Categories
ಸಿನಿ ಸುದ್ದಿ

ಜಾಕ್ ರಗಳೆ! ಇದು ಹೊಸಬರ ರಂಗು

ಕನ್ನಡ ಚಿತ್ರರಂಗದಲ್ಲೀಗ ಹೊಸ ಪ್ರಯೋಗಗಳ ಪರ್ವ ಕಾಲ. ಹೊಸಬರು ವಿಭಿನ್ನ ಪ್ರಯತ್ನದೊಂದಿಗೆ ಚಿತ್ರರಂಗಕ್ಕೆ ಅಡಿ ಇಡ್ತಿದ್ದಾರೆ. ಅದರ ಮುಂದುವರೆದ ಭಾಗವಾಗಿ ರೂಪಗೊಂಡಿರುವ ಸಿನಿಮಾ ರಂಗು ರಗಳೆ. ಅತೀವ ಕಲಾ ಪ್ರೇಮದಿಂದ ಯುವ ಪ್ರತಿಭೆ ಜಾಕ್ ನಿರ್ದೇಶಿಸುತ್ತಿರುವ ಈ ಚಿತ್ರದ ಮುಹೂರ್ತ ಬೆಂಗಳೂರಿನ ಪಂಚಮುಖಿ ಗಣಪತಿ ದೇಗುಲದಲ್ಲಿಂದು ನೆರವೇರಿದೆ.

ತಮಿಳು ಸಿನಿಮಾಗಳಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿರುವ ಜಾಕ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುವ ಮೂಲಕ ಸ್ವತಂತ್ರ ನಿರ್ದೇಶಕರಾಗಿ ಬಡ್ತಿ ಪಡೆಯುತ್ತಿದ್ದಾರೆ. ರೋಮ್ಯಾಂಟಿಕ್ ಕಾಮಿಡಿ ಕಥಾಹಂದರದ ಈ ಚಿತ್ರದಲ್ಲಿ ಲವ್ ಮಾಕ್ಟೇಲ್ ಖ್ಯಾತಿಯ ಅಭಿಲಾಷ್ ದಳಪತಿ, ಗಟ್ಟಿಮೇಳ ಧಾರಾವಾಹಿ ಖ್ಯಾತಿಯ ಅಭಿದಾಸ್ ಹಾಗೂ ಮೆಟ್ರೋ ಸಾಗಾ ಮೂಲಕ ಮನೆ ಮಾತಾಗಿರುವ ಸುಘೋಷ್ ನಾಯಕರಾಗಿ ನಟಿಸುತ್ತಿದ್ದಾರೆ. ಈ ಬಗ್ಗೆ ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ.

ನಿರ್ದೇಶಕ ಜಾಕ್‌ ಮಾತನಾಡಿ, ನಮ್ಮದು ಬಿಗ್ ಟೀಂ ಇದೆ. ಈ ಪಯಣ ಶುರುವಾಗಿ ಆರೇಳು ತಿಂಗಳಾಯ್ತು. ಎಲ್ಲರೂ ಡೇ ನೈಟ್ ವರ್ಕ್ ಮಾಡ್ತಾ ಇದ್ದಾರೆ. ಎಲ್ಲರಿಗೂ ಧನ್ಯವಾದ ಎಂದರು.

ಸಂಗೀತ ನಿರ್ದೇಶಕ ಪೂರ್ಣಚಂದ್ರ, ಜಾಕ್, ಎಲ್ ವಿ ಪ್ರಸಾದ್ ಅಕಾಡೆಮಿಯಲ್ಲಿ ಟ್ರೈನಿಂಗ್ ತೆಗೆದುಕೊಂಡು, ತಮಿಳು ಸಿನಿಮಾಗಳಿಗೆ ಅಸಿಸ್ಟೆಂಟ್ ಮಾಡಿಕೊಂಡು ಒಳ್ಳೆ ಅನುಭವದ ಜೊತೆಗೆ ಸಿನಿಮಾ ಇಂಡಸ್ಟ್ರಿಗೆ ಎಂಟ್ರಿ ಕೊಡುತ್ತಿದ್ದಾರೆ. ಒಂದು ವರ್ಷದಿಂದ ತಂಡ ಕಟ್ಟಿಕೊಂಡು ಕೆಲಸ ಮಾಡುತ್ತಿದ್ದಾನೆ. ಇಡೀ ಸಿನಿಮಾ ಪಾತ್ರಗಳು ಎಂಟರ್ ಟೈನ್ ಮಾಡುತ್ತವೆ ಎಂದರು.

ಅಭಿಲಾಷ್ ಮಾತಾನಾಡಿ, ಕಂಪ್ಲೀಟ್ ಎಂಟರ್ ಟೈನ್ಮೆಂಟ್ ಪ್ಯಾಕೇಜ್ ಮೂಲಕ ನಾನು ಬರ್ತಿದ್ದೇವು. ಜಾಕ್ ನನಗೂ 12 ವರ್ಷದ ಪರಿಚಯ. ಪೂರ್ಣ ಅಣ್ಣನ ಬಗ್ಗೆ ಮಾತಾಡುವಷ್ಟು ದೊಡ್ಡವರಲ್ಲ. ಜಾಕ್ ನಂಬಿ ನಿರ್ಮಾಪಕರು ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಲವ್ ಮಾಕ್ಟೇಲ್ ನನಗೆ ದೊಡ್ಡ ಸಕ್ಸಸ್ ತಂದುಕೊಟ್ಟಿದೆ. ರಂಗು ರಗಳೆ ಮೂಲಕ ಲೀಡ್ ಆಗಿ ನಟಿಸುತ್ತಿದ್ದೇವೆ. ನಿಮ್ಮ ಬೆಂಬಲ ಇಡೀ ತಂಡದ ಮೇಲೆ ಇರಲಿ ಎಂದು ಹೇಳಿದರು.

ಅಭಿದಾಸ್ ಮಾತಾನಾಡಿ, ಸ್ಕ್ರೀಪ್ಟ್ ಕೇಳಿ ತುಂಬಾ ಇಷ್ಟವಾಯ್ತು. ಮೇ ಮೊದಲ ವಾರವೇ ಚಿತ್ರೀಕರಣ ಶುರು ಮಾಡುವ ಯೋಜನೆ ಹಾಕಿಕೊಂಡಿದ್ದೇವೆ. ಈ ಟೀಂ ಜೊತೆ ಕೆಲಸ ಮಾಡಲು ಎಕ್ಸೈಟ್ ಆಗಿದ್ದೇನೆ. ಗಟ್ಟಿಮೇಳ ಸೀರಿಯಲ್ ನಲ್ಲಿ‌ ನೀವೆಲ್ಲಾ ನೋಡಿ ಇರ್ತಿರಾ. ಈಗ ರಂಗು ರಗಳೆ ಸಿನಿಮಾ ಮೂಲಕ ಹೀರೋ ಆಗಿ ನಟಿಸುತ್ತಿದ್ದೇನೆ ಎಂದರು.

ಸುಘೋಷ್ ಮಾತನಾಡಿ, ಜಾಕ್ ಅಣ್ಣ ನನಗೆ ಫಿಲ್ಮಂ ಇನ್ಸ್ಟಿಟ್ಯೂಟ್ ನಲ್ಲಿ ಸೀನಿಯರ್. ಒಂದು ವರ್ಷದ ಹಿಂದೆಯೇ‌ ನಾನು ಸಿನಿಮಾ ಮಾಡುತ್ತಿದ್ದೇನೆ. ನಿನಗೊಂದು ರೋಲ್ ಇದೆ ಎಂದಿದ್ದರು. ಅದು ಇವತ್ತು‌ ಮುಹೂರ್ತದವರೆಗೂ ಬಂದಿದೆ‌. ನಿಮ್ಮ ಬೆಂಬಲ ನನ್ನ ಮೇಲೆ ನನ್ನ ತಂಡದ ಮೇಲೆ ಇರಲಿ ಎಂದರು.

ಶ್ರೀ ವಿಶ್ವಂ ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ಶಶಿಕಲಾ ಉಮೇಶ್ ರಂಗು ರಗಳೆ ಸಿನಿಮಾಗೆ ಬಂಡವಾಳ ಹೂಡಿದ್ದು, ಪೂರ್ಣಚಂದ್ರ ತೇಜಸ್ವಿ ಸಂಗೀತ, ಸಾಗರ್ ಎಂಬಿ ಸಂಕಲನ, ಶೇಖರ್ ಛಾಯಾಗ್ರಹಣವಿದೆ. ರಂಗಾಯಣ ರಘು ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದು, ಶೀಘ್ರದಲ್ಲಿಯೇ ಉಳಿದ ತಾರಾಬಳಗದ ಬಗ್ಗೆ ಚಿತ್ರತಂಡ ಮಾಹಿತಿ ನೀಡಲಿದೆ.

Categories
ಸಿನಿ ಸುದ್ದಿ

ರಾಘು ಟ್ರೇಲರ್ ಬಂತು: ಚಿನ್ನಾರಿ ಮುತ್ತನಿಗೆ ಶಿವಣ್ಣ ಸಾಥ್

ಕನ್ನಡ ಚಿತ್ರರಂಗದಲ್ಲೀಗ ಪ್ಯಾನ್ ಇಂಡಿಯಾ ಸಿನಿಮಾಗಳ ಜೊತೆ ಜೊತೆಯಲಿ ಭಿನ್ನ-ವಿಭಿನ್ನ ಹಾಗೂ ಪ್ರಯೋಗಾತ್ಮಕ ಚಿತ್ರಗಳು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗುತ್ತಿದೆ. ಇದೇ ಸಾಲಿಗೆ ಒಂದಿಷ್ಟು ಕೌತುಕಗಳನ್ನು ತನ್ನ ಒಡಲಿನಲ್ಲಿಟ್ಟುಕೊಂಡಿರುವ ರಾಘು ಸಿನಿಮಾ ಬಿಡುಗಡೆ ಹೊಸ್ತಿಲಿನಲ್ಲಿ ನಿಂತಿದೆ. ಇದೇ 28ಕ್ಕೆ ರಾಜ್ಯಾದ್ಯಂತ ರಿಲೀಸ್ ಆಗುತ್ತಿರುವ ಚಿನ್ನಾರಿ ಮುತ್ತ ವಿಜಯ್ ರಾಘವೇಂದ್ರ ಹೊಸ ಬಗೆಯ ರಾಘು ಚಿತ್ರದ ಟ್ರೇಲರ್ ಅನಾವರಣಗೊಂಡಿದೆ.

