Categories
ಸಿನಿ ಸುದ್ದಿ

ಡಾಕ್ಟರ್‌ ಅಭಿಗೆ ಧ್ರುವ ಹಾರೈಕೆ

ಹೊಸಬರ ಹೊಸ ಚಿತ್ರದ ಫಸ್ಟ್‌ಲುಕ್‌ ರಿಲೀಸ್

ದಿನ ಕಳೆದಂತೆ ಹೊಸಬರ ಚಿತ್ರಗಳು ಸೆಟ್ಟೇರುತ್ತಲೇ ಇವೆ. ಆ ಪೈಕಿ “ಡಾ. |ಅಭಿ ೦೦7” ಚಿತ್ರವೂ ಸೇರಿದೆ. ಇತ್ತೀಚೆಗೆ ಈ ಚಿತ್ರದ ಶೀರ್ಷಿಕೆ ಹಾಗೂ ಫಸ್ಟ್ ಲುಕ್‌ ಅನ್ನು, ಧ್ರುವ ಸರ್ಜಾ ಬಿಡುಗಡೆ ಮಾಡಿ ಶುಭ ಕೋರಿದ್ದಾರೆ.

ಅಂದಹಾಗೆ, ಈ ಚಿತ್ರಕ್ಕೆ ವಿಷ್ಣು ಹೀರೋ. ಈ ಚಿತ್ರದ ಮೂಲಕ ವಿಷ್ಣು ಅವರು ಪೂರ್ಣ ಪ್ರಮಾಣದ ಹೀರೋ ಆಗಿ ಸಿನಿರಂಗ ಪ್ರವೇಶಿಸಿದ್ದಾರೆ. ‌ಈ ಹಿಂದೆ ದರ್ಶನ್‌ ಅಭಿನಯದ “ಜಗ್ಗುದಾದಾ” ಚಿತ್ರದಲ್ಲಿ ವಿಷ್ಣು ಕಾಣಿಸಿಕೊಂಡಿದ್ದರು. ಡಾಕ್ಟರ್‌ ಆಗಿರುವ ವೆಂಕಟೇಶ್ ಪ್ರಸಾದ್ ಈ ಚಿತ್ರದ ನಿರ್ದೇಶಕರು. ಹಿಂದಿ ಹಾಗೂ ಇಂಗ್ಲೀಷ್ ಭಾಷೆಯ ಕೆಲವು ವೆಬ್‌ಸೀರಿಸ್ ಹಾಗೂ ಧಾರಾವಾಹಿಗಳಿಗೆ ಸಹಾಯಕ‌‌‌ನಿರ್ದೇಶಕರಾಗಿ ಕೆಲಸ ಮಾಡಿರುವ ಅನುಭವ ಇವರಿಗಿದೆ.‌‌ ಇದು ವೆಂಕಟೇಶ್ ಪ್ರಸಾದ್‌ಅವರ ಮೊದಲ ನಿರ್ದೇಶನದ ಚಿತ್ರ.

ಅಂದಹಾಗೆ, ಆಕ್ಷನ್ ಥ್ರಿಲ್ಲರ್ ಕಥಾ ಹಂದರ ಹೊಂದಿರುವ ಈ ಚಿತ್ರಕ್ಕೆ ನಿರ್ದೇಶಕರೇ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ. ಚಿತ್ರದ ಮೂರು ‌ಹಾಡುಗಳಿಗೆ ಯು.ವಿ. ಸ್ಟೆವೆನ್‌ ಸತೀಶ್ ಸಂಗೀತ ನೀಡಲಿದ್ದಾರೆ. ಚೇತನ್ ಕುಮಾರ್ ಸಾಹಿತ್ಯವಿದೆ. ಇನ್ ಫೆಂಟ್ ಭರತ್ ಕ್ಯಾಮೆರಾ ಹಿಡಿದರೆ, ಅರುಣ್ ರೈ ನೃತ್ಯ ನಿರ್ದೇಶನವಿದೆ. ಚಿತ್ರದಲ್ಲಿ ಅರ್ಜುನ್ ರಾಜ್, ಚಂದ್ರು ಬಂಡೆ ಸಾಹಸ ನಿರ್ದೇಶನ ಮಾಡುತ್ತಿದ್ದಾರೆ.‌

https://youtu.be/D_HaTi_z_y8

ವಿಷ್ಣು ನಾಯಕನಾಗಿ ನಟಿಸಿರುವ ಈ ಚಿತ್ರದ ತಾರಾ ಬಳಗದಲ್ಲಿ ವರ್ಧನ್, ಅದ್ವಿತಿ ಶೆಟ್ಟಿ, ಪ್ರಿಯಾಂಕ ಅರೋರ, ವೀಣಾ ಸುಂದರ್, ಸಿದ್ದು ಮೂಲಿಮನಿ, ಪ್ರಕಾಶ್ ತುಮ್ಮಿನಾಡ್, ನಾಗೇಂದ್ರ ಅರಸ್, ಬಲ ರಾಜವಾಡಿ, ಐಶ್ವರ್ಯ, ಶರ್ಮಿಳಾ, ಸುಚಿತ್, ಕುರಿ ರಂಗ, ಡಾ. ಸುಮಿತ್ ತಲ್ವಾರ್ ಇತರರು ಇದ್ದಾರೆ. ಈಗಾಗಲೇ 35 ದಿನಗಳ ಕಾಲ‌ ಬೆಂಗಳೂರು, ತುಮಕೂರು ಸುತ್ತಮುತ್ತ ಚಿತ್ರೀಕರಣ ನಡೆದಿದ್ದು, ಇನ್ನೂ 15‌ ದಿನಗಳ‌ ಚಿತ್ರೀಕರಣ ಬಾಕಿಯಿದೆ.

Categories
ಸಿನಿ ಸುದ್ದಿ

ಬಿಗ್‌ಬಾಸ್‌ ಮನೆಗೆ ವೈಷ್ಣವಿ – ಫ್ಯಾನ್ಸ್‌ ಪ್ರಶ್ನೆಗೆ ಟ್ವೀಟ್‌ನಲ್ಲಿ ಉತ್ತರ

ವೈಷ್ಣವಿ  ‌ ಹೇಳೋದಿಷ್ಟು?

ಈಗ ಸದ್ಯಕ್ಕೆ ಹರಿದಾಡುತ್ತಿರುವ ಸುದ್ದಿ ಅಂದರೆ ಅದು ʼಬಿಗ್‌ಬಾಸ್”…‌
ಹೌದು, ಯಾರಿಗೆ ತಾನೇ ಆ ದೊಡ್ಡ ಮನೆಯ ಸುದ್ದಿಯನ್ನು ಇಷ್ಟಪಡಲ್ಲ ಹೇಳಿ. ಅದರಲ್ಲೂ ಆ ಮನೆಯೊಳಗೆ ಈ ಬಾರಿ ಯಾರೆಲ್ಲ ಹೋಗ್ತಾರೆ ಅನ್ನುವ ಕುತೂಹಲ ಸಾಕಷ್ಟು ಇದೆ. ಆದರೂ, ಬಿಗ್‌ಬಾಸ್‌ ಮನೆಗೆ ಹೋಗಲು ತುದಿಗಾಲ ಮೇಲೆ ನಿಂತವರ ಸಾಲು ದೊಡ್ಡದೇ ಇದೆ. ಅದೇನೆ ಇದ್ದರೂ, ಸುದೀಪ್ ಕೈಯಲ್ಲಿ ಈಗಾಗಲೇ ಯಾರೆಲ್ಲಾ ಆ ಮನೆಗೆ ಪ್ರವೇಶಿಸುತ್ತಾರೆ ಅನ್ನೋ ಒಂದು ಪಟ್ಟಿಯೂ ಇದೆ ಎಂಬ ಸುದ್ದಿ ಇದೆ.

ಬಿಗ್‌ಬಾಸ್‌ ಆಯೋಜಕರು ಈಗಾಗಲೇ ಒಂದು ಪಟ್ಟಿ ರೆಡಿ ಮಾಡಿ ಇನ್ನೇನು ಶುರು ಮಾಡಲು ತಯಾರಾಗಿದ್ದಾರೆ. ಈ ಬಾರಿ ಕಾಮನ್‌ ಮ್ಯಾನ್‌ ಇರೋದಿಲ್ಲ ಎಂಬ ಮಾತು ಕೇಳಿಬಂದಿದೆ. ಆದರೆ, ಅದು ಎಷ್ಟರ ಮಟ್ಟಿಗೆ ಸತ್ಯ ಅನ್ನುವುದನ್ನು ಬಿಗ್‌ಬಾಸ್‌ ಮನೆಯಲ್ಲಿ ಕಾಣುವ ಸ್ಪರ್ಧಿಗಳ ಮೇಲೆ ನಿರ್ಧಾರವಾಗಿದೆ.  ಅದೆಲ್ಲಾ ಸರಿ, ಈಗ ಬಿಗ್‌ಬಾಸ್‌ ಕಥೆ ಬಗ್ಗೆ ಹೇಳೋಕೆ ಕಾರಣ, ಕಿರುತೆರೆಯಲ್ಲಿ ಸುದ್ದಿ ಮಾಡಿರುವ ನಟಿ ವೈಷ್ಣವಿಗೌಡ ಬಿಗ್‌ಬಾಸ್‌ ಮನೆಗೆ ಹೋಗಲಿದ್ದಾರೆ ಎಂಬ ಸುದ್ದಿ ಓಡಾಡುತ್ತಿದೆ.

