Categories
ಸಿನಿ ಸುದ್ದಿ

ಸಿನಿಲೋಕಕ್ಕೆ ಸಚಿನ್ ಚೆಲುವರಾಯಸ್ವಾಮಿ ರೀ-ಎಂಟ್ರಿ : ಬೆಂಗಳೂರು ಬಾಯ್ಸ್ ಸಿನಿಮಾ ಮೂಲಕ ಅದ್ದೂರಿ ಕಂಬ್ಯಾಕ್…

ಹೋಗುಮೆ ಹೋಗುಮೆ ಎಲ್ಲರ ಒಂದಪ್ಪ ಕದ್ದು ಹೋಗುಮೆ….ಇದು ಕನ್ನಡ ಚಿತ್ರರಂಗದ ಎವರ್ ಗ್ರೀನ್ ಸಿಂಗಿಂಗ್…ವಿ.ನಾಗೇಂದ್ರ ಪ್ರಸಾದ್ ಅಂದ ಚೆಂದದ ಪದಗಳನ್ನು ಪೊಣಿಸಿ ಬರೆದ ಅದ್ಭುತ ಸಾಹಿತ್ಯದ ಈ ಗಾನಲಹರಿಗೆ ಧ್ವನಿಯಾದವರು ನವೀನ್ ಸಜ್ಜು. ಇದೇ ಹಾಡಿನಲ್ಲಿ ಲವರ್ ಬಾಯ್ ಲುಕ್ ನಲ್ಲಿ, ಅದ್ಭುತ ನಟನೆ ಮೂಲಕ ಗಮನಸೆಳೆದವರು ಸಚಿನ್ ಚೆಲುವರಾಯಸ್ವಾಮಿ.

ಮಾಜಿ ಸಚಿವ ಚೆಲುವರಾಯಸ್ವಾಮಿ ಸುಪುತ್ರ ಸಚಿನ್, ಕಳೆದ ಐದು ವರ್ಷದ ಹಿಂದೆ ಹ್ಯಾಪಿ ಬರ್ತ್​​ಡೇ ಸಿನಿಮಾ ಮೂಲಕ ಸ್ಯಾಂಡಲ್ ವುಡ್ ಗೆ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದರು. ಮೊದಲ ಸಿನಿಮಾದಲ್ಲಿಯೇ ಭರವಸೆ ಮೂಡಿಸಿದ್ದ ಸಚಿನ್ ಒಂದಷ್ಟು ವರ್ಷಗಳ ಕಾಲ ಸಿನಿಮಾ ಲೋಕದಿಂದ ದೂರ ಸರಿದಿದ್ದರು. ಇದೀಗ ಬೆಂಗಳೂರು ಬಾಯ್ಸ್ ಸಿನಿಮಾ ಮೂಲಕ ಸಚಿನ್ ಮತ್ತೆ ಅದ್ಧೂರಿಯಾಗಿ ಕಂಬ್ಯಾಕ್ ಆಗಿದ್ದಾರೆ.

ಹೊಸ ಉತ್ಸಾಹ, ಹುಮ್ಮಸ್ಸಿನೊಂದಿಗೆ ಸಚಿನ್, ಫೀಲ್ಡ್​​​ಗೆ​​​​​​​​​​​​ ಇಳಿದಿದ್ದು, ಈ ಬಾರಿ ಭರ್ಜರಿ ತಯಾರಿ ಮಾಡಿಕೊಂಡು ಎಂಟ್ರಿ‌ ಕೊಟ್ಟಿದ್ದಾರೆ. ಮಾಸ್ ಎಲಿಮೆಂಟ್ಸ್​​​​​​ ಕಥೆ ಆಧರಿಸಿರುವ ‘ಬೆಂಗಳೂರು ಬಾಯ್ಸ್​​​​​​’ ಸಿನಿಮಾಗಾಗಿ, ಆ್ಯಕ್ಟಿಂಗ್, ಡ್ಯಾನ್ಸಿಂಗ್ ಜೊತೆ ಫಿಟ್ನೆಸ್ ಕಡೆಗೂ ಹೆಚ್ಚಿನ ಗಮನ ಹರಿಸಿದ್ದಾರೆ.

ಮಲ್ಟಿಸ್ಟಾರ್ ಚಿತ್ರವಾಗಿರುವ ಬೆಂಗಳೂರು ಬಾಯ್ಸ್ ಸಿನಿಮಾದಲ್ಲಿ ತಮ್ಮ ಪಾತ್ರದ ಬಗ್ಗೆ ಗುಟ್ಟುಬಿಟ್ಟು ಕೊಡದ ಸಚಿನ್, ಇದೊಂದು ರೊಮ್ಯಾಂಟಿಕ್‌ ಕಾಮಿಡಿ ಮನರಂಜನೆಯ ಚಿತ್ರವಾಗಿದ್ದು, ಕಾಲೇಜು, ಎಮೋಷನ್‌, ಪ್ರೇಮ ಕತೆ ಹೀಗೆ ಎಲ್ಲ ಅಂಶಗಳೂ ಸಿನಿಮಾದಲ್ಲಿವೆ ಎನ್ನುತ್ತಾರೆ. ಈಗಾಗಲೇ ರಿಲೀಸ್ ಆಗಿರುವ ಫಸ್ಟ್ ಲುಕ್ ಟೀಸರ್ ಸಿನಿಮಾ ಮೇಲಿನ ನಿರೀಕ್ಷೆಗಳನ್ನು ದುಪ್ಪಟ್ಟು ಮಾಡಿದೆ.

ವಿಕ್ರಮ್ ಕೆ ವೈ ಸಿನಿಮಾದ ಸಿನಿಮಾಗೆ ಬಂಡವಾಳ ಹೂಡಿದ್ದು, ಪ್ರಶಾಂತ್ ರಾವ್ ಪುರಂ ಸಹ ನಿರ್ಮಾಣದ ಜವಾಬ್ದಾರಿ ಹೊತ್ತಿದ್ದು, ‘ಅಂಬಿ ನಿಂಗೆ ವಯಸ್ಸಾಯ್ತೋ’ ಖ್ಯಾತಿಯ ಗುರುದತ್ ಗಾಣಿಗ ಕ್ರಿಯೇಟಿವ್ ಡೈರೆಕ್ಟರ್ ಆಗಿ ಬೆಂಗಳೂರು ಬಾಯ್ಸ್ ಸಿನಿಮಾದಲ್ಲಿ ಕೆಲಸ ಮಾಡಿದ್ದಾರೆ. ಈ ಸಿನಿಮಾದ ಜೊತೆಯಲ್ಲಿ ಸಚಿನ್ ಬತ್ತಳಿಕೆಗೆ ಮತ್ತೊಂದು ಸಿನಿಮಾ ಸೇರ್ಪಡೆಗೊಂಡಿದ್ದು, ಸದ್ಯದಲ್ಲಿಯೇ ಆ ಹೊಸ ಪ್ರಾಜೆಕ್ಟ್ ಬಗ್ಗೆ ಅವರೇ‌ ಮಾಹಿತಿ ನೀಡಲಿದ್ದಾರೆ.

Categories
ಸಿನಿ ಸುದ್ದಿ

ಧರಣಿ ಮಂಡಲದೊಳಗೊಂದು‌ ಮೆಲೋಡಿ ಸಾಂಗು: ಮಾತು‌ ಮಾತಲ್ಲೇ ಹೊಸ ರಂಗು…

‘ಗುಳ್ಟು’ ಸಿನಿಮಾದ ನವೀನ್ ಹಾಗೂ ಚಂದನವನದ ಶಾಕುಂತಲೆ ಐಶಾನಿ ಶೆಟ್ಟಿ ಜೋಡಿಯಾಗಿ ನಟಿಸಿರುವ ಧರಣಿ ಮಂಡಲ ಮಧ್ಯದೊಳಗೆ ಸಿನಿಮಾದ ಮೊದಲ ಹಾಡು ರಿಲೀಸ್ ಆಗಿದ್ದು, ಸಿನಿರಸಿಕರಿಂದ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಗೌಸ್ ಪೀರ್ ಬರೆದಿರುವ ಮಾತು ಮಾತಲ್ಲೇ ಎಂಬ ಮೆಲೋಡಿ ಹಾಡಿಗೆ ರೋಣದ ಬಕ್ಕೇಶ್ ಮತ್ತು ಕಾರ್ತಿಕ್ ಚೆನ್ನೋಜಿರಾವ್ ಅಷ್ಟೇ ಸೊಗಸಾದ ಸಂಗೀತ ನೀಡಿದ್ದು, ವಿಜಯ್ ಪ್ರಕಾಶ್ ಧ್ವನಿಯಲ್ಲಿ ಹಾಡಿದ್ದಾರೆ.

