Categories
ಸಿನಿ ಸುದ್ದಿ

ಟಾಪ್‌ ಟಕ್ಕರ್‌ ಸಾಂಗ್‌ನಲ್ಲಿ ರಶ್ಮಿಕಾ ಸ್ಟೆಪ್‌- ಮೊದಲ ಹಿಂದಿ ಹಾಡಲ್ಲಿ ಕುಣಿದ ಕೊಡಗಿನ ಬೆಡಗಿ

ಸದ್ಯಕ್ಕೆ ರಶ್ಮಿಕಾ ಮಂದಣ್ಣ ಜೋರು ಸುದ್ದಿಯಲ್ಲಿದ್ದಾರೆ. ಅದಕ್ಕೆ ಕಾರಣ, ಅವರ ಅಭಿನಯದ “ಪೊಗರು” ಫೆಬ್ರವರಿ ೧೯ರಂದು ರಿಲೀಸ್‌ ಆಗುತ್ತಿದೆ. ಅದಷ್ಟೇ ಅಲ್ಲ, ಅತ್ತ ಬಾಲಿವುಡ್‌ನಲ್ಲೂ ರಶ್ಮಿಕಾ ಮಂದಣ್ಣ ಕೂಡ ಈಗಷ್ಟೇ ಮಿಂಚುತ್ತಿದ್ದಾರೆ. ಅದರೊಂದಿಗೆ ಈಗ ಅವರು ಬಾದ್‌ಷಾ ಅವರ ಟಾಪ್‌ ಟಕ್ಕರ್‌ ಸಾಂಗ್‌ನಲ್ಲಿ ಹೆಜ್ಜೆ ಹಾಕುತ್ತಿದ್ದಾರೆ.

ಇದು ಅವರ ಮೊದಲ ಹಿಂದಿ ಸಾಂಗ್‌ ಆಗಿದ್ದು, ಸದ್ಯಕ್ಕೆ ಹಾಡಿನ ಟೀಸರ್‌ ಬಿಡುಗಡೆಯಾಗಿದ್ದು, ಸಾಕಷ್ಟು ಸದ್ದು ಮಾಡುತ್ತಿದೆ. ಎಲ್ಲೆಡೆಯಿಂದಲೂ ಒಳ್ಳೆಯ ಮೆಚ್ಚುಗೆಯೂ ಸಿಗುತ್ತಿದೆ. ಈ ಹಾಡಲ್ಲಿ ರಶ್ಮಿಕಾ ಸಿಕ್ಕಾಪಟ್ಟೆ ಬೋಲ್ಡ್‌ ಆಗಿ ಕಾಣಿಸಿಕೊಂಡಿದ್ದಾರೆ.

ಬಾಲಿವುಡ್‌ನ ಚೊಚ್ಚಲ ಚಿತ್ರ “ಮಿಷನ್‌ ಮಜ್ನು” ಚಿತ್ರದ ಸುರುವಿಗೆ ಮುನ್ನವೇ, ಅವರು ಹಿಂದಿ ವಿಡಿಯೋ ಸಾಂಗ್‌ನಲ್ಲಿ ಕಾಣಿಸಿಕೊಂಡಿರೋದು ವಿಶೇಷ. ಸದ್ಯಕ್ಕೆ ಈ ಸುದ್ದಿ ಅವರ ಫ್ಯಾನ್ಸ್‌ಗೆ ಸಿಕ್ಕಾಪಟ್ಟೆ ಖುಷಿ ತಂದಿದೆ.


ಅದೇನೆ ಇರಲಿ, ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಕರುನಾಡ ಕ್ರಶ್ ಅಂತೂ ಹೌದು. “ಕಿರಿಕ್ ಪಾರ್ಟಿ” ಮೂಲಕ ಸಿನಿ ಜಗತ್ತಿಗೆ ಎಂಟ್ರಿಯಾದ ಸಾನ್ವಿಯ ಲೈಫ್‌ ನೋಡ ನೋಡುತ್ತಿದ್ದಂತೆಯೇ ಬದಲಾಗಿದ್ದು ನಿಜ. ಸ್ಯಾಂಡಲ್‌ವುಡ್‌ನಲ್ಲಿ ಹೆಸರು ಮಾಡಿದ ರಶ್ಮಿಕಾ, ನಂತರದ ದಿನಗಳಲ್ಲಿ ಕನ್ನಡದ ಸ್ಟಾರ್‌ ನಟರೊಂದಿಗೆ ಕಾಣಿಸಿಕೊಂಡರು.

ಮೆಲ್ಲನೆ ತೆಲುಗು ಚಿತ್ರರಂಗಕ್ಕೂ ಕಾಲಿಟ್ಟೂ, ಅಲ್ಲೂ ಸೈ ಎನಿಸಿಕೊಂಡರು. ಅಲ್ಲಿಂದ ಬಾಲಿವುಡ್‌ನತ್ತ ಈಗ ಪಯಣ ಬೆಳೆಸಿದ್ದಾರೆ. ಅಲ್ಲಿ ಸಿನಿಮಾ ಮಾಡುವ ಮೊದಲು ಟಾಪ್‌ ಟಕ್ಕರ್‌ ಎಂಬ ಹಿಂದಿ ಸಾಂಗ್‌ನಲ್ಲಿ ಕಾಣಿಸಿಕೊಂಡು ಸುದ್ದಿಯಾಗಿದ್ದಾರೆ.

Categories
ಸೌತ್‌ ಸೆನ್ಸೇಷನ್

ವಿಜಯ್ ದೇವರಕೊಂಡ ‘ಲಿಗರ್‌’ ಸೆಪ್ಟೆಂಬರ್‌ಗೆ – ತೆಲುಗು, ಹಿಂದಿ ಭಾಷೆಗಳಲ್ಲಿ ತಯಾರಾಗುತ್ತಿದೆ ಸಿನಿಮಾ!


