Categories
ಸಿನಿ ಸುದ್ದಿ

ಮಂಜಣ್ಣ ಫ್ಯಾನ್ಸ್‌ ಕೇಳ್ತೌರೆ ಮ್ಯಾಟ್ರು ಕ್ಲಿಯರ್‌ ಮಾಡ್ಬುಡು!‌ ಇದು ರೀಲಾ? ರಿಯಲ್ಲಾ!?

ಇಲ್ಲಿಯವರೆಗೆ ಒಂದ್‌ ಲೆಕ್ಕ ಇವತ್ತಿಂದ ಇನ್ನೊಂದ್‌ ಲೆಕ್ಕ. ಇದು ಎಷ್ಟ್‌ ಪಕ್ಕಾನೋ ಗೊತ್ತಿಲ್ಲ. ಆದರೆ, ಬಿಗ್‌ಬಾಸ್‌ ವಿನ್ನರ್ ಮಂಜು ಪಾವಗಡ‌ ಮತ್ತು ದಿವ್ಯಾ ಸುರೇಶ್‌ ಅವರ ಈ ಹೊಸ ಫೋಟೋ ನಯಾ ಲೆಕ್ಕಾಚಾರವನ್ನೇ ಹೇಳುತ್ತಿದೆ. ಹೌದು, ಇವರಿಬ್ಬರ ಜೋಡಿ ಫೋಟೋ ನೋಡಿದವರಿಗಂತೂ ಸಿಕ್ಕಾಪಟ್ಟೆ ಕನ್‌ಫ್ಯೂಷನ್.‌ ಅದರಲ್ಲೂ ಮಂಜು ಪಾವಗಡ ಅಭಿಮಾನಿ ಬಳಗವಂತೂ ಕಕ್ಕಾಬಿಕ್ಕಿ. ಅರೇ ಇದೇನಪ್ಪಾ ವಿಷ್ಯ ಅಂದುಕೊಂಡ್ರಾ? ವಿಷ್ಯ ಇರೋದೇ ಈ ಫೋಟೋದಲ್ಲಿ ಸ್ವಾಮಿ.
ನಾರ್ಮಲ್‌ ಫೋಟೋ ಆಗಿದ್ದರೆ, ಯಾರೊಬ್ಬರೂ ತಲೆಕೆಡಿಸಿಕೊಳ್ಳುತ್ತಿರಲಿಲ್ಲವೇನೋ. ಆದರೆ, ಇವರಿಬ್ಬರು ಕ್ಯಾಮೆರಾ ಮುಂದೆ ನವಜೋಡಿಯಂತೆ ಫೋಸು ಕೊಟ್ಟಿರುವುದರಿಂದ ಅವರ ಫ್ಯಾನ್ಸ್‌ ಸೇರಿದಂತೆ ಎಲ್ಲರೂ ಕೂಡ ತಲೆಗೆ ಹುಳ ಬಿಟ್ಟುಕೊಂಡಿದ್ದಾರೆ.

ಅಷ್ಟಕ್ಕೆ ಸುಮ್ಮನಾಗದ ಜನ ಇವರಿಬ್ಬರು ಮದ್ವೆ ಆಗ್ತಿದಾರಾ ಅಥವಾ ಬರೀ ಫೋಟೋಗೆ ಫೋಸ್‌ ಕೊಟ್ಟು ಗೊಂದಲ ಸೃಷ್ಟಿಸುತ್ತಿದ್ದಾರಾ ಅನ್ನೋ ಮಾತುಗಳು ಕೇಳಿಬರುತ್ತಿವೆ. ಈ ನಡುವೆ ಕೆಲವರು, ಇದು ಸಿನಿಮಾ ಫೋಟೋ ಶೂಟ್‌ ಇರಬಹುದು ಅಥವಾ ಇಬ್ಬರೂ ಸೇರಿ ಹೊಸ ಸೀರಿಯಲ್‌ ಮಾಡ್ತಾ ಇರಬಹುದೇನೋ ಅಂತೆಲ್ಲಾ ಚರ್ಚೆ ಆಗುತ್ತಿದೆ. ಈ ಎಲ್ಲಾ ಅನುಮಾನಕ್ಕೆ ಮತ್ತು ಚರ್ಚೆಗೆ ಇವರಿಬ್ಬರೇ ಉತ್ತರ ಕೊಡಬೇಕಿದೆ.

ಮಂಜು ಪಾವಗಡ ಮತ್ತು ದಿವ್ಯ ಸುರೇಶ್‌ ಇಬ್ಬರು ಸ್ನೇಹಿತರು. ಬಿಗ್‌ಬಾಸ್‌ ಮನೆಯಲ್ಲಿ ಸ್ನೇಹಿತರಾಗಿದ್ದವರು, ಅಲ್ಲಿಂದ ಹೊರ ಬಂದಮೇಲೂ ಸಹ ತಮ್ಮ ಸ್ನೇಹ ಸಂಬಂಧವನ್ನು ಮತ್ತಷ್ಟು ಬಿಗಿ ಮಾಡಿಕೊಂಡಿದ್ದಾರೆ. ದಿವ್ಯ ಸುರೇಶ್‌ ಅಂತೂ “ನನ್‌ ಮಂಜ” ಅಂತ ಊರ್‌ ತುಂಬ ಹೇಳ್ಕೊಂಡ್‌ ಬರ್ತಾ ಇದಾರೆ. ಈ ನನ್‌ ಮಂಜ ಅನ್ನುವುದರ ಒಳ ಮರ್ಮ ಏನೆಂಬುದು ಗೊತ್ತಿಲ್ಲ.

ಅತ್ತ ಮಂಜಣ್ಣ ಕೂಡ ಏನು ಹೇಳ್ತಾ ಇಲ್ಲ. ಹೀಗಾಗಿ ಅಂತೆಕಂತೆಗಳು ನಡೆಯುತ್ತಲೇ ಇವೆ. ಇವರಿಬ್ಬರ ಬಗ್ಗೆ ಜೋರಾದ ಸುದ್ದಿಗಳು ಹರಿದಾಡುತ್ತಲೇ ಇವೆ. ಇವರು ಕೊಟ್ಟಿರುವ ಫೋಟೋ ಫೋಸ್‌ ನೋಡಿಕೊಂಡು ಅದೇನು ಅಂತ ನೀವ್‌ ನೀವೆ ಡಿಸೈಡ್‌ ಮಾಡ್ಕೊಳ್ಳೋದ್‌ ಬಿಟ್ರೆ ಬೇರೆ ದಾರಿ ಇಲ್ಲ.

Categories
ಸಿನಿ ಸುದ್ದಿ

ದೇವರ ಮಗ ಸೂರ್ಯನ ಸಂಗೀತ ಚಿಕಿತ್ಸೆ: ಸೂರ್ಯಕಾಂತ್ ಗೆ ಸ್ವರ್ಗದಿಂದಲೇ ಹಾರೈಸಿರುತ್ತಾರೆ ಸ್ವರ ಭೀಷ್ಮ!

ಗುರುವಿಗೆ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ಅಂತಾರೇ. ಈ ಮಾತಿನಂತೆ ನಡೆದ ಕಾರಣಕ್ಕೆ ಸೂರ್ಯಕಾಂತ್ ಸೂರ್ಯನಂತೆಯೇ ಧಗಧಗಿಸುತ್ತಿದ್ದಾರೆ. ಸೂರ್ಯಕಾಂತ್ ನಂತೆಯೇ ಸಹಸ್ರಾರು ಪ್ರತಿಭೆಗಳು ಪಂಚಾಕ್ಷರಿ ಅಣ್ಣಿಗೇರಿಯವರ ಗರಡಿಯಲ್ಲಿ ಅಕ್ಷರಾಭ್ಯಾಸ ಮಾಡಿ ಸಂಗೀತ ಲೋಕದಲ್ಲಿ ಮಿನುಗುತ್ತಿದ್ದಾರೆ. ಪುಟ್ಟರಾಜ ಗವಾಯಿಗಳ ಗುರುಕುಲದಿಂದ ಲಕ್ಷ ಲಕ್ಷ ಪ್ರತಿಭೆಗಳು ಹೊರಬರುತ್ತಿದ್ದಾರೆ. ಸಂಗೀತ ಲೋಕವನ್ನು ಬೆಳಗುತ್ತಿದ್ದಾರೆ.

ಮೂರೇ ಮೂರು ವಾರಗಳ ಹಿಂದೆ ಸೂರ್ಯಕಾಂತ್ ಸಾಮಾನ್ಯ ಮತ್ತು ಸಾಮಾನ್ಯ ಅಷ್ಟೇ. ಆದರೆ ಅದೇ ಮೂರು ವಾರಗಳು ಕಳೆದು ನಾಲ್ಕನೇ ವಾರ ಶುರುವಾಗುವಷ್ಟರಲ್ಲಿ ಸೂರ್ಯಕಾಂತ್ ಕಲ್ಬುರ್ಗಿಯ ಹೆಮ್ಮೆಯ ಕುವರ, ಕರುನಾಡಿನ ಮನೆಮಗ, ಕೊನೆಗೀಗ ದೇವರ ಮಗ. ನಿಜಕ್ಕೂ ಸೂರ್ಯಕಾಂತ್ ದೇವರ ಮಗನೇ. ಮಾತು ಕೈಕೊಟ್ಟರೂ ಕೂಡ ಕಂಠಕ್ಕೆ ಕಿಚ್ಚು ಹಚ್ಚಿಕೊಂಡು ‘ ಎದೆತುಂಬಿ ಹಾಡುವೆನು’ ಅಖಾಡಕ್ಕೆ ಧುಮ್ಕಿರುವ ಸೂರ್ಯಕಾಂತ್, ಸಂಗೀತ ಲೋಕ ಬೆಕ್ಕಸ ಬೆರಗಾಗುವಂತೆ ಮಾಡಿದ್ದಾರೆ. ಇಡೀ ಕರುನಾಡ ಮಂದಿಯಿಂದ ಉಘೇ ಉಘೇ ಎನಿಸಿಕೊಂಡಿದ್ದಾರೆ.

ಕನ್ನಡ ನಾಡಿನಲ್ಲಿ ಈ‌ ಪುಣ್ಯ ಭೂಮಿಯಲ್ಲಿ ಅದೆಷ್ಟೋ ಸೂರ್ಯಕಾಂತರಿದ್ದಾರೆ. ಅಷ್ಟು ಮಂದಿ ಸೂರ್ಯಕಾಂತ್ ರಲ್ಲಿ ಕಲ್ಬುರ್ಗಿಯ ಸೂರ್ಯಕಾಂತ್ ಬೆಳಕಿಗೆ ಬರುವುದಕ್ಕೆ, ಎದೆತುಂಬಿ ಹಾಡುವೆನು ಸಂಗೀತ ಸಾಮ್ರಾಜ್ಯದಲ್ಲಿ ಸ್ವರ ಕುಣಿಸುವುದಕ್ಕೆ, ಕರುನಾಡಿನ ಅಂಗಳದಲ್ಲಿ ಮೆರವಣಿಗೆ ಹೊರಡುವುದಕ್ಕೆ ಮೂಲ ಕಾರಣ ಗದಗಿನ ಶ್ರೀ ವೀರೇಶ್ವರ ಪುಣ್ಯಾಶ್ರಮದ ಸಂಗೀತ ಗುರುಗಳಾದ ಪಂಚಾಕ್ಷರಿ ಅಣ್ಣಿಗೇರಿಯವರು. ಇವರು ಸೂರ್ಯಕಾಂತ್ ಕಂಠಕ್ಕಿರುವ ಶಕ್ತಿಯನ್ನ ಗಮನಿಸದೇ ಹೋಗಿದ್ದರೆ, ಹಸಿದ ಹೊಟ್ಟೆಗೆ ಅನ್ನಕೊಟ್ಟು ಸಂಗೀತಭ್ಯಾಸ ಮಾಡಿಸದೇ ಹೋಗಿದ್ದರೆ, ಇವತ್ತು ಸೂರ್ಯಕಾಂತ್
ಗಾನಭೀಷ್ಮ ಎಸ್ ಪಿ.ಬಿಯವರು ಹುಟ್ಟುಹಾಕಿದ ವೇದಿಕೆಗೆ ಬರುತ್ತಿರಲಿಲ್ಲ. ಮಾತು ಬಂದರೂ ಮೂಖರಾಗಿರುವವರಿಗೆ ಸ್ಪೂರ್ತಿಯಾಗುತ್ತಿರಲಿಲ್ಲ.

