Categories
ಸಿನಿ ಸುದ್ದಿ

ಆನ ಯಾನ ಆರಂಭ! ಡಿಸೆಂಬರ್‌ 17ರಂದು ಲೇಡಿ ಸೂಪರ್‌ ಹೀರೋ ಅದಿತಿಗೆ ಆತಿಥ್ಯ!!

ಅದಿತಿ ಪ್ರಭುದೇವ ವಿಶೇಷ ಪಾತ್ರದಲ್ಲಿ ಅಭಿನಯಿಸಿರುವ ಹಾಗೂ ಭಾರತದ ಮೊದಲ ಮಹಿಳಾ ಪ್ರಧಾನ ಸೂಪರ್ ಹೀರೋ ಕಾನ್ಸೆಪ್ಟ್ ನ‌ “ಆನ‌” ಡಿಸೆಂಬರ್ 17 ರಂದು ಬಿಡುಗಡೆಯಾಗುತ್ತಿದೆ. ಈಗಾಗಲೇ ಬಿಡುಗಡೆಯಾಗಿರುವ ಟ್ರೇಲರ್ ಮೆಚ್ಚುಗೆ ಪಡೆದುಕೊಂಡಿದೆ. ಮೊದಲ ಬಾರಿಗೆ ಅದಿತಿ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸುನೀಲ್ ಪುರಾಣಿಕ್ ಅವರಿಲ್ಲಿ ಇನ್ನೊಂದು ಹೈಲೈಟ್.

ನಿರ್ದೇಶಕ ಮನೋಜ್‌ ಅವರಿಗೆ ಸಿನಿಮಾ ಮೇಲೆ ಸಾಕಷ್ಟು ನಂಬಿಕೆ ಇದೆ. ಅದಕ್ಕೆ ಕಾರಣ, ಸಿನಿಮಾ ಮೂಡಿಬಂದಿರುವ ರೀತಿ. ಆದರೆ, ಬಿಡುಗಡೆಯ ಸಮಸ್ಯೆ ಈ ಚಿತ್ರಕ್ಕೂ ಇದೆ ಅನ್ನುವುದನ್ನು ಒಪ್ಪಿಕೊಂಡಿದ್ದಾರೆ. ಅಂದು ತೆಲುಗಿನ ದೊಡ್ಡ ಚಿತ್ರವೊಂದು ಬಿಡುಗಡೆಯಾಗುತ್ತಿರುವ ಕಾರಣ, ಸ್ವಂತ ಊರಾದ ದಾವಣಗೆರೆಯಲ್ಲೇ ಚಿತ್ರಕ್ಕೆ ಚಿತ್ರಮಂದಿರ ಸಿಗುತ್ತಿಲ್ಲ ಎಂದು ಅಂತ ಮನೋಜ್‌ ನಡಲುಮನೆ ಬೇಸರ ವ್ಯಕ್ತಪಡಿಸಿದ್ದಾರೆ. ಈ ವೇಳೆ ತಮಗೆ ಸಹಕಾರ ನೀಡಿದ ನಿರ್ಮಾಪಕರು ಸೇರಿದಂತೆ ಇಡೀ ತಂಡಕ್ಕೆ ಧನ್ಯವಾದ ಹೇಳಿದರು.


ಇನ್ನು, ಅದಿತಿ ಈ ಚಿತ್ರದ ಪಾತ್ರ ಬಗ್ಗೆ ಸಾಕಷ್ಟು ನಂಬಿಕೆ ಇಟ್ಟುಕೊಂಡಿದ್ದಾರೆ. ಅವರು ತಮ್ಮ ಪಾತ್ರ ಕುರಿತು ಹೇಳಿದ್ದಿಷ್ಟು, “ನಾನು ಈವರೆಗೂ ಈ ರೀತಿಯ ಪಾತ್ರ ಮಾಡಿಲ್ಲ. ನನಗೂ ಚಿತ್ರ ಒಪ್ಪಿಕೊಂಡಾಗ ಸ್ವಲ್ಪ ಭಯವಿತ್ತು. ಹೇಗೆ ಕಾಣುತ್ತೇನೋ ಎಂದು. ಈಗ ಆ ಭಯ ಹೋಗಿದೆ. ಚಿತ್ರ ಗೆಲ್ಲುತ್ತದೆ ಎಂಬ ನಂಬಿಕೆ ಇದೆ. ಅದಕ್ಕೆ ನಿಮ್ಮ ಬೆಂಬಲ ಬೇಕಾಗಿದೆ ಎಂಬುದು ಅದಿತಿ ಪ್ರಭುದೇವ ಅವರ ಮಾತು.
ಸಂಗೀತ ನಿರ್ದೇಶಕ ರಿತ್ವಿಕ್ ಮುರಳಿಧರ್ ಸಂಗೀತ ಕುರಿತು ‌ಮಾಹಿತಿ ನೀಡಿದರು.

ಸೌಂಡ್ ಡಿಸೈನರ್ ನವೀನ್ ಕೂಡ ಮಾತನಾಡಿದರು. ಯು.ಕೆ.ಪ್ರೊಡಕ್ಷನ್ಸ್ ಬ್ಯಾನರ್‌ನಲ್ಲಿ ಪೂಜಾ ವಸಂತಕುಮಾರ್ ಈ ಚಿತ್ರ ನಿರ್ಮಾಣ ಮಾಡಿದ್ದಾರೆ. ಉದಯ್ ಲೀಲಾ ಛಾಯಾಗ್ರಹಣವಿದೆ. ವಿಜೇತ್ ಚಂದ್ರ ಸಂಕಲನ ಮಾಡಿದ್ದಾರೆ.
ಚಿತ್ರದಲ್ಲಿ ಚೇತನ್ ಗಂಧರ್ವ, ರನ್ವಿತ್ ಶಿವಕುಮಾರ್, ವಿಕಾಶ್ ಉತ್ತಯ್ಯ, ಪ್ರೇರಣ ಕಂಬಮ್, ವರುಣ್ ಅಮರವಾತಿ, ಸಮರ್ಥ್ ನರಸಿಂಹರಾಜು, ಕಾರ್ತಿಕ್ ನಾಗಾರಾಜನ್, ಶಿವಮಂಜು ಮುಂತಾದವರು ನಟಿಸಿದ್ದಾರೆ.

Categories
ಸಿನಿ ಸುದ್ದಿ

ಸಮಂತಾ `ಹೂಂ ಅಂತೀಯಾ ಮಾವ? ಉಹೂಂ ಅಂತೀಯಾ ಮಾವ ಅಂತ ಕೇಳಿದ್ದಕ್ಕೆ ಬಿತ್ತು ಕೇಸ್ !?

ದಕ್ಷಿಣ ಭಾರತದ ಖ್ಯಾತ ನಟಿ ಸಮಂತಾ ಸೊಂಟ ಬಳುಕಿಸಿದ `ಹ್ಞೂಂ ಅಂತೀಯಾ ಮಾವ? ಹ್ಞೂಂ ಅಂತೀಯಾ ಮಾವ?’ ಹಾಡು ಸಂಕಷ್ಟಕ್ಕೆ ಸಿಲುಕಿದೆ. ಪಡ್ಡೆ ಹುಡುಗರ ನಿದ್ದೆಗೆಡಿಸಿ, ಯೂಟ್ಯೂಬ್ ಲೋಕದಲ್ಲಿ ಹಾಡು ಸಂಚಲನ ಸೃಷ್ಟಿಸುತ್ತಿರುವ ಬೆನ್ನಲ್ಲೇ, ಪುರುಷರ ಸಂಘದ ಸದಸ್ಯರುಗಳು ಸ್ಟೇಷನ್ ಮೆಟ್ಟಿಲೇರಿ ಕಂಪ್ಲೆಂಟ್ ದಾಖಲಿಸಿದ್ದಾರೆ. ಮಾತ್ರವಲ್ಲ ಸಾಂಗ್ ಬ್ಯಾನ್ ಮಾಡುವಂತೆ ಆಂಧ್ರ ಪ್ರದೇಶದ ಕೋರ್ಟ್ ಮೊರೆ ಹೋಗಿರುವುದಾಗಿ ಸುದ್ದಿಯಾಗಿದೆ.

ಹ್ಞೂಂ ಅಂತೀಯಾ ಮಾವ? ಹ್ಞೂಂ ಅಂತೀಯಾ ಮಾವ?'ಪುಷ್ಪ’ ಚಿತ್ರದ ಐಟಂ ಹಾಡು. ಪುಷ್ಪ' ಪ್ಯಾನ್ ಇಂಡಿಯಾ ಚಿತ್ರವಾಗಿದ್ದು, ಐದು ಭಾಷೆಗಳಲ್ಲಿ ಏಕಕಾಲಕ್ಕೆ ರಿಲೀಸ್ ಆಗ್ತಿದೆ. ಅದರಂತೇ,ಪುಷ್ಪ’ ಸ್ಪೆಷಲ್ ಸಾಂಗ್‌ನ ಏಕಕಾಲಕ್ಕೆ ಬಿಡುಗಡೆ ಮಾಡಿದ್ದು, ಕನ್ನಡದಲ್ಲೂ ಕೂಡ ಈ ಹಾಡು ಯೂಟ್ಯೂಬ್‌ನಲ್ಲಿ ಬಿಡುಗಡೆಯಾಗಿದೆ.

“ಉದ್ದ ಉದ್ದ ಇದ್ದರೆ ಒಬ್ಬ ಹಾರಿ ಹಾರಿ ಬರುತ್ತಾನೆ. ಗಿಡ್ಡ ಗಿಡ್ಡ ಇದ್ದರೆ ಒಬ್ಬ ಜಾರಿ ಜಾರಿ ಬೀಳ್ತಾನೆ… ಉದ್ದ ಅಲ್ಲ, ಗಿಡ್ಡ ಅಲ್ಲ ನಿಮ್ಮ ಸತ್ಯ ಹೇಳಲೇನು, ಸಿಕ್ಕಿದ್ದೆಲ್ಲ ಸೀರುಂಡೇನೇ ನಿಮ್ಮ ಬುದ್ದಿ ಇಲ್ಲ ಶುದ್ದಿ…. ಹ್ಞೂಂ ಅಂತೀಯಾ ಮಾವ? ಹ್ಞೂಂ ಅಂತೀಯಾ ಮಾವ?..” ಈ ರೀತಿಯಾದ ಸಾಲುಗಳು ಕನ್ನಡ ವರ್ಷನ್‌ನಲ್ಲಿವೆ. ಅದೇ ರೀತಿ ತೆಲುಗು-ತಮಿಳು ವರ್ಷನ್‌ನಲ್ಲಿ ಕ್ಯಾಚಿ ಲಿರಿಕ್ಸ್ ಪೋಣಿಸಿ `ಹ್ಞೂಂ ಅಂಟಾವ ಮಾವ? ಹ್ಞೂಂ ಅಂಟಾವ ಮಾವ?’ ಸಾಂಗ್ ರಚನೆ ಮಾಡಲಾಗಿದೆ.

