ಡಿಸೆಂಬರ್ಗೆ ಟೀಸರ್, ಏಪ್ರಿಲ್ ಗೆ ಮದಗಜ ರಿಲೀಸ್ ಸಾಧ್ಯತೆ

ರೋರಿಂಗ್ ಸ್ಟಾರ್ ಶ್ರೀಮುರಳಿ. ಈ ಹೆಸರು ಹೇಳಿದಾಕ್ಷಣ, ಸಿನಿರಂಗಕ್ಕೆ ಎಂಟ್ರಿಯಾಗಿರುವ ಹೊಸಬರಿಗೆ ಒಂಥರಾ ಖುಷಿ. ಅದಕ್ಕೆ ಕಾರಣ, ಅರಂಭದಿಂದಲೂ ಹೊಸಬರನ್ನು ಪ್ರೋತ್ಸಾಹಿಸಿಕೊಂಡು ಬಂದಿರುವ ಶ್ರೀಮುರಳಿ, ಅದೆಷ್ಟೋ ಹೊಸಬರ ಚಿತ್ರಗಳಿಗೆ ಶುಭಕೋರುವ ಮೂಲಕ ಪ್ರೀತಿಯ ಮಾತುಗಳನ್ನಾಡಿ, ಹುರಿದುಂಬಿಸಿದವರು. ಆ ಕಾರಣಕ್ಕೆ ಶ್ರೀಮುರಳಿ ಹೊಸ ಪ್ರತಿಭೆಗಳ ಪಾಲಿಗೆ ರಿಯಲ್ ಹೀರೋ. ಶ್ರೀಮುರಳಿ ಅವರ ಜರ್ನಿ ಕೂಡ ಆರಂಭದಲ್ಲಿ ಸುಲಭವಾಗಿರಲಿಲ್ಲ.

“ಅನೇಕ ಏಳು-ಬೀಳುವಿನ ನಡುವೆಯೂ ಆದೇ ಮುಗಳ್ನಗೆ ಮೂಲಕ ಎಲ್ಲರ ಮನಸ್ಸು ಗೆಲ್ಲುವ ಮೂಲಕವೇ ಅವರು ಚಿತ್ರರಂಗದಲ್ಲಿ ಗೆಲುವಿನ ಮೆಟ್ಟಿಲೇರಿ ನಿಂತರು. ಎಲ್ಲೆಲ್ಲೂ ತಮ್ಮದ್ದೊಂದು ಛಾಪು ಮೂಡಿಸುವುದರ ಜೊತೆಗೆ ಸಿನಿರಸಿಕರ ಮನದಲ್ಲಿ, ಚಿತ್ರರಂಗದ ಅಂಗಳದಲ್ಲಿ “ಭರಾಟೆ” ಎಬ್ಬಿಸಿದ್ದಂತೂ ಸುಳ್ಳಲ್ಲ. ಅದೇ ಮೈಲೇಜ್ ಉಳಿಸಿಕೊಂಡಿರುವ ಶ್ರೀಮುರಳಿ ಮತ್ತೊಂದು ಬಹುದೊಡ್ಡ ನಿರೀಕ್ಷೆಯಲ್ಲೂ ಇದ್ದಾರೆ”
ಅನೇಕ ಏಳು-ಬೀಳುವಿನ ನಡುವೆಯೂ ಆದೇ ಮುಗಳ್ನಗೆ ಮೂಲಕ ಎಲ್ಲರ ಮನಸ್ಸು ಗೆಲ್ಲುವ ಮೂಲಕವೇ ಅವರು ಚಿತ್ರರಂಗದಲ್ಲಿ ಗೆಲುವಿನ ಮೆಟ್ಟಿಲೇರಿ ನಿಂತರು. ಎಲ್ಲೆಲ್ಲೂ ತಮ್ಮದ್ದೊಂದು ಛಾಪು ಮೂಡಿಸುವುದರ ಜೊತೆಗೆ ಸಿನಿರಸಿಕರ ಮನದಲ್ಲಿ, ಚಿತ್ರರಂಗದ ಅಂಗಳದಲ್ಲಿ “ಭರಾಟೆ” ಎಬ್ಬಿಸಿದ್ದಂತೂ ಸುಳ್ಳಲ್ಲ. ಅದೇ ಮೈಲೇಜ್ ಉಳಿಸಿಕೊಂಡಿರುವ ಶ್ರೀಮುರಳಿ ಮತ್ತೊಂದು ಬಹುದೊಡ್ಡ ನಿರೀಕ್ಷೆಯಲ್ಲೂ ಇದ್ದಾರೆ.
ಹೌದು, ಶ್ರೀಮುರಳಿ ಸದ್ಯಕ್ಕೆ “ಮದಗಜ”ನ ಜಪದಲ್ಲಿದ್ದಾರೆ. ಹಾಗೆ ನೋಡಿದರೆ, ಅವರು “ಉಗ್ರಂ” ಗೆಲುವಿನ ನಂತರ ಸಾಕಷ್ಟು ಚ್ಯೂಸಿ ಆಗಿದ್ದಂತೂ ಹೌದು. ಆ ಎಚ್ಚರ ಇದ್ದುದರಿಂದಲೇ ಅವರು, ಒಂದೊಂದೇ ಸಿನಿಮಾವನ್ನು ಕೊಡುವ ಮೂಲಕ ಇಂದಿಗೂ ಅಸ್ತಿತ್ವ ಉಳಿಸಿಕೊಂಡಿದ್ದಾರೆ.