ಈಗಾಗಲೇ ಬಿಗ್‌ಬಾಸ್‌ ಮನೆಗೆ ಹೋಗುವ ಸ್ಪರ್ಧಿಗಳ ಹೆಸರು ಆ ಪಟ್ಟಿಯಲ್ಲಿದೆ. ವೈಷ್ಣವಿ ಹೆಸರೂ ಕೂಡ ಸೇರಿದೆ ಎಂಬುದೇ ಈ ಹೊತ್ತಿನ ಸುದ್ದಿ. ಆದರೆ, ನಿಜವಾಗಿಯೂ ವೈಷ್ಣವಿಗೌಡ ಬಿಗ್‌ಬಾಸ್‌ ಮನೆಗೆ ಬಲಗಾಲಿಟ್ಟು ಪ್ರವೇಶ ಮಾಡುತ್ತಾರಾ?  ಈ ಕುರಿತಂತೆ ಸಾಕಷ್ಟು ಪ್ರಶ್ನೆಗಳಿವೆಯಾದರೂ, ಸ್ವತಃ ವೈಷ್ಣವಿಗೌಡ ಅವರೇ ಒಂದು ಸ್ಪಷ್ಟನೆ ಕೊಟ್ಟಿದ್ದಾರೆ. ಒಂದಷ್ಟು ಸುದ್ದಿಗಳು ಹರಿದಾಡಿದ್ದೇ ತಡ, ವೈಷ್ಣವಿ ಗೌಡ, ತಮ್ಮ ಟ್ವೀಟ್‌ನಲ್ಲಿ ನನಗೂ ಬಿಗ್‌ಬಾಸ್‌ ಮನೆಗೆ ಹೋಗಲು ಆಪರ್‌ ಬಂದಿತ್ತು. ಆದರೆ, ನಾನು ಹೋಗುತ್ತಿಲ್ಲ. ನನ್ನ ಕೈಯಲ್ಲಿ ಒಂದಷ್ಟು ಚಿತ್ರಗಳಿವೆ” ಎಂದು ಟ್ವೀಟ್‌ನಲ್ಲಿ ಸ್ಪಷ್ಟಪಡಿಸಿದ್ದಾರೆ. ಅಲ್ಲಿಗೆ ವೈಷ್ಣವಿಗೌಡ ಬಿಗ್‌ಬಾಸ್‌ ಮನೆಯ ಪ್ರವೇಶದ ವಿಷಯ ಪಕ್ಕಕ್ಕೆ ಸರಿದಂತಾಗಿದೆ.

Categories
ಸಿನಿ ಸುದ್ದಿ

ನಟಿ ಶ್ರದ್ಧಾ ಮದ್ವೆ!

ಟ್ವೀಟ್‌ನಲ್ಲಿ ಸ್ಪಷ್ಟನೆ ಕೊಟ್ಟ ಶ್ರದ್ಧಾ ಕಪೂರ್‌

– ಅರೇ ಇದೇನಪ್ಪಾ ಶ್ರದ್ಧಾ ಕಪೂರ್‌ ಮದ್ವೆ ಆಯ್ತಾ?
ಇಂಥದ್ದೊಂದು ಸುದ್ದಿ ಹರಿದಾಡುತ್ತಿದೆ. ಸಿನಿಮಾ ನಟಿಮಣಿಗಳು ಅಂದರೆ, ಒಂದಷ್ಟು ಗಾಸಿಪ್‌ ಇರದೇ ಇದ್ದರೆ ಹೇಗೆ. ಇದೂ ಕೂಡ ಅಂಥದ್ದೇ ಒಂದು ಸುದ್ದಿ. ಹೌದು, ಬಾಲಿವುಡ್‌ ನಟಿ ಶ್ರದ್ಧಾ ಕಪೂರ್‌ ಇದಾರಲ್ಲ, ಅವರು ಯಾರಿಗೆ ಗೊತ್ತಿಲ್ಲ ಹೇಳಿ. ಪಡ್ಡೆ ಹುಡುಗರ ಹಾಟ್‌ ಫೇವರೇಟ್‌. ಸಾಲು ಸಾಲು ಬಾಲಿವುಡ್‌ ಚಿತ್ರಗಳಲ್ಲಿ ನಟಿಸಿರುವ ಈ ನಟಿಗೆ ಸಾಕಷ್ಟು ಹುಡುಗರೇ ಫ್ಯಾನ್ಸ್‌ ಇದ್ದಾರೆ.

ನಟ ವರುಣ್‌ ಧವನ್‌ ಮದುವೆಯಾದ ಬೆನ್ನಲ್ಲೇ ಈಗ ಶ್ರದ್ಧಾ ಕಪೂರ್‌ ವಿವಾಹದ ಸುದ್ದಿಯನ್ನು ಬಿಚ್ಚಿಟ್ಟಿದ್ದಾರೆ. ಹೌದು ಹೆಚ್ಚಿನ ಬಾಲಿವುಡ್‌ ನಟಿಮಣಿಯರು ಮದುವೆಯಾಗ್ತಿದ್ದಾರೆ, ನಾನು ಮದುವೆಯ ವಿಚಾರದಲ್ಲಿ ಪಕ್ಕಾ ಆಗಿದ್ದೇನೆ ಎಂದು ಹೇಳಿಕೆ ನೀಡಿದ್ದಾರೆ.


ಈ ನಟಿ ರೋಹನ್‌ ಶ್ರೇಷ್ಠ ಛಾಯಾಗ್ರಾಫರ್‌ ಒಬ್ಬರ ಜೊತೆ ಡೇಟಿಂಗ್‌ ಮಾಡ್ತಿದ್ದಾರೆ ಎಂಬ ಸುಳಿವು ಸೋಷಿಯಲ್‌ ಮೀಡಿಯಾದಲ್ಲಿ ಸುದ್ದಿಯಾಗುತ್ತಿದೆ. ಹೀಗಾಗಿ ಮದುವೆ ಸುದ್ದಿಯೂ ಹರಡಿದೆ. ಅದಕ್ಕಾಗಿ ಶ್ರದ್ಧಾ ಕಪೂರ್‌ ಗಾಳಿ ಸುದ್ದಿಗಳಿಗೆ ಕಿವಿಗೊಡಬೇಡಿ ಎಂದು ಟ್ವೀಟ್‌ ಮಾಡಿದ್ದಾರೆ. ಇವೆಲ್ಲದ ಜೊತೆಗೆ ಶ್ರದ್ಧಾ ಕಪೂರ್‌ ತನ್ನ ಇನ್ಸ್ಟಾಗ್ರಾಂನಲ್ಲಿ ಒಂದಷ್ಟು ಹಾಟ್‌ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

Categories
ಸಿನಿ ಸುದ್ದಿ

ಕನ್ನಡಕ್ಕೆ ಮತ್ತೆ ಮಹಾಲಕ್ಷ್ಮೀ ಕೃಪೆ

ದಶಕಗಳ ಬಳಿಕ ಕನ್ನಡಕ್ಕೆ ಬರಲಿರುವ ಸ್ವಾಭಿಮಾನದ ಹೆಣ್ಣು

ಒಂದು ಕಾಲದಲ್ಲಿ ಸಿನಿಮಾ ಜಗತ್ತಿನಲ್ಲಿ ಮಿಂಚಿದ್ದ ನಟಿ ಮಹಾಲಕ್ಷ್ಮಿ ಈಗ ಮತ್ತೆ ಸಿನಿಲೋಕಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಹೌದು, ಇದೊಂದು ವಿಶೇಷ ಸುದ್ದಿಯೇ. ಒಂದು ದಶಕದ ಕಾಲ ಚಿತ್ರರಂಗದಲ್ಲಿ ಸಾಕಷ್ಟು ಸುದ್ದಿಯಾಗಿ ಸುಮ್ಮನಾದ ಅದ್ಭುತ ನಟಿ ಇವರು. ನಿರ್ದೇಶಕ ರವಿ ಶ್ರೀವತ್ಸ ಅವರು ಹಿರಿಯ ನಟಿ ಮಹಾಲಕ್ಷ್ಮಿ ಅವರನ್ನು ಕನ್ನಡಕ್ಕೆ ಪುನಃ ಕರೆತರುವ ಪ್ರಯತ್ನ ಮಾಡುತ್ತಿದ್ದಾರೆ ಎಂಬ ಸುದ್ದಿ ಹರಡಿತ್ತು. ಅದು ನಿಜವೂ ಹೌದು. ಹಲವು ವರ್ಷಗಳ ಬಳಿಕ ಮಹಾಲಕ್ಷ್ಮಿ ಇದೀಗ, ಮತ್ತೆ ಬಣ್ಣ ಹಚ್ಚಲು ಸಜ್ಜಾಗಿದ್ದಾರೆ ಎಂಬುದು ಸುದ್ದಿ.