‘ರಾಘು’ಗೆ ಶಿವಣ್ಣ ಸಾಥ್

ಯುವ ನಿರ್ದೇಶಕ ಎಂ ಆನಂದ್ ರಾಜ್ ನಿರ್ದೇಶನದಲ್ಲಿ ಮೂಡಿ ಬರ್ತಿರುವ ರಾಘು ಸಿನಿಮಾ ಕನ್ನಡದ ಮಟ್ಟಿಗೆ ಪ್ರಯೋಗಾತ್ಮಕ ಚಿತ್ರವಾಗಿದೆ. ಹೊಸ ಬಗೆ ಥ್ರಿಲ್ ನೀಡುವ ಈ ಸಿನಿಮಾ ಪೂರ್ತಿ ವಿಜಯ್ ರಾಘವೇಂದ್ರ ಒಬ್ಬರೇ ಇರಲಿದ್ದಾರೆ. ಇದನ್ನು ಸೋಲೋ ಆಕ್ಟಿಂಗ್ ಸಿನಿಮಾ ಎನ್ನಬಹುದು. ಸೋಲೋ ಆಗಿ ಬರ್ತಿರುವ ಚಿನ್ನಾರಿ ಮುತ್ತನಿಗೆ ಶಿವಣ್ಣ ಸಾಥ್ ಕೊಟ್ಟಿದ್ದಾರೆ. ರಾಘು ಟ್ರೇಲರ್ ಗೆ ಶಿವಣ್ಣನ ಪವರ್ ಫುಲ್ ವಾಯ್ಸ್ ಸಿಕ್ಕಿದ್ದು, ಚಿತ್ರದ ಖದರ್ ಮತ್ತಷ್ಟು ಹೆಚ್ಚಿದೆ. ಜೀವನದ ದಾರಿಯಲ್ಲಿ ಕಷ್ಟ ಎಂಬ ಗುಡಿಗಳಿರುತ್ತದೆ. ಆದರೆ ಇವನ ದಾರಿಯಲ್ಲಿ ಆಪತ್ತು ಎಂಬ ಅಡ್ಡ ದೊಡ್ಡ ಗೋಡೆ ನಿಂತಿತ್ತು ಎಂಬ ಪಂಚಿಂಗ್ ಡೈಲಾಗ್ ಮೂಲಕ ರಾಘು ಟ್ರೇಲರ್ ತೆರೆದುಕೊಳ್ಳಲಿದೆ. ಶಿವಣ್ಣನ ವಾಯ್ಸ್, ವಿಜಯ್ ರಾಘವೇಂದ್ರ ಆಕ್ಟಿಂಗ್, ಉದಯ್ ಲೀಲಾ ಛಾಯಾಗ್ರಹಣ, ಸೂರಜ್ ಜೋಯಿಸ್ ಸಂಗೀತ ನೋಡುಗರ ಗಮನಸೆಳೆಯುತ್ತಿದೆ.

ಟ್ರೇಲರ್ ರಿಲೀಸ್ ಬಳಿಕ ಮಾತನಾಡಿದ ವಿಜಯ್ ರಾಘವೇಂದ್ರ, ರಾಘು ಸಿನಿಮಾ ಬಗ್ಗೆ ಮಾತಾನಾಡಲು ತುಂಬಾ ಅಂಶವಿದೆ. ಸಿನಿಮಾ ಹಿಂದೆ ಪಟ್ಟಿರುವ ಶ್ರಮ, ಟೆನ್ನಿಕಾಲಿಟಿಸ್ ಸೇರಿದಂತೆ ತುಂಬಾ ವಿಚಾರಗಳ ಬಗ್ಗೆ ಮಾತಾಡಬೇಕು. 28ಕ್ಕೆ ಸಿನಿಮಾ ರಿಲೀಸ್ ಆಗುತ್ತಿದೆ. ಸಿನಿಮಾದ ಟ್ರೇಲರ್ , ಸಾಂಗ್ ನೋಡಿ ಖುಷಿಪಡುತ್ತಿದ್ದೇವೋ ಅವೆಲ್ಲರದ ಬಗ್ಗೆ ಮಾತನಾಡಲು 28 ಆಗಬೇಕು. ಜನ ಸಿನಿಮಾ ನೋಡಬೇಕು. ಈಗ ಒಂದು ಹಿತವಾದ ಗೊಂದಲವಿದೆ. ಅದು ನಮ್ಮ ರಾಘು ಸಿನಿಮಾದ ಬಲ. ಸೋಲೋ ಆಕ್ಟರ್ ಚಿತ್ರವಾಗಿದ್ದು, ಒಬ್ಬನೇ ಕಲಾವಿದ ಇಡೀ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಾರೆ. 28ಕ್ಕೆ ಥಿಯೇಟರ್ ಗೆ ಬಂದು ಸಿನಿಮಾ ನೋಡಿ ಬೆಂಬಲಿಸಿ ಎಂದರು.

ನಿರ್ದೇಶಕ ಎಂ.ಆನಂದ್ ರಾಜ್ ಮಾತನಾಡಿ, ರಾಘು ಪಯಣಕ್ಕೆ ಬೆಂಬಲ ಕೊಟ್ಟ ನಿರ್ಮಾಪಕರಿಗೆ ಧನ್ಯವಾದ. ಎಲ್ಲಾ ಆಕ್ಟರ್ಸ್ಸ್ ಹಾಕಿಕೊಂಡು ಸಿನಿಮಾ ಮಾಡಿದಾಗ ನಿರ್ಮಾಪಕರು ಸಿಗುವುದು ಕಷ್ಟ. ಇನ್ನೂ ಸೋಲೋ ಆಕ್ಟರ್ ಇಟ್ಟುಕೊಂಡು ಕಥೆ ಎಣೆದು ಸಿನಿಮಾ ಮಾಡುವುದು ತುಸು ಕಷ್ಟವೇ. ಇದು ಸಂಪೂರ್ಣ ಟೆಕ್ನಿಕಲ್ ಚಿತ್ರವಾಗಿದ್ದು, ಸೋಲೋ ಆಕ್ಟರ್ ಕಥೆಯಾಗಿದ್ರೂ ಸಾಂಗ್ಸ್, ಫೈಟ್ಸ್, ಟ್ವಿಸ್ಟ್ ಎಲ್ಲವೂ ಇದೆ. ಇದೇ 28ಕ್ಕೆ ಥಿಯೇಟರ್ ನಲ್ಲಿ ಸಿನಿಮಾ ನೋಡಿ ಎಂಜಾಯ್ ಮಾಡಿ ಎಂದರು.

ನಿರ್ಮಾಪಕ ರನ್ವಿತ್ ಶಿವಕುಮಾರ್, ರಾಘು ಬರೀ ಸಿನಿಮಾವಲ್ಲ. ನಮ್ಮ ತಂಡಕ್ಕೆ ಒಂದು ಎಮೋಷನ್. ಹೊಸ ತಂಡ ಹೊಸ ಪ್ರೊಡಕ್ಷನ್ ಜೊತೆ ಬಂದಾಗ ಜನರಿಗೆ ತಲುಪಿಸಲು ಇರುವ ಸೇತುವ ಮಾಧ್ಯಮ. ಆರಂಭದಿಂದ ಇಲ್ಲಿವರೆಗೂ ಅದೇ ಪ್ರೀತಿ ತೋರಿಸುತ್ತಿದ್ದೀರ. ಅಂದುಕೊಂಡತೆ ಅಚ್ಚುಕಟ್ಟಾಗಿ ಸಿನಿಮಾ ಮುಗಿಸಿಕೊಂಡಿದ್ದೇವೆ. ದೊಡ್ಮನೆಯಿಂದ ಬೆಂಬಲ ಸಿಕ್ಕಿದೆ. ಶಿವಣ್ಣ ಸಿನಿಮಾ ನೋಡಿ ಖುಷಿಪಟ್ಟರು. ಕನ್ನಡಕ್ಕೆ ನಮ್ಮ ತಂಡದಿಂದ ಒಳ್ಳೆ ಸಿನಿಮಾ ಕೊಟ್ಟಿದ್ದೇವೆ. ಎಲ್ಲರೂ ಸಿನಿಮಾ ನೋಡಿ ಹಾರೈಸಿ ಎಂದರು.

ನಿರ್ಮಾಪಕ ಅಭಿಷೇಕ್ ಕೋಟ ಮಾತನಾಡಿ, ರಾಘು ಸರ್ ಅದ್ಭುತ ಕಲಾವಿದರು. ಆನಂದ್ ಗೆ ಧನ್ಯವಾದ. ಮುಂದಿನ ದಿನಗಳಲ್ಲಿ ಮತ್ತಷ್ಟು ಒಳ್ಳೆ ಸಿನಿಮಾ ಮಾಡಿ. ಇದೇ 28ಕ್ಕೆ ಥಿಯೇಟರ್ ನಲ್ಲಿ ಸಿನಿಮಾ ನೋಡಿ ಎಂದರು.

