ಮನೆ ಹತ್ತಿರ ಬರಬೇಡಿ, ನೀವಿರುವ ಕಡೆಯಿಂದಲೇ ಹರಸಿ, ಹಾರೈಸಿ

ಅಭಿಮಾನಿಗಳಲ್ಲಿ  ರೋರಿಂಗ್ ಸ್ಟಾರ್ ಶ್ರೀ ಮುರಳಿ‌ ಮನವಿ

 

ನಟ ರೋರಿಂಗ್ ಸ್ಟಾರ್ ಶ್ರೀ‌ಮುರಳಿ ಅವರಿಗೆ ನಾಳೆ( ಡಿ.17) ಹುಟ್ಟು ಹಬ್ಬ.‌‌ ಆದರೆ ಈ ಬಾರಿಯ ಹುಟ್ಟು ಹಬ್ಬವನ್ಜು ಅವರು ತುಂಬಾ ಸರಳವಾಗಿ‌ ಆಚರಿಸಿಕೊಳ್ಳಲು ನಿರ್ಧರಿಸಿದ್ದಾರೆ. ಅದಕ್ಕೆ ಕಾರಣ ಕೊರೋನಾ. ಪ್ರತಿ ವರ್ಷ ಈ ದಿನ‌ ಬಂತೆಂದರೆ ಮನೆ ಮುಂದೆ ‌ಸಾವಿರಾರು ಮಂದಿ ಅಭಿಮಾನಿಗಳ ಜತೆಗೆ ಕೇಕ್ ಕತ್ತರಿಸಿ, ಅದ್ದೂರಿಯಾಗಿ ಬರ್ತ್ ಡೇ ಆಚರಿಸಿಕೊಳ್ಳುತ್ತಿದ್ದ ನಟ ಶ್ರೀ‌ಮುರಳಿ, ಈ ಬಾರಿ ಕೊರೋನಾ‌ ಕಾರಣದಿಂದಲೇ ಸಿಂಪಲ್ ಬರ್ತ್ ಡೇ ಆಚರಣೆಗೆ ಮುಂದಾಗಿದ್ದಾರೆ. ಹಾಗಾಗಿ ಅಂದು ಅಭಿಮಾನಿಗಳು‌ ಎಲ್ಲೆಂದೆಲ್ಲಿಂದಲೋ ‌ಬಂದು‌ ಮನೆ ಮುಂದೆ ಸೇರುವುದು ಬೇಡ ಅಂತ ಮನವಿ‌ ಮಾಡಿಕೊಂಡಿದ್ದಾರೆ.

ಕೊರೋನಾ ಕಾರಣಕ್ಕೆ ಈವರ್ಷ ಕನ್ನಡದ ಬಹಳಷ್ಟು ನಟರು ಹಾಗೂ ನಟಿಯರು ತಮ್ಮ‌ಹುಟ್ಟು ಹಬ್ಬವನ್ನು ತುಂಬಾ ಸರಳವಾಗಿ ಆಚರಿಸಿಕೊಂಡಿದ್ದು ನಿಮಗೂ ಗೊತ್ತು, ಅದೇ ರೀತಿ ನಟ ಶ್ರೀ‌ಮುರಳಿ ಕೂಡ ಅದೇ ಸೂತ್ರ ಪಾಲಿಸುತ್ತಿದ್ದಾರೆ. ಅದು‌ ಅನಿವಾರ್ಯ ಕೂಡ. ಕೊರೋನಾ‌ ತಡೆಗಟ್ಟಬೇಕಾದರೆ, ಹೆಚ್ವು ಜನ ಒಂದೆಡೆ ಸೇರುವುದು, ಸಭೆ – ಸಮಾರಂಭ ನಡೆಸುವುದಕ್ಕೂ ಬ್ರೇಕ್ ಹಾಕಬೇಕಿದೆ. ಒಬ್ಬ ಜನಪ್ರಿಯ ನಟನಾಗಿ ಶ್ರೀ‌ಮುರಳಿ ಕೂಡ ಅದನ್ನೇ ಪಾಲಿಸುತ್ತಿರುವುದು ವಿಶೇಷ.‌‌

ಆದರೆ ಅಭಿಮಾನಿಗಳಿಗೆ ಬೇಸರ. ಯಾಕಂದ್ರೆ ತಮ್ಮ‌ನೆಚ್ಚಿನ‌ ನಟನ ಹುಟ್ಟು ಹಬ್ಬವನ್ನು ಅದ್ದೂರಿಯಾಗಿ ಆಚರಿಸಿಕೊಳ್ಳುತ್ತಿಲ್ಲ ಎನ್ನುವುದಕ್ಕಾಗಿ. ಆದರೆ ಶ್ರೀ ಮುರಳಿ ಅವರು ಅದಕ್ಕೂ ಅಭಿಮಾನಿಗಳಲ್ಲಿ ತಮ್ಮದೇ ರೀತಿಯಲ್ಲಿ‌ಮನವಿ‌ಮಾಡಿಕೊಂಡಿದ್ದಾರೆ.

