Categories
ಸಿನಿ ಸುದ್ದಿ

ಓ ಮೈ ಲವ್ ! ಇದು ಹೊಸಬರ ವಿಡಿಯೋ ಆಲ್ಬಂ

ಹೊಸಬರ ಪ್ರಯತ್ನಕ್ಕೆ ಸ್ಟಾರ್ ಗಳ ಮೆಚ್ಚುಗೆ

 

ಚಿತ್ರರಂಗಕ್ಕೆ ಬರಬೇಕು ಎಂಬ ಹೊಸ ಪ್ರತಿಭೆಗಳು ಮೊದಲು ಮುಖ ಮಾಡುವುದು ಕಿರುಚಿತ್ರ, ಆಲ್ಬಂಗಳತ್ತ. ತಮ್ಮ ಪ್ರತಿಭೆಯನ್ನು ಓರೆಗೆ ಹಚ್ಚಲು ಇವುಗಳು ಉತ್ತಮ ವೇದಿಕೆಯಾಗುತ್ತದೆ ಅಂಥ ನಂಬಿರುವವರು. ಇತ್ತೀಚೆಗೆ ಇದರ ಮೂಲಕವೆ ಗುರುತಿಸಿಕೊಂಡು, ಭರವಸೆ ಮೂಡಿಸಿ ಚಿತ್ರ ನಿರ್ದೇಶಕರಾಗುವ ಉದಾಹರಣೆಗಳು ಸಾಕಷ್ಟು ಸಿಗುತ್ತವೆ. ಈ ಸಾಲಿಗೆ ’ಓ ಮೈ ಲವ್’ ವಿಡಿಯೋ ಹಾಡು ಸಿದ್ದಗೊಂಡಿದೆ. ಹಲವು ಚಿತ್ರಗಳಿಗೆ ಕೆಲಸ ಮಾಡಿರುವ ಜೀವನ್‌ಗಂಗಾಧರಯ್ಯ ಹಾಡಿಗೆ ಪರಿಕಲ್ಪನೆ,ಸಾಹಿತ್ಯ ಬರೆದು ನಿರ್ದೇಶನ ಮಾಡಿದ್ದಾರೆ. ಡ್ರಾಮಾ ಜೂನಿಯರ್ಸ್  ಖ್ಯಾತಿಯ ತುಷಾರ್‌ಗೌಡ ನಾಯಕ. ಮಜಾಭಾರತ್‌ದಲ್ಲಿ ಕಾಣಿಸಿಕೊಂಡಿದ್ದ ಆರಾಧನಭಟ್‌ನಿಟ್ಟೋಡಿ ನಾಯಕಿ. ಸಂಗೀತ ಜಿತಿನ್‌ದರ್ಶನ್-ಸತ್ಯರಾಧಾಕೃಷ್ಣ, ಛಾಯಾಗ್ರಹಣ ರಾಜರಾವ್‌ಅಂಚಲ್‌ಕರ್, ಸಂಕಲನ ಅಕ್ಷಯ್.ಪಿ.ರಾವ್, ನೃತ್ಯ ತೀಚುಆಚಾರ್ಯ ನಿರ್ವಹಿಸಿದ್ದಾರೆ. ಪ್ರಭಾಕರ್.ಬಿ.ಪಿ, ಶಂಕರಣ್ಣ ಸ್ಟುಡಿಯೋ ಹಾಗೂ ರಂಗಮಯೂರಿ ಜಂಟಿಯಾಗಿ ಬಂಡವಾಳ ಹೂಡಿದ್ದಾರೆ.


ಗೀತೆಯ ಕುರಿತು ಹೇಳುವುದಾದರೆ, ನಮ್ಮ ಯೌವ್ವನದಲ್ಲಿ ಹೊಸತನ್ನು ಕಂಡುಕೊಳ್ಳುವ ಸಮಯದಲ್ಲಿ ಎದುರುಗೊಳ್ಳುವ ವಿವಿಧ ಸನ್ನಿವೇಶಗಳು ನೆನಪಿಸುತ್ತದೆ. ಆಧುನಿಕತೆಯ ಜೀವನದಲ್ಲಿ ಮಾನವ ಸಂಬಂದಗಳು ಪ್ರಧಾನ ಪಾತ್ರವಹಿಸುತ್ತವೆ. ವಿಶೇಷವಾಗಿ ಪೋಷಕರು ಮತ್ತು ಮಗುವಿನ ರಿಲೇಶನ್‌ಷಿಪ್‌ದಲ್ಲಿ ಬದುಕಿನುದ್ದಕ್ಕೂ ಅನೇಕ ಕಹಿ ಮತ್ತು ಸಿಹಿ ಕ್ಷಣಗಳನ್ನು ಕಾಣುತ್ತೇವೆ. ಇವಿಷ್ಟು ನಿರ್ದೇಶಕರು ಸಿನಿಮಾಕ್ಕಾಗಿ ಬರೆದ ಕತೆಯ ಒಂದು ಭಾಗದಲ್ಲಿ ಬರಲಿದೆ. ಮೊನ್ನೆಯಷ್ಟೇ ಪ್ರದರ್ಶನಗೊಂಡ ಹಾಡಿನ ಕಾರ್ಯಕ್ರಮದಲ್ಲಿ ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಪಿ.ಶೇಷಾದ್ರಿ, ಗಾಯಕಿ ಅನುರಾಧಭಟ್, ಬೆಲ್‌ಬಾಟಂ ನಿರ್ಮಾಪಕ ಸಂತೋಷ್‌ಕುಮಾರ್, ಕೆಜಿಎಫ್‌ಗೆ ಸಂಭಾಷಣೆ ಬರೆದಿರುವ ಚಂದ್ರಮೌಳಿ, ನಟಿ ಪ್ರಿಯಾಂಕಾ ತಿಮ್ಮೇಶ್ ಮುಂತಾದವರು ಗೀತೆ ಕುರಿತಂತೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

 

Categories
ಸಿನಿ ಸುದ್ದಿ

ಬೆಳ್ಳಿತೆರೆಗೆ‌ ಎಂಟ್ರಿಯಾಗುತ್ತಿದ್ದಾನೆ ‘ಧ್ರುವತಾರೆ’ ಚಿತ್ರದ ನಟಿಯ ಪುತ್ರ !

‘ನಾನೊಂಥರ ‘ಅಂತ ಬರ್ತಿದ್ದಾನೆ ಡಾಕ್ಟರ್ ಸನ್, ಹೆಸರು ಜೈ ಸನ್


ಬಣ್ಣದ ಜಗತ್ತೇ ಹಾಗೆ. ಇದೊಂಥರ ಮ್ಯಾಗ್ನೆಟ್ ಇದ್ದಂತೆ. ಎಂತವರಿಗೂ ಇದು ಒಂಥರ ತಲೆ ಗಿಮ್ಮ್ ಎನ್ನಿಸದೆ ಇರದು. ಹಾಗೆಯೇ ಸಿನಿಮಾ ಎನ್ನುವ ಸೊಜಿಗಲ್ಲಿನ ಆಕರ್ಷಣೆ ಮೂಲಕ ಬೆಳ್ಳಿತೆರೆಗೆ ನಟನಾಗಿ‌ಬರುತ್ತಿದ್ದಾರೆ ಯುವ ಪ್ರತಿಭೆ ಜೈಸನ್. ಈತ ಡಾಕ್ಟರ್ ಸನ್. ಯು ರಮೇಶ್ ನಿರ್ದೇಶನದ ‘ ನಾನೊಂಥರ ‘ಚಿತ್ರದ ನಿರ್ಮಾಪಕಿ ಡಾ. ಜಾಕ್ಲಿನ್ ಫ್ರಾನ್ಸಿಸ್ ಅವರ ಪುತ್ರ.

ಹೊಸಬರ ಚಿತ್ರ ಎನ್ನುವುದರ ಜತೆಗೆ ಹಲವು ಕಾರಣಕ್ಕೆ ಸಿನಿಮಾ ಪ್ರೇಕ್ಷಕ ರಲ್ಲಿ ಕುತೂಹಲ‌ ಹುಟ್ಟಿಸಿರುವ ‘ ನಾನೊಂಥರ ‘ ಚಿತ್ರವು ಇದೇ ವಾರ ತೆರೆಗೆ ಬರುತ್ತಿದೆ. ಇದೇ ಶುಕ್ರವಾರ( ಡಿ.18) ಮಲ್ಟಿಪ್ಲೆಕ್ಸ್ ಸೇರಿದಂತೆ ರಾಜ್ಯಾದ್ಯಂತ ಸರಿ ಸುಮಾರು 82 ಚಿತ್ರ ಮಂದಿರಗಳಲ್ಲಿ ಈ ಚಿತ್ರ ತೆರೆ ಕಾಣುತ್ತಿದೆ. ಈ ಚಿತ್ರದಲ್ಲಿ ಯುವ ನಟ ಜೈಸನ್ ಸೆಕೆಂಡ್ ಹೀರೋ. ಅಂದ್ರೆ ನಾಯಕನ ಸಹೋದರನ ಪಾತ್ರ. ಈ ಪಾತ್ರದ ಮೂಲಕ ಬೆಳ್ಳಿತೆರೆಯಲ್ಲಿ ಇದೇ ಮೊದಲು ನಟನಾಗಿ ಕಾಣಿಸಿಕೊಳ್ಳು ತ್ತಿರುವ ನಿರ್ಮಾಪಕಿ ಜಾಕ್ಲಿನ್ ಫ್ರಾನ್ಸಿಸ್ ಪುತ್ರ ಜೈಸನ್ ಗೆ ಸಿನಿಮಾ ಅಂದ್ರೆ ಅಮ್ಮನೇ ಮೊದಲ ಪ್ರೇರಣೆ ಅಂತೆ.

ಅಮ್ಮನ‌ ಒತ್ತಾಯಕ್ಕೆ ನಾನು ಅಂದು ಧ್ರುವತಾರೆ ಸಿನಿಮಾ ಮೂಲಕ ಬಾಲ‌ನಟಿಯಾಗಿ ಅಭಿನಯಿಸಿದ್ದೆ. ಅದೊಂದು ಒಳ್ಳೆಯ ಅನುಭವ.‌ದೊಡ್ಡ ಕಲಾವಿದರ ನಡುವೆ ಕಾಣಿಸಿಕೊಂಡೆ. ಮುಂದೆ ಮಲಯಾಳಂ ಚಿತ್ರದಲ್ಲೂ ಅಭಿನಯಿಸುವ ಅವಕಾಶ ಬಂತು.ಆದರೆ ಆಗ‌ ನಮಗೆಸರಿಯಾದ ಮಾರ್ಗದರ್ಶನ ನೀಡುವವರು ಸಿಗಲಿಲ್ಲ.‌ಹಾಗಾಗಿ ಸಿನಿಮಾ ಬಿಟ್ಟು ಶಿಕ್ಷಣ ದ ಕಡೆ ಗಮನಕೊಟ್ಡೆ.‌ಹಾಗಾಗಿಯೇ ಡಾಕ್ಟರ್ ಆದೆ. ಈಗ ಸಿನಿಮಾ ಬಗ್ಗೆ ನಂಗೊಂದಿಷ್ಟು ಗೊತ್ತಿದೆ. ವೈದ್ಯೆಯಾಗಿ ಗೆದ್ದವಳಿಗೆ ಇಲ್ಲೋ ಗೆಲುವು ಸಿಗುತ್ತೆ ಎನ್ನುವ ವಿಶ್ವಾಸ ಇದೆ. ಅದೇ ಕಾರಣಕ್ಕೆ ನಾನೊಂಥರ ಸಿನಿಮಾ‌ಮಾಡಿದ್ದೇನೆ. ಮುಂದೆ ಮಗನನ್ನು ಹೀರೋ ಆಗಿ ಪರಿಚಯಿಸಬೇಕೆನ್ನುವ ಆಸೆಇದೆ.

ಡಾ.‌ಜಾಕ್ಲಿನ್ ಫ್ರಾನ್ಸಿಸ್,ನಿರ್ಮಾಪಕಿ

 

‘ ನಂಗೆ ನಟ ಆಗ್ಬೇಕು, ಸಿನಿಮಾ ಮಾಡ್ಬೇಕು ಅನ್ನೋದಕ್ಕೆ ಕಾರಣವೇ ಅಮ್ಮ. ಯಾಕಂದ್ರೆ ಅಮ್ಮ ಬಾಲ‌ನಟಿಯಾಗಿ ಕನ್ನಡ ಚಿತ್ರರಂಗಕ್ಕೆ ಪರಿಚಯವಾದವರು. ಡಾ. ರಾಜ್ ಕುಮಾರ್ ಅಭಿನಯದ ಧ್ರುವತಾರೆ ಚಿತ್ರದಲ್ಲಿ ಬಾಲ‌ನಟಿಯಾಗಿ ಅಭಿನಯಿಸಿದ್ದಾರೆ. ಅದಕ್ಕೆ ಕಾರಣ ನನ್ನಜ್ಜಿ. ಅವರಿಗೆ ಅಮ್ಮನಟಿ ಆಗ್ಬೇಕು ಅನ್ನೋ ಆಸೆ ಇತ್ತಂತೆ. ಅವರ ಒತ್ತಾಯಕ್ಕೆ ಅಮ್ಮ ಬಾಲ‌ನಟಿಯಾಗಿ ಅವತ್ತು ಬೆಳ್ಳಿ ತೆರೆಯಲ್ಲಿ ಕಾಣಿಸಿಕೊಂಡ್ರಂತೆ. ಅಮ್ಮ ನಂಗೂ ಆಗಾಗ ಅದನ್ನು‌ಹೇಳುತ್ತಿದ್ದರು. ಅದರ ಪ್ರಭಾವವೋ ಏನೋ ನಂಗೂ ನಟ ಆಗ್ಬೇಕು ಅನ್ನೋದು ಬಾಲ್ಯದಿಂದಲೇ ಶುರುವಾಯಿತು. ಈಗ ಆ ಕನಸು ನನಸಾಗುತ್ತಿದೆ. ಫಸ್ಟ್ ಟೈಮ್ ಬಣ್ಣ ಹಚ್ಚಿ ಪ್ರೇಕ್ಷಕ ರ ಮುಂದೆ ಬರುತ್ರಿರುವುದು ಒಂದೆಡೆ ಖುಷಿ, ಮತ್ತೊಂದೆಡೆ ಆತಂಕ‌ ‘ಎನ್ನುತ್ತಾರೆ ಜೈಸನ್.

