Categories
ಸಿನಿ ಸುದ್ದಿ

ಬೀದಿಗೆ ಬಿತ್ತು ಚಲನಚಿತ್ರ ನಿರ್ದೇಶಕರ ಸಂಘದ ಘನತೆ, ಗೌರವ!

ಆರ್ಥಿಕ ಮುಗ್ಗಟ್ಟಿಗೆ  ಸಿಲುಕಿದ ನಿರ್ದೇಶಕರ ಸಂಘ

– ಕಚೇರಿ ಬಾಡಿಗೆ ಕಟ್ಟದೆ ಕಳೆಯಿತು ಒಂದು ವರ್ಷ

– ಪೊಲೀಸ್ ಮೆಟ್ಟಿಲೇರಿದ ಕಟ್ಟಡ ಮಾಲೀಕ

– ಅಂತಿಮವಾಗಿ ಹೊರ ಬಿದ್ದವು ಕಚೇರಿ ಪೀಠೋಪಕರಣ

(ಇದು ಸಿನಿ‌ಲಹರಿ  ಬ್ರೇಕಿಂಗ್)

ಕನ್ನಡದ ಹೆಸರಾಂತ ನಿರ್ದೇಶಕ ಪುಟ್ಟಣ ಕಣಗಾಲ್ ಹುಟ್ಟು ಹಾಕಿದ ‘  ಕರ್ನಾಟಕ ಚಲನ ಚಿತ್ರ ನಿರ್ದೇಶಕರ ಸಂಘ’ದ ಘನತೆ, ಗೌರವ  ಇಂದು ಬೀದಿಗೆ ಬಿದ್ದಿದೆ‌. 2018 ರಲ್ಲಷ್ಟೇ ವಿಜಯನಗರದಿಂದ ನಾಗರಭಾವಿಗೆ ಸ್ಥಳಾಂತರ ಗೊಂಡ ಸಂಘದ  ಕಚೇರಿ ಕಟ್ಟಡದ ಬಾಡಿಗೆ ಕಟ್ಟದ ಪರಿಣಾಮ, ಕಟ್ಟಡದ ಮಾಲೀಕ  ಸಂಘದ ವಿರುದ್ಧ ಪೊಲೀಸ್ ಠಾಣೆಯ ಮೇಟ್ಟೆಲೇರಿದ್ದಾನಂತೆ‌. ಹಾಗೆಯೇ ಎರಡು ದಿನಗಳ ಹಿಂದಷ್ಟೇ ಕಚೇರಿಯಲ್ಲಿನ‌ ಪೀಠೋಪಕರಣ ಹೊರ ಹಾಕಿ, ಸಂಘದ ಪದಾಧಿ ಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆನ್ನ ಲಾಗಿದೆಯಂತೆ.

ಸಂಘದ ಹಲವು ಪದಾಧಿಕಾರಿಗಳಲ್ಲಿ ಇದು ತೀವ್ರ ಬೇಸರ ಹುಟ್ಟಿಸಿದೆ‌. ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘವು ಇದುವರೆಗೂ ಕಾಪಾಡಿಕೊಂಡು‌ ಬಂದಿದ್ದ ಘನತೆ, ಗೌರವ ವಿನಾಕಾರಣ ಬೀದಿಗೆ ಬಂದಿರುವುದು ತೀವ್ರ ನೋವುಂಟು ಮಾಡಿದೆ ಅಂತ ಸಂಘದ ಕೆಲವರು ಬೇಸರ ವ್ಯಕ್ತಪಡಿ ಸಿದ್ದಾರಂತೆ. ಸದ್ಯಕ್ಕೀಗ ಎಲ್ಲವೂ‌ ತೆರೆಮರೆಯಲ್ಲೆ  ನಡೆದಿದೆ.‌ ಕೊರೋನಾ ಕಾರಣ ಸಂಘವು ಆರ್ಥಿಕ‌ ಮುಗ್ಗಟ್ಟಿಗೆ ಸಿಲುಕಿದ್ದೇ ಇಷ್ಟಕ್ಕೆಲ್ಲ ಕಾರಣ ಅಂತಲೂ ಸಂಘದ ಕೆಲವು ಮೂಲಗಳು ತಿಳಿಸಿವೆ.

