Categories
ಸಿನಿ ಸುದ್ದಿ

ಕಬ್ಜ ಟೀಸರ್ ರಿಲೀಸ್ ಮುಂದಕ್ಕೆ…

ಈಗಾಗಲೇ ದೇಶಾದ್ಯಂತ ಸಂಚಲನ ಮೂಡಿಸಿರುವ, ರಿಯಲ್‌ ಸ್ಟಾರ್ ಉಪೇಂದ್ರ ಹಾಗೂ ಅಭಿನಯm ಚಕ್ರವರ್ತಿ ಕಿಚ್ಚ ಸುದೀಪ ಅಭಿನಯದ ಪ್ಯಾನ್ ಇಂಡಿಯಾ ಸಿನಿಮಾ “ಕಬ್ಜ” ಚಿತ್ರದ ಟೀಸರ್ ದೀಪಾವಳಿ ಹಬ್ಬಕ್ಕೆ ಬಿಡುಗಡೆ ಮಾಡುತ್ತೇನೆ ಎಂದು ನಿರ್ದೇಶಕ ಆರ್ ಚಂದ್ರು ತಿಳಿಸಿದ್ದರು. ಅಷ್ಟರಲ್ಲಿ ಪುನೀತ್ ರಾಜಕುಮಾರ್ ಅವರ ಅಗಲಿಕೆಯ ಸುದ್ದಿಗೆ ಇಡೀ ಕರುನಾಡು ಮಂಕಾಯಿತು.

ಹೀಗಾಗಿ ನಿರ್ದೇಶಕ ಆರ್.ಚಂದ್ರು ಟೀಸರ್ ರಿಲೀಸ್ ಕುರಿತು ಮಾತಾಡಿದ್ದಾರೆ. ನಮ್ಮ ತಂಡಕ್ಕೂ ಅಪ್ಪು ಅವರ‌ ಅಗಲಿಕೆ ಬಹಳ ನೋವು ತಂದಿದೆ. ಇಂತಹ ಸಂದರ್ಭದಲ್ಲಿ ಟೀಸರ್ ಬಿಡುಗಡೆ ಮಾಡಿ ಸಂಭ್ರಮಿಸುವುದು ಸರಿಯಲ್ಲ ಎಂಬ ಉದ್ದೇಶದಿಂದ “ಕಬ್ಜ” ಚಿತ್ರದ ಟೀಸರ್ ಬಿಡುಗಡೆ ಮಾಡಿಲ್ಲ

ಮುಂದಿನ‌ ದಿನಗಳಲ್ಲಿ ಟೀಸರ್ ಲಾಂಚ್ ಮಾಡುವುದಾಗಿ ಟ್ವಿಟರ್ ಮೂಲಕ ಸಿನಿಪ್ರೇಕ್ಷಕರಿಗೆ ತಿಳಿಸಿದ್ದಾರೆ.
.

Categories
ಸಿನಿ ಸುದ್ದಿ

ಮೂರು ದಿನದ ಬದುಕೆಂಬ ಸಂತೆ ಹೀಗಿರ‍್ಬೇಕು ! ಟಾಮ್ ಅಂಡ್ ಜರ‍್ರಿ’ ಜೀವನ ಪಾಠ ; ಮಿಡಲ್‌ಕ್ಲಾಸ್ ಹುಡುಗನ ಹೈಕ್ಲಾಸ್ ಸಿನ್ಮಾ !

ಚಿತ್ರ ವಿಮರ್ಶೆ; ವಿಶಾಲಾಕ್ಷಿ

ಟಾಮ್ ಅಂಡ್ ಜರ‍್ರಿ ಈ ವಾರ ಬೆಳ್ಳಿತೆರೆಗೆ ಲಗ್ಗೆ ಇಟ್ಟಿರುವ ಸಿನ್ಮಾ. ಫಸ್ಟ್ ಡೇ ಫಸ್ಟ್ ಶೋ ಸಿನ್ಮಾ ನೋಡಿ ಥಿಯೇಟರ್‌ನಿಂದ ಹೊರಗಡೆ ಬಂದವರು `ಟಾಮ್ ಅಂಡ್ ಜರ‍್ರಿ’ಗೆ ಜೈಕಾರ ಹಾಕಿದ್ದಾರೆ. ಮಿಡಲ್‌ಕ್ಲಾಸ್ ಹುಡುಗನ ಈ ಕಥೆ ಗಾಂಧಿಕ್ಲಾಸ್‌ಗೂ ಸೈ ಮಲ್ಟಿಪ್ಲೆಕ್ಸ್ಗೂ ಜೈ ಎಂದು ಒಪ್ಪಿಕೊಂಡಿದ್ದಾರೆ. ಮಾತ್ರವಲ್ಲ ಮೂರು ದಿನದ ಬದುಕೆಂಬ ಸಂತೆಯಲ್ಲಿ ಹೇಗ್ ಬದುಕಬೇಕು? ಯಾವ್ ರೀತಿ ಬದುಕಿದರೆ ಜೀವನ ಸುಂದರವಾಗಿರುತ್ತೆ? ಜೀವನದಲ್ಲಿ ಯಾವುದರ ಹಿಂದೆ ಓಡಬೇಕು? ಬದುಕನ್ನು ಯಾವ್ ರೀತಿಯಾಗಿ ಶ್ರೀಮಂತಗೊಳಿಸಿಕೊಳ್ಳಬಹುದು? ಲೈಫ್‌ನಲ್ಲಿ ಯಾವುದಕ್ಕೆ ಹೆಚ್ಚು ಪ್ರಾಮುಖ್ಯತೆ ಕೊಡ್ಬೇಕು? ಅದರಿಂದ ಪ್ರತಿಯಾಗಿ ನಮಗೆ ಏನ್ ಸಿಗುತ್ತೆ? ಪ್ರಾಮುಖ್ಯತೆ ಕೊಡದೇ ಇದ್ದರೆ ಏನಾಗುತ್ತೆ? ಮುಂದಿನ ದಿನಗಳಲ್ಲಿ ಯಾವ್ ರೀತಿಯಾಗಿ ಪಶ್ಚಾತಾಪ ಪಡಬೇಕಾಗುತ್ತೆ? ಎನ್ನುವುದನ್ನು ಯುವನಿರ್ದೇಶಕ ರಾಘವ್ ವಿನಯ್ ಶಿವಗಂಗೆ ದೊಡ್ಡ ಪರದೆ ಮೇಲೆ ಸೊಗಸಾಗಿ ಕಟ್ಟಿಕೊಟ್ಟಿದ್ದಾರೆ.

ಟಾಮ್ ಅಂಡ್ ಜರ‍್ರಿ'ಚಿತ್ರದಲ್ಲಿ ಧರ್ಮ(ನಿಶ್ಚಿಕ್ ಕೊರೋಡಿ)ಅನಾಥ ಯುವಕ. ಹೆತ್ತವರಿಲ್ಲದೇ ಅನಾಥಾಶ್ರಮದಲ್ಲಿ ಬೆಳೆಯೋ ಇವನಿಗೆ ಬಾಲ್ಯದಿಂದಲೇ ದೊಡ್ಡಮನುಷ್ಯ ಎನಿಸಿಕೊಳ್ಳುವ ಕನಸಿರುತ್ತೆ.ಕಾಲಲ್ಲಿ ಓಡಾಡಿ ಮನುಷ್ಯ ಎನಿಸಿಕೊಳ್ಳೋದಕ್ಕಿಂತ ಕಾರಲ್ಲಿ ಓಡಾಡಿ ದೊಡ್ಡ ಮನುಷ್ಯ ಎನಿಸಿಕೊಳ್ಳಬೇಕು ಅಂತ ಸ್ನೇಹಿತರ ಜೊತೆ ಹೇಳಿಕೊಳ್ಳುತ್ತಿರುತ್ತಾನೆ.ಆಶ್ರಮದಲ್ಲೇ ಬೆಳೆಯುವಾಗ ಧರ್ಮನನ್ನು ಶ್ರೀಮಂತ ಮನೆತನದವರು ದತ್ತು ಪಡೆಯುತ್ತಾರೆ.ಅದರಂತೇ,ಅದೇ ಆಶ್ರಮದಲ್ಲಿ ಅನಾಥೆಯಾಗಿ ಬೆಳೆಯುತ್ತಿದ್ದ ಸತ್ಯ(ಚೈತ್ರ ರಾವ್)ನ ಕೂಡ ಶ್ರೀಮಂತ ಕುಟುಂಬದ ದಂಪತಿಗಳು ದತ್ತು ಪಡೆಯುತ್ತಾರೆ.ಇವರಿಬ್ಬರು ಆಶ್ರಮದಲ್ಲಿದ್ದಾಗ ಬೆಸ್ಟ್ ಫ್ರೆಂಡ್ಸ್ ಆಗಿರುತ್ತಾರೆ.

ಆದರೆ,ಇಬ್ಬರನ್ನೂ ಬೇರೆ ಬೇರೆ ದಂಪತಿಗಳು ದತ್ತು ಪಡೆದ ಕಾರಣಕ್ಕೆ ದೂರ ದೂರ ಆಗ್ಬಿಡ್ತಾರೆ.ಹೀಗೆ,ಬಾಲ್ಯದಲ್ಲೇ ಬೇರೆ ಬೇರೆಯಾದ ಸತ್ಯ ಹಾಗೂ ಧರ್ಮ ಬೆಳೆದು ದೊಡ್ಡವರಾದ ಮೇಲೆ ಮತ್ತೆ ಸಿಗ್ತಾರೆ.ಸತ್ಯ ತುಂಬಾ ಶ್ರೀಮಂತರ ಮನೆಯಲ್ಲಿ ಬೆಳೆದಿರ‍್ತಾಳೆ ಅವಳಿಗೆ ಯಾವುದಕ್ಕೂ ಕೊರತೆಯಿರೋದಿಲ್ಲ.ಆದರೆ, ಧರ್ಮನನ್ನು ದತ್ತು ಪಡೆದವರು ನಡೆಸುತ್ತಿದ್ದ ಕಂಪನಿಗೆ ಬೆಂಕಿಬಿದ್ದು ಬೀದಿಗೆ ಬಂದಿರುತ್ತಾರೆ.ಹೀಗಾಗಿ,ಧರ್ಮ ತನಗೆ ಇಷ್ಟವಿಲ್ಲದಿದ್ದರೂ ಕೂಡ ಮೆಕಾನಿಕ್ ಆಗಿ ಕೆಲಸಕ್ಕೆ ಸೇರಿಕೊಂಡರ‍್ತಾನೆ.ಇದೇ ಹೊತ್ತಿಗೆ ಬಾಲ್ಯದ ಗೆಳತಿ ‘ಸತ್ಯ’ ಪುನಃ ಸಿಗ್ತಾಳೆ. ಆಕೆಯ ಮೇಲೆ ಧರ್ಮನಿಗೆ ಲವ್ವಾಗುತ್ತೆ.

ಅಂದ್ಹಾಗೇ, ಸತ್ಯ ಮತ್ತು ಧರ್ಮ ಇಬ್ಬರದ್ದು ಅಪೋಸಿಟ್ ಕ್ಯಾರೆಕ್ಟರ್. ಬದುಕನ್ನು ಇಬ್ಬರು ನೋಡುವ ರೀತಿಯೇ ಬೇರೆ ಬೇರೆ. ಇಬ್ಬರ ಯೋಚನೆ-ಆಲೋಚನೆಗಳೇ ಡಿಫರೆಂಟ್. ಕಾಲಲ್ಲಿ ಓಡಾಡಿ ಮನುಷ್ಯ ಎನಿಸಿಕೊಳ್ಳೋದಕ್ಕಿಂತ ಕಾರಲ್ಲಿ ಓಡಾಡಿ ದೊಡ್ಡ ಮನುಷ್ಯ ಎನಿಸಿಕೊಳ್ಳಬೇಕು ಎನ್ನುವುದು ಧರ್ಮನ ನೇಚರ್ ಮತ್ತು ಕನಸು ಆದರೆ, ಕಾರಿದ್ದರೂ ಕಾಲಲ್ಲಿಓಡಾಡುತ್ತಾ ಬಿಂದಾಸ್ ಆಗಿ ಬದುಕುವ ಸ್ವಭಾವ ಸತ್ಯಾಳದ್ದು. ಅನಾಥೆಯಾದರೂ ಶ್ರೀಮಂತ ಕುಟುಂಬದಲ್ಲಿ ಬೆಳೆದ ಈಕೆಗೆ ರಾಯಲ್ ಲೈಫ್ ಬೋರೆದ್ದು ಹೋಗಿರುತ್ತೆ. ಕಣ್ಣು ಆಸೆ ಪಟ್ಟಿದ್ದು, ಮನಸ್ಸು ಕೇಳಿದ್ದು ಕ್ಷಣಾರ್ಧದಲ್ಲಿ ಸಿಕ್ಕಿದ್ದರಿಂದ ಈಕೆಗೆ ಶ್ರೀಮಂತಿಕೆಯ ಮೇಲೆ ಒಂದು ರೀತಿ ಆಲಸ್ಯ ಹುಟ್ಟಿರುತ್ತೆ.

ಹೃದಯ ಏನ್ ಬಯಸುತ್ತೋ ಅದು ಕ್ಷಣಾರ್ಧದಲ್ಲಿ ಸಿಗ್ಬಾರ್ದು ಅದಕ್ಕಾಗಿ ಕಾತುರದಿಂದ ಕಾಯಬೇಕು ಎನ್ನುವ ವಾದ ಈಕೆಯದ್ದು. ಆದರೆ, ಇಷ್ಟಪಟ್ಟಿದ್ದು ಕ್ಷಣಾರ್ಧದಲ್ಲಿ ಸಿಗ್ಬೇಕು, ಜೀವನ ಒಂದೇ ಸಿಲ ಸಿಗೋದು ಸರಿಯಾಗಿ ಎಂಜಾಯ್ ಮಾಡ್ಬೇಕು ಎನ್ನುವುದು ಧರ್ಮನ ವಾದ. ಹೀಗೆ ವಿರುದ್ದ ದಿಕ್ಕಿನಲ್ಲಿ ಸಾಗಬಯಸುವ ಇವರಿಬ್ಬರು ಒಂದಾಗ್ತಾರಾ? ಪ್ರೀತಿಸಿದ ಇವರಿಬ್ಬರು ಜೊತೆಯಾಗ್ತಾರಾ? ಈ ಕೂತೂಹಲದ ಪ್ರಶ್ನೆಗೆ ಉತ್ತರ ಬೇಕು ಅಂದರೆ ಕೂಲ್‌ಡ್ರಿಂಕ್ಸ್ ಜೊತೆ ಪಾಪ್‌ಕಾರ್ನ್ ತಗೊಂಡು ನೀವು ಕೂಡ ಥಿಯೇಟರ್‌ಗೆ ಬನ್ನಿ

ಟಾಮ್ ಅಂಡ್ ಜರ‍್ರಿ ಇಬ್ಬರು ದೂರ ಆಗ್ತಾರಾ ಅಥವಾ ಇಬ್ಬರು ಜೊತೆಯಾಗ್ತಾರಾ ಅನ್ನೋದಲ್ಲ ಕಥೆ. ಈ ಸಿನಿಮಾದಿಂದ ಜೀವನಕ್ಕೆ- ಬದುಕಿಗೆ ಒಂದು ಸಂದೇಶ ಇದೆ. ಮಿಡಲ್‌ಕ್ಲಾಸ್-ಹೈಕ್ಲಾಸ್ ಅಂತ ನೋಡದೇ, ಶ್ರೀಮಂತ ಹಾಗೂ ಬಡವ ಎಂದು ಭೇದ-ಭಾವ ಮಾಡದೇ ಹೇಗ್ ಬದುಕಬೋದು? ದೊಡ್ಡ ಮನುಷ್ಯನಾಗ್ಬೇಕು ಎಂದು ಬಯಸುವವರು ಮೊದಲು ಯಾವುದರಲ್ಲಿ ದೊಡ್ಡಮನುಷ್ಯ ಎನಿಸಿಕೊಳ್ಳಬೇಕು? ಸುತ್ತ-ಮುತ್ತಲಿನವರಿಗೆ ಯಾವ್ ರೀತಿಯಾಗಿ ಪ್ರೀತಿ ಹಂಚಬೇಕು? ಭಾವನೆಗಳಿಗೆ ಹೇಗೆ ಬೆಲೆಕೊಟ್ಟು ಬದುಕಬೇಕು? ರಕ್ತ ಸಂಬಂಧಿಗಳಲ್ಲದೇ ಹೋದರೂ ಕೂಡ ಆ ಸಂಬಂಧಕ್ಕೆ ಎಂತಹ ವ್ಯಾಲ್ಯೂ ಕೊಡಬೇಕು? ಹೆಣ್ಣಿಗೆ ಎಷ್ಟು ಗೌರವ ಕೊಡಬೇಕು? ಇದೆಲ್ಲದರ ಜೊತೆಗೆ ತಮ್ಮೊಳಗೆ ತಮ್ಮನ್ನು ಕಂಡುಕೊಳ್ಳುವುದು ಹೇಗೆ? ಸಂತೋಷ ಕಾಣುವುದು ಹೇಗೆ? ನಿಸ್ವಾರ್ಥದಿಂದ-ಖುಷಿಯಿಂದ ಬದುಕುವುದು ಹೇಗೆ ಎನ್ನುವುದನ್ನು ಅಚ್ಚುಕಟ್ಟಾಗಿ ಪ್ರಸೆಂಟ್ ಮಾಡಿದ್ದಾರೆ. ತಾವು ಕಂಡಿದ್ದು-ಕೇಳಿದ್ದು-ನೋಡಿದ್ದು-ಅನುಭವಿಸಿದ್ದು ಎಲ್ಲವನ್ನೂ ಸಿನಿಮಾವಾಗಿಸಿ ಪ್ರೇಕ್ಷಕರಿಗೆ ಜೀವನದ ಪಾಠ ಮಾಡಿದ್ದಾರೆ. ತಂದೆ-ತಾಯಿ ಪ್ರೀತಿಯನ್ನು ಅಮೋಘವಾಗಿ ಕಟ್ಟಿಕೊಟ್ಟಿದ್ದಾರೆ.

