Categories
ಸಿನಿ ಸುದ್ದಿ

ಲಹರಿ ತೆಕ್ಕೆಗೆ ಬನಾರಸ್ ಆಡಿಯೋ – ಚೊಚ್ಚಲ ನಾಯಕ‌ ನಟರ ಸಿನಿಮಾಗಳ‌ಲ್ಲಿ ಇದು ದಾಖಲೆ !

ಲಹರಿ’ ತೆಕ್ಕೆಗೆ ‘ಬನಾರಸ್’ ಆಡಿಯೋ ರೈಟ್ಸ್ ಜಮೀರ್ ಪುತ್ರನ ಡೆಬ್ಯೂ ಚಿತ್ರ ಹೊಸ ದಾಖಲೆ- ಝೈದ್ ಖಾನ್- ಜಯತೀರ್ಥ ಜುಗಲ್ ಬಂಧಿ ಮೋಡಿ !

ನಾಯಕ‌‌ ನಟ ಹಾಗೂ‌ ನಿರ್ಮಾಣ ಸಂಸ್ಥೆಯೂ ಸೇರಿದಂತೆ ಕನ್ನಡ ಚಿತ್ರರಂಗದಲ್ಲಿ ಅನೇಕ ಕಾರಣಕ್ಕೆ ಸಾಕಷ್ಟು ನಿರೀಕ್ಷೆ ಮೂಡಿಸಿರುವ ‘ ಬನಾರಸ್ ‘ ಚಿತ್ರದ ಆಡಿಯೋ- ವಿಡಿಯೋ ಹಕ್ಕುಗಳು ಕನ್ನಡದ ಪ್ರತಿಷ್ಟಿತ ಆಡಿಯೋ ಸಂಸ್ಥೆ ಲಹರಿ ಪಾಲಾಗಿವೆ. ಈ ಚಿತ್ರವು ಕನ್ನಡ, ತೆಲುಗು,ತಮಿಳು ಸೇರಿದಂತೆ ಐದು ಭಾಷೆಗಳಲ್ಲಿ‌ ಬರುತ್ತಿದ್ದು, ಆ ಎಲ್ಲಾ ಭಾಷೆಯ ಆಡಿಯೋ‌ ಮತ್ತು ವಿಡಿಯೋ ಹಕ್ಕುಗಳನ್ನು ಲಹರಿ‌ ಸಂಸ್ಥೆ ಖರೀದಿಸಿದೆ. ಸದ್ಯಕ್ಕೆ ಅದರ‌ ಮೊತ್ತ ರಿವೀಲ್ ಆಗಿಲ್ಲವಾದರೂ, ಚೊಚ್ಚಲ ನಾಯಕ‌ ನಟರೊಬ್ಬರ ಸಿನಿಮಾಗಳ ಇತಿಹಾಸದಲ್ಲಿಯೇ ಅತ್ಯಧಿಕ ಮೊತ್ತಕ್ಕೆ ಲಹರಿ ಸಂಸ್ಥೆ ಈ ಚಿತ್ರದ ಆಡಿಯೋ ಹಕ್ಕುಗಳನ್ನು ಖರೀದಿಸಿದೆ.

ಈ‌ ‌ಕುರಿತು‌ ಲಹರಿ ಸಂಸ್ಥೆಯೂ ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡುವ ಮೂಲಕ, ಹಲವು ಕಾರಣಕ್ಕೆ ಸುದ್ದಿಯಲ್ಲಿರುವ ಬನಾರಸ್ ಚಿತ್ರದ ಆಡಿಯೋ – ವಿಡಿಯೋ ಹಕ್ಕುಗಳನ್ನು ಖರೀದಿಸಿದ್ದಕ್ಕೆ ಹೆಮ್ಮೆ ಇದೆ ಎಂದಿದೆ. ಆಂದ ಹಾಗೆ, ‘ ಬನಾರಸ್’ ‘ ಒಲವೇ ಮಂದಾರ ಹಾಗೂ ಬೆಲ್ ಬಾಟಮ್ ಖ್ಯಾತಿಯ ನಿರ್ದೇಶಕ ಜಯತೀರ್ಥ ಡೈರೆಕ್ಟ್ ಮಾಡಿರುವ ಚಿತ್ರ. ಕಾಂಗ್ರೇಸ್ ಶಾಸಕರಾದ ಜಮೀರ್ ಅಹಮ್ಮದ್ ಪುತ್ರ ಝೈದ್ ಖಾನ್ ಈ‌ ಸಿನಿಮಾದ ಮೂಲಕ ಬಣ್ಣದ ಲೋಕಕ್ಕೆ ಗ್ರ್ಯಾಂಡ್ ಎಂಟ್ರಿಕೊಡ್ತಿದ್ದಾರೆ. ಅಚ್ಚರಿ ಅಂದರೆ ಝೈದ್ ಡೆಬ್ಯೂ ಚಿತ್ರ ಹೊಸ ದಾಖಲೆ ಬರೆದಿದೆ. ಈ ನಯಾ ಹಿಸ್ಟ್ರಿಗೆ ಮೊದಲ ಕಾರಣ ಹಾಡುಗಳು, ಎರಡನೇ ಕಾರಣ ಲಹರಿ ಸಂಸ್ಥೆ.

ಲಹರಿ ಬರೀ ದೊಡ್ಡವರ ಸಿನಿಮಾಗಳಿಗಷ್ಟೇ ಸೀಮಿತವಾಗಿಲ್ಲ, ಸ್ಟಾರ್ ನಟರುಗಳಿಗಷ್ಟೇ ಮಣೆ ಹಾಕಲ್ಲ‌. ಕಲಾವಿದರು ಯಾರೇ ಇರಲಿ, ಸಿನಿಮಾ ಯಾವುದೇ ಇರಲಿ ಸಂಗೀತದಲ್ಲಿ ಹೊಸತನವಿದೆ, ಸಾಹಿತ್ಯ ಕೇಳುಗರನ್ನು‌ ಆಕರ್ಷಿಸುತ್ತದೆ, ಹಾಡುಗಾರನ ಕಂಠದಲ್ಲಿ ನಾವೀನ್ಯತೆಯಿದೆ ಎಂತಾದರೆ ಸ್ಟಾರ್ ಢಮ್ ನೋಡಲ್ಲ. ಬದಲಾಗಿ ಕಲೆಗೆ ಬೆಲೆಕೊಡ್ತಾರೆ, ದಾಖಲೆ‌ ಬೆಲೆ ಕೊಟ್ಟು ಪ್ರೋತ್ಸಾಹಿಸ್ತಾರೆ.ಇದಕ್ಕೆ ಹಲವಾರು ನಿದರ್ಶನಗಳಿವೆ. ಸದ್ಯ, ಬನಾರಸ್ ಚಿತ್ರ ತಾಜಾ ಉದಾಹರಣೆ’ ಬನಾರಸ್ ಚಿತ್ರ’

ಬನಾರಸ್ ಪ್ಯಾನ್ ಇಂಡಿಯಾ ಚಿತ್ರವಾಗಿದ್ದು,
ಐದು ಭಾಷೆಯ ಆಡಿಯೋ ‌ಹಾಗೂ ವಿಡಿಯೋ ರೈಟ್ಸ್ ನ ದುಬಾರಿ ಮೊತ್ತ ಕೊಟ್ಟೆ ಲಹರಿ ಹಾಗೂ ಟಿ ಸೀರೀಸ್ ಜಂಟಿಯಾಗಿ ಖರೀದಿಸಿದೆ. ಹಿಂದೆಂದೂ ಕೂಡ‌ ಡೆಬ್ಯೂ ಹೀರೋನ ಸಿನಿಮಾದ ಎಲ್ಲಾ ಭಾಷೆಯ ಆಡಿಯೋ ಹಕ್ಕುಗಳ ರೈಟ್ಸ್ ಪಡೆದುಕೊಂಡಿರಲಿಲ್ಲ.

ಇದೇ ಮೊದಲ ಭಾರಿಗೆ ಪ್ರತಿಷ್ಠಿತ ಆಡಿಯೋ ಕಂಪೆನಿಗಳು
ಯುವನಟನ ಚೊಚ್ಚಲ ಚಿತ್ರದ ಆಡಿಯೋ ಹಕ್ಕುಗಳನ್ನು ಖರೀದಿ ಮಾಡಿವೆ. ಹೀಗಾಗಿ, ಝೈದ್ ಖಾನ್ ನಟನೆಯ ಬನಾರಸ್ ಸಿನಿಮಾ ಇಂಡಿಯನ್ ಸಿನ್ಮಾ ಇಂಡಸ್ಟ್ರಿಯಲ್ಲೇ ಹೊಸ ದಾಖಲೆ ಬರೆದಂತಾಗಿದೆ.

Categories
ಸಿನಿ ಸುದ್ದಿ

ಸೂಪರ್‌ಸ್ಟಾರ್ ರಜಿನಿಕಾಂತ್ ಮುಡಿಗೇರಿದ `ದಾದಾ ಸಾಹೇಬ್ ಫಾಲ್ಕೆ’; ಗುರು-ಅಣ್ಣ-ಸ್ನೇಹಿತನಿಗೆ ಪ್ರಶಸ್ತಿ ಅರ್ಪಿಸಿದ ತಲೈವಾ !

ದಾದಾ ಸಾಹೇಬ್ ಫಾಲ್ಕೆ' ಭಾರತೀಯ ಚಿತ್ರರಂಗದ ಪ್ರತಿಷ್ಠಿತ ಪ್ರಶಸ್ತಿ. ೨೦೨೦ನೇ ಸಾಲಿನ ಈ ಹೆಮ್ಮೆಯ ಪ್ರಶಸ್ತಿ ಸೌತ್ ಸಿನಿಮಾ ಇಂಡಸ್ಟ್ರಿ ಕಂಡಂತಂಹ ಅತ್ಯದ್ಭುತ ನಟ, ವಲ್ಡ್ ವೈಡ್ ಅಭಿಮಾನಿ ದೇವರುಗಳನ್ನು ಸಂಪಾದನೆ ಮಾಡಿರುವಂತಹ ತಲೈವಾ ಸೂಪರ್‌ಸ್ಟಾರ್ ರಜಿನಿಕಾಂತ್ ಮುಡಿಗೇರಿದೆ. ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ದೆಹಲಿ ವಿಜ್ಞಾನ ಭವನದಲ್ಲಿ ನಡೆದ 67 ನೇ ನ್ಯಾಷನಲ್ ಫಿಲ್ಮ್ ಅವಾರ್ಡ್ ಕಾರ್ಯಕ್ರಮದಲ್ಲಿಪಡೆಯಪ್ಪ’ನಿಗೆ ಪ್ರಶಸ್ತಿ ಪ್ರಧಾನ ಮಾಡಿದ್ದಾರೆ.