ಹೈಪರ್ ಶೈಲಿಯ ಸಿನಿಮಾವಾಗಿರುವ
ಧರಣಿ ಮಂಡಲ‌ ಮಧ್ಯದೊಳಗೆ ಚಿತ್ರಕ್ಕೆ ಈ ಹಿಂದಿ ಪೂರಿ ಜಗನ್ನಾಥ್ ಜೊತೆ ಕೆಲಸ‌ ಮಾಡಿದ್ದ ಶ್ರೀಧರ್ ಷಣ್ಮುಖ ಆಕ್ಷನ್ ಕಟ್ ಹೇಳಿದ್ದಾರೆ.

ಓಂಕಾರ್ ಹಾಗೂ ಪ್ರಶಾಂತ್ ಅಂಚನ್ ಬಂಡವಾಳ ಹೂಡಿದ್ದಾರೆ. ಕೀರ್ತನ್ ಪೂಜಾರಿ ಛಾಯಗ್ರಹಣ, ಗೌಸ್ ಪೀರ್ ,ಶಿವಕುಮಾರ್ ಶೆಟ್ಟಿ ಮತ್ತು ಅಭಿನಂದನ್ ದೇಶ್ ಪ್ರಿಯಾ ಹಾಡುಗಳಿಗೆ ಸಾಹಿತ್ಯ ಬರೆದಿದ್ದಾರೆ.

Categories
ಸಿನಿ ಸುದ್ದಿ

ರಿಲೀಸ್ ಮೊದಲೇ ವಿಕ್ರಾಂತ್ ರೋಣ ದಾಖಲೆಗಳ‌ ಮೇಲೆ ದಾಖಲೆ; ಓವರ್ ಸೀಸ್ ಮಾರ್ಕೆಟ್ ರೆಕಾರ್ಡ್ ಬ್ರೇಕ್! ದಾಖಲೆ ಮೊತ್ತ ಕನ್ನಡದಲ್ಲೇ ಫಸ್ಟ್ …

ವಿದೇಶಿ ಮಾರುಕಟ್ಟೆಯ ‘ವಿಕ್ರಾಂತ್ ರೋಣ’ ಚಿತ್ರದ ಹಕ್ಕುಗಳನ್ನು ‘ಒನ್ ಟ್ವೆಂಟಿ 8 ಮೀಡಿಯಾ’ ಭಾರಿ ಮೊತ್ತಕ್ಕೆ ಪಡೆದುಕೊಂಡಿದೆ. ಇದೇ ಮೊದಲ ಬಾರಿಗೆ ಕನ್ನಡ ಚಿತ್ರವೊಂದರ ವಿದೇಶಿ ಹಕ್ಕುಗಳು ಬಿಡುಗಡೆಗೂ ಮುನ್ನವೇ ದಾಖಲೆ ಮೊತ್ತಕ್ಕೆ ಮಾರಾಟವಾಗಿದೆ.

ನಿರ್ಮಾಪಕ ಜಾಕ್ ಮಂಜುನಾಥ್ ಹೇಳುವಂತೆ, ‘ಸಿನಿಮಾದ ಕಂಟೆಂಟ್ ಯೂನಿವರ್ಸಲ್ ಆಗಿರುತ್ತದೆ ಎಂಬುದನ್ನು ನಾನು ಯಾವಾಗಲೂ ಕಾಪಾಡಿಕೊಂಡು ಬಂದಿದ್ದೇನೆ. ಭಾವನೆಗಳು ಪ್ರಪಂಚದಾದ್ಯಂತ ಒಂದೇ ಸ್ವರ ಮತ್ತು ತಾಳದಲ್ಲಿ ಕೂರುತ್ತದೆ ಮತ್ತು ಈ ಒಪ್ಪಂದವು ಅದಕ್ಕೆ ಸಾಕ್ಷಿಯಾಗಿದೆ. ಖರೀದಿಯ ಬಗ್ಗೆ ಅತ್ಯಂತ ಸಂತೋಷವಿದೆ ಮತ್ತು ಉಳಿದ ವಿವರಗಳನ್ನು ಆದಷ್ಟು ಬೇಗ ಪ್ರಕಟಿಸುತ್ತೇನೆ.’ ‘ಇದು ಕನ್ನಡ ಚಿತ್ರಕ್ಕೆ ಅತ್ಯಧಿಕ ಮತ್ತು ಇತರ ದಕ್ಷಿಣ ಭಾರತದ ಭಾಷೆಗಳಿಗೆ ಸಮಾನವಾಗಿದೆ’ ಎಂದು ಮಂಜುನಾಥ್ ಅವರು ಹೇಳುತ್ತಾರೆ.

ಜುಲೈ 28 ರಂದು ವಿಶ್ವದಾದ್ಯಂತ 3D ರಿಲೀಸ್

ಅನೂಪ್ ಭಂಡಾರಿ ನಿರ್ದೇಶನದಲ್ಲಿ ಕಿಚ್ಚ ಸುದೀಪ್ ನಟನೆಯ ‘ವಿಕ್ರಾಂತ್ ರೋಣ’ ಜುಲೈ 28 ರಂದು ವಿಶ್ವಾದ್ಯಂತ 3D ನಲ್ಲಿ ಬಿಡುಗಡೆಯಾಗಲಿದೆ, ಇದರಲ್ಲಿ ಜಾಕ್ವೆಲಿನ್ ಫರ್ನಾಂಡೀಸ್, ನಿರೂಪ್ ಭಂಡಾರಿ ಮತ್ತು ನೀತಾ ಅಶೋಕ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ.

ಈ ಚಿತ್ರವನ್ನು ಝೀ ಸ್ಟುಡಿಯೋಸ್ ಪ್ರಸ್ತುತಪಡಿಸುತ್ತಿದ್ದು, ಜಾಕ್ ಮಂಜುನಾಥ್ ಅವರು ಶಾಲಿನಿ ಆರ್ಟ್ಸ್ ಅಡಿಯಲ್ಲಿ ನಿರ್ಮಾಣ ಮಾಡುತ್ತಿದ್ದು, ಇನ್ವೆನಿಯೊ ಒರಿಜಿನ್ಸ್‌ನ ಅಲಂಕಾರ್ ಪಾಂಡಿಯನ್ ಸಹ-ನಿರ್ಮಾಣ ಮಾಡುತ್ತಿದ್ದಾರೆ.

Categories
ಸಿನಿ ಸುದ್ದಿ

ಕನ್ನಡಕ್ಕೆ ಮತ್ತೊಂದು ಆಡಿಯೋ ಕಂಪನಿ ಶುರು; ಸಾಟರ್ಡೆ ನೈಟ್ಸ್ ಇದು ಪ್ರಣವ್ ಆಡಿಯೋದ ಫಸ್ಟ್ ಆಲ್ಬಂ ಸಾಂಗ್…

ಕನ್ನಡ ಚಿತ್ರರಂಗದಲ್ಲಿ ಹಾಡುಗಳಿಗೆ ಅದರದೇ ಆದ ಮಹತ್ವವಿದೆ. ಎಷ್ಟೋ ವರುಷ ಕಳೆದರೂ ಇಂಪಾದ ಹಾಡುಗಳು ಇನ್ನೂ ಗುನುಗುವಂತಿದೆ. ಅಷ್ಟೇ ಪ್ರತಿಷ್ಠಿತ ಆಡಿಯೋ ಕಂಪನಿಗಳೂ ಕರ್ನಾಟಕದಲ್ಲಿದೆ. ಜನಮನ ಗಿದ್ದಿದೆ.
ಸಂತೃಪ್ತಿ ಕಂಬೈನ್ಸ್ ಅವರ ಪ್ರಣವ್ ಆಡಿಯೋ ಕಂಪನಿ ಸಹ ಇತ್ತೀಚೆಗೆ ಆರಂಭವಾಗಿದೆ. ಕಂಪನಿಯ ಮೊದಲ ಹೆಜ್ಜೆಯಾಗಿ “ಸಾಟರ್ಡೆ ನೈಟಲಿ” ಎಂಬ ಆಲ್ಬಂ ಸಾಂಗ್ ಬಿಡುಗಡೆಯಾಗಿದೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಉಪಾಧ್ಯಕ್ಷ ಉಮೇಶ್ ಬಣಕಾರ್ ಹಾಗೂ ಸಮರ್ಥನಂ ಸಂಸ್ಥೆಯ ಮಹಂತೇಶ್ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.

