ಸಿಲಿಕಾನ್ ಸಿಟಿಗೆ ಬಂದಿಳಿದರಾ ಮೋಹಕತಾರೆ ರಮ್ಯಾ? ಅಣ್ಣಾವ್ರ ನೆನಪಲ್ಲಿ-ಸಿಟಿ ರೌಂಡ್ಸ್ !

ದಿಲ್ಲಿ ಮೇಡಂ ರಮ್ಯಾ ಸೈಲೆಂಟಾಗಿ ಸಿಲಿಕಾನ್ ಸಿಟಿಗೆ ಬಂದಿಳಿದ್ರಾ? ಫ್ಯಾನ್ಸ್ಗೆ ಸಪ್ರೈಸ್ ಕೊಡೋದಕ್ಕೆ ಫ್ಲೈಟ್ ಏರಿ ಬಂದು ರಾಜಧಾನಿಯಲ್ಲಿ ಲ್ಯಾಂಡ್ ಆದ್ರಾ? ಗೆಸ್ಟ್ ಆಗಿ ಬಂದಿದ್ದಾರಾ ಅಥವಾ ಬೆಂಗಳೂರಿನಲ್ಲೇ ಸೆಟ್ಲ್ ಆಗ್ತಾರಾ? ಸದ್ಯಕ್ಕೆ ಎಲ್ಲಿದ್ದಾರೆ? ಕೆಂಪೇಗೌಡ ಅಖಾಡಕ್ಕೆ ಬಂದಾಕ್ಷಣ ರಮ್ಯಾ ಮೇಡಂ, ಅಣ್ಣಾವ್ರ ನೆನಪಲ್ಲಿ-ಖುಷಿಖುಷಿಯಲ್ಲಿ ಸಿಟಿ ರೌಂಡ್ಸ್ ಮಾಡಿದ್ದು ಎಲ್ಲೆಲ್ಲಿ? ಈ ಎಲ್ಲಾ ಪ್ರಶ್ನೆಗಳು ಒಮ್ಮೆಲೆ ಹುಟ್ಟುವುದಕ್ಕೆ ಕಾರಣ ಮೋಹಕತಾರೆಯ ಇನ್ಸ್ಟಾಗ್ರಾಮ್ ಸ್ಟೇಟಸ್

ರಮ್ಯಾ.. ಕೇವಲ ಎರಡೇ ಎರಡು ಅಕ್ಷರದ ಈ ಹೆಸರಿಗೆ ಅದರದ್ದೇ ಆದ ಗತ್ತಿದೆ ಮತ್ತು ತಾಕತ್ತಿದೆ. ಬಣ್ಣದ ಲೋಕದಿಂದ ದೂರ ಉಳಿದರೂ, ರಾಜಕೀಯದಿಂದ ಅಂತರ ಕಾಯ್ದುಕೊಂಡರೂ ಕೂಡ ಮೋಹಕತಾರೆ ರಮ್ಯಾ ಹೆಸರು ಪೆಪ್ಪರ್‌ಮೆಂಟ್ ತಿನ್ನೋರಿಂದ ಹಿಡಿದು ಪಾರ್ಲಿಮೆಂಟ್‌ನಲ್ಲಿ ಕೂಡುವವರ ಬಾಯಲೆಲ್ಲಾ ನಲಿದಾಡುತ್ತೆ. ದುನಿಯಾದಲ್ಲಿ ನಟಿ ರಮ್ಯಾ ಹವಾ ಹಿಂಗಿರುವಾಗ, ಬಜಾರ್‌ನಲ್ಲಿ ಬ್ರ್ಯಾಂಡ್ ಆಗಿರುವಾಗ, ಫೀಲ್ಡ್ ನಲ್ಲಿದ್ದರೇನು- ಫೀಲ್ಡ್ ನಲ್ಲಿಲ್ಲದಿದ್ದರೇನು ಸುದ್ದಿಯಾಗಲೆಬೇಕು ಸದ್ದು ಮಾಡ್ಲೆಬೇಕು. ಅದೇ ಕೆಲಸ ಸೋಷಿಯಲ್ ಲೋಕದಲ್ಲಿ ಭರದಿಂದ ಸಾಗ್ತಿದೆ.ಊರಿಗೊಬ್ಳೆ ಪದ್ಮಾವತಿ ಸೋಷಿಯಲ್ ಅಂಗಳದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿದ್ದಾರೆ.