ಪುಷ್ಪ' ಚಿತ್ರದ ಐಟಂ ಹಾಡಿನಲ್ಲಿಗಂಡುಮಕ್ಕಳು ಕಾಮಭರಿತರು’ ಎನ್ನುವಂತೆ ಬಿಂಬಿಸಲಾಗಿದೆ. ಈ ಕಾರಣವನ್ನು ನೀಡಿರುವ ಪುರುಷರ ಸಂಘದ ಸದಸ್ಯರುಗಳು ಕೋರ್ಟ್ನಲ್ಲಿ ಮೊಕದ್ದಮೆ ಹೂಡಿದ್ದಾರಂತೆ. `ಪುಷ್ಪ’ ಚಿತ್ರದಿಂದ ಸಾಂಗ್ ಬ್ಯಾನ್ ಮಾಡುವಂತೆ ಮನವಿ ಮಾಡಿಕೊಂಡಿದ್ದಾರಂತೆ. ಈಗೊಂದು ಸುದ್ದಿ ಭರ್ಜರಿಯಾಗಿ ಸದ್ದುಮಾಡ್ತಿದೆ.

ಈ ಬ್ರೇಕಿಂಗ್ ನ್ಯೂಸ್‌ನಿಂದ ಪಡ್ಡೆಹುಡುಗರಿಗೆ ಹಾಗೂ ಅಲ್ಲು ಅರ್ಜುನ್-ಸಮಂತಾ ಅಭಿಮಾನಿಗಳು ಬೇಸರಗೊಂಡರ‍್ತಾರೆ. ನಶೆಯೇರಿಸೋ ಸಾಂಗ್‌ನ ಥಿಯೇಟರ್‌ನಲ್ಲಿ ಕುಳಿತು ಫೀಲ್ ಮಾಡೋದಕ್ಕೆ ಆಗಲ್ಲ ಎನ್ನುವ ಕಾರಣಕ್ಕೆ ನಿರಾಶೆಗೊಂಡಿರುತ್ತಾರೆ. ಸದ್ಯಕ್ಕೆ, ಕೋರ್ಟ್ ಮೆಟ್ಟಿಲೇರಿರುವ ಸುದ್ದಿ ಫ್ಯಾನ್ಸ್ಗೆ ಸಿಹಿಸುದ್ದಿ ಕೊಡುತ್ತಾ ಅಥವಾ ಕಹಿಸುದ್ದಿ ನೀಡುತ್ತಾ ಗೊತ್ತಿಲ್ಲ?ಡಿಸೆಂಬರ್ 17 ರಂದು ಪುಷ್ಪ ಅದ್ದೂರಿಯಾಗಿ ಬಿಡುಗಡೆಯಾಗ್ತಿದೆ.

ಎಂಟರ್‌ಟೈನ್ಮೆಂಟ್ ಬ್ಯೂರೋ ಸಿನಿಲಹರಿ

Categories
ಸಿನಿ ಸುದ್ದಿ

ಬೆಳಗಾವಿ ಅಧಿವೇಶನದಲ್ಲಿ ಜನಪ್ರತಿನಿಧಿಗಳಿಂದ ಪುನೀತ್‌ ಸಂತಾಪ; ಸಿಎಂ ಭಾವುಕ…


ಬೆಳಗಾವಿಯ ಅಧಿವೇಶನದಲ್ಲಿ ಜನಪ್ರತಿನಿಧಿಗಳು ಅಗಲಿದ ಕನ್ನಡದ ಖ್ಯಾತ ನಟ ಪುನೀತ್‌ ರಾಜಕುಮಾರ್‌ ಅವರಿಗೆ ಸಂತಾಪ ಸೂಚಿಸಿದ್ದಾರೆ. ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು “ಪುನೀತ್‌ ಅವರು ತನ್ನದೇ ಆದಂತಹ ಅಭಿಮಾನಿಗಳನನು ಸಂಪಾದಿಸಿದ್ದರು. ಅವರಂತಹ ಅದ್ಭುತ ನಟರನ್ನು ಕಳೆದುಕೊಂಡಿದ್ದು ಚಿತ್ರರಂಗಕ್ಕೆ ದೊಡ್ಡ ನಷ್ಟ ಎಂದಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೂಡ ಮಾತನಾಡಿ, “ಪುನೀತ್‌ ಅವರ ವ್ಯಕ್ತಿತ್ವ ನೋಡಿದಾಗ ಅವರೊಬ್ಬ ಒಳ್ಳೆಯ ಪ್ರತಿಭಾವಂತರು, ಸಾಕಷ್ಟು ವೈಚಾರಿಕವಾಗಿ ತಿಳಿದಿದ್ದರು. ಬೇರೆ ರಂಗದಲ್ಲೂ ಸಾಧಕರಿಗೆ ಅಲ್ಪ ಆಯುಷ್ಯ ಇದೆ ಎಂಬ ಭಾವನೆ ನನ್ನದು. ಹಾಗೆಯೇ ಅಪ್ಪು ವಿಚಾರದಲ್ಲೂ ಅದೇ ಭಾವನೆ ಇದೆ.

ಪುನೀತ್‌ ಅವರ ಸಾವು ನನ್ನನ್ನು ಬಹಳಷ್ಟು ಕಾಡಿತು. ಬೆಳಗ್ಗೆ ಎದ್ದು ವರ್ಕೌಟ್‌ ಮಾಡಿ ನಂತರದ ಕೆಲವೇ ಗಂಟೆಗಳಲ್ಲಿ ಹಾಗೆ ಆಗುತ್ತೆ ಅನ್ನೋದು ನಂಬೋಕೆ ಆಗಲಿಲ್ಲೆ. ಅದು ತುಂಬಾನೇ ಕಷ್ಟವಾಯ್ತು. ಅವರು ಆಸ್ಪತ್ರೆಗೆ ಹೋದ ಸುದ್ದಿ ಕೇಳಿದ ತಕ್ಷಣ ಆಸ್ಪತ್ರೆಗೆ ಹೋದೆವು. ಅಷ್ಟೊತ್ತಿಗಾಗಲೇ ಅವರಿಲ್ಲ ಎಂಬ ಸುದ್ದಿ ತಿಳಿಯಿತು. ಅವರ ಕುಟುಂಬದ ಸಹಕಾರ ಪಡೆದವು. ಸಾರ್ವಜನಿಕವಾಗಿ ಶಾಂತಿಯುತವಾಗಿಯೇ ಅವರ ಅಂತ್ಯ ಸಂಸ್ಕಾರ ನಡೆಸಿದೆವು. ಡಾ.ರಾಜಕುಮಾರ್‌ ಅವರ ಸಾವಿನ ಸಂದರ್ಭದಲ್ಲಿ ಕಹಿ ಘಟನೆಗಳು ನಡೆದಿದ್ದವು. ಮತ್ತೆ ಅಂತಹ ಘಟನೆ ನಡೆಯಬಾರದು ಅಂತ ಮುಂಜಾಗ್ರತೆ ಕ್ರಮ ಕೈಗೊಂಡು, ಅಂತಿಮ ಸಂಸ್ಕಾರ ನಡೆಸಿದೆವು. ಅದಕ್ಕೆ ಅವರ ಕುಟಂಬ, ರಾಜ್ಯದ ಜನತೆ ಮತ್ತು ಅಧಿಕಾರಿ ವರ್ಗ, ನೌಕರರು ಸಹಕರಿಸಿದರು.


ಅವರ ಸಾವಿನ ಸಂದರ್ಭದಲ್ಲಿ ಹರಿದು ಬಂದ ಜನರನ್ನು ನೋಡಿದಾಗ, ಅಚ್ಚರಿಯಾಯ್ತು. ವಿಶೇಷವಾಗಿ ಯುವಕರೇ ಹೆಚ್ಚು. ಭಾವುಕರಾಗಿದ್ದರು. ಒಬ್ಬ ನಟ ಅಲ್ಪ ಸಮಯದಲ್ಲಿ ಆಳವಾಗಿ ಅಷ್ಟೊಂದು ಜನರಲ್ಲಿ ಬೇರೂರಿದ್ದಾರೆ. ಕಡಿಮೆ ಸಮಯದಲ್ಲೂ ಅಷ್ಟೊಂದು ಜನಪ್ರಿಯತೆ ಗಳಿಸಬಹುದು ಎಂಬುದನ್ನು ಪುನೀತ್‌ ರಾಜಕುಮಾರ್‌ ಅವರನ್ನು ನೋಡಿ ಗೊತ್ತಾಯ್ತು. ಕೇವಲ ಚಿತ್ರರಂಗ ಅಲ್ಲ, ಅದರ ಹೊರತಾಗಿಯೂ ಪುನೀತ್‌ ಸಮಾಜ ಕಾರ್ಯ ಮಾಡಿದ್ದಾರೆ. ಅನೇಕ ಬಡವರಿಗೆ ಸಹಾಯ ಮಾಡಿರುವುದನ್ನು ಹೇಳಿಲ್ಲ. ಅನೇಕ ಯುವಕರಿಗೆ ಮಾರ್ಗದರ್ಶನ ಮಾಡಿದ್ದರು.

ಅವರು ನಿಧನರಾಗುವುದಕ್ಕಿಂತ ಮೂರು ದಿನ ಮುನ್ನ ಫೋನ್‌ ಮಾಡಿ, ಒಂದು ಟ್ರೇಲರ್‌ ರಿಲೀಸ್‌ ಮಾಡಬೇಕು ಅಂದಿದ್ದರು. ಅದು ಪರಿಸರ, ಅರಣ್ಯ ಹಾಗು ಪ್ರವಾಸೋದ್ಯಮ ಕುರಿತಂತೆ ಡಾಕ್ಯುಮೆಂಟರಿ. ನೀವೇ ಮಾಡಬೇಕು. ಸರ್ಕಾರದ ಬದ್ಧತೆ ತೋರಿಸಬೇಕಾಗಿದೆ ಹಾಗಾಗಿ ರಿಲೀಸ್‌ ಮಾಡಿ ಅಂದಿದ್ದರು. ನಾನೂ ಓಕೆ ಅಂದಿದ್ದೆ. ಆದರೆ, ಅದು ಸಾಧ್ಯವಾಗಲಿಲ್ಲ” ಎಂದು ಬಸವರಾಜ ಬೊಮ್ಮಾಯಿ ಭಾವುಕರಾದರು.