ದಕ್ಷಿಣ ಭಾರತದ ಪ್ರಸ್ತುತ ಸೆನ್ಸೇಷನ್‌ ಹೀರೋಗಳಲ್ಲೊಬ್ಬರಾದ ವಿಜಯ್ ದೇವರಕೊಂಡ ನಟನೆಯ ‘ಲಿಗರ್‌’ ರಿಲೀಸ್ ಡೇಟ್ ಹೊರಬಿದ್ದಿದೆ. ಪುರಿ ಜಗನ್ನಾಥ್ ನಿರ್ದೇಶನದ ಸಿನಿಮಾ ಇದೇ ವರ್ಷ ಸೆಪ್ಟೆಂಬರ್ 9ಕ್ಕೆ ಥಿಯೇಟರ್‌ಗೆ ಬರಲಿದೆ. ಚಿತ್ರತಂಡ ಇಂದು ಸೋಷಿಯಲ್ ಮೀಡಿಯಾದಲ್ಲಿ ಚಿತ್ರದ ಹೊಸ ಪೋಸ್ಟರ್‌ನೊಂದಿಗೆ ಬಿಡುಗಡೆ ದಿನಾಂಕ ಘೋಷಿಸಿದೆ. ಅನನ್ಯಾ ಪಾಂಡೆ ಚಿತ್ರದ ನಾಯಕಿಯಾಗಿ ನಟಿಸುತ್ತಿದ್ದು ರಮ್ಯಾ ಕೃಷ್ಣನ್‌, ರೋನಿತ್ ರಾಯ್‌, ಅಲಿ, ಮಕರಂದ್ ದೇಶಪಾಂಡೆ ಚಿತ್ರದ ಇತರೆ ಪ್ರಮುಖ ಪಾತ್ರಗಳಲ್ಲಿದ್ದಾರೆ.

ಲವರ್ ಬಾಯ್‌ ವಿಜಯ್‌ ಈ ಚಿತ್ರದಲ್ಲಿ ಇಮೇಜು ಬದಲಿಸಿಕೊಳ್ಳುವ ಉಮೇದಿನಲ್ಲಿದ್ದಾರೆ. ಮಾರ್ಷಿಯಲ್ ಆರ್ಟ್ಸ್‌ ಹಿನ್ನೆಲೆಯ ಕತೆಯ ಇದೊಂದು ಸ್ಪೋರ್ಟ್ಸ್‌ ಡ್ರಾಮಾ ಎನ್ನಲಾಗಿದೆ. ತೆಲುಗು ಮಾತ್ರವಲ್ಲದೆ ಹಿಂದಿ ಭಾ‍ಷೆಯಲ್ಲೂ ಸಿನಿಮಾ ತಯಾರಾಗುತ್ತಿದೆ. ಈ ಮೂಲಕ ಬಾಲಿವುಡ್‌ಗೆ ಪರಿಚಯವಾಗುತ್ತಿದ್ದಾರೆ ದೇವರಕೊಂಡ. ಮತ್ತೊಂದೆಡೆ ಪುರಿ ಜಗನ್ನಾಥ್ ಹತ್ತು ವರ್ಷದ ನಂತರ ಬಾಲಿವುಡ್‌ಗೆ ಮರಳುತ್ತಿದ್ದಾರೆ. ದಶಕದ ಹಿಂದೆ ಅವರ ನಿರ್ದೇಶನದಲ್ಲಿ ಅಮಿತಾಭ್ ಬಚ್ಚನ್ ನಟಿಸಿದ್ದ ‘ಬುಡ್ಡಾ ಹೋಗಾ ತೇರಿ ಬಾಪ್‌’ ಹಿಂದಿ ಚಿತ್ರ ತೆರೆಕಂಡಿತ್ತು. ಪುರಿ ಜಗನ್ನಾಥ್‌, ಕರಣ್ ಜೋಹರ್‌, ನಟಿ ಚಾರ್ಮಿ ಕೌರ್ ಚಿತ್ರದ ನಿರ್ಮಾಪಕರು. ಕನ್ನಡ, ತಮಿಳು ಮತ್ತು ಮಲಯಾಳಂ ಭಾಷೆಗಳ ಡಬ್ಬಿಂಗ್ ಅವತರಣಿಕೆಗಳೂ ಏಕಕಾಲದಲ್ಲಿ ಬಿಡುಗಡೆಯಾಗಲಿದೆ.

Categories
ಸಿನಿ ಸುದ್ದಿ

ಆಸ್ಪತ್ರೆಗೆ ದಾಖಲಾದ ಸಂಜನಾ! ಲೈವ್‌ ಬಂದು ಬದುಕು ಬೇಸರವಾಗಿದೆ ಜೀವನ ಬೇಡ ಅಂದಿದ್ದರು

ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣದಲ್ಲಿ ಸಿಕ್ಕಿಬಿದ್ದು ಜೈಲುವಾಸ ಅನುಭವಿಸಿದ್ದ ನಟಿ   ಸಂಜನಾ ಗಲ್ರಾನಿ,  ಕೆಲವು ತಿಂಗಳ ಕಾಲ ಜೈಲಲ್ಲಿದ್ದರು. ಕೊನೆಗೂ ಅವರು ಹೊರಬಂದಿದ್ದೂ ಆಯ್ತು. ಯಾರ ಮಾತಿಗೂ  ಸಿಗದ ಸಂಜನಾ ಕೆಲ ಕಾಲ  ಮನೆಯಲ್ಲಿದ್ದುಕೊಂಡೇ ರಿಲ್ಯಾಕ್ಸ್ ಆಗಿದ್ದರು. ಪೈಂಟಿಂಗ್ ಮಾಡಿಕೊಳ್ಳುತ್ತಾ, ಖುಷಿ ಖುಷಿಯಾಗಿ ಮನೆಯವರ ಜೊತೆ ಕಾಲ ಕಳೆಯುತ್ತಿದ್ದರು. ಈಗ ಸಂಜನಾ ಇದ್ದಕ್ಕಿದ್ದಂತೆ ಸೋಷಿಯಲ್ ಮೀಡಿಯಾದಲ್ಲಿ ಲೈವ್‌   ಬಂದು, ಬದುಕಿನ ಬಗೆಗೆ ಬೇಸರ ಆಗಿದೆ, ಜೀವನನೇ ಬೇಡ ಎಂಬಂತೆ  ಹೇಳಿಕೊಂಡಿದ್ದರು. ತಮ್ಮ ಇನ್‌ಸ್ಟಾಗ್ರಾಂನಲ್ಲಿ ಲೈವ್ ಬಂದು ನನ್ನ ಆರೋಗ್ಯದಲ್ಲಿ ವಿಪರೀತ ಏರುಪೇರಾಗಿದೆ ಎಂದಿದ್ದರು.

