Categories
ಸಿನಿ ಸುದ್ದಿ

ಈತ ಪೈಸಾ ವಸೂಲ್ ಗೋವಿಂದ…!

ಚಿತ್ರ ವಿಮರ್ಶೆ- ಗೋವಿಂದ ಗೋವಿಂದ
ನಿರ್ದೇಶಕ – ತಿಲಕ್
ತಾರಾಗಣ – ಸುಮನ್ ಶೈಲೇಂದ್ರ, ರೂಪೇಶ್ ಶೆಟ್ಟಿ, ಭಾವನಾ ಮೆನನ್, ಕವಿತಾ ಗೌಡ,ಮಜಾ‌ಟಾಕೀಶ್ ಪವನ್, ವಿಜಯ್ ಚೆಂಡೂರ್, ಅಚ್ಯುತ್ ಕುಮಾರ್
ಇತರರು

  • ದೇಶಾದ್ರಿ ಹೊಸ್ಮನೆ

ಸಿನಿಮಾ ನಿರ್ದೇಶಕನಾಗಲೇಬೇಕೆಂದು ಹೊರಟ ಕನಸು ಕಂಗಳ ಹುಡುಗ, ತಾಯಿಯಲ್ಲದೆ ತನ್ನನ್ನೇ ಅವಲಂಭಿಸಿರುವ ಮಗಳು ತನ್ನಿ ಚ್ಚೆಯಂತೆಯೇ ಇರಬೇಕೆಂದು‌ ಬಯಸುವ ಅಪ್ಪ, ಭರತ ನಾಟ್ಯ ದ ಮೇಲೆ ಬೆಟ್ಟದಷ್ಟು ಕನಸು‌ ಕಟ್ಟಿಕೊಂಡ ನಾಯಕಿ, ಆಕೆಯ‌ ಕನಸುಗಳ ಸಾಕಾರಕ್ಕೆ ನೆರವಾಗಲು ಹೋಗಿ ಸಂಕಷ್ಟಕ್ಕೆ ಸಿಲುಕುವ ಮೂವರು ಗೆಳೆಯರು ಅವರ ಜತೆಗೆ ಮೂಡನಂಬಿಕೆಯ‌ ಮೇಲೆ ನಾಯಕಿಯನ್ನೇ ಕಿಡ್ನಾಪ್ ಮಾಡುವ ಕಿರಾತಕರ ಸುತ್ತಣದ ಸಂಕಟ, ಸಾಹಸ, ದುಸ್ಸಾಹದ ಸಮಿಶ್ರಣಗಳ ಹೂರಣದೊಂದಿಗೆ ನೋಡುಗರನ್ನು ಆರಂಭದಿಂದ ಕ್ಲೈಮ್ಯಾಕ್ಸ್ ವರೆಗೂ ತಕ್ಕಮಟ್ಟಿಗೆ ರಂಜಿಸಬಹುದಾದ ಸಿನಿಮಾ ಗೋವಿಂದ ಗೋವಿಂದ.

ನವ ಪ್ರತಿಭೆ ತಿಲಕ್ ನಿರ್ದೇಶನದ ಈ ಸಿನಿಮಾವು ಕಾಮಿಡಿ, ಥ್ರಿಲ್ಲರ್, ಎಮೋಷನಲ್ ಜಾನರ್ ಗೆ ಸೇರಿದ್ದು‌. ಇಷ್ಟಾಗಿಯೂ ಚಿತ್ರ ರಸಿಕರು ಬಯಸುವ ಎಲ್ಲಾ ಕಮರ್ಷಿಯಲ್ ಅಂಶಗಳನ್ನು ಒಳಗೊಂಡ ಒಂದು ಸಿದ್ದ ಸೂತ್ರದ ಸಿನಿಮಾವೂ ಹೌದು. ಸಿನಿಮಾ ನಿರ್ದೇಶಕನಾಗಬೇಕೆಂದು ಹೊರಟ ಒಬ್ಬ ಯುವಕನ ಕಲ್ಪನೆಯೊಳಗೆ ಇನ್ನೊಂದು ಕಥೆಯನ್ನು ಪ್ರೇಕ್ಷಕರ ಮುಂದೆ ತಂದಿಡುವ ನಿರ್ದೇಶಕರು ಅಲ್ಲಿ ನ ಕಥೆ ಹಲವು ಕುತೂಹಲದ ಉಪ ಕಥೆಗಳನ್ನು ಬಿಡಿ ಬಿಡಿಯಾಗಿ ಬಿಚ್ಚಿಡುವ ಮೂಲಕ ಪ್ರೇಕ್ಷಕರ ನ್ನು ಕುರ್ಚಿಯ ತುದಿ ಮೇಲೆ ಕೂರಿಸುವ ಪ್ರಯತ್ನ ಮಾಡಿದ್ದೇ ಇಲ್ಲಿ ಜಾಣತನ ಅಂತಲೇ ಹೇಳಬಹುದು. ಅದರಾಚೆ ಹೊಸತನವಿಲ್ಲದ, ಒಂದು ಸಿದ್ದ ಸೂತ್ರದ ಸರಳ ಕಥೆ ಎನ್ನುವುದಷ್ಟೇ ಇದರ ವೀಕ್ನೇಸ್.

ಮೊದ ಮೊದಲು ಕಾಮಿಡಿ ಈ ಸಿನಿಮಾದ ಪ್ರಧಾನ ಅಂಶದಂತೆ ಕಂಡರೂ, ನೋಡುಗನ ಮನಸ್ಸಿಗೆ ತಟ್ಟುವಂತಹ ಎಮೋಷನಲ್ ಎಳೆಗಳ ಮೂಲಕ ಗಾಢವಾಗಿ ತಟ್ಟುತ್ತದೆ. ಆರಂಭದ ಅರ್ಧ ಗಂಟೆ ಸಿನಿಮಾ ಮನಸು ಚಂಚಲಗೊಳ್ಳುವಂತೆ ಮಾಡಿದರು, ಕಥೆ ವಿಜಯಪುರದಿಂದ ಬೆಂಗಳೂರು ಕಡೆ ಮುಖ‌ ಮಾಡುವ ಮೂಲಕ ರೋಚಕತೆ ಹುಟ್ಟಿಸುತ್ತದೆ. ಒಂದು ರಿಮೇಕ್ ಸಿನಿಮಾದ ಬಗ್ಗೆ ಪ್ರೇಕ್ಷಕನಲ್ಲಿ ಹುಟ್ಟುವ ಕಲ್ಪನೆಯೇ ಬೇರೆ. ಮೂಲ‌ ಸಿನಿಮಾಕ್ಕಿಂತ ಅದು ಇನ್ನಷ್ಟು ವಿಶೇಷ ಎನಿಸಿದಾಗಲೇ ಪ್ರೇಕ್ಷಕನಿಗೂ ಇಷ್ಟ. ಹಾಗಿಲ್ಲದೆ ಅದು ಯಥಾವತ್ತಾಗಿ ಕಾಣಿಸಿಕೊಂಡರೆ, ಪ್ರೇಕ್ಷಕ ಯಾಕೆ ದುಡ್ಡು ಕೊಟ್ಟು ಆ ಸಿನಿಮಾ ನೋಡ್ಬೇಕು ಎನ್ನುವ ಪ್ರಶ್ನೆ ಎಲ್ಲರಲ್ಲೂ ಇದ್ದೇ ಇರುತ್ತೆ. ಗೋವಿಂದ ಗೋವಿಂದ ಕೂಡ ಒಂದು ರಿಮೇಕ್ ಸಿನಿಮಾ ಅಂದು ಕೊಂಡವರು ಕೂಡ ಒಂದ್ಸಲ ಈ ಸಿನಿಮಾ ನೋಡಿದರೆ ಇಷ್ಟವಾಗುವುದರಲ್ಲಿ ಅನುಮಾನವೇ ಇಲ್ಲ. ಆ ಮಟ್ಟಿಗೆ ಇದೊಂದು ಪೈಸಾ ವಸೂಲ್ ಸಿನಿಮಾ.

ಸುಮಂತ್ ಶೈಲೇಂದ್ರ, ರೂಪೇಶ್ ಶೆಟ್ಟಿ, ಭಾವನಾ ಮೆನನ್, ಕವಿತಾ ಗೌಡ, ಮಜಾ ಟಾಕೀಸ್ ಪವನ್, ವಿಜಯ್ ಚೆಂಡೂರ್, ಅಚ್ಯುತ್ ಕುಮಾರ್, ಕೆ.ಮಂಜು, ಕಡ್ಡಿಪುಡಿ ಚಂದ್ರು ಸೇರಿದಂತೆ ದೊಡ್ಡ ತಾರಗಣವೇ ಈ ತೆರೆ ಮೇಲಿದೆ. ಹಾಗಂತ ಯಾವ ಪಾತ್ರವೂ ಅಷ್ಟಕಷ್ಟೆ ಎಂದೇನು ಜರಿಯುವಂತಿಲ್ಲ. ಅಷ್ಟು ಪಾತ್ರಗಳಿಗೂ ಅದರದ್ದೇ ಮಹತ್ವ ಸಿಕ್ಕಿದೆ. ಇದಕ್ಕೆ ಪ್ಲಸ್ ಆಗಿದ್ದು ಕಥೆ ನಿರೂಪಣೆ. ಒಂದು ಮರ, ಅದಕ್ಕೆ ಹಲವು ರೆಂಬೆ ಕೊಂಬೆ ‌ಎನ್ನುವಂತೆ, ಇಲ್ಲಿ ಒಂದು ಕಥೆ, ಅದರೊಳಗೊಂದು ಉಪಕಥೆ, ಆ ಉಪಕಥೆಗೆ ಇನ್ನಷ್ಟು ಕಿರು ಕಥೆಗಳ ರೆಂಬೆ ಕೊಂಬೆಗಳಿದ್ದರೂ, ಕ್ಲೈಮ್ಯಾಕ್ಸ್ ನಲ್ಲಿ ಅವೆಲ್ಲವೂ ಒಂದು ಕೋನದಲ್ಲಿ ಬಂದು ಸೇರುವ ರೀತಿಯೇ ವಿಶೇಷ.

ತೆರೆ ಮೇಲೆ ಇದುವರೆಗೂ ಲವರ್ ಬಾಯ್ ಆಗಿ, ಆ್ಯಕ್ಷನ್ ಹೀರೋ ಆಗಿ ಕಾಣಿಸಿಕೊಂಡಿದ್ದ ‌ಯುವನಟ ಸುಮನ್ ಶೈಲೆಂದ್ರ ಇದೇ ಮೊದಲು ಒಂದು ಕಾಮಿಡಿ ಹೀರೋ ಆಗಿ ಕಾಣಿಸಿಕೊಂಡಿದ್ದು ಮಾತ್ರವಲ್ಲ, ಕಾಲೇಜು ವಿದ್ಯಾರ್ಥಿ ಯಾಗಿ ಪ್ರೇಕ್ಷಕರನ್ನು ರಂಜಿಸುವುದು ಕೂಡ ವಿಶೇಷ. ಅವರಿಗೆ ಇಲ್ಲಿ ಮಜಾ ಟಾಕೀಸ್ ಪವನ್, ವಿಜಯ್ ಚೆಂಡೂರ್ ಸಖತ್ ಸಾಥ್ ನೀಡಿದ್ದಾರೆ. ಅವರಿಬ್ಬರ ಉತ್ತರ ಕರ್ನಾಟಕದ ಜವಾರಿ ಭಾಷೆಯ ಕಾಮಿಡಿ ಪ್ರೇಕ್ಷಕರನ್ನು ನಕ್ಕು ನಗಿಸುತ್ತದೆ. ಲಕ್ಷ್ಮಿ ಬಾರಮ್ಮ ಧಾರಾವಾಹಿಯ ಖ್ಯಾತಿಯ ಚಿನ್ನು ಅಲಿಯಾಸ್ ಕವಿತಾ ಗೌಡ ಇಲ್ಲಿ ಸಿನಿಮಾ ಒಳಗೆಯೇ ಬರುವ ಸಿನಿಮಾ ಕಥೆಯ ನಾಯಕಿ. ಸಿಕ್ಕ ಅವಕಾಶವನ್ನು ಸಮರ್ಥ ವಾಗಿ ಯೇ ಬಳಸಿಕೊಂಡಿ, ಪ್ರೇಕ್ಷಕರಿಗೆ ಇಷ್ಟವಾಗುತ್ತಾರೆ.

ಹಾಗೆ ನೋಡಿದರೆ ಸಿನಿಮಾ ಮುಖ್ಯ ಆಕರ್ಷಣೆ ನಟಿ‌ ಭಾವನಾ ಮನೆನ್ ಹಾಗೂ ಯುವ ನಟ ರೂಪೇಶ್ ಶೆಟ್ಟಿ. ಯಾಕಂದ್ರೆ ಕಥೆ ರಿವೀಲ್ ಆಗೋದೆ ಇವರಿಬ್ಬರ ಮುಖಾ ಮುಖಿಯೊಂದಿಗೆ.‌ ಮೇಕಿಂಗ್ ಅಂತ ಬಂದಾಗ ಕಥೆಯ ಅಗತ್ಯತೆಯನ್ನು ಪ್ರಾಮಾಣಿಕವಾಗಿ ಪೂರೈಸಿದ್ದಾರೆ ನಿರ್ಮಾಪಕರು. ಅದು ಅವರ ಅನುಭವದ ಜಾಣತನ. ಹಾಗೆಯೇ ಛಾಯಾಗ್ರಹಣ, ಸಂಗೀತ ಸೇರಿದಂತೆ ಸಿನಿಮಾ ಉಳಿದ ಕೆಲಸಗಳು ಅಚ್ಚುಕಟ್ಟಾಗಿ ಮೂಡಿಬಂದಿವೆ. ಮನರಂಜನೆ ನಗಬೇಕು, ಒಂದಷ್ಟು ಹಗುರಾಗಬೇಕು ಅಂತೆಲ್ಲ ಬಯಸುವರಿಗೆ ಇದು ಹೇಳಿ‌ಮಾಡಿಸಿದ ಸಿನಿಮಾ‌ .