ಎಲ್ಲಾ ಇದ್ದು ಏನು ಇಲ್ಲವೆಂದು ಕೊರಗುತ್ತಿರುವ ಎಷ್ಟೋ ಮಂದಿಗೆ ಕಲ್ಬುರ್ಗಿಯ ಸೂರ್ಯಕಾಂತ್ ಸ್ಪೂರ್ತಿಯಾಗಿದ್ದಾರೆ. ಆತ್ಮವಿಶ್ವಾಸವೊಂದಿದ್ದರೆ ನ್ಯೂನತೆಗೆ ಮಾತ್ರವಲ್ಲ ದೇವರಿಗೆ ಸೆಡ್ಡುಹೊಡೆದು ಸಾಧನೆ ಮಾಡಬಹುದು ಎನ್ನುವುದನ್ನ ತೋರಿಸಿಕೊಟ್ಟಿದ್ದಾರೆ. ಮಾತು ಕೈ ಕೊಟ್ಟರೂ ಕಂಠವನ್ನ ಶಾರ್ಪ್ ಮಾಡಿಕೊಂಡಿರುವ ಸೂರ್ಯಕಾಂತ್, ತಮ್ಮ ಧ್ವನಿಯ ಮೂಲಕ ಕೇಳುಗರನ್ನ ಕಟ್ಟಿಹಾಕ್ತಾರೆ, ಮನಸ್ಸನ್ನ ಹಗುರಾಗಿಸ್ತಾರೆ, ಹೃದಯಕ್ಕೆ ಇಂಪು ಪ್ಲಸ್ ತಂಪು ನೀಡ್ತಾರೆ. ಜೊತೆಗೆ ಭಾವುಕರನ್ನಾಗಿ ಮಾಡುತ್ತಾರೆ.‌ ಹೀಗೆ ಸಂಗೀತದ ಚಿಕಿತ್ಸೆ ನೀಡುತ್ತಾ ಸವಾರಿ ಹೊರಟಿರುವ ಸೂರ್ಯಕಾಂತ್, ‘ ಪವಡಿಸು ಪರಮಾತ್ಮ ಶ್ರೀ ವೆಂಕಟೇಶಾ ಅಂತ ಹಾಡಿ ರಘು ದೀಕ್ಷಿತ್, ರಾಜೇಶ್ ಕೃಷ್ಣನ್, ಗುರುಕಿರಣ್ ರನ್ನ ಭಾವುಕರನ್ನಾಗಿಸಿದ್ದಾರೆ. ಹರಿದು ಹೋಗಿರುವ ನನ್ನ ಹೃದಯಕ್ಕೆ ಸಂಗೀತದ ಮೂಲಕ ಹೊಲಿಗೆ ಹಾಕಿಬಿಟ್ಟ. ಇನ್ಮೇಲೆ ಸೂರ್ಯಕಾಂತ್ ನನ್ನ ತಮ್ಮನಿದ್ದಂತೆ ಅವನ ಬೆನ್ನಿಗೆ ನಾನು‌ ನಿಲ್ತೇನೆ ಎಂದಿದ್ದಾರೆ ರಘು ದೀಕ್ಷಿತ್.

ಹಾಡು ಎಲ್ಲರೂ ಹಾಡ್ತಾರೆ. ಆದರೆ, ಭಾವಪರವಶರಾಗಿ ಹಾಡುವವರು ತುಂಬಾ ಅಪರೂಪ.‌ ಆ ಅಪರೂಪದವರಲ್ಲಿ ಸೂರ್ಯಕಾಂತ್ ಕೂಡ ಒಬ್ಬರು ಎನ್ನುವುದು ಪ್ರೂ ಆಗಿದೆ. ‘ಪವಡಿಸು ಪರಮಾತ್ಮ’ ಹಾಡಿನ ಮೂಲಕ ಸ್ವರಸಾಮ್ರಾಜ್ಯದ ದಿಗ್ಗಜರು‌ ಮಾತ್ರವಲ್ಲ ಸ್ವರ್ಗದಲ್ಲಿ ಕುಳಿತು ಎದೆತುಂಬಿ ಹಾಡುವೆನು ಕಾರ್ಯಕ್ರಮ ವೀಕ್ಷಿಸುತ್ತಿರುವ ಗಾನಗಾರುಡಿಗ, ಸ್ವರಭೀಷ್ಮ ಎಸ್. ಪಿ ಬಾಲಸುಬ್ರಹ್ಮಣ್ಯಂ
ಅವರು ಮೆಚ್ಚುವಂತೆ ಭಾವಪೂರ್ಣವಾಗಿ ಹಾಡಿದ್ದಾರೆ. ಇಷ್ಟೊಂದು ಭಾವ ಭಕ್ತಿ ಕಲಿಸಿದ್ದು ಪಂಚಾಕ್ಷರಿ ಅಣ್ಣಿಗೇರಿಯವರು. ಶಿಕ್ಷಕರ ದಿನಾಚರಣೆ ಅಂಗವಾಗಿ ಎದೆತುಂಬಿ ಹಾಡುವೆನು ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಬಂದಿದ್ದರು.
ಗುರುಗಳು ಹಾರ್ಮೋನಿಯಂ ನುಡಿಸಿದರೆ, ಶಿಷ್ಯ ಸೂರ್ಯಕಾಂತ್ ಭಕ್ತಿಪೂರ್ವಕ ಹಾಡಿನ ಮೂಲಕ ಗುರುಭಕ್ತಿ‌ ತೋರಿಸಿದರು.

ಗುರುವಿಗೆ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ಅಂತಾರೇ. ಈ ಮಾತಿನಂತೆ ನಡೆದ ಕಾರಣಕ್ಕೆ ಸೂರ್ಯಕಾಂತ್ ಸೂರ್ಯನಂತೆಯೇ ಧಗಧಗಿಸುತ್ತಿದ್ದಾರೆ. ಸೂರ್ಯಕಾಂತ್ ನಂತೆಯೇ ಸಹಸ್ರಾರು ಪ್ರತಿಭೆಗಳು ಪಂಚಾಕ್ಷರಿ ಅಣ್ಣಿಗೇರಿಯವರ ಗರಡಿಯಲ್ಲಿ ಅಕ್ಷರಾಭ್ಯಾಸ ಮಾಡಿ ಸಂಗೀತ ಲೋಕದಲ್ಲಿ ಮಿನುಗುತ್ತಿದ್ದಾರೆ. ಪುಟ್ಟರಾಜ ಗವಾಯಿಗಳ ಗುರುಕುಲದಿಂದ ಲಕ್ಷ ಲಕ್ಷ ಪ್ರತಿಭೆಗಳು ಹೊರಬರುತ್ತಿದ್ದಾರೆ. ಸಂಗೀತ ಲೋಕವನ್ನು ಬೆಳಗುತ್ತಿದ್ದಾರೆ.

ಕನ್ನಡ ನೆಲದಲ್ಲಿ ಅವಿತಿರುವ ಸಂಗೀತ ಪ್ರತಿಭೆಗಳು ಹೊರಬರಬೇಕು. ಕರುನಾಡಿನಲ್ಲಿ ಕನ್ನಡ ಕಂಠ ಮೊಳಗಬೇಕು ಮತ್ತು ಬೆಳಗಬೇಕು ಎನ್ನುವ ಮಹದಾಸೆಯಿತ್ತು. ಆ ದಿವ್ಯಕನಸಿನಂತೆ ಎಷ್ಟೋ ಪ್ರತಿಭೆಗಳು ಎದೆತುಂಬಿ ಹಾಡುವೆನು ವೇದಿಕೆಯಿಂದ ಬೆಳಕಿಗೆ ಬಂದರು. ಸಂಗೀತ ಲೋಕದಲ್ಲಿ ಮೆರವಣಿಗೆ ಹೊರಟರು. ಈಗ ಮತ್ತೊಂದು ತಂಡ ಸ್ವರಪರೀಕ್ಷೆ ಎದುರಿಸಿ ಕಂಠದ ಜೊತೆ ಕಾದಾಟಕ್ಕೆ ಇಳಿದಿದೆ. ದಕ್ಷಿಣ ಭಾರತದ ಅಗ್ರ ಸಂಗೀತ ಪರಂಪರೆ ಮುಂದುವರೆದಿದೆ. ಕನ್ನಡ ನಾಡಿನ ಪ್ರತಿಭೆಗಳನ್ನ ಪ್ರೋತ್ಸಾಹಿಸುವ, ಬೆಳೆಸುವ ಕಾಯಕ ಎಸ್ ಬಿಯವರ ಕನಸಿನಂತೆ ನೆರವೇರುತ್ತಿದೆ. ಮತ್ತಷ್ಟು ಮಗದಷ್ಟು ಗಾನ ಪ್ರತಿಭೆಗಳು ಕರುನಾಡಿಗೆ ಕೊಡುಗೆಯಾಗಿ ಸಿಗಲಿವೆ.

ವಿಶಾಲಾಕ್ಷಿ, ಎಂಟರ್ ಟೈನ್ಮೆಂಟ್ ಬ್ಯೂರೋ ಸಿನಿಲಹರಿ

Categories
ಸಿನಿ ಸುದ್ದಿ

ಗಣೇಶ ಹಬ್ಬಕ್ಕೆ ದಚ್ಚು ಸರ್ಪ್ರೈಸ್!‌ ದರ್ಶನ್‌ ನಟನೆಯ ಹೊಸ ಸಿನಿಮಾದ ಟೈಟಲ್‌ ಅನೌನ್ಸ್‌ ಗುರು…

ಯಜಮಾನ ಸಿನಿಮಾದ ಯಶಸ್ಸಿನ ಬಳಿಕ ಮತ್ತದೇ ತಂಡ ಸೇರಿ ಹೊಸ ಸಿನಿಮಾ ಮಾಡುತ್ತಿರುವ ವಿಷಯ ಗೊತ್ತೇ ಇದೆ. ನಿರ್ಮಾಪಕಿ ಶೈಲಜಾ ನಾಗ್‌ ಅವರು ತಮ್ಮ ಮೀಡಿಯಾ ಹೌಸ್‌ ಸ್ಟುಡಿಯೋ ಬ್ಯಾನರ್‌ನಲ್ಲಿ ದರ್ಶನ್‌ಗಾಗಿ ಸಿನಿಮಾ ಮಾಡುತ್ತಿದ್ದಾರೆ. ಆ ಚಿತ್ರವನ್ನು ವಿ.ಹರಿಕೃಷ್ಣ ನಿರ್ದೇಶಿಸುತ್ತಿದ್ದಾರೆ. ಈಗ ಚಿತ್ರದ ಶೀರ್ಷಿಕೆ ಅನೌನ್ಸ್‌ ಮಾಡಲು ತಂಡ ಉತ್ಸಾಹದಲ್ಲಿದೆ. ಸೆಪ್ಟೆಂಬರ್‌ 10ರಂದು ಚಿತ್ರದ ಟೈಟಲ್‌ ಲಾಂಚ್‌ ಆಗುತ್ತಿದೆ. ಇದು ದಚ್ಚು ಫ್ಯಾನ್ಸ್‌ಗೆ ಡಬಲ್‌ ಧಮಾಕ!