ಡಿಕೆ ಎಸ್ ಸ್ಟುಡಿಯೋ, ಕೋಟಾ ಫಿಲಂ ಫ್ಯಾಕ್ಟರಿ ಪ್ರೊಡಕ್ಷನ್ ನಡಿ ರಾಘು ಸಿನಿಮಾವನ್ನು ರನ್ವಿತ್ ಶಿವಕುಮಾರ್ ಹಾಗೂ ಅಭಿಷೇಕ ಕೋಟ ನಿರ್ಮಾಣ ಮಾಡಿದ್ದಾರೆ. ತಾಂತ್ರಿಕವಾಗಿ ಶ್ರೀಮಂತಿಕೆಯಿಂದ ಕೂಡಿದ್ದು, ಉದಯ್ ಲೀಲಾ ಛಾಯಾಗ್ರಹಣ, ವಿಜತೇತ್ ಚಂದ್ರ ಸಂಕಲನ, ರಿತ್ವಿಕ್ ಮುರುಳಿದರ್ ಹಿನ್ನೆಲೆ ಸಂಗೀತ ಚಿತ್ರಕ್ಕಿದೆ. ಸೂರಜ್ ಜೋಯಿಸಿ ಸಂಗೀತ ನಿರ್ದೇಶನ ಮಾಡಿರುವ ಚಿತ್ರದ ಎರಡು ಹಾಡುಗಳಿಗೆ ವಾಸುಕಿ ವೈಭವ್ ಹಾಗೂ all ok ಧ್ವನಿಯಾಗಿದ್ದಾರೆ.

Categories
ಸಿನಿ ಸುದ್ದಿ

ಜನಪದ ಸಂತ ಹಂಸಲೇಖ! ಎಸ್ ಪಿ ಬಿ ಹಾಡು ಶ್ರೀಮಂತ: ಇದು ಶ್ರೀಮಂತ ರೈತನ ವಿಷಯ…

ಹಂಸಲೇಖ ಹಾಗು ಎಸ್ ಪಿ ಬಿ ಕಾಂಬಿನೇಷನ್ ಹಾಡುಗಳು ಯಾರಿಗೆ ಗೊತ್ತಿಲ್ಲ ಹೇಳಿ? ಇವರಿಬ್ಬರ ಕಾಂಬಿನೇಷನ್ ನಲ್ಲಿ ಮೂಡಿಬಂದ ಹಾಡುಗಳು ಎವರ್ ಗ್ರೀನ್ ಅನ್ನೋದನ್ನ ಪ್ರತ್ಯೇಕವಾಗಿ ಹೇಳಬೇಕಿಲ್ಲ. ಸದಾ ಗುನುಗುವಂತಹ ಸುಪರ್ ಹಿಟ್ ಹಾಡು ಕೊಟ್ಟ ಈ ಜೋಡಿ ಮತ್ತೊಂದು ಅದ್ಬುತ ಗೀತೆಗೆ ಸಾಕ್ಷಿಯಾಗಿದೆ. ಅದುವೇ ಶ್ರೀಮಂತ ಸಿನಿಮಾ ಹಾಡು. ಎಸ್ ಪಿ ಬಿ ಕೊನೆಯದಾಗಿ ಹಾಡಿದ ಕನ್ನಡದ ಶ್ರೀಮಂತ ಸಿನಿಮಾ ಗೀತೆ ಎಂಬುದು ವಿಶೇಷ.

ಹೌದು, ಎಸ್ ಪಿ ಬಿ ಈಗ ನಮ್ಮೊಂದಿಗಿಲ್ಲ. ಆದರೂ ಅವರು ಬಿಟ್ಟು ಹೋದ ಸಾವಿರಾರು ಹಾಡುಗಳು ರಿಂಗಣಿಸುತ್ತಲೇ ಇವೆ. ಅದರಲ್ಲೂ ಹಂಸಲೇಖ ಜೊತೆಗಿನ ಕಾಂಬಿನೇಷನ್ ಹಾಡುಗಳನ್ನು ಮರೆಯೋಕೆ ಸಾಧ್ಯವಿಲ್ಲ. ಈಗ ಈ ಜೋಡಿ ಅಂಥದ್ದೇ ಮರೆಯದ ಹಾಡೊಂದನ್ನು‌ ನೀಡಿದೆ. ಎಸ್ ಪಿ ಬಿ ಹಾಡಿದ ಕೊನೆಯ ಗೀತೆ ಶ್ರೀಮಂತ ಸಿನಿಮಾದಲ್ಲಿದೆ.

ರೈತನೇ ಜಗತ್ತಿನ ಅತಿದೊಡ್ಡ ಶ್ರೀಮಂತ. ಅಂತ ಎಲ್ಲರೂ ಹೇಳುವುದು ಗೊತ್ತು. ಅದು ಹೇಗೆ ಎಂಬುದನ್ನು ನಿರ್ದೇಶಕ ಹಾಸನ ರಮೇಶ್ ತಮ್ಮ ‘ಶ್ರೀಮಂತ’ ಸಿನಿಮಾ ಮೂಲಕ ತೋರಿಸಿದ್ದಾರೆ. ರೈತನೇ ನಿಜವಾದ ಶ್ರೀಮಂತ ಎಂಬ ಸತ್ಯವನ್ನು ಈ ಅದ್ದೂರಿ ಸಿನಿಮಾ ಮೂಲಕ ಜನರಿಗೆ ಹೇಳೋಕೆ ತಂಡ ಸಜ್ಜಾಗಿದೆ.

ಈ ಸಿನಿಮಾಗೆ ಹಂಸಲೇಖ ಸಂಗಿತ ನೀಡಿದ್ದಾರೆ. ಇಲ್ಲಿನ ವಿಶೇಷ ಅಂದರೆ, ಎಸ್ ಪಿ ಬಿ ವಿಶೇಷ ಗೀತೆಯೊಂದಕ್ಕೆ ಧ್ವನಿಯಾಗಿದ್ದಾರೆ. ಚಿತ್ರದ ‘ಜನಪದ ಸಂತ’ ಎಂಬ ಗೀತೆ ಹಾಡುವ ಮೂಲಕ ಸಿನಿಮಾದ ಶ್ರೀಂಮತಿಕೆ ಹೆಚ್ಚಿಸಿದ್ದಾರೆ.

ಈಗಾಗಲೇ ಸಿನಿಮಾ ತಂಡ ಬಿಡುಗಡೆಗೂ ಮುನ್ನ ಭರ್ಜರಿ ಪ್ರಚಾರ ಮಾಡುತ್ತಿದೆ. ಇಲ್ಲಿ ಇನ್ನೊಂದು ವಿಶೇಷ ಅಂದರೆ, ರಿಯಲ್ ಹೀರೋ ಸೋನುಸೂದ್ ಅವರು ರೈತರಾಗಿಯೇ ಇಲ್ಲಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಹೊಸ ಕಲಾವಿದರ ಸಮ್ಮಿಲನ ಚಿತ್ರದಲ್ಲಿದೆ.

ಹಂಸಲೇಖ ಅವರ ಸಂಗೀತದ ಹಾಡುಗಳು ಬಿಡುಗಡೆ ಆಗಿದ್ದು ಕೇಳುಗರ ಮನಗೆದ್ದಿವೆ. ಸದ್ಯ ಮೇ ನಲ್ಲಿ ಸಿನಿಮಾ ತೆರೆಗೆ ಅಪ್ಪಳಿಸಲಿದೆ. ರಾಜ್ಯದ ರೈತರು ಕೂಡ ಈ ಶ್ರೀಮಂತನಿಗಾಗಿ ಎದುರು ನೋಡುತ್ತಿದ್ದಾರೆ. ಅಂದಹಾಗೆ ಮೇ 19 ಕ್ಕೆ ಶ್ರೀಮಂತ ರಿಲೀಸ್ ಆಗಲಿದೆ.

Categories
ಸಿನಿ ಸುದ್ದಿ

ಇಂಟ್ರೆಸ್ಟಿಂಗ್ ಮಾಯಾವಿ ಹಿಂದೆ ಶಿವಾಜಿ ! ಕೊಲೆಗಳ ರೋಚ’ಕತೆ’ಯ ಕುತೂಹಲ

ಚಿತ್ರ ವಿಮರ್ಶೆ

ಚಿತ್ರ : ಶಿವಾಜಿ ಸುರತ್ಕಲ್ 2

ನಿರ್ದೇಶನ : ಆಕಾಶ್ ಶ್ರೀವತ್ಸ

ನಿರ್ಮಾಣ: ರೇಖಾ, ಅನೂಪ್ ಗೌಡ
ತಾರಾಗಣ : ರಮೇಶ್ ಅರವಿಂದ್, ರಾಧಿಕಾ ನಾರಾಯಣ್, ಮೇಘನಾ ಗಾಂವ್ಕರ್, ಸಂಗೀತ ಶೃಂಗೇರಿ
ಬೇಬಿ ಅರಾಧ್ಯ, ರಾಘು ರಾಮನಕೊಪ್ಪ, ವಿನಾಯಕ ಜೋಷಿ,
ವಿದ್ಯಾಮೂರ್ತಿ ಇತರರು.