Categories
ಸಿನಿ ಸುದ್ದಿ

ಪುನೀತ್-ಪ್ರಭುದೇವ್ ನಾಟ್ಯಕ್ಕೆ ಮುಹೂರ್ತ ಫಿಕ್ಸ್ ! ಡ್ಯಾನ್ಸ್ ಕಿಂಗ್ಸ್ ಗಳ ನೃತ್ಯಾರ್ಭಟಕ್ಕೆ ಕಣ್ಣರಳಿಸಿ ನಿಂತಾಯ್ತು ಫ್ಯಾನ್ಸ್ ಮತ್ತು ಬಿಗ್ ಸ್ಕ್ರೀನ್ಸ್ !

ಪವರ್ ಸ್ಟಾರ್ ಮತ್ತು ಪ್ರಭುದೇವ್ ಗಾರು ಫಾರ್ ದಿ ಫಸ್ಟ್ ಟೈಮ್ ಜೊತೆಯಾಗಿದ್ದಾರೆ. ಲಕ್ಕಿಮ್ಯಾನ್ ಚಿತ್ರದ ಹಾಡೊಂದಕ್ಕೆ ಇಬ್ಬರು ಸೇರಿ ಹೆಜ್ಜೆ ಹಾಕಿದ್ದಾರೆ ಎನ್ನುವ ಸುದ್ದಿಯನ್ನು ನಿಮ್ಮ ಮುಂದೆ ಪ್ರಸ್ತಾಪ ಮಾಡಿದ್ವಿ. ಪವರ್ ಹಾಗೂ ಪ್ರಭು ಡ್ಯಾನ್ಸಿಂಗ್ ಫ್ಲೋರ್ ನಲ್ಲಿ ನಿಂತಂತಹ ದೃಶ್ಯಾವಳಿಗಳನ್ನು ನಿಮ್ಮ ಜೊತೆ ಹಂಚಿಕೊಂಡಿದ್ವಿ. ಇದೀಗ, ಅವರಿಬ್ಬರು ಒಟ್ಟಾಗಿ ಕುಣಿದು ಕುಪ್ಪಳಿಸಿದ ಹಾಡಿನ ಸಿನಿಮಾ ಬಿಡುಗಡೆಗೆ ಸಜ್ಜಾಗಿರುವ ಧಮಾ ಕೇ ದಾರ್ ಸಮಾಚಾರವನ್ನು ಹೊತ್ತು ತಂದಿದ್ದೇವೆ. ಅಚ್ಚರಿ ಅಂದರೆ, ಪವರ್ ಸ್ಟಾರ್ ಹಾಗೂ ಪ್ರಭುದೇವ್ ಗಾರು ಒಟ್ಟಾಗಿ ಕುಣಿದಿದ್ದು ವರನಟ ಡಾ. ರಾಜ್ ಕುಮಾರ್ ಮೇಲೆ ರಚಿಸಿರುವ ಹಾಡಿಗೆ.


ಇಂಡಿಯನ್ ಮೈಕಲ್ ಜಾಕ್ಸನ್ ಅಂತಾನೇ ಕರೆಸಿಕೊಳ್ಳುವ ಡ್ಯಾನ್ಸ್ ಕಿಂಗ್ ಪ್ರಭುದೇವ ಹಾಗೂ ಸ್ಯಾಂಡಲ್ ವುಡ್ ಡ್ಯಾನ್ಸ್ ಕಿಂಗ್ ಪುನೀತ್ ರಾಜ್ ಕುಮಾರ್ ಇಬ್ಬರು ಸ್ಕ್ರೀನ್ ಶೇಕ್ ಮಾಡಬೇಕು, ಹಾಗೆಯೇ ಲೆಗ್ ಶೇಕ್ ಮಾಡಿ ಧೂಳೆಬ್ಬಿಸೋದನ್ನು ಕಣ್ತುಂಬಾ ನೋಡಬೇಕು ಎಂಬುದು ಕೋಟ್ಯಾಂತರ ಅಭಿಮಾನಿಗಳ ಕನಸಾಗಿತ್ತು. ಆ ದಿವ್ಯ ಕನಸನ್ನು ಸಾಕಾರ ಮಾಡಲೆಂದೇ ಡ್ಯಾನ್ಸ್ ಕಿಂಗ್ ಗಳು ಇಬ್ಬರು ಒಂದಾಗಿದ್ದರು. ಒಟ್ಟಿಗೆ ಹೆಜ್ಜೆ ಹಾಕಿ ಫ್ಯಾನ್ಸ್ ಗೆ ಸಪ್ರೈಸ್ ಕೊಟ್ಟಿದ್ದರು. ಇನ್ನೇನು ಕೆಲವೇ ತಿಂಗಳುಗಳಲ್ಲಿ ಪವರ್ ಹಾಗೂ ಪ್ರಭು ಜೊತೆಯಾಗಿ ನರ್ತಿಸಿರುವ ಹಾಡು ಸಿನಿಮಾದ ಜೊತೆ ಅಭಿಮಾನಿಗಳ ಮುಂದೆ ಬರಲು ಸಜ್ಜಾಗುತ್ತಿತ್ತು. ಅಷ್ಟರಲ್ಲಿ ಭಗವಂತ ನಮ್ಮ ಅಪ್ಪುನಾ ಕಿತ್ಕೊಂಡು ಬಿಟ್ಟ.

ಇಡೀ ಕರ್ನಾಟಕಕ್ಕೆ ಪ್ರಿಯವಾಗಿದ್ದ ಬೆಟ್ಟದ ಹೂ ವನ್ನು ಭಗವಂತ ಇಷ್ಟು ಬೇಗ ಕಿತ್ಕೊಳ್ತಾನೆ, ದೊಡ್ಮನೆಯನ್ನು ಅನಾಥ ಮಾಡುತ್ತಾನೆ, ಗಂಧದಗುಡಿಯ ಮಂದಿಯನ್ನು ಕಣ್ಣೀರಲ್ಲಿ ಕೈತೊಳೆಸುತ್ತಾನೆ, ಬೆಳ್ಳಿತೆರೆ ‘ಪವರ್’ ಕಳೆದುಕೊಳ್ಳುವಂತೆ ಮಾಡ್ತಾನೆ, ಅಭಿಮಾನಿ ದೇವರುಗಳು ಎದಿಹೊಡೆದುಕೊಂಡು ಸಾಯುವಂತೆ ಮಾಡ್ತಾನೆ,
ಅಪ್ಪು‌ ಇಲ್ಲದ ಹೊತ್ತಲ್ಲಿ ಪುನೀತ್ ಹಾಗೂ ಪ್ರಭು ಒಟ್ಟಿಗೆ ಹೆಜ್ಜೆ ಹಾಕಿರುವ ಸಿನಿಮಾ ನೋಡುವಂತ ಪರಿಸ್ಥಿತಿ ನಿರ್ಮಾಣ ಮಾಡುತ್ತಾನೆ ಅಂತ ಯಾರೊಬ್ಬರು ದುಸ್ವಪ್ನದಲ್ಲಿ ಯೋಚಿಸಿರಲಿಲ್ಲ ಬಿಡಿ. ಆದರೆ, ಧುರ್ವಿದಿಯ ಆಟ
ಎಲ್ಲವನ್ನೂ ತಲೆ ಕೆಳಗಾಗಿ ಮಾಡ್ತು, ಭಕ್ತ ಪ್ರಹ್ಲಾದನನ್ನೇ ಕಳೆದುಕೊಳ್ಳುವಂತಾಯ್ತು. ಅಪ್ಪು ದೈಹಿಕವಾಗಿ ನಮ್ಮೊಡನೆ ಇಲ್ಲದ ಈ ಹೊತ್ತಲ್ಲಿ ಭಾರತೀಯ ಚಿತ್ರರಂಗದ ಡ್ಯಾನ್ಸ್ ಕಿಂಗ್ ಜೊತೆ ಕುಣಿದು ಕುಪ್ಪಳಿಸಿದ
ಹಾಗೂ ವಿಶೇಷ ಪಾತ್ರದಲ್ಲಿ ಅಭಿನಯಿಸಿದ ಸಿನಿಮಾ ಲಕ್ಕಿಮ್ಯಾನ್ ತೆರೆಗೆ ಬರೋದಕ್ಕೆ ತಯ್ಯಾರಾಗ್ತಿದೆ.

ಲಕ್ಕಿಮ್ಯಾನ್ ಡ್ಯಾನ್ಸ್ ಕಿಂಗ್ ಪ್ರಭುದೇವ ಸಹೋದರ ನಾಗೇಂದ್ರ ಪ್ರಸಾದ್ ನಿರ್ದೇಶನ ಮಾಡಿರುವಂತಹ ಚಿತ್ರ. ಡಾರ್ಲಿಂಗ್ ಕೃಷ್ಣ ನಾಯಕನಟರಾಗಿರೋ ಲಕ್ಕಿಮ್ಯಾನ್ ಗೆ ಪವರ್ ಸ್ಟಾರ್ ಹಾಗೂ ಪ್ರಭುದೇವ್
ಸಾಥ್ ಕೊಟ್ಟಿದ್ದರು. ಅಭಿಮಾನಿಗಳ ಕನಸನ್ನು ಈಡೇರಿಸಬೇಕು ಅಂತಾನೇ ಒಟ್ಟಿಗೆ ಕುಣಿಯೋದಕ್ಕೆ ಅಣ್ಣಾ ಬಾಂಡ್ ಅಪ್ಪು ಹಾಗೂ ಡ್ಯಾನ್ಸ್ ಬಾಂಡ್ ಪ್ರಭುದೇವ್ ಒಪ್ಪಿಕೊಂಡಿದ್ದರು. ಕಳೆದ ಒಂದು ತಿಂಗಳ ಹಿಂದಷ್ಟೇ ಬೆಂಗಳೂರಿನ ಎಚ್ ಎಂ ಟಿ ಫ್ಯಾಕ್ಟ್ರಿ ಯ ಆವರಣದಲ್ಲಿ ಚಿತ್ರೀಕರಣ ನಡೆದಿತ್ತು. ಅದ್ದೂರಿ ಸೆಟ್ ನಲ್ಲಿ ಪವರ್ ಹಾಗೂ ಪ್ರಭು ನಾಟ್ಯನಟರಾಜ ಧರೆಗಿಳಿದು ಬರುವಂತೆ ನರ್ತಿಸಿದ್ದರು.

ಇವರಿಬ್ಬರು ಒಂದೇ ಸೆಟ್ ನಲ್ಲಿ ಕಾಣಿಸಿಕೊಂಡು ಧೂಳೆಬ್ಬಿಸಿದನ್ನು ನೋಡಿದ ಫ್ಯಾನ್ಸ್ ಆಗಲೇ ಹೋಗಿ ಅಣ್ಣಮ್ಮ ದೇವರ ಮುಂದೆ ಜೋಡುಗಾಯಿ ಹೊಡೆದು ಬಂದಿದ್ದರು. ಡ್ಯಾನ್ಸ್ ಕಿಂಗ್ಸ್ ಗಳಿಗೆ ಯಾರ ದೃಷ್ಟಿಯೂ ತಾಗದಿರಲೆಂದು ಬೇಡಿಕೊಂಡಿದ್ದರು. ಆದರೆ, ಕ್ರೂರಿ ವಿಧಿಗೆ ಬೇಡಿಕೆಯ ವ್ಯಾಲ್ಯೂ ಅರ್ಥವಾಗಲಿಲ್ಲ. ಬಹುಷಃ ಆ ವಿಧಿ ಈಗ ಪಶ್ಚಾತ್ತಾಪ ಪಡುತಿರುತ್ತಾನೆ.
ದೊಡ್ಮನೆಯ ನಂದಾದೀಪ, ಕೋಟ್ಯಾಂತರ ಜನರ ಪಾಲಿನ ದೇವರನ್ನು ಕಿತ್ಕೊಳ್ಳಬಾರದಿತ್ತೆಂದು ಮರುಕ ಪಡುತ್ತಿರುತ್ತಾನೆ.

ಹೌದು, ಯಮಧರ್ಮರಾಯನಿಗೆ ದೊಡ್ಮನೆ ರಾಜಕುಮಾರನ ಬೆಲೆ ಅಪ್ಪು ಪಾರ್ಥೀವ ಶರೀರರವನ್ನು ಸಾರ್ವಜನಿಕ ದರ್ಶನಕ್ಕೀಟ್ಟಾಗಲೇ ಗೊತ್ತಾಗಿರುತ್ತೆ. ಬಹುಷಃ ಕರುಣೆ ಇಲ್ಲದ ಕ್ರೂರಿ ವಿಧಿಯ ಕಣ್ಣಲ್ಲೂ ಕಣ್ಣೀರು ಬಂದಿರುತ್ತೆ. ಹಾಗಂತ ನಮ್ಮ ನಟಸಾರ್ವಭೌಮನನ್ನು ಕಿತ್ಕೊಂಡ ವಿಧಿ ಮೇಲೆ ಯಾವತ್ತಿಗೂ ಕರುಣೆ ಬರೋದಿಲ್ಲ‌ ಬಿಡಿ. ಕ್ಷಣ ಕ್ಷಣಕ್ಕೂ ವಿಧಿಗೆ ಶಾಪ ಹಾಕುತ್ತಾ, ರಾಜರತ್ನನನ್ನು ಜೀವಂತವಾಗಿಸುವ ಕೆಲಸ ಮಾಡೋಣ.