ನನಗೆ ಹಣ ಮಾಡುವ ಉದ್ದೇಶವಿಲ್ಲ.‌ ಪ್ರತಿಭೆಗಳನ್ನು ಪ್ರೋತ್ಸಾಹಿಸುವುದಷ್ಟೇ ಉದ್ದೇಶ. ನಮ್ಮ ಪ್ರಣವ್ ಆಡಿಯೋ ಕಂಪನಿಯ ಮೊದಲ ಪ್ರಯತ್ನವಾಗಿ ಈ ಆಲ್ಬಂ ಸಾಂಗ್ ಹೊರತಂದಿದ್ದೀವಿ. ಮುಂದೆ ಸಿನಿಮಾ ನಿರ್ಮಾಣ ಮಾಡುವ ಉದ್ದೇಶವಿದೆ.‌ ಸದ್ಯದಲ್ಲೇ ಈ ಕುರಿತು ಮಾಹಿತಿ ನೀಡುತ್ತೇನೆ ಎಂದರು ಪ್ರಣವ್ ಆಡಿಯೋ ಮಾಲೀಕರಾದ ವಿರೂಪಾಕ್ಷಿ.

“ಸಾಟರ್ಡೆ ನೈಟಲಿ” ಬೆಂಗಳೂರಿನ ಎಂ.ಜಿ.ರಸ್ತೆ ಹಾಗೂ ಚರ್ಚ್ ರಸ್ತೆಯಲ್ಲಿ ಚಿತ್ರೀಕರಣವಾದ ಹಾಡು. ಮುಂದೆ ಚಿತ್ರ ಮಾಡುವ ಉದ್ದೇಶವಿದೆ. ಅದಕ್ಕೂ ಮುಂಚೆ ಈ‌ ಆಲ್ಬಂ ಸಾಂಗ್ ನಿರ್ದೇಶನ ಮಾಡಿದ್ದೀನಿ. “ಇರುವುದೆಲ್ಲವ ಬಿಟ್ಟು” ಸಿನಿಮಾ ಖ್ಯಾತಿಯ ಶ್ರೀ ಹಾಗೂ ಪೂಜಾ ಈ ಹಾಡಿನಲ್ಲಿ ಅಭಿನಯಿಸಿದ್ದಾರೆ. ಸಿದ್ದಾರ್ಥ್ ಹಾಡು ಬರೆದು ನಿರ್ಮಾಣ ಮಾಡಿದ್ದಾರೆ. ಪ್ರೇಮ್ ಭರತ್ ಸಂಗೀತ ನೀಡಿದ್ದಾರೆ. ನಾಗರಾಜ್ ಛಾಯಾಗ್ರಹಣ ಮಾಡಿದ್ದಾರೆ. ಶ್ರೇಯಸ್ಸ್ ಭೈರವ್ ನೃತ್ಯ ನಿರ್ದೇಶನವಿರುವ ಈ ಹಾಡನ್ನು ಅನಿರುದ್ಧ್ ಶಾಸ್ತ್ರಿ ಹಾಡಿದ್ದಾರೆ ಎಂದು ಆಲ್ಬಂ ಸಾಂಗ್ ನಿರ್ದೇಶಕ ರವಿಕುಮಾರ್ ಮಾಹಿತಿ ನೀಡಿದರು.

ನಾನು “ಇರುವುದೆಲ್ಲವ ಬಿಟ್ಟು” ಹಾಗೂ “ಗಜಾನನ ಗ್ಯಾಂಗ್” ಚಿತ್ರಗಳಲ್ಲಿ ನಟಿಸಿದ್ದೇನೆ. ಇದು ನಾನು ನಟಿಸಿರುವ ಮೊದಲ ಆಲ್ಬಂ ಸಾಂಗ್. ಒಳ್ಳೆಯ ತಂಡದೊಂದಿಗೆ ಕೆಲಸ ಮಾಡಿದ ತೃಪ್ತಿಯಿದೆ ಎಂದರು ನಾಯಕ ಶ್ರೀ.

ನಾನು ಮೂಲತಃ ಸಿವಿಲ್ ಎಂಜಿನಿಯರ್. ಹಾಡು ಬರೆಯುವುದು ನನ್ನ ಹವ್ಯಾಸ.‌ ಅನೇಕ ಹಾಡುಗಳನ್ನು ಬರೆದಿದ್ದೇನೆ.‌ ಆದರೆ‌ ಬಿಡುಗಡೆಯಾಗುತ್ತಿರುವುದು ಇದೇ ಮೊದಲು. ಈ ಆಲ್ಬಂ ಸಾಂಗನ್ನು ನಾನೇ ನಿರ್ಮಾಣ ಕೂಡ ಮಾಡಿದ್ದೀನಿ ಎನ್ನುತ್ತಾರೆ ಸಿದ್ದಾರ್ಥ್.

ಈ ಆಡಿಯೋ ಕಂಪನಿ ಮಾಲೀಕರಾದ ವಿರೂಪಾಕ್ಷಿ ನನ್ನ ಸ್ನೇಹಿತರು. ಒಳ್ಳೆಯ ಉದ್ದೇಶವಿಟ್ಟುಕೊಂಡು ಚಿತ್ರರಂಗ ಪ್ರವೇಶ ಮಾಡುತ್ತಿದ್ದಾರೆ. ಇನ್ನೂ ಆಲ್ಬಂ ಸಾಂಗ್ ನ ನಿರ್ಮಾಪಕ ಸಿದ್ದಾರ್ಥ್ ಅವರ ಮಾತು ಕೇಳಿ ಸಂತೋಷವಾಯಿತು. ನಾಯಕ ಶ್ರೀ ಸೇರಿದಂತೆ ಇಡೀ ತಂಡಕ್ಕೆ ಶುಭವಾಗಲಿ ಉಮೇಶ್ ಬಣಕಾರ್.

ನಾಯಕಿ ಪೂಜಾ, ಸಂಗೀತ ನಿರ್ದೇಶಕ ಪ್ರೇಮ್ ಭರತ್, ನಿರ್ಮಾಣ ಉಸ್ತುವಾರಿ ವಹಿಸಿಕೊಂಡಿರುವ ಪ್ರೇಮ್ ಹೊಸ್ಮನಿ, ಪ್ರಣವ್ ಆಡಿಯೋ ಕಂಪನಿ ಬ್ಯುಸಿನೆಸ್ ಹೆಡ್ ರಶ್ಮಿತಾ ಹಾಗೂ ನೃತ್ಯ ನಿರ್ದೇಶಕ ಶ್ರೇಯಸ್ಸ್ ಭೈರವ ಅನುಭವ ಹಂಚಿಕೊಂಡರು.

Categories
ಸಿನಿ ಸುದ್ದಿ

ಇವಳು ಕಲ್ಲಿನ ಕೋಟೆ ಹುಡುಗನ ಕನಸಿನ ಹುಡುಗಿ ! ಮೀರಾ ಎಂಬ ವೆಬ್ ಸೀರೀಸ್ ಗೆ ಚಿತ್ರದುರ್ಗ ಪ್ರತಿಭೆಯ ಆ್ಯಕ್ಷನ್ ಕಟ್…

ಕನ್ನಡ ಚಿತ್ರರಂಗ ಈಗ ಎಲ್ಲೆಡೆ ಜೋರು ಸದ್ದು ಮಾಡುತ್ತಿದೆ. ಅದರಲ್ಲೂ ಹೊಸಬರದ್ದೇ ಈಗ ಹವಾ. ಹೌದು, ಇಲ್ಲಿ ಹೊಸ ಪ್ರತಿಭೆಗಳ ಆಗಮನ ನಿರಂತರವಾಗಿದೆ. ಸಿನಿಮಾ ಜೊತೆ ಜೊತೆಯಲ್ಲಿ ಈಗ ಕನ್ನಡ ವೆಬ್ ಸೀರೀಸ್ ಜಮಾನ. ಹಾಗಾಗಿ ಅದು ಕೂಡ ಚಾಲ್ತಿಯಲ್ಲಿದೆ. ಈಗಾಗಲೇ ಹಲವು ಹೊಸ ಪ್ರತಿಭಾವಂತರು ವೆಬ್ ಸೀರೀಸ್ ಮೊರೆ ಹೋಗಿದ್ದಾರೆ. ಆ ಮೂಲಕ ಸದ್ದು ಮಾಡಿದ ಉದಾಹರಣೆಯೇ ಹೆಚ್ಚು. ಈಗ ಅಂತಹ ವೆಬ್ ಸೀರೀಸ್ ಹಿಂದೆ ನರಸಿಂಹಮೂರ್ತಿ (ಮೂರ್ತಿ ದುರ್ಗ) ಎಂಬ ಹೊಸ ಪ್ರತಿಭೆಯೂ ಸೇರಿದೆ

