Categories
ಸಿನಿ ಸುದ್ದಿ

ಶ್ರೀನಿಧಿ ಶಾಸ್ತ್ರಿ ‘ಸರಿಗಮಪ ಸೀಸನ್ 17’ ರ ಚಾಂಪಿಯನ್

-ರನ್ನರ್ ಅಪ್ ಆಗಿ ಅಶ್ವಿನ್ ಶರ್ಮಾ
ಕಂಬದ ರಂಗಯ್ಯ ಗೆ ಸಿಕ್ತು ಮೂರನೇ ಸ್ಥಾನ

ಶ್ರೀನಿಧಿ ಶಾಸ್ತ್ರಿ

ಜೀ ಕನ್ನಡದ ಬಹು ಜನಪ್ರಿಯ ರಿಯಾಲಿಟಿ ಶೋ ” ಸರಿ ಗಮಪ ಸೀಸನ್‌ 17 ” ರ ಚಾಂಪಿಯನ್ ಆಗಿ ಬೆಂಗಳೂರಿನ‌ ಹುಡುಗ ಶ್ರೀನಿಧಿ ಶಾಸ್ತ್ರಿ ಹೊರ ಹೊಮ್ಮಿದ್ದಾರೆ. ಟ್ರೋಪಿ ಜತೆಗೆ 10 ಲಕ್ಷ, ಕ್ಯಾಸ್ ಪ್ರೇಜ್ ಅವರದಾಗಿದೆ.‌

ಹಾಗೆಯೇ ಎರಡನೇ ಸ್ಥಾನದಲ್ಲಿ ಅಶ್ವಿನ್ ಶರ್ಮಾ ಆಯ್ಕೆಯಾದರು. ಟ್ರೋಪಿ ಜತೆಗೆ ಅವರಿಗೆ ಐದು ಲಕ್ಷ ನಗದು ಬಹುಮಾನ ಅವರಾಯಿತು.ಶೋ‌ನ ರಿಯಾಲಿಟಿ ಶೋ ಮಹಾಗುರು ಹಂಸಲೇಖ ಅವರು ಚಾಂಪಿಯನ್ ಅನೌನ್ಸ್ ಮಾಡಿದರು.

ಭಾನುವಾರ ತಡ ರಾತ್ರಿಯವರೆಗೂ‌ ನಡೆದ
ಗ್ರಾಂಡ್ ಫಿನಾಲೆಯ ಅಂತಿಮ ಸುತ್ತಿನಲ್ಲಿ ನೆರೆದಿದ್ದ ಅಪಾರ ಜನ ಸಂಖ್ಯೆಯ ಸಮಕ್ಷಮದಲ್ಲಿ ಶ್ರೀನಿಧಿ ಶಾಸ್ತ್ರಿ ವಿನ್ನರ್ ಆಗಿ ಹೊರ ಹೊಮ್ಮಿದರೆ, ಆಶ್ವಿನ್ ಶರ್ಮಾ ಎರಡನೇ ಸ್ಥಾನಕ್ಕೆ ಆಯ್ಕೆಯಾಗಿ ಅಪಾರ ಜನ್ನಮನ್ನಣೆ ಪಡೆದುಕೊಂಡರು.

ಕಂಬದ ರಂಗಯ್ಯ

ಕಂಬದ ರಂಗಯ್ಯ ಮೂರನೇಸ್ಥಾನ

ಸೆಕೆಂಡ್ ರನ್ನರಪ್ ಆಗಿ ಕಂಬದ ರಂಗಯ್ಯ ಆಯ್ಕೆಯಾದರು.ಟ್ರೋಫಿ ಜತೆಗೆ ಎರಡೂವರೆ ಲಕ್ಷ ಬಹುಮಾನ ಅವರ ಪಾಲಾಯಿತು‌. ಈ ಫಲಿತಾಂಶವನ್ನು ಗಾಯಕ , ಸಂಗೀತ ನಿರ್ದೇಶಕ ರಾಜೇಶ್ ಕೃಷ್ಣ ಅನೌನ್ಸ್ ಮಾಡಿದರು. ಟ್ರೋಫಿ ಜತೆಗೆ ಎರಡೂವರೆ ಲಕ್ಷ ಬಹುಮಾನ ಅವರ ಪಾಲಾಯಿತು‌.

Categories
ಸಿನಿ ಸುದ್ದಿ

ಪನೋರಮಾ ಗೋವಾ ಚಿತ್ರೋತ್ಸವಕ್ಕೆ ‘ ಪಿಂಕಿ ಎಲ್ಲಿ?’ ಕನ್ನಡದಿಂದ ಆಯ್ಕೆಯಾದ ಒಂದೇ ಒಂದು ಸಿನಿಮಾ

ಜ. 16 ರಿಂದ 24  ರವರೆಗೆ  ಗೋವಾ ಚಿತ್ರೋತ್ಸವ 

ಕೃಷ್ಣೇಗೌಡ ನಿರ್ಮಾಣ ಹಾಗೂ ಪೃಥ್ವಿ ಕೊಣನೂರು ನಿರ್ದೇಶನದ ‘ಪಿಂಕಿ ಎಲ್ಲಿ ? ‘ ಚಿತ್ರ ಇಂಡಿಯನ್ ಪನೋರಮಾ ಗೆ ಆಯ್ಕೆ ಆಗಿದೆ. ಭಾರತದ ವಿವಿಧ ಭಾಷೆಗಳ ಒಟ್ಟು 23 ಸಿನಿಮಾಗಳ ಪೈಕಿ ಕನ್ನಡದಿ‌ಂದ ಆಯ್ಕೆಯಾದ ಒಂದೇ ಒಂದು‌ ಸಿನಿಮಾ ‘ಪಿಂಕಿ ಎಲ್ಲಿ? ‘ ಮಾತ್ರ.
ಇಂಡಿಯನ್ ಪನೋರಮಾ ಅಂತಾರಾಷ್ಟ್ರೀಯ ಚಿತ್ರೋತ್ಸವ ಮುಂದಿನ ತಿಂಗಳು 16 ರಿಂದ 24 ರವರೆಗೆ ಗೋವಾದಲ್ಲಿ‌ ನಡೆಯುವ ಸಾಧ್ಯತೆಗಳಿವೆ. ಒಂದು‌ ಮೂಲದ ಪ್ರಕಾರ ಇಂಡಿಯನ್ ಪನೋರಮಾ ಚಿತ್ರೋತ್ಸವಕ್ಕೆ ಕನ್ನಡದಿಂದ ನಾಲ್ಕು ಚಿತ್ರಗಳು ಆಯ್ಕೆಯ ಅಂತಿಮ ಹಂತದಲ್ಲಿದ್ದವು. ಈ ಪೈಕಿ ಪಿಂಕಿ ಎಲ್ಲಿ? ಮಾತ್ರ ಅವುಗಳಲ್ಲಿ ಆಯ್ಕೆ ಯಾಗಿರುವುದು ಅಧಿಕೃತ ಗೊಂಡಿದೆ.
ಉಳಿದಂತೆ ಪನೋರಮಾ ಚಿತ್ರದಲ್ಲಿ ಮಲಯಾಳಂ ಚಿತ್ರಗಳಿಗೆ ಭಾರೀ ಆದ್ಯತೆ ಸಿಕ್ಕಿದೆ.ಅನ್ವರ್ ರಷೀದ್ ನಿರ್ದೇಶನ್ ಟ್ರಾನ್ಸ್ ಸೇರಿದಂತೆ ಐದು ಚಿತ್ರಗಳ ಚಿತ್ರೋತ್ಸವಕ್ಕೆ ಸೆಲೆಕ್ಟ್ ಆಗಿವೆ. ವಿಶೇಷ ಅಂದ್ರೆ ತಮಿಳು ಚಿತ್ರರಂಗದಿಂದ ವೆಟ್ರಿಮಾರನ್ ನಿರ್ದೇಶನ ಹಾಗೂ‌ಧನುಷ್ ಅಭಿನಯದ ಬ್ಲಾಕ್ ಬಸ್ಟರ್ ಚಿತ್ರ ಅಸುರನ್ ಕೂಡ ಪನೋರಮಾ ಚಿತ್ರೋತ್ಸವಕ್ಕೆ ಆಯ್ಕೆಯಾಗುವ ಮೂಲಕ ಭಾರೀ ಕುತೂಹಲ ಮೂಡಿಸಿದೆ. ಹಾಗೆಯೇ ಗಣೇಶನ್ ವಿನಾಯಕನ್ ಅವರ ಥೈನ್ ಕೂಡ ಸೆಲೆಕ್ಟ್ ಆಗಿದೆ‌.

ಎಲ್ಲವೂ ಈಗ ಒಳ್ಳೆಯ ದಾಗುತ್ತಿದೆ. ಪನೋರಮಾ ಚಿತ್ರೋತ್ಸವಕ್ಕೆ ಆಯ್ಕೆಯಾಗಿರುವುದು ಖುಷಿ ತಂದಿದೆ.

– ಕೃಷ್ಟೇ ಗೌಡ, ಪಿಂಕಿ ಎಲ್ಲಿ ? ಚಿತ್ರದ ನಿರ್ಮಾಪಕ

ಮರಾಠಿ ಹಾಗೂ ಹಿಂದಿ ಚಿತ್ರಗಳು ಪನೋರಮಾ ಚಿತ್ರೋತ್ಸವದಲ್ಲಿ ಹೆಚ್ಚು ಆದ್ಯತೆ ಪಡೆದಿವೆ‌. ಗೋವಿಂದ್ ನಿಹಲಾನಿ ನಿರ್ದೇಶನದ’ ಅಪ್ ಅಪ್ಆ್ಯಂಡ್ ಅಪ್’. ನಾನ್ ಪ್ಯೂಚರ್ ವಿಭಾಗದಲ್ಲಿ ಚಿತ್ರೋತ್ಸವಕ್ಕೆ ಆಯ್ಕೆ ಆಗಿದೆ. ಫಿಲ್ಮ್ ಮೇಕರ್ ಜಾನ್ ಮ್ಯಾಥ್ಯೂ ಮಥನ್ ನೇತೃತ್ವದ 13 ಜನರ ಜ್ಯೂರಿ ಕಮಿಟಿ ಪ್ಯೂಚರ್ ಫಿಲ್ಮ್ ಸೆಲೆಕ್ಟ್ ಕಮಿಟಿಯಲ್ಲಿತ್ತು.

Categories
ಸಿನಿ ಸುದ್ದಿ

ಮಾರ್ಚ್‌ನಲ್ಲಿ ಸಲಗ ಅಬ್ಬರ, ಸಾಧ್ಯತೆಯ ಸುಳಿವು ಕೊಟ್ಟ ಶ್ರೀಕಾಂತ್


ದುನಿಯಾ ವಿಜಯ್‌ ನಿರ್ದೇಶನದ ಜತೆಗೆ ನಾಯಕರಾಗಿ ಅಭಿನಯಿಸಿರುವ ʼಸಲಗʼ ತೆರೆ ಮೇಲೆ ಅಬ್ಬರಿಸಲು ರೆಡಿಯಾಗಿದೆ. ಕನ್ನಡದ ಸಿನಿಪ್ರೇಕ್ಷಕರ ಪಾಲಿಗೆ ಇದೊಂದು ಬಹುನಿರೀಕ್ಷಿತ ಚಿತ್ರ. ದೊಡ್ಡ ತಾರಾಗಣದ ಜತೆಗೆ ಬಿಗ್‌ ಬಜೆಟ್‌ ಸಿನಿಮಾ. ಹಾಗೆಯೇ ನಟ ದುನಿಯಾ ವಿಜಯ್‌ ನಿರ್ದೇಶನದ ಮೊದಲ ಸಿನಿಮಾ. ಜತೆಗೆ ಒಂದಲ್ಲ ಒಂದು ಕಾರಣಕ್ಕೆ ದಿನ ನಿತ್ಯವೂ ಸುದ್ದಿ ಮಾಡುತ್ತಾ ಬರುತ್ತಿದೆ.

 

ದುನಿಯಾ ವಿಜಯ್‌ ಅಭಿಮಾನಿಗಳಂತೂ ತುದಿಗಾಲಲ್ಲೆ ನಿಂತಿದ್ದಾರೆ. ಅದೆಲ್ಲ ಕಾರಣಕ್ಕೆ ಈ ಸಿನಿಮಾ ಕನ್ನಡದ ಸಿನಿಪ್ರೇಕ್ಷಕರಲ್ಲಿ ತೀವ್ರ ಕುತೂಹಲ ಮೂಡಿಸಿದ್ದು, ರಿಲೀಸ್‌ ದಿನವನ್ನೆ ಎದುರು ನೋಡುವಂತೆ ಮಾಡಿದೆ.

