ಯುವ ಪ್ರತಿಭೆ ಶ್ರೀಧರ್ ಶಾಸ್ತ್ರಿ ನಿರ್ದೇಶನದಲ್ಲಿ ಮೂಡಿ ಬರಲಿರುವ ಹೊಸ ಸಿನಿಮಾ ‘ಟೆನೆಂಟ್’. ಟೈಟಲ್ ಹಾಗೂ ಚಿತ್ರದ ಥೀಮ್ ಪೋಸ್ಟರ್ ಬಿಡುಗಡೆ ಮಾಡಿ ಗಮನ ಸೆಳೆಯುತ್ತಿರುವ ಚಿತ್ರತಂಡ, ಮುಂದಿನ ವಾರದಿಂದ ಚಿತ್ರೀಕರಣ ಆರಂಭಿಸಲಿದೆ.
‘ಅನ್ ಲಾಕ್’ ಕಿರುಚಿತ್ರದ ಮೂಲಕ ಗುರುತಿಸಿಕೊಂಡಿದ್ದ ಶ್ರೀಧರ್ ಶಾಸ್ತ್ರಿ, ಇದೇ ಮೊದಲ ಬಾರಿಗೆ ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದಾರೆ. ಚಿತ್ರಕ್ಕೆ ಕಥೆ, ಚಿತ್ರಕಥೆ ಜವಾಬ್ದಾರಿಯನ್ನು ಶ್ರೀಧರ್ ಶಾಸ್ತ್ರಿಯವರೇ ಹೊತ್ತುಕೊಂಡಿದ್ದಾರೆ.
ಶ್ರೀಧರ್ ಶಾಸ್ತ್ರಿ, ನಿರ್ದೇಶಕ
ಧರ್ಮ ಕೀರ್ತಿರಾಜ್, ತಿಲಕ್ ಶೇಖರ್, ಸೋನು ಗೌಡ, ರಾಕೇಶ್ ಮಯ್ಯ, ಉಗ್ರಂ ಮಂಜು. ಚಿತ್ರದ ತಾರಾಬಳಗಲ್ಲಿದ್ದಾರೆ.
ಲಾಕ್ ಡೌನ್ ಸಂದರ್ಭದಲ್ಲಿ ನಡೆಯುವ ಕ್ರೈಂ ಥ್ರಿಲ್ಲರ್ ಸಿನಿಮಾ ಟೆನೆಂಟ್. ಬಾಡಿಗೆದಾರ ಹಾಗೂ ಮಾಲೀಕನ ನಡೆಯುವ ಕಥೆ ಚಿತ್ರದಲ್ಲಿದೆ.
ಮನೋಹರ್ ಜೋಶಿ ಛಾಯಾಗ್ರಹಣ, ಗಿರೀಶ್ ಒತ್ತೂರು ಸಂಗೀತ ನಿರ್ದೇಶನ ಚಿತ್ರಕ್ಕಿದೆ. ಮಾಸ್ಟರ್ ಚಾಯ್ಸ್ ಕ್ರಿಯೇಷನ್ ಬ್ಯಾನರ್ ನಡಿ ಟಿ.ನಾಗರಾಜ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.
ನೀನಾಸಂ ಮಂಜು ನಿರ್ದೇಶನದ ‘ಕನ್ನೇರಿ’ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ನೈಜ ಘಟನೆ ಆಧಾರಿತ ಮಹಿಳಾ ಪ್ರಧಾನ ಚಿತ್ರವಿದು. ಬಿಡುಗಡೆಗೆ ಸಜ್ಜಾಗಿರುವ ಈ ಚಿತ್ರದ ಫಸ್ಟ್ ಲುಕ್ ಅನ್ನು ನಾಗತಿಹಳ್ಳಿ ಚಂದ್ರಶೇಖರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ.
ಚಿತ್ರದಲ್ಲಿ ಅರ್ಚನಾ ಮಧುಸೂಧನ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದು, ಅನಿತಾ ಭಟ್, ಎಂ.ಕೆ.ಮಠ್, ಅರುಣ್ ಸಾಗರ್, ಕರಿಸುಬ್ಬು, ಸರ್ದಾರ್ ಸತ್ಯ ಒಳಗೊಂಡ ಪ್ರತಿಭಾನ್ವಿತ ಕಲಾವಿದರ ತಂಡ ಚಿತ್ರದಲ್ಲಿದೆ.
ಚಿತ್ರೀಕರಣ ಕಂಪ್ಲೀಟ್ ಮಾಡಿ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿ ಇರುವ ಚಿತ್ರತಂಡ, ಫಸ್ಟ್ ಲುಕ್ ಬಿಡುಗಡೆ ಮಾಡುವ ಮೂಲಕ ಚಿತ್ರದ ಪ್ರಚಾರ ಕಾರ್ಯ ಆರಂಭಿಸಿದೆ.
ಬುಡ್ಡಿ ದೀಪ ಸಿನಿಮಾ ಹೌಸ್ ಬ್ಯಾನರ್ ನಡಿ ಪಿ.ಪಿ ಹೆಬ್ಬಾರ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಗಣೇಶ್ ಹೆಗ್ಡೆ ಛಾಯಾಗ್ರಹಣ , ಮಣಿಕಾಂತ್ ಕದ್ರಿ ಸಂಗೀತ ನಿರ್ದೇಶನ, ಸುಜಿತ್ ನಾಯಕ್ ಸಂಕಲನ ಕನ್ನೇರಿ ಚಿತ್ರಕ್ಕಿದೆ.
“ಇಂದಿರಾ” ಅಂದಾಕ್ಷಣ, ತಕ್ಷಣವೇ ನೆನಪಾಗೋದೇ ಮೇಡಮ್ ಇಂದಿರಾಗಾಂಧಿ! ಹಾಗಂತ, ಅವರ ಜೀವನ ಚರಿತ್ರೆಯ ಸಿನಿಮಾವಂತೂ ಅಲ್ಲ. ಅದರಲ್ಲೂ ಅವರ ಬದುಕಿನ ಅಂಶಗಳೂ ಇಲ್ಲಿ ಸುಳಿದಾಡುವುದಿಲ್ಲ. “ಇಂದಿರಾ” ಅನ್ನೋದು ಕಥಾ ನಾಯಕಿಯ ಪಾತ್ರವಷ್ಟೇ. ಉಳಿದಂತೆ ಇದೊಂದು ಎಮೋಷನಲ್ ಜರ್ನಿ ಸಿನಿಮಾವಂತೆ.
ಕನ್ನಡದ ಗ್ಲಾಮರಸ್ ನಟಿ ಎನಿಸಿಕೊಂಡಿರುವ ಅನಿತಾಭಟ್, ಇತ್ತೀಚೆಗಷ್ಟೇ ಹೊಸಬಗೆಯ ಸಿನಿಮಾ ನಿರ್ಮಾಣ ಮಾಡುವ ಮೂಲಕ ಸುದ್ದಿಯಲ್ಲಿದ್ದರು. ಈಗ ಮತ್ತೊಂದು ಸುದ್ದಿಯಲ್ಲಿದ್ದಾರೆ. ಹೌದು, ಅನಿತಾಭಟ್ “ಅನಿತಾಭಟ್ ಕ್ರಿಯೇಷನ್ಸ್ ಮೂಲಕ ಸಿನಿಮಾ ನಿರ್ಮಾಣ ಮಾಡಿದ ಬಗ್ಗೆ ಈ ಹಿಂದೆ ಹೇಳಲಾಗಿತ್ತು. ಅವರ ನಿರ್ಮಾಣದ ಸಿನಿಮಾದಲ್ಲಿ ಸ್ವತಃ ಅನಿತಾಭಟ್ ವಿಶೇಷ ಪಾತ್ರದಲ್ಲೂ ಕಾಣಿಸಿಕೊಂಡಾಗಿದೆ. ಅ ಚಿತ್ರ ಇನ್ನೇನು ಪ್ರೇಕ್ಷಕರ ಮುಂದೆ ಬರಲು ರೆಡಿಯಾಗಿದೆ. ಅದರ ಬೆನ್ನಲ್ಲೇ, ಅನಿತಾಭಟ್ ಮತ್ತೊಂದು ಸಿನಿಮಾ ಮಾಡಿದ್ದಾರೆ ಅನ್ನೋದೇ ಈ ಹೊತ್ತಿನ ವಿಶೇಷ. ಹೌದು, ನಟಿ ಅನಿತಾಭಟ್ ತಮ್ಮ “ಅನಿತಾ ಭಟ್ ಕ್ರಿಯೇಷನ್ಸ್” ಮೂಲಕ ಡಾಟ್ ಟಾಕೀಸ್ನಡಿ ಹೊಸ ಬಗೆಯ ಸಿನಿಮಾ ಮಾಡಿದ್ದಾರೆ. ಆ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ಅನ್ನು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಬಿಡುಗಡೆ ಮಾಡುವ ಮೂಲಕ ಶುಭ ಹಾರೈಸಿದ್ದಾರೆ. ಅಂದಹಾಗೆ, ಆ ಚಿತ್ರಕ್ಕೆ “ಇಂದಿರಾ” ಅಂತ ನಾಮಕರಣ ಮಾಡಲಾಗಿದೆ.