ನಡೆದು ಬಂದ ಹಾದಿಯನ್ನು, ಕೈಹಿಡಿದು ಮೇಲಕ್ಕೆತ್ತಿದವರನ್ನು, ದಾರಿ ಮಾರ್ಗ ತೋರಿಸಿಕೊಟ್ಟವರನ್ನು, ಪ್ರತಿಭೆ ಗುರ್ತಿಸಿ ಅವಕಾಶ ಕಲ್ಪಿಸಿಕೊಟ್ಟವರನ್ನು ತಲೈವಾ ಮರೆತಿಲ್ಲ ಮತ್ತು ಮರೆಯೋದಿಲ್ಲ ಎನ್ನುವುದಕ್ಕೆ ಫಾಲ್ಕೆ ಪ್ರಶಸ್ತಿ ಸಮಾರಂಭ ಕಾರ್ಯಕ್ರಮ ಸಾಕ್ಷಿಯಾಯ್ತು. ಹೌದು, ಪ್ರಶಸ್ತಿ ಸ್ವೀಕರಿಸಿದ ಬಳಿಕ ಮಾತನಾಡಿದ ರಜಿನಿಕಾಂತ್, ಫಾಲ್ಕೆ ಪ್ರಶಸ್ತಿಯನ್ನ ಗುರು-ಅಣ್ಣ-ಸ್ನೇಹಿತನಿಗೆ ಹಾಗೂ ಅಭಿಮಾನಿ ದೇವರುಗಳಿಗೆ ಅರ್ಪಣೆ ಮಾಡಿದರು. ಮುಖಕ್ಕೆ ಬಣ್ಣ ಹಚ್ಚಿ ಕ್ಯಾಮೆರಾ ಎದುರಿಸಲಿಕ್ಕೆ ಹಾಗೂ ಒಬ್ಬ ಕಲಾವಿದನಾಗಲಿಕ್ಕೆ ಅವಕಾಶ ಮಾಡಿಕೊಟ್ಟ ನಿರ್ದೇಶಕ ಕೆ. ಬಾಲಚಂದರ್ ಅವರನ್ನು ನೆನಪು ಮಾಡಿಕೊಂಡರು. ಇವರು ತಲೈವಾ ಪಾಲಿಗೆ ಗುರು ಹಾಗೂ ಮೆಂಟರ್ ಆಗಿದ್ದವರು. ಇವರ ಅಪೂರ್ವ ರಾಗಂಗಳ್ ಚಿತ್ರದ ಮೂಲಕವೇ ಪಡೆಯಪ್ಪ ಮಾಯಲೋಕಕ್ಕೆ ಪಾದಾರ್ಪಣೆ ಮಾಡಿದ್ದು. ಈ ಚಿತ್ರದಿಂದ ಶುರುವಾದ ಸಿನಿಜರ್ನಿ `ಅಣ್ಣಾತೆ’ವರೆಗೂ ಬಂದುನಿಂತಿದೆ. ಇವತ್ತು ಇಡೀ ಸಿನಿಮಾ ಜಗತ್ತು ರಜನಿಕಾಂತ್‌ರನ್ನು ಆರಾಧಿಸುವಂತೆ ಮಾಡಿದೆ.

ತಲೈವಾ ಕಲಾವಿದನಾಗುವ ಮೊದಲು ಬಸ್ ಕಂಡೆಕ್ಟರ್ ಆಗಿದ್ದವರು ಎನ್ನುವುದು ನಿಮ್ಮೆಲ್ಲರಿಗೂ ಗೊತ್ತಿರುವ ವಿಷಯ. ರಜಿನಿಕಾಂತ್ ಬಿಎಂಟಿಸಿ ಕಂಡೆಕ್ಟರ್ ಆಗಿದ್ದ ಕಾಲದಲ್ಲಿ ಸ್ನೇಹಿತನಾಗಿದ್ದ ಡ್ರೈವರ್ ವೃತ್ತಿಯನ್ನು ಮಾಡುತ್ತಿದ್ದ ವ್ಯಕ್ತಿಯ ಜೊತೆ ಈಗಲೂ ಅದೇ ಸ್ನೇಹ-ಬಾಂದವ್ಯವನ್ನು ಹೊಂದಿದ್ದಾರೆ. ಬೆಂಗಳೂರಿಗೆ ಬಂದಾಗೆಲ್ಲ ಆ ಸ್ನೇಹಿತನ ಮನೆಗೆ ಹೋಗ್ತಾರೆ ಮಾತ್ರವಲ್ಲ ಬಾಲ್ಯದಲ್ಲಿ ಆಡಿ ಬೆಳೆದ ಜಾಗ, ತಿಂಡಿತಿನಿಸು ತಿಂದ ಅಂಗಡಿಗಳು, ಹೋಟೆಲ್‌ಗಳು, ದೇವಸ್ತಾನಗಳು ಹೀಗೆ ಹಳೆಯ ಜಾಗಗಳಿಗೆ ಭೇಟಿ ಕೊಟ್ಟು ನೆನಪುಗಳನ್ನು ಮೆಲುಕು ಹಾಕ್ತಾರೆ. ಇಂತಿಪ್ಪ ರಜಿನಿಯ ಸ್ನೇಹಿತ ಮತ್ಯಾರು ಅಲ್ಲ ಒನ್ ಅಂಡ್ ಓನ್ಲೀ ರಾಜ್‌ ಬಹದ್ದೂರ್ ಅವರು. ಇವರೇ, ತಲೈವಾ ಬಣ್ಣದ ಲೋಕದ ಕಡೆ ಆಕರ್ಷಿತರಾಗಲಿಕ್ಕೆ ಮೊದಲ ಕಾರಣ. ಪಡೆಯಪ್ಪನೊಳಗಿದ್ದ ಕಲಾವಿದನನ್ನು ಮೊದಲು ಗುರ್ತಿಸಿದ್ದೇ ಗೆಳೆಯ ರಾಜ್‌ಬಹದ್ದೂರ್. ಹೀಗಾಗಿ, ಫಾಲ್ಕೆ ಪ್ರಶಸ್ತಿಯ ಪಾಲು ದೋಸ್ತನಿಗೂ ಸಲ್ಲಬೇಕು ಎಂದು ಗೆಳೆಯನನ್ನು ನೆನೆದರು.

ಗುರು ಹಾಗೂ ಗೆಳೆಯನೊಟ್ಟಿಗೆ ರಕ್ತಹಂಚಿಕೊಂಡು ಹುಟ್ಟಿದ ಸಹೋದರನನ್ನು ಸ್ಮರಿಸಿದರು. ತಂದೆಯ ಸ್ಥಾನದಲ್ಲಿ ನಿಂತುಕೊಂಡು ತಲೈವಾರನ್ನ ಸಾಕಿ ಬೆಳೆಸಿ ದೊಡ್ಡವನನ್ನಾಗಿ ಮಾಡಿದ್ದಾರೆ. ಜೊತೆಗೆ ಆಧ್ಯಾತ್ಮದೆಡೆಗೆ ವಾಲುವುದಕ್ಕೂ ಸ್ಪೂರ್ತಿಯಾಗಿದ್ದಾರಂತೆ. ಶುಭಕಾರ್ಯ-ಸಿನಿಮಾ ಬಿಡುಗಡೆಯ ಜೊತೆಗೆ ಮಾನಸಿಕ ನೆಮ್ಮದಿಯಾಗಿ ಪಡೆಯಪ್ಪ ಹಿಮಾಲಯಕ್ಕೆ ಭೇಟಿನೀಡುವುದು ನಿಮೆಗೆಲ್ಲ ಗೊತ್ತಿದೆ.

ಸೂಪರ್‌ಸ್ಟಾರ್ ಆಗಿ ಮೆರೆಯುವ ರಜಿನಿಕಾಂತ್ ಆಧ್ಯಾತ್ಮಿಕತೆಯಲ್ಲಿ ಧನ್ಯತೆಯನ್ನು ಕಾಣುತ್ತಿದ್ದಾರೆ. ಒಟ್ನಲ್ಲಿ ಸಾಮಾನ್ಯ ಶಿವಾಜಿ ರಾವ್ ಗಾಯಕ್‌ವಾಡ್ ಆಗಿದ್ದ ತಲೈವಾ ಇವತ್ತು ಇಂಡಿಯನ್ ಸಿನ್ಮಾ ಇಂಡಸ್ಟ್ರಿಯೇ ತಲೆ ಎತ್ತಿ ನೋಡುವಂತಹ ನಟನಾಗಿ ಬೆಳೆದಿದ್ದಾರೆ. ಕೋಟ್ಯಾಂತರ ಅಭಿಮಾನಿ ದೇವರುಗಳನ್ನು ಸಂಪಾದನೆ ಮಾಡಿದ್ದಾರೆ. ಇದಕ್ಕೆಲ್ಲಾ ಕಾರಣ, ಬಾಷಾ ಕಲೆಯ ಮೇಲಿಟ್ಟಿರುವ ಶ್ರದ್ದಾ-ಭಕ್ತಿಯ ಜೊತೆಗೆ ಗುರುಗಳಾದ ಬಾಲಚಂದರ್, ಅಣ್ಣ ಸತ್ಯನಾರಾಯಣ್, ಸ್ನೇಹಿತ ರಾಜ್‌ಬಹದ್ದೂರ್ ದಾರಿಮಾರ್ಗ ಹಾಗೂ ಅಭಿಮಾನಿ ದೇವರುಗಳ ಆಶೀರ್ವಾದ ಮತ್ತು ಹಾರೈಕೆ.

ವಿಶಾಲಾಕ್ಷಿ, ಎಂಟರ್‌ಟೈನ್ಮೆಂಟ್ ಬ್ಯೂರೋ ಸಿನಿಲಹರಿ

Categories
ಸಿನಿ ಸುದ್ದಿ

ಸಖತ್‌ ಸೌಂಡ್‌ ಮಾಡ್ತಿದೆ ಸಖತ್‌ ಟೀಸರ್!‌ ಗಣಿ-ಸುನಿ ಜೋಡಿ ಕಾಮಿಡಿಗೆ ಪ್ರೇಕ್ಷಕ ಫುಲ್‌ ಖುಷ್


ಗೋಲ್ಡನ್ ಸ್ಟಾರ್ ಗಣೇಶ್‌ ಅಭಿನಯದ “ಸಖತ್‌ʼ ಸಿನಿಮಾ ಆರಂಭದಿಂದಲೂ ಸಖತ್‌ ಆಗಿಯೇ ಸುದ್ದಿ ಮಾಡುತ್ತಿದೆ. ಅದರಲ್ಲೂ ಇತ್ತೀಚೆಗಷ್ಟೇ ರಿಲೀಸ್‌ ಆದ ಟೀಸರ್ ಯೂಟ್ಯೂಬ್ ನಲ್ಲಿ ಇನ್ನೂ ಸಖತ್ ಆಗಿಯೇ ಸೌಂಡು ಮಾಡುತ್ತಿದೆ. ಹೌದು, “ಸಿಂಪಲ್” ಸುನಿ ನಿರ್ದೇಶನದ ಈ ಸಿನಿಮಾ ಪಕ್ಕಾ ಕಾಮಿಡಿ ಹೂರಣ ತುಂಬಿರುವ ಸಿನಿಮಾ ಅನ್ನುವುದನ್ನೇ ಟೀಸರ್ ಸಾರಿ ಹೇಳುತ್ತಿದೆ. ಟೀಸರ್‌ ನೋಡಿರುವ ಪ್ರೇಕ್ಷಕ ವರ್ಗ ನಗುವಿನ ಅಲೆಯಲ್ಲಿ ತೇಲುತ್ತಿದೆ. ಇದೇ ಮೊದಲ ಬಾರಿಗೆ ಗಣೇಶ್‌ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಹೌದು, ಅವರು ಅಂಧನ ಪಾತ್ರ ಮಾಡಿದ್ದು, ಅದೊಂದು ವಿಭಿನ್ನ ಪಾತ್ರವಂತೆ. ಇನ್ನು, ನಿರ್ದೇಶಕ ಸುನಿ ಅವರ ಕಥೆ ಮಾತುಗಳು ಅಂದಮೇಲೆ ಕಿಕ್‌ ಇದ್ದೇ ಇರುತ್ತದೆ. ಸಿನಿಮಾದಲ್ಲಿ ಕಚಗುಳಿ ಇಡುವ ಸಂಭಾಷಣೆಯೇ ಇಲ್ಲಿ ಹೈಲೈಟ್.‌ ಈಗಾಗಲೇ ಸುನಿ ಮತ್ತು ಗಣೇಶ್‌ ಜೋಡಿ ಹಿಟ್‌ ಸಿನಿಮಾ ಕೊಟ್ಟಿದ್ದು ಗೊತ್ತೇ ಇದೆ. ಅವರಿಬ್ಬರು‌ ಸೇರಿ ಕೊಟ್ಟ “ಚಮಕ್” ಸಾಕಷ್ಟು ಸುದ್ದಿ ಮಾಡಿತ್ತು. ಈಗ “ಸಖತ್”‌ ಸಿನಿಮಾ ಕೂಡ ಸದ್ದು ಮಾಡುತ್ತಿದೆ. ಟೀಸರ್‌ನಲ್ಲಿರುವ ಡೈಲಾಗ್ ಕೇಳುಗರಿಗೆ ಸಖತ್ ಮಜಾ ಕೊಡುತ್ತಿದೆ.