ಕೆಲ ಹೊತ್ತಿನ ಬಳಿಕ ಅವರನ್ನು  ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ  ಎಂಬ ಸುದ್ದಿ ಬಂದಿದೆ. ಸದ್ಯಕ್ಕೆ ಸಂಜನಾ ಗಲ್ರಾನಿ  ಆಸ್ಪತ್ರೆಗೆ ಸೇರಿದ್ದು ಯಾಕೆ ಎಂಬ ಮಾಹಿತಿ ತಿಳಿದಿಲ್ಲ. ಆಸ್ಪತ್ರೆಯಿಂದಲೇ ಲೈವ್ ನಲ್ಲಿ ಮಾತನಾಡಿರುವ ಇವರು,  ನನ್ನ ಆರೋಗ್ಯ ಈಗ ಸುಧಾರಿಸಿದೆ ಎಂದು ಹೇಳಿಕೊಂಡಿದ್ದಾರೆ. ಅದೇನೆ ಇರಲಿ, ಸಂಜನಾ ಜೈಲಿನಿಂದ ಹೊರಬಂದ ಬಳಿಕ ಮಾತನಾಡಿದ್ದು, ಆಸ್ಪತ್ರೆಗೆ ಸೇರಿದ್ದು ಹಲವು ಪ್ರಶ್ನೆಗಳಿಗೆ ಕಾರಣವಾಗಿದೆ.

Categories
ಟಾಲಿವುಡ್

ಆಫ್ರಿಕಾದಲ್ಲಿ ರಾಜ್‌ಮೌಳಿ-ಮಹೇಶ್ ಬಾಬು ಸಿನಿಮಾ!  ‘ಆರ್‌ಆರ್‌ಆರ್‌’ ನಂತರ ಸೆಟ್ಟೇರಲಿದೆ ಮೆಗಾ ಪ್ರಾಜೆಕ್ಟ್‌  


ರಾಜ್‌ಮೌಳಿ ಸದ್ಯ ರಾಮ್‌ ಚರಣ್‌ ತೇಜಾ ಮತ್ತು ಜ್ಯೂನಿಯರ್ ಎನ್‌ಟಿಆರ್‌ ನಟನೆಯ ‘ಆರ್‌ಆರ್‌ಆರ್‌’ ಸಿನಿಮಾದಲ್ಲಿ ಬ್ಯುಜಿಯಾಗಿದ್ದಾರೆ. ಇದಾದ ನಂತರ ಅವರು ಮಹೇಶ್ ಬಾಬು ಸಿನಿಮಾ ಕೈಗೆತ್ತಿಕೊಳ್ಳುವುದು ಬಹುತೇಕ ಖಚಿತವಾಗಿದೆ. ರಾಜ್‌ಮೌಳಿ ತಂದೆ ವಿಜಯೇಂದ್ರ ಪ್ರಸಾದ್ ಚಿತ್ರಕಥೆ ರಚಿಸುತ್ತಿದ್ದು, ಇದಕ್ಕೆ ದಟ್ಟ ಕಾಡಿನ ಹಿನ್ನೆಲೆಯ ಬ್ಯಾಕ್‌ಡ್ರಾಪ್‌ ಅವಶ್ಯಕತೆ ಇದೆ ಎನ್ನಲಾಗುತ್ತಿದೆ. ಹಾಗಾಗಿ ಆಫ್ರಿಕಾದ ಕಾಡುಗಳಲ್ಲಿ ಚಿತ್ರೀಕರಣ ನಡೆಸುವ ಬಗ್ಗೆ ರಾಜ್‌ಮೌಳಿ ಯೋಚಿಸುತ್ತಿದ್ದಾರೆ. ಮುಂದಿನ ವರ್ಷದಲ್ಲಿ ಚಿತ್ರ ಸೆಟ್ಟೇರಲಿದ್ದು, ಈ ಚಿತ್ರದೊಂದಿಗೆ ಪ್ಯಾನ್‌ ಇಂಡಿಯಾ ಸ್ಟಾರ್ ಆಗುವ ಕನಸು ಕಾಣುತ್ತಿದ್ದಾರೆ ಮಹೇಶ್ ಬಾಬು.

ದಟ್ಟ ಕಾನನದಲ್ಲಿ ನಡೆಯುವ ಆಕ್ಷನ್‌-ಥ್ರಿಲ್ಲರ್ ಚಿತ್ರಕ್ಕಾಗಿ ಸೂಕ್ತ ತಯಾರಿ ನಡೆದಿದೆ. ಪೀರಿಯಡ್‌ ಸಿನಿಮಾಗಳ ನಂತರ ರಾಜ್‌ಮೌಳಿ ಮತ್ತು ವಿಜಯೇಂದ್ರ ಪ್ರಸಾದ್ ಅವರು ಹೊಸ ರೀತಿಯ ಕತೆ ಮಾಡಲು ಹವಣಿಸುತ್ತಿದ್ದಾರೆ. ಮಹೇಶ್ ಬಾಬು ಚಿತ್ರದೊಂದಿಗೆ ಇದನ್ನು ಸಾಕಾರಗೊಳಿಸುವುದು ಅವರ ಉದ್ದೇಶ. ಭಾರತೀಯ ಸಿನಿಮಾಗಳಲ್ಲಿ ಹಿಂದೆಂದೂ ಚಿತ್ರಿಸದ ಆಫ್ರಿಕಾ ಕಾಡುಗಳಲ್ಲಿ ಸಿನಿಮಾ ಮಾಡುವುದು ರಾಜ್‌ಮೌಳಿ ಯೋಜನೆ. ಸದ್ಯ ಮಹೇಶ್ ಬಾಬು ‘ಸರ್ಕಾರು ವಾರಿ ಪಾಟ’ ಚಿತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ಪರಶುರಾಮ್ ಪೆಟ್ಲಾ ನಿರ್ದೇಶನದ ಚಿತ್ರದಲ್ಲಿ ಮಹೇಶ್ ಬಾಬುಗೆ ಕೀರ್ತಿ ಸುರೇಶ್ ನಾಯಕಿ.