ಅಂದಹಾಗೆ, ನರಸಿಂಹಮೂರ್ತಿ ಮೂಲತಃ ಚಿತ್ರದುರ್ಗದ ಹುಡುಗ. ಹಲವು ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಕೆಲಸ ಮಾಡಿದ ಅನುಭವ ಇವರಿಗಿದೆ. ಆ ಅನುಭವ ಈಗ ಇದೇ‌ ಮೊದಲ‌ ಸಲ ವೆಬ್ ಸೀರೀಸ್ ಮೂಲಕ ನಿರ್ದೇಶಕನಾಗಲು ಹೊರಟಿದ್ದಾರೆ. ಕಥೆ, ಚಿತ್ರಕಥೆ, ಸಂಭಾಷಣೆ ಜವಾಬ್ದಾರಿ ಇವರದೇ. ಈ ನಿಟ್ಟಿನಲ್ಲಿ ಈಗಾಗಲೇ ಅವರು ಕಾರ್ಯ ಪ್ರವೃತ್ತರಾಗಿದ್ದಾರೆ ಕೂಡ. ಅವರ ಕನಸಿನ‌ ವೆಬ್ ಸೀರೀಸ್ ಗೆ ಅವರಿಟ್ಟ ಹೆಸರು ಮೀರಾ. ಇದು ಕನ್ನಡ, ಹಿಂದಿ ಮತ್ತು ತಮಿಳು ಭಾಷೆಯಲ್ಲಿ ತಯಾರಾಗುತ್ತಿರುವ ಸೀರೀಸ್.
ಮೀರಾ ಈ ಹೆಸರೇ ಹೇಳುವಂತೆ ಇದೊಂದು‌ ಮಹಿಳಾ ಕಥಾಹಂದರ ಹೊಂದಿರುವ ಸ್ಟೋರಿ. ಸದ್ದಿಲ್ಲದೆಯೇ ಒಂದು ಎಪಿಸೋಡ್ ಚಿತ್ರೀಕರಿಸಿರುವ ನಿರ್ದೇಶಕ ನರಸಿಂಹಮೂರ್ತಿ, ತಮ್ಮದೇ ಉತ್ಸಾಹಿ ತಂಡ ಕಟ್ಟಿಕೊಂಡು ವೆಬ್ ಸೀರೀಸ್ ಚಿತ್ರೀಕರಣದಲ್ಲಿ ತೊಡಗಿದ್ದಾರೆ.

ಮೀರಾ ಅಂದಾಕ್ಷಣ, ನೆನಪಾಗೊದೇ ಒಂದು ಮಹಿಳಾ ಪ್ರಧಾನವಾಗಿರುವ ಕಥೆ. ಅದು ನಿಜ ಕೂಡ. ಈಗಿನ ವಾಸ್ತವ ಅಂಶಗಳೇ ಈ ವೆಬ್ ಸೀರೀಸ್ ಜೀವಾಳ. ಒಂದು ಹೆಣ್ ದನಿಯ ಆರ್ತನಾದ, ಅವಳ ನೋವು, ದುಗುಡ-ದುಮ್ಮಾನ, ದೌರ್ಜನ್ಯ ಅವಳನ್ನು ಸಮಾಜ ನೋಡುವ ಪರಿ, ಆಕೆಯ ಸಮಸ್ಯೆಗೆ ಸ್ಪಂದಿಸದ ಸಮಾಜ ಇನ್ನು ಇತ್ಯಾದಿ ಸಮಸ್ಯೆಗಳ ಕುರಿತು ಸಾಗುವ ಕಥೆಯಲ್ಲಿ ಹಲವು ಮಜಲುಗಳಿವೆ. ಇಡೀ ಕಥೆ ಹೆಣ್ಣಿನ ಸುತ್ತವೇ ಸುತ್ತಲಿದ್ದು, ನೈಜ ಘಟನೆಗಳಿಗೆ ಸಾಕ್ಷಿ ಎಂಬಂತೆಯೇ ನಿರೂಪಣೆ ಇರಲಿದೆ ಅನ್ನೋದು ನಿರ್ದೇಶಕ ನರಸಿಂಹಮೂರ್ತಿ ಅವರ ಮಾತು.

ಇನ್ನು ಈ ವೆಬ್ ಸೀರೀಸ್ ಗೆ ಹಂಸ ನಿರ್ಮಾಪಕರು. ಬೆಂಕಿ ಮುರಳಿ ಮತ್ತು ವಿನಯ್ ಕುಮಾರ್ ಸಹ ನಿರ್ಮಾಪಕರಾಗಿದ್ದಾರೆ. ಈ ದಿನಮಾನದಲ್ಲಿ ಸಿನಿಮಾ ಮಾಡಲು ಹಿಂದೇಟು ಹಾಕುವ ನಿರ್ಮಾಪಕರೇ ಇರುವಾಗ, ಹಂಸ, ಬೆಂಕಿ ಮುರುಳಿ ಮತ್ತು ವಿನಯ್ ಕುಮಾರ್ ನಿರ್ದೇಶಕ ನರಸಿಂಹಮೂರ್ತಿ ಅವರ ಚಂದದ ಮತಗತು ಮನಮುಟ್ಟುವ ಕಥೆ ಕೇಳಿ‌ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಈಗಾಗಲೇ ಹೆಸರಘಟ್ಟ ಸುತ್ತಮುತ್ತ, ಅವರು ಚಿತ್ರೀಕರಣ ಮಾಡಿದ್ದಾರೆ. ಈ ವೆಬ್ ಸೀರೀಸ್ ಗೆ ಕುಮಾರ್ ಗೌಡ ಕ್ಯಾಮೆರಾ ಹಿಡಿದರೆ, ಆರ್.ಬಿ. ಉಮೇಶ್ ಅವರ ಸಂಕಲನವಿದೆ.

ಇನ್ನು ಈ ವೆಬ್ ಸೀರೀಸ್ ಗೆ ಸಿಂಹ ರಂಗ ಮತ್ತು ನಿಧಿ ಹೈಲೈಟ್. ಮಿಕ್ಕಂತೆ ಒಂದಷ್ಟು ಪ್ರತಿಭಾವಂತರು ಈ‌ವೆಬ್ ಸೀರೀಸ್ ಭಾಗವಾಗಿದ್ದಾರೆ. ಅದೇನೆ ಇರಲಿ ನಿರ್ದೇಶಕ ಮೂರ್ತಿ ದುರ್ಗ ಅವರ ಕನಸಿನ ಈ ಮೀರಾ ವೆಬ್ ಸೀರೀಸ್ ಮಹಿಳೆಯರ ದನಿಯಾಗಲಿ ಅನ್ನೋದು ಆಶಯ.

Categories
ಸಿನಿ ಸುದ್ದಿ

ಶ್ರೀನಿ ಮತ್ತೊಂದು ಹೊಸ ಸಿನಿಮಾ: ಓಲ್ಡ್ ಮಾಂಕ್ ಬಳಿಕ ಸ್ಪೆಷಲ್ ಚಿತ್ರಕ್ಕೆ ತಯಾರಿ…

ಕನ್ನಡ ಚಿತ್ರಪ್ರೇಮಿಗಳಿಗೆ ಓಲ್ಡ್‌ಮಂಕ್ ಕಿಕ್ ಕೊಟ್ಟಿದ್ದ ಶ್ರೀನಿ ಶಿವಣ್ಣನಿಗೆ ಆಕ್ಷನ್ ಕಟ್ ಹೇಳುವ ಮೂಲಕ ಸರ್ ಪ್ರೈಸ್ ಕೊಟ್ಟಿದ್ದು ಗೊತ್ತೇ ಇದೆ. ಈಗ ಆರ್ ಜೆ ಆಗುವ ಮೂಲಕ Onair ಆಗ್ತಿದ್ದಾರೆ. ಅಂದ್ರೆ ನಿರ್ದೇಶನದ ಜೊತೆ ನಟನೆಯಲ್ಲಿ ಬ್ಯುಸಿ ಇರುವ ಶ್ರೀನಿ ಸದ್ದಿಲ್ಲದೇ ಮತ್ತೊಂದು ಸಿನಿಮಾಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.

Onair ಫಸ್ಟ್ ಲುಕ್ ರಿಲೀಸ್

ಶ್ರೀನಿ ನಾಯಕನಾಗಿ ನಟಿಸ್ತಿರುವ ಹೊಸ ಸಿನಿಮಾದ ಹೆಸರು Onair. ಈ ಚಿತ್ರದ ಫಸ್ಟ್ ಲುಕ್ ರಿಲೀಸ್ ಆಗಿದ್ದು, ಸಖತ್ ಇಂಪ್ರೆಸಿಂಗ್ ಆಗಿ ಮೂಡಿಬಂದಿದೆ.