ಸದ್ಯಕ್ಕೆ ಈತ ಪದವಿ ವಿದ್ಯಾರ್ಥಿ. ಬೆಂಗಳೂರಿನ‌ ಬಸವನಗುಡಿ ಬಿಎಂಎಸ್ ಕಾಲೇಜಿನಲ್ಲಿ ಫಸ್ಟ್ ಈಯರ್ ಡಿಗ್ರಿ ಓದುತ್ತಿದ್ದಾನೆ. ಆದರೆ ಓದಿನ ಜತೆಗೆಯೇ ಈಗ ನಾನೊಂಥರ ಚಿತ್ರದೊಂದಿಗೆ ನಟನಾಗಿಯೂ ಬೆಳ್ಳಿತೆರೆಗೆ ಪರಿಚಯವಾಗುತ್ತಿದ್ದಾನೆ.ಮುಂದೆ ಹೇಂಗೆ ಅಂತ ಪ್ರಶ್ನಿಸಿದರೆ ನಂಗೆ ಎರಡು ಮುಖ್ಯ ಅಂತಾರೆ ಜೈಸನ್.
‘ ನಂಗೆ ಕೆರಿಯರ್ ಕೂಡ ಮುಖ್ಯ. ಸದ್ಯಕ್ಕೆ ಎಜುಕೇಶನ್ ಮುಗಿಯೋವರೆಗೂ ಎಜುಕೇಷನ್ ಜತೆಗೆಯೇ ಆ್ಯಕ್ಟಿಂಗ್ ಕಡೆ ಗಮನ‌ಹರಿಸುತ್ತಿದ್ದೇನೆ.‌ ಅಮ್ಮ‌ನ‌‌ ನಿರ್ಧಾರ ಕೂಡ ಹಾಗೆಯೇ ಇದೆ. ಏಜುಕೇಷನ್ ಮುಗಿದ ಮೇಲೆ ಫುಲ್ ಟೈಮ್ ಸಿನಿಮಾ‌ಕಡೆಯೇ ಯೋಚಿಸೋಣ ಅಂತಲೂ‌ ಇದೆ. ಯಾಕಂದ್ರೆ ಅಮ್ಮ ಪ್ರಡ್ಯೂಸರ್. ಇವತ್ತಲ್ಲ ನಾಳೆ ಸಿನಿಮಾ‌ನಿರ್ಮಾಣ ಮಾಡೆ ಮಾಡುತ್ತಾರೆ.‌ ನಾನು ಹಿರೋ ಆಗ್ಬೇಕು ಅನ್ನೋದು ನನಗಿರುವಷ್ಟೇ ಆಸೆ ಅವರಿಗೂ ಇದೆ. ಹಾಗಾಗಿ ನಿಧಾನವಾಗಿಯೇ ಎಜುಕೇಶನ್ ಮುಗಿಸಿಕೊಂಡು‌ಸಿನಿಮಾಕ್ಕೆ ಫುಲ್ ಟೈಮ್ ಆಗಿ ಬರುತ್ತೇನೆ ಅಂತ ನಗು ಬೀರುತ್ತಾರೆ ಜೈಸನ್.

ಜೈಸನ್ ಗೆ ಇಗಷ್ಟೇ 18 ವರ್ಷ.‌ ಕಟ್ಟು ಮಸ್ತು ದೇಹದೊಂದಿಗೆ ನೋಡುವುದಕ್ಕೂ ಹ್ಯಾಂಡ್ ಸಮ್ ಆಗಿದ್ದಾನೆ.‌ ಅದಕ್ಕೆ ತಕ್ಕಂತೆ ಈಗ ಜಿಮ್ ನಲ್ಲಿ ವರ್ಕೌಟ್ ಶುರು ಮಾಡಿದ್ದಾರಂತೆ. ಹಾಗೆಯೇ ಸಿನಿಮಾ ಸಂಬಂಧಿತ ಎಲ್ಲಾ ತರಬೇತಿ ಕೂಡ ಶುರುವಾಗಿದೆಯಂತೆ.’ ಸಿನಿಮಾ ನಂಗೆ ಹೊಸದು. ತುಂಬಾ ಬ್ಲಾಂಕ್ ಆಗಿಯೇ ಮೊದಲ ಸಿನಿಮಾದಲ್ಲಿ ನಟಿಸಿದ್ದೇನೆ. ನಿರ್ದೇಶಕರು ಎಲ್ಲವನ್ನು ಹೇಳಿಕೊಟ್ಟರು. ಮುಂದೆ ಅಮ್ಮ ನನಗಾಗಿಯೇ ಸಿನಿಮಾ ಮಾಡೋ‌ಆಲೋಚನೆಯಲ್ಲಿದ್ದಾರೆ. ಆ ಹೊತ್ತಿಗೆ ನಾನು ಎಲ್ಲ ರೀತಿಯಲ್ಲೂ ರೆಡಿ ಆಗಿರೋಣ ಅಂತ, ಈಗ ಜಿಮ್ ಗೆ ಹೋಗುತ್ತಿದ್ದೇನೆ. ಫೈಟ್ ಅಭ್ಯಾಸವು ನಡೆದಿದೆ. ಇಷ್ಟರಲ್ಲಿಯೇ ಆ್ಯಕ್ಟಿಂಗ್ ತರಬೇತಿಯೂ ನಡೆಯಲಿದೆ. ಒಟ್ಟಿನಲ್ಲಿ ಹೀರೋ ಆಗಲು ಏನ್ ಬೇಕು ಅದನ್ನು‌ಶ್ರದ್ದೆಯಿಂದ ಕಲಿಯಬೇಕೆಂದು ನಿರ್ಧರಿಸಿದ್ದೇನೆ ಎನ್ನುವುದು ಜೈ ಸನ್, ಸದ್ಯಕ್ಕೆ ಸ್ಯಾಂಡಲ್ ವುಡ್ ನಲ್ಲಿ ತಮಗೆ ನಟ ಯಶ್ ಅಂದ್ರೆ ಅಚ್ಚು ಮೆಚ್ಚು ಅಂತಾರೆ. ಅದೇ ರೀತಿ ಜೈಸನ್ ಕೂಡ ಬೆಳೆಯಲಿ ಎನ್ನುವುದು ‘ಸಿನಿ‌ಲಹರಿ ‘ಹಾರೈಕೆ.

Categories
ಸಿನಿ ಸುದ್ದಿ

ಅಬ್ಬರಿಸಲು ಸಜ್ಜಾದ ಪ್ರಜ್ವಲ್‌ ಅಬ್ಬರ! ರಾಮ್‌ನಾರಾಯಣ್‌ ನಿರ್ದೇಶನದಲ್ಲಿ ಡೈನಾಮಿಕ್‌ ಪ್ರಿನ್ಸ್‌ ತ್ರೀ ಶೇಡ್‌

ಮೂರು ಅವತಾರದಲ್ಲಿ ಎದುರಾಳಿ ಸಂಹಾರ

ಪ್ರಜ್ವಲ್‌ ದೇವರಾಜ್‌ ಅಭಿನಯದ ಹೊಸ ಚಿತ್ರ “ವೀರಂ” ಇತ್ತೀಚೆಗಷ್ಟೇ ಶುರುವಾಗಿದೆ. ಅದಕ್ಕೂ ಮುನ್ನ ಶುರುವಾಗಿದ್ದ ಅವರ ಹೊಸ ಚಿತ್ರ “ಅಬ್ಬರ” ಈಗ ಅಬ್ಬರಿಸಲು ಸಜ್ಜಾಗಿದೆ. ಈಗಾಗಲೇ ಶೇ.೭೦ರಷ್ಟು ಚಿತ್ರೀಕರಣ ಮುಗಿಸಿರುವ “ಅಬ್ಬರ” ಇನ್ನುಳಿದ ಚಿತ್ರೀಕರಣ ಪೂರೈಸಿದರೆ ಪ್ರೇಕ್ಷಕರ ಮುಂದೆ ಬರಲು ರೆಡಿ. ಇತ್ತೀಚೆಗೆ ಚಿತ್ರತಂಡದ ಜೊತೆ ಆಗಮಿಸಿದ್ದ ನಿರ್ದೇಶಕ ರಾಮ್‌ನಾರಾಯಣ್‌, ತಮ್ಮ “ಅಬ್ಬರ” ಕುರಿತು ಒಂದಷ್ಟು ಮಾಹಿತಿ ಹಂಚಿಕೊಂಡಿದ್ದು ಹೀಗೆ.
“ನಾನು ಈಗಾಗಾಲೇ ದೇವರಾಜ್‌ ಸರ್‌ ಜೊತೆ, ಪ್ರಣವ್‌ ಅವರ ಜೊತೆ ಕೆಲಸ ಮಾಡಿದ್ದೇನೆ. ಆದರೆ, ಪ್ರಜ್ವಲ್‌ ದೇವರಾಜ್‌ ಜೊತೆ ಕೆಲಸ ಮಾಡುವ ಅವಕಾಶ ಸಿಕ್ಕಿರಲಿಲ್ಲ. ಅದು “ಅಬ್ಬರ” ಮೂಲಕ ಸಿಕ್ಕಿದೆ. ಈ ಸಿನಿಮಾದ ಕಥೆ ಹೇಳಬೇಕು ಅಂತ ಫೋನ್‌ ಮಾಡಿದಾಗ, ಪ್ರಜ್ವಲ್‌ ಅವರು, ಒಪ್ಪಿ, ಕಥೆ ಹೇಳೋಕೆ ಕರೆದರು. ಹೋಗಿ ಕಥೆ ಹೇಳಿದೆ. ನಾನು ಇಷ್ಟು ವರ್ಷಗಳ ಅನುಭವದಲ್ಲಿ ಸಾಕಷ್ಟು ಹೀರೋಗಳಿಗೆ ಕಥೆ ಹೇಳಿದ್ದೇನೆ. ಆದರೆ, ಪ್ರಜ್ವಲ್‌ ಅವರಿಗೆ ಹೇಳಿದ ಅನುಭವ ಮರೆಯಲಾರೆ. ಯಾಕೆಂದರೆ, ಅವರು ತುಂಬಾ ಆಸಕ್ತಿಯಿಂದ, ಶ್ರದ್ಧೆಯಿಂದ ಕಥೆ ಕೇಳಿದ್ದಲ್ಲದೆ, ಒಮ್ಮೆಲೇ ಈ ಸಿನಿಮಾ ಮಾಡೋಣ ಎಂದು ಗ್ರೀನ್‌ಸಿಗ್ನಲ್‌ ಕೊಟ್ಟರು. ಹಾಗಾಗಿ ಈ “ಅಬ್ಬರ” ಶುರುವಾಯ್ತು.

ಅಪ್ಪ ಮಗನ ಬಾಂಧವ್ಯ ಹೈಲೆಟ್
ಇಲ್ಲಿ ಮೂವರು ನಾಯಕಿಯರು ಇದ್ದಾರೆ. ಕಥೆಯಲ್ಲಿ ಸಸ್ಪೆನ್ಸ್‌ ಇದೆ. ರಾಜ್‌ಶ್ರೀ ಪೊನ್ನಪ್ಪ, ಲೇಖಾಚಂದ್ರ, ನಿಮಿಕಾ ರತ್ನಾಕರ್‌ ನಾಯಕಿಯರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಪ್ರಜ್ವಲ್‌ ದೇವರಾಜ್‌ ಅವರಿಗಿಲ್ಲಿ ಮೂರು ವಿಭಿನ್ನ ಶೇಡ್‌ ಇರುವ ಪಾತ್ರವಿದೆ. ಶೂಟಿಂಗ್‌ ವೇಳೆ ಒಂದೇ ದಿನ ಮೂರು ಶೇಡ್‌ ಇರುವ ಪಾತ್ರ ಮಾಡಿದ್ದು ವಿಶೇಷ. ಒಂದು ಶಾಟ್‌ ಆದ ಕೂಡಲೇ, ಇನ್ನೊಂದು ಶೇಡ್‌ ಪಾತ್ರಕ್ಕೆ ರೆಡಿಯಾಗಿ ಬರುತ್ತಿದ್ದರು. ಎಲ್ಲೂ ಸಮಯ ತೆಗೆದುಕೊಳ್ಳದೆ, ತುಂಬಾ ಸ್ಪೀಡ್‌ ಆಗಿಯೇ ರೆಡಿಯಾಗಿ ಕ್ಯಾಮೆರಾ ಮುಂದೆ ನಿಲ್ಲುತ್ತಿದ್ದರು. ಅವರ ಶ್ರದ್ಧೆ ನನಗೆ ಇಷ್ಟವಾಯಿತು. ಚೆನ್ನೈ ಮೂಲದ ಜಿ.ಕೆ.ಗಣೇಶ್‌ ಕ್ಯಾಮೆರಾ ಹಿಡಿದಿದ್ದಾರೆ. ‌‌

