ಈ ಹಿಂದೆ ಎ.ಪಿ.ಪ್ರೊಡಕ್ಷನ್ಸ್ ಬ್ಯಾನರ್ ತನ್ನ ಸ್ನೇಹಿತರ ಜೊತೆಗೂಡಿ “ಕಮರೊಟ್ಟು ಚೆಕ್ ಪೋಸ್ಟ್” ಎಂಬ ಹಾರರ್ ಚಿತ್ರವನ್ನು ನಿರ್ಮಾಣ ಮಾಡಿ ಯಶಸ್ವಿಯಾಗಿದ್ದ ಆನಂದ ಬಾಬು ಈಗ ಇನ್ನೊಂದು ಸಿನಿಮಾಗೆ ಕೈ ಹಾಕಿದ್ದಾರೆ.
ಆನಂದ ಬಾಬು ಅವರು ಡಾ|| ನಿಶ್ಚಿತ ಬಿ. ಅವರ ಜೊತೆ ಸೇರಿ “ಗುಬ್ಬಿ ಮರಿ” ಎನ್ನುವ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಈ ಚಿತ್ರಕ್ಕೆ ಮಧು ಡಕಣಾಚಾರ್ ಅವರು ಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಎ.ಟಿ.ರವೀಶ್ ಸಂಗೀತವಿದೆ. ಸಿದ್ದು ಕೆ.ಗೌಡಗೆರೆ ಛಾಯಾಗ್ರಹಣ ಮಾಡಿದ್ದಾರೆ. ಎನ್.ಆದಿತ್ಯ ಕುಣಿಗಲ್ ಸಂಕಲನವಿದೆ. ಗೆಳೆಯ ಆನಂದ ಬಾಬು ಅವರಿಗೆ ಸಾಥ್ ನೀಡಿದ್ದಾರೆ. ಇಷ್ಟರಲ್ಲೇ ಅವರ ಕನಸಿನ ಕೂಸು “ಗುಬ್ಬಿಮರಿ” ಹಾರಲಿದೆ.
ಗುಬ್ಬಿ ಮರಿ ಹಾರಲು ರೆಡಿ