ಕನ್ನಡ ಚಿತ್ರರಂಗದಲ್ಲಿ ಸಹಾಯಕ ನಿರ್ದೇಶಕರಾಗಿ ಗುರ್ತಿಸಿಕೊಂಡು, ಕೆಜಿಎಫ್ ಸಿನಿಮಾಗೆ ಡೈಲಾಗ್ ರೈಟರ್ ಆಗಿದ್ದ ನಿರ್ದೇಶಕ ರಾಘವ್ ವಿನಯ್ ಶಿವಗಂಗೆಗೆ ‘ಟಾಮ್ ಅಂಡ್ ಜರ‍್ರಿ'ಚೊಚ್ಚಲ ಸಿನ್ಮಾ.ಮೊದಲ ಪ್ರಯತ್ನದಲ್ಲೇ ಒಂದು ಮಟ್ಟಿಗೆ ಸಕ್ಸಸ್ ಕಂಡಿದ್ದಾರೆ.ಮಿಡಲ್ ಕ್ಲಾಸ್ ಹುಡುಗನ ಪಾತ್ರಕ್ಕೆ ಬಣ್ಣ ಹಚ್ಚಿರುವ ನಟ ನಿಶ್ಚಿತ್ ಕೊರೋಡಿ ಭರವಸೆ ಮೂಡಿಸಿದ್ದಾರೆ.ಈ ನಟನ ಸ್ಕ್ರೀನ್ ಪ್ರಸೆನ್ಸ್ ನೋಡಿದರೆ ಗಂಧದಗುಡಿಯಲ್ಲಿ ಗಟ್ಟಿಯಾಗಿ ನೆಲೆಯೂರೋದು ಗ್ಯಾರಂಟಿ ಎನಿಸುತ್ತೆ.ಇನ್ನೂ ನಾಯಕಿ ಸತ್ಯ ಪಾತ್ರಧಾರಿ ಚೈತ್ರಾ ಮುದ್ದಾಗಿ ಅಭಿನಯಿಸಿದ್ದಾರೆ.ಸ್ಕ್ರೀನ್ ಮೇಲೆ ಚೆಂದ ಕಾಣಿಸ್ತಾರೆ, ಕುಡಿನೋಟದಲ್ಲೇ ದಿಲ್ ಕದಿಯುವ ಚಾಕಚಾಕ್ಯತೆ ಚೈತ್ರಾಗಿದೆ. ಅಮ್ಮನ ಪಾತ್ರದಲ್ಲಿ ತಾರಮ್ಮ ಅವ್ರದ್ದು ಅದ್ಭುತ ಅಭಿನಯ.ಕಡ್ಡಿಪುಡ್ಡಿ ಚಂದ್ರು ಅಳುಸ್ತಾರೆ,ಪ್ರಕಾಶ್ ತುಮ್ಮಿನಾಡು ನಗುಸ್ತಾರೆ.ಜೈ ಜಗದೀಶ್,ರಾಕ್‌ಲೈನ್ ಸುಧಾಕರ್,ಕೋಟೆ ಪ್ರಭಾಕರ್,ಸಂಪತ್ ಮೈತ್ರೇಯ,ಪದ್ಮಜಾ ರಾವ್,ಪ್ರಶಾಂತ್ ನಟನ, ಮೈತ್ರಿ ಜಗ್ಗಿ ಅವರವರ ಪಾತ್ರಕ್ಕೆ ಉಸಿರು ತುಂಬಿದ್ದಾರೆ.ಇವರೊಟ್ಟಿಗೆ ಸಂಪೂರ್ಣ ಹೊಸಬರ ತಂಡವಿದ್ದು `ಟಾಮ್ ಅಂಡ್ ಜರ‍್ರಿ’ ಗಾಗಿ ಶ್ರಮಿಸಿದ್ದಾರೆ. ನವ ಪ್ರತಿಭೆಗಳಿಗೆ ಚಾನ್ಸ್ ಕೊಡಬೇಕು ಅಂತ `ರಿದ್ಧಿ ಸಿದ್ಧಿ ಫಿಲಂಸ್‌ನ ರಾಜು ಶೇರಿಗಾರ್ ಉದಾರತೆ ತೋರಿದ್ದಾರೆ.

ಚಿತ್ರದಲ್ಲಿ ಒಟ್ಟು ಐದು ಹಾಡುಗಳಿದ್ದು, ಮ್ಯಾಥ್ಯೂಸ್ ಮನು ಸಂಗೀತ ಸಂಯೋಜಿಸಿದ್ದಾರೆ. `ಹಾಯಾಗಿದೆ ಎದೆಯೊಳಗೆ'ಹಾಡು ಮತ್ತು ತಾಯಿ ಸೆಂಟಿಮೆಂಟ್ ಇರುವ `ಜಗದ ಜೋಲಿಯ ತೂಗುವ ಕೈಗಳೇ’ ಸಾಂಗ್ ಪ್ರೇಕ್ಷಕರನ್ನು ಕಟ್ಟಿಹಾಕುತ್ತವೆ. ಸಂಕೇತ್ ಕ್ಯಾಮೆರಾ ವರ್ಕ್ ಚೆನ್ನಾಗಿದೆ, ಹೀರೋ-ಹೀರೊಯಿನ್ನಾ ಚೆನ್ನಾಗಿ ತೋರಿಸಿದ್ದಾರೆ. ಸೂರಜ್ ಅಂಕೊಲೇಕರ್ ಸಂಕಲನ ಇನ್ನೊಂದಿಷ್ಟು ಶಾರ್ಪ್ ಆಗ್ಬೇಕಿತ್ತು. ಅರ್ಜುನ್ ರಾಜ್ ಸಾಹಸ ಸೂಪರ್. `ಸಾವಿಗಿಂತ ರೆಸ್ಟ್ ಇಲ್ಲ.. ಸ್ಮಶಾನಕ್ಕಿಂತ ಒಳ್ಳೆ ರೆಸಾರ್ಟ್ ಇಲ್ಲ’ ಎನ್ನುವಂತಹ ಡೈಲಾಗ್‌ಗಳಿವೆ. ಆದರೆ, ನಿರ್ದೇಶಕರು ಹೀರೋ ಪಾತ್ರಕ್ಕೆ ಕ್ಲ್ಯಾರಿಟಿ ಕೊಡುವಲ್ಲಿ ಇನ್ನೊಂದಿಷ್ಟು ಇಂಟ್ರೆಸ್ಟ್ ತೋರಿಸಬೇಕಿತ್ತು. ಕಾಲಲ್ಲಿ ಓಡಾಡಿ ಮನುಷ್ಯ ಎನಿಸಿಕೊಳ್ಳೋದಕ್ಕಿಂತ ಕಾರಲ್ಲಿ ಓಡಾಡಿ ದೊಡ್ಡ ಮನುಷ್ಯ ಎನಿಸಿಕೊಳ್ಳಬೇಕು ಅಂದರೆ ನೀನು ಈ ಕೆಲಸ ಮಾಡ್ಬೇಕಪ್ಪ ಅಂತ ಪಾತ್ರವನ್ನು ಗಟ್ಟಿಗೊಳಿಸಬೇಕಿತ್ತು. ಹೀರೋ-ಹೀರೋಯಿನ್ ಮಧ್ಯೆ ಒಂದಿಷ್ಟು ರೊಮ್ಯಾನ್ಸ್ ಇಡಬೇಕಿತ್ತು. ಬಿಎಂಟಿಸಿ ಬಸ್ ಸೀನ್‌ಗಳಲ್ಲಿ ನಡೆಯುವ ಸಂಭಾಷಣೆ ಕಡಿಮೆಯಾಗಬೇಕಿತ್ತು. ಇದು ಹೊರೆತುಪಡಿಸಿದರೆ ಸಿನಿಮಾ ಆಲ್ ಓಕೆನೇ. ಇಲ್ಲಿವರೆಗೂ ಹೊಸಬರ ಪ್ರಯತ್ನಕ್ಕೆ ಪ್ರತಿಫಲ ಸಿಕ್ಕಿದೆ. ಟಾಮ್ ಅಂಡ್ ಜರ‍್ರಿಗೂ ಅದೇ ಸಕ್ಸಸ್ ಸಿಗುತ್ತಾ ಒಂದು ವಾರ ಕಾಯಬೇಕು.

ಎಂಟರ್‌ಟೈನ್ಮೆಂಟ್ ಬ್ಯೂರೋ ಸಿನಿಲಹರಿ

Categories
ಸಿನಿ ಸುದ್ದಿ

ಆದರ್ಶ ಪ್ರೇಮಿಯ ಪೂಜ್ಯ ಭಾವ! ವೈದ್ಯಲೋಕದಲ್ಲೊಂದು ಭಾವುಕ ಪ್ರೇಮ

ಚಿತ್ರ ಪ್ರೇಮಂ ಪೂಜ್ಯಂ
ನಿರ್ದೇಶನ: ರಾಘವೇಂದ್ರ
ನಿರ್ಮಾಣ: ಕೆದಂಬಾಡಿ ಕ್ರಿಯೇಷನ್ಸ್
ತಾರಾಗಣ: ನೆನಪಿರಲಿ ಪ್ರೇಮ್‌, ಬೃಂದಾ ಅಚಾರ್ಯ, ಐಂದ್ರಿತಾ ರೇ, ಆನಂದ್‌, ಸಾಧುಕೋಕಿಲ, ನಾಗಾಭರಣ, ಅವಿನಾಶ್‌, ಮಾಳವಿಕ, ಅನುಪ್ರಭಾಕರ್‌ ಇತರರು.

ಚಿತ್ರ ವಿಮರ್ಶೆ; ವಿಜಯ್‌ ಭರಮಸಾಗರ

ಮೊದಲ ನೋಟದಲ್ಲೇ ಆ ಎಂಬಿಬಿಎಸ್‌ ಸ್ಟುಡೆಂಟ್‌ಗೆ ಅದೇ ಕಾಲೇಜಿನ ಹುಡುಗಿಯೊಬ್ಬಳ ಮೇಲೆ ಮೆಲ್ಲನೆ ಪ್ರೀತಿ ಅಂಕುರವಾಗುತ್ತೆ. ಆಕೆಗೂ ಅವನ ಮೇಲೆ ಅದೇ ಕುಚ್‌ ಕುಚ್‌ ಶುರುವಾಗುತ್ತೆ. ಆಕೆಗೆ ಅವನ ಕೈ ಸ್ಪರ್ಶಿಸೋ ಆಸೆ, ಆದರೆ, ಅವನಿಗೋ ಅವಳನ್ನು ಅತಿಯಾಗಿ ಗೌರವಿಸಿ, ಆರಾಧಿಸೋ ಹಂಬಲ. ಭೇಟಿಯಾದಾಗೆಲ್ಲ ಆಕೆ ಶೇಕ್‌ಹ್ಯಾಂಡ್‌ಗಾಗಿ ತನ್ನ ಕೈ ಚಾಚಿದರೆ, ಅವನು ತನ್ನ ಎದೆಯ ಮೇಲೆ ಕೈ ಇಟ್ಟುಕೊಂಡು ಮುಗುಳ್ನಗುತ್ತಲೇ ಮೌನವಾಗುತ್ತಾನೆ… ಕಾರಣ ಮದ್ವೆ ಆಗೋ ತನಕ ಅವಳನ್ನು ಸ್ಪರ್ಶಿಸಲೇಬಾರದು ಅನ್ನೋ ದೃಢ ನಿರ್ಧಾರ ಅವನದು!
ಅಬ್ಬಾ, ಈ ಕಾಲದಲ್ಲೂ ಇಂಥಾ ಹುಡುಗ ಸಿಕ್ತಾನಾ? ಈ ಪ್ರಶ್ನೆ ಸಹಜವಾಗಿಯೇ ಬರುತ್ತೆ. ಆದರೂ, ಇದು “ಪ್ರೇಮಂ ಪೂಜ್ಯಂ” ಚಿತ್ರದಲ್ಲಿ ಸಾಧ್ಯವಾಗಿಸಿದ್ದಾರೆ ನಿರ್ದೇಶಕ ರಾಘವೇಂದ್ರ.

ಒಂದು ನಿಷ್ಕಲ್ಮಶ ಪ್ರೀತಿಯ ಕಥೆ ಹೆಣೆಯುವ ಮೂಲಕ ಮನಸ್ಸು ಭಾರವಾಗಿಸುವ ಪ್ರಯತ್ನ ಮಾಡಿರುವ ನಿರ್ದೇಶಕರಿಗೆ ನಿರೂಪಣೆಯಲ್ಲಿ ಇನ್ನಷ್ಟು ಗಟ್ಟಿ ಹಿಡಿತ ಬೇಕಿತ್ತು. ಎಲ್ಲಾ ಪ್ರೀತಿಯ ಕಥೆಗಳಿಗಿಂತ ಈ ಪ್ರೀತಿಯ ಕಥೆ ಹೇಳಿಕೊಳ್ಳುವಂತಹ ವಿಭಿನ್ನವೇನಲ್ಲ. ಆದರೆ, ಪ್ರೀತಿಗೆ ಹೊಸ ವ್ಯಾಖ್ಯಾನ ಬರೆಯುವಲ್ಲಿ ಕೊಂಚ ಹೊಸತನದ ಸ್ಪರ್ಶ ಕೊಟ್ಟು ತಕ್ಕಮಟ್ಟಿಗೆ ಸೈ ಎನಿಸಿಕೊಂಡಿದ್ದಾರೆ. ಒಂದೊಳ್ಳೆಯ ಮನಸ್ಸಿರುವ ಹುಡುಗ ಅಷ್ಟೇ ಚಂದವಾಗಿರುವ ಹುಡುಗಿಯನ್ನು ಆನೆ ಮೇಲಿನ ಅಂಬಾರಿಯೊಳಗಿರುವ ದೇವತೆಯಷ್ಟೇ ಪ್ರೀತಿಸ್ತಾನೆ. ಆದರೆ, ಅವಳನ್ನು ಮದುವೆ ಆಗೋತನಕ ಸ್ಪರ್ಶಿಸದೆ, ತನ್ನ ಹೃದಯದಲ್ಲೇ ಆರಾಧಿಸುವ ದೊಡ್ಡ ಗುಣವುಳ್ಳ ಹುಡುಗನ ಪ್ರೀತಿ ನಿಜವಾಗಿಯೂ ಹಂಡ್ರೆಡ್‌ ಪರ್ಸೆಂಟ ಅನ್ನೋದನ್ನು ತೆರೆಮೇಲೆ ನೋಡಬೇಕು.