ಹೈವೋಲ್ಟೇಜ್‌ ಸ್ಟಂಟ್ಸ್

ಚಾಲೆಂಜಿಂಗ್‌ ಸೀನ್‌ಗಳನ್ನು ತುಂಬಾನೇ ಚೆನ್ನಾಗಿ ಸೆರೆ ಹಿಡಿದಿದ್ದಾರೆ. ಎಂದಿನಂತೆ ನನ್ನ ಜೊತೆ ವೆಂಕಟೇಶ್‌ ಯುಡಿವಿ ಸಂಕಲನ ಮಾಡಿದ್ದಾರೆ. ರವಿಬಸ್ರೂರು ಅವರ ಅದ್ಭುತ ಸಂಗೀತವಿದೆ. ಯೋಗರಾಜ್‌ಭಟ್‌, ವಿಜಯ್‌ ಭರಮಸಾಗರ ಸಾಹಿತ್ಯವಿದೆ. ನಾನೂ ಒಂದು ಹಾಡು ಬರೆದಿದ್ದೇನೆ. ಚಿತ್ರದಲ್ಲಿ ಸ್ಟಂಟ್ಸ್‌ ಕೂಡ ಹೈಲೈಟ್.‌ ವಿನೋದ್‌, ಪಳನಿರಾಜ್, ಡಿಫರೆಂಟ್‌ ಡ್ಯಾನಿ ಮತ್ತು ಮಾಸ್‌ಮಾದ ಒಂದೊಂದು ಫೈಟ್‌ ಸಂಯೋಜಿಸಿದ್ದಾರೆ. ಸದ್ಯಕ್ಕೆ ಹಿನ್ನೆಲೆ ಸಂಗೀತ ಬಾಕಿ ಇದೆ. ಇಷ್ಟೊತ್ತಿಗಾಗಲೇ ಚಿತ್ರೀಕರಣ ಮುಗಿಯಬೇಕಿತ್ತು. ಕೊರೊನಾ ಸಮಸ್ಯೆಯಿಂದ ತಡವಾಗಿದೆ” ಎಂದು ವಿವರ ಕೊಟ್ಟ ರಾಮ್‌ನಾರಾಯಣ್‌, ಕಥೆ ಬಗ್ಗೆ ಹೇಳುವುದಾದರೆ, ಒಬ್ಬ ದುಷ್ಟನ ಸಂಹಾರ ಮಾಡಲು ಭಗವಂತ ಹೇಗೆ ಹಲವು ಅವತಾರ ಎತ್ತುತ್ತಾನೋ, ಹಾಗೆ ನಮ್ಮ ಚಿತ್ರದ ಹೀರೋ ಹಲವು ಅವತಾರಗಳನ್ನು ತಾಳಿ ಎದುರಾಳಿಯನ್ನು ಸಂಹರಿಸುತ್ತಾನೆ. ತಂದೆ ಮೇಲೆ ಮಗನಿಗಿರುವ ಗೌರವ, ಪ್ರೀತಿಸಿದ ಹುಡುಗಿಯನ್ನೇ ತನ್ನ ಪ್ರತೀಕಾರಕ್ಕೆ ಬಳಸಿಕೊಳ್ಳುವಂತಹ ಸಂದರ್ಭ ಬಂದಾಗ ಮಾಡುವ ಕೆಲಸ, ತನ್ನ ಕುಟುಂಬವನ್ನು ಕಾಪಾಡಿಕೊಳ್ಳಲು ಮಾಡುವಂತಹ ತ್ಯಾಗ, ಕಾನೂನಿನ ಚೌಕಟ್ಟಿನಲ್ಲಿ ಎಲ್ಲವನ್ನೂ ನಿಭಾಹಿಸುವ ಕರ್ತವ್ಯದಲ್ಲಿ ಹೀರೋ ಹೇಗೆಲ್ಲಾ ವರ್ತಿಸುತ್ತಾನೆ ಅನ್ನೋದು ಕಥೆ ಎನ್ನುತ್ತಾರೆ ಅವರು.

ಕಥೆಯಲ್ಲೊಂದು ವಿಶೇಷತೆ ಇದೆ
ಪ್ರಜ್ವಲ್ ದೇವರಾಜ್‌ ಅವರಿಗೆ ಈ ಚಿತ್ರ ಮಾಡಬೇಕೆನಿಸಿದ್ದು, ಕಥೆ ಮತ್ತು ಪಾತ್ರವಂತೆ. ಅದರ ಜೊತೆಗೆ ನಿರ್ದೇಶಕ ರಾಮ್‌ನಾರಾಯಣ್‌ ಅವರು ಕಮರ್ಷಿಯಲ್‌ ನಿರ್ದೇಶಕರು ಎಂಬ ಕಾರಣವೂ ಕೂಡ. “ಕಥೆ ಕೇಳಿದಾಗ, ಅದರಲ್ಲೊಂದು ವಿಶೇಷತೆ ಇತ್ತು. ಮೂರು ಶೇಡ್‌ ಪಾತ್ರ ಇದ್ದುದರಿಂದ ನನಗೂ ಚಾಲೆಂಜ್‌ ಎನಿಸಿತ್ತು. ರಾಮ್‌ನಾರಾಯನ್‌ ಹೆಣೆದ ಕಥೆಯೊಳಗೆ ಗಟ್ಟಿತನವಿತ್ತು. ಹಾಗಾಗಿ ಅವರೊಂದಿಗೆ ಕೆಲಸ ಮಾಡಲೇಬೇಕು ಎನಿಸಿ ಈ ಚಿತ್ರ ಒಪ್ಪಿದೆ. ನಾನು ಅಂದುಕೊಂಡಿದ್ದಕ್ಕಿಂತಲೂ ಚೆನ್ನಾಗಿಯೇ ಸಿನಿಮಾ ಮಾಡಿದ್ದಾರೆ. ರಾಮ್‌ನಾರಾಯಣ್‌ ಒಮ್ಮ ಕಮರ್ಷಿಯಲ್ ನಿರ್ದೇಶಕರ ಜೊತೆಗೆ ಒಳ್ಳೆಯ ಮನುಷ್ಯ. ಹಾಗಾಗಿಯೇ ಈ ಚಿತ್ರ ತುಂಬಾನೇ ಚೆನ್ನಾಗಿ ಮೂಡಿಬಂದಿದೆ. ನಾನು ಮೂರು ವಿಭಿನ್ನ ಶೇಡ್‌ ಇರುವ ಪಾತ್ರಕ್ಕೆ ಎಷ್ಟರಮಟ್ಟಿಗೆ ನ್ಯಾಯ ಸಲ್ಲಿಸಿದ್ದೇನೋ ಗೊತ್ತಿಲ್ಲ. ಆದರೂ ನಿರ್ದೇಶಕರ ಕಲ್ಪನೆಗೆ ತಕ್ಕಂತೆ ಕೆಲಸ ಮಾಡಿದ್ದೇನೆ. ಇನ್ನು, ನಿರ್ಮಾಪಕ ಬಸವರಾಜ್‌ ಅವರು ಸಾಕಷ್ಟು ಖರ್ಚು ಮಾಡಿದ್ದಾರೆ. “ಅಬ್ಬರ” ಅಂದಾಕ್ಷಣ, ಎಲ್ಲವೂ ಅಬ್ಬರವಾಗಿರಬೇಕು. ಅದು ತೆರೆಯ ಮೇಲೆ ನೋಡಿದರೆ, ಅಷ್ಟೊಂದು ಅಬ್ಬರ ಅಂತ ಗೊತ್ತಾಗುತ್ತೆ. ಸಿನಿಮಾಗೆ ಏನೆಲ್ಲಾ ಬೇಕೋ ಅದನ್ನು ಕೊಟ್ಟಿದ್ದಾರೆ. ಸಿನಿಮಾ ಅಬ್ಬರವಾಗಿದೆʼ ಎನ್ನುತ್ತಾರೆ ಪ್ರಜ್ವಲ್‌ ದೇವರಾಜ್.‌

ಮೂವರ ಬೆಡಗಿಯರ ಜೊತೆ ಡಿಂಗು ಡಾಂಗು
ನಾಯಕಿ ನಿಮಿಕಾ ರತ್ನಾಕರ್‌ ಅವರಿಗೆ ಇಲ್ಲಿ ಒಂದು ರೀತಿಯ ಬಜಾರಿ ಪಾತ್ರವಂತೆ. ಪ್ರಜ್ವಲ್‌ ಅವರ ಜೊತೆ ಕೆಲಸ ಮಾಡಿದ್ದು ಅವರಿಗೆ ಮರೆಯಲಾರದ ಅನುಭವವಂತೆ. ತುಂಬಾನೇ ಕಂಫರ್ಟಬಲ್ ಟೀಮ್‌ ಜೊತೆ ಕೆಲಸ ಮಾಡಿದ್ದು ಖುಷಿ ಕೊಟ್ಟಿದೆ” ಎಂಬುದು ನಿಮಿಕಾ ಮಾತು. ಇನ್ನು, ರಾಜ್‌ಶ್ರೀ ಪೊನ್ನಪ್ಪ ಅವರು ಇಷ್ಟು ದಿನ ಮುಂಬೈನ ರಂಗಭೂಮಿಯಲ್ಲಿ ಕೆಲಸ ಮಾಡುತ್ತಿದ್ದರಂತೆ. ಹಾಗಾಗಿ, ಕನ್ನಡದಲ್ಲಿ ಕಾಣಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ ಎನ್ನುವ ಅವರು, “ಅಬ್ಬರ” ಮೂಲಕ ಎಂಟ್ರಿಯಾಗಿದ್ದೇನೆ. ನಾನಿಲ್ಲಿ ಮಧ್ಯಮ ವರ್ಗದ ಹುಡುಗಿಯಾಗಿ ಕಾಣಿಸಿಕೊಂಡಿದ್ದೇನೆ. ಮೊದಲ ಸಲ ಪ್ರಜ್ವಲ್‌ ಸರ್‌ ಜೊತೆ ಕೆಲಸ ಮಾಡಿದ್ದೇನೆ. ಪಾತ್ರದ ಬಗ್ಗೆ ಹೇಳುವುದಾದರೆ, ಅದೊಂದು ಸಿಂಪಲ್‌ ಹುಡುಗಿಯ ಪಾತ್ರ. ತುಂಬಾನೇ ಮುಗ್ಧತೆ ಇರುವಂಥದ್ದು. ನಿರ್ದೇಶಕ ರಾಮ್‌ ನಾರಾಯಣ್‌ ಸರ್‌, ನನ್ನ ನಂಬಿ ಅವಕಾಶ ಕೊಟ್ಟಿದ್ದಾರೆ. ಅದಕ್ಕೆ ನ್ಯಾಯ ಸಲ್ಲಿಸಿದ್ದೇನೆ ಎಂಬ ನಂಬಿಕೆಯೂ ಇದೆ. ಇನ್ನು, ನಿರ್ಮಾಪಕ ಬಸವರಾಜ್‌ ಅವರು, ಯಾವುದಕ್ಕೂ ಕಡಿಮೆ ಮಾಡದೆ, ಅದ್ಧೂರಿಯಾಗಿಯೇ ಸಿನಿಮಾ ಮಾಡಿದ್ದಾರೆ ಎಂದರು ರಾಜ್‌ಶ್ರೀ ಪೊನ್ನಪ್ಪ.  ಲೇಖಾಚಂದ್ರ ಅವರಿಲ್ಲಿ ಡಾಕ್ಟರ್‌ ಪಾತ್ರ ಮಾಡಿದ್ದು, ಅವರಿಗೇ ಇಲ್ಲೊಂದು ಖಾಯಿಲೆ ಇರುವ ಪಾತ್ರ ಕೊಟ್ಟಿದ್ದಾರಂತೆ. ಅದು ಏನೆಂಬುದನ್ನು ಸಿನಿಮಾದಲ್ಲೇ ನೋಡಬೇಕು ಎನ್ನುವ ಲೇಖಾಚಂದ್ರ, ಪ್ರಜ್ವಲ್‌ ಜೊತೆ ರವಿಶಂಕರ್‌ ಕಾಂಬಿನೇಷನ್‌ನಲ್ಲಿ ಕಾಣಿಸಿಕೊಂಡಿದ್ದು ಹೆಮ್ಮೆ ಎನಿಸಿದೆ ಎನ್ನುತ್ತಾರೆ ಅವರು.

ಗೆಳೆಯನಿಗೆ ಮಾಡಿದ ಚಿತ್ರ
ನಿರ್ಮಾಪಕ ಬಸವರಾಜ್‌ ಮಂಚಯ್ಯ (ಹಿತ್ತಲಪುರ) ಅವರು ಈ ಹಿಂದೆ “ಬಿ೩” ಸಿನಿಮಾ ಮಾಡಿದ್ದರು. ನಿರ್ದೇಶಕ ರಾಮ್‌ನಾರಾಯಣ್‌ ಮತ್ತು ನಿರ್ಮಾಪಕ ಬಸವರಾಜ್‌ ಕಳೆದ ಹತ್ತು ವರ್ಷಗಳ ಗೆಳೆಯರಂತೆ. ಹತ್ತು ವರ್ಷದ ಹಿಂದೆ ಒಂದು ಸಿನಿಮಾ ಮಾಡೋಣ ಅಂತ ನಿರ್ಮಾಪಕರು ಹೇಳಿದ್ದರಂತೆ. ಆದರೆ, ಕಾಲ ಕೂಡಿ ಬಂದಿರಲಿಲ್ಲವಂತೆ. ಈಗ “ಅಬ್ಬರ” ಮೂಲಕ ಅದು ಸಾಧ್ಯವಾಗಿದೆ. ಒಂದೊಳ್ಳೆಯ ಚಿತ್ರ ಮಾಡಿರುವ ಖುಷಿ ನನಗಿದೆ” ಎನ್ನುತ್ತಾರೆ ಬಸವರಾಜ್‌ ಮಂಚಯ್ಯ.