Mಸದ್ಯಕ್ಕೆ ಈ ಚಿತ್ರದ ರಿಲೀಸ್‌ ದಿನಾಂಕ ಫಿಕ್ಸ್‌ ಅಗಿಲ್ಲ. ಚಿತ್ರ ತಂಡದ ಮೂಲಗಳ ಪ್ರಕಾರ ಫೆಬ್ರವರಿ ಕೊನೆಯಲ್ಲಿ ಈ ಚಿತ್ರ ತೆರೆಗೆ ಬರಲಿದೆ ಎನ್ನುವ ಮಾತುಗಳು ಇವೆ. ಆದರೆ ನಿರ್ಮಾಪಕ ಶ್ರೀಕಾಂತ್‌ ಪ್ರಕಾರ ಸಲಗ ತೆರೆಗೆ ಬರುವುದಕ್ಕೆ ಇನ್ನಷ್ಟು ದಿನ ಕಾಯಲೇ ಬೇಕಿದೆ. ” ಸದ್ಯಕ್ಕೆ ನಾವಿನ್ನು ರಿಲೀಸ್‌ ಬಗ್ಗೆ ಡಿಸೈಡ್‌ ಮಾಡಿಲ್ಲ. ಈಗ ಟೈಮ್‌ ಬೇರೆ ಸರಿಯಿಲ್ಲ. ಚಿತ್ರ ಮಂದಿರಗಳು ಒಪನ್‌ ಆಗಿವೆ, ಹೊಸಬರ ಸಿನಿಮಾ ರಿಲೀಸ್‌ ಅಗುತ್ತಿವೆ ಎನ್ನುವುದು ನಿಜವಾದರೂ, ರಾಜ್ಯದ ಎಷ್ಟೋ ಕಡೆಗಳಲ್ಲಿ ಈಗಲೂ ಚಿತ್ರ ಮಂದಿರಗಳು ಬಾಗಿಲು ತೆಗೆದಿಲ್ಲ. ಇನ್ನೊಂದು ಬಗೆಯಲ್ಲಿ ಚಿತ್ರ ಮಂದಿರಗಳ ವಾಸ್ತವ ಪರಿಸ್ಥಿತಿ ಹೀಗಿದೆ. ಹಾಗಾಗಿ ಯಾವಾಗ ಬಂದರೆ ಸೂಕ್ತ ಎನ್ನುವುದು ನಮಗೂ ಗೊಂದಲವಿದೆʼ ಎನ್ನುತ್ತಾರೆ ನಿರ್ಮಾಪಕ ಕೆ.ಪಿ.ಶ್ರೀಕಾಂತ್.‌

ಸಲಗ ಮಾತ್ರವಲ್ಲ ಸದ್ಯ ರಿಲೀಸ್ ಗೆ ರೆಡಿಯಿರುವ ಸ್ಟಾರ್ ಸಿನಿಮಾಗಳ ಪರಿಸ್ಥಿತ ಇದಕ್ಕಿಂತ ಭಿನ್ನವಾಗಿಲ್ಲ. ಎಲ್ಲರೂ ವಾತಾವರಣ ಪೂರ್ಣ ಪ್ರಮಾಣದಲ್ಲಿ ತಿಳಿಯಾಗುವುದನ್ನೇ ಕಾಯುತ್ತಿದ್ದಾರೆ. ಕೊರೋನಾ ಆತಂಕ ದೂರವಾಗಬೇಕು, ಆ ಮೂಲಕ ರಾಜ್ಯದ ಉದ್ದಗಲಕ್ಕೂ ಚಿತ್ರಮಂದಿರಗಳು ಒಪನ್‌ ಅಗಬೇಕು, ಆಗಲೇ ಚಿತ್ರ ರಿಲೀಸ್‌ ಆದರೆ ಸೂಕ್ತ ಅಂತ ಎಲ್ಲರೂ ಕಾಯುತ್ತಿದ್ದಾರೆ. ಸಲಗ ಕೂಡ ಅದೇ ಹಾದಿಯಲ್ಲಿದೆ.

Categories
ಸಿನಿ ಸುದ್ದಿ

ಬ್ಯಾಕ್ ಗ್ರೌಂಡ್ ಡಾನ್ಸರ್ ಈಗ ಹೀರೋ, ಕುದುರೆ ಮೇಲೆ ಬರುತ್ತಿದ್ದಾನೆ ಮೈಸೂರು ಹುಡುಗ

ಚರಿತ್‌ ಎನ್ನುವ ತನ್ನದೇ ಹೆಸರಿನ ಚಿತ್ರಕ್ಕೆ ಆತನೇ ನಾಯಕ

 

ಈತ ಮೈಸೂರು ಹುಡುಗ. ಹೆಸರು ಚರಿತ್. ಬೆಳ್ಳಿತೆರೆಗೆ ಈಗ ಹೀರೋ ಆಗಿ ಎಂಟ್ರಿ ಆಗುತ್ತಿದ್ದಾರೆ. ಅತ ಹೀರೋ ಆಗಿ ಕಾಣಿಸಿಕೊಳ್ಳುತ್ತಿರುವ ಚೊಚ್ಚಲ ಚಿತ್ರದ ಫಸ್ಟ್‌ ಲುಕ್‌ ನಾಳೆ ರಿವೀಲ್‌ ಆಗುತ್ತಿದೆ. ಮೈಸೂರು ಹುಡುಗ ಅಲ್ಬಾ, ಆ ಪ್ರೀತಿಯ ಕಾರಣಕ್ಕೆ ಮಜಾ ಟಾಕೀಸ್ ಖ್ಯಾತಿಯ ಟಾಕಿಂಗ್‌ ಸ್ಟಾರ್‌ ಸೃಜನ್‌ ಲೋಕೇಶ್‌, ಚರಿತ್‌ ಅಭಿನಯದ ಚೊಚ್ಚಲ ಚಿತ್ರದ ಫಸ್ಟ್‌ ಲುಕ್‌ ಪೋಸ್ಟರ್‌ ಅನ್ನು ಲಾಂಚ್‌ ಮಾಡುವ ಮೂಲಕ ಆತನನ್ನು ಸಿನಿಮಾ ಜಗತ್ತಿಗೆ ಹೀರೋ ಆಗಿ ಪರಿಚಯಿಸುತ್ತಿದ್ದಾರೆ. ಆ ಮೂಲಕ ಕನ್ನಡದ ಅನೇಕ ಸ್ಟಾರ್‌ ಗಳ ಹಾಗೆ ಅರಮನೆ ನಗರಿಯ ಮತ್ತೊಬ್ಬ ಚೆಲುವ ಹೀರೋ ಆಗಿ ಸ್ಯಾಂಡಲ್‌ವುಡ್‌ ಗೆ ಎಂಟ್ರಿಯಾಗುತ್ತಿರುವುದು ವಿಶೇಷ.

ಏಳು ವರ್ಷದ ಅನುಭವಿ ಈ ಚರಿತ್

ಚರಿತ್‌ ಮೈಸೂರು ಹುಡುಗ ಅಂದ್ಮೇಲೆ ಹೆಚ್ಚೇನು ಹೇಳಬೇಕಿಲ್ಲ. ಯಾಕಂದ್ರೆ ಮೈಸೂರಿಗೂ ಕನ್ನಡ ಚಿತ್ರರಂಗಕ್ಕೂ ಅವಿನಾಭಾವ ನಂಟು. ಲೋಕೇಶ್‌, ಅಶ್ವತ್ಥ್‌, ಅಂಬರೀಶ್‌, ವಿಷ್ಣುವರ್ಧನ್‌ ಸೇರಿದಂತೆ ಕನ್ನಡ ಚಿತ್ರ ರಂಗ ಪ್ರಜ್ಬಲಿಸುವಂತೆ ಮಾಡಿದ ಘಟಾನುಘಟಿ ಕಲಾವಿದರೆಲ್ಲ ಮೈಸೂರಿನವರೆ. ಅಷ್ಟೇ ಯಾಕೆ, ಈಗಲೂ ಸ್ಯಾಂಡಲವುಡ್‌ ನಲ್ಲಿ ಸ್ಟಾರ್‌ ಆಗಿ ಮಿಂಚುತ್ತಿರುವವರಲ್ಲಿ ಮೈಸೂರಿನವರದ್ದೇ ಸಿಂಹಪಾಲು. ಅಲ್ಲಿನ ಮಣ್ಣಿವ ಗುಣ ಅದು. ಅದೇ ನಂಟಿನ ಪ್ರಭಾವದೊಂದಿಗೆ ಹೀರೋ ಆಗಲೇಬೇಕೆಂದು ಸಿನಿಮಾ ಜಗತ್ತಿಗೆ ಬಂದಿರುವ ಯುವ ಪ್ರತಿಭೆ ಚರಿತ್‌ ಗೆ ಯಾವುದೇ ಹಿನ್ನೆಲೆ ಇಲ್ಲ. ಅವರದೊಂದು ಕೃಷಿ ಕುಟುಂಬ. ಅಪ್ಪ-ಅಮ್ಮ ಕೃಷಿಕರು. ಒಂದಷ್ಟು ಜಮೀನಿದೆ. ಅದೇ ಅವರ ಜೀವನೋಪಾಯದ ಮೂಲ. ಅದರೂ ಹೀರೋ ಅಗುವ ಕನಸು ಹೊತ್ತು ಬೆಂಗಳೂರಿಗೆ ಬಂದ ಈ ಸಿಕ್ಸ್‌ ಪ್ಯಾಕ್‌ ಹುಡುಗನಿಗೆ ಏಳು ವರ್ಷದ ಸಿನಿ ದುನಿಯಾದ ಜತೆಗಿನ ನಂಟಿದೆ. ಹಾಗೆಯೇ ಹೀರೋ ಆಗಲೇಬೇಕೆಂದು ಅಷ್ಟು ವರ್ಷಗಳಲ್ಲಿಒಂದಷ್ಟು ನಟನೆಗೆ ಪೂರಕವಾದ ತರಬೇತಿ ಪಡೆದಿದ್ದಾನೆನ್ನುವುದು ಪ್ಲಾಸ್‌ ಪಾಯಿಂಟ್.

ಹೀರೋ ಆಗುತ್ತಿರುವುದು ಸುಮ್ನೆ ಅಲ್ಲ..

ಅದೇ ಅನುಭವದ ಮೂಲಕ ಚಿಕ್ಕಂದಿನ ತಮ್ಮ ಕನಸು ನನಸಾಗಿಸಿಕೊಳ್ಳುತ್ತಿರುವ ಚರಿತ್‌, ಮೂಲಕ ” ಸಿನಿಲಹರಿ” ಮೂಲಕ ಕನ್ನಡ ಸಿನಿಮಾ ಅಭಿಮಾನಿಗಳಿಗೆ ತಮ್ಮನ್ನು ತಾವು ಪರಿಚಯಿಸಿಕೊಳ್ಳುವುದು ಹೀಗೆ; ʼ ನಂದು ಮೈಸೂರು. ರೈತ ಕುಟುಂಬದಿಂದ ಬಂದವನು. ಅಪ್ಪ -ಅಮ್ಮ ಇಬ್ಬರು ಕೃಷಿಕರು. ಆದರೂ ನಂಗೆ ಬಾಲ್ಯದಿಂದಲೂ ಹೀರೋ ಆಗ್ಬೇಕೆನ್ನುವ ಹುಚ್ಚು. ಅದ್ಯಾಕೆ ಬಂತೋ ಗೊತ್ತಿಲ್ಲ. ಬಹುಶ:, ಮೈಸೂರಿನ ಮಣ್ಣಿನ ಗುಣವೂ ಇರಬಹುದು. ಅದೇ ಕಾರಣಕ್ಕೆ ಓದು ಒಂದು ಹಂತಕ್ಕೆ ಮುಗಿದ ನಂತರ ಹೀರೋ ಆಗುವ ಕನಸು ಹೊತ್ತು ಬೆಂಗಳೂರಿಗೆ ಬಂದೆ. ಆದರೆ ಹೀರೋ ಆಗ್ಬೇಕು ಅನ್ನೋದು ಕನಸು ಕಂಡಷ್ಟು ಸುಲಭ ಅಲ್ಲ ಅನ್ನೋದು ಇಲ್ಲಿಗೆ ಬಂದ್ಮೇಲೆ ಗೊತ್ತಾಯಿತು. ಅದಕ್ಕೂ ಒಂದಷ್ಟು ಸಿದ್ಧತೆ ಬೇಕು, ಶ್ರದ್ಧೆ ಇರಬೇಕು ಅಂತ ಇಲ್ಲಿ ಪರಿಚಯವಾದವರು ಹೇಳಿದರು. ಅಲ್ಲಿಂದ ನನ್ನ ಕೆಲಸ ಶುರುವಾಯಿತು. ಇಲ್ಲಿಗೆ ಬಂದ ಆರಂಭದಲ್ಲೆ ಹೆಸರಾಂತ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್‌ ಅವರ ಟೆಂಟ್‌ ಶಾಲೆಯಲ್ಲಿ ಆಕ್ಟಿಂಗ್‌ ಟ್ರೈನಿಂಗ್‌ ಮುಗಿಸಿದೆ. ಮುಂದೇನು ಅಂತ ಯೋಚಿಸುತ್ತಿದ್ದಾಗ ಒಂದಷ್ಟು ಸಿನಿಮಾಗಳಲ್ಲಿ ಸಣ್ಣ ಪುಟ್ಟ ಪಾತ್ರಗಳಿಗೆ ಬಣ್ಣ ಹಚ್ಚಿದೆ. ಅದರ ಜತೆಗೆ ನಂಗೆ ಡಾನ್ಸ್‌ ಗೊತ್ತಿದ್ರಿಂದ ೧೫ ಕ್ಕೂ ಹೆಚ್ಚು ಚಿತ್ರಗಳಲ್ಲಿ ಬ್ಯಾಕ್‌ ಗ್ರೌಂಡ್‌ ಡಾನ್ಸರ್‌ ಆಗಿ ಕೆಲಸ ಮಾಡಿದೆ. ಅಲ್ಲಿ ಸಂಪಾದಿಸಿಕೊಂಡ ಹಣದಲ್ಲಿ ಜಿಮ್ ಗೆ ಹೋಗಿ ವರ್ಕೌಟ್‌ ಮಾಡಿದೆ. ಇಷ್ಟಾಗಿಯೂ ನಂಗೆ ನಿತ್ಯ ಕಾಡುತ್ತಿದ್ದದ್ದು ಒಂದೇ ಹೀರೋ ಆಗಬೇಕೆನ್ನುವ ಕನಸು. ಹೇಗಾದ್ರೂ ಮಾಡಿ, ಅದನ್ನು ನನಸಾಗಿಸಿಕೊಳ್ಳಬೇಕೆನ್ನುವ ನನ್ನ ಹಣಾಹಣಿ ಪ್ರಯತ್ನದಲ್ಲಿ ಫೈನಲಿ ಈಗ ಶುರುವಾಗುತ್ತಿರುವುದು ಚರಿತ್‌ ಎನ್ನುವ ಹೊಸ ಸಾಹಸ !