ಸಿನಿಮಾದ ಒಂದೊಂದು ಫ್ರೇಮ್‌ ಕೂಡ ಪೇಂಟಿಂಗ್‌ನಂತಿದೆ. ಅದರ ಬಗ್ಗೆ ಎಲ್ಲೂ ಚಕಾರ ಎತ್ತುವಂತಿಲ್ಲ. ಸಿನಿಮಾ ಕಥೆಯ ಅಗತ್ಯಕ್ಕಿಂತಲೂ ಅದ್ಧೂರಿತನ ಎದ್ದು ಕಾಣುತ್ತದೆ. ಮೊದಲರ್ಧ ಮೆಲ್ಲನೆ ಸಾಗುವ ಸಿನಿಮಾ ದ್ವಿತಿಯಾರ್ಧ ಗಂಭೀರತೆ ಪಡೆದುಕೊಳ್ಳುತ್ತೆ. ಮೊದಲರ್ಧಕ್ಕಿಂತ ದ್ವಿತಿಯಾರ್ಧದಲ್ಲೇ ಸಿನಿಮಾ ಗಟ್ಟಿಯಾಗಿದೆ. ಸರಾಗವಾಗಿ ಸಾಗುವ ಲವ್‌ಸ್ಟೋರಿ ನಡುವೆ ಎಗ್ಗಿಲ್ಲದಂತೆ ಹಾಡುಗಳು ಇಣುಕುವುದರಿಂದ ಸಿನಿಮಾದ ವೇಗಕ್ಕೆ ಅಡ್ಡಿಯಾದಂತಿದೆ. ನೋಡುಗ ಒಂದೊಳ್ಳೆಯ ಪ್ರೀತಿ ಕಥೆಯ ಹೂರಣ ಸವಿಸುತ್ತಿರುವ ಮಧ್ಯೆಯೇ, ಹಾಡುಗಳನ್ನು ನೂಕಿ ಸವಿರುಚಿಯನ್ನು ಹಾಳುಗೆಡವುದಂತಾಗುತ್ತದೆ. ಕಥೆಗೆ ಪೂರಕವಾಗಿ ಹಾಡುಗಳಿವೆಯಾದರೂ, ಅವುಗಳ ಸಂಖ್ಯೆಯನ್ನು ಕಡಿಮೆಗೊಳಿಸುವ ಸಾಧ್ಯತೆ ಇತ್ತು. ನಿರ್ದೇಶಕರು ಅದೇಕೋ, ಚಿತ್ರಕಥೆಗಿಂತ ಹಾಡುಗಳತ್ತವೇ ಹೆಚ್ಚು ಗಮನ ಹರಿಸಿದಂತಿದೆ. ಟೈಟಲ್‌ ಸಾಂಗ್‌ ಪ್ರೇಮಂ ಪೂಜ್ಯಂ ಹಾಡೊಂದರ ಜೊತೆ ಮತ್ತೆರೆಡು ಹಾಡನ್ನು ಹೊರತುಪಡಿಸಿದರೆ, ಉಳಿದ ಯಾವ ಹಾಡುಗಳೂ ರುಚಿಸುವುದಿಲ್ಲ. ಇನ್ನು, ಮೊದಲೇ ಹೇಳಿದಂತೆ ಸಿನಿಮಾದ ಮೊದಲರ್ಧ ಹಾಗು ದ್ವಿತಿಯಾರ್ಧ ಹಾಡುಗಳದ್ದೇ ಕಾರುಬಾರು. ಅಷ್ಟೊಂದು ಹಾಡುಗಳ ಅಗತ್ಯವಿರಲಿಲ್ಲ. ಯಾಕೆಂದರೆ, ಒಂದೊಳ್ಳೆಯ ಲವ್‌ಸ್ಟೋರಿಯನ್ನು ಮನಸಾರೆ ಒಪ್ಪಿಕೊಂಡು ನೋಡುವ ಪ್ರೇಕ್ಷಕನಿಗೆ ಎಲ್ಲೋ ಒಂದು ಕಡೆ ಹಾಡುಗಳೇ ಬೇರೆಡೆ ಗಮನ ಹರಿಸುವಂತೆ ಮಾಡಿವೆ. ಇಡೀ ಸಿನಿಮಾದ ಹೈಲೈಟ್‌ ಅಂದರೆ, ಕಥೆ, ಲೊಕೇಷನ್‌, ಸಂಗೀತ ಮತ್ತು ಹಿನ್ನೆಲೆ ಸಂಗೀತ. ಅಲ್ಲಲ್ಲಿ ತೂಕದ ಮಾತುಗಳಿಗೆ ಒತ್ತು ಕೊಡಲಾಗಿದೆ ಅನ್ನುವುದೇ ಸಮಾಧಾನ. ಹಾಸ್ಯ ನಟರಿದ್ದಾರೆ ಆದರೆ, ಕಚಗುಳಿ ಇಡುವಂತಹ ಹಾಸ್ಯದ ಆಕರ್ಷಣೆ ಇಲ್ಲ. ಸಾಧುಕೋಕಿಲ ಅವರನ್ನು ಸೀನಿಯರ್‌ ಎಂಬಿಬಿಎಸ್‌ ಸ್ಟುಡೆಂಟ್‌ ಅಂತಂದುಕೊಳ್ಳುವುದು ತುಸು ಕಷ್ಟವೇ ಸರಿ. ಸಿನಿಮಾ ಅವಧಿಯನ್ನು ಕೊಂಚ ಕಡಿಮೆಗೊಳಿಸುವ ಪ್ರಯತ್ನ ಮಾಡಿದ್ದರೆ, ನಿಜಕ್ಕೂ ಇನ್ನಷ್ಟು ಪೂಜ್ಯ ಮನೋಭಾವ ಬರುತ್ತಿತ್ತೇನೋ. ಆದರೂ, ಇದು ಡಾಕ್ಟರ್ಸ್‌ ಸೇರಿದಂತೆ ಪ್ರೇಮಿಗಳು, ಹುಡುಗ, ಹುಡುಗಿಯರು, ದೊಡ್ಡೋರು, ಸಣ್ಣೋರು ಕೂಡ ನೋಡಲ್ಲಡ್ಡಿಯಿಲ್ಲ.


ಕಥೆ ಬಗ್ಗೆ ಹೇಳುವುದಾದರೆ…
ಇಲ್ಲಿ ಜಾತಿ-ಧರ್ಮ ನಡುವಿನ ನಿಷ್ಕಲ್ಮಷ ಪ್ರೇಮವಿದೆ. ಸಂಬಂಧಗಳ ಮಧ್ಯೆ ಪ್ರೀತಿ ಇದೆ. ಭಾವನೆಗಳನ್ನು ಅರ್ಥ ಮಾಡಿಕೊಳ್ಳುವ ಗೆಳೆತನವಿದೆ, ಅಪ್ಪ, ಅಮ್ಮನ ಪ್ರೀತಿ ವಾತ್ಸಲ್ಯ ತುಂಬಿದೆ. ಅಲ್ಲಲ್ಲಿ ಕರುಣೆಯ ನೋಟವಿದೆ. ಪರ ಮನಸ್ಸುಗಳನ್ನು ಖುಷಿಪಡಿಸಬೇಕು ಎಂಬ ಧ್ಯೇಯ ಕೂಡ ಇದೆ. ಇವಿಷ್ಟು ಪ್ರೀತಿಯೊಳಗಿನ ಬೆಸುಗೆ. ಒಬ್ಬ ಮಂಡ್ಯ ಸಮೀಪದ ಹಳ್ಳಿಯೊಂದರ ರೈತನ ಮಗ ಡಾಕ್ಟರ್‌ ಆಗುವ ಆಸೆಯಿಂದ ಮೆಡಿಕಲ್‌ ಓದಲು ಪಟ್ಟಣಕ್ಕೆ ಬರ್ತಾನೆ. ಮೆಡಿಕಲ್‌ ಕಾಲೇಜಿನಲ್ಲಿ ಮೊದಲ ಸಲ ನೋಡುವ ಹುಡುಗಿ ಜೊತೆ ಪ್ರೀತಿ ಶುರುವಾಗುತ್ತೆ. ಅವಳಿಗೂ ಪ್ರೀತಿ ಅಂಕುರವಾಗುತ್ತೆ. ಪ್ರೀತಿ ನಡುವೆ ಧರ್ಮ ಅಡ್ಡ ಬರುತ್ತೆ. ಇನ್ನೇನು, ಮದುವೆ ಅನ್ನೋದು ಕನಸು ಅಂದುಕೊಳ್ಳುವಷ್ಟರಲ್ಲಿ ಅಲ್ಲೊಂದು ಪವಾಡ ನಡೆಯುತ್ತೆ. ಆ ಪವಾಡ ಏನು ಅನ್ನುವ ಕುತೂಹಲವಿದ್ದರೆ ಸಿನಿಮಾ ನೋಡಬಹುದು.


ಈ ಚಿತ್ರದ ಕಥೆ ಸಾಗುವ ರೀತಿ ನೋಡಿದವರಿಗೆ ಹಾಗೊಮ್ಮೆ ವಿಷ್ಣುವರ್ಧನ್‌ ಅಭಿನಯದ ಬಂಧನ ಸಿನಿಮಾ ನೆನಪಾಗುತ್ತೆ. ಅದಕ್ಕೂ ಇದಕ್ಕೂ ಸಾಮ್ಯತೆ ಇಲ್ಲದಿದ್ದರೂ, ಅಲ್ಲೂ ವಿಷ್ಣುವರ್ಧನ್‌ ಡಾಕ್ಟರ್.‌ ಸುಹಾಸಿನಿಯೂ ಡಾಕ್ಟರ್.‌ ಇಲ್ಲೂ ನಾಯಕ ಡಾಕ್ಟರ್‌, ನಾಯಕಿಯೂ ಮೆಡಿಕಲ್‌ ಸ್ಟುಡೆಂಟ್.‌ ಅಲ್ಲಿ ವಿಷ್ಣುವರ್ಧನ್‌ ಡಾ.ಹರೀಶ್ ಆಗಿದ್ದರೆ, ಇಲ್ಲಿ ಪ್ರೇಮ್‌ ಡಾ.ಶ್ರೀಹರಿ. ಅಲ್ಲೂ ರೋಗಿಗಳ ಆರೋಗ್ಯದ ಬಗ್ಗೆ ಕಾಳಜಿ ವಹಿಸಿದರೆ, ಇಲ್ಲೂ ರೋಗಿಗಳ ಮೇಲೆ ಕಾಳಜಿ ಇದೆ. ಬಂಧನದಲ್ಲೂ ವಿಷ್ಣುವರ್ಧನ್‌ ಅವರಿಗೆ ನಾಯಕಿ ಸಿಗಲ್ಲ. ಕೊನೆಗೆ ವಿಷ್ಣುವರ್ಧನ್ ಸಹ ಪ್ರಾಣ ಬಿಡ್ತಾರೆ. ಪ್ರೇಮಂ ಪೂಜ್ಯಂ ಚಿತ್ರದಲ್ಲೂ ಕೂಡ…? ಹೇಳುವುದಕ್ಕಿಂತ‌ ಒಂದೊಮ್ಮೆ ನೋಡಿ ಬಿಡಿ. ಇನ್ನು, ವೃತ್ತಿಯಲ್ಲಿ ವೈದ್ಯರಾಗಿರುವ ನಿರ್ದೇಶಕ ರಾಘವೇಂದ್ರ ಅವರ ಚೊಚ್ಚಲ ಪ್ರಯತ್ನ ಸರಿಯಾಗಿಯೇ ಇದೆ. ಸ್ವಲ್ಪ ಅವಧಿ ಬಗ್ಗೆ ಯೋಚಿಸಿ, ಹಾಡುಗಳನ್ನು ಕಡಿಮೆಗೊಳಿಸುವ ಮನಸ್ಸು ಮಾಡಿದ್ದರೆ, ನಿಜಕ್ಕೂ ಮತ್ತಷ್ಟು ಪ್ರೀತಿ ಹೆಚ್ಚುತ್ತಿತ್ತು.


ಪ್ರೇಮ್‌ ಅವರ ಇಪ್ಪತ್ತೈದನೆ ಸಿನಿಮಾ ಇದು. ಮನಸ್ಸು ಭಾರವಾಗಿಸುವ, ಅಲ್ಲಲ್ಲಿ ಭಾವುಕತೆಗೆ ದೂಡುವಂತಹ ನಟನೆಯಲ್ಲಿ ಅವರು ಗಮನಸೆಳೆಯುತ್ತಾರೆ. ಅವರಿಲ್ಲಿ ಎಂದಿಗಿಂತಲೂ ಹ್ಯಾಂಡ್‌ಸಮ್‌. ಸಿನಿಮಾದುದ್ದಕ್ಕೂ ಅವರ ನಟನೆ ಕಾಡುತ್ತೆ. ಎಲ್ಲಾ ಶೇಡ್‌ ಪಾತ್ರಗಳಲ್ಲೂ ಅವರ ಹಾವಭಾವ ನೆನಪಿರದೇ ಇರದು. ಬಹುತೇಕ ಹುಡುಗಿಯರಿಗೇ ಮನಸಾರೆ ಇಷ್ಟವಾಗುತ್ತಿದ್ದ ಪ್ರೇಮ್, ಈ ಸಿನಿಮಾ ಮೂಲಕ ಇನ್ನಷ್ಟು ಹುಡುಗರಿಗೂ ಇಷ್ಟವಾಗುವಲ್ಲಿ ಸಂದೇಹವಿಲ್ಲ.‌ ಬೃಂದಾ ನಟನೆ ಬಗ್ಗೆ ಹೇಳುವಂಥದ್ದೇನೂ ಇಲ್ಲ. ಐಂದ್ರಿತಾ ಇರುವಷ್ಟು ಕಾಲ ಇಷ್ಟವಾಗುತ್ತಾರೆ. ಆನಂದ್‌, ಸಾಧುಕೋಕಿಲ ಗೆಳೆಯರಾಗಿ ಸೈ ಎನಿಸಿಕೊಂಡಿದ್ದಾರೆ. ನವೀನ್‌ ಕುಮಾರ್‌ ಅವರ ಕ್ಯಾಮೆರಾ ಕೈಚಳಕ ಮತ್ತು ಹರೀಶ್‌ ಕೊಮ್ಮೆ ಅವರ ಕತ್ತರಿ ಪ್ರಯೋಗ ಸಿನಿಮಾದ ಮತ್ತೊಂದು ಪ್ಲಸ್.‌

ಎಂಟರ್‌ಟೈನ್ಮೆಂಟ್‌ ಬ್ಯೂರೋ ಸಿನಿಲಹರಿ

Categories
ಸಿನಿ ಸುದ್ದಿ

ಮದಗಜ ಟೈಟಲ್ ಟ್ರ್ಯಾಕ್ ರೋರಿಂಗ್ ; ರೂಲ್ ಮಾಡಲು ರೆಡಿಯಾದ ಶ್ರೀ ಮುರುಳಿ ! ಇಂಟ್ರುಡಕ್ಷನ್ನೇ ಹೇಳ್ತಿದೆ ಚಂಡಮಾರುತ ಫಿಕ್ಸಂತ!!