“ಇಂದಿರಾ” ಅಂದಾಕ್ಷಣ, ತಕ್ಷಣವೇ ನೆನಪಾಗೋದೇ ಮೇಡಮ್ ಇಂದಿರಾಗಾಂಧಿ! ಹಾಗಂತ, ಅವರ ಜೀವನ ಚರಿತ್ರೆಯ ಸಿನಿಮಾವಂತೂ ಅಲ್ಲ. ಅದರಲ್ಲೂ ಅವರ ಬದುಕಿನ ಅಂಶಗಳೂ ಇಲ್ಲಿ ಸುಳಿದಾಡುವುದಿಲ್ಲ. “ಇಂದಿರಾ” ಅನ್ನೋದು ಕಥಾ ನಾಯಕಿಯ ಪಾತ್ರವಷ್ಟೇ. ಉಳಿದಂತೆ ಇದೊಂದು ಎಮೋಷನಲ್ ಜರ್ನಿ ಸಿನಿಮಾವಂತೆ. ಈ ಸಿನಿಮಾ ಕುರಿತಂತೆ ಸ್ವತಃ ಅನಿತಾಭಟ್ ಹೇಳುವುದಿಷ್ಟು. “ನಾನು “ಇಂದಿರಾ” ಎಂಬ ಸಿನಿಮಾದಲ್ಲಿ ಇಂದಿರಾ ಎಂಬ ಪಾತ್ರ ನಿರ್ವಹಿಸುತ್ತಿದ್ದೇನೆ. ಅದೊಂದು ವಿಭಿನ್ನ ಮತ್ತು ವಿಶೇಷವಾಗಿರುವಂತಹ ಪಾತ್ರವದು. ಚಿತ್ರದಲ್ಲಿ ನನಗೊಂದು ಅಪಘಾತ ಆಗುತ್ತದೆ. ಅದರಿಂದಾಗಿ ನಾನು ಅಂಧೆ ಆಗ್ತೀನಿ. ಅಷ್ಟೇ ಅಲ್ಲ, ನನ್ನ ಮೆಮೋರಿ ಕೂಡ ಲಾಸ್ ಆಗುತ್ತೆ. ಅಪಘಾತ ಆಗಿದ್ದು ಯಾಕೆ, ಮಾಡಿದ್ದು ಯಾರು? ಉದ್ದೇಶ ಪೂರ್ವಕವಾಗಿಯೇ ಅಪಥಾಗ ಮಾಡಲಾಯಿತಾ ಎಂಬಿತ್ಯಾದಿ ಪ್ರಶ್ನೆಗಳ ಸುತ್ತವೇ ಕಥೆ ಸಾಗುತ್ತದೆ. ಅದಕ್ಕೆ ಉತ್ತರ ಸಿನಿಮಾ ನೋಡಬೇಕು” ಎನ್ನುತ್ತಾರೆ ಅನಿತಾಭಟ್.
ಇನ್ನು, ಚಿತ್ರದಲ್ಲಿ ವಿಶೇಷ ಪಾತ್ರಳೂ ಇವೆ. ನೀತುಶೆಟ್ಟಿ, ಷಫಿ, ಚಕ್ರವರ್ತಿ ಚಂದ್ರಚೂಡ್ ಇವರು ಪ್ರಮುಖ ಪಾತ್ರಗಳಲ್ಲಿ ಗಮನಸೆಳೆಯುತ್ತಾರೆ. ನಾನು ಅಂಧೆಯಾಗಿ ಮೆಮೋರಿ ಲಾಸ್ ಮಾಡಿಕೊಂಡ ಬಳಿಕ ನೋಡಿಕೊಳ್ಳುವ ಮೂರು ಪಾತ್ರಗಳಿವು. ನಾನು ಚೆನ್ನಾಗಿದ್ದಾಗ ಅವರೆಲ್ಲಾ ಹೇಗೆ ಕನೆಕ್ಟ್ ಆದರು ಅನ್ನೋದು ನಂತರ ರಿವೀಲ್ ಆಗುತ್ತಾ ಹೋಗುತ್ತೆ. ಇನ್ನು, ಅಪಘಾತವಾಗಿದ್ದರೂ, ನನ್ನ ಗಂಡ ಪತ್ತೆ ಆಗಲ್ಲ. ಅವನು ಎಲ್ಲಿ ಹೋದ ಅನ್ನೋದು ಪ್ರಶ್ನೆ ಗಾಢವಾಗಿ ಕಾಡುತ್ತದೆ. ಇಲ್ಲಿ ರೆಹಮಾನ್ ಹಾಸನ್ ಗಂಡನ ಪಾತ್ರ ಮಾಡಿದ್ದಾರೆ. ಅವರ ಪಾತ್ರವೂ ಇಲ್ಲಿ ಪ್ರಮುಖವಾಗಿದೆ.
ಅಂದಹಾಗೆ, ಇದೊಂದು ಸೈಕಲಾಜಿಕಲ್ ಥ್ರಿಲ್ಲರ್ ಚಿತ್ರ. ಭ್ರೈನ್ ಮನುಷ್ಯನ ಜೀವನವನ್ನು ಹೇಗೆ ಕಂಟ್ರೋಲ್ ಮಾಡುತ್ತೆ ಅನ್ನುವುದರ ಸುತ್ತ ನಡೆಯೋ ಕಥೆ ಅದು. ಭ್ರಮೆಯಿಂದ ಆಚೆ ಬರೋದು ಹೇಗೆ ಎಂಬಿತ್ಯಾದಿ ಕುರಿತಂತೆ ಮತ್ತು ಮೆಂಟಲಿ ಹೆಲ್ತ್ ಎಷ್ಟು ಮುಖ್ಯ ಎಂಬುದರ ಬಗ್ಗೆ ಹೇಳಲಾಗಿದೆ” ಎನ್ನುತ್ತಾರೆ ಅನಿತಾಭಟ್. ಇನ್ನು, ಈ ಚಿತ್ರವನ್ನು ರಿಷಿಕೇಶ್ ನಿರ್ದೇಶನ ಮಾಡಿದ್ದಾರೆ. ಅವರೇ ಕ್ಯಾಮೆರಾ ಹಿಡಿದಿದ್ದು, ಸಂಕಲನದ ಜೊತೆಗೆ ಪೋಸ್ಟರ್ ಡಿಜೈನ್ ಮತ್ತು ಡಿಐ ಕೂಡ ಅವರೇ ಮಾಡಿದ್ದಾರೆ. ಇದು ಕನ್ನಡ ಮತ್ತು ತೆಲುಗಿನಲ್ಲಿ ತಯಾರಾಗಿದೆ.
ಪರಭಾಷಾ ನಟರುಗಳು ಗಂಧದಗುಡಿಗೆ ಲಗ್ಗೆ ಇಡೋದು ಹೊಸದೇನಲ್ಲ. ದಿಗ್ಗಜರ ಕಾಲದಿಂದಲೂ ಹೊರ ರಾಜ್ಯದ ಕಲಾವಿದರು ಕನ್ನಡ ಚಿತ್ರರಂಗಕ್ಕೆ ಬಲಗಾಲಿಟ್ಟು ಬಂದು ಹೋಗಿದ್ದಾರೆ. ಸಾಹಸಸಿಂಹ ವಿಷ್ಣುವರ್ಧನ್ ಅವರೊಟ್ಟಿಗೆ ಹದಿನೇಳು ವರ್ಷಗಳ ಹಿಂದೆ ಸ್ಕ್ರೀನ್ ಶೇರ್ ಮಾಡಿದ್ದ ಬಿಟೌನ್ ನವಾಬ್. ಇದೀಗ ಮತ್ತೊಮ್ಮೆ ಸ್ಯಾಂಡಲ್ವುಡ್ಗೆ ಎಂಟ್ರಿಕೊಟ್ಟಿದ್ದಾರೆ. ರಿಯಲ್ಸ್ಟಾರ್ ಉಪೇಂದ್ರ ಅಭಿನಯದ ಹೈವೋಲ್ಟೇಜ್ `ಕಬ್ಜ’ ಅಖಾಡಕ್ಕೆ ಧುಮ್ಕಿದ್ದಾರೆ
ಬಿಟೌನ್ ನವಾಬ್ ಲುಕ್- ಗೆಟಪ್ ಸಖತ್ ಟೆರಿಫಿಕ್ ಆಗಿದೆ. 6.5 ಹೈಟ್ ನಲ್ಲಿ ಘಟೋದ್ಗಜನಂತೆ ಕಾಣುವ ನವಾಬ್, ಕಬ್ಜದಲ್ಲಿ ಬಘೀರನಾಗಿ ಘರ್ಜಿಸಲಿದ್ದಾರೆ. ಪವರ್ ಫುಲ್ ಡಾನ್ ಆಗಿ ಇಡೀ ಸೌತ್ ಇಂಡಿಯಾನ ಕಂಟ್ರೋಲ್ ಮಾಡ್ತಾರಂತೆ. ನವಾಬ್ ಔಟ್ ಫಿಟ್ ಅಂಡ್ ಕ್ರೂಷಿಯಲ್ ಟ್ಯಾಟೂ ನೋಡಿದರೆ ಗೊತ್ತಾಗುತ್ತೆ ಬಘೀರ ಎಷ್ಟು ಭಯಂಕರ ಅಂತ. ಇಡೀ ಸೌತ್ ಸಿನಿಮಾ ಇಂಡಸ್ಟ್ರಿಯನ್ನಾಳಿರುವ ಇವರು ಹಿಂದಿ ಚಿತ್ರರಂಗಕ್ಕಿಂತ ಕನ್ನಡ ಚಿತ್ರರಂಗವೇ ಬೆಸ್ಟ್ ಎಂದು ಕೊಂಡಾಡಿದ್ದಾರೆ
ಕತ್ರಿಗುಪ್ಪೆಯಿಂದ ಕಿಕ್ಸ್ಟಾರ್ಟ್ ಪಡೆದುಕೊಂಡು ಸೆಟ್ಟೇರಿದ ಕನ್ನಡದ ಕಬ್ಜ' ಚಿತ್ರ, ಕೋಟಿ ಮೇಕಿಂಗ್- ಕಾಸ್ಟ್ಲೀ ಸ್ಟಾರ್ ಕಾಸ್ಟ್ ನಿಂದಲೇ ಕತ್ರಿಗುಪ್ಪೆ ಗಡಿದಾಟಿಕೊಂಡು ಇಡೀ ವರ್ಲ್ಡ್ ವೈಡ್ ಖ್ಯಾತಿ ಹೊಂದುತ್ತಿದೆ.ಕಬ್ಜ’ ಹವಾ ಅಟ್ ಪ್ರಸೆಂಟ್ ಹೆಂಗಿದೆ ಅಂದರೆ ಆಲ್ ಓವರ್ ಇಂಡ್ಯಾ ಮತ್ತೊಮ್ಮೆ ಕನ್ನಡ ಚಿತ್ರರಂಗದತ್ತ ತಿರುಗಿ ನೋಡ್ತಿದೆ. ಹೀಗೆ, ಪ್ಯಾನ್ ಇಂಡಿಯಾ ತುಂಬೆಲ್ಲಾ ಸದ್ದು ಮಾಡುತ್ತಿರುವ ಕಬ್ಜ ಚಿತ್ರತಂಡಕ್ಕೆ ಬಿಟೌನ್ ನವಾಬ್ ಸೇರ್ಪಡೆಗೊಂಡಿದ್ದಾರೆ.
