ಕಬ್ಜ ಕೋಟೆಗೆ ಕೆಜಿಎಫ್ ಡಾನ್ ಲಗ್ಗೆ ; ಉಪ್ಪಿ- ಕಿಚ್ಚ ಎದುರು ತೊಡೆ ತಟ್ಟಿದ ‘ಕೆಜಿಎಫ್’ ಕಿಂಗ್ ಪಿನ್ ರಾಜೇಂದ್ರ ದೇಸಾಯಿ!

ತಾಜ್ ಮಹಲ್ ಸಾರಥಿ ಆರ್. ಚಂದ್ರು ಕಟ್ಟುತ್ತಿರುವ “ಕಬ್ಜ” ಕೋಟೆ ಮುಂದೊಂದು ದಿನ ದೊಡ್ಡ ಸಾಮ್ರಾಜ್ಯವಾಗಿ ಬೆಳೆದು‌ ನಿಲ್ಲುತ್ತೆ. ಇಡೀ ಜಗತ್ತು ಕಣ್ಣರಳಿಸಿ ನೋಡುವಂತಹ ಸಾಮ್ರಾಜ್ಯವಾಗುತ್ತೆ. ಅದರಲ್ಲಿ ಎರಡು‌ ಮಾತಿಲ್ಲ. ಯಾಕಂದ್ರೆ, ಗಾಂಧಿ‌ನಗರದ ಮಂದಿಗೆ ಯಾವತ್ತೋ ಹಾಲಿವುಡ್ ತೋರಿಸಿದವರು, ಕಾಲಿಟ್ಟ ಕಡೆಯಲೆಲ್ಲಾ ಮಾಣಿಕ್ಯನೇ ಸರೀ‌ ಎಂದೆನಿಸಿಕೊಂಡು ಬಾದ್ ಷಾ ಆಗಿ ಮೆರೆಯುತ್ತಿರುವವರು ‘ಕಬ್ಜ’ ಕಿಂಗ್ ಢಮ್ ಗೆ ಸೇರಿಕೊಂಡಿದ್ದಾರೆ. ಇವರಿಬ್ಬರು ಕಿಂಗ್ ಮೇಕರ್‌ಗಳಾದರೆ, ಕಿಂಗ್ ಫಿನ್ ಗಳು ಇರ್ಬೇಕಲ್ಲವೇ, ಅಪ್ ಕೋರ್ಸ್ ಇರಬೇಕು ಅಂತಾನೇ ನಿರ್ದೇಶಕ ಆರ್ ‌ಚಂದ್ರು ಅವರು ಖಡಕ್ ಖಳನಾಯಕರನ್ನು ಒಬ್ಬೊಬ್ಬರನ್ನಾಗಿ ಕಬ್ಜ ಕೋಟೆಗೆ ಕಳುಹಿಸಿಕೊಡ್ತಿದ್ದಾರೆ. ಬಿಟೌನ್ ನವಾಬ್ ಅಖಾಡಕ್ಕೆ ಎಂಟ್ರಿಕೊಟ್ಟ ಬೆನ್ನಲ್ಲೇ ಕೆಜಿಎಫ್ ಡಾನ್ ಆಗಮನವಾಗಿದೆ.

