ಉಪೇಂದ್ರ- ರವಿಚಂದ್ರನ್‌ ತ್ರಿಶೂಲಂ ಚಿತ್ರಕ್ಕೆ ವಿದೇಶದಲ್ಲಿಈಗಿಂದಲೇ ಬೇಡಿಕೆ!

ಕನ್ನಡ ಚಿತ್ರರಂಗ ಸಾಗರದಾಚೆ ಸುದ್ದಿಯಾಗಿರುವುದು ಹೊಸದೇನಲ್ಲ. ಆದರೆ, ಸಿನಿಮಾ ಮೊದಲು ಇಲ್ಲಿ ತೆರೆಕಂಡು ಆ ಬಳಿಕ ವಿದೇಶಗಳಲ್ಲಿ ಸದ್ದು ಮಾಡಿದ್ದು ಗೊತ್ತಿದೆ. ಈಗ ಹೊಸ ಸುದ್ದಿ ಅಂದರೆ, ಉಪೇಂದ್ರ ಮತ್ತು ರವಿಚಂದ್ರನ್‌ ಅಭಿನಯದ “ತ್ರಿಶೂಲಂ” ಚಿತ್ರ ಬಿಡುಗಡೆ ಮುನ್ನವೇ ವಿದೇಶಿಗರಿಂದ ಬೇಡಿಕೆ ಹೆಚ್ಚಿದೆ. ಹೌದು, ಸದ್ಯ ಜನವರಿಯಲ್ಲಿ ಬಿಡುಗಡೆಯಾಗಲಿರುವ “ತ್ರಿಶೂಲಂ” ಚಿತ್ರವನ್ನು ಆರ್.ಎಸ್. ಪ್ರೊಡಕ್ಷನ್ಸ್ ನಿರ್ಮಾಣ ಮಾಡಿದೆ. ಇನ್ನು, ಈ ಸಿನಿಮಾಗೆ ಓಂಪ್ರಕಾಶ್ ರಾವ್ ನಿರ್ದೇಶನ ಮಾಡಿದ್ದಾರೆ. ಕನ್ನಡ ಚಿತ್ರರಂಗಕ್ಕೆ ಸಾಕಷ್ಟು ಯಶಸ್ವಿ ಚಿತ್ರಗಳನ್ನು ನೀಡಿರುವ ಆರ್.ಎಸ್. ಪ್ರೊಡಕ್ಷನ್ಸ್ ಸಂಸ್ಥೆಯಿಂದ ನಿರ್ಮಾಣವಾಗುತ್ತಿರುವ “ತ್ರಿಶೂಲಂ”
ಚಿತ್ರ ಇನ್ನೂ ಚಿತ್ರೀಕರಣದಲ್ಲಿದೆ. ಈಗಲೇ ಭಾರಿ ಸದ್ದು ಮಾಡುತ್ತಿರುವುದು ಒಳ್ಳೆಯ ಬೆಳವಣಿಗೆ.


ಈ ಚಿತ್ರದ ಬಗ್ಗೆ ಮಾಹಿತಿ ತಿಳಿದುಕೊಂಡ ಇಂಗ್ಲೆಂಡ್‌ನ ಸಿನಿಮಾ ವ್ಯಾಪಾರಿಗಳು, ಈ ಚಿತ್ರದ ವ್ಯಾಪಾರಕ್ಕೆ ಮುಂದೆ ಬಂದಿದ್ದಾರೆ. ಸದ್ಯ ಮಾತುಕತೆ ಅಂತಿಮ ಹಂತದಲ್ಲಿದೆ ಎಂದು ನಿರ್ಮಾಪಕ ಆರ್ ಶ್ರೀನಿವಾಸ್ ತಿಳಿಸಿದ್ದಾರೆ. ಅಕ್ಟೋಬರ್‌ 26 ರಿಂದ ಹೈದರಾಬಾದ್‌ನಲ್ಲಿ ಗಣೇಶ್ ಮಾಸ್ಟರ್ ಅವರ ಸಾರಥ್ಯದಲ್ಲಿ ಭರ್ಜರಿ ಸಾಹಸ ಸನ್ನಿವೇಶವೊಂದರ ಚಿತ್ರೀಕರಣ ನಡೆಯಲಿದೆ. ಉಪೇಂದ್ರ, ರವಿಚಂದ್ರನ್ ಮುಂತಾದವರು ಈ ಭಾಗದ ಚಿತ್ರೀಕರಣದಲ್ಲಿ ಭಾಗವಹಿಸಲಿದ್ದಾರೆ.


ಆರ್. ಶ್ರೀನಿವಾಸ್ ಹಾಗೂ ಬಿ.ಎಸ್. ಕಿರಣ್ ಗೌಡ ನಿರ್ಮಿಸುತ್ತಿರುವ ಈ ಚಿತ್ರವನ್ನು ಓಂಪ್ರಕಾಶ್ ರಾವ್ ನಿರ್ದೇಶಿಸುತ್ತಿದ್ದಾರೆ. ಚಂದ್ರಮೌಳಿ ಸಂಭಾಷಣೆ ಬರೆದಿದ್ದಾರೆ. ಅರ್ಜುನ್ ಜನ್ಯ ಸಂಗೀತವಿದೆ. ರವಿ ಕ್ಯಾಮೆರಾ ಹಿಡಿದರೆ, ಲಕ್ಷ್ಮಣ ರೆಡ್ಡಿ ಸಂಕಲನವಿದೆ. ರವಿವರ್ಮ, ಗಣೇಶ್ ಸಾಹಸ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ಶಾನ್ವಿ ನಿಮಿಕಾ ರತ್ನಾಕರ್, ಸಾಧುಕೋಕಿಲ, ಪ್ರದೀಪ್ ರಾವತ್, ನಾಗಶೇಖರ್, ರಂಗಾಯಣ ರಘು, ಅಚ್ಯುತರಾವ್, ಸುಧಾ ಬೆಳವಾಡಿ, ಉಗ್ರಂ ಮಂಜು ಇತರರು ಇದ್ದಾರೆ. ಇನ್ನುಳಿದಂತೆ ಮುಂಬೈ ಬೆಡಗಿ ಅದಿತಿ ಆರ್ಯ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

Related Posts

error: Content is protected !!