ಈಗ “ಮದಗಜ” ಕೂಡ ದೊಡ್ಡ ಭರವಸೆ ಮೂಡಿಸಿದೆ. ಚಿತ್ರದ ಶೀರ್ಷಿಕೆಯೇ ಮೊದಲ ನಂಬಿಕೆ ಹೆಚ್ಚಿಸಿದೆ. ಆರಂಭದ ಪೋಸ್ಟರ್ ಇನ್ನಷ್ಟು ಕುತೂಹಲ ಮೂಡಿಸಿರುವುದಂತೂ ನಿಜ. ಈಗ “ಮದಗಜ”ನ ಹವಾ ಜೋರಾಗಿದೆ. ಈಗಾಗಲೇ ಎರಡನೇ ಹಂತದ ಚಿತ್ರೀಕರಣ ಮುಗಿಸಿರುವ “ಮದಗಜ” ಮೂರನೇ ಹಂತದ ಚಿತ್ರೀಕರಣಕ್ಕೆ ಸಜ್ಜಾಗುತ್ತಿದೆ.

ಬಿನ್ನಿಮಿಲ್ನಲ್ಲಿ ಭರ್ಜರಿ ಫೈಟ್ ಸೀನ್ಗಳಿಗಾಗಿಯೇ ದೊಡ್ಡ ಸೆಟ್ ಹಾಕಲಾಗುತ್ತಿದೆ. ಸುಮಾರು ಹದಿನೈದು ದಿನಗಳ ಕಾಲ ಸೆಟ್ ಹಾಕಲಾಗುತ್ತಿದ್ದು, ಅದು ಪೂರ್ಣಗೊಂಡ ನಂತರ ಫೈಟ್ ಸೀನ್ ಶೂಟಿಂಗ್ ನಡೆಯಲಿದೆ. ಆ ಭರ್ಜರಿ ಕಾಳಗದ ದೃಶ್ಯಗಳು “ಮದಗಜ” ಚಿತ್ರದ ವಿಶೇಷತೆಗಳಲ್ಲೊಂದು. ಈಗಾಗಲೇ ವಾರಣಾಸಿಯಲ್ಲಿ ಪ್ರಮುಖ ಭಾಗದ ಚಿತ್ರೀಕರಣ ಮುಗಿಸಿಕೊಂಡು ಬಂದಿರುವ “ಮದಗಜ”, ಇತ್ತೀಚೆಗೆ ಮೈಸೂರು ಸುತ್ತಮುತ್ತಲ ಪ್ರದೇಶಗಳಲ್ಲೂ ಚಿತ್ರೀಕರಣ ಮುಗಿಸಿದೆ. ಈಗ ಮತ್ತೊಂದು ಹಂತದ ಚಿತ್ರೀಕರಣಕ್ಕೆ ರೆಡಿಯಾಗಿದ್ದು, ಇನ್ನೇನು ಇಷ್ಟರಲ್ಲೇ ಚಿತ್ರತಂಡ ಸೆಟ್ಗೆ ಹೊರಡಲಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ, ಡಿಸೆಂಬರ್ಗೆ “ಮದಗಜ” ಟೀಸರ್ ಬಿಡುಗಡೆಯಾಗಲಿದೆ.










































