ಶಿವಾಜಿ ಜಾಣತನಕ್ಕೆ ಆಕಾಶ್ ಶ್ರೀವತ್ಸ ಕಾರಣ! ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾಗೆ ಹೆಚ್ಚಿದ ಕುತೂಹಲ

ರಮೇಶ್ ಅರವಿಂದ್ ಅಭಿನಯದ ‘ಶಿವಾಜಿ ಸುರತ್ಕಲ್ 2’ ಚಿತ್ರ ಸಾಕಷ್ಟು ನಿರೀಕ್ಷೆ ಹುಟ್ಟಿಸಿದೆ. ಈಗಾಗಲೇ ಟ್ರೇಲರ್ ಎಲ್ಲರಲ್ಲೂ ಕುತೂಹಲ ಮೂಡಿಸಿದ್ದು, ಸಿನಿಮಾ ಕೂಡ ನೋಡುವ ಕಾತುರ ಹೆಚ್ಚಿಸಿದೆ ಏಪ್ರಿಲ್ 14ರಂದು ರಾಜ್ಯಾದ್ಯಂತ ರಿಲೀಸ್ ಆಗುತ್ತಿದೆ.

ಇಂತಹ ಥ್ರಿಲ್ಲರ್ ಜಾನರ್ ಸಿನಿಮಾಗಳಿಗೆ ಮುಖ್ಯವಾಗಿ ಬೇಕಿರೋದು. ನಿರೂಪಣೆ. ನಿರ್ದೇಶಕ ಆಕಾಶ್ ಶ್ರಿವತ್ಸ ವಿಶೇಷ ಎನ್ನುವಂತೆ ಈ ಸಿನಿಮಾದ ನಿರೂಪಣೆಯ ಜವಾಬ್ದಾರಿ ಹೊತ್ತು ನೋಡುಗರ ಮೊಗದಲ್ಲಿ ಒಂದಷ್ಟು ಮಂದಹಾಸ ಮೂಡಿಸುವ ಹುಮ್ಮಸ್ಸಿನಲ್ಲಿದ್ದಾರೆ.

ಅಂದಹಾಗೆ, ಕೋವಿಡ್ ಸಮಯದಲ್ಲಿ ಅವರಿಗೆ ಈ ಕಥೆ ಹೊಳೆದಿದೆ. ಕಥೆ ಲೈನ್ ಹೊಳೆದಿದ್ದೇ ತಡ,. ಪ್ರತಿ ದಿನವೂ ರಮೇಶ್ ಅರವಿಂದ್ ಅವರ ಜೊತೆ ಫೋನ್ ನಲ್ಲಿ ಕಥೆ ಬಗ್ಗೆ ಚರ್ಚಿಸಿ ಅದಕ್ಕೊಂದು ರೂಪ ಕೊಡಲು ಸಾಧ್ಯವಾದ ಬಗ್ಗೆ ಹೇಳುತ್ತಾರೆ ಅವರು.

ಅಂದಹಾಗೆ, ಇದೊಂದು ಮಿಸ್ಟರಿ, ಸಸ್ಪೆನ್ಸ್ ಥ್ರಿಲ್ಲರ್ ಚಿತ್ರ. ಆರಂಭದಿಂದ ಕೊನೆಯವರೆಗೂ ಕುತೂಹಲ ಕಾದಿರಿಸಿಯೇ ಸಿನಿಮಾ ಸಾಗುತ್ತದೆ. ಸಿನಿಮಾ ಮುಗಿದ ಬಳಿಕವೂ ಒಂದಷ್ಟು ಕಾಡುತ್ತದೆ. ಅಲ್ಲೊಂದು ಮಾಯಾವಿ ಜಗತ್ತು.ಲ ಇದೆ. ಆ ಮಾಯಾವಿ ಯಾರು ಎಂಬುದೇ ನಿಗೂಢ.‌ಅದನ್ನು ಅರಿಯಬೇಕಾದರೆ ಸಿನಿಮಾ‌ ನೋಡಬೇಕು ಎಂಬುದು ನಿರ್ದೇಶಕ ಆಕಾಶ್ ಶ್ರೀವತ್ಸ ಅವರ ಮಾತು.

ನಟ ರಮೇಶ್ ಅರವಿಂದ್ ಈ ಚಿತ್ರದ ಮೇಲೆ ಸಾಕಷ್ಟು ನಂಬಿಕೆ ಇಟ್ಟಿದ್ದಾರೆ. ಕಾರಣ, ಸಿನಿಮಾದ ಕಥೆ ಹಾಗು ನಿರೂಪಣೆ. ನಿರ್ದೇಶಕ ಆಕಾಶ್ ಶ್ರೀವತ್ಸ ಅವರ ಉತ್ಸಾಹ ದೊಡ್ಡದು ಎಂಬುದು ರಮೇಶ್ ಅರವಿಂದ್ ಮಾತು

ರೇಖಾ ಕೆ.ಎನ್ ಹಾಗೂ ಅನೂಪ್ ಗೌಡ ಚಿತ್ರದ ನಿರ್ಮಾಪಕರು. ಪಾಸಿಟಿವ್ ಟೀಂ ಜೊತೆಗೂಡಿ ಮಾಡಿರುವ ಸಿನಿಮಾ ಇದಾಗಿರುವುದರಿಂದ ಯಶಸ್ಸು ಗ್ಯಾರಂಟಿ ಎಂಬ ನಂಬಿಕೆ ಆವರದು.

ಮೇಘನಾ ಗಾಂವ್ಕರ್, ರಾಧಿಕಾ ನಾರಾಯಣ್ ಹಾಗೂ ಸಂಗೀತ ಶೃಂಗೇರಿ ಪ್ರಮುಖ ಆಕರ್ಷಣೆ.
ಬೇಬಿ ಅರಾಧ್ಯ, ರಾಘು ರಾಮನಕೊಪ್ಪ, ವಿನಾಯಕ ಜೋಷಿ,
ವಿದ್ಯಾಮೂರ್ತಿ, ನಿಧಿ ಹೆಗಡೆ,
ಪುನೀತ್ ಬಿ.ಎ ಮೊದಲಾದ ಕಲಾವಿದರು ಚಿತ್ರದಲ್ಲಿದ್ದಾರೆ.

ಏಪ್ರಿಲ್ 14 ರಂದು ಗ್ರ್ಯಾಂಡ್ ಆಗಿ ರಿಲೀಸ್ ಆಗುತ್ತಿರುವ ಸಿನಿಮಾ, ಸದ್ಯ ನಿರೀಕ್ಷೆ ಹೆಚ್ಚಿಸಿರುವುದಂತೂ ಗ್ಯಾರಂಟಿ.

Related Posts

error: Content is protected !!