ರೇಟಿಂಗ್ : 3.5/5


ವಿಜಯ್ ಭರಮಸಾಗರ

ಯಾರವನು…?
ಪೊಲೀಸ್ ಅಧಿಕಾರಿಯಾಗಿರುವ ಆ ನಾಯಕ ಈ ಡೈಲಾಗ್ ಹೇಳುವ ಹೊತ್ತಿಗೆ, ಒಂದಲ್ಲ, ಎರಡಲ್ಲ, ಮೂರಲ್ಲ ನಾಲ್ಕು ನಿಗೂಢ ಕೊಲೆಗಳು ನಡೆದು ಹೋಗಿರುತ್ತವೆ! ಕೊಲೆಗಾರನನ್ನು ಬೆನ್ನತ್ತಿ ಹೋಗುವ ಆ ಪೊಲೀಸ್ ಅಧಿಕಾರಿ ಮತ್ತು ತಂಡಕ್ಕೆ ಐದನೇ ಕೊಲೆ ಮಾಡುವುದಾಗಿ ಚಾಲೆಂಜ್ ಹಾಕುವ ಆ ಕೊಲೆಗಾರ ಯಾರು ಅನ್ನೋದೇ ಈ ಚಿತ್ರದೊಳಗಿನ ಗುಟ್ಟು.

ಸಾಮಾನ್ಯವಾಗಿ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾಗಳಲ್ಲಿ ತಿರುವುಗಳೇ ಜೀವಾಳ. ಅಂತಹ ಅನೇಕ ಟ್ವಿಸ್ಟು-ಟೆಸ್ಟುಗಳ ನಡುವೆ ಸಾಗುವ ‘ಶಿವಾಜಿ ಸುರತ್ಕಲ್ 2’, ನಿಜಕ್ಕೂ ಕುತೂಹಲದಲ್ಲೇ ನೋಡುಗರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾನೆ.

ಇಂತಹ ಥ್ರಿಲ್ಲರ್ ಜಾನರ್ ಸಿನಿಮಾಗಳಿಗೆ ಕಥೆಯಲ್ಲಿ ಪಕ್ವತೆ ಇರಬೇಕು. ಅಷ್ಟೇ ಅಲ್ಲ, ಅಷ್ಟೇ ಸೂಕ್ಷ್ಮವಾಗಿ ನಿರೂಪಿಸುವ ಜಾಣ್ಮೆ ಇರಬೇಕು. ಆಗ ಮಾತ್ರ ಸಸ್ಪೆನ್ಸ್ ಥ್ರಿಲ್ಲರ್ ಜಾನರ್ ಸಿನಿಮಾಗಳು ನೋಡುಗನ ಮನ ಗೆಲ್ಲೋಕೆ ಸಾಧ್ಯ. ಅದನ್ನಿಲ್ಲಿ ನಿರ್ದೇಶಕರು ಪರಿಪೂರ್ಣವಾಗಿ ಸಾಧ್ಯವಾಗಿಸಿದ್ದಾರೆ ಅನ್ನೋದು ಸಮಾಧಾನ.

ಇದೊಂದು ಮಿಸ್ಟರಿ, ಸಸ್ಪೆನ್ಸ್ ಥ್ರಿಲ್ಲರ್ ಚಿತ್ರ. ಆರಂಭದಿಂದ ಕೊನೆವರೆಗೂ ಕುತೂಹಲದಲ್ಲೇ ಸಿನಿಮಾ ಸಾಗುತ್ತದೆ. ಚಿತ್ರ ನೋಡಿ ಹೊರಬಂದ ಬಳಿಕವೂ ಕೊಂಚ ಎದೆ ಭಾರವಾಗಿಸುತ್ತದೆ. ಅಲ್ಲಲ್ಲಿ ಒಂದಷ್ಟು ದೃಶ್ಯಗಳು ಕಾಡುವುದು ಸುಳ್ಳಲ್ಲ. ಹಾಗಾದರೆ ಆ ಕಾಡುವಿಕೆಯ ವಿಶೇಷ ತಿಳಿಯುವ ಕುತೂಹಲವಿದ್ದರೆ ಒಮ್ಮೆ ಶಿವಾಜಿಯ ಇಂಟ್ರೆಸ್ಟಿಂಗ್ ಗೇಮ್ ನೋಡಿಬರಲು ಯಾವುದೇ ಅಡ್ಡಿಯಿಲ್ಲ.

ಕಥೆ ಹೇಳುವ ಮತ್ತು ತೋರಿಸುವ ವಿಧಾನ ಮತ್ತು ಜಾಣತನ ನಿರ್ದೇಶಕರಿಗಿದೆ. ಆ ಕಾರಣಕ್ಕೆ ಸಿನಿಮಾ ಶುರುವಿನಿಂದ ಹಿಡಿದು ಅಂತ್ಯದವರೆಗೂ ನೋಡಿಸಿಕೊಂಡು ಹೋಗುತ್ತೆ. ನೋಡುಗನ ಗಮನ ಆಚೀಚೆ ಹೋಗದ ರೀತಿ ಶಿವಾಜಿ ತನ್ನ ಚಾಕಚಕ್ಯತೆ ಮೂಲಕ ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾನೆ. ಕೊಲೆ, ಕೊಲೆಗಾರ ಮತ್ತು ಪೊಲೀಸ್ ಆಟದಲ್ಲಿ ಸಾಗುವ ಸಿನಿಮಾದ ಮೊದಲರ್ಧ ಮುಗಿಯೋದೇ ಗೊತ್ತಾಗಲ್ಲ. ದ್ವಿತಿಯಾರ್ಧ ಕೂಡ ಇದಕ್ಕಿಂತಲೂ ಭಿನ್ನ‌ ನಿರೂಪಣೆ ಹಾಗು ಚಿತ್ರಕಥೆಯ ಬಿಗಿಯಾದ ಹಿಡಿತಕ್ಕೆ‌ ಸಾಕ್ಷಿಯಾಗಿದೆ.

ಮುಖ್ಯವಾಗಿ ಇಂತಹ ಕಥೆಗಳಲ್ಲಿ ಚಾಲೆಂಜ್ ಎನಿಸುವ ಸನ್ನಿವೇಶ ಸಹಜ. ಅದನ್ನಿಲ್ಲಿ ತುಂಬಾನೇ ಸಲೀಸಾಗಿ ನಿರ್ವಹಿಸಿರುವ ನಿರ್ದೇಶಕರ ಜಾಣತನ ಕಾಣುತ್ತದೆ. ಒಂದೇ ಕಡೆ ಸುತ್ತದ ಕಥೆಯಲ್ಲಿ ಸಾಕಷ್ಟು ಎಲಿಮೆಂಟ್ಸ್ ಇರುವುದರಿಂದ ಶಿವಾಜಿಗೆ ಒಳ್ಳೆಯ ಮಾರ್ಕ್ಸ್ ಕೊಡಬಹುದು.

ಒಂದು ಪರಿಪೂರ್ಣ ಸಿನಿಮಾಗೆ ಬೇಕಿರೋದು ಕಥೆ, ಚಿತ್ರಕಥೆ, ಮಾತುಕತೆ, ಪಾತ್ರಾಭಿನಯ ಅದಕ್ಕೆ ಪೂರಕವಾಗಿರುವ ಛಾಯಾಗ್ರಹಣ, ಸಂಕಲನ ಮತ್ತು ಸಂಗೀತ. ಇಲ್ಲಿ ಎಲ್ಲವೂ ಸರಿಯಾಗಿ ಹೆಗಲು ಕೊಟ್ಟಿರುವುದರಿಂದ ಶಿವಾಜಿ ತನ್ನ ಫೋಕಸ್ ಜೊತೆ ವೇಗ ಕಳೆದುಕೊಂಡಿಲ್ಲ.

ಸಿನಿಮಾ ನೋಡುವಾಗ ಎಲ್ಲೋ ಒಂದು ಕಡೆ ಗೊಂದಲ ಆಗೋದು ದಿಟ. ಅ ಎಲ್ಲಾ ಗೊಂದಲಗಳಿಗೂ ನಿರ್ದೇಶಕರು ಉತ್ತರಿಸುತ್ತ ಹೋಗುತ್ತಾರೆ. ಒಮ್ಮೊಮ್ಮೆ ಅದು ಹಾರರ್ ಕಥೆನಾ ಎನಿಸಿದರೂ ಒಂದೊಂದು‌ ತಿರುವು ಹೊಸ ಬಗೆಯ ರೂಪ ಪಡೆದುಕೊಳ್ಳುತ್ತ ಹೋಗುತ್ತೆ. ಇನ್ನು, ಕತ್ತಲು ಬೆಳಕಿನಾಟದ ಕಳ್ಳ ಪೊಲೀಸ್ ಆಟ ನೋಡೋಕೆ ಚಂದವಾದರೂ, ಅಲ್ಲಲ್ಲಿ ಕೇಳಿ ಬರುವ ಹಿನ್ನೆಲೆ ಸಂಗೀತ ಸಿನಿಮಾವೊಂದನ್ನು ನೆನಪಿಸುತ್ತದೆ. ಉಳಿದಂತೆ ಶಿವಾಜಿ ನೋಡುಗನ ಎರಡು ಗಂಟೆ ಸಮಯ ವ್ಯರ್ಥ ಮಾಡಲ್ಲ.

ಕಥೆ ಏನು?