ದರ್ಶನ್‌ “ರಾಬರ್ಟ್‌” ಮೂಲಕ ಅಬ್ಬರಿಸಿದ್ದು ಎಲ್ಲರಿಗೂ ಗೊತ್ತೇ ಇದೆ. ಆ ಸಿನಿಮಾ ಬಳಿಕ ದರ್ಶನ್‌ ಯಾವ ಸಿನಿಮಾ ಒಪ್ಪಿಕೊಳ್ಳುತ್ತಾರೆ ಎಂಬ ಪ್ರಶ್ನೆ ಎಲ್ಲರಲ್ಲೂ ಇತ್ತು. ಅದಕ್ಕೆ ಉತ್ತರವೂ ಆಗಲೇ ಸಿಕ್ಕಿತ್ತು. “ಯಜಮಾನ” ಸಿನಿಮಾ ನಿರ್ಮಿಸಿದ್ದ ಶೈಲಜಾನಾಗ್‌ ಅವರಿಗೆ ಮತ್ತೊಂದು ಕಾಲ್‌ ಶೀಟ್‌ ಕೊಟ್ಟಿದ್ದರು ದರ್ಶನ್.‌ ಈಗ ಮತ್ತೆ “ಯಜಮಾನ” ತಂಡವೇ ದರ್ಶನ್‌ ಅವರಿಗೆ ಹೊಸ ಸಿನಿಮಾ ಮಾಡುತ್ತಿದೆ. ಹೌದು, ದರ್ಶನ್‌ ನಾಯಕರಾಗಿ ನಟಿಸಲಿರುವ ಹೊಸ ಚಿತ್ರವನ್ನು ಶೈಲಜಾ ನಾಗ್‌ ನಿರ್ಮಾಣ ಮಾಡುತ್ತಿದ್ದು, ವಿ.ಹರಿಕೃಷ್ಣ ಅವರೇ ನಿರ್ದೇಶನ ಮಾಡುತ್ತಿದ್ದಾರೆ. ಈ ಸುದ್ದಿ ಎಲ್ಲರಿಗೂ ಗೊತ್ತಿತ್ತು. ಆದರೆ, ಸಿನಿಮಾದ ಶೀರ್ಷಿಕೆ ಏನು ಅನ್ನೋದು ಗೌಪ್ಯವಾಗಿತ್ತು. ಅದಕ್ಕೆ ಈಗ ಸಮಯ ನಿಗದಿಯಾಗಿದೆ.

ದರ್ಶನ್‌ ಅವರು ಹೊಸ ಸಿನಿಮಾ ಮೂಲಕ ಭರ್ಜರಿ ಎಂಟ್ರಿಕೊಡಲು ತಯಾರಿ ನಡೆಸುತ್ತಿದ್ದಾರೆ. ದಚ್ಚು ಅಭಿನಯದ ಮುಂದಿನ ಸಿನಿಮಾ ಯಾವುದು ಎಂಬ ಪ್ರಶ್ನೆಗೆ ಸೆಪ್ಟೆಂಬರ್‌ ೧೦ರಂದು ಉತ್ತರ ಸಿಗಲಿದೆ. ಅಂದು ಗಣೇಶ ಹಬ್ಬ. ಅಂದೇ ಡಿಬಾಸ್‌ ಹೊಸ ಸಿನಿಮಾದ ಟೈಟಲ್‌ ರಿವೀಲ್‌ ಆಗುತ್ತಿದೆ. ಈ ಸುದ್ದಿಯನ್ನು ಸ್ವತಃ ನಿರ್ಮಾಪಕಿ ಶೈಲಜಾನಾಗ್‌ ಅವರೇ ತಮ್ಮ ಮುಖಪುಟದಲ್ಲಿ ಹಂಚಿಕೊಂಡಿದ್ದಾರೆ. ಇದು ಸಹಜವಾಗಿಯೇ ದಚ್ಚು ಅಭಿಮಾನಿಗಳಿಗೆ ಸಾಕಷ್ಟು ಖುಷಿಕೊಟ್ಟಿದೆ. ಅಂದಹಾಗೆ, ಇದು ದರ್ಶನ್‌ ಅಭಿನಯದ 55ನೇ ಚಿತ್ರ. ಶೈಲಜಾ ನಾಗ್ ಮತ್ತು ಬಿ. ಸುರೇಶ ಅವರ ಮೀಡಿಯ ಹೌಸ್ ಸ್ಟುಡಿಯೋ ಬ್ಯಾನರ್‌ನಲ್ಲಿ ಮೂಡಿ ಬರುತ್ತಿರುವ ಮತ್ತೊಂದು ನಿರೀಕ್ಷೆಯ ಸಿನಿಮಾ. ನಿರ್ದೇಶಕ ವಿ.ಹರಿಕೃಷ್ಣ ನಿರ್ದೇಶನದ ಜೊತೆಗೆ ಸಂಗೀತವನ್ನೂ ನೀಡುತ್ತಿದ್ದಾರೆ. ಅದೇನೆ ಇರಲಿ, “ಯಜಮಾನ”ದಂತಹ ಸೂಪರ್‌ ಹಿಟ್‌ ಸಿನಿಮಾ ನೀಡಿರುವ ಈ ಟೀಮ್‌ ಮತ್ತೊಮ್ಮೆ ಮೋಡಿ ಮಾಡಲಿದೆ ಎಂಬ ನಂಬಿಕೆ ಎಲ್ಲರಲ್ಲೂ ಇದೆ.

ವಿ.ಹರಿಕೃಷ್ಣ ಅವರು ದರ್ಶನ್‌ ಅವರ ಬಹುತೇಕ ಸಿನಿಮಾಗಳಿಗೆ ಸಂಗೀತ ನೀಡಿದ್ದಾರೆ. “ಯಜಮಾನ” ಮೂಲಕ ಅವರು ನಿರ್ದೇಶಕರಾದರು. ಈಗ ಮತ್ತೆ ದಚ್ಚು ಸಿನಿಮಾ ನಿರ್ದೇಶಿಸುತ್ತಿರುವುದು ವಿಶೇಷ. ಶೈಲಜಾನಾಗ್‌ ನಿರ್ಮಾಣದ ಹತ್ತನೇ ಚಿತ್ರವಿದು ಎಂಬುದು ಇನ್ನೊಂದು ವಿಶೇಷ. ಸದ್ಯ ಚಿತ್ರದ ಶೀರ್ಷಿಕೆ ರಿವೀಲ್‌ ಆಗುತ್ತಿದೆ. ಈ ಬಾರಿಯೂ ಮಜವೆನಿಸುವ ಸಿನಿಮಾ ಕಟ್ಟಿಕೊಡುವ ಉತ್ಸಾಹದಲ್ಲಿ ವಿ.ಹರಿಕೃಷ್ಣ ತಂಡವಿದೆ.

ಇನ್ನು, ನಿರ್ಮಾಪಕಿ ಶೈಲಜಾನಾಗ್‌ ಅವರು ಅದ್ಧೂರಿಯಾಗಿಯೇ ಸಿನಿಮಾ ನಿರ್ಮಾಣ ಮಾಡಿದವರು. ಈ ಚಿತ್ರವನ್ನೂ ಸಹ ಭರ್ಜರಿಯಾಗಿಯೇ ನಿರ್ಮಿಸುವ ಯೋಚನೆಯಲ್ಲಿದ್ದಾರೆ. ಕೊರೊನಾ ಹಾವಳಿಗೆ ತತ್ತರಿಸಿರುವ ಕನ್ನಡ ಸಿನಿಮಾ ರಂಗ ಮತ್ತೆ ಚೇತರಿಸಿಕೊಳ್ಳುತ್ತಿದೆ. ಈ ಮಧ್ಯೆಯೇ ದಚ್ಚು ಅಭಿನಯದ ಹೊಸ ಸಿನಿಮಾದ ಶೀರ್ಷಿಕೆ ಗಣೇಶ ಹಬ್ಬದಂದು ಅನಾವರಣಗೊಳ್ಳುತ್ತಿರುವುದು ಖುಷಿಕೊಟ್ಟಿದ್ದು, ಚಿತ್ರರಂಗ ಗರಿಗೆದರುವಂತೆ ಮಾಡಿದೆ.

Categories
ಸಿನಿ ಸುದ್ದಿ

ಕಿಚ್ಚನ ಮೇಲಿನ ಅಭಿಮಾನ- ಅಭಿಮಾನಿಯ ಸ್ಟ್ಯಾಂಪ್‌ ಗಿಫ್ಟ್!

ಸುದೀಪ್‌ ಅವರಿಗೆ ದೇಶ ವಿದೇಶಗಳಿಂದಲೂ ಗೌರವ ಸಿಕ್ಕಿದೆ. ಇಡೀ ಭಾರತೀಯ ಚಿತ್ರರಂಗವೇ ಕಿಚ್ಚನ ನಟನೆಯನ್ನು ಕೊಂಡಾಡಿದೆ. ನಟನೆ ಮಾತ್ರವಲ್ಲ, ಮಾನವೀಯತೆ ಗುಣದಲ್ಲೂ ಸೈ ಎನಿಸಿಕೊಂಡಿರುವ ಸುದೀಪ್‌, ತಮ್ಮ ಬಣ್ಣದ ಲೋಕದ ಜೊತೆ ಜೊತೆಯಲ್ಲಿ ಅವರು ಸಾಮಾಜಿಕ ಕೆಲಸವನ್ನೂ ಮಾಡಿಕೊಂಡು ಬಂದವರು. ಈಗಾಗಲೇ ಸರ್ಕಾರ ಹಾಗೂ ಹಲವು ಸಂಘ-ಸಂಸ್ಥೆಗಳು ಅವರನ್ನು ಗೌರವಿಸಿ, ಸತ್ಕರಿಸಿವೆ. ಈಗ ಇನ್ನೂ ಒಂದು ಗೌರವ ಸಂದಿದೆ. ಅದು ಅವರ ಪ್ರೀತಿಯ ಅಭಿಮಾನಿಯಿಂದ ಹೌದು, ಸುದೀಪ್‌ ಅಭಿಮಾನಿಯೊಬ್ಬ, ಭಾರತೀಯ ಅಂಚೆ ಇಲಾಖೆಯ ಅಂಚೆ ಚೀಟಿಯಲ್ಲಿ ಸುದೀಪ್‌ ಚಿತ್ರವನ್ನು ಮುದ್ರಿಸಿ, ಸ್ಟ್ಯಾಂಪ್‌ ಬಿಡುಗಡೆ ಮಾಡಿ ಅಭಿಮಾನ ತೋರಿದ್ದಾನೆ.‌


ಹೌದು, ಸುದೀಪ್‌ ಈಗ ಮತ್ತಷ್ಟು ಪ್ರೀತಿಗೆ ಪಾತ್ರರಾಗಿದ್ದಾರೆ. ಸುದೀಪ್‌ ಅವರ ನಟನೆ, ಸಾಮಾಜಿಕ ಕೆಲಸ ಎಲ್ಲವನ್ನೂ ನೋಡಿದ ಭಾರತೀಯ ಅಂಚೆ ಇಲಾಖೆ, ಅವರ ಭಾವಚಿತ್ರ ಇರುವ ಸ್ಟ್ಯಾಂಪ್‌ ಬಿಡುಗಡೆ ಮಾಡಿರುವುದು ವಿಶೇಷ. ಇದು ಅವರಿಗೆ ಸಂದ ಗೌರವ. ಅಂದಹಾಗೆ, ಸುದೀಪ್‌ ಅವರ ಅಭಿಮಾನಿಯೊಬ್ಬ ಸುದೀಪ್‌ ಅವರ ಹೆಸರಲ್ಲಿ ಭಾರತೀಯ ಅಂಚೆ ಇಲಾಖೆಯ “ಮೈ ಸ್ಟ್ಯಾಂಪ್‌ ಸರ್ವೀಸ್‌: ಬಳಸಿ ಸ್ಟ್ಯಾಂಪ್‌ ಮೇಲೆ ಸುದೀಪ್‌ ಚಿತ್ರ ಮುದ್ರಿಸಿ ಅವರಿಗೆ ಉಡುಗೊರೆಯಾಗಿ ನೀಡಿದ್ದಾನೆ.