ಭಾರತೀಯ ಚಿತ್ರರಂಗ ಒಮ್ಮೆ ಹಿಂತಿರುಗಿ‌ ನೋಡಿದಂತಹ ಸಿನಿಮಾ ಕೆಜಿಎಫ್. ಇಂತಹ ಮಹೋನ್ನತ ಚಿತ್ರದಲ್ಲಿ ಅಭಿನಯಿಸಿ ಜಗತ್ತು ಸುತ್ತಿಬಂದ ಖಳನಾಯಕ ಈಗ ಕಬ್ಜ ಕೋಟೆಗೆ ಲಗ್ಗೆ ಇಟ್ಟಿದ್ದಾರೆ. ನಿರ್ದೇಶಕ ಆರ್ ಚಂದ್ರು ಅವರು ಕೆಜಿಎಫ್ ಡಾನ್ ಗೆ ರತ್ನಗಂಬಳಿ ಹಾಕಿ‌ ಬರಮಾಡಿಕೊಂಡಿದ್ದಾರೆ. ಅಷ್ಟಕ್ಕೂ, ಖಳ್ ನಾಯಕ್ ಬೇರಾರು ಅಲ್ಲ ‘ಕೆಜಿಎಫ್ ‘ ಚಿತ್ರದಲ್ಲಿ ರಾಕಿಭಾಯ್ ಎದುರು ಧಗಧಗಿಸಿದ ರಾಜೇಂದ್ರ ದೇಸಾಯಿ ಅಲಿಯಾಸ್ ಲಕ್ಕಿ ಲಕ್ಷ್ಮಣ್. ಲಕ್ಕಿ‌ಲಕ್ಣ್ಮಣ್ ಮೂಲ ಹೆಸರು. ಮೂಲತಃ ಮೈಸೂರಿನವರು. ಸಾಫ್ಟ್‌ವೇರ್ ಕಂಪೆನಿಯಲ್ಲಿ ಸಾವಿರಾರು ಉದ್ಯೋಗಿಗಳಿಗೆ ಇವರೇ ಬಾಸ್. ಕೈತುಂಬಾ ಕಾಸು.
ಹೀಗಿದ್ರೂ ಸಿನಿಮಾದ ಸೆಳೆತ, ಬಿಗ್ ಸ್ಕ್ರೀನ್ ಮೇಲೆ ಧಗಧಗಿಸಬೇಕು ಎನ್ನುವ ಹಪಹಪಿತನ ಇವರನ್ನ ಬಣ್ಣದ ಲೋಕಕ್ಕೆ ಎಳೆದುಕೊಂಡು ಬಂದು ಬಿಟ್ಟಿತು. ಕೆಜಿಎಫ್ ಎನ್ನುವ ಕನ್ನಡದ ಹೆಮ್ಮೆಯ ಸಿನಿಮಾದಲ್ಲಿ ಅವಕಾಶವನ್ನೂ ಕೊಡಿಸಿತು. ಇಲ್ಲಿಂದ ಇವರ ನಸೀಬೇ ಬದಲಾಯ್ತು. ಲಕ್ಕಿ ಲಕ್ಷ್ಮಣ್ ‌ಆಗಿದ್ದವರು ರಾಜೇಂದ್ರ ದೇಸಾಯಿಯಾಗಿ ಬದಲಾದರು. ಕೆಜಿಎಫ್ ಮೂಲಕ ಗಡಿದಾಟಿ‌ ಬೆಳೆದರು. ಒಂದೇ ಚಿತ್ರದಲ್ಲಿ ನೇಮು- ಫೇಮು ಹೆಚ್ಚಿಸಿಕೊಂಡರು. ಕಲಾವಿದನಾಗುವ ಕನಸಿಗೆ ಕಿಚ್ಚು ಹಚ್ಚಿಕೊಂಡಿದ್ದಕ್ಕೆ ಕೆಜಿಎಫ್ ಪಾರ್ಟ್ 2 ನಲ್ಲಿ ಕಂಟಿನ್ಯೂ ಆದರು. ಈಗ ಬಿಡುಗಡೆಗಾಗಿ ಇಡೀ ವಿಶ್ವದ ಜೊತೆ ಇವರು ಕಾಯ್ತಿದ್ದಾರೆ. ಈ ಮಧ್ಯೆ ಕನ್ನಡದ ಬಹುನಿರೀಕ್ಷೆಯ ಕಬ್ಜ ಚಿತ್ರಕ್ಕೆ ಸೇರಿಕೊಂಡಿದ್ದಾರೆ.