ಆರಂಭದಲ್ಲೇ ನಾಯಕ ಪೊಲೀಸ್ ಅಧಿಕಾರಿ ಎದುರು ಒಂದು ಕೊಲೆ ನಡೆದು ಹೋಗುತ್ತೆ. ನಂತರ ಹುಡುಗಿಯೊಬ್ಬಳ ಹತ್ಯೆ. ಬಳಿಕ‌ಮತ್ತೊಂದು ಹುಡುಗಿಯ ಕೊಲೆ, ನೋಡುತ್ತಿದ್ದಂತೆ ಒಬ್ಬ ಅಧಿಕಾರಿ ಕೊಲೆ… ಆ ಕೊಲೆಗಾರನ ಬೆನ್ನು ಹತ್ತಿ ಹೋಗುವ ನಾಯಕನಿಗೆ
ಆ ಮಾಯಾವಿ ಯಾರು ಎಂಬ ಪ್ರಶ್ನೆ. ಕೊಲೆಗಾರ ಇನ್ನೂ ಒಂದು ಕೊಲೆ ಆಗುತ್ತೆ ಸಾಧ್ಯವಾದರೆ ತಪ್ಪಿಸು ಎಂಬ ಸವಾಲು ಹಾಕುತ್ತಾನೆ. ಆಮೇಲೆ ನಡೆಯೋದೇ ರೋಚಕ. ಈ ನಡುವೆ ಅಪ್ಪ ಮಗನ ಬಾಂಧವ್ಯ, ಹೆಂಡತಿಯ ಕಾಳಜಿ, ಮಗಳ ಮೇಲಿರುವ ಅಪ್ಪನ ಪ್ರೀತಿ… ಇತ್ಯಾದಿ ಕಥೆಯ ತಿರುಳು.

ಆ ಮಾಯಾವಿ ಯಾರು ಎಂಬ ಪ್ರಶ್ನೆ ನೋಡುಗರಲ್ಲೂ ಹುಟ್ಟಿಸಿ, ಕೊನೆಗೊಂದು ಅಂತ್ಯ ಕಾಣಿಸೋದೆ ಶಿವಾಜಿಯ ಗೇಮ್‌ ಪ್ಲಾನ್. ಕೊನೆಗೆ ಕೊಲೆಗಾರ ಯಾರು? ಯಾಕಾಗಿ ಕೊಲೆ ಮಾಡ್ತಾನೆ ಎಂಬುದು ತಿಳಿಯಬೇಕಾದರೆ ಮಿಸ್ ಮಾಡದೆ ಒಳ್ಳೇ ಥ್ರಿಲ್ ಪಡೆಯಬಹುದು.

ಯಾರು ಹೇಗೆ?


ರಮೇಶ್ ಅರವಿಂದ್ ಇಲ್ಲಿ ಪೊಲೀಸ್ ಅಧಿಕಾರಿಯಾಗಿ ಇಷ್ಟವಾಗುತ್ತಾರೆ. ತ್ಯಾಗಮಯಿ ನಟ ಎಂಬ ಟ್ಯಾಗ್ ಲೈನ್ ಇರುವ ರಮೇಶ್ ನಿಜಕ್ಕೂ ಇಲ್ಲಿ ಅದನ್ನು ಮರೆಸುವಂತಹ ನಟನೆ ಮಾಡಿದ್ದಾರೆ. ಒಬ್ಬ ಪಕ್ಕಾ ಪೊಲೀಸ್ ಅಧಿಕಾರಿಯಾಗಿ, ಮಗಳಿಗೆ ಪ್ರೀತಿಯ ಅಪ್ಪನಾಗಿ ಎಂದಿಗಿಂತ ಇಷ್ಟವಾಗುತ್ತಾರೆ.
ರಾಧಿಕಾ ನಾರಾಯಣ್, ಕಾಳಜಿ ತೋರುವ ಹೆಂಡತಿಯಾಗಿ ಗಮನ ಸೆಳೆದಿದ್ದಾರೆ.
ಪೊಲೀಸ್ ಅಧಿಕಾರಿಯಾಗಿ ಮೇಘನಾ ಗಾಂವ್ಕರ್ ಸಾಥ್ ನೀಡಿದರೆ, ಬೇಬಿ ಅರಾಧ್ಯ, ರಾಘು ರಾಮನಕೊಪ್ಪ ಸಿನಿಮಾದ ಭಾಗವಾಗಿದ್ದಾರೆ. ವಿನಾಯಕ ಜೋಷಿ, ವಿದ್ಯಾಮೂರ್ತಿ ಇತರರು ಪಾತ್ರಕ್ಕೆ ಮೋಸ ಮಾಡಿಲ್ಲ.

ಜೂಡಾ ಸ್ಯಾಂಡಿ ಸಂಗೀತ ಹೇಳಿಕೊಳ್ಳುವಂತಿಲ್ಲ. ಇರುವ ಯಾವ ಹಾಡು ಗುನುಗುವಂತಿಲ್ಲ. ಗುರು ಪ್ರಸಾದ್, ಮಧು ಅಂಬಟ್ ಅವರ ಕ್ಯಾಮೆರಾ ಕೈಚಳಕ ಶಿವಾಜಿಯ ಅಂದ ಹೆಚ್ಚಿಸಿದೆ.

Categories
ಸಿನಿ ಸುದ್ದಿ

ಕೋಮಲ್ ಮಾಡಿದ ಸಿಹಿ ಉಂಡೆ: ಹಾಸ್ಯವೇ ನಾಮಬಲದ ತಾಕತ್ತು; ಭರ್ಜರಿ ಇನ್ನಿಂಗ್ಸ್ ಗೆಲ್ಲಲು ಜೋರು ತಯಾರಿ

ಕೋಮಲ್ ಅಂದಾಕ್ಷಣ ನೆನಪಾಗೋದೇ ನಗು ಮತ್ತು‌ ನಗು. ಕನನ್ಡ ಸಿನಿಮಾರಂಗದಲ್ಲಿ ಬಿಡುವಿಲ್ಲದಂತಹ ಹಾಸ್ಯ ನಟರೆಂದೇ ಕರೆಸಿಕೊಳ್ಳುವ ಕೋಮಲ್, ತೆರೆಮೇಲೆ ನೋಡುಗರಲ್ಲಿ ಕಚಗುಳಿ ಇಟ್ಟು, ಅಪ್ಪಟ ಮನದುಂಬಿ ನಗಿಸೋ ನಟರು. ಅವರ ಡೈಲಾಗ್ ಹರಿಬಿಡುವುದಿರಲಿ, ಮ್ಯಾನರಿಸಂ ಆಗಲಿ, ಟೈಮಿಂಗ್ ಆಗಲಿ ಎಲ್ಲವೂ ಅಲ್ಟಿಮೇಟ್. ಯಾವುದೇ ಪಾತ್ರವಿರಲಿ ಸಲೀಸಲಾಗಿ ನಿರ್ವಹಿಸಿ ಆ. ಸನ್ನಿವೇಶವನ್ನು ಅಷ್ಟೇ ಸುಲಭಗೊಳಿಸುವ ಜಾಣತನ ಅವರದು.

ಕೋಮಲ್ ಹಾಸ್ಯ ನಟರಾಗಿಯೇ ಸದ್ದು ಮಾಡಿದವರು. ನಂತರ ಅವರು ಹೀರೋ ಆಗಿಯೂ ಸುದ್ದಿ ಆಗಿದ್ದುಂಟು. ಬಹು‌ಬೇಡಿಕೆಯ ನಟರಾಗಿದ್ದ ಕೋಮಲ್, ಒಂದಷ್ಟು ಸೋಲು ಒಪ್ಪಿಕೊಂಡರು. ಅವರ ಫ್ಯಾನ್ಸ್ ಕೂಡ ಕೋಮಲ್ ಅವರ ನಿರ್ಧಾರಕ್ಕೆ ಜೈ ಎಂದರು. ಅಭಿಮಾನಿಗಳಿಗೆ ಖುಷಿಪಡಿಸಬೇಕು ಅಂತಾನೇ ತರಹೇವಾರಿ ಸಿನಿಮಾ ಮಾಡಿಕೊಂಡು‌ ಬಂದ ಕೋಮಲ್, ಒಂದಷ್ಟು ಗ್ಯಾಪ್ ಪಡೆದರು. ಅಭಿಮಾನಿಗಳ ಒತ್ತಡ ಹೆಚ್ಚಾದಂತೆ ಪುನಃ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುವ ನಿರ್ಧಾರ ಮಾಡಿದರು.

ಕೋಮಲ್ ಈಗ ಬಹು ನಿರೀಕ್ಷೆಯ ಸಿನಿಮಾ ಕೊಡುತ್ತಿದ್ದಾರೆ. ಈಗಾಗಲೇ ಟ್ರೇಲರ್ ಮೂಲಕ ಕುತೂಹಲ ಮೂಡಿಸಿರುವ ಅವರ ‘ ಉಂಡೆನಾಮ’ ಏಪ್ರಿಲ್14ರಂದು ರಾಜ್ಯಾದ್ಯಂತ ತೆರೆಗೆ ಅಪ್ಪಳಿಸುತ್ತಿದೆ.

‘ಉಂಡೆನಾಮ’ ಹೆಸರೇ ಹೇಳುವಂತೆ ಪಕ್ಕಾ ಹಾಸ್ಯಮಯ ಕಥೆಯ ಹೂರಣ ಇರುವ ಸಿನಿಮಾ ಅಂತ ಪ್ರತ್ಯೇಕವಾಗಿ ಹೇಳಬೇಕಿಲ್ಲ. ಹೌದು, ಉಂಡೆನಾಮ, ಒಂದೊಳ್ಳೆಯ ಕಥಾಹಂದರದೊಂದಿಗೆ ನೋಡುಗರನ್ನು ನಗಿಸೋಕೆ ಬರುತ್ತಿದೆ.

ಕೋಮಲ್ ಈ ಸಿನಿಮಾ ಮೂಲಕ ಭರ್ಜರಿ ಇನ್ನಿಂಗ್ಸ್ ಶುರು ಮಾಡಲು ಅಣಿಯಾಗಿದ್ದಾರೆ. ತಮ್ಮ ಅಭಿಮಾನಿಗಳಿಗೆ ಬಹುದಿನಗಳ ಬಳಿಕ ಕಚಗುಳಿ ಇಡಲು ಬರುತ್ತಿದ್ದಾರೆ. ಆ ದಿನಗಳಿಗೆ ನೋಡುಗರನ್ನು ಕರೆದೊಯ್ಯಲು ಸಜ್ಜಾಗಿರುವ ಕೋಮಲ್, ಉಂಡೆನಾಮ ಮೂಲಕ ಮತ್ತೆ ಅದೇ ಜಯದ ಟ್ರ್ಯಾಕ್ ಗೆ ಮರಳುವ ಉತ್ಸಾಹದಲ್ಲಿದ್ದಾರೆ.