ಚರಿತ್’ ಗೆ ಗೆಳೆಯರು ಕೊಟ್ಟರು ಸಾಥ್

ಇದು ಚರಿತ್‌ ಮಾತು. ಸಿನಿಮಾ ಎಂಬುದು ಮಾಯೆ. ಅದು ಬೆನ್ನು ಬಿದ್ದರೆ ಅದನ್ನು ಟಚ್‌ ಮಾಡುವ ತನಕ ನೆಮ್ಮದಿಯಿಂದ ಇರುವುದಕ್ಕೆ ಬಿಡುವುದಿಲ್ಲ. ಚರಿತ್‌ ಕೂಡ ಹಾಗೆಯೇ ಅದರ ಬೆನ್ನು ಬಿದ್ದವರು. ಫೈನಲಿ ಈಗ ಹೀರೋ ಆಗುತ್ತಿದ್ದಾರೆ. ಗೆಳೆಯರ ಜತೆ ಸೇರಿ ಹೊಸ ಸಿನಿಮಾ ಮಾಡುತ್ತಿದ್ದಾರೆ. ಕೃಷ್ಣ ಎನ್ನುವವರು ಇದರ ನಿರ್ದೇಶಕರು. ಈ ಹಿಂದೆ ಇವರು ʼಅಥರ್ವʼ ಹೆಸರಿನ ಚಿತ್ರಕ್ಕೆ ಅಯಕ್ಷನ್‌ ಕಟ್‌ ಹೇಳಿದ್ದರು. ಹಾಗೆಯೇ ಮೂಲಕ ಕೃಷಿಕರಾದ ಭರತ್‌ ಎನ್ನುವವರು ಚಿತ್ರದ ನಿರ್ಮಾಪಕರು. ಅವರಿಗೆ ಒಂದಷ್ಟು ಗೆಳೆಯರು ಕೂಡ ಸಾಥ್‌ ನೀಡಿದ್ದಾರಂತೆ. ಇನ್ನು ತನ್ವಿಕ್‌ ಎನ್ನುವವರು ಚಿತ್ರದ ಛಾಯಾಗ್ರಾಹಕ.

ಮೂರು ವರ್ಷಗಳ ಭರ್ಜರಿ ಟ್ರೈನಿಂಗ್

ಇದು ೨೦೧೫ರಲ್ಲೇ ಶುರುವಾದ ಪ್ರಾಜೆಕ್ಟ್.‌ ತಡವಾಗಿ ಶುರುವಾಗುತ್ತಿದೆ. ಅದಕ್ಕೆ ಕಾರಣ ಸಿನಿಮಾದ ಸಿದ್ಧತೆ. ʼ ಬೆಸಿಕಲಿ ಇದು ಹಾರ್ಸ್‌ ರೈಡಿಂಗ್‌ ಜತೆಗೆ ಸ್ಫೋರ್ಟ್‌ ಬೆಸ್‌ ಸಿನಿಮಾ. ಅದಕ್ಕೆ ಸಾಕಷ್ಟು ಸಿದ್ದತೆ ಬೇಕಿತ್ತು. ಮೊದಲು ಹಾರ್ಸ್‌ ರೈಡಿಂಗ್.‌ ಒಂದೂವರೆ ವರ್ಷ ಅದನ್ನು ಕಲಿತುಕೊಂಡೆ. ಆಮೇಲೆ ಡಾನ್ಸ್‌ ಟ್ರೈನಿಂಗ್‌ ಮಾಡಿದೆ. ಆಮೇಲೆ ಮತ್ತೆ ಬಾಡಿ ಬಿಲ್ಡಿಂಗ್‌ ಮಾಡ್ಬೇಕು ಅಂದ್ರು, ಅದನ್ನು ಕಲಿತುಕೊಳ್ಳುವುದಕ್ಕೆ ಒಂದಷ್ಟು ಸಮಯ ಬೇಕಾಯಿತು. ಫೈನಲಿ ಎಲ್ಲಾ ಮುಗಿಸಿಕೊಂಡು ಈಗ ಸಿನಿಮಾ ಶುರು ಮಾಡುತ್ತಿದ್ದೇವೆʼ ಎನ್ನುತ್ತಾ ಒಂದೆಡೆ ಹೀರೋ ಆಗುತ್ತಿರುವ ಬಗೆಗಿನ ಖುಷಿ, ಮತ್ತೊಂದೆಡೆ ಅದಕ್ಕಾಗಿ ಪಟ್ಟ ಪರಿಶ್ರಮ ನೆನಪಿಸಿಕೊಂಡು ನಗು ಹಾಗೂ ಆತಂಕ ಹೊರ ಹಾಕಿದರು ಚರಿತ್.‌ ಸದ್ಯಕ್ಕೆ ಸಿನಿಮಾಕ್ಕೆ ಹೀರೋ ಮಾತ್ರ ಫಿಕ್ಸ್‌ ಅಗಿದ್ದಾರೆ. ಹೀರೋ ಯಿನ್‌ ಸೇರಿದಂತೆ ಉಳಿದ ಕಲಾವಿದರ ಆಯ್ಕೆ ಬಾಕಿಯಿದೆಂತೆ. ನಾಳೆ ಚಿತ್ರದ ಅಧಿಕೃತ ಪೋಸ್ಟರ್‌ ಲಾಂಚ್‌ ಆಗುವ ಮೂಲಕ ಶೂಟಿಂಗ್‌ ಸೇರಿದಂತೆ ಉಳಿದ ಕೆಲಸಗಳಿಗೆ ಪ್ಲಾನ್‌ ರೆಡಿಯಾಗಲಿದೆಂತೆ. ಆದಷ್ಟು ಬೇಗ ಸಿನಿಮಾ ಶುರುವಾಗಲಿ, ಚರಿತ್‌ ಸಕ್ಸಸ್‌ ನಟ ಆಗಲಿ ಎನ್ನುವುದು ‘ಸಿನಿಲಹರಿ ‘ಹಾರೈಕೆ.

Categories
ಸಿನಿ ಸುದ್ದಿ

ನಿರ್ದೇಶಕ ಮಂಜು ಮುಖದಲ್ಲಿ ನಗು ತರಿಸಿದ ʼಕನ್ನೇರಿ”

ಕಲಾತ್ಮಕ ಸಿನಿಮಾದಿಂದ ಕಮರ್ಷಿಯಲ್‌ ಕಡೆ ಮುಖ ಮಾಡಿದ ಕ್ರಿಯಾಶೀಲ ನಿರ್ದೇಶಕ

ಯುವ ನಿರ್ದೇಶಕ ನೀನಾಸಂ ಮಂಜು ಮತ್ತೊಮ್ಮೆ ಖುಷಿಯಲ್ಲಿದ್ದಾರೆ. ಅವರು ನಿರ್ದೇಶಿಸಿ ತೆರೆಗೆ ತರಲು ಹೊರಟಿರುವ “ಕನ್ನೇರಿ” ಚಿತ್ರ ಈಗ ಇನ್ನೇರೆಡು ಚಿತ್ರೋತ್ಸವಗಳಿಗೆ ಆಯ್ಕೆ ಆಗಿದೆ. ಇವೆರೆಡು ಪ್ರತಿಷ್ಟಿತ ಫಿಲ್ಮ್‌ ಫೆಸ್ಟಿವೆಲ್ಸ್‌ ಎನ್ನುವುದು ವಿಶೇಷ. ಭಾರತದಲ್ಲೆ ನಡೆಯುವ ಗೋಲ್ಡನ್‌ ಜ್ಯೂರಿ ಫಿಲ್ಮ್‌ ಫೆಸ್ಟಿವೆಲ್‌ ಒಂದಾದರೆ, ಯುಎಸ್‌ಎ ಫಿಲ್ಮ್‌ ಫೆಸ್ಟಿವೆಲ್‌ಗೂ ಕೂಡ” ಕನ್ನೇರಿʼ ಚಿತ್ರ ಅಫೀಷಿಯಲ್‌ ಅಗಿಯೇ ಎಂಟ್ರಿ ಪಡೆದಿದೆ. ಸದ್ಯಕ್ಕೆ ಇವೆರೆಡು ಫೆಸ್ಟಿವೆಲ್‌ ನಡೆಯುವುದು ಯಾವಾಗ, ಅಲ್ಲಿ ʼಕನ್ನೇರಿʼ ಪ್ರದರ್ಶನ ಹೇಗೆ ಎನ್ನುವ ವಿವರ ನಮಗೆ ಮಾತ್ರವಲ್ಲ ಚಿತ್ರ ತಂಡಕ್ಕೂ ಗೊತ್ತಾಗಿಲ್ಲ. ಆದರೆ ಎರಡು ಫೆಸ್ಟಿವೆಲ್‌ ಗೆ ‘ಕನ್ನೇರಿ ‘ಚಿತ್ರ ಅಫಿಷಿಯಲಿ ಎಂಟ್ರಿ ಆಗಿರುವ ಖುಷಿಯನ್ನು ನಿರ್ದೇಶಕ ಮಂಜುʼಸಿನಿಲಹರಿʼಗೆ ಹಂಚಿಕೊಂಡಿದ್ದಾರೆ.

ಹನ್ನೇರೆಡು ಚಿತ್ರೋತ್ಸವಗಳಿಗೆ ‘ಕನ್ನೇರಿ’ ಪಯಣ

ʼಕನ್ನೇರಿʼ ಚಿತ್ರ ಈಗಾಗಲೇ ಹಲವು ಕಾರಣಕ್ಕೆ ಸುದ್ದಿ ಅ
ಆಗಿರುವುದು ಹಳೇ ಸುದ್ದಿ. ಅದು ಮೊದಲು ಗಮನ ಸೆಳೆದಿದ್ದು ವಿಭಿನ್ನ ಕಥಾ ಹಂದರದ ಮೂಲಕ. ಒಂದು ಬುಡಕಟ್ಟು ಸಮುದಾಯದಲ್ಲಿನ ಹುಡುಗಿಯ ಸುತ್ತಲ ಕತೆ ಇದು. ಅಭಿವೃದ್ದಿ ಹೆಸರಲ್ಲಿ ಇಂದು ದೇಶದ ವಿವಿಧೆಡೆ ಕಾಡುಗಳಲ್ಲಿ ವಾಸವಾಗಿರುವ ಬುಡಕಟ್ಟು ಕುಟುಂಬಗಳ ಪರಿಸ್ಥಿತಿ ಶೋಚನೀಯವಾಗಿದೆ. ಕಾಡು ನಾಶ ಅಥವಾ ಅಭಿವೃದ್ಧಿ ಹೆಸರಲ್ಲಿ ಆವರನ್ನು ಎತ್ತಂಗಡಿ ಮಾಡಲಾಗುತ್ತಿದೆ. ಅಲ್ಲಿ ತಮ್ಮ ಮೂಲ ನೆಲೆ ಕಳೆದುಕೊಂಡ ಬುಡಕಟ್ಟು ಜನರು ನಗರಗಳಿಗೆ ವಲಸೆ ಬರುತ್ತಿದ್ದಾರೆ. ಹಾಗೆ ವಲಸೆ ಬಂದವರಿಗೆ ಉದ್ಯೋಗ ಸೇರಿದಂತೆ ಮನೆ, ಮಠ ಇತ್ಯಾದಿ ಮೂಲ ಸೌಕರ್ಯಗಳು ಸಿಗುತ್ತಿಲ್ಲ. ಅಂತಹ ಅತಂತ್ರಗೊಂಡ ಒಂದು ಬುಡಕಟ್ಟು ಕುಟುಂಬದ ಹುಡುಗಿಯ ಸುತ್ತಲ ಕತೆಯೇ ಕನ್ನೇರಿ. ಆಕೆಯ ಬದುಕಲ್ಲಿ ಏನಾಯಿತು, ಆಕೆ ಯಾರನ್ನು , ಏನನ್ನು ಕಳೆದುಕೊಂಡಳು ಎನ್ನುವುದನ್ನು ನಿರ್ದೇಶಕ ನೀನಾಸಂ ಮಂಜು ಈ ಚಿತ್ರದಲ್ಲಿ ಕಟ್ಟಿಕೊಟ್ಟಿದ್ದಾರಂತೆ.

