Categories
ಸಿನಿ ಸುದ್ದಿ

ಟ್ಯಾಟೂ ಹಾಕಿಸಿಕೊಂಡ ಅಭಿಮಾನಿಗೆ ಲಕ್ಷೂರಿ ವಾಚ್ ಗಿಫ್ಟ್; ಡಾರ್ಲಿಂಗ್ ಪ್ರಭಾಸ್ ಕ್ರೇಜಿ ಫ್ಯಾನ್- ಕ್ರೇಜಿ ಟ್ಯಾಟೂ !?

ಪ್ರಭಾಸ್ ಈಗ ಪ್ಯಾನ್ ಇಂಡಿಯಾ ಸ್ಟಾರ್. ಆಲ್‌ಓವರ್ ಇಂಡ್ಯಾ ಗುರ್ತಿಸಿಕೊಂಡಿದ್ದಾರೆ. ಇಡೀ ಜಗತ್ತಿನ ತುಂಬೆಲ್ಲಾ ಅಭಿಮಾನಿಗಳನ್ನು ಸಂಪಾದನೆ ಮಾಡಿದ್ದಾರೆ. ಅಭಿನಯದ ಮೂಲಕ ವಿಶ್ವವಿಖ್ಯಾತಿ ಪಡೆದಿರುವ ಪ್ರಭಾಸ್ ಎಲ್ಲರ ನೆಚ್ಚಿನ ಡಾರ್ಲಿಂಗೇ ಸರೀ. ಹೀಗಾಗಿ, ಒಬ್ಬೊಬ್ಬ ಅಭಿಮಾನಿಯೂ ಕೂಡ ಒಂದೊಂದು ರೀತಿಯಲ್ಲಿ ತಮ್ಮ ಅಭಿಮಾನವನ್ನು ವ್ಯಕ್ತಪಡಿಸುತ್ತಾರೆ. ಇಲ್ಲೊಬ್ಬ ಅಭಿಮಾನಿ ಮಿಸ್ಟರ್ ಪರ್ಫೆಕ್ಷನಿಸ್ಟ್ ಮೇಲಿನ ಪ್ರೀತಿಯನ್ನು ಟ್ಯಾಟೂ ಹಾಕಿಸಿಕೊಳ್ಳುವುದರ ಮೂಲಕ ತೋರಿಸಿದ್ದಾನೆ.

ತಮ್ಮ ನೆಚ್ಚಿನ ಸ್ಟಾರ್‌ಗಳ ಮೇಲಿನ ಅಭಿಮಾನವನ್ನು ಟ್ಯಾಟೂ ಮೂಲಕ ವ್ಯಕ್ತಪಡಿಸುವುದು ಹೊಸದೇನಲ್ಲ. ಆದರೆ, ತಲೆಮೇಲೆ ಟ್ಯಾಟೂ ಹಾಕಿಸಿಕೊಂಡು ಅಭಿಮಾನ ತರ‍್ಸೋದು ತೀರಾ ವಿರಳ. ಸಾಮಾನ್ಯವಾಗಿ ಫ್ಯಾನ್ಸ್ ಕೈ ಮೇಲೆ ಹಚ್ಚೆ ಹಾಕಿಸಿಕೊಳ್ತಾರೆ. ಎದೆ-ಬೆನ್ನು-ದೇಹದ ಮೇಲೆ ತಾವು ಪ್ರೀತ್ಸೋ-ಆರಾಧಿಸೋ ಸ್ಟಾರ್‌ಗಳ ಭಾವಚಿತ್ರವನ್ನು-ಹೆಸರನ್ನು-ಸಿನಿಮಾದ ಟೈಟಲ್‌ಗಳನ್ನು ಕೆತ್ತಿಸಿಕೊಳ್ಳುತ್ತಾರೆ. ದೇವರು ನಮ್ಮೊಟ್ಟಿಗೆ ಸದಾ ಇರುತ್ತಾನೋ ಇಲ್ಲವೋ ಗೊತ್ತಿಲ್ಲ. ಆರಾಧ್ಯದೈವ ಮಾತ್ರ ಅಚ್ಚೆ ಮೂಲಕ ಸದಾ ನಮ್ಮೊಟ್ಟಿಗಿರಬೇಕು ಎಂದು ಬಯಸ್ತಾರೆ. ಇದಕ್ಕೆ ಬಾಹುಬಲಿ ಅಭಿಮಾನಿಗಳು ಕೂಡ ಹೊರತಾಗಿಲ್ಲ.

ಹೌದು, ಡಾರ್ಲಿಂಗ್‌ಗೆ ಜಗತ್ತಿನಾದ್ಯಂತ ಲೆಕ್ಕವಿಲ್ಲದಷ್ಟು ಅಭಿಮಾನಿಗಳಿದ್ದಾರೆ. ಈ ಅಭಿಮಾನಿಗಳ ಪೈಕಿ ಓರ್ವ ಡಾರ್ಲಿಂಗ್ ಅಭಿಮಾನಿ `ಪ್ರಭಾಸ್’ ಹೆಸರನ್ನು ತಲೆ ಮೇಲೆ ಕೆತ್ತಿಸಿಕೊಂಡಿದ್ದಾನೆ. ಟ್ಯಾಟೂ ಹಾಕಿಸಿಕೊಂಡಿರುವ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾನೆ. ಹೀಗೆ ಸೋಷಿಯಲ್ ಸಮುದ್ರದಲ್ಲಿ ವೈರಲ್ ಆದ ಫೋಟೋ ಅಮರೇಂದ್ರ ಬಾಹುಬಲಿಯನ್ನು ತಲುಪಿದೆ. ಮಾತ್ರವಲ್ಲ ಅಭಿಮಾನಿ ತೋರಿಸಿದ ಪ್ರೀತಿಯನ್ನು ಕಂಡು ಆದಿಪುರುಷನ ಕಣ್ಣಾಲಿಗೆಗಳು ಒದ್ದೆಯಾಗಿವೆ. ಆ ಅಭಿಮಾನಿಯನ್ನು ಸಂಪರ್ಕಕ್ಕೆ ತೆಗೆದುಕೊಳ್ಳುವ ಮನಸ್ಸಾಗಿದೆ. ಹೀಗಾಗಿ, ತಮ್ಮ ಫ್ಯಾನ್‌ನ ಮನೆಗೆ ಕರೆಸಿ ಮಾತನಾಡಿದ್ದಾರೆ. ಪಕ್ಕದಲ್ಲೇ ಕೂರಿಸಿಕೊಂಡು ಕೆಲಕಾಲ ಟೈಮ್ ಸ್ಪೆಂಡ್ ಮಾಡುವುದರ ಜೊತೆಗೆ ಬೆಲೆಬಾಳುವ ವಾಚ್‌ನ ಉಡುಗೊರೆಯಾಗಿ ನೀಡಿದ್ದಾರಂತೆ.

ಹೀಗೊಂದು ಸುದ್ದಿ ಟಾಲಿವುಡ್ ಅಂಗಳದಿಂದ ನೇರವಾಗಿ ಸೋಷಿಯಲ್ ಪ್ರಪಂಚಕ್ಕೆ ಲಗ್ಗೆ ಇಟ್ಟು ಎಲ್ಲರಿಗೂ ಸುದ್ದಿ ಮುಟ್ಟಿಸುತ್ತಿದೆ. ಪ್ರಭಾಸ್ ಮಿಸ್ಟರ್ ಪರ್ಫೆಕ್ಷನಿಸ್ಟ್- ಮಂಚಿ ಮನಸ್ಸುಳ್ಳ ಮನುಷಿ ಅಂತ ಬರೀ ಟಿಟೌನ್‌ಗೆ ಮಾತ್ರವಲ್ಲ ಇಡೀ ವಲ್ಡ್ಗೆ ಗೊತ್ತಾಗಿ ಯಾವುದೋ ಕಾಲವಾಗಿದೆ ಬಿಡಿ. ಎನಿವೇ, ಹೃದಯವಂತ ಪ್ರಭಾಸ್ ಇಂಟರ್‌ನ್ಯಾಷನಲ್ ಸ್ಟಾರ್ ಆಗಿ ಬೆಳಿಬೇಕು. ರಾಧೆಶ್ಯಾಮ್- ಸಲಾರ್- ಆದಿಪುರುಷ್ ಚಿತ್ರಗಳು ನಿರೀಕ್ಷೆಗೂ ಮೀರಿದ ಯಶಸ್ಸು ಸಿಗ್ಬೇಕು. ಇದು ಆಲ್‌ಓವರ್ ಇಂಡ್ಯಾದಲ್ಲಿರುವ ರೆಬೆಲ್ ಪ್ರಭಾಸ್ ಅಭಿಮಾನಿಗಳ ಒಂದೇ ಕೋರಿಕೆ..

ಎಂಟರ್‌ಟೈನ್ಮೆಂಟ್ ಬ್ಯೂರೋ ಸಿನಿಲಹರಿ

Categories
ಸಿನಿ ಸುದ್ದಿ

ಲೇಡಿಸೂಪರ್‌ಸ್ಟಾರ್ ಹುಟ್ಟುಹಬ್ಬದಲ್ಲಿ ಆ್ಯಪಲ್ ಬ್ಯೂಟಿ ಸಮಂತಾ ಮಿಂಚಿಂಗ್ ;ವಿಘ್ನೇಶ್ ಶಿವನ್ ಟ್ರೀಟ್‌ಗೆ ನಯನ ದಿಲ್ ಖುಷ್ !

ಲೇಡಿಸೂಪರ್‌ಸ್ಟಾರ್ ನಯನತಾರಾ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. 37 ನೇವಸಂತಕ್ಕೆ ಕಾಲಿಟ್ಟಿರೋ ಸೌತ್‌ಸುಂದರಿ ನಯನತಾರಾ ಭಾಯ್‌ಫ್ರೆಂಡ್ ವಿಘ್ನೇಶ್ ಶಿವನ್ ಹಾಗೂ ಇಂಡಸ್ಟ್ರಿಯ ಸ್ನೇಹಿತರ ಜೊತೆ ಬರ್ತ್ ಡೇ ಸೆಲಬ್ರೇಟ್ ಮಾಡ್ಕೊಂಡಿದ್ದಾರೆ. ಇಂಟ್ರೆಸ್ಟಿಂಗ್ ಅಂದ್ರೆ ಸ್ನೇಹಿತೆ ನಯನತಾರಾ ಹುಟ್ಟುಹಬ್ಬದ ಸಂಭ್ರಮದಲ್ಲಿ ಆ್ಯಪಲ್ ಬ್ಯೂಟಿ ಸಮಂತಾ ಭಾಗಿಯಾಗಿದ್ದರು. ವಿಜಯ್ ಸೇತುಪತಿ ಸೇರಿದಂತೆ ಹಲವು ಕಾಲಿವುಡ್ ಸ್ಟಾರ್‌ಗಳು ಪಾಲ್ಗೊಂಡಿದ್ದರು.

ಅದ್ದೂರಿಯಾಗಿ ಜನ್ಮದಿನ ಆಚರಣೆ ಮಾಡಿಕೊಂಡ ನಯನತಾರಾ, ಗೆಳೆಯ ವಿಘ್ನೇಶ್ ಶಿವನ್ ಕೊಟ್ಟ ಸಪ್ರೈಸ್‌ಗೆ ಸಖತ್ ಥ್ರಿಲ್ಲಾದರು. ಹೌದು, `ಕಾತು ವಾಕುಲ ರೆಂಡು ಕಾದಲ್ ಚಿತ್ರದ ಫಸ್ಟ್ ಲುಕ್‌ನ ನೋಡಿ ಖುಷಿಪಟ್ಟರು.ಕಾತು ವಾಕುಲ ರೆಂಡು ಕಾದಲ್’ ಸೂಪರ್ ಸುಂದರಿಯ ಅಪ್‌ಕಮ್ಮಿಂಗ್ ಚಿತ್ರವಾಗಿದ್ದು, ವಿಘ್ನೇಶ್ ಶಿವನ್ ಆಕ್ಷನ್ ಕಟ್ ಹೇಳಿದ್ದಾರೆ. ‘ನಾನುಂ ರೌಡಿಧಾನ್'ಚಿತ್ರದ ನಂತರ ಲವ್‌ಬರ್ಡ್ಸ್ ಜತೆಯಾಗಿ ಮಾಡ್ತಿರೋ ‘ಕಾತು ವಾಕುಲ ರೆಂಡು ಕಾದಲ್’ ಮೇಲೆ ನಿರೀಕ್ಷೆಗಳು ಗರಿಗೆದರಿವೆ.

Categories
ಸಿನಿ ಸುದ್ದಿ

`ನಟಸಾರ್ವಭೌಮ’ನಿಗೆ ನುಡಿನಮನ ;ಮತ್ತೆ ಹುಟ್ಟಿ ಬಾರಯ್ಯ ರಾಜಪುತ್ರನೆ-ಆಗಲೇ ನಿಲ್ಲುವುದು ನಮ್ಮ ವೇದನೆ !