ಡಾ.ಟಿ ಆರ್ ಚಂದ್ರಶೇಖರ್ ಅರ್ಪಿಸುವ ಈ ಚಿತ್ರವನ್ನು ಎನ್. ಕೆ. ಸ್ಟುಡಿಯೋಸ್ ಬ್ಯಾನರ್ ನಲ್ಲಿ ನಂದಕಿಶೋರ್ ಸಿ. ನಿರ್ಮಿಸಿದ್ದಾರೆ. ಕೆ.ಎಲ್. ರಾಜಶೇಖರ್ ನಿರ್ದೇಶನವಿದೆ. ನವೀನ್ ಕುಮಾರ್ ಎಸ್ ಛಾಯಾಗ್ರಹಣವಿದೆ. ಶ್ರೀಧರ್ ವಿ ಸಂಭ್ರಮ್ ಸಂಗೀತ ನಿರ್ದೇಶನ ಹಾಗೂ ಕೆ.ಎಂ.ಪ್ರಕಾಶ್ ಅವರ ಸಂಕಲನವಿದೆ.

ಕೋಮಲ್ ಜೊತೆ ಧನ್ಯ ಬಾಲಕೃಷ್ಣ, ಹರೀಶ್ ರಾಜ್, ತಬಲ ನಾಣಿ, ಕೆಜಿಎಫ್ ಸಂಪತ್, ತನಿಷಾ, ವೈಷ್ಣವಿ, ಅಪೂರ್ವ ಮುಂತಾದವರು “ಉಂಡೆನಾಮ” ಚಿತ್ರದಲ್ಲಿದ್ದಾರೆ.

Categories
ಸಿನಿ ಸುದ್ದಿ

ಶಿವಾಜಿ ಜಾಣತನಕ್ಕೆ ಆಕಾಶ್ ಶ್ರೀವತ್ಸ ಕಾರಣ! ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾಗೆ ಹೆಚ್ಚಿದ ಕುತೂಹಲ

ರಮೇಶ್ ಅರವಿಂದ್ ಅಭಿನಯದ ‘ಶಿವಾಜಿ ಸುರತ್ಕಲ್ 2’ ಚಿತ್ರ ಸಾಕಷ್ಟು ನಿರೀಕ್ಷೆ ಹುಟ್ಟಿಸಿದೆ. ಈಗಾಗಲೇ ಟ್ರೇಲರ್ ಎಲ್ಲರಲ್ಲೂ ಕುತೂಹಲ ಮೂಡಿಸಿದ್ದು, ಸಿನಿಮಾ ಕೂಡ ನೋಡುವ ಕಾತುರ ಹೆಚ್ಚಿಸಿದೆ ಏಪ್ರಿಲ್ 14ರಂದು ರಾಜ್ಯಾದ್ಯಂತ ರಿಲೀಸ್ ಆಗುತ್ತಿದೆ.

ಇಂತಹ ಥ್ರಿಲ್ಲರ್ ಜಾನರ್ ಸಿನಿಮಾಗಳಿಗೆ ಮುಖ್ಯವಾಗಿ ಬೇಕಿರೋದು. ನಿರೂಪಣೆ. ನಿರ್ದೇಶಕ ಆಕಾಶ್ ಶ್ರಿವತ್ಸ ವಿಶೇಷ ಎನ್ನುವಂತೆ ಈ ಸಿನಿಮಾದ ನಿರೂಪಣೆಯ ಜವಾಬ್ದಾರಿ ಹೊತ್ತು ನೋಡುಗರ ಮೊಗದಲ್ಲಿ ಒಂದಷ್ಟು ಮಂದಹಾಸ ಮೂಡಿಸುವ ಹುಮ್ಮಸ್ಸಿನಲ್ಲಿದ್ದಾರೆ.

ಅಂದಹಾಗೆ, ಕೋವಿಡ್ ಸಮಯದಲ್ಲಿ ಅವರಿಗೆ ಈ ಕಥೆ ಹೊಳೆದಿದೆ. ಕಥೆ ಲೈನ್ ಹೊಳೆದಿದ್ದೇ ತಡ,. ಪ್ರತಿ ದಿನವೂ ರಮೇಶ್ ಅರವಿಂದ್ ಅವರ ಜೊತೆ ಫೋನ್ ನಲ್ಲಿ ಕಥೆ ಬಗ್ಗೆ ಚರ್ಚಿಸಿ ಅದಕ್ಕೊಂದು ರೂಪ ಕೊಡಲು ಸಾಧ್ಯವಾದ ಬಗ್ಗೆ ಹೇಳುತ್ತಾರೆ ಅವರು.

ಅಂದಹಾಗೆ, ಇದೊಂದು ಮಿಸ್ಟರಿ, ಸಸ್ಪೆನ್ಸ್ ಥ್ರಿಲ್ಲರ್ ಚಿತ್ರ. ಆರಂಭದಿಂದ ಕೊನೆಯವರೆಗೂ ಕುತೂಹಲ ಕಾದಿರಿಸಿಯೇ ಸಿನಿಮಾ ಸಾಗುತ್ತದೆ. ಸಿನಿಮಾ ಮುಗಿದ ಬಳಿಕವೂ ಒಂದಷ್ಟು ಕಾಡುತ್ತದೆ. ಅಲ್ಲೊಂದು ಮಾಯಾವಿ ಜಗತ್ತು.ಲ ಇದೆ. ಆ ಮಾಯಾವಿ ಯಾರು ಎಂಬುದೇ ನಿಗೂಢ.‌ಅದನ್ನು ಅರಿಯಬೇಕಾದರೆ ಸಿನಿಮಾ‌ ನೋಡಬೇಕು ಎಂಬುದು ನಿರ್ದೇಶಕ ಆಕಾಶ್ ಶ್ರೀವತ್ಸ ಅವರ ಮಾತು.

ನಟ ರಮೇಶ್ ಅರವಿಂದ್ ಈ ಚಿತ್ರದ ಮೇಲೆ ಸಾಕಷ್ಟು ನಂಬಿಕೆ ಇಟ್ಟಿದ್ದಾರೆ. ಕಾರಣ, ಸಿನಿಮಾದ ಕಥೆ ಹಾಗು ನಿರೂಪಣೆ. ನಿರ್ದೇಶಕ ಆಕಾಶ್ ಶ್ರೀವತ್ಸ ಅವರ ಉತ್ಸಾಹ ದೊಡ್ಡದು ಎಂಬುದು ರಮೇಶ್ ಅರವಿಂದ್ ಮಾತು

ರೇಖಾ ಕೆ.ಎನ್ ಹಾಗೂ ಅನೂಪ್ ಗೌಡ ಚಿತ್ರದ ನಿರ್ಮಾಪಕರು. ಪಾಸಿಟಿವ್ ಟೀಂ ಜೊತೆಗೂಡಿ ಮಾಡಿರುವ ಸಿನಿಮಾ ಇದಾಗಿರುವುದರಿಂದ ಯಶಸ್ಸು ಗ್ಯಾರಂಟಿ ಎಂಬ ನಂಬಿಕೆ ಆವರದು.

ಮೇಘನಾ ಗಾಂವ್ಕರ್, ರಾಧಿಕಾ ನಾರಾಯಣ್ ಹಾಗೂ ಸಂಗೀತ ಶೃಂಗೇರಿ ಪ್ರಮುಖ ಆಕರ್ಷಣೆ.
ಬೇಬಿ ಅರಾಧ್ಯ, ರಾಘು ರಾಮನಕೊಪ್ಪ, ವಿನಾಯಕ ಜೋಷಿ,
ವಿದ್ಯಾಮೂರ್ತಿ, ನಿಧಿ ಹೆಗಡೆ,
ಪುನೀತ್ ಬಿ.ಎ ಮೊದಲಾದ ಕಲಾವಿದರು ಚಿತ್ರದಲ್ಲಿದ್ದಾರೆ.

ಏಪ್ರಿಲ್ 14 ರಂದು ಗ್ರ್ಯಾಂಡ್ ಆಗಿ ರಿಲೀಸ್ ಆಗುತ್ತಿರುವ ಸಿನಿಮಾ, ಸದ್ಯ ನಿರೀಕ್ಷೆ ಹೆಚ್ಚಿಸಿರುವುದಂತೂ ಗ್ಯಾರಂಟಿ.

Categories
ಸಿನಿ ಸುದ್ದಿ

ಈ ವಾರ ಕೋಮಲ್ ಸಿನಿಮಾ: ಉಂಡೆ ನಾಮ

ಬಹು ದಿನಗಳ ನಂತರ ಖ್ಯಾತ ನಟ ಕೋಮಲ್ ಕುಮಾರ್ ನಾಯಕರಾಗಿ ನಟಿಸಿರುವ, ಬಹು ನಿರೀಕ್ಷಿತ “ಉಂಡೆನಾಮ ” ಚಿತ್ರ ಈ ವಾರ(ಏಪ್ರಿಲ್14) ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

ಡಾ.ಟಿ ಆರ್ ಚಂದ್ರಶೇಖರ್ ಅರ್ಪಿಸುವ ಈ ಚಿತ್ರವನ್ನು ಎನ್ ಕೆ ಸ್ಟುಡಿಯೋಸ್ ಲಾಂಛನದಲ್ಲಿ ನಂದಕಿಶೋರ್ ಸಿ ನಿರ್ಮಿಸಿದ್ದಾರೆ. ಕೆ.ಎಲ್ ರಾಜಶೇಖರ್ ನಿರ್ದೇಶಿಸಿದ್ದಾರೆ.