ಅಂಚೆ ಇಲಾಖೆಯಲ್ಲಿ ಕೆಲಸ ಮಾಡುವ ರವಿ ಎಂಬುವವರು ಸುದೀಪ್‌ ಅವರ ಅಭಿಮಾನಿ. ಅವರು ಭಾರತೀಯ ಅಂಚೆ ಇಲಾಖೆ ನೀಡುವ ಮೈ ಸ್ಟ್ಯಾಂಪ್‌ ಸೇವೆ ಬಳಸಿಕೊಂಡು ಸ್ಟ್ಯಾಂಪ್‌ ಮೇಲೆ ಸುದೀಪ್‌ ಅವರ ಭಾವಚಿತ್ರ ಮುದ್ರಣಗೊಳ್ಳುವಂತೆ ಮಾಡಿದ್ದಾರೆ. ಅವರು ನೂರಕ್ಕೂ ಹೆಚ್ಚು ಸ್ಟ್ಯಾಂಪ್‌ಗಳನ್ನು ಮುದ್ರಿಸಿ ಅವರನ್ನು ನಟ ಸುದೀಪ್‌ ಅವರಿಗೆ ಉಡುಗೊರೆಯಾಗಿ ರವಿ ನೀಡಿದ್ದಾರೆ.
ಸುದೀಪ್‌ ಸದಾ ಹೊಸ ಪ್ರತಿಭೆಗಳನ್ನೂ ಪ್ರೋತ್ಸಾಹಿಸುತ್ತಲೇ ಬಂದವರು. ಇತ್ತೀಚೆಗಷ್ಟೇ ಅವರು ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಆ ಖುಷಿಗೆ ಅಭಿಮಾನಿ ಈ ಸ್ಟ್ಯಾಂಪ್‌ ನೀಡಿದ್ದಾನೆ.

Categories
ಸಿನಿ ಸುದ್ದಿ

ಶ್ರುತಿ ಹರಿಹರನ್‌ ಮತ್ತೆ ಬಂದ್ರು! ಹೆಡ್‌ಬುಷ್‌ ಸಿನ್ಮಾದಲ್ಲಿ ಪ್ರಮುಖ ಪಾತ್ರ!!


ಮೊನ್ನೆಯಷ್ಟೇ “ಹೆಡ್‌ ಬುಷ್‌” ಸಿನಿಮಾಗೆ ಚಿಟ್ಟೆ ಎಂಟ್ರಿಯಾಗಿದ್ದು ಗೊತ್ತೇ ಇದೆ. ಈಗ ಮತ್ತೊಂದು ಸುದ್ದಿ ಚಿತ್ರತಂಡೆದಿಂದ ಹೊರಬಿದ್ದಿದೆ. ಹೌದು, “ಹೆಡ್‌‌ ಬುಷ್” ಸಿನಿಮಾದಲ್ಲಿ ಶ್ರುತಿಹರಿಹರನ್‌ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರದಲ್ಲಿ ಶ್ರುತಿಹರಿಹರನ್‌ ಅವರದು ಯಾವ ಪಾತ್ರ, ಆ ಪಾತ್ರ ಹೇಗಿರುತ್ತೆ ಅನ್ನೋದು ಸಸ್ಪೆನ್ಸ್.‌ ಅಗ್ನಿ ಶ್ರೀಧರ್‌ ಅವರ ಚಿತ್ರಕಥೆ ಈ ಚಿತ್ರಕ್ಕಿದೆ. ಹಾಗಾಗಿ, ಇಲ್ಲಿ ಬರುವ ಪ್ರತಿ ಪಾತ್ರಗಳು ವಿಭಿನ್ನವಾಗಿರುತ್ತವೆ ಎಂಬುದನ್ನಿಲ್ಲಿ ಪ್ರತ್ಯೇಕವಾಗಿ ಹೇಳುವ ಅಗತ್ಯವಿಲ್ಲ ಬಿಡಿ. ಶ್ರುತಿಹರಿಹರನ್‌ ಅವರು ಕಳೆದ ಎರಡು ವರ್ಷಗಳ ಹಿಂದೆ ಮೀಟು ಪ್ರಕರಣದಿಂದಾಗಿ ಜೋರು ಸದ್ದು ಮಾಡಿದ್ದರು. ಆದಾದ ಬಳಿಕ ಅವರು ಇಂಡಸ್ಟ್ರಿಯಿಂದಲೇ ದೂರ ಉಳಿದಿದ್ದರು. ಬಹುತೇಕ ಜನ ಶ್ರುತಿಹರಿಹರನ್‌ ಇನ್ಮುಂದೆ ಗಾಂಧಿನಗರದ ಕಡೆ ಮುಖ ಮಾಡೋದಿಲ್ಲ ಅನ್ನುತ್ತಿದ್ದರು. ಅದಕ್ಕೆ ಕಾರಣಗಳೂ ಕೂಡ ಹಲವಾರು ಇದ್ದವು.

ಈಗ ದಿಢೀರನೇ ಶ್ರುತಿಹರಿಹರನ್‌ ಅವ್ರು “ಹೆಡ್‌ ಬುಷ್”‌ ಸಿನಿಮಾಗೆ ಎಂಟ್ರಿಯಾಗುತ್ತಿದ್ದಾರೆ. ಹಾಗಂತ, ಇಲ್ಲಿ ಅವರು ಮರಸುತ್ತುವ ನಾಯಕಿ ಅಂದುಕೊಳ್ಳುವಂತಿಲ್ಲ. ಅಂತಹ ಸೀನ್‌ ಕೂಡ ಇಲ್ಲಿ ಇರಲು ಸಾಧ್ಯವೇ ಇಲ್ಲ. ಯಾಕೆಂದರೆ, ಅಗ್ನಿಶ್ರೀಧರ್‌ ಅವರ ಬರಹ ಇಲ್ಲಿರುವುದರಿಂದ ಪ್ರತಿ ಪಾತ್ರಗಳಲ್ಲೂ ಒಂದು ರೀತಿ ರಗಡ್‌ ಆಗಿರುತ್ತೆ. ಶ್ರುತಿಹರಿಹರನ್‌ ಇಲ್ಲಿ ಯಾವ ಪಾತ್ರ ಮಾಡುತ್ತಾರೆ ಅನ್ನುವುದಕ್ಕೆ ಸಿನಿಮಾ ಬಂದ ಮೇಲಷ್ಟೇ ಗೊತ್ತಾಗಲಿದೆ.


ಅಂದಹಾಗೆ, ಡಾಲಿ ಪಿಕ್ಚರ್ಸ್‌ ಮತ್ತು ಸೋಮಣ್ಣ ಟಾಕೀಸ್‌ ಬ್ಯಾನರ್‌ನಲ್ಲಿ ಡಾಲಿ ಧನಂಜಯ ಹಾಗೂ ರಾಮ್ಕೋ ಸೋಮಣ್ಣ ಅವರು ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಶೂನ್ಯ ಅವರು ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಈಗಾಗಲೇ ಚಿತ್ರೀಕರಣ ಜೋರಾಗಿಯೇ ನಡೆಯುತ್ತಿದೆ. ಇತ್ತೀಚೆಗೆ ಕಂಠೀರವ ಸ್ಟುಡಿಯೋದಲ್ಲಿ ಯೋಗಿ ಮತ್ತು ಡಾಲಿ ಧನಂಜಯ್‌ ಕಾಂಬಿನೇಷನ್‌ನಲ್ಲಿ ಚಿತ್ರೀಕರನ ನಡೆದಿದೆ. ಅದೇನೆ ಇರಲಿ, “ಹೆಡ್‌ ಬುಷ್‌” ಆಡೋಕೆ ಇನ್ನು ಯಾರೆಲ್ಲ ಬರ್ತಾರೋ ಅದನ್ನು ಕಾದು ನೋಡಬೇಕಿದೆ.

Categories
ಸಿನಿ ಸುದ್ದಿ

ಗಣೇಶನ ಹಬ್ಬಕ್ಕೆ ಲಂಕೆ ಲಗ್ಗೆ! 200ಕ್ಕೂ ಹೆಚ್ಚು ಥಿಯೇಟರ್ ನಲ್ಲಿ ಪ್ರದರ್ಶನ !

ಲೂಸ್ ಮಾದ ಯೋಗೇಶ್ ಅಭಿನಯದ “ಲಂಕೆ” ಚಿತ್ರ ಸೆಪ್ಟೆಂಬರ್ 10 ಗಣೇಶನ ಹಬ್ಬದ ಶುಭದಿನದಂದು ರಾಜ್ಯಾದ್ಯಂತ 200 ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಬಿಡುಗಡೆಗೂ ಮುನ್ನ ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು, ಎಲ್ಲೆಡೆ ಮೆಚ್ಚುಗೆ ಪಡೆದಿದೆ.