Categories
ಸಿನಿ ಸುದ್ದಿ

ಅಪ್ಪುಗೆ ಕರ್ನಾಟಕ ರತ್ನ ಪ್ರಶಸ್ತಿ ದಿನಾಂಕ ಶೀಘ್ರ ಘೋಷಣೆ; ಪದ್ಮಶ್ರೀ ಪ್ರಶಸ್ತಿಗೂ ಶಿಫಾರಸು- ಸಿಎಂ ಬೊಮ್ಮಾಯಿ

ಕನ್ನಡದ ಖ್ಯಾತ ನಟರಾದ ಪುನೀತ್‌ ರಾಜಕುಮಾರ್‌ ಅವರಿಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿಯನ್ನು ಈಗಾಗಲೇ ರಾಜ್ಯ ಸರ್ಕಾರ ಘೋಷಣೆ ಮಾಡಿದ್ದು, ಇಷ್ಟರಲ್ಲೇ ಕರ್ನಾಟಕ ರತ್ನ ಪ್ರಶಸ್ತಿ ನೀಡುವ ಕುರಿತಂತೆ ದಿನಾಂಕವನ್ನು ಘೋಷಣೆ ಮಾಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದ್ದಾರೆ.


ವಿಧಾನಸಭೆಯಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ ಮಾತಿಗೂ ಮುನ್ನ, ಸಭೆಯಲ್ಲಿ ಸಂತಾಪ ಸೂಚಿಸಿದ ಮುಖ್ಯಮಂತ್ರಿಗಳು, ಪುನೀತ್‌ ರಾಜ್‌ಕುಮಾರ್‌ ಅವರಿಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ನೀಡುವ ದಿನಾಂಕವನ್ನು ಶೀಘ್ರವೇ ಘೋಷಣೆ ಮಾಡಲಾಗುವುದು.

ಜೊತೆಗೆ ಮುಂದಿನ ದಿನಗಳಲ್ಲಿ ಪದ್ಮಶ್ರೀ ಪ್ರಶಸ್ತಿಗೂ ಶಿಫಾರಸ್ಸು ಮಾಡುವುದಾಗಿ ಹೇಳಿದ್ದಾರೆ.

Categories
ಸಿನಿ ಸುದ್ದಿ

ಕರ್ನಾಟಕದಲ್ಲೂ ಅಸ್ತಿತ್ವಕ್ಕೆ ಬಂತು ಡಿಜಿಟಲ್ ಮೀಡಿಯಾ ಫೋರಂ; ಸಮೀವುಲ್ಲ ಬೆಲಗೂರು ನೂತನ ಅಧ್ಯಕ್ಷ

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಡಿಜಿಟಲೀಕರಣಕ್ಕೆ ಒತ್ತು ನೀಡುತ್ತಿರುವುದರಿಂದ ಇದರ ಅಗತ್ಯತೆ ಎಂದಿಗಿಂತ ಈಗ ಹೆಚ್ಚಿದೆ. ಹೀಗಾಗಿ ಡಿಜಿಟಲ್ ಮಿಡಿಯಾ ಪೋರಮ್ ನೂತನವಾಗಿ ಅಸ್ತಿತಕ್ಕೆ ಬಂದಿದ್ದು, ಪತ್ರಿಕೆ ಮತ್ತು ಮಾಧ್ಯಮಗಳಿಗೆ ನೀಡಿರುವಂತೆಯೇ ನಮಗೂ ಮಾನ್ಯತೆ ನೀಡಬೇಕು- ನೂತನ ಅಧ್ಯಕ್ಷ ಸಮೀವುಲ್ಲ…

ಮಾಧ್ಯಮ‌ಲೋಕದಲ್ಲಿ‌ ಮತ್ತೊಂದು ಹೊಸ ಕ್ರಾಂತಿ ಶುರುವಾಗಿದ್ದು ಎಲ್ಲರಗೂ ಗೊತ್ತು. ಈ ನಿಟ್ಟಿನಲ್ಲಿ ‘ಕರ್ನಾಟಕ ಸ್ಟೇಟ್ ಡಿಜಿಟಲ್ ಮೀಡಿಯಾ ಫೋರಂ’ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವುದು ಹೆಮ್ಮೆಯ ಸಂಗತಿ. ಬೆಂಗಳೂರಿನ ಪ್ರೆಸ್ ಕ್ಲಬ್ ಆವರಣದಲ್ಲಿ ಭಾನುವಾರ ನಡೆದ ಡಿಜಿಟಲ್ ಮಾಧ್ಯಮ ಮಿತ್ರರ ಸಭೆಯಲ್ಲಿ, ಕರ್ನಾಟಕ ಸ್ಟೇಟ್ ಡಿಜಿಟಲ್ ಮೀಡಿಯಾ ಫೋರಂ ಅಸ್ತಿತಕ್ಕೆ ಬಂದಿದೆ. ಈ ಮೀಡಿಯಾ ಫೋರಂ ನ ನೂತನ ಅಧ್ಯಕ್ಷರಾಗಿ ಹಿರಿಯ ಪತ್ರಕರ್ತರಾದ ಸಮೀವುಲ್ಲಾ ಬೆಲಗೂರು ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಸುನೀಲ್ , ಮತ್ತು ವಸಂತ ಬಿ ಈಶ್ವರಗೆರೆ ಆಯ್ಕೆಯಾಗಿದ್ದಾರೆ. ಪ್ರಧಾನ ಕಾರ್ಯದರ್ಶಿಯಾಗಿ ಶಿವು ಬೆಸಗರಹಳ್ಳಿ ಮತ್ತು ಜಂಟಿ ಕಾರ್ಯದರ್ಶಿಗಳಾಗಿ ರಜನಿ ಹಾಗೂ ಮಾಲತೇಶ್ ಅರಸ್ ಹರ್ತಿಕೋಟೆ ಮತ್ತು ಖಜಾಂಚಿಯಾಗಿ ಸನತ್ ರೈ ಅವರನ್ನು ಆಯ್ಕೆ ಮಾಡಲಾಗಿದೆ.

ಕಾರ್ಯಕಾರಿ ಸಮಿತಿ ಸದಸ್ಯರಾಗಿ ಎಂ.ಎಸ್ ರಾಘವೇಂದ್ರ, ಗೌರೀಶ್ ಅಕ್ಕಿ, ವಿಜಯ್ ಭರಮಸಾಗರ, ದರ್ಶನ್ ಆರಾಧ್ಯ, ಪ್ರವೀಣ್ ಏಕಾಂತ, ಅಮರ್ ಪ್ರಸಾದ್, ಅಂಕಿತಾ, ಹರೀಶ್ ಅರಸು ಇವರುಗಳನ್ನು ಆಯ್ಕೆ ಮಾಡಲಾಗಿದೆ. ಪತ್ರಿಕೋದ್ಯಮ ಹಾಗು ವಿದ್ಯುನ್ಮಾನ ಮಾಧ್ಯಮಗಳಲ್ಲಿ ಎರಡು ದಶಕಗಳ ಅನುಭವ ಇರುವಂತಹ ಹಿರಿಯ ಪತ್ರಕರ್ತರ ನೇತೃತ್ವದಲ್ಲಿ ಅಸ್ತಿತಕ್ಕೆ ಬಂದಿರುವ ಕರ್ನಾಟಕ ಸ್ಟೇಟ್ ಡಿಜಿಟಲ್ ಮೀಡಿಯಾ ಫೋರಂ ಮುಂದಿನ ದಿನಗಳಲ್ಲಿ ರಾಜ್ಯದ ಬಹುತೇಕ ಡಿಜಿಟಲ್ ಮಾಧ್ಯಮ ಮಿತ್ರರನ್ನೂ ಒಳಗೊಂಡಂತೆ ದೊಡ್ಡ ಮಟ್ಟದಲ್ಲಿ ಸಕ್ರಿಯವಾಗಿ ಕಾರ್ಯ ನಿರ್ವಹಿಸಲಿದೆ.

ಈ ಸಂದರ್ಭದಲ್ಲಿ ನೂತನ ಅಧ್ಯಕ್ಷರಾದ ಸಮೀವುಲ್ಲಾ ಅವರು ಮಾತನಾಡಿ, ‘ಡಿಜಿಟಲ್ ಮೀಡಿಯಾ ಎಂಬುದು ಪ್ರತಿಯೊಬ್ಬರಿಗೂ ನವಯುಗಕ್ಕೆ ಅವಶ್ಯಕವಾಗಿದ್ದು, ಪ್ರಿಂಟ್ ಹಾಗೂ ಟಿವಿ ಮಾಧ್ಯಮಗಳಿಗಿಂತಲೂ ಪರಿಣಾಮಕಾರಿಯಾಗಿದೆ. ವೀಕ್ಷಕರು ಮತ್ತು ಓದುಗರನ್ನು ಹೆಚ್ಚು ತಲುಪಲು ತನ್ನದೇ ಆದ ಸಾಮರ್ಥ್ಯ ಹೊಂದಿದೆ. ಹೀಗಿರುವುದರಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳೇ ಡಿಜಿಟಲ್ ಮಾಧ್ಯಮಗಳಿಗೆ ಒತ್ತು ನೀಡಿವೆ. ಪಕ್ಕದ ರಾಜ್ಯಗಳಾದ ಆಂಧ್ರ ಮತ್ತು ತಮಿಳು ನಾಡು ಸೇರಿದಂತೆ ಅನೇಕ ರಾಜ್ಯಗಳಲ್ಲಿ ಡಿಜಿಟಲ್ ಮಾಧ್ಯಮ ಒಕ್ಕೂಟ ಅಸ್ತಿತ್ವದಲ್ಲಿವೆ.

ಕರ್ನಾಟಕದಲ್ಲಿ ಡಿಜಿಟಲ್ ಮಾಧ್ಯಮ ಹೆಚ್ಚು ಪರಿಣಾಮಕಾರಿಯಾಗಿರುವುದರಿಂದ ನಮ್ಮ ಸಂಘಟನೆ ಮಾಧ್ಯಮ ಲೋಕದಲ್ಲಿ ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸುವವರ ಹಿತಾಸಕ್ತಿ ಕಾಪಾಡಲು ಬದ್ದವಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಡಿಜಿಟಲೀಕರಣಕ್ಕೆ ಒತ್ತು ನೀಡುತ್ತಿರುವುದರಿಂದ ಇದರ ಅಗತ್ಯತೆ ಎಂದಿಗಿಂತ ಈಗ ಹೆಚ್ಚಿದೆ. ಹೀಗಾಗಿ ಡಿಜಿಟಲ್ ಮಿಡಿಯಾ ಪೋರಂ ನೂತನವಾಗಿ ಅಸ್ತಿತ್ವಕ್ಕೆ ಬಂದಿದೆ.

ಪತ್ರಿಕೆ ಮತ್ತು ಮಾಧ್ಯಮಗಳಿಗೆ ನೀಡಿರುವಂತೆಯೇ ನಮಗೂ ಮಾನ್ಯತೆ ನೀಡಬೇಕೆಂದು ಮನವಿ ಮಾಡಿದರು.
ಪದಾಧಿಕಾರಿಗಳ ಆಯ್ಕೆ ಸಮಾರಂಭದಲ್ಲಿ ನೂರಾರು ಡಿಜಿಟಲ್ ಮಾದ್ಯಮ ಪತ್ರಕರ್ತರು , ತಂತ್ರಜ್ಞರು ಉಪಸ್ಥಿತರಿದ್ದರು.