ಮಹಾಲಕ್ಷ್ಮಿ ಅಂದಾಕ್ಷಣ, ಸದಾ ಕಣ್ಣೀರಿಡುವ, ಎಲ್ಲರನ್ನೂ ಕಾಡುವ ನಟಿಯ ಛಾಯೆ ಕಣ್ಮುಂದೆ ಬರುತ್ತದೆ. “ಬಾರೆ ಮುದ್ದಿನ ರಾಣಿ”, “ಸ್ವಾಭಿಮಾನ”, “ಮದುವೆ ಮಾಡು ತಮಾಷೆ ನೋಡು”, “ತಾಯಿ ಕೊಟ್ಟ ತಾಳಿ”, “ಜಯಸಿಂಹ”, “ಬ್ರಹ್ಮ ವಿಷ್ಣು ಮಹೇಶ್ವರ”, “ಪರಶುರಾಮ”, “ಹೆಂಡ್ತೀಗೆ ಹೇಳ್ಬೇಡಿ”, “ಮನೇಲಿ ಇಲಿ ಬೀದಿಲಿ ಹುಲಿ” ಸೇರಿದಂತೆ ಒಂದಷ್ಟು ಸಿನಿಮಾಗಳು ಜನಮನಸೂರೆಗೊಂಡಿದ್ದವು.

ಬಣ್ಣದ ಬದುಕಿಗೆ ಕಾಲಿಟ್ಟ ಕೆಲ ವರ್ಷಗಳಲ್ಲೇ ಯಶಸ್ವಿ ನಟಿ ಎನಿಸಿಕೊಂಡ ಮಹಾಲಕ್ಷ್ಮಿ, ಉತ್ತುಂಗದ ಕಾಲದಲ್ಲಿರುವಾಗಲೇ ಚಿತ್ರರಂಗದಿಂದ ಸ್ವಲ್ಪ ದೂರವಾದರು. “ದುರ್ಗಾಷ್ಟಮಿ” ಬಳಿಕ ಅವರು ಹೆಚ್ಚು ಸಿನಿಮಾಗಳಲ್ಲಿ ಕಾಣಿಸಿಕೊಳ್ಳಲಿಲ್ಲ. ಬಹುತೇಕರಿಗೆ ಮಹಾಲಕ್ಷ್ಮಿ ಅವರ ಸುದ್ದಿಯೇ ಇರಲಿಲ್ಲ. ಅವರ ಅಭಿಮಾನಿಗಳಿಗೇನೂ ಕಮ್ಮಿ ಇಲ್ಲ. ಸಾಕಷ್ಟು ಮಂದಿ ಅವರ ಬರುವಿಕೆಯನ್ನು ಎದುರು ನೋಡುತ್ತಿದ್ದರು. ಇದೀಗ ಅವರು ಪುನಃ ಸ್ಯಾಂಡಲ್‌ವುಡ್‌ನತ್ತ ಮುಖ ಮಾಡುವ ಸುದ್ದಿ ತಿಳಿದು ಹಿರಿಹಿರಿ ಹಿಗ್ಗುತ್ತಿದ್ದಾರೆ. ಇಷ್ಟು ವರ್ಷ ಮನೆ, ಮಕ್ಕಳು ಅಂತ ಬಿಝಿಯಾಗಿದ್ದರು. ಆ ಕುರಿತಂತೆ ಅವರೇ ಹೇಳಿದ್ದು “ಫ್ಯಾಮಿಲಿಗೋಸ್ಕರ ಕೆಲಸ ಅಂತ ಮಾಡಲೇಬೇಕು. ಇದರಿಂದ ಜವಾಬ್ದಾರಿ ಹೆಚ್ಚಾಗುತ್ತೆ, ಮಕ್ಕಳು ಬೆಳೆದಿದ್ದಾರೆ. ನನ್ನ ಉತ್ಸಾಹ ಹಾಗೆಯೇ ಇದೆ” ಅಂತ ಹೇಳಿಕೊಂಡಿದ್ದೂ ಉಂಟು. ಅದೇನೆ ಇರಲಿ, ಇದೀಗ ಮಹಾಲಕ್ಷ್ಮೀ ಅವರು ಎಂಟ್ರಿಯಾಗುತ್ತಿದ್ದಾರೆ ಎಂಬ ಸುದ್ದಿ ದಟ್ಟವಾಗಿದೆ. ಆದಷ್ಟು ಬೇಗ ಅವರು ತೆರೆಗೆ ಬರುವಂತಾಗಲಿ ಅನ್ನೋದು ಕೂಡ “ಸಿನಿಲಹರಿ” ಹಾರೈಕೆ.

Categories
ಸಿನಿ ಸುದ್ದಿ

ರೆಡ್‌ ಗರ್ಲ್!‌ ರಂಜಿನಿ ಫುಲ್‌ ಮಿಂಚಿಂಗ್

ಕೆಂಪಾದ ಕನ್ನಡತಿ…

ಕಿರುತೆರೆ ಮೂಲಕ ಜೋರು ಸುದ್ದಿಯಾಗಿರುವ ರಂಜಿನಿ ರಾಘವನ್‌, ಈಗಂತೂ ಸದಾ ಸುದ್ದಿಯಲ್ಲೇ ಇರುತ್ತಾರೆ. ಸದ್ಯಕ್ಕೆ “ಕನ್ನಡತಿ” ಧಾರಾವಾಹಿಯ ಆಕರ್ಷಣೆ ಎನಿಸಿರುವ ರಂಜಿನಿ ರಾಘವನ್‌, “ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ” ಎಂಬ ಚಿತ್ರದಲ್ಲೂ ಕಾಣಿಸಿಕೊಂಡಿದ್ದಾರೆ.

ದಿಗಂತ್‌ ಜೊತೆ ಜೋಡಿಯಾಗಿರುವ ರಂಜಿನಿಯ ಆ ಚಿತ್ರವೀಗ ಮುಗಿದಿದ್ದು, ಬಿಡುಗಡೆಯ ತಯಾರಿಯಲ್ಲಿದೆ. ಸದ್ಯಕ್ಕೆ ರಂಜಿನಿಯಂತೂ ಕಿರುತೆರೆ, ಹಿರಿತೆರೆಯಲ್ಲಿ ಸದಾ ಸುದ್ದಿಯಾಗುತ್ತಲೇ ಇದ್ದಾರೆ. ಅಪ್ಪಟ ಕನ್ನಡತಿಯಾಗಿರುವ ರಂಜಿನಿ, ಸದ್ಯ ಕೆಂಪು ಕೆಂಪಾಗಿದ್ದಾರೆ!

ಅರೇ, ಇದೇನಪ್ಪಾ ಕೆಂಪು ಕೆಂಪಾಗಿದ್ದಾರೆ ಅಂತೆಲ್ಲಾ ಮಾತುಗಳು ಕೇಳಿಬರುತ್ತಿದೆ ಎಂಬ ಪ್ರಶ್ನೆ ಎದುರಾಗಬಹುದು. ಕೆಂಪೆಂದರೆ, ಕೆಂಪಲ್ಲ. ಆವರು ರೆಡ್‌ ಕಲರ್‌ ಟಾಪ್‌ ಹಾಕ್ಕೊಂಡ್‌ ಹಾಗೊಂದು ಫೋಸು ಕೊಟ್ಟಿರುವ ಫೋಟೋ ಸಖತ್‌ ಮೆಚ್ಚುಗೆಗೆ ಪಾತ್ರವಾಗಿದೆ. ಇನ್ನೇನು ವ್ಯಾಲಂಟೈನ್ಸ್‌ ಡೇ ಕೂಡ ಹತ್ತಿರ ಬರುತ್ತಿದೆ. ಅವರ ಈ ರೆಡ್‌ ಟಾಪ್‌ ಫೋಸ್‌ ನೋಡಿದರೆ ಲವರ್ಸ್‌ ಡೇಯನ್ನು ಸಖತ್‌ ಆಗಿಯೇ ಸ್ವಾಗತಿಸಲು ಸಜ್ಜಾದಂತಿದೆ. ಅದೇನೆ ಇರಲಿ, ರಂಜಿನಿ ಈಗ ಪಡ್ಡೆ ಹುಡುಗರ ಹಾಟ್‌ಫೇವರೇಟ್‌ ಅನ್ನೋದಂತೂ ಹೌದು.