ನವೀನ್ ಕುಮಾರ್ ಎಸ್ ಛಾಯಾಗ್ರಹಣ, ಶ್ರೀಧರ್ ವಿ ಸಂಭ್ರಮ್ ಸಂಗೀತ ನಿರ್ದೇಶನ ಹಾಗೂ ಕೆ.ಎಂ.ಪ್ರಕಾಶ್ ಅವರ ಸಂಕಲನ ಈ ಚಿತ್ರಕ್ಕಿದೆ.

ಕೋಮಲ್ ಕುಮಾರ್ (ನಾಯಕ), ಧನ್ಯ ಬಾಲಕೃಷ್ಣ, ಹರೀಶ್ ರಾಜ್, ತಬಲ ನಾಣಿ, ಕೆಜಿಎಫ್ ಸಂಪತ್, ತನಿಷಾ, ವೈಷ್ಣವಿ, ಅಪೂರ್ವ ಮುಂತಾದವರು “ಉಂಡೆನಾಮ” ಚಿತ್ರದ ತಾರಾಬಳಗದಲ್ಲಿದ್ದಾರೆ.

Categories
ಸಿನಿ ಸುದ್ದಿ

ಗೆಜ್ಜೆನಾದ ವಿಜಯ್ ಕುಮಾರ್ ಈಗ ನಿರ್ಮಾಪಕ! ಏಪ್ರಿಲ್ 13 ರಂದು ಟೈಟಲ್ ರಿಲೀಸ್

“ಗೆಜ್ಜೆನಾದ”, ” ನಂದ ಲವ್ಸ್ ನಂದಿತಾ”, “ಕನ್ನಡದ ಕಂದ”, “ಆಟ” ಮುಂತಾದ ಸೂಪರ್ ಹಿಟ್ ಚಿತ್ರಗಳ ಹಾಗೂ ಕಿರುತೆರೆಯ ಸಾಕಷ್ಟು ಯಶಸ್ವಿ ಧಾರಾವಾಹಿಗಳ ನಿರ್ದೇಶಕ ಬಿ.ಎನ್. ವಿಜಯ್ ಕುಮಾರ್ (ಗೆಜ್ಜೆನಾದ) ಈಗ ನಿರ್ಮಾಪಕರಾಗಿದ್ದಾರೆ. ಅಥರ್ವ್ ಪಿಕ್ಚರ್ಸ್ ಅಡಿಯಲ್ಲಿ ಧರ್ಮೇಂದ್ರ ಎಂ ರಾವ್ ಅವರ ಜೊತೆಯಾಗಿ ನೂತನ ಚಿತ್ರವೊಂದನ್ನು ನಿರ್ಮಿಸಿದ್ದಾರೆ. ಈ ಚಿತ್ರದ ಶೀರ್ಷಿಕೆ ಏಪ್ರಿಲ್ 13 ರಂದು ಬಿಡುಗಡೆಯಾಗಲಿದೆ.

ಇದು ಮಹಾನಗರವೊಂದರಲ್ಲಿ ನಡೆಯುವ ಕಥೆಯಾಗಿದೆ. ಮೂರು ವಿಭಿನ್ನ ಕಥೆಗಳು ಚಿತ್ರದಲ್ಲಿದೆ. ಈಗಾಗಲೇ ಚಿತ್ರೀಕರಣ ಮುಗಿದಿದ್ದು, ಬೆಂಗಳೂರಿನಲ್ಲೇ ಚಿತ್ರೀಕರಣ ನಡೆದಿದೆ.

ಬಿ.ಎನ್.ವಿಜಯ್ ಕುಮಾರ್ ಅವರ ಪುತ್ರ ಅಥರ್ವ್ ಈ ಚಿತ್ರದ ಮುಖ್ಯಪಾತ್ರದಲ್ಲಿ ಅಭಿನಯಿಸಿದ್ದಾರೆ. ಜನಪ್ರಿಯ ಧಾರಾವಾಹಿಗಳಾದ “ಪುನರ್ ವಿವಾಹ” ಹಾಗೂ “ಪತ್ತೆದಾರಿ ಪ್ರತಿಭಾ” ದಲ್ಲಿ ಅಥರ್ವ್ ಮುಖ್ಯಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

ಈ ಚಿತ್ರದ ಮೂಲಕ ಅಥರ್ವ್ ಹಿರಿತೆರೆಗೆ ಪಾದಾರ್ಪಣೆ ಮಾಡುತ್ತಿದ್ದಾರೆ. ಚಿತ್ರಕ್ಕೆ ಕಥೆಯನ್ನು ಅಥರ್ವ್ ಅವರೆ ಬರೆದಿದ್ದಾರೆ. ಚಿತ್ರಕಥೆ ಅಥರ್ವ್ ಹಾಗೂ ರಾಜೀವ್ ಕಿರಣ್ ವೆನಿಯಲ್ ಅವರದು. “ಕನ್ನಡತಿ” ಧಾರಾವಾಹಿ ರೆಮೋಲ, ಸಂಪತ್ ಮೈತ್ರೇಯ, ಬಿ.ಸುರೇಶ್, ರೂಪಾ ರಾಯಪ್ಪ, ಆಶೀಶ್, ಬಿ.ಎಂ.ವೆಂಕಟೇಶ್, ಮೋಹನ್, ಆರ್ ಜೆ ಅನೂಪ ಮುಂತಾದವರು ತಾರಾಬಳಗದಲ್ಲಿದ್ದಾರೆ.

ಸಾಕಷ್ಟು ಡಾಕ್ಯುಮೆಂಟರಿ, ಜಾಹೀರಾತು ಹಾಗೂ ಕಿರುಚಿತ್ರಗಳನ್ನು ನಿರ್ದೇಶಿಸಿರುವ ರಾಜೀವ್ ಕಿರಣ್ ವೆನಿಯಲ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ರೌಶನ್ ಜಾ ಛಾಯಾಗ್ರಹಣ, ಪ್ರದೀಪ್ ಗೋಪಾಲ್ ಸಂಕಲನ ಹಾಗೂ ಸಿದ್ಧಾರ್ಥ್ ಪರಾಶರ್ ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ.

Categories
ಸಿನಿ ಸುದ್ದಿ

ರಮೇಶ್ ಅರವಿಂದ್ ಮತ್ತೆ ಬರ್ತಾರೆ: ಶಿವಾಜಿ ಸುರತ್ಕಲ್ 2 ಏಪ್ರಿಲ್ 14ಕ್ಕೆ ಬಿಡುಗಡೆ

2020ರಲ್ಲಿ ಬಿಡುಗಡೆಯಾಗಿ ಸೂಪರ್ ಹಿಟ್ ಆಗಿದ್ದ ರಮೇಶ್ ಅರವಿಂದ್ ಅಭಿನಯದ ಪತ್ತೇದಾರಿ ಚಿತ್ರ ‘ಶಿವಾಜಿ ಸುರತ್ಕಲ್’ ಮುಂದುವರೆದ ಭಾಗ ‘ಶಿವಾಜಿ ಸುರತ್ಕಲ್ – ದಿ ಮಿಸ್ಟೀರಿಯಸ್ ಕೇಸ್ ಆಫ್ ಮಾಯಾವಿ’ ಇದೇ ಶುಕ್ರವಾರ (ಏಪ್ರಿಲ್ 14) ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
‘ಶಿವಾಜಿ ಸುರತ್ಕಲ್ 2’ ಚಿತ್ರವನ್ನು ಅಂಜನಾದ್ರಿ ಸಿನಿ ಕ್ರಿಯೇಷನ್ಸ್ ಮೂಲಕ ರೇಖಾ ಕೆ.ಎನ್ ಮತ್ತು ಅನೂಪ್ ಗೌಡ ನಿರ್ಮಿಸಿದ್ದಾರೆ. ಆಕಾಶ್ ಶ್ರೀವತ್ಸ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ.


ಮೊದಲ ಭಾಗದಂತೆಯೇ ಈ ಚಿತ್ರವು ಸಹ ಒಂದು ಮರ್ಡರ್ ಮಿಸ್ಟ್ರಿಯಾಗಿದ್ದು, ಚಿತ್ರದಲ್ಲಿ ನಡೆಯುವ ಕೊಲೆಗಳಿಗೂ, ನಾಯಕ ಶಿವಾಜಿಗೂ ಒಂದು ನಂಟಿರುತ್ತದೆ. ಆ ನಂಟೇನು? ಕೊಲೆಗಳ ಹಿಂದಿರುವ ರಹಸ್ಯವೇನು? ಮತ್ತು ಕೊಲೆಗಾರ ಯಾರು? ಎಂಬುದೇ ಈ ಚಿತ್ರದ ಹೂರಣ.
‘ಮೊದಲ ಭಾಗ ನೋಡಿದವರಿಗೆ ಈ ಚಿತ್ರವು ಖಂಡಿತಾ ಇಷ್ಟವಾಗುತ್ತದೆ. ಇಲ್ಲಿ ಕೊಲೆಗಳ ಜೊತೆಗೆ ಮನರಂಜನೆ ಮತ್ತು ಭಾವನಾತ್ಮಕ ಸನ್ನಿವೇಶಗಳು ಸಹ ಇದೆ. ಚಿತ್ರ ನೋಡುತ್ತಿದ್ದಂತೆ ಇಲ್ಲಿ ಎರಡು ಪಾತ್ರಗಳಿವೆಯೋ ಅಥವಾ ನಾಯಕನ ಮನಸ್ಸಿನಲ್ಲಿ ಆಗುವ ತಳಮಳಗಳೋ ಎಂಬ ಪ್ರಶ್ನೆ ಪ್ರೇಕ್ಷಕರಿಗೆ ಕಾಡುತ್ತದೆ.

