು !

ನಟ, ನಿರ್ದೇಶಕ ಉಪೇಂದ್ರ ಅವರಿಗೆ ನಾಳೆ ಹುಟ್ಟು ಹಬ್ಬದ ಸಂಭ್ರಮ. ಕೊರೋನಾ ಕಾರಣ ಈ ಬಾರಿಯೂ ಅವರು ಗ್ರಾಂಡ್‌ ಆಗಿ ಬರ್ತ್‌ ಡೇ ಸೆಲೆಬ್ರೇಷನ್‌ ಮಾಡಿಕೊಳ್ತಿಲ್ಲ ಎನ್ನುವುದನ್ನು ಬಿಟ್ಟರೆ, ಈ ಬಾರಿಯ ಅವರು ಹುಟ್ಟು ಹಬ್ಬಕ್ಕೆ ಹಲವು ಕಾರಣಕ್ಕೆ ತುಂಬಾ ಸ್ಪೆಷಲ್.‌ ಅದು ಯಾಕೆ ಅನ್ನೋದಿಕ್ಕೆ ಈ ವರದಿ ನೋಡಿ…

ನಟ ರಿಯಲ್‌ ಸ್ಟಾರ್‌ ಉಪೇಂದ್ರ ಅವರ ಹುಟ್ಟು ಹಬ್ಬಕ್ಕೆ ಇನ್ನೇನು ಕೇಲವೇ ಗಂಟೆಗಳು ಬಾಕಿ ಇದೆ. ಕೊರೋನಾ ಹಿನ್ನೆಲೆಯಲ್ಲಿ ಈ ವರ್ಷವೂ ಕೂಡ ಅವರು ಅಭಿಮಾನಿಗಳ ಜತೆಗೆ ಅದ್ದೂರಿಯಾಗಿ ಬರ್ತ್‌ ಡೇ ಆಚರಿಸಿಕೊಳ್ಳುತ್ತಿಲ್ಲ ಎನ್ನುವುದನ್ನು ಬಿಟ್ಟರೆ, ಅವರು ಅಭಿನಯಿಸಿದ ಸಿನಿಮಾ ತಂಡಗಳು ತಮ್ಮ ನೆಚ್ಚಿನ ನಟನಿಗೆ ಸ್ಪೆಷಲ್‌ ಗಿಫ್ಟ್‌ ನೀಡೋದಿಕ್ಕೆ ರೆಡಿಯಾಗಿವೆ. ಅದಕ್ಕಿಂತ ಸ್ಪೆಷಲ್‌ ಏನಂದ್ರೆ ಈ ಸಲ ಉಪ್ಪಿ ಅವರು ತಮ್ಮ ಹುಟ್ಟು ಹಬ್ಬ ಕೊಡುಗೆಯಾಗಿ ಅಭಿಮಾನಿಗಳಿಗೆ ಡೈರೆಕ್ಷನ್‌ ಗಿಫ್ಟ್‌ ನೀಡುತ್ತಿದ್ದಾರೆ. ಅಂದ್ರೆ ಉಪ್ಪಿ ನಿರ್ದೇಶನದ ಸಿನಿಮಾ ಘೋಷಣೆಯಾಗುವುದು ಕಾತರಿ ಆಗಿದೆ.

ಈಗಾಗಲೇ ನಟ, ನಿರ್ದೇಶಕ ಉಪ್ಪಿ ಅವರು ಕಥೆ-ಚಿತ್ರಕಥೆ-ಸಂಭಾಷಣೆ ಬರೆದು ನಿರ್ದೇಶನ ಮಾಡಲಿದ್ದಾರೆನ್ನೆಲಾದ ಪೋಸ್ಟರ್ ಲೀಕ್ ಆಗಿದೆ. ಇನ್ನು ವಿಶೇಷ ಅಂದ್ರೆ, `ಪಂಗನಾಮದ’ ಸಿಂಬಲ್ ಇರುವ, ನೀನು ಮತ್ತು ನಾನು ಕಥೆಯನ್ನು ಹೇಳುತ್ತಿರುವ ಫಸ್ಟ್ ಲುಕ್ ಪೋಸ್ಟರ್‌ಗೂ ಈಗಾಗಲೇ ದೊಡ್ಡದಾಗಿ ಸದ್ದು ಮಾಡುತ್ತಿರುವುದರ ನಡುವೆಯೇ, ನಟಿ ರಚಿತಾ ರಾಮ್‌ ತಮ್ಮ ಹಣೆಗೆ ಹಣೆಗೆ ನಾಮಹಾಕಿಸಿಕೊಂಡಿರುವ ಪೋಟೋಗೂ ಸಿಂಕ್ ಆಗುತ್ತಿರುವುದು ಭಾರೀ ಕುತೂಹಲ ಹುಟ್ಟುಸಿದೆ. ಅಂದ್ರೆ, ಉಪ್ಪಿ ನಿರ್ದೇಶನದ ಸಿನಿಮಾದಲ್ಲಿ ರಚಿತಾ ರಾಮ್‌ ನಾಯಕಿ ಆಗಿರಬಹುದಾ ಎನುವ ಕ್ಯೂರಿಯಾಸಿಟಿ ಮನೆ ಮಾಡಿದೆ. ಇದೆಲ್ಲದ್ದಕ್ಕೂ ನಾಳಿನ ತಮ್ಮ ಹುಟ್ಟು ಹಬ್ಬದ ದಿನ ಉಪ್ಪಿ ಉತ್ತರ ನೀಡಬಹುದು ಎಂದೇ ನಿರೀಕ್ಷಿಸಲಾಗಿದೆ. ಅದು ಬಿಟ್ಟರೆ, ಉಪ್ಪಿ ಅವರ ಬರ್ತ್‌ ಡೇ ಗೆ ಆರ್.‌ ಚಂದ್ರು ನಿರ್ದೇಶನದ ʼಕಬ್ಜʼ ಚಿತ್ರದ ಗಿಫ್ಟ್‌ ಏನು ಅಂತ.