ಅಭಿಮಾನಿಗಳೇ ದೇವರೆಂದು ಹೇಳಿ, ಅದನ್ನು ಪ್ರಾಮಾಣಿಕವಾಗಿ ಪಾಲಿಸಿದ ಅಣ್ಣಾವ್ರ ಮಾತಿನಿಂತೆ ನಡೆಯುವ ನಟ ನಾನು. ಯಾವುದೇ ಕಲಾವಿದನಿಗೆ ಆಭಿಮಾನಿಗಳೆ ದೇವರು. ಅವರಿಂದಲೇ ನಮ್ಮ ಸ್ಟಾರ್‌ಗಿರಿ ಎಂಬುವುದು ನನ್ನ ಬಲವಾದ ನಂಬಿಕೆ. ನಾನು ಕೂಡ ನಟ ಗುರುತಿಸಿಕೊಂಡಿದ್ದೇನೆಂದರೆ ಅದಕ್ಕೆ ಕಾರಣ ಅಭಿಮಾನಿಗಳ ಆಶೀರ್ವಾದ. ಆದರೆ ಕೊರೋನಾದ ಅಡಚಣೆ ಇರುವುದು ನಿಮಗೂ ತಿಳಿದಿದ್ದೆ. ಹಾಗಾಗಿ ಡಿಸೆಂಬರ್‌ 17 ರಂದು ನನ್ನ ಹುಟ್ಟು ಹಬ್ಬವನ್ನು ತುಂಬಾ ಸರಳವಾಗಿ ಆಚರಿಸಿಕೊಳ್ಳಲು ನಿರ್ಧರಿಸಿದ್ದೇನೆ’ ಎಂದು‌ಸ್ಪಷ್ಟ ಪಡಿಸಿದ್ದಾರೆ.

ಈ ಬಾರಿಯ ನನ್ನ ಹುಟ್ಟು ಹಬ್ಬ ತುಂಬಾ ಸರಳವಾಗಿರುತ್ತೆ. ಅದರ ಜತೆಗೆ ಆ ದಿನ ನಾನು ಮನೆಯಲ್ಲಿರುವುದಿಲ್ಲ. ಮನೆ ದೇವರಿಗೆ ವಿಶೇಷ ಪೂಜೆ ಸಲ್ಲಿಸುವುದಕ್ಕಾಗಿ ಕುಟುಂಬ ಸಮೇತ ಹೊರಗಡೆ ಹೋಗುತ್ತೇನೆ. ಇಂತಹ ಸಮಯದಲ್ಲಿ ಅಭಿಮಾನಿಗಳು ನನ್ನ ಹುಟ್ಟು ಹಬ್ಬದ ಆಚರಣೆಗೆ ಎಲ್ಲಿಂದಲೋ ಬಂದು, ನಮ್ಮ ಮನೆ ಮುಂದೆ ಜಮಾಯಿಸಿಕೊಳ್ಳುವುದು ತರವಲ್ಲ. ಹಾಗಂತ ನಾನು ನಿಮ್ಮ ಪ್ರೀತಿ, ಆಕ್ಕರೆಯನ್ನು ನಾನು ತಿರಸ್ಕರಿಸುವುದಿಲ್ಲ. ನಿಮ್ಮ ಅಭಿಮಾನ, ಪ್ರೀತಿ, ಹಾರೈಕೆ ನನಗೆ ಇಂದು, ಎಂದೆಂದೂ ಬೇಕು. ಅದಕ್ಕೆ ನೀವು ಮಾಡಬೇಕಾಗಿರುವುದೆನೆಂದರೆ, ನೀವು ಇರುವ ಕಡೆಯಿಂದಲೇ ನನ್ನನ್ನು ಹಾರೈಸಿ, ಆಶೀರ್ವದಿಸಿ. ಅದೇ ನೀವು ನನಗೆ ಹುಟ್ಟು ಹಬ್ಬದಂದು ಕೊಡುವ ಬಹುದೊಡ್ಡ ಕಾಣಿಕೆ’ ಎಂದು ಅಭಿಮಾನಿಗಳ ಲ್ಲಿ‌ಮನವಿ‌‌ಮಾಡಿಕೊಂಡಿದ್ದಾರೆ ನಟ ಶ್ರೀ‌ಮುರಳಿ.

ಈ ಬಾರಿಯ ತಮ್ಮ ಹುಟ್ಟು ಹಬ್ಬವನ್ನು ತುಂಬಾ ಸರಳವಾಗಿ ಆಚರಿಸಿಕೊಳ್ಳಲು ನಿರ್ಧರಿಸಿರುವುದು ಅವರ ಬಹಳಷ್ಟು ಅಭಿಮಾನಿಗಳಿಗೆ ಗೊತ್ತಾಗಿಲ್ಲ. ಹಾಗಾಗಿ ಗುರುವಾರ ಬೆಳಗ್ಗೆಯಿಂದಲೇ ಅವರ ಮನೆ ಎದುರು ಸೇರಿಕೊಂಡಿದ್ದರ ವಿಷಯ ಕೇಳಿ, ಶ್ರೀಮುರಳಿ ಅವರೇ ಬೇಸರ ವ್ಯಕ್ತಪಡಿಸಿದ್ದಾರಂತೆ. ಅದೇ ಕಾರಣಕ್ಕೆ‌ ‌ಈ ಬಾರಿಯ ಸರಳ ಹುಟ್ಟು ಹಬ್ಬದ ಆಚರಣೆಯ ತಮ್ಮ ನಿರ್ಧಾರ ಅಭಿಮಾನಿಗಳಿಗೆ ಗೊತ್ತಾಗಲಿದೆ ಎಂದು ಅವರು ಅಧಿಕೃತ ವಾಗಿಯೇ ಸಿನಿ ಲಹರಿ ಜತೆ ಮಾತನಾಡಿದರು.

Related Posts

error: Content is protected !!