ನವಾಬ್ … ಬಿಟೌನ್ ನವಾಬ್… ಪಂಚಭಾಷಾ ನಟ, ಅಭಿನಯದಲ್ಲಿ ನಟಭಯಂಕರ. ಹಿಂದಿ- ತೆಲುಗು- ತಮಿಳು- ಮಲೆಯಾಂ ಹೀಗೆ ಸೌತ್ ಸಿನಿಮಾ ಇಂಡಸ್ಟ್ರಿ ಸುತ್ತಿ ಬಂದಿರುವ ನವಾಬ್ ಷಾ, ಸಾಹಸಸಿಂಹ ವಿಷ್ಣುವರ್ಧನ್ ಅಭಿನಯದ ಜೇಷ್ಠ ಚಿತ್ರದ ಮೂಲಕ ಕನ್ನಡಕ್ಕೆ ಎಂಟ್ರಿಕೊಟ್ಟಿದ್ದರು. ಇದೀಗ ಹದಿನೇಳು ವರ್ಷಗಳು ಕಳೆದ ಮೇಲೆ ನವಾಬ್ ಮತ್ತೆ ಸ್ಯಾಂಡಲ್ ವುಡ್ ಗೆ ಬಂದಿದ್ದಾರೆ. ಕೋಟಿಗೊಬ್ಬ 3 ಚಿತ್ರದಲ್ಲಿ ಕಿಚ್ಚನ ಜೊತೆ ಕಾದಾಡಿದ ಬೆನ್ನಲ್ಲೇ ರಿಯಲ್ ಸ್ಟಾರ್ ಉಪ್ಪಿಯ ಕಬ್ಜದಲ್ಲಿ ಕಮಾಲ್ ಮಾಡೋದಕ್ಕೆ ಬೆಂಗಳೂರಿಗೆ ಬಂದಿಳಿದಿದ್ದಾರೆ.
ಸಿಲಿಕಾನ್ ಸಿಟಿಯಲ್ಲಿರುವ ಮಿನರ್ವ ಮಿಲ್ ನಲ್ಲಿ ಕಬ್ಜ ಚಿತ್ರದ ಶೂಟಿಂಗ್ ನಡೀತಿದೆ. ಕೋಟಿ ಕೋಟಿ ಖರ್ಚು ಮಾಡಿ ವೆರೈಟಿ ವೆರೈಟಿ ಸೆಟ್ ಹಾಕಿಸಿದ್ದಾರೆ. ಕೆಜಿಎಫ್ ಕಲಾ ನಿರ್ದೇಶಕ ಶಿವಕುಮಾರ್ ‘ ಕಬ್ಜ’ ಚಿತ್ರಕ್ಕೆ ಸೆಟ್ ನಿರ್ಮಿಸಿ ಕೊಟ್ಟಿದ್ದಾರೆ. ಅದ್ದೂರಿ ಸೆಟ್ ನಲ್ಲಿ ಈಗಾಗಲೇ ನಾಲ್ಕು ಹಂತದ ಚಿತ್ರೀಕರಣ ಮುಗಿಸಿರುವ ಟೀಮ್, ಈಗ ಐದನೇ ಹಂತದ ಟಾಕಿಪೋರ್ಶನ್ ಚಿತ್ರೀಕರಣದಲ್ಲಿ ನಿರತವಾಗಿದೆ. ಸದ್ಯ, ಉಪ್ಪಿ ಹಾಗೂ ನವಾಬ್ ಕಾಂಬಿನೇಷನ್ ಸೀಕ್ವೆನ್ಸ್ ಶೂಟ್ ಮಾಡುವುದರಲ್ಲಿ ಚಿತ್ರತಂಡ ಬ್ಯುಸಿಯಾಗಿದೆ.
ಬಿಟೌನ್ ನವಾಬ್ ಲುಕ್- ಗೆಟಪ್ ಸಖತ್ ಟೆರಿಫಿಕ್ ಆಗಿದೆ. 6.5 ಹೈಟ್ ನಲ್ಲಿ ಘಟೋದ್ಗಜನಂತೆ ಕಾಣುವ ನವಾಬ್, ಕಬ್ಜಾದಲ್ಲಿ ಬಘೀರನಾಗಿ ಘರ್ಜಿಸಲಿದ್ದಾರೆ. ಪವರ್ ಫುಲ್ ಡಾನ್ ಆಗಿ ಇಡೀ ಸೌತ್ ಇಂಡಿಯಾನ ಕಂಟ್ರೋಲ್ ಮಾಡ್ತಾರಂತೆ. ನವಾಬ್ ಔಟ್ ಫಿಟ್ ಅಂಡ್ ಕ್ರೂಷಿಯಲ್ ಟ್ಯಾಟೂ ನೋಡಿದರೆ ಗೊತ್ತಾಗುತ್ತೆ ಬಘೀರ ಎಷ್ಟು ಭಯಂಕರ ಅಂತ. ಆಗಲೇ ಹೇಳಿದ ಹಾಗೇ ನವಾಬ್ ಕನ್ನಡಕ್ಕೆ ಹೊಸಬರಲ್ಲ. ಇಡೀ ಸೌತ್ ಸಿನಿಮಾ ಇಂಡಸ್ಟ್ರಿಯನ್ನಾಳಿರುವ ಇವರು ಹಿಂದಿ ಚಿತ್ರರಂಗಕ್ಕಿಂತ ಕನ್ನಡ ಚಿತ್ರರಂಗವೇ ಬೆಸ್ಟ್ ಎಂದು ಕೊಂಡಾಡಿದರು. ಸ್ಯಾಂಡಲ್ ವುಡ್ ಅಂಗಳದಲ್ಲಿ ಕೆಲಸ ಮಾಡಲಿಕ್ಕೆ ಕಂಫರ್ಟಬಲ್ ಫೀಲ್ ಇರುತ್ತೆ, ಇಲ್ಲಿನ ಸಿನಿಮಾ ಮಂದಿಯೂ ಕಂಫರ್ಟ್ ಝೋನ್ ಕ್ರಿಯೇಟ್ ಮಾಡಿಕೊಡ್ತಾರೆ. ಜೊತೆಗೆ ಒಳ್ಳೊಳ್ಳೆ ಕ್ಯಾರೆಕ್ಟರ್ ಗಳು ಸಿಗುತ್ತಿವೆ ನನಗೆ ಎಂದು ನವಾಬ್ ಖುಷಿಯಿಂದ ಹೇಳಿಕೊಂಡರು.
ಲೆಜೆಂಡರಿ ಡೈರೆಕ್ಟರ್ ಅಂಡ್ ಆಕ್ಟರ್ ಉಪೇಂದ್ರರೊಟ್ಟಿಗೆ ಆಕ್ಟ್ ಮಾಡೋದಕ್ಕೆ ಇದೇ ಮೊದಲ ಬಾರಿಗೆ ಅವಕಾಶ ಸಿಕ್ಕಿದೆ. ಚಂದ್ರು ಸಾರ್ ಒಬ್ಬ ಗ್ರೇಟ್ ಡೈರೆಕ್ಟರ್, ಇಲ್ಲಿವರೆಗೂ ಬೆಸ್ಟ್ ಫಿಲ್ಮ್ಸ್ ಗಳನ್ನು ಕೊಟ್ಟಿದ್ದಾರೆ. ನನಗೆ ಕಬ್ಜದಲ್ಲಿ ಡಾನ್ ಪಾತ್ರಕ್ಕೆ ರೆಡ್ ಕಾರ್ಪೆಟ್ ಹಾಕಿದ್ದು ನನಗೆ ಸಂತೋಷವಾಗಿದೆ ಅಂತಾರೇ ನವಾಬ್. ನವಾಬ್ ರಂತೇ ಭಯಾನಕ ಖಳನಾಯಕರು ಕಬ್ಜ ಕೋಟೆಯಲ್ಲಿದ್ದಾರೆ. ಜಗಪತಿ ಬಾಬು, ರಾಹುಲ್ ದೇವ್, ಕಾಮರಾಜನ್, ಜಾನ್ ಕೊಕ್ಕಿನ್, ಅನುಪ್ ರೇವಣ್ಣ ಸೇರಿದಂತೆ ಅದ್ದೂರಿ ತಾರಾಬಳಗ ಚಿತ್ರದಲ್ಲಿದೆ.