Categories
ಸಿನಿ ಸುದ್ದಿ

ಮನೆ ಹತ್ತಿರ ಬರಬೇಡಿ, ನೀವಿರುವ ಕಡೆಯಿಂದಲೇ ಹರಸಿ, ಹಾರೈಸಿ

ಅಭಿಮಾನಿಗಳಲ್ಲಿ  ರೋರಿಂಗ್ ಸ್ಟಾರ್ ಶ್ರೀ ಮುರಳಿ‌ ಮನವಿ

 

ನಟ ರೋರಿಂಗ್ ಸ್ಟಾರ್ ಶ್ರೀ‌ಮುರಳಿ ಅವರಿಗೆ ನಾಳೆ( ಡಿ.17) ಹುಟ್ಟು ಹಬ್ಬ.‌‌ ಆದರೆ ಈ ಬಾರಿಯ ಹುಟ್ಟು ಹಬ್ಬವನ್ಜು ಅವರು ತುಂಬಾ ಸರಳವಾಗಿ‌ ಆಚರಿಸಿಕೊಳ್ಳಲು ನಿರ್ಧರಿಸಿದ್ದಾರೆ. ಅದಕ್ಕೆ ಕಾರಣ ಕೊರೋನಾ. ಪ್ರತಿ ವರ್ಷ ಈ ದಿನ‌ ಬಂತೆಂದರೆ ಮನೆ ಮುಂದೆ ‌ಸಾವಿರಾರು ಮಂದಿ ಅಭಿಮಾನಿಗಳ ಜತೆಗೆ ಕೇಕ್ ಕತ್ತರಿಸಿ, ಅದ್ದೂರಿಯಾಗಿ ಬರ್ತ್ ಡೇ ಆಚರಿಸಿಕೊಳ್ಳುತ್ತಿದ್ದ ನಟ ಶ್ರೀ‌ಮುರಳಿ, ಈ ಬಾರಿ ಕೊರೋನಾ‌ ಕಾರಣದಿಂದಲೇ ಸಿಂಪಲ್ ಬರ್ತ್ ಡೇ ಆಚರಣೆಗೆ ಮುಂದಾಗಿದ್ದಾರೆ. ಹಾಗಾಗಿ ಅಂದು ಅಭಿಮಾನಿಗಳು‌ ಎಲ್ಲೆಂದೆಲ್ಲಿಂದಲೋ ‌ಬಂದು‌ ಮನೆ ಮುಂದೆ ಸೇರುವುದು ಬೇಡ ಅಂತ ಮನವಿ‌ ಮಾಡಿಕೊಂಡಿದ್ದಾರೆ.

ಕೊರೋನಾ ಕಾರಣಕ್ಕೆ ಈವರ್ಷ ಕನ್ನಡದ ಬಹಳಷ್ಟು ನಟರು ಹಾಗೂ ನಟಿಯರು ತಮ್ಮ‌ಹುಟ್ಟು ಹಬ್ಬವನ್ನು ತುಂಬಾ ಸರಳವಾಗಿ ಆಚರಿಸಿಕೊಂಡಿದ್ದು ನಿಮಗೂ ಗೊತ್ತು, ಅದೇ ರೀತಿ ನಟ ಶ್ರೀ‌ಮುರಳಿ ಕೂಡ ಅದೇ ಸೂತ್ರ ಪಾಲಿಸುತ್ತಿದ್ದಾರೆ. ಅದು‌ ಅನಿವಾರ್ಯ ಕೂಡ. ಕೊರೋನಾ‌ ತಡೆಗಟ್ಟಬೇಕಾದರೆ, ಹೆಚ್ವು ಜನ ಒಂದೆಡೆ ಸೇರುವುದು, ಸಭೆ – ಸಮಾರಂಭ ನಡೆಸುವುದಕ್ಕೂ ಬ್ರೇಕ್ ಹಾಕಬೇಕಿದೆ. ಒಬ್ಬ ಜನಪ್ರಿಯ ನಟನಾಗಿ ಶ್ರೀ‌ಮುರಳಿ ಕೂಡ ಅದನ್ನೇ ಪಾಲಿಸುತ್ತಿರುವುದು ವಿಶೇಷ.‌‌

ಆದರೆ ಅಭಿಮಾನಿಗಳಿಗೆ ಬೇಸರ. ಯಾಕಂದ್ರೆ ತಮ್ಮ‌ನೆಚ್ಚಿನ‌ ನಟನ ಹುಟ್ಟು ಹಬ್ಬವನ್ನು ಅದ್ದೂರಿಯಾಗಿ ಆಚರಿಸಿಕೊಳ್ಳುತ್ತಿಲ್ಲ ಎನ್ನುವುದಕ್ಕಾಗಿ. ಆದರೆ ಶ್ರೀ ಮುರಳಿ ಅವರು ಅದಕ್ಕೂ ಅಭಿಮಾನಿಗಳಲ್ಲಿ ತಮ್ಮದೇ ರೀತಿಯಲ್ಲಿ‌ಮನವಿ‌ಮಾಡಿಕೊಂಡಿದ್ದಾರೆ.

ಅಭಿಮಾನಿಗಳೇ ದೇವರೆಂದು ಹೇಳಿ, ಅದನ್ನು ಪ್ರಾಮಾಣಿಕವಾಗಿ ಪಾಲಿಸಿದ ಅಣ್ಣಾವ್ರ ಮಾತಿನಿಂತೆ ನಡೆಯುವ ನಟ ನಾನು. ಯಾವುದೇ ಕಲಾವಿದನಿಗೆ ಆಭಿಮಾನಿಗಳೆ ದೇವರು. ಅವರಿಂದಲೇ ನಮ್ಮ ಸ್ಟಾರ್‌ಗಿರಿ ಎಂಬುವುದು ನನ್ನ ಬಲವಾದ ನಂಬಿಕೆ. ನಾನು ಕೂಡ ನಟ ಗುರುತಿಸಿಕೊಂಡಿದ್ದೇನೆಂದರೆ ಅದಕ್ಕೆ ಕಾರಣ ಅಭಿಮಾನಿಗಳ ಆಶೀರ್ವಾದ. ಆದರೆ ಕೊರೋನಾದ ಅಡಚಣೆ ಇರುವುದು ನಿಮಗೂ ತಿಳಿದಿದ್ದೆ. ಹಾಗಾಗಿ ಡಿಸೆಂಬರ್‌ 17 ರಂದು ನನ್ನ ಹುಟ್ಟು ಹಬ್ಬವನ್ನು ತುಂಬಾ ಸರಳವಾಗಿ ಆಚರಿಸಿಕೊಳ್ಳಲು ನಿರ್ಧರಿಸಿದ್ದೇನೆ’ ಎಂದು‌ಸ್ಪಷ್ಟ ಪಡಿಸಿದ್ದಾರೆ.

ಈ ಬಾರಿಯ ನನ್ನ ಹುಟ್ಟು ಹಬ್ಬ ತುಂಬಾ ಸರಳವಾಗಿರುತ್ತೆ. ಅದರ ಜತೆಗೆ ಆ ದಿನ ನಾನು ಮನೆಯಲ್ಲಿರುವುದಿಲ್ಲ. ಮನೆ ದೇವರಿಗೆ ವಿಶೇಷ ಪೂಜೆ ಸಲ್ಲಿಸುವುದಕ್ಕಾಗಿ ಕುಟುಂಬ ಸಮೇತ ಹೊರಗಡೆ ಹೋಗುತ್ತೇನೆ. ಇಂತಹ ಸಮಯದಲ್ಲಿ ಅಭಿಮಾನಿಗಳು ನನ್ನ ಹುಟ್ಟು ಹಬ್ಬದ ಆಚರಣೆಗೆ ಎಲ್ಲಿಂದಲೋ ಬಂದು, ನಮ್ಮ ಮನೆ ಮುಂದೆ ಜಮಾಯಿಸಿಕೊಳ್ಳುವುದು ತರವಲ್ಲ. ಹಾಗಂತ ನಾನು ನಿಮ್ಮ ಪ್ರೀತಿ, ಆಕ್ಕರೆಯನ್ನು ನಾನು ತಿರಸ್ಕರಿಸುವುದಿಲ್ಲ. ನಿಮ್ಮ ಅಭಿಮಾನ, ಪ್ರೀತಿ, ಹಾರೈಕೆ ನನಗೆ ಇಂದು, ಎಂದೆಂದೂ ಬೇಕು. ಅದಕ್ಕೆ ನೀವು ಮಾಡಬೇಕಾಗಿರುವುದೆನೆಂದರೆ, ನೀವು ಇರುವ ಕಡೆಯಿಂದಲೇ ನನ್ನನ್ನು ಹಾರೈಸಿ, ಆಶೀರ್ವದಿಸಿ. ಅದೇ ನೀವು ನನಗೆ ಹುಟ್ಟು ಹಬ್ಬದಂದು ಕೊಡುವ ಬಹುದೊಡ್ಡ ಕಾಣಿಕೆ’ ಎಂದು ಅಭಿಮಾನಿಗಳ ಲ್ಲಿ‌ಮನವಿ‌‌ಮಾಡಿಕೊಂಡಿದ್ದಾರೆ ನಟ ಶ್ರೀ‌ಮುರಳಿ.

ಈ ಬಾರಿಯ ತಮ್ಮ ಹುಟ್ಟು ಹಬ್ಬವನ್ನು ತುಂಬಾ ಸರಳವಾಗಿ ಆಚರಿಸಿಕೊಳ್ಳಲು ನಿರ್ಧರಿಸಿರುವುದು ಅವರ ಬಹಳಷ್ಟು ಅಭಿಮಾನಿಗಳಿಗೆ ಗೊತ್ತಾಗಿಲ್ಲ. ಹಾಗಾಗಿ ಗುರುವಾರ ಬೆಳಗ್ಗೆಯಿಂದಲೇ ಅವರ ಮನೆ ಎದುರು ಸೇರಿಕೊಂಡಿದ್ದರ ವಿಷಯ ಕೇಳಿ, ಶ್ರೀಮುರಳಿ ಅವರೇ ಬೇಸರ ವ್ಯಕ್ತಪಡಿಸಿದ್ದಾರಂತೆ. ಅದೇ ಕಾರಣಕ್ಕೆ‌ ‌ಈ ಬಾರಿಯ ಸರಳ ಹುಟ್ಟು ಹಬ್ಬದ ಆಚರಣೆಯ ತಮ್ಮ ನಿರ್ಧಾರ ಅಭಿಮಾನಿಗಳಿಗೆ ಗೊತ್ತಾಗಲಿದೆ ಎಂದು ಅವರು ಅಧಿಕೃತ ವಾಗಿಯೇ ಸಿನಿ ಲಹರಿ ಜತೆ ಮಾತನಾಡಿದರು.

Categories
ಸಿನಿ ಸುದ್ದಿ

ಬರಗಾಲದಲ್ಲೂ ಬೆಳೆ ತೆಗೆದ ಆಕ್ಟ್‌ 1978

 ಟೆನೆಟ್‌ ಗೂ ಟಾಂಟ್‌ ಕೊಟ್ಟ ಕನ್ನಡ ಸಿನಿಮಾ

ಆಕ್ಟ್‌ 1978 ಚಿತ್ರ ತೆರೆ ಕಂಡು ಯಶಸ್ವಿ 25 ದಿನಗಳ ಪ್ರದರ್ಶನ ಕಂಡಿದೆ. ಕೊರೋನಾ ಆತಂಕದ ನಡುವೆಯೇ ಈ ಚಿತ್ರ ಇಷ್ಟು ದಿನಗಳೂ ಯಶಸ್ವಿ ಪ್ರದರ್ಶನ ಕಂಡಿದ್ದು ಒಂದ್ರೀತಿ ಮಿರಾಕಲ್.‌ ಹಾಗೆ ನೋಡಿದರೆ ಉತ್ತಮ ಕಲೆಕ್ಷನ್‌ ಜತೆಗೆಯೇ ೨೫ ದಿನಗಳ ಪ್ರದರ್ಶನ ಎನ್ನುವುದು ಬರಗಾಲದಲ್ಲಿ ಬೆಳೆ ತೆಗೆದ ಹಾಗೆ. ಕೊರೋನಾ ಕಾರಣಕ್ಕೆ ಲಾಕ್‌ಡೌನ್ ಆಗಿ ಹೆಚ್ಚು ಕಡಿಮೆ ಐದಾರು ತಿಂಗಳಿಗೆ ಚಿತ್ರ ಮಂದಿರಗಳು ಮತ್ತೆ ಒಪನ್ ಅದವು. ಅದರೂ ಕೊರೋನಾ ಆತಂಕ ಮಾತ್ರ ಇನ್ನು ಕಮ್ಮಿ ಆಗಿಲ್ಲ. ಚಿತ್ರ ಮಂದಿರಗಳು ಅಷ್ಟೋ ಇಷ್ಟೋ ಸುರಕ್ಷತೆ ಕ್ರಮಗಳ ಮೂಲಕ ಒಪನ್‌ ಅಗಿದ್ದರೂ, ಚಿತ್ರ ಮಂದಿರಕ್ಕೆ ಬರುವಷ್ಟು ಜನ ಇನ್ನು ಕೊರೋನಾ ಆತಂಕದಿಂದ ದೂರವಾಗಿಲ್ಲ. ಇಂತಹ ದಿನಗಳನಡುವೆಯೇ ಈ ಸಿನಿಮಾ ಯಶಸ್ವಿ ಪ್ರದರ್ಶನ ಕಂಡಿದೆಯಂದ್ರೆ, ಬರಗಾಲದಲ್ಲಿ ಬೆಳೆ ತೆಗೆದ ಹಾಗೆಯೇ ಹೌದು.