ಆದರೆ ಕೊರೋನಾ ಅಂತ‌ ಲಾಕ್ ಡೌನ್ ಶುರುವಾಗಿದ್ದು ಮಾರ್ಚ್ ತಿಂಗಳಿನಿಂದ.‌  ಚಿತ್ರೋದ್ಯಮ ಕೂಡ ಬಂದ್ ಆಗಿರುವುದು ಕೂಡ ಅಲ್ಲಿ‌ಂದಲೇ . ಆದರೆ  ಸಂಘದ ಕಚೇರಿ ಬಾಡಿಗೆ, ವಾಟರ್ ಬಿಲ್, ಕರೆಂಟ್ ಬಿಲ್ ಬ್ಯಾಲೆನ್ಸ್ ಇರುವುದು ಕಳೆದ‌ ಡಿಸೆಂಬರ್ ತಿಂಗಳಿನಿಂದಲೇ ಅಂತೆ. ಹಾಗಾದ್ರೆ ಆಗ ಕೊರೋನಾ ಇತ್ತಾ ಎನ್ನುವ ಪ್ರಶ್ನೆಯಿಂದಲೇ ಕಟ್ಟಡದ ಮಾಲೀಕ , ಸಂಘದ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲು ಹತ್ತಿದ್ದಾರಂತೆ ಎನ್ನುತ್ತಿವೆ ‌ಮೂಲಗಳು.ಸಂಘದ ಹಾಲಿ ಅಧ್ಯಕ್ಷರ ವಿರುದ್ಧವೇ ಕಟ್ಟಡದ ಮಾಲೀಕ ದೂರು ಸಲ್ಲಿಸಿರುವ ಸಂಗತಿ ಕೂಡ ರಿವೀಲ್ ಆಗಿದೆ.

ಕಚೇರಿ ಉದ್ಘಾಟನೆ ವೇಳೆ ನಟ ಕಿಚ್ಚ ಸುದೀಪ್

2018ರಲ್ಲಿ ಮಹತ್ತರ ಉದ್ದೇಶಗಳನ್ನು ಹೊತ್ತು ಕೊಂಡು  ವಿಶಾಲವಾದ ಬಾಡಿಗೆ ಕಟ್ಟಡಕ್ಕೆ ನಿರ್ದೇಶಕರ ಸಂಘ ಸ್ಥಳಾ‌ಂತರಗೊಂಡಿತ್ತು. ಅವತ್ತು ನಟ ಕಿಚ್ಚ ಸುದೀಪ್ ಮುಖ್ಯ ಅತಿಥಿಯಾಗಿ ಬಂದು, ಸಂಘದ ಕಚೇರಿ ಉದ್ಧಾಟಿಸಿದ್ದರು. ಆದಾದ ನಂತರ ನಿರ್ದೇಶಕರ ಸಂಘಕ್ಕೆ ಪದಾಧಿಕಾರಗಳ ಆಯ್ಕೆ ನಡೆಯಿತು. ‌ನಿರ್ದೇಶಕರ ಸಂಘಕ್ಕೆ  ನಿರ್ಮಾಪಕ ಕಮ್ ನಿರ್ದೇಶಕ ‌ಟೇಶಿ ವೆಂಕಟೇಶ್ ಅಧ್ಯಕ್ಷರಾದರು‌. ಅವರು ಇನ್ನೇನು ಸಂಘವನ್ನು ಒಂದು ಹಂತಕ್ಕೆ ತೆಗೆದುಕೊಂಡು ಹೋಗೋಣ ಎನ್ನುವ ಹೊತ್ತಿಗೆ ಕೊರೋನಾ ಶುರುವಾಯ್ತು. ಹಂತ ಹಂತವಾಗಿ ಮೇಲೆಳುತ್ತಿದ್ದ  ನಿರ್ದೇಶಕರ ಸಂಘ‌ ನೆಲ ಹಿಡಿಯಿತು‌.