ಸದ್ಯ, ಬೆಂಗಳೂರಿನಲ್ಲಿ ಕಬ್ಜ ಚಿತ್ರೀಕರಣ ಭರದಿಂದ ಸಾಗ್ತಿದ್ದು, ಹೈದ್ರಾಬಾದ್-ಮಂಗಳೂರು ಸೇರಿದಂತೆ ಫಾರಿನ್ ನಲ್ಲೂ ಶೂಟಿಂಗ್ ನಡೆಯಲಿದೆಯಂತೆ. 45 ದಿನಗಳ ಕಾಲ ಮಿನರ್ವ ಮಿಲ್ ನಲ್ಲಿ ಧಗಧಗಿಸಲಿರುವ ಕಬ್ಜ ಟೀಮ್ ಆ ಮೇಲೆ ಹೈದ್ರಾಬಾದ್ ಗೆ ಶಿಫ್ಟ್ ಆಗಲಿದ್ದಾರೆ.
ನಿರ್ದೇಶಕ ವಿಜಯ ಪ್ರಸಾದ್ ಮತ್ತು ಲೂಸ್ ಮಾದ ಯೋಗಿ ಇಬ್ಬರ ಕಾಂಬಿನೇಷನ್ನಲ್ಲಿ “ಸಿದ್ಲಿಂಗು” ಚಿತ್ರ ಸೂಪರ್ ಹಿಟ್ ಆಗಿತ್ತು. ಇದು ಎಲ್ಲರಿಗೂ ಗೊತ್ತಿರೋ ವಿಷಯ. ಈಗ “ಸಿದ್ಲಿಂಗು ೨” ಬರಲಿದೆ ಎಂಬ ಸುದ್ದಿ ಹೊಸದೇನಲ್ಲ. ಅದಕ್ಕೂ ಮೊದಲು ಮತ್ತೊಂದು ಹೊಸ ಸುದ್ದಿ ಇದೆ. ಅದೇ ಈ ಹೊತ್ತಿನ ವಿಶೇಷ.
ಹೌದು, ನಿರ್ದೇಶಕ ವಿಜಯ ಪ್ರಸಾದ್ ಈಗ ಎರಡು ಸಿನಿಮಾಗಳನ್ನು ನಿರ್ದೇಶಿಸಿ, ಅವುಗಳನ್ನು ಪ್ರೇಕ್ಷಕರ ಮುಂದೆ ತರಲು ರೆಡಿಯಾಗಿದ್ದಾರೆ. ಜಗ್ಗೇಶ್ ಅಭಿನಯದ “ತೋತಾಪುರಿ ೧” ಮತ್ತು ಸತೀಶ್ ನೀನಾಸಂ ಅವರ “ಪೆಟ್ರೋಮ್ಯಾಕ್ಸ್” ಚಿತ್ರಗಳನ್ನು ತೆರೆಗೆ ತರುವ ಯೋಜನೆಯಲ್ಲಿದ್ದಾರೆ. ಈ ಎರಡು ಸಿನಿಮಾಗಳ ನಂತರ ನಿರ್ದೇಶಕ ವಿಜಯಪ್ರಸಾದ್ ಮತ್ತೊಂದು ಸಿನಿಮಾ ಕೈಗೆತ್ತಿಕೊಳ್ಳಲಿದ್ದಾರೆ. ಅದೇ “ಪರಿಮಳ ಲಾಡ್ಜ್”.
ಹೌದು, ಕಳೆದ ಎರಡು ವರ್ಷಗಳ ಹಿಂದೆ ನಿರ್ದೇಶಕ ವಿಜಯಪ್ರಸಾದ್ ಅವರು “ಪರಿಮಳ ಲಾಡ್ಜ್” ಸಿನಿಮಾ ಅನೌನ್ಸ್ ಮಾಡಿದ್ದರು. ಈ ಚಿತ್ರಕ್ಕೆ ಪ್ರಸನ್ನ ನಿರ್ಮಾಪಕರಾಗಿದ್ದರು. ಈ ಚಿತ್ರದ ಆರಂಭಕ್ಕೂ ಮನ್ನ ಟೀಸರ್ ಕೂಡ ಬಂದಿತ್ತು. ಸತೀಶ್ ನೀನಾಸಂ, ಲೂಸ್ ಮಾದ ಯೋಗೇಶ್, ಸುಮನ್ ರಂಗನಾಥ್, ದತ್ತಣ್ಣ, ಬುಲೆಟ್ ಪ್ರಕಾಶ್ ಆ ಟೀಸರ್ನಲ್ಲಿ ಕಾಣಿಸಿಕೊಂಡಿದ್ದರು. ಈಗ ಹೊಸ ಸುದ್ದಿ ಅಂದರೆ, ಈ ಚಿತ್ರದ ಪರಿಮಳ ಮತ್ತೆ ಸೂಸುತ್ತಿದೆ.
ಹೌದು, ಸತೀಶ್ ನೀನಾಸಂ ಈಗ “ಪರಿಮಳ ಲಾಡ್ಜ್” ಸಿನಿಮಾದಿಂದ ದೂರ ಉಳಿದಿದ್ದಾರೆ ಎನ್ನಲಾಗಿದೆ. ಈ ಕುರಿತು ಸ್ವತಃ ವಿಜಯಪ್ರಸಾದ್ ಅವರೇ ಹೇಳಿಕೊಂಡ ಸುದ್ದಿ ಎಲ್ಲೆಡೆ ಹರಡಿದೆ. ಅವರ “ಪರಿಮಳ ಲಾಡ್ಜ್”ಗೆ ಲೂಸ್ ಮಾದ ಯೋಗೇಶ್ ನಾಯಕರಾಗಿ ಮುಂದುವರೆಯಲಿದ್ದಾರೆ. ಉಳಿದಂತೆ ನಟಿ ಸುಮನ್ ರಂಗನಾಥ್ ಇರಲಿದ್ದಾರೆ. ಆದರೆ, ನಾಯಕಿ ಯಾರೆಂಬುದು ಅಂತಿಮವಾಗಬೇಕಿದೆ.
ಹಿರಿಯ ನಟ ಸತ್ಯಜಿತ್ ಅವರ ಆರೋಗ್ಯ ಹದಗೆಟ್ಟ ಹಿನ್ನೆಲೆಯಲ್ಲಿ ಬೌರಿಂಗ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ತೀವ್ರ ನಿಗಾಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸತ್ಯಜಿತ್, ಮೂರುವರೆ ದಶಕಗಳಿಂದಲೂ ಚಿತ್ರರಂಗದಲ್ಲಿರುವ ಸತ್ಯಜಿತ್, ಈವರೆಗೆ ಸಾಕಷ್ಟು ಹಿಟ್ ಚಿತ್ರಗಳಲ್ಲಿ ನಟಿಸಿದ್ದಾರೆ. ಪೋಷಕ ಪಾತ್ರಗಳು ಸೇರಿದಂತೆ ಖಳನಟರಾಗಿಯೂ ನಟಿಸಿದ್ದಾರೆ.
ಹಲವು ವರ್ಷಗಳಿಂದ ಅವರ ಆರೋಗ್ಯ ಏರುಪೇರಾಗಿತ್ತು. ಅಲ್ಲದೆ, ಅವರ ಕಾಲಿಗೆ ಗ್ಯಾಂಗ್ರಿನ್ ಆಗಿದ್ದ ಕಾರಣ ಒಂದು ಕಾಲನ್ನು ತೆಗೆಯಲಾಗಿತ್ತು. ಆ ನಂತರವೂ ಸತ್ಯಜಿತ್ ಸುಧಾರಿಸಿಕೊಂಡು, ಸಿನಿಮಾ ಮೇಲಿನ ಪ್ರೀತಿಗೆ ಸಿನಿಮಾಗಳಲ್ಲಿ ನಟಿಸುತ್ತಲೇ ಬಂದಿದ್ದರು. ಸದ್ಯ ಸತ್ಯಜಿತ್ ಅವರ ಆರೋಗ್ಯ ಗಂಭೀರ ಸ್ಥಿತಿಯಲ್ಲಿದೆ. ಅವರ ಆರೋಗ್ಯವೂ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಬಹು ಬೇಡಿಕೆಯ ನಟರಾಗಿದ್ದ ಸತ್ಯಜಿತ್ ಅವರಿಗೆ ಅನಾರೋಗ್ಯ ಕಾಡಿದ್ದರಿಂದ ಕ್ರಮೇಣವಾಗಿ ಸಿನಿಮಾ ಅವಕಾಶಗಳು ಕಡಿಮೆಯಾಗಿ ಅವರು ಆರ್ಥಿಕ ಸಂಕಷ್ಟ ಎದುರಿಸಿದ್ದರು. ಚಿತ್ರರಂಗ ಕೂಡ ಅವರ ಸಮಸ್ಯೆಗೆ ಸ್ಪಂದಿಸಿತ್ತು. ಅನಾರೋಗ್ಯ ಒಂದು ಕಡೆಯಾಗಿದ್ದರೆ, ಅವರ ಕುಟುಂಬಂದ ಸಮಸ್ಯೆಯಿಂದಲೂ ಸತ್ಯಜಿತ್ ಬಳಲಿದ್ದರು. ಸ್ವತಃ ಸತ್ಯಜಿತ್ ಅವರ ಪುತ್ರಿ ತಂದೆ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ಕುರಿತಂತೆ ಸತ್ಯಜಿತ್ ಹಾಗೂ ಅವರ ಪುತ್ರ ಆಕಾಶ್ ಸ್ಪಷ್ಟನೆ ನೀಡಿದ್ದರು.