ಪವರ್ ಇಲ್ಲದ ದಿನಗಳಲ್ಲಿ ಬಿಡುಗಡೆಯಾಗ್ತಿರುವ, ಅಣ್ಣಾವ್ರ ಮೇಲೆ ರಚನೆಯಾಗಿರುವ ಲಕ್ಕಿಮ್ಯಾನ್ ಚಿತ್ರದ ಹಾಡನ್ನು ಹಾಗೂ ಸಿನಿಮಾವನ್ನು ಕೈಹಿಡಿಯೋಣ. ಲಕ್ಕಿಮ್ಯಾನ್ ಚಿತ್ರ
ಪರ್ಸಾ ಪಿಕ್ಚರ್ಸ್ ಲಾಂಛನದಲ್ಲಿ ಮೂಡಿಬಂದಿದೆ. ಸಾಧು ಕೋಕಿಲರ ಸ್ಟುಡಿಯೋದಲ್ಲಿ ಡಬ್ಬಿಂಗ್ ಕಾರ್ಯ ನಡೆಯುತ್ತಿದೆ.


ಡಾರ್ಲಿಂಗ್ ಕೃಷ್ಣ ಜೊತೆ ನಾಯಕಿಯಾಗಿ ಸಂಗೀತ ಶೃಂಗೇರಿ ಹಾಗೂ ರೋಶನಿ ಪ್ರಕಾಶ್ ಕಾಣಿಸಿಕೊಂಡಿದ್ದಾರೆ. ಆರ್ಯ, ರಂಗಾಯಣ ರಘು, ಸಾಧುಕೋಕಿಲ ನಾಗಭೂಷಣ್, ಸುಂದರ್ ರಾಜ್, ರೋಶಿನಿ ಪ್ರಕಾಶ್, ಸುದಾ ಬೆಳವಾಡಿ, ಮಾಳವಿಕ. ಮುಂತಾದ ಕಲಾವಿದರು ನಟಿಸಿದ್ದಾರೆ.


ಪಿ.ಆರ್. ಮೀನಾಕ್ಷಿ ಸುಂದರಮ್ ಹಾಗೂ ಸುಂದರ ಕಾಮರಾಜ್ ನಿರ್ಮಾಣದ ಈ ಚಿತ್ರಕ್ಕೆ ಜೀವಾ ಶಂಕರ್ ಛಾಯಾಗ್ರಹಣವಿದ್ದು, ಡಿಸೆಂಬರ್ ಅಥವಾ ಜನವರಿ ವೇಳೆಗೆ ಲಕ್ಕಿಮ್ಯಾನ್ ಚಿತ್ರವನ್ನು ತೆರೆಗೆ ತರುವ ಯೋಜನೆ ಚಿತ್ರ ತಂಡಕ್ಕಿದೆ.

ವಿಶಾಲಾಕ್ಷಿ, ಎಂಟರ್ ಟೈನ್ಮೆಂಟ್ ಬ್ಯೂರೋ ಸಿನಿಲಹರಿ

Categories
ಸಿನಿ ಸುದ್ದಿ

‌ಬೆಂಗಳೂರಲ್ಲಿ ಆರ್‌ಆರ್‌ಆರ್ ಚಿತ್ರತಂಡ! ಪ್ರಚಾರ ಕಾರ್ಯಕ್ಕೆ ಬರ್ತಾರೆ ರಾಜಮೌಳಿ ಅಂಡ್‌ ಟೀಮ್!!

ಸದ್ಯ ಭಾರತೀಯ ಚಿತ್ರರಂಗದಲ್ಲಿ ಆರ್‌ಆರ್‌ಆರ್‌ ಜೋರು ಸದ್ದು ಮಾಡುತ್ತಿರುವ ಚಿತ್ರ. ಇದಕ್ಕೆ ಕಾರಣ, ರಾಜಮೌಳಿ ನಿರ್ದೇಶನದ ಚಿತ್ರ. ಅಷ್ಟೇ ಅಲ್ಲ, ಜೂ.ಎನ್‌ಟಿಆರ್‌,ರಾಮ್‌ ಚರಣ್‌, ಅಜಯ್‌ ದೇವಗನ್‌ ಮತ್ತು ಆಲಿಯಾ ಭಟ್‌ ಸೇರಿದಂತೆ ಇತರೆ ಸ್ಟಾರ್‌ ನಟರು ನಟಿಸಿರೋದು. ಇದಷ್ಟೇ ಅಲ್ಲ, ಇದು ಕನ್ನಡದಲ್ಲೂ ರಿಲೀಸ್‌ ಆಗುತ್ತಿರುವುದು ಮತ್ತೊಂದು ವಿಶೇಷ. ಹೌದು, ಆರ್‌ಆರ್‌ಆರ್‌ ಬಹುನಿರೀಕ್ಷೆಯ ಸಿನಿಮಾ. ಜನರು ಸಿನಿಮಾ ನೋಡಲು ಕಾತುರದಲ್ಲಿದ್ದಾರೆ

. ಸಿನಿಮಾ ಬಿಡುಗಡೆ ಮುನ್ನವೇ ನಿರ್ದೇಶಕ ರಾಜಮೌಳಿ ಮುಂಬೈಗೆ ಹೋಗಿ, ಅಲ್ಲಿ ಸಲ್ಮಾನ್‌ ಖಾನ್‌ ಅವರನ್ನು ಭೇಟಿ ಮಾಡಿದ್ದರು. ಅದು ಸಾಕಷ್ಟು ಸುದ್ದಿಯಾಗಿತ್ತು. ರಾಜಮೌಳಿ ನಿರ್ದೇಶನವೆಂದರೆ, ಒಂದಷ್ಟು ಕುತೂಹಲ ಇದ್ದೇ ಇರುತ್ತದೆ. ಈ ಸಿನಿಮಾದ ಮೇಲೂ ಸಾಕಷ್ಟು ನಿರೀಕ್ಷೆ ಇದೆ. ಆರ್‌ಆರ್‌ಆರ್‌ ಸಿನಿಮಾದ ಪ್ರಚಾರ ಕಾರ್ಯ ಎಲ್ಲೆಡೆ ಹಬ್ಬಿದೆ. ಈಗ ಬೆಂಗಳೂರಿಗೂ ಚಿತ್ರತಂಡ ಭೇಟಿ ಕೊಡುತ್ತಿದೆ ಅನ್ನುವುದು ವಿಶೇಷತೆಗಳಲ್ಲೊಂದು. ನವೆಂಬರ್‌ 26ರಂದು ಬೆಂಗಳೂರಿಗೆ ಆರ್‌ಆರ್‌ಆರ್‌ ಸಿನಿಮಾ ತಂಡ ಆಗಮಿಸಲಿದ್ದು, ಚಿತ್ರದ ಪ್ರಚಾರ ಮಾಡಲಿದೆ.

ಆರ್‌ಆರ್‌ಆರ್‌ ಐದು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ. ತೆಲುಗು, ತಮಿಳು, ಕನ್ನಡ, ಹಿಂದಿ, ಮಲಯಾಳಂನಲ್ಲೂ ರಿಲೀಸ್‌ ಆಗುತ್ತಿದೆ. ಕನ್ನಡಕ್ಕೂ ಡಬ್ ಆಗಿ ಈ ಚಿತ್ರ ತೆರೆಗೆ ಬರುತ್ತಿರುವುದು ವಿಶೇಷ. ಹಾಗಾಗಿಯೇ ಚಿತ್ರತಂಡ ‘ಆರ್‌ಆರ್‌ಆರ್‌’ ಸಿನಿಮಾದ ಪ್ರಚಾರ ಕಾರ್ಯವನ್ನು ಬೆಂಗಳೂರಿನಲ್ಲಿ ಮಾಡುತ್ತಿದ್ದಾರೆ.
ಡಿಸೆಂಬರ್‌ ಮೊದಲ ವಾರದಲ್ಲಿ ಆರ್‌ಆರ್‌ಆರ್ ಚಿತ್ರದ ಟ್ರೇಲರ್‌ ರಿಲೀಸ್‌ ಆಗಲಿದೆ. ಈಗಾಗಲೇ ಚಿತ್ರದ ಟೀಸರ್‌ಗಳು ಮತ್ತು ಹಾಡುಗಳು ಜೋರಾಗಿಯೇ ಸೌಂಡು ಮಾಡಿವೆ. ಆರ್‌ಆರ್‌ಆರ್ ಟ್ರೇಲರ್‌ ಕನ್ನಡದಲ್ಲೂ ರಿಲೀಸ್ ಆಗಲಿದೆ. ಚಿತ್ರದ ಹಾಡುಗಳು ಕನ್ನಡದಲ್ಲಿ ರಿಲೀಸ್‌ ಆಗಿ ಮೆಚ್ಚುಗೆ ಪಡೆದಿವೆ.

Categories
ಸಿನಿ ಸುದ್ದಿ

ಗೋಲ್ಡನ್‌ಸ್ಟಾರ್ ಪುತ್ರ ವಿಹಾನ್‌ಗೆ ಎಸ್‌ಪಿಬಿ’ ಆಗುವ ಕನಸು ! ಕ್ಯಾಮೆರಾ ಮುಂದೆ ಬಂದು ವಿಹಾನ್’ ಸಖತ್ತಾಗಿ ಹೇಳಿದ್ದಿಷ್ಟು !

ಗೋಲ್ಡನ್ ಸ್ಟಾರ್ ಗಣೇಶ್ ಸನ್ ವಿಹಾನ್‌ಗೆ ದಿವ್ಯ ಕನಸುಗಳಿವೆ. ಆದರೆ, ಎರಡೇ ಎರಡೇ ಕನಸುಗಳನ್ನು ಕ್ಯಾಮೆರಾ ಮುಂದೆ ಹೇಳಿಕೊಂಡಿದ್ದಾನೆ. ಅದರಲ್ಲಿ ಮೊದಲನೆಯ ಕನಸು ಸಂಗೀತ ಲೋಕದ ಸ್ವರ ಸಾಮ್ರಾಟ, ಗಾನ ಗಾರುಡಿಗ ಎಸ್‌ಪಿಬಿಯವರಂತಾಗಬೇಕು ಎನ್ನುವುದು. ಎರಡನೆಯದು ಇಳೆಯರಾಜ ಆಗ್ಬೇಕು ಎನ್ನುವ ಮಹದಾಸೆ. ಈ ದಿವ್ಯ ಕನಸು ಸದ್ಯಕ್ಕೆ ಸಖತ್' ಸಿನ್ಮಾದ ರೀಲ್‌ಗಷ್ಟೇ ಸೀಮಿತವಾಗಿರಬಹುದು. ಆದರೆ, ಮನಸ್ಸು ಮಾಡಿದರೆ ಯಾವುದು ಅಸಾಧ್ಯವಲ್ಲ ಅಲ್ಲವೇ. ಅಷ್ಟಕ್ಕೂ, ವಿಹಾನ್ ನಾನ್ ಎಸ್.ಪಿ ಬಾಲು ಆಗ್ಬೇಕು, ಇಳೆಯರಾಜ ಆಗ್ಬೇಕು ಅಂತ ಹೇಳಿದ್ದುಸಖತ್’ ಸಿನಿಮಾಗಾಗಿ. ಹೌದು, `ಸಖತ್’ ಸಿನ್ಮಾ ಬಿಡುಗಡೆಗೆ ಸಜ್ಜಾಗಿದ್ದು ಜೂನಿಯರ್ ಬಾಲು ಪಾತ್ರದ ಟೀಸರ್ ಹೊರಬಿದ್ದಿದೆ. ಅದರಲ್ಲಿ ಎಸ್‌ಪಿಬಿ ಹಾಗೂ ಇಳೆಯರಾಜ ಆಗುವ ಸಂಭಾಷಣೆ ರಿವೀಲ್ ಆಗಿದೆ

ಸಖತ್' ಗೋಲ್ಡನ್‌ಸ್ಟಾರ್ ಗಣೇಶ್ ಅಭಿನಯದ ಮೋಸ್ಟ್ ಎಕ್ಸ್ ಪೆಕ್ಟೆಡ್ ಚಿತ್ರ. ಸಿಂಪಲ್ ಸುನಿ ಹಾಗೂ ಗಣಿ ಎರಡನೇ ಭಾರಿ ಒಂದಾಗಿ ಮಾಡಿರುವ ಸಿನಿಮಾ. ಬೆಳ್ಳಿತೆರೆ ಮೇಲೆ ಚಮಕ್ ಮಾಡಿ ಸಿನಿರಸಿಕರ ಹೃದಯ ಗೆದ್ದಿದ್ದ ಈ ಜೋಡಿ ಮತ್ತೆ ಒಂದಾಗಿ ಸಖತ್’ ಮಾಡಿರುವ ಕಾರಣಕ್ಕೆ ಚಿತ್ರದ ಮೇಲಿರುವ ನಿರೀಕ್ಷೆ ದುಪ್ಪಟ್ಟಾಗಿದೆ. ಮಳೆ ಹುಡುಗನ ನಯಾ ಲುಕ್-ಗೆಟಪ್‌ನ ಜೊತೆಗೆ ಪಾತ್ರದ ಮೇಲೆ ಕೂತೂಹಲ ಗರಿಗೆದರಿದೆ. ಗಣಿ ನಿಜಕ್ಕೂ ಕುರುಡನ ಪಾತ್ರ ಮಾಡಿದ್ದಾರಾ? ಅಥವಾ ಟೀಸರ್‌ನಲ್ಲಿ ಕುರುಡನಂತೆ ಅಭಿನಯಿಸಿ ಸಿಲ್ವರ್‌ಸ್ಕ್ರೀನ್ ಮೇಲೆ ಬಂದಾಗ ಚಮಕ್ ಕೊಡ್ತಾರಾ ಎನ್ನುವ ಸಣ್ಣದೊಂದು ಸಂಶಯ ಎಲ್ಲರನ್ನೂ ಕೌತುಕದಿಂದ ಕಾಯುವಂತೆ ಮಾಡಿದೆ. ಈ ಮಧ್ಯೆ ಬಿಡುಗಡೆಗೊಂಡಿರುವ ಗೋಲ್ಡನ್ ಸನ್ ಟೀಸರ್ ನಿರೀಕ್ಷೆ ಹೆಚ್ಚಿಸಿದೆ. ಜೂನಿಯರ್ ಬಾಲು ಪಾತ್ರ ನೋಡುಗರ ಗಮನ ಸೆಳೆಯುತ್ತಿದೆ.