ಮುಂದೆ ಕೊರೋನಾ,  ನಿರ್ದೇಶಕರು ಸೇರಿ‌ ಚಿತ್ರೋದ್ಯಮವನ್ನು ತೀವ್ರವಾಗಿ ಭಾದಿಸಿತು. ಕೆಲಸ ಇಲ್ಲದೆ ಮನೆ ಹಿಡಿದ ನಿರ್ದೇಶಕರ ಸಂಘದ ಪಧಾಧಿಕಾರಿಗಳ ನೆರವಿಗೆ ಸಂಘ‌ ಬಂತು‌. ಹಾಗೆ ಮಾಡಿದ್ದೇ ಸಂಘ ಆರ್ಥಿಕ‌ ಮುಗ್ಗಟ್ಟು ಅನುಭವಿಸಲು ಕಾರಣವಂತಂತೆ.ಆದರೆ ಕಟ್ಟಡದ ಮಾಲೀಕ ಕೇಳಬೇಕಲ್ಲ? ಬಾಡಿಗೆ ನೀಡಿಲ್ಲ ಅಂತ ಆತ ದೂರು ನೀಡಿದ್ದಾನೆ. ಪೀಠೋಪಕರಣ ಹೊರ ಹಾಕಿದ್ದಾನೆ. ಇದರಿಂದ ಸಂಘದ ಗೌರವ ಬೀದಿಗೆ ಬಿದ್ದಿದೆ ಎನ್ನುವುದು ಹೆಸರು ಹೇಳಲಿಚ್ಚಿಸದ ನಿರ್ದೇಶಕರೊಬ್ಬರ ಅಳಲು.
ಕನ್ನಡ ಚಿತ್ರರಂಗಕ್ಕೆ ದೊಡ್ಡ ಇತಿಹಾಸ ಇದೆ.ಹಾಗೆಯೇ ಅಲ್ಲಿರುವ ವಿವಿಧ ವಿಭಾಗಗಳ ಸಂಘಟನೆಗಳಿಗೂ ಅಷ್ಟೇ ಇತಿಹಾಸ, ಗೌರವ ಇದೆ. ಕರ್ನಾಟಕ ನಿರ್ಮಾಪಕರ ಸಂಘವು ತನ್ನ ಸ್ವಂತ ಕಟ್ಟಡದ ನಿರ್ಮಾಣಕ್ಕೆ ಇತ್ತೀಚೆಗಷ್ಟೇ ಶಂಕುಸ್ಥಾಪನೆ ನೆರವೇರಿಸಿದ್ದು ನಿಮಗೂ ಗೊತ್ತು. ಕಲಾವಿದರ ಸಂಘವು ಚಾಮರಾಜಪೇಟೆಯಲ್ಲಿ ಬೃಹತ್ ಭವನ ನಿರ್ಮಾಣ ಮಾಡಿದ್ದೂ ಕೂಡ ತಿಳಿದಿದ್ದೆ. ಇದೆಲ್ಲ ಸಿನಿಮಾಮಂದಿಯ ಸಾಹಸ.‌‌ ಹಾಗೆಯೇ ನಿರ್ದೇಶ ಕರ ಸಂಘವು ತನ್ನ ಸ್ವಂತ ಕಟ್ಟಡ ಹೊಂದಬೇಕು ಅಂತ ಕನ್ನಡ ಚಿತ್ರ ರಂಗ ಬಯಸುವಾಗ , ಬಾಡಿಗೆ ವಿಚಾರದಲ್ಲಿ ಕರ್ನಾಟಕ ಚಲನ ಚಿತ್ರ ನಿರ್ದೇಶಕರ ಸಂಘದ ಗೌರವ ಬೀದಿ ಪಾಲಾಗಿರುವುದು ನಿಜಕ್ಕೂ ಅವಮಾನವೇ‌ ಎನ್ನುವ ಮಾತು  ಸಿನಿಮಾ ಮಂದಿಯಿಂದ ಹೊರ ಬಿದ್ದಿದೆ.