ಲಾಕ್‌ ಡೌನ್‌ ನಂತರದ ಮೊದಲ ಸಿನಿಮಾವಾಗಿ ಆಕ್ಟ್‌ 1978 ತೆರೆಗೆ ಬಂದಿದ್ದು ಕೂಡ ಒಂದು ಸಾಹಸವೇ. ಎಲ್ಲರಿಗೂ ಈ ಸಿನಿಮಾದ ಕತೆ ಹೇಗೋ ಏನೋ ಎನ್ನುವಂತೆಯೇ ಇತ್ತು. ಚಿತ್ರ ಮಂದಿರಕ್ಕೆ ಜನ ಬರದಿದ್ದರೆ ನಿರ್ಮಾಪಕರ ಕತೆ ಏನು ಎನ್ನುವುದು ಹಲವರ ಆತಂಕವೂ ಆಗಿತ್ತು. ಆದರೆ ಮುಂದೆ ಆಗಿದ್ದೇ ಬೇರೆ. ಮಲ್ಟಿಪ್ಲೆಕ್ಸ್‌ ಸೇರಿದಂತೆ ಚಿತ್ರಮಂದಿರಗಳಲ್ಲಿ ಅಚ್ಚರಿಯೇ ನಡೆದುಹೋಯಿತು. ಚಿತ್ರ ಮಂದಿರಗಳಿಗೆ ಜನ ಬಂದರು. ಆಕ್ಟ್‌ 1978 ಚಿತ್ರ ತಂಡಕ್ಕೆ ಖುಷಿ ತಂದಿತು. ಅಲ್ಲಿಂದ ಶುರುವಾದ ಈ ಚಿತ್ರದ ಯಶಸ್ವಿ ಜರ್ನಿ , ಇಲ್ಲಿಗೀಗ ೨೫ ದಿನಗಳನ್ನು ಪೂರೈಸಿದೆ. ವಿಶೇಷ ಅಂದ್ರೆ, ಕಳೆದ ವಾರ ಮಲ್ಟಿಪ್ಲೆಕ್ಸ್‌ ಗಳಲ್ಲಿ ಹಾಲಿವುಡ್‌ ಚಿತ್ರ ಟೆನೆಟ್‌ ಗೂ ಟಾಂಟ್‌ ಕೊಟ್ಟಿದೆ ಆಕ್ಟ್‌ 1978 ಚಿತ್ರ. ʼ ಆರಂಭದಿಂದಲೂ ಚಿತ್ರಕ್ಕೆ ಒಳ್ಳೆಯ ರೆಸ್ಪಾನ್ಸ್‌ ಸಿಕ್ಕಿದೆ. ಇದು ಜನ ಆಶೀರ್ವಾದ. ವಾರದ ದಿನಗಳಲ್ಲಂತೂ, ಅದ್ಬುತ ಪ್ರತಿಕ್ರಿಯೆ ಸಿಗುತ್ತಾ ಬಂದಿದೆ. ಕಳೆದ ವಾರ ಬೆಂಗಳೂರಿನ ಒರಾಯನ್‌ ಮಾಲ್‌ ನಲ್ಲಿ ಹಾಲಿವುಡ್‌ ಚಿತ್ರ ಟೆನೆಟ್‌ ಗೂ ಟಾಂಟ್‌ ಕೊಟ್ಟಿದೆ ಆಕ್ಟ್‌ 1978 ಚಿತ್ರ. ಇದು ಕನ್ನಡಿಗರು ಕೊಟ್ಟ ಬೆಂಬಲ. ಇದೆಲ್ಲ ನೋಡಿದರೆ ಖುಷಿ ಆಗುತ್ತದೆʼ ಎನ್ನುತ್ತಾರೆ ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ ನಟ ಸಂಚಾರಿ ವಿಜಯ್.‌ ಹಾಗೆಯೇ ಚಿತ್ರ ತಂಡ ಚಿತ್ರ ಮಂದಿರಗಳಿಗೆ ಭೇಟಿ ನೀಡಿ, ಪ್ರೇಕ್ಷಕರ ಜತೆಗೆ ಮಾತುಕತೆ ನಡೆಸಿದ ಸಂದರ್ಭಗಳಲ್ಲಿ ವ್ಯಕ್ತವಾದ ಅಭಿಪ್ರಾಯಗಳನ್ನು ಸೋಷಲ್‌ ಮೀಡಿಯಾಗಳಲ್ಲಿ ಹಂಚಿಕೊಳ್ಳುತ್ತಾ ಬಂದಿದೆ. ಎಲ್ಲ ಕಡೆಯೂ ಅದ್ಭುತ ಪ್ರತಿಕ್ರಿಯೆ ಸಿಕ್ಕಿದೆ.

Categories
ಸಿನಿ ಸುದ್ದಿ

“ರಾ” ಗಿಣಿ ಪರಾರಿ! ದೂರದ ದುಬೈನಲ್ಲಿ ಅವರಿಗೇನು ಕೆಲಸ?

ಅವರೇಕೆ ಹೀಗೆ ಮಾಡಿದರು?

ಆ ರಾಗಿಣಿ ಬೇರೆ… ಈ “ರಾ” ಗಿಣಿ ಬೇರೆ…

“ರಾ”… ಗಿಣಿ ಈಗ ಪರಾರಿ…!
ಅರೇ, ಇದೇನಪ್ಪಾ, ಡ್ರಗ್ಸ್‌ ಕೇಸ್‌ನಲ್ಲಿ ರಾಗಿಣಿ ಜೈಲುವಾಸ ಅನುಭವಿಸುತ್ತಿದ್ದಾರೆ. ಅವರು ಯಾವಾಗ ಜೈಲಿಂದ ಪರಾರಿಯಾದರು ಎಂಬ ಪ್ರಶ್ನೆ ಮತ್ತು ಅಚ್ಚರಿ ಎರಡೂ ಆಗಬಹುದು. ವಿಷಯವಿಷ್ಟೇ, ಇಲ್ಲಿ ಹೇಳುತ್ತಿರುವ ವಿಷಯ ನಟಿ ರಾಗಿಣಿ ವಿಷಯವಲ್ಲ. “ರಾ” ಎಂಬ ಹೊಸಬರ ಚಿತ್ರದ ನಾಯಕಿಯೊಬ್ಬರ ವಿಷಯ.

ಹೌದು, ನವ ನಿರ್ದೇಶಕ ರಾಜೇಶ್‌ಗೌಡ ಅವರು ಇದೇ ಮೊದಲ ಬಾರಿಗೆ ನಿರ್ದೇಶಿಸಿರುವ “ರಾʼ ಚಿತ್ರದ ನಾಯಕಿ ಸನಾನೈಕ್‌ ಎಂಬುವವರು ಚಿತ್ರದ ಪ್ರಚಾರಕ್ಕೆ ಬಾರದೆ, ಎಲ್ಲೂ ಕಾಣಿಸುತ್ತಿಲ್ಲ. ಸರಿಯಾಗಿ ಚಿತ್ರತಂಡಕ್ಕೆ ಸ್ಪಂದಿಸುತ್ತಿಲ್ಲ ಎಂದು ಚಿತ್ರತಂಡ ಆರೋಪಿಸಿದೆ. ಅಷ್ಟೇ ಅಲ್ಲ, ಸ್ವತಃ ನಿರ್ದೇಶಕ ರಾಜೇಶ್‌ಗೌಡ ಅವರೇ, ನಾಯಕಿ ಸನಾನೈಕ್‌ ಫೋನ್‌ಗೂ ಸಿಗುತ್ತಿಲ್ಲ ಎಂದು ತಮ್ಮ ಅಳಲು ತೋಡಿಕೊಂಡಿದ್ದಾರೆ.

ಸನಾ‌ ನೈಕ್

ವಿಷಯವೇನು…?
ಕನ್ನಡದಲ್ಲಿ “ರಾ” ಹೆಸರಿನ ಸಿನಿಮಾವೊಂದು ರೆಡಿಯಾಗಿರುವುದು ಗೊತ್ತೇ ಇದೆ. ಚಿತ್ರಕ್ಕೆ ಸೆನ್ಸಾರ್‌ ಕೂಡ ಆಗಿದೆ. ಈಗ ಪ್ರೇಕ್ಷಕರ ಎದುರು ಬರಲು ಚಿತ್ರ ರೆಡಿಯಾಗಿದೆ. ವಾಹಿನಿಯಲ್ಲಿ ಸಿನಿಮಾ ವರದಿಗಾರರಾಗಿ ಕೆಲಸ ಮಾಡಿದ್ದ ರಾಜೇಶ್‌ಗೌಡ, ಸುಮಾರು ವರ್ಷಗಳ ಅನುಭವದ ಮೇಲೆ “ರಾ” ಸಿನಿಮಾವೊಂದನ್ನು ನಿರ್ದೇಶಿಸಿದ್ದಾರೆ. ಕಥೆ, ಚಿತ್ರಕಥೆ, ಸಂಭಾಷಣೆಯ ಜವಾಬ್ದಾರಿಯೂ ಇವರದೇ. ಈ ಸಿನಿಮಾಗೆ, ಸನಾ ನೈಕ್‌ ನಾಯಕಿಯಾಗಿದ್ದಾರೆ. ಸಿನಿಮಾದ ಚಿತ್ರೀಕರಣ ಮುಗಿಸಿ, ಬಿಡುಗಡೆಗೆ ಸಜ್ಜಾಗಿರುವ ರಾಜೇಶ್‌ಗೌಡ, ಈಗ ಪ್ರಚಾರಕ್ಕೆ ನಾಯಕಿಯನ್ನು ಕರೆತರಲು ಹರಸಾಹಸ ಪಡುತ್ತಿದ್ದಾರೆ. ಆದರೆ, ನಾಯಕಿ ಮಾತ್ರ, ಇವರ ಫೋನ್‌ ಕಾಲ್‌ಗೆ ಸರಿಯಾಗಿ ಸ್ಪಂದಿಸುತ್ತಿಲ್ಲವಂತೆ. ಸಿನಿಮಾ ಕೆಲಸಗಳು ಕೊರೊನಾ ಮುನ್ನವೇ ಮುಗಿದಿದ್ದವು. ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಸಿನಿಮಾ ಚಟುವಟಿಕೆ ಸ್ಥಗಿತಗೊಂಡಿತ್ತು. ಈಗ ಎಲ್ಲವೂ ಮೆಲ್ಲನೆ ಓಪನ್‌ ಆಗಿರುವುದರಿಂದ “ರಾ” ಸಿನಿಮಾವನ್ನು ಬಿಡುಗಡೆ ಮಾಡಲು ತಯಾರಿ ನಡೆಸಿದ್ದಾರೆ.

ಇದಕ್ಕೂ ಮುನ್ನ, ರಾಜೇಶ್‌ಗೌಡ ಅವರು, ೨೦೧೯ರಲ್ಲಿ ದುಬೈನಲ್ಲಿ ಚಿತ್ರದ ಆಡಿಯೋ ಬಿಡುಗಡೆ ಮಾಡಿದ್ದರು. ಆಗ ನಾಯಕಿ ಸನಾನೈಕ್‌ ಅವರು ದುಬೈನಲ್ಲೇ ಇದ್ದರೂ, ಅವರ ಸಿನಿಮಾದ ಆಡಿಯೋ ಬಿಡುಗಡೆ ಕಾರ್ಯಕ್ರಮಕ್ಕೆ ಬರಲಿಲ್ಲ. ಉಡುಪಿಯಲ್ಲೂ ಒಂದು ದೊಡ್ಡ ಈವೆಂಟ್‌ನಲ್ಲೂ ಭಾಗವಹಿಸಲಿಲ್ಲ. ಎಂಬ ಬೇಸರದ ಮಾತುಗಳನ್ನು ನಿರ್ದೇಶಕ ರಾಜೇಶ್‌ಗೌಡ ಹೊರಹಾಕುತ್ತಾರೆ. ಸದ್ಯಕ್ಕೆ ದುಬೈನಲ್ಲೇ ಬೀಡುಬಿಟ್ಟಿರುವ ನಾಯಕಿ ಸನಾನೈಕ್‌, ಚಿತ್ರದ ಪ್ರಚಾರ ಸಲುವಾಗಿ ಚಿತ್ರತಂಡ ಫೋನ್‌ ಮಾಡಿದರೂ ಯಾವುದೇ ರೀತಿಯಲ್ಲೂ ಉತ್ತರ ಕೊಡುತ್ತಿಲ್ಲ. ಆದರೆ, ಫೆಬ್ರವರಿಯಲ್ಲಿ ಬರ್ತೀನಿ ಅಂತಿದ್ದಾರೆ ವಿನಃ, ಬೇರೇನೂ ಹೇಳುತ್ತಿಲ್ಲ ಎನ್ನುತ್ತಿದ್ದಾರೆ ಎಂಬುದು ನಿರ್ದೇಶಕರ ಹೇಳಿಕೆ.