ಜೂನಿಯರ್ ಬಾಲು ಪಾತ್ರಕ್ಕೆ ವಿಹಾನ್ ಜೀವತುಂಬಿದ್ದಾನೆ. ಅಂದ್ಹಾಗೇ, ವಿಹಾನ್ ಗಂಧದಗುಡಿಯ ಗೋಲ್ಡನ್‌ಸ್ಟಾರ್ ಪುತ್ರ. ಚಿನ್ನದ ಸ್ಪೂನ್ ಬಾಯಲ್ಲಿಟ್ಟುಕೊಂಡೇ ಧರೆಗಿಳಿದಿರೋ ವಿಹಾನ್ ಸಿಕ್ಕಾಪಟ್ಟೆ ಚೂಟಿ ಅಷ್ಟೇ ಟ್ಯಾಲೆಂಟೆಡ್. ಅಪ್ಪ-ಅಮ್ಮನಂತೆ ಅದ್ಬುತ ಪ್ರತಿಭೆಯುಳ್ಳ ಹಾಗೂ ಹೈಪರ್ ಆಕ್ಟೀವ್ ಇರುವ ವಿಹಾನ್ ಬಾಲ್ಯದಿಂದಲೇ ಮುಖಕ್ಕೆ ಬಣ್ಣ ಹಚ್ಚಿಕೊಂಡು ಬಣ್ಣದ ಲೋಕದಲ್ಲಿ ಮೆರೆಯುತ್ತಿದ್ದಾರೆ. ತನ್ನಂತೆ ತನ್ನ ಮಗ ಮಾಯಲೋಕದಲ್ಲಿ ಮಿಂಚಬೇಕು ಎನ್ನುವ ಕನಸೊತ್ತಿರುವ ಗಣಿ ತನ್ನ ಅಭಿನಯದ ಸಿನಿಮಾಗಳ ಮೂಲಕ ಮಗನನ್ನು ಬೆಳ್ಳಿತೆರೆಗೆ ಪರಿಚಯಿಸುತ್ತಿದ್ದಾರೆ. ಜೂನಿಯರ್ ಗೋಲ್ಡನ್ ಸ್ಟಾರ್ ತಂದೆಯಂತೆ ಬಣ್ಣದ ಲೋಕದಲ್ಲಿ ಮಿಂಚೋದಕ್ಕೆ ಒಂದೊಂದು ಹೆಜ್ಜೆ ಇಟ್ಟುಕೊಂಡು ಮುನ್ನಡೆಯುತ್ತಿದ್ದಾರೆ.‌

ಹೌದು, ಅಪ್ಪನ ಗೀತಾ' ಚಿತ್ರದ ಮೂಲಕ ಬಿಗ್‌ಸ್ಕ್ರೀನ್‌ಗೆ ಲಗ್ಗೆ ಇಟ್ಟ ವಿಹಾನ್, ಜೂನಿಯರ್ ಗೋಲ್ಡನ್ ಸ್ಟಾರ್ ಆಗಿಗೀತಾ’ ಸಿನಿಮಾದಲ್ಲಿ ನಟಿಸಿ ಸೈ ಎನಿಸಿಕೊಂಡರು. ಅಪ್ಪನ ಬಾಲ್ಯದ ಪಾತ್ರಕ್ಕೆ ಬಣ್ಣ ಹಚ್ಚಿದ ವಿಹಾನ್ ತನ್ನ ಪಾತ್ರಕ್ಕೆ ತಾನೇ ಡಬ್ಬಿಂಗ್ ಮಾಡಿಕೊಟ್ಟು ಅಪ್ಪನಿಂದ ಮಾತ್ರವಲ್ಲ ಪ್ರೇಕ್ಷಕ ಮಹಾಷಯರಿಂದ ಸೈ ಎನಿಸಿಕೊಂಡಿದ್ದ.

ಇದೀಗ ತಂದೆಯ ಬಹುನಿರೀಕ್ಷಿತ ಸಖತ್' ಚಿತ್ರದಲ್ಲಿ ಜೂನಿಯರ್ ಗಣಪನಾಗಿ ಅಬ್ಬರಿಸಿದ್ದಾನೆ. ಈ ಚಿತ್ರಕ್ಕೂ ವಿಹಾನ್ ಡಬ್ಬಿಂಗ್ ಮಾಡಿದ್ದು, ಮಗನ ಅಭಿನಯಕ್ಕೆ ಹಾಗೂ ಮಾತಿಗೆ ಗೋಲ್ಡನ್ ಸ್ಟಾರ್ ಗಣೇಶ್ ಅವ್ರೇ ಫಿದಾ ಆಗಿದ್ದಾರೆ. ರಿಲೀಸ್ ಆಗಿ ಯೂಟ್ಯೂಬ್‌ನಲ್ಲಿ ಕುಣಿಯುತ್ತಿರುವ ಟೀಸರ್ ನೋಡಿ ಗಣಿ ದಿಲ್ ಖುಷ್ ಆಗಿದ್ದಾರೆ. ಇನ್ನೇನಿದ್ರು ಅಭಿಮಾನಿ ದೇವರುಗಳು ಥಿಯೇಟರ್‌ಗೆ ಬಂದು ಸಿನಿಮಾ ನೋಡಿ ಅಪ್ಪ-ಮಗನಸಖತ್’ ಸಿನಿಮಾ ಎಷ್ಟು ಸಖತ್ತಾಗಿದೆ ಅನ್ನೋದನ್ನು ತಿಳಿಸಬೇಕು.

ಎಂಟರ್‌ಟೈನ್ಮೆಂಟ್ ಬ್ಯೂರೋ ಸಿನಿಲಹರಿ

Categories
ಸಿನಿ ಸುದ್ದಿ

ರಾಷ್ಟ್ರ ಪ್ರಶಸ್ತಿ ವಿಜೇತ ಚಿತ್ರ ಅಕ್ಷಿ ಡಿಸೆಂಬರ್‌ 3ರಂದು ರಾಜ್ಯಾದ್ಯಂತ ಬಿಡುಗಡೆ…

ರಾಷ್ಟ್ರಪ್ರಶಸ್ತಿ ಪಡೆದುಕೊಂಡ ಕನ್ನಡದ “ಅಕ್ಷಿ” ಚಿತ್ರ ಡಿಸೆಂಬರ್‌ 3ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಶಾಲಿನಿ ಆರ್ಟ್ಸ್‌ ಮೂಲಕ ಜಾಕ್‌ ಮಂಜು ಅವರು ಈ ಚಿತ್ರವನ್ನು ವಿತರಣೆ ಮಾಡುತ್ತಿದ್ದಾರೆ…

ಕಲಾದೇಗುಲ ಫಿಲಂಸ್​ ಬ್ಯಾನರ್​ನಲ್ಲಿ ಸಿದ್ಧವಾಗಿರುವ ಅಕ್ಷಿ ಸಿನಿಮಾಗೆ ಪಿಆರ್​ಕೆ ಸಂಸ್ಥೆ ಬೆನ್ನೆಲುಬಾಗಿ ನಿಂತಿತ್ತು. ಹಾಗಾಗಿ ಚಿತ್ರತಂಡ ಇತ್ತೀಚೆಗೆ ಪುನೀತ್ ಭಾವಚಿತ್ರಕ್ಕೆ ನಮಿಸುವ ಮೂಲಕ ಚಿತ್ರದ ಕುರಿತು ಒಂದಷ್ಟು ಮಾತು ಹಂಚಿಕೊಂಡಿತು.
ಕಲಾದೇಗುಲ ಶ್ರೀನಿವಾಸ್ ಮಾತನಾಡಿ, ”ಅಕ್ಟೋಬರ್ ತಿಂಗಳ ಎರಡನೇ ವಾರದಲ್ಲಿ ನಾವು ಅಪ್ಪು ಅವರನ್ನು ಭೇಟಿಯಾಗಿದ್ದೆವು, ನಾನು ಸಿನಿಮಾ ನೋಡಬೇಕು ಎಂದು ಅಪ್ಪು ಅವರು ಆಸೆ ಪಟ್ಟರು. ಅಂತೆಯೇ ನಾವು ಅವರಿಗೆ ಖಾಸಗಿ ಲಿಂಕ್ ಒಂದನ್ನು ನೀಡಿದೆವು. ಆದರೆ, ಅವರು ಸಿನಿಮಾ ನೋಡಿದ್ದಾರೋ ಇಲ್ಲವೋ ಗೊತ್ತಿಲ್ಲ. ನನ್ನ ಮನಸ್ಸು ಹೇಳುತ್ತಿದೆ ಅವರು ಸಿನಿಮಾ ನೋಡಿದ್ದಾರೆಂದು. ಒಂದೊಮ್ಮೆ ಅವರು ನೋಡಿಲ್ಲವಾದರೆ ಅವರು ದಾನ ಮಾಡಿರುವ ಕಣ್ಣುಗಳಾದರೂ ‘ಅಕ್ಷಿ’ ಸಿನಿಮಾವನ್ನು ನೋಡುತ್ತವೆ” ಎಂದು ಭಾವುಕರಾದರು ಕಲಾದೇಗುಲ ಶ್ರೀನಿವಾಸ್.


ನಿರ್ದೇಶಕ ಮನೋಜ್ ಕುಮಾರ್ ಮಾತನಾಡಿ, ಈ ಕಥೆ ಹುಟ್ಟಿದ್ದಕ್ಕೆ ಕಾರಣವೇ ರಾಜ್‌ಕುಮಾರ್‌ ಅವರು. ನನ್ನ ಊರು ಹಾಸನ ಜಿಲ್ಲೆಯ ಬೇಲೂರು. ‘ವರನಟ’ ರಾಜ್‌ಕುಮಾರ್‌ ಅವರು ನಿಧನರಾದ ದಿನಗಳಲ್ಲಿ ನಾನು ಆಗ ಊರಿನಲ್ಲಿದ್ದೆ. ಅವರು ಇನ್ನಿಲ್ಲ ಅಂತ ಜನರು ದುಃಖ ಪಡುತ್ತಿದ್ದ ಹೊತ್ತಲೇ ಅವರು, ಕಣ್ಣನ್ನು ದಾನ ಮಾಡಿದ್ರಂತೆ ಅಂತ ಅಚ್ಚರಿ ವ್ಯಕ್ತಪಡಿಸುತ್ತಿದ್ರು. ಆ ಸಂಬಂಧವಾಗಿ ಸಾಕಷ್ಟು ಸುದ್ದಿಗಳು ಬಂದಿದ್ದವು. ಅದು ನನಗೆ ಒಂಥರ ಕಾಡತೊಡಗಿತು. ನೇತ್ರದಾನ ಅನ್ನೋದು ಹೇಗೆ ಇನ್ನೊಬ್ಬರ ಬದುಕಲ್ಲಿ ಬೆಳಕು ನೀಡುತ್ತದೆ ಅಂತ ಕುತೂಹಲ ಮೂಡಿಸಿತು. ಅದನ್ನೇ ಇಟ್ಟುಕೊಂಡು ನಾನು ಈ ಕಥೆ ಬರೆದೆ. ಮುಂದೆ ಶ್ರೀನಿವಾಸ್‌ ಅವರು ಒಂದೊಳ್ಳೆಯ ಸಿನಿಮಾ ಮಾಡೋಣ ಅಂತ ಹೊರಟಾಗ ಅವರಿಗೆ ಈ ಕಥೆ ಹೇಳಿದೆ. ಅವರಿಗೂ ಇಷ್ಟ ಆಯ್ತು. ಇದೀಗ ಸಿನಿಮಾ ಆಗಿ ಪ್ರಶಸ್ತಿಯನ್ನೂ ಪಡೆದಿದೆʼ ಎನ್ನುತ್ತಾರೆ.