Categories
ಸಿನಿ ಸುದ್ದಿ

ಹೈದ್ರಬಾದ್‌ಗೂ ಹಬ್ಬಿದೆ ದಚ್ಚು `ಕ್ರಾಂತಿ’ ಕಿಚ್ಚು- ಡಿಬಾಸ್ ಜೊತೆ ಇಂಡಿಯನ್ ಸ್ಟ್ರಾಂಗ್‌ಮ್ಯಾನ್ ಸೆಣಸಾಟ !

ಕ್ರಾಂತಿ' ಚಾಲೆಂಜಿಂಗ್ ಚಕ್ರವರ್ತಿಯ ಮೋಸ್ಟ್ ಎಕ್ಸ್ ಪೆಕ್ಟೆಡ್ ಸಿನಿಮಾ. ಡಿಬಾಸ್ ಸಿನಿಕರಿಯರ್‌ನ 55ನೇ ಚಿತ್ರ. ಟೈಟಲ್‌ನಿಂದಲೇ ಮಾಯಲೋಕದಲ್ಲಿ ನಯಾ ಮೇನಿಯಾ ಶುರುವಿಟ್ಟುಕೊಂಡಿರುವ ಕ್ರಾಂತಿ’ ಸಿನಿಮಾ ಈಗಾಗಲೇ ಬಾರ್ಡರ್ ಕ್ರಾಸ್ ಮಾಡಿ ಹವಾ ಎಬ್ಬಿಸಿರೋದು ಮಾತ್ರ ಸುಳ್ಳಲ್ಲ. ಸದ್ದುಗದ್ದಲವಿಲ್ಲದೇ ಸೈಲೆಂಟಾಗಿಯೇ ಸುನಾಮಿ ಎಬ್ಬಿಸುತ್ತಿರುವ `ಕ್ರಾಂತಿ’, ಬೆಳ್ಳಿತೆರೆಗೆ ಅಪ್ಪಳಿಸುವಾಗ ಚಂಡಮಾರುತದ ಅಲೆ ಎಬ್ಬಿಸೋದು ಸತ್ಯ ಎನ್ನುವುದಕ್ಕೆ ನೂರೆಂಟು ಉದಾಹರಣೆಗಳನ್ನು ಕೊಡಬಹುದು. ಅದನ್ನು ಮುಂದಿನ ದಿನಗಳಲ್ಲಿ ನಿಮ್ಮ ಮುಂದೆ ಪ್ರಸ್ತಾಪಿಸ್ತೇವೆ. ಸದ್ಯಕ್ಕೆ, ಡಿಬಾಸ್ ಕ್ರಾಂತಿಯ ಕಿಚ್ಚು ಹೈದ್ರಬಾದ್ ಅಂಗಳಕ್ಕೂ ಹಬ್ಬಿರುವುದು ಮತ್ತು ಸ್ಯಾಂಡಲ್‌ವುಡ್ ಸುಲ್ತಾನನ ಜೊತೆ ಸೆಣಸಾಡುತ್ತಿರುವ ಆ ಚಾಂಪಿಯನ್ ಕುರಿತ ಸಖತ್ ಸುದ್ದಿಯನ್ನು ಹೊತ್ತು ತಂದಿದ್ದೇವೆ.

ಡಿಬಾಸ್ ಅಭಿಮಾನಿಗಳಿಗೆ ಕ್ರಾಂತಿ' ಸಿನಿಮಾ ಬಗ್ಗೆ ಕಂಪ್ಲೀಟ್ ಅಪ್‌ಡೇಟ್ ತಿಳಿದಿರುತ್ತೆ. ಆದ್ರೂ ಕೂಡ ಸ್ಯಾಂಡಲ್‌ವುಡ್ ಬೆಳ್ಳಿತೆರೆಯ ಯಜಮಾನ್ರು, ಬಾಕ್ಸ್ಆಫೀಸ್ ಪಾಲಿನ ಸುಲ್ತಾನರ ಅಪ್‌ಕಮ್ಮಿಂಗ್ ಸಿನಿಮಾದ ಅಪ್‌ಡೇಟ್ ಕುರಿತು ಗಾಂಧಿನಗರಕ್ಕೆ ಒಂದು ರಿಪೋರ್ಟ್ ಸಲ್ಲಿಸಬೇಕು. ಹೀಗಾಗಿ,ಕ್ರಾಂತಿ’ಯ ಅಂಗಳದಲ್ಲಿ ಏನ್ ನಡೀತಿದೆ, ಕ್ರಾಂತಿ'ಯ ಹವಾ ಹೆಂಗಿದೆ,ಕ್ರಾಂತಿ’ ಅಖಾಡಕ್ಕೆ ಹೊಸದಾಗಿ ಯಾರು ಎಂಟ್ರಿಕೊಟ್ಟರು, `ಕ್ರಾಂತಿ’ ಯಾವ್ ಹಂತದಲ್ಲಿದೆ? ಹೀಗೆ ಒಂದಿಷ್ಟು ವಿಚಾರಗಳನ್ನು ತಿಳಿದುಕೊಳ್ಳಬೇಕು ಮತ್ತು ತಿಳಿಸಬೇಕು ಎನ್ನುವ ಕಾರಣಕ್ಕೆ ಈ ಸುದ್ದಿ.

ಕ್ರಾಂತಿ' ಸೆಟ್ಟೇರಿದ ಕ್ಷಣದಿಂದಲೇ ಡಿಬಾಸ್ ಫ್ಯಾನ್ಸ್ ನ ಮಾತ್ರವಲ್ಲ ಗಾಂಧಿನಗರದ ಮಂದಿಯನ್ನೂ ಕುರ್ಚಿಯ ತುದಿಗೆ ತಂದು ಕೂರಿಸಿರುವ ಸಿನಿಮಾ. ಕ್ರೇಜ್‌ಗೆ ಅಪ್ಪನಪ್ಪನಪ್ಪನ ಪಟ್ಟ ಅಲಂಕರಿಸಿರುವ ಚಕ್ರವರ್ತಿಯನ್ನು ಹಾಕಿಕೊಂಡು ಸಿನಿಮಾ ತೆಗೆಯುತ್ತಿರುವುದರಿಂದಕ್ರಾಂತಿ’ ಮೇಲಿನ ನಿರೀಕ್ಷೆ ಕನ್ಯಾಕುಮಾರಿಯವರೆಗೂ ವಿಸ್ತರಣೆಗೊಂಡಿದ್ದಾಗಿದೆ. ಮತ್ತೆ ಒಂದಾಗಿರುವ ಯಜಮಾನ ಚಿತ್ರತಂಡ ಸ್ಯಾಂಡಲ್‌ವುಡ್ ಅಂಗಳದಲ್ಲಿ ಮಾತ್ರವಲ್ಲ ಪ್ಯಾನ್ ಇಂಡಿಯಾದಲ್ಲೇ ಕ್ರಾಂತಿ' ಮಾಡ್ತೀವಿ ಎಂದು ಸಿಡಿದೆದ್ದು ಫೀಲ್ಡಿಗಿಳಿದಿದ್ದಾಗಿದೆ. ಬುಲ್‌ಬುಲ್ ಜೋಡಿ ಮತ್ತೆ ಒಂದಾಗಿರುವುದು ಕೂಡಕ್ರಾಂತಿ’ ಮೇಲಿನ ಕೌತುಕವನ್ನು ಹೆಚ್ಚಿಸಿದೆ.

ಕಂಠೀರವ ಸ್ಟುಡಿಯೋ, ಟೊರಿನೋ ಫ್ಯಾಕ್ಟ್ರಿ ಸೇರಿದಂತೆ ಬೆಂಗಳೂರಿನ ಹಲವು ಸ್ಟುಡಿಯೋಗಳಲ್ಲಿ ಅದ್ದೂರಿ ಸೆಟ್ ಹಾಕಿ ಕ್ರಾಂತಿ'ಯ ಕೆಂಡದಂತಹ ದೃಶ್ಯಾವಳಿಗಳನ್ನು ಚಿತ್ರೀಕರಣ ಮಾಡಿಕೊಂಡ ಫಿಲ್ ಟೀಮ್ ಈಗ ಹೈದ್ರಬಾದ್‌ಗೆ ಲಗ್ಗೆ ಇಟ್ಟಿದೆ. ರಾಮೋಜಿ ಫಿಲ್ಮ್ಸ್ ಸಿಟಿಯಲ್ಲಿ ಕೋಟಿ ಸೆಟ್‌ನಲ್ಲಿ ಕಾದಾಟದ ಸನ್ನಿವೇಶಗಳನ್ನು ಕ್ಯಾಪ್ಚರ್ ಮಾಡಿಕೊಳ್ಳುವಲ್ಲಿ ಚಿತ್ರತಂಡ ಬ್ಯುಸಿಯಾಗಿದೆ.ಸ್ಟ್ರಾಂಗ್ ಮ್ಯಾನ್ ಆಫ್ ಇಂಡಿಯಾ’ ಕಾಂಪಿಟೇಷನ್‌ನಲ್ಲಿ ಮೂರು ಭಾರಿ ಚಾಂಪಿಯನ್ ಆದಂತಹ, ಗ್ಲೋಬಲ್ ಪವರ್ ಲಿಫ್ಟಿಂಗ್'ನಲ್ಲಿ ಐದು ಭಾರಿ ಗೆಲುವಿನ ಕಿರೀಟ ಮುಡಿಗೇರಿಸಿಕೊಂಡಂತಹರಾಘವೇಂದ್ರ ಎಚ್.ಎಸ್’ ಅವರು `ಕ್ರಾಂತಿ’ ಚಿತ್ರತಂಡ ಸೇರಿಕೊಂಡಿದ್ದಾರೆ. ಡಿಬಾಸ್ ಜೊತೆ ಖಳನಾಯಕನಾಗಿ ಕಾದಾಡುತ್ತಿದ್ದಾರೆ. ರಾಮೋಜಿಯಲ್ಲಿ ಇವರಿಬ್ಬರ ಕಾಂಬಿನೇಷನ್ ಕಾಳಗದ ಚಿತ್ರೀಕರಣ ನಡೆಯುತ್ತಿದೆ. ಉಳಿದಂತೆ ಇತರೆ ಖಡಕ್ ವಿಲನ್‌ಗಳ ಖದರ್ ಇನ್ನಷ್ಟೇ ಹೊರಬೀಳಬೇಕಿದೆ.