ಕಳೆದ ಮೂರ್ನಾಲ್ಕು ತಿಂಗಳಿನಿಂದಲೂ ನಾಯಕಿ ಸನಾನೈಕ್‌ ನಿರ್ದೇಶಕರಿಗೆ ಕಾಣುತ್ತಿಲ್ಲ, ಮಾತಿಗೂ ಸಿಗುತ್ತಿಲ್ಲ. ಉಡುಪಿಯೊಲ್ಲೊಂದು ಈವೆಂಟ್‌ ಮಾಡಿದ್ದರೂ ಬಂದಿಲ್ಲ. ಹೊಸಬರು ಎಂಬ ಕಾರಣಕ್ಕೆ ಅವರಿಗೆ ನಾವು ಅವಕಾಶ ಕೊಟ್ಟೆವು. ಆರಂಭದಲ್ಲಿ ಚೆನ್ನಾಗಿಯೇ ಇದ್ದರು. ಈಗ ನೋಡಿದರೆ, ಪ್ರಚಾರಕ್ಕೆ ಬಾರದೆ ಸರಿಯಾಗಿ ಸ್ಪಂದಿಸುತ್ತಿಲ್ಲ. ನಾನು ದುಬೈನಲ್ಲಿದ್ದೇನೆ ಅಂತಾರೆ. ಆದರೆ, ಅಲ್ಲೇನ್‌ ಮಾಡ್ತಾ ಇದ್ದಾರೋ ಗೊತ್ತಿಲ್ಲ. ಸಿನಿಮಾದಲ್ಲಿ ಅವಕಾಶ ಸಿಗುವುದೇ ಕಷ್ಟ. ಆದರೆ, ಅವಕಾಶ ಸಿಕ್ಕರೂ ಈ ನಾಯಕಿ ಚಿತ್ರತಂಡಕ್ಕೆ ಹೀಗೆಲ್ಲಾ ಬೇಜಾರು ಮಾಡುತ್ತಿದ್ದಾರೆ. ಒಂದು ಸಿನಮಾ ಮಾಡಿ ಮುಗಿಸುವುದು ಸುಲಭದ ಕೆಲಸವಲ್ಲ. ನಿರ್ಮಾಪಕರು ನಂಬಿ ಹಣ ಹಾಕಿರುತ್ತಾರೆ. ಅವರಿಗೆ ಹಣ ಹಿಂದಿರುಗಬೇಕಾದರೆ, ಸಿನಿಮಾ ರಿಲೀಸ್‌ ಆಗಬೇಕು, ರಿಲೀಸ್‌ ಮಾಡಬೇಕಾದರೆ, ಅದಕ್ಕೂ ಮೊದಲು ಜನರಿಗೆ ಸಿನಿಮಾ ಬಗ್ಗೆ ಗೊತ್ತಾಗಬೇಕು, ಗೊತ್ತಾಗಬೇಕಾದರೆ, ಸರಿಯಾಗಿಯೇ ಸಿನಿಮಾ ಪ್ರಚಾರ ಮಾಡಬೇಕು. ಆದರೆ, ಪ್ರಚಾರ ಮಾಡಲು ಹೊರಟರೆ, ನಾಯಕಿಯೇ ಸಿಗುತ್ತಿಲ್ಲ. ಏನು ಮಾಡಬೇಕು ಎಂಬುದು ನಿರ್ದೇಶಕರ ಅಳಲು.

ನಿರ್ದೇಶಕ ರಾಜೇಶ್‌ಗೌಡ

ಅದೇನೆ ಇರಲಿ, ಒಂದು ಕನ್ನಡ ಸಿನಿಮಾದ ಕನ್ನಡದ ನಾಯಕಿಯಾಗಿರುವ ಸನಾನೈಕ್‌, ತಮ್ಮ ಸಿನಿಮಾದ ಪ್ರಚಾರಕ್ಕೆ ಬಾರದೆ ದೂರದ ದುಬೈನಲ್ಲಿ ಕುಳಿತರೆ, ಇಲ್ಲಿ ಸಿನಮಾಗೆ ಹಣ ಹಾಕಿರುವ ನಿರ್ಮಾಪಕರ ಗತಿ ಏನು? ಹತ್ತಾರು ಕನಸು ಕಟ್ಟಿಕೊಂಡಿರುವ ನಿರ್ದೇಶಕರ ಪಾಡೇನು? ಈಗಲಾದರೂ ನಾಯಕಿ ಸನಾನೈಕ್‌ ಇಂಡಿಯಾಗೆ ಬಂದು, ತಮ್ಮ “ರಾ” ಸಿನಿಮಾದ ಪ್ರಚಾರಕ್ಕೆ ಮುಂದಾಗುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.

Categories
ಸಿನಿ ಸುದ್ದಿ

ಪ್ರೇಕ್ಷಕನ ಡಿಯರ್ ಆಗ್ತಾನಾ ಈ ಸತ್ಯ?

ಸತ್ಯ ಮೇಲೆ ಸಂತೋಷ್ ಇಟ್ಟಿದ್ದಾರೆ ಬೆಟ್ಟದಷ್ಟು ನಿರೀಕ್ಷೆ !

 

ವರ್ಚಸ್ ಅನ್ನೋದಿದ್ರೂ ನಟ-ನಟಿಯರಿಗೆ ಸಕ್ಸಸ್ ಅನ್ನೋದು ಅತೀ ಮುಖ್ಯ. ಯಾಕಂದ್ರೆ ಅವರ ಆಸ್ತಿತ್ವ ಸಕ್ಸಸ್ ಎನ್ನುವುದರ ಮೇಲೆಯೇ ನಿಂತಿದೆ. ಅದರಲ್ಲೂ ಸಿನಿ ದುನಿಯಾಕ್ಕೆ ಹೊಸದಾಗಿ ಬಂದವರಿಗೆ ಇದು  ತುಂಬಾನೆ ಇಂಫಾರ್ಟೆಂಟ್. ಸದ್ಯಕ್ಕೆ ಒಬ್ಬ ಭರವಸೆಯ ನಟನಾಗಿ ಅಂತಹದೇ ಸಕ್ಸಸ್ ಎದುರು ನೋಡುತ್ತಿರುವ ನಟರ ಪೈಕಿ ಕಿರುತೆರೆಯ ನಿರೂಪಕ ಹಾಗೂ ಮಾಜಿ ಬಿಗ್ ಬಾಸ್ ಕಂಟೆಸ್ಟೆಂಟ್ಆರ್ಯನ್ ಸಂತೋಷ್  ಕೂಡ ಒಬ್ಬರು. ಕಟ್ಟು ಮಸ್ತ್ ದೇಹದೊಂದಿಗೆ ನೋಡುವುದಕ್ಕೂ ಹ್ಯಾಂಡ್ ಸಮ್ ಆಗಿರುವ ಆರ್ಯನ್ ಸಂತೋಷ್ , ಹೀರೋ ಆಗುವುದಕ್ಕೇನು ಯಾವುದರಲ್ಲೂ ಕಮ್ಮಿ ಇಲ್ಲ. ಹಾಗೆ ನೋಡಿದರೆ ಬಾಲಿವುಡ್ ನಲ್ಲಿ ಮಿಂಚುತ್ತಿರುವ ಅನೇಕ ಚಾಕ್ ಲೇಟ್ ಹೀರೋಗಳ ಹಾಗೆ ಸಂತೋಷ್ ಕನ್ನಡದಲ್ಲಿ ಒಬ್ಬ ಚಾಕ್ ಲೇಟ್ ಹೀರೋ. ಆದರೂ ಯಾಕೆ ತಮ್ಮನ್ನು ಕನ್ನಡದ ಪ್ರೇಕ್ಷಕರು ದೊಡ್ಡದೊಂದು ಬ್ರೇಕ್ ಸಿಗುವ ಹಾಗೆ ಒಪ್ಪಿಕೊಂಡಿಲ್ಲ, ಅಪ್ಪಿಕೊಂಡಿಲ್ಲ ಎನ್ನುವ ಕೊರಗು ಅವರನ್ನು ಕಾಡುತ್ತಲೇ ಇದೆ. ಹಾಗೊಂದು ಸಕ್ಸಸ್ ಸಿಗಲೇ ಬೇಕು ಅಂತ ಅವರು ಪಡುತ್ತಿರುವ ಶ್ರಮ ಕೂಡ ಅಷ್ಟಿಷ್ಟಲ್ಲ, ಆದರೆ ಈ ಸಲ ಅದು ಮಿಸ್ ಆಗಬಾರದು ಅಂತಲೇ ಪಣ ತೊಟ್ಟಿದ್ದಾರೆ. ಅದಕ್ಕಾಗಿಯೇ ” ಡಿಯರ್ ಸತ್ಯ’ ಚಿತ್ರವನ್ನು ತಾವೇ ಹೆಚ್ಚಿನ ಮುತುವರ್ಜಿ ವಹಿಸಿಕೊಂಡು, ತೆರೆಗೆ ತರಲು ಸಿದ್ಧತೆ ನಡೆಸಿದ್ದಾರಂತೆ.

ಅದ್ದೂರಿ ಮೇಕಿಂಗ್ ಸಿನಿಮಾ..

ಅಂದ ಹಾಗೆ, ಪರ್ಪಲ್ ರಾಕ್ ಹಾಗೂ  ವಿಂಟರ್ ಬ್ರಿಡ್ಜ್ ಬ್ಯಾನರ್ ನಲ್ಲಿ ಯತೀಶ್ ವೆಂಕಟೇಶ್, ಗಣೇಶ್ ಪಾಪಣ್ಣ, ಶ್ರೀನಿವಾಸ್ ಹಾಗೂ ಆಜೇಯ್ ರಾವ್ ನಿರ್ಮಾಣ ಮಾಡಿದ ಚಿತ್ರ ” ಡಿಯರ್ ಸತ್ಯ’. ಸಿನಿಮಾ ಜಗತ್ತಿನ ಜತೆಗಿನ ನಂಟು ಹಾಗೂ ಅದರ ಮೇಲಿರುವ ಪ್ಯಾಷನ್ ಕಾರಣಕ್ಕೆ ಕನ್ನಡಕ್ಕೆ ಒಂದೊಳ್ಳೆ ಸಿನಿಮಾ ಕೊಡಬೇಕೆನ್ನುವ ಮಹಾದಾಸೆ ಇಟ್ಕೊಂಡೇ ತಂಡ ಈ ಸಿನಿಮಾ ಮಾಡಿದೆಯಂತೆ. ಹಾಗಾಗಿ ಸಿನಿಮಾವನ್ನು ಕತೆಗೆ ತಕ್ಕಂತೆ ಆದ್ದೂರಿಯಾಗಿಯೇ ತೆರೆಗೆ ತಂದಿರುವುದಾಗಿ ನಿರ್ಮಾಪಕರು ಹೇಳುತ್ತಿರುವುದು ಮಾತ್ರವಲ್ಲ, ಟ್ರೇಲರ್ ಹಾಗೂ ಹಾಡುಗಳ ದೃಶ್ಯಗಳಲ್ಲಿ ಅದರ ಮೇಕಿಂಗ್ ಕಾಣುತ್ತಿದೆ. ‍ಇತ್ತೀಚೆಗಷ್ಟೇ ನಡೆದ ಅದರ ಆಡಿಯೋ ಲಾಂಚ್ ಕಾರ್ಯಕ್ರಮಕ್ಕೆ ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಕೂಡ ಬಂದಿದ್ದು, ಈ ತಂಡ ಸಿನಿಮಾ ಮೇಲಿಟ್ಟಿರುವ ಕಾಳಿಜಿಯಿಂದಲೇ ಅಂತೆ. ಜತೆಗೆ ನಟ ಸಂತೋಷ್ ಹಾಗೂ ನಿರ್ಮಾಪಕ ಯತೀಶ್ ಆವರ ಪರಿಚಯದ ಕಾರಣಕ್ಕೂ ಹೌದು. ಅದೇನೋ ಗೊತ್ತಿಲ್ಲ, ನಟ ಸಂತೋಷ್ ಅವರಿಗೆ ಆರಂಭದಿಂದಲೂ ರಾಜ್ ಕುಟುಂಬದ ಆಶೀರ್ವಾದ ಇದ್ದೇ.

ಸಂತುಗಿದೆ ರಾಜ್ ಕುಟುಂಬದ ಆಶೀರ್ವಾದ..

ಸಂತೋಷ್ ಹೀರೋ ಆಗಿ ಲಾಂಚ್ ಆದ ನೂರು ಜನ್ನಕ್ಕೂ ಚಿತ್ರದ ಆಡಿಯೊ ಲಾಂಚ್ ಸೇರಿದಂತೆ ಆದರ ಪ್ರಚಾರದಲ್ಲೂ ಶಿವಣ್ಣ ಹಾಗೂ ಪುನೀತ್ ಬೆಂಬಲವಾಗಿ ನಿಂತಿದ್ದರು. ಅದೇ ರೀತಿ ಇವತ್ತು ಕೂಡ ರಾಜ್ ಕುಟುಂಬ ಸಂತೋಷ್ ಸಿನಿಮಾಕ್ಕೆ ಬೆಂಬಲಕ್ಕೆ ಬಂದಿದೆ. ‘ಡಿಯರ್ ಸತ್ಯ’ ಚಿತ್ರ ಟೀಸರ್ ಲಾಂಚ್ ಗೆ ಶಿವಣ್ಣ ಬಂದಿದ್ದರು. ಆ ನಂತರವೀಗ ಇದರ ಆಡಿಯೋ ಲಾಂಚ್ ಗೆ ಪುನೀತ್ ರಾಜ್ ಕುಮಾರ್ ಬಂದಿದ್ದರು. ಇದೊಂದು ತಮ್ಮ ಸೌಭಾಗ್ಯ ಅಂದರು ಸಂತೋಷ್ ಆರ್ಯನ್. ಅವತ್ತಿನ ಸಮಾರಂಭದಲ್ಲಿ ಅದನ್ನು ಸಂತೋಷ್ ನೆನಪಿಸಿಕೊಳ್ಳುವುದೇ ವಿಶೇಷ.”  ಶಿವಣ್ಣ ಅವರ’ ಓಂ’ ಚಿತ್ರ ಬಂದಾಗ ಅಲಸೂರಿನ ಚಿತ್ರ ಮಂದಿರದಲ್ಲಿ ಬ್ಲಾಕ್ ನಲ್ಲಿ ಟಿಕೆಟ್ ತೆಗೆದುಕೊಂಡು ಸಿನಿಮಾ ನೋಡಿದ್ದೆ. ಅವತ್ತೇ ನಾನು ಶಿವರಾಜ್ ಕುಮಾರ್ ಅವರ ದೊಡ್ಡ ಅಭಿಮಾನಿಯಾಗಿದ್ದೆ. ಮುಂದೆ ನಾನೂ ಕೂಡ ಸಿನಿ ದುನಿಯಾಕ್ಕೆ ಬರುತ್ತೇನೆ, ನನ್ನ ಸಿನಿಮಾಕ್ಕೆ ಶಿವಣ್ಣ ಬಂದು ಆಶೀರ್ವಾದ ಮಾಡ್ತಾರೆ ಅಂತ ಅಂದುಕೊಂಡಿರಲಿಲ್ಲ. ಆದರೆ ಅದು ಅಯಿತು. ಡಿಯರ್ ಸತ್ಯ ಟೀಸರ್ ಆನ್ನು ಅವರೇ ಲಾಂಚ್ ಮಾಡಿದ್ದರು. ಈಗ ಪುನೀತ್ ಅವರು ಆಡಿಯೋ ಲಾಂಚ್ ಮಾಡಿಕೊಟ್ಟಿದ್ದಾರೆ. ದೊಡ್ಮನೆ ಆಶೀರ್ವಾದ ಇದೇ ಆದ್ಮೇಲೆ ನನಗೆ ಗೆಲ್ಲವುದೇನು ಕಷ್ಟ ಆಗದು ಅಂತ ಅತೀವ ವಿಶ್ವಾಸ ವ್ಯಕ್ತಪಡಿಸಿದರು ಆರ್ಯನ್ ಸಂತೋಷ್.