ದೊಡ್ಮನೆಯ ರಾಜರತ್ನ.. ಕರುನಾಡಿನ ಯುವರತ್ನ.. ಕೋಟ್ಯಾಂತರ ಭಕ್ತರ ಆರಾಧ್ಯದೈವ… ದಿವಂಗತ ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ‘ನುಡಿ ನಮನ' ಕಾರ್ಯಕ್ರಮ ಬೆಂಗಳೂರಿನ ಅರಮನೆ ಮೈದಾನದ ಗಾಯತ್ರಿ ವಿಹಾರದಲ್ಲಿ ನಡೆಯುತ್ತಿದೆ. ಗಂಧದಗುಡಿಯ ಸ್ಟಾರ್‌ನಟರುಗಳಾದ ರವಿಚಂದ್ರನ್-ದ್ವಾರಕೀಶ್-ದರ್ಶನ್-ಗಣೇಶ್-ದುನಿಯಾ ವಿಜಯ್-ಜಗ್ಗೇಶ್-ಶ್ರುತಿ-ತಾರಾ-ಸುಧಾರಾಣಿ-ಜಯಮಾಲಾ- ಬಿ.ಸರೋಜಾದೇವಿ ಸೇರಿದಂತೆ ಕನ್ನಡ ಕಲಾವಿದರು ಹಾಗೂ ಬಹುಭಾಷಾ ನಟ ಪ್ರಕಾಶ್ ರೈ-ಶರತ್ ಕುಮಾರ್-ಸಂಪತ್ ರಾಜ್-ಶ್ರೀಕಾಂತ್ ನಟ ವಿಶಾಲ್ ಸೇರಿದಂತೆ ಪರಭಾಷಾ ನಟರುಗಳು ‘ನಟಸಾರ್ವಭೌಮ’ನಿಗೆ ನುಡಿನಮನ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಖ್ಯಾತ ಗೀತ ಸಾಹಿತಿ ನಾಗೇಂದ್ರ ಪ್ರಸಾದ್ ಅಪ್ಪು ಮೇಲೆ ಗೀತೆ ರಚಿಸಿದ್ದಾರೆ. ಗುರುಕಿರಣ್ ಸಂಗೀತ ಸಂಯೋಜನೆ ಮಾಡಿದ್ದು, ವಿಜಯ್ ಪ್ರಕಾಶ್ ಧ್ವನಿಯಲ್ಲಿ ಅದ್ಬುತವಾಗಿ ಮೂಡಿಬಂದಿದೆ. ದೊಡ್ಮನೆ ಕುಟುಂಬಸ್ಥರು ಮಾತ್ರವಲ್ಲ ಕರುನಾಡಿನ ಪ್ರತಿಯೊಬ್ಬರ ಕಣ್ಣಂಚಲ್ಲೂ ಕಣ್ಣೀರು ತರಿಸುವ ಭಾವಪೂರ್ಣ ಗೀತೆ ನಿಮ್ಮ ಮುಂದೆ

ಮುತ್ತುರಾಜ ಹೆತ್ತ ಮುತ್ತೆ… ಎತ್ತ ಹೋದೆಯೋ..
ಅತ್ತು ಕರೆದರೂ… ಮತ್ತೆ ಬಾರದಾದೆಯೋ…
ಮರೆಯಲಾರೆವು ಎಂದು ನಿನ್ನ ಅಪ್ಪುಗೆ
ನೆನಪು ತುಂಬಿ ಹೋದೆ ದೂರದೂರಿಗೆ
ಸ್ವೀಕರಿಸು ನಮ್ಮ ಭಾಷ್ಪಾಂಜಲಿ-ಶ್ರದ್ಧಾಂಜಲಿ

ಮುಗುಳುನಗೆಯ ಬೀರುತ ಸ್ನೇಹ-ಪ್ರೀತಿ ಹಂಚುತ
ಕೋಟಿ ಕೋಟಿ ಮನಗಳಲಿ ಸೇರಿ ಹೋದೆ ಶಾಶ್ವತ
ಒಳ್ಳೆತನಕೆ ನೀನೇ ಸ್ಪೂರ್ತಿ ಎಲ್ಲಾ ತಲೆಮಾರಿಗೆ
ಬೆಟ್ಟದ ಹೂ ತರಲು ಹೋದೆ ಬಾರದೂರಿಗೆ
ಮತ್ತೆ ಹುಟ್ಟಿ ಬಾರಯ್ಯ ಯುವರತ್ನನೆ
ಕರುನಾಡೆ ನೆನೆಯುವುದು ನಿನ್ನ ಸಾಧನೆ
ಸ್ವೀಕರಿಸು ನನ್ನ ಪುಷ್ಪಾಂಜಲಿ-ಭಾವಾಂಜಲಿ

ವಿಧಿಯ ಕೆಟ್ಟ ಕಣ್ಣಿಗೆ ಕರುಣೆ ಇಲ್ಲದಾಯಿತು
ನೀನು ಇಲ್ಲದ ಈ ಕ್ಷಣ ತೆರೆಯು ಮೂಕವಾಯಿತು
ಎಂದಿಗೂ ಉಳಿಯುವೆ ನೀನು ಚರಿತೆಯ ಪುಟಗಳಲಿ
ಪುನೀತನಾದೆ ನೀನು ಮಾಡಿದ ಸೇವೆಯಲಿ
ಮತ್ತೆ ಹುಟ್ಟಿ ಬಾರಯ್ಯ ರಾಜಪುತ್ರನೆ
ಆಗಲೆ ನಿಲ್ಲುವುದು ನಮ್ಮ ವೇದನೆ
ಸ್ವೀಕರಿಸು ನಮ್ಮ ಭಾಷ್ಪಾಂಜಲಿ-ಭಾವಾಂಜಲಿ

ಮುತ್ತುರಾಜ ಹೆತ್ತ ಮುತ್ತೆ… ಎತ್ತ ಹೋದೆಯೋ..
ಅತ್ತು ಕರೆದರೂ… ಮತ್ತೆ ಬಾರದಾದೆಯೋ…
ಮರೆಯಲಾರೆವು ಎಂದು ನಿನ್ನ ಅಪ್ಪುಗೆ
ನೆನಪು ತುಂಬಿ ಹೋದೆ ದೂರದೂರಿಗೆ
ಸ್ವೀಕರಿಸು ನಮ್ಮ ಭಾಷ್ಪಾಂಜಲಿ-ಶ್ರದ್ಧಾಂಜಲಿ

Categories
ಸಿನಿ ಸುದ್ದಿ

`ಅಭಿಮಾನಿ ದೇವರು’ಗಳಿಗೋಸ್ಕರ ಕನ್ನಡ ಚಿತ್ರರಂಗ ಮತ್ತೊಮ್ಮೆ ಏರ್ಪಡಿಸಲಿದೆ` ಅಪ್ಪು ನುಡಿ ನಮನ’ ಕಾರ್ಯಕ್ರಮ !

ದೊಡ್ಮನೆಯ ರಾಜಕುಮಾರನ ನುಡಿನಮನ ಕಾರ್ಯಕ್ರಮ ಇಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುತ್ತಿದೆ. ಕನ್ನಡ ಚಿತ್ರೋದ್ಯಮದ ಕಡೆಯಿಂದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯವರು ‘ಪುನೀತ್ ನಮನ’ ಕಾರ್ಯಕ್ರಮ ನಡೆಸಿಕೊಡುತ್ತಿದ್ದಾರೆ. ಸ್ಯಾಂಡಲ್‌ವುಡ್‌ನ ಕಲಾವಿದರು ಸೇರಿದಂತೆ ಪರಭಾಷಾ ಸ್ಟಾರ್‌ಗಳು ಕೂಡ ಆಗಮಿಸಿದ್ದಾರೆ. ಬಹುಭಾಷಾ ನಟ ಪ್ರಕಾಶ್ ರೈ, ಶರತ್ ಕುಮಾರ್, ಸಂಪತ್ ರಾಜ್, ಶ್ರೀಕಾಂತ್, ನಟ ವಿಶಾಲ್ ಸೇರಿದಂತೆ ಬಹುಭಾಷಾ ನಟರುಗಳು ನಟಸಾರ್ವಭೌಮನಿಗೆ ನುಡಿನಮನ ಸಲ್ಲಿಸೋದಕ್ಕೆ ಬಂದಿದ್ದಾರೆ. ದೊಡ್ಮನೆ ಕುಟುಂಬಸ್ಥರು-ಆಪ್ತರು-ಬಂಧುಗಳು ಸೇರಿದಂತೆ ಕಲಾವಿದರಿಗೆ ಮಾತ್ರ ಇವತ್ತಿನ ‘ಅರಸು ಆರಾಧನೆ’ ಕಾರ್ಯಕ್ರಮದಲ್ಲಿ ಅವಕಾಶವಿದ್ದು ಅಭಿಮಾನಿಗಳು ಇಲ್ಲಿ ಭಾಗಿಯಾಗೋದಕ್ಕೆ ಅವಕಾಶ ನೀಡಿಲ್ಲ. ಇದರಿಂದ ಅಭಿಮಾನಿ ದೇವರುಗಳಿಗೆ ಸಹಜವಾಗಿ ಬೇಸರವಾಗಿದೆ. ಇದರಿಂದ ಚಲನಚಿತ್ರ ವಾಣಿಜ್ಯ ಮಂಡಳಿ ಅಭಿಮಾನಿ ದೇವರುಗಳಿಗೋಸ್ಕರವೇ `ಅಪ್ಪು ನುಡಿನಮನ’ ಕಾರ್ಯಕ್ರಮ ಹಮ್ಮಿಕೊಳ್ಳೋದಕ್ಕೆ ನಿರ್ಧಾರ ಮಾಡಿದೆ. ಈ ಬಗ್ಗೆ ಇವತ್ತಿನ ಕಾರ್ಯಕ್ರಮದಲ್ಲಿ ಚಲನಚಿತ್ರ ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷರಾದಂತಹ ಸಾ.ರಾ ಗೋವಿಂದು ಅವರು ತಿಳಿಸಿದ್ದು, ದೊಡ್ಮನೆಯ ಜೊತೆಗೆ ಮಾತನಾಡಿ ಶೀಘ್ರದಲ್ಲೇ ಧ್ರುವತಾರೆಗೆ ನಮನ ಸಲ್ಲಿಸೋದಕ್ಕೆ ಅವಕಾಶ ಮಾಡಿಕೊಡುವುದಾಗಿ ತಿಳಿಸಿದ್ದಾರೆ.

Categories
ಸಿನಿ ಸುದ್ದಿ

‘ಕನ್ನಿಕೇರಿ ಹುಡ್ಗಿ’ ಕಿಕ್ಕಿಗೆ ಹೊಡಿರೀ ಸೀಟಿ ! ಆಲೂರ್ ನಾಗಪ್ಪನವ್ರ ಮಗಳು ದಿವ್ಯಾಗೆ ‘ಜಾನಪದ ಪ್ರೀತಿ’ !

ಮಾಯ ಬಜಾರ್‌ಗೆ ಸಪೌಷ್ಟಿಕ ಚೆಲುವೆಯವರು ಪದಾರ್ಪಣೆ ಮಾಡಿದಾಗ, ಬಂಟಲು ಕಂಗಳ ಬೆಡಗಿಯರು ಬಂದಾಗ, ನೀಳಕಾಯದ ಸುಂದರಿಯರು ಎಂಟ್ರಿಕೊಟ್ಟಾಗ, ನಿಂಬೆ ಹಣ್ಣಿನಂಥ ಹುಡ್ಗಿಯರು ಆಗಮಿಸಿದಾಗ, ಸ್ಟ್ರ್ಯಾಬೆರಿಯಷ್ಟೇ ಸ್ವೀಟಿ, ಆಪಲ್‌ನಷ್ಟೇ ಬೊಂಬಾಟ್ ಆಗಿರುವ ನಟಿಮಣಿಯರು ಸ್ಯಾಂಡಲ್‌ವುಡ್ ಪ್ರಪಂಚಕ್ಕೆ ಬಂದಾಗ ಅವರೆಲ್ಲರನ್ನೂ ರತ್ನಗಂಬಳಿ ಹಾಕಿ ಸ್ವಾಗತಿಸಿದ್ದೀರಿ. ಗ್ರ್ಯಾಂಡ್ ಆಗಿ ವೆಲ್‌ಕಮ್ ಮಾಡ್ಕೊಂಡು ತಲೆ ಮೇಲೆ ಹೊತ್ತು ಮೆರೆಸಿದ್ದೀರಾ. ಇದೀಗ ನಮ್ಮ ಕನ್ನಡದ ಕನ್ನಿಕೇರಿ ಹುಡ್ಗಿಯ ಸರದಿ. ನಿರೂಪಕಿಯಾಗಿ ಕನ್ನಡಿಗರ ಮನೆ-ಮನ ತಲುಪಿರುವ ನಿರೂಪಕಿ ಈಗ ‘ಕನ್ನಿಕೇರಿ ಹುಡ್ಗಿ’ ರೂಪದಲ್ಲಿ ನಾಯಕಿಯಾಗಿ ಪ್ಲಸ್ ಗಾಯಕಿಯಾಗಿ ನಿಮ್ಮ ಮುಂದೆ ಬಂದಿದ್ದಾರೆ. ಅಷ್ಟಕ್ಕೂ, ಆ ನಿರೂಪಕಿ ಮತ್ಯಾರು ಅಲ್ಲ ದಿವ್ಯಾ ಆಲೂರ್