ಡಿಫರೆಂಟ್ ಟೈಟಲ್ ನ Onair ಸಿನಿಮಾದಲ್ಲಿ ಶ್ರೀನಿ ಆರ್ ಜೆ ಪಾತ್ರದಲ್ಲಿ ನಟಿಸ್ತಿದ್ದು, ಇದೊಂದು ಥ್ರಿಲ್ಲರ್ ಕಥಾನಕ ಕಂಟೆಂಟ್ ಹೊಂದಿದೆ. ಈಗಾಗಲೇ ಶೂಟಿಂಗ್ ಕಂಪ್ಲೀಟ್ ಮಾಡಿರುವ ಚಿತ್ರತಂಡ ಜುಲೈನಲ್ಲಿ ನೇರವಾಗಿ OTTಯಲ್ಲಿ ಬಿಡುಗಡೆಯಾಗ್ತಿದೆ.

ಈ ಸಿನಿಮಾದ ಸ್ಪೆಷಾಲಿಟಿ ಅಂದ್ರೆ ರಾಜಮೌಳಿ ತಂದೆ, ಬಾಹುಬಲಿ ಸಿನಿಮಾದ ಲೇಖಕ ವಿಜಯೇಂದ್ರ ಪ್ರಸಾದ್ ಅಸೋಸಿಯೇಟ್ ಆಗಿದ್ದ ಪ್ರಶಾಂತ್ ಸಾಗರ್ Onair ಸಿನಿಮಾಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ರಘುವೀರ್ ಗೋರಿಪತಿ ಮತ್ತು ಸೃಜನ್ ಯರಬೋಲು ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

Categories
ಸಿನಿ ಸುದ್ದಿ

ವಿನಯ್ ರಾಜಕುಮಾರ್ ಹುಟ್ಟುಹಬ್ಬಕ್ಕೆ ಬಂತು ಸೋಲ್ ಆಫ್ ಪೆಪೆ ; ರಕ್ತಸಿಕ್ತ ಲುಕ್ ನಲ್ಲಿ ಮಿಂಚಿದ ದೊಡ್ಮನೆ ಕುಡಿ

ಕನ್ನಡ ಚಿತ್ರರಂಗದ ಭರವಸೆ ನಾಯಕ ನಟ.. ದೊಡ್ಮೆನೆ ಮೊಮ್ಮಗ.. ರಾಘವೇಂದ್ರ ರಾಜ್ ಕುಮಾರ್ ಜೇಷ್ಠ ಸುಪುತ್ರ ವಿನಯ್ ರಾಜ್ ಕುಮಾರ್ ಗಿಂದು ಹುಟ್ಟುಹಬ್ಬದ ಸಂಭ್ರಮ.. ವಿನಯ್ ಬರ್ತ್ ಡೇ ಸ್ಪೆಷಲ್ ಆಗಿ ಅವರು ನಟಿಸುತ್ತಿರುವ ಬಹುನಿರೀಕ್ಷಿತ ಸಿನಿಮಾ ಪೆಪೆ ಚಿತ್ರ ಬಳಗದಿಂದ ಸ್ಪೆಷಲ್ ಗಿಫ್ಟ್ ವೊಂದು ಅಭಿಮಾನಿಗಳ ಮಡಿಲು ಸೇರಿದೆ.

ಹೇಗಿದೆ ಸೋಲ್ ಆಫ್ ಪೆಪೆ?

ಪೆಪೆ ಸಿನಿಮಾ ಅಂಗಳದಿಂದ ಹೊರ ಬಂದಿರುವ ಪ್ರತಿ ಝಲಕ್ ಗಳು ವಿಭಿನ್ನತೆಯಿಂದ ಕೂಡಿವೆ. ಈಗಷ್ಟೇ ವಿನಯ್ ಬರ್ತ್ ಡೇ ಗೆ ರಿಲೀಸ್ ಆಗಿರುವ ಸೋಲ್ ಆಫ್ ಪೆಪೆ ಸಿನಿಮಾ ತೂಕವನ್ನು ಮತ್ತಷ್ಟು ಹೆಚ್ಚಿಸಿದೆ. ಮಾಸ್ ಡೈಲಾಗ್ ನಿಂದ ಶುರುವಾಗುವ ಝಲಕ್ ನಲ್ಲಿ ಹಲವು ಪಾತ್ರಗಳನ್ನು ಪರಿಚಯಿಸಲಾಗಿದ್ದು, ವಿನಯ್ ರಗಡ್ ಲುಕ್ ನಲ್ಲಿ ರಕ್ತಸಿಕ್ತ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದ ಹಿನ್ನೆಲೆ ಸಂಗೀತ, ಪಾತ್ರವರ್ಗದ ಅಭಿನಯದ ಅಮೋಘವಾಗಿ ಮೂಡಿ ಬಂದಿದೆ.

ಮಲೆನಾಡಿನಲ್ಲಿ ನಡೆಯುವ ಗ್ಯಾಂಗ್ ಸ್ಟರ್ ಕಥೆಯಾಗಿರುವ ಪೆಪೆ ಸಿನಿಮಾ ಸಂಪೂರ್ಣವಾಗಿ ಹಳ್ಳಿ ಸೊಗಡಿನ ಆಕ್ಷನ್ ಸಿನಿಮಾವಾಗಿದ್ದು, ಶ್ರೀಲೇಶ್‌ ಎಸ್‌. ನಾಯರ್‌ ನಿರ್ದೇಶನದ ಈ ಸಿನಿಮಾವನ್ನು ಉದಯ್‌ ಶಂಕರ್‌ ಎಸ್‌. ನಿರ್ಮಾಣ ಮಾಡಿದ್ದಾರೆ. ಚಿತ್ರಕ್ಕೆ ಪೂರ್ಣಚಂದ್ರ ತೇಜಸ್ವಿ ಸಂಗೀತ, ನವೀನ್ ಕುಮಾರ್ ಛಾಯಾಗ್ರಹಣ ಸಿನಿಮಾಕ್ಕಿದೆ. ಈ ಹಿಂದಿನ ಸಿದ್ದಾರ್ಥ್, ರನ್ ಆಂಟನಿ ಸಿನಿಮಾಗಳಲ್ಲಿ ಕ್ಯೂಟ್ ಲವರ್ ಬಾಯ್ ಆಗಿದ್ದ ವಿನಯ್ ರಾಜ್ ಕುಮಾರ್ ಗ್ಯಾಂಗ್ ಸ್ಟಾರ್ ಅವತಾರದಲ್ಲಿ ಕಾಣಿಸಿಕೊಂಡಿದ್ದಕ್ಕೆ ಅಭಿಮಾನಿಗಳಿಗೆ ಕುತೂಹಲ ಹೆಚ್ಚಾಗಿದೆ.

Categories
ಸಿನಿ ಸುದ್ದಿ

ಟ್ವೆಂಟಿ ಒನ್ ಅವರ್ಸ್- ಇದು ಡಾಲಿ ಸಿನಿಮಾ- ಮೇ 20ರಂದು ಬಿಡುಗಡೆ

“ಟಗರು” ಮೂಲಕ ಡಾಲಿ ಎಂಬ ಹೆಸರಿನಿಂದ ಜನಪ್ರಿಯರಾದ ಧನಂಜಯ್, “ಪಷ್ಪ” ಮೂಲಕ ದಕ್ಷಿಣ ಭಾರತದಾದ್ಯಂತ ಚಿರಪರಿಚಿತರಾದರು. “ಬಡವ ರಾಸ್ಕಲ್” ಚಿತ್ರದಿಂದ ನಿರ್ಮಾಪಕರೂ ಆದರು. ಇಷ್ಟು ಕಾರ್ಯದೊತ್ತಡದ ನಡುವೆ ಧನಂಜಯ್ “ಟ್ವೆಂಟಿ ಒನ್ ಅವರ್ಸ್” ಎಂಬ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಜೈಶಂಕರ್ ಪಂಡಿತ್ ನಿರ್ದೇಶಿಸಿರುವ ಈ ಚಿತ್ರ ಇದೇ ಇಪ್ಪತ್ತರಂದು ಬರುತ್ತಿದೆ. ಕೆ.ಆರ್.ಜಿ ಸ್ಟೂಡಿಯೋಸ್ ಮೂಲಕ ಈ ಚಿತ್ರ ಬಿಡುಗಡೆಯಾಗುತ್ತಿದೆ. ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ.

