ಆಫ್ರಿಕಾದಲ್ಲಿ ರಾಜ್‌ಮೌಳಿ-ಮಹೇಶ್ ಬಾಬು ಸಿನಿಮಾ!  ‘ಆರ್‌ಆರ್‌ಆರ್‌’ ನಂತರ ಸೆಟ್ಟೇರಲಿದೆ ಮೆಗಾ ಪ್ರಾಜೆಕ್ಟ್‌  


ರಾಜ್‌ಮೌಳಿ ಸದ್ಯ ರಾಮ್‌ ಚರಣ್‌ ತೇಜಾ ಮತ್ತು ಜ್ಯೂನಿಯರ್ ಎನ್‌ಟಿಆರ್‌ ನಟನೆಯ ‘ಆರ್‌ಆರ್‌ಆರ್‌’ ಸಿನಿಮಾದಲ್ಲಿ ಬ್ಯುಜಿಯಾಗಿದ್ದಾರೆ. ಇದಾದ ನಂತರ ಅವರು ಮಹೇಶ್ ಬಾಬು ಸಿನಿಮಾ ಕೈಗೆತ್ತಿಕೊಳ್ಳುವುದು ಬಹುತೇಕ ಖಚಿತವಾಗಿದೆ. ರಾಜ್‌ಮೌಳಿ ತಂದೆ ವಿಜಯೇಂದ್ರ ಪ್ರಸಾದ್ ಚಿತ್ರಕಥೆ ರಚಿಸುತ್ತಿದ್ದು, ಇದಕ್ಕೆ ದಟ್ಟ ಕಾಡಿನ ಹಿನ್ನೆಲೆಯ ಬ್ಯಾಕ್‌ಡ್ರಾಪ್‌ ಅವಶ್ಯಕತೆ ಇದೆ ಎನ್ನಲಾಗುತ್ತಿದೆ. ಹಾಗಾಗಿ ಆಫ್ರಿಕಾದ ಕಾಡುಗಳಲ್ಲಿ ಚಿತ್ರೀಕರಣ ನಡೆಸುವ ಬಗ್ಗೆ ರಾಜ್‌ಮೌಳಿ ಯೋಚಿಸುತ್ತಿದ್ದಾರೆ. ಮುಂದಿನ ವರ್ಷದಲ್ಲಿ ಚಿತ್ರ ಸೆಟ್ಟೇರಲಿದ್ದು, ಈ ಚಿತ್ರದೊಂದಿಗೆ ಪ್ಯಾನ್‌ ಇಂಡಿಯಾ ಸ್ಟಾರ್ ಆಗುವ ಕನಸು ಕಾಣುತ್ತಿದ್ದಾರೆ ಮಹೇಶ್ ಬಾಬು.

ದಟ್ಟ ಕಾನನದಲ್ಲಿ ನಡೆಯುವ ಆಕ್ಷನ್‌-ಥ್ರಿಲ್ಲರ್ ಚಿತ್ರಕ್ಕಾಗಿ ಸೂಕ್ತ ತಯಾರಿ ನಡೆದಿದೆ. ಪೀರಿಯಡ್‌ ಸಿನಿಮಾಗಳ ನಂತರ ರಾಜ್‌ಮೌಳಿ ಮತ್ತು ವಿಜಯೇಂದ್ರ ಪ್ರಸಾದ್ ಅವರು ಹೊಸ ರೀತಿಯ ಕತೆ ಮಾಡಲು ಹವಣಿಸುತ್ತಿದ್ದಾರೆ. ಮಹೇಶ್ ಬಾಬು ಚಿತ್ರದೊಂದಿಗೆ ಇದನ್ನು ಸಾಕಾರಗೊಳಿಸುವುದು ಅವರ ಉದ್ದೇಶ. ಭಾರತೀಯ ಸಿನಿಮಾಗಳಲ್ಲಿ ಹಿಂದೆಂದೂ ಚಿತ್ರಿಸದ ಆಫ್ರಿಕಾ ಕಾಡುಗಳಲ್ಲಿ ಸಿನಿಮಾ ಮಾಡುವುದು ರಾಜ್‌ಮೌಳಿ ಯೋಜನೆ. ಸದ್ಯ ಮಹೇಶ್ ಬಾಬು ‘ಸರ್ಕಾರು ವಾರಿ ಪಾಟ’ ಚಿತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ಪರಶುರಾಮ್ ಪೆಟ್ಲಾ ನಿರ್ದೇಶನದ ಚಿತ್ರದಲ್ಲಿ ಮಹೇಶ್ ಬಾಬುಗೆ ಕೀರ್ತಿ ಸುರೇಶ್ ನಾಯಕಿ.

Related Posts

error: Content is protected !!