Categories
ಸೌತ್‌ ಸೆನ್ಸೇಷನ್

ಕಾಜಲ್‌ ನಿದ್ರೆಯಿಲ್ಲದ ರಾತ್ರಿಗಳು! ‘ಲೈವ್‌ ಟೆಲಿಕಾಸ್ಟ್‌’ ವೆಬ್‌ ಸರಣಿ ಪ್ರೀಮಿಯರ್

ದಕ್ಷಿಣ ಭಾರತದ ಜನಪ್ರಿಯ ತಾರೆ ಕಾಜಲ್ ಅಗರ್‌ವಾಲ್‌ ಇದೀಗ ಓಟಿಟಿಗೂ ಕಾಲಿಟ್ಟಿದ್ದಾರೆ. ಅವರು ಮುಖ್ಯಪಾತ್ರದಲ್ಲಿ ನಟಿಸಿರುವ ‘ಲೈವ್ ಟೆಲಿಕಾಸ್ಟ್‌’ ವೆಬ್‌ ಸರಣಿ ಫೆಬ್ರವರಿ 12ರಿಂದ ಹಾಟ್‌ಸ್ಟಾರ್‌ನಲ್ಲಿ ಪ್ರೀಮಿಯರ್ ಆಗುತ್ತಿದೆ. ವೆಂಕಟ್ ಪ್ರಭು ನಿರ್ದೇಶನದಲ್ಲಿ ತಯಾರಾಗಿರುವ ಸರಣಿಯಿದು. ಟೀವಿ ಚಾನೆಲ್ ತಂಡವೊಂದು ಕಾರ್ಯಕ್ರಮವೊಂದನ್ನು ರೂಪಿಸಲು ಸಜ್ಜಾಗಿರುತ್ತದೆ.

ಈ ಹಂತದಲ್ಲಿ ಇವರಿದ್ದ ಮನೆಯನ್ನು ಅತೀಂದ್ರಿಯ ಶಕ್ತಿಗಳು ನಿಯಂತ್ರಿಸತೊಡಗುತ್ತವೆ. ಇಂಥದ್ದೊಂದು ಥ್ರಿಲ್ಲಿಂಗ್‌ ಹಿನ್ನೆಲೆಯ ಕಥಾವಸ್ತು ಸರಣಿಯದ್ದು.
ಸರಣಿಯಲ್ಲಿ ನಟಿಸಿದ ತಮ್ಮ ಅನುಭವಗಳನ್ನು ಕಾಜಲ್ ಹಂಚಿಕೊಳ್ಳುತ್ತಾ, “ಚಿತ್ರೀಕರಣ ನಡೆದ ಮನೆ ನಮ್ಮ ಸರಣಿಗೆ ಹೇಳಿಮಾಡಿಸಿದ ಹಾಗಿತ್ತು. ಎತ್ತರದ ಗುಡ್ಡದ ಮೇಲಿನ ಒಂಟಿ ಮನೆ. ನಮ್ಮ ಕತೆಗೆ ಸೂಕ್ತವಾಗಿ ಹೊಂದಿಕೆಯಾಗಿತ್ತು.

ಆದರೆ ಸರಣಿ ಚಿತ್ರೀಕರಣದುದ್ದಕ್ಕೂ ರಾತ್ರಿಗಳು ನನಗೆ ಭಯಾನಕವಾಗಿದ್ದವು. ಹೆದರಿಕೆಯಿಂದ ನಿದ್ದೆ ಮಾಡುತ್ತಿದ್ದಿಲ್ಲ. ಅದರ ಹೊರತಾಗಿ ನಾನಂತೂ ಸಂಪೂರ್ಣವಾಗಿ ಪಾತ್ರದಲ್ಲಿ ಲೀನವಾಗಿದ್ದೆ” ಎನ್ನುತ್ತಾರೆ. ವೈಭವ್ ರೆಡ್ಡಿ, ಕಾಯಲ್ ಆನಂದಿ, ಪ್ರಿಯಾಂಕಾ, ಸೆಲ್ವ, ಡೇನಿಯಲ್ ಇತರರು ‘ಲೈವ್ ಟೆಲಿಕಾಸ್ಟ್‌’ನಲ್ಲಿ ನಟಿಸಿದ್ದಾರೆ.

Categories
ಸಿನಿ ಸುದ್ದಿ

ಶುರುವಾಯ್ತು ರಶ್ಮಿಕಾ ಹಿಂದಿ ಸಿನಿಮಾ! ಮಿಷನ್ ಮಜ್ನೂ ಹೀರೋ ಸಿದ್ಧಾರ್ಥ್ ಮಲ್ಹೋತ್ರಾ

ಕನ್ನಡತಿ ರಶ್ಮಿಕಾ ಮಂದಣ್ಣ ಈಗ ದಕ್ಷಿಣ ಭಾರತದ ಬೇಡಿಕೆಯ ನಟಿ. ಇನ್ನೂ ಒಂದು ಮೆಟ್ಟಿಲು ಹತ್ತಿರುವ ಅವರೀಗ ಬಾಲಿವುಡ್ ಹಿರೋಯಿನ್‌! ಶಂತನು ಬಾಗ್ಚಿ ನಿರ್ದೇಶನದ ಅವರ ಹಿಂದಿ ಸಿನಿಮಾ ‘ಮಿಷನ್ ಮಜ್ನೂ’ ಇಂದು ಚಿತ್ರೀಕರಣ ಆರಂಭಿಸಿದೆ. ‘ಕಪೂರ್ ಅಂಡ್ ಸನ್ಸ್‌’, ‘ಏಕ್ ವಿಲನ್‌’ ಸಿನಿಮಾಗಳ ಖ್ಯಾತಿಯ ಸಿದ್ಧಾರ್ಥ್ ಮಲ್ಹೋತ್ರಾ ಚಿತ್ರದ ಹೀರೋ.