Categories
ಸಿನಿ ಸುದ್ದಿ

ರೈತರ ಪ್ರತಿಭಟನೆ : ಕನ್ನಡದ ಸ್ಟಾರ್ಸ್ ಮೌನವೇಕೆ?

ಸದಾ ನಾಡು -ನುಡಿಯ ಪರವಾಗಿ ನಿಂತ ಸ್ಟಾರ್‌ಗಳು ಈಗಲೂ…

ರೈತರ ಪ್ರತಿಭಟನೆಯ ಬಿಸಿ ಈಗ ಸಿನಿಮಾ ತಾರೆಯರಿಗೂ ತಟ್ಟಿದೆ. ಬಾಲಿವುಡ್‌ನಲ್ಲಿ ಈಗ ನಟ-ನಟಿಯರು ಈಗ ಬಗ್ಗೆ ಮಾತನಾಡಲೇಬೇಕಾದ ಅನಿವಾರ್ಯತೆ ಸೃಷ್ಟಿ ಆಗಿದೆ. ಕಲಾವಿದರು ತಮ್ಮ ನಿಲವು ಸ್ಪಷ್ಟ ಪಡಿಸಬೇಕೆಂದು ಅಲ್ಲಿ ಅಭಿಮಾನಿಗಳ ಕಡೆಯಿಂದಲೇ ಒತ್ತಡ ಹೆಚ್ಚಿದೆ. ಸದ್ಯಕ್ಕೆ ಈ ಪರಿಸ್ಥಿತಿ ಸ್ಯಾಂಡಲ್‌ ವುಡ್‌ನಲ್ಲಿ ಇಲ್ಲ ಎನ್ನುವಂತಿದ್ದರೂ, ಕಲಾವಿದರು ತಮ್ಮ ಬದ್ಧತೆ ತೋರಬೇಕೆನ್ನುವ ಮಾತುಗಳು ಕೇಳಿಬರುತ್ತಿವೆ.

ಪರ-ವಿರೋಧ ಎನ್ನುವುದಕ್ಕಿಂತ ರೈತರ ಪ್ರತಿಭಟನೆ ವಿಚಾರದಲ್ಲಿ ಕಲಾವಿದರು ತಮ್ಮ ನಿಲುವು ಸ್ಪಷ್ಟಪಡಿಸಲಿ ಎಂದು ಸೋಷಲ್‌ ಮೀಡಿಯಾದಲ್ಲಿ ಕೆಲವರು ಒತ್ತಾಯಿಸಿದ್ದಾರೆ. ಈ ಮಧ್ಯೆಯೇ ಶುಕ್ರವಾರ ಬಹುಭಾಷೆ ನಟಿ ಪ್ರಣೀತಾ, ಟ್ವೀಟ್‌ ಮೂಲಕ ರೈತರ ಪ್ರತಿಭಟನೆಗೆ ಪ್ರತಿಕ್ರಿಯೆ ನೀಡಿರುವುದು ಪರ-ವಿರೋಧ ಅಭಿಪ್ರಾಯಕ್ಕೆ ಕಾರಣವಾಗಿದೆ.

” ಕಾನೂನು ಉಲ್ಲಂಘಿಸಿ ಸಮಾಜದ ಸುವ್ಯವಸ್ಥೆಗೆ ಧಕ್ಕೆ ತರುವ ಸಂಘಟಿತ ಪ್ರಯತ್ನಗಳು ನಡೆಯುತ್ತಿದ್ದರೂ ಕೇಂದ್ರ ಸರ್ಕಾರ ಈಗಲೂ ಮಾತುಕತೆಗೆ ಸಿದ್ಧವಿದೆ. ಕಾಯ್ದೆಗಳು ಉತ್ತಮವಾಗಿದೆ. ಇತ್ತೀಚೆಗೆ ಮಂಡನೆಯಾದ ಬಜೆಟ್‌ ಭಾರತವು ದಶಕಗಳಲ್ಲಿ ಕಂಡ ಅತ್ಯಂತ ಸುಧಾರಿತ ಬಜೆಟ್‌ ಇದಾಗಿದೆ ʼ ಎಂಬುದು ನಟಿ ಪ್ರಣೀತಾ ಅವರ ಟ್ವೀಟ್‌ ನ ಸಾರಾಂಶ.

ಉಳಿದಂತೆ ಕುತೂಹಲ ಇರೋದು ದರ್ಶನ್‌, ಸುದೀಪ್‌, ಶಿವರಾಜ್‌ ಕುಮಾರ್‌, ಯಶ್‌, ಪುನೀತ್‌ ರಾಜ್‌ ಕುಮಾರ್‌ ಸೇರಿದಂತೆ ಇತರೆ ನಟ-ನಟಯರ ಹೇಳಿಕೆಗಳ ಬಗ್ಗೆ. ಹಾಗಂತ ಇವರೆಲ್ಲ ರೈತರ ಪರವಾಗಿ ಮಾತನಾಡಿಲ್ಲ, ಬೀದಿಗಿಳಿದಿಲ್ಲ ಅಂತಲ್ಲ. ಅವರೇನು ಅಂತ ಕನ್ನಡದ ಪ್ರೇಕ್ಷಕರಿಗೆ ಗೊತ್ತು. ಕನ್ನಡ ಭಾಷೆ ಸೇರಿದಂತೆ ನೆಲ-ಜಲದ ಪ್ರಶ್ನೆ ಬಂದಾಗ ಬರೀ ಹೇಳಿಕೆಗಳು ಮಾತ್ರವಲ್ಲ ಅಷ್ಟು ನಟರೂ ಬೀದಿಗಿಳಿದು ಹೋರಾಟ ದಾಖಲಿಸಿದ್ದಾರೆ. ಅಷ್ಟಾಗಿಯೂ ಈಗ ದೇಶಾದ್ಯಂತ ರೈತರ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿರುವ ಸಂದರ್ಭದಲ್ಲಿ ಅವರ ನಿಲುವೇನು ಅನ್ನೋದು ಜನ ಸಾಮಾನ್ಯರಲ್ಲಿರುವ ಕುತೂಹಲದ ಪ್ರಶ್ನೆ.

Categories
ಸಿನಿ ಸುದ್ದಿ

ಶ್ರೀನಗರ ಕಿಟ್ಟಿ ಈಗ ವಿಲನ್‌ , ಬುದ್ಧಿವಂತನ ಎದುರು ತೊಡೆ ತಟ್ಟಿ ನಿಂತನೆ ಗಾಳಿ ಸೀನ ?

ಇದು ಉಪ್ಪಿ- ಕಿಟ್ಟಿ ಜುಗಲ್ ಬಂದಿ

ನಟ ಶ್ರೀನಗರ ಕಿಟ್ಟಿ ಈಗ ಹೊಸ ಅವತಾರಕ್ಕೆ ರೆಡಿ ಆಗಿದ್ದಾರೆ. ಬೆಳ್ಳಿತೆರೆಯಲ್ಲಿ ಅವರು ಹೀರೋ ಆಗಿ ಮಿಂಚಿದವರು. ಆದರೆ ಈಗ ಆ ಬಾರ್ಡರ್‌ ದಾಟಿಯೂ ವಿಲನ್‌ ಆಗಿ ಅಬ್ಬರಿಸಲು ಮುಂದಾಗಿದ್ದಾರೆ. ಹಾಗಂತ ಇವರಿಗೂ ಅವರೇನು ಹೀರೋ ಲೈನ್‌ ಕ್ರಾಸ್‌ ಮಾಡಿಲ್ಲ ಅಂತಲ್ಲ. ಈಗಾಗಲೇ ʼಬಾಲ್‌ಪೆನ್‌ʼ,ʼ ಸಿಂಪಾಲ್ಲಾಗಿ ಒಂದ್‌ ಲವ್‌ ಸ್ಟೋರಿʼ, ʼಭಜರಂಗಿʼ ಹಾಗೂ ʼನನ್‌ ಲೈಪ್‌ ಅಲ್ಲಿʼ ಎನ್ನುವ ಚಿತ್ರಗಳಲ್ಲಿ ವಿಶೇಷ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದು ನಿಮಗೂ ಗೊತ್ತು. ಅಷ್ಟೇ ಯಾಕೆ, ಈಗ ಶರಣ್‌ ಅಭಿನಯದ ಬಹು ನಿರೀಕ್ಷಿತ ಚಿತ್ರ ʼಅವತಾರ ಪುರುಷʼ ಹಾಗೂ ʼಗರುಡʼ ಚಿತ್ರಗಳಲ್ಲೂ ಅವರದ್ದು ಗೆಸ್ಟ್‌ ಅಫೀರಿಯನ್ಸ್ ಇದೆ. ಇಷ್ಟಾಗಿಯೂ ಈಗವರು ಹೀರೋಗಿರಿ ಕ್ರಾಸ್‌ ಮಾಡಿ ಬಣ್ಣ ಹಚ್ಚುತ್ತಿರುವುದು ವಿಲನ್‌ ಪಾತ್ರಕ್ಕೆ. ಅದರಲ್ಲೂ ರಿಯಲ್‌ ಸ್ಟಾರ್‌ ಉಪೇಂದ್ರ ಎದುರು. ಹಾಗೆಯೇ ಅವರು ವಿಲನ್‌ ಆಗಿರುವುದು ಫಸ್ಟ್‌ ಟೈಮ್.‌

ಯಾವುದು ಆ ಚಿತ್ರ?