ಅದಕ್ಕೆ ದೊಡ್ಡ ಕಾರಣವೂ ಇದೆ. ಉಪ್ಪಿ ಸಿನಿಕೆರಿಯರ್‌ ನಲ್ಲಿಯೇ ʼಕಬ್ಜʼ ಒಂದು ಸ್ಪೆಷಲ್‌ ಮೂವೀ. ಬಿಗ್‌ ಬಜೆಟ್‌ ಸಿನಿಮಾ ಹಾಗೆಯೇ ಇದು ಪ್ಯಾನ್‌ ಇಂಡಿಯಾ ಸಿನಿಮಾ ಕೂಡ. ನಿರ್ದೇಶಕ ಆರ್.‌ ಚಂದ್ರು ನಿರ್ದೇಶನದ ಜತೆಗೆ ನಿರ್ಮಾಣದಲ್ಲೂ ಇಲ್ಲಿ ತೊಡಗಿಸಿಕೊಂಡಿದ್ದಾರೆ. ಈಗಾಗಲೇ ಅದು ಇಡಿಯಾ ಲೆವೆನ್‌ ನಲ್ಲಿಯೇ ಸದ್ದು ಮಾಡಿರುವುದನ್ನು ನೋಡಿದರೆ, ದೊಡ್ಡ ಹವಾ ಸೃಷಿಸುವುದು ಗ್ಯಾರಂಟಿ ಆಗಿದೆ. ಅದೇ ಕಾರಣಕ್ಕೆ ಉಪ್ಪಿ ಬರ್ತ್‌ ಡೇ ಅಂದಾಕ್ಷಣ ಕಬ್ಜ ಸಿನಿಮಾ ತಂಡದ ಸ್ಪೆಷಲ್‌ ಏನು ಅಂತ ಅಭಿಮಾನಿಗಳು ನಿರೀಕ್ಷೆ ಮಾಡುವುದು ಸಹಜ. ಅದೇ ಕಾರಣಕ್ಕೆ ನಿರ್ದೇಶಕ ಆರ್.‌ ಚಂದ್ರು ಅವರು ಚಿತ್ರದ ನಾಯಕ ನಟ ಉಪೇಂದ್ರ ಅವರ ಹುಟ್ಟು ಹಬ್ಬಕ್ಕೆ ಕಬ್ಜ ಚಿತ್ರದ ಸ್ಪೆಷಲ್‌ ಮೋಷಲ್‌ ಪೋಸ್ಟರ್‌ ಲಾಂಚ್‌ ಮಾಡಲು ರೆಡಿಯಾಗಿದ್ದಾರೆ. ಅದರ ಜತೆಗೆ ಕಬ್ಜ ಚಿತ್ರ ಟೀಸರ್‌ ಲಾಂಚ್‌ ದಿನವನ್ನು ನಿರ್ದೇಶಕ ಆರ್.‌ ಚಂದ್ರು ಅವರು ನಾಳೆಯೇ ಅನೌನ್ಸ್‌ ಮಾಡಲಿದ್ದಾರಂತೆ. ಅದು ಈ ಬಾರಿಯ ಉಪೇಂದ್ರ ಅವರ ಬರ್ತ್‌ ಡೇ ಗೆ ಸ್ಪೆಷಲ್.