ಈ ಸಿನಿಮಾವನ್ನು ವಿತರಣೆ ಮಾಡುತ್ತಿರುವ ಜಾಕ್ ಮಂಜು, ”ನನಗೆ ಸಿನಿಮಾ ಇಷ್ಟವಾಯಿತು, ಈ ಸಿನಿಮಾವನ್ನು ಹೆಚ್ಚಿನ ಜನರಿಗೆ ತೋರಿಸಬೇಕೆಂಬ ಉದ್ದೇಶದಿಂದ ಸಿನಿಮಾ ವಿತರಣೆ ಮಾಡುತ್ತಿದ್ದೇನೆ. ಸಿನಿಮಾ ನೋಡುವಾಗ ನನಗೆ ಡಾ.ರಾಜ್‌ಕುಮಾರ್, ಪುನೀತ್ ರಾಜ್‌ಕುಮಾರ್ ಅವರುಗಳೇ ನೆನಪಾಗುತ್ತಿದ್ದರು. ಈ ಸಿನಿಮಾವನ್ನು ನೋಡಿದ ಬಳಿಕ ನನ್ನ ಮಗನೇ ನನ್ನ ಬಳಿ ಬಂದು ನೇತ್ರದಾನ ಮಾಡುವುದಾಗಿ ಹೇಳಿದ. ಪ್ರಶಸ್ತಿ ವಿಜೇತ ಸಿನಿಮಾಗಳಿಗೆ ಚಿತ್ರಮಂದಿರ ನೀಡಿ ಎಂದು ಕೇಳಿಕೊಳ್ಳುವ ಸ್ಥಿತಿಯಲ್ಲಿ ನಾವಿದ್ದೇವೆ. ಕಮರ್ಷಿಯಲ್ ಸಿನಿಮಾಗಳಿಗೂ ಜನ ಬರದ ಸ್ಥಿತಿಯಲ್ಲಿ ನಾವಿದ್ದೇವೆ. ಹೀಗಿರುವಾಗ ಪ್ರಶಸ್ತಿ ವಿಜೇತ ಸಿನಿಮಾ ಎಂದು ಬೇರೆ ದೃಷ್ಟಿಯಲ್ಲಿ ನೋಡುವ ಅಗತ್ಯವಿಲ್ಲ” ಎಂಬುದು ಜಾಕ್ ಮಂಜು ಮಾತು.

‘ಅಕ್ಷಿ’ ಸಿನಿಮಾಕ್ಕೆ 67ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಾಲಿನಲ್ಲಿ ಕನ್ನಡ ವಿಭಾಗದಲ್ಲಿ ಅತ್ಯುತ್ತಮ ಸಿನಿಮಾ ಪ್ರಶಸ್ತಿ ನೀಡಲಾಗಿದೆ. ಸಿನಿಮಾವನ್ನು ಮನೋಜ್ ಕುಮಾರ್ ನಿರ್ದೇಶನ ಮಾಡಿದ್ದಾರೆ. ಸಿನಿಮಾದಲ್ಲಿ ಕಾಮಿಡಿ ಕಿಲಾಡಿಗಳು ಖ್ಯಾತಿಯ ಜಿಜಿ ಗೌಡ ಅಲಿಯಾಸ್ ಗೋವಿಂದೇಗೌಡ ನಟಿಸಿದ್ದಾರೆ. ನಟಿ ಇಳಾ ವಿಟ್ಲಾ, ಬಾಲ ನಟರಾದ ಮಿಥುನ್‌, ನಾಗರಾಜ್‌ , ಕಸ್ತೂರಿ ಸೇರಿದಂತೆ ಮತ್ತಿತರರು ಚಿತ್ರದಲ್ಲಿದ್ದಾರೆ. ಚಿತ್ರಕ್ಕೆ ಮುಕಲ್‌ ಗೌಡ ಛಾಯಾಗ್ರಹಣ ಮಾಡಿದ್ದಾರೆ. ಶ್ರೀನಿವಾಸ್‌ ಜತೆಗೆ ರವಿ ಹಾಗೂ ರಮೇಶ್‌ ಬಂಡವಾಳ ಹಾಕಿದ್ದಾರೆ. ಕಲಾದೇಗುಲ ಶ್ರೀನಿವಾಸ್ ಸಂಗೀತವಿದೆ.

Categories
ಸಿನಿ ಸುದ್ದಿ

ಹಾಲಿವುಡ್‌ಗೆ ಜಿಗಿದರಾ ಕಿರಿಕ್ ಬೆಡಗಿ ರಶ್ಮಿಕಾ ? ವಿದೇಶಕ್ಕೆ ಹಾರಿದ್ದು `ಅವೆಂಜರ್ಸ್’ ಚಿತ್ರದಲ್ಲಿ ಅಭಿನಯಿಸೋಕಾ ?

ಸೌತ್ ಸಿನ್ಮಾ ಇಂಡಸ್ಟ್ರಿಯನ್ನಾಳುತ್ತಿರುವ ಸ್ಯಾಂಡಲ್‌ವುಡ್ ಕ್ವೀನ್ ರಶ್ಮಿಕಾ ಮಂದಣ್ಣಂಗೆ ಹಾಲಿವುಡ್ ಚಿತ್ರದಲ್ಲಿ ಅಭಿನಯಿಸುವ ಅವಕಾಶ ಸಿಗ್ತಾ ? ಇಡೀ ಜಗತ್ತು ಬೆಕ್ಕಸ ಬೆರಗಾಗಿ ನೋಡಿದ ಹಾಲಿವುಡ್ ಸಿನಿಮಾ ಅವೆಂಜರ್ಸ್ ಸೀಕ್ವೆಲ್‌ನಲ್ಲಿ ನಟಿಸುವ ಚಾನ್ಸ್ ನ್ಯಾಷನಲ್ ಕ್ರಷ್ ರಶ್ಮಿಕಾಗೆ ಸಿಕ್ಕಿದೆಯಾ? ಮುಂಬೈನಿಂದ ವಿದೇಶಕ್ಕೆ ಹಾರಿದ್ದು ಹಾಲಿಡೇ ವೆಕೇಷನ್‌ಗಾಗಿಯಾ ಅಥವಾ ಇಂಗ್ಲೀಷ್ ಸಿನಿಮಾಗಾಗಿಯಾ? ಈ ಭಾರಿ ನಿನ್ನಿಂದ ಸ್ವಲ್ಪ ದೂರ ಹೋಗ್ತಿದ್ದೀನಿ.. ಆದರೆ ಆದಷ್ಟು ಬೇಗ ವಾಪಾಸ್ ಬರ‍್ತೀನಿ' ಅಂತ ಟ್ವೀಟ್ ಮಾಡಿ ರಶ್ಮಿಕಾ ಹೇಳಿದ್ದು ಯಾರಿಗೆ?ದಿ ನೆಕ್ಸ್ಟ್ ಕಾಸ್ಟಿಂಗ್ ಆಫ್ ಅವೆಂಜ‌ರ್ಸ್ ರಶ್ಮಿಕಾ ಅಂಡ್ ಔರಾ…ಹೀಗಂತ ಟ್ವೀಟ್ ಮಾಡಿದ ಕೆಲವೇ ಗಂಟೆಗಳಲ್ಲಿ ಫಾರಿನ್‌ಗೆ ಹಾರುವ ಸೂಚನೆ ಕೊಟ್ಟಿದ್ದು ಹಾಲಿವುಡ್ ಮೂವಿಗೋಸ್ಕರವಾ? ಈ ಎಲ್ಲಾ ಪ್ರಶ್ನೆಗಳು ಒಟ್ಟೊಟ್ಟಿಗೆ ಮೂಡೋದಕ್ಕೆ ಕಾರಣ ಪೊಗರು ಪೋರಿಯ ಪಾಸ್‌ಪೋರ್ಟ್ ಅಂಡ್ ಟ್ವೀಟು…

ದಿ ನೆಕ್ಸ್ಟ್ ಕಾಸ್ಟಿಂಗ್ ಆಫ್ ಅವೆಂಜರ್ಸ್ ' ರಶ್ಮಿಕಾ ಅಂಡ್ ಔರಾ... ಹೀಗೊಂದು ಸಾಲು ಗೀಚಿ, ಮುದ್ದಿನ ನಾಯಿಮರಿಯ ಜೊತೆ ಪ್ರೀತಿಯಿಂದ ಫೈಟಿಂಗ್ ಮಾಡುವ ವಿಡಿಯೋ ಅಪ್‌ಲೋಡ್ ಮಾಡಿ ಇನ್ನೂ 24 ಗಂಟೆ ಕಳೆದಿಲ್ಲ.. ಆಗಲೇ, ಪಾಸ್‌ಪೋರ್ಟ್ ಫೋಟೋ ಹಾಕಿ ? ಈ ಭಾರಿ ನಿನ್ನಿಂದ ಸ್ವಲ್ಪ ದೂರ ಹೋಗ್ತಿದ್ದೀನಿ.. ಆದರೆ ಆದಷ್ಟು ಬೇಗ ವಾಪಾಸ್ ಬರ‍್ತೀನಿ’ ಅಂತ ಒಂದೆರಡು ಸಾಲು ಗೀಚಿದ್ದಾರೆ. ಇನ್ನೊಂದು ಸ್ಟೇಟಸ್ ಹಾಕಿ `ಗೆಸ್ ಮಾಡಿ ನಾನ್ ಎಲ್ಲಿಗೆ ಹೋಗ್ತಿರಬಹುದು ಅಂತ’ ಫ್ಯಾನ್ಸ್ ಗೆ ಪ್ರಶ್ನೆ ಮಾಡಿದ್ದಾರೆ. ತಮ್ಮ ನೆಚ್ಚಿನ ನಟಿ ಗೆಸ್ ಮಾಡಿ ಎಂದಿದ್ದೇ ತಡ ಎಲ್ಲರೂ ತಮ್ಮ ಮೆದುಳನ್ನು ಯೋಚನಾ ಲಹರಿಗೆ ಹಚ್ಚಿದ್ದಾರೆ. ಒಬ್ಬೊಬ್ಬರು ಒಂದೊಂದು ರೀತಿಯಾಗಿ ಉತ್ತರ ನೀಡುತ್ತಿದ್ದಾರೆ. ಆದರೆ, ಸೋಷಿಯಲ್ ಲೋಕದಲ್ಲಿ ಮಾತ್ರ ಬಹಳಷ್ಟು ಚರ್ಚೆಯಾಗ್ತಿರೋದು ರಶ್ಮಿಕಾ ವಿದೇಶಕ್ಕೆ ಹಾರಿರುವುದು ಹಾಲಿಡೇ ವೆಕೇಷನ್‌ಗಾಗಿ ಅಲ್ಲ ಬದಲಾಗಿ ಹಾಲಿವುಡ್ ಚಿತ್ರದಲ್ಲಿ ಅಭಿನಯಿಸಲಿಕ್ಕೆ..!?

ಹಾಲಿವುಡ್ ಚಿತ್ರದಲ್ಲಿ ಅಭಿನಯಿಸಲಿಕ್ಕಾಗಿಯೇ ಚಮಕ್ ಬ್ಯೂಟಿ ವಿದೇಶಿ ಪ್ರವಾಸ ಕೈಗೊಂಡಿರುವುದು ಎನ್ನುವ ಸುದ್ದಿ ಬಲವಾಗಿ ಕೇಳಿಬರೋದಕ್ಕೆ ಮೊದಲ ಕಾರಣ ದಿ ನೆಕ್ಸ್ಟ್ ಕಾಸ್ಟಿಂಗ್ ಆಫ್ ಅವೆಂಜರ್ಸ್' ರಶ್ಮಿಕಾ ಅಂಡ್ ಔರಾ... ಈ ಟ್ವೀಟ್ ಮಾಡಿದ ಕೆಲವೇ ಗಂಟೆಗಳಲ್ಲಿ ಫಾರಿನ್‌ಗೆ ಹಾರಿರುವುದು. ಬರೀ ಟ್ವೀಟ್ ಲೆಕ್ಕಚ್ಚಾರದಿಂದ ಸ್ಯಾಂಡಲ್‌ವುಡ್ ಸಾನ್ವಿ ಹಾಲಿವುಡ್‌ಗೆ ಎಗರಿರಬಹುದೆಂದು ಊಹಿಸಲು ಅಸಾಧ್ಯ. ಆದರೆ, ಮೊದಲ ಸಿನ್ಮಾದಲ್ಲೇ ನ್ಯಾಷನಲ್ ಕ್ರಷ್ ಎನಿಸಿಕೊಂಡು ಎರಡನೇ ಚಿತ್ರದಿಂದ ಇಡೀ ಸೌತ್ ಸಿನಿಮಾ ಇಂಡಸ್ಟ್ರಿಯನ್ನು ಆಳುತ್ತಿರುವ, ಸ್ಟಾರ್ ನಟಿಮಣಿಯರನ್ನು ಹಿಂದಿಕ್ಕಿ ಮುನ್ನುಗುತ್ತಿರುವ, ಬಹುಬೇಡಿಕೆಯ ಕೂರ್ಗ್ ಬ್ಯೂಟಿಗೆ ಇಂಗ್ಲೀಷ್ ಮಂದಿ ಚಾನ್ಸ್ ಕೊಟ್ಟಿರಬಹುದು. ನಗುವಲ್ಲೇ ಕಟ್ಟಿಹಾಕುವ, ನಡುವಲ್ಲೇ ಸೀಟಿಗೆ ಅಂಟಿಕೊಂಡು ಕೂರುವಂತೆ ಮಾಡುವ ಸುಂದರಿ ರಶ್ಮಿಕಾಗೆ ಹಾಲಿವುಡ್ ಮಂದಿ ರೆಡ್‌ಕಾರ್ಪೆಟ್ ಹಾಕಿರಬಹುದು. ಲಿಲ್ಲಿಯ ಪಾಲಿನ ಕೂಸು, ಲಿಲ್ಲಿಯ ಪಾಲಿನ ಜಗತ್ತೇ ಆಗಿರುವಔರಾ’ ನಾಯಿಮರಿಗೂ `ಅವೆಂಜರ್’ನಲ್ಲಿ ಕ್ಯಾಮೆರಾ ಎದುರಿಸುವ ಚಾನ್ಸ್ ದಕ್ಕಿರಬಹುದು ಯಾರಿಗ್ ಗೊತ್ತು.