ಅದೇನೆ ಇರಲಿ, ಟೀಸರ್‌ ನೋಡಿದವರಿಗೆ ಒಂದು ಅನುಮಾನ ಕಾಡೋದು ಸಹಜ. ಅದೇನೆಂದರೆ, ಇಲ್ಲಿ ಹೀರೋ ನಿಜವಾಗಿಯೂ ಕುರುಡನಾ? ಅಥವಾ ನಾಟಕ ಮಾಡ್ತಾನಾ? ಗೊತ್ತಿಲ್ಲ. ಇದಕ್ಕೆ ಉತ್ತರ ಬೇಕಾದರೆ, ಸಿನಿಮಾ ನೋಡಬೇಕು. ಇದೊಂದು ಹಾಸ್ಯದ ಜೊತೆಗೆ ನ್ಯಾಯಾಲಯದ ವಿಷಯವನ್ನೂ ಹೊಂದಿದೆ. ಅಲ್ಲೊಂದು ರಿಯಾಲಿಟಿ ಶೋ ಸುತ್ತವೂ ಕಥೆ ಸಾಗಲಿದೆ.
ಚಿತ್ರಕ್ಕೆ ಜೂಡಾ ಸ್ಯಾಂಡಿ ಸಂಗೀತ ನೀಡಿದ್ದಾರೆ. ಇನ್ನು ಚಿತ್ರದಲ್ಲಿ ರಂಗಾಯಣ ರಘು, ಸಾಧು ಕೋಕಿಲ, ಗಿರಿ, ಧರ್ಮಣ್ಣ ಕಡೂರು ಸೇರಿದಂತೆ ಇತರರೂ ಇದ್ದಾರೆ.

ನಿಶ್ವಿಕಾ ನಾಯ್ಡು ಮತ್ತು ಸುರಭಿ ಗಣೇಶ್‌ಗೆ ನಾಯಕಿಯರು. ಈಗಾಗಲೇ ಟೀಸರ್ ಗೆ ಸಖತ್‌ ರೆಸ್ಪಾನ್ಸ್ ಸಿಕ್ಕಿದ್ದು, ಎರಡು ಮಿಲಿಯನ್ಸ್ ವೀವ್ಸ್ ನತ್ತ ಸಾಗಿದೆ. ಕೆವಿಎನ್ ಪ್ರೊಡಕ್ಷನ್ ನಡಿ ಸುಪ್ರೀತ್‌ ಅದ್ಧೂರಿಯಾಗಿಯೇ ಈ ಸಿನಿಮಾವನ್ನು ನಿರ್ಮಿಸಿದ್ದಾರೆ. ಜೊತೆಗೆ ನಿಶಾ ವೆಂಕಟ್ ಕೋನಾಂಕಿ ನಿರ್ಮಾಣದಲ್ಲಿ ಸಾಥ್‌ ನೀಡಿದ್ದಾರೆ. ಎಲ್ಲವೂ ಅಂದುಕೊಂಡಂತೆ ನಡೆದರೆ ನವೆಂಬರ್ 12ಕ್ಕೆ ಸಖತ್‌ ಆಗಿಯೇ ಬಿಡುಗಡೆಯಾಗಲಿದೆ.

Categories
ಸಿನಿ ಸುದ್ದಿ

ಭಜರಂಗಿ ಪ್ರಿರಿಲೀಸ್ ಫಂಕ್ಷನ್‌ಗೆ ರಾಕಿಂಗ್‌ಸ್ಟಾರ್ ಗೆಸ್ಟ್ ! ದೊಡ್ಮನೆ ಭಕ್ತರಿಗೂ-ರಾಕಿ ಬಳಗಕ್ಕೂ ಎಲ್ಲಿಲ್ಲದ ಸಂಭ್ರಮ !

ಭಜರಂಗಿಯ ದಿವ್ಯದರ್ಶನಕ್ಕೆ ಮುಹೂರ್ತ ಫಿಕ್ಸಾಗಿದೆ. ಅಕ್ಟೋಬರ್ 29ರಂದು ಬೆಳ್ಳಿತೆರೆ ಮೇಲೆ ದರ್ಶನ ಕೊಡಲಿರುವ ಭಜರಂಗಿಯನ್ನು ಕಣ್ತುಂಬಿಕೊಳ್ಳೋದಕ್ಕೆ ಇಡೀ ಪ್ರೇಕ್ಷಕಕುಲ ಕಾತುರದಿಂದ ಕಾಯ್ತಿದೆ. ಬಿಗ್‌ಸ್ಕ್ರೀನ್ ಮೇಲೆ ಹೇಗರ‍್ಬೋದು ಭಜರಂಗಿಯ ಅಬ್ಬರ ಆರ್ಭಟ ಎನ್ನುವ ಕೂತೂಹಲದ ನಡುವೆ ದೊಡ್ಮನೆ ಭಕ್ತರು ಹಾಗೂ ರಾಕಿಂಗ್ ಬಳಗದವರು ಸೀಟಿ ಹೊಡೆದು ಸಂಭ್ರಮಿಸುವಂತಹ ಸುದ್ದಿಯೊಂದು ಹೊರಬಿದ್ದಿದೆ. ಅದುವೇ, ಭಜರಂಗಿ-2 ಚಿತ್ರದ ಪ್ರಿರಿಲೀಸ್ ಕಾರ್ಯಕ್ರಮ.

ಹೌದು, ಚಿತ್ರ ಬಿಡುಗಡೆಗೆ ಕೌಂಟ್‌ಡೌನ್ ಶುರುವಾಗಿರುವ ಹೊತ್ತಲ್ಲಿ ಭಜರಂಗಿಯ ಧ್ಯಾನವನ್ನು ಹೆಚ್ಚಿಸೋಕೆ ಹಾಗೂ ಭಜರಂಗಿಯ ಬಗ್ಗೆ ಯಾರಿಗೂ ತಿಳಿಯದಿರುವ ಅಚ್ಚರಿಯ ಸಂಗತಿಗಳನ್ನು ಹಂಚಿಕೊಳ್ಳೋದಕ್ಕೆ ಚಿತ್ರತಂಡ ಒಂದು ವೇದಿಕೆಯನ್ನು ಸಜ್ಜುಮಾಡಿದೆ. ಅಲ್ಲಿಗೆ, ಸೆಲ್ಫ್ ಮೇಡ್ ಷೆಹಜಾದ್‌ನನ್ನು ಕರೆಸೋದಕ್ಕೆ ಫಿಲ್ಮ್ ಟೀಮ್ ಪ್ಲ್ಯಾನ್ ಮಾಡಿದೆ. ಇದೇ ಅಕ್ಟೋಬರ್ 29ರಂದು ಪ್ರಿರಿಲೀಸ್ ಇವೆಂಟ್ ಆರ್ಗನೈಸ್ ಮಾಡಿದ್ದು ಕೆಜಿಎಫ್ ಸಾಮ್ರಾಜ್ಯದ ಕಿಂಗ್ ರಾಕಿಂಗ್ ಸ್ಟಾರ್ ಯಶ್ ಆಗಮಿಸಲಿದ್ದಾರೆ. ಭಜರಂಗಿ ಶಿವಣ್ಣ ಹಾಗೂ ಇಡೀ ಚಿತ್ರತಂಡದ ಜೊತೆ ವೇದಿಕೆ ಹಂಚಿಕೊಳ್ಳಲಿದ್ದಾರೆ. ಈ ಸುದ್ದಿ ಭಜರಂಗಿ ಕೋಟೆಯಿಂದ ನುಸುಳಿಕೊಂಡು ಬಂದು ಸೋಷಿಯಲ್ ಮೀಡಿಯಾದಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿದೆ. ದೊಡ್ಮನೆ ಅಭಿಮಾನಿ ದೇವರುಗಳು ಹಾಗೂ ಅಣ್ತಮ್ಮನ ಫ್ಯಾನ್ಸ್ ಗಳು ಒಟ್ಟಿಗೆ ಸೇರಿ ಸಂಭ್ರಮಿಸುವಂತಾಗಿದೆ.

ಈಗಾಗಲೇ ಹಲವು ಭಾರಿ ಶಿವಣ್ಣ ಹಾಗೂ ಯಶ್ ವೇದಿಕೆ ಹಂಚಿಕೊಂಡಿದ್ದಾರೆ. ಆದರೆ, ಭಜರಂಗಿ-2 ಚಿತ್ರ ಬಿಡುಗಡೆಗೂ ಮುನ್ನ ನಡೆಯುತ್ತಿರುವ ಈ ಪೂರ್ವಭಾವಿ ಕಾರ್ಯಕ್ರಮ ಫ್ಯಾನ್ಸ್ ಗೆ ಮಾತ್ರವಲ್ಲ ಅವರಿಬ್ಬರಿಗೂ ಸ್ಪೆಷಲ್. ಯಾಕಂದ್ರೆ, ಜಯಣ್ಣ ಹಾಗೂ ಭೋಗೇಂದ್ರ ಅವರು ಶಿವಣ್ಣ ಹಾಗೂ ಯಶ್ ಇಬ್ಬರ ಪಾಲಿಗೂ ಅನ್ನದಾತರು. ಗೂಗ್ಲಿ, ಗಜಕೇಸರಿ, ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ ಸೇರಿದಂತೆ ಹಲವು ಸೂಪರ್‌ಹಿಟ್ ಚಿತ್ರಗಳಿಗೆ ಕೋಟಿ ಬಂಡವಾಳ ಹೂಡಿದ ಕೀರ್ತಿ ಸದ್ಯ `ಭಜರಂಗಿ-೨’ ಚಿತ್ರಕ್ಕೆ ದುಡ್ಡು ಹಾಕಿರುವ ನಿರ್ಮಾಪಕರುಗಳಾದ ಜಯ್ಯಣ್ಣ ಹಾಗೂ ಭೋಗೇಂದ್ರ ಅವರಿಗೆ ಸಲ್ಲುತ್ತೆ. ಹೀಗಾಗಿ, ಸೆಂಚುರಿಸ್ಟಾರ್ ಹಾಗೂ ಸೆಲ್ಫ್ ಮೇಡ್ ಷೆಹಜಾದ್ ಒಟ್ಟಿಗೆ ಸ್ಟೇಜ್ ಶೇರ್ ಮಾಡುತ್ತಿರುವುದು, ಭಜರಂಗಿಯ ಅಬ್ಬರ-ಆರ್ಭಟಕ್ಕೆ ಕಿಕ್‌ಸ್ಟಾರ್ಟ್ ಕೊಡಲಿಕ್ಕೆ ಬರುತ್ತಿರುವುದು ನಿಜಕ್ಕೂ ಖುಷಿಯ ಸಂಗತಿ.