ಕೆಲವು ಚಿತ್ರಗಳಿಗೆ ಶುರುವಲ್ಲೇ ತೊಂದರೆಗಳು ಎದುರಾಗುತ್ತವೆ. ಆದರೆ ನಮ್ಮ ಚಿತ್ರ ಯಾವುದೇ ತೊಂದರೆಯಿಲ್ಲದೇ ಬಿಡುಗಡೆ ಹಂತಕ್ಕೆ ಬಂದಿದೆ. ಅದಕ್ಕೆ ಕಾರಣ ನಮ್ಮ ಚಿತ್ರದ ನಿರ್ಮಾಪಕರಾದ ಪಟೇಲ್ ಶ್ರೀನಿವಾಸ್. ಅವರ ಪ್ರೋತ್ಸಾಹಕ್ಕೆ ಅನಂತ ಧನ್ಯವಾದ ಅಂತ ಪ್ರೀತಿಯಿಂದ ಹೇಳಿಕೊಂಡರು ನಿರ್ದೇಶಕ ರಾಮಪ್ರಸಾದ್.
ಈ ಚಿತ್ರ ಇನ್ನಷ್ಟು ಅದ್ದೂರಿಯಾಗಿ ನಿರ್ಮಾಣ ಮಾಡಬೇಕೆಂದು ಕೊಂಡಾಗ ನನ್ನ ಬೆಂಬಲಕ್ಕೆ ನಿಂತವರು ನನ್ನ ಪತ್ನಿ ಸುರೇಖ ರಾಮಪ್ರಸಾದ್.
ನಾಯಕ ಯೋಗಿ, ಕೃಷಿ ತಾಪಂಡ ಸೇರಿದಂತೆ ಚಿತ್ರತಂಡದ ಸದಸ್ಯರ ಹಾಗೂ ಮಿತ್ರರಾದ ರಕ್ಷಿತ್ ಮಹೇಂದ್ರ, ಹರ್ಷ ಮಹೇಂದ್ರ, ನಂಜುಂಡ ಮೂರ್ತಿ ಮುಂತಾದವರು ಮಾಡಿರುವ ಉಪಕಾರ ಬಹಳವಾದದ್ದು. ಎಲ್ಲರಿಗೂ ತುಂಬು ಹೃದಯದ ಧನ್ಯವಾದ ಅರ್ಪಿಸಿದ ರಾಮಪ್ರಸಾದ್, ಇದೇ ಹತ್ತರಂದು ನಮ್ಮ ಚಿತ್ರ ತೆರೆಗೆ ಬರಲಿದೆ ನೋಡಿ ಹರಸಿ ಎಂದರು.

ನಾನು ನಮ್ಮ ತಂದೆಯವರು ನಿರ್ಮಿಸಿದ್ದ ಚಿತ್ರಗಳಲ್ಲೇ ಇಷ್ಟು ಪತ್ರಿಕಾಗೋಷ್ಠಿಯಲ್ಲಿ ಪಾಲ್ಗೊಂಡಿಲ್ಲ.. ಆದರೆ ಈ ಚಿತ್ರದ ಎಲ್ಲಾ ರೀತಿಯ ಪ್ರಚಾರ ಕಾರ್ಯಗಳಲ್ಲೂ ನಾನು ಭಾಗಿಯಾಗಿದ್ದೇನೆ ಎಂದ ನಾಯಕ ಲೂಸ್ ಮಾದ ಯೋಗೇಶ್ ಒಳ್ಳೆಯ ತಂಡದ ಜೊತೆ ಕೆಲಸ ಮಾಡಿದ ಖುಷಿಯಿದೆ. ಗಣಪತಿ ಹಬ್ಬಕ್ಕೆ ಚಿತ್ರ ಬರುತ್ತಿದೆ ನೋಡಿ ಹಾರೈಸಿ ಎಂದರು ಯೋಗಿ.

ಚಿತ್ರದ ಬಗ್ಗೆ ಹೇಳುವುದೆಲ್ಲಾ ಹಿಂದೆ ಹೇಳಿ ಆಗಿದೆ..ನಮ್ಮ ಚಿತ್ರ ಸದ್ಯದಲ್ಲೇ ತೆರೆಗೆ ಬರಲಿದೆ..ನಿಮ್ಮೆಲ್ಲರ ಪ್ರೋತ್ಸಾಹದಿಂದ ಚಿತ್ರ ಗೆಲ್ಲುವ ಭರವಸೆಯಿದೆ ಎನ್ನುತ್ತಾರೆ ನಾಯಕಿ ಕೃಷಿ ತಾಪಂಡ.

ನಿರ್ಮಾಪಕರಾದ ಪಟೇಲ್ ಶ್ರೀನಿವಾಸ್, ಸುರೇಖ ರಾಮಪ್ರಸಾದ್ ಹಾಗೂ ಕಲಾವಿದರಾದ ಮಾಸ್ಟರ್ ಮಿಥುನ್ ಗೌಡ, ಬೇಬಿ ಜನ್ಯ ಮುಂತಾದವರು ಪತ್ರಿಕಾಗೋಷ್ಠಿಯಲ್ಲಿ‌ ಹಾಜರಿದ್ದು, ಚಿತ್ರದ ಬಗ್ಗೆ ಮಾತನಾಡಿದರು.
.
ರಾಮಪ್ರಸಾದ್ ಎಂ.ಡಿ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿದ್ದಾರೆ. ರಾಮ ಪ್ರಾಸಾದ್ ಹಾಗೂ ಗುರುರಾಜ ದೇಸಾಯಿ ಸಂಭಾಷಣೆ ಬರೆದಿದ್ದಾರೆ.

ದಿ ಗ್ರೇಟ್ ಎಂಟರ್ ಟೈನರ್ ಲಾಂಛನದಲ್ಲಿ ಪಟೇಲ್ ಶ್ರೀನಿವಾಸ್(ನಾಗವಾರ) ಹಾಗೂ ಸುರೇಖ ರಾಮಪ್ರಸಾದ್ ಈ ಚಿತ್ರ ನಿರ್ಮಾಣ ಮಾಡಿದ್ದಾರೆ.

ರಮೇಶ್ ಬಾಬು ಛಾಯಾಗ್ರಹಣ, ಶಿವರಾಜ್ ಮೇಹು ಸಂಕಲನ, ರವಿವರ್ಮ, ಪಳನಿರಾಜ್, ಅಶೋಕ್ ಸಾಹಸ ನಿರ್ದೇಶನ ಹಾಗೂ ಧನಂಜಯ್, ಮೋಹನ್ ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ.
ಲೂಸ್ ಮಾದ ಯೋಗೇಶ್ ಚಿತ್ರದ ನಾಯಕನಾಗಿ ಅಭಿನಯಿಸಿದ್ದು, ಇತ್ತೀಚೆಗೆ ನಿಧನರಾದ ಸಂಚಾರಿ ವಿಜಯ್ ಸಹ ಈ‌ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.
ಕೃಷಿ ತಾಪಂಡ, ಕಾವ್ಯ ಶೆಟ್ಟಿ, ಶರತ್ ಲೋಹಿತಾಶ್ವ, ಶೋಭ್ ರಾಜ್, ಡ್ಯಾನಿ ಕುಟ್ಟಪ್ಪ, ಸುಚೇಂದ್ರ ಪ್ರಸಾದ್, ವಾಣಿಶ್ರೀ, ಗಾಯಿತ್ರಿ ಜಯರಾಂ, ಎಸ್ಟರ್ ನರೋನ, ಪ್ರಶಾಂತ್ ಸಿದ್ದಿ, ಆದ್ಯ ನಾಯಕ್, ಮಿಥುನ್ ಗೌಡ, ಬೇಬಿ ಜನ್ಯ ಮುಂತಾದವರು ಈ ಚಿತ್ರದಲ್ಲಿದ್ದಾರೆ.

Categories
ಸಿನಿ ಸುದ್ದಿ

ಪ್ರೀತ್ಸೆ ಪ್ರೀತ್ಸೆ ಗಾಯಕನಿಗೆ ಸರಿಗಮಪ ರೆಡ್ ಕಾರ್ಪೆಟ್; ರಾಜೇಶ್ ಕೃಷ್ಣನ್ ಜಾಗಕ್ಕೆ ಹೇಮಂತ್ ಗ್ರ್ಯಾಂಡ್ ಎಂಟ್ರಿ !

ಗಾಯಕ ಹೇಮಂತ್ ಕುಮಾರ್ ಸರಿಗಮಪ ಸಿಂಗಿಂಗ್ ಶೋ ಮೂಲಕ ಹೊಸ ಜರ್ನಿ ಆರಂಭಿಸಿದ್ದಾರೆ. ಮಹಾಗುರುಗಳಾದ ಹಂಸಲೇಖ, ವಿಜಯ್ ಪ್ರಕಾಶ್, ಅರ್ಜುನ್ ಜನ್ಯಾರ ಜೊತೆ ನಿರ್ಣಾಯಕರಾಗಿ ಸರಿಗಮಪ ಸಂಗೀತ ಸಾಮ್ರಾಜ್ಯದಲ್ಲಿ ಕೂರಲಿದ್ದಾರೆ

ಸರಿಗಮಪ ಸಿಂಗಿಂಗ್ ಅಖಾಡದಿಂದ ಮೆಲೋಡಿ ಕಿಂಗ್ ರಾಜೇಶ್ ಕೃಷ್ಣನ್
ಹೊರನಡೆದಿದ್ದು ಎಲ್ಲರಿಗೂ ಗೊತ್ತಿರುವ ವಿಚಾರ. ಸದ್ಯ ಎದೆತುಂಬಿ ಹಾಡುವೆನು ಕಾರ್ಯಕ್ರಮದಲ್ಲಿ ರಾಜೇಶ್ ಕೃಷ್ಣನ್ ನಿರ್ಣಾಯಕರಾಗಿ ಕೂತಿದ್ದಾರೆ. ಇತ್ತ ರಾಜೇಶ್ ಕೃಷ್ಣನ್ ಬಿಟ್ಟೋದ ಜಾಗವನ್ನ ತುಂಬುವವರು ಯಾರು ? ಕೃಷ್ಣನ್ ಕುರ್ಚಿ ಅಲಂಕರಿಸುವ ಅದೃಷ್ಟ ಹಾಗೂ ಸೌಭಾಗ್ಯ ಯಾರಿಗೆ ದಕ್ಕಲಿದೆ ಎನ್ನುವಂತಹ ಕೂತೂಹಲ ಮಿಲಿಯನ್ ಡಾಲರ್ ಸ್ವರೂಪ ಪಡೆದಿತ್ತು. ಫೈನಲೀ ಆ ದಶಕದ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಜೀ ಸಂಸ್ಥೆ ಕನ್ನಡದ ಮತ್ತೊಬ್ಬ ಹೆಮ್ಮೆಯ ಗಾಯಕ ಹೇಮಂತ್ ಸುಬ್ರಮಣ್ಯ ಅವರಿಗೆ ರತ್ನಗಂಬಳಿ ಹಾಕಿ ಕರೆತಂದಿದೆ.

ಹೇಮಂತ್ ಸ್ಯಾಂಡಲ್ ವುಡ್ ನ ಸೆನ್ಸೇಷನಲ್ ಸಿಂಗರ್. ಪ್ರೀತ್ಸೆ ಪ್ರೀತ್ಸೆ… ಕಣ್ಣು ಮುಚ್ಚಿ ನನ್ನ ಪ್ರೀತ್ಸೆ ಅಂತ ಹಾಡುತ್ತಾ ಚಂದನವನಕ್ಕೆ ಗ್ರ್ಯಾಂಡ್ ಎಂಟ್ರಿಕೊಟ್ಟ ಹೇಮಂತ್
ಇಲ್ಲಿವರೆಗೂ ಹಿಂತಿರುಗಿ ನೋಡಿಯೇ ಇಲ್ಲ. ಮುಂಗಾರು ಮಳೆ, ಬುಲ್ ಬುಲ್, ರಾಜಹುಲಿ, ಐರಾವತ ಸೇರಿದಂತೆ ರಾಬರ್ಟ್ ವರೆಗೂ ಹೇಮಂತ್ ಸಂಗೀತ ‌ಸವಾರಿ ಮುಂದುವರೆದಿದೆ. ಈಗ ಸರಿಗಮಪ ಸಿಂಗಿಂಗ್ ಶೋ ಮೂಲಕ ಹೊಸ ಜರ್ನಿ ಆರಂಭವಾಗಿದೆ. ಮಹಾಗುರುಗಳಾದ ಹಂಸಲೇಖ, ವಿಜಯ್ ಪ್ರಕಾಶ್, ಅರ್ಜುನ್ ಜನ್ಯಾರ ಜೊತೆ ನಿರ್ಣಾಯಕರಾಗಿ ಸರಿಗಮಪ ಸಂಗೀತ ಸಾಮ್ರಾಜ್ಯದಲ್ಲಿ ಕೂರಲಿದ್ದಾರೆ.