ಇನ್ನೂ ಕ್ರಾಂತಿ' ಚಿತ್ರದ ಅಪ್‌ಡೇಟ್‌ಗಾಗಿ ಕಾಯ್ತಿರುವವರಿಗೆ ಸಾರಥಿ ಯಾವ ಕ್ಷೇತ್ರದಲ್ಲಿ ಕ್ರಾಂತಿ ಮಾಡುತ್ತಾರೆ? ಯಾವ ಕ್ಷೇತ್ರವನ್ನು ಮುಖ್ಯವಾಗಿಟ್ಟುಕೊಂಡು ಹೊಸ ಕ್ರಾಂತಿ ಮಾಡಲು ಹೊರಟಿದ್ದಾರೆ? ಈ ಕೂತೂಹಲದ ಪ್ರಶ್ನೆ ಮೂಡಿರುತ್ತೆ. ಇದಕ್ಕೆ ಮುಹೂರ್ತದ ಸಂದರ್ಭದಲ್ಲೇ ಖಾಸಗಿ ಮಾಧ್ಯಮಕ್ಕೆ ಮಾತನಾಡುತ್ತಾ ದಚ್ಚು ಹೇಳಿಕೊಂಡಿದ್ದಾರೆ.ಯಜಮಾನ’ ಸಿನಿಮಾದಲ್ಲಿ ಅಡುಗೆ ಎಣ್ಣೆಯ ವಿಚಾರದಲ್ಲಿ ಕ್ರಾಂತಿಯಾಗಿದ್ದನ್ನು ನೀವೆಲ್ಲರೂ ನೋಡಿದ್ದೀರಿ. ಈಗ `ಕ್ರಾಂತಿ’ ಸಿನಿಮಾ ಮೂಲಕ ಅಕ್ಷರ ಕ್ರಾಂತಿ ಆಗೋದನ್ನು ನೋಡ್ತೀರ ಎಂದು ಭರವಸೆ ಕೊಟ್ಟಿದ್ದಾರೆ. ಸರಸ್ವತಿಯ ಪುತ್ರ ವಿ.ಹರಿಕೃಷ್ಣ ಹಾಗೂ ತಂಡ ಸೇರಿಕೊಂಡು ಚಾಲೆಂಜಿಂಗ್ ಚಕ್ರವರ್ತಿಯ ಮುಖೇನ ರೆವಲ್ಯೂಷನ್ ತರಲಿಕ್ಕೆ ಹೊರಟಿದ್ದಾರೆ. ಬಾಕ್ಸ್ಆಫೀಸ್ ಸುಲ್ತಾನ್ ಸಿನಿಮಾಗೆ ನಿರ್ಮಾಪಕಿ ಶೈಲಜಾ ನಾಗ್ ಕೋಟಿ ಕೋಟಿ ಬಂಡವಾಳ ಸುರಿಯುತ್ತಿದ್ದಾರೆ.

ಸದ್ಯಕ್ಕೆ ಕ್ರಾಂತಿ' ಚಿತ್ರೀಕರಣ ಹೈದ್ರಬಾದ್‌ನಲ್ಲಿ ಭರದಿಂದ ಸಾಗುತ್ತಿದೆ. ಅಲ್ಲಿಂದ ಶೂಟಿಂಗ್ ಮುಗಿಸಿಕೊಂಡು ಮತ್ಯಾವ ಸ್ಥಳಕ್ಕೆ ಚಿತ್ರತಂಡ ಲಗ್ಗೆ ಇಡಲಿದೆ ಎನ್ನುವ ಮಾಹಿತಿ ಲಭ್ಯವಾಗಿಲ್ಲ. ಆದರೆ,ಕ್ರಾಂತಿ’ ಫಿಲ್ಮ್ ಟೀಮ್‌ನ ಸ್ಪೀಡ್ ನೋಡ್ತಾಯಿದ್ರೆ ದಚ್ಚು ಬರ್ತ್ ಡೇಗೆ ಟೀಸರ್ ಬಿಡುಗಡೆಯಾಗೋದು ಪಕ್ಕಾ ಎನಿಸ್ತಿದೆ. ಯಜಮಾನರ ಕೋಟ್ಯಾಂತರ ಭಕ್ತರು ಹಬ್ಬ ಮಾಡಿ ಸಂಭ್ರಮಿಸಲಿಕ್ಕೆ ಮತ್ತು ಕಾಲರ್ ಪಟ್ಟಿ ಎಗರಿಸಲಿಕ್ಕೆ `ಕ್ರಾಂತಿ’ಟೀಸರ್ ಅಥವಾ ಮೇಕಿಂಗ್ ವಿಡಿಯೋ ಸಾಥ್ ಕೊಡಲಿದೆ ಎನ್ನುವ ವಿಶ್ವಾಸವಿದೆ. ಜೊತೆಗೆ ದಚ್ಚು ಹುಟ್ಟುಹಬಬ್ಬದಂದು ಮತ್ತೊಂದು ಹೊಸ ಸಿನಿಮಾದ ಅನೌನ್ಸ್ ಮೆಂಟ್ ನಿರೀಕ್ಷೆ ಮಾಡಬಹುದು. ದಾಸನ ಆಪ್ತಸ್ನೇಹಿತರ ವಲಯದ ಒಬ್ಬರಿಗೆ ಡಿಬಾಸ್ ಕಾಲ್‌ಶೀಟ್ ಸಿಕ್ಕಿದೆ ಎಂದು ಹೇಳಲಾಗ್ತಿದೆ. ಆ ಬಗ್ಗೆ ಬರ್ತ್ಡೇ ದಿನದಂದು ಬಿಗ್‌ಅಪ್‌ಡೇಟ್ ಹೊರಬೀಳಲಿದೆ. ಫೆಬ್ರವರಿ ೧೬ರ ದಿನಗಣನೆ ಶುರುವಾಗಿದ್ದು, ಚಕ್ರವರ್ತಿ ಬರ್ತ್ಡೇ ಆಚರಣೆಗೆ ಅಭಿಮಾನಿ ಬಳಗ ಎದುರುನೋಡ್ತಿದೆ.

ವಿಶಾಲಾಕ್ಷಿ, ಎಂಟರ್‌ಟೈನ್ಮೆಂಟ್ ಬ್ಯೂರೋ ಸಿನಿಲಹರಿ

Categories
ಸಿನಿ ಸುದ್ದಿ

ಕೆವಿಎನ್ ಪ್ರೊಡಕ್ಷನ್ ಜೊತೆ ರಾಜಮೌಳಿ ಚಿತ್ರ; ಆರ್ ಆರ್ ಆರ್ ಬಳಗದ ಕನ್ನಡ ಮಾತೇ ಚೆನ್ನ…!

ಸಿನಿಮಾದ ಅಂಗಳದ ಯಾವುದೇ ಗಲ್ಲಿ ಗಲ್ಲಿಯಲ್ಲಿಯೂ ಈಗ ಬರೀ RRR ಸಿನಿಮಾದ್ದೇ ಜಪ. ಯೂಟ್ಯೂಬ್ ನಲ್ಲಿ ಬೆಂಕಿ ಬಿರುಗಾಳಿ ಸೃಷ್ಟಿಸ್ತಿರುವ RRR ಟ್ರೇಲರ್ ನೋಡಿ ಚಿತ್ರಪ್ರೇಮಿಗಳು ಬಹುಪರಾಕ್ ಅಂತಿದ್ದಾರೆ. ಜಕ್ಕಣ್ಣ ಈಸ್ ಗ್ರೇಟ್.. ರಿಯಲ್ ಹೀರೋ ಅಂತಾ ಶಹಬ್ಬಾಸ್ ಗಿರಿ ಕೊಡ್ತಿದ್ದಾರೆ. ಅದ್ಧೂರಿ.. ವೈಭೋಗದ RRR ಟ್ರೇಲರ್ ಲಾಂಚ್ ಇವೆಂಟ್ ಗೆ ಜಕ್ಕಣ್ಣಗಾರು ತಮ್ಮ ಬಳಗದೊಂದಿಗೆ ಬೆಂಗಳೂರಿಗೆ ಆಗಮಿಸಿದ್ದರು. RRR ಬಳಗ ಮಾಧ್ಯಮದವರ ಜೊತೆ ಸಿನಿಮಾ ಬಗ್ಗೆ ಒಂದಷ್ಟು ಮಾಹಿತಿ ಹಂಚಿಕೊಂಡರು.

ಕನ್ನಡದಲ್ಲಿ ಮಾತಾಡಿದ ರಾಜಮೌಳಿ ಟೀಂ!


RRR ಟ್ರೇಲರ್ ಇವೆಂಟ್ ಗೆ ಹಾಜರಾಗಿದ್ದ ರಾಜಮೌಳಿ, ಜೂನಿಯರ್ ಎನ್ ಟಿಆರ್, ರಾಮ್ ಚರಣ್ ತೇಜ್, ಆಲಿಯಾ ಭಟ್ ಎಲ್ಲರೂ ಕನ್ನಡದಲ್ಲಿ ಮಾತು ಆರಂಭಿಸಿದರು. ಅದ್ರಲ್ಲೂ ತಾರಕ್ ಹೇಳಿಕೊಟ್ಟ ಕನ್ನಡ ಪಾಠ ಕಲಿತ ಆಲಿಯಾ ಎಲ್ಲರಿಗೂ ನಮಸ್ಕಾರ ಅಂತಾ ಕನ್ನಡದಲ್ಲಿ ಹೇಳಿದ್ದು ಎಲ್ಲರನ್ನೂ ಚಕಿತಗೊಳಿಸಿತು.

ಕನ್ನಡದಲ್ಲಿ ಇಡೀ ಸಿನಿಮಾ ಡಬ್ ಮಾಡಿದ ತಾರಕ್!
RRR ಟ್ರೇಲರ್ ನಲ್ಲಿ ಜೂನಿಯರ್ ಎನ್ ಟಿಆರ್ ಹಾಗೂ ರಾಮ್ ಚರಣ್ ಕನ್ನಡದಲ್ಲಿಯೇ ಡಬ್ ಮಾಡಿದ್ದಾರೆ. ಇವರಿಬ್ಬರ ಕನ್ನಡ ವಾಯ್ಸ್ ಕೇಳಿ ಕನ್ನಡಿಗರು ಖುಷಿ. ಕೇವಲ ಟ್ರೇಲರ್ ನಲ್ಲಿ ಮಾತ್ರವಲ್ಲ ಇಡೀ ಸಿನಿಮಾವನ್ನೂ ಕನ್ನಡದಲ್ಲಿಯೇ ಡಬ್ ಮಾಡಿದ್ದೇನೆ ಅಂತಾ ಪತ್ರಕರ್ತರೊಬ್ಬರು ಕೇಳಿದ ಪ್ರಶ್ನೆಗೆ ಜೂನಿಯರ್ ಎನ್ ಟಿಆರ್ ನಗುತ್ತಲೇ ಉತ್ತರಿಸಿದರು.

ಕನ್ನಡ ಸಿನಿಮಾ ಮಾಡ್ತಾರೆ ರಾಮ್!
ರಾಜಮೌಳಿ ಡೈರೆಕ್ಷನ್ ಬಗ್ಗೆ ಹೊಗಳಿಕೆ ಮಾತುಗಳನ್ನಾಡಿದ ಮೆಗಾ ಪವರ್ ಸ್ಟಾರ್ ರಾಮ್ ಚರಣ್, ಕನ್ನಡ ಸಿನಿಮಾ ಮಾಡ್ತೇನೆ. ಒಳ್ಳೆ ಕಥೆ ಹಾಗೂ ಡೈರೆಕ್ಟರ್ ಸಿಕ್ಕರೆ ಕನ್ನಡ ಸಿನಿಮಾ ಮಾಡ್ತೇನೆ ಅಂತಾ ಮನದಾಳದ ಮಾತು ಹಂಚಿಕೊಂಡರು.