ಕನ್ನಡ ಚಿತ್ರರಂಗ ಈಗ ಹೊಸ ಹುರುಪಿನಲ್ಲಿದೆ. ಕೊರೊನಾ ಆತಂಕ ಕೊಂಚ ಕಡಿಮೆಯಾಗುತ್ತಿದ್ದಂತೆಯೇ ಸರ್ಕಾರ ಕೂಡ ಚಿತ್ರರಂಗದ ಚಟುವಟಿಕೆಗೆ ಗ್ರೀನ್ ಸಿಗ್ನಲ್ ಕೊಟ್ಟಿದೆ. ಈಗ ಶೇ.೧೦೦ರಷ್ಟು ಆಸನ ಭರ್ತಿಗೆ ಅನುಮತಿ ಸಿಕ್ಕಾಗಿದೆ. ಸ್ಟಾರ್ ಸಿನಿಮಾಗಳು ಸೇರಿದಂತೆ ಹೊಸಬರ ಚಿತ್ರಗಳು ಪ್ರೇಕ್ಷಕರ ಮುಂದೆ ಬರಲು ಅಣಿಯಾಗುತ್ತಿವೆ. ಅತ್ತ, ಹೊಸಬರ ಸಿನಿಮಾಗಳೂ ಸೆಟ್ಟೇರುತ್ತಿವೆ. ಈಗಾಗಲೇ ಅರ್ಧದಷ್ಟು ಚಿತ್ರೀಕರಣ ಮುಗಿಸಿದ್ದ ಕೆಲವು ಸಿನಿಮಾಗಳು ಸಹ ತನ್ನ ಚಿತ್ರೀಕರಣ ಮುಂದುವರೆಸುತ್ತಿವೆ. ಆ ಸಾಲಿಗೆ “ಶಿವನಪಾದ” ಸಿನಿಮಾವೂ ಸೇರಿದೆ.
ಹೌದು, ಸೀ ಶೋರ್ ಸ್ಟುಡಿಯೋಸ್ ಬ್ಯಾನರ್ನಡಿ ಸಂದೀಶ್ ಹೆಚ್.ಟಿ. ಹಾಗೂ ಪೆರುಮಾಳ್ ವಿ. ಅವರ ನಿರ್ಮಾಣದ ಈ ಚಿತ್ರ ಲವ್, ಸಸ್ಪೆನ್ಸ್, ಥ್ರಿಲ್ಲರ್ ಜೊತೆಗೆ ಹಾರರ್ ಟಚ್ ಹೊಂದಿದೆ. ಜೊತೆಗೆ ಕ್ರೈಮ್ ಕೂಡ ಇಲ್ಲಿದೆ. ಈ ಹಿಂದೆ ಲೂಸ್ ಮಾದ ಯೋಗಿ ಅಭಿನಯದ “ಬಂಗಾರಿ” ಹಾಗು ಮಕ್ಕಳ ಸಿನಿಮಾಗಳಾದ “ಬೆಟ್ಟದ ದಾರಿ”, “ನಡಗಲ್ಲು”, ತಮಿಳಿನ “ಕಾದಲ್ ಪೈತ್ಯಂ” ಚಿತ್ರಗಳನ್ನು ನಿರ್ದೇಶಿಸಿದ್ದ ಮಾ.ಚಂದ್ರು ಅವರು “ಶಿವನಪಾದ” ಚಿತ್ರಕ್ಕೆ ನಿರ್ದೇಶಕರು. ಸದ್ಯ ಈ ಚಿತ್ರ ಶೇ.೫೦ರಷ್ಟು ಚಿತ್ರೀಕರಣ ಬಾಕಿ ಉಳಿಸಿಕೊಂಡಿದೆ. ಮಾತಿನಭಾಗ ಹಾಗೂ ಎರಡು ಹಾಡುಗಳನ್ನು ಸಾಗರ, ಮದ್ದೂರು, ಪುಟ್ಟಣ್ಣ ಸ್ಟುಡಿಯೋ, ಮಿಲನಹೌಸ್ ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಸಲಾಗುತ್ತಿದೆ. ಮುದಿನ ವಾರದಿಂದ ಶೂಟಿಂಗ್ ಶುರುವಾಗಲಿದೆ.
ಆರು ಪಾತ್ರಗಳ ಸುತ್ತ ನಡೆಯುವ ಕುತೂಹಲದ ಕಥೆಯಲ್ಲಿ ಒಂದು ಕೊಲೆ ನಡೆಯುತ್ತೆ. ಅದೇ ಚಿತ್ರದ ಹೈಲೈಟ್. ನಿವೃತ್ತ ಹಿರಿಯ ಪೊಲೀಸ್ ಅಧಿಕಾರಿ ಹೆಚ್.ಟಿ. ಸಾಂಗ್ಲಿಯಾನ ಅವರು ಈ ಚಿತ್ರದಲ್ಲಿ ಪೊಲೀಸ್ ಅಧಿಕಾರಿಯಾಗಿಯೇ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿರುವುದು ವಿಶೇಷತೆಗಳಲ್ಲೊಂದು.
“ಶಿವನಪಾದ” ಎನ್ನುವುದು ಉತ್ತರ ಕರ್ನಾಟಕದಲ್ಲಿರುವ ಒಂದು ಪ್ರಸಿದ್ದ ಪ್ರವಾಸಿ ತಾಣ. ಈ ಚಿತ್ರದಲ್ಲಿ ಆ ಲೊಕೇಶನ್ ಕೂಡ ಒಂದು ಪಾತ್ರವಾಗಿಯೇ ಮೂಡಿಬರಲಿದ್ದು, ಬಹುತೇಕ ಜರ್ನಿಯಲ್ಲೇ ನಡೆಯೋ ಕುತೂಹಲಕರ ಕಥೆ ಇದು ಎಂಬುದು ನಿರ್ದೇಶಕರ ಮಾತು.
ಚಿತ್ರದಲ್ಲಿ ನಾಗೇಶ್ ಆರ್. ಆನಂದ್, ವರ್ಷಿತ ಗಿರೀಶ್, ಮೇಘನಾ, ಬಲ ರಾಜವಾಡಿ, ನವೀನ್ ಡಿ.ಪಡೀಲ್, ಅಂಜಲಿ, ಹರಿಹರನ್ ಬಿ.ಪಿ, ಆಟೋ ನಾಗರಾಜ್, ಶೇಷಗಿರಿ, ನರಸಿಂಹಮೂರ್ತಿ, ಸೂರಿ, ರಂಭಾ ಇತರರು ಇದ್ದಾರೆ. ನಿರ್ದೇಶಕರೇ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ವೀನಸ್ ಮೂರ್ತಿ ಕ್ಯಾಮೆರಾ ಹಿಡಿದರೆ, ವೀರ್ ಸಮರ್ಥ ಅವರ ಸಂಗೀತವಿದೆ. ವಿಜಯ್ ಭರಮಸಾಗರ ಅವರ ಸಾಹಿತ್ಯ, ವೆಂಕಿ ಯುವಿಡಿ ಸಂಕಲನ ಈ ಚಿತ್ರಕ್ಕಿದೆ.
ಸರ್ಕಾರ ಚಿತ್ರಮಂದಿರಗಳಲ್ಲಿ ನೂರರಷ್ಟು ಭರ್ತಿಗೆ ಅವಕಾಶ ನೀಡಿರುವ ಹಿನ್ನೆಲೆಯಲ್ಲಿ, ಅಕ್ಟೋಬರ್ 14 ರಿಂದ ಸ್ಟಾರ್ ನಟರ ಚಿತ್ರಗಳು ಬಿಡುಗಡೆಯಾಗುತ್ತಿವೆ.
ಕರ್ನಾಟಕದಲ್ಲಿ ಪೈರಸಿ ಹೆಚ್ಚಾಗುವ ಸೂಚನೆಯಿದ್ದು, ಅದನ್ನು ತಡೆಗಟ್ಟಲು ಸೂಕ್ತ ಕ್ರಮ ಕೈಗೊಳ್ಳುವಂತೆ ಕರ್ನಾಟಕ ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷರಾದ ಡಿ.ಕೆ.ರಾಮಕೃಷ್ಣ ಅವರ ನೇತೃತ್ವದಲ್ಲಿ ಪೊಲೀಸ್ ಮುಖ್ಯಸ್ಥರನ್ನು ಭೇಟಿ ಮಾಡಲಾಗಿದೆ.