ಅಂದ್ಹಾಗೇ, ಭಜರಂಗಿ ಎಂಟು ವರ್ಷಗಳ ನಂತರ ಸೀಕ್ವೆಲ್ ಮೂಲಕ ಬೆಳ್ಳಿಪರದೆಗೆ ಎಂಟ್ರಿಕೊಡ್ತಿರುವುದರಿಂದ ಸಹಜವಾಗಿ ನಿರೀಕ್ಷೆಗಳು ಗರಿಗೆದರಿವೆ. ಟೀಸರ್-ಟ್ರೈಲರ್-ಮೇಕಿಂಗ್ ಜೊತೆ ಪ್ರತಿಯೊಂದು ಪಾತ್ರವೂ ಕೂಡ ಸಿನಿಮಾಕುಲವನ್ನು ಕಣ್ಣುಜ್ಜಿಕೊಂಡು ಕಾಯುವಂತೆ ಮಾಡ್ತಿದೆ. ನಿರ್ದೇಶಕ ಎ. ಹರ್ಷ ಅವರು ಒಂದೊಂದು ಕ್ಯಾರೆಕ್ಟರನ್ನು ಕೂಡ ಅಷ್ಟೇ ಕೇರ್‌ಫುಲ್ಲಾಗಿ ಮತ್ತು ಕ್ಯೂರಿಯಸ್ಸಾಗಿ ಸೃಷ್ಟಿ ಮಾಡಿದ್ದಾರೆ. ಶಿವಣ್ಣ-ಸೌರವ್ ಲೋಕಿ-ಶ್ರುತಿ-ಭಾವನ ಜೊತೆಗೆ ಯುವಪ್ರತಿಭೆಗಳಾದ ಪ್ರಸನ್ನ ಹಾಗೂ ಚೆಲುವರಾಜ್ ಪಾತ್ರ ಕೂತೂಹಲದ ಕಟ್ಟೆಯನ್ನು ಹೊಡೆದುರುಳಿಸಿದೆ.

ಪಾತ್ರವರ್ಗದ ಲುಕ್-ಗೆಟಪ್-ಖದರ್ ಜೊತೆಗೆ ಕಣ್ಣಿಗೆ ಹೊಡೆಯುವಂತಹ ಮೇಕಿಂಗ್ ಭಜರಂಗಿ-2' ಚಿತ್ರದ ಮೇಲಿನ ಕೌತುಕವನ್ನು ಒಂದೊಂದೆ ತೂಕ ಹೆಚ್ಚಿಸುತ್ತಾ ಹೋಗಿವೆ. ದೇವರು ಮತ್ತು ರಾಕ್ಷಸರ ನಡುವಿನ ಕದನ ನೋಡೋದಕ್ಕೆ ಒಂಟಿಕಾಲಿನಲ್ಲಿ ನಿಂತು ಕಾಯುವಂತೆ ಮಾಡಿವೆ. ಈ ಕೂತೂಹಲಭರಿತ ಕದನಕ್ಕೆ ಅಕ್ಟೋಬರ್ 29ರಂದು ತೆರೆಬೀಳಲಿದೆ. ನಾಲ್ಕು ಭಾರಿ ಸೂರ್ಯ, ನಾಲ್ಕು ಭಾರಿ ಚಂದ್ರ ಬಂದುಹೋದರೆ ಮುಗೀತು ಬಿಳಿಪರದೆಯ ಮೇಲೆಭಜರಂಗಿ’ ವಜ್ರದಂತೆ ಝಳಪಿಸುತ್ತಾನೆ. ಅಲ್ಲಿವರೆಗೂ ಕಾಯ್ರಿ.

ವಿಶಾಲಾಕ್ಷಿ,ಎಂಟರ್‌ಟೈನ್ಮೆಂಟ್ ಬ್ಯೂರೋ ಸಿನಿಲಹರಿ

Categories
ಸಿನಿ ಸುದ್ದಿ

ಉಪೇಂದ್ರ- ರವಿಚಂದ್ರನ್‌ ತ್ರಿಶೂಲಂ ಚಿತ್ರಕ್ಕೆ ವಿದೇಶದಲ್ಲಿಈಗಿಂದಲೇ ಬೇಡಿಕೆ!

ಕನ್ನಡ ಚಿತ್ರರಂಗ ಸಾಗರದಾಚೆ ಸುದ್ದಿಯಾಗಿರುವುದು ಹೊಸದೇನಲ್ಲ. ಆದರೆ, ಸಿನಿಮಾ ಮೊದಲು ಇಲ್ಲಿ ತೆರೆಕಂಡು ಆ ಬಳಿಕ ವಿದೇಶಗಳಲ್ಲಿ ಸದ್ದು ಮಾಡಿದ್ದು ಗೊತ್ತಿದೆ. ಈಗ ಹೊಸ ಸುದ್ದಿ ಅಂದರೆ, ಉಪೇಂದ್ರ ಮತ್ತು ರವಿಚಂದ್ರನ್‌ ಅಭಿನಯದ “ತ್ರಿಶೂಲಂ” ಚಿತ್ರ ಬಿಡುಗಡೆ ಮುನ್ನವೇ ವಿದೇಶಿಗರಿಂದ ಬೇಡಿಕೆ ಹೆಚ್ಚಿದೆ. ಹೌದು, ಸದ್ಯ ಜನವರಿಯಲ್ಲಿ ಬಿಡುಗಡೆಯಾಗಲಿರುವ “ತ್ರಿಶೂಲಂ” ಚಿತ್ರವನ್ನು ಆರ್.ಎಸ್. ಪ್ರೊಡಕ್ಷನ್ಸ್ ನಿರ್ಮಾಣ ಮಾಡಿದೆ. ಇನ್ನು, ಈ ಸಿನಿಮಾಗೆ ಓಂಪ್ರಕಾಶ್ ರಾವ್ ನಿರ್ದೇಶನ ಮಾಡಿದ್ದಾರೆ. ಕನ್ನಡ ಚಿತ್ರರಂಗಕ್ಕೆ ಸಾಕಷ್ಟು ಯಶಸ್ವಿ ಚಿತ್ರಗಳನ್ನು ನೀಡಿರುವ ಆರ್.ಎಸ್. ಪ್ರೊಡಕ್ಷನ್ಸ್ ಸಂಸ್ಥೆಯಿಂದ ನಿರ್ಮಾಣವಾಗುತ್ತಿರುವ “ತ್ರಿಶೂಲಂ”
ಚಿತ್ರ ಇನ್ನೂ ಚಿತ್ರೀಕರಣದಲ್ಲಿದೆ. ಈಗಲೇ ಭಾರಿ ಸದ್ದು ಮಾಡುತ್ತಿರುವುದು ಒಳ್ಳೆಯ ಬೆಳವಣಿಗೆ.


ಈ ಚಿತ್ರದ ಬಗ್ಗೆ ಮಾಹಿತಿ ತಿಳಿದುಕೊಂಡ ಇಂಗ್ಲೆಂಡ್‌ನ ಸಿನಿಮಾ ವ್ಯಾಪಾರಿಗಳು, ಈ ಚಿತ್ರದ ವ್ಯಾಪಾರಕ್ಕೆ ಮುಂದೆ ಬಂದಿದ್ದಾರೆ. ಸದ್ಯ ಮಾತುಕತೆ ಅಂತಿಮ ಹಂತದಲ್ಲಿದೆ ಎಂದು ನಿರ್ಮಾಪಕ ಆರ್ ಶ್ರೀನಿವಾಸ್ ತಿಳಿಸಿದ್ದಾರೆ. ಅಕ್ಟೋಬರ್‌ 26 ರಿಂದ ಹೈದರಾಬಾದ್‌ನಲ್ಲಿ ಗಣೇಶ್ ಮಾಸ್ಟರ್ ಅವರ ಸಾರಥ್ಯದಲ್ಲಿ ಭರ್ಜರಿ ಸಾಹಸ ಸನ್ನಿವೇಶವೊಂದರ ಚಿತ್ರೀಕರಣ ನಡೆಯಲಿದೆ. ಉಪೇಂದ್ರ, ರವಿಚಂದ್ರನ್ ಮುಂತಾದವರು ಈ ಭಾಗದ ಚಿತ್ರೀಕರಣದಲ್ಲಿ ಭಾಗವಹಿಸಲಿದ್ದಾರೆ.


ಆರ್. ಶ್ರೀನಿವಾಸ್ ಹಾಗೂ ಬಿ.ಎಸ್. ಕಿರಣ್ ಗೌಡ ನಿರ್ಮಿಸುತ್ತಿರುವ ಈ ಚಿತ್ರವನ್ನು ಓಂಪ್ರಕಾಶ್ ರಾವ್ ನಿರ್ದೇಶಿಸುತ್ತಿದ್ದಾರೆ. ಚಂದ್ರಮೌಳಿ ಸಂಭಾಷಣೆ ಬರೆದಿದ್ದಾರೆ. ಅರ್ಜುನ್ ಜನ್ಯ ಸಂಗೀತವಿದೆ. ರವಿ ಕ್ಯಾಮೆರಾ ಹಿಡಿದರೆ, ಲಕ್ಷ್ಮಣ ರೆಡ್ಡಿ ಸಂಕಲನವಿದೆ. ರವಿವರ್ಮ, ಗಣೇಶ್ ಸಾಹಸ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ಶಾನ್ವಿ ನಿಮಿಕಾ ರತ್ನಾಕರ್, ಸಾಧುಕೋಕಿಲ, ಪ್ರದೀಪ್ ರಾವತ್, ನಾಗಶೇಖರ್, ರಂಗಾಯಣ ರಘು, ಅಚ್ಯುತರಾವ್, ಸುಧಾ ಬೆಳವಾಡಿ, ಉಗ್ರಂ ಮಂಜು ಇತರರು ಇದ್ದಾರೆ. ಇನ್ನುಳಿದಂತೆ ಮುಂಬೈ ಬೆಡಗಿ ಅದಿತಿ ಆರ್ಯ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

Categories
ಸಿನಿ ಸುದ್ದಿ

ಮೇಘನಾ ಗಾಂವ್ಕರ್ ಈಗ ಡಿಸಿಪಿ!‌ ಶಿವಾಜಿ ಸುರತ್ಕಲ್‌ 2 ಸಿನಿಮಾಗೆ ಕ್ರೈಂ ಬ್ರಾಂಚ್‌ ಆಫೀಸರ್‌

ನಟಿ ಮೇಘನಾ ಗಾಂವ್ಕರ್‌ ಈಗ ಡಿಸಿಪಿಯಾಗಿದ್ದಾರೆ. ಅರೇ ಡಿಸಿಪಿ ಆಗಿರೋದು ನಿಜ. ಅದು ಸಿನಿಮಾದಲ್ಲಿ. ಕಳೆದ ವರ್ಷ ಬಿಡುಗಡೆಯಾಗಿ ಜೋರು ಸುದ್ದಿಯಾದ “ಶಿವಾಜಿ ಸುರತ್ಕಲ್” ಸಿನಿಮಾ ಎರಡನೇ ಭಾಗ ಬರುತ್ತಿರುವುದು ಎಲ್ಲರಿಗೂ ಗೊತ್ತೇ ಇದೆ. ಶಿವಾಜಿ ಸುರತ್ಕಲ್ ಆಗಿ ಕಾಣಿಸಿಕೊಂಡಿದ್ದ ರಮೇಶ್ ಅರವಿಂದ್ ಅವರ ಜೊತೆ ರಾಧಿಕಾ ನಾರಾಯಣ್, ರಾಘು ರಮಣಕೊಪ್ಪ, ವಿದ್ಯಾ ಮೂರ್ತಿ ಅವರು ಇಲ್ಲೂ ಮುಂದುವರಿಯುತ್ತಿದ್ದಾರೆ.