ಸರಿಗಮಪ ಕನ್ನಡ ಟೆಲಿವಿಷನ್ ಲೋಕದ, ಜೀ ಕನ್ನಡದ ಹೆಮ್ಮೆಯ ಜನಪ್ರಿಯ ಸಿಂಗಿಂಗ್ ಶೋ. ಭರ್ತಿ 17 ಸೀಸನ್ ಗಳನ್ನ ಯಶಸ್ವಿಯಾಗಿ ಕಂಪ್ಲೀಟ್ ಮಾಡಿದೆ. 18 ನೇ ಸೀಸನ್ ಗೆ ಹೊಸ ರೂಪ ಸಿಗಲಿದ್ದು, ಸರಿಗಮಪ
ಚಾಂಪಿಯನ್ ಶಿಪ್ ನ ಅದ್ಧೂರಿಯಾಗಿ ಆರಂಭ ಮಾಡುವ ಪ್ಲ್ಯಾನ್ ಇದೆಯಂತೆ. ಇಲ್ಲಿವರೆಗೂ ಸರಿಗಮಪ ಸ್ವರ ಸಾಮ್ರಾಜ್ಯದಲ್ಲಿ ಕಂಠದ ಜೊತೆ ಸ್ಪರ್ಧೆಗಿಳಿದು ಗೆಲುವಿನ ಕಿರೀಟ ಮುಡಿಗೇರಿಸಿಕೊಂಡಿರುವ ಎಲ್ಲಾ ವಿಜೇತರನ್ನ ಮತ್ತೊಮ್ಮೆ ಸ್ಟೇಜ್ ಗೆ ಕರೆತಂದು ಸರಿಗಮಪ ಚಾಂಪಿಯನ್ ಶಿಪ್ ಆರಂಭ ಮಾಡಲಿದ್ದಾರಂತೆ. ಅಷ್ಟಕ್ಕೂ, ಸೀಸನ್ 18 ಹೊಸ ರೂಪದ ಬಗ್ಗೆ ಹೆಚ್ಚಿನ ಡೀಟೈಲ್ಸ್ ಸಿಕ್ಕಿಲ್ಲ‌ ಆದರೆ ಸರಿಗಮಪ ಸಿಂಗಿಂಗ್ ಶೋಗೆ ಕಿಕ್‌ಸ್ಟಾರ್ಟ್ ಸಿಕ್ಕಿದೆ.
ಶೂಟಿಂಗ್ ಸೆಟ್ ನಲ್ಲಿ ವಿಜಯ್ ಪ್ರಕಾಶ್ ಹಾಗೂ ಅರ್ಜುನ್ ಜನ್ಯಾ ಜೊತೆ ಸೆಲ್ಫಿ‌ ಕ್ಲಿಕ್ಕಿಸಿಕೊಂಡಿರುವ ಹೇಮಂತ್ ಅವರು, ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ಗಾಯಕ ಹೇಮಂತ್ ಅವರು ಹಂಚಿಕೊಂಡಿರುವ ಈ‌ ಪೋಸ್ಟರ್ ನೋಡಿದರೆ ಇದು ಪಕ್ಕಾ ಸರಿಗಮಪ ಸಿಂಗಿಂಗ್ ಶೋ ಅಖಾಡ ಎನ್ನುವುದು ಎಲ್ಲರಿಗೂ ಗೊತ್ತಾಗುತ್ತೆ. ಸರಿಗಮಪ ತೀರ್ಪುಗಾರರೊಟ್ಟಿಗೆ ಕ್ಲಿಕ್ಕಿಸಿಕೊಂಡಿರುವ ಫೋಟೋ ಪೋಸ್ಟ್ ಮಾಡಿ
ಶೋ ಟೈಮ್, ಸ್ಪೆಷಲ್, ಸಪ್ರೈಸ್ ಜೊತೆ ‘ಲಾಟ್ಸ್ ಆಫ್ ಲವ್’ ಅಂತ ಬರೆದುಕೊಂಡಿದ್ದಾರೆ. ಅಲ್ಲಿಗೆ, ಸರಿಗಮಪ ಹೊಸ ರೂಪದ‌ ಶೋಗೆ ಹೇಮಂತ್ ತೀರ್ಪುಗಾರರಾಗಿ ಕೂರೋದು ಪಕ್ಕಾ ಅಲ್ಲವೇ. ಎನಿವೇ, ಸೆನ್ಸೇಷನಲ್ ಸಿಂಗರ್ ಹೇಮಂತ್ ನಯಾ ಜರ್ನಿ ಗೆ ಶುಭವಾಗಲಿ. ಜಯವಾಗಲಿ

ಎಂಟರ್ ಟೈನ್ಮೆಂಟ್ ಬ್ಯೂರೋ ಸಿನಿಲಹರಿ

Categories
ಸಿನಿ ಸುದ್ದಿ

ಸುದೀಪ್, ಸಿಎಂ ಭೇಟಿ; ಕೋಟಿಗೊಬ್ಬ 3 ರಿಲೀಸ್ ಫಿಕ್ಸ್- ದಸರಾ ಹಬ್ಬಕ್ಕೆ ಕಿಚ್ಚನ ಆರ್ಭಟ!?

ಕೋಟಿಗೊಬ್ಬ-3 ಚಿತ್ರಕ್ಕಾಗಿ ಕಿಚ್ಚನ ಫ್ಯಾನ್ಸ್ ಎರಡು ವರ್ಷಗಳಿಂದ ಕಾಯ್ತಿದ್ದಾರೆ. ಅಂದುಕೊಂಡಂತೆ ಆಗಿದ್ರೆ ಮಾರ್ಚ್ 2020ಕ್ಕೆ ಕೋಟಿಗೊಬ್ಬನ ದರ್ಶನ ಆಗ್ಬೇಕಿತ್ತು. ಆದರೆ, ಲಾಕ್‌ಡೌನ್‌ನಿಂದ ರಿಲೀಸ್ ಡೇಟ್ ಮುಂದೆ ಹೋಯ್ತು. ಫೈನಲೀ, ಬಹುನಿರೀಕ್ಷೆಯ ಚಿತ್ರ ರಿಲೀಸ್‌ಗೆ ಮುಹೂರ್ತ ಫಿಕ್ಸಾಗಿದೆ. ದಸರಾಗೆ ವಿಶೇಷವಾಗಿ ಕೋಟಿಗೊಬ್ಬನ ತೆರೆಗೆ ತರಲು ನಿರ್ಮಾಪಕ ಸೂರಪ್ಪ ರೆಡಿಯಾಗಿದ್ದಾರೆ

ಸುದೀಪ್ ಹಾಗೂ ಸಿಎಂ ಭೇಟಿ ಕೂತೂಹಲ ಕೆರಳಿಸಿತ್ತು. ಏಕಾಏಕಿ ಮುಖ್ಯಮಂತ್ರಿಗಳನ್ನ ಮಾಣಿಕ್ಯ ಅದ್ಯಾಕ್ ಭೇಟಿ ಮಾಡಿದ್ರು ಎನ್ನುವ ಪ್ರಶ್ನೆ ಎಲ್ಲರಲ್ಲೂ ಮೂಡಿತ್ತು. ಆ ಕೂತೂಹಲದ ಪ್ರಶ್ನೆಗೆ ಕಿಚ್ಚನ ಕಡೆಯಿಂದ ಉತ್ತರ ಸಿಕ್ಕಿಲ್ಲ. ಆದರೆ, ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಟ್ವೀಟ್ ಮೂಲಕ ಉತ್ತರ ನೀಡಿದ್ದರು. ಸಿಎಂ ಏನ್ ಹೇಳಿದ್ದರು? ಕೋಟಿಗೊಬ್ಬ-3 ರಿಲೀಸ್ ತಯ್ಯಾರಿ? ಬಿಗ್‌ಸ್ಕ್ರೀನ್ ನಲ್ಲಿ ಕಿಚ್ಚನ ಅಬ್ಬರ ? ಇದೆಲ್ಲದರ ಚಿಕ್ಕದೊಂದು ರಿಪೋರ್ಟ್ ಇಲ್ಲಿದೆ ನೋಡಿ.

ಸ್ಯಾಂಡಲ್‌ವುಡ್ ಬಾದ್ ಷಾ ಕಿಚ್ಚ ಸುದೀಪ್ ಕಳೆದ ಮಂಗಳವಾರ ಮುಖ್ಯಮಂತ್ರಿಗಳಾದ ಬಸವರಾಜ್ ಬೊಮ್ಮಾಯಿವರನ್ನ ಭೇಟಿ ಮಾಡಿದ್ದರು. ಆಗಲೇ ಸುದೀಪ್-ಸಿಎಂ ಅಚ್ಚರಿಯ ಭೇಟಿ ಕುರಿತಾಗಿ ಒಂದಿಷ್ಟು ಚರ್ಚೆಗಳ ನಡೆದಿದ್ವು. ಬರ್ತ್ಡೇಗೆ ಮೂರು ದಿನ ಮುನ್ನ ಮಾಣಿಕ್ಯ ಮುಖ್ಯಮಂತ್ರಿಗಳನ್ನ ಮೀಟ್ ಮಾಡಿದ್ದಕ್ಕೆ ಕೂತೂಹಲ ಜಾಸ್ತಿಯಾಗಿತ್ತು. ಹುಟ್ಟು ಹಬ್ಬದ ಆಚರಣೆ ವಿಚಾರ ಇರ‍್ಬೋದಾ ? ಎನ್ನುವ ಕ್ಯೂರಿಯಾಸಿಟಿ ಕೂಡ ಇತ್ತು. ಇದರ ಜೊತೆಗೆ ಚಿತ್ರಮಂದಿರಕ್ಕೆ ೧೦೦ ಪರ್ಸೆಂಟ್ ಅನುಮತಿ ಕೊಡಿಸುವಂತೆ ಮನವಿ ಮಾಡಿಕೊಳ್ಳುವುದಕ್ಕೇನಾದರೂ ಮೀಟ್ ಮಾಡಿರಬಹುದಾ? ಎನ್ನುವ ಪ್ರಶ್ನೆ ಕೂಡ ಎಲ್ಲರಲ್ಲೂ ಇತ್ತು. ಆ ಕ್ಯೂರಿಯಾಸಿಟಿಗೆ ಸಿಎಂ ಟ್ವೀಟ್ ನಿಂದ ಕೊಂಚ ಬ್ರೇಕ್ ಬಿದ್ದಿತ್ತು.