ಈ ವೇಳೆ ನಿರ್ಮಾಪಕರಾದ ಕೆ.ಮಂಜು, ಜಯಣ್ಣ, ಗಣೇಶ್, ರಮೇಶ್ ಯಾದವ್, ಕೆ.ಪಿ.ಶ್ರೀಕಾಂತ್ ಮುಂತಾದ ನಿರ್ಮಾಪಕರು ಪೊಲೀಸ್ ಕಮೀಷನರ್ ಕಮಲ್ ಪಂತ್ ಹಾಗೂ ಸೈಬರ್ ಕ್ರೈಮ್ ಮುಖ್ಯಸ್ಥರಾದ ಸಂದೀಪ್ ಪಾಟೀಲ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.
ಸೌರವ್ ಲೋಕಿ ‘ಭಜರಂಗಿ ಲೋಕಿ’ ಅಂತಲೇ ಬ್ರಾಂಡ್ ಆದವರು. ಅಷ್ಟು ಮಾತ್ರವಲ್ಲ, ಕನ್ನಡಕ್ಕೊಬ್ಬ ಖಡಕ್ ಖಳನಟ ಸಿಕ್ಕಿದ್ದು ಕೂಡ ಭಜರಂಗಿ ಮೂಲಕವೇ. ಭಜರಂಗಿ ಚಿತ್ರ ಕೊಟ್ಟ ತಾರಾ ವರ್ಚಸ್ಸು ಅವರಿಗೆ ಮತ್ತಾವುದೇ ಚಿತ್ರ ತಂದು ಕೊಟ್ಟಿಲ್ಲ. ಮತ್ತೆ ‘ ಭಜರಂಗಿ 2 ‘ ಮೂಲಕ ವಿಶಿಷ್ಟವಾದ ಲುಕ್ಕು, ಖಡಕ್ ಪಾತ್ರದೊಂದಿಗೆ ಬೆಳ್ಳಿತೆರೆ ಮೇಲೆ ಬರಲು ರೆಡಿಯಾಗಿದ್ದಾರೆ. ಆ ಪಾತ್ರದ ಒಂದು ಲುಕ್ಕು ಇದು
ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅಭಿನಯದ ಬಹು ನಿರೀಕ್ಷಿತ ಚಿತ್ರ ‘ ಭಜರಂಗಿ 2 ‘ ಅಭಿಮಾನಿಗಳಲ್ಲಿ ದಿನೇ ದಿನೇ ಕುತೂಹಲ ಹುಟ್ಟಿಸುತ್ತಿದೆ. ಈಗಾಗಲೇ ಚಿತ್ರ ತಂಡ ಚಿತ್ರದ ರಿಲೀಸ್ ಡೇಟ್ ಅನೌನ್ಸ್ ಮಾಡಿದೆ. ಚಿತ್ರದ ಬಗ್ಗೆ ಸಿನಿಮಾ ಪ್ರೇಕ್ಷಕರಲ್ಲಿ ದೊಡ್ಡ ಕ್ರೇಜ್ ಹುಟ್ಟು ಹಾಕಲು ಮುಂದಾಗಿರುವ ಚಿತ್ರ ತಂಡ, ಈಗ ಒಂದು ಪಾತ್ರದ ಫಸ್ಟ್ ಲುಕ್ ರಿವೀಲ್ ಮಾಡಿದೆ. ಈಗಾಗಲೇ ಟೀಸರ್ ನಲ್ಲಿ ಆ ಪಾತ್ರದ ಲುಕ್ ಕಾಣಿಸಿಕೊಂಡರೂ, ಆ ಪಾತ್ರದ ಪರಿಚಯಕ್ಕೆ ಅಂತಲೇ ಈಗ ವಿಶೇಷವಾದ ಪೋಸ್ಟರ್ ಕ್ರಿಯೇಟ್ ಮಾಡಿ, ಸೋಶಿಯಲ್ ಮೀಡಿಯಾದಲ್ಲಿ ಷೇರ್ ಮಾಡಿದೆ. ಈಗಾಗಲೇ ಅದು ವೈರಲ್ ಕೂಡ ಆಗಿದೆ. ನಿರೀಕ್ಷೆಯಂತೆ ಸಿನಿಮಾದ ಬಗ್ಗೆ ದೊಡ್ಡ ಕ್ರೇಜ್ ಶುರುವಾಗಲು ಅದು ನಾಂದಿ ಹಾಡಿದೆ. ಅಂದಹಾಗೆ, ಆ ಪಾತ್ರ ಮತ್ತು ಪಾತ್ರದ ಕಲಾವಿದ ಬೇರಾರು ಅಲ್ಲ, ಅವರೇ ಭಜರಂಗಿ ಲೋಕಿ.
ಸೌರವ್ ಲೋಕಿ ಹೆಸರಲ್ಲಿ ಬೆಳ್ಳಿತೆರೆಗೆ ಬಂದು ಭಜರಂಗಿ ಚಿತ್ರದ ಮೂಲಕವೇ ‘ಭಜರಂಗಿ ಲೋಕಿ’ ಅಂತಲೇ ಬ್ರಾಂಡ್ ಆದ ನಟ ಇವರು. ಅಷ್ಟು ಮಾತ್ರವಲ್ಲ, ಕನ್ನಡಕ್ಕೊಬ್ಬ ಖಡಕ್ ಖಳನಟ ಸಿಕ್ಕಿದ್ದು ಕೂಡ ಭಜರಂಗಿ ಚಿತ್ರದ ಮೂಲಕವೇ. ಅಲ್ಲಿಂದ ಶುರುವಾದ ಅವರ ರಿಯಲ್ ಸಿನಿ ಜರ್ನಿಯಲ್ಲಿ ಸಾಕಷ್ಟು ಸಿನಿಮಾ ಮಾಡಿದ್ದಾರೆ. ಆದರೆ, ಭಜರಂಗಿ ಚಿತ್ರ ಕೊಟ್ಟಂತಹ ತಾರಾ ವರ್ಚಸ್ಸು ಅವರಿಗೆ ಮತ್ತಾವುದೇ ಚಿತ್ರ ತಂದು ಕೊಟ್ಟಿಲ್ಲ. ಈಗ ಮತ್ತೆ ‘ ಭಜರಂಗಿ 2 ‘ ಚಿತ್ರದ ಮೂಲಕ ಮತ್ತೊಂದು ವಿಶಿಷ್ಟವಾದ ಲುಕ್ಕು, ಖಡಕ್ ಪಾತ್ರದೊಂದಿಗೆ ಬೆಳ್ಳಿತೆರೆಯ ಮೇಲೆ ಬರಲು ರೆಡಿಯಾಗಿದ್ದಾರೆ. ಆ ಪಾತ್ರದ ಒಂದು ಲುಕ್ಕು ಈ ಪೋಸ್ಟರ್.
ಈಗಾಗಲೇ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಅದರಲ್ಲಿ ಲೋಕಿ ಅವರು ಹೊಸ ಗೆಟಪ್ನಲ್ಲಿ ಕಾಣಿಸಿಕೊಂಡಿದ್ದನ್ನು ಅಭಿಮಾನಿಗಳು ಗುರುತಿಸಿದ್ದರು. ಆದರೆ ಪಾತ್ರದ ಹೆಸರು ಸೇರಿದಂತೆ ಇತರ ಅಂಶ ರಿವೀಲ್ ಆಗಿರಲಿಲ್ಲ. ಇದೀಗ ಚಿತ್ರತಂಡ ಅಧಿಕೃತವಾಗಿ ಲೋಕಿ ಅವರ ಪಾತ್ರದ ಪರಿಚಯವನ್ನು ಮಾಡಿದ್ದು, ಅಚ್ಚರಿಯ ಮಾಹಿತಿಯನ್ನು ನೀಡಿದೆ. ಚಿತ್ರದಲ್ಲಿ ಸೌರವ್ ಲೋಕೇಶ್ ಅವರದ್ದು ಭಿನ್ನ ಮಾದರಿಯ ಪಾತ್ರವಾಗಿದ್ದು, ಚಿತ್ರತಂಡ ದೊಡ್ಡತೆರೆಯ ಮೇಲೆ ಈ ಪಾತ್ರ ನೀಡುವ ಸರ್ಪ್ರೈಸ್ ಅನ್ನು ಕಣ್ತುಂಬಿಕೊಳ್ಳಿ ಎಂದು ಬರೆದಿದೆ. ಇದರಿಂದಾಗಿ ಲೋಕಿ ಅವರ ಪಾತ್ರ ಹಾಗೂ ಚಿತ್ರದ ಕುರಿತಂತೆ ನಿರೀಕ್ಷೆಗಳು ಗರಿಗೆದರಿವೆ.