ಆದಷ್ಟು‌ಬೇಗ ನಿರ್ದೇಶಕರ ಸಂಘವು ಈ ಮುಗ್ಗಟ್ಟಿನಿಂದ ಹೊರ ಬಂದು, ತನ್ನದೇ ಒಂದು‌ಕಟ್ಟಡ ಹೊಂದಲಿ ಎನ್ನುವುದು ಸಿನಿ‌‌ಲಹರಿ ಹಾರೈಕೆ.‌ಅದೇ ಕಾಳಜಿಯಿಂದ ಈ‌ ಬರಹ ಮಾತ್ರ

Categories
ಸಿನಿ ಸುದ್ದಿ

ಲವ್ ಮೂಡಲ್ಲಿ ಶಶಿಕುಮಾರ್  ಪುತ್ರ! ಓ ಮೈ ಲವ್ ಅಂತಾರೆ ಅಕ್ಷಿತ್

ಸ್ಮೈಲ್ ಶ್ರೀನುಗೆ ಹೊಸ ಪ್ರೇಮ ಭಾಷ್ಯ ಬರೆಯೋ ಉತ್ಸಾಹ…

ಹಿರಿಯ ನಟ ಶಶಿಕುಮಾರ್ ಪುತ್ರ ಅಕ್ಷಿತ್‍ ಇತ್ತೀಚೆಗಷ್ಟೇ ಹೊಸ ಸಿನಿಮಾ ಅನೌನ್ಸ್ ಮಾಡಿದ್ದು ಗೊತ್ತೇ ಇದೆ. ಅದರ ಬೆನ್ನಲ್ಲೇ ಮತ್ತೊಂದು ಹೊಸ ಸಿನಿಮಾ ಅನೌನ್ಸ್ ಮಾಡಿದ್ದಾರೆ. ಆ ಚಿತ್ರಕ್ಕೆ ‘ಓ ಮೈ ಲವ್’ ಎಂಬ ಹೆಸರಿಡಲಾಗಿದೆ.

ಸ್ಮೈಲ್ ಶ್ರೀನು, ನಿರ್ದೇಶಕ

ಈ ಚಿತ್ರಕ್ಕೆ  ಸ್ಮೈಲ್ ಶ್ರೀನು ನಿರ್ದೇಶಕರು. ಈ ಹಿಂದೆ ” ತೂಫಾನ್”, “ಬಳ್ಳಾರಿ ದರ್ಬಾರ್” ಹಾಗೂ “18 ಟು 25” ಎಂಬ ಚಿತ್ರಗಳನ್ನು ನಿರ್ದೇಶಿಸಿದ್ದರು. ಈಗ ಮತ್ತೊಂದು ವಿಭಿನ್ನ ಪ್ರೇಮಕಥೆಯನ್ನು ತೆರೆಮೇಲೆ ತರಲು ಸಜ್ಜಾಗಿದ್ದಾರೆ.

ಇದೊಂದು ರೊಮ್ಯಾಂಟಿಕ್ ಕಥಾಹಂದರದ ಸಿನಿಮಾ. ಹದಿಹರೆಯದ ವಯಸಿನಲ್ಲಿ ಯುವ ಹೃದಯಗಳ ಮನದಲ್ಲಿ ಉಂಟಾಗುವ ತಳಮಳ, ಪ್ರೀತಿ, ಪ್ರೇಮದ ಕುರಿತ ಅಂಶಗಳು ಇಲ್ಲಿರಲಿವೆ.

ಇನ್ನು ನಿರ್ದೇಶಕ ಸ್ಮೈಲ್‍ ಶ್ರೀನು  ಈ ಬಾರಿ ರೆಗ್ಯುಲರ್ ಪ್ಯಾಟ್ರನ್ ಬಿಟ್ಟು ಬೇರೆ ಥರದ ನಿರೂಪಣೆಯೊಂದಿಗೆ ಸಿನಿಮಾ ಮಾಡಲು ಹೊರಟಿದ್ದಾರೆ. ಚಿತ್ರಕ್ಕೆ ಜಿಸಿಬಿ ರಾಮಾಂಜಿನಿ ಅವರು ಕಥೆ ಬರೆದು ಜಿಸಿಬಿ ಪ್ರೊಡಕ್ಷನ್ಸ್ ಮೂಲಕ ನಿರ್ಮಾಣಕ್ಕೆ ಕೈ ಹಾಕಿದ್ದಾರೆ.