ದಿವ್ಯಾ ಆಲೂರ್ ಕನ್ನಡದ ಖ್ಯಾತ ನಿರೂಪಕಿಯರಲ್ಲೊಬ್ಬರು. ಕನ್ನಡ ಭಾಷೆ-ಕಲೆ-ಸಾಹಿತ್ಯ-ಸಂಸ್ಕೃತಿಯನ್ನು ಸಾರುವಂತಹ ಕಾರ್ಯಕ್ರಮಗಳಲ್ಲಿ ದಿವ್ಯಾ ಆಲೂರ್ ನಿರೂಪಣೆ ಇದ್ದೇ ಇರುತ್ತೆ. ಕಳೆದ ಹದಿನೆಂಟು ವರ್ಷಗಳಿಂದ ನಿರೂಪಕಿಯಾಗಿ ಕರುನಾಡಿನಾದ್ಯಂತ ಹಲವಾರು ಕಾರ್ಯಕ್ರಮಗಳನ್ನು ಹೋಸ್ಟ್ ಮಾಡಿರುವಂತಹ ದಿವ್ಯಾ ಅವರು. ದೇಸಿ ಬೀಟ್ಸ್ ಎನ್ನುವ ಜನಪದ ಮ್ಯೂಸಿಕ್ ಬ್ಯಾಂಡ್‌ನೊಂದಿಗೆ ನಾಡಿನ ಮೂಲೆ ಮೂಲೆಯಲ್ಲಿ ಸಂಗೀತ ಕಾರ್ಯಕ್ರಮಗಳನ್ನು ನೀಡುತ್ತಾ ಬಂದಿದ್ದಾರೆ. ಹೊಸ ಪ್ರಯತ್ನ-ದಿಟ್ಟ ಹೆಜ್ಜೆ-ಅಪ್ಪನ ಕನಸು-ಜಾನಪದ ಲೋಕಕ್ಕೆ ಕೊಡುಗೆ ನೀಡಬೇಕು ಎನ್ನುವ ಹಂಬಲದೊಂದಿಗೆ `ಕನ್ನಿಕೇರಿ ಹುಡ್ಗಿ’ ಹೆಸರಿನ ಜಾನಪದ ಹಾಡಿಗೆ ಹೊಸತನ ನೀಡಿ ಅದನ್ನು ಕನ್ನಡಿಗರಿಗೆ ಅರ್ಪಣೆ ಮಾಡಿದ್ದಾರೆ.

ಕನ್ನಿಕೇರಿ ಹುಡ್ಗಿಯೊಬ್ಳು ಕನಕರಾಯನ ಜಾತ್ರೆಯೊಳಗೆ...ಮಿಣಮಿಣಕ ನೋಡುತ್ತಾಳೆ ಏನು ಸಿಂಗಾರ...ಇದು ೯೦ರ ದಶಕದಲ್ಲಿ ಬ್ಲಾಕ್‌ಬಸ್ಟರ್ ಹಿಟ್ಟಾದ ಹಾಡು.ಜನಪದರ ಬಾಯಲ್ಲಿ ನಲಿದಾಡುತ್ತಿದ್ದ ಈ ಹಾಡನ್ನು ತಲೆತಲೆಮಾರಿಗೂ ಉಳಿಸಬೇಕು ಎನ್ನುವ ನಿಟ್ಟಿನಲ್ಲಿ ಜಾನಪದ ಸಾಹಿತಿಗಳು ಹಾಗೂ ಗಾಯಕರು ಆದಂತಹ ಆಲೂರು ನಾಗಪ್ಪ ಅವರು ಕ್ಯಾಸೆಟ್ ರೂಪದಲ್ಲಿ ಹೊರತಂದರು. ಈ ಹಾಡಿಗೆ ಮನೋರಂಜನ್ ಪ್ರಭಾಕರ್ ಅವರು ಸಂಗೀತ ಸಂಯೋಜನೆ ಮಾಡಿದ್ದರು, ಆಲೂರು ನಾಗಪ್ಪನವ್ರೇ ಹಾಡಿದ್ದರು. ಇದೀಗ ಇವರ ಮಗಳಾದ ದಿವ್ಯಾ ಆಲೂರ್ ಅವರು ‘ಕನ್ನಿಕೇರಿ ಹುಡ್ಗಿ’ ಹಾಡಿಗೆ ಕಂಠಕುಣಿಸಿ, ಅಭಿನಯಿಸಿ, ರಿಮಿಕ್ಸ್ ಸ್ಪರ್ಶ ಕೊಡಿಸಿ ಆಲ್ಬಂ ರೂಪದಲ್ಲಿ ಹೊರತಂದಿದ್ದಾರೆ. ಪತಿ ಆದರ್ಶ್ ನೆರವಿನಿಂದ ತಂದೆ ತಂದೆ ಜನಪ್ರಿಯಗೊಳಿಸಿದ್ದ `ಕನ್ನಿಕೇರಿ ಹುಡುಗಿ’ ಹಾಡನ್ನು ಕೇಳುಗರ ಮುಂದಿಟ್ಟಿದ್ದಾರೆ. ಪ್ರಶಾಂತ್ ಕುಮಾರ್ ಈ ಹಾಡನ್ನು ನಿರ್ದೇಶಿಸಿದ್ದಾರೆ. ಅರುಣ್ ಆಂಡ್ರ್ಯೂ ಸಂಗೀತ ನೀಡಿದ್ದಾರೆ. ರಾಜಶೇಖರ್ ಛಾಯಾಗ್ರಹಣ ಮಾಡಿದ್ದಾರೆ.

ರ‍್ಯಾಪ್-ಪಾಪ್ ಮಧ್ಯೆ ಫೋಕ್ ಕಳೆದೋಗಬಾರ್ದು, ಕಣ್ಮರೆಯಾಗಬಾರ್ದು ಅಂತ ಕನ್ನಡ ಮಣ್ಣಲ್ಲಿ ಹುಟ್ಟಿ-ಬೆಳೆದು-ಉಸಿರಾಡುತ್ತಿರುವ ಬಹುತೇಕ ಕಲಾವಿದರು ಒಂದಲ್ಲ,ಒಂದು ರೀತಿಯಲ್ಲಿ ಜಾನಪದವನ್ನು ಉಳಿಸಿ ಬೆಳೆಸುವ ಕಾಯಕವನ್ನು ಕಣ್ಣಿಗೊತ್ತಿಕೊಂಡು ಮಾಡುತ್ತಿದ್ದಾರೆ. ಅದೇ ರೀತಿ ಹೆಸರಾಂತ ಜನಪದ ಗಾಯಕ ಆಲೂರ್ ನಾಗಪ್ಪ ಅವರ ಮಗಳು ದಿವ್ಯಾ ಆಲೂರ್ ಕೂಡ ಹುಮ್ಮಸ್ಸಿನಿಂದ-ಉತ್ಸಾಹದಿಂದ-ಹುರುಪಿನಿಂದ ಜಾನಪದವನ್ನು ಶ್ರೀಮಂತಗೊಳಿಸೋದಕ್ಕೆ ಮುಂದಾಗಿದ್ದಾರೆ. ‘ಜನಪದ ಈಸ್ ಎವರಿ ಜೆನ್ ಪದ'ಹೀಗಾಗಿ,ಜನಪದ ಪ್ರತಿ ಜೆನರೇಷನ್‌ಗೂ ತಲುಪಬೇಕು ಎನ್ನುತ್ತಾ ಯುವಪೀಳಿಗೆಯನ್ನು ಫೋಕ್ ಸಂಸ್ಕೃತಿಯತ್ತ ಅಟ್ರ್ಯಾಕ್ಟ್ ಮಾಡೋದಕ್ಕೆ ಹೊರಟಿದ್ದಾರೆ.ಇದರ ಮೊದಲ ಭಾಗವಾಗಿ ಕನ್ನಿಕೇರಿ ಹುಡ್ಗಿ’ ಸಾಂಗ್ ರಿಮಿಕ್ಸ್ ಮಾಡಿ ಈಗಾಗಲೇ ರಿಲೀಸ್ ಮಾಡಿದ್ದಾರೆ.

ಇತ್ತೀಚೆಗಷ್ಟೇ ಈ ಹಾಡಿನ ಬಿಡುಗಡೆ ಕಾರ್ಯಕ್ರಮ ನಡೀತು. ಮಗಳ ಚೊಚ್ಚಲ ಪ್ರಯತ್ನವನ್ನು ಕಣ್ತುಂಬಿಕೊಳ್ಳೋದಕ್ಕೆ ನಿರೂಪಕಿ ದಿವ್ಯಾ ಆಲೂರ್ ಅವರ ತಂದೆ ಆಲೂರು ನಾಗಪ್ಪ ನವ್ರು ಬಂದಿದ್ದರು. ಮಹಿಳಾ ಸಮಾಜದ ಶಾಂತ ರಾಮಸ್ವಾಮಿ, ನಿರ್ಮಾಪಕ ಚಂದನ್‌ಗೌಡ, ಕನ್ನಡವೇ ಸತ್ಯ ರಂಗಣ್ಣ ಸೇರಿದಂತೆ ಕೆಲವು ಗಣ್ಯರು ಕಾರ್ಯಕ್ರಮದ ಅತಿಥಿಗಳಾಗಿ ಆಗಮಿಸಿದ್ದರು. ಇವರುಗಳ ಸಮ್ಮುಖದಲ್ಲಿ ‘ಕನ್ನಿಕೇರಿ ಹುಡ್ಗಿ'ಆಲ್ಬಂ ಸಾಂಗ್‌ನ ಬಿಡುಗಡೆ ಮಾಡಲಾಯ್ತು.ಈ ವೇಳೆ ಮಾತನಾಡಿದ ಆಲೂರ್ ನಾಗಪ್ಪನವರ್ ಆಂಕರಿಂಗ್ ಯಾರ್ ಬೇಕಾದರೂ ಮಾಡ್ಬೋದು ಮಗಳೇ, ನನ್ನಂಥೆ ನೀನು ಕೂಡ ಜಾನಪದ ಲೋಕಕ್ಕೆ ನಿನ್ನದೇ ಆದ ಅಳಿಲು ಸೇವೆ ಮಾಡ್ಬೇಕು ಅಂತ ಹೇಳಿದ್ದೆ’ ಕೊನೆಗೂ ನನ್ನ ಮಗಳು ನನ್ನ ಕನಸನ್ನು ಈಡೇರಿಸಿದ್ದಾಳೆ. ಮೊದಲ ಹೆಜ್ಜೆ ಇಟ್ಟಿದ್ದಾಳೆ ಅವಳಿಗೆ ಒಳ್ಳೆಯದಾಗಲಿ ಎಂದರು.