ಇವತ್ತು ನಮ್ಮ ಕಚೇರಿಯಲ್ಲಿ ಸೂಪರ್‌ಸ್ಟಾರ್ ಕಿಚ್ಚ ಸುದೀಪ್ ಭೇಟಿ ಮಾಡಿದರು. ಉಭಯ ಕುಶಲೋಪರಿ ಜೊತೆಗೆ ಮನರಂಜನಾ ಕ್ಷೇತ್ರದ ಕುರಿತಾಗಿ ಸಾಕಷ್ಟು ವಿಚಾರಗಳನ್ನು ಚರ್ಚೆ ಮಾಡಿದ್ವಿ. ಹೀಗಂತ ಟ್ವೀಟ್ ಮೂಲಕ ತಿಳಿಸಿದ ಸಿಎಂ ಸಾಹೇಬ್ರು, ಸುದೀಪ್ ಸಿನಿಮಾ ಜರ್ನಿಗೆ ಮನದುಂಬಿ ಹಾರೈಸಿದ್ದರು. ನಟ ಸುದೀಪ್ ಕೂಡ ಭೇಟಿಗೆ ಅವಕಾಶ ಕೊಟ್ಟಿದ್ದಕ್ಕೆ ಧನ್ಯವಾದ ಅರ್ಪಿಸಿದ್ದರು. ಇದಾಗಿ ಮೂರು ದಿನಕ್ಕೆ ಅಭಿನಯ ಚಕ್ರವರ್ತಿ ೫೦ನೇ ವಸಂತಕ್ಕೆ ಕಾಲಿಟ್ಟರು. ಚಿತ್ರರಂಗದ ಗಣ್ಯರು, ರಾಜಕೀಯ ಮುಖಂಡರು ಮಾತ್ರವಲ್ಲ ಲಕ್ಷಾಂತರ ಸಿನಿಮಾ ಭಕ್ತರಿಂದ ಮಾಣಿಕ್ಯನಿಗೆ ಶುಭಾಷಯಗಳ ಮಹಾಪೂರ ಹರಿದುಬಂತು. ವಿಕ್ರಾಂತ್ ರೋಣ' ಫಿಲ್ಮ್ ಟೀಮ್ಡೆಡ್ ಆಂಥಮ್’ ಸಾಂಗ್ ಝಲಕ್ ತೋರಿಸಿದರು. ಕೋಟಿಗೊಬ್ಬ-3 ಚಿತ್ರತಂಡದವರು ಸಿನಿಮಾ ರಿಲೀಸ್ ಡೇಟ್‌ನ ಅನೌನ್ಸ್ ಮಾಡಿ ಸುದೀಪಿಯನಸ್‌ಗೆ ಸಪ್ರೈಸ್ ಕೊಟ್ಟರು.

ಯಸ್, ಕೋಟಿಗೊಬ್ಬ-3 ಚಿತ್ರಕ್ಕಾಗಿ ಸುದೀಪಿಯನ್ಸ್ ಭರ್ತಿ ಎರಡು ವರ್ಷಗಳಿಂದ ಕಾತುರದಿಂದ ಕಾಯ್ತಿದ್ದಾರೆ. ಬಿಗ್‌ಸ್ಕ್ರೀನ್‌ನಲ್ಲಿ ಸತ್ಯ ಹಾಗೂ ಶಿವನ ಅವತಾರ ಕಣ್ತುಂಬಿಕೊಳ್ಳೋದಕ್ಕೆ ಕೂತೂಹಲಭರಿತರಾಗಿದ್ದಾರೆ. ಎಲ್ಲಾ ಅಂದುಕೊಂಡಂತೆ ಆಗಿದ್ರೆ ಮಾರ್ಚ್ 2020ಕ್ಕೆ ಕೋಟಿಗೊಬ್ಬನ ದರ್ಶನ ಆಗ್ಬೇಕಿತ್ತು. ಆದರೆ, ಎರೆಡೆರಡು ಭಾರಿ ಕೊರೊನಾ-ಕ್ವಾರಂಟೈನ್-ಲಾಕ್‌ಡೌನ್ ಆಗಿದ್ದರಿಂದ ಕೋಟಿಗೊಬ್ಬ-3 ರಿಲೀಸ್ ಡೇಟ್ ಮುಂದಕ್ಕೆ ಹೋಯ್ತು. ಫೈನಲೀ, ಬಹುನಿರೀಕ್ಷೆಯ ಬಹುಕೋಟಿ ವೆಚ್ಚದ ಕೋಟಿಗೊಬ್ಬ-3 ಬಿಡುಗಡೆಗೆ ದಿವ್ಯ ಮುಹೂರ್ತ ಫಿಕ್ಸಾಗಿದೆ. ನಾಡಹಬ್ಬ ದಸರಾಗೆ ವಿಶೇಷವಾಗಿ ಕೋಟಿಗೊಬ್ಬನ ತೆರೆಗೆ ತರುವುದಕ್ಕೆ ನಿರ್ಮಾಪಕ ಸೂರಪ್ಪ ರೆಡಿಯಾಗಿದ್ದಾರೆ. ಹೀಗಾಗಿಯೇ, ಮಾಣಿಕ್ಯನ ಬರ್ತ್ಡೇಗೆ ಮ್ಯಾಸೀವ್ ಪೋಸ್ಟರ್ ಬಿಟ್ಟು ನಾಡಹಬ್ಬಕ್ಕೆ ಕೋಟಿಗೊಬ್ಬ-3 ನಿಮ್ಮ ಮುಂದೆ ಬರಲಿದೆ ಎಂದಿದ್ದಾರೆ. ಡೇಟ್ ಪಕ್ಕಾ ಫಿಕ್ಸ್ ಮಾಡಿದ್ದಾರೆ ಅಂದರೆ, ದಸರಾ ಹಬ್ಬ ಬರುವಷ್ಟರಲ್ಲಿ ಥಿಯೇಟರ್‌ಗೆ 100 ಪರ್ಸೆಂಟ್ ಅನುಮತಿ ಸಿಗ್ಬೋದು ಎನ್ನುವ ಆಶ್ವಾಸನೆಯನ್ನೇನಾದರೂ ಸಿಎಂ ಕೊಟ್ಟರಾ? ಕಿಚ್ಚನ ಭೇಟಿ ಟೈಮ್‌ನಲ್ಲಿ 100 ಪರ್ಸೆಂಟ್ ವಿಚಾರ ಪ್ರಸ್ತಾಪ ಆಯ್ತಾ? ಗೊತ್ತಿಲ್ಲ.

ಬರೋಬ್ಬರಿ 70 ಕೋಟಿ ವೆಚ್ಚದ ಕೋಟಿಗೊಬ್ಬ 3ಗೆ ಶಿವಕಾರ್ತಿಕ್ ಆಕ್ಷನ್ ಕಟ್ ಹೇಳಿದ್ದಾರೆ. ಮಡೋನ್ನಾ ಸೆಬಾಸ್ಟಿನ್ ಕಿಚ್ಚನಿಗೆ ಜೋಡಿಯಾಗಿದ್ದು, ಫಸ್ಟ್ ಟೈಮ್ ಕನ್ನಡ ಸಿನಿಮಾದಲ್ಲಿ ಮಿಂಚಿದ್ದಾರೆ. ಶ್ರದ್ದಾ ದಾಸ್, ಅಫ್ತಾಬ್ ಶಿವದಾಸಿನಿ, ರವಿಶಂಕರ್, ನವಾಬ್ ಶಾ, ಡ್ಯಾನಿಶ್ ಸೇಠ್ ಅಖ್ತರ್ ಸೇರಿದಂತೆ ಹಲವರು ತಾರಾಬಳಗದಲ್ಲಿದ್ದಾರೆ. ಅರ್ಜುನ್ ಜನ್ಯಾ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ಸ್ಯಾಟ್‌ಲೈಟ್-ಡಿಜಿಟಲ್ ರೈಟ್ಸ್-ಹಿಂದಿ ಡಬ್ಬಿಂಗ್ ರೈಟ್ಸ್ ಸೇರಿ ಒಟ್ಟು 27 ಕೋಟಿಗೆ ಸೇಲ್ ಆಗಿದೆ. ರಿಲೀಸ್‌ಗೂ ಮೊದಲೇ ಭರ್ಜರಿಯಾಗಿ ಕಮಾಯಿ ಮಾಡಿರುವ ಕೋಟಿಗೊಬ್ಬ-3 ಚಿತ್ರದ ಭರಾಟೆ ದಸರಾ ಹಬ್ಬದಂದು ಶುರುವಾಗಲಿದೆ. ಈ ಭಾರಿಯಾದರೂ ಫಿಕ್ಸಾದ ಡೇಟ್‌ಗೆ ಕೋಟಿಗೊಬ್ಬ ಕಣಕ್ಕಿಳಿಯಲಿ, ಈ ಚೀನಿ ಕ್ರಿಮಿ ಕೊರೊನಾ ಮೂರನೇ ಅಟ್ಟಹಾಸ ಶುರುವಿಟ್ಟುಕೊಳ್ಳದಿರಲಿ.

ಎಂಟರ್‌ಟೈನ್ಮೆಂಟ್ ಬ್ಯೂರೋ ಸಿನಿಲಹರಿ

Categories
ಸಿನಿ ಸುದ್ದಿ

ಧನ್ವೀರ್‌ ಬರ್ತ್‌ಡೇಗೆ ಬೈ ಟು ಲವ್‌ ಚಿತ್ರತಂಡ ಸ್ಪೆಷಲ್ ಸ‌ರ್ಪೈಸ್‌!

ನಿರ್ದೇಶಕ ಹರಿ ಸಂತೋಷ್‌ ಅವರ ‘ಬೈ ಟು ಲವ್‌’ ಸಿನಿಮಾದ ಮಾತಿನ ಭಾಗ ಮುಗಿದಿದೆ. ‘ಬಜಾರ್‌’ ಬಳಿಕ ಧನ್ವೀರ್‌ ನಟಿಸುತ್ತಿರುವ ಎರಡನೇ ಸಿನಿಮಾ ಇದು. ಇತ್ತೀಚೆಗೆ ಫಸ್ಟ್‌ ಲುಕ್‌ ಬಿಡುಗಡೆಯಾಗಿದ್ದು, ಸಾಕಷ್ಟು ಕುತೂಹಲ ಮೂಡಿಸಿದ್ದು ಗೊತ್ತೇ ಇದೆ. ಧನ್ವೀರ್‌-ಶ್ರೀಲೀಲಾ ಹಾಗೂ ಪುಟ್ಟ ಮಗುವೊಂದು ಹಸೆಮಣೆ ಮೇಲೆ ಕುಳಿತಿರುವ ಫೋಟೋವೊಂದು ಎಲ್ಲೆಡೆ ವೈರಲ್‌ ಆಗಿತ್ತು. ಸೆಪ್ಟೆಂಬರ್‌ 8ರಂದು ಚಿತ್ರದ ನಾಯಕ ಧನ್ವೀರ್‌ ಅವರ ಹುಟ್ಟುಹಬ್ಬ. ಅಂದು ಸಾಕಷ್ಟು ವಿಶೇಷತೆಗಳಿವೆ. ಚಿತ್ರತಂಡ ಧನ್ವೀರ್‌ಗಾಗಿಯೇ ಒಂದು ಸ್ಪೆಷಲ್‌ ಗಿಫ್ಟ್‌ ಕೊಡಲು ಸಜ್ಜಾಗಿದೆ. ಆದರೆ, ಅದು ಏನೆಂಬುದನ್ನು ಈಗಲೇ ಗುಟ್ಟು ಬಿಟ್ಟುಕೊಡಲು ಚಿತ್ರತಂಡ ಸಿದ್ಧವಿಲ್ಲ.
ಧನ್ವೀರ್‌ ಹುಟ್ಟು ಹಬ್ಬಕ್ಕೆ ಸರ್ಪೈಸ್‌ ನೀಡುವ ಸಲುವಾಗಿ ಚಿತ್ರತಂಡ ಕುತೂಹಲಕಾರಿ ಕಂಟೆಂಟ್‌ ಸಿದ್ಧಪಡಿಸಿದ್ದು, ಅದನ್ನು ಹುಟ್ಟುಹಬ್ಬದಂದೇ ರಿವೀಲ್‌ ಮಾಡುವ ಯೋಜನೆ ಹಾಕಿಕೊಂಡಿದೆ.