ಸದ್ಯಕ್ಕೆ ‘ ಭಜರಂಗಿ 2 ‘ ಚಿತ್ರದಲ್ಲಿನ ಪಾತ್ರಗಳ ಬಗ್ಗೆ ಇರುವ ದೊಡ್ಡ ನಿರೀಕ್ಷೆಗಳ ಪೈಕಿ, ಭಜರಂಗಿ ಲೋಕಿ ಯವರ ಪಾತ್ರದ ಬಗ್ಗೆಯೂ ಇದೆ. ಅವರ ಪಾತ್ರದ ವಿಶೇಷ ಗೆಟಪ್ ನೋಡಿದಾಗ ಲೋಕಿ ಅವರ ಕೆರಿಯರ್ ನಲ್ಲಿ ಇದು ಕೂಡ ಒಂದು ಮೈಲುಗಲ್ಲು ಆಗುವುದು ಕೂಡ ಗ್ಯಾರಂಟಿ ಅಂತೆ. ‘ ಭಜರಂಗಿ 2 ‘ ಚಿತ್ರದಲ್ಲಿನ ತಮ್ಮ ಪಾತ್ರದ ಕುರಿತು ಮಾತನಾಡುವ ಸೌರವ್ ಲೋಕಿ ಅಲಿಯಾದ್ ಭಜರಂಗಿಲೋಕಿ, ಈ ಚಿತ್ರ ತೆರೆ ಕಂಡರೆ ತಮ್ಮನ್ನು ಇದು ಇನ್ನೊಂದು ಲೆವೆಲ್ ಗೆ ತೆಗೆದುಕೊಂ ಡು ಹೋಗುವುದು ಖಚಿತ ಎನ್ನುವ ವಿಶ್ವಾಸ ಅವರದು. ಅಂತೆಯೇ ಅವರಿಗೆ ದೊಡ್ಡ ಯಶಸ್ಸು ಸಿಗಲಿ ಎನ್ನುವುದು ಸಿನಿ ಲಹರಿ ಆಶಯ ಕೂಡ.
ಹೆಂಗೆ ನಾವು, ಹೆಂಗೆ ಹೆಂಗೆ ನಾವು ಅಂತ ಸ್ಟಾರ್ಗಳಿಬ್ಬರು ಹೇಳ್ತಿದ್ದಾರೋ ಇಲ್ಲವೋ ಗೊತ್ತಿಲ್ಲ. ಆದರೆ, ಸ್ಯಾಂಡಲ್ವುಡ್ನ ಈ ಇಬ್ಬರು ಸೂಪರ್ಸ್ಟಾರ್ಗಳನ್ನು ತಲೆಮೇಲೆ ಹೊತ್ತು ಮೆರೆಸೋಕೆ ಸಜ್ಜಾಗುತ್ತಿರುವ ಹಾಗೂ ಒಂದೇ ಅಖಾಡದಲ್ಲಿರುವ ಸಂತೋಷ್ ಮತ್ತು ನರ್ತಕಿ ಚಿತ್ರಮಂದಿರಗಳು ಮಾತ್ರ `ಹೆಂಗೆ ನಾವು ಹೆಂಗೆ ಹೆಂಗೆ ನಾವು’ ಅಂತ ಡೈಲಾಗ್ ಹೊಡೆದುಕೊಂಡು ಖುಷಿಪಡುತ್ತಿವೆ. ಅದಕ್ಕೆ ಕಾರಣ ಭರ್ತಿ ಒಂದೂವರೆ ವರ್ಷಗಳ ನಂತರ ಒಟ್ಟೊಟ್ಟಿಗೆ ಇಬ್ಬರು ಸ್ಟಾರ್ನಟರುಗಳನ್ನು ಚಿತ್ರಮಂದಿರಕ್ಕೆ ವೆಲ್ಕಮ್ ಮಾಡಿಕೊಳ್ಳುವಂತಹ ಅವಕಾಶ ಸಿಕ್ಕಿದೆ. ಅಟ್ ದಿ ಸೇಮ್ ಟೈಮ್ ಥಿಯೇಟರ್ ಮುಂದೆ ಹಬ್ಬದ ಸಂಭ್ರಮ ಹಾಗೂ ಹೌಸ್ಫುಲ್ ಆಗುವಂತಹ ಗಳಿಗೆಯನ್ನು ನೋಡಲಿಕ್ಕೆ ಎರಡು ಥಿಯೇಟರ್ಗಳು ಕಾತುರದಿಂದ ಕಾಯ್ತಿವೆ.
ಇಬ್ಬರು ಸೂಪರ್ಸ್ಟಾರ್ಗಳು ಒಟ್ಟಿಗೆ ಅಖಾಡಕ್ಕೆ ಇಳಿಯುತ್ತಿದ್ದಾರೆ ಅಂದ್ರೆ, ಇಬ್ಬರು ಸ್ಟಾರ್ನಟರ ಸಿನಿಮಾಗಳು ಒಂದೇ ದಿನ ಬಿಡುಗಡೆಯಾಗುತ್ತಿವೆ ಅಂದ್ರೆ, ಅದನ್ನು ಬಣ್ಣದ ಲೋಕದ ಭಾಷೆಯಲ್ಲಿ ಸ್ಟಾರ್ವಾರ್ ಅಂತಾನೇ ಹೇಳ್ತಾರೆ. ಸದ್ಯ ಸ್ಯಾಂಡಲ್ವುಡ್ನ ಇಬ್ಬರು ಸ್ಟಾರ್ನಟರ ಸಿನಿಮಾಗಳು ಏಕಕಾಲಕ್ಕೆ ಥಿಯೇಟರ್ಗೆ ಗ್ರ್ಯಾಂಡ್ ಎಂಟ್ರಿಕೊಡಲಿಕ್ಕೆ ಭರ್ಜರಿ ತಯ್ಯಾರಿ ನಡೆದಿದೆ. ಆ ಸಿನಿಮಾಗಳ ಬಗ್ಗೆ ನಿಮಗೀಗಾಗಲೇ ತಿಳಿದಿದೆ. ಅಭಿನಯ ಚಕ್ರವರ್ತಿಯ ಮೋಸ್ಟ್ ಎಕ್ಸ್ಪೆಕ್ಟೆಡ್ ಕೋಟಿಗೊಬ್ಬ-೩ ಹಾಗೂ ಬ್ಲಾಕ್ ಕೋಬ್ರಾ ದುನಿಯಾ ವಿಜಯ್ ಅವರ ಹೈವೋಲ್ಟೇಜ್ `ಸಲಗ’ ಚಿತ್ರಗಳ ಬಿಡುಗಡೆಗೆ ಕೌಂಟ್ಡೌನ್ ಶುರುವಾಗಿದೆ. ಆಯುಧ ಪೂಜೆಯ ದಿನದಂದೇ ಗಂಧದಗುಡಿಯ ನಾಯಕರಿಬ್ಬರು ಅಖಾಡಕ್ಕೆ ಧುಮ್ಕುತ್ತಿರುವುದರಿಂದ ಸ್ಟಾರ್ವಾರ್ ಜೋರಾಗಲಿದೆ, ಬಾಕ್ಸ್ಆಫೀಸ್ ಅಂಗಳದಲ್ಲಿ ಕಾದಾಟ ನಡೆಯಲಿದೆ ಎನ್ನುವುದು ಗಾಂಧಿನಗರದ ಪಿಎಚ್ಡಿ ಪಂಡಿತರ ಮಾತು.
ಒಂದು ವಾರ ಅಂತರದಲ್ಲಿ ಸ್ಟಾರ್ನಟರಿಬ್ಬರ ಚಿತ್ರಗಳು ಬಿಡುಗಡೆಯಾದ್ರೇನೇ ಬಿಗ್ ಸ್ಕ್ರೀನ್ ನಲ್ಲಿ ಪೈಪೋಟಿ ಶುರುವಾಗುತ್ತೆ, ಬಾಕ್ಸ್ಆಫೀಸ್ ಡಬ್ಬದಲ್ಲಿ ತಿಕ್ಕಾಟ ಆರಂಭವಾಗುತ್ತೆ. ಅಂತ್ರದಲ್ಲಿ ಒಂದೇ ದಿನ ಮಾಸ್ಗೂ ಕ್ಲಾಸ್ಗೂ ಬಾಸ್ಗಳಾಗಿರುವ ಮಾಣಿಕ್ಯ ಹಾಗೂ ಜಯ್ಯಮ್ಮನ ಮಗ ಅಖಾಡಕ್ಕೆ ಇಳಿಯುತ್ತಾರೆ ಅಂದ್ರೆ ಸಹಜವಾಗಿ ನೆಕ್ ಟು ನೆಕ್ ಫೈಟ್. ಸ್ಟಾರ್ಟ್ ಆಗುತ್ತೆ. ಚಿತ್ರಮಂದಿರಗಳು ಹಂಚಿಕೆಯಾಗುತ್ತವೆ, ಬಾಕ್ಸ್ಆಫೀಸ್ ಮಂಕಾಗುತ್ತದೆ. ಇದರೊಟ್ಟಿಗೆ ಫ್ಯಾನ್ಸ್ ಫ್ಯಾನ್ಸ್ ನಡುವೆ ಸಣ್ಣಗೆ ಕಿಡಿ ಹೊತ್ತಿಕೊಳ್ಳುತ್ತದೆ. ನಮ್ಮ ಬಾಸ್ ಫಸ್ಟ್, ನಿಮ್ಮ ಬಾಸ್ ನೆಕ್ಸ್ಟ್, ನಮ್ಮ ಬಾಸ್ ಸಿನಿಮಾ ಇಷ್ಟು ಚಿತ್ರಮಂದಿರಗಳಲ್ಲಿ ರಿಲೀಸ್ ಆಗಿದೆ, ನಿಮ್ಮ ಬಾಸ್ ಸಿನಿಮಾ ಅಷ್ಟೇ ಥಿಯೇಟರ್ಗಳಲ್ಲಿ ಬಿಡುಗಡೆಯಾಗಿದೆ. ಹೀಗೆ ಏನೇನೋ ಮಾತನಾಡಿಕೊಳ್ಳುತ್ತಾ ಸುಖಾಸುಮ್ಮನೇ ಕಾದಾಟಕ್ಕೆ ರೆಡಿಯಾಗ್ತಾರೆ. ಸ್ಟಾರ್ಗಳ ಮಧ್ಯೆ ವಾರ್ ಶುರುವಾಗದೇ ಹೋದ್ರೂ ಕೂಡ ಫ್ಯಾನ್ಸ್ ವಾರ್ ಜೋರಾಗುತ್ತೆ.