ಈ ಚಿತ್ರದ ಕುರಿತು ಪೋಸ್ಟ್ ಹಾಕಿದಾಗ, ಯಾವ ಗ್ಯಾಪ್ ನಲ್ಲಿ ಈ ಸಿನಿಮಾ ಮಾಡಿದ್ದೀರಾ? ಅಂತ ಗೆಳೆಯರು ಕೇಳಿದರು.
ಮೊದಲ ಲಾಕ್ ಡೌನ್ ನಂತರ ಮಾಡಿರುವ ಸಿನಿಮಾ ಇದು. ಮಲೆಯಾಳಿ ಹುಡುಗಿಯೊಬ್ಬಳು ಬೆಂಗಳೂರಿಗೆ ಬಂದು ಕಾಣೆಯಾಗುತ್ತಾಳೆ. ಆಕೆಯ ಹುಡುಕಾಟದ ಸುತ್ತ ನಡೆಯುವ ಕಥೆಯಿದು. ನಾನು ತನಿಖಾಧಿಕಾರಿ ಪಾತ್ರದಲ್ಲಿ ಅಭಿನಯಿಸಿದ್ದೇನೆ. ಕರ್ನಾಟಕ ಹಾಗೂ ಕೇರಳದಲ್ಲಿ ನಡೆಯುವ ಕಥೆಯಾಗಿರುವುದರಿಂದ ಕನ್ನಡ ಹಾಗೂ ಮಲೆಯಾಳಂನಲ್ಲಿ ಸಂಭಾಷಣೆ ಇರುತ್ತದೆ. ಆದರೆ ಕರ್ನಾಟಕದಲ್ಲಿ ಈ ಚಿತ್ರ ಪೂರ್ತಿ ಕನ್ನಡದ ಸಂಭಾಷಣೆಯಲ್ಲಿ ಬಿಡುಗಡೆಯಾಗುತ್ತದೆ. ಇಲ್ಲಿ ಬಿಡುಗಡೆಯಾದ ನಂತರ ಕೇರಳದಲ್ಲಿ ತೆರೆ ಕಾಣುತ್ತದೆ. ಒಳ್ಳೆಯ ನಿರ್ದೇಶಕರು, ನಿರ್ಮಾಪಕರು ಹಾಗೂ ತಂತ್ರಜ್ಞರ ತಂಡ. ಬಹಳ ದಿನಗಳ ನಂತರ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರವೊಂದರಲ್ಲಿ ನಟಿಸಿದ್ದೇನೆ. ನಿಮ್ಮ ಪ್ರೋತ್ಸಾಹವಿರಲಿ ಎಂದರು ಡಾಲಿ ಧನಂಜಯ್.

ನಾನು ಮೂಲತಃ ಕರ್ನಾಟದವನು. ಆದರೆ ಕೇರಳದಲ್ಲಿದ್ದೀನಿ. ಅಮಿತಾಬ್ ಬಚ್ಚನ್, ಐಶ್ವರ್ಯ ರೈ ಸೇರಿದಂತೆ ಖ್ಯಾತ ನಟರು ಅಭಿನಯಿಸಿರುವ ಜಾಹೀರಾತುಗಳನ್ನು ನಿರ್ದೇಶಿಸಿದ್ದೇನೆ. ಹಿರಿತೆರೆಯಲ್ಲಿ ಇದು ಮೊದಲ ಚಿತ್ರ. ಸಸ್ಪೆನ್ಸ್ ಥ್ರಿಲ್ಲರ್ ಚಿತ್ರ. ಇಪ್ಪತ್ತೊಂದು ಗಂಟೆಗಳಲ್ಲಿ ನಡೆಯುವ ವಿಶೇಷ ಕಥೆ ಹೊಂದಿರುವ ಚಿತ್ರವಿದು. ಧನಂಜಯ್ ನಿರ್ದೇಶಕರ ನಟ. ಅವರ ಜೊತೆ ಕೆಲಸ ಮಾಡಿದ್ದು ಸಂತೋಷ ತಂದಿದೆ. ದುರ್ಗಾ ಕೃಷ್ಣ, ಸುದೇವ್ ನಾಯರ್, ರಾಹುಲ್ ಮಾಧವ್ ಮುಖ್ಯಭೂಮಿಕೆಯಲ್ಲಿ ದ್ದಾರೆ. ಇಡೀ ತಂಡದ ಶ್ರಮದಿಂದ ಚಿತ್ರ ಚೆನ್ನಾಗಿ ಬಂದಿದೆ. ನೋಡಿ ಹಾರೈಸಿ ಎಂದರು ನಿರ್ದೇಶಕ ಜೈಶಂಕರ್ ಪಂಡಿತ್.

ನಾನು ಈ ಹಿಂದೆ “ಓಲ್ಡ್ ಮಾಂಕ್” ಚಿತ್ರದಲ್ಲಿ ನಟಿಸಿದ್ದೆ. ಈ ಚಿತ್ರದಲ್ಲಿ ಉತ್ತಮ ಪಾತ್ರದಲ್ಲಿ ಅಭಿನಯಿಸಿದ್ದೇನೆ. ಧನಂಜಯ್ ಜೊತೆಗೆ ಅಭಿನಯಿಸಿದ್ದು ಖುಷಿಯ ವಿಚಾರವೆಂದರು ನಟ ಸುದೇವ್ ನಾಯರ್.

ನಾನು ಉಡುಪಿಯವನು. ಆದರೆ ಕೇರಳದಲ್ಲಿ ಬೆಳದಿದ್ದು. ಹಿಂದೆ ಟ.ಎನ್.ಸೀತಾರಾಮ್ ಅವರ “ಕಾಫಿತೋಟ” ದಲ್ಲಿ ಅಭಿನಯಿಸಿದ್ದೆ. ಈಗ ಈ ಚಿತ್ರದಲ್ಲಿ ನಟಿಸಿದ್ದೇನೆ. ‌ನಿಮ್ಮ ಪ್ರೋತ್ಸಾಹವಿರಲಿ ಎನ್ನುತ್ತಾರೆ ನಟ ರಾಹುಲ್ ಮಾಧವ್.

ನಿರ್ಮಾಪಕರಾದ ಬಾಲಕೃಷ್ಣ ಎನ್.ಎಸ್, ಅಭಿಷೇಕ್ ರುದ್ರಮೂರ್ತಿ, ಸುನೀಲ್ ಗೌಡ, ಹಾಗೂ ಪ್ರವೀಣ್ ಮಹದೇವ್ ಸಹ ನಿರ್ಮಾಣದ ಬಗ್ಗೆ ಮಾತನಾಡಿದರು.

ರುಪರ್ಟ್ ಫರ್ನಾಂಡಿಸ್ ಸಂಗೀತ ನಿರ್ದೇಶನ, ತಿರುನವುಕ್ಕರಸು ಛಾಯಾಗ್ರಹಣ, ರಿಚರ್ಡ್ ಕೆವಿನ್ ಸಂಕಲನ ಹಾಗೂ ಪ್ರತಾಪ್ ಆರ್ ಮೆಂಡನ್ ಅವರ ಕಲಾ ನಿರ್ದೇಶನವಿರುವ ಈ ಚಿತ್ರಕ್ಕೆ ಸುಕೃತ್ ವಿ ಹಾಗೂ ಡಿ.ವಿ.ಬಾಲಸುಬ್ರಹ್ಮಣ್ಯ ಸಂಭಾಷಣೆ ಬರೆದಿದ್ದಾರೆ. ಶೋಭ ಅಂಜನಪ್ಪ ಈ ಚಿತ್ರದ ಕಾರ್ಯಕಾರಿ ನಿರ್ಮಾಪಕರು.

Categories
ಸಿನಿ ಸುದ್ದಿ

ಉತ್ತಮವರಲ್ಲಿ ಅತ್ಯುತ್ತಮ ಪುರುಷನಿವನು…!

ಚಿತ್ರ ವಿಮರ್ಶೆ – ರೇಟಿಂಗ್ : 5 / 3.5

ಚಿತ್ರ: ಪುರುಷೋತ್ತಮ
ನಿರ್ದೇಶನ: ಅಮರ್ ನಾಥ್
ನಿರ್ಮಾಣ: ರವಿ ಜಿಮ್ ಪ್ರೊಡಕ್ಷನ್ಸ್
ತಾರಾಗಣ: ರವಿ, ಅಪೂರ್ವ ಇತರರು.