ಈ ಪಾತ್ರಗಳ ಜೊತೆಗೆ ಈಗ ಮೇಘನಾ ಗಾಂವ್ಕರ್‌ ಕೂಡ ಎಂಟ್ರಿ ಕೊಡುತ್ತಿದ್ದಾರೆ. ಅವರಿಲ್ಲಿ ಡಿಸಿಪಿ ದೀಪ ಕಾಮತ್ ಆಗಿ ತೆರೆಯ ಮೇಲೆ ಅಬ್ಬರಿಸುತ್ತಿದ್ದಾರೆ. ಬೆಂಗಳೂರ್ ಸೆಂಟ್ರಲ್ ಕ್ರೈಂ ಬ್ರಾಂಚ್ ಡಿಸಿಪಿಯಾಗಿ ಅವರು ಕಾಣಿಸಿಕೊಳ್ಳಲಿದ್ದಾರೆ. ಇಷ್ಟು ದಿನ ಗ್ಲಾಮರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಮೇಘನ ಗಾಂವ್ಕರ್ ಅವರು ಮೊದಲ ಬಾರಿಗೆ ಟಫ್ ಕಾಪ್ ಆಗಿ ತೆರೆಮೇಲೆ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದಲ್ಲಿ ಪ್ರಮುಖ ಪಾತ್ರವಾದ ಡಿಸಿಪಿ ದೀಪ ಕಾಮತ್, ಶಿವಾಜಿ ಸುರತ್ಕಲ್ ಅವರಿಗೆ ಬೆನ್ನೆಲುಬಾಗಿ ನಿಲ್ಲುವ ಮತ್ತು ಮೇಲಧಿಕಾರಿಯ ಪಾತ್ರವಂತೆ.

ಇನ್ನಷ್ಟು ಹೊಸ ಪಾತ್ರಗಳು ಚಿತ್ರತಂಡ ಸೇರಲಿದ್ದು ಚಿತ್ರದ ನಿರ್ಮಾಣದ ಕೆಲಸವು ಈಗಾಗಲೇ ನಡೆಯುತ್ತಿದೆ, ಕೆಲವೇ ದಿನದಲ್ಲಿ ಮುಹೂರ್ತ ನಡೆಸಿ ಚಿತ್ರೀಕರಣಕ್ಕೆ ಹೋಗುವುದಾಗಿ ಚಿತ್ರತಂಡ ತಿಳಿಸಿದೆ. ರಮೇಶ್ ಅರವಿಂದ್ ಅವರ 103ನೇ ಚಿತ್ರ ಇದಾಗಿದ್ದು, ಚಿತ್ರಕ್ಕೆ ಕಥೆ ಚಿತ್ರಕಥೆ ಬರೆದು ಆಕಾಶ್ ಶ್ರಿವತ್ಸ ಅವರು ನಿರ್ದೇಶಿಸಿ, ರೇಖಾ.ಕೆ.ಎನ್ ಮತ್ತು ಅನುಪ್ ಗೌಡ ನಿರ್ಮಾಣ ಮಾಡುತ್ತಿದ್ದಾರೆ.

Categories
ಸಿನಿ ಸುದ್ದಿ

ಕಬ್ಜ ಕೋಟೆಗೆ ಕೆಜಿಎಫ್ ಡಾನ್ ಲಗ್ಗೆ ; ಉಪ್ಪಿ- ಕಿಚ್ಚ ಎದುರು ತೊಡೆ ತಟ್ಟಿದ ‘ಕೆಜಿಎಫ್’ ಕಿಂಗ್ ಪಿನ್ ರಾಜೇಂದ್ರ ದೇಸಾಯಿ!

ತಾಜ್ ಮಹಲ್ ಸಾರಥಿ ಆರ್. ಚಂದ್ರು ಕಟ್ಟುತ್ತಿರುವ “ಕಬ್ಜ” ಕೋಟೆ ಮುಂದೊಂದು ದಿನ ದೊಡ್ಡ ಸಾಮ್ರಾಜ್ಯವಾಗಿ ಬೆಳೆದು‌ ನಿಲ್ಲುತ್ತೆ. ಇಡೀ ಜಗತ್ತು ಕಣ್ಣರಳಿಸಿ ನೋಡುವಂತಹ ಸಾಮ್ರಾಜ್ಯವಾಗುತ್ತೆ. ಅದರಲ್ಲಿ ಎರಡು‌ ಮಾತಿಲ್ಲ. ಯಾಕಂದ್ರೆ, ಗಾಂಧಿ‌ನಗರದ ಮಂದಿಗೆ ಯಾವತ್ತೋ ಹಾಲಿವುಡ್ ತೋರಿಸಿದವರು, ಕಾಲಿಟ್ಟ ಕಡೆಯಲೆಲ್ಲಾ ಮಾಣಿಕ್ಯನೇ ಸರೀ‌ ಎಂದೆನಿಸಿಕೊಂಡು ಬಾದ್ ಷಾ ಆಗಿ ಮೆರೆಯುತ್ತಿರುವವರು ‘ಕಬ್ಜ’ ಕಿಂಗ್ ಢಮ್ ಗೆ ಸೇರಿಕೊಂಡಿದ್ದಾರೆ. ಇವರಿಬ್ಬರು ಕಿಂಗ್ ಮೇಕರ್‌ಗಳಾದರೆ, ಕಿಂಗ್ ಫಿನ್ ಗಳು ಇರ್ಬೇಕಲ್ಲವೇ, ಅಪ್ ಕೋರ್ಸ್ ಇರಬೇಕು ಅಂತಾನೇ ನಿರ್ದೇಶಕ ಆರ್ ‌ಚಂದ್ರು ಅವರು ಖಡಕ್ ಖಳನಾಯಕರನ್ನು ಒಬ್ಬೊಬ್ಬರನ್ನಾಗಿ ಕಬ್ಜ ಕೋಟೆಗೆ ಕಳುಹಿಸಿಕೊಡ್ತಿದ್ದಾರೆ. ಬಿಟೌನ್ ನವಾಬ್ ಅಖಾಡಕ್ಕೆ ಎಂಟ್ರಿಕೊಟ್ಟ ಬೆನ್ನಲ್ಲೇ ಕೆಜಿಎಫ್ ಡಾನ್ ಆಗಮನವಾಗಿದೆ.

ಭಾರತೀಯ ಚಿತ್ರರಂಗ ಒಮ್ಮೆ ಹಿಂತಿರುಗಿ‌ ನೋಡಿದಂತಹ ಸಿನಿಮಾ ಕೆಜಿಎಫ್. ಇಂತಹ ಮಹೋನ್ನತ ಚಿತ್ರದಲ್ಲಿ ಅಭಿನಯಿಸಿ ಜಗತ್ತು ಸುತ್ತಿಬಂದ ಖಳನಾಯಕ ಈಗ ಕಬ್ಜ ಕೋಟೆಗೆ ಲಗ್ಗೆ ಇಟ್ಟಿದ್ದಾರೆ. ನಿರ್ದೇಶಕ ಆರ್ ಚಂದ್ರು ಅವರು ಕೆಜಿಎಫ್ ಡಾನ್ ಗೆ ರತ್ನಗಂಬಳಿ ಹಾಕಿ‌ ಬರಮಾಡಿಕೊಂಡಿದ್ದಾರೆ. ಅಷ್ಟಕ್ಕೂ, ಖಳ್ ನಾಯಕ್ ಬೇರಾರು ಅಲ್ಲ ‘ಕೆಜಿಎಫ್ ‘ ಚಿತ್ರದಲ್ಲಿ ರಾಕಿಭಾಯ್ ಎದುರು ಧಗಧಗಿಸಿದ ರಾಜೇಂದ್ರ ದೇಸಾಯಿ ಅಲಿಯಾಸ್ ಲಕ್ಕಿ ಲಕ್ಷ್ಮಣ್. ಲಕ್ಕಿ‌ಲಕ್ಣ್ಮಣ್ ಮೂಲ ಹೆಸರು. ಮೂಲತಃ ಮೈಸೂರಿನವರು. ಸಾಫ್ಟ್‌ವೇರ್ ಕಂಪೆನಿಯಲ್ಲಿ ಸಾವಿರಾರು ಉದ್ಯೋಗಿಗಳಿಗೆ ಇವರೇ ಬಾಸ್. ಕೈತುಂಬಾ ಕಾಸು.
ಹೀಗಿದ್ರೂ ಸಿನಿಮಾದ ಸೆಳೆತ, ಬಿಗ್ ಸ್ಕ್ರೀನ್ ಮೇಲೆ ಧಗಧಗಿಸಬೇಕು ಎನ್ನುವ ಹಪಹಪಿತನ ಇವರನ್ನ ಬಣ್ಣದ ಲೋಕಕ್ಕೆ ಎಳೆದುಕೊಂಡು ಬಂದು ಬಿಟ್ಟಿತು. ಕೆಜಿಎಫ್ ಎನ್ನುವ ಕನ್ನಡದ ಹೆಮ್ಮೆಯ ಸಿನಿಮಾದಲ್ಲಿ ಅವಕಾಶವನ್ನೂ ಕೊಡಿಸಿತು. ಇಲ್ಲಿಂದ ಇವರ ನಸೀಬೇ ಬದಲಾಯ್ತು. ಲಕ್ಕಿ ಲಕ್ಷ್ಮಣ್ ‌ಆಗಿದ್ದವರು ರಾಜೇಂದ್ರ ದೇಸಾಯಿಯಾಗಿ ಬದಲಾದರು. ಕೆಜಿಎಫ್ ಮೂಲಕ ಗಡಿದಾಟಿ‌ ಬೆಳೆದರು. ಒಂದೇ ಚಿತ್ರದಲ್ಲಿ ನೇಮು- ಫೇಮು ಹೆಚ್ಚಿಸಿಕೊಂಡರು. ಕಲಾವಿದನಾಗುವ ಕನಸಿಗೆ ಕಿಚ್ಚು ಹಚ್ಚಿಕೊಂಡಿದ್ದಕ್ಕೆ ಕೆಜಿಎಫ್ ಪಾರ್ಟ್ 2 ನಲ್ಲಿ ಕಂಟಿನ್ಯೂ ಆದರು. ಈಗ ಬಿಡುಗಡೆಗಾಗಿ ಇಡೀ ವಿಶ್ವದ ಜೊತೆ ಇವರು ಕಾಯ್ತಿದ್ದಾರೆ. ಈ ಮಧ್ಯೆ ಕನ್ನಡದ ಬಹುನಿರೀಕ್ಷೆಯ ಕಬ್ಜ ಚಿತ್ರಕ್ಕೆ ಸೇರಿಕೊಂಡಿದ್ದಾರೆ.

ಕೆಜಿಎಫ್ ಅಂಗಳದಲ್ಲಿ ಡಾನ್ ಆಗಿ ಅಬ್ಬರಿಸಿದ ಲಕ್ಕಿ ಲಕ್ಷ್ಮಣ್, ಕಬ್ಜ ಕೋಟೆಯಲ್ಲಿ ಏನಾಗಲಿದ್ದಾರೆ? ಇವರ ಪಾತ್ರವೇನು? ರಿಯಲ್ ಸ್ಟಾರ್ ವಿರುದ್ದ ತೊಡೆ ತಟ್ಟುತ್ತಾರಾ ಅಥವಾ ಕಿಚ್ಚನ ಜೊತೆ ಕೈಜೋಡಿಸ್ತಾರಾ? ಹೇಗಿರಲಿದೆ ಕೆಜಿಎಫ್ ಕಿಂಗ್ ಪಿನ್ ರಾಜೇಂದ್ರ ದೇಸಾಯಿಯ ಹೊಸ ಅವತಾರ ಹಾಗೂ ಅಬ್ಬರ? ಈ ಕೂತೂಹಲಕ್ಕೆ ನಿರ್ದೇಶಕ ಆರ್ ಚಂದ್ರು ಅವರು ಬ್ರೇಕ್ ಹಾಕಿಲ್ಲ‌. ಬದಲಾಗಿ, ಕಬ್ಜ ಕೋಟೆಗೆ ಲಕ್ಕಿ ಲಕ್ಷ್ಮಣ್‌ರನ್ನು ಸ್ವಾಗತಿಸಿದ್ದಾರೆ. ಅವರೊಟ್ಟಿಗೆ ಕೆಲಸ ಮಾಡಲು ಖುಷಿ ಹಾಗೂ ಕಾತುರತೆ ಇರೋದಾಗಿ ಸೋಷಿಯಲ್ ಮೀಡಿಯಾ ದಲ್ಲಿ ಅನೌನ್ಸ್ ಮಾಡಿದ್ದಾರೆ. ಅಂದ್ಹಾಗೇ, ಕಬ್ಜ ಸಾಮ್ರಾಜ್ಯ ದೊಡ್ಡದಾಗುತ್ತಿದೆ. ಒಬ್ಬರ ನಂತರ ಒಬ್ಬರು ಕಬ್ಜ ಕೋಟೆಗೆ ಲಗ್ಗೆ ಇಡುತ್ತಿದ್ದಾರೆ.