ಕನ್ನೇರಿ ವರ್ತಮಾನದ ಕತೆ

ಕತೆ ವರ್ತಮಾನದ ಬಹು ಚರ್ಚಿತ ವಿಷಯ. ಹಾಗೆ ನೋಡಿದರೆ ಬಡಜನರ ಕರುಣಾಜನಕ ಕತೆ. ಆ ದೃಷ್ಟಿಯಲ್ಲಿ ಒಂದು ಸಾಮಾಜಿಕ ಕಾಳಜಿಯಿಂದಲೇ ಸಿನಿಮಾ ಮಾಡಿರುವ ನಿರ್ದೇಶಕ ಮಂಜು ಅವರ ಪ್ರಯತ್ನ ವಾಣಿಜ್ಯದ ದೃಷ್ಟಿಯಿಂದ ಎಷ್ಟು ವರ್ಕೌಟ್‌ ಆಗುತ್ತೋ ಗೊತ್ತಿಲ್ಲ, ಆದರೆ ಈಗ ಅದು ಬಿಡುಗಡೆಗೂ ಮುನ್ನವೇ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ದೊಡ್ಡ ಸದ್ದು ಮಾಡುತ್ತಿರುವುದು ಒಬ್ಬ ಕ್ರಿಯಾಶೀಲ ನಿರ್ದೇಶಕನ ನಿಜ ಪ್ರಯತ್ನಕ್ಕೆ ಸಿಕ್ಕ ಪ್ರತಿಫಲವಂತೂ ಹೌದು.

ಸಿನಿಮಾ ಸಕಲ ರೀತಿಯಲ್ಲೂ ರಿಲೀಸ್‌ ಗೆ ಸಜ್ಜಾಗಿದೆ. ದೊಡ್ಡ ತಾರಾಗಣವೂ ಇದೆ. ಎಲ್ಲವೂ ಅಂದುಕೊಂಡಂತೆಯೇ ಆಗಿದ್ದರೆ, ಇಷ್ಟರಲ್ಲಿ ತೆರೆಗೆ ಬರಲಿತ್ತೇನೋ, ಆದರೆ ಕೊರೋನಾ ಕಾರಣಕ್ಕೆ ಚಿತ್ರತಂಡ ಈಗಲೂ ಸೂಕ್ತ ಸಂದರ್ಭಕ್ಕೆ ಕಾಯುತ್ತಿದೆ. ಆದರೆ ಈ ಸಮಯದಲ್ಲೆ ಚಿತ್ರ ಚಿತ್ರೋತ್ಸವಗಳ ಮೂಲಕ ಸಾಕಷ್ಟು ಮೆಚ್ಚುಗೆ ಪಡೆಯುತ್ತಿರುವುದು ಚಿತ್ರ ತಂಡಕ್ಕೂ ಖುಷಿ ತಂದಿದೆ.

ಇದು ದುಸ್ಸಾಹಸದ ಕೆಲಸ

‘ ಸಾಮಾಜಿಕ ಕಾಳಜಿಯ ವಿಷಯ ಇಟ್ಟಕೊಂಡು ಪ್ರಯೋಗಾತ್ಮಕ ಸಿನಿಮಾ ಮಾಡುವುದು ಒಂದ್ರೀತಿ ದುಸ್ಸಾಹಸದ ಕೆಲಸ. ಯಾಕಂದ್ರೆ ಕಮರ್ಷಿಯಲ್‌ ದೃಷ್ಟಿಯಿಂದ ಇಂತಹ ಸಿನಿಮಾಗಳಿಗೆ ದೊಡ್ಡ ಮಟ್ಟದ ಬೆಂಬಲ ಸಿಗುವುದಿಲ್ಲ. ಹಾಗೂ ಕಂಟೆಂಟ್‌ ಮೂಲಕ ಗೆದ್ದರೆ, ನಮ್ಮ ಪುಣ್ಯ. ಹಾಗಾಗಿ ಬಹಳಷ್ಟು ಜನರು ಇಂತಹ ಸಿನಿಮಾ ನಿರ್ಮಾಣ ಮಾಡುವುದಕ್ಕೆ ಮುಂದೆ ಬರುವುದಿಲ್ಲ ಎನ್ನುವುದು ನಿಮಗೂ ಗೊತ್ತು. ಆದರೂ ನಿರ್ಮಾಪಕರನ್ನು ಒಪ್ಪಿಸಿ, ಈ ಸಿನಿಮಾ ಮಾಡುವಾಗ ಸಾಕಷ್ಟು ಕಷ್ಟ ಪಟ್ಟಿದ್ದೇವೆ. ಆ ಕಷ್ಟಕ್ಕೆ ಈಗ ಪ್ರತಿಫಲ ಸಿಗುತ್ತಿದೆ. ಸಿನಿಮಾ ಮುಂದೆ ರಿಲೀಸ್‌ ಆಗಿ ಎಷ್ಟು ಹಣ ಮಾಡುತ್ತೋ ಗೊತ್ತಿಲ್ಲ, ಈಗ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಮೆಚ್ಚುಗೆ ಪಡೆಯುತ್ತಿರುವುದು ಗೆದ್ದ ಖುಷಿ ನೀಡುತ್ತಿದೆ’ ಎನ್ನುತ್ತಾರೆ ನಿರ್ದೇಶಕ ನೀನಾಸಂ ಮಂಜು.

ಕೋಲ್ಕೋತ್ತಾ ಚಿತ್ರೋತ್ಸವದಲ್ಲಿ ಪ್ರಶಸ್ತಿ

ಈಗಾಗಲೇ ಈ ಚಿತ್ರ ಕೊಲ್ಕೋತ್ತಾ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪ್ರದರ್ಶನ ಕಂಡಿದೆ. ಅಲ್ಲಿ ಬೆಸ್ಟ್‌ ಔಟ್‌ಸ್ಟ್ಯಾಂಡಿಂಗ್‌ ಪ್ರಶಸ್ತಿ ಈ ಚಿತ್ರಕ್ಕೆ ಸಿಕ್ಕಿದೆ. ಹಾಗೆಯೇ ಈಗ 12 ಚಿತ್ರೋತ್ಸವಗಳಿಗೂ ಹೋಗಿದೆ. ಅದರಲ್ಲಿ ಆಧಿಕೃತವಾಗಿ ಈಗ ಗೋಲ್ಡನ್‌ ಜ್ಯೂರಿ ಹಾಗೂ ಯುಎಸ್‌ ಎ ಫಿಲ್ಮ್‌ ಫೆಸ್ಟಿವೆಲ್‌ ಗೆ ಪ್ರದರ್ಶನಕ್ಕೆ ಸೆಲೆಕ್ಟ್‌ ಆಗಿದೆ. ಇಲ್ಲೂ ಮೆಚ್ಚುಗೆ ಪಡೆದು ಪ್ರಶಸ್ತಿಗೆ ಪಾತ್ರವಾದರೆ, ನಿರ್ದೇಶಕ ಮಂಜು ಮತ್ತವರ ತಂಡದ ಶ್ರಮ ಇನ್ನಷ್ಟು ಸಾರ್ಥಕ. ಇನ್ನು ಮಂಜುಗೆ ಈ ಪ್ರಯತ್ನ ಅಥವಾ ಸಾಹಸ ಹೊಸದಲ್ಲ. ಅವರ ಚೊಚ್ಚಲ ಚಿತ್ರ ಮೂಕಹಕ್ಕಿ ಕೂಡ ಅದ್ಭುತ ಪ್ರತಿಕ್ರಿಯೆ ಪಡೆದುಕೊಂಡಿತ್ತು. ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪ್ರದರ್ಶನ ಕಂಡಿತ್ತು. ಈಗ ಆ ಸರದಿ ʼಕನ್ನೇರಿ ʼಚಿತ್ರದ್ದು. ಒಂದೆಡೆ ಕಲಾತ್ಮಕ ಅಥವಾ ಪ್ರಯೋಗಾತ್ಮಕ ಚಿತ್ರಗಳಲ್ಲಿ ಜನ ಮನ್ನಣೆ ಹಾಗೂ ಪ್ರಶಸ್ತಿಗಳ ಮೂಲಕ ತಮ್ಮನ್ನು ತಾವು ನಿರ್ದೇಶಕನಾಗಿ ಸಾಬೀತು ಮಾಡಿಕೊಳ್ಳುತ್ತಿರುವಾಗಲೇ, ಮತ್ತೊಂದೆಡೆ ಕಮರ್ಷಿಯಲ್‌ ಸಿನಿಮಾ ಮಾಡುವ ಅನಿವಾರ್ಯತೆ ಅವರಿಗೂ ಎದುರಾಗಿದೆ.

ಶೋಗನ್ ಹೊತ್ತು ಕಮರ್ಷಿಯಲ್ ಕಡೆಗೆ

ಈಗವರು ಲೂಸ್‌ ಮಾದ ಯೋಗೇಶ್‌ ಕಾಂಬಿನೇಷನ್‌ ಮೂಲಕ ʼಶೋಗನ್‌ʼಹೆಸರಿನ ಚಿತ್ರ ಮಾಡುವುದಾಗಿ ಪ್ರಕಟಿಸಿದ್ದಾರೆ. ಅದರ ಫಸ್ಟ್‌ ಲುಕ್‌ ಪೋಸ್ಟರ್‌ ಕೂಡ ಹೊರ ಬಂದಿದೆ. ಇಷ್ಟರಲ್ಲಿಯೇ ಅದರತ್ತ ಗಮನ ಹರಿಸುವುದಾಗಿ ಹೇಳುವ ಮಂಜು, ಕಮರ್ಷಿಯಲ್‌ ಸಿನಿಮಾ ಯಾಕೆ ಅನ್ನುವುದನ್ನು ಸೂಕ್ಷ್ಮವಾಗಿ ಹೇಳಿಕೊಳ್ಳುತ್ತಾರೆ. ” ಪ್ರತಿಯೊಂದಕ್ಕೂಕ್ರಿಯಾಶೀಲತೆ ಬೇಕು, ಆದರೆ ಕ್ರಿಯಾಶೀಲತೆಯೇ ಇಲ್ಲ ಹೊಟ್ಟೆ ತುಂಬಿಸೋದಿಲ್ಲ. ಬಹುಕಾಲ ಇಲ್ಲಿ ನಿರ್ದೇಶಕನಾಗಿ ಉಳಿಯಬೇಕಾದರೂ ನಂಗೆ ಕಮರ್ಷಿಯಲ್‌ ಸಿನಿಮಾವೊಂದರ ಗೆಲುವು ಬೇಕು. ಹಾಗೆಯೇ ನಾನು ಕೂಡ ಹೊಟ್ಟೆ ತುಂಬಿಸಿಕೊಳ್ಳಬೇಕು. ಅದಕ್ಕಾಗಿ ಈ ಕಮರ್ಷಿಯಲ್‌ ಸಿನಿಮಾದ ಪ್ರಯತ್ನ ಎನ್ನುವ ಮೂಲಕ ತಮ್ಮ ಬದಲಾದ ಪರಿಯನ್ನು ವಿವರಿಸುತ್ತಾರೆ ನೀನಾಸಂ ಮಂಜು. ʼನಿ ಲಹರಿʼಕಡೆಯಿಂದ ನಿರ್ದೇಶಕ ಮಂಜು ಅವರಿಗೆ ಶುಭಾಶಯ.