ತಂದೆಯ ಕನಸನ್ನು ಈಡೇರಿಸ್ಬೇಕು ಎನ್ನುವ ನನ್ನ ಕನಸು ಕೂಡ ‘ಕನ್ನಿಕೇರಿ ಹುಡ್ಗಿ' ಹಾಡಿನ ಮೂಲಕ ನೆರವೇರಿದೆ.ತಂದೆ ಜೀವ ತುಂಬಿದ್ದ ಹಾಡಿಗೆ ಧಕ್ಕೆ ತರದಂತೆ ಸ್ವಲ್ಪೇ ಸ್ವಲ್ಪ ಮಾಸ್ ಮಸಾಲೆ ಮಿಕ್ಸ್ ಮಾಡಿ ಹಾಡನ್ನು ದೃಶ್ಯ ರೂಪಕದಲ್ಲಿ ಹೊರತಂದಿರುವುದಾಗಿ ನಿರೂಪಕಿ-ನಾಯಕಿ ಕಮ್ ಗಾಯಕಿ ದಿವ್ಯಾ ಆಲೂರ್ ಹೇಳಿಕೊಂಡಿದ್ದಾರೆ.ಇವತ್ತಿನ ಯುವಪೀಳಿಗೆಯನ್ನು ಗಮನ ಸೆಳೆಯೋಕೆ ರ‍್ಯಾಪ್ ಟಚ್ ಕೊಟ್ಟಿದ್ದಾರೆ.ಕೈಯಲ್ಲಿ ಗೀಟಾರ್ ಹಿಡಿದು ಕಲರ್ ಕಲರ್ ಕಾಸ್ಟ್ಯೂಮ್ ತೊಟ್ಟು ಮಿಂಚಿದ್ದಾರೆ.ದಿವ್ಯಾ ಪತಿ ಆದರ್ಶ್ ಕೂಡ ಆಲ್ಬಂನಲ್ಲಿ ಧಗಧಗಿಸಿದ್ದಾರೆ.ಮೊದಲ ಆಲ್ಬಂ ಸಾಂಗ್ ಆದರೂ ಕೂಡ ಅದ್ದೂರಿತನಕ್ಕೆ ಕೊರತೆಯಾಗಿಲ್ಲ.ಇವರಿಂದ ಅನೇಕರಿಗೆ ಅವಕಾಶ ಸಿಕ್ಕಿದೆ.ಹೊಸ ಪ್ರತಿಭೆಗಳು ಕೂಡ ಈ ಆಲ್ಬಂನಲ್ಲಿ ಮಿಂಚಿದ್ದಾರೆ.ವಿಶೇಷ ಅಂದರೆ ಬಿಲೀವ್ ಕಂಪೆನಿ ಜೊತೆ ಟಯಪ್ ಆಗಿದ್ದು ತಿಂಗಳಿಗೊಂದು ಜಾನಪದ ಆಲ್ಬಂ ಸಾಂಗ್’ನ ಕರುನಾಡ ಜನರಿಗೆ ಕೊಡಬೇಕು ಎನ್ನುವುದು ಇವರ ಉದ್ದೇಶವಾಗಿದೆ. ಇವರ ಮಹಾದಾಸೆ ಈಡೇರಲಿ. ಜಾನಪದ ಕಲೆ-ಸಂಸ್ಕೃತಿ ಇನ್ನೂ ಶ್ರೀಮಂತಗೊಳ್ಳಲಿ. ದಿವ್ಯಾ-ಆದರ್ಶ್ ಜಾನಪದ ಪ್ರೀತಿಗೆ ಯಶಸ್ಸು ಸಿಗಲಿ

ವಿಶಾಲಾಕ್ಷಿ, ಎಂಟರ್‌ಟೈನ್ಮೆಂಟ್ ಬ್ಯೂರೋ ಸಿನಿಲಹರಿ

Categories
ಸಿನಿ ಸುದ್ದಿ

‘ನನ್ನ ಅಭಿಮಾನಿಗಳಿಗೆ ಊಟ ಹಾಕಿಸ್ಬೇಕು’- ಇದಾಗಿತ್ತು ಅಪ್ಪು ಕನಸು ! ಇಂದು ಅರಮನೆ ಅಂಗಳದಲ್ಲಿ ‘ಪುನೀತ್ ಪುಣ್ಯಸ್ಮರಣೆ’-ಫ್ಯಾನ್ಸ್ ಗೆ `ಅನ್ನ ಸಂತರ್ಪಣೆ’ !

ಏನನ್ನು ಅಪೇಕ್ಷೆ ಪಡದೇ ನನ್ನನ್ನು ನಿಷ್ಕಲ್ಮಶವಾಗಿ ಪ್ರೀತಿಸುವ-ಆರಾಧಿಸುವ-ಪೂಜಿಸುವ-ಗೌರವಿಸುವ-ತಲೆ ಮೇಲೆ ಹೊತ್ತು ಮೆರೆಸುವ ನನ್ನೆಲ್ಲಾ ಅಭಿಮಾನಿ ದೇವರುಗಳನ್ನೆಲ್ಲಾ ಒಂದು ದಿನ ಒಟ್ಟಿಗೆ ಸೇರಿಸ್ಬೇಕು. ನಾನು ಅಪ್ಪು ಅಭಿಮಾನಿ ಅಂತ ಹೆಮ್ಮೆಯಿಂದ ಹೇಳಿಕೊಳ್ಳುವ ಪ್ರತಿಯೊಬ್ಬರಿಗೂ ಹೊಟ್ಟೆತುಂಬಾ ಊಟ ಹಾಕಬೇಕು, ಭಕ್ಷ್ಯಭೋಜನವನ್ನು ಸವಿದು ನನ್ನ ಫ್ಯಾನ್ಸ್ ಸಂತೃಪ್ತಿಗೊಳ್ಳಬೇಕು ನಾನು ಅದನ್ನು ನನ್ನ ಕಣ್ಣಾರೆ ನೋಡ್ಬೇಕು ಎನ್ನುವುದು ದೊಡ್ಮನೆಯ ರಾಜಕುಮಾರ ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ಮಹಾಬಯಕೆ ಆಗಿತ್ತಂತೆ. ಈ ಮಹಾದಾಸೆಯ ಬಗ್ಗೆ ಪತ್ನಿ ಅಶ್ವಿನಿಯವರ ಜೊತೆ ಹಲವು ಭಾರಿ ಹೇಳಿಕೊಂಡಿದ್ದರಂತೆ. ಪಕ್ಕಾ ಪ್ಲ್ಯಾನ್ ಮಾಡಿ ಅಭಿಮಾನಿಗಳಿಗೆ ಭೋಜನ ಕೂಟ ಏರ್ಪಾಟು ಮಾಡೋಣವೆಂದೆಲ್ಲ ಚರ್ಚಿಸಿದ್ದರಂತೆ. ಅಷ್ಟರಲ್ಲಿ ಭಗವಂತ ಅಪ್ಪುನಾ ಕರೆಸಿಕೊಂಡುಬಿಟ್ಟ. ದೊಡ್ಮನೆಯಿಂದ-ಕರುನಾಡಿನಿಂದ ಪುನೀತ್‌ರನ್ನು ಕಿತ್ಕೊಂಡು ಬಹುದೂರ ಕೊಂಡೊಯ್ದುಬಿಟ್ಟ.

ಅರಮನೆ ಮೈದಾನದಲ್ಲಿ `ದೊಡ್ಮನೆ’ ಅನ್ನ ದಾಸೋಹ !

ಅಪ್ಪು ಮರೆಯಾಗಿ ಹನ್ನೆರೆಡು ದಿನಗಳು ಕಳೆದಿವೆ. ಆದರೆ, ಅಂಜನಿಪುತ್ರನನ್ನು ಕಳೆದುಕೊಂಡ ದುಃಖ-ಸಂಕಟ-ನೋವು ಕಿಂಚಿತ್ತೂ ಕಮ್ಮಿಯಾಗುತ್ತಿಲ್ಲ ಕಣ್ಣೀರು ನಿಲ್ಲುತ್ತಿಲ್ಲ. ಈ ಮಧ್ಯೆಯೇ ಹೃದಯ ಭಾರವಾಗಿಸಿಕೊಂಡು ಪುನೀತ್ ಪುಣ್ಯಸ್ಮರಣೆಯ ಕಾರ್ಯವನ್ನು ಮಾಡಬೇಕಾಗಿ ಬಂತು. ಕಂಠೀರವ ಸ್ಟುಡಿಯೋದಲ್ಲಿ ಅಪ್ಪು ಸಮಾಧಿ ಬಳಿ ಹನ್ನೊಂದನೇ ದಿನದ ಕಾರ್ಯ ನೆರವೇರಿಸಲಾಗಿತ್ತು ಅನಂತರ ಪುನೀತ್ ಮನೆಯಲ್ಲಿ ಗಣ್ಯರಿಗೆ ಅನ್ನದಾಸೋಹವನ್ನಿಟ್ಟುಕೊಂಡಿದ್ದರು. ಇಲ್ಲಿ ಫ್ಯಾನ್ಸ್ ಗೆ ಅವಕಾಶವಿಲ್ಲದ ಕಾರಣಕ್ಕೆ ಹನ್ನೆರಡನೇ ದಿನದಂದು ಅಭಿಮಾನಿ ದೇವರುಗಳಿಗೋಸ್ಕರವೇ `ಪುನೀತ್ ಪುಣ್ಯಾರಾಧನೆ’ ಹಮ್ಮಿಕೊಂಡಿದ್ದರು. ಅಪ್ಪು ಮಹಾಬಯಕೆಯನ್ನು ಈಡೇರಿಸುವ ನಿಟ್ಟಿನಲ್ಲಿ ಬೆಂಗಳೂರಿನ ಅರಮನೆ ಮೈದಾನದ ತ್ರಿಪುರ ವಾಸಿನಿಯಲ್ಲಿ ದೊಡ್ಮನೆಯಿಂದ ಅನ್ನಸಂತರ್ಪಣೆ ನಡೀತು.

ದೊಡ್ಮನೆ ದಾಸೋಹ !
ಚಿಕನ್ ಕಬಾಬ್- ಮಟನ್ ಚಾಪ್ಸ್- ಮೊಟ್ಟೆ- ಘೀ ರೈಸ್
ಮಸಾಲಾ ರೈಸ್ ಮಸಾಲಾ ವಡೆ-ಆಲೂ ಕಬಾಬ್-ಅಕ್ಕಿಪಾಯಸ-ಅನ್ನರಸಂ

ಮೇಲೆ ಹೇಳಿದಂತೆ ಅಪ್ಪುಗೆ ತನ್ನೆಲ್ಲಾ ಅಭಿಮಾನಿ ದೇವರುಗಳನ್ನು ಒಮ್ಮೆ ಕರೆಸಿ ಊಟ ಹಾಕಿಸ್ಬೇಕು ಎನ್ನುವ ಕನಸಿತ್ತು. ಆ ಕನಸು ಬದುಕಿದ್ದಾಗ ಈಡೇರಿಲ್ಲ. ಈ ವಿಷ್ಯವನ್ನು ಪುನೀತ್ ಅವರ ಪತ್ನಿ ಅಶ್ವಿನಿಯವರು ಶಿವಣ್ಣ-ರಾಘಣ್ಣ ಜೊತೆ ಹಂಚಿಕೊಂಡಿದ್ದಾರೆ. ತಮ್ಮನ ಬಹುದಿನದ ಕನಸನ್ನು ಈಡೇರಿಸುವ ಸಲುವಾಗಿಯೇ ನಗರದ ಪ್ಯಾಲೇಸ್ ಗ್ರೌಂಡ್‌ನಲ್ಲಿ `ಪುನೀತ್ ಪುಣ್ಯಸ್ಮರಣೆ’ಯ ಜೊತೆಗೆ ಅನ್ನದಾಸೋಹವನ್ನು ಏರ್ಪಡಿಸಿದ್ದರು. ಅಚ್ಚರಿ ಅಂದರೆ ಅಪ್ಪು ಮದುವೆಗೆ ಅಡುಗೆ ಮಾಡಿದ್ದ ಕ್ಯಾಟರಿಂಗ್ ನವರೇ ಇವತ್ತು ಪವರ್‌ಸ್ಟಾರ್ ಶ್ರದ್ಧಾಂಜಲಿ ಕೂಟಕ್ಕೆ ಅಡುಗೆಯನ್ನು ಸಿದ್ದಪಡಿಸಿದ್ದರು. ವೆಜ್ ಹಾಗೂ ನಾನ್ ವೆಜ್ ಊಟದ ವ್ಯವಸ್ಥೆ ಮಾಡಲಾಗಿದ್ದು, ಚಿಕನ್ ಕಬಾಬ್- ಮಟನ್ ಚಾಪ್ಸ್- ಮೊಟ್ಟೆ- ಘೀ ರೈಸ್- ಮಸಾಲಾ ರೈಸ್- ಮಸಾಲಾ ವಡೆ-ಆಲೂ ಕಬಾಬ್-ಅಕ್ಕಿಪಾಯಸ-ಅನ್ನರಸಂ ಸೇರಿದಂತೆ ವಿವಿಧ ರೀತಿಯ ಖಾದ್ಯಗಳನ್ನು ತಯ್ಯಾರಿಸಿದ್ದರು. ಸುಮಾರು ೩೦೦೦೦ಕ್ಕೂ ಹೆಚ್ಚು ಜನರಿಗೆ ಭೋಜನದ ವ್ಯವಸ್ಥೆ ಮಾಡಲಾಗಿತ್ತು.

ದೊಡ್ಮನೆ ಅನ್ನ ತಿನ್ನೋಕೆ ಪುಣ್ಯ ಮಾಡಿರಬೇಕು !
ನಾವು ತಿನ್ನುತ್ತಿರುವುದು ದೊಡ್ಮನೆಯ ಪ್ರಸಾದ ಕಣ್ರೀ !