ಉಪೇಂದ್ರ ನಾಯಕರಾಗಿ ಅಭಿನಯಿಸಿರುವ ಚಿತ್ರಗಳ ಪೈಕಿ ಈಗ ಹೆಚ್ಚು ಸುದ್ದಿಯಲ್ಲಿರುವ ಚಿತ್ರಗಳಂದ್ರೆ ʼಕಬ್ಜʼ ಹಾಗೂʼ ಬುದ್ಧಿವಂತ 2ʼ. ಇವೆರೆಡು ಚಿತ್ರಗಳ ಪೈಕಿ ʼಬುದ್ಧಿವಂತ 2′ ಹಲವು ಕಾರಣಕ್ಕೆ ಕುತೂಹಲ ಮೂಡಿಸಿದ ಚಿತ್ರ. ʼಬುದ್ಧಿವಂತʼ ಉಪೇಂದ್ರ ಅವರ ಸಿನಿ ಜರ್ನಿಯ ಸ್ಪೆಷಲ್ ಚಿತ್ರ. ಕನ್ನಡದ ಬ್ಲಾಕ್‌ ಬಸ್ಟರ್‌ ಚಿತ್ರವೂ ಹೌದು. ಕತೆ, ಚಿತ್ರಕತೆ ಎನ್ನುವುದಕ್ಕಿಂತ ಅವರ ವಿಶಿಷ್ಟ ಮ್ಯಾನರಿಸಂ ಹಾಗೂ ಕಿಕ್‌ ನೀಡುವ ಡೈಲಾಗ್‌ ಮೂಲಕವೇ ಸಖತ್‌ ಹಿಟ್‌ ಆಗಿದ್ದು ಇತಿಹಾಸ. ಅದರ ‘ ಪಾರ್ಟ್‌ 2’ ಈಗ ʼಬುದ್ಧಿವಂತ 2ʼ ಹೆಸರಲ್ಲಿ ಬರುತ್ತಿರುವುದು ಹಳೇ ಸುದ್ದಿ.

ಕಿಟ್ಟಿ ಕರೆತಂದರು ಜಯರಾಂ..

ಕ್ರೆಸ್ಟಲ್‌ ಪಾರ್ಕ್‌ ಪ್ರೊಡಕ್ಷನ್ ಮೂಲಕ ನಿರ್ಮಾಪಕ ಟಿ.ಆರ್‌.ಚಂದ್ರಶೇಖರ್‌ ನಿರ್ಮಾಣ ಮಾಡುತ್ತಿರುವ ಚಿತ್ರ ಇದು. ಇದಕ್ಕೆ ಆಕ್ಷನ್‌ ಕಟ್‌ ಹೇಳುತ್ತಿರುವವರು ಕ್ರಿಯೇಟಿವ್ ಯಂಗ್ ಡೈರೆಕ್ಟರ್ ಜಯರಾಂ ಭದ್ರಾವತಿ.ಇವರಿಗಿದು ಎರಡನೇ ಚಿತ್ರ. ಅದಕ್ಕೂ ಮೊದಲು ʼಚೆರಿʼ ಹೆಸರಿನ ಚಿತ್ರ ನಿರ್ದೇಶಿಸಿದ್ದರು. ಅದಕ್ಕಿಂತ ಹೆಚ್ಚಾಗಿ ನಿರ್ದೇಶಕ ಆರ್.‌ ಚಂದ್ರು ಬಳಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದರು. ಉಪೇಂದ್ರ ಅಭಿನಯದ ‘ಬ್ರಹ್ಮ’ ಚಿತ್ರಕ್ಕೂ ಜಯರಾಂ ಸಹಾಯಕ ನಿರ್ದೇಶಕರಾಗಿದ್ದರು. ಅದೇ ನಂಟಿನ ಮೂಲಕ ‘ಬುದ್ಧಿವಂತ 2’ ನಲ್ಲಿ ಉಪ್ಪಿಗೆ ಜೋಡಿಯಾಗಿರುವ ಜಯರಾಂ ಈಗ ಚಿತ್ರದಲ್ಲಿನ ಪ್ರಮುಖ ಪಾತ್ರವೊಂದಕ್ಕೆ ಕನ್ನಡದ ಮತ್ತೊಬ್ಬ ಸ್ಟಾರ್ ಅನ್ನೇ ಆಯ್ಕೆ ಮಾಡಿಕೊಂಡಿದ್ದಾರೆ. ಅವರೇ ಶ್ರೀನಗರ ಕಿಟ್ಟಿ.ಅವರಿಲ್ಲಿ ವಿಲನ್!

ವಿಲನ್ ಅನ್ನೋದು ನಿಜ,ಆದರೆ…?

ಚಿತ್ರದಲ್ಲಿ ನಟ ಶ್ರೀನಗರ ಕಿಟ್ಟಿಅವರದ್ದು ವಿಲನ್‌ ಪಾತ್ರ.
ಸದ್ಯಕ್ಕೆ‌ಇದಿಷ್ಟೇ ಗೊತ್ತಾಗಿರುವ ವಿಚಾರ. ಉಳಿದಂತೆ ಆ ಪಾತ್ರದ ವಿವರ ಇನ್ನು ಬಹಿರಂಗವಾಗಿಲ್ಲ. ಆದರೆ ಫಸ್ಟ್ ಲುಕ್ ಹೊರ ಬಿದಿದ್ದೆ. ಸಖತ್ ಗಡ್ಡ ದಾರಿಯಾಗಿರುವ ಕಿಟ್ಟಿ, ದೊಡ್ಡ ಗ್ಯಾಂಗ್ ಸ್ಟರ್ ಅಂತೆ.ಈ ಬಗ್ಗೆ ನಿರ್ದೇಶಕ ಜಯರಾಂ ಹೇಳುವುದಿಷ್ಟು ; ಅವರದ್ದು ಇಲ್ಲಿ ಒಂದು ವಿಲನ್ ಲುಕ್. ಅವರ ಕರಿಯರ್ ನಲ್ಲೇ ಒಂದು ಪ್ರಮುಖ ಪಾತ್ರ. ಸದ್ಯಕ್ಕೆ ಆ ಪಾತ್ರದ ಡಿಟೈಲ್ಸ್ ಬೇಡ. ಮುಂದೆ ಅವರೇ ಎಲ್ಲವನ್ನು ರಿವೀಲ್ ಮಾಡಲಿದ್ದಾರೆ. ಆದರೆ ಇಲ್ಲಿ ಉಪ್ಪೇಂದ್ರ ಹಾಗೂ ಶ್ರೀನಗರ ಕಿಟ್ಟಿ ಅವರ ಜುಗಲ್ ಬಂಧಿಯೇ ಅದ್ಬುತವಾಗಿದೆ. ಇಬ್ಬರ ಫ್ಯಾನ್ಸ್ ಗೂ ಹಬ್ಬವೇ’

ಇನ್ನೇರಡು ದಿನಗಳ ಶೂಟ್ ಬಾಕಿ…

‘ಬುದ್ಧಿವಂತ 2’ ಶುರುವಾಗಿದ್ದೇ 2020 ಕ್ಕೂ ಮೊದಲು. ಅಲ್ಲಿಂದ‌ 2020 ಮಾರ್ಚ್ ಹೊತ್ತಿಗೆ ಒಂದಷ್ಟು ಚಿತ್ರೀಕರಣ ಕೂಡ ಪೂರೈಸಿತ್ತು. ಶಿವಮೊಗ್ಗ ಜೈಲಿನಲ್ಲಿ ಅದ್ಭುತವಾದ ಸನ್ನಿವೇಶಗಳಿಗೆ ಶೂಟಿಂಗ್ ಮುಗಿಸಿಕೊಂಡು ಬಂದಿತ್ತು ಚಿತ್ರ ತಂ‌ಡ. ಅಲ್ಲಿಂದ ಕೊರೋನಾ ಬಂತು, ಚಿತ್ರೀಕರಣವನ್ನು ಸ್ಥಗಿತಗೊಂಡಿತ್ತು.‌ಮತ್ತೆ ಚಿತ್ರೀಕರಣ ಶುರು ಮಾಡಿ, ಈಗ ಕ್ಲೈಮ್ಯಾಕ್ಸ್ ಹಂತಕ್ಕೆ ಬಂದಿದೆ. ಇದರಲ್ಲಿ ಶ್ರೀನಗರ ಕಿಟ್ಟಿ ಕೂಡ ಬಹುತೇಕ ಚಿತ್ರೀಕರಣ ಮುಗಿಸಿಕೊಟ್ಟಿದ್ದಾರಂತೆ. ಇನ್ನೇರೆಡು ದಿನ ಮಾತ್ರ ಶೂಟಿಂಗ್ ಬಾಕಿ ಇದೆಯಂತೆ. ಇಷ್ಟರಲ್ಲಿಯೇ ಅದು ಕೂಡ ಕಂಪ್ಲೀಟ್ ಆಗಲಿದೆಯಂತೆ. ಅಲ್ಲಿಂದ ಎಲ್ಲವೂ ಅಂದುಕೊಂಡಂತದರೆ, ಶೀಘ್ರವೇ ಚಿತ್ರ ತೆರೆಗೆ ಬರಲಿದೆಯಂತೆ.