  • ವಿಶಾಲಾಕ್ಷಿ

ಮದಗಜ" ರೋರಿಂಗ್‌ಸ್ಟಾರ್ ಶ್ರೀಮುರುಳಿ ನಟನೆಯ ಹೈವೋಲ್ಟೇಜ್ ಸಿನಿಮಾ. ಟೈಟಲ್‌ನಿಂದಲೇ ಹೈಪ್ ಕ್ರಿಯೇಟ್ ಮಾಡ್ಕೊಂಡು, ಕಂಟೆಂಟ್‌ನಿಂದ ಮತ್ತು ಕ್ವಾಲಿಟಿಯಿಂದ ಬಜಾರ್‌ನಲ್ಲಿ ಹವಾ ಎಬ್ಬಿಸಿರುವ ಮದಗಜ’ ಫಿಲ್ಮ್ ಟೀಮ್, ಈಗ ಇಂಟ್ರುಡಕ್ಷನ್ ಸ್ಯಾಂಪಲ್ ತೋರ‍್ಸಿ ಸಿನಿಮಾ ಪ್ರೇಮಿಗಳಿಂದ ಜೈಕಾರ ಹಾಕಿಸಿಕೊಳ್ತಿದ್ದಾರೆ. ಟೈಟಲ್ ಟ್ರ್ಯಾಕೇ ಇಷ್ಟು ರಿಚ್ ಆಗಿರುವಾಗ ಇಡೀ ಸಿನಿಮಾ ಇನ್ನೆಷ್ಟು ರಿಚ್ ಆಗಿರಬೇಡ ಅಂತ ಮಾತನಾಡಿಕೊಳ್ಳುವಂತೆ ಮಾಡಿದ್ದಾರೆ. ಗಾಂಧಿನಗರದ ಮಂದಿ ಮಾತ್ರವಲ್ಲ ಒಂದು ಕ್ಷಣ ಪರಭಾಷೆಯವರು ತಿರುಗಿ ನೋಡುವಂತಹ ಸಿನಿಮಾ ಇದಾಗುತ್ತೆ ಎನ್ನುವ ಸೂಚನೆ ಹೀರೋ ಇಂಟ್ರುಡಕ್ಷನ್ ಸಾಂಗ್‌ನಿಂದನೇ ಸಿಗುತ್ತಿದೆ.

ಯುದ್ದ ಸಾರಿದ.. ಚಂಡಮಾರುತ.. ಧೈರ್ಯ ಗೆಲ್ಲುತ.. ನಿಂತ ಪರ್ವತ.. ಮದಗಜ ಟೈಟಲ್ ಟ್ರ್ಯಾಕ್ ಹಾಡಿನ ಕೆಂಡದಂತಹ ಸಾಲುಗಳಿವು. ಕೆಜಿಎಫ್ ಸಿನಿಮಾದ ಗರ್ಭದಿ ನನ್ನಿರಿಸಿ ಊರಲಿ ನಡೆಯುತಿರೆ' ಅಂತ ಹೆತ್ತವ್ವನ ಮೇಲೆ ಗೀತೆ ರಚಿಸಿದ್ದ ಕಿನ್ನಾಲ್ ರಾಜ್ ಅವರು ಮದಗಜನಿಗೋಸ್ಕರ ಅನ್ಯಾಯಕ್ಕೆ ಟಕ್ಕರ್..ಎದುರಾಳಿಗೆ ಆಫ್ ಮೀಟರ್..ನಮ್ಮೂರ ಬ್ರದರ್ ..ಕ್ಯಾರೆಕ್ಟರ್ ಬ್ಲಾಕ್‌ಬಸ್ಟರ್’ ಅಂತ ರೋರಿಂಗ್ ಪದಗಳನ್ನು ಪೋಣಿಸಿಕೊಟ್ಟಿದ್ದಾರೆ. ಸಂತೋಷ್ ವೆಂಕಿ ಹಾಡಿದ್ದಾರೆ. ಕೆಜಿಎಫ್ ಮ್ಯೂಸಿಕ್ ಕೊಟ್ಟು ಇಡೀ ಜಗತ್ತನ್ನೇ ದಂಗುಬಡಿಸಿರುವ ರವಿ ಬಸ್ರೂರ್ ಅವರು ಈಗ ರೋರಿಂಗ್ ಬ್ರದರ್‌ಗೆ ಜಬರ್ದಸ್ತ್ ಟ್ಯೂನ್ ಹಾಕಿಕೊಟ್ಟಿದ್ದಾರೆ. ಇಂಟ್ರುಡಕ್ಷನ್ ಹಾಡಿನಲ್ಲೇ `ಮದಗಜ’ನ ಮೈಲೇಜ್ ಹೆಚ್ಚಿಸಿದ್ದಾರೆ.

ಹೌದು, ಟೈಟಲ್ ಟ್ರಾಕ್‌ನಿಂದ ಮದಗಜ'ನಿಗೆ ಮಗದೊಂದು ತೂಕ ಬಂದಿದೆ. ಅದಕ್ಕೆ ಕಾರಣ ನಿರ್ದೇಶಕರ ಕಲ್ಪನೆ-ಅದಕ್ಕೆ ತಕ್ಕಂತೆ ಮೇಕಿಂಗ್-ಕ್ಯಾಚಿ ಲಿರಿಕ್ಸ್-ಮ್ಯೂಸಿಕ್ ಕಂಪೋಸಿಷನ್-ಸಿಂಗಿಂಗ್ ಜೊತೆಗೆ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡರ ಖಜಾನೆಯ ಕೋಟಿ ಕೋಟಿ ಹಣ. ಉಮಾಪತಿಯವರು ಒಬ್ಬ ಫ್ಯಾಷನೇಟ್ ಪ್ರೊಡ್ಯೂಸರ್. ಸಿನಿಮಾ ಮಾಡೋದೇ ಬ್ಯುಸಿನೆಸ್‌ಗೋಸ್ಕರ ಎನ್ನುವ ಇವರು ಸಿನಿಮಾ ಕ್ವಾಲಿಟಿ ಮತ್ತು ಕ್ವಾಂಟಿಟಿ ವಿಚಾರದಲ್ಲಿ ಯಾವತ್ತೂ ಕಾಂಪ್ರಮೈಸ್ ಆಗೋದಿಲ್ಲ.

ಎಷ್ಟು ಕೋಟಿ ಬೇಕಾದರೂ ಸುರಿಯೋದಕ್ಕೆ ಸಿದ್ದ. ಆದರೆ, ತಾನು ನಿರ್ಮಾಣ ಮಾಡಿರುವ ಸಿನಿಮಾವನ್ನು ಬರೀ ಗಾಂಧಿನಗರದವರು ಮಾತ್ರವಲ್ಲ ಪರಭಾಷೆಯವರು ತಿರುಗಿ ನೋಡ್ಬೇಕು ಅಂತಾರೇ. ಈ ಹಿಂದೆ ಹೆಬ್ಬುಲಿ ಹಾಗೂ ರಾಬರ್ಟ್ ಸಿನಿಮಾವನ್ನು ಹೊರರಾಜ್ಯದವರು ಕಣ್ಣರಳಿಸಿ ನೋಡಿದ್ದುಂಟು, ಪರಭಾಷಾ ಅಂಗಳದಲ್ಲಿ ಆ ಚಿತ್ರಗಳು ಕಮಾಯಿ ಮಾಡಿದ್ದುಂಟು. ಇದೀಗ ಮದಗಜ’ನ ಸರದಿ.

ಮದಗಜ' ಬಿಗ್‌ಬಜೆಟ್ ಸಿನಿಮಾ. ಕೋಟಿ ಸೆಟ್-ಕಾಸ್ಟ್ಲೀ ಮೇಕಿಂಗ್‌ನಿಂದನೇ ನೋಡುಗರ ಕಣ್ಣು ಕುಕ್ಕುತ್ತಿದೆ. ಬರೋಬ್ಬರಿ 25 ಕೋಟಿ ವೆಚ್ಚದಲ್ಲಿ ತಯ್ಯಾರಾಗುತ್ತಿದ್ದು ಇಂಟ್ರುಡಕ್ಷನ್ ಹಾಡಿಗೆ ಒಂದು ಕೋಟಿ 72 ಲಕ್ಷ ಸುರಿದಿದ್ದಾರೆ. ಮೋಹನ್ ಬಿ.ಕೆರೆ ಸ್ಟುಡಿಯೋದಲ್ಲಿ ಭರ್ತಿ ಒಂದು ತಿಂಗಳು ಸೆಟ್ ವರ್ಕ್ ಕೆಲಸ ನಡೆದಿತ್ತು. ಎಲಿಫೆಂಟ್ ಥೀಮ್‌ನಲ್ಲಿ ಮೂರು ವೆರೈಟಿ ಸೆಟ್ ಹಾಕಲಾಗಿತ್ತು. ರಾಬರ್ಟ್ ಸಿನಿಮಾಗಾಗಿ ದರ್ಶನ್‌ಗೆ ಬೈಕ್ ಡಿಸೈನ್ ಮಾಡಿದ್ದ ಪ್ರಶಾಂತ್,ಮದಗಜನಿಗೆ’ ಸ್ಪೆಷಲ್ ಬೈಕ್ ತಯ್ಯಾರಿ ಮಾಡಿಕೊಟ್ಟರು.

ಚೇತನ್ ಕಾಸ್ಟ್ಯೂಮ್ ಡಿಸೈನ್ ಮಾಡಿದರು. ಸುಮಾರು 15 ದಿನ ಮುರುಳಿಯವರು ಡ್ಯಾನ್ಸ್ ಪ್ರಾಕ್ಟೀಸ್ ಮಾಡಿಕೊಂಡು ರೆಡಿಯಾದರು. ಹೀಗೆ ಸಕಲ ತಯ್ಯಾರಿ ಮಾಡಿಕೊಂಡು ಅಖಾಡದಲ್ಲಿ ಧುಮ್ಕಿದ ರೋರಿಂಗ್ ಸ್ಟಾರ್ 150 ಜನ ಡ್ಯಾನ್ಸರ್ ಮಧ್ಯೆ ಧಗಧಗಿಸಿದ್ದರು. ಮುರುಳಿ ಮಾಸ್ಟರ್ ಕೊರಿಯಾಗ್ರಫಿ ಮಾಡಿದರೆ, ಡಿಓಪಿ ನವೀನ್ ಕುಮಾರ್ ಕ್ಯಾಮೆರಾ ಕಣ್ಣಲ್ಲಿ ಅತ್ಯದ್ಬುತವಾಗಿ ಸೆರೆ ಹಿಡಿದರು. ನಿರ್ದೇಶಕ ಮಹೇಶ್ ಅವರ ಕಲ್ಪನೆಯಂತೆ ಹೀರೋ ಇಂಡ್ರುಡಕ್ಷನ್ ಸಾಂಗ್ ಮಾಸ್ ಥೀಮ್‌ನಲ್ಲಿ ಭರ್ಜರಿಯಾಗಿ ಮೂಡಿಬಂತು. ಇದೀಗ ಯೂಟ್ಯೂಬ್ ಅಂಗಳದಲ್ಲಿ ರೋರ್ ಮಾಡ್ತಿದೆ.

ಮದಗಜನ ಧಮಾಕೇದಾರ್ ಇಂಟ್ರುಡಕ್ಷನ್ ಸಾಂಗ್‌ನ ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ರಿಲೀಸ್ ಮಾಡ್ಬೇಕಿತ್ತು. ನವೆಂಬರ್ ೦೧ರಂದು ಅದ್ದೂರಿಯಾಗಿ ಇವೆಂಟ್ ಮಾಡಿ ಅಪ್ಪು ಕೈನಲ್ಲಿ ಬಿಡುಗಡೆ ಮಾಡ್ಸೋಕೆ ಚಿತ್ರತಂಡ ತಯ್ಯಾರಿ ನಡೆಸಿತ್ತು. ಅಪ್ಪು ಕೂಡ ಮದಗಜ'ನ ಸಾಂಗ್ ನೋಡಿ ಮೆಚ್ಚಿಕೊಂಡಿದ್ದರು. ಅಷ್ಟರಲ್ಲಿ ವಿಧಿಯ ಕೈವಾಡ ದೊಡ್ಮನೆ ಹುಡುಗ ಕಣ್ಮರೆಯಾದರು.

ಶೋ ಮಸ್ಟ್ ಗೋ ಆನ್ ಎನ್ನುವ ಹಾಗೇಮದಗಜ’ ಚಿತ್ರ ಬಿಡುಗಡೆಗೆ ತಯ್ಯಾರಾಗಿದೆ. ಅದ್ದೂರಿಗೆ ಮತ್ತೊಂದು ಹೆಸರೇ ಮದಗಜ' ಎನ್ನುವಂತೆ ನಿರ್ಮಾಣಗೊಂಡಿದೆ. ವಿಷ್ಯೂಯಲಿ ರಿಚ್ ಆಗಿರುವಮದಗಜ’ ಪ್ರೇಕ್ಷಕರಿಗೆ ಮನರಂಜನೆಯ ರಸದೌತಣ ಬಡಿಸಲು ತಯ್ಯಾರಾಗಿದೆ. ನಮ್ಮದು ಬಫೆ ಸಿಸ್ಟಮ್ ವೆಜ್ ಬೇಕೋ ವೆಜ್ ತಿನ್ನಿ.. ನಾನ್ ವೆಜ್ ಬೇಕೋ ನಾನ್ ವೆಜ್ ತಿನ್ನಿ.. ಕಾಸು ಕೊಟ್ಟು ಬಂದವರಿಗೆ ಸಂತೃಪ್ತಿಯಾಗೋದ ಮಾತ್ರ ಸತ್ಯ ಎಂದಿದ್ದಾರೆ ನಿರ್ಮಾಪಕರು.

ಇನ್ನೂ,ಹಳ್ಳಿ ಸೊಗಡಿನ ಸಿನಿಮಾ ಮಾಡಿ ಚೊಚ್ಚಲ ಚಿತ್ರದಲ್ಲೇ ಜೈಕಾರ ಹಾಕಿಸಿಕೊಂಡಿದ್ದ ನಿರ್ದೇಶಕ ಅಯೋಗ್ಯ ಖ್ಯಾತಿಯ ಮಹೇಶ್, ಎರಡನೇ ಚಿತ್ರದಲ್ಲೇ ರೋರಿಂಗ್ ಸ್ಟಾರ್ ಕಾಲ್‌ಶೀಟ್ ಗಿಟ್ಟಿಸಿಕೊಂಡು, ಸ್ಟಾರ್ ಪ್ರೊಡ್ಯೂಸರ್ ಉಮಾಪತಿಯವರಿಂದ ದುಡ್ಡುಹಾಕ್ಸಿ ಪ್ಯಾನ್ ಇಂಡಿಯಾ ತಲುಪೋದಕ್ಕೆ ಹೊರಟಿದ್ದಾರೆ. ಕನ್ನಡದ ಜೊತೆಗೆ ತೆಲುಗು-ತಮಿಳು ಭಾಷೆಯಲ್ಲಿ ರಿಲೀಸ್‌ಗೆ ಸಜ್ಜಾಗಿದೆ. ಚಿತ್ರದಲ್ಲಿ ಅತೀ ದೊಡ್ಡ ತಾರಾಬಳಗವೇ ಇದೆ.

ರೋರಿಂಗ್‌ಸ್ಟಾರ್- ಆಶಿಕಾ ರಂಗನಾಥ್ ಜೋಡಿಯಾಗಿದ್ದು, ಜಗಪತಿ ಬಾಬು, ರಂಗಾಯಣ ರಘು, ಗರುಡರಾಮ್, ದೇವಯಾನಿ, ಚಿಕ್ಕಣ್ಣ, ಶಿವರಾಜ್ ಕೆ ಆರ್ ಪೇಟೆ, ಧರ್ಮಣ್ಣ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದೇ ಡಿಸೆಂಬರ್ ೦೩ರಂದು ತೆರೆಗೆ ತರೋದಕ್ಕೆ ಫಿಲ್ಮ್ ಟೀಮ್ ರೆಡಿಯಾಗ್ತಿದೆ. ಅಭಿಮಾನಿ ದೇವರುಗಳ ಆಶೀರ್ವಾದ ಮದಗಜನ ಮೇಲಿದ್ದರೆ ಶ್ರೀಮುರುಳಿಯ ಹೊಸ ಮೇನಿಯಾ ಸೃಷ್ಟಿಯಾಗೋದು ಗ್ಯಾರಂಟಿ.