ಅದ್ಯಾವ್ ಶುಭಲಗ್ನದಲ್ಲಿ ಕೂರ್ಗ್ ಬೆಡಗಿ ರಶ್ಮಿಕಾರನ್ನ ಸಿಂಪಲ್‌ಸ್ಟಾರ್ ರಕ್ಷಿತ್ ಶೆಟ್ರು ಕ್ಯಾಮೆರಾ ಮುಂದೆ ತಂದು ನಿಲ್ಲಿಸಿದ್ರೋ ಏನೋ ಗೊತ್ತಿಲ್ಲ. ಕೂರ್ಗ್ ಸುಂದರಿ ರಶ್ಮಿಕಾ ಮಂದಣ್ಣ ಬಿಡುವಿಲ್ಲದೇ ಮುಖಕ್ಕೆ ಬಣ್ಣ ಹಚ್ಚುತ್ತಿದ್ದಾರೆ, ಬಿಡುವಿಲ್ಲದೇ ಕ್ಯಾಮೆರಾ ಎದುರಿಸುತ್ತಿದ್ದಾರೆ, ಬಿಡುವಿಲ್ಲದೇ ಬೆಳೆಯುತ್ತಿದ್ದಾರೆ. ಹೌದು, ನ್ಯಾಚುರಲಿ ರಶ್ಮಿಕಾ ಗ್ರೋತ್ ಆಗುತ್ತಿದ್ದಾರೋ ಅದಕ್ಕಿಂತ ನೂರು ಪಟ್ಟು ಗ್ರೋತ್ ಕರಿಯರ್‌ನಲ್ಲಾಗುತ್ತಿದೆ. ಬ್ಯೂಟಿ ವಿತ್ ಬ್ರೈನ್ ಜೊತೆಗೆ ಅದೃಷ್ಟ ಕೈ ಹಿಡಿದಿದ್ದರಿಂದ ಚಮಕ್' ಚೆಲುವೆ ಸ್ಯಾಂಡಲ್‌ವುಡ್ ಗಡಿದಾಟಿದರು.ಚಲೋ’ ಎನ್ನುತ್ತಲೇ ಟಾಲಿವುಡ್ ಅಂಗಳಕ್ಕೆ ಕಾಲಿಟ್ಟ ರಶ್ಮಿಕಾ ಮಂದಣ್ಣ ತೆಲುಗು ಚಿತ್ರರಂಗದ ಬಹುತೇಕ ಸೂಪರ್‌ಸ್ಟಾರ್‌ಗಳೊಟ್ಟಿಗೆ ಸ್ಕ್ರೀನ್ ಶೇರ್ ಸೈ ಎನಿಸಿಕೊಂಡರು. ತಮಿಳು ಸೂಪರ್‌ಸ್ಟಾರ್ ಕಾರ್ತಿಕ್‌ಗೆ ನಾಯಕಿಯಾಗಿ ಕಾಲಿವುಡ್‌ಗೆ ಕಾಲಿಟ್ಟಿರುವ ಸ್ಯಾಂಡಲ್‌ವುಡ್ ಸಾನ್ವಿ, ವಿವಾದಗಳಿಗೆ-ಅಪವಾದಗಳಿಗೆ ಸೊಪ್ಪು ಹಾಕದೇ ಮುಂದೆ ಮುಂದೆ ಸಾಗಿದ್ದರಿಂದಲೇ ಬಿಟೌನ್‌ಗೆ ಲಗ್ಗೆ ಇಡುವಂತಾಯ್ತು. ಬಿಗ್‌ಬಿ ಅಮಿತಾಬ್ ಬಚ್ಚನ್‌ರಂತಹ ದಿಗ್ಗಜರೊಟ್ಟಿಗೆ ಸ್ಕ್ರೀನ್ ಶೇರ್ ಮಾಡುವಂತಹ ಗೋಲ್ಡನ್ ಚಾನ್ಸ್ ಸಿಗ್ತು. ಇದೀಗ, ಹಾಲಿವುಡ್ `ಅವೆಂಜರ್ಸ್ ನಲ್ಲಿ ಪಾರ್ಟ್ ಆಗ್ಬೋದು ಎನ್ನುವ ಸುದ್ದಿ ಹರಿದಾಡ್ತಿದೆ ನೋಡೋಣ.

ಸದ್ಯಕ್ಕೆ, ಕೇವಲ ಪ್ರಶ್ನೆಯಾಗಿರುವ ಉತ್ತರವಿಲ್ಲದ ಪ್ರಶ್ನೆಗಳಿಗೆ ರಶ್ಮಿಕಾ ಫಾರಿನ್‌ನಲ್ಲಿ ಲ್ಯಾಂಡ್ ಆದ್ಮೇಲೆ ಉತ್ತರ ಸಿಗುತ್ತೆ. ಡಿಯರ್ ಕಾಮ್ರೇಡ್ ಲಿಲ್ಲಿ ವಿದೇಶಕ್ಕೆ ತೆರಳಿದ್ದು ಹಾಲಿವುಡ್ ಅವೆಂಜರ್ ಚಿತ್ರದ ಪಾರ್ಟ್ ಆಗಲಿಕ್ಕೋ ಅಥವಾ `ಡಿಯರ್’ ಕಾಮ್ರೇಡ್ ಹುಡುಗನ ಜೊತೆ ಹಾಲಿಡೇ ವೆಕೇಷನ್ ಮೂಡ್‌ಗೋ ಅಂತ. ಅಲ್ಲಿವರೆಗೂ ಜಸ್ಟ್ ವೇಯ್ಟ್ ಅಂಡ್ ವಾಚ್ ಅಷ್ಟೇ.

ವಿಶಾಲಾಕ್ಷಿ, ಎಂಟರ್‌ಟೈನ್ಮೆಂಟ್ ಬ್ಯೂರೋ

Categories
ಸಿನಿ ಸುದ್ದಿ

ಅಪ್ಪು ನೋವು ಮಾಸಿಲ್ಲ; ಈಗ ಇದೆಲ್ಲಾ ಬೇಕಿತ್ತಾ? ಅಂಬಿ ಫ್ಯಾನ್ಸ್‌ಗೆ ಸುಮಲತಾ ಮನವಿ…

ಅಪ್ಪುಗೆ ಕರ್ನಾಟಕ ರತ್ನ ಪ್ರಶಸ್ತಿ ಸಿಕ್ಕಿದ್ದು, ಅಂಬರೀಶ್‌ ಅವರಿಗೇ ಸಿಕ್ಕಂತೆ ಎಂದು ನಟಿ ಹಾಗು ಸಂಸದೆ ಸುಮಲತಾ ಹೇಳಿದ್ದಾರೆ. ಅಪ್ಪುಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ನೀಡಿರುವುದು ಮತ್ತು ಪದ್ಮಶ್ರೀ ಪ್ರಶಸ್ತಿಗೂ ಕೂಗು ಕೇಳಿಬರುತ್ತಿರುವುದರ ಬಗ್ಗೆ ಅಂಬಿ ಫ್ಯಾನ್ಸ್‌ ಇಂತಹ ಗೌರವ ಅಂಬರೀಶ್‌ಗೂ ಸಿಗಬೇಕು. ಇಲ್ಲದಿದ್ದರೆ, ಹೋರಾಟ ಮಾಡುವುದಾಗಿ ಹೇಳಿದ್ದಾರೆ. ಅಂಬರೀಶ್‌ ಅವರ ಮೂರನೇ ವರ್ಷದ ಪುಣ್ಯತಿಥಿ ಸಂದರ್ಭದಲ್ಲಿ ಅಂಬರೀಶ್‌ ಅವರ ಸ್ಮಾರಕಕ್ಕೆ ಪೂಜೆ ನೆರವೇರಿಸಿದ ಬಳಿಕ ಸುಮಲತಾ ಪ್ರತಿಕ್ರಿಯಿಸಿ, ಹೇಳಿದ್ದಿಷ್ಟು.

ಅಂಬರೀಶ್‌ ಅಭಿಮಾನಿಗಳ ಪ್ರೀತಿ ಏನೆಂಬುದು ನನಗೆ ಅರ್ಥ ಆಗುತ್ತೆ. ನಾವು ಅದನ್ನು ಗೌರವಿಸುತ್ತೇವೆ ಹೊರತು ಕಡೆಗಣಿಸಲ್ಲ. ಅವರ ನೋವು ಹಂಚಿಕೊಳ್ಳುವ ಸಂದರ್ಭ ಬರುತ್ತೆ. ಅಂಬರೀಶ್‌ ಅವರ ಜೀವನದಲ್ಲಿ ನನಗೆ ಇಂಥದ್ದು ಬೇಕು ಎಂದು ಕೇಳಿದವರಲ್ಲಿ, ಪ್ರಶಸ್ತಿ ಇರಲಿ, ಎಂಪಿ, ಎಂಎಲ್‌ಎ ಟಿಕೆಟ್‌ ಇರಲಿ, ಎಲ್ಲೂ ಹೋಗದೆ, ಯಾರ ಬಳಿಯೂ ಕೇಳದೆ, ಲಾಬಿ ಮಾಡಿ ಪಡೆದವರಲ್ಲ. ಲೈಫಲ್ಲಿ ಅವರಿಗೆ ಸ್ವಾಭಿಮಾನವಿತ್ತು. ಅಭಿಮಾನಿಗಳಿಗೂ ನಾನು ಮನವಿ ಮಾಡ್ತೀನಿ. ನೀವು ಕೂಡ ಅವರ ಹಾದಿಯಲ್ಲೇ ನಡೆದುಕೊಂಡು ಬನ್ನಿ. ಈ ಸಮಯದಲ್ಲಿ ನಾನು, ನನ್ನ ಕುಟುಂಬ, ಕನ್ನಡಿಗರು ಅಪ್ಪು ಇರದ ಸಮಯದಲ್ಲಿ ಇಂತಹ ವಿಷಯ ಪ್ರಸ್ತಾಪ ಮಾಡುವುದು ಬೇಡ. ಹೋರಾಟ ಎಂಬ ಪದ ಉಪಯೋಗಿಸಲೂ ಬಾರದು.


ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಅಂಬರೀಶ್‌ ಸುಮಾರು ೪೦ ವರ್ಷದ ಸ್ನೇಹಿತರು. ಅವರು ಎಷ್ಟು ಸಮಯ ಜೊತೆಗೆ ಜೊತೆ ಕಳೆದಿದ್ದಾರೆ ಅಂತ ಯಾರಿಗೂ ಗೊತ್ತಿಲ್ಲ. ಅಂಬರೀಶ್‌ ಅವರಿಗೆ ಏನು ಗೌರವ ಕೊಡಬೇಕು ಅನ್ನೋದು ಅವರಿಗೆ ಬಿಟ್ಟಿದ್ದು. ಈಗಾಗಲೇ ಜನರ ಪ್ರೀತಿ ಸಿಕ್ಕಿದೆ. ಅದೇ ದೊಡ್ಡದು. ಅಪ್ಪುಗೆ ಕರ್ನಾಟಕ ಪ್ರಶಸ್ತಿ ಸಿಕ್ಕಿದೆ. ಅದು ಅಂಬರೀಶ್‌ಗೂ ಸಿಕ್ಕಂತೆ. ಅಂಬರೀಶ್‌ ಇದ್ದಿದ್ದರೆ, ಅಪ್ಪುಗೆ ಕರ್ನಾಟಕ ರತ್ನ ಪ್ರಶಸ್ತಿ ಕೊಟ್ಟಿರುವುದನ್ನು ಕೇಳಿ ಹೆಮ್ಮೆ, ಸಂತೋಷ ಪಡುತ್ತಿದ್ದರು. ಅಭಿಮಾನಿಗಳು ಇದನ್ನು ಅಳವಡಿಸಿಕೊಳ್ಳಬೇಕು ಎಂದಿದ್ದಾರೆ ಸುಮಲತಾ.

Categories
ಸಿನಿ ಸುದ್ದಿ

ಹಿಂದಿ ಭಾಷೆಗೆ ದೊಡ್ಡ ಮೊತ್ತಕ್ಕೆ‌ ಮದಗಜ ಸೋಲ್ಡ್‌ಔಟ್ ! ರಿಲೀಸ್‌ ಮುನ್ನವೇ ಶ್ರೀಮುರಳಿ ಸಿನಿಮಾಗೆ ಬಂಪರ್!!