ರಿಯಲ್ ಸ್ಟಾರ್ ಉಪೇಂದ್ರ ನಾಯಕತ್ವದ ಕೋಟೆಯಲ್ಲಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ರ ಘರ್ಜನೆ ಜೋರಾಗಿರಲಿದೆ. ವಿಷ್ಣು ದಾದಾ ಮುಂದೆ ಗುಡುಗಿದ್ದ ಬಿಟೌನ್ ನವಾಬ್ ಷಾ ಮತ್ತೆ ಕನ್ನಡಕ್ಕೆ ಅಭಿನಯಿಸಿದ್ದರು ಕಬ್ಜ ಚಿತ್ರತಂಡ ಸೇರಿಕೊಂಡಿದ್ದಾರೆ. ಈಗ ಕೆಜಿಎಫ್ ಕಿಂಗ್ ಫಿನ್ ರಾಜೇಂದ್ರ ದೇಸಾಯಿ ಆಗಮನವಾಗಿದೆ. ಕಬೀರ್ ದುಹಾನ್ ಸಿಂಗ್, ಪ್ರದೀಪ್ ರಾವತ್, ಸಮುದ್ರಕಣಿ, ಪ್ರಕಾಶ್ ರಾಜ್, ಡ್ಯಾನೀಶ್ ಸೇಠ್, ಅನುಪ್ ರೇವಣ್ಣ ಸೇರಿದಂತೆ ಅತೀ ದೊಡ್ಡ ತಾರಾಬಳಗ ಚಿತ್ರದಲ್ಲಿದೆ. ಒಬ್ಬೊಬ್ಬರಾಗಿ ಕಬ್ಜ ಕಿಂಗ್ ಡಮ್ ಪ್ರವೇಶ ಮಾಡುತ್ತಿದ್ದು, ಸೋಷಿಯಲ್ ಮೀಡಿಯಾ ಮೂಲಕವೇ ಡೈರೆಕ್ಟರ್ ಬಡಾ ಬ್ರೇಕಿಂಗ್ ನ್ಯೂಸ್ ಗಳನ್ನು ನೀಡುತ್ತಿದ್ದಾರೆ.

‘ಕಬ್ಜ’ ಕನ್ನಡದ ಹೆಮ್ಮೆಯ ಸಿನಿಮಾ ಆಗಲಿದೆ, ಗಂಧದಗುಡಿಯ ಕೀರ್ತಿಯನ್ನು ಹೆಚ್ಚಿಸಲಿದೆ, ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ‌ ಹೊಸದೊಂದು‌‌ ಮೈಲುಗಲ್ಲು ಸೃಷ್ಟಿಸಲಿದೆ ಎನ್ನುವ ಸೂಚನೆ ಈಗಾಗಲೇ ಸಿಕ್ಕಿದೆ.‌‌ ದೊಡ್ಡ ದೊಡ್ಡ ಸೂಪರ್ ಸ್ಟಾರ್ ಗಳು ಕಬ್ಜ ಕೋಟೆಯಲ್ಲಿದ್ದಾರೆ ಎನ್ನುವುದು ನಿರೀಕ್ಷೆಯ ಮೂಲ ಕಾರಣವಾದರೆ, ಕಣ್ಣಿಗೆ ಹೊಡೆಯುವಂತಹ ಮೇಕಿಂಗ್, ಒಂದೊಂದು‌ ಫ್ರೇಮ್ ನಲ್ಲಿ ಎದ್ದುಕಾಣುವ ಅದ್ದೂರಿತನ ಸಿನಿಮಾ ಪ್ರೇಮಿಗಳನ್ನು ಸರಕ್ಕನೆ ತಿರುಗಿ‌ ನೋಡುವಂತೆ ಮಾಡ್ತಿದೆ.‌ ಕಬ್ಜ ಕೋಟೆ ಸಕಲರನ್ನೂ ಸೆಳೆಯುತ್ತಿದೆ. ಸದ್ಯ, ಬೆಂಗಳೂರಿನ ಮಿನರ್ವ ಮಿಲ್‌ನಲ್ಲಿ ಚಿತ್ರೀಕರಣ ಭರದಿಂದ ಸಾಗುತ್ತಿದೆ, ಹೈದ್ರಬಾದ್ ಹಾಗೂ ಫಾರಿನ್ ನಲ್ಲೂ ಶೂಟಿಂಗ್ ಪ್ಲ್ಯಾನ್ ಆಗಿದೆ. ಕೆಜಿಎಫ್ ನಂತರ ಕನ್ನಡದ ಕೀರ್ತಿಪತಾಕೆಯನ್ನು ಹೊರದೇಶದಲ್ಲಿ ಹಾರಿಸಬೇಕು ಎನ್ನುವ ಹುಮ್ಮಸ್ಸು ಹಾಗೂ ಹುರುಪಿನಿಂತ ಇಡೀ ಕಬ್ಜ ಟೀಮ್ ಬೆವರು ಸುರಿಸಿ ಕೆಲಸ ಮಾಡ್ತಿದೆ. ಶ್ರಮವಹಿಸಿ ದುಡಿಯುತ್ತಿರುವ ತಂಡಕ್ಕೆ ಶುಭವಾಗಬೇಕು ಅಲ್ಲವೇ.


ವಿಶಾಲಾಕ್ಷಿ, ಎಂಟರ್ ಟೈನ್ಮೆಂಟ್ ಬ್ಯೂರೋ‌ ಸಿನಿಲಹರಿ

Categories
ಸಿನಿ ಸುದ್ದಿ

ಕೋಟಿಗೊಬ್ಬನ ಸಂಭ್ರಮ

ಸುದೀಪ್ ನಟನೆಯ ಕೋಟಿಗೊಬ್ಬ3 ರಾಜ್ಯಾದ್ಯಂತ ಯಶಸ್ವೀ ಪ್ರದರ್ಶನ ಕಾಣುತ್ತಿದೆ. ಎಲ್ಲೆಡೆ ಸಂಭ್ರಮವಿದೆ. ಚಿತ್ರತಂಡ ಕೂಡ ಖುಷಿ ಹಂಚಿಕೊಂಡಿದೆ.

ಅಂದು ಸಂಭ್ರಮ ಜೊತೆ ಕಲಾವಿದ, ತಂತ್ರಜ್ಞರ ಗೆಲುವಿನ ಮಾತುಗಳೇ ಹರಿದುಬಂದವು. ಚಿತ್ರದ ಹಾಡುಗಳಿಗೆ ಹೆಜ್ಜೆ ಹಾಕಿದ್ದು ವಿಶೇಷವಾಗಿತ್ತು.
ನಟ ಉಪೇಂದ್ರ ಕೂಡ ಈ ಕಾರ್ಯಕ್ರದಲ್ಲಿ ಪಾಲ್ಗೊಂಡು ಶುಭ ಹಾರೈಸಿದ್ದು ಹೈಲೆಟ್. ಈ ವೇಳೆ ನಿರ್ಮಾಪಕ ಸೂರಪ್ಪಬಾಬು ಭಾವುಕರಾದರು. ಈ ವೇಳೆ ಮಾತಿಗಿಳಿದ ಅವರು, ನಾನು ಈವರೆಗೆ ನಿರ್ಮಿಸಿದ ಯಾವುದೇ ಚಿತ್ರದ ಡೇಟ್ ಅನೌನ್ಸ್ ಮಾಡಿದ ಮೇಲೆ ಮುಂದೆ ಹಾಕಿದ್ದಿಲ್ಲ, ಇದೇ ಮೊದಲ ಬಾರಿಗೆ ನನ್ನ ಸಿನಿಮಾ ತಡೆಯುವ ಪ್ರಯತ್ನ ನಡೆಯಿತು, ಈ ಸಂದರ್ಭದಲ್ಲಿ ಕಾಲ್ ಮಾಡಿದ ಸುದೀಪ್, ನಾನಿದ್ದೀನಿ, ಏನೇ ಇದ್ದರೂ ನಾನು ನೋಡಿಕೊಳ್ತೇನೆ, ಧೈರ್ಯವಾಗಿರಿ ಎಂದು ಧೈರ್ಯ ತುಂಬಿದರು. ಇಷ್ಟು ವರ್ಷ ನಾನು ಉಳಿಸಿಕೊಂಡು ಬಂದಿದ್ದ ಗೌರವಕ್ಕೆ ಧಕ್ಕೆಯಾಯಿತು. ನನ್ನ ಮಗಳೂ ಸಹ ಕಾಲ್‌ಮಾಡಿ ಧೈರ್ಯ ತುಂಬಿದ್ದರಿಂದ ನಾನಿಲ್ಲಿ ನಿಂತಿದ್ದೇನೆ, ಜಾಕ್‌ಮಂಜು, ಸೈಯದ್ ಸಲಾಂ, ಗಂಗಾಧರ್ ಇವರೆಲ್ಲ ನನಗೆ ಹೆಗಲಾಗಿ ನಿಂತಿದ್ದರಿಂದ ಸಿನಿಮಾ ಬಿಡುಗಡೆಯಾಯಿತು. ಸುದೀಪ್ ಜೊತೆ ನಾನೇನೇ ಜಗಳ ಆಡಿದ್ದರೂ ಅದು ಸಿನಿಮಾಗಾಗಿ ಮಾತ್ರ, ಅವರು ಮುಂದೆ ನನಗೆ ಕಾಲ್‌ಶೀಟ್ ಕೊಡುತ್ತಾರೋ ಇಲ್ವೋ ಗೊತ್ತಿಲ್ಲ, ಆದರೆ, ನನ್ನ ಜೀವ ಇರೋವರ‍್ಗೂ ಅವರಿಗೆ ಕೃತಜ್ಞನಾಗಿರುತ್ತೇನೆ. ಈ ಕಾರ್ಯಕ್ರಮವನ್ನು ಶ್ರೇಯಸ್ ಮೀಡಿಯಾ ಪರವಾಗಿ ಮಿತ್ರ ನವರಸನ್ ಆಯೋಜಿಸಿದ್ದಾರೆ, ಅವರಿಂದ ಕನ್ನಡ ಚಿತ್ರಗಳ ಪ್ರೊಮೋಷನ್‌ಗೆ ತುಂಬಾ ಹೆಲ್ಪ್ ಆಗುತ್ತಿದೆ, ಎಲ್ಲರೂ ಅವರನ್ನು ಬಳಸಿಕೊಳ್ಳಬೇಕು ಎಂದು ಹೇಳಿದರು.