ಎಂಟರ್‌ಟೈನ್ಮೆಂಟ್ ಬ್ಯೂರೋ ಸಿನಿಲಹರಿ

Categories
ಸಿನಿ ಸುದ್ದಿ

ಇದು ಲವ್ಲಿ ಸಿನ್ಮಾ-ಪ್ರೇಮ್‌ ಹೊಸ ಹಂಗಾಮ! ಪ್ರೇಮಂ, ಸ್ನೇಹಂ ಪೂಜ್ಯಂ ಗೆಲ್ಗೆ…

ನಟ ಲವ್ಲಿ ಸ್ಟಾರ್ ಪ್ರೇಮ್ ಅಭಿನಯದ “ಪ್ರೇಮಂ ಪೂಜ್ಯಂ” ಚಿತ್ರ ಯಾವಾಗ ರಿಲೀಸ್‌ ಆಗುತ್ತೋ ಅಂತ ಬಹುತೇಕರು ಕಾದಿದ್ದರು. ಅದರಲ್ಲೂ ಲವ್ಲಿ ಸ್ಟಾರ್‌ ಪ್ರೇಮ್‌ ಅವರ ಅಭಿಮಾನಿಗಳಂತೂ ಸಿನಿಮಾ ನೋಡಲು ತುದಿಗಾಲ ಮೇಲೆ ನಿಂತಿದ್ದಾರೆ. ಅಂದಹಾಗೆ, ಅವರ ಪ್ರೇಮವನ್ನು ಪೂಜಿಸುವ ದಿನ ಬಂದೇ ಬಿಟ್ಟಿದೆ.

ಹೌದು, ನವೆಂಬರ್‌ 12ರಂದು “ಪ್ರೇಮಂ ಪೂಜ್ಯಂ” ದೇಶಾದ್ಯಂತ ತೆರೆಕಾಣುತ್ತಿದೆ. ಭಾರತದ ಹಲವು ರಾಜ್ಯಗಳಲ್ಲಿ ಮಾತ್ರವಲ್ಲ, ವಿದೇಶಗಳಲ್ಲೂ ಪ್ರೇಮ್‌ ನಟಿಸಿರುವ ಲವ್ಲಿ ಚಿತ್ರ ರಿಲೀಸ್‌ ಆಗುತ್ತಿದೆ. ಬಿಡುಗಡೆ ಮುನ್ನವೇ ಸಾಕಷ್ಟು ಸುದ್ದಿ ಮಾಡಿರುವ ಈ ಚಿತ್ರ ಅಷ್ಟೇ ನಿರೀಕ್ಷೆ ಹೆಚ್ಚಿಸಿದೆ. ಈಗಾಗಲೇ ಚಿತ್ರದ ಟೈಟಲ್ ಲಿರಿಕಲ್ ಸಾಂಗ್ ವಿಡಿಯೋ ಬಿಡುಗಡೆಯಾಗಿ, ಎಲ್ಲೆಡೆಯಿಂದ ಭರ್ಜರಿ ಮೆಚ್ಚುಗೆ ಪಡೆದು ಸಿನಿಮಾ ನೋಡುವ ಕುತೂಹಲ ಹೆಚ್ಚಿಸಿದೆ. ಈ ಚಿತ್ರ ಪ್ರೇಮ್‌ ಅವರಿಗೆ ತುಂಬಾನೇ ವಿಶೇಷ. ಅದಕ್ಕೆ ಕಾರಣ, “ಪ್ರೇಮಂ ಪೂಜ್ಯಂ” ಪ್ರೇಮ್ ಅವರ 25ನೇ ಸಿನಿಮಾ ಅನ್ನೋದು. ಈಗಾಗಲೇ ಸಾಕಷ್ಟು ಕುತೂಹಲ ಕೆರಳಿಸಿದೆ ಕೂಡ. ಚಿತ್ರದ‌ ಟೈಟಲ್ಲೇ ಹೇಳುತ್ತೆ ಇದೊಂದು ಪಕ್ಕಾ ಇಂಟ್ರೆಸ್ಟಿಂಗ್‌ ಲವ್‌ ಸ್ಟೋರಿ ಅಂತ.


ಸಿನಿಮಾ ಯಾವಾಗ ರಿಲೀಸ್ ಅಂತ‌ ಕೇಳುತ್ತಿದ್ದ ಪ್ರೇಮ್‌ ಫ್ಯಾನ್ಸ್‌ಗೆ ಶುಭ ಶುಕ್ರವಾರ ದರ್ಶನ ನೀಡುತ್ತಿದೆ. ಚಿತ್ರದ ಟೀಸರ್‌, ಸಾಂಗ್‌ ಎಲ್ಲವೂ ಸಿನಿ ಪ್ರೇಮಿಗಳಿಗೆ ಇಷ್ಟವಾಗಿದೆ. “ವೈದ್ಯೋ ನಾರಾಯಣ ಹರಿ.. ಎಂದು ಸಾಗುವ ಗೀತೆಯಲ್ಲೂ ವಿಶೇಷತೆ ಇದೆ. ಅದನ್ನು ಸಿನಿಮಾದಲ್ಲೇ ನೋಡಬೇಕು ಅನ್ನೋದು ಚಿತ್ರತಂಡದ ಮಾತು. ಚಿತ್ರದಲ್ಲಿರುವ ” ನನ್ನ ಜೀವನ ನಿನಗೆ ಸಮರ್ಪಣ ಕೈ ಮುಗಿವೆನು ಈ ನಾರಾಯಣ” ಎಂಬ ಹಾಡು ಅರ್ಥಪೂರ್ಣವಾಗಿದೆ.

ಇನ್ನು, ಈ ಚಿತ್ರ ಕೆಡಂಬದಿ ಕ್ರಿಯೇಷನ್ಸ್‌ನಲ್ಲಿ ಮೂಡಿ ಬಂದಿದ್ದು, ಲವ್ಲಿ ಸ್ಟಾರ್‌ ಪ್ರೇಮ್‌ಗೆ ಜೋಡಿಯಾಗಿ ಬೃಂದಾ ಆಚಾರ್ಯ ಕಾಣಿಸಿಕೊಂಡಿದ್ದಾರೆ. ಡಾ.ರಾಘವೇಂದ್ರ ಬಿ.ಎಸ್.‌ ಅವರು ಈ ಸಿನಿಮಾದ ನಿರ್ದೇಶನ ಮಾತ್ರವಲ್ಲ, ಸಂಗೀತ ಸಂಯೋಜನೆ ಜೊತೆ ಸಾಹಿತ್ಯವನ್ನೂ ಬರೆದಿರುವುದು ವಿಶೇಷ.

ಈ ಚಿತ್ರದ ಪೋಸ್ಟರ್‌ಗಳು ಸಾಕಷ್ಟು ಸುದ್ದಿ ಮಾಡಿದ್ದಂತೂ ನಿಜ. ಅವೆಲ್ಲವನ್ನೂ ನೋಡಿದವರಿಗೆ ಪ್ರೇಮ್‌ ಮತ್ತಷ್ಟು ನ್ಯೂ ಲುಕ್‌ನಲ್ಲಿ ಆಕರ್ಷಿಸುತ್ತಾರೆ. ಫ್ರೆಶ್‌ ಲೊಕೇಷನ್‌ ಜೊತೆ ಅಷ್ಟೇ ಕ್ಯೂಟ್‌ ಜೋಡಿ ಕಾಣಿಸಿಕೊಂಡಿರುವುದನ್ನು ನೋಡಿದರೆ, ಸಿನಿಮಾ ನೋಡುವ ಕಾತುರ ಹೆಚ್ಚದೇ ಇರದು. ಚಿತ್ರಕ್ಕೆ ನವೀನ್‌ ಕುಮಾರ್‌ ಕ್ಯಾಮೆರಾ ಹಿಡಿದರೆ, ಹರೀಶ್‌ ಕೊಮ್ಮೆ ಸಂಕಲನವಿದೆ.

ಇಂತಹ ನಿರೀಕ್ಷೆಯ ಸಿನಿಮಾಗೆ ಡಾ.ರಕ್ಷಿತ್‌ ಕೆಡಂಬದಿ, ಡಾ.ರಾಜಕುಮಾರ್‌ ಜಾನಕಿರಾಮನ್‌, ಡಾ.ರಾಘವೇಂದ್ರ ಎಸ್‌, ಮನೋಜ್‌ ಕೃಷ್ಣನ್‌ ನಿರ್ಮಾಪಕರು. ಇನ್ನೊಂದು ವಿಶೇಷವೆಂದರೆ, ಬಹುತೇಕ ಡಾಕ್ಟರ್‌ಗಳೇ ಸೇರಿ ನಿರ್ಮಿಸಿರುವ ಸಿನಿಮಾ ಇದು. ತಂದೆ-ತಾಯಿ, ಸ್ನೇಹಿತರು ಈ ಎಲ್ಲ ಸಂಬಂಧಗಳಲ್ಲೂ ಪೂಜ್ಯನೀಯ ಭಾವನೆ ಇರಬೇಕೆಂಬ ಉತ್ತಮ ಸಂದೇಶ ಈ ಸಿನಿಮಾದಲ್ಲಿದೆ.

ಅದೇನೆ ಇರಲಿ, ಪ್ರತಿಯೊಬ್ಬ ನಟನಿಗೂ ತನ್ನ ಮೊದಲ ಚಿತ್ರ ಹೇಗೆ ವಿಶೇಷ ಆಗುತ್ತೋ, ಹಾಗೆಯೇ ಅವರ ಪ್ರತಿಯೊಂದು ಸಿನಿಮಾ ಕೂಡ ವಿಶೇಷವೇ. ಅದರಲ್ಲೂ 25 ನೇ ಸಿನಿಮಾ ಅಂದಾಕ್ಷಣ, ಅದೊಂದು ಮೈಲಿಗಲ್ಲು ಎನಿಸುವುದು ಸಹಜ.

ಅಂತಹ 25ನೇ ಹೊಸ್ತಿಲಲ್ಲಿ ಇರುವ ಪ್ರೇಮ್‌, 25ನೇ ಚಿತ್ರದ ಮೇಲೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. “ಪ್ರೇಮಂ ಪೂಜ್ಯಂ” ಸಿನಿಮಾ ಕನ್ನಡದ ಮಟ್ಟಿಗೆ ಫ್ರೆಶ್‌ ಫೀಲ್‌ ಕೊಡುವ ಸಿನಿಮಾ ಆಗಲಿ ಅನ್ನೋದು ಸಿನಿಲಹರಿ ಆಶಯ.

Categories
ಸಿನಿ ಸುದ್ದಿ

ಕೆವಿಎನ್ ತೆಕ್ಕೆಗೆ ಬಾಹುಬಲಿ ಸೂತ್ರಧಾರ ರಾಜಮೌಳಿಯ ‘RRR’ ಸಿನಿಮಾ ವಿತರಣೆ ಹಕ್ಕು…

ಬಾಹುಬಲಿ ಸೃಷ್ಟಿಕರ್ತ ಎಸ್.ಎಸ್ ರಾಜಮೌಳಿ ಸಿನಿಮಾ ಅಂದ್ರೆ ಜಗದಗಲ‌ ನಿರೀಕ್ಷೆ ಇರುತ್ತೆ. ಈಗ ಅಷ್ಟೇ ನಿರೀಕ್ಷೆ ಹುಟ್ಟಿಸಿರುವ ಸಿನಿಮಾ ಆರ್ ಆರ್ ಆರ್. ಪೋಸ್ಟರ್, ಮೇಕಿಂಗ್, ಟೀಸರ್ ಹಾಗೂ ಸಾಂಗ್ ಮೂಲಕ ಕುತೂಹಲದ ಕಾರ್ಮೋಡದಂತಿರುವ ಆರ್ ಆರ್ ಆರ್ ಅಂಗಳದಿಂದ ಬಡಾ ಬ್ರೇಕಿಂಗ್‌ ನ್ಯೂಸ್ ವೊಂದು‌ ರಿವೀಲ್ ಆಗಿದೆ.

ಜೂನಿಯರ್ ಎನ್ ಟಿಆರ್, ಮೆಗಾ ಪವರ್ ಸ್ಟಾರ್ ರಾಮ್ ಚರಣ್, ಬಾಲಿವುಡ್ ಸೂಪರ್ ಸ್ಟಾರ್ ಅಜಯ್ ದೇವಗನ್, ಬ್ಯೂಟಿಫುಲ್ ಆಲಿಯಾ ಭಟ್ ಹೀಗೆ ಬಹುದೊಡ್ಡ ತಾರಾಗಣ‌ ನಟಿಸಿರುವ ತ್ರಿಬಲ್ ಆರ್ ಸಿನಿಮಾ ಕನ್ನಡ, ತೆಲುಗು, ಹಿಂದಿ,‌ತಮಿಳು ಹಾಗೂ‌ ಮಾಲಯಾಳಂ ಭಾಷೆಯಲ್ಲಿ‌ ಮೂಡಿ ಬರ್ತಿದೆ. ಪಂಚ ಭಾಷೆಯಲ್ಲಿ ತೆರೆಗಪ್ಪಳಿಸಲಿರುವ ಆರ್ ಆರ್ ಆರ್ ಸಿನಿಮಾದ‌ ಕರ್ನಾಟಕ ಡಿಸ್ಟ್ರಿಬ್ಯೂಷನ್ ಹಕ್ಕು‌ ಪ್ರತಿಷ್ಠಿತ ಪ್ರೊಡಕ್ಷನ್ ಹೌಸ್ ಕೆವಿಎನ್ ತೆಕ್ಕೆಗೆ ಸೇರ್ಪಡೆಯಾಗಿದೆ.
ರಾಜ್ಯಾದ್ಯಂತ ಆರ್ ಆರ್ ಆರ್ ಸಿನಿಮಾದ ವಿತರಣೆ ಜವಾಬ್ದಾರಿಯನ್ನು ಕೆವಿಎನ್ ಪ್ರೊಡಕ್ಷನ್ ಹೊತ್ತುಕೊಂಡಿದೆ.

ಈಗಾಗ್ಲೇ ಕೆವಿಎನ್ ಪ್ರೊಡಕ್ಷನ್ ಹೌಸ್ , ಸಖತ್, ಬೈ‌ ಟು‌‌ ಲವ್ ಹಾಗೂ ನಿಖಿಲ್ ಕುಮಾರಸ್ವಾಮಿ, ಧ್ರುವ ಸರ್ಜಾಗೂ ಒಂದು ಸಿನಿಮಾ ಮಾಡ್ತಿದೆ. ಈ ಸಿನಿಮಾಗಳ ನಿರ್ಮಾಣದ‌ ಜೊತೆಗೆ ವಿತರಣೆ ಹಕ್ಕಿನ ಜವಾಬ್ದಾರಿಯನ್ನು ಕೆವಿಎನ್ ಅದ್ಭುತವಾಗಿ‌ ನಿರ್ವಹಿಸ್ತಿದೆ.

ಒಂದ್ಕಡೆ ಆರ್ ಆರ್ ಆರ್ ಸಿನಿಮಾದ ಕರ್ನಾಟಕ ವಿತರಣೆ ಹಕ್ಕು ಕೆವಿಎನ್ ಪ್ರೊಡಕ್ಷನ್ ಹೌಸ್ ಸೇರ್ಪಡೆಯಾದ್ರೆ ಮತ್ತೊಂದ್ಕಡೆ ಆರ್ ಆರ್ ಆರ್ ಸಿನಿಮಾದ ಹಳ್ಳಿ ನಾಟು ಯೂಟ್ಯೂಬ್ ನಲ್ಲಿ‌ ಧೂಳ್ ಎಬ್ಬಿಸ್ತಿದೆ. ರಾಮ್ ಚರಣ್ ಹಾಗೂ ತಾರಕ್ ಭರ್ಜರಿ ಸ್ಟೆಪ್ಸ್ ಜೊತೆಗೆ ಕೀರವಾಣಿ‌ ಮ್ಯೂಸಿಕ್ ಕಿಕ್ ಮತ್ತೊಂದು‌ ಲೆವೆಲ್. ದಿನದಿಂದ ದಿನಕ್ಕೆ ಕ್ರೇಜ್ ಹೆಚ್ಚಿಸಿರುವ ಆರ್ ಆರ್ ಆರ್ ಸಿನಿಮಾ ಜನವರಿ 7 ರಂದು ವಿಶ್ವಾದ್ಯಂತ ತೆರೆಗೆ ಬರ್ತಿದೆ.

