ಶ್ರೀನಿಧಿ ಶಾಸ್ತ್ರಿ ‘ಸರಿಗಮಪ ಸೀಸನ್ 17’ ರ ಚಾಂಪಿಯನ್

-ರನ್ನರ್ ಅಪ್ ಆಗಿ ಅಶ್ವಿನ್ ಶರ್ಮಾ
ಕಂಬದ ರಂಗಯ್ಯ ಗೆ ಸಿಕ್ತು ಮೂರನೇ ಸ್ಥಾನ

ಶ್ರೀನಿಧಿ ಶಾಸ್ತ್ರಿ

ಜೀ ಕನ್ನಡದ ಬಹು ಜನಪ್ರಿಯ ರಿಯಾಲಿಟಿ ಶೋ ” ಸರಿ ಗಮಪ ಸೀಸನ್‌ 17 ” ರ ಚಾಂಪಿಯನ್ ಆಗಿ ಬೆಂಗಳೂರಿನ‌ ಹುಡುಗ ಶ್ರೀನಿಧಿ ಶಾಸ್ತ್ರಿ ಹೊರ ಹೊಮ್ಮಿದ್ದಾರೆ. ಟ್ರೋಪಿ ಜತೆಗೆ 10 ಲಕ್ಷ, ಕ್ಯಾಸ್ ಪ್ರೇಜ್ ಅವರದಾಗಿದೆ.‌

ಹಾಗೆಯೇ ಎರಡನೇ ಸ್ಥಾನದಲ್ಲಿ ಅಶ್ವಿನ್ ಶರ್ಮಾ ಆಯ್ಕೆಯಾದರು. ಟ್ರೋಪಿ ಜತೆಗೆ ಅವರಿಗೆ ಐದು ಲಕ್ಷ ನಗದು ಬಹುಮಾನ ಅವರಾಯಿತು.ಶೋ‌ನ ರಿಯಾಲಿಟಿ ಶೋ ಮಹಾಗುರು ಹಂಸಲೇಖ ಅವರು ಚಾಂಪಿಯನ್ ಅನೌನ್ಸ್ ಮಾಡಿದರು.

ಭಾನುವಾರ ತಡ ರಾತ್ರಿಯವರೆಗೂ‌ ನಡೆದ
ಗ್ರಾಂಡ್ ಫಿನಾಲೆಯ ಅಂತಿಮ ಸುತ್ತಿನಲ್ಲಿ ನೆರೆದಿದ್ದ ಅಪಾರ ಜನ ಸಂಖ್ಯೆಯ ಸಮಕ್ಷಮದಲ್ಲಿ ಶ್ರೀನಿಧಿ ಶಾಸ್ತ್ರಿ ವಿನ್ನರ್ ಆಗಿ ಹೊರ ಹೊಮ್ಮಿದರೆ, ಆಶ್ವಿನ್ ಶರ್ಮಾ ಎರಡನೇ ಸ್ಥಾನಕ್ಕೆ ಆಯ್ಕೆಯಾಗಿ ಅಪಾರ ಜನ್ನಮನ್ನಣೆ ಪಡೆದುಕೊಂಡರು.

ಕಂಬದ ರಂಗಯ್ಯ

ಕಂಬದ ರಂಗಯ್ಯ ಮೂರನೇಸ್ಥಾನ

ಸೆಕೆಂಡ್ ರನ್ನರಪ್ ಆಗಿ ಕಂಬದ ರಂಗಯ್ಯ ಆಯ್ಕೆಯಾದರು.ಟ್ರೋಫಿ ಜತೆಗೆ ಎರಡೂವರೆ ಲಕ್ಷ ಬಹುಮಾನ ಅವರ ಪಾಲಾಯಿತು‌. ಈ ಫಲಿತಾಂಶವನ್ನು ಗಾಯಕ , ಸಂಗೀತ ನಿರ್ದೇಶಕ ರಾಜೇಶ್ ಕೃಷ್ಣ ಅನೌನ್ಸ್ ಮಾಡಿದರು. ಟ್ರೋಫಿ ಜತೆಗೆ ಎರಡೂವರೆ ಲಕ್ಷ ಬಹುಮಾನ ಅವರ ಪಾಲಾಯಿತು‌.

Related Posts

error: Content is protected !!