ಕೆಜಿಎಫ್ ಅಂಗಳದಲ್ಲಿ ಡಾನ್ ಆಗಿ ಅಬ್ಬರಿಸಿದ ಲಕ್ಕಿ ಲಕ್ಷ್ಮಣ್, ಕಬ್ಜ ಕೋಟೆಯಲ್ಲಿ ಏನಾಗಲಿದ್ದಾರೆ? ಇವರ ಪಾತ್ರವೇನು? ರಿಯಲ್ ಸ್ಟಾರ್ ವಿರುದ್ದ ತೊಡೆ ತಟ್ಟುತ್ತಾರಾ ಅಥವಾ ಕಿಚ್ಚನ ಜೊತೆ ಕೈಜೋಡಿಸ್ತಾರಾ? ಹೇಗಿರಲಿದೆ ಕೆಜಿಎಫ್ ಕಿಂಗ್ ಪಿನ್ ರಾಜೇಂದ್ರ ದೇಸಾಯಿಯ ಹೊಸ ಅವತಾರ ಹಾಗೂ ಅಬ್ಬರ? ಈ ಕೂತೂಹಲಕ್ಕೆ ನಿರ್ದೇಶಕ ಆರ್ ಚಂದ್ರು ಅವರು ಬ್ರೇಕ್ ಹಾಕಿಲ್ಲ‌. ಬದಲಾಗಿ, ಕಬ್ಜ ಕೋಟೆಗೆ ಲಕ್ಕಿ ಲಕ್ಷ್ಮಣ್‌ರನ್ನು ಸ್ವಾಗತಿಸಿದ್ದಾರೆ. ಅವರೊಟ್ಟಿಗೆ ಕೆಲಸ ಮಾಡಲು ಖುಷಿ ಹಾಗೂ ಕಾತುರತೆ ಇರೋದಾಗಿ ಸೋಷಿಯಲ್ ಮೀಡಿಯಾ ದಲ್ಲಿ ಅನೌನ್ಸ್ ಮಾಡಿದ್ದಾರೆ. ಅಂದ್ಹಾಗೇ, ಕಬ್ಜ ಸಾಮ್ರಾಜ್ಯ ದೊಡ್ಡದಾಗುತ್ತಿದೆ. ಒಬ್ಬರ ನಂತರ ಒಬ್ಬರು ಕಬ್ಜ ಕೋಟೆಗೆ ಲಗ್ಗೆ ಇಡುತ್ತಿದ್ದಾರೆ.


ರಿಯಲ್ ಸ್ಟಾರ್ ಉಪೇಂದ್ರ ನಾಯಕತ್ವದ ಕೋಟೆಯಲ್ಲಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ರ ಘರ್ಜನೆ ಜೋರಾಗಿರಲಿದೆ. ವಿಷ್ಣು ದಾದಾ ಮುಂದೆ ಗುಡುಗಿದ್ದ ಬಿಟೌನ್ ನವಾಬ್ ಷಾ ಮತ್ತೆ ಕನ್ನಡಕ್ಕೆ ಅಭಿನಯಿಸಿದ್ದರು ಕಬ್ಜ ಚಿತ್ರತಂಡ ಸೇರಿಕೊಂಡಿದ್ದಾರೆ. ಈಗ ಕೆಜಿಎಫ್ ಕಿಂಗ್ ಫಿನ್ ರಾಜೇಂದ್ರ ದೇಸಾಯಿ ಆಗಮನವಾಗಿದೆ. ಕಬೀರ್ ದುಹಾನ್ ಸಿಂಗ್, ಪ್ರದೀಪ್ ರಾವತ್, ಸಮುದ್ರಕಣಿ, ಪ್ರಕಾಶ್ ರಾಜ್, ಡ್ಯಾನೀಶ್ ಸೇಠ್, ಅನುಪ್ ರೇವಣ್ಣ ಸೇರಿದಂತೆ ಅತೀ ದೊಡ್ಡ ತಾರಾಬಳಗ ಚಿತ್ರದಲ್ಲಿದೆ. ಒಬ್ಬೊಬ್ಬರಾಗಿ ಕಬ್ಜ ಕಿಂಗ್ ಡಮ್ ಪ್ರವೇಶ ಮಾಡುತ್ತಿದ್ದು, ಸೋಷಿಯಲ್ ಮೀಡಿಯಾ ಮೂಲಕವೇ ಡೈರೆಕ್ಟರ್ ಬಡಾ ಬ್ರೇಕಿಂಗ್ ನ್ಯೂಸ್ ಗಳನ್ನು ನೀಡುತ್ತಿದ್ದಾರೆ.