Categories
ಸಿನಿ ಸುದ್ದಿ

ಬೆಳ್ಳಿತೆರೆ ಮೇಲೆ ಟಾಮ್‌ ಅಂಡ್‌ ಜರ‍್ರಿ ಸವಾರಿ! ಕೆಜಿಎಫ್ ಡೈಲಾಗ್ ರೈಟರ್ ಹೊಸ ಪ್ರಯತ್ನ; ಗಂಟುಮೂಟೆ ಹುಡುಗ, ಜೋಡಿಹಕ್ಕಿ ಹುಡುಗಿಯ ಡಿಂಗುಡಾಂಗು!!

ಟಾಮ್ ಅಂಡ್ ಜರ‍್ರಿ' ಇದೇ ಶುಕ್ರವಾರ ಬೆಳ್ಳಿತೆರೆ ಮೇಲೆ ಸವಾರಿ ಹೊರಡಲಿರುವ ಚಿತ್ರ. ರಾಜಾದ್ಯಂತ ಬಹುತೇಕ ಎಲ್ಲಾ ಚಿತ್ರಮಂದಿರಕ್ಕೆಟಾಮ್ ಅಂಡ್ ಜರ‍್ರಿ’ ಲಗ್ಗೆ ಇಡ್ತಿದ್ದಾರೆ. ಈಗಾಗಲೇ ಇವರಿಬ್ಬರು ಪ್ರೇಮಿಗಳ ಹೃದಯಕ್ಕೆ, ಪಡ್ಡೆಹೈಕ್ಳ ಹಾರ್ಟ್ಗೆ ಲಗ್ಗೆ ಇಟ್ಟಾಗಿದೆ. ಹೀಗಾಗಿಯೇ, ಲವ್ವಲ್ಲಿರೋರು, ಲವ್ವಲ್ಲಿ ಬೀಳೋರೆಲ್ಲರೂ ಕೂಡ `ಹಾಯಾಗಿದೆ ಎದೆಯೊಳಗೆ ಝಲ್ ಎಂದಿದೆ ಈ ಘಳಿಗೆ.. ನೀ ನೋಡೋ ನೋಟವೆಲ್ಲ… ನನ್ನನ್ನೇ ಕೊಲ್ಲೋ ಹಾಗೇ.. ನೀ ಮೋಡಿ ಮಾಡುವಾಗ.. ನಾ ಸೋತು ನಿಂತ ಹಾಗೇ.. ನಿನೆಂಥಾ ಮಾಯಗಾತಿಯೇ.. ಹೀಗಂತ ಹಾಡುತ್ತಾ ಪ್ರೇಮಲೋಕಕ್ಕೆ ಹೋಗಿಬರುತ್ತಿದ್ದಾರೆ. ಕೇವಲ ಒಂದೇ ಒಂದು ಹಾಡು ಯೂತ್ಸ್ನ ಇಷ್ಟೊಂದು ಇಂಪ್ರೆಸ್ ಮಾಡಿದೆ ಅಂದರೆ ಟಾಮ್ ಅಂಡ್ ಜರ‍್ರಿ ಪೂರ್ತಿ ಸಿನಿಮಾ ಯೂತ್ಸ್ ಮೇಲೆ ಇನ್ನೆಷ್ಟು ಪ್ರಭಾವ ಬೀರಬಹುದು. ಈ ಕೂತೂಹಲಕ್ಕೆ ಇದೇ ಶುಕ್ರವಾರ ತೆರೆಬೀಳಲಿದೆ.

ಸಿನಿಮಾದ ಹಾಡುಗಳು ಒಂದು ಚಿತ್ರಕ್ಕೆ ಇನ್ವಿಟೇಷನ್ ಇದ್ದಂತೆ. ರಿಲೀಸ್‌ಗೂ ಮುನ್ನ ಹಾಡು ಹಿಟ್ಟಾದರೆ ಅರ್ಧ ಸಿನಿಮಾ ಗೆದ್ದಂತೆ ಎನ್ನುವ ಮಾತಿದೆ. ಸದ್ಯ ಟಾಮ್ ಅಂಡ್ ಜರ‍್ರಿ ಮೊದಲ ಹಾಡು ಸೂಪರ್-ಡೂಪರ್ ಹಿಟ್ಟಾಗಿದೆ. ಇತ್ತೀಚೆಗೆ ಬಿಡುಗಡೆಯಾದ ಟ್ರೆöÊಲರ್ ಕೂಡ ಬ್ಲಾಕ್‌ಬಸ್ಟರ್ ಹಿಟ್ಟಾಗಿದೆ. ಇಲ್ಲಿವರೆಗೂ ಸುಮಾರು 12 ಲಕ್ಷ ಮಂದಿ ಟ್ರೇಲರ್ ವೀಕ್ಷಣೆ ಮಾಡಿದ್ದಾರೆ. ಟಾಮ್ ಅಂಡ್ ಜರ‍್ರಿಯ ಕಿತ್ತಾಟ-ಗುದ್ದಾಟ-ಮುದ್ದಾಟದ ಝಲಕ್ ಮಜಾ ಕೊಡ್ತಿದೆ. ಕಾಸು ಕೊಟ್ಟು ಸಿನಿಮಾ ನೋಡೋಕೆ ಬರುವವರಿಗೆ ಎಂಟರ್‌ಟೈನ್ಮೆಂಟ್‌ಗೆ ಬರ ಇರೋದಿಲ್ಲ ಎನ್ನುವುದು ಟ್ರೇಲರ್ ನೋಡಿದ್ರೇನೆ ಗೊತ್ತಾಗುತ್ತೆ.

ಫ್ರೆಂಡ್ಸ್ ಸರ್ಕಲ್‌ನಲ್ಲಿ ಖುಷ್ಕಾ ತಗೊಂಡು ಕಬಾಬ್ ತಗೊಳ್ಳೋಕೆ ಪರದಾಡುವವರನ್ನೂ ನೋಡಿರ‍್ತೀರಾ. ಕಾಲಲ್ಲಿ ಓಡಾಡಿ ಮನುಷ್ಯ ಅನಿಸಿಕೊಳ್ಳೋದಕ್ಕಿಂತ ಕಾರಲ್ಲಿ ಓಡಾಡಿ ದೊಡ್ಡ ಮನುಷ್ಯ ಅನಿಸಿಕೊಳ್ಳೋದು ಬೆಸ್ಟ್ ಅಂತ ಡೈಲಾಗ್ ಬಿಡೋ ಫ್ರೆಂಡ್‌ನೂ ನೀವು ನೋಡರ‍್ತೀರಾ. ಇಂಥಾ ಫ್ರೆಂಡ್ಸ್ಗಳನ್ನು ನಿಮ್ಮ ಸ್ನೇಹಕೂಟದಲ್ಲಿ ನೋಡಿದ್ದರೂ, ನೋಡಿಲ್ಲವಾದರೂ ಕೂಡ ಟಾಮ್ ಅಂಡ್ ಜರ‍್ರಿ'ಯನ್ನು ನೋಡೋದಕ್ಕೆ ಥಿಯೇಟರ್‌ಗೆ ಹೋಗಿ. ಯಾಕಂದ್ರೆ, ಸಾಮಾಜಿಕ ಕಟ್ಟುಪಾಡು ಏನೇ ಇದ್ದರೂ ಕೂಡನಾನ್ ಇರೋದು ಹಿಂಗೆ, ನನ್ನ ಜೀವನ ಹಿಂಗೆ ಅಂತ ಬದುಕುವ ಎರಡು ಕ್ಯಾರೆಕ್ಟರ್‌ನ ಕಮರ್ಷಿಯಲ್ ಎಲಿಮೆಂಟ್ಸ್ ಜೊತೆ ಬ್ಲೆಂಡ್ ಮಾಡಿ `ಟಾಮ್ ಅಂಡ್ ಜರ‍್ರಿ’ಯನ್ನು ನಿಮಗೋಸ್ಕರ ಸಿದ್ದಪಡಿಸಿದ್ದಾರೆ ನಿರ್ದೇಶಕ ರಾಘವ್ ವಿನಯ್ ಶಿವಗಂಗೆ.

ರಾಘವ್ ವಿನಯ್ ಶಿವಗಂಗೆ ಯುವ ನಿರ್ದೇಶಕ. ಆದರೆ, ಸಿನಿಮಾ ಇಂಡಸ್ಟ್ರೀಯಲ್ಲಿ ಇವರಿಗಿರುವ ಅನುಭವ ಹಾಗೂ ಸಿನಿಮಾ ವಿದ್ಯೆ ಇದ್ಯೆಯಲ್ಲ ಅದು ಅಘಾದವಾದದ್ದು. ಹೀಗಾಗಿಯೇ ಇವರಿಗೆ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಇಡೀ ದೇಶ ಮೆಚ್ಚಿಕೊಂಡಂತಹ ಕೆಜಿಎಫ್ ಪಾರ್ಟ್ 1ಗೆ ಡೈಲಾಗ್ ಬರೆಯುವಂತಹ ಅವಕಾಶ ಸಿಕ್ಕಿತ್ತು. ಇಂತಿಪ್ಪ ಡೈರೆಕ್ಟರ್ ರಾಘವ್ ವಿನಯ್ ಶಿವಗಂಗೆಯವರು ಇದೇ ಮೊದಲ ಭಾರಿಗೆ ಡೈರೆಕ್ಟರ್ ಕ್ಯಾಪ್ ತೊಟ್ಟು ಕಥೆ-ಚಿತ್ರಕಥೆ ರಚಿಸಿ `ಟಾ ಮ್ ಅಂಡ್ ಜರ‍್ರಿ’ಯನ್ನು ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ಹೊಸತನವಿದೆ, ಹಳೇ ಫಾರ್ಮುಲ ಇಲ್ಲಿಲ್ಲ. ಪ್ರತಿ 20 ನಿಮಿಷಕ್ಕೆ ಸಿನಿಮಾದ ಜಾಹ್ನರ್ ಚೇಂಜ್ ಆಗುತ್ತೆ, ಮ್ಯೂಸಿಕ್ ಬದಲಾಗುತ್ತೆ, ಕಥೆ ಬೇರೊಂದು ಲೋಕವನ್ನೇ ನಿಮ್ಮ ಮುಂದೆ ಹರವಿಡುತ್ತೆ. ಸಂಪೂರ್ಣ ಹೊಸಬರ ತಂಡ ಸೇರಿಕೊಂಡು ಮಾಡಿರುವ ಚಿತ್ರವಾದರೂ ಸಹಿತ ಕಂಟೆAಟ್ ಹಾಗೂ ಅಪ್ರೋಚ್ ಮಾಡುವ ರೀತಿಯಲ್ಲಿ ಹೊಸತನವಿದೆ. ವಿಷ್ಯೂಯಲ್ ಟ್ರೀಟ್ ಎಕ್ಸ್ಟ್ರಾಡಿನರಿಯಾಗಿದೆ. ಬಿಗ್‌ಸ್ಕ್ರೀನ್‌ನಲ್ಲಿ ನೀವು ಅದನ್ನು ನೋಡಿಯೇ ಸವಿಬೇಕು.

ಇನ್ನೂ ಟಾಮ್ ಅಂಡ್ ಜರ‍್ರಿಯಾಗಿ ನಿಶ್ಚಿತ್ ಕೊರೋಡಿ ಹಾಗೂ ಚೈತ್ರಾ ರಾವ್ ಮಿಂಚಿದ್ದಾರೆ. ಗಂಟುಮೂಟೆ ಚಿತ್ರದಲ್ಲಿ ಮಿಂಚಿ ಸೈ ಎನಿಸಿಕೊಂಡಿದ್ದ ನಿಶ್ಚಿತ್ ಇಲ್ಲಿ ಹೀರೋ ಆಗಿದ್ದಾರೆ. ಜೋಡಿಹಕ್ಕಿ ಜಾನಕಿಯಾಗಿ ಕಿರುತೆರೆ ಪ್ರೇಕ್ಷಕರನ್ನು ಸೆಳೆದಿದ್ದ ಚೈತ್ರಾ ರಾವ್ ಮಾಯಬಜಾರ್ ಮೂಲಕ ಬೆಳ್ಳಿತೆರೆಗೆ ಬಂದಿದ್ದರು. ಇದೀಗ ಟಾಮ್ ಅಂಡ್ ಜರ‍್ರಿಯಲ್ಲಿ ಸತ್ಯ ಪಾತ್ರದ ಮೂಲಕ ಕಮಾಲ್ ಮಾಡೋದಕ್ಕೆ ಹೊರಟಿದ್ದಾರೆ. ಧರ್ಮ ಪಾತ್ರದ ಮೂಲಕ ಹವಾ ಎಬ್ಬಿಸೋಕೆ ನಿಶ್ಚಿತ್ ಒಂಟಿಕಾಲಿನಲ್ಲಿ ನಿಂತಿದ್ದಾರೆ. ಹಾಡು ಹಾಗೂ ಟ್ರೇಲರ್‌ನಲ್ಲೇ ಈ ಜೋಡಿಯ ಕೆಮಿಸ್ಟ್ರೊ ವರ್ಕೌಟ್ ಆಗಿದ್ದು ಫ್ಯಾನ್ಸ್ ಹುಟ್ಟಿಕೊಂಡಿದ್ದಾರೆ. ಇಡೀ ಸಿನಿಮಾ ಹೊರಬಂದ್ಮೇಲೆ `ಟಾಮ್ ಅಂಡ್ ಜೆರ್ರಿಗೆ ಸಂಘ-ಸಂಸ್ಥೆಗಳು ದುಪ್ಪಟ್ಟಾಗ್ಬೋದು.

ಹೀರೋ ನಿಶ್ಚಿತ್ ಸದ್ಯಕ್ಕೆ ಆಟಿಟ್ಯೂಡ್ ತೋರಿಸುತ್ತಿಲ್ಲ. ಮೊನ್ನೆ ಸುದ್ದಿಗೋಷ್ಟಿಯಲ್ಲಿ ಮಾತನಾಡುತ್ತಾ, ಕೆಲಸದ ಆಳಿನ ಕ್ಯಾರೆಕ್ಟರ್ ಕೊಟ್ಟರೂ ಮಾಡ್ತೀನಿ, ರೊಮ್ಯಾನ್ಸ್ ಮಾಡೂ ಅಂದರೂ ಮಾಡ್ತೀನಿ. ಯಾಕಂದ್ರೆ, ಪ್ರತಿ ಪಾತ್ರಕ್ಕೂ ಅದರದ್ದೇ ಆದ ಪಾವಿತ್ರ್ಯತೆ ಇದೆ ಅಂದರು. ನಿಶ್ಚಿತ್ ಡೌಂಟ್ ಟು ಅರ್ಥ್ ನೇಚರ್ ನೋಡಿದರೆ ಮುಂದೊಂದು ದಿನ ಸ್ವಂತ ಬ್ರ್ಯಾಂಡ್ ಆಗೋದು ಗ್ಯಾರಂಟಿ ಬಿಡಿ. ಕಲಾವಿದ ನೀರಿದ್ದ ಹಾಗೇ, ಯಾವುದೇ ಪಾತ್ರೆಗೆ ಹಾಕಿದರೂ ಅದೇ ಆಕಾರ ಪಡಿಬೇಕು ಪಡಿತೀನಿ ಅಂತ ಬೇರೆ ಹೇಳಿದ್ದಾರೆ. ಅಭಿಮಾನಿ ದೇವರುಗಳ ಆಶೀರ್ವಾದ ಹೀರೋ ಮೇಲಿದ್ದುಟಾಮ್ ಅಂಡ್ ಜರ‍್ರಿ’ ಹಿಟ್ಟಾದರೆ ಹೀರೋ ನಿಶ್ಚಿತ್ ಈಗ ಹೇಗಿದ್ದಾರೋ ಹಾಗೆಯೇ ಇರುತ್ತಾರಾ ಇಲ್ಲವಾ ಕಾದುನೋಡಬೇಕು.‌

ಅಂದ್ಹಾಗೇ, ಟಾಮ್ ಅಂಡ್ ಜರ‍್ರಿಯಲ್ಲಿ ಅತೀ ದೊಡ್ಡ ತಾರಾಬಳಗವೇ ಇದೆ. ತಾರಾ ಅನುರಾಧ, ಜೈ ಜಗದೀಶ್, ಕೋಟೆ ಪ್ರಭಾಕರ್, ಕಡ್ಡಿಪುಡ್ಡಿ ಚಂದ್ರು, ರಾಕ್‌ಲೈನ್ ಸುಧಾಕರ್, ಸಂಪತ್ ಮೈತ್ರೇಯ, ಪದ್ಮಜಾ ರಾವ್, ಪ್ರಕಾಶ್ ತುಮ್ಮಿನಾಡು, ಪ್ರಶಾಂತ್ ನಟನ, ಮೈತ್ರಿ ಜಗ್ಗಿ ಇತರರು ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಚಿತ್ರದಲ್ಲಿ ಒಟ್ಟು ಐದು ಹಾಡುಗಳಿದ್ದು, ಮ್ಯಾಥ್ಯೂಸ್ ಮನು ಸಂಗೀತ ಸಂಯೋಜಿಸಿದ್ದಾರೆ.