ಈ ವಿಚಾರ ತಮಗೂ ಗೊತ್ತಿರುತ್ತೆ. ತನಗೆ ಅನಿಸಿದ್ದನ್ನು ನೇರಾನೇರಾ ಹೇಳುತ್ತಾ, ಟಾಂಗ್ ಕೊಡುತ್ತಾ, ಟೀಕೆ ಮಾಡುತ್ತಾ, ಬುದ್ದಿವಾದ ಹೇಳುತ್ತಾ ಸಕ್ರಿಯವಾಗಿರುವ ದಿಲ್ಲಿ ಮೇಡಂ, ಫ್ಯಾನ್ಸ್ ಜೊತೆ ಚಾಟ್ ಮಾಡುತ್ತಾ, ಸ್ಟೇಟಸ್ ಹಾಕುತ್ತಾ ಸೋಷಿಯಲ್ ಮೀಡಿಯಾದಲ್ಲೇ ಕ್ವಾಲಿಟಿ ಟೈಮ್‌ನ ಸ್ಪೆಂಡ್ ಮಾಡುತ್ತಾರೆ. ಅದೇ ರೀತಿ, ಕಳೆದ ಹದಿನೆಂಟು ಗಂಟೆಗಳ ಹಿಂದೆ ಅಪ್‌ಲೋಡ್ ಮಾಡಿರುವ ಸ್ಟೇಟಸ್, ಸ್ಯಾಂಡಲ್‌ವುಡ್ ಕ್ವೀನ್ ಸದ್ದಿಲ್ಲದೇ ಬೆಂಗಳೂರಿಗೆ ಬಂದಿಳಿದಿರಬಹುದು ಎನ್ನುವ ಹಿಂಟ್ ಕೊಡ್ತಿದೆ. ಅಣ್ಣಾವ್ರ ನೆನೆದು `ನಗುತಾ ನಗುತಾ ಬಾಳು ನೀನು ನೂರು ವರುಷ’ ಗೀತೆಯನ್ನು ಹಾಕಿಕೊಂಡು ಖುಷಿಖುಷಿಯಲ್ಲಿ ಸಿಟಿ ರೌಂಡ್ಸ್ ಹಾಕಿದ್ದಾರೆ. ಕಠಾರಿವೀರ ಸುರಸುಂದರಾಂಗನ ರಾಣಿಯ ರೌಂಡ್ಸ್ ನೋಡಿ ಫ್ಯಾನ್ಸ್ ಮಾತ್ರವಲ್ಲ ನೋಡುಗರೆಲ್ಲರೂ ಕೂಡ ಥ್ರಿಲ್ಲಾಗಿದ್ದಾರೆ.

ಕಳೆದ ಭಾರಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೇಸ್ ಸೋಲೊಪ್ಪಿಕೊಂಡ ಬೆನ್ನಲ್ಲೇ, ದಿಲ್ಲಿ ಮೇಡಂ ರಮ್ಯಾ ಅಜ್ಞಾತವಾಸಕ್ಕೆ ಹೋದರು. ಈ ಮಧ್ಯೆ ರಾತ್ರೋರಾತ್ರಿ ಮಂಡ್ಯಕ್ಕೆ ಬಂದು ಮನೆ ಖಾಲಿ ಮಾಡಿಸಿಕೊಂಡು ಹೋದರು. ಆ ಮೇಲೆ ದಿಲ್ಲಿಯಲ್ಲಿ ಸೆಟ್ಲ್ ಆದ್ರಾ ಅಥವಾ ಡೆಲ್ಲಿ ಬಿಟ್ಟು ಫಾರಿನ್‌ಗೆ ಹಾರಿದ್ರಾ ಗೊತ್ತಿಲ್ಲ? ಇನ್ಸ್ ಟಾಗ್ರಾಮ್ ಸ್ಟೇಟಸ್ ನೋಡಿದಾಗೆಲ್ಲಾ ಪದ್ಮಾವತಿ ಅದೆಲ್ಲೋ ಫಾರಿನ್‌ನಲ್ಲಿ ಟಂಗೂರಿದಂತೆ ಕಾಣ್ತಿತ್ತು. ಸೋಷಿಯಲ್ ಮೀಡಿಯಾದಲ್ಲಿ ಒಮ್ಮೆ ಲೈವ್ ಬಂದಾಗ ಕೊರೊನಾ ವ್ಯಾಕ್ಸಿನೇಷನ್ ಹಾಕಿಸಿಕೊಂಡಿಲ್ಲ. ಮೊಡೊರ್ನಾ ವ್ಯಾಕ್ಸಿನ್‌ಗಾಗಿ ಕಾಯ್ತಿದ್ದೀನಿ ಎಂದಾಗ ಅಕ್ಕ ಫಾರಿನ್‌ನಲ್ಲಿ ಇರಬೇಕು ಅಂತ ಎಲ್ಲರೂ ಅಂದುಕೊಂಡಿದ್ದರು. ಎಲ್ಲಾದರೂ ಇರಲಿ ಗೌರಮ್ಮ ಚೆನ್ನಾಗಿರಲಿ ಅಂತ ಫ್ಯಾನ್ಸ್ ಹಾರೈಸಿದ್ದರು. ಈಗ ಸದ್ದುಗದ್ದಲವಿಲ್ಲದೇ ಗೌರಮ್ಮ ರಾಜಧಾನಿಗೆ ಕಾಲಿಟ್ಟಿರುವಂತೆ ಕಾಣ್ತಿದೆ.