ಕನ್ನಡದಲ್ಲೀಗ “ಮದಗಜ” ಸಿನಿಮಾದ್ದೇ ಸುದ್ದಿ. ಆರಂಭದಿಂದಲೂ ಸಾಕಷ್ಟು ಸುದ್ದಿ ಮಾಡಿರುವ ಸಿನಿಮಾ ಡಿಸೆಂಬರ್‌ 3 ರಂದು ಗ್ರ್ಯಾಂಡ್‌ ರಿಲೀಸ್‌ ಆಗುತ್ತಿದೆ. ವಿಶೇಷವೆಂದರೆ, “ಮದಗಜ” ಮೂರು ಭಾಷೆಗಳಲ್ಲಿ ತೆರೆಗೆ ಅಪ್ಪಳಿಸುತ್ತಿದೆ. ಅದರಲ್ಲೂ 1500 ಕ್ಕೂ ಹೆಚ್ಚು ಪರದೆಗಳ ಮೇಲೆ ಮದಗಜನ ಆರ್ಭಟ ಇರಲಿದೆ. ಕನ್ನಡ, ತೆಲುಗು ಹಾಗೂ ತಮಿಳು ಭಾಷೆಯಲ್ಲಿ ಏಕಕಾಲಕ್ಕೆ ರಿಲೀಸ್ ಮಾಡಲು ಮುಂದಾಗಿರುವ ಚಿತ್ರತಂಡ, ಒಳ್ಳೊಳ್ಳೆಯ ಚಿತ್ರಮಂದಿರಗಳನ್ನೇ ಆಯ್ಕೆ ಮಾಡಿಕೊಂಡಿದೆ. ಇನ್ನು, ಕರ್ನಾಟಕದಲ್ಲಿ ಮಲ್ಟಿಪ್ಲೆಕ್ಸ್ ಸ್ಕ್ರೀನ್ ಸೇರಿ ಮದಗಜ ಸುಮಾರು 600 ರಿಂದ 700 ಸ್ಕ್ರೀನ್‌ಗಳಲ್ಲಿ ರಿಲೀಸ್ ಆಗಲಿದೆ. ತೆಲುಗು ಹಾಗೂ ತಮಿಳು ಭಾಷೆಗಳಲ್ಲಿ 700 ರಿಂದ 800 ಸ್ಕ್ರೀನ್‌ನಲ್ಲಿ ರಿಲೀಸ್ ಮಾಡುವ ಯೋಚನೆ ಚಿತ್ರತಂಡಕ್ಕಿದೆ.‌


ನಟ ಶ್ರೀಮುರಳಿ ಅವರ ಹಿಂದಿನ ಸಿನಿಮಾಗಳು ಹೇಗೆ ಸದ್ದು ಮಾಡಿದ್ದವೋ ಅದಕ್ಕಿಂತಲೂ ತುಸು ಹೆಚ್ಚೇ ಸೌಂಡು ಮಾಡುತ್ತಿರುವ ಮದಗಜ ನೋಡಲು ಶ್ರೀಮುರಳಿ ಅವರ ಅಭಿಮಾನಿಗಳು ತುದಿಗಾಲ ಮೇಲೆ ನಿಂತಿದ್ದಾರೆ. ಈ ಚಿತ್ರದ ಹೊಸ ಸುದ್ದಿಯೊಂದು ಹೊರಬಿದ್ದಿದೆ. ಅದೇನೆಂದರೆ, “ಮದಗಜ” ಹಿಂದಿಗೆ ದೊಡ್ಡ ಮೊತ್ತಕ್ಕೆ ಮಾರಾಟವಾಗಿದೆ ಅನ್ನೋದು.

ಹೌದು, ಚಿತ್ರಕ್ಕೆ ಹಿಂದಿ ಭಾಷೆಗೆ ಸಾಕಷ್ಟು ಬೇಡಿಕೆ ಬಂದಿದ್ದು, ನಿರ್ಮಾಪಕರು ಒಂದೊಳ್ಳೆಯ ಮೊತ್ತಕ್ಕೆ ಮದಗಜ ಚಿತ್ರವನ್ನು ಸೇಲ್‌ ಮಾಡಿದ್ದಾರೆ ಎನ್ನಲಾಗಿದೆ. ಬಾಲಿವುಡ್‌ ನಿರ್ಮಾಪಕರೊಬ್ಬರು ಈ ಚಿತ್ರವನ್ನು ೮ಕೋಟಿಗೆ ಖರೀದಿಸಿದ್ದಾರೆ ಎಂಬುದು ಚಿತ್ರತಂಡದ ಮಾಹಿತಿ. ಕನ್ನಡದ ಸಿನಿಮಾಗಳಿಗೆ ಪರಭಾಷೆಗಳಲ್ಲೂ ಭಾರೀ ಬೇಡಿಕೆ ಇದೆ ಅನ್ನುವುದು ಮದಗಜ ಚಿತ್ರದ ಹಿಂದಿ ಭಾಷೆಗೆ ಸಿಕ್ಕ ಮೊತ್ತವೇ ಸಾಕ್ಷಿ. ಈಗಾಗಲೇ ಶ್ರೀಮುರಳಿ ಅಭಿನಯದ ಹಲವು ಸಿನಿಮಾಗಳು ಹಿಂದಿಗೆ ಡಬ್‌ ಆಗಿ ಪ್ರಸಾರವಾಗಿವೆ.

ಆ ಸಾಲಿಗೆ ಮದಗಜ ಸಿನಿಮಾ ಕೂಡ ದೊಡ್ಡ ಮೊತ್ತಕ್ಕೆ ಸೇಲ್‌ ಆಗಿರುವುದು ಚಿತ್ರತಂಡಕ್ಕೆ ಖುಷಿ ಹೆಚ್ಚಿಸಿದೆ. ನಿರ್ಮಾಪಕ ಉಮಾಪತಿ ಸದ್ಯ ಮದಗಜ ಚಿತ್ರ ಹಿಂದಿ ಭಾಷೆಗೆ ಅಷ್ಟೊಂದು ದೊಡ್ಡ ಮೊತ್ತಕ್ಕೆ ಸೇಲ್‌ ಆಗಿರುವುದಕ್ಕೆ ಖುಷಿಗೊಂಡಿದ್ದಾರೆ. ನಿರ್ದೇಶಕ ಮಹೇಶ್‌ ಕುಮಾರ್‌ ಅವರಿಗೂ ಸಿಕ್ಕಾಪಟ್ಟೆ ಖುಷಿ ಇದೆ. ಅಂದಹಾಗೆ, ಈ ಚಿತ್ರದಲ್ಲಿ ದೊಡ್ಡ ತಾರಾಬಳಗವೇ ಇದೆ. ಶ್ರೀಮುರಳಿ ಅವರಿಗೆ ಜೋಡಿಯಾಗಿ ಆಶಿಕಾ ಇದ್ದಾರೆ. ಜಗಪತಿ ಬಾಬು ಕೂಡ ಇಲ್ಲಿ ಮುಖ್ಯ ಆಕರ್ಷಣೆ.

Categories
ಸಿನಿ ಸುದ್ದಿ

ನನ್‌ ಮದ್ವೆಗೆ ದುನಿಯಾ ವಿಜಯ್‌ ಬರಲೇಬೇಕು! ಬರದಿದ್ದರೆ ಮದ್ವೆ ಆಗಲ್ಲ!! ದಾವಣಗೆರೆ ಅಭಿಮಾನಿಯೊಬ್ಬಳ ಹಠವಿದು…

ಅಭಿಮಾನಿಗಳ ಪ್ರೀತಿಯೇ ಹಾಗೆ. ಅದರಲ್ಲೂ ಸಿನಿಮಾ ವಿಷಯಕ್ಕೆ ಬಂದರಂತೂ ಅಭಿಮಾನಿಗಳ ಅಭಿಮಾನ ಕೊಂಚ ಜಾಸ್ತಿಯೇ ಇರುತ್ತೆ. ಅದೆಷ್ಟೋ ಸಿನಿಮಾ ನಟರ ಅಭಿಮಾನಿಗಳು ತಮ್ಮ ಹೀರೋ ಮುಂದೆ ಅನೇಕ ಬೇಡಿಕೆಗಳನ್ನಿಡುವುದು ಗೊತ್ತೇ ಇದೆ. ಅದು ಹೊಸದಲ್ಲ ಬಿಡಿ. ಅಂತಹ ಪಟ್ಟು ಹಿಡಿದ ಅಭಿಮಾನಿಗಳ ಆಸೆಯನ್ನೂ ಈಡೇರಿಸಿರುವ ಅದೆಷ್ಟೋ ಸ್ಟಾರ್‌ ನಟರು ನಮ್ಮ ಕನ್ನಡದಲ್ಲಿದ್ದಾರೆ. ಈಗಲೂ ಅಭಿಮಾನಿಗಳೇ ನಮ್ಮ ಪ್ರೀತಿ ಅಂದುಕೊಂಡವರಿದ್ದಾರೆ. ಈಗ ವಿಷಯ ಏನಪ್ಪಾ ಅಂದ್ರೆ, ನಟ ದುನಿಯಾ ವಿಜಯ್‌ ಅವರ ಅಭಿಮಾನಿಯೊಬ್ಬರು ತನ್ನ ಮದುವೆಗೆ ದುನಿಯಾ ವಿಜಯ್‌ ಬರಬೇಕು. ಬರದೇ ಹೋದರೆ, ತಾಳಿ ಕಟ್ಟಿಸಿಕೊಳ್ಳುವುದೇ ಇಲ್ಲ ಎಂದು ಪಟ್ಟು ಹಿಡಿದ ಸುದ್ದಿ ಹೊರಬಿದ್ದಿದೆ.


ಹೌದು, ದಾವಣಗೆರೆ ಮೂಲದ ಅಭಿಮಾನಿ ಹೆಸರು ಅನುಷಾ. ಇವರು ಅಪ್ಪಟ ದುನಿಅ ವಿಜಯ್‌ ಅವರ ಅಭಿಮಾನಿ. ಈಗ ಈ ಅಭಿಮಾನಿಯ ಮದುವೆ ನಡೆಯಲಿದೆ. ಹಾಗಾಗಿ, ತನ್ನ ಮದುವೆಗೆ ದುನಿಯಾ ವಿಜಯ್‌ ಅವರು ಬರಬೇಕು ಎಂಬುದು ಈ ಅಭಿಮಾನಿಯ ವಿಶೇಷವಾದ ಬೇಡಿಕೆ. ಈ ಕಾರಣಕ್ಕೆ ದಕ್ಕೆ ಕಾರಣ ನಟ ದುನಿಯಾ ವಿಜಯ್. ಅದು ಹೇಗೆ ಅಂದರೆ ದಾವಣಗೆರೆ ಮೂಲಕ ಈ ಯುವತಿ ನಟ ದುನಿಯಾ ವಿಜಯ್‌ ಅವರ ಅಪ್ಪಟ್ಟ ಅಭಿಮಾನಿ. ಹಾಗಾಗಿ ಅವರಿಗೆ ಮದುವೆ ಆಹ್ವಾನ ನೀಡಿದ್ದಾಳೆ. ದುನಿಯಾ ವಿಜಯ್‌ ಅವರಿಗೆ ಮದುವೆ ಆಹ್ವಾನ ನೀಡಿರೋದು ಮಾತ್ರವಲ್ಲ, ಆಕೆ ದುನಿಯಾ ವಿಜಯ್‌ ಮದುವೆಗೆ ಬರಲೇಬೇಕು ಎಂದು ಪಟ್ಟು ಹಿಡಿದ್ದಾಳೆ.


ಅನುಷಾ ದುನಿಯಾ ವಿಜಯ್‌ ಅವರ ಅಭಿಮಾನಿ. ಹಾಗಾಗಿ ಸ್ಯಾಂಡಲ್‍ವುಡ್ ನಟ ದುನಿಯಾ ವಿಜಯ್ ಅವರು ಆಗಮಿಸಿ ಆಶೀರ್ವಾದ ಮಾಡಿದರೆ ಮಾತ್ರ ಮದುವೆಯಾಗುತ್ತೇನೆ ಎಂದು ಪಟ್ಟು ಹಿಡಿದಿದ್ದಿ. ದುನಿಯಾ ವಿಜಯ್​ ಬರುವವರೆಗೂ ತಾಳಿ ಕಟ್ಟಿಸಿ ಕೊಳ್ಳುವುದಿಲ್ಲ ಅಂತ ಹಠ ಹಿಡಿದಿದ್ದಾಳೆ. ತನ್ನ ಮದುವೆಗೆ ದುನಿಯಾ ವಿಜಯ್ ಅವರ ಆಶೀರ್ವಾದ ಬೇಕು ಎನ್ನುತ್ತಿದ್ದಾಳೆ. ಮದುವೆಗೆ ಯಾರು ಬರದಿದ್ದರೂ ಪರವಾಗಿಲ್ಲ. ಆದರೆ, ದುನಿಯಾ ವಿಜಯ್ ಬರಬೇಕು. ಇಲ್ಲದಿದ್ದರೆ ಮದುವೆ ಆಗುವುದಿಲ್ಲ ಎಂಬ ನಿರ್ಧಾರ ಮಾಡಿದ್ದಾಳಂತೆ! ಇನ್ನೊಂದು ವಿಶೇಷವೆಂದರೆ, ಅನುಷಾ ಮಾತ್ರವಲ್ಲ, ಅವರ ಕುಟುಂಬ ಕೂಡ ದುನಿಯಾ ವಿಜಯ್‌ ಅವರ ಅಭಿಮಾನಿಯಾಗಿದೆ. ಅವರ ಮನೆಗೆ “ದುನಿಯಾ ಋಣ” ಎಂದೇ ಹೆಸರಿಟ್ಟಿದ್ದಾರೆ. ಕಳೆದ ಐದಾರು ವರ್ಷಗಳ ಹಿಂದೆ ಮನೆ ಕಟ್ಟಿದ್ದು ಗೃಹ ಪ್ರವೇಶಕ್ಕೆ ನಟ ದುನಿಯಾ ವಿಜಯ್ ಬರಬೇಕೆಂದು ಆಗಲೂ ಮನೆಯನ್ನು ಹಾಗೆಯೇ ಬಿಟ್ಟಿದ್ದರು. ನಂತರ ವಿಷಯ ತಿಳಿದ ದುನಿಯಾ ವಿಜಯ್‌, ಅವರ ಮನೆಯ ಗೃಹ ಪ್ರವೇಶಕ್ಕೆ ಹೋಗಿ ಶುಭ ಕೋರಿ ಬಂದಿದ್ದರು.