ದೊಡ್ಮನೆ ರಾಜರತ್ನನ ಸ್ಮರಣಾರ್ಥವಾಗಿ ನಡೆದ ಶ್ರದ್ಧಾಂಜಲಿ ಕಾರ್ಯಕ್ರಮಕ್ಕೆ ರಾಜ್ಯದ ಮೂಲೆಮೂಲೆಗಳಿಂದ ಜನರು ಆಗಮಿಸಿದ್ದರು. ಸಾರ್ವಜನಿಕರನ್ನು ನಿಯಂತ್ರಿಸಲು ಬಿಗಿ ಪೊಲೀಸ್ ಬಂಧೋಬಸ್ತ್ ಮಾಡಲಾಗಿತ್ತು. 1000 ಕ್ಕೂ ಹೆಚ್ಚು ಖಾಕಿ ಪಡೆಯನ್ನು ನಿಯೋಜನೆ ಮಾಡಿದ್ದರು. ದೊಡ್ಮನೆ ಭಕ್ತರು ಹಾಗೂ ಪವರ್‌ಸ್ಟಾರ್ ಅಭಿಮಾನಿ ದೇವರುಗಳು ಸೇರಿದಂತೆ ಯುವಕರು-ಯುವತಿಯರು-ಮಹಿಳೆಯರು-ಮಕ್ಕಳು-ವೃದ್ದರು-ಕಾರ್ಮಿಕರು-ಅಂಧರು-ವಿಶೇಷ ಚೇತನರು ಹೀಗೆ ಸಕಲರೂ ಕೂಡ ಪರಮಾತ್ಮ'ನ ಪುಣ್ಯಾರಾಧನೆಯಲ್ಲಿ ಪಾಲ್ಗೊಂಡರು.ನಟಸಾರ್ವಭೌಮನ ಸ್ಮರಣೆ ಮಾಡುತ್ತಾ ಸರದಿ ಸಾಲಿನಲ್ಲಿ ಶಿಸ್ತಿನಿಂದ ಸಾಗಿಬಂದು ಪಂಕ್ತಿಯಲ್ಲಿ ಕುಳಿತುಕೊಂಡರು.ಮೊದಲ ಪಂಕ್ತಿಯಲ್ಲಿ ಕುಳಿತವರಿಗೆ ಶಿವರಾಜ್‌ಕುಮಾರ್-ರಾಘವೇಂದ್ರ ರಾಜ್‌ಕುಮಾರ್ ಮತ್ತು ಅಶ್ವಿನಿ ಪುನೀತ್‌ರಾಜ್‌ಕುಮಾರ್ ಊಟ ಬಡಿಸಿದರು.ಭೋಜನ ಸವಿದವರು ಹೇಳಿದ್ದು ಒಂದೇ ಮಾತು ದೊಡ್ಮನೆ ಅನ್ನ ತಿನ್ನೋಕೆ ಪುಣ್ಯ ಮಾಡಿರಬೇಕು’. ಅಷ್ಟಕ್ಕೂ ಇದು ಬರೀ ಊಟವಲ್ಲ `ದೊಡ್ಮನೆಯ ಪ್ರಸಾದವೇ’ ಸರೀ ಎಂದರು.

ತಮ್ಮನ ಅಗಲಿಕೆಯ ನಡುವೆಯೂ ಶಿವಣ್ಣ ರಕ್ತದಾನ !

ಅಣ್ಣಾ ಕಾರು ತಗೊಂಡೆ ಅಂತ ಹೇಳ್ತಿದ್ದ
ಸಮಾಜಸೇವೆ ಬಗ್ಗೆ ಯಾವತ್ತೂ ಹೇಳಿಕೊಂಡಿರಲಿಲ್ಲ !

ಪವರ್‌ಸ್ಟಾರ್ ಪುಣ್ಯಸ್ಮರಣೆಗೆ ಬಂದು ಭೋಜನ ಸ್ವೀಕರಿಸಿದವರ ಪೈಕಿ ಸಾಕಷ್ಟು ಮಂದಿ ರಕ್ತದಾನ ಮಾಡಿದರು. ಮೊದಲಿಗೆ ಶಿವಣ್ಣ ಬ್ಲಡ್ ಡೊನೇಟ್ ಮಾಡಿ ಅಭಿಮಾನಿ ದೇವರುಗಳಿಗೆ ಮಾಧರಿಯಾದರು. ತಮ್ಮನ ಅಗಲಿಕೆಯ ನೋವು-ಸಂಕಟದ ನಡುವೆಯೂ ಕೂಡ ಶಿವಣ್ಣ ರಕ್ತದಾನ ಮಾಡಿದ್ದನ್ನು ಕಂಡು ಪುಣ್ಯಸ್ಮರಣೆಗೆ ಬಂದ ಹಲವರು ನಾ ಮುಂದು- ತಾ ಮುಂದು ಅಂತ ರಕ್ತದಾನ ಮಾಡುವಲ್ಲಿ ನಿರತರಾದರು. ಈ ವೇಳೆ ಮಾತನಾಡಿದ ಶಿವಣ್ಣ ಅಭಿಮಾನಿಗಳ ಪ್ರೀತಿಗೆ ಏನು ಹೇಳಬೇಕು ಅಂತಾನೇ ಗೊತ್ತಾಗ್ತಿಲ್ಲ. ಇಂತಹ ಫ್ಯಾನ್ಸ್ ಗಳನ್ನು ಪಡೆದಿರುವುದು ಅಪ್ಪು ಪುಣ್ಯ ಆದರೆ ಅಪ್ಪುನಂಥಹ ತಮ್ಮನನ್ನು ಪಡೆಯುವುದಕ್ಕೆ ನಾನು ಪುಣ್ಯ ಮಾಡಿದ್ದೇನೆ. ಹೊಸ ಸಿನಿಮಾ- ಹೊಸ ಕಾರು- ಊಟ- ತಿಂಡಿ ಬಗ್ಗೆ ಬಿಟ್ಟರೆ ಸಮಾಜಮುಖಿ ಕೆಲಸಗಳ ಬಗ್ಗೆ-ದಾನ-ಧರ್ಮದ ಬಗ್ಗೆ ಅಪ್ಪು ನನ್ನ ಹತ್ತಿರ ಯಾವತ್ತೂ ಹೇಳಿಕೊಳ್ಳದೇ ಹೋಗಿಬಿಟ್ಟ. ನನ್ನ ತಮ್ಮನಾಗಿ ಇಷ್ಟೊಂದು ಸಮಾಜ ಸೇವೆ ಮಾಡ್ತಿದ್ದ ಎನ್ನುವುದನ್ನು ಈಗ ಕೇಳ್ತಿದ್ದರೆ ಹೆಮ್ಮೆಯಾಗುತ್ತೆ ನನಗೆ. ಬಲಗೈನಲ್ಲಿ ಕೊಟ್ಟಿದ್ದು ಎಡಗೈಗೂ ಗೊತ್ತಾಗಬಾರ್ದು ಅಂತ ಅಪ್ಪಾಜಿ ಯಾವಾಗ್ಲೂ ಹೇಳ್ತಿದ್ದರು ಅದನ್ನೇ ಪುನೀತ್ ಪಾಲಿಸಿದ್ದಾನೆ. ದುಃಖಕರ ಸಂಗತಿ ಅಂದರೆ ಅಭಿಮಾನಿಗಳಿಗೆ ಊಟ ಹಾಕ್ಬೇಕು ಎನ್ನುವ ಅಪ್ಪು ಕನಸು ಶ್ರದ್ಧಾಂಜಲಿ ಮೂಲಕ ಈಡೇರುತ್ತಿರುವುದನ್ನು ನೋಡಿ ನನಗೆ ಸಹಿಸಿಕೊಳ್ಳೋದಕ್ಕೆ ಆಗುತ್ತಿಲ್ಲ ಎಂದು ಶಿವಣ್ಣ ನೋವು ತೋಡಿಕೊಂಡರು.

ಸಹೋದರ ಪುನೀತ್ ಸಾವಿನಿಂದ ಮನಸ್ಸು- ಹೃದಯ ಸಂಕಟ ಪಡುತ್ತಿದ್ದರೂ ಕೂಡ ನಟ ರಾಘವೇಂದ್ರ ರಾಜ್‌ಕುಮಾರ್ ಮಾಧ್ಯಮದ ಮುಂದೆ ಹಾಗೂ ಅಭಿಮಾನಿಗಳ ಮುಂದೆ ತೋರಿಸಿಕೊಳ್ಳುತ್ತಿಲ್ಲ. ತಮ್ಮ ಬಿಟ್ಟೋದ ನೆನಪುಗಳ ಜೊತೆ ಪ್ರತಿಕ್ಷಣ ಬದುಕುತ್ತಿರುವ ರಾಘಣ್ಣ, ‘ನಿಮ್ಮಷ್ಟೇ ನೋವು ನಮಗೂ ಆಗಿದೆ,ನಮ್ಮಷ್ಟೇ ದುಃಖ ನೀವು ಅನುಭವಿಸುತ್ತಿದ್ದೀರಿ'ದಯವಿಟ್ಟು ಯಾರು ಕೂಡ ದುಡುಕಬಾರ್ದು.ಆತ್ಮಹತ್ಯೆಯಂತಹ ನಿರ್ಣಯಗಳನ್ನು ಕೈಗೊಂಡು ಕುಟುಂಬವನ್ನು ಅನಾಥರನ್ನಾಗಿ ಮಾಡ್ಬಾರ್ದು ಎಂದು ಮನವಿ ಮಾಡಿಕೊಳ್ಳುತ್ತಲೇ ಬರ್ತಿದ್ದಾರೆ.

ಇವತ್ತು ಕೂಡ ಅಭಿಮಾನಿಗಳಿಗೆ ಅದನ್ನೇ ಕೈಮುಗಿದು ಹೇಳಿದರು ನನ್ನ ತಮ್ಮ ಅರಸು ಒಳ್ಳೊಳ್ಳೆ ಕೆಲಸಗಳನ್ನು ಮಾಡಿದ್ದಾನೆ-ಒಳ್ಳೆಯ ಗುಣ ಮೈಗೂಡಿಸಿಕೊಂಡು ಆದರ್ಶವಾಗಿ ಬದುಕಿ ತೋರಿಸಿದ್ದಾನೆ.ದಯವಿಟ್ಟು ನಾವೆಲ್ಲರೂ ಕೂಡ ಅವನಂತೆ ಬಾಳಿ-ಬದುಕಿ ಸ್ಪೂರ್ತಿಯಾಗೋಣ ಎಂದರು.ಆರೋಗ್ಯದ ಸಮಸ್ಯೆ ಇದ್ದರೂ ಕೂಡಪುನೀತ್ ಪುಣ್ಯಾರಾಧನೆ’ಯಲ್ಲಿ ಪಾಲ್ಗೊಂಡು ಅಭಿಮಾನಿ ದೇವರುಗಳು ಭೋಜನ ಸ್ವೀಕರಿಸುತ್ತಿದ್ದ ಪಂಕ್ತಿಯಲ್ಲಿ ಸಾಗಿ ಎಲ್ಲರನ್ನೂ ಮಾತನಾಡಿಸಿದರು. ಹೊಟ್ಟೆತುಂಬಾ ಊಟ ಮಾಡಿ ಸಂತೃಪ್ತಿಯಿಂದ ಹೊರಡಿ ಎಂದು ಕೇಳಿಕೊಂಡರು. ಅದಕ್ಕೆ ಹೇಳೋದು ದೊಡ್ಡಮನೆಯವರದ್ದು ದೊಡ್ಡಮನಸ್ಸು-ದೊಡ್ಡಗುಣ-ದೊಡ್ಡತನ ಅಂತ.

ವಿಶಾಲಾಕ್ಷಿ, ಎಂಟರ್‌ಟೈನ್ಮೆಂಟ್ ಬ್ಯೂರೋ ಸಿನಿಲಹರಿ

Categories
ಸಿನಿ ಸುದ್ದಿ

ರಾತ್ರಿ ಕಣ್ಣಲ್ಲಿ ಕಣ್ಣಿಟ್ಟು ಮಾತನಾಡಿದರು -ಬೆಳಗ್ಗೆ ಕಣ್ಮುಚ್ಚಿ ಈ ಲೋಕಾನೇ ಬಿಟ್ಟೋದರು; ಅಪ್ಪು ನೆನೆದು ನಟ ರಮೇಶ್ ಅರವಿಂದ್ ಭಾವುಕ !

ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅಕಾಲಿಕ ನಿಧನ ಎಲ್ಲರನ್ನೂ ದಂಗುಬಡಿಸಿದೆ. ಪುನೀತ್ ಸಾವು ದುಸ್ವಪ್ನವಾಗಬಾರದ ದೇವಾ ಅಂತ ಸಕಲರೂ ಮರುಗುತ್ತಿದ್ದಾರೆ. ಅಪ್ಪು ಬಿಟ್ಟೋದ ನೆನಪುಗಳನ್ನು ಕಣ್ಮುಂದೆ ತಂದುಕೊಂಡು ಹೃದಯವನ್ನು ಮತ್ತೆ ಮತ್ತೆ ಭಾರ ಮಾಡಿಕೊಳ್ಳುತ್ತಿದ್ದಾರೆ. ನಟ ರಮೇಶ್ ಅರವಿಂದ್ ಕೂಡ ಅಂಜನಿಪುತ್ರನ ಅಗಲಿಕೆಯಿಂದ ತೀರಾ ನೊಂದಿದ್ದಾರೆ. ರಾತ್ರಿ ಕಣ್ಣಲ್ಲಿ ಕಣ್ಣಿಟ್ಟು ಮಾತನಾಡಿದ ಅಪ್ಪು ಬೆಳಗ್ಗೆ ಎದ್ಮೇಲೆ ಈ ಲೋಕಾನೇ ಬಿಟ್ಟುಹೋಗಿದ್ದನ್ನು ಕಂಡು ಶಾಕ್‌ಗೆ ಒಳಗಾಗಿದ್ದಾರೆ. `ಬೆಳಕು ಹೋದ್ಮೇಲೆ ಕತ್ತಲು ಬರಲೇಬೇಕಲ್ವಾ ಸಾರ್’ ಹೀಗಂತ ರಾತ್ರಿಯಷ್ಟೇ ಮಾತನಾಡಿದ್ದ ಅಪ್ಪು, ಬೆಳಗಾಗಿ ಸೂರ್ಯ ನೆತ್ತಿ ಮೇಲೆ ಬರುವಷ್ಟರಲ್ಲಿ ಈ ಜಗತ್ತೇ ಬಿಟ್ಟುಹೋಗಿಬಿಟ್ಟರು.

