ಸಿನಿಲಹರಿ ನೂರನೇ ದಿನಕ್ಕೆ ಕೇಕ್‌ ಕತ್ತರಿಸಿ ಶುಭ ಹಾರೈಸಿದ ನಟ ಸಂಚಾರಿ ವಿಜಯ್‌

ವೀರಕಪುತ್ರ ಶ್ರೀನಿವಾಸ್‌ , ಮಂಸೋರೆ, ಹರೀಶ್‌ ಎಂ.ಡಿ ಹಳ್ಳಿ, ನಟಿಯರಾದ ಜಯಶ್ರೀ, ಅನುಷಾ ರೋಡ್ರಿಗಸ್‌ ಸೇರಿ ಹಲವರು ಸಾಥ್

ಸಿನಿ ಲಹರಿ ಶುರುವಾಗಿ ನೂರು ದಿನ ಪೂರೈಸಿತು. ಎಷ್ಟು ಬೇಗ ಆದವು ದಿನಗಳು ಅಂತೆನಿಸುತ್ತಿದೆ. ಹಾಗಂತ, ಇದೇನು ದೊಡ್ಡ ಸಾಧನೆ ಅಲ್ಲ. ಅದರೂ, ನಮ್ಮ ಮಟ್ಟಿಗೆ ಇದು ಒಂದೊಳ್ಳೆಯ ಹೆಜ್ಜೆ. ಕಾರಣ, ಮುಂದಿನ ಯೋಜನೆ, ಯೋಚನೆಗೆ ಇದು ಮಹತ್ತರದ ಕ್ಷಣ. ಅದೇ ಕಾರಣಕ್ಕೆ ʼಸಿನಿಲಹರಿʼ ಹಿತೈಷಿಗಳೇ ಸಿನಿಲಹರಿ ಸ್ಟುಡಿಯೋ ದಲ್ಲಿ ಸಿಂಪಲ್‌ ಆಗಿ ಆಯೋಜಿಸಿದ್ದ ಸಣ್ಣದೊಂದು ಸೆಲೆಬ್ರೇಷನ್‌ ದೊಡ್ಡದಾಗಿಯೇ ನಡೆದಿದ್ದು ವಿಶೇಷ. ಇದೊಂದು ಪೂರ್ವಯೋಜಿತ ಕಾರ್ಯಕ್ರವಲ್ಲ. ಅವಸರದ ಕಾರ್ಯಕ್ರಮ. ಆದರೂ ಸಿನಿ ಲಹರಿ ಮೆಲಿನ ಪ್ರೀತಿಗೆ, ಕಾಳಜಿಗೆ ಸಿನಿಮಾ ರಂಗದ ದೊಡ್ಡ ತಂಡವೇ ಬಂದಿದ್ದು ನಮ್ಮ ಹೆಮ್ಮೆ. ರಾಷ್ಟ್ರಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್‌, ನಮ್ಮ ಆಹ್ವಾನ ಗೌರವಿಸಿ ಬಂದಿದ್ದರು. ಅವರೇ ಕೇಕ್‌ ಕತ್ತರಿಸಿ, ಸಿನಿ ಲಹರಿಗೆ ಶುಭ ಹಾರೈಸಿದರು.

ಡಾ. ವಿಷ್ಣು ವರ್ಧನ್‌ ಅಭಿಮಾನಿಗಳ ಸಂಘದ ವೀರಕಪುತ್ರ ಶ್ರೀನಿವಾಸ್‌ , ನಟ ನಿಹಾಲ್‌,ನಿರ್ದೇಶಕರಾದ ಮಂಸೋರೆ, ಹರೀಶ್‌ ಎಂ.ಡಿ. ಹಳ್ಳಿ, ಹೃಷಿಕೇಶ್‌, ಕಿರಣ್‌, ರಾಜು ಪಾವಗಡ, ನಟಿಯರಾದ ಅನುಷಾ ರೋಡ್ರಿಗಸ್‌, ಅಂಜಲಿ ರಾಮಚಂದ್ರ, ಜಯಶ್ರೀ, “ಮಗಳು ಜಾನಕಿʼ ಧಾರಾವಾಹಿಯ ಖ್ಯಾತಿಯ ಸುಪ್ರಿಯಾ ರಾವ್‌, ನಿರಂಜನ್‌ ಕುಮಾರ್‌ ದಾವಣಗೆರೆ, ಯುವ ಪ್ರತಿಭೆ ವೈಶಾಖ್‌, ಸವಿನ್‌ ತೀರ್ಥಹಳ್ಳಿ, ಮತ್ತಿತರರು ಹಾಜರಿದ್ದು ಸಿನಿ ಲಹರಿಗೆ ಶುಭ ಹಾರೈಸಿದರು. ಸಿನಿ ಲಹರಿ ಸಿಇಓ ಕೃಷ ಪಿ. ಕೂಡ ಹಾಜರಿದ್ದು, ಮುಂದಿನ ಯೋಜನೆಯ ಬಗ್ಗೆ ವಿವರಿಸಿದರು. ಅದರ ಒಂದು ಫೋಟೋ ಝಲಕ್‌ ಇಲ್ಲಿದೆ.

Related Posts

error: Content is protected !!