Categories
ಸಿನಿ ಸುದ್ದಿ

ಓ ಮೈ ಲವ್ ! ಇದು ಹೊಸಬರ ವಿಡಿಯೋ ಆಲ್ಬಂ

ಹೊಸಬರ ಪ್ರಯತ್ನಕ್ಕೆ ಸ್ಟಾರ್ ಗಳ ಮೆಚ್ಚುಗೆ

 

ಚಿತ್ರರಂಗಕ್ಕೆ ಬರಬೇಕು ಎಂಬ ಹೊಸ ಪ್ರತಿಭೆಗಳು ಮೊದಲು ಮುಖ ಮಾಡುವುದು ಕಿರುಚಿತ್ರ, ಆಲ್ಬಂಗಳತ್ತ. ತಮ್ಮ ಪ್ರತಿಭೆಯನ್ನು ಓರೆಗೆ ಹಚ್ಚಲು ಇವುಗಳು ಉತ್ತಮ ವೇದಿಕೆಯಾಗುತ್ತದೆ ಅಂಥ ನಂಬಿರುವವರು. ಇತ್ತೀಚೆಗೆ ಇದರ ಮೂಲಕವೆ ಗುರುತಿಸಿಕೊಂಡು, ಭರವಸೆ ಮೂಡಿಸಿ ಚಿತ್ರ ನಿರ್ದೇಶಕರಾಗುವ ಉದಾಹರಣೆಗಳು ಸಾಕಷ್ಟು ಸಿಗುತ್ತವೆ. ಈ ಸಾಲಿಗೆ ’ಓ ಮೈ ಲವ್’ ವಿಡಿಯೋ ಹಾಡು ಸಿದ್ದಗೊಂಡಿದೆ. ಹಲವು ಚಿತ್ರಗಳಿಗೆ ಕೆಲಸ ಮಾಡಿರುವ ಜೀವನ್‌ಗಂಗಾಧರಯ್ಯ ಹಾಡಿಗೆ ಪರಿಕಲ್ಪನೆ,ಸಾಹಿತ್ಯ ಬರೆದು ನಿರ್ದೇಶನ ಮಾಡಿದ್ದಾರೆ. ಡ್ರಾಮಾ ಜೂನಿಯರ್ಸ್  ಖ್ಯಾತಿಯ ತುಷಾರ್‌ಗೌಡ ನಾಯಕ. ಮಜಾಭಾರತ್‌ದಲ್ಲಿ ಕಾಣಿಸಿಕೊಂಡಿದ್ದ ಆರಾಧನಭಟ್‌ನಿಟ್ಟೋಡಿ ನಾಯಕಿ. ಸಂಗೀತ ಜಿತಿನ್‌ದರ್ಶನ್-ಸತ್ಯರಾಧಾಕೃಷ್ಣ, ಛಾಯಾಗ್ರಹಣ ರಾಜರಾವ್‌ಅಂಚಲ್‌ಕರ್, ಸಂಕಲನ ಅಕ್ಷಯ್.ಪಿ.ರಾವ್, ನೃತ್ಯ ತೀಚುಆಚಾರ್ಯ ನಿರ್ವಹಿಸಿದ್ದಾರೆ. ಪ್ರಭಾಕರ್.ಬಿ.ಪಿ, ಶಂಕರಣ್ಣ ಸ್ಟುಡಿಯೋ ಹಾಗೂ ರಂಗಮಯೂರಿ ಜಂಟಿಯಾಗಿ ಬಂಡವಾಳ ಹೂಡಿದ್ದಾರೆ.


ಗೀತೆಯ ಕುರಿತು ಹೇಳುವುದಾದರೆ, ನಮ್ಮ ಯೌವ್ವನದಲ್ಲಿ ಹೊಸತನ್ನು ಕಂಡುಕೊಳ್ಳುವ ಸಮಯದಲ್ಲಿ ಎದುರುಗೊಳ್ಳುವ ವಿವಿಧ ಸನ್ನಿವೇಶಗಳು ನೆನಪಿಸುತ್ತದೆ. ಆಧುನಿಕತೆಯ ಜೀವನದಲ್ಲಿ ಮಾನವ ಸಂಬಂದಗಳು ಪ್ರಧಾನ ಪಾತ್ರವಹಿಸುತ್ತವೆ. ವಿಶೇಷವಾಗಿ ಪೋಷಕರು ಮತ್ತು ಮಗುವಿನ ರಿಲೇಶನ್‌ಷಿಪ್‌ದಲ್ಲಿ ಬದುಕಿನುದ್ದಕ್ಕೂ ಅನೇಕ ಕಹಿ ಮತ್ತು ಸಿಹಿ ಕ್ಷಣಗಳನ್ನು ಕಾಣುತ್ತೇವೆ. ಇವಿಷ್ಟು ನಿರ್ದೇಶಕರು ಸಿನಿಮಾಕ್ಕಾಗಿ ಬರೆದ ಕತೆಯ ಒಂದು ಭಾಗದಲ್ಲಿ ಬರಲಿದೆ. ಮೊನ್ನೆಯಷ್ಟೇ ಪ್ರದರ್ಶನಗೊಂಡ ಹಾಡಿನ ಕಾರ್ಯಕ್ರಮದಲ್ಲಿ ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಪಿ.ಶೇಷಾದ್ರಿ, ಗಾಯಕಿ ಅನುರಾಧಭಟ್, ಬೆಲ್‌ಬಾಟಂ ನಿರ್ಮಾಪಕ ಸಂತೋಷ್‌ಕುಮಾರ್, ಕೆಜಿಎಫ್‌ಗೆ ಸಂಭಾಷಣೆ ಬರೆದಿರುವ ಚಂದ್ರಮೌಳಿ, ನಟಿ ಪ್ರಿಯಾಂಕಾ ತಿಮ್ಮೇಶ್ ಮುಂತಾದವರು ಗೀತೆ ಕುರಿತಂತೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

 

Categories
ಸಿನಿ ಸುದ್ದಿ

ಬೆಳ್ಳಿತೆರೆಗೆ‌ ಎಂಟ್ರಿಯಾಗುತ್ತಿದ್ದಾನೆ ‘ಧ್ರುವತಾರೆ’ ಚಿತ್ರದ ನಟಿಯ ಪುತ್ರ !

‘ನಾನೊಂಥರ ‘ಅಂತ ಬರ್ತಿದ್ದಾನೆ ಡಾಕ್ಟರ್ ಸನ್, ಹೆಸರು ಜೈ ಸನ್


ಬಣ್ಣದ ಜಗತ್ತೇ ಹಾಗೆ. ಇದೊಂಥರ ಮ್ಯಾಗ್ನೆಟ್ ಇದ್ದಂತೆ. ಎಂತವರಿಗೂ ಇದು ಒಂಥರ ತಲೆ ಗಿಮ್ಮ್ ಎನ್ನಿಸದೆ ಇರದು. ಹಾಗೆಯೇ ಸಿನಿಮಾ ಎನ್ನುವ ಸೊಜಿಗಲ್ಲಿನ ಆಕರ್ಷಣೆ ಮೂಲಕ ಬೆಳ್ಳಿತೆರೆಗೆ ನಟನಾಗಿ‌ಬರುತ್ತಿದ್ದಾರೆ ಯುವ ಪ್ರತಿಭೆ ಜೈಸನ್. ಈತ ಡಾಕ್ಟರ್ ಸನ್. ಯು ರಮೇಶ್ ನಿರ್ದೇಶನದ ‘ ನಾನೊಂಥರ ‘ಚಿತ್ರದ ನಿರ್ಮಾಪಕಿ ಡಾ. ಜಾಕ್ಲಿನ್ ಫ್ರಾನ್ಸಿಸ್ ಅವರ ಪುತ್ರ.

ಹೊಸಬರ ಚಿತ್ರ ಎನ್ನುವುದರ ಜತೆಗೆ ಹಲವು ಕಾರಣಕ್ಕೆ ಸಿನಿಮಾ ಪ್ರೇಕ್ಷಕ ರಲ್ಲಿ ಕುತೂಹಲ‌ ಹುಟ್ಟಿಸಿರುವ ‘ ನಾನೊಂಥರ ‘ ಚಿತ್ರವು ಇದೇ ವಾರ ತೆರೆಗೆ ಬರುತ್ತಿದೆ. ಇದೇ ಶುಕ್ರವಾರ( ಡಿ.18) ಮಲ್ಟಿಪ್ಲೆಕ್ಸ್ ಸೇರಿದಂತೆ ರಾಜ್ಯಾದ್ಯಂತ ಸರಿ ಸುಮಾರು 82 ಚಿತ್ರ ಮಂದಿರಗಳಲ್ಲಿ ಈ ಚಿತ್ರ ತೆರೆ ಕಾಣುತ್ತಿದೆ. ಈ ಚಿತ್ರದಲ್ಲಿ ಯುವ ನಟ ಜೈಸನ್ ಸೆಕೆಂಡ್ ಹೀರೋ. ಅಂದ್ರೆ ನಾಯಕನ ಸಹೋದರನ ಪಾತ್ರ. ಈ ಪಾತ್ರದ ಮೂಲಕ ಬೆಳ್ಳಿತೆರೆಯಲ್ಲಿ ಇದೇ ಮೊದಲು ನಟನಾಗಿ ಕಾಣಿಸಿಕೊಳ್ಳು ತ್ತಿರುವ ನಿರ್ಮಾಪಕಿ ಜಾಕ್ಲಿನ್ ಫ್ರಾನ್ಸಿಸ್ ಪುತ್ರ ಜೈಸನ್ ಗೆ ಸಿನಿಮಾ ಅಂದ್ರೆ ಅಮ್ಮನೇ ಮೊದಲ ಪ್ರೇರಣೆ ಅಂತೆ.

ಅಮ್ಮನ‌ ಒತ್ತಾಯಕ್ಕೆ ನಾನು ಅಂದು ಧ್ರುವತಾರೆ ಸಿನಿಮಾ ಮೂಲಕ ಬಾಲ‌ನಟಿಯಾಗಿ ಅಭಿನಯಿಸಿದ್ದೆ. ಅದೊಂದು ಒಳ್ಳೆಯ ಅನುಭವ.‌ದೊಡ್ಡ ಕಲಾವಿದರ ನಡುವೆ ಕಾಣಿಸಿಕೊಂಡೆ. ಮುಂದೆ ಮಲಯಾಳಂ ಚಿತ್ರದಲ್ಲೂ ಅಭಿನಯಿಸುವ ಅವಕಾಶ ಬಂತು.ಆದರೆ ಆಗ‌ ನಮಗೆಸರಿಯಾದ ಮಾರ್ಗದರ್ಶನ ನೀಡುವವರು ಸಿಗಲಿಲ್ಲ.‌ಹಾಗಾಗಿ ಸಿನಿಮಾ ಬಿಟ್ಟು ಶಿಕ್ಷಣ ದ ಕಡೆ ಗಮನಕೊಟ್ಡೆ.‌ಹಾಗಾಗಿಯೇ ಡಾಕ್ಟರ್ ಆದೆ. ಈಗ ಸಿನಿಮಾ ಬಗ್ಗೆ ನಂಗೊಂದಿಷ್ಟು ಗೊತ್ತಿದೆ. ವೈದ್ಯೆಯಾಗಿ ಗೆದ್ದವಳಿಗೆ ಇಲ್ಲೋ ಗೆಲುವು ಸಿಗುತ್ತೆ ಎನ್ನುವ ವಿಶ್ವಾಸ ಇದೆ. ಅದೇ ಕಾರಣಕ್ಕೆ ನಾನೊಂಥರ ಸಿನಿಮಾ‌ಮಾಡಿದ್ದೇನೆ. ಮುಂದೆ ಮಗನನ್ನು ಹೀರೋ ಆಗಿ ಪರಿಚಯಿಸಬೇಕೆನ್ನುವ ಆಸೆಇದೆ.

ಡಾ.‌ಜಾಕ್ಲಿನ್ ಫ್ರಾನ್ಸಿಸ್,ನಿರ್ಮಾಪಕಿ

 

‘ ನಂಗೆ ನಟ ಆಗ್ಬೇಕು, ಸಿನಿಮಾ ಮಾಡ್ಬೇಕು ಅನ್ನೋದಕ್ಕೆ ಕಾರಣವೇ ಅಮ್ಮ. ಯಾಕಂದ್ರೆ ಅಮ್ಮ ಬಾಲ‌ನಟಿಯಾಗಿ ಕನ್ನಡ ಚಿತ್ರರಂಗಕ್ಕೆ ಪರಿಚಯವಾದವರು. ಡಾ. ರಾಜ್ ಕುಮಾರ್ ಅಭಿನಯದ ಧ್ರುವತಾರೆ ಚಿತ್ರದಲ್ಲಿ ಬಾಲ‌ನಟಿಯಾಗಿ ಅಭಿನಯಿಸಿದ್ದಾರೆ. ಅದಕ್ಕೆ ಕಾರಣ ನನ್ನಜ್ಜಿ. ಅವರಿಗೆ ಅಮ್ಮನಟಿ ಆಗ್ಬೇಕು ಅನ್ನೋ ಆಸೆ ಇತ್ತಂತೆ. ಅವರ ಒತ್ತಾಯಕ್ಕೆ ಅಮ್ಮ ಬಾಲ‌ನಟಿಯಾಗಿ ಅವತ್ತು ಬೆಳ್ಳಿ ತೆರೆಯಲ್ಲಿ ಕಾಣಿಸಿಕೊಂಡ್ರಂತೆ. ಅಮ್ಮ ನಂಗೂ ಆಗಾಗ ಅದನ್ನು‌ಹೇಳುತ್ತಿದ್ದರು. ಅದರ ಪ್ರಭಾವವೋ ಏನೋ ನಂಗೂ ನಟ ಆಗ್ಬೇಕು ಅನ್ನೋದು ಬಾಲ್ಯದಿಂದಲೇ ಶುರುವಾಯಿತು. ಈಗ ಆ ಕನಸು ನನಸಾಗುತ್ತಿದೆ. ಫಸ್ಟ್ ಟೈಮ್ ಬಣ್ಣ ಹಚ್ಚಿ ಪ್ರೇಕ್ಷಕ ರ ಮುಂದೆ ಬರುತ್ರಿರುವುದು ಒಂದೆಡೆ ಖುಷಿ, ಮತ್ತೊಂದೆಡೆ ಆತಂಕ‌ ‘ಎನ್ನುತ್ತಾರೆ ಜೈಸನ್.