ಅಲ್ಲಾ ರೀ, ಅಪ್ಪುದು ಸಾಯೋ ವಯಸ್ಸಾ ನೀವೇ ಹೇಳಿ. ಜಸ್ಟ್ 46 ಅಷ್ಟೇ ರೀ. ಅಷ್ಟೊಂದು ಫಿಟ್ ಆಗಿದ್ದರೂ ಕೂಡ ಹಾರ್ಟ್ಗೆ ಹೊಡೆತ ಕೊಟ್ಟು ಕರ‍್ಕೊಂಡು ಹೊಂಟುಬಿಟ್ಟ. ಅಲ್ಲಾ, ಆ ಭಗವಂತನಿಗೆ ದೊಡ್ಮನೆ ಹುಡುಗನ ಮೇಲೆ ಅಷ್ಟೊಂದು ಅಸೂಹೆ, ಅಷ್ಟೊಂದು ಕೋಪ ಯಾಕಾದರೂ ಇತ್ತೋ ಏನೋ ಗೊತ್ತಿಲ್ಲ. ಎಷ್ಟೋ ಜನರಿಗೆ ಸಾವಿನ ಮುನ್ಸೂಚನೆ ಕೊಡುವ, ಸಾವಿನ ಮನೆಯ ಕದತಟ್ಟಿದ ಎಷ್ಟೋ ಜನರನ್ನ ವಾಪಾಸ್ ರ‍್ಕೊಂಡು ಬರುವ ಭಗವಂತ, ಕೋಟ್ಯಾಂತರ ಮಂದಿ ಪ್ರೀತ್ಸಿ-ಆರಾಧಿಸುವ ಪವರ್‌ಸ್ಟಾರ್‌ಗೆ ಒಂದೇ ಒಂದು ಅವಕಾಶವನ್ನು ಕೊಡಲಿಲ್ಲ. ಕೇವಲ ಒಂದೇ ಒಂದು ಚಾನ್ಸ್ ಕೊಟ್ಟಿದ್ದರೆ ಅಂಜನಿಪುತ್ರ ಉಸಿರು ಚೆಲ್ಲುತ್ತಿರಲಿಲ್ಲ. ದೊಡ್ಮನೆ ಅನಾಥವಾಗುತ್ತಿರಲಿಲ್ಲ. ಕರುನಾಡಿಗೆ ಕತ್ತಲೆ ಆವರಿಸುತ್ತಿರಲಿಲ್ಲ. ಅಭಿಮಾನಿಗಳು ಎದೆ ಹೊಡೆದುಕೊಂಡು ಸಾಯುತ್ತಿರಲಿಲ್ಲ. ಅರಸು ಆಸರೆಯಾಗಿದ್ದ ಲಕ್ಷಾಂತರ ಮಂದಿ ಆಕಾಶ ನೋಡುತ್ತಿರಲಿಲ್ಲ. ಇವತ್ತು ಇಷ್ಟೆಲ್ಲಾ ಆಗ್ತಿದೆ ಅಂದರೆ ಅದಕ್ಕೆ ಕಾರಣ ಭಗವಂತನ ಕಲ್ಲು ಮನಸ್ಸು

ಮೇಲೆ ಹೇಳಿದಂತೆ ಅಪ್ಪುದು ಉಸಿರು ಚೆಲ್ಲುವ ವಯಸ್ಸಲ್ಲ. ಅಪ್ಪುಗೆ ಸಾವು ಸಮೀಪಿಸುತ್ತಿದೆ ಎನ್ನುವ ಅರಿವು ಇರಲಿಲ್ಲ. ಹೀಗಾಗಿಯೇ, ಸ್ನೇಹಕ್ಕೆ-ಪ್ರೀತಿಗೆ ಬೆಲೆ ಕೊಡುವ ಪವರ್‌ಸ್ಟಾರ್ ಸಾಯುವ ಹಿಂದಿನ ದಿನ ರಾತ್ರಿ ಸಂಗೀತ ನಿರ್ದೇಶಕ ಗುರುಕಿರಣ್ ಬರ್ತ್ಡೇ ಪಾರ್ಟಿಗೆ ಹೋಗಿದ್ದರು. ಗುರು ಹುಟ್ಟಿದ ದಿನವನ್ನು ಸಂಭ್ರಮಿಸುತ್ತಾ, ಸ್ನೇಹಿತರ ಜೊತೆ ಕಾಲಕಳೆದರು. ಈ ವೇಳೆ ನಟ ರಮೇಶ್ ಅರವಿಂದ್ ಜೊತೆ ಸುಮಾರು ಎರಡು ಗಂಟೆಗಳ ಟೈಮ್ ಸ್ಪೆಂಡ್ ಮಾಡಿದ್ದಾರೆ. ಯಾವತ್ತೂ ಚರ್ಚೆ ಮಾಡದ ವಿಷ್ಯಗಳನ್ನೆಲ್ಲಾ ಪ್ರಸ್ತಾಪ ಮಾಡುತ್ತಾ, ಬಾಲ್ಯ-ಯೌವ್ವನ-ಬದುಕು-ವೈರಾಗ್ಯ-ಸಾವಿನ ಕುರಿತು ಮಾತನಾಡಿದ್ದಾರೆ. ರಮೇಶ್ ಅರವಿಂದ್ ಬುದ್ದನ ಕಥೆಯೊಂದನ್ನು ಎಕ್ಸ್ ಪ್ಲೇನ್ ಮಾಡಿದ್ಮೇಲೆ, ರಾತ್ರಿ ಸರಿದ ಮೇಲೆ ಹಗಲು ಬರಲೇಬೇಕು',ಬೆಳಕು ಹೋದ್ಮೇಲೆ ಕತ್ತಲು ಬರಲೇಬೇಕಲ್ವಾ ಸಾರ್’ ಎಂದರಂತೆ ಅಪ್ಪು. ಇಂತಹ ಮಾತನಾಡಿದ ಅಪ್ಪು ಬೆಳಗ್ಗೆ ಎಂದಿನಂತೆ ಎದ್ದು ವ್ಯಾಯಾಮ ಮುಗಿಸಿ, ಅಣ್ಣನ `ಭಜರಂಗಿ-೨’ ಚಿತ್ರಕ್ಕೆ ಶುಭಕೋರಿದ ಕೆಲವೇ ಕ್ಷಣಗಳಲ್ಲಿ ಹೃದಯ ಸ್ತಂಬನಗೊಳ್ಳುತ್ತೆ. ಯಾಕೀಗ್ ಆಗ್ತಿದೆ ಎಂದು ಹಾಸ್ಪಿಟಲ್‌ಗೆ ಹೋಗಿ ಅಡ್ಮಿಟ್ ಆಗುವ ಹೊತ್ತಿಗೆ ಜವರಾಯ ದೊಡ್ಮನೆ ಹುಡುಗನ ಪ್ರಾಣವನ್ನೇ ಕಿತ್ಕೊಂಡುಬಿಟ್ಟ.

ಇಷ್ಟೆಲ್ಲಾ ಆಗಿಹೋಗಿರುವುದನ್ನು ಅರಗಿಸಿಕೊಳ್ಳೋದಕ್ಕೆ ಆಗದ ನಟ ರಮೇಶ್ ಅರವಿಂದ್ ಅವರು ತಮ್ಮ `100'ನೇ ಚಿತ್ರದ ಸುದ್ದಿಗೋಷ್ಟಿಯಲ್ಲಿ ಮಾತನಾಡುತ್ತಾ ಒಂದು ಮಾತು ಹೇಳಿದರು.ಇಂಡಸ್ಟ್ರಿಗೆ ನಾಳೆ ಇನ್ನೊಬ್ಬ ಡ್ಯಾನ್ಸರ್ ಬರ್ಬೋದು, ಫೈಟರ್ ಬರ್ಬೋದು,ಸ್ಟಾರ್ ಬರ್ಬೋದು.ಆದರೆ,ಇಷ್ಟು ತುಂಬಿಕೊಂಡಿದ್ದ ಪವರ್‌ಸ್ಟಾರ್ ಥರ ಮತ್ತೊಬ್ಬ ಸ್ಟಾರ್ ಚಿತ್ರರಂಗದಲ್ಲಿ ಹುಟ್ಟಲಿಕ್ಕೆ ಸಾಧ್ಯವೇ ಇಲ್ಲ.ಅಂದ್ಹಾಗೇ,ಅಪ್ಪು ಅದ್ಬುತ ವ್ಯಕ್ತಿಯಾಗಿದ್ದರು.ಮನೆತನಕ್ಕೆ ತಕ್ಕಂತೆ ವಿನಯದಿಂದ-ಸರಳತೆಯಿಂದ ಕೂಡಿದ್ದ ಪವರ್‌ಸ್ಟಾರ್,ಡ್ಯಾನ್ಸ್,ಫೈಟ್,ಫ್ಯಾಮಿಲಿ ಸೆಂಟಿಮೆಂಟ್ ಸೇರಿಕೊಂಡು ಎಲ್ಲರ ಅಪ್ಪುಗೆಯ ಅಪ್ಪು ಆಗಿದ್ದರು.

ಹೀಗಾಗಿ,ಅಪ್ಪು ಬಿಟ್ಟೋದ ಜಾಗವನ್ನು ಯಾರೂ ತುಂಬಲಿಕ್ಕೆ ಸಾಧ್ಯವಿಲ್ಲ. ಪುನೀತ್ ಜೊತೆಗೆ ಸಾವಿರಾರು ಮೆಮೋರಿಸ್‌ಗಳು ಇವೆ.ಕಳೆದ ಇಪ್ಪತ್ತು ವರ್ಷದಿಂದ ಅವರೊಟ್ಟಿಗೆ ಸಂಪರ್ಕದಲ್ಲಿದ್ದೇನೆ.‘ಅಪ್ಪು’ ಸಿನಿಮಾದಿಂದ ಹಿಡಿದು ಇಲ್ಲಿಯವರೆಗೆ ಅವರ ಜರ್ನಿಯನ್ನು ನೋಡಿದ್ದೇನೆ.`ವೀಕೆಂಡ್ ವಿತ್ ರಮೇಶ್’ ಕಾರ್ಯಕ್ರಮದಲ್ಲಿ ಕೆಂಪು ಖುರ್ಚಿ ಮೇಲೆ ಕೂರಿಸಿ ಇಡೀ ಕರ್ನಾಟಕಕ್ಕೆ ಯುವರತ್ನನ ಸಾಧನೆಯನ್ನು ವಿವರಿಸಿದ್ದೇನೆ. ಆದರೆ, ಇವತ್ತು ಒಂದು ಕುರ್ಚಿ ಮೇಲೆ ಅವರ ಫೋಟೋ ಇಟ್ಟು ನಮಿಸುವಂತಹ ಸಂದರ್ಭ ಸೃಷ್ಟಿಸಿಯಾಗಿದೆ. ಈ ಸನ್ನಿವೇಶ ಸೃಷ್ಟಿಸಿದ ಆ ಭಗವಂತನಿಗೆ ಧಿಕ್ಕಾರವಿರಲಿ.

ವಿಶಾಲಾಕ್ಷಿ, ಎಂಟರ್‌ಟೈನ್ಮೆಂಟ್ ಬ್ಯೂರೋ ಸಿನಿಲಹರಿ

Categories
ಸಿನಿ ಸುದ್ದಿ

ಚಿರು ಹುಟ್ಟುಹಬ್ಬಕ್ಕೆ ಸೆಟ್ಟೇರಲಿದೆ ಮೇಘನಾ ಹೊಸ ಸಿನಿಮಾ; ಗೆಳೆಯರ ಬಳಗದ ಹೊಸ ಸಾಹಸ !

ಯುವಸಾಮ್ರಾಟ ಚಿರಂಜೀವಿ ಸರ್ಜಾ ಜನ್ಮಜಯಂತಿಗೆ ಪತ್ನಿ ಮೇಘನರಾಜ್ ನಟನೆಯ ಹೊಸ ಸಿನಿಮಾ ಸೆಟ್ಟೇರ್ತಿದೆ. ಚಿರು‌ ಸ್ನೇಹಿತರು ಹಾಗೂ ಹೊಸಬರ ತಂಡ ಸೇರಿಕೊಂಡು ಒಂದು ಸಾಹಸಕ್ಕೆ ಕೈಹಾಕಿದ್ದಾರೆ. ವಾಯುಪುತ್ರನ ಆಶೀರ್ವಾದದೊಂದಿಗೆ ಶುರುವಾಗುತ್ತಿರುವ ಮೇಘನಾ ಮೂವೀಯ ಡೀಟೈಲ್ಸ್ ಇಲ್ಲಿದೆ.