ಇದು ಕೋರ್ಟ್ ಗೆ ಹೋಗಬೇಕಾಗಿರೋ ಕೇಸ್ ಅಲ್ಲ ಮೇಡಮ್… ನಾನು ಮುಗಿಸಬೇಕಾಗಿರೋ ಕೇಸ್…

ವಾಸುಕಿ ಪುರುಷೋತ್ತಮ್ ಈ ಮಾತು ಹೇಳುವ ಹೊತ್ತಿಗೆ, ಅವಳ ಲೈಫಲ್ಲಿ ಮರೆಯಲಾರದ ಕೆಟ್ಟ ಘಟನೆಯೊಂದು ನಡೆದು ಹೋಗಿರುತ್ತೆ. ತನ್ನ ಬದುಕಿಗೆ ಮಸಿ ಬಳಿದವರ ವಿರುದ್ಧ ಆಕೆ ಸಿಡಿದೆದ್ದು ನಿಲ್ಲಬೇಕು ಅಂತ ಹೋರಾಟಕ್ಕೆ ಟೊಂಕ ಕಟ್ಟಿ ನಿಲ್ಲುತ್ತಾಳೆ. ಅಲ್ಲಿ ಆಕೆ ಹೇಗೆಲ್ಲಾ ಹೋರಾಟ ಮಾಡ್ತಾಳೆ ಅನ್ನೋದೇ ಈ ಚಿತ್ರದ ಕಥಾವಸ್ತು.

ಭಾವುಕ ಪಯಣ…

ಪುರುಷೋತ್ತಮ ಈ ವಾರ ತೆರೆ ಕಂಡ ಸಿನಿಮಾ. ಒಂದೇ ಮಾತಲ್ಲಿ ಹೇಳುವುದಾದರೆ, ಹೆಸರಿಗೆ ತಕ್ಕಂತಹ ಉತ್ತಮ ಸಿನಿಮಾವಿದು. ಹಾಗಂತ, ಇಲ್ಲಿರೋದೆಲ್ಲವೂ ಸರಿ ಅಂತ ಹೇಳುತ್ತಿಲ್ಲ. ಸಣ್ಣಪುಟ್ಟ ದೋಷಗಳಿದ್ದರೂ ಅಲ್ಲಲ್ಲಿ ಕಾಣು ಹಾಡು, ಕಚಗುಳಿ ಇಡುವ ಮಾತುಗಳು ಆ ದೋಷಗಳನ್ನು ಬದಿಗೊತ್ತಿವೆ. ಇಲ್ಲೊಂದು ಭಾವ ಸ್ಪರ್ಷವೆನಿಸೋ ಕಥೆ ಇದೆ. ಅದಕ್ಕೊಂದು ಚಂದದ ನಿರೂಪಣೆಯೂ ಇದೆ. ಅಲ್ಲಲ್ಲಿ ಕುತೂಹಲಕ್ಕೆ ಕರೆದೊಯ್ಯುವ ಕಥೆ ಚಿತ್ರದ ವೇಗಕ್ಕೆ ಸಾಕ್ಷಿ. ಒಂದೊಳ್ಳೆಯ ಸಿನಿಮಾಗೆ ಏನೆಲ್ಲಾ ಇರಬೇಕೋ ಅದೆಲ್ಲವೂ ಪುರುಷೋತ್ತಮ ಚಿತ್ರದಲ್ಲಿದೆ. ಒಳ್ಳೇ ಕಥೆಗೆ ಪೂರಕವಾಗಿ ಚಿತ್ರಕಥೆ ಸಾಗಿದೆ. ವಿನಾಕಾರಣ ಎನಿಸುವ ದೃಶ್ಯಗಳಿಲ್ಲ. ಸುಮ್ಮನೆ‌ ತೂರಿಬರುವ ಹಾಡುಗಳೂ ಇಲ್ಲ. ಹೀರೋಯಿಸಂ ತೋರಿಸೋಕೆ ಫೈಟೂ ಇಲ್ಲ. ಇಂತಹ‌ ಕಥೆಗಳಿಗೆ ಅದು ಬೇಕಾಗಿಯೂ ಇಲ್ಲ. ಊಟಕ್ಕೆ ಉಪ್ಪಿನಕಾಯಿ ರುಚಿ ಎಷ್ಟಿರಬೇಕೋ ಅಷ್ಟೇ ಹಾಸ್ಯ ಇಲ್ಲಿದೆ. ಉಳಿದಂತೆ ಇಲ್ಲಿ ಗಟ್ಟಿತನದ ಕಥೆಯೇ ಮೇಳೈಸಿದೆ. ಒಂದರ್ಥದಲ್ಲಿ ಇದು ಫುಲ್‌ ಫ್ಯಾಮಿಲಿ ಪ್ಯಾಕ್ಡ್ ಸಿನಿಮಾ.

ಒಮ್ಮೆ ನೋಡಿ..

ಒಂದು ಸಿನಿಮಾ ಮೊದಲು ಕಣ್ಣಿಗೆ ತಂಪೆನಿಸುವಂತಿರಬೇಕು, ಕಿವಿಗೆ ಇಂಪೆನಿಸುವಂತಿರಬೇಕು ಜೊತೆಗೆ ಹೃದಯಕ್ಕೆ ನಾಟುವಂತಿರಬೇಕು ಈ ಮೂರು ಅಂಶಗಳು ಇಲ್ಲಿವೆ ಅನ್ನೋದೇ ಸಮಾಧಾನ. ಇವೆಲ್ಲವನ್ನು ಅನುಭವಿಸುವ ಯೋಚನೆ ಇದ್ದರೆ ಒಮ್ಮೆ ಪುರುಷೋತ್ತಮನ ಪೌರುಷವನ್ನು ನೋಡಲೇಬೇಕು.

ಏನೇನಿದೆ…

ಇಲ್ಲಿ ಗಂಡ, ಹೆಂಡತಿ ಮತ್ತು ಮುದ್ದಾದ ಮಗಳಿರುವ ಸುಂದರ ಕುಟುಂಬವಿದೆ. ಅಲ್ಲಿ ನಗುವಿದೆ, ಅಳುವಿದೆ, ಭಾವನೆಗಳಿವೆ, ದುಗುಡ, ದುಮ್ಮಾನವೂ ಹೆಚ್ಚಿದೆ. ಆ ಕುಟುಂಬದ ಅಕ್ಕಪಕ್ಕ ಜನರಿಂದ ಆಗಾಗ ಅಡಚಣೆ ಆಗುವ ವಿಷಯಗಳೂ ಇವೆ. ಒಮ್ಮೊಮ್ಮೆ ಭಾವುಕತೆಯೂ ಇಣುಕು ಹಾಕುತ್ತದೆ. ಅಲ್ಲಲ್ಲಿ ಮನಸ್ಸು ಭಾರವಾಗುವಂತಹ ಅಂಶಗಳು ನೋಡುಗರನ್ನು ಹಿಡಿದಿಟ್ಟುಕೊಳ್ಳುತ್ತವೆ. ಈಗಿನ ಹೊಡಿ, ಬಡಿ, ಕೊಲ್ಲು ಎನ್ನುವ ಚಿತ್ರಗಳ ಸಾಲಿಗೆ ಬೇರೇನೆ ವಿಷಯ ಕಟ್ಟಿಕೊಟ್ಟಿರುವ ನಿರ್ದೇಶಕರ ಪ್ರಯತ್ನ ಒಂದರ್ಥದಲ್ಲಿ ಸಾರ್ಥಕವೆನಿಸಿದೆ. ಒಟ್ಟಾರೆ ಇದು ಎಲ್ಲಾ ವರ್ಗಕ್ಕೂ ಇಷ್ಟ ಎನಿಸುವ ಹೊಸತರಹದ ಸಿನಿಮಾ ಎಂಬುದೇ ಸಮಾಧಾನ.

ಕಥೆ ಇಷ್ಟು…

ಕಥೆ ಬಗ್ಗೆ ಹೇಳೋದಾದರೆ, ಪುರುಷೋತ್ತಮ ಒಬ್ಬ ಲಾಯರ್ ಕಮ್ ಆಂಕರ್. ಹೆಂಡತಿ, ಮಗಳು ಅವನಿಗೆ ಪ್ರಪಂಚ. ಅವರಿಬ್ಬರನ್ನು ಪ್ರಾಣಕ್ಕಿಂತಲೂ ಪ್ರೀತಿಸೋ ಗುಣ ಅವನದು. ಲಾಯರ್ ಆದ ಅವನಿಗೆ ಬರೀ ಡೈವರ್ಸ್ ಕೇಸ್ ಗಳೇ ಹೆಚ್ಚು. ಒಂದು ಡೈವರ್ಸ್ ಅನ್ನು ಕೊಡಿಸದೆ ಕಾಂಪ್ರಮೈಸ್ ಮಾಡಿ ಕಳಿಸೋ ವ್ಯಕ್ತಿತ್ವ. ಹೀಗಿರುವಾಗ ಅವನ ಹೆಂಡತಿಯೊಬ್ಬಳ ಲೈಫಲ್ಲಿ ಒಂದು ದುರ್ಘಟನೆ ನಡೆಯುತ್ತೆ. ಅದನ್ನು ಅತ್ತ ಗಂಡನಿಗೆ, ನೆರೆಹೊರೆಯದವರಿಗೆ ಹೇಳಲಾಗದ ಪರಿಸ್ಥಿತಿ. ಅದರಿಂದ ಆಕೆ ಹೇಗೆ ಹೊರ ಬರುತ್ತಾಳೆ ಅನ್ನೋದು ಕ್ಲೈಮ್ಯಾಕ್ಸ್. ಆ ಘಟನೆಯೇ ಇಲ್ಲಿ ಇಂಟ್ರೆಸ್ಟಿಂಗ್. ಅಲ್ಲೊಂದು ತನಿಖೆಯ ಜಾಡು ಕೂಡ ಅಷ್ಟೇ ಮಜ ಕೊಡುತ್ತೆ. ಆಮೇಲೆ ಏನಾಗುತ್ತೆ ಅಂತ ತಿಳಿಯೋಕೆ ಸಿನಿಮಾ ನೋಡಿ.