ಸದ್ಯಕ್ಕೆ ಈತ ಪದವಿ ವಿದ್ಯಾರ್ಥಿ. ಬೆಂಗಳೂರಿನ‌ ಬಸವನಗುಡಿ ಬಿಎಂಎಸ್ ಕಾಲೇಜಿನಲ್ಲಿ ಫಸ್ಟ್ ಈಯರ್ ಡಿಗ್ರಿ ಓದುತ್ತಿದ್ದಾನೆ. ಆದರೆ ಓದಿನ ಜತೆಗೆಯೇ ಈಗ ನಾನೊಂಥರ ಚಿತ್ರದೊಂದಿಗೆ ನಟನಾಗಿಯೂ ಬೆಳ್ಳಿತೆರೆಗೆ ಪರಿಚಯವಾಗುತ್ತಿದ್ದಾನೆ.ಮುಂದೆ ಹೇಂಗೆ ಅಂತ ಪ್ರಶ್ನಿಸಿದರೆ ನಂಗೆ ಎರಡು ಮುಖ್ಯ ಅಂತಾರೆ ಜೈಸನ್.
‘ ನಂಗೆ ಕೆರಿಯರ್ ಕೂಡ ಮುಖ್ಯ. ಸದ್ಯಕ್ಕೆ ಎಜುಕೇಶನ್ ಮುಗಿಯೋವರೆಗೂ ಎಜುಕೇಷನ್ ಜತೆಗೆಯೇ ಆ್ಯಕ್ಟಿಂಗ್ ಕಡೆ ಗಮನ‌ಹರಿಸುತ್ತಿದ್ದೇನೆ.‌ ಅಮ್ಮ‌ನ‌‌ ನಿರ್ಧಾರ ಕೂಡ ಹಾಗೆಯೇ ಇದೆ. ಏಜುಕೇಷನ್ ಮುಗಿದ ಮೇಲೆ ಫುಲ್ ಟೈಮ್ ಸಿನಿಮಾ‌ಕಡೆಯೇ ಯೋಚಿಸೋಣ ಅಂತಲೂ‌ ಇದೆ. ಯಾಕಂದ್ರೆ ಅಮ್ಮ ಪ್ರಡ್ಯೂಸರ್. ಇವತ್ತಲ್ಲ ನಾಳೆ ಸಿನಿಮಾ‌ನಿರ್ಮಾಣ ಮಾಡೆ ಮಾಡುತ್ತಾರೆ.‌ ನಾನು ಹಿರೋ ಆಗ್ಬೇಕು ಅನ್ನೋದು ನನಗಿರುವಷ್ಟೇ ಆಸೆ ಅವರಿಗೂ ಇದೆ. ಹಾಗಾಗಿ ನಿಧಾನವಾಗಿಯೇ ಎಜುಕೇಶನ್ ಮುಗಿಸಿಕೊಂಡು‌ಸಿನಿಮಾಕ್ಕೆ ಫುಲ್ ಟೈಮ್ ಆಗಿ ಬರುತ್ತೇನೆ ಅಂತ ನಗು ಬೀರುತ್ತಾರೆ ಜೈಸನ್.

ಜೈಸನ್ ಗೆ ಇಗಷ್ಟೇ 18 ವರ್ಷ.‌ ಕಟ್ಟು ಮಸ್ತು ದೇಹದೊಂದಿಗೆ ನೋಡುವುದಕ್ಕೂ ಹ್ಯಾಂಡ್ ಸಮ್ ಆಗಿದ್ದಾನೆ.‌ ಅದಕ್ಕೆ ತಕ್ಕಂತೆ ಈಗ ಜಿಮ್ ನಲ್ಲಿ ವರ್ಕೌಟ್ ಶುರು ಮಾಡಿದ್ದಾರಂತೆ. ಹಾಗೆಯೇ ಸಿನಿಮಾ ಸಂಬಂಧಿತ ಎಲ್ಲಾ ತರಬೇತಿ ಕೂಡ ಶುರುವಾಗಿದೆಯಂತೆ.’ ಸಿನಿಮಾ ನಂಗೆ ಹೊಸದು. ತುಂಬಾ ಬ್ಲಾಂಕ್ ಆಗಿಯೇ ಮೊದಲ ಸಿನಿಮಾದಲ್ಲಿ ನಟಿಸಿದ್ದೇನೆ. ನಿರ್ದೇಶಕರು ಎಲ್ಲವನ್ನು ಹೇಳಿಕೊಟ್ಟರು. ಮುಂದೆ ಅಮ್ಮ ನನಗಾಗಿಯೇ ಸಿನಿಮಾ ಮಾಡೋ‌ಆಲೋಚನೆಯಲ್ಲಿದ್ದಾರೆ. ಆ ಹೊತ್ತಿಗೆ ನಾನು ಎಲ್ಲ ರೀತಿಯಲ್ಲೂ ರೆಡಿ ಆಗಿರೋಣ ಅಂತ, ಈಗ ಜಿಮ್ ಗೆ ಹೋಗುತ್ತಿದ್ದೇನೆ. ಫೈಟ್ ಅಭ್ಯಾಸವು ನಡೆದಿದೆ. ಇಷ್ಟರಲ್ಲಿಯೇ ಆ್ಯಕ್ಟಿಂಗ್ ತರಬೇತಿಯೂ ನಡೆಯಲಿದೆ. ಒಟ್ಟಿನಲ್ಲಿ ಹೀರೋ ಆಗಲು ಏನ್ ಬೇಕು ಅದನ್ನು‌ಶ್ರದ್ದೆಯಿಂದ ಕಲಿಯಬೇಕೆಂದು ನಿರ್ಧರಿಸಿದ್ದೇನೆ ಎನ್ನುವುದು ಜೈ ಸನ್, ಸದ್ಯಕ್ಕೆ ಸ್ಯಾಂಡಲ್ ವುಡ್ ನಲ್ಲಿ ತಮಗೆ ನಟ ಯಶ್ ಅಂದ್ರೆ ಅಚ್ಚು ಮೆಚ್ಚು ಅಂತಾರೆ. ಅದೇ ರೀತಿ ಜೈಸನ್ ಕೂಡ ಬೆಳೆಯಲಿ ಎನ್ನುವುದು ‘ಸಿನಿ‌ಲಹರಿ ‘ಹಾರೈಕೆ.

Categories
ಸಿನಿ ಸುದ್ದಿ

ಮನೆ ಹತ್ತಿರ ಬರಬೇಡಿ, ನೀವಿರುವ ಕಡೆಯಿಂದಲೇ ಹರಸಿ, ಹಾರೈಸಿ

ಅಭಿಮಾನಿಗಳಲ್ಲಿ  ರೋರಿಂಗ್ ಸ್ಟಾರ್ ಶ್ರೀ ಮುರಳಿ‌ ಮನವಿ

 

ನಟ ರೋರಿಂಗ್ ಸ್ಟಾರ್ ಶ್ರೀ‌ಮುರಳಿ ಅವರಿಗೆ ನಾಳೆ( ಡಿ.17) ಹುಟ್ಟು ಹಬ್ಬ.‌‌ ಆದರೆ ಈ ಬಾರಿಯ ಹುಟ್ಟು ಹಬ್ಬವನ್ಜು ಅವರು ತುಂಬಾ ಸರಳವಾಗಿ‌ ಆಚರಿಸಿಕೊಳ್ಳಲು ನಿರ್ಧರಿಸಿದ್ದಾರೆ. ಅದಕ್ಕೆ ಕಾರಣ ಕೊರೋನಾ. ಪ್ರತಿ ವರ್ಷ ಈ ದಿನ‌ ಬಂತೆಂದರೆ ಮನೆ ಮುಂದೆ ‌ಸಾವಿರಾರು ಮಂದಿ ಅಭಿಮಾನಿಗಳ ಜತೆಗೆ ಕೇಕ್ ಕತ್ತರಿಸಿ, ಅದ್ದೂರಿಯಾಗಿ ಬರ್ತ್ ಡೇ ಆಚರಿಸಿಕೊಳ್ಳುತ್ತಿದ್ದ ನಟ ಶ್ರೀ‌ಮುರಳಿ, ಈ ಬಾರಿ ಕೊರೋನಾ‌ ಕಾರಣದಿಂದಲೇ ಸಿಂಪಲ್ ಬರ್ತ್ ಡೇ ಆಚರಣೆಗೆ ಮುಂದಾಗಿದ್ದಾರೆ. ಹಾಗಾಗಿ ಅಂದು ಅಭಿಮಾನಿಗಳು‌ ಎಲ್ಲೆಂದೆಲ್ಲಿಂದಲೋ ‌ಬಂದು‌ ಮನೆ ಮುಂದೆ ಸೇರುವುದು ಬೇಡ ಅಂತ ಮನವಿ‌ ಮಾಡಿಕೊಂಡಿದ್ದಾರೆ.

ಕೊರೋನಾ ಕಾರಣಕ್ಕೆ ಈವರ್ಷ ಕನ್ನಡದ ಬಹಳಷ್ಟು ನಟರು ಹಾಗೂ ನಟಿಯರು ತಮ್ಮ‌ಹುಟ್ಟು ಹಬ್ಬವನ್ನು ತುಂಬಾ ಸರಳವಾಗಿ ಆಚರಿಸಿಕೊಂಡಿದ್ದು ನಿಮಗೂ ಗೊತ್ತು, ಅದೇ ರೀತಿ ನಟ ಶ್ರೀ‌ಮುರಳಿ ಕೂಡ ಅದೇ ಸೂತ್ರ ಪಾಲಿಸುತ್ತಿದ್ದಾರೆ. ಅದು‌ ಅನಿವಾರ್ಯ ಕೂಡ. ಕೊರೋನಾ‌ ತಡೆಗಟ್ಟಬೇಕಾದರೆ, ಹೆಚ್ವು ಜನ ಒಂದೆಡೆ ಸೇರುವುದು, ಸಭೆ – ಸಮಾರಂಭ ನಡೆಸುವುದಕ್ಕೂ ಬ್ರೇಕ್ ಹಾಕಬೇಕಿದೆ. ಒಬ್ಬ ಜನಪ್ರಿಯ ನಟನಾಗಿ ಶ್ರೀ‌ಮುರಳಿ ಕೂಡ ಅದನ್ನೇ ಪಾಲಿಸುತ್ತಿರುವುದು ವಿಶೇಷ.‌‌

ಆದರೆ ಅಭಿಮಾನಿಗಳಿಗೆ ಬೇಸರ. ಯಾಕಂದ್ರೆ ತಮ್ಮ‌ನೆಚ್ಚಿನ‌ ನಟನ ಹುಟ್ಟು ಹಬ್ಬವನ್ನು ಅದ್ದೂರಿಯಾಗಿ ಆಚರಿಸಿಕೊಳ್ಳುತ್ತಿಲ್ಲ ಎನ್ನುವುದಕ್ಕಾಗಿ. ಆದರೆ ಶ್ರೀ ಮುರಳಿ ಅವರು ಅದಕ್ಕೂ ಅಭಿಮಾನಿಗಳಲ್ಲಿ ತಮ್ಮದೇ ರೀತಿಯಲ್ಲಿ‌ಮನವಿ‌ಮಾಡಿಕೊಂಡಿದ್ದಾರೆ.

ಅಭಿಮಾನಿಗಳೇ ದೇವರೆಂದು ಹೇಳಿ, ಅದನ್ನು ಪ್ರಾಮಾಣಿಕವಾಗಿ ಪಾಲಿಸಿದ ಅಣ್ಣಾವ್ರ ಮಾತಿನಿಂತೆ ನಡೆಯುವ ನಟ ನಾನು. ಯಾವುದೇ ಕಲಾವಿದನಿಗೆ ಆಭಿಮಾನಿಗಳೆ ದೇವರು. ಅವರಿಂದಲೇ ನಮ್ಮ ಸ್ಟಾರ್‌ಗಿರಿ ಎಂಬುವುದು ನನ್ನ ಬಲವಾದ ನಂಬಿಕೆ. ನಾನು ಕೂಡ ನಟ ಗುರುತಿಸಿಕೊಂಡಿದ್ದೇನೆಂದರೆ ಅದಕ್ಕೆ ಕಾರಣ ಅಭಿಮಾನಿಗಳ ಆಶೀರ್ವಾದ. ಆದರೆ ಕೊರೋನಾದ ಅಡಚಣೆ ಇರುವುದು ನಿಮಗೂ ತಿಳಿದಿದ್ದೆ. ಹಾಗಾಗಿ ಡಿಸೆಂಬರ್‌ 17 ರಂದು ನನ್ನ ಹುಟ್ಟು ಹಬ್ಬವನ್ನು ತುಂಬಾ ಸರಳವಾಗಿ ಆಚರಿಸಿಕೊಳ್ಳಲು ನಿರ್ಧರಿಸಿದ್ದೇನೆ’ ಎಂದು‌ಸ್ಪಷ್ಟ ಪಡಿಸಿದ್ದಾರೆ.