‘ಕಬ್ಜ’ ಕನ್ನಡದ ಹೆಮ್ಮೆಯ ಸಿನಿಮಾ ಆಗಲಿದೆ, ಗಂಧದಗುಡಿಯ ಕೀರ್ತಿಯನ್ನು ಹೆಚ್ಚಿಸಲಿದೆ, ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ‌ ಹೊಸದೊಂದು‌‌ ಮೈಲುಗಲ್ಲು ಸೃಷ್ಟಿಸಲಿದೆ ಎನ್ನುವ ಸೂಚನೆ ಈಗಾಗಲೇ ಸಿಕ್ಕಿದೆ.‌‌ ದೊಡ್ಡ ದೊಡ್ಡ ಸೂಪರ್ ಸ್ಟಾರ್ ಗಳು ಕಬ್ಜ ಕೋಟೆಯಲ್ಲಿದ್ದಾರೆ ಎನ್ನುವುದು ನಿರೀಕ್ಷೆಯ ಮೂಲ ಕಾರಣವಾದರೆ, ಕಣ್ಣಿಗೆ ಹೊಡೆಯುವಂತಹ ಮೇಕಿಂಗ್, ಒಂದೊಂದು‌ ಫ್ರೇಮ್ ನಲ್ಲಿ ಎದ್ದುಕಾಣುವ ಅದ್ದೂರಿತನ ಸಿನಿಮಾ ಪ್ರೇಮಿಗಳನ್ನು ಸರಕ್ಕನೆ ತಿರುಗಿ‌ ನೋಡುವಂತೆ ಮಾಡ್ತಿದೆ.‌ ಕಬ್ಜ ಕೋಟೆ ಸಕಲರನ್ನೂ ಸೆಳೆಯುತ್ತಿದೆ. ಸದ್ಯ, ಬೆಂಗಳೂರಿನ ಮಿನರ್ವ ಮಿಲ್‌ನಲ್ಲಿ ಚಿತ್ರೀಕರಣ ಭರದಿಂದ ಸಾಗುತ್ತಿದೆ, ಹೈದ್ರಬಾದ್ ಹಾಗೂ ಫಾರಿನ್ ನಲ್ಲೂ ಶೂಟಿಂಗ್ ಪ್ಲ್ಯಾನ್ ಆಗಿದೆ. ಕೆಜಿಎಫ್ ನಂತರ ಕನ್ನಡದ ಕೀರ್ತಿಪತಾಕೆಯನ್ನು ಹೊರದೇಶದಲ್ಲಿ ಹಾರಿಸಬೇಕು ಎನ್ನುವ ಹುಮ್ಮಸ್ಸು ಹಾಗೂ ಹುರುಪಿನಿಂತ ಇಡೀ ಕಬ್ಜ ಟೀಮ್ ಬೆವರು ಸುರಿಸಿ ಕೆಲಸ ಮಾಡ್ತಿದೆ. ಶ್ರಮವಹಿಸಿ ದುಡಿಯುತ್ತಿರುವ ತಂಡಕ್ಕೆ ಶುಭವಾಗಬೇಕು ಅಲ್ಲವೇ.


ವಿಶಾಲಾಕ್ಷಿ, ಎಂಟರ್ ಟೈನ್ಮೆಂಟ್ ಬ್ಯೂರೋ‌ ಸಿನಿಲಹರಿ

Related Posts

error: Content is protected !!