ಇದು ಬಿಡಿ, ಮುಗ್ದ ಮುಖದ ಶಾನ್ವಿ ಬಗ್ಗೆ ಹೇಳಲೇಬೇಕಾದ ಒಂದುಮಾತು ಅವರಿಗಿರುವ ಕನ್ನಡದ ಮೇಲಿನ ಪ್ರೀತಿಯ ಬಗ್ಗೆ. ನಿಮಿಗೆಲ್ಲ ಗೊತ್ತೇ ಇದೆ. ಶಾನ್ವಿ ಕನ್ನಡಕ್ಕೆ ಬಂದ ಆಮದು ನಟಿ. ಅಂದ್ರೆ ಬೇರೆ ಭಾಷೆಯಿಂದ ಕನ್ನಡಕ್ಕೆ ಬಂದವರು. ಹಾಗೆ ಬಂದವರನೇಕ ನಟಿಯರು ಅವಕಾಶ ಇದ್ದಷ್ಟು ದಿನ ಇಲ್ಲಿದ್ದು , ಹಣ ಮಾಡಿಕೊಂಡುಮರಳಿ ತಮ್ಮೂರು ಸೇರಿಕೊಂಡಿ ದ್ದಾರೆಸ್ವಲ್ಪ ಕಮಲ ಈ ನಟಿ ಬೆಂಗಳೂರಿನಲ್ಲೆ ಉಳಿದು ಕೊಂಡಿದ್ದಾರೆ. ಕನ್ನಡ ಭಾಷೆ ಕಲಿತಿದ್ದಾರೆ. ಓದು,ಬರಹ ಎರಡೂ ಕನ್ನಡದಲ್ಲೇ ಮಾಡುತ್ತಾರೆ. ಬೆಂಗಳೂರು ನನ್ನೂರು ಅಂತ ಹೆಮ್ಮೆಯಿಂದ ಹೇಳುತ್ತಾರೆ. ಅಷ್ಟು ಮಾತ್ರವಲ್ಲ, ಇಲ್ಲಿಯೇ ಸೆಟ್ಲ್ ಆಗುವುದಾಗಿಯೂ ಹೇಳುತ್ತಾರೆ. ಹಾಗೆಯೇ ಕನ್ನಡದ ಸ್ಟಾರ್ ಒಬ್ಬರನ್ನು ಲವ್ ಮಾಡುತ್ತಿರುವ ಬಗ್ಗೆಗಾಸಿಪ್ ಕೂಡ ಇದೆ. ಸದ್ಯಕ್ಕೆ ಅದು ಕನ್ ಫರ್ಮ್ಅಲ್ಲ.ಗಾಸಿಪ್ ಮಾತ್ರ. ಏನೇ ಆಗಲಿ ಶಾನ್ವಿ ಅವರಿಗೆ ಸಿನಿಲಹರಿ ಕಡೆಯಿಂದ ಆಲ್ ದಿಬೆಸ್ಟ್.