ಈ ಬಾರಿಯ ನನ್ನ ಹುಟ್ಟು ಹಬ್ಬ ತುಂಬಾ ಸರಳವಾಗಿರುತ್ತೆ. ಅದರ ಜತೆಗೆ ಆ ದಿನ ನಾನು ಮನೆಯಲ್ಲಿರುವುದಿಲ್ಲ. ಮನೆ ದೇವರಿಗೆ ವಿಶೇಷ ಪೂಜೆ ಸಲ್ಲಿಸುವುದಕ್ಕಾಗಿ ಕುಟುಂಬ ಸಮೇತ ಹೊರಗಡೆ ಹೋಗುತ್ತೇನೆ. ಇಂತಹ ಸಮಯದಲ್ಲಿ ಅಭಿಮಾನಿಗಳು ನನ್ನ ಹುಟ್ಟು ಹಬ್ಬದ ಆಚರಣೆಗೆ ಎಲ್ಲಿಂದಲೋ ಬಂದು, ನಮ್ಮ ಮನೆ ಮುಂದೆ ಜಮಾಯಿಸಿಕೊಳ್ಳುವುದು ತರವಲ್ಲ. ಹಾಗಂತ ನಾನು ನಿಮ್ಮ ಪ್ರೀತಿ, ಆಕ್ಕರೆಯನ್ನು ನಾನು ತಿರಸ್ಕರಿಸುವುದಿಲ್ಲ. ನಿಮ್ಮ ಅಭಿಮಾನ, ಪ್ರೀತಿ, ಹಾರೈಕೆ ನನಗೆ ಇಂದು, ಎಂದೆಂದೂ ಬೇಕು. ಅದಕ್ಕೆ ನೀವು ಮಾಡಬೇಕಾಗಿರುವುದೆನೆಂದರೆ, ನೀವು ಇರುವ ಕಡೆಯಿಂದಲೇ ನನ್ನನ್ನು ಹಾರೈಸಿ, ಆಶೀರ್ವದಿಸಿ. ಅದೇ ನೀವು ನನಗೆ ಹುಟ್ಟು ಹಬ್ಬದಂದು ಕೊಡುವ ಬಹುದೊಡ್ಡ ಕಾಣಿಕೆ’ ಎಂದು ಅಭಿಮಾನಿಗಳ ಲ್ಲಿ‌ಮನವಿ‌‌ಮಾಡಿಕೊಂಡಿದ್ದಾರೆ ನಟ ಶ್ರೀ‌ಮುರಳಿ.

ಈ ಬಾರಿಯ ತಮ್ಮ ಹುಟ್ಟು ಹಬ್ಬವನ್ನು ತುಂಬಾ ಸರಳವಾಗಿ ಆಚರಿಸಿಕೊಳ್ಳಲು ನಿರ್ಧರಿಸಿರುವುದು ಅವರ ಬಹಳಷ್ಟು ಅಭಿಮಾನಿಗಳಿಗೆ ಗೊತ್ತಾಗಿಲ್ಲ. ಹಾಗಾಗಿ ಗುರುವಾರ ಬೆಳಗ್ಗೆಯಿಂದಲೇ ಅವರ ಮನೆ ಎದುರು ಸೇರಿಕೊಂಡಿದ್ದರ ವಿಷಯ ಕೇಳಿ, ಶ್ರೀಮುರಳಿ ಅವರೇ ಬೇಸರ ವ್ಯಕ್ತಪಡಿಸಿದ್ದಾರಂತೆ. ಅದೇ ಕಾರಣಕ್ಕೆ‌ ‌ಈ ಬಾರಿಯ ಸರಳ ಹುಟ್ಟು ಹಬ್ಬದ ಆಚರಣೆಯ ತಮ್ಮ ನಿರ್ಧಾರ ಅಭಿಮಾನಿಗಳಿಗೆ ಗೊತ್ತಾಗಲಿದೆ ಎಂದು ಅವರು ಅಧಿಕೃತ ವಾಗಿಯೇ ಸಿನಿ ಲಹರಿ ಜತೆ ಮಾತನಾಡಿದರು.

Categories
ಸಿನಿ ಸುದ್ದಿ

ಬರಗಾಲದಲ್ಲೂ ಬೆಳೆ ತೆಗೆದ ಆಕ್ಟ್‌ 1978

 ಟೆನೆಟ್‌ ಗೂ ಟಾಂಟ್‌ ಕೊಟ್ಟ ಕನ್ನಡ ಸಿನಿಮಾ

ಆಕ್ಟ್‌ 1978 ಚಿತ್ರ ತೆರೆ ಕಂಡು ಯಶಸ್ವಿ 25 ದಿನಗಳ ಪ್ರದರ್ಶನ ಕಂಡಿದೆ. ಕೊರೋನಾ ಆತಂಕದ ನಡುವೆಯೇ ಈ ಚಿತ್ರ ಇಷ್ಟು ದಿನಗಳೂ ಯಶಸ್ವಿ ಪ್ರದರ್ಶನ ಕಂಡಿದ್ದು ಒಂದ್ರೀತಿ ಮಿರಾಕಲ್.‌ ಹಾಗೆ ನೋಡಿದರೆ ಉತ್ತಮ ಕಲೆಕ್ಷನ್‌ ಜತೆಗೆಯೇ ೨೫ ದಿನಗಳ ಪ್ರದರ್ಶನ ಎನ್ನುವುದು ಬರಗಾಲದಲ್ಲಿ ಬೆಳೆ ತೆಗೆದ ಹಾಗೆ. ಕೊರೋನಾ ಕಾರಣಕ್ಕೆ ಲಾಕ್‌ಡೌನ್ ಆಗಿ ಹೆಚ್ಚು ಕಡಿಮೆ ಐದಾರು ತಿಂಗಳಿಗೆ ಚಿತ್ರ ಮಂದಿರಗಳು ಮತ್ತೆ ಒಪನ್ ಅದವು. ಅದರೂ ಕೊರೋನಾ ಆತಂಕ ಮಾತ್ರ ಇನ್ನು ಕಮ್ಮಿ ಆಗಿಲ್ಲ. ಚಿತ್ರ ಮಂದಿರಗಳು ಅಷ್ಟೋ ಇಷ್ಟೋ ಸುರಕ್ಷತೆ ಕ್ರಮಗಳ ಮೂಲಕ ಒಪನ್‌ ಅಗಿದ್ದರೂ, ಚಿತ್ರ ಮಂದಿರಕ್ಕೆ ಬರುವಷ್ಟು ಜನ ಇನ್ನು ಕೊರೋನಾ ಆತಂಕದಿಂದ ದೂರವಾಗಿಲ್ಲ. ಇಂತಹ ದಿನಗಳನಡುವೆಯೇ ಈ ಸಿನಿಮಾ ಯಶಸ್ವಿ ಪ್ರದರ್ಶನ ಕಂಡಿದೆಯಂದ್ರೆ, ಬರಗಾಲದಲ್ಲಿ ಬೆಳೆ ತೆಗೆದ ಹಾಗೆಯೇ ಹೌದು.

ಲಾಕ್‌ ಡೌನ್‌ ನಂತರದ ಮೊದಲ ಸಿನಿಮಾವಾಗಿ ಆಕ್ಟ್‌ 1978 ತೆರೆಗೆ ಬಂದಿದ್ದು ಕೂಡ ಒಂದು ಸಾಹಸವೇ. ಎಲ್ಲರಿಗೂ ಈ ಸಿನಿಮಾದ ಕತೆ ಹೇಗೋ ಏನೋ ಎನ್ನುವಂತೆಯೇ ಇತ್ತು. ಚಿತ್ರ ಮಂದಿರಕ್ಕೆ ಜನ ಬರದಿದ್ದರೆ ನಿರ್ಮಾಪಕರ ಕತೆ ಏನು ಎನ್ನುವುದು ಹಲವರ ಆತಂಕವೂ ಆಗಿತ್ತು. ಆದರೆ ಮುಂದೆ ಆಗಿದ್ದೇ ಬೇರೆ. ಮಲ್ಟಿಪ್ಲೆಕ್ಸ್‌ ಸೇರಿದಂತೆ ಚಿತ್ರಮಂದಿರಗಳಲ್ಲಿ ಅಚ್ಚರಿಯೇ ನಡೆದುಹೋಯಿತು. ಚಿತ್ರ ಮಂದಿರಗಳಿಗೆ ಜನ ಬಂದರು. ಆಕ್ಟ್‌ 1978 ಚಿತ್ರ ತಂಡಕ್ಕೆ ಖುಷಿ ತಂದಿತು. ಅಲ್ಲಿಂದ ಶುರುವಾದ ಈ ಚಿತ್ರದ ಯಶಸ್ವಿ ಜರ್ನಿ , ಇಲ್ಲಿಗೀಗ ೨೫ ದಿನಗಳನ್ನು ಪೂರೈಸಿದೆ. ವಿಶೇಷ ಅಂದ್ರೆ, ಕಳೆದ ವಾರ ಮಲ್ಟಿಪ್ಲೆಕ್ಸ್‌ ಗಳಲ್ಲಿ ಹಾಲಿವುಡ್‌ ಚಿತ್ರ ಟೆನೆಟ್‌ ಗೂ ಟಾಂಟ್‌ ಕೊಟ್ಟಿದೆ ಆಕ್ಟ್‌ 1978 ಚಿತ್ರ. ʼ ಆರಂಭದಿಂದಲೂ ಚಿತ್ರಕ್ಕೆ ಒಳ್ಳೆಯ ರೆಸ್ಪಾನ್ಸ್‌ ಸಿಕ್ಕಿದೆ. ಇದು ಜನ ಆಶೀರ್ವಾದ. ವಾರದ ದಿನಗಳಲ್ಲಂತೂ, ಅದ್ಬುತ ಪ್ರತಿಕ್ರಿಯೆ ಸಿಗುತ್ತಾ ಬಂದಿದೆ. ಕಳೆದ ವಾರ ಬೆಂಗಳೂರಿನ ಒರಾಯನ್‌ ಮಾಲ್‌ ನಲ್ಲಿ ಹಾಲಿವುಡ್‌ ಚಿತ್ರ ಟೆನೆಟ್‌ ಗೂ ಟಾಂಟ್‌ ಕೊಟ್ಟಿದೆ ಆಕ್ಟ್‌ 1978 ಚಿತ್ರ. ಇದು ಕನ್ನಡಿಗರು ಕೊಟ್ಟ ಬೆಂಬಲ. ಇದೆಲ್ಲ ನೋಡಿದರೆ ಖುಷಿ ಆಗುತ್ತದೆʼ ಎನ್ನುತ್ತಾರೆ ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ ನಟ ಸಂಚಾರಿ ವಿಜಯ್.‌ ಹಾಗೆಯೇ ಚಿತ್ರ ತಂಡ ಚಿತ್ರ ಮಂದಿರಗಳಿಗೆ ಭೇಟಿ ನೀಡಿ, ಪ್ರೇಕ್ಷಕರ ಜತೆಗೆ ಮಾತುಕತೆ ನಡೆಸಿದ ಸಂದರ್ಭಗಳಲ್ಲಿ ವ್ಯಕ್ತವಾದ ಅಭಿಪ್ರಾಯಗಳನ್ನು ಸೋಷಲ್‌ ಮೀಡಿಯಾಗಳಲ್ಲಿ ಹಂಚಿಕೊಳ್ಳುತ್ತಾ ಬಂದಿದೆ. ಎಲ್ಲ ಕಡೆಯೂ ಅದ್ಭುತ ಪ್ರತಿಕ್ರಿಯೆ ಸಿಕ್ಕಿದೆ.

Categories
ಸಿನಿ ಸುದ್ದಿ

ಪ್ರೇಕ್ಷಕನ ಡಿಯರ್ ಆಗ್ತಾನಾ ಈ ಸತ್ಯ?

ಸತ್ಯ ಮೇಲೆ ಸಂತೋಷ್ ಇಟ್ಟಿದ್ದಾರೆ ಬೆಟ್ಟದಷ್ಟು ನಿರೀಕ್ಷೆ !