ಕೆವಿಎನ್ ಜೊತೆ ರಾಜಮೌಳಿ ಸಿನಿಮಾ!
RRR ಸಿನಿಮಾದ ಕನ್ನಡ ವಿತರಣೆ ಹಕ್ಕು ಪ್ರತಿಷ್ಠಿತ ಪ್ರೊಡಕ್ಷನ್ ಹೌಸ್ KVN ಪಾಲಾಗಿದೆ. ಕೋಟಿ ಕೋಟಿ ಕೊಟ್ಟು RRR ವಿತರಣೆ ಹಕ್ಕು ಪಡೆದಿರುವ KVN ಜೊತೆ ರಾಜಮೌಳಿ ಸಿನಿಮಾ ಮಾಡ್ತಾರಾ ಅನ್ನೋ ಪತ್ರಕರ್ತರೊಬ್ಬರ ಪ್ರಶ್ನೆ ಜಕ್ಕಣ್ಣಗಾರು, ಸಿನಿಮಾ ಮಾಡುವ ಇಂಗಿತ ವ್ಯಕ್ತಪಡಿಸಿದ್ರು.

ಕನ್ನಡ ರೈಟ್ಸ್ ಕಾಂಪಿಟೇಷನ್ ಇತ್ತು !

RRR ಸಿನಿಮಾದ ಕನ್ನಡ ವಿತರಣೆ ಹಕ್ಕು ಪಡೆಯಲು ದೊಡ್ಡ ಕಾಂಪಿಟೇಷನ್ ಇತ್ತು. ಆ ಕಾಂಪಿಟೇಷನ್ ನಡುವೆ KVN, RRR ಸಿನಿಮಾದ ವಿತರಣೆ ಹಕ್ಕನ್ನು ಖರೀದಿ ಮಾಡಿದೆ. ಈ ಬಗ್ಗೆ ಪತ್ರಕರ್ತರೊಬ್ಬರ ಪ್ರಶ್ನೆಗೆ ಉತ್ತರಿಸಿದ ಕೆವಿಎನ್ ವೆಂಕಟ್, ಬಾಹುಬಲಿ ಸಿನಿಮಾವನ್ನು ಕರುನಾಡ ಮಂದಿಗೆ ತೋರಿಸುವ ಇಚ್ಛೆ ಇತ್ತು. ಬಟ್ ಬಾಹುಬಲಿ ಕನ್ನಡದಲ್ಲಿ ಇರಲಿಲ್ಲ. ಆದ್ರೆ RRR ಸಿನಿಮಾದ ಕನ್ನಡದಲ್ಲಿ ಇದೆ. ಹೀಗಾಗಿ ತಾವೇ ಕನ್ನಡ ವಿತರಣೆ ಹಕ್ಕನ್ನು ಎಷ್ಟೇ ಕಾಂಪಿಟೇಷನ್ ಇದ್ರು ಖರೀದಿ ಮಾಡಿದ್ರು.

ಒಟ್ನಲ್ಲಿ RRR ಸಿನಿಮಾ ಅದ್ಧೂರಿಯಾಗಿ ಪ್ರಮೋಷನ್ ಮಾಡ್ತಿದೆ. ಈಗಾಗಲೇ ಸ್ಯಾಂಪಲ್ಸ್ ನಲ್ಲಿ ಸಖತ್ ಸದ್ದು ಮಾಡ್ತಿರುವ RRR ಸಿನಿಮಾ ಜನವರಿ 7ರಂದು ವರ್ಲ್ಡ್ ವೈಡ್ ತೆರೆಗಪ್ಪಳಿಸಲಿದೆ.

Categories
ಸಿನಿ ಸುದ್ದಿ

‘ಖಾಸಗಿ ಪುಟ’ದಲ್ಲಿ ಅನಾವರಣವಾಯ್ತು ಮನಮುಟ್ಟುವ ಪ್ರೇಮಕಥೆ…ಹೊಸಬರ ಹೊಸ ಪ್ರಯತ್ನದ ‘ಖಾಸಗಿ ಪುಟಗಳು’ ಫಸ್ಟ್ ಲುಕ್ ರಿಲೀಸ್!

ಕನ್ನಡ ಸಿನಿ ಜಗತ್ತಿನಲ್ಲಿ ಹೊಸಬರ ಹೊಸತನದ ಒಂದಷ್ಟು ಸಿನಿಮಾಗಳು ಸದ್ದು ಮಾಡುತ್ತಿವೆ. ಈ ಸಾಲಿಗೆ ‘ಖಾಸಗಿ ಪುಟಗಳು’ ಎಂಬ ಹೊಸಬರ ಸಿನಿಮಾ ಕೂಡ ಸೇರ್ಪಡೆಯಾಗಿದೆ. ಈ ಸಿನಿಮಾದ ಫಸ್ಟ್ ಲುಕ್ ರಿಲೀಸ್ ಆಗಿದ್ದು, ಕಡಲ ದಡಿಯಲ್ಲಿ ಕುಳಿತು ಎರಡು ಮುದ್ದಾದ ಜೋಡಿಗಳು ಹಸಿವು ನೀಗಿಸಿಕೊಳ್ಳುತ್ತಿರುವ ಮನಮುಟ್ಟುವ ಪೋಸ್ಟರ್ ಕುತೂಹಲದ ಕಾರ್ಮೋಡದಂತಿದೆ.

ಖಾಸಗಿ ಪುಟಗಳು ಎಂಬ ಗಮನಸೆಳೆಯುವ ಈ ಸಿನಿಮಾವನ್ನು ಸಂತೋಷ್ ಶ್ರೀಕಂಠಪ್ಪ ನಿರ್ದೇಶನ ಮಾಡುತ್ತಿದ್ದು, ಇದು ಇವರ ಮೊದಲ ಸಿನಿಮಾವಾಗಿದೆ. ಒಂದಷ್ಟು ಶಾರ್ಟ್‌ಮೂವಿಯಲ್ಲಿ ನಟಿಸಿದ್ದ ವಿಶ್ವ ಹಾಗೂ ಹಿಂದಿಯಲ್ಲಿ ‘ವೈ’ ಅನ್ನುವ ಸಿನಿಮಾವೊಂದರಲ್ಲಿ ನಟಿಸಿರುವ ಶ್ವೇತಾ ಡಿಸೋಜಾ ಈ ಸಿನಿಮಾದ ನಾಯಕಿಯಾಗಿ ಬಣ್ಣ ಹಚ್ಚಿದ್ದಾರೆ. ಉಳಿದಂತೆ ಚೇತನ್‌ ದುರ್ಗಾ, ನಂದಕುಮಾರ್‌, ನಿರೀಕ್ಷಾ ಶೆಟ್ಟಿ, ಮೈಸೂರು ದಿನೇಶ್‌ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ.

ಮಂಜು ಡಿ ರಾಜ್, ವೀಣಾ ಡಿ ರಾಜ್, ಮಂಜುನಾಥ್ ಡಿಎಸ್ ಖಾಸಗಿ ಪುಟಗಳು ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಉಳಿದಂತೆ ವಿಶ್ವಜಿತ್ ರಾವ್ ಛಾಯಾಗ್ರಾಹಣ, ಆಶಿಕ್ ಕುಸುಗೊಳಿ ಸಂಕಲನ, ವಾಸುಕಿ ವೈಭವ್ ಸಂಗೀತ, ಕೆ.ಕಲ್ಯಾಣ್, ಪ್ರಮೋದ್ ಮರವಂತೆ ಹಾಗೂ ವಿಶ್ವಜಿತ್ ರಾವ್ ಸಾಹಿತ್ಯ ಸಿನಿಮಾಕ್ಕಿದೆ.

ಉಡುಪಿಯ ಚೆಂದದ ಕರಾವಳಿ ತೀರದಲ್ಲಿ ಹುಟ್ಟುವ ಕಾಲೇಜು ಹುಡುಗರ ಪ್ರೇಮವೇ ಪ್ರಧಾನ ಕಥಾಹಂದರದ ಖಾಸಗಿ ಪುಟಗಳು ಸಿನಿಮಾದ ಶೂಟಿಂಗ್ ಕಂಪ್ಲೀಟ್ ಆಗಿದ್ದು, ಸದ್ಯದಲ್ಲಿಯೇ ಸಿನಿಮಾ ತಂಡ ಹಾಡುಗಳನ್ನು ರಿಲೀಸ್ ಮಾಡಲಿದೆ.

Categories
ಸಿನಿ ಸುದ್ದಿ

ಬೆಂಗಳೂರಲ್ಲಿ ‘ ಗೆಳೆಯ’ ನ ನೆನೆದು ಜೂನಿಯರ್ ಎನ್ ಟಿ ಆರ್ ಭಾವುಕ !

ನಾನು ಈ ಹಾಡನ್ನು ಪುನೀತ್​ಗಾಗಿ ಎಂದಿಗೂ ಹೇಳಿರಲಿಲ್ಲ. ಇದೇ ಮೊದಲು ಮತ್ತು ಇದೇ ಕೊನೆ. ಈ ಹಾಡನ್ನು ಮತ್ತೆ ಹಾಡುವುದಿಲ್ಲ…

ಗೆಳೆಯ ಪುನೀತ್ ನೆನೆದು ಯಂಗ್ ಟೈಗರ್ ಜೂನಿಯರ್ ಎನ್ ಟಿ ಆರ್ ಭಾವುಕರಾಗಿ ಗೆಳೆಯ ಗೆಳೆಯ… ಅಂತ ಹೇಳಿದ ಹಾಡಿದು. ರಾಜ ಮೌಳಿ ನಿರ್ದೇಶನದ ಬಹು ನಿರೀಕ್ಷಿತ ಆರ್ ಆರ್ ಆರ್ ಜನವರಿ 7 ಕ್ಕೆ ವಿಶ್ವದಾದ್ಯಂತ ರಿಲೀಸ್ ಆಗುತ್ತಿದೆ. ಇದರ ಪ್ರಚಾರಕ್ಕಾಗಿ ಇಡೀ ತಂಡ ಶುಕ್ರವಾರ ಬೆಂಗಳೂರಿಗೆ ಆಗಮಿಸಿತ್ತು‌. ನಿರ್ದೇಶಕ ರಾಜ ಮೌಳಿ, ನಿರ್ಮಾಪಕ ದಾನಯ್ಯ, ನಾಯಕ ನಟರಾದ ರಾಮ್ ಚರಣ್ ತೇಜ್, ನಾಯಕಿ ಆಲಿಯಾ ಭಟ್ ಸೇರಿದಂತೆ ಜೂನಿಯರ್ ಎನ್ ಟಿ ಆರ್ ಕೂಡ ಬಂದಿದ್ದರು‌. ಈ‌ಸಂದರ್ಭದಲ್ಲಿ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದರು‌. ಅಪ್ಪು ನೆನೆದು ಭಾವುಕರಾದರು.