ನಿರ್ದೇಶಕ ಶ್ರೀನು, ಚಿತ್ರಕಥೆ, ಸಂಭಾಷಣೆಯ ಜವಾಬ್ದಾರಿ ಹೊತ್ತಿದ್ದಾರೆ. ರೊಮ್ಯಾಂಟಿಕ್ ಲವ್‍ಸ್ಟೋರಿ ಜೊತೆಗೆ ಫ್ಯಾಮಿಲಿ ಎಲಿಮೆಂಟ್ಸ್ ಮತ್ತು ಹಾಸ್ಯ ಮಿಶ್ರಣಗೊಂಡಿದೆ.

ಒಂದೊಳ್ಳೆಯ ಲವ್ ಸ್ಟೋರಿ ಇದಾಗಿದ್ದು, ಈ ಚಿತ್ರದ ಮೂಲಕ ಹೊಸ ಪ್ರೇಮ ಭಾಷ್ಯ ಬರೆಯುವ ಉತ್ಸಾಹದಲ್ಲಿದ್ದಾರೆ. ಇದೊಂದು ಬಿಗ್‍ ಬಜೆಟ್ ಸಿನಿಮಾ. ಎಲ್ಲಾ ವಿಷಯದಲ್ಲೂ ಅದ್ಧೂರಿತನ ಇರಲಿದೆ ಎಂಬುದು ನಿರ್ದೇಶಕರ ಮಾತು. ಇನ್ನು ಈ ಚಿತ್ರದಲ್ಲಿ ಅಕ್ಷಿತ್ ಶಶಿಕುಮಾರ್ ಜೊತೆ ನಾಯಕಿಯಾಗಿ ಕೀರ್ತಿ ಕಲಕೇರಿ ಅಭಿನಯಿಸುತ್ತಿದ್ದಾರೆ.

ಉಳಿದಂತೆ ಚಿತ್ರದಲ್ಲಿ ಸಾಧು ಕೋಕಿಲಾ, ದೀಪಿಕಾ ಆರಾಧ್ಯ ಸೇರಿದಂತೆ ಇತರರೂ  ನಟಿಸಲಿದ್ದಾರೆ. ವಿ.ನಾಗೇಂದ್ರಪ್ರಸಾದ್ ಅವರ ಸಾಹಿತ್ಯ, ಚರಣ್ ಅರ್ಜುನ್ ಅವರ ಸಂಗೀತವಿದೆ.

ರಿಯಲ್ ಸತೀಶ್ ಅವರ ಸಾಹಸ ನಿರ್ದೇಶನ, ಆಕಾಶ್‍ಕುಮಾರ್ ಚವನ್ ಅವರ ಸಹನಿರ್ದೇಶನ  ಚಿತ್ರಕ್ಕಿದೆ. ಬೆಂಗಳೂರು, ಮಂಗಳೂರು, ಮಡಿಕೇರಿ, ಹೈದರಾಬಾದ್ ಸೇರಿದಂತೆ ಕರ್ನಾಟಕದ ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಯಲಿದೆ.

Categories
ಸಿನಿ ಸುದ್ದಿ

ತಾರಾ ಕ್ಯಾಲೆಂಡರ್ 2021 – ಇದು ಪ್ರಗತಿ ಅಶ್ವತ್ಥನಾರಾಯಣ ಅವರ ವಿಶೇಷ

ಸಂಗ್ರಹಕ್ಕೆ ಯೋಗ್ಯವಿದು -ಕಮರ್ಷಿಯಲ್‌ ಅಲ್ಲವೇ ಅಲ್ಲ!