ಇಂದು ಚಿತ್ರಕ್ಕೆ ಚಾಲನೆ ಸಿಕ್ಕಿದ್ದು ನಾಯಕ – ನಾಯಕಿ ಸಿದ್ಧಾರ್ಥ್ ಮತ್ತು ರಶ್ಮಿಕಾ ಸ್ಕ್ರಿಪ್ಟ್‌ ಪೇಪರ್‌ ಹಿಡಿದು ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ. ಎಪತ್ತರ ದಶಕದ ಹಿನ್ನೆಲೆಯ ಕತೆ ಚಿತ್ರದಲ್ಲಿರುತ್ತದೆ. ನೈಜ ಘಟನೆಯನ್ನು ಆಧರಿಸಿ ಹೆಣೆದಿರುವ ಕತೆಯಲ್ಲಿ ಸಿದ್ಧಾರ್ಥ್‌ ರಾ  ಏಜೆಂಟ್‌ ಪಾತ್ರ ನಿರ್ವಹಿಸುತ್ತಿದ್ದಾರೆ. ಭಾರತ ಮತ್ತು ಪಾಕಿಸ್ತಾನ ಗೂಢಚರ್ಯೆಗೆ ಸಂಬಂಧಿಸಿದಂತಹ ಪ್ರಮುಖ ಅಂಶವೊಂದು ಹೇಗೆ ಎರಡು ದೇಶಗಳ ಸಂಬಂಧದ ಮೇಲೆ ಪರಿಣಾಮ ಬೀರುತ್ತದೆ ಎನ್ನುವುದರ ಸುತ್ತ ಕಥಾಹಂದರ ಹೆಣೆಯಲಾಗಿದೆ.

ಪರ್ವೀಜ್ ಶೇಖ್‌, ಅಸೀಮ್ ಅರೋರಾ, ಸುಮಿತ್ ಬತೇಜಾ ಚಿತ್ರಕಥೆ ಹೆಣೆದಿದ್ದಾರೆ. “ವಿಶೇಷ ತಂಡದೊಂದಿಗೆ ಅಪರೂಪದ ಕತೆಯ ಸಿನಿಮಾ ಶುರುವಾಗಿದೆ” ಎಂದು ನಟ ಸಿದ್ಧಾರ್ಥ್ ಟ್ವೀಟ್ ಮಾಡಿ ಫೋಟೋ ಹಂಚಿಕೊಂಡಿದ್ದಾರೆ.

Categories
ಸಿನಿ ಸುದ್ದಿ

ಗೋವಾ ಕನ್ನಡಿಗನ ಸಲಗ ಪ್ರೀತಿ- ಕೈ ಮೇಲೆ ಟ್ಯಾಟೋ ಹಾಕಿಸಿಕೊಂಡ ದುನಿಯಾ ವಿಜಯ್ ಅಭಿಮಾನಿ

ಭಾವುಕರಾದ ವಿಜಯ್‌ ಅಭಿಮಾನಿ ಜೊತೆ ವಿಡಿಯೋ ಕಾಲ್‌ ಮಾತುಕತೆ

ಅದೇನೋ ಗೊತ್ತಿಲ್ಲ. ಸಿನಿಮಾ ಸ್ಟಾರ್ಸ್‌ ಅಂದರೆ, ಅದೊಂದು ರೀತಿ ಎಲ್ಲಿಲ್ಲದ ಅಭಿಮಾನ. ಅಭಿಮಾನಿಗಳು ತಮ್ಮ ತಮ್ಮ ಹೀರೋಗಳನ್ನು ಆರಾಧಿಸುವ ಪರಿ ಬಗ್ಗೆ ಹೇಳುವುದು ಕಷ್ಟವೇ. ಹೌದು, ಇಲ್ಲೀಗ ಹೇಳಹೊರಟಿರುವ ವಿಷಯ, “ದುನಿಯಾ” ವಿಜಯ್‌ ಅಭಿಮಾನಿಯೊಬ್ಬನ ಪ್ರೀತಿಯ ಬಗ್ಗೆ. ಉತ್ತರ ಕರ್ನಾಟಕ ಮೂಲದ ಹನುಮಂತ ಎಂಬ ಹುಡುಗ, ಗೋವಾದಲ್ಲಿರುವ ಕಿರಾಣಿ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾನೆ.

ಅವನಿಗೆ “ದುನಿಯಾ” ವಿಜಯ್‌ ಅಂದರೆ, ತುಂಬು ಪ್ರೀತಿ. ಅಪ್ಪಟ ಅಭಿಮಾನಿಯೂ ಹೌದು. ವಿಜಯ್‌ ಅವರಂತೆಯೇ ಹನುಮಂತ ಕೂಡ ತನ್ನ ತಂದೆ-ತಾಯಿಯನ್ನು ಅಷ್ಟೇ ಪ್ರೀತಿಯಿಂದ ಆರಾಧಿಸುತ್ತಾನೆ. ತಮ್ಮ ಪ್ರೀತಿಯ ಹೀರೋ “ದುನಿಯಾ” ವಿಜಯ್‌ ಅವರ ಚೊಚ್ಚಲ ನಿರ್ದೇಶನದ “ಸಲಗ” ಚಿತ್ರ ಯಶಸ್ವಿಯಾಗಲಿ ಎಂದು ಹಾರೈಸಿ,”ಸಲಗ” ಟೈಟಲ್‌ ಅನ್ನು ತನ್ನ ಕೈ ಮೇಲೆ ಟ್ಯಾಟೋ ಹಾಕಿಸಿಕೊಂಡು ಅಭಿಮಾನ ಮೆರೆದಿದ್ದಾನೆ.