ಕನ್ನಡದಲ್ಲಿ ಇದೊಂದು ವಿಭಿನ್ನವಾದ ಪ್ರಯತ್ನ ಎಂಬ ನಂಬಿಕೆ ಇದೆ’ ಎನ್ನುತ್ತಾರೆ ನಿರ್ದೇಶಕ ಆಕಾಶ್ ಶ್ರೀವತ್ಸ.
‘ಶಿವಾಜಿ ಸುರತ್ಕಲ್ 2’ ಚಿತ್ರದಲ್ಲಿ ರಮೇಶ್ ಅರವಿಂದ್, ರಾಧಿಕಾ ನಾರಾಯಣ್, ಮೇಘನಾ ಗಾಂವ್ಕರ್, ಸಂಗೀತ ಶೃಂಗೇರಿ, ರಘು ರಮಣಕೊಪ್ಪ, ನಾಜರ್, ರಮೇಶ್ ಭಟ್, ವೀಣಾ ಸುಂದರ್, ವಿನಾಯಕ್ ಜೋಶಿ, ಶೋಭರಾಜ್ ಮುಂತಾದ ಪ್ರತಿಭಾವಂತ ಕಲಾವಿದರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.


ಚಿತ್ರಕ್ಕೆ ಬೆಂಗಳೂರು, ಮೈಸೂರು, ಹೈದರಾಬಾದ್, ಸುರತ್ಕಲ್, ಕಾಪು, ಹೊನ್ನಾವರ ಮುಂತಾದ ಕಡೆ ಚಿತ್ರೀಕರಣ ಮಾಡಲಾಗಿದೆ. ಗುರುಪ್ರಸಾದ್ ಮತ್ತು ಮಧು ಅಂಬಟ್ ಅವರ ಛಾಯಾಗ್ರಹಣ ಹಾಗೂ ಜೂಡಾ ಸ್ಯಾಂಡಿ ಸಂಗೀತವಿದೆ. ನಿರ್ದೇಶಕ ಆಕಾಶ್ ಶ್ರೀವತ್ಸ ಅವರೇ ಚಿತ್ರದ ಸಂಕಲನದ ಜವಾಬ್ದಾರಿಯನ್ನೂ ಹೊತ್ತಿದ್ದಾರೆ.

Categories
ಸಿನಿ ಸುದ್ದಿ

ರಿಷಿ ಹೊಸ ಅವತಾರ! ರಾಮನಾಗಿ ಕಚಗುಳಿ ಇಟ್ಟ ಹುಡುಗನ ಸಿನಿಮಾ ಟೀಸರ್ ರಿಲೀಸ್

ಆಪರೇಷನ್ ಅಲಮೇಲಮ್ಮ, ಕವಲುದಾರಿ ಸಿನಿಮಾ ಖ್ಯಾತಿಯ ರಿಷಿ ನಟನೆಯ ರಾಮನ ಅವತಾರ ಸಿನಿಮಾದ ಟೀಸರ್ ರಿಲೀಸ್ ಆಗಿದೆ. ಟೀಸರ್ ಮೂಲಕ ನಿರ್ದೇಶಕ ವಿಕಾಸ್ ಪಂಪಾಪತಿ ಭರಪೂರ ನಗುವಿನ ಮ್ಯಾಜಿಕ್ಕನ್ನು ಪ್ರೇಕ್ಷಕರಿಗೆ ಉಣ ಬಡಿಸಿದ್ದಾರೆ. ರಿಷಿ ಪಂಚಿಂಗ್ ಸಂಭಾಷಣೆ ಮೂಲಕ ನೋಡುಗರನ್ನು‌ ನಕ್ಕು ನಲಿಸುತ್ತಾರೆ. ಇವರಿಗೆ ಜೋಡಿಯಾಗಿ ಪ್ರಣೀತಾ ಸುಭಾಷ್ ಹಾಗೂ ಶುಭ್ರ ಅಯ್ಯಪ್ಪ ನಟಿಸಿದ್ದಾರೆ. ಅರುಣ್ ಸಾಗರ್ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ.

ಟೀಸರ್ ರಿಲೀಸ್ ಬಳಿಕ ಮಾತಾನಾಡಿದ ರಿಷಿ, ಸಾಮಾನ್ಯವಾಗಿ ಕಾಮಿಡಿ ಕಷ್ಟವಾದ ಜಾನರ್. ಅದರಲ್ಲಿ ಡಬಲ್ ಮೀನಿಂಗ್ ಮಾಡಬಹುದು. ಬೇರೆಯವರನ್ನು ನಿಂದಿಸಿ ಕಾಮಿಡಿ ಮಾಡಬಹುದು. ಡಬಲ್ ಮೀನಿಂಗ್ ಇಲ್ಲದೇ. ಯಾರಿಗೂ ನಿಂದಿಸದೆ ಕಾಮಿಡಿ ಮಾಡಬಹುದು ಎಂಬುದಕ್ಕೆ ನಿರ್ದೇಶಕ ವಿಕಾಸ್‌ ಪಂಪಾಪತಿ ಉದಾಹರಣೆ. ನಾನು ಈ ಸಿನಿಮಾವನ್ನು ತುಂಬಾ ಮಜಾಕೊಂಡು ಮಾಡಿದ್ದೇನೆ. ನನಗೆ ಖುಷಿ ಕೊಟ್ಟ ಸಿನಿಮಾ. ದೊಡ್ಡ ತಾರಾಬಳಗ ಚಿತ್ರದಲ್ಲಿದೆ. ಅವರೆಲ್ಲರ ಎನರ್ಜಿ ನೋಡಿ ನನಗೆ ಖುಷಿಯಾಗಿದೆ. ಟೀಸರ್ ಚೆನ್ನಾಗಿ ಮೂಡಿಬಂದಿದೆ. ನಮ್ಮ ಸಿನಿಮಾ ಮೇಲೆ ನಿಮ್ಮ ಪ್ರೋತ್ಸಾಹ ಇರಲಿ.

ಸಿನಿಮಾ ಬಗ್ಗೆ ಮಾತನಾಡಿದ ನಿರ್ದೇಶಕ ವಿಕಾಸ್ ಪಂಪಾಪತಿ, ರಾಮನ ಅವತಾರ ಚಿತ್ರ ಕಲಿಯುಗದ ರಾಮನ ಕಥೆಯಾಗಿದ್ದು, ಸಿನಿಮಾ ನೋಡುವಾಗ ಅಲ್ಲಲ್ಲಿ ಪೌರಾಣಿಕ ರಾಮಾಯಣದ ನೆನಪು ಮಾಡಿಕೊಡುತ್ತದೆಯೆಂದು ಹೇಳಿದ್ದಾರೆ.
ಯಾವುದೇ ರೀತಿ ಕಾಂಪ್ರಮೈಸ್ ಮಾಡಿಕೊಳ್ಳದೆ ಸಿನಿಮಾವನ್ನು ಮಾಡಿದ್ದು ಕನ್ನಡ ಸಿನಿ ರಂಗದಲ್ಲಿ ಇದೊಂದು ವಿಭಿನ್ನ ಚಿತ್ರವಾಗುವುದರಲ್ಲಿ, ಪ್ರೇಕ್ಷಕರಿಗೆ ಮನೋರಂಜನೆ ಕೊಡುವುದರಲ್ಲಿ ಸಂದೇಹವಿಲ್ಲ ಎಂದು ಹೇಳಿದ್ದಾರೆ.

ವಿಕಾಸ್‌ ಪಂಪಾಪತಿ “ರಾಮನ ಅವತಾರ’ ಸಿನಿಮಾಕ್ಕೆ ಆಕ್ಷನ್‌ ಕಟ್‌ ಹೇಳಿದ್ದು, ಈ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗಿ ಬಡ್ತಿ ಪಡೆದಿದ್ದಾರೆ. ಅಮರೇಜ್‌ ಸೂರ್ಯವಂಶಿ ಚಿತ್ರ ನಿರ್ಮಾಣ ಮಾಡಿದ್ದಾರೆ.

ರೊಮ್ಯಾಂಟಿಕ್‌ ಕಾಮಿಡಿ ಜಾನರ್‌ನ ರಾಮನ ಅವತಾರ ಸಿನಿಮಾಗೆ ವಿಷ್ಣುಪ್ರಸಾದ್‌ ಹಾಗೂ ಸಮೀರ್‌ ದೇಶಪಾಂಡೆ ಛಾಯಾಗ್ರಹಣವಿದೆ. ಜೂಡಾ ಸ್ಯಾಂಡಿ ಸಂಗೀತ, ಅಮರನಾಥ್‌ ಸಂಕಲನವಿದೆ. ಉಡುಪಿ, ಬೆಂಗಳೂರು ಸುತ್ತುಮುತ್ತ ಶೂಟಿಂಗ್‌ ನಡೆಸಲಾಗಿದೆ. ಟೀಸರ್ ಬಿಡುಗಡೆ ಮಾಡುವ ಮೂಲಕ ಪ್ರಚಾರ ಕಾರ್ಯಕ್ಕೆ ಕಿಕ್ ಸ್ಟಾರ್ಟ್ ಕೊಟ್ಟಿರುವ ಚಿತ್ರತಂಡ ಜೂನ್‌ ಮೊದಲ ವಾರ ಸಿನಿಮಾವನ್ನು ತೆರೆಗೆ ತರುವ ಯೋಜನೆ ಹಾಕಿಕೊಂಡಿದೆ.

error: Content is protected !!