 

ವರ್ಚಸ್ ಅನ್ನೋದಿದ್ರೂ ನಟ-ನಟಿಯರಿಗೆ ಸಕ್ಸಸ್ ಅನ್ನೋದು ಅತೀ ಮುಖ್ಯ. ಯಾಕಂದ್ರೆ ಅವರ ಆಸ್ತಿತ್ವ ಸಕ್ಸಸ್ ಎನ್ನುವುದರ ಮೇಲೆಯೇ ನಿಂತಿದೆ. ಅದರಲ್ಲೂ ಸಿನಿ ದುನಿಯಾಕ್ಕೆ ಹೊಸದಾಗಿ ಬಂದವರಿಗೆ ಇದು  ತುಂಬಾನೆ ಇಂಫಾರ್ಟೆಂಟ್. ಸದ್ಯಕ್ಕೆ ಒಬ್ಬ ಭರವಸೆಯ ನಟನಾಗಿ ಅಂತಹದೇ ಸಕ್ಸಸ್ ಎದುರು ನೋಡುತ್ತಿರುವ ನಟರ ಪೈಕಿ ಕಿರುತೆರೆಯ ನಿರೂಪಕ ಹಾಗೂ ಮಾಜಿ ಬಿಗ್ ಬಾಸ್ ಕಂಟೆಸ್ಟೆಂಟ್ಆರ್ಯನ್ ಸಂತೋಷ್  ಕೂಡ ಒಬ್ಬರು. ಕಟ್ಟು ಮಸ್ತ್ ದೇಹದೊಂದಿಗೆ ನೋಡುವುದಕ್ಕೂ ಹ್ಯಾಂಡ್ ಸಮ್ ಆಗಿರುವ ಆರ್ಯನ್ ಸಂತೋಷ್ , ಹೀರೋ ಆಗುವುದಕ್ಕೇನು ಯಾವುದರಲ್ಲೂ ಕಮ್ಮಿ ಇಲ್ಲ. ಹಾಗೆ ನೋಡಿದರೆ ಬಾಲಿವುಡ್ ನಲ್ಲಿ ಮಿಂಚುತ್ತಿರುವ ಅನೇಕ ಚಾಕ್ ಲೇಟ್ ಹೀರೋಗಳ ಹಾಗೆ ಸಂತೋಷ್ ಕನ್ನಡದಲ್ಲಿ ಒಬ್ಬ ಚಾಕ್ ಲೇಟ್ ಹೀರೋ. ಆದರೂ ಯಾಕೆ ತಮ್ಮನ್ನು ಕನ್ನಡದ ಪ್ರೇಕ್ಷಕರು ದೊಡ್ಡದೊಂದು ಬ್ರೇಕ್ ಸಿಗುವ ಹಾಗೆ ಒಪ್ಪಿಕೊಂಡಿಲ್ಲ, ಅಪ್ಪಿಕೊಂಡಿಲ್ಲ ಎನ್ನುವ ಕೊರಗು ಅವರನ್ನು ಕಾಡುತ್ತಲೇ ಇದೆ. ಹಾಗೊಂದು ಸಕ್ಸಸ್ ಸಿಗಲೇ ಬೇಕು ಅಂತ ಅವರು ಪಡುತ್ತಿರುವ ಶ್ರಮ ಕೂಡ ಅಷ್ಟಿಷ್ಟಲ್ಲ, ಆದರೆ ಈ ಸಲ ಅದು ಮಿಸ್ ಆಗಬಾರದು ಅಂತಲೇ ಪಣ ತೊಟ್ಟಿದ್ದಾರೆ. ಅದಕ್ಕಾಗಿಯೇ ” ಡಿಯರ್ ಸತ್ಯ’ ಚಿತ್ರವನ್ನು ತಾವೇ ಹೆಚ್ಚಿನ ಮುತುವರ್ಜಿ ವಹಿಸಿಕೊಂಡು, ತೆರೆಗೆ ತರಲು ಸಿದ್ಧತೆ ನಡೆಸಿದ್ದಾರಂತೆ.

ಅದ್ದೂರಿ ಮೇಕಿಂಗ್ ಸಿನಿಮಾ..

ಅಂದ ಹಾಗೆ, ಪರ್ಪಲ್ ರಾಕ್ ಹಾಗೂ  ವಿಂಟರ್ ಬ್ರಿಡ್ಜ್ ಬ್ಯಾನರ್ ನಲ್ಲಿ ಯತೀಶ್ ವೆಂಕಟೇಶ್, ಗಣೇಶ್ ಪಾಪಣ್ಣ, ಶ್ರೀನಿವಾಸ್ ಹಾಗೂ ಆಜೇಯ್ ರಾವ್ ನಿರ್ಮಾಣ ಮಾಡಿದ ಚಿತ್ರ ” ಡಿಯರ್ ಸತ್ಯ’. ಸಿನಿಮಾ ಜಗತ್ತಿನ ಜತೆಗಿನ ನಂಟು ಹಾಗೂ ಅದರ ಮೇಲಿರುವ ಪ್ಯಾಷನ್ ಕಾರಣಕ್ಕೆ ಕನ್ನಡಕ್ಕೆ ಒಂದೊಳ್ಳೆ ಸಿನಿಮಾ ಕೊಡಬೇಕೆನ್ನುವ ಮಹಾದಾಸೆ ಇಟ್ಕೊಂಡೇ ತಂಡ ಈ ಸಿನಿಮಾ ಮಾಡಿದೆಯಂತೆ. ಹಾಗಾಗಿ ಸಿನಿಮಾವನ್ನು ಕತೆಗೆ ತಕ್ಕಂತೆ ಆದ್ದೂರಿಯಾಗಿಯೇ ತೆರೆಗೆ ತಂದಿರುವುದಾಗಿ ನಿರ್ಮಾಪಕರು ಹೇಳುತ್ತಿರುವುದು ಮಾತ್ರವಲ್ಲ, ಟ್ರೇಲರ್ ಹಾಗೂ ಹಾಡುಗಳ ದೃಶ್ಯಗಳಲ್ಲಿ ಅದರ ಮೇಕಿಂಗ್ ಕಾಣುತ್ತಿದೆ. ‍ಇತ್ತೀಚೆಗಷ್ಟೇ ನಡೆದ ಅದರ ಆಡಿಯೋ ಲಾಂಚ್ ಕಾರ್ಯಕ್ರಮಕ್ಕೆ ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಕೂಡ ಬಂದಿದ್ದು, ಈ ತಂಡ ಸಿನಿಮಾ ಮೇಲಿಟ್ಟಿರುವ ಕಾಳಿಜಿಯಿಂದಲೇ ಅಂತೆ. ಜತೆಗೆ ನಟ ಸಂತೋಷ್ ಹಾಗೂ ನಿರ್ಮಾಪಕ ಯತೀಶ್ ಆವರ ಪರಿಚಯದ ಕಾರಣಕ್ಕೂ ಹೌದು. ಅದೇನೋ ಗೊತ್ತಿಲ್ಲ, ನಟ ಸಂತೋಷ್ ಅವರಿಗೆ ಆರಂಭದಿಂದಲೂ ರಾಜ್ ಕುಟುಂಬದ ಆಶೀರ್ವಾದ ಇದ್ದೇ.

ಸಂತುಗಿದೆ ರಾಜ್ ಕುಟುಂಬದ ಆಶೀರ್ವಾದ..

ಸಂತೋಷ್ ಹೀರೋ ಆಗಿ ಲಾಂಚ್ ಆದ ನೂರು ಜನ್ನಕ್ಕೂ ಚಿತ್ರದ ಆಡಿಯೊ ಲಾಂಚ್ ಸೇರಿದಂತೆ ಆದರ ಪ್ರಚಾರದಲ್ಲೂ ಶಿವಣ್ಣ ಹಾಗೂ ಪುನೀತ್ ಬೆಂಬಲವಾಗಿ ನಿಂತಿದ್ದರು. ಅದೇ ರೀತಿ ಇವತ್ತು ಕೂಡ ರಾಜ್ ಕುಟುಂಬ ಸಂತೋಷ್ ಸಿನಿಮಾಕ್ಕೆ ಬೆಂಬಲಕ್ಕೆ ಬಂದಿದೆ. ‘ಡಿಯರ್ ಸತ್ಯ’ ಚಿತ್ರ ಟೀಸರ್ ಲಾಂಚ್ ಗೆ ಶಿವಣ್ಣ ಬಂದಿದ್ದರು. ಆ ನಂತರವೀಗ ಇದರ ಆಡಿಯೋ ಲಾಂಚ್ ಗೆ ಪುನೀತ್ ರಾಜ್ ಕುಮಾರ್ ಬಂದಿದ್ದರು. ಇದೊಂದು ತಮ್ಮ ಸೌಭಾಗ್ಯ ಅಂದರು ಸಂತೋಷ್ ಆರ್ಯನ್. ಅವತ್ತಿನ ಸಮಾರಂಭದಲ್ಲಿ ಅದನ್ನು ಸಂತೋಷ್ ನೆನಪಿಸಿಕೊಳ್ಳುವುದೇ ವಿಶೇಷ.”  ಶಿವಣ್ಣ ಅವರ’ ಓಂ’ ಚಿತ್ರ ಬಂದಾಗ ಅಲಸೂರಿನ ಚಿತ್ರ ಮಂದಿರದಲ್ಲಿ ಬ್ಲಾಕ್ ನಲ್ಲಿ ಟಿಕೆಟ್ ತೆಗೆದುಕೊಂಡು ಸಿನಿಮಾ ನೋಡಿದ್ದೆ. ಅವತ್ತೇ ನಾನು ಶಿವರಾಜ್ ಕುಮಾರ್ ಅವರ ದೊಡ್ಡ ಅಭಿಮಾನಿಯಾಗಿದ್ದೆ. ಮುಂದೆ ನಾನೂ ಕೂಡ ಸಿನಿ ದುನಿಯಾಕ್ಕೆ ಬರುತ್ತೇನೆ, ನನ್ನ ಸಿನಿಮಾಕ್ಕೆ ಶಿವಣ್ಣ ಬಂದು ಆಶೀರ್ವಾದ ಮಾಡ್ತಾರೆ ಅಂತ ಅಂದುಕೊಂಡಿರಲಿಲ್ಲ. ಆದರೆ ಅದು ಅಯಿತು. ಡಿಯರ್ ಸತ್ಯ ಟೀಸರ್ ಆನ್ನು ಅವರೇ ಲಾಂಚ್ ಮಾಡಿದ್ದರು. ಈಗ ಪುನೀತ್ ಅವರು ಆಡಿಯೋ ಲಾಂಚ್ ಮಾಡಿಕೊಟ್ಟಿದ್ದಾರೆ. ದೊಡ್ಮನೆ ಆಶೀರ್ವಾದ ಇದೇ ಆದ್ಮೇಲೆ ನನಗೆ ಗೆಲ್ಲವುದೇನು ಕಷ್ಟ ಆಗದು ಅಂತ ಅತೀವ ವಿಶ್ವಾಸ ವ್ಯಕ್ತಪಡಿಸಿದರು ಆರ್ಯನ್ ಸಂತೋಷ್.

ಡಿಯರ್ ಸತ್ಯ ಗೆಲ್ಲಲ್ಲೇ ಬೇಕಿದೆ…

ಹೌದು, ಆರ್ಯನ್ ಸಂತೋಷ್ ಗೆಲ್ಲಲೇ ಬೇಕಿದೆ. ಕಿರುತೆರೆಯಲ್ಲಿ ನಿರೂಪಕರಾಗಿ, ಆನಂತರ ಬಿಗ್ ಬಾಸ್ ರಿಯಾಲಿಟಿ ಶೋ ನಲ್ಲಿ ಕಾಣಿಸಿಕೊಂಡು ಪ್ರೇಕ್ಷಕರ ಮನ ಗೆಲ್ಲುವ  ಅವರ ಪ್ರಯತ್ನ ಒಂದಷ್ಟು ಫನ ಕೊಟ್ಟರೂ, ಹೀರೋ ಆಗಿ ಅವರಿಗೆ ‍ಇನ್ನು ದೊಡ್ಡದೊಂದು ಬ್ರೇಕ್ ಬೇಕಿದೆ. ಆ ಬ್ರೇಕ್ ಗಾಗಿ ಅವರು ಕಾಯುತ್ತಿದ್ದಾರೆ. ನೂರು ಜನ್ನಕ್ಕೂ ದೊಡ್ಡ ನಿರೀಕ್ಷೆ ಮೂಡಿಸಿದ್ದರೂ, ಅಲ್ಲಿ ಸಂತೋಷ್ ಅವರಿಗೆ ಅದೃಷ್ಟ ಕೈ ಕೊಟ್ಟಿತು. ಮುಂದೆ ಅಭಿರಾಮ್, ಇಷ್ಟ ಸೇರಿದಂತೆ ಒಂದಷ್ಟು ಸಿನಿಮಾಗಳಲ್ಲಿ ಕಾಣಿಸಿಕೊಂಡರೂ, ಸಂತೋಷ್ ಅರ್ಯನ್ ಜನರಿಗೆ ಇನ್ನು ಅಷ್ಟಾಗಿ ಹಿಡಿಸದೆ ಹೋದರು. ಈಗ ಅದೆಲ್ಲವನ್ನು ಮರೆಸಬೇಕು, ದೊಡ್ಡದೊಂದು ಬ್ರೇಕ್ ಪಡೆದುಕೊಳ್ಳಬೇಕು ಅಂತಲೇ ಡಿಯರ್ ಸತ್ಯದಲ್ಲಿ ಆಭಿನಯಿಸಿದ್ದಾರಂತೆ. ಈ ಸಿನಿಮಾದಲ್ಲಿ ಸಂತೋಷ್ ಆರ್ಯನ್ ಅವರ ಮಾಸ್ ಹಾಗೂ ಕ್ಲಾಸ್ ಲುಕ್ ಎಲ್ಲವೂಇದೆ. ಪ್ರೇಕ್ಷಕರಿಗೆ ಸಿನಿಮಾ ಇಷ್ಟ ಆಗುವುದು ನೂರಕ್ಕೂ ನೂರರಷ್ಟು ಗ್ಯಾರಂಟಿ ಅಂತಾರೆ ಆರ್ಯನ್ ಸಂತೋಷ್ . ಉಳಿದಂತೆ  ಶಿವಗಣೇಶ್ ನಿರ್ದೇಶನದ ಡಿಯರ್ ಸತ್ಯ ಚಿತ್ರ ಫೆಬ್ರವರಿಗೆ ತೆರೆಗೆ ಬರುವ ಸಾಧ್ಯತೆಗಳಿವೆ. ಸಂತೋಷ್ ಅವರಿಗೆ ಇಲ್ಲಿ ನಟಿ ಅರ್ಚನಾ ಕೊಟ್ಟಿಗೆ ನಾಯಕಿ ಆಗಿದ್ದಾರೆ.

error: Content is protected !!