ಈ ಅಭಿಮಾನಿಯ ವಿಷಯ ತಿಳಿಯುತ್ತಿದ್ದಂತೆಯೇ “ದುನಿಯಾ” ವಿಜಯ್‌ ಗೋವಾದಲ್ಲಿರುವ ಅಭಿಮಾನಿ ಹನುಮಂತುಗೆ ವಿಡಿಯೋ ಕಾಲ್‌ ಮಾಡಿ, ಪ್ರೀತಿಯಿಂದ ಮಾತಾಡಿದ್ದಾರೆ. ವಿಜಯ್‌ ವಿಡಿಯೋ ಕಾಲ್‌ ಮಾಡುತ್ತಿದ್ದಂತೆಯೇ, ಆ ಅಭಿಮಾನಿ ಹನುಮಂತು, ಖುಷಿಗೊಂಡಿದ್ದಾರೆ. ಆನಂದಭಾಷ್ಪ ಸುರಿಸಿದ್ದಾರೆ. ಈ ವೇಳೆ ವಿಜಯ್‌ ಕೂಡ ಭಾವುಕರಾಗಿ, ತಮ್ಮ ಅಭಿಮಾನಕ್ಕೆ ಮೂಕನಾಗಿದ್ದೇನೆ ಎಂದು ಹೇಳಿದ್ದಾರೆ. ನಿಮ್ಮ ತಂದೆ-ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳಿ. ನಿಮಗೆ ಒಳ್ಳೆಯದಾಗುತ್ತೆ ಎಂದು ಹನುಮಂತನಿಗೆ ಶುಭಕೋರಿದ್ದಾರೆ. ಸದ್ಯಕ್ಕೆ ಈ ವಿಡಿಯೋ ವೈರಲ್‌ ಆಗುತ್ತಿದೆ.

 

Categories
ಸಿನಿ ಸುದ್ದಿ

ಸಿನಿಲಹರಿ ನೂರನೇ ದಿನಕ್ಕೆ ಕೇಕ್‌ ಕತ್ತರಿಸಿ ಶುಭ ಹಾರೈಸಿದ ನಟ ಸಂಚಾರಿ ವಿಜಯ್‌

ವೀರಕಪುತ್ರ ಶ್ರೀನಿವಾಸ್‌ , ಮಂಸೋರೆ, ಹರೀಶ್‌ ಎಂ.ಡಿ ಹಳ್ಳಿ, ನಟಿಯರಾದ ಜಯಶ್ರೀ, ಅನುಷಾ ರೋಡ್ರಿಗಸ್‌ ಸೇರಿ ಹಲವರು ಸಾಥ್

ಸಿನಿ ಲಹರಿ ಶುರುವಾಗಿ ನೂರು ದಿನ ಪೂರೈಸಿತು. ಎಷ್ಟು ಬೇಗ ಆದವು ದಿನಗಳು ಅಂತೆನಿಸುತ್ತಿದೆ. ಹಾಗಂತ, ಇದೇನು ದೊಡ್ಡ ಸಾಧನೆ ಅಲ್ಲ. ಅದರೂ, ನಮ್ಮ ಮಟ್ಟಿಗೆ ಇದು ಒಂದೊಳ್ಳೆಯ ಹೆಜ್ಜೆ. ಕಾರಣ, ಮುಂದಿನ ಯೋಜನೆ, ಯೋಚನೆಗೆ ಇದು ಮಹತ್ತರದ ಕ್ಷಣ. ಅದೇ ಕಾರಣಕ್ಕೆ ʼಸಿನಿಲಹರಿʼ ಹಿತೈಷಿಗಳೇ ಸಿನಿಲಹರಿ ಸ್ಟುಡಿಯೋ ದಲ್ಲಿ ಸಿಂಪಲ್‌ ಆಗಿ ಆಯೋಜಿಸಿದ್ದ ಸಣ್ಣದೊಂದು ಸೆಲೆಬ್ರೇಷನ್‌ ದೊಡ್ಡದಾಗಿಯೇ ನಡೆದಿದ್ದು ವಿಶೇಷ. ಇದೊಂದು ಪೂರ್ವಯೋಜಿತ ಕಾರ್ಯಕ್ರವಲ್ಲ. ಅವಸರದ ಕಾರ್ಯಕ್ರಮ. ಆದರೂ ಸಿನಿ ಲಹರಿ ಮೆಲಿನ ಪ್ರೀತಿಗೆ, ಕಾಳಜಿಗೆ ಸಿನಿಮಾ ರಂಗದ ದೊಡ್ಡ ತಂಡವೇ ಬಂದಿದ್ದು ನಮ್ಮ ಹೆಮ್ಮೆ. ರಾಷ್ಟ್ರಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್‌, ನಮ್ಮ ಆಹ್ವಾನ ಗೌರವಿಸಿ ಬಂದಿದ್ದರು. ಅವರೇ ಕೇಕ್‌ ಕತ್ತರಿಸಿ, ಸಿನಿ ಲಹರಿಗೆ ಶುಭ ಹಾರೈಸಿದರು.

ಡಾ. ವಿಷ್ಣು ವರ್ಧನ್‌ ಅಭಿಮಾನಿಗಳ ಸಂಘದ ವೀರಕಪುತ್ರ ಶ್ರೀನಿವಾಸ್‌ , ನಟ ನಿಹಾಲ್‌,ನಿರ್ದೇಶಕರಾದ ಮಂಸೋರೆ, ಹರೀಶ್‌ ಎಂ.ಡಿ. ಹಳ್ಳಿ, ಹೃಷಿಕೇಶ್‌, ಕಿರಣ್‌, ರಾಜು ಪಾವಗಡ, ನಟಿಯರಾದ ಅನುಷಾ ರೋಡ್ರಿಗಸ್‌, ಅಂಜಲಿ ರಾಮಚಂದ್ರ, ಜಯಶ್ರೀ, “ಮಗಳು ಜಾನಕಿʼ ಧಾರಾವಾಹಿಯ ಖ್ಯಾತಿಯ ಸುಪ್ರಿಯಾ ರಾವ್‌, ನಿರಂಜನ್‌ ಕುಮಾರ್‌ ದಾವಣಗೆರೆ, ಯುವ ಪ್ರತಿಭೆ ವೈಶಾಖ್‌, ಸವಿನ್‌ ತೀರ್ಥಹಳ್ಳಿ, ಮತ್ತಿತರರು ಹಾಜರಿದ್ದು ಸಿನಿ ಲಹರಿಗೆ ಶುಭ ಹಾರೈಸಿದರು. ಸಿನಿ ಲಹರಿ ಸಿಇಓ ಕೃಷ ಪಿ. ಕೂಡ ಹಾಜರಿದ್ದು, ಮುಂದಿನ ಯೋಜನೆಯ ಬಗ್ಗೆ ವಿವರಿಸಿದರು. ಅದರ ಒಂದು ಫೋಟೋ ಝಲಕ್‌ ಇಲ್ಲಿದೆ.