ಡಿಯರ್ ಸತ್ಯ ಗೆಲ್ಲಲ್ಲೇ ಬೇಕಿದೆ…

ಹೌದು, ಆರ್ಯನ್ ಸಂತೋಷ್ ಗೆಲ್ಲಲೇ ಬೇಕಿದೆ. ಕಿರುತೆರೆಯಲ್ಲಿ ನಿರೂಪಕರಾಗಿ, ಆನಂತರ ಬಿಗ್ ಬಾಸ್ ರಿಯಾಲಿಟಿ ಶೋ ನಲ್ಲಿ ಕಾಣಿಸಿಕೊಂಡು ಪ್ರೇಕ್ಷಕರ ಮನ ಗೆಲ್ಲುವ  ಅವರ ಪ್ರಯತ್ನ ಒಂದಷ್ಟು ಫನ ಕೊಟ್ಟರೂ, ಹೀರೋ ಆಗಿ ಅವರಿಗೆ ‍ಇನ್ನು ದೊಡ್ಡದೊಂದು ಬ್ರೇಕ್ ಬೇಕಿದೆ. ಆ ಬ್ರೇಕ್ ಗಾಗಿ ಅವರು ಕಾಯುತ್ತಿದ್ದಾರೆ. ನೂರು ಜನ್ನಕ್ಕೂ ದೊಡ್ಡ ನಿರೀಕ್ಷೆ ಮೂಡಿಸಿದ್ದರೂ, ಅಲ್ಲಿ ಸಂತೋಷ್ ಅವರಿಗೆ ಅದೃಷ್ಟ ಕೈ ಕೊಟ್ಟಿತು. ಮುಂದೆ ಅಭಿರಾಮ್, ಇಷ್ಟ ಸೇರಿದಂತೆ ಒಂದಷ್ಟು ಸಿನಿಮಾಗಳಲ್ಲಿ ಕಾಣಿಸಿಕೊಂಡರೂ, ಸಂತೋಷ್ ಅರ್ಯನ್ ಜನರಿಗೆ ಇನ್ನು ಅಷ್ಟಾಗಿ ಹಿಡಿಸದೆ ಹೋದರು. ಈಗ ಅದೆಲ್ಲವನ್ನು ಮರೆಸಬೇಕು, ದೊಡ್ಡದೊಂದು ಬ್ರೇಕ್ ಪಡೆದುಕೊಳ್ಳಬೇಕು ಅಂತಲೇ ಡಿಯರ್ ಸತ್ಯದಲ್ಲಿ ಆಭಿನಯಿಸಿದ್ದಾರಂತೆ. ಈ ಸಿನಿಮಾದಲ್ಲಿ ಸಂತೋಷ್ ಆರ್ಯನ್ ಅವರ ಮಾಸ್ ಹಾಗೂ ಕ್ಲಾಸ್ ಲುಕ್ ಎಲ್ಲವೂಇದೆ. ಪ್ರೇಕ್ಷಕರಿಗೆ ಸಿನಿಮಾ ಇಷ್ಟ ಆಗುವುದು ನೂರಕ್ಕೂ ನೂರರಷ್ಟು ಗ್ಯಾರಂಟಿ ಅಂತಾರೆ ಆರ್ಯನ್ ಸಂತೋಷ್ . ಉಳಿದಂತೆ  ಶಿವಗಣೇಶ್ ನಿರ್ದೇಶನದ ಡಿಯರ್ ಸತ್ಯ ಚಿತ್ರ ಫೆಬ್ರವರಿಗೆ ತೆರೆಗೆ ಬರುವ ಸಾಧ್ಯತೆಗಳಿವೆ. ಸಂತೋಷ್ ಅವರಿಗೆ ಇಲ್ಲಿ ನಟಿ ಅರ್ಚನಾ ಕೊಟ್ಟಿಗೆ ನಾಯಕಿ ಆಗಿದ್ದಾರೆ.

Categories
ಸಿನಿ ಸುದ್ದಿ

ಹೊಂಬಾಳೆ ಫಿಲ್ಮ್ಸ್‌ ಬ್ಯಾನರ್‌ನಲ್ಲಿ ಶ್ರೀಮುರಳಿ ಚಿತ್ರ- ಡಿ.17ರ ರೋರಿಂಗ್‌ ಸ್ಟಾರ್‌ ಬರ್ತ್‌ಡೇಗೆ ಹೊಸ ಚಿತ್ರ ಘೋಷಣೆ

ಅದ್ಧೂರಿ ಬಜೆಟ್‌ ಚಿತ್ರಕ್ಕೆ ನಿರ್ದೇಶಕ ಯಾರೆಂಬುದು ಗೌಪ್ಯ

ಕನ್ನಡದಲ್ಲೀಗ ಹೊಸ ಸಿನಿಮಾ ಅನೌನ್ಸ್‌ಮೆಂಟ್‌ಗಳ ಸುರಿಮಳೆ. ಹೌದು, ಇತ್ತೀಚೆಗಷ್ಟೇ ಹೊಂಬಾಳೆ ಫಿಲ್ಮ್ಸ್‌ ತೆಲುಗು ಸ್ಟಾರ್‌ ನಟ ಪ್ರಭಾಸ್‌ ಅಭಿನಯದ “ಸಲಾರ್‌” ಸಿನಿಮಾ ನಿರ್ಮಿಸುವ ಕುರಿತು ಅನೌನ್ಸ್‌ ಮಾಡಿತ್ತು. ಆ ಚಿತ್ರಕ್ಕೆ ಪ್ರಶಾಂತ್‌ ನೀಲ್‌ ನಿರ್ದೇಶಕ ಎಂಬುದನ್ನೂ ಹೇಳಿತ್ತು. ಅದರ ಬೆನ್ನೆಲ್ಲೇ ಹೊಂಬಾಳೆ ಫಿಲ್ಮ್ಸ್‌ ಮತ್ತೊಂದು ಬಿಗ್‌ ಬಜೆಟ್‌ ಸಿನಿಮಾ ಅನೌನ್ಸ್‌ ಮಾಡುವುದಾಗಿ ಹೇಳಿಕೊಂಡಿದೆ. ಹೌದು, ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಈ ವಿಷಯವನ್ನು ಹಂಚಿಕೊಂಡಿರುವ ಹೊಂಬಾಳೆ ಫಿಲ್ಮ್ಸ್‌, ಡಿಸೆಂಬರ್‌ ೧೭ರಂದು ೧೧.೫೯ಕ್ಕೆ ಹೊಸ ಸಿನಿಮಾ ಘೋಷಣೆ ಮಾಡುವುದಾಗಿ ಹೇಳಿಕೊಂಡಿದೆ. ಎಲ್ಲವೂ ಸರಿ, ಹೊಂಬಾಳೆ ಫಿಲ್ಮ್ಸ್‌ ಯಾಕೆ ಡಿಸೆಂಬರ್‌ ೧೭ರಂದು ಹೊಸ ಸಿನಿಮಾ ಅನೌನ್ಸ್‌ ಮಾಡಲಿದೆ, ಅದಕ್ಕೆ ಕಾರಣ ಏನು? ಈ ಪ್ರಶ್ನೆ ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲ ಕೆರಳಿಸಿದೆ. ಹೊಂಬಾಳೆ ಫಿಲ್ಮ್ಸ್‌ ಮೂಲಕ ಇದುವರೆಗೆ ಆರು ಚಿತ್ರಗಳು ತಯಾರಾಗಿದ್ದು, ಇತ್ತೀಚೆಗೆ ಏಳನೇ ಸಿನಿಮಾ “ಸಲಾರ್‌” ಚಿತ್ರವನ್ನು ಘೋಷಣೆ ಮಾಡಿತ್ತು. ಈಗ ಎಂಟನೇ ಸಿನಿಮಾ ಘೋಷಣೆಗೆ ಡಿಸೆಂಬರ್‌ ೧೭ರಂದು ನಿಗದಿ ಮಾಡಲಾಗಿದೆ. ಎಲ್ಲವೂ ಸರಿ, ಈ ಸಿನಿಮಾಗೆ ನಾಯಕ ಯಾರು? ಯಾಕೆ ಡಿಸೆಂಬರ್‌ ೧೭ರಂದೇ ಹೊಸ ಚಿತ್ರ ಅನೌನ್ಸ್‌ ಮಾಡಲಿದ್ದಾರೆ? ಈ ಪ್ರಶ್ನೆಗೆ ಸರಿಯಾದ ಉತ್ತರವಿಲ್ಲ. ಕೆಲವು ಕಡೆ ಪುನೀತ್‌ ರಾಜಕುಮಾರ್‌ ಅವರ ಹೊಸ ಸಿನಿಮಾವನ್ನು ಅನೌನ್ಸ್‌ ಮಾಡಲಿದ್ದಾರೆ ಎಂಬ ಸುದ್ದಿ ಹಬ್ಬಿದೆ. ಅವರ ಸಿನಿಮಾ ಘೋಷಣೆ ಮಾಡಿದರೂ ಅಚ್ಚರಿ ಇಲ್ಲ ಬಿಡಿ.


ಆದರೆ, ಡಿಸೆಂಬರ್‌ ೧೭ರಂದು ಬೆಳಗ್ಗೆ ೧೧.೫೯ಕ್ಕೆ ಹೊಂಬಾಳೆ ಫಿಲ್ಮ್ಸ್‌ ಅನೌನ್ಸ್‌ ಮಾಡಲಿರುವ ಹೊಸ ಸಿನಿಮಾಗೆ ಮೂಲಗಳ ಪ್ರಕಾರ ರೋರಿಂಗ್‌ ಸ್ಟಾರ್‌ ಶ್ರೀಮುರಳಿ ಅವರು ಹೀರೋ ಎನ್ನಲಾಗುತ್ತಿದೆ. ಯಾಕೆಂದರೆ, ಡಿಸೆಂಬರ್‌ ೧೭ರಂದು ಶ್ರೀಮುರಳಿ ಅವರ ಹುಟ್ಟುಹಬ್ಬ. ಅಂದೇ ಹೊಂಬಾಳೆ ಫಿಲ್ಸ್ಮ್‌ ಶ್ರೀಮುರಳಿ ಅವರ ಹೊಸ ಸಿನಿಮಾವವನ್ನು ಅನೌನ್ಸ್‌ ಮಾಡಲಿದ್ದಾರೆ ಎಂಬ ಜೋರು ಸುದ್ದಿಯೂ ಇದೆ.
ಎರಡು ದಿನಗಳ ಹಿಂದಷ್ಟೇ,  “ಸಿನಿಲಹರಿ” ಕೂಡ ಶ್ರೀಮುರಳಿ ಅವರ ಹುಟ್ಟುಹಬ್ಬಕ್ಕೆ ತ್ರಿಬಲ್‌ ಧಮಾಕ ಶೀರ್ಷಿಕೆಯಡಿ ಸುದ್ದಿಯೊಂದನ್ನು ಪೋಸ್ಟ್‌ ಮಾಡಿತ್ತು. ಆ ಸುದ್ದಿಯನ್ನು ಸೂಕ್ಷ್ಮವಾಗಿ ಗಮನಿಸಿದಾಗ, ಈಗ ಹೊಂಬಾಳೆ ಫಿಲ್ಮ್ಸ್‌ ಹೊಸ ಚಿತ್ರ ಅನೌನ್ಸ್‌ ‌ ಮಾಡುತ್ತಿರುವುದು ಕೂಡ ಡಿ.೧೭ಕ್ಕೆ. ಹಾಗಾಗಿ ಶ್ರೀಮುರಳಿ ಅವರ ಹುಟ್ಟಹಬ್ಬಕ್ಕೆ ಹೊಂಬಾಳೆ ಫಿಲ್ಮ್ಸ್‌ ಹೊಸ ಚಿತ್ರ ಅನೌನ್ಸ್‌ ಮಾಡುವುದು ಬಹುತೇಕ ಖಚಿತ ಎನ್ನಲಾಗಿದೆ. ಸದ್ಯಕ್ಕೆ ನಿರ್ದೇಶಕ ಯಾರೆಂಬುದು ಗೌಪ್ಯವಾಗಿದೆ.

Categories
ಸಿನಿ ಸುದ್ದಿ

ಶ್ರೀಮುರಳಿ ಹುಟ್ಟು ಹಬ್ಬಕ್ಕೆ ತ್ರಿಬಲ್ ಧಮಾಕ! ಮದಗಜ ಟೀಸರ್ ಜೊತೆ ಎರಡು ಬಿಗ್ ಪ್ರಾಜೆಕ್ಟ್ ಅನೌನ್ಸ್

 ಫ್ಯಾನ್ಸ್ ಗೆ  ಸರ್ಪ್ರೈಸ್  ಕೊಡ್ತಾರೆ ರೋರಿಂಗ್ ಸ್ಟಾರ್

ಸಿನಿ ಲಹರಿ ಎಕ್ಸ್ ಕ್ಲ್ಯೂಸ್

ಶ್ರೀಮುರಳಿ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದವರು. ‘ಉಗ್ರಂ’ ಮೂಲಕ ತಮ್ಮ ಇಮೇಜ್ ಬದಲಿಸಿಕೊಂಡವರು. ಅಲ್ಲಿಂದ ಇಲ್ಲಿಯವರೆಗೂ ಅದೇ ಇಮೇಜ್ ಉಳಿಸಿಕೊಂಡು ಬಂದಿದ್ದಾರೆ. ಅವರೀಗ ಮತ್ತಷ್ಟು ಹೊಸ ಪ್ರಾಜೆಕ್ಟ್‌ ಗಳಲ್ಲಿ ಬಿಝಿಯಾಗಲಿದ್ದಾರೆ ಅನ್ನೋದೇ ಈ ಹೊತ್ತಿನ ವಿಶೇಷ.