ಅಂದಹಾಗೆ, ನವೆಂಬರ್‌ 29ಕ್ಕೆ ಅನುಷಾ ಮದುವೆ ಇದೆ. ಶಿವಾನಂದ ಭಜಂತ್ರಿ ಅವರ ಪುತ್ರಿ ಅನುಷಾ ಪ್ರಕಾಶ್‌ ಎಂಬ ಯುವಕನ ಜೊತೆ ಮದುವೆಯಾಗುತ್ತಿದ್ದಾರೆ. ವಿಶೇಷವೆಂದರೆ, ತನ್ನ ಮದುವೆಯ ಆಮಂತ್ರಣ ಪತ್ರಿಕೆಯಲ್ಲೂ ತಮ್ಮ ಫೋಟೊ ಪಕ್ಕ ದುನಿಯಾ ವಿಜಯ್ ಅವರ ಫೋಟೊವನ್ನು ಮುದ್ರಿಸಿದ್ದಾರೆ. ಜೊತೆಗೆ ‘ಒಂಟಿ ಸಲಗ’ ಎಂದು ತಮ್ಮ ಕೈಗೆ ಅನುಷಾ ಹಚ್ಚೆ ಹಾಕಿಸಿಕೊಂಡಿದ್ದಾರೆ. ಅದೇನೆ ಇರಲಿ, ದುನಿಯಾ ವಿಜಯ್‌ ಅಭಿಮಾನಿಗಳಿಗೆ ಯಾವತ್ತೂ ನಿರಾಸೆ ಮಾಡಿದವರಲ್ಲ. ಈ ಅಭಿಮಾನಿಯ ಮದುವೆಗೆ ಹೋಗಿ, ಅವರ ಆಸೆ ಪೂರೈಸುತ್ತಾರಾ ಕಾದು ನೋಡಬೇಕಿದೆ.

Categories
ಸಿನಿ ಸುದ್ದಿ

ಜಮಾಲಿ ಗುಡ್ಡದಲ್ಲಿ ಶ್ಯಾನೆ ಟಾಪಾಗಿರೋ ಹುಡ್ಗಿ ಜೊತೆ ಮಿಠಾಯಿ ಸೂರಿ ! ಗುಡ್ಡದ ಮೇಲೊಂದು ಸಸ್ಪೆನ್ಸ್ ಕಮ್‌ ರೊಮ್ಯಾನ್ಸ್ !!

ಜಮಾಲಿ ಗುಡ್ಡದಲ್ಲಿ ಶ್ಯಾನೆ ಟಾಪಾಗಿರೋ ಹುಡ್ಗಿ ಜೊತೆ ಮಿಠಾಯಿ ಸೂರಿ ಎನ್ನುವ ಸುದ್ದಿ ನಿಮ್ಮ ಕಿವಿಗೆ ಬಿದ್ದಾಕ್ಷಣ ಲವ್ವು-ರೊಮ್ಯಾನ್ಸು-ಆಕ್ಷನ್ನು ಸೇರಿದಂತೆ ನೂರೆಂಟು ಕಲ್ಪನೆಗಳು ನಿಮ್ಮ ಕಣ್ಮುಂದೆ ಡ್ಯುಯೆಟ್ ಹಾಡೋದು ಖರ‍್ರೇ. ಆದರೆ, ಜಮಾಲಿ ಗುಡ್ಡದ ಖಬರ್ ಬ್ಯಾರನೇ ಐತಿ ಬಿಡ್ರಿಪಾ. ಹಾಗಾದ್ರೆ, ಮತ್ಯಾಕ್ ತಡ ಮಾಡೋಣು ತೋತಾಪುರಿ ಸುಂದರಿಯನ್ನು ಕರ‍್ಕೊಂಡು ಜಮಾಲಿ ಗುಡ್ಡ ಏರಿದ ನಟಭಯಂಕರನ ಸಸ್ಪೆನ್ಸ್ ವಿತ್ ರೊಮ್ಯಾನ್ಸ್ ಸ್ಟೋರಿನಾ ನೋಡಿಕೊಂಡು ಬರೋಣ ಬನ್ನಿ

ಶ್ಯಾನೆ ಟಾಪಾಗಿರೋ ಹುಡ್ಗಿ'ಹಾಗೂ ಮಿಠಾಯಿ ಸೂರಿ ಹೆಸರು ಕಿವಿಗೆ ಬಂದಾಕ್ಷಣ ನಟಿ ಅದಿತಿ ಪ್ರಭುದೇವ್ ಹಾಗೂ ಡಾಲಿ ಧನಂಜಯ್ ಇಬ್ಬರು ಕಣ್ಮುಂದೆ ಬಂದು ನಿಂತುಬಿಡ್ತಾರೆ.ಆದರೆ,ಜಮಾಲಿ ಗುಡ್ಡದ ಹೆಸರು ಕೇಳಿದ್ಮೇಲೆ ಎಲ್ಲಿದ್ದೀಯಪ್ಪ ಇದು? ಯಾವ ಭಾಗದಲ್ಲಿ ಬರುತ್ತೆ?ಈ ಹೆಸರನ್ನೂ ಕೇಳೇ ಇಲ್ಲವಲ್ಲ? ಹೀಗೆ ಪ್ರಶ್ನೆಗಳ ಸುರಿಮಳೆಯ ಜೊತೆ ‘ಜಮಾಲಿ ಗುಡ್ಡ’ ವನ್ನು ನೋಡುವ ಆಸೆ ಹುಟ್ಟುತ್ತೆ. ಆ ಗುಡ್ಡದಲ್ಲಿ ನಟ ರಾಕ್ಷಸ ಡಾಲಿಗೂ- ತೋತಾಪುರಿಯಂತಹ ಚೆಲುವೆ ಅದಿತಿಗೂ ಏನ್ ಕೆಲಸ? ಇಬ್ಬರು ಕೂಡಿ ಏನ್ಮಾಡಲಿದ್ದಾರೆ? ಇವರಿಬ್ಬರನ್ನೂ ಒಟ್ಟಿಗೆ ಸೇರಿಸಿರುವ ಜಮಾಲಿಗುಡ್ಡದ ವಿಶೇಷತೆ ಏನು? ನಿಮ್ಮ ಈ ಕೂತೂಹಲದ ಪ್ರಶ್ನೆಗೆ ಉತ್ತರ ಕೊಡುವ ಮೊದಲು ಡಾಲಿ-ಅದಿತಿ ಒಟ್ಟಾಗಿ `ಜಮಾಲಿ ಗುಡ್ಡ’ ಏರಿರುವುದು ಸಿನಿಮಾಗಾಗಿ ಎನ್ನುವುದು ಕ್ಲಿಯರ್ ಕಟ್ಟಾಗಿ ಹೇಳಿಬಿಡ್ತೇವೆ.

ಎಡಕಲ್ಲು ಗುಡ್ಡ'-ಜೋಗಿ ಗುಡ್ಡ’ ಸೇರಿದಂತೆ ಹಲವು ಗುಡ್ಡಗಳನ್ನು ಬಿಗ್‌ಸ್ಕ್ರೀ‌ನ್‌ ಮೇಲೆ ನೀವು ನೋಡರ‍್ತೀರಿ.ಕೆಲವು ಗುಡ್ಡಗಳಿಗೆ ಖುದ್ದಾಗಿ ನೀವೇ ಭೇಟಿಕೊಟ್ಟು ಪ್ರಕೃತಿ ಸೌಂದರ್ಯವನ್ನು ಸವಿದಿರುತ್ತೀರಿ.ಅದೇ ರೀತಿ "ಒನ್ಸ್ ಅಪಾನ್ ಎ ಟೈಮ್ ಜಮಾಲಿ ಗುಡ್ಡ” ದಲ್ಲಿ ಏನ್ ನಡೀತು ಎನ್ನುವುದನ್ನು ನಿರ್ದೇಶಕ ಕುಶಾಲ್‌ಗೌಡ್ರು ಬೆಳ್ಳಿತೆರೆ ಮೇಲೆ ಕಟ್ಟಿಕೊಡುವುದಕ್ಕೆ ಹೊರಟಿದ್ದಾರೆ. ಈ ಹಿಂದೆ “ಕನ್ನಡಕ್ಕಾಗಿ ಒಂದನ್ನು ಒತ್ತಿ" ಹೆಸರಿನ ಸಿನಿಮಾ ಮಾಡಿ ಒಂದು ಹಂತದ ಸಕ್ಸಸ್ ಕಂಡಿದ್ದರು.ಇದೀಗ ಭೂಮಿ ಮೇಲೆ ಎಲ್ಲಿಯೂ ಸಿಗದ, ಕಲ್ಪನೆಗೆ ನಿಲುಕಿದ‘ಜಮಾಲಿ ಗುಡ್ಡ’ ವನ್ನು ಸಿನಿಮಾ ಪ್ರೇಕ್ಷಕರ ಕಣ್ಮುಂದೆ ತಂದು ನಿಲ್ಲಿಸೋದಕ್ಕೆ ಮನಸ್ಸು ಮಾಡಿದ್ದಾರೆ. ಹೀಗಾಗಿ, ಬಜಾರ್‌ನಲ್ಲಿ ಬಹುಬೇಡಿಕೆಯ ನಟ-ನಟಿಯಾಗಿ ಮಿಂಚುತ್ತಿರುವ ಡಾಲಿ ಧನಂಜಯ್ ಹಾಗೂ ಅದಿತಿ ಪ್ರಭುದೇವ್ ಅವರನ್ನು ಸೆಲೆಕ್ಟ್ ಮಾಡಿಕೊಂಡು `ಜಮಾಲಿ ಗುಡ್ಡ’ವನ್ನು ಹತ್ತಿದ್ದಾರೆ.

ಮೇಲೆ ಹೇಳಿದಂತೆ ಜಮಾಲಿ ಗುಡ್ಡ ಕಾಲ್ಪನಿಕ ಗುಡ್ಡದ ಕಥೆ. ಈಗಾಗಲೇ ರಿಲೀಸ್ ಆಗಿರುವ ಪೋಸ್ಟರ್‌ನಲ್ಲಿ ಡಾಲಿ ಹಾಗೂ ಪುಟ್ಟ ಮಗುವಿನ ಚಿತ್ರಣವನ್ನು ನೋಡಿದರೆ ಇದೊಂದು ಸಸ್ಪೆನ್ಸ್-ಥ್ರಿಲ್ಲರ್ ಕಥೆ ಎಂದೆನಿಸುತ್ತೆ. ಆದರೆ, ಕಥೆ ಬಗ್ಗೆ ಹೆಚ್ಚೇನನ್ನು ಬಿಟ್ಟುಕೊಡದ ಚಿತ್ರತಂಡ ಫಸ್ಟ್ ಲುಕ್ ಪೋಸ್ಟರ್ ಲಾಂಚ್ ಮಾಡಿ ಕೂತೂಹಲ ಕೆರಳಿಸಿದ್ದಾರೆ. ನಟ ಭಯಂಕರ ಡಾಲಿ ಹಾಗೂ ಧೈರ್ಯಂ ಚೆಲುವೆ ಸ್ಕ್ರೀನ್ ಶೇರ್ ಮಾಡಿರುವುದು ಕೂಡ `ಜಮಾಲಿ ಗುಡ್ಡ’ದ ಮೇಲಿನ ನಿರೀಕ್ಷೆ ಹೆಚ್ಚಾಗುವಂತೆ ಮಾಡಿದೆ.

ಸಿದ್ಲಿಂಗು ಖ್ಯಾತಿಯ ವಿಜಯ್ ಪ್ರಸಾದ್ ನಿರ್ದೇಶನದ ತೋತಾಪುರಿಯಲ್ಲಿ ಡಾಲಿ ಹಾಗೂ ಅದಿತಿ ಅಭಿನಯಿಸಿದ್ದಾರೆ. ಆದರೆ ಜಮಾಲಿ ಗುಡ್ಡದಲ್ಲಿ ಫೇರ್ ಆಗಿ ಪಾಪ್‌ಕಾರ್ನ್ ತಿನ್ನಿಸಿ ಕೋಕ್ ಕುಡಿಸಲಿದ್ದಾರೆ. ಚಿಕ್ಕಮಂಗಳೂರು ಸೇರಿದಂತೆ ಹಲವು ಸುಂದರ ತಾಣಗಳಲ್ಲಿ ಚಿತ್ರೀಕರಣ ಆರಂಭಗೊಂಡಿದ್ದು, ಟಗರು-ಸಲಗ ಸಿನಿಮಾ ಖ್ಯಾತಿಯ ಮಾಸ್ತಿಯವರು ಸಂಭಾಷಣೆ ಬರೆದುಕೊಟ್ಟಿದ್ದಾರೆ,ಅರ್ಜುನ್ ಜನ್ಯಾ ಸಂಗೀತ ಚಿತ್ರಕ್ಕಿದೆ. ಪ್ರಕಾಶ್ ಬೆಳವಾಡಿ, ಸತ್ಯಣ್ಣ, ಭಾವನ ರಾಮಣ್ಣ, ನಂದಗೋಪಾಲ್, ಯಶ್ ಶೆಟ್ಟಿ ಸೇರಿದಂತೆ ಪ್ರಮುಖ ಕಲಾವಿದರು ಈ ಚಿತ್ರದಲ್ಲಿದ್ದಾರೆ.

ವಿಶಾಲಾಕ್ಷಿ, ಎಂಟರ್‌ಟೈನ್ಮೆಂಟ್ ಬ್ಯುರೋ ಸಿನಿಲಹರಿ

error: Content is protected !!