Categories
ಸಿನಿ ಸುದ್ದಿ

ರಿಷಭ್‌ ಶೆಟ್ಟಿ ಹೀರೋ ಆಗಿ ಎಂಟ್ರಿ- ಅಶೋಕವನ ಎಸ್ಟೇಟ್‌ನಲ್ಲಿ ರಕ್ತಚರಿತ್ರೆ!

ಮಾರ್ಚ್ 5ಕ್ಕೆ ಹೀರೋ ಸಿನಿಮಾ ಬಿಡುಗಡೆ

ಕನ್ನಡದಲ್ಲೀಗ ಸಾಲು ಸಾಲು ಸಿನಿಮಾಗಳು ಬಿಡುಗಡೆಗೆ ಸಜ್ಜಾಗಿವೆ. ಆ ಸಾಲಿಗೆ ಈಗ ರಿಷಭ್‌ ಶೆಟ್ಟಿ ಅವರ ನಿರ್ಮಾಣದ “ಹೀರೋ” ಕೂಡ ರಿಲೀಸ್‌ಗೆ ರೆಡಿಯಾಗಿದೆ. ಮಾರ್ಚ್‌ 5 ರಂದು “ಹೀರೋ”ರಾಜ್ಯಾದ್ಯಂತ ತೆರೆಗೆ ಬರುತ್ತಿದೆ. ಈ ವಿಷಯವನ್ನು ಸ್ವತಃ ರಿಷಭ್‌ ಶೆಟ್ಟಿ ಅವರೇ ತಮ್ಮ ಟ್ವೀಟ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ರಿಷಬ್ ಶೆಟ್ಟಿ ಫಿಲಂ ಬ್ಯಾನರ್‌ನಲ್ಲಿ ಈ ಚಿತ್ರ ತಯಾರಾಗಿದೆ. ಎಂ. ಭರತ್ ರಾಜ್ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಇನ್ನು, ರಿಷಭ್‌ ಶೆಟ್ಟಿ ಇಲ್ಲಿ ಹೀರೋ ಆಗಿದ್ದರೆ, ಅವರಿಗೆ ಗಾನವಿ ಲಕ್ಷ್ಮಣ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಈ ಚಿತ್ರದಲ್ಲಿ ಪ್ರಮೋದ್ ಶೆಟ್ಟಿ, ಮಂಜುನಾಥ್ ಗೌಡ ಸೇರಿದಂತೆ ಹಲವರು ಇದ್ದಾರೆ.


ಈ “ಹೀರೋ” ಬಗ್ಗೆ ಹೇಳುವುದಾದರೆ, ಅಶೋಕ ವನ ಎಸ್ಟೇಟ್‌ ನಲ್ಲಿ ನಡೆಯುವ ಒಂದು ಕಥೆ. ಸಸ್ಪೆನ್ಸ್‌ ಥ್ರಿಲ್ಲರ್‌ ಕಥೆ ಇದು. ವಿಶೇಷವೆಂದರೆ, ಲಾಕ್‌ಡೌನ್‌ ಸಮಯದಲ್ಲಿ ಚಿತ್ರೀಕರಣಗೊಂಡಿರುವ ಸಿನಿಮಾ. ಎಲ್ಲರೂ ಲಾಕ್‌ಡೌನ್‌ ಸಮಯದಲ್ಲಿ ಮನೆಯಲ್ಲಿದ್ದರೆ, ರಿಷಭ್‌ ಶೆಟ್ಟಿ, ಆ ವೇಳೆ ಚಂದದ ಕಥೆ ಮಾಡಿಕೊಂಡು, ಸ್ಕ್ರಿಪ್ಟ್‌ ಬರೆದು, ಚಿತ್ರೀಕರಣಕ್ಕೆ ಅಣಿಯಾದರು. ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ರಿಷಭ್‌ ಶೆಟ್ಟಿ ಬ್ಯಾನರ್‌ನಲ್ಲಿ ಇದೇ ಮೊದಲ ಸಲ ರಕ್ತಗತವಾದ ಅಂಶಗಳಿರುವ ಸಿನಿಮಾ ಎಂಬುದು. ಹೌದು, ಇಲ್ಲಿ ಗನ್‌ಗಳ ಸದ್ದಿದೆ, ರಕ್ತದ ಕಲೆಗಳೂ ಕಾಣಿಸಿಕೊಳ್ಳುತ್ತವೆ. ಬಹುತೇಕ ಒಂದು ಕಾಡು, ಅಶೋಕವನ ಎಂಬ ಎಸ್ಟೇಟ್‌ ಸುತ್ತಲೇ ಸುತ್ತುವ ಕಥೆ ಇದಾಗಿದೆ. ರಿಷಭ್‌ ಆಗಾಗ ಪ್ರಯತ್ನಕ್ಕೆ ಇಳಿಯುತ್ತಲೇ ಇರುತ್ತಾರೆ. ಅಂಥದ್ದೊಂದು ಪ್ರಯತ್ನ “ಹೀರೋ” ಮೂಲಕ ಆಗಿದೆ ಎಂಬುದು ಚಿತ್ರತಂಡದ ಮಾತು. ಅದೇನೆ ಇರಲಿ, ಇಲ್ಲಿ “ಹೀರೋ” ಯಾರು? ಈ ಪ್ರಶ್ನೆಗೆ ಮಾರ್ಚ್‌ 5ರವರೆಗೆ ಕಾಯಲೇಬೇಕು.