Categories
ಸಿನಿ ಸುದ್ದಿ

ರಿಹಾನಾ ನಂತರ ತಾಪಸಿ ಕೊಟ್ಟರು ಟ್ವೀಟ್‌ ಏಟು !

ತಾಪ್ಸಿ ಪನ್ನು ಟ್ವಿಟ್‌ ಗೆ ಕಂಗನಾ ಕಂಗಾಲು, ಬಾಲಿವುಡ್‌ನಲ್ಲಿ ಶುರುವಾಗುತ್ತಾ ಸ್ಟಾರ್‌ ವಾರ್‌ ?

ಬಾಲಿವುಡ್‌ ನಟಿ ತಾಪ್ಸಿ ಪನ್ನು ಮತ್ತೆ ಸುದ್ದಿಯಲ್ಲಿದ್ದಾರೆ. ಈ ಹಿಂದೆ ಕಂಗನಾ ವಿವಾದಾತ್ಮಕ ಹೇಳಿಕೆಯಲ್ಲೂ ಪನ್ನು ಸಾಕಷ್ಟು ಸುದ್ದಿಲ್ಲಿದ್ದರು. ಈಗ ಜಾತಿಕವಾಗಿ ಸುದ್ದಿಯಾದ ಭಾರತೀಯ ರೈತರ ಪ್ರತಿಭಟನೆಯ ವಿಚಾರದಲ್ಲಿ ತಾಪ್ಸಿ ಪನ್ನು ಹೆಸರು ಚಾಲ್ತಿಗೆ ಬಂದಿದೆ. ಮತ್ತೆ ಕಂಗನಾ ಹಾಗೂ ತಾಪ್ಸಿ ನಡುವೆ ಸಮರ ಸುರುವಾಗುವ ಸಾಧ್ಯತೆಗಳು ಕಾಣುತ್ತಿವೆ. ರೈತರ ಪ್ರತಿಭಟನೆಗೆ ಸಂಬಂಧಿಸಿದಂತೆ ನಟಿ ತಾಪಸಿ ಪನ್ನು ಮಾಡಿರುವ ಟ್ವೀಟ್‌ ಬಾಲಿವುಡ್ ಘಟಾನಿಘಟಿಗಳ ಕೆನ್ನೆಗೆ ಭಾರಿಸಿದಂತಿದೆ. ಅವರ ಟ್ವೀಟ್‌ಗೆ ಪರ-ವಿರೋಧದ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ.

ಭಾರತದಲ್ಲಿನ ರೈತರ ಪ್ರತಿಭಟನೆ ಕುರಿತಂತೆ ಪಾಪ್‌ಸ್ಟಾರ್ ರಿಹಾನಾರ ಟ್ವೀಟ್‌ ಬಾಲಿವುಡ್‌ನಲ್ಲಿ ಸಂಚಲನ ಸೃಷ್ಟಿಸಿದ್ದು ಸರಿಯಷ್ಟೆ. ಆಕೆಯ ಟ್ವೀಟ್‌ ಹಿಂದೆ ಆಂತಾರಾಷ್ಟ್ರೀಯ ತಾರೆಯರ ಮತ್ತಷ್ಟು ಟ್ವೀಟ್‌ಗಳು ದಾಖಲಾದವು. ಅಲ್ಲಿಯವರೆಗೆ ಸುಮ್ಮನಿದ್ದ ಬಾಲಿವುಡ್‌ ತಾರೆಯರು ಅದೊಂದು ಟ್ವೀಟ್‌ ನಂತರ ನಿದ್ದೆಯಿಂದ ಎದ್ದಂತೆ ಪ್ರತಿಕ್ರಿಯಿಸಿದ್ದರು. ಗಾಯಕಿ ರಿಹಾನಾ ಟ್ರ್ಯಾಕ್ಟರ್‌ ಪ್ರತಿಭಟನೆಯ ಫೋಟೋ ಹಾಕಿ, “ನಾವೇಕೆ ಈ ಬಗ್ಗೆ ಮಾತನಾಡುತ್ತಿಲ್ಲ?” ಎಂದು ಪ್ರಶ್ನಿಸಿದ್ದರು. ಈ ಟ್ವೀಟ್ ನಂತರ ಬಾಲಿವುಡ್‌ ತಾರೆಯರ ಸರಣಿ ಟ್ವೀಟ್‌ಗಳು ಕಾಣಿಸಿಕೊಳ್ಳತೊಡಗಿವೆ.

ಬಾಲಿವುಡ್‌ ಸ್ಟಾರ್‌ಗಳಾದ ಅಕ್ಷಯ್‌ ಕುಮಾರ್‌, ಅಜಯ್ ದೇವಗನ್‌, ಸುನೀಲ್ ಶೆಟ್ಟಿ, ಚಿತ್ರನಿರ್ದೇಶಕ ಕರಣ್ ಜೋಹರ್‌, ಗಾಯಕಿ ಲತಾ ಮಂಗೇಶ್ಕರ್‌ ಸೇರಿದಂತೆ ಹತ್ತಾರು ಬಾಲಿವುಡ್ ಸೆಲೆಬ್ರಿಟಿಗಳು ‘#IndiaTogether, #IndiaAgainstPropaganda’ ಆಶ್ ಟ್ಯಾಗ್‌ನಡಿ ಟ್ವೀಟ್ ಮಾಡತೊಡಗಿದ್ದಾರೆ. “ಸುಳ್ಳು ಸುದ್ದಿ, ಮಾಹಿತಿಗೆ ಬಲಿಯಾಗದೆ ನಾವೆಲ್ಲರೂ ಭಾರತೀಯರಾಗಿ ಒಗ್ಗಟ್ಟಾಗಿ ನಿಲ್ಲೋಣ. ನಮ್ಮಲ್ಲೇ ಗೊಂದಲ ಬೇಡ” ಎನ್ನುವ ಅರ್ಥದಲ್ಲಿದ್ದವು ಈ ಎಲ್ಲಾ ಟ್ವೀಟ್‌ಗಳು. ಅಚ್ಚರಿಯೆಂದರೆ ಬಾಲಿವುಡ್‌ ಹಾಗೂ ಕ್ರೀಡಾರಂಗದ ತಾರೆಯರ ಕೆಲವು ಟ್ವೀಟ್‌ಗಳು ಒಂದೇ ರೀತಿಯ ಒಕ್ಕಣಿ ಹೊಂದಿದ್ದವು! ಸೋಷಿಯಲ್ ಮೀಡಿಯಾದಲ್ಲಿ ಇದಕ್ಕೂ ಟೀಕೆ ವ್ಯಕ್ತವಾಗುತ್ತಿದೆ.

ಈ ಮಧ್ಯೆ ನಟಿ ತಾಪಸಿ ಪನ್ನು ಟ್ವೀಟಿಸಿದ ಬಾಲಿವುಡ್ ತಾರೆಯರಿಗೆ ಬಿಸಿಮುಟ್ಟಿಸುವಂತಹ ಒಂದು ಟ್ವೀಟ್ ಮಾಡಿದ್ದಾರೆ. “ಒಂದು ಟ್ವೀಟ್ ನಿಮ್ಮ ಐಕ್ಯತೆಯನ್ನು ಅಲ್ಲಾಡಿಸುವುದಾದರೆ, ಒಂದು ಜೋಕ್ ನಿಮ್ಮ ನಂಬಿಕೆಯನ್ನು ಅಲ್ಲಾಡಿಸುವುದಾದರೆ, ಒಂದು ಕಾರ್ಯಕ್ರಮ ನಿಮ್ಮ ಧಾರ್ಮಿಕ ನಂಬಿಕೆಯನ್ನು ಅಲ್ಲಾಡಿಸುವುದಾದರೆ… ಮೊದಲು ನೀವು ನಂಬಿರುವ ಮೌಲ್ಯಗಳನ್ನು ಗಟ್ಟಿಗೊಳಿಸುವ ಕೆಲಸ ಮಾಡಿ. ಬದಲಿಗೆ ಉಳಿದವರ ಪ್ರೊಪಗಾಂಡಾ ಪಾಠ ಮಾಡಲು ಬರಬೇಡಿ” ಎನ್ನುವ ತಾಪ್ಸಿ ಟ್ವೀಟ್‌ ಬಾಲಿವುಡ್‌ ಸ್ಟಾರ್‌ಗಳಿಗೆ ಬಿಸಿ ಮುಟ್ಟಿಸಿದೆ. ನಟಿಯ ದಿಟ್ಟತನಕ್ಕೆ ಮೆಚ್ಚುಗೆ ಜೊತೆ ಈರ್ಷ್ಯೆಯೂ ವ್ಯಕ್ತವಾಗುತ್ತಿದೆ.