ಪುರುಷೋತ್ತಮನಾಗಿ ರವಿ ಜಿಮ್ ಇಲ್ಲಿ ಪರಿಪೂರ್ಣ ಇಷ್ಟ ಆಗುತ್ತಾರೆ. ಇಡೀ ಸಿನಿಮಾ ತನ್ನ ಹೆಗಲ ಮೇಲೆ ಕೂರಿಸಿಕೊಂಡು ಎಲ್ಲೂ ಎಡವದೆ ನಡೆದಿದ್ದಾರೆ. ಮಾತಿನ ನಗೆಚಟಾಕಿ ಜೊತೆ ಹಾಡಲ್ಲೂ ಸ್ಟೆಪ್ ಹಾಕಿ ಸೈ ಎನಿಸಿಕೊಂಡಿದ್ದಾರೆ. ಡೀಸೆಂಟ್ ಪಾತ್ರಕ್ಕೆ ಜೀವ ತುಂಬಿದ್ದಾರೆ. ಅಪೂರ್ವ ಕೂಡ ಇಲ್ಲಿ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ. ಉಳಿದಂತೆ ಬರುವ ಪಾತ್ರಗಳೂ ಇಲ್ಲಿ ಗಮನ ಸೆಳೆಯುತ್ತವೆ.

ಮುಖ್ಯವಾಗಿ ಇಲ್ಲಿ ಕ್ಯಾಮೆರಾ ಕೈಚಳಕ ಖುಷಿ ಕೊಡುತ್ತದೆ. ಶ್ರೀಧರ್ ವಿ. ಸಂಭ್ರಮ್ ಅವರ ಹಾಡಲ್ಲಿ ಸಂಭ್ರಮವಿದೆ. ಕತ್ತರಿ ಕೆಲಸವೂ ಚಿತ್ರದ ವೇಗ ಹೆಚ್ಚಿಸಿದೆ.

Categories
ಸಿನಿ ಸುದ್ದಿ

ಇದು YPL! ವಿಷ್ಣುದಾದಾ ಅಭಿಮಾನಿಗಳ ಪ್ರೀತಿ: ಮೇ 7ರಿಂದ ಯಜಮಾನ ಪ್ರೀಮಿಯರ್ ಲೀಗ್…

ಈಗ ಎಲ್ಲೆಲ್ಲೂ IPL ಫೀವರ್. ಈ ಐಪಿಎಲ್ ಹಂಗಾಮದ ನಡುವೆ YPL ಟೂರ್ನಿ ಶುರುವಾಗುತ್ತಿದೆ. ನಾವು ಕೆಪಿಎಲ್(ಕರ್ನಾಟಕ ಪ್ರೀಮಿಯರ್ ಲೀಗ್) ಸಿಸಿಎಲ್ ಸೆಲೆಬ್ರಿಟಿ ಪ್ರೀಮಿಯರ್ ಲೀಗ್) ಕೇಳಿದ್ದೇವೆ ಇದು ಯಾವುದು YPL ಅನ್ನೋ ಪ್ರಶ್ನೆಗೆ ಉತ್ತರವೇ ಯಜಮಾನ ಪ್ರೀಮಿಯರ್ ಲೀಗ್

ವಿಷ್ಣುಸೇನಾ ಸಮಿತಿಯಿಂದ ಆಯೋಜಿಸಲಾಗಿರುವ ಈ ಟೂರ್ನಿಯ ಸಂಪೂರ್ಣ ಜವಾಬ್ದಾರಿಯನ್ನು ವಿಷ್ಣುಸೇನಾ ಸಮಿತಿ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ್ ವಹಿಸಿಕೊಂಡಿದ್ದಾರೆ. ಇದೇ 7 ಮತ್ತು 8ರಂದು‌ ನಡೆಯಲಿರುವ YPL ಟೂರ್ನಿಮೆಂಟ್ ಗಾಗಿ ವಿಷ್ಣುಸೇನಾ ಸಮಿತಿ ಥೀಮ್ ಸಾಂಗ್ ಬಿಡುಗಡೆ ಮಾಡಿದೆ. ಥೀಮ್ ಸಾಂಗ್ ಗೆ ಪ್ರಮೋದ್ ಮರವಂತೆ ಸಾಹಿತ್ಯ ನೀಡಿದ್ದು, ಹೇಮಂತ್ ಜೋಯಿಸ್ ಮ್ಯೂಸಿಕ್ ಮಾಡಿದ್ದಾರೆ. ಚೇತನ್ ನಾಯ್ಕ್ ಹಾಡಿದ್ದಾರೆ.

ಈ ಲೀಗ್ ಕುರಿತಿ ವೀರಕಪುತ್ರ ಶ್ರೀನಿವಾಸ್ ಹೇಳಿದ್ದಿಷ್ಟು., ಈ ಪ್ರೀಮಿಯರ್ ಲೀಗ್ ಜವಾಬ್ದಾರಿಯನ್ನು ಬೆಂಗಳೂರು ವಿಷ್ಣುಸೇನಾ ಸಮಿತಿಯ ಅಧ್ಯಕ್ಷ ಯದುನಂದನ್ ಗೌಡ , ರಾಜ್ಯ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ್, ಆನಂದ್ ವಹಿಸಿಕೊಂಡಿದ್ದಾರೆ. ಕ್ರಿಕೆಟ್ ಅನ್ನೋದನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯ ಮಾಡಿಸಿದ್ದು ಯಜಮಾನ್ರು.

ಅವರಿಗೆ ಕ್ರಿಕೆಟ್ ಅಂದ್ರೆ ಪ್ರೀತಿ. ಕ್ರಿಕೆಟ್ ದಂತಕಥೆಯ ಅನೇಕರ ಜೊತೆ‌ ಸಂಪರ್ಕವಿತ್ತು. ನಾಗರಹಾವು ಕ್ರಿಕೆಟ್ ಟೂರ್ನಮೆಂಟ್ ಮಾಡಿದಾಗ ಕಪಿಲ್ ದೇವ್ ಭಾಗಿಯಾಗಿದ್ರು. ಅನೇಕ ಸಂಬಂಧಗಳನ್ನು ಬೆಸೆಯುವ ನಿಟ್ಟಿನಲ್ಲಿ ಯಜಮಾನ ಪ್ರೀಮಿಯರ್ ಲೀಗ್ ನಡೆಸಲಾಗ್ತಿದೆ ಎಂದರು.

ಬರೋಬ್ಬರಿ 12 ಟೀಂಗಳು YPLನಲ್ಲಿ ಭಾಗಿಯಾಗಲಿದ್ದು, ಸಿನಿಮಾ ಇಂಡಸ್ಟ್ರೀಯ ಕುಟುಂಬ ಜೊತೆಗೆ ಅಭಿಮಾನಿಗಳು ಈ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲಿದ್ದಾರೆ. ಅಷ್ಟಕ್ಕೂ ವಿಷ್ಣುಸೇನಾ ಸಮಿತಿ ಈ ರೀತಿ ಟೂರ್ನಿಮೆಂಟ್ ಆಯೋಜನೆಗೆ ಕಾರಣ ಸಾಹಸಸಿಂಹನ ಕ್ರಿಕೆಟ್ ಮೇಲಿನ ಪ್ರೀತಿ.

ಈ ಹಿಂದೆ ವಿಷ್ಣುವರ್ಧನ್ ಅವರು ಸ್ನೇಹಲೋಕ ಎಂಬ ಸಂಘ ಕಟ್ಟಿ ಕ್ರಿಕೆಟ್ ಆಡುತ್ತಿದ್ದರು. ಇದೀಗ ವಿಷ್ಣುಸೇನಾ ಸಮಿತಿ ಕೂಡ ಸಿಂಹ ನಡೆದ ದಾರಿಯಲ್ಲಿ ಸಾಗಿದೆ.

error: Content is protected !!