ಶ್ರೀಮುರಳಿ ಹುಟ್ಟು ಹಬ್ಬದ ಖುಷಿಯಲ್ಲಿದ್ದಾರೆ. ಡಿಸೆಂಬರ್ 17ರಂದು ಅವರ ಹುಟ್ಟು ಹಬ್ಬ. ಅದರ ಹಿನ್ನೆಲೆಯಲ್ಲಿ ಶ್ರೀಮುರಳಿ ಅವರ ಮೂರು ವಿಶೇಷತೆಗಳಿವೆ. ಅದು ಬೇರೇನೂ ಅಲ್ಲ. ಶ್ರೀಮುರಳಿ ಅವರ ಎರಡು ಹೊಸ ಪ್ರಾಜೆಕ್ಟ್ ಗಳು ಅನೌನ್ಸ್ ಆಗಲಿವೆ. ‘ಉಗ್ರಂ’, ‘ಮಫ್ತಿ’, ‘ಭರಾಟೆ’, ಎಂಬ ಅದ್ಧೂರಿ ಮತ್ತು ಯಶಸ್ವಿ ಸಿನಿಮಾಗಳನ್ನು ಕೊಟ್ಟಿರುವ ಶ್ರೀಮುರಳಿ ಅವರು, ಈಗ ‘ಮದಗಜ’ ಎಂಬ ಬಹು ನಿರೀಕ್ಷೆಯ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

ಅದರ ಬೆನ್ನಲ್ಲೇ ಎರಡು ದೊಡ್ಡ ಬ್ಯಾನರ್ ಗಳಲ್ಲಿ ತಯಾರಾಗುತ್ತಿರುವ ಸಿನಿಮಾಗಳಲ್ಲಿ ನಟಿಸಲಿದ್ದಾರೆ. ಈ ಕುರಿತು ಅವರ ಹುಟ್ಟು ಹಬ್ಬದ ದಿನದಂದು ಅನೌನ್ಸ್ ಆಗಲಿವೆ. ಆ ಎರಡು ಸಿನಿಮಾಗಳು ಬಿಗ್ ಬ್ಯಾನರ್ ಮೂಲಕ ತಯಾರಾಗಲಿವೆ ಎಂಬುದು ವಿಶೇಷ. ಅವರ ಹುಟ್ಟು ಹಬ್ಬದ ಮುನ್ನವೇ ಹೊಸ ಪ್ರಾಜೆಕ್ಟ್ ಗಳು  ಘೋಷಣೆಯಾಗುತ್ತಿವೆ. ಆದರೆ, ಯಾವ ಬ್ಯಾನರ್, ಯಾವ ನಿರ್ದೇಶಕರ ಸಿನಿಮಾಗಳು ಅನ್ನೋದು ಗೌಪ್ಯ. ಇನ್ನು  ಶ್ರೀಮುರಳಿ ಅವರ  ‘ಮದಗಜ’ ಚಿತ್ರದ ಟೀಸರ್ ಕೂಡ ಅವರ ಹುಟ್ಟುಹಬ್ಬದಂದು ರಿಲೀಸ್ ಆಗಲಿದೆ. ‘ಕೆಜಿಎಫ್’ ಖ್ಯಾತಿಯ ನಿರ್ದೇಶಕ ಪ್ರಶಾಂತ್ ನೀಲ್ ಟೀಸರ್ ರಿಲೀಸ್ ಮಾಡಲಿದ್ದಾರೆ.

ಅದೇನೆ ಇರಲಿ, ‘ಮದಗಜ’ ಈಗಾಗಲೇ ಸಾಕಷ್ಟು ನಿರೀಕ್ಷೆ ಮೂಡಿಸಿದೆ. ಈ ಬಾರಿಯ ಡಿಸೆಂಬರ್17ರ ರೋರಿಂಗ್ ಸ್ಟಾರ್ ಶ್ರೀ ಮುರಳಿ ಅವರ ಹುಟ್ಟುಹಬ್ಬಕ್ಕೆ ತ್ರಿಬಲ್‌ ಧಮಾಕ. ಈಗಾಗಲೇ ಫಸ್ಟ್ ಲುಕ್ ಟೀಸರ್ ನ ವಿಡಿಯೊ ತುಣುಕು ರಿಲೀಸ್ ಆಗಿದ್ದು, ಎಲ್ಲೆಡೆ, ನಿರೀಕ್ಷೆ ಹುಟ್ಟಿಸಿದೆ.ಮಹೇಶ್ ಕುಮಾರ್ ನಿರ್ದೇಶನದ ಈ ಚಿತ್ರವನ್ನು ಉಮಾಪತಿ ನಿರ್ಮಿಸುತ್ತಿದ್ದಾರೆ.

Categories
ಸಿನಿ ಸುದ್ದಿ

ಮುಹೂರ್ತ ಮುಗಿಸಿದ ಫಾರ್ ರಿಜಿಸ್ಟ್ರೇಷನ್ ಚಿತ್ರ

ಕ್ಲಾಪ್ ಮಾಡಿ ಶುಭ ಹಾರೈಸಿದ ನಟ ನಿಖಿಲ್ ಕುಮಾರ ಸ್ವಾಮಿ

ಬಾಲ್ಯದಲ್ಲಿನ ಗೆಳೆತನ ಯಾರು, ಎಷ್ಟು ವರ್ಷ ಕಾಪಿಟ್ಟುಕೊಂಡು ಬರುತ್ತಾರೋ ಗೊತ್ತಿಲ್ಲ, ಆದರೆ ಇಲ್ಲೊಂದಷ್ಟು ಗೆಳೆಯರು ಬಾಲ್ಯದಲ್ಲಿನ‌ ಪ್ರೀತಿಗೆ ಬೆಲೆ ಕೊಟ್ಟು ಸಿನಿಮಾ ನಿರ್ಮಾಣದಲ್ಲಿ ಒಂದಾಗಿದ್ದಾರೆ. ಆಚಿತ್ರದ ಹೆಸರು ‘ಫಾರ್ ರಿಜಿಸ್ಟ್ರೇಷನ್‌’.ಇದೊಂದು ವಿಭಿನ್ನ ಶೀರ್ಷಿಕೆ ಯ ಚಿತ್ರ. ಇದರ ಕತೆ ಕೂಡ ಅಷ್ಟೆ ವಿಶೇಷವಾಗಿದೆ. ಬೆಂಗಳೂರಿನ‌ ವಸಂತನಗರದಲ್ಲಿನ ಅಂಬಾಭವಾನಿ ದೇವಸ್ಥಾನದಲ್ಲಿ ಇತ್ತೀಚೆಗೆ ಚಿತ್ರಕ್ಕೆ ಮುಹೂರ್ತ ಮುಗಿಯಿತು.
ನಟ ನಿಖಿಲ್ ಕುಮಾರಸ್ವಾಮಿ ಅತಿಥಿಯಾಗಿ ಆಗಮಿಸಿ ಚಿತ್ರಕ್ಕೆ ಕ್ಲಾಪ್ ಮಾಡಿದರೆ, ನಿರ್ಮಾಪಕ ನವೀನ್ ಕುಮಾರ್ ಅವರ ಪುತ್ರ ನಿಶ್ಚಲ್ ಕ್ಯಾಮರಾ ಸ್ವೀಚ್ ಆನ್ ಮಾಡಿದರು. ನಿಶ್ಚಲ್ ಫಿಲಂಸ್ ಬ್ಯಾನರ್ ಅಡಿಯಲ್ಲಿ ಎನ್. ನವೀನ್ ರಾವ್ ನಿರ್ಮಾಣ ಮಾಡುತ್ತಿರುವ ಈ ಚಿತ್ರದಲ್ಲಿ ‘ದಿಯಾ’ ಸಿನಿಮಾ ಖ್ಯಾತಿಯ ಪೃಥ್ವಿ ಅಂಬರ ಹಾಗೂ ಲವ್ ಮಾಕ್ಟೆಲ್ ಖ್ಯಾತಿಯ ನಾಯಕಿ ಮಿಲನಾ‌ ನಾಗರಾಜ್ಬಜೋಡಿಯಾಗಿ ಅಭಿನಯಿಸುತ್ತಿದ್ದಾರೆ. ಚಿತ್ರಕ್ಕೆ ಇಷ್ಟರಲ್ಲಿಯೇ ಚಿತ್ರೀಕರಣ ಶುರುವಾಗಲಿದೆಯಂತೆ.


ಚಿತ್ರಕ್ಕೆ ನವೀನ್ ದ್ವಾರಕಾನಾಥ್ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಅವರು ಸಿನಿಮಾ‌ಕುರಿತು ಮಾತನಾಡುತ್ತಾ, ‘ಕಳೆದ ಒಂದೂವರೆ ವರ್ಷದ ಹಿಂದೆಯೇ ಈ ಸಿನಿಮಾ ಮಾಡುವ ಬಗ್ಗೆ ಚರ್ಚೆ ಶುರುವಾಗಿತ್ತು. ಅದೇ ರೀತಿ ಇದೀಗ ಈ ಸಿನಿಮಾ ಸೆಟ್ಟೇರಿದೆ ‘ ಎಂದರು. ಟೈಟಲ್ ಕುರಿತು ಸ್ಪಷ್ಟನೆ ನೀಡಿದ ನವೀನ್, ‘ಇತ್ತೀಚಿನ ದಿನಗಳಲ್ಲಿ ಏನೇ ಕೆಲಸ ಮಾಡಬೇಕೆಂದರೂ ನಾವು ಅದಕ್ಕೆ ಸಂಬಂಧಪಟ್ಟಂತೆ ನೋಂದಣಿ ಮಾಡಿಸಲೇಬೇಕು. ಇಲ್ಲಿಯೂ ಅದರ ಸುತ್ತ ಕಥೆ ಸಾಗಲಿದೆ ‘ ಎಂದರು.
ಚಿತ್ರಕ್ಕೆ ಒಟ್ಟು 30 ದಿನಗಳ ಶೂಟಿಂಗ್ ಯೋಜನೆ ಇದೆಯಂತೆ. ಸಕಲೇಶಪುರ, ಮಂಗಳೂರು, ಉಡುಪಿ ಮತ್ತು ಬೆಂಗಳೂರಿನಲ್ಲಿ ಚಿತ್ರೀಕರಣ‌ನಡೆಸಲು‌ತಂಡ ಯೋಜನೆ ಹಾಕಿಕೊಂಡಿದೆ. ಚಿತ್ರಕ್ಕೆ ನವೀನ್ ರಾವ್ ಬಂಡವಾಳ ಹಾಕುತ್ತಿದ್ದಾರೆ‌. ‘ದಿಯಾ’ ಚಿತ್ರದ ಖ್ಯಾತಿಯ ನಟ ಪೃಥ್ವಿ ಅಂಬರ ನಾಯಕ, ಲವ್ ಮಾಕ್ಟೆಲ್ ಖ್ಯಾತಿಯ ನಟಿ ಮಿಲನಾ‌ನಾಗರಾಜ್ ನಾಯಕಿ. ಚಿತ್ರಕ್ಕೆ ತಬಲ‌ನಾಣಿ‌ಸಂಭಾಷಣೆ ಬರೆದು ಪ್ರಮುಖ‌ಪಾತ್ರದಲ್ಲೂ ಅಭಿನಯಿಸುತ್ತಿದ್ದಾರೆ. ಹಾಗೆಯೇ ಸುಧಾರಾಣಿ, ಸುಧಾ ಬೆಳವಾಡಿ, ಬಾಬು ಹಿರಣ್ಣಯ್ಯ,ರಾಘು ರಾಮನಕೊಪ್ಪ ಚಿತ್ರದ ತಾರಾಗಣದಲ್ಲಿದ್ದಾರೆ.

ಚಿತ್ರಕ್ಕೆ ವಿವೇಕ್ ಛಾಯಾಗ್ರಹಣ ಮಾಡುತ್ತಿದ್ದು, ಈ ಮೊದಲು ಕಿರುಚಿತ್ರ ಮಾಡಿದ ಅನುಭವ ಅವರಿಗಿದೆ. ಇದು ಅವರ ಮೊದಲ ಪೂರ್ಣಪ್ರಮಾಣದ ಸಿನಿಮಾ. ಹರೀಶ್ ಸಂಗೀತ ಸಂಯೋಜನೆಯ ಜವಾಭ್ದಾರಿ ಹೊತ್ತಿದ್ದಾರೆ. ಚಿತ್ರದಲ್ಲಿ 5 ಹಾಡುಗಳಿವೆ. ಅವರಿಗೂ ಇದು ಮೊದಲ ಸಿನಿಮಾ. ಚೇತನ್ ಕುಮಾರ್, ಕವಿರಾಜ್ ನಾಗಾರ್ಜುನ್ ಶರ್ಮಾ ಹಾಡುಗಳಿಗೆ ಸಾಹಿತ್ಯ ಬರೆದಿದ್ದಾರೆ. ಇರ್ಮಾನ್ ಸರ್ದಾರಿಯಾ ನೃತ್ಯ ನಿರ್ದೇಶನ ಮಾಡಲಿದ್ದಾರೆ.

error: Content is protected !!