ಪುನೀತ್​ ಇಲ್ಲದ ಕರ್ನಾಟಕ ನನಗೆ ಶೂನ್ಯವಾಗಿ ಕಾಣುತ್ತಿದೆ. ಅವರು ಎಲ್ಲೇ ಇದ್ದರೂ ಅವರ ಆಶೀರ್ವಾದ ನನ್ನ ಮೇಲಿರುತ್ತೆ ಎಂದು ಭಾವುಕರಾದರು. ಅವರಿಗಾಗಿ ಚಕ್ರವ್ಯೂಹ ಚಿತ್ರದ ಗೆಳೆಯ ಗೆಳೆಯ ಹಾಡು ಹಾಡಿ ಕಣ್ಣೀರಾದರು. ‘ ನಾನು ಈ ಹಾಡನ್ನು ಪುನೀತ್​ಗಾಗಿ ಎಂದಿಗೂ ಹೇಳಿರಲಿಲ್ಲ. ಇದೇ ಮೊದಲು ಮತ್ತು ಇದೇ ಕೊನೆ. ಈ ಹಾಡನ್ನು ಮತ್ತೆ ಹಾಡುವುದಿಲ್ಲ ಎಂದು ಗೆಳೆಯಾ ಗೆಳೆಯಾ’ ಎಂದು ಹಾಡಿ ಕಣ್ಣಾಲೆಗಳನ್ನು ತೇವ ಮಾಡಿಕೊಂಡರು. ಇನ್ನು ಎನ್​​ಟಿಆರ್​ ಕುಟುಂಬಕ್ಕೂ ಹಾಗೂ ರಾಜ್​ ಕುಟುಂಬಕ್ಕೂ ಅವಿನಾಭಾವ ಸಂಬಂಧ ಇದೆ. ಪುನೀತ್ ಅವರ ಪಾರ್ಥಿವ ಶರೀರದ ದರ್ಶನಕ್ಕೂ ಜ್ಯೂ.ಎನ್​ಟಿಆರ್ ಆಗಮಿಸಿ, ಗೌರವನ ನಮನ ಸಲ್ಲಿಸಿದ್ದರು. ನಟ ಪುನೀತ್ ಇಲ್ಲದ ಈ ಕ್ಷಣ ಅವರನ್ನು ನೆನೆದು ಜೂನಿಯರ್ ಎನ್ ಟಿಆರ್ ಭಾವುಕರಾಗಿದ್ದಕ್ಕೂ ಕಾರಣ ಇದೆ.

ಕನ್ನಡ ಚಿತ್ರರಂಗ ಅಲ್ಲದೇ ಪರಭಾಷೆಯ ಸ್ಟಾರ್​ಗಳ ಜೊತೆಯೂ ಅಪ್ಪು ಸ್ನೇಹ ಹೊಂದಿದ್ದವರು. ಅದೇ ರೀತಿ ಟಾಲಿವುಡ್ ನ ಹೆಸರಾಂತ ನಟ ಯಂಗ್ ಟೈಗರ್ ಜೂನಿಯರ್ ಎನ್ ಟಿ ಆರ್ ಜತೆಗು ಅದೇ ಸ್ನೇಹ ಹೊಂದಿದ್ದರು. ಅದೇ ಗೆಳೆತನದ ಮೂಲಕ ಚಕ್ರವ್ಯೂಹ ಚಿತ್ರಕ್ಕೆ ಹಾಡಿದ್ದರು. ಅದೇ ರೀತಿ ಕನ್ನಡದ ಜತೆಗೂ ಜೂನಿಯರ್ ಅವರದ್ದು ಅವಿನಾಭಾವ ನಂಟು. ಅವರ ತಾಯಿ ಕುಂದಾಪುರದವರು‌. ಅದೇ ಕಾರಣಕ್ಕೆ ಅವರಿಗೇನು ಕನ್ನಡ ಹೊಸದಲ್ಲ. ಹಾಗಾಗಿಯೇ ಈಗ ಆರ್ ಆರ್ ಆರ್ ಚಿತ್ರದ ಕನ್ನಡದ ಅವತರಣಿಕೆಗೂ ಅವರದ್ದೇ ವಾಯ್ಸ್ ಡಬ್ ಮಾಡಿದ್ದಾರೆ. ಆ ಬಗ್ಗೆಯೂ ಅವರು ಅಲ್ಲಿ ಮಾತನಾಡಿದರು.

. ‘ ನಾನು ಕನ್ನಡದ ಅವತರಣಿಕೆಗೂ ವಾಯ್ಸ್ ಕೊಡ್ಬೇಕು ಅನ್ನೋದು ರಾಜಮೌಳಿ ಸರ್ ಅವರ ಅಭಿಲಾಶೆ ಆಗಿತ್ತು. ಅವರು ಆಸೆಯಂತೆ ನಾನು ಕನ್ನಡಕ್ಕೆ ಡಬ್ ಮಾಡಲು ಒಪ್ಪಿಕೊಂಡೆ. ಅವರಿಗೂ ಕನ್ನಡ ಗೊತ್ತು. ನಂಗೂ ಸ್ವಲ್ಪ ಸ್ವಲ್ಪ ಕನ್ನಡ ಗೊತ್ತು. ಅಮ್ಮ ನಿಂದಲೇ ಕಲಿತಿದ್ದು. ಅವರು ಕೂಡ ಇದಕ್ಕೆ ಸಪೊರ್ಟ್ ಮಾಡಿದರು. ಹಾಗೆಯೇ ವರದರಾಜ್ ಅವರು ನಮಗೆ ಹೆಲ್ಪ್ ಮಾಡಿದ್ರು. ಅದರಿಂದಲೇ ನಾನು ಡಬ್ ಮಾಡಿದ್ದೇನೆ. ಟ್ರೇಲರ್ ನೋಡಿದ್ದೇನೆ‌ . ಚೆನ್ನಾಗಿ ಬಂದಿದೆ.’ ಎನ್ನುತ್ತಾ ನಗು ಬೀರಿದರು.
ಅಮ್ಮ ಕನ್ನಡದವರು , ಅವರೇನಾದ್ರು ಹೆಲ್ಪ್ ಮಾಡಿದ್ರ ಎನ್ನುವ ಪ್ರಶ್ನೆಗೆ, ಹೌದು ಎಂದು ಉತ್ತರಿಸಿದರು. ‘ ಹೌದು ನಿಂಗೆ ಕನ್ನಡ ಗೊತ್ತು. ಆದ್ರೆ ಚೆನ್ನಾಗಿ ಮಾತಾನಾಡ್ಬೇಕು. ಯಾಕಂದ್ರೆ ಕನ್ನಡ ನಮ್ಮೂರು, ಅಲ್ಲಿ ನಮ್ಮವರು‌ ಇದ್ದಾರೆ ಅಂತ ಸಲಹೆ‌ ಕೊಟ್ಟಿದ್ದ ನ್ನು ನೆನಪಿಸಿಕೊಂಡರು. ಆರ್​ಆರ್​ಆರ್​ ಪ್ರಮೋಷನ್​ ಕಾರ್ಯಕ್ರಮದಲ್ಲಿ ಮೆಗಾ ಪವರ್​ ಸ್ಟಾರ್ ರಾಮ್​ ಚರಣ್, ಬಾಲಿವುಡ್​ ಬ್ಯೂಟಿ ಆಲಿಯಾ ಭಟ್, ನಿರ್ದೇಶಕ ರಾಜಮೌಳಿ ಉಪಸ್ಥಿತರಿದ್ದರು.​

Categories
ಸಿನಿ ಸುದ್ದಿ

ಉಹ್ಞೂಂ ಅಂತೀಯಾ? ಅಥವಾ ಹ್ಞೂಂ ಅಂತೀಯಾ ಹೇಳ್ ಬುಡು ಮಾವ? ಡೈವರ್ಸ್ ಮಾಡ್ಕೊಂಡಿರುವ ಸಮಂತಾ ಕೇಳಿದ್ಯಾವ ಮಾವನಿಗೆ ?

ಸೌತ್‌ಬ್ಯೂಟಿ ಸಮಂತಾ, ಅಕ್ಕಿನೇನಿ ನಾಗಚೈತನ್ಯರಿಂದ ವಿಚ್ಚೇದನ ಪಡೆದಿರುವುದು ಎಲ್ಲರಿಗೂ ತಿಳಿದಿರುವಂತಹದ್ದೇ. ಪರಸ್ಪರ ಒಪ್ಪಿಗೆಯ ಮೇರೆಗೆ ಡೈವರ್ಸ್ ಪಡೆದುಕೊಂಡು ನಾಲ್ಕು ವರ್ಷದ ವೈವಾಹಿಕ ಬದುಕಿಗೆ ಗುಡ್‌ಬೈ ಹೇಳಿದ್ದಾರೆ. ಸದ್ಯ ಚೈ ಅಂಡ್ ಸ್ಯಾಮ್ ಬೇರೆ ಬೇರೆಯಾಗಿ ಬದುಕುತ್ತಿದ್ದಾರೆ. ಇಬ್ಬರು ಕೂಡ ತಮ್ಮ ತಮ್ಮ ಸಿನಿಮಾಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಮಧ್ಯೆ ಸ್ಯಾಮ್ `ಉಹ್ಞೂಂ ಅಂತೀಯಾ? ಅಥವಾ ಹ್ಞೂಂ ಅಂತೀಯಾ ಹೇಳ್ ಬುಡು ಮಾವ'ಅಂತೇಳಿ ಸಂಚಲನ ಸೃಷ್ಟಿಸಿದ್ದಾರೆ.ಅಷ್ಟಕ್ಕೂ, ಸಮ್ಮು ಈ ರೀತಿ ಹೇಳಿದ್ದು ಯಾವ ಮಾವನ ಮುಂದೆ?ಏನ್ ನಡೀತಿದೆ ‘ರಾಜಿ’ ಸುತ್ತ ಮುತ್ತ? ಆ ಇಂಟ್ರೆಸ್ಟಿಂಗ್ ಸ್ಟೋರಿ ನಿಮ್ಮ ಮುಂದೆ