ಬಾಲಿವುಡ್ ಸಂಗೀತ ನಿರ್ದೇಶಕ ವಿಶಾಲ್ ದಡ್ಲಾನಿ ಕೂಡ ರೈತರ ಪರ ಟ್ವೀಟ್ ಮಾಡಿ ಗಮನ ಸೆಳೆದಿದ್ದರು. ‘#FarmersProtest, #TheWorldIsWatching’ ಆಶ್ ಟ್ಯಾಗ್‌ನಡಿ ಅವರು “ಹೋಲೋಕಾಸ್ಟ್‌ ಹತ್ಯಾಕಾಂಡವನ್ನು ಹಿಟ್ಲರ್ ಆಂತರಿಕ ವಿಷಯ ಎಂದು ಸಮರ್ಥಿಸಿಕೊಂಡರೆ?” ಎನ್ನುವ ಒಕ್ಕಣಿಯ ಪ್ರಶ್ನೆ ಎಸದಿದ್ದರು. ಇದೀಗ ತಾಪ್ಸಿ ಟ್ವೀಟ್‌ನಿಂದ ಕುಪಿತರಾಗಿರುವ ನಟಿ ಕಂಗನಾ ರನಾವತ್‌, ಅವರನ್ನು ಬಿ ಗ್ರೇಡ್ ನಟಿ ಎಂದು ಕರೆದು ಟ್ವೀಟ್ ಮಾಡಿ ದೇಶದ ಐಕ್ಯತೆ ಕುರಿತಂತೆ ಚರ್ಚಿಸತೊಡಗಿದ್ದಾರೆ. ಇದಕ್ಕೆ ತಾಪ್ಸಿ ಕಡೆಯಿಂದ ಇನ್ನೂ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ. ರೈತರ ಪ್ರತಿಭಟನೆಗೆ ಸಂಬಂಧಿಸಿದಂತೆ ಬಾಲಿವುಡ್‌ನಲ್ಲಿ ಸದ್ಯ ಟ್ವೀಟ್ ಸಮರ ಜಾರಿಯಲ್ಲಿದ್ದು, ಇದು ಹೇಗೆ ತಾರ್ಕಿಕ ಅಂತ್ಯ ಕಾಣುತ್ತದೆ ಎನ್ನುವುದನ್ನು ನೋಡಬೇಕಿದೆ.

Categories
ಸಿನಿ ಸುದ್ದಿ

ಆ ದಿನಗಳತ್ತ ಮರಳಿದ ಕನ್ನಡ ಚಿತ್ರರಂಗ… ದೊಡ್ಡ ಮಂದಹಾಸ ಬೀರಿದ ಸಿನಿಮಾ ಪ್ರೇಮಿ

ಈ ವಾರ ತೆರೆಗೆ ಮೂರು ಮತ್ತೊಂದು

ಅಂತೂ ಇಂತೂ ಆ ದಿನಗಳು ಮರುಕಳಿಸುತ್ತಿವೆ. ಹೌದು, ಇದು ಪುಟಿದೇಳುತ್ತಿರುವ ಸ್ಯಾಂಡಲ್‌ವುಡ್‌ ವಿಷಯ. ಇಲ್ಲೀಗ ಹೇಳಹೊರಟಿರೋದು ಬಿಡುಗಡೆಯಾಗುತ್ತಿರುವ ಕನ್ನಡ ಸಿನಿಮಾಗಳ ಬಗ್ಗೆ. ಕೊರೊನಾ ಹಾವಳಿಗೆ ತತ್ತರಿಸಿದ್ದ ಕನ್ನಡ ಸಿನಿಮಾ ರಂಗ ಮತ್ತು ಸಿನಿ ಮಂದಿ ಮೊಗದಲ್ಲೀಗ ಮಂದಹಾಸ ಬೀರಿದೆ. ಇದಕ್ಕೆ ಕಾರಣ, ಸಾಲು ಸಾಲು ಸಿನಿಮಾಗಳ ಬಿಡುಗಡೆ. ಕಳೆದ ವರ್ಷ ವಾರಕ್ಕೆ ಎಂಟು, ಹತ್ತು ಸಿನಿಮಾಗಳ ಬಿಡುಗಡೆಯನ್ನು ಕಂಡಿದ್ದ ಚಿತ್ರರಂಗಕ್ಕೆ ಕೊರೊನೊ ದೊಡ್ಡ ಹೊಡೆತ ಕೊಟ್ಟಿತ್ತು.

ಅಲ್ಲಿಂದ ಸತತ ಹತ್ತು ತಿಂಗಳ ಕಾಲ ಚಿತ್ರರಂಗ ಚೈತನ್ಯ ಕಳೆದುಕೊಂಡಿದ್ದು ನಿಜ. ಈಗ ಎಲ್ಲಾ ಸಮಸ್ಯೆಯಿಂದಲೂ ಹೊರಬಂದಿದೆ. ಕೇಂದ್ರ ಸರ್ಕಾರ ಕೂಡ ಶೇ.೧೦೦ರಷ್ಟು ಸೀಟು ಭರ್ತಿಗೆ ಅವಕಾಶ ಮಾಡಿಕೊಟ್ಟಿದೆ. ಅದರ ಬೆನ್ನಲ್ಲೇ ಸ್ಟಾರ್‌ ಸಿನಿಮಾಗಳೂ ಈಗ ಬಿಡುಗಡೆ ತಯಾರಿ ಮಾಡಿಕೊಂಡಿವೆ. ಎಂದಿನಂತೆ ಚಿತ್ರರಂಗ ಶೈನ್‌ ಆಗುತ್ತಿದೆ. ಈ ವಾರ (ಫೆ.೫) ರಾಜ್ಯಾದ್ಯಂತ ನಾಲು ಚಿತ್ರಗಳು ತೆರೆಗೆ ಅಪ್ಪಳಿಸುತ್ತಿವೆ. ಕನ್ನಡ ಚಿತ್ರರಂಗ ಪುನಃ ಆ ದಿನಗಳತ್ತ ಮರಳಿರುವುದು ಸಹಜವಾಗಿಯೇ ಕನ್ನಡ ಚಿತ್ರರಂಗದ ಜನರಿಗೆ ಖುಷಿಕೊಟ್ಟಿದೆ.

ಕೊರೊನಾ ಹಾವಳಿ ಕೊಂಚ ಕಮ್ಮಿಯಾಗುತ್ತಿದ್ದಂತೆಯೇ, ಮೆಲ್ಲನೆ ಒಂದೊಂದೇ ಚಿತ್ರಗಳು ಚಿತ್ರಮಂದಿರ ಕಡೆ ವಾಲಿದವು. ಈಗ ಬಿಡುಗಡೆಯ ಸಂಖ್ಯೆಯಲ್ಲೂ ಚೇತರಿಕೆ ಕಂಡಿದೆ. ಈ ವಾರ ನಾಲ್ಕು ಹೊಸ ಚಿತ್ರಗಳು ಚಿತ್ರಮಂದಿರಕ್ಕೆ ಲಗ್ಗೆ ಇಡುತ್ತಿವೆ. ಆ ನಾಲ್ಕು ಚಿತ್ರಗಳ ಪೈಕಿ ನಟ ವಿನೋದ್ ಪ್ರಭಾಕರ್ ಅಭಿನಯದ “ಶ್ಯಾಡೋ” ಚಿತ್ರ ತೆರೆಗೆ ಬರುತ್ತಿದೆ. ಈ ಚಿತ್ರದ ಮೂಲಕ ವಿನೋದ್‌ ಪ್ರಭಾಕರ್‌ ಅವರು ಈ ವರ್ಷ ತಮ್ಮ ಖಾತೆ ಆರಂಭಿಸುತ್ತಿದ್ದಾರೆ.