ಸಂಕೇತ್ ಕ್ಯಾಮೆರಾ ವರ್ಕ್, ಸೂರಜ್ ಅಂಕೊಲೇಕರ್ ಸಂಕಲನ, ಅರ್ಜುನ್ ರಾಜ್ ಸಾಹಸ ಚಿತ್ರಕ್ಕಿದೆ. ರಾಜು ಶೇರಿಗಾರ್ ಬಂಡವಾಳ ಹೂಡಿದ್ದು ರಿದ್ಧಿ ಸಿದ್ಧಿ ಫಿಲಂಸ್ ಬ್ಯಾನರ್ ಅಡಿಯಲ್ಲಿ ಸಿನಿಮಾ ಅದ್ಬೂತವಾಗಿ ಮೂಡಿಬಂದಿದೆ. ಇಲ್ಲಿವರೆಗೂ ಹೊಸಬರ ಪ್ರಯತ್ನಕ್ಕೆ ಪ್ರೇಕ್ಷಕ ಮಹಾಷಯರು ಜೈಕಾರ ಹಾಕಿದ್ದಾರೆ. ಈಗ ಸಂಪೂರ್ಣ ಹೊಸಬರಟಾಮ್ ಅಂಡ್ ಜರ‍್ರಿ’ಯನ್ನು ಸಿನಿರಸಿಕರು ಒಪ್ಪಿಕೊಳ್ತಾರಾ ? ಜಸ್ಟ್ ವೇಯ್ಟ್ ಅಂಡ್ ಸೀ…

ವಿಶಾಲಾಕ್ಷಿ,ಎಂಟರ್‌ಟೈನ್ಮೆಂಟ್ ಬ್ಯೂರೋ ಸಿನಿಲಹರಿ

Categories
ಸಿನಿ ಸುದ್ದಿ

ಟಾಮ್ ಅಂಡ್ ಜರ‍್ರಿ ಆಟ ಶುರು ಗುರು…! ನವೆಂಬರ್‌ 12 ರಂದು ಪ್ಯಾಕೇಜ್‌ ಧಮಾಕ!!


ಜೋಡಿಹಕ್ಕಿ ಖ್ಯಾತಿಯ ಚೈತ್ರಾರಾವ್, ನಿಶ್ಚಿತ್ ಕರೋಡಿ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿರುವ ಚಿತ್ರ ಟಾಮ್ ಅಂಡ್ ಜರ‍್ರಿ. ರಿದ್ಧಿಸಿದ್ಧಿ ಬ್ಯಾನರ್ ಅಡಿಯಲ್ಲಿ, ರಾಜು ಶೇರಿಗಾರ್ ಅವರು ನಿರ್ಮಿಸಿರುವ ಈ ಚಿತ್ರಕ್ಕೆ ರಾಘವ್ ವಿನಯ್ ಶಿವಗಂಗೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ನವೆಂಬರ್ 12ರಂದು ತೆರೆಕಾಣಲಿರುವ ಈ ಚಿತ್ರದ ಟ್ರೇಲರ್‌ ಬಿಡುಗಡೆಯಾಗಿದ್ದು, ಸಿಕ್ಕಾಪಟ್ಟೆ ಸದ್ದು ಮಾಡಿದೆ.


ತಮ್ಮ ಚೊಚ್ಚಲ ನಿರ್ಮಾಣದ ಚಿತ್ರದ ಕುರಿತಂತೆ ಮಾತನಾಡುವ ನಿರ್ಮಾಪಕರು, “ಕಾಮಿಡಿ. ಫೈಟ್ ಎಲ್ಲಾ ಥರದ ಎಲಿಮೆಂಟ್ಸ್ ಇದೆ. ತಾಯಿ ಮಗನ ಸಂಬಂಧದ ಕಥೆ ಮನಸಿಗೆ ನಾಟುತ್ತದೆ. ಯೂಥ್‌ಗೆ ಸಪೋರ್ಟ್ ಮಾಡಬೇಕೆಂದು ಚಿತ್ರರಂಗಕ್ಕೆ ಬಂದೆ. ಆರಂಭದಿಂದಲೂ ವೆಂಕಟೇಶಗೌಡ್ರು ನಮ್ಮ ಜೊತೆ ಕೈಜೋಡಿಸಿದ್ದಾರೆ, ಈವಾರ ಎಷ್ಟೇ ಸಿನಿಮಾ ಬಂದರೂ ನಮ್ಮ ಚಿತ್ರಕ್ಕೆ ತೊಂದರೆಯಿಲ್ಲ ಎಂದು ಹೇಳಿದರು. ನಂತರ ನಿರ್ದೇಶಕ ರಾಘವ ಮಾತನಾಡಿ, ಈ ಮೊದಲು ನಮ್ಮ ಚಿತ್ರದ ಟ್ರೇಲರನ್ನು ಪುನೀತ್ ಅವರ ಕೈಲೇ ರಿಲೀಸ್ ಮಾಡಿಸಬೇಕೆಂಬ ಪ್ಲಾನ್ ಇತ್ತು. ಅವರು ನಮ್ಮ ಒಂದಷ್ಟು ಕನಸುಗಳ ಭಾಗವೂ ಆಗಿದ್ದರು. ಹೊಸತನ ಇಷ್ಟಪಡುವವರಿಗೆ ನಮ್ಮ ಚಿತ್ರ ಹಿಡಿಸುತ್ತದೆ. 2 ಪಾತ್ರಗಳು ಅವರವರ ವ್ಯಕ್ತಿತ್ವಕ್ಕೆ ಅನುಸಾರವಾಗಿ ಹೋಗುತ್ತಿರುತ್ತವೆ, ಟಾಮ್ ಅಂಡ್ ಜೆರ‍್ರಿ ನಡುವೆ ಆಗಾಗ ಜಗಳ ನಡೆಯುತ್ತಲೇ ಇರುತ್ತೆ, ಹುಚ್ಚನ ಪಾತ್ರ ಇವರಿಬ್ಬರಿಗೂ ಬ್ರಿಡ್ಜ್ ಆಗಿರುತ್ತದೆ ಎಂದು ಹೇಳಿದರು.

ನಾಯಕ ನಿಶ್ಚಿತ್ ಮಾತನಾಡಿ ಕೊಟ್ಟ ಪಾತ್ರಕ್ಕೆ ನ್ಯಾಯ ಒದಗಿಸಿದ್ದೇವೆ ಎಂದು ಹೇಳಿಕೊಂಡರೆ, ನಾಯಕಿ ಚೈತ್ರಾರಾವ್, ಚಿತ್ರದಲ್ಲಿ ನಾನು ಎನ್‌ಜಿಓದಲ್ಲಿ ಕೆಲಸ ಮಾಡುವ ಹುಡುಗಿ, ತನಗೇನು ಇಷ್ಟವೋ ಅದೇ ರೀತಿ ಬದುಕುತ್ತಿರುವಂಥ ಹುಡುಗಿ ಎಂದು ಹೇಳಿದರು.

ಟ್ರೇಲರ್‌ಗೆ ವಿಠಲ್ ಮ್ಯೂಸಿಕ್ ಕಂಪೋಜ್ ಮಾಡಿದ್ದಾರೆ. ನಿರ್ದೇಶಕ ಮ್ಯಾಥ್ಯೂಸ್ ಮನು ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ. ಈ ಚಿತ್ರದ ಹಾಯಾಗಿದೆ ಎದೆಯೊಳಗೆ ಎಂಬ ಹಾಡಿಗೆ ಹಿನ್ನೆಲೆ ಗಾಯಕ ಸಿದ್ ಶ್ರೀರಾಮ್ ಅವರು ದನಿಯಾಗಿದ್ದಾರೆ. ಚಿತ್ರದ ಛಾಯಾಗ್ರಾಹಕರಾಗಿ ಸಂಕೇತ್ ಕೆಲಸ ಮಾಡಿದರೆ, ಸೂರಜ್ ಅಂಕೋಲೆಕರ್ ಸಂಕಲನ ಮಾಡಿದ್ದಾರೆ.


ಹಿರಿಯ ಕಲಾವಿದರಾದ ಜೈಜಗದೀಶ್, ತಾರಾ ಅನುರಾಧಾ, ರಾಕ್‌ಲೈನ್ ಸುಧಾಕರ್, ಪದ್ಮಜಾ ರಾವ್, ಕಡ್ಡಿಪುಡಿ ಚಂದ್ರು ಸೇರಿದಂತೆ ಕವಲುದಾರಿ ಖ್ಯಾತಿಯ ಸಂಪತ್ ಮೈತ್ರೇಯ, ಕೆಜಿಎಫ್ ಖ್ಯಾತಿಯ ಶೇಖರ್ ಹೀಗೆ ಸಾಕಷ್ಟು ಕಲಾವಿದರ ದಂಡೇ ಚಿತ್ರದಲ್ಲಿ ಅಭಿನಯಿಸಿದೆ.

Categories
ಸಿನಿ ಸುದ್ದಿ

ಪುನೀತ್ ಪ್ರೇರಣೆಯಿಂದ ‌ನೇತ್ರದಾನ‌ ಮಾಡುವ ಮೂಲಕ ‌ನಾಡಿಗೇ ಮಾದರಿಯಾದ ಕೋಟೆನಾಡಿನ ಕುಗ್ರಾಮ !


ಪುನೀತ್ ರಾಜಕುಮಾರ್ ಈಗಿಲ್ಲ. ಆದರೆ, ಅವರ ಸಿನಿಮಾಗಳ ಮೂಲಕ ಸದಾ ಜೊತೆಗಿದ್ದಾರೆ. ರಾಜ್‌ ಫ್ಯಾಮಿಲಿ ನೇತ್ರದಾನ ಮಾಡುವ ಮೂಲಕ ಮಾದರಿಯಾಗಿದ್ದು ಗೊತ್ತೇ ಇದೆ. ಈಗ ಪುನೀತ್‌ ರಾಜಕುಮಾರ್‌ ಅವರ ಪ್ರೇರಣೆಯಿಂದ ರಾಜ್ಯದಲ್ಲಿ ನೇತ್ರದಾನದ ದೊಡ್ಡ ಆಂದೋಲನ ಶುರುವಾಗಿದೆ.‌ ಇದಕ್ಕೆ‌ ಸಾಕ್ಷಿ ಎಂಬಂತೆ ಚಿತ್ರದುರ್ಗ ಜಿಲ್ಲೆಯ ದಾಸಯ್ಯನ‌ಹಟ್ಟಿ ಗ್ರಾಮದ 150 ಕ್ಕೂ ಹೆಚ್ಚು ಜನರು ನೇತ್ರದಾನ ಮಾಡುವ‌ ಮೂಲಕ ಇಡೀ ನಾಡಿಗೆ ಮಾದರಿಯಾಗಿದ್ದಾರೆ.


ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನಲ್ಲಿರುವ ದಾಸಯ್ಯ ಹಟ್ಟಿಯು 150 ಕ್ಕೂ ಹೆಚ್ಚು ಮನೆಗಳಿರುವ ಪುಟ್ಟ ಗ್ರಾಮ. ಹಾಗೆಯೇ ಇದು ಬಹುತೇಕ ಪರಿಶಿಷ್ಟ ಜಾತಿಯ ಜ‌ನರಿರುವ ಅಭಿವೃದ್ದಿಗೆ ಕಾಯುತ್ತಿರುವ ಪುಟ್ಟ ಹಳ್ಳಿಯೂ ಹೌದು. ಅಚ್ಚರಿ ಅಂದ್ರೆ ಅಭಿಮಾನಿಗಳ ಪ್ರೀತಿಯ ಅಪ್ಪು ಪುನೀತ್ ರಾಜಕುಮಾರ್ ಅಂದ್ರೆ ಈಗ್ರಾಮದ ಯುವ ಜನರಿಗೆ ಅಚ್ಚು ಮೆಚ್ಚು.‌

ಸೋಮವಾರ ಪುನೀತ್ ರಾಜ್ ಕುಮಾರ್ ಅವರ ಪುಣ್ಯ ಸ್ಮರಣೆಯ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಶ್ರದ್ಧಾಂಜಲಿ ಕಾರ್ಯಕ್ರಮವಿತ್ತು. ಅದರ ಅಂಗವಾಗಿ ಅನ್ನ ಸಂತರ್ಪಣೆ ‌ಆಯೋಜಿಸಲಾಗಿತ್ತು. ಪುನೀತ್ ಅವರ ಪ್ರೇರಣೆಯಿಂದ ಈ ಗ್ರಾಮದ 150ಕ್ಕೂ ಹೆಚ್ಚು ಜನರು‌ ನೇತ್ರದಾನ ಮಾಡಿದ್ದಾರೆ.‌ ಅಷ್ಟು ಜನರು ಸ್ವಯಂ ಪ್ರೇರಣೆಯಿಂದ ನೇತ್ರದಾನಕ್ಕೆ ಸಹಿ ಹಾಕಿದ್ದಾರೆ. ಇದರಲ್ಲಿ ಮಹಿಳೆಯರು, ಯುವಕರು ಸೇರಿದಂತೆ ಗ್ರಾಮದ ಹಿರಿಯರು ಇದ್ದಾರೆ.

‘ ನಮಗೆ ನಟ ಪುನೀತ್ ಅವರ ಅಕಾಲಿಕ‌ ಸಾವನ್ನು ಅರಗಿಸಿಕೊಳ್ಳಲಾಗುತ್ತಿಲ್ಲ. ಪುನೀತ್ ಅಂದ್ರೆ ನಮಗೆ‌ ಅಚ್ಚು‌ ಮೆಚ್ಚು. ಅವರ ಸಿನಿಮಾ‌ ಪಯಣದ ಜತೆಗೆ ಅವರ ಸಾಮಾಜಿಕ‌ ಕೆಲಸಗಳಿಂದ ಪ್ರೇರಣೆಯಾದವರು‌ ನಾವು. ಅದೇ ಕಾರಣಕ್ಕೆ ನಾವು ಮೊದಲಿನಿಂದಲು‌ ಅವರನ್ನು ಅನುಸರಿಸುತ್ತಾ ಬಂದವರು.‌ ಆದರೆ ಅವರ ಅಕಾಲಿಕ ಸಾವನ್ನು ನಾವು ಅರಗಿಸಿಕೊಳ್ಳಲು ಆಗುತ್ತಿಲ್ಲ. ಆದರೆ ಈಗ ಅವರಿಲ್ಲ ಎನ್ನುವ ವಾಸ್ತವ ವನ್ನುನಾವು ಒಪ್ಪಿಕೊಳ್ಳಲೇ ಬೇಕಿದೆ.‌

ಅದರೆ ಅವರನ್ನು ಜೀವಂತವಾಗಿಸಲು ಅವರು‌ ನಮಗೆ‌ ಅನೇಕ‌ ಸಾಮಾಜಿಕ ಕೆಲಸಗಳನ್ನು ಬಿಟ್ಟು‌ ಹೋಗಿದ್ದಾರೆ. ಅದರಲ್ಲಿ ನೇತ್ರದಾನವು ಒಂದು. ಅದನ್ನು‌ ಮುಂದುವರೆಸಿಕೊಂಡು‌ ಹೋಗುವುದಕ್ಕಾಗಿ ನಾವೀಗ ನೇತ್ರದಾನ ಮಾಡಿದ್ದೇವೆ.‌ ಇದು ನಮ್ಮ ಅಳಿಲು ಸೇವೆ ಮಾತ್ರ ಎನ್ನುತ್ತಾರೆ‌ ದಾಸಯ್ಯನ‌ಹಟ್ಟಿ‌ ಗ್ರಾಮ‌ ಪಂಚಾಯತ್ ಸದಸ್ಯ ಚಂದ್ರಶೇಖರ್.