ಅಕ್ಟೋಬರ್ 17 ಸ್ಯಾಂಡಲ್ ವುಡ್ ನ ಯುವಸಾಮ್ರಾಟ ಚಿರಂಜೀವಿ ಸರ್ಜಾರ ಜನುಮದಿನ.‌ ವಿಧಿಯ ಆಟಕ್ಕೆ ಬಲಿಯಾಗದಿದ್ದರೆ ಅ. 17 ರಂದು 37ನೇ ವಸಂತಕ್ಕೆ ಕಾಲಿಡುತ್ತಿದ್ದರು.ವಾಯುಪುತ್ರನ ಹುಟ್ಟುಹಬ್ಬ ಅದ್ದೂರಿಯಾಗಿ ನಡೀತಿತ್ತು. ಅಭಿಮಾನಿ ದೇವರುಗಳು ಚಿರು ಹುಟ್ಟುಹಬ್ಬವನ್ನು ಗ್ರ್ಯಾಂಡ್ ಆಗಿ ಸೆಲಬ್ರೇಟ್ ಮಾಡ್ತಿದ್ದರು.ರಾಯನ್ ರಾಜ್ ಸರ್ಜಾನಿಂದ ಯುವಸಾಮ್ರಾಟನ ಬರ್ತ್ ಡೇಗೆ ಹೊಸ ಕಳೆಬರುತ್ತಿತ್ತು. ಆದರೆ, ಹಿಂಗಾಗಲಿಕ್ಕೆ ಸಾಧ್ಯವಿಲ್ಲ ಯಾಕಂದ್ರೆ ದೈಹಿಕವಾಗಿ ಚಿರು ನಮ್ಮೊಟ್ಟಿಗೆ ಇಲ್ಲ.

ಚಿರಂಜೀವಿಯ ಅಕಾಲಿಕ ನಿಧನ ಈ ಕ್ಷಣಕ್ಕೂ ಕರುಳು ಹಿಂಡುವ ಕಥನ. ಅವರುಗಳ ಕುಟುಂಬ ಮಾತ್ರವಲ್ಲ ಕನ್ನಡಿಗರೆಲ್ಲರೂ ಕೂಡ ಚಿರು ನೆನೆದು ಕಣ್ಣೀರಾಗುತ್ತಾರೆ. ಹೀಗೆ, ಮರುಗುವ ಹೃದಯಗಳು ನಿಟ್ಟುಸಿರು ಬಿಟ್ಟಿದ್ದು ರಾಯನ್ ರಾಜ್ ಸರ್ಜಾ ಭೂಮಿಗೆ ಬಂದ್ಮೇಲೆ. ಚಿರು ತದ್ರೂಪವನ್ನೆತ್ತಿ ಬಂದಿರುವ ರಾಯನ್, ಸುಂದರ್ ರಾಜ್ ಹಾಗೂ ಸರ್ಜಾ ಕುಟುಂಬಕ್ಕೆ‌ ಬೆಳಕಾಗಿದ್ದಾನೆ. ಎರಡು ಕುಟುಂಬವನ್ನು ದುಃಖ- ಸಂಕಟ-ನೋವಿನಿಂದ ಹೊರತಂದಿದ್ದಾನೆ. ಅಮ್ಮ ಮೇಘನಾ ಮತ್ತೆ ಬಣ್ಣ ಹಚ್ಚುವುದಕ್ಕೆ ಹುರುಪು ತುಂಬಿದ್ದಾನೆ.

ಹೌದು, ನಟಿ ಮೇಘನಾ ಮತ್ತೆ ಬಣ್ಣದ ಲೋಕಕ್ಕೆ ಮರಳುತ್ತಿದ್ದಾರೆ. ಚಿರು ಕಳೆದುಕೊಂಡ ಹೊತ್ತಲ್ಲಿ ಗರ್ಭಿಣಿಯಾಗಿದ್ದ ಮೇಘನಾ, ಅನಂತರ ಮಗನ ಆರೈಕೆಯಲ್ಲಿ ತೊಡಗಿಸಿಕೊಂಡಿದ್ದರು. ಈಗ ಪುತ್ರ ರಾಯನ್ ಒಂದು ವರ್ಷ ಬೆಳೆದು ದೊಡ್ಡವನಾಗಿದ್ದಾನೆ. ಹೀಗಾಗಿ, ಮೇಘನಾ ಮತ್ತೆ ಮುಖಕ್ಕೆ ಬಣ್ಣ ಹಚ್ಚಲು ಸಜ್ಜಾಗಿದ್ದಾರೆ. ಪತಿ ಚಿರಂಜೀವಿ ಸರ್ಜಾರ ಹುಟ್ಟುಹಬ್ಬದಂದೇ ಕ್ಯಾಮರಾ ಎದುರಿಸಲಿದ್ದಾರೆ.

ವಾಯುಪುತ್ರನ ಸ್ನೇಹಿತರು ನಟಿ ಮೇಘನಾ ಕಮ್ ಬ್ಯಾಕ್ ಗೆ ರೆಡ್ ಕಾರ್ಪೆಟ್ ಹಾಕಿದ್ದಾರೆ. ಚಿರು ಪಾಲಿನ ಜೀವದ ಗೆಳೆಯ ಪನ್ನಗಾಭರಣ ಮೇಘನಾ ನಟನೆಯ ಹೊಸ ಚಿತ್ರಕ್ಕೆ ಬಂಡವಾಳ‌ ಹೂಡುತ್ತಿದ್ದಾರೆ.ಯುವಪ್ರತಿಭೆ ವಿಶಾಲ್ ಆಕ್ಷನ್ ಕಟ್ ಹೇಳ್ತಿದ್ದಾರೆ, ವಾಸುಕಿ ವೈಭವ್ ಸಂಗೀತ ನೀಡುತ್ತಿದ್ದಾರೆ.ಪಿ.ಬಿ.ಸ್ಟುಡಿಯೋಸ್ ಲಾಂಛನದಲ್ಲಿ ನೂತನ ಚಿತ್ರ ನಿರ್ಮಾಣವಾಗುತ್ತಿದೆ.

ಅಂದ್ಹಾಗೇ, ಚಿರುಗೆ ಆಕ್ಷನ್ ಕಟ್ ಹೇಳಬೇಕು, ಯುವಸಾಮ್ರಾಟ್ ಹಾಗೂ ಜಂಟಲ್ ಮ್ಯಾನ್ ಪ್ರಜ್ವಲ್ ಕಾಂಬಿನೇಷನ್‌ ನಲ್ಲಿ ಸಿನಿಮಾ ಮಾಡಬೇಕು ಎನ್ನುವುದು ಪನ್ನಗ ಕನಸಾಗಿತ್ತು. ಆದರೆ, ಆ ಮಹಾದಾಸೆ ಈಡೇರುವ ಮುನ್ನವೇ ಚಿರು ಉಸಿರು ಚೆಲ್ಲಿದರು. ಇದೀಗ, ಗೆಳೆಯ ಚಿರು ವೈಫ್ ಕಮ್ ಆಪ್ತ ಸ್ನೇಹಿತೆಯಾಗಿರುವ ಮೇಘನಾರಿಗೆ‌ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ‌ ಮೇಘನಾರಾಜ್ ಪ್ರಮುಖಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ನಾಳೆ ಸಿನಿಮಾ ಸೆಟ್ಟೇರಲಿದ್ದು,ನಿರ್ದೇಶಕ ಟಿ.ಎಸ್.ನಾಗಾಭರಣ, ನಟ ಸುಂದರ್ ರಾಜ್ ಹಾಗೂ ಕಲಾ ನಿರ್ದೇಶಕ ಶಿವಕುಮಾರ್ ಸೇರಿದಂತೆ ಚಿರು ಆಪ್ತಬಳಗ ಮುಹೂರ್ತದಲ್ಲಿ ಪಾಲ್ಗೊಳ್ಳಲಿದೆ

ಎಂಟರ್ ಟೈನ್ಮೆಂಟ್ ಬ್ಯೂರೋ ಸಿನಿಲಹರಿ

Categories
ಸಿನಿ ಸುದ್ದಿ

ಸಹೋದರ ಚಿರು ಚಿತ್ರಕ್ಕೆ ಧ್ರುವ ಉಸಿರು;`ರಾಜಮಾರ್ತಾಂಡ’ ಸಿನಿಮಾ ಡಬ್ಬಿಂಗ್ ಮಾಡಿಕೊಟ್ಟರು ಆಕ್ಷನ್‌ಪ್ರಿನ್ಸ್- ಯುವಸಾಮ್ರಾಟನಿಗೆ ದಚ್ಚು ಬಲ !

ಒಡಹುಟ್ಟಿದ ಅಣ್ಣ ಚಿರಂಜೀವಿ ‘ರಾಜಮಾರ್ತಾಂಡ'ಚಿತ್ರಕ್ಕೆ ಧ್ರುವ ಬೆನ್ನೆಲುಬಾಗಿ ನಿಂತಿರುವ ವಿಚಾರ ನಿಮಗೆಲ್ಲ ಗೊತ್ತೆಯಿದೆ.ಅರ್ಧಕ್ಕೆ ಬಿಟ್ಟೋದ ಅಣ್ಣನ ಸಿನಿಮಾವನ್ನು ಕಂಪ್ಲೀಟ್ ಮಾಡಿಕೊಡುವುದಾಗಿ ಆಕ್ಷನ್‌ಪ್ರಿನ್ಸ್ ಒಪ್ಪಿಕೊಂಡಿದ್ದರು. ಅದರಂತೇ,‘ರಾಜಮಾರ್ತಾಂಡ’ ಸಿನಿಮಾಗೆ ಧ್ರುವ ಉಸಿರಾಗುತ್ತಿದ್ದಾರೆ. ಅಣ್ಣನ ಚಿತ್ರಕ್ಕೆ ತಮ್ಮನ ಉಸಿರಿನ ಕಹಾನಿ ಇಲ್ಲಿದೆ

ಚಿರು-ಧ್ರುವ ಈ ಇಬ್ಬರು ಸಹೋದರರ ನಡುವಿದ್ದ ಅನ್ಯೋನ್ಯತೆ-ಪ್ರೀತಿ-ವಾತ್ಸಲ್ಯ-ಮಮಕಾರ-ಬೆಲೆಯೇ ಕಟ್ಟಲಾಗದ ಬಾಂದವ್ಯವನ್ನು ಆ ಭಗವಂತನಿಗೂ ನೋಡಲಿಕ್ಕೆ ಆಗಲಿಲ್ಲ ಅನ್ಸುತ್ತೆ. ಹೀಗಾಗಿನೇ, ಚಿರಂಜೀವಿಯನ್ನು ಹೇಳದೇ ಕೇಳದೇ ಹೊತೊಯ್ದುಬಿಟ್ಟ. ಧ್ರುವಸರ್ಜಾನ ಹಾಗೂ ರಾಯನ್‌ರಾಜ್ ಸರ್ಜಾನ ಅನಾಥರನ್ನಾಗುವಂತೆ ಮಾಡ್ಬಿಟ್ಟ. ಇವತ್ತಿಗೂ ಈ ಕ್ಷಣಕ್ಕೂ ಆಕ್ಷನ್‌ಪ್ರಿನ್ಸ್ ಧ್ರುವ ಸರ್ಜಾ ಅಣ್ಣನ ನೆನಪಲ್ಲೇ ಕಣ್ಣೀರಾಗುತ್ತಿದ್ದಾರೆ. `ಅಣ್ಣ ನಿನ್ನ ಬಿಟ್ಟು ಬದುಕೋದಕ್ಕೆ ಆಗ್ತಿಲ್ಲ ಕಣೋ’ ಎನ್ನುತ್ತಾ ಒಬ್ಬಂಟಿಯಾಗಿ ಒಳಗೊಳಗೆ ರೋಧಿಸುತ್ತಿದ್ದಾರೆ. ರಕ್ತಹಂಚಿಕೊಂಡು ಹುಟ್ಟಿ ಇದ್ದಷ್ಟು ದಿನ ಅಣ್ಣನೊಟ್ಟಿಗೆ ಆಡಿ ಬೆಳೆದ ದಿನಗಳನ್ನು ಕಣ್ಮುಂದೆ ತಂದುಕೊಂಡು ನೆನಪುಗಳೊಟ್ಟಿಗೆ ಧ್ರುವ ಜೀವಿಸುತ್ತಿದ್ದಾರೆ.