ಇದ್ಯಾವುದು ಆಗ್ಬಾರ್ದು, ನಮ್ಮನಮ್ಮವರ ಮಧ್ಯೆ ಯಾವ ಯುದ್ದವೂ ನಡಿಯಬಾರ್ದು ಎನ್ನುವುದೇ ಎಲ್ಲರ ಆಶಯ. ಈ ಹಿನ್ನಲೆಯಲ್ಲಿ ಸಿನಿಲಹರಿ ತಂಡ `ಸಲಗ’ ಚಿತ್ರದ ನಿರ್ಮಾಪಕ ಕೆ. ಪಿ ಶ್ರೀಕಾಂತ್ ಅವರನ್ನು ಸಂಪರ್ಕ ಮಾಡಿದಾಗ ಅವರು ಹೇಳಿದ್ದಿಷ್ಟು. ನಿಜಕ್ಕೂ ಇದು ಸ್ಟಾರ್ವಾರ್ ಅಂತ ಪರಿಗಣಿಸಬೇಡಿ. ನಮ್ಮ ನಮ್ಮ ನಡುವೆ ಯಾವುದೇ ವೈಮನಸ್ಸು ಇಲ್ಲ, ಒಂದೇ ದಿನ ರಿಲೀಸ್ ಮಾಡ್ಲೆಬೇಕು ಎನ್ನುವ ಹಠಕ್ಕೂ ನಾವು ಬಿದ್ದಿಲ್ಲ. ಅಷ್ಟಕ್ಕೂ ಗಂಧದಗುಡಿಯಲ್ಲಿ ಹೆಲ್ದಿ ಕಾಂಪಿಟೇಷನ್ ಇದೆ ಬಿಟ್ರೆ ಈ ವಾರ್ ಗೀರ್ ಎಂತಹದ್ದು ಇಲ್ಲ ಎಂದರು. ಜೊತೆಗೆ ಹಬ್ಬದ ಸೀಸನ್ಗಳು ಬಂದಾಗ ಸ್ಟಾರ್ಗಳು ಅಖಾಡಕ್ಕೆ ಇಳಿಯೋದು ಸಹಜ. ನಮ್ಮ ಸ್ಟಾರ್ಗಳ ನಡುವೆ ಪರಭಾಷಾ ಸ್ಟಾರ್ಗಳು ಕೂಡ ಫೀಲ್ಡಿಗಿಳಿಯುತ್ತಾರೆ. ಆದರೆ, ಈ ಭಾರಿ ದಸರಾ ಹಬ್ಬಕ್ಕೆ ಪರಭಾಷಾ ಸಿನಿಮಾಗಳು ಬಿಡುಗಡೆಯಾಗುತ್ತಿಲ್ಲ. ಪ್ರತಿವರ್ಷ ಬೇರೆ ಭಾಷೆಯ ಚಿತ್ರಗಳೊಟ್ಟಿಗೆ ನಮ್ಮ ಭಾಷೆಯ ಚಿತ್ರಗಳು ಬಾಕ್ಸ್ಆಫೀಸ್ ಅಂಗಳದಲ್ಲಿ ಸೆಣಸಾಡಬೇಕಿತ್ತು. ಆದರೆ, ಈ ಭಾರಿ ಅಂತದ್ದೇನಿಲ್ಲ ನಮ್ಮ ಭಾಷೆಯ ಸಿನಿಮಾಗಳದ್ದೇ ಬೆಳ್ಳಿತೆರೆ ಹಾಗೂ ಬಾಕ್ಸ್ಆಫೀಸ್ ಅಖಾಡದಲ್ಲಿ ಅಬ್ಬರ ಅಂದರು.
`ಸಲಗ’ ನಿರ್ಮಾಪಕರ ಮಾತು ಹಂಡ್ರೆAಡ್ ಪರ್ಸೆಂಟ್ ನಿಜ. ಪರಭಾಷೆಯ ಸಿನಿಮಾಗಳು ಈ ಭಾರಿಯ ದಸರಾ ಹಬ್ಬಕ್ಕೆ ರಿಲೀಸ್ ಆಗದೇ ಇರೋದ್ರಿಂದ ಕನ್ನಡ ಸಿನಿಮಾಗಳಿಗೆ ಪ್ಲಸ್ ಆಗುತ್ತೆ. ಬಯಸಿದಷ್ಟು ಚಿತ್ರಮಂದಿರಗಳು ಸಿಗುತ್ತವೆ. ರಾಜ್ಯಾದ್ಯಂತ ಅವರಿಷ್ಟದ ಥಿಯೇಟರ್ಗಳಲ್ಲೇ ಸಿನಿಮಾನ ರಿಲೀಸ್ ಮಾಡ್ಬೋದು. ಹೀಗಾಗಿಯೇ ಸಲಗ ಚಿತ್ರತಂಡ ಆಯುಧ ಪೂಜೆಗೆ ಬಿಡುಗಡೆ ಮಾಡಿಯೇ ತೀರುತ್ತೇವೆ ಎಂದಿದ್ದಾರೆ. ಸಂತೋಷ್ ಚಿತ್ರಮಂದಿರದಲ್ಲಿ ಸಲಗ ಆರ್ಭಟ ಶುರುವಾಗಲಿದೆ. ಅದೇ ದಿನ ನರ್ತಕಿಯಲ್ಲಿ ಕೋಟಿಗೊಬ್ಬ-೩ ಚಿತ್ರ ಭರ್ಜರಿಯಾಗಿ ಬಿಡುಗಡೆಯಾಗ್ತಿದೆ. ಒಂದೇ ಅಖಾಡದಲ್ಲಿ ಎರಡು ಚಿತ್ರಮಂದಿರಗಳು ಇರೋದ್ರಿಂದ ಪೈಪೋಟಿ ಏಳಬಹುದು. ಆದರೆ, ಇಬ್ಬರು ಸ್ಟಾರ್ನಟರುಗಳಿಗೆ ಅವರದ್ದೇ ಆದ ಫ್ಯಾನ್ ಫಾಲೋಯಿಂಗ್ ಇರೋದ್ರಿಂದ ಥಿಯೇಟರ್ ಅಂತೂ ಹೌಸ್ಫುಲ್ ಆಗುತ್ತೆ ಅದರಲ್ಲಿ ನೋಡೌಟ್.
ಒಂದ್ವೇಳೆ ಯಾರಾದ್ರೂ ಒಬ್ಬರು ಹಿಂದೆಸರಿದಿದ್ದರೆ, ಒಂದು ಚಿತ್ರತಂಡ ದೊಡ್ಡ ಮನಸ್ಸು ಮಾಡಿ ಮುಂದಿನ ವಾರ ಬರೋಣ ಬಿಡು ಎಂದು ತೀರ್ಮಾನಿಸಿದ್ದರೆ, ಥಿಯೇಟರ್ ಹೌಸ್ಫುಲ್ ಆಗೋದ್ರ ಜೊತೆಗೆ ಮತ್ತೊಂದು ಶೋಗೆ ಆಗುವಷ್ಟು ಜನ ಹೊರಗಡೆ ನಿಂತಿರುತ್ತಿದ್ದರು. ಕನ್ನಡ ಸಿನಿಮಾ ಪ್ರೇಕ್ಷಕರೆಲ್ಲರೂ ಕೂಡ ಚಿತ್ರಮಂದಿರದತ್ತ ದೌಡಾಯಿಸಿ ಬಾಕ್ಸ್ಆಫೀಸ್ನಲ್ಲಿ ಒಳ್ಳೆಯ ಕಮಾಯಿ ಮಾಡಿಕೊಡುತ್ತಿದ್ದರು. ಆದರೆ, ಸಲಗ ಹಾಗೂ ಕೋಟಿಗೊಬ್ಬ-3 ಎರಡು ಕೂಡ ಬಹುನಿರೀಕ್ಷೆಯ ಸಿನಿಮಾಗಳಾಗಿರೋದ್ರಿಂದ, ಎರಡು ಚಿತ್ರಗಳನ್ನು ಫಸ್ಟ್ ಡೇ ಫಸ್ಟ್ ಶೋನೇ ನೋಡಬೇಕಾಗಿರೋದ್ರಿಂದ ಕನ್ನಡ ಪ್ರೇಕ್ಷಕರು ಡಿವೈಡ್ ಆಗ್ತಾರೆ. ಇದ್ರಿಂದ ಒಂದು ಚಿತ್ರತಂಡಕ್ಕೆ ಅಲ್ಲ ಬದಲಾಗಿ ಎರಡು ಚಿತ್ರತಂಡಕ್ಕೂ ಕೊಂಚ ನಷ್ಟವೇ. ಅದನ್ನು ಯಾರು ತುಂಬಿಕೊಡುವುದಕ್ಕೆ ಆಗಲ್ಲ ಯಾಕಂದ್ರೆ ಅದು ಅವರಿಬ್ಬರೇ ತೆಗೆದುಕೊಂಡಿರುವ ಡಿಸೈಡ್ ಅಲ್ಲವೇ.