Categories
ಸಿನಿ ಸುದ್ದಿ

ಎಲ್ಲರೂ ಫಸ್ಟ್‌ ನೈಟ್‌ನಲ್ಲಿ ಏನ್ಮಾಡ್ತಾರೋ ನಾವು ಅದ್ನೇ ಮಾಡಿದ್ದೀವಿ! ಡಿಂಪಲ್‌ಕ್ವೀನ್ ರಚ್ಚು ರೊಚ್ಚಿಗೇಳಿಸೋ ಬೆಡ್‌ರೂಮ್ ಮಾತು !!

ಸ್ಯಾಂಡಲ್‌ವುಡ್‌ನ ಡೇರಿಂಗ್ ಅಂಡ್ ಡ್ಯಾಶಿಂಗ್ ಹುಡುಗಿ ಅಂದ್ರೆ ಒನ್ ಅಂಡ್ ಓನ್ಲೀ ರಚಿತರಾಮ್. ಗುಳಿಕೆನ್ನೆ ಚೆಲುವಿನಿಂದ, ಮನಮೋಹಕ ಅಭಿನಯದಿಂದ ಎಲ್ಲರ ಹಾಟ್‌ಫೇವರಿಟ್ ಆಗಿರೋ ರಚ್ಚು ಈಗ ಹಾಟ್‌ನ್ಯೂಸ್ ಆಗಿದ್ದಾರೆ. `ಎಲ್ಲರೂ ಫಸ್ಟ್ನೈಟ್‌ನಲ್ಲಿ ಏನ್ಮಾಡ್ತಾರೋ ನಾವು ಅದನ್ನೇ ಮಾಡಿದ್ದೀವಿ’ ಅಂತೇಳಿ ಸೆನ್ಸೇಷನ್ ಸೃಷ್ಟಿಸಿದ್ದಾರೆ. ಅಷ್ಟಕ್ಕೂ, ಸಿಂಗಲ್ಲಾಗಿರೋ ರಚಿತರಾಮ್ ಹಿಂಗ್ಯಾಕ್ ಸ್ಟೇಟ್‌ಮೆಂಟ್ ಕೊಟ್ಟರು? ಏನಿದರ ಅಸಲಿಯತ್ತು ಹೇಳ್ತೀವಿ ಕೇಳಿ

ಗಂಧದಗುಡಿಯ ಬಹುತೇಕ ಎಲ್ಲಾ ಸೂಪರ್‌ಸ್ಟಾರ್‌ಗಳೊಟ್ಟಿಗೆ ಅಭಿನಯಿಸಿ ಸೈ ಎನಿಸಿಕೊಂಡಿರುವ ನಟಿ ರಚಿತರಾಮ್ ಗಡಿ ದಾಟಿದ್ದಾರೆ. ಇನ್ನೇನು ಕೆಲವೇ ದಿನಗಳಲ್ಲಿ ಪರಭಾಷಾ ಮಂದಿ ರಚ್ಚುನಾ ಸೂಪರ್ ಮಚ್ಚಿ' ಎನ್ನಲಿದ್ದಾರೆ. ಈ ಮಧ್ಯೆ ಸ್ಯಾಂಡಲ್‌ವುಡ್‌ನ ಕೃಷ್ಣ ಅಜಯ್ ರಾವ್ಲವ್ ಯೂ ರಚ್ಚು’ ಎಂದಿದ್ದಾರೆ. ಹೀಗಾಗಿ, ಗಂಧದಗುಡಿಯಲ್ಲಿ ರಚ್ಚು ಹವಾ ಜೋರಾಗಿದೆ. ಒಂದಲ್ಲ.. ಎರಡಲ್ಲ.. ಭರ್ತಿ ಹದಿನೈದು ಸಿನಿಮಾಗಳನ್ನು ಒಪ್ಪಿಕೊಂಡು ಬಹುಬೇಡಿಕೆಯ ನಟಿಯಾಗಿರುವ ರಚಿತರಾಮ್, `ಲವ್ ಯೂ ರಚ್ಚು’ ಚಿತ್ರದಲ್ಲಿ ಬೋಲ್ಡ್ ಅಂಡ್ ಬ್ಯೂಟಿಫುಲ್ಲಾಗಿ ಕಾಣಿಸಿಕೊಂಡಿದ್ದಾರೆ. ಪೋಸ್ಟರ್‌ನಲ್ಲೇ ಅಜಯ್ ಜೊತೆ ಕಿಚ್ಚು ಹಚ್ಚಿದ್ದ ರಚ್ಚು ಈಗ ರೊಮ್ಯಾಂಟಿಕ್ ಸಾಂಗ್ ಮೂಲಕ ಹಾರ್ಟ್ನ ಸೀಸ್ ಮಾಡಿದ್ದಾರೆ. ಮಾತ್ರವಲ್ಲ ಸಾಂಗ್ ರಿಲೀಸ್ ಸಂದರ್ಭದಲ್ಲಿ ಎಲ್ಲರೂ ಫಸ್ಟ್ನೈಟ್‌ನಲ್ಲಿ ಏನ್ಮಾಡ್ತಾರೋ ನಾವು ಅದನ್ನೇ ಮಾಡಿದ್ದೀವಿ ಅಂತೇಳಿ ಪಡ್ಡೆಹೈಕ್ಳ ಹಾರ್ಟ್ಟೆಂಪ್ರೇಚರ್‌ನ ಜಾಸ್ತಿ ಮಾಡೋದಲ್ಲದೇ ಹಾಟ್ ನ್ಯೂಸ್ ಕೂಡ ಆಗಿದ್ದಾರೆ.

ಹೌದು, ಲವ್ ಯೂ ರಚ್ಚು' ಫಿಲ್ಮ್ ಟೀಮ್ ಹೊಸ ಸಾಂಗ್‌ನ ರಿಲೀಸ್ ಮಾಡಿದೆ. ಮಣಿಕಾಂತ್ ಖದ್ರಿಯವರ ಸಂಗೀತ-ನಾಗಾರ್ಜುನ್ ಶರ್ಮಾರ ಸಾಹಿತ್ಯವಿರುವ ಮುದ್ದು ನೀನು… ಎದೆಯ ನಡೆಸೋ ಸದ್ದು ನೀನು’ ಹಾಡಿನಲ್ಲಿ ನಟ ಅಜಯ್‌ರಾವ್ ಹಾಗೂ ರಚಿತರಾಮ್ ಬೊಂಬಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಇನ್ಮೇಲೆ ಹಸಿಬಿಸಿ ದೃಶ್ಯಗಳಲ್ಲಿ ಕಾಣಿಸಿಕೊಳ್ಳಲ್ಲ ತುಂಬಾ ಹಾಟ್ ಆಗಿ ಮಿಂಚಲ್ಲ ಅಂತ `ಐ ಲವ್ ಯೂ ‘ ಸಿನಿಮಾ ಪ್ರಮೋಷನ್ ವೇಳೆ ಹೇಳಿಕೊಂಡು ಕಣ್ಣೀರಾಕಿದ್ದ ರಚ್ಚು ಈಗ ಮತ್ತೊಮ್ಮೆ ಸಿಕ್ಕಾಪಟ್ಟೆ ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದಾರೆ. ಏನ್ ಮೇಡಂ ಇಷ್ಟೊಂದು ಬೋಲ್ಡ್ ಆಗಿ ಮಿಂಚಿದ್ದೀರಾ? ಹಿಂದೆ ನೀವು ಇನ್ಮೇಲೆ ಈ ರೀತಿ ಕಾಣಿಸಿಕೊಳ್ಳಲ್ಲ ಅಂತೇಳಿದ್ರಲ್ಲ ಏನ್ ಸಮಾಚಾರ ಮೇಡಂ ಅಂತ ಮಾಧ್ಯಮಮಿತ್ರರೊಬ್ಬರು ಕೇಳಿದ್ದಕ್ಕೆ ರಚ್ಚು ಹೇಳಿದ್ದಿಷ್ಟು.

`ಸಿಕ್ಕಾಪಟ್ಟೆ ಹಾಟ್ ಆಗಿ ಕಾಣಿಸಿಕೊಳ್ಳಲ್ಲ ಅಂತ ಹೇಳಿದ್ದೆ ನಿಜ. ಆದರೆ, ಈಗ ಕಾಣಿಸಿಕೊಂಡಿದ್ದೇನೆ ಅಂದರೆ ಅದರಲ್ಲಿ ಏನೋ ವಿಶೇಷತೆ ಮತ್ತು ವಿಷಯ ಇರಬೇಕು ಮತ್ತು ಇರುತ್ತೆ ಅಲ್ಲವಾ. ಅಷ್ಟಕ್ಕೂ, ಮದುವೆಯಾದ್ಮೇಲೆ ಎಲ್ಲರೂ ಏನ್ ಮಾಡ್ತಾರೆ ರೊಮ್ಯಾನ್ಸ್ ಮಾಡ್ತಾರೆ ಅಲ್ಲವಾ? ಅದನ್ನೇ ನಾವು ಮಾಡಿದ್ದೇವೆ. ಡೀಟೈಲ್ ಆಗಿ ಹೋಗಿಲ್ಲ ಬೇಸಿಕ್ ಅಷ್ಟೇ ಮಾಡಿದ್ದೇವೆ. ಅಷ್ಟಕ್ಕೂ, ಸೀನ್‌ನಲ್ಲಿ ಹಾಗೂ ಶಾಟ್‌ನಲ್ಲಿ ಅಷ್ಟೇ ಇರೋದು ಹೀಗಾಗಿ ಅದನ್ನೇ ನಾವು ಮಾಡಿದ್ದೇವೆ. ಸೋ, ಮಾಡಲ್ಲ ಅಂದವರು ಯಾಕ್ ಹಾಟ್ ಸೀನ್ ಮಾಡಿದರು ಎನ್ನುವುದು ನೀವು ಸಿನಿಮಾ ನೋಡಿದ್ಮೇಲೆ ಗೊತ್ತಾಗುತ್ತೆ’

ಡಿಂಪಲ್‌ಕ್ವೀನ್ ರಚ್ಚು ಎಷ್ಟು ಹಾಟೋ ಅಷ್ಟೇ ಘಾಟು ಕೂಡ ಹೌದು. ಹಿಂದೆ ಒಂದು, ಮುಂದೆ ಒಂದು ಮಾತನಾಡಲ್ಲ. ಏನೇ ಇದ್ದರೂ ನೇರಾ-ನೇರಾ. ಪಕ್ಕಾ ಸ್ಟೇಟ್ಫಾ ಫಾರ್ವಡ್ ವ್ಯಕ್ತಿತ್ವ, ಏಕ್ ಮಾರ್ ದೋ ತುಕಡ ಎನ್ನುವ ಪಾಲಿಸಿ. ಅದರಂತೇ, ಕ್ಯಾಮೆರಾ ಮುಂದೆ ಬಂದಾಗ ಪಾತ್ರಕ್ಕೆ ನ್ಯಾಯ ಸಲ್ಲಿಸೋದಕ್ಕೆ ಮಡಿವಂತಿಕೆಯನ್ನು ಎಡಗೈನಲ್ಲಿ ಸರಿಸಿ ಅಭಿನಯಿಸ್ತಾರೆ. ಅದೇ ರೀತಿ ಸಿನಿಮಾದ ಬಗ್ಗೆ ಮಾತನಾಡಲಿಕ್ಕೆ ಕ್ಯಾಮೆರಾ ಮುಂದೆ ಬಂದಾಗ ಮುಕ್ತವಾಗಿ ಮಾತನಾಡುತ್ತಾರೆ. ಈಗಲೂ ಅದನ್ನೇ ಮಾಡಿದ್ದಾರೆ ಅಷ್ಟೇ.

ಅಂದ್ಹಾಗೇ, ಬಿಡುಗಡೆಯಾಗಿರುವ ಲವ್ ಯೂ ರಚ್ಚು' ಚಿತ್ರದಮುದ್ದು ನೀನು… ಎದೆಯ ನಡೆಸೋ ಸದ್ದು ನೀನು’ ಹಾಡನ್ನು ನೋಡಿದರೆ ಗೊತ್ತಾಗುತ್ತೆ. ಪ್ರೀತಿ-ಪ್ರೇಮ-ಪ್ರಣಯ ಎಲ್ಲವೂ ಒಂದೇ ಹಾಡಿನಲ್ಲಿ ಬಂದೋಗುವುದರಿಂದ, ಹಸ್ಬೆಂಡ್ ಅಂಡ್ ವೈಫ್ ಆಗಿ ಕಾಣಿಸಿಕೊಳ್ಳೋದಿಂದ ರೊಮ್ಯಾನ್ಸ್ ಸೀಕ್ವೆನ್ಸ್ ಇರಲೇಬೇಕು ಸೋ ಪಾತ್ರಕ್ಕೆ ನ್ಯಾಯ ಸಲ್ಲಿಸೋ ಸಲುವಾಗಿ ಗುಳಿಕೆನ್ನೆ ಚೆಲುವೆ ಹಾಟ್ ಸೀಕ್ವೆನ್ಸ್ ಒಪ್ಪಿಕೊಂಡು ಅಭಿನಯಿಸಿದ್ದಾರೆ. ಇದೊಂದು ರೊಮ್ಯಾಂಟಿಕ್ ಲವ್‌ಸ್ಟೋರಿ ಚಿತ್ರವಾಗಿದ್ದು, ಶಂಕರ್ ಎಸ್. ರಾಜ್. ನಿರ್ದೇಶನದಲ್ಲಿ ಮೂಡಿರ‍್ತಿದೆ. ನಿರ್ದೇಶಕ ಶಶಾಂಕ್ ಕಥೆ-ಸಂಭಾಷಣೆ ಬರೆದಿದ್ದು, ಗುರುದೇಶ್ ಪಾಂಡೆಯವರು ಕ್ರಿಯೇಟೀವ್ ಡೈರೆಕ್ಟರ್ ಆಗಿ ಕೆಲಸ ಮಾಡಿದ್ದಾರೆ ಮತ್ತು ಸಿನಿಮಾ ನಿರ್ಮಾಣದ ಹೊಣೆ ಹೊತ್ತಿದ್ದಾರೆ. ಹಾಡುಗಳಿಂದ ಬಜಾರ್‌ನಲ್ಲಿ ಸೌಂಡ್ ಮಾಡ್ತಿರೋ ಲವ್ ಯೂ ರಚ್ಚು ಸಿನಿಮಾ ಇನ್ನೇನು ಕೆಲವೇ ದಿನಗಳಲ್ಲಿ ಸಿನಿರಸಿಕರ ಮುಂದೆ ಬರಲಿದೆ.

ವಿಶಾಲಾಕ್ಷಿ, ಎಂಟರ್‌ಟೈನ್ಮೆAಟ್ ಬ್ಯೂರೋ ಸಿನಿಲಹರಿ

error: Content is protected !!