ಅಷ್ಟಕ್ಕೂ, ರಮ್ಯಕ್ಕ ರಾಜಧಾನಿಗೆ ಬಂದಿರಬಹುದು ಎನ್ನುವ ಸಂಶಯ ಬಂದಿದ್ದು ಸ್ಟೇಟಸ್‌ನಿಂದ. ಪದ್ಮಾವತಿ ಕ್ಯಾಪ್ಚರ್ ಮಾಡಿ ಅಪ್‌ಲೋಡ್ ಮಾಡಿರುವ ವಿಡಿಯೋ ನೋಡಿದರೆ ಹಂಡ್ರೆಂಡ್ ಪರ್ಸೆಂಟ್ ಅಕ್ಕ ಬೆಂಗಳೂರಿಗೆ ಎಂಟ್ರಿಕೊಟ್ಟಿದ್ದಾರೆ ಅನ್ಸುತ್ತೆ. ಒಂದ್ವೇಳೆ ಬಂದಿರುವುದು ನಿಜವಾದರೆ ಅವರ ಅಭಿಮಾನಿಗಳಿಗೆ ಅದಕ್ಕಿಂತ ಖುಷಿಯ ಸಂಗಂತಿ ಬೇರೊಂದಿಲ್ಲ ಬಿಡಿ. ಯಾಕಂದ್ರೆ, ಲಕ್ಕಿ ಬೆಡಗಿ ಫಿಲ್ಮ್ ಫೀಲ್ಡ್ ಗೆ ಕಮ್‌ಬ್ಯಾಕ್ ಮಾಡೋದು ಕೊಂಚ ತಡವಾಗಲಿ ಪರವಾಗಿಲ್ಲ ಆದರೆ ತವರಿಗೆ ಮರಳಬೇಕು ನಮ್ಮ ನಡುವೆ ನಮ್ಮಕ್ಕ ಇರಬೇಕು ಅಂತ ಅಭಿಮಾನಿ ದೇವರುಗಳೆಲ್ಲರೂ ಆಸೆ ಪಡ್ತಿದ್ದಾರೆ. ಅವರ ಬಯಕೆ ಈಡೇರಿಸುತ್ತಾರಾ? ಸಿಲಿಕಾನ್ ಸಿಟಿಯಲ್ಲೇನಾದರೂ ಸೆಟಲ್ ಆಗ್ತಾರಾ? ಬಣ್ಣ ಹಚ್ಚಿಕೊಂಡು ಗಾಂಧಿನಗರಕ್ಕೆ ಮರುಳುತ್ತಾರಾ? ಸಿಂಪಲ್‌ಸ್ಟಾರ್ ಅಪ್‌ಕಮ್ಮಿಂಗ್ ಚಿತ್ರಕ್ಕೆ ಹೀರೋಯಿನ್ ಆಗ್ತಾರಾ? ಈ ಎಲ್ಲಾ ಪ್ರಶ್ನೆಗೆ ಉತ್ತರವಿಲ್ಲ. ಯಾಕಂದ್ರೆ, ಗೌರಮ್ಮ ಕೆಂಪೇಗೌಡನ ಅಂಗಳಕ್ಕೆ ಬಂದಿರುವ ಸುದ್ದಿ ಇನ್ನೂ ಕನ್ಫರ್ಮ್ ಆಗಿಲ್ಲ. ಸೋ, ವೇಯ್ಟ್ ಅಂಡ್ ವಾಚ್ ಅಷ್ಟೇಯಾ.

ವಿಶಾಲಾಕ್ಷಿ, ಎಂಟರ್‌ಟೈನ್ಮೆಂಟ್ ಬ್ಯೂರೋ ಸಿನಿಲಹರಿ

Related Posts

error: Content is protected !!