ಈ ಚಿತ್ರವನ್ನು ರವಿಗೌಡ ನಿರ್ದೇಶಿಸಿದ್ದಾರೆ. ಶೋಭಿತಾ ರಾಣಾ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರಕ್ಕೆ ಅಚ್ಚು ಅವರ ಸಂಗೀತವಿದೆ. ಮನೋಹರ್ ಜೋಶಿ ಛಾಯಾಗ್ರಹಣವಿದೆ. ಛೋಟಾ ಕೆ ಪ್ರಸಾದ್ ಸಂಕಲನ ಹಾಗೂ ವಿನೋದ್ ಅವರ ಸಾಹಸವಿದೆ. ಚಕ್ರವರ್ತಿ ಸಿ.ಹೆಚ್‌ ಈ ಚಿತ್ರದ ನಿರ್ಮಾಪಕರು. ಶರತ್ ಲೋಹಿತಾಶ್ವ, ಶ್ರೀಗಿರಿ, ಗಿರಿಶಾಮ್, ಸತ್ಯದೇವ್, ಸಿರಿ ಇತರರು ನಟಿಸಿದ್ದಾರೆ.

ಇನ್ನು, ಇವರೊಂದಿಗೆ ಪ್ರಜ್ವಲ್‌ ದೇವರಾಜ್‌ ಅಭಿನಯದ “ಇನ್ಸ್‌ಪೆಕ್ಟರ್‌ ವಿಕ್ರಂ” ಚಿತ್ರ ಕೂಡ ತೆರೆಗೆ ಬರುತ್ತಿದೆ. “ಬಿಗ್ ಬಾಸ್” ಖ್ಯಾತಿಯ ಚಂದನ್ ಆಚಾರ್ ಅವರ  ‘ಮಂಗಳವಾರ ರಜಾದಿನ’ ಚಿತ್ರ ಕೂಡ ಬಿಡುಗಡೆಯಾಗುತ್ತಿದೆ. ಇದೊಂದು ಕ್ಷೌರಿಕನ ಸುತ್ತ ಹೆಣೆದ ಕಥೆಯಾಗಿದ್ದು, ಒಂದೊಳ್ಳೆಯ ಮನರಂಜನೆಗೆ ಇಲ್ಲಿ ಕಮ್ಮಿ ಇಲ್ಲ ಎಂಬುದು ತಂಡದ ಮಾತು. ಚಂದನ್ ಆಚಾರ್ ಅವರೊಂದಿಗೆ ಲಾಸ್ಯ ನಾಗರಾಜ್, ಜಹಾಂಗೀರ್, ಹರಿಣಿ ಮತ್ತು ರಜನಿಕಾಂತ್ ಸೇರಿದಂತೆ ಹಲವರು ಈ ಚಿತ್ರದಲ್ಲಿ ನಟಿಸಿದ್ದಾರೆ. ಹೊಸಬರು ನಟಿಸಿರುವ ಮಾಂಜ್ರಾ ಎಂಬ ಸಿನಿಮಾನೂ ಈ ವಾರ ತೆರೆಗೆ ಬರುತ್ತಿದೆ.

Categories
ಸಿನಿ ಸುದ್ದಿ

ಹೇಳಿಕೆ ಕೊಟ್ಟು , ವಿಲನ್‌ ಆದ್ರೂ ಹೆಲ್ತ್‌ ಮಿನಿಸ್ಟರ್

ಸಿಎಂ ಮಾತಿಗೆ ಮಾರುತ್ತರ ನೀಡದೆ ಮುಖಭಂಗ ಅನುಭವಿಸಿದರು ಸಚಿವ ಡಾ. ಸುಧಾಕರ್‌ !

ಚಿತ್ರಮಂದಿರಗಳಲ್ಲಿನ ಶೇಕಡಾ ನೂರರಷ್ಟು ಸೀಟು ಭರ್ತಿ ವಿಷಯದಲ್ಲಿ ಆರೋಗ್ಯ ಸಚಿವ ಡಾ.ಕೆ. ಸುಧಾಕರ್‌ ಬುಧವಾರ ನಿಜಕ್ಕೂ ಮುಖಭಂಗ ಅನುಭವಿಸಿದರು. ನೂರರಷ್ಟು ಭರ್ತಿಗೆ ಅವಕಾಶ ನೀಡುವಂತೆ ಸ್ಯಾಂಡಲ್ವುಡ್‌ ಬುಧವಾರ ಮುಂಜಾನೆಯಿಂದಲೇ ಆರಂಭಿಸಿದ್ದ ಸೋಷಲ್‌ ಮೀಡಿಯಾ ಆಭಿಯಾನಕ್ಕೆ ಮಧ್ಯಾಹ್ನ ಸುಧಾಕರ್‌ ವಿಧಾನ ಸೌಧದಲ್ಲೇ ಪ್ರತಿಕ್ರಿಯೆ ನೀಡಿದ್ದರು. ಅವರ ಹೇಳಿಕೆಯೇ ವಿಚಿತ್ರವಾಗಿತ್ತು. ಸಿಎಂ ಜೊತೆ ಮಾತುಕತೆ ನಡೆಸಿ, ಆ ಹೇಳಿಕೆ ನೀಡಿದ್ದರೂ ಅಥವಾ ತಾವೇ ಸ್ವ ಇಚ್ಚೆಯಿಂದ ಈ ಹೇಳಿಕೆ ನೀಡಿದ್ದರೂ ಗೊತ್ತಿಲ್ಲ. ʼಮನರಂಜನೆಗಿಂತ ತಮಗೆ ಜನರ ಆರೋಗ್ಯ ಮುಖ್ಯʼಎನ್ನುವ ಮಾತುಗಳನ್ನು ತೀರಾ ವ್ಯಂಗ್ಯದ ಧ್ವನಿಯಲ್ಲೇ ನೀಡಿದ್ದರು. ಆದರೆ ಆ ಹೇಳಿಕೆ ಗೆ ಸ್ಯಾಂಡಲ್‌ ವುಡ್‌ ಜತೆಗೆ ಅಧಿವೇಶನದಲ್ಲೇ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದಂತೆ ಆರೋಗ್ಯ ಸಚಿವ ಸುಧಾಕರ್‌ ವಿಲನ್‌ ಸ್ಥಾನದಲ್ಲಿ ನಿಂತರು.


ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅಧಿವೇಶನದಲ್ಲಿಯೇ ಸರ್ಕಾರದ ನಿರ್ಧಾರವನ್ನು ತರಾಟೆಗೆ ತೆಗೆದುಕೊಂಡರು. ಮತ್ತೊಂದೆಡೆ ಚಿತ್ರರಂಗ ಸಿಟ್ಟಾಗಿ ಕುಳಿತಿತು. ಈ ಬೆಳವಣಿಗೆಗಳ ಬೆನ್ನಲೇ ಸಿಎಂ ಯುಡಿಯೂರಪ್ಪ ಎಚ್ಚೆತ್ತುಕೊಂಡರು. ಉರಿಯುವ ಬೆಂಕಿಗೆ ಸಿಲುಕಬಹುದೆನ್ನುವ ಸೂಚನೆ ಸಿಗುತ್ತಿದ್ದಂತೆ ಆರೋಗ್ಯ ಸಚಿವ ಸುಧಾಕರ್‌ ಗೆ ಕ್ಲಾಸ್‌ ತೆಗೆದುಕೊಂಡರು. ತಕ್ಷಣವೇ ಚಿತ್ರರಂಗದ ಗಣ್ಯರ ಜತೆ ಸಭೆ ನಡೆಸಿ, ಷರತ್ತು ಬದ್ಧ ಅವಕಾಶ ನೀಡಲು ಕ್ರಮ ಕೈಗೊಳ್ಳಿ ಅಂತ ಕಿವಿ ಹಿಂಡಿದರು.

ಇದಾಗುತ್ತಿದ್ದಂತೆ ತೀವ್ರ ಮುಖಭಂಗ ಅನುಭವಿಸಿದ ಸುಧಾಕರ್‌, ತಕ್ಷಣವೇ ವಿಧಾನ ಸೌಧದ ಸಮ್ಮೇಳನ ಸಭಾಂಗಣದಲ್ಲಿ ಚಿತ್ರರಂಗದವರ ಜತೆಗೆ ಸಭೆ ನಡೆಸಿದರು. ಚಿತ್ರೋದ್ಯಮದ ಪರಿಸ್ಥಿತಿ ಅವಲೋಕಿಸಿ, ಅವಕಾಶ ಕೊಡುವುದಾಗಿ ಹೇಳಿದರು. ಒಟ್ಟಾರೆ ಪೂರ್ವಾಲೋಚನೆ ಇಲ್ಲದೆ ಸುಧಾಕರ್‌ , ಒಂದು ಹೇಳಿಕೆ ಕೊಟ್ಟು ಆಮೇಲೆ ಮುಖಭಂಗ ಅನುಭವಿಸಬೇಕಾಗಿ ಬಂತು.

error: Content is protected !!