ಮನಂ'ಜೋಡಿಯ ನಾಲ್ಕು ವರ್ಷದ ದಾಂಪತ್ಯ ಜೀವನ ಮುಗಿದುಹೋದ ಅಧ್ಯಾಯ.11 ವರ್ಷ ಪ್ರೀತ್ಸಿ ಮದುವೆಯಾದ ಚೈ-ಸ್ಯಾಮ್ ಮಧ್ಯೆ ಅದ್ಯಾವ ಘಟನೆ ಘಟಿಸಿತೋ? ಇವರಿಬ್ಬರ ಸಂಸಾರದಲ್ಲಿ ಅದ್ಯಾರು ಉಳಿ ಹಿಂಡಿದ್ರೋ ಏನೋ ಗೊತ್ತಿಲ್ಲ? ‘ಮಜಿಲಿ’ ಜೋಡಿ ಡೈವರ್ಸ್ ತೆಗೆದುಕೊಳ್ಳುವಂತಾಯ್ತು. ಕೋಟ್ಯಾಂತರ ಅಭಿಮಾನಿಗಳ ಹೊಟ್ಟೆಗೆ ಬೆಂಕಿ ಬಿತ್ತು. ಹೀಗೆ ಹೊಟ್ಟೆಗೆ ಬೆಂಕಿ ಹಾಕಿಕೊಂಡವರೆಲ್ಲ ಫ್ಯಾನ್ಸ್ ಈಗ್ಲೂ ಕೇಳಿಕೊಳ್ತಿರುವುದು ಒಂದೇ ಚೈ-ಸ್ಯಾಮ್ ಇಬ್ಬರು ವೈಮನಸ್ಸು ಮರೆತು ಒಂದಾಗ್ಬೇಕು ಅನ್ನೋದು. ಅಭಿಮಾನಿಗಳ ಈ ಕನಸು ಈಡೇರುತ್ತೋ? ಇಲ್ಲವೋ? ಗೊತ್ತಿಲ್ಲ. ಆದರೆ, ಫ್ಯಾನ್ಸ್ ಗೆ ಮನರಂಜನೆ ಕೊಡುವುದಕ್ಕೆ ಸಮಂತಾ ಹಾಗೂ ನಾಗ ಚೈತನ್ಯ ಇಬ್ಬರು ಕೂಡ ಸಿನಿಮಾದ ಮೊರೆ ಹೋಗಿದ್ದಾರೆ. ಅದರಲ್ಲೂ ಸ್ಯಾಮ್ ಅಂತೂ `ಪುಷ್ಪ’ ಸಿನಿಮಾದ ಸ್ಪೆಷಲ್ ಹಾಡಿನಲ್ಲಿ ಇಡೀ ಸೌತ್ ಸಿನಿಮಾ ಇಂಡಸ್ಟ್ರಿಯ ಚಿತ್ರಪ್ರೇಮಿಗಳು ಬೆರಗುಗಣ್ಣಿನಿಂದ ನೋಡುವಂತಹ ಪರ್ಫಾಮೆನ್ಸ್ ಕೊಟ್ಟಿದ್ದಾರೆ.

ಅಲ್ಲಾ, ಉಹ್ಞೂಂ ಅಂತೀಯಾ? ಅಥವಾ ಹ್ಞೂಂ ಅಂತೀಯಾ ಹೇಳ್ ಬುಡು ಮಾವ ಅಂತ ಸಮಂತಾ ಕೇಳಿದ್ದಾರೆ. ಅದರ ಕಥೆ ಹೇಳ್ತೀವಿ ಅಂತೇಳಿ ಮತ್ತದೇ ಹಳೆ ಕಥೆ ಕ್ಯಾಸೆಟ್ ಪ್ಲೇ ಮಾಡ್ತಿದ್ದಾರೆ ಅಂದ್ಕೋಬೇಡಿ. ತಾಜಾ ಸಮಾಚಾರ ಹೇಳಲಿಕ್ಕಾಗಿಯೇ ಇಷ್ಟೆಲ್ಲಾ ಹೇಳಿದ್ದು. ಉಹ್ಞೂಂ ಅಂತೀಯಾ? ಅಥವಾ ಹ್ಞೂಂ ಅಂತೀಯಾ ಹೇಳ್ ಬುಡು ಮಾವ'? ಹೀಗಂತ ಆ್ಯಪಲ್ ಬ್ಯೂಟಿ ಸಮಂತಾ ಕೇಳಿದ್ದೇನೋ ನಿಜ ಆದರೆ,ರೀಲ್ ಲೈಫ್‌ನಲ್ಲಿರುವ ಮಾವನ ಮುಂದೆ ಅಲ್ಲಾ? ಬದಲಾಗಿ ರಿಯಲ್ ಲೈಫ್‌ನಲ್ಲಿಪುಷ್ಪ’ ಸಿನಿಮಾದ ಸ್ಪೆಷಲ್ ಹಾಡಿನಲ್ಲಿ ಬರುವ ಸ್ಟೈಲಿಷ್ ಮಾವನ ಮುಂದೆ.

ಹೌದು, ಸ್ಟೈಲಿಷ್ ಐಕಾನ್ ಅಲ್ಲು ಅರ್ಜುನ್ ಅಭಿನಯದ ಪ್ಯಾನ್ ಇಂಡಿಯಾ ಪುಷ್ಪ' ಚಿತ್ರದಲ್ಲಿ ಸಮಂತಾ ಐಟಂ ಹಾಡಿಗೆ ಸೊಂಟ ಕುಣಿಸಿದ್ದಾರೆ.ಇದೇ ಮೊದಲ ಭಾರಿಗೆ ಸ್ಪೆಷಲ್ ನಂಬರ್ ಹಾಡಿಗೆ ಬೆಲ್ಲಿ ಬಳುಕಿಸಿರುವ ಸ್ಯಾಮ್ ‘ಸೀರೆ.. ಸೀರೆ.. ಸೀರೆಯುಟ್ಟರೆ ಕಣ್.. ಕಣ್.. ಬಿಟ್ಕೊಂಡು ನೋಡ್ತೀರಾ, ಪುಟ್ಟ..ಪುಟ್ಟ.. ಗೌನು ತೊಟ್ರೆ..ಹಿಂದೆ ಹಿಂದೆ ಬೀಳ್ತೀರಾ, ಸೀರೆಯಲ್ಲ..ಗೌನು ಅಲ್ಲ..ಉಟ್ಟ ಬಟ್ಟೇಲಿ ಏನೈತೆ, ನೀವು ನೋಡೋದ್ರಾಗೆ ಎಲ್ಲಾ ಐತೆ ನಿಮ್ಮ ಬುದ್ದಿ ಇಲ್ಲ ಶುದ್ದಿ, ಉಹ್ಞೂಂ ಅಂತೀಯಾ ಮಾವ ? ಹ್ಞೂಂ ಅಂತೀಯಾ ಮಾವ’? ಅಂತ ಅಲ್ಲು ಅರ್ಜುನ್ ಮುಂದೆ ಕೇಳಿದ್ದಾರೆ.

ಈ ಹಾಡಿಗಾಗಿ ದುಬಾರಿ ಸಂಭಾವನೆ ಪಡೆದಿರುವ ಸ್ಯಾಮ್, ನೀಲಿ ಬಣ್ಣದ ಲೆಹೆಂಗಾ ತೊಟ್ಟು ಸಖತ್ತಾಗೆ ಕುಣಿದಿದ್ದಾರೆ. ಈ ಸ್ಪೆಷಲ್ ನಂಬರ್ ಸಾಂಗ್ ಮೂರು ಸೀಸನ್‌ಗೂ ಮ್ಯಾಚ್ ಆಗುತ್ತೆ. ಚಳಿಗಾಲ..ಮಳೆಗಾಲ..ಬೇಸಿಗೆಕಾಲ ಈ ಮೂರು ಕಾಲದಲ್ಲೂ ಪಡ್ಡೆಹೈಕ್ಳು ಬೆವರುವಂತೆ ಮಾಡುವ ಸಾಂಗ್ ಇದು.

'ಕಣ್ಣೇ ಅದಿರಿಂದಿ'ಅಂತ ಹಾಡಿ ಪಡ್ಡೆ ಹುಡಗರ ಹಗಲು-ರಾತ್ರಿ ನಿದ್ದೆಕದ್ದ ಸಿಂಗರ್ ಮಂಗ್ಲಿ,ಈಗ ‘ಹ್ಞೂಂ ಅಂತೀಯಾ ಮಾವ? ಉಹ್ಞೂಂ ಅಂತೀಯಾ ಮಾವ’? ಅಂತ ಹಾಡಿ ಸಕಲ ಸೋದರ ಮಾವಂದಿರು-ಸಕಲ ಸೊಸೆಯಂದಿರನ್ನು ಅಟ್ರ್ಯಾಕ್ಟ್ ಮಾಡುತ್ತಿದ್ದಾರೆ. ವರದರಾಜ್ ಚಿಕ್ಕಬಳ್ಳಾಪುರ ಕನ್ನಡ ವರ್ಷನ್ ಹಾಡಿಗೆ ಕ್ಯಾಚಿ ಲಿರಿಕ್ಸ್ ಬರೆದುಕೊಟ್ಟಿದ್ದಾರೆ. ದೇವಿ ಶ್ರೀ ಪ್ರಸಾದ್ ಟ್ಯೂನ್ ಕಂಪೋಸ್ ಮಾಡಿದ್ದಾರೆ.

ತೆಲುಗು ಸೇರಿದಂತೆ ಐದು ಭಾಷೆಗಳಲ್ಲಿ ‘ಹ್ಞೂಂ ಅಂತೀಯಾ ಮಾವ? ಉಹ್ಞೂಂ ಅಂತೀಯಾ ಮಾವ'? ಹಾಡು ಬಿಡುಗಡೆಯಾಗಿದ್ದು ಭರ್ಜರಿ ರೆಸ್ಪಾನ್ಸ್ ಸಿಗುತ್ತಿದೆ.ಸುಕುಮಾರ್ ಬತ್ತಳಿಕೆಯಿಂದ ಹೊರಬರುತ್ತಿರುವ ‘ಪುಷ್ಪ’ಕ್ಕೆ ಅಲ್ಲು ಅರ್ಜುನ್ ಹಾಗೂ ರಶ್ಮಿಕಾ ಮಂದಣ್ಣ ಜೀವ ತುಂಬಿದ್ದಾರೆ. ಮೈತ್ರಿ ಮೂವೀ ಮೇಕರ್ಸ್ ಬ್ಯಾನರ್‌ನಲ್ಲಿ ‘ಪುಷ್ಪ'ಅದ್ದೂರಿಯಾಗಿ ನಿರ್ಮಾಣಗೊಂಡಿದ್ದು, ಡಿಸೆಂಬರ್ 17ರಂದು ಬಿಗ್‌ಸ್ಕ್ರೀನ್ ಮೇಲೆ ‘ಪುಷ್ಪ’ ಅರಳಲಿದೆ. ಪ್ಯಾನ್ ಇಂಡಿಯಾ ತುಂಬೆಲ್ಲಾ ಘಮಘಮಿಸೋಕೆ ಹೊರಟಿದೆ.

ವಿಶಾಲಾಕ್ಷಿ, ಎಂಟರ್‌ಟೈನ್ಮೆಂಟ್ ಬ್ಯೂರೋ ಸಿನಿಲಹರಿ

error: Content is protected !!