ಮಾತಿಗಿಳಿದ ಸುದೀಪ್, ಕೊನೇ ಗಳಿಗೆಯಲ್ಲಿ ಬಾಬು ಅವರಿಗೆ ಕರೆಮಾಡಿ ನಾನಿದ್ದೀನಿ ಅಂತ ಹೇಳಬೇಕಾದರೆ ಅದಕ್ಕೆ ಕಾರಣ ನಾನಲ್ಲ, ನಾನಿಷ್ಟು ವರ್ಷ ಸಂಪಾದಿಸಿದ್ದ ಸ್ನೇಹಿತರ ಬಳಗ, ಅವರಿಗೆ ನಾನಿಲ್ಲಿ ಥ್ಯಾಂಕ್ಸ್ ಹೇಳುತ್ತೇನೆ. ಸಿನಿಮಾ ಒಂದು ಪೇಂಟಿಂಗ್, ಅದು ಇಷ್ಟು ಚೆನ್ನಾಗಿ ಬರಬೇಕಾದರೆ ಶಿವಕಾರ್ತೀಕ್, ಗೆಳೆಯ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ, ಕಲಾವಿದರಾದ ರವಿಶಂಕರ್, ಮಡೊನ್ನ, ಆಶಿಕಾ ಅಲ್ಲದೆ ಇನ್ನೂ ಅನೇಕರು ಈ ಸಕ್ಸಸ್‌ನಲ್ಲಿ ಪಾಲುದಾರರು ಎಂದ ಅವರು, ಪೈರಸಿ ಬಗ್ಗೆ ಎಷ್ಟೇ ಮುನ್ನೆಚ್ಚರಿಕೆ ವಹಿಸಿದ್ರೂ ಕೆಲವರು ಅದನ್ನು ಮಾಡಿದರು. ಎಲ್ಲಕಡೆ ಕೆಟ್ಟ ಜನ ಇದ್ದೇ ಇರುತ್ತಾರೆ, ಅವರ ಬಗ್ಗೆ ತಲೆ ಕೆಡಿಸಿಕೊಳ್ಳಬಾರದು ಅಷ್ಟೆ.

ನಮ್ಮತಂಡ ಹಗಲು ರಾತ್ರಿ ಕಷ್ಟಪಟ್ಟು ಸಾಕಷ್ಟು ಲಿಂಕ್‌ಗಳನ್ನು ಡಿಲೀಟ್ ಮಾಡಿಸಿದೆ. ಈ ಹಂತದಲ್ಲಿ ಗಿರೀಶ್ ಅವರ ಶ್ರಮವನ್ನು ಮೆಚ್ಚಲೇಬೇಕು, ಜನರಿಗೂ ಅಷ್ಟೇ, ಈಗಾಗಲೇ ಎರಡು ವರ್ಷದಿಂದ ಮೊಬೈಲ್, ಟಿವಿಯಲ್ಲಿ ಸಿನಿಮಾಗಳನ್ನು ನೋಡಿದ್ದೀರಿ. ಈಗಲಾದರೂ ಅದರಿಂದ ಹೊರಬಂದು ಚಿತ್ರಮಂದಿರದಲ್ಲಿ ಸಿನಿಮಾನೋಡಿ. ಮೊಬೈಲಿನಲ್ಲಿ ನೋಡುವುದಕ್ಕೂ, ಥಿಯೇಟರಿನಲ್ಲಿ ಸಿನಿಮಾ ನೋಡುವುದಕ್ಕೂ ವ್ಯತ್ಯಾಸ ಏನೆಂಬುದನ್ನೇ ನೀವೇ ಕಂಡುಕೊಳ್ಳಿ. ಅಲ್ಲದೆ ಕಲೆಕ್ಷನ್ ಅನ್ನೋದು ನನಗೆ ಮಾನದಂಡ ಆಗಿಲ್ಲ. ನಿರ್ಮಾಪಕರು ಖುಷಿಯಾಗಿದ್ದಾರೆ, ವಿತರಕರು ಖುಷಿಯಾಗಿದ್ದಾರೆ. ನನಗೆ ಅಷ್ಟು ಸಾಕು. ನಿರ್ಮಾಪಕರು ಕಲೆಕ್ಷನ್ ಬಗ್ಗೆ ಏನಾದರೂ ಹೇಳಿದರೆ ನಾನು ಅದನ್ನು ಅನುಮೋದಿಸಬಹುದು ಎಂದು ಸುದೀಪ್ ಹೇಳಿದರು.

ಉಪೇಂದ್ರ ಮಾತನಾಡಿ, ಸುದೀಪ್ ಹೆಸರಿನಲ್ಲೆ ಕಿಚ್ಚು ಇದೆ, ಅವರು ತಮ್ಮ ಜೊತೆ ಕೆಲಸ ಮಾಡೋರಿಗೆಲ್ಲ ಕಿಚ್ಚು ಹಚ್ಚಿಬಿಡ್ತಾರೆ ಎಂದರು. ನಾಯಕಿ ಮಡೋನ್ನ, ಅಭಿರಾಮಿ. ಬೇಬಿ ಆದ್ಯ, ರವಿಶಂಕರ್‌ಗೌಡ ಸೇರಿದಂತೆ ಚಿತ್ರತಂಡದ ಸದಸ್ಯರು ಇದ್ದರು.

Categories
ಸಿನಿ ಸುದ್ದಿ

ಕನ್ನಡಕ್ಕೊಂದು ಸ್ಪೆಷಲ್ ಗಿಫ್ಟ್ ! ಮದ್ವೆ ಸಮಾಚಾರ ಕೊಡ್ತಾರೆ ವಿಕ್ರಮ್ ಪ್ರಭು !

ಕನ್ನಡದಲ್ಲಿ ವಿಭಿನ್ನ ಶೀರ್ಷಿಕೆ ಇರುವ ಸಿನಿಮಾಗಳು ಬಂದಿವೆ. ಆ ಸಾಲಿಗೆ ಈಗ ‘ವೆಡ್ಡಿಂಗ್ ಗಿಫ್ಟ್’ ಸಿನಿಮಾನೂ ಸೇರಿದೆ. ಶೀರ್ಷಿಕೆಯೇ ಹೇಳುವಂತೆ, ಇದೊಂದು ಮಜವಾದ ಕಥೆ ಹೊಂದಿರುವ ಚಿತ್ರ. ಚಿತ್ರಕ್ಕೆ ನಿಶಾನ್ ನಾಣಯ್ಯ ಹೀರೋ. ಸೋನು ಗೌಡ ನಾಯಕಿ. ವಿಶೇಷ ಪಾತ್ರದಲ್ಲಿ ಪ್ರೇಮ ಇದ್ದಾರೆ…

ವಿಕ್ರಂಪ್ರಭು ನಿರ್ಮಿಸಿ, ನಿರ್ದೇಶಿಸುತ್ತಿರುವ “ವೆಡ್ಡಿಂಗ್ ಗಿಫ್ಟ್” ಚಿತ್ರದ ಚಿತ್ರೀಕರಣ ನವೆಂಬರ್ 15 ರಿಂದ ಆರಂಭವಾಗಲಿದೆ. ಬೆಂಗಳೂರು, ಉಡುಪಿ, ಮಂಗಳೂರು, ಮೈಸೂರು ಮುಂತಾದ ಕಡೆ ಚಿತ್ರೀಕರಣ ನಡೆಯಲಿದೆ.

ನಿಶಾನ್ ನಾಣಯ್ಯ ಈ ಚಿತ್ರದ ನಾಯಕನಾಗಿ ನಟಿಸುತ್ತಿದ್ದು, ಸೋನು ಗೌಡ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ವಿಶೇಷ ಪಾತ್ರದಲ್ಲಿ ಪ್ರೇಮ(ಓಂ ಖ್ಯಾತಿ) ಕಾಣಿಸಿಕೊಳ್ಳಲಿದ್ದಾರೆ. ಪವಿತ್ರ ಲೋಕೇಶ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

ಈ ಚಿತ್ರದ ಸಲುವಾಗಿ ನಿಶಾನ್ ನಾಣಯ್ಯ, ಸೋನು ಗೌಡ ಹಾಗೂ ಪ್ರೇಮ ಅವರ ಫೋಟೊ ಶೂಟ್ ಅದ್ದೂರಿಯಾಗಿ ನಡೆಯಿತು.

ಇಪ್ಪತ್ತು ವರ್ಷಗಳಿಂದ ಸೇಲ್ಸ್ ಹಾಗೂ ಸ್ಟಾಕ್ ಮಾರ್ಕೆಟಿಂಗ್ ನಲ್ಲಿ ಅನುಭವ‌ ಹೊಂದಿರುವ ನಿರ್ದೇಶಕ ವಿಕ್ರಂಪ್ರಭು ಮೂಲತಃ ಮಂಗಳೂರಿನವರು. ಈಗ ಪುಣೆಯಲ್ಲಿ ವಾಸ. ಕಾನ್ಫಿಡದಲ್ಲಿ ನಿರ್ದೇಶನ ತರಬತಿ ಹಾಗೂ ZIMA ದಲ್ಲಿ ಸಂಕಲನ ಕಾರ್ಯದ ಬಗ್ಗೆ ತಿಳಿದುಕೊಂಡಿರುವ ಅವರು,
ಹಿರಿಯ ನಿರ್ದೇಶಕ ಎಸ್ ವಿ ರಾಜೇಂದ್ರಸಿಂಗ್ ಬಾಬು ಅವರ ಬಳಿ ಕಾರ್ಯ ನಿರ್ವಹಿಸಿದ್ದಾರೆ.

ಈ ಚಿತ್ರಕ್ಕೆ ನಿರ್ದೇಶಕರು, ಕಥೆ ಬರೆದಿದ್ದು, ಚಿತ್ರಕಥೆ ಹಾಗೂ ಸಂಭಾಷಣೆಯನ್ನು ಸಂಜಯ್ ಶರ್ಮ, ಅಭಯ್ ದೇವ್ ಪುರಿ, ಅಶೀಶ್ ಪಾವಸ್ಕರ್ ಬರೆದಿದ್ದಾರೆ. ಸತೀಶ್ ಹೆಚ್ ವಿ ಹಾಗೂ ಆಂಟೋನಿ ಎಮ್ ಈ ಚಿತ್ರದ ಸಹ ನಿರ್ದೇಶಕರು.

ಮೂರು ಹಾಡುಗಳಿದ್ದು, ಬಾಲಚಂದ್ರ ಪ್ರಭು ಸಂಗೀತ ನೀಡಲಿದ್ದಾರೆ. ಖ್ಯಾತ ಸಾಹಿತಿ ಜಯಂತ ಕಾಯ್ಕಿಣಿ ಅವರ ಗೀತರಚನೆ ಹಾಗೂ ಉದಯಲೀಲ ಅವರ ಛಾಯಾಗ್ರಹಣ “ವೆಡ್ಡಿಂಗ್ ಗಿಫ್ಟ್” ಚಿತ್ರಕ್ಕಿರಲಿದೆ.

Categories
ಸಿನಿ ಸುದ್ದಿ

ಸಿಲಿಕಾನ್ ಸಿಟಿಗೆ ಬಂದಿಳಿದರಾ ಮೋಹಕತಾರೆ ರಮ್ಯಾ? ಅಣ್ಣಾವ್ರ ನೆನಪಲ್ಲಿ-ಸಿಟಿ ರೌಂಡ್ಸ್ !