ಮೊದಲ ಚಿತ್ರದಲ್ಲಿ ಮಾಸ್‌ ಲುಕ್‌ನಲ್ಲಿ ಕಾಣಿಸಿಕೊಂಡಿದ್ದ ಧನ್ವೀರ್‌ ಅವರಿಗಿಲ್ಲಿ ಲವರ್‌ ಬಾಯ್‌ ಪಾತ್ರ. ಅವರ ಫಸ್ಟ್‌ ಲುಕ್‌ ಪೋಸ್ಟರ್‌ ನೋಡಿದವರಿಗೆ ಫ್ಯಾಮಿಲಿ ಮ್ಯಾನ್‌ ಅಂತಾನು ಅನಿಸದೇ ಇರದು. ಈಗ ಚಿತ್ರತಂಡ ಹೊಸ ಕಂಟೆಂಟ್‌ ಹರಿಬಿಡುವ ಯೋಜನೆಯಲ್ಲಿರುವುದರಿಂದ ಸದ್ಯದ ಮಟ್ಟಿಗೆ ನಿರೀಕ್ಷೆಯನ್ನಂತೂ ಹುಟ್ಟಿಸಿದೆ.
ಸುಮಾರು 70 ದಿನಗಳಿಗೂ ಹೆಚ್ಚು ಕಾಲ ಚಿತ್ರೀಕರಣ ನಡೆಸಲಾಗಿದೆ. ಧನ್ವೀರ್‌ ಹಾಗೂ ಶ್ರೀಲೀಲಾ ಜೋಡಿ ತೆರೆಯ ಮೇಲೆ ಮೋಡಿ ಮಾಡಲಿದೆ ಎಂಬುದು ನಿರ್ದೇಶಕರ ಮಾತು. ಗಣೇಶ್‌ ನಟನೆಯ ಸಖತ್‌, ನಿಖಿಲ್‌ ಕುಮಾರ್‌ಸ್ವಾಮಿ ನಟನೆಯ ಹೊಸ ಸಿನಿಮಾ ಹಾಗೂ ಜೋಗಿ ಪ್ರೇಮ್‌-ಧ್ರುವ ಸರ್ಜಾ ಕಾಂಬಿನೇಷನ್‌ ಸಿನಿಮಾಗಳನ್ನು ನಿರ್ಮಿಸುತ್ತಿರುವ ಕೆವಿಎನ್‌ ಪ್ರೊಡಕ್ಷನ್ಸ್ ‘ಬೈ ಟು ಲವ್‌’ ನಿರ್ಮಾಣ ಮಾಡಿದೆ. ಚಿತ್ರದ ಕಥೆ ಮೆಚ್ಚಿಕೊಂಡು ಈ ಸಿನಿಮಾ ನಿರ್ಮಾಣ ಮಾಡಲು ಮುಂದಾದ ಕೆವಿಎನ್‌ ಪ್ರೊಡಕ್ಷನ್ಸ್‌ ಬ್ಯಾನರ್‌ನಡಿ ಇದು ಎರಡನೇ ಚಿತ್ರ. ಮಹೇಂದ್ರ ಸಿಂಹ ಛಾಯಾಗ್ರಹಣವಿದೆ. ಅಜನೀಶ್‌ ಲೋಕನಾಥ್‌ ಸಂಗೀತ ಹಾಗೂ ಯೋಗಾನಂದ್‌ ಸಂಭಾಷಣೆ ಈ ಚಿತ್ರಕ್ಕಿದೆ.

‘ಈ ಸಿನಿಮಾ ಶುರುವಾಗಲು ಮುಖ್ಯ ಕಾರಣ ಕಥೆ. ಒನ್‌ಲೈನ್‌ ಕೇಳಿದ ನಿರ್ಮಾಪಕರು, ಒಂದೇ ಸಿಟ್ಟಿಂಗ್‌ನಲ್ಲಿ ಪೂರ್ತಿ ಕಥೆ ಕೇಳಿ ಓಕೆ ಮಾಡಿದರು. ಆನಂತರವಷ್ಟೇ ತಾರಾಗಣ, ತಾಂತ್ರಿಕವರ್ಗ ಅಂತಿಮವಾಗಿದ್ದು. ಈಗ ಮಾತಿನ ಭಾಗವನ್ನು ಮುಗಿಸಿದ್ದೇವೆ. ಎಲ್ಲವೂ ಅಂದುಕೊಂಡದ್ದಕ್ಕಿಂತ ನೀಟಾಗಿ ಮೂಡಿ ಬಂದಿದೆ. ಎಲ್ಲರ ಸಹಕಾರದಿಂದ ಶೂಟಿಂಗ್‌ ಬೇಗ ಮುಗಿಸಲು ಸಾಧ್ಯವಾಯ್ತು. ಈ ಚಿತ್ರದಲ್ಲಿ ಧನ್ವೀರ್‌-ಶ್ರೀಲೀಲಾ ಕಾಂಬಿನೇಷನ್‌ ಅದ್ಭುತವಾಗಿ ಮೂಡಿ ಬಂದಿದೆ.

ಅದನ್ನು ಸಿನಿಮಾ ನೋಡಿಯೇ ಅನುಭವಿಸಬೇಕು. 8 ತಿಂಗಳ ಮಗು ಕೂಡ ಪ್ರಮುಖ ಪಾತ್ರಧಾರಿ. ಚಿತ್ರದಲ್ಲಿ ಸಾಕಷ್ಟು ಕುತೂಹಲಕಾರಿ ಅಂಶಗಳಿವೆ. ಇದು ಈಗಿನ ಟ್ರೆಂಡ್‌ಗೆ ತಕ್ಕಂತೆ ಮಾಡಿದ ಕಥೆ. ಹೀಗಾಗಿ ಎಲ್ಲರಿಗೂ ಕನೆಕ್ಟ್‌ ಆಗಲಿದೆ ಎಂಬುದು ನಿರ್ದೇಶಕ ಹರಿ ಸಂತೋಷ್‌ ಮಾತು.

Categories
ಸಿನಿ ಸುದ್ದಿ

ಪ್ರಜ್ವಲ್‌ ಸಿನ್ಮಾಗೆ ಬಾಲಿವುಡ್‌ ನಟ ಗೋವಿಂದ ಬರ್ತಾರ? ಹೆಸರಿಡದ ಸಿನಿಮಾದಲ್ಲಿ ನಟಿಸುವ ಸುದ್ದಿ ಜೋರು ಗುರು


ಕನ್ನಡ ಸಿನಿಮಾಗಳಲ್ಲಿ ಈಗಾಗಲೇ ಭಾರತೀಯ ಚಿತ್ರರಂಗದ ಹಲವು ದಿಗ್ಗಜರು ನಟಿಸಿದ್ದಾರೆ. ನಟಿಸುತ್ತಲೂ ಇದ್ದಾರೆ. ಬಾಲಿವುಡ್‌ ನಟ, ನಟಿಯರೂ ಇಲ್ಲೊಮ್ಮೆ ಇಣುಕಿ ನೋಡಿದ್ದು ಗೊತ್ತೇ ಇದೆ. ಅಮಿತಾಬ್‌ ಬಚ್ಚನ್‌, ಜಾಕಿಶಾರ್ಫ್‌, ಸಂಜಯ್‌ ದತ್‌, ಜೂಹಿ ಚಾವ್ಲಾ, ಶಿಲ್ಪಾಶೆಟ್ಟಿ, ರವೀನಾ ಟಂಡನ್‌, ನಾನಾ ಪಾಟೇಕರ್‌ ಸೇರಿದಂತೆ ಹಲವು ನಟ ನಟಿಯರು ಈಗಾಗಲೇ ಕನ್ನಡದ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಸಾಲಿಗೆ ಮತ್ತೊಬ್ಬ ಬಾಲಿವುಡ್‌ ನಟನ ಆಗಮನವಾಗುತ್ತಿದೆ ಎಂಬ ಸುದ್ದಿ ಜೋರಾಗಿಯೇ ಹರಿದಾಡುತ್ತಿದೆ!

ಹೌದು, ಕನ್ನಡದ ಸಿನಿಮಾವೊಂದರಲ್ಲಿ ಬಾಲಿವುಡ್‌ ನಟ ಗೋವಿಂದ ಅವರು ಎಂಟ್ರಿಯಾಗಲಿದ್ದಾರೆ ಅನ್ನೋ ಸುದ್ದಿ ಇದೆ. ಹಾಗೆ ನೋಡಿದರೆ, ಬಹಳ ದಿನಗಳಿಂದಲೂ ಗೋವಿಂದ ಅವರು ಬರ್ತಾರೆ ಎಂಬ ಸುದ್ದಿ ಇತ್ತು. ಆದರೆ, ಯಾವಾಗ, ಯಾವ ಸಿನಿಮಾ ಅನ್ನೋದು ಪಕ್ಕಾ ಆಗಿರಲಿಲ್ಲ. ಈಗ ಇನ್ನೂ ಹೆಸರಿಡದ ಚಿತ್ರವೊಂದರಲ್ಲಿ ನಟಿಸಲು ಬರುತ್ತಾರೆ ಎಂಬ ಸುದ್ದಿ ಹಬ್ಬಿರುವುದಂತೂ ನಿಜ.
ಗೋವಿಂದ ಅವರು, ಪ್ರಜ್ವಲ್ ದೇವರಾಜ್ ಅಭಿನಯದ ಇನ್ನೂ ಹೆಸರಿಡದ ಚಿತ್ರವೊಂದಕ್ಕೆ ಬಣ್ಣ ಹಚ್ಚಲಿದ್ದಾರೆ ಎನ್ನಲಾಗುತ್ತಿದೆ.

ನಿರ್ದೇಶಕ ಕಿರಣ್ ವಿಶ್ವನಾಥ್ ಹಾಗೂ ನಿರ್ಮಾಪಕ ನವೀನ್ ಗೋವಿಂದ ಅವರನ್ನು ಭೇಟಿ ಮಾಡಿ ಒಂದು ಸುತ್ತಿನ ಮಾತುಕತೆ ಸಹ ಮಾಡಿದ್ದಾರೆ. ಸ್ಕ್ರಿಪ್ಟ್ ಕೇಳಿ ಆಸಕ್ತಿ ತೋರಿಸಿದ್ದಾರೆ. ಈ ಬಗ್ಗೆ ಶೀಘ್ರದಲ್ಲಿ ಅಧಿಕೃತವಾಗಿ ಘೋಷಣೆ ಆಗಬೇಕಿದೆ. ಸದ್ಯ ಸುದ್ದಿಯಂತೂ ಹರಿದಾಡುತ್ತಿದೆ. ಗೋವಿಂದ ಬಂದ ಮೇಲಷ್ಟೇ ಅದು ಪಕ್ಕಾ ಆಗಲಿದೆ. ಇನ್ನು, ಪ್ರಜ್ವಲ್‌ ದೇವರಾಜ್‌ ಅವರು “ಮಾಫಿಯಾ” ಸಿನಿಮಾ ಒಪ್ಪಿದ್ದಾರೆ. ಇನ್ನು, “ವೀರಂ” ಕೂಡ ಮುಗಿಯುವ ಹಂತ ತಲುಪಿದೆ.

error: Content is protected !!