ಇವತ್ತು ಧ್ರುವ ಸರ್ಜಾ ಬರ್ತ್ಡೇ. ರಕ್ತಹಂಚಿಕೊಂಡು ಹುಟ್ಟಿದ ಅಣ್ಣನೇ ನನ್ನೊಟ್ಟಿಗೆ ಇಲ್ಲದಿರುವಾಗ ನನ್ನ ಹುಟ್ಟುಹಬ್ಬವನ್ನು ಸಂಭ್ರಮಿಸಿದರೇನು ಬಂತು ಎನ್ನುತ್ತಾ ತನ್ನ ಜನುಮದಿನದ ಆಚರಣೆಯನ್ನು ನಿಲ್ಲಿಸಿದ್ದಾರೆ. ಅಭಿಮಾನಿ ದೇವರುಗಳಿಗೆ ವಿನಂತಿ ಮಾಡಿಕೊಂಡು ನೀವು ಎಲ್ಲಿರುತ್ತೀರೋ ಅಲ್ಲಿಂದಲೇ ಶುಭಾಶಯ ತಿಳಿಸಿ, ಇಡೀ ಕರ್ನಾಟಕ ಜನತೆಯ ಆಶೀರ್ವಾದ ನನ್ನ ಮೇಲೆ ಇರಲಿ ಎಂದು ಕೋರಿದ್ದಾರೆ. ಸರ್ಜಾ ಕುಟುಂಬದ ಬೆಂಕಿ ಚೆಂಡಿಗೆ ಸೋಷಿಯಲ್ ಮೀಡಿಯಾದಿಂದ ಶುಭಾಷಯದ ಮಹಾಪೂರವೇ ಹರಿದುಬರುತ್ತಿದೆ. ಜನತೆಯ ಆಶೀರ್ವಾದವೇ ನನಗೆ ಶ್ರೀರಕ್ಷೆ ಎನ್ನುವ ಬಹದ್ದೂರ್ ಹುಡುಗ `ಮಾರ್ಟಿನ್’ ಸಿನಿಮಾದ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದಾರೆ.

ಮಾರ್ಟಿನ್' ಚಿತ್ರಕ್ಕಾಗಿ ತಯ್ಯಾರಿ ನಡೆಸುವ ಹೊತ್ತಲ್ಲಿ ಅಣ್ಣನರಾಜಮಾರ್ತಾಂಡ’ ಸಿನಿಮಾಗೂ ಜೀವಕೊಟ್ಟಿದ್ದಾರೆ. ಅರ್ಧಕ್ಕೆ ಬದುಕಿನ ಆಟ ಮುಗಿಸಿ ಅಣ್ಣ ಎದ್ದೋದ ಹೊತ್ತಲ್ಲಿ, ಸಹೋದರ ಸಿನಿಮಾಗಳು ಅರ್ಧಕ್ಕೆ ನಿಲ್ಲಬಾರ್ದು. ನಮ್ಮಣ್ಣನ್ನ ನಂಬಿಕೊಂಡು ದುಡ್ಡುಹಾಕಿರುವ ನಿರ್ಮಾಪಕರಿಗೆ ಲಾಸ್ ಆಗ್ಬಾರ್ದು ಎನ್ನುವ ಕಾರಣಕ್ಕೆ ಚಿರು ಸಿನಿಮಾಗೆ ಜೀವ ತುಂಬುವುದಕ್ಕೆ ಒಪ್ಪಿಕೊಂಡಿದ್ದರು. ಅದರಂತೇ, ಬಹುನಿರೀಕ್ಷೆಯ `ರಾಜಮಾರ್ತಾಂಡ’ ಸಿನಿಮಾದಲ್ಲಿನ ಚಿರು ಪಾತ್ರಕ್ಕೆ ಧ್ರುವ ವಾಯ್ಸ್ ಡಬ್ ಮಾಡಿಕೊಟ್ಟಿದ್ದಾರೆ. ಸದ್ಯಕ್ಕೆ, ೫೦ ಪರ್ಸೆಂಟ್ ಡಬ್ಬಿಂಗ್ ಅಷ್ಟೇ ಮುಗಿದಿದೆ ಉಳಿದ ಪೋರ್ಷನ್ ಮಾತುಕತೆಯನ್ನು ಬಿಡುವು ಮಾಡಿಕೊಂಡು ಮುಗಿಸಿಕೊಡುವುದಾಗಿ ಧ್ರುವ ಮಾತುಕೊಟ್ಟಿದ್ದಾರೆ.

ಚಿರು ‘ರಾಜಮಾರ್ತಾಂಡ'ಕ್ಕೆ ಆಕ್ಷನ್‌ಪ್ರಿನ್ಸ್ ಜೊತೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡ ಜೀವ ತುಂಬುತ್ತಾರೆನ್ನುವ ಸುದ್ದಿ ಹಿಂದಿನಿಂದಲೂ ಇದೆ.ರಾಜಮಾರ್ತಾಂಡ’ ಚಿತ್ರದಲ್ಲಿ ಯುವಸಾಮ್ರಾಟನ ಇಂಟ್ರುಡಕ್ಷನ್ ಸೀನ್‌ಗೆ ದಚ್ಚು ಬಲ ತುಂಬಲಿದ್ದಾರಂತೆ. ಅಷ್ಟಕ್ಕೂ, ಅದ್ಯಾವಾಗ ರಾಜಮಾರ್ತಾಂಡ' ಅಖಾಡಕ್ಕೆ ಗಜ ಎಂಟ್ರಿಕೊಡಬಹುದು ಎನ್ನುವ ಪ್ರಶ್ನೆಗೆ ಉತ್ತರವಿಲ್ಲ.ಆದರೆ, ಕೊಟ್ಟ ಮಾತನ್ನು ಯಾವತ್ತೂ ತಪ್ಪದ ದಾಸ ಸ್ಯಾಂಡಲ್‌ವುಡ್ ಯುವಸಾಮ್ರಾಟನ ಕನಸಿನ ಸಿನಿಮಾಗೆ ಶಕ್ತಿಯಾಗಿ ನಿಲ್ತಾರೆ ಅನ್ನೋದು ಮಾತ್ರ ಸತ್ಯ.ಚಿರಂಜೀವಿಯ ಮಹಾಕನಸಿಗೆ ದರ್ಶನ್-ಧ್ರುವ ಬಲ ತುಂಬಲಿ. ಬಿಗ್‌ಸ್ಕ್ರೀನ್ ಮೇಲೆ ಟೈಸನ್ ಖ್ಯಾತಿಯ ರಾಮ್‌ನಾರಾಯಣ್ ನಿರ್ದೇಶನದ- ಶಿವಕುಮಾರ್ ನಿರ್ಮಾಣದ ರಾಜಮಾರ್ತಾಂಡ’ ಧಗಧಗಿಸಲಿ ಅಲ್ಲವೇ.

ಎಂಟರ್‌ಟೈನ್ಮೆಂಟ್ ಬ್ಯೂರೋ ಸಿನಿಲಹರಿ

Categories
ಸಿನಿ ಸುದ್ದಿ

ಬಹದ್ದೂರ್ ಬರ್ತ್ ಡೇ; ಅದ್ದೂರಿ ಹುಟ್ಟುಹಬ್ಬಕ್ಕೆ ಬ್ರೇಕ್- ರಿಲೀಸ್ ಆಯ್ತು ಮಾರ್ಟಿನ್ ಲುಕ್!

ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾಗೆ ಇಂದು ಬರ್ತ್ ಡೇ ಸಂಭ್ರಮ. 34 ನೇ ವಸಂತಕ್ಕೆ ಕಾಲಿಟ್ಟಿರುವ ಧ್ರುವ ಸರ್ಜಾ ಅದ್ದೂರಿ ಬರ್ತ್ ಡೇಗೆ ಬ್ರೇಕ್ ಹಾಕಿದ್ದಾರೆ. ಅಣ್ಣನ ಅಗಲಿಕೆ ಹಾಗೂ ಕೊರೊನಾ ಕಾರಣದಿಂದ ಕಳೆದ ವರ್ಷ ಬರ್ತ್ ಡೇ ಆಚರಣೆ ಬೇಡ ಎಂದಿದ್ದರು. ಈ ವರ್ಷ ಹುಟ್ಟುಹಬ್ಬ ಆಚರಿಸಿಕೊಳ್ಳೋದಕ್ಕೆ ಮನಸ್ಸಿಲ್ಲ ದಯವಿಟ್ಟು ಅಭಿಮಾನಿಗಳು ಯಾರು ಬೇಸರಗೊಳ್ಳಬೇಡಿ, ತಾವು ಎಲ್ಲಿರುತ್ತೀರೋ ಅಲ್ಲಿಂದಲೇ ವಿಶಸ್ ತಿಳಿಸಿ ಎಂದಿದ್ದರು. ಹೀಗಾಗಿ, ಸೋಷಿಯಲ್ ಮೀಡಿಯಾ ಮೂಲಕ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ.

ಬಹದ್ದೂರ್ ಹುಡುಗನ ಹುಟ್ಟುಹಬ್ಬಕ್ಕೆ ನಿರ್ದೇಶಕ ಎ.ಪಿ ಅರ್ಜುನ್ ಟ್ರೀಟ್ ಕೊಟ್ಟಿದ್ದಾರೆ. ಮಾರ್ಟಿನ್ ಚಿತ್ರದ ಮಗದೊಂದು ಲುಕ್ ನ ಅನಾವರಣ ಮಾಡಿದ್ದಾರೆ. ಕೈಗೆ ತೊಡಿಸಿರುವ ಬೇಡಿಯನ್ನು ಹಲ್ಲಲ್ಲಿ ಕಡಿದು ಬಿಡಿಸಿಕೊಳ್ಳುವ, ಎದುರಾಳಿಯನ್ನು ಕೆಕ್ಕರಿಸಿಕೊಂಡು ನೋಡುತ್ತಿರುವ ದೃಶ್ಯ ಕಂಡು ಫ್ಯಾನ್ಸ್ ಥ್ರಿಲ್ಲಾಗಿದ್ದಾರೆ. ತೋಳಿನ ಮೇಲಿರುವ ಇಂಡಿಯನ್ ಟ್ಯೂಟ್ ಹುಚ್ಚೆಬ್ಬಿಸುತ್ತಿದೆ.ಪ್ಯಾನ್ ಇಂಡಿಯಾದಲ್ಲಿ ತಯ್ಯಾರಾಗುತ್ತಿರುವ ‘ ಮಾರ್ಟಿನ್’ ಚಿತ್ರ ಟೈಟಲ್ ಮಾತ್ರವಲ್ಲ ಪೋಸ್ಟರ್ ನಿಂದಲೇ ಬಜಾರ್ ನಲ್ಲಿ ಬ್ರ್ಯಾಂಡಿಂಗ್ ನಲ್ಲಿದೆ.

ಅದ್ದೂರಿ ಕಾಂಬೋ ಮತ್ತೆ ಒಂದಾಗಿರುವ ಮಾರ್ಟಿನ್ ಮೇಲೆ ನಿರೀಕ್ಷೆಗಳು ನೂರಿವೆ. ನಾಲ್ಕನೇ ಚಿತ್ರಕ್ಕೆ ಗಡಿದಾಟಿದ ಬೆಂಕಿಚೆಂಡು ಮಾರ್ಟಿನ್ ಮೂಲಕ ಪ್ಯಾನ್ ಇಂಡಿಯಾ ತುಂಬೆಲ್ಲಾ ಮೇನಿಯಾ ಸೃಷ್ಟಿಸಿಕೊಳ್ತಾರೆ ಎನ್ನುವ ಸೂಚನೆ ಪೋಸ್ಟರ್ ನಿಂದಲೇ ಸಿಗುತ್ತಿದೆ. ಸಿಂಪಲ್ಲಾಗಿ ಮೂರು ಹೊಡೆದು ಸಿಡಿದೆದ್ದ ಸಿಡಿಗುಂಡು ನಾಲ್ಕನೇ ಚಿತ್ರದಲ್ಲಿ ಪೊಗರು ತೋರಿಸಿದರು. ಈಗ ಮಾರ್ಟಿನ್ ಮೇಲೆ ಬಹಳಷ್ಟು ವರ್ಕ್ ಮಾಡಿ ಅಖಾಡಕ್ಕೆ ಧುಮ್ಕಿದ್ದಾರೆ.

ಮತ್ತೊಂದು ಹಿಟ್ ಕೊಡುವುದಕ್ಕೆ ಧ್ರುವ ಜೊತೆ ನಿರ್ದೇಶಕ ಎ.ಪಿ ಅರ್ಜುನ್ ಕೂಡ ಪಣತೊಟ್ಟಿದ್ದಾರೆ. ಇಡೀ ಟೀಮ್ ಹಾರ್ಡ್ ವರ್ಕ್ ಮಾಡ್ತಿದ್ದು, ವೈಸಾಗ್ ನಲ್ಲಿ ಚಿತ್ರೀಕರಣದಲ್ಲಿ ನಿರತರಾಗಿದೆ. ಉದಯ್ ಕೆ. ಮೆಹ್ತಾ ಬಂಡವಾಳದಲ್ಲಿ ಮಾರ್ಟಿನ್ ರಿಚ್ ಆಗಿ ಮೂಡಿಬರಲಿದೆ.

ಎಂಟರ್ ಟೈನ್ಮೆಂಟ್ ಬ್ಯೂರೋ ಸಿನಿಲಹರಿ

error: Content is protected !!