ದಿಲ್ಲಿ ಮೇಡಂ ರಮ್ಯಾ ಸೈಲೆಂಟಾಗಿ ಸಿಲಿಕಾನ್ ಸಿಟಿಗೆ ಬಂದಿಳಿದ್ರಾ? ಫ್ಯಾನ್ಸ್ಗೆ ಸಪ್ರೈಸ್ ಕೊಡೋದಕ್ಕೆ ಫ್ಲೈಟ್ ಏರಿ ಬಂದು ರಾಜಧಾನಿಯಲ್ಲಿ ಲ್ಯಾಂಡ್ ಆದ್ರಾ? ಗೆಸ್ಟ್ ಆಗಿ ಬಂದಿದ್ದಾರಾ ಅಥವಾ ಬೆಂಗಳೂರಿನಲ್ಲೇ ಸೆಟ್ಲ್ ಆಗ್ತಾರಾ? ಸದ್ಯಕ್ಕೆ ಎಲ್ಲಿದ್ದಾರೆ? ಕೆಂಪೇಗೌಡ ಅಖಾಡಕ್ಕೆ ಬಂದಾಕ್ಷಣ ರಮ್ಯಾ ಮೇಡಂ, ಅಣ್ಣಾವ್ರ ನೆನಪಲ್ಲಿ-ಖುಷಿಖುಷಿಯಲ್ಲಿ ಸಿಟಿ ರೌಂಡ್ಸ್ ಮಾಡಿದ್ದು ಎಲ್ಲೆಲ್ಲಿ? ಈ ಎಲ್ಲಾ ಪ್ರಶ್ನೆಗಳು ಒಮ್ಮೆಲೆ ಹುಟ್ಟುವುದಕ್ಕೆ ಕಾರಣ ಮೋಹಕತಾರೆಯ ಇನ್ಸ್ಟಾಗ್ರಾಮ್ ಸ್ಟೇಟಸ್

ರಮ್ಯಾ.. ಕೇವಲ ಎರಡೇ ಎರಡು ಅಕ್ಷರದ ಈ ಹೆಸರಿಗೆ ಅದರದ್ದೇ ಆದ ಗತ್ತಿದೆ ಮತ್ತು ತಾಕತ್ತಿದೆ. ಬಣ್ಣದ ಲೋಕದಿಂದ ದೂರ ಉಳಿದರೂ, ರಾಜಕೀಯದಿಂದ ಅಂತರ ಕಾಯ್ದುಕೊಂಡರೂ ಕೂಡ ಮೋಹಕತಾರೆ ರಮ್ಯಾ ಹೆಸರು ಪೆಪ್ಪರ್‌ಮೆಂಟ್ ತಿನ್ನೋರಿಂದ ಹಿಡಿದು ಪಾರ್ಲಿಮೆಂಟ್‌ನಲ್ಲಿ ಕೂಡುವವರ ಬಾಯಲೆಲ್ಲಾ ನಲಿದಾಡುತ್ತೆ. ದುನಿಯಾದಲ್ಲಿ ನಟಿ ರಮ್ಯಾ ಹವಾ ಹಿಂಗಿರುವಾಗ, ಬಜಾರ್‌ನಲ್ಲಿ ಬ್ರ್ಯಾಂಡ್ ಆಗಿರುವಾಗ, ಫೀಲ್ಡ್ ನಲ್ಲಿದ್ದರೇನು- ಫೀಲ್ಡ್ ನಲ್ಲಿಲ್ಲದಿದ್ದರೇನು ಸುದ್ದಿಯಾಗಲೆಬೇಕು ಸದ್ದು ಮಾಡ್ಲೆಬೇಕು. ಅದೇ ಕೆಲಸ ಸೋಷಿಯಲ್ ಲೋಕದಲ್ಲಿ ಭರದಿಂದ ಸಾಗ್ತಿದೆ.ಊರಿಗೊಬ್ಳೆ ಪದ್ಮಾವತಿ ಸೋಷಿಯಲ್ ಅಂಗಳದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿದ್ದಾರೆ.

ಈ ವಿಚಾರ ತಮಗೂ ಗೊತ್ತಿರುತ್ತೆ. ತನಗೆ ಅನಿಸಿದ್ದನ್ನು ನೇರಾನೇರಾ ಹೇಳುತ್ತಾ, ಟಾಂಗ್ ಕೊಡುತ್ತಾ, ಟೀಕೆ ಮಾಡುತ್ತಾ, ಬುದ್ದಿವಾದ ಹೇಳುತ್ತಾ ಸಕ್ರಿಯವಾಗಿರುವ ದಿಲ್ಲಿ ಮೇಡಂ, ಫ್ಯಾನ್ಸ್ ಜೊತೆ ಚಾಟ್ ಮಾಡುತ್ತಾ, ಸ್ಟೇಟಸ್ ಹಾಕುತ್ತಾ ಸೋಷಿಯಲ್ ಮೀಡಿಯಾದಲ್ಲೇ ಕ್ವಾಲಿಟಿ ಟೈಮ್‌ನ ಸ್ಪೆಂಡ್ ಮಾಡುತ್ತಾರೆ. ಅದೇ ರೀತಿ, ಕಳೆದ ಹದಿನೆಂಟು ಗಂಟೆಗಳ ಹಿಂದೆ ಅಪ್‌ಲೋಡ್ ಮಾಡಿರುವ ಸ್ಟೇಟಸ್, ಸ್ಯಾಂಡಲ್‌ವುಡ್ ಕ್ವೀನ್ ಸದ್ದಿಲ್ಲದೇ ಬೆಂಗಳೂರಿಗೆ ಬಂದಿಳಿದಿರಬಹುದು ಎನ್ನುವ ಹಿಂಟ್ ಕೊಡ್ತಿದೆ. ಅಣ್ಣಾವ್ರ ನೆನೆದು `ನಗುತಾ ನಗುತಾ ಬಾಳು ನೀನು ನೂರು ವರುಷ’ ಗೀತೆಯನ್ನು ಹಾಕಿಕೊಂಡು ಖುಷಿಖುಷಿಯಲ್ಲಿ ಸಿಟಿ ರೌಂಡ್ಸ್ ಹಾಕಿದ್ದಾರೆ. ಕಠಾರಿವೀರ ಸುರಸುಂದರಾಂಗನ ರಾಣಿಯ ರೌಂಡ್ಸ್ ನೋಡಿ ಫ್ಯಾನ್ಸ್ ಮಾತ್ರವಲ್ಲ ನೋಡುಗರೆಲ್ಲರೂ ಕೂಡ ಥ್ರಿಲ್ಲಾಗಿದ್ದಾರೆ.

ಕಳೆದ ಭಾರಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೇಸ್ ಸೋಲೊಪ್ಪಿಕೊಂಡ ಬೆನ್ನಲ್ಲೇ, ದಿಲ್ಲಿ ಮೇಡಂ ರಮ್ಯಾ ಅಜ್ಞಾತವಾಸಕ್ಕೆ ಹೋದರು. ಈ ಮಧ್ಯೆ ರಾತ್ರೋರಾತ್ರಿ ಮಂಡ್ಯಕ್ಕೆ ಬಂದು ಮನೆ ಖಾಲಿ ಮಾಡಿಸಿಕೊಂಡು ಹೋದರು. ಆ ಮೇಲೆ ದಿಲ್ಲಿಯಲ್ಲಿ ಸೆಟ್ಲ್ ಆದ್ರಾ ಅಥವಾ ಡೆಲ್ಲಿ ಬಿಟ್ಟು ಫಾರಿನ್‌ಗೆ ಹಾರಿದ್ರಾ ಗೊತ್ತಿಲ್ಲ? ಇನ್ಸ್ ಟಾಗ್ರಾಮ್ ಸ್ಟೇಟಸ್ ನೋಡಿದಾಗೆಲ್ಲಾ ಪದ್ಮಾವತಿ ಅದೆಲ್ಲೋ ಫಾರಿನ್‌ನಲ್ಲಿ ಟಂಗೂರಿದಂತೆ ಕಾಣ್ತಿತ್ತು. ಸೋಷಿಯಲ್ ಮೀಡಿಯಾದಲ್ಲಿ ಒಮ್ಮೆ ಲೈವ್ ಬಂದಾಗ ಕೊರೊನಾ ವ್ಯಾಕ್ಸಿನೇಷನ್ ಹಾಕಿಸಿಕೊಂಡಿಲ್ಲ. ಮೊಡೊರ್ನಾ ವ್ಯಾಕ್ಸಿನ್‌ಗಾಗಿ ಕಾಯ್ತಿದ್ದೀನಿ ಎಂದಾಗ ಅಕ್ಕ ಫಾರಿನ್‌ನಲ್ಲಿ ಇರಬೇಕು ಅಂತ ಎಲ್ಲರೂ ಅಂದುಕೊಂಡಿದ್ದರು. ಎಲ್ಲಾದರೂ ಇರಲಿ ಗೌರಮ್ಮ ಚೆನ್ನಾಗಿರಲಿ ಅಂತ ಫ್ಯಾನ್ಸ್ ಹಾರೈಸಿದ್ದರು. ಈಗ ಸದ್ದುಗದ್ದಲವಿಲ್ಲದೇ ಗೌರಮ್ಮ ರಾಜಧಾನಿಗೆ ಕಾಲಿಟ್ಟಿರುವಂತೆ ಕಾಣ್ತಿದೆ.

ಅಷ್ಟಕ್ಕೂ, ರಮ್ಯಕ್ಕ ರಾಜಧಾನಿಗೆ ಬಂದಿರಬಹುದು ಎನ್ನುವ ಸಂಶಯ ಬಂದಿದ್ದು ಸ್ಟೇಟಸ್‌ನಿಂದ. ಪದ್ಮಾವತಿ ಕ್ಯಾಪ್ಚರ್ ಮಾಡಿ ಅಪ್‌ಲೋಡ್ ಮಾಡಿರುವ ವಿಡಿಯೋ ನೋಡಿದರೆ ಹಂಡ್ರೆಂಡ್ ಪರ್ಸೆಂಟ್ ಅಕ್ಕ ಬೆಂಗಳೂರಿಗೆ ಎಂಟ್ರಿಕೊಟ್ಟಿದ್ದಾರೆ ಅನ್ಸುತ್ತೆ. ಒಂದ್ವೇಳೆ ಬಂದಿರುವುದು ನಿಜವಾದರೆ ಅವರ ಅಭಿಮಾನಿಗಳಿಗೆ ಅದಕ್ಕಿಂತ ಖುಷಿಯ ಸಂಗಂತಿ ಬೇರೊಂದಿಲ್ಲ ಬಿಡಿ. ಯಾಕಂದ್ರೆ, ಲಕ್ಕಿ ಬೆಡಗಿ ಫಿಲ್ಮ್ ಫೀಲ್ಡ್ ಗೆ ಕಮ್‌ಬ್ಯಾಕ್ ಮಾಡೋದು ಕೊಂಚ ತಡವಾಗಲಿ ಪರವಾಗಿಲ್ಲ ಆದರೆ ತವರಿಗೆ ಮರಳಬೇಕು ನಮ್ಮ ನಡುವೆ ನಮ್ಮಕ್ಕ ಇರಬೇಕು ಅಂತ ಅಭಿಮಾನಿ ದೇವರುಗಳೆಲ್ಲರೂ ಆಸೆ ಪಡ್ತಿದ್ದಾರೆ. ಅವರ ಬಯಕೆ ಈಡೇರಿಸುತ್ತಾರಾ? ಸಿಲಿಕಾನ್ ಸಿಟಿಯಲ್ಲೇನಾದರೂ ಸೆಟಲ್ ಆಗ್ತಾರಾ? ಬಣ್ಣ ಹಚ್ಚಿಕೊಂಡು ಗಾಂಧಿನಗರಕ್ಕೆ ಮರುಳುತ್ತಾರಾ? ಸಿಂಪಲ್‌ಸ್ಟಾರ್ ಅಪ್‌ಕಮ್ಮಿಂಗ್ ಚಿತ್ರಕ್ಕೆ ಹೀರೋಯಿನ್ ಆಗ್ತಾರಾ? ಈ ಎಲ್ಲಾ ಪ್ರಶ್ನೆಗೆ ಉತ್ತರವಿಲ್ಲ. ಯಾಕಂದ್ರೆ, ಗೌರಮ್ಮ ಕೆಂಪೇಗೌಡನ ಅಂಗಳಕ್ಕೆ ಬಂದಿರುವ ಸುದ್ದಿ ಇನ್ನೂ ಕನ್ಫರ್ಮ್ ಆಗಿಲ್ಲ. ಸೋ, ವೇಯ್ಟ್ ಅಂಡ್ ವಾಚ್ ಅಷ್ಟೇಯಾ.

ವಿಶಾಲಾಕ್ಷಿ, ಎಂಟರ್‌ಟೈನ್ಮೆಂಟ್ ಬ್ಯೂರೋ ಸಿನಿಲಹರಿ

error: Content is protected !!