ʼ ನಂಗೊತ್ತು ಉಪೇಂದ್ರ ಅವರ ಹುಟ್ಟು ಹಬ್ಬಕ್ಕೆ ಅವರ ಅಭಿಮಾನಿಗಳು ಕಬ್ಜ ಚಿತ್ರದ ಏನ್‌ ಬರುತ್ತೆ ಅಂತ ಕಾಯುತ್ತಾರೆ ಅನ್ನೋದು ನಂಗೊತ್ತು. ಅದೇ ಕಾರಣಕ್ಕೆ ನಾವೀಗ ಚಿತ್ರದ ನಾಯಕ ನಟ ಉಪೇಂದ್ರ ಅವರ ಹುಟ್ಟು ಹಬ್ಬಕ್ಕೆ ನಮ್ಮ ಚಿತ್ರದ ಸ್ಪೆಷಲ್‌ ಮೋಷನ್‌ ಪೋಸ್ಟರ್‌ ಲಾಂಚ್‌ ಮಾಡುತ್ತಿದ್ದೇವೆ. ಈಗಾಗಲೇ ಒಂದೆರೆಡು ಪೋಸ್ಟರ್‌ ಲಾಂಚ್‌ ಮಾಡಿದ್ದೇವೆ. ಆದ್ರೆ ಇದು ತುಂಬಾ ಸ್ಪೆಷಲ್‌ . ಯಾಕಂದ್ರೆ ಚಿತ್ರದ ಸೆಟು. ಟಿಂಟು, ಕಲರು ಒಳಗೊಂಡಂತೆ ಚಿತ್ರದ ಒಟ್ಟಾರೆಯ ಒಂದು ಲುಕು ರಿವೀಲ್‌ ಆಗುವ ಹಾಗೆ ಈ ಪೋಸ್ಟರ್‌ ಇರಲಿದೆ. ಅದರ ಜತೆಗೆ ಚಿತ್ರದ ಟೀಸರ್‌ ಲಾಂಚ್‌ ದಿನಾಂಕವನ್ನು ನಾಳೆಯೇ ನಾವು ಅನೌನ್ಸ್‌ ಮಾಡುತ್ತೇವೆ. ಇದು ಉಪೇಂದ್ರ ಅವರ ಬರ್ತ್‌ ಡೇ ಗೆ ಕಬ್ಜ ಚಿತ್ರದ ತಂಡದಿಂದ ನೀಡುವ ಗಿಫ್ಟ್‌ʼ ಎನ್ನುತ್ತಾರೆ ನಿರ್ದೇಶಕ ಆರ್.‌ ಚಂದ್ರು.

  • ಎಂಟರ್‌ ಟೈನ್‌ ಮೆಂಟ್‌ ಬ್ಯೂರೋ ಸಿನಿ ಲಹರಿ

Categories
ಸಿನಿ ಸುದ್ದಿ

ಒರಿಸ್ಸಾದ ಸಮುದ್ರ ತೀರದಲ್ಲಿ ಅರಳಿದ ಡಾ.ವಿಷ್ಣುವರ್ಧನ್ ಅವರ ಮರಳು ಶಿಲ್ಪ!

ಸೆಪ್ಟೆಂಬರ್ 18ರಂದು ಡಾ.ವಿಷ್ಣು ಅವರ 71ನೇ ಜನ್ಮದಿನ. ಆ ಪ್ರಯುಕ್ತ ಮರಳು ಶಿಲ್ಪ ಕಲೆಯ ತವರೂರಾದ ಒರಿಸ್ಸಾದಲ್ಲಿ ಡಾ.ವಿಷ್ಣುವರ್ಧನ್ ಅವರ 6 ಅಡಿ ಎತ್ತರ ಮತ್ತು 15 ಅಡಿ ಅಗಲದ ಮರಳು ಶಿಲ್ಪ ಅರಳಿದೆ

ಒರಿಸ್ಸಾದ ಪುರಿಯ ಮೆರೀನ್ ಡ್ರೈವ್ ಬೀಚ್ ನಲ್ಲಿ ಇದೇ ಮೊದಲ ಬಾರಿಗೆ ಕನ್ನಡ ಕಲಾವಿದರೊಬ್ಬರ ಮರಳು ಶಿಲ್ಪ ಅರಳಿದೆ.

ಆ ಶಿಲ್ಪ ಕನ್ನಡದ ಮೇರು ನಟರಾದ ಡಾ.ವಿಷ್ಣುವರ್ಧನ್ ಅವರದ್ದು. ಇದೇ ಸೆಪ್ಟೆಂಬರ್ 18ರಂದು ಡಾ.ವಿಷ್ಣು ಅವರ 71ನೇ ಜನ್ಮದಿನ. ಆ ಪ್ರಯುಕ್ತ ಮರಳು ಶಿಲ್ಪ ಕಲೆಯ ತವರೂರಾದ ಒರಿಸ್ಸಾದಲ್ಲಿ ಡಾ.ವಿಷ್ಣುವರ್ಧನ್ ಅವರ 6 ಅಡಿ ಎತ್ತರ ಮತ್ತು 15 ಅಡಿ ಅಗಲದ ಮರಳು ಶಿಲ್ಪ ಅರಳಿದೆ.

ಹೆಸರಾಂತ ಶಿಲ್ಪಿ ಮನೀಶ್ ಕುಮಾರ್ ಅವರು ಈ ಶಿಲ್ಪವನ್ನು ರಚಿಸಿದ್ದಾರೆ. ಅದಕ್ಕೆ ಅಗತ್ಯವಾದ ಹಣಕಾಸು ವ್ಯವಸ್ಥೆಯನ್ನು ವೀರಕಪುತ್ರ ಶ್ರೀನಿವಾಸ ಅವರು ಒದಗಿಸಿದ್ದಾರೆ.

error: Content is protected !!