Categories
ಸಿನಿ ಸುದ್ದಿ

ಕ್ರಿಸ್ಮಿ ಮೆಹಂದಿ ಸಂಭ್ರಮ

ಮದ್ವೆ ಸಡಗರದಲ್ಲಿ ಲವ್‌ ಮಾಕ್ಟೇಲ್‌ ಜೋಡಿ

ಸ್ಯಾಂಡಲ್‌ವುಡ್‌ನಲ್ಲೀಗ ಮದುವೆ ಸುದ್ದಿ. ಹೌದು, ಲಾಕ್‌ಡೌನ್ ಶುರುವಾದಾಗಿನಿಂದ ದೊಡ್ಡ ಮಟ್ಟದ ಮನರಂಜನೆ ಸೇರಿದಂತೆ ಯಾವುದೇ ಚಟುವಟಿಕೆಗಳು ನಡೆದಿರಲಿಲ್ಲ. ಅದರಲ್ಲೂ ಸಿನಿಮಾ ರಂಗದಲ್ಲಿ ಇಂತಹ ಕಾರ್ಯಕ್ರಮಗಳು ನಡೆದಿರಲಿಲ್ಲ. ಈಗ “ಲವ್‌ ಮಾಕ್ಟೇಲ್‌” ಜೋಡಿಯ ಮದ್ವೆ ಸುದ್ದಿ ಜೋರು ಸದ್ದು ಮಾಡುತ್ತಿದೆ.

ಹೌದು, ಮಿಲನಾ ನಾಗರಾಜ್ ಮತ್ತು ಡಾರ್ಲಿಂಗ್ ಕೃಷ್ಣ ಮದುವೆ ಮೂಡ್‌ನಲ್ಲಿದ್ದಾರೆ. ಮಿಲನಾ ನಾಗರಾಜ್‌ ಹಾಗೂ ಕೃಷ್ಣ ಇಬ್ಬರೂ ಪ್ರೀತಿಸಿ ಮದ್ವೆಯಾಗುತ್ತಿದ್ದಾರೆ ಅನ್ನೋದು ವಿಶೇಷ. ಕನ್ನಡ ಸಿನಿಮಾರಂಗದಲ್ಲಿ ಹಾಗೊಮ್ಮೆ ಹಿಂದಿರುಗಿ ನೋಡಿದರೆ, ಬಹುತೇಕ ನಟ,ನಟಿಯರು ಲವ್‌ ಮಾಡಿಯೇ ಮದ್ವೆಯಾಗಿದ್ದಾರೆ. ಆ ಸಾಲಿಗೆ ಕೃಷ್ಣ ಹಾಗೂ ಮಿಲನಾ ಕೂಡ ಸೇರುತ್ತಿದ್ದಾರೆ.

ಇವರಿಬ್ಬರ ಪ್ರೀತಿಯ ಬಗ್ಗೆ ಸುದ್ದಿ ಇತ್ತಾದರೂ, ಎಲ್ಲೂ ಅವರು ಓಪನ್‌ ಆಗಿ ಹೇಳಿಕೊಂಡಿರಲಿಲ್ಲ. ಯಾವಾಗ “ಲವ್‌ ಮಾಕ್ಟೇಲ್‌” ಚಿತ್ರ ಗೆಲುವು ಕೊಟ್ಟಿತೋ, ಆ ಸಕ್ಸಸ್‌ನ ಸಂಭ್ರಮದಲ್ಲೇ ತಮ್ಮ ಪ್ರೀತಿ ವಿಷಯವನ್ನು ಹಂಚಿಕೊಂಡಿದ್ದಲ್ಲದೆ, ಮದ್ವೆ ಆಗುತ್ತಿರುವ ವಿಷಯವನ್ನೂ ಹೇಳಿಕೊಂಡಿದ್ದರು. ಅದರಂತೆ ಅವರು, ಚಿತ್ರರಂಗದ ಬಹುತೇಕರಿಗೆ ತಮ್ಮ ಮದುವೆಗೆ ಆಹ್ವಾನಿಸಿದ್ದಾರೆ.


ಇನ್ನು, ಮದ್ವೆ ಫೆ.೧೪ರ ಪ್ರೇಮಿಗಳ ದಿನದಂದು ನಡೆಯಲಿದೆ. ಅಂದೇ ಸಂಜೆ ಅರತಕ್ಷತೆಯೂ ಇದೆ. ಸದ್ಯಕ್ಕೆ ಈ ಜೋಡಿ ಹಾಸನದ ಹೊರವಲಯದಲ್ಲಿರುವ ನಂದಗೋಕುಲ ಹಾಲ್‌ನಲ್ಲಿ ಅದ್ಧೂರಿಯಾಗಿ ಮೆಹಂದಿ ಕಾರ್ಯಕ್ರಮವನ್ನು ಆಯೋಜಿಸಿದ್ದಾರೆ.

ಮಿಲನಾ ನಾಗರಾಜ್ ಕೂಡ ಮೂಲತಃ ಹಾಸನದವರೆ ಆಗಿದ್ದು, ತನ್ನೂರಿನಲ್ಲಿಯೇ ಕಾರ್ಯಕ್ರಮವನ್ನು ಏರ್ಪಡಿಸಿದ್ದಾರೆ. ಪ್ರೀತಿಸುತ್ತಲೇ ಜೊತೆಗೊಂದು ಸಕ್ಸಸ್‌ಫುಲ್‌ ಸಿನಿಮಾ ಕೊಟ್ಟ ಈ ಜೋಡಿ, ಬದುಕಲ್ಲೂ ಒಂದಾಗುತ್ತಿದೆ. ಸದ್ಯ ಅವರಿಬ್ಬರ ಅಭಿಮಾನಿಗಳ ಖುಷಿಗೆ ಪಾರವೇ ಇಲ್ಲ.

 

error: Content is protected !!