ಪ್ರಗತಿ ಅಶ್ವತ್ಥನಾರಾಯಣ 

ಪ್ರಗತಿ ಅಶ್ವತ್ಥನಾರಾಯಣ್‌ ಕನ್ನಡ ಚಿತ್ರರಂಗದಲ್ಲಿ ಬಹು ಜನಪ್ರಿಯ ಹೆಸರಿದು. ಹೌದು, ಕಪ್ಪು- ಬಿಳುಪು ಕಾಲದಿಂದಲೂ ಚಿತ್ರರಂಗದ ನಂಟು ಬೆಳೆಸಿಕೊಂಡು ಬಂದವರು. ಸರಿ ಸುಮಾರು ಐದು ದಶಕಗಳ ಕಾಲ ಚಿತ್ರರಂಗವನ್ನು ಅಳವಾಗಿ ಬಲ್ಲವರು. ಹಿರಿಯ ಸಿನಿಮಾ ಸ್ಥಿರಚಿತ್ರ ಛಾಯಾಗ್ರಾಹಕರಾಗಿರುವ ನೂರಾರು ಸಿನಿಮಾಗಳಿಗೆ ಸ್ಥಿರಚಿತ್ರ ಛಾಯಾಗ್ರಾಹಕರಾಗಿ ಕೆಲಸ ಮಾಡಿದ್ದಾರೆ. ಡಾ.ರಾಜಕುಮಾರ್‌, ಕಲ್ಯಾಣ್‌ ಕುಮಾರ್‌, ಉದಯಕುಮಾರ್‌, ರಾಜೇಶ್‌, ಗಂಗಾಧರ್‌, ಲೋಕೇಶ್‌, ವಿಷ್ಣುವರ್ಧನ್‌, ಅಂಬರೀಶ್‌, ಶಂಕರ್‌ನಾಗ್‌, ವಜ್ರಮುನಿ, ಬಾಲಕೃಷ್ಣ, ನರಸಿಂಹರಾಜು, ಕಲ್ಪನಾ, ಮಂಜುಳಾ ಹೀಗೆ ಇನ್ನೂ ಅನೇಕ ಹಿರಿಯ ನಟ, ನಟಿಯರ ಚಿತ್ರಗಳಲ್ಲಿ ಸ್ಥಿರಚಿತ್ರ ಛಾಯಾಗ್ರಾಹಕರಾಗಿ ಕೆಲಸ ಮಾಡಿದ್ದಾರೆ. ಅವರೆಲ್ಲರ ಅದ್ಭುತ ಮತ್ತು ಅಪರೂಪದ ಫೋಟೋಗಳನ್ನೂ ತೆಗೆದಿದ್ದಾರೆ. ಅಪರೂಪದಲ್ಲಿ ಅಪರೂಪ ಎಂಬಂತಹ ಫೋಟೋಗಳು ಇಂದಿಗೂ ಅವರ ಬಳಿ ಇವೆ ಎಂಬುದೇ ವಿಶೇಷ.


ಪ್ರಗತಿ ಅಶ್ವತ್ಥನಾರಾಯಣ ಅವರು, 1965ರಿಂದಲೂ ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿ ಸ್ಥಿರಚಿತ್ರ ಛಾಯಾಗ್ರಾಹಕರಾಗಿ ಕೆಲಸ ಮಾಡಿದವರು. ಕಪ್ಪು-ಬಿಳುಪು ಸಿನಿಮಾಗಳಿಂದ ಹಿಡಿದು, ಕಲರ್‌ ಸಿನಿಮಾಗಳವರೆಗೂ ಇವರ ಕ್ಯಾಮೆರಾ ಹಲವಾರು ನಟ,ನಟಿಯರು, ಪೋಷಕ ನಟ,ನಟಿಯರು,ಹಾಸ್ಯ ನಟರು, ನಿರ್ದೇಶಕ, ನಿರ್ಮಾಪಕರು, ಗೀತರಚನೆಕಾರರು, ತಾಂತ್ರಿಕ ವರ್ಗದವರು ಸೇರಿದಂತೆ ಸಿನಿಮಾ ವಿಭಾಗದಲ್ಲಿ ದುಡಿಯುವ ಅನೇಕರ ಫೋಟೋ ಕ್ಲಿಕ್ಕಿಸಿದೆ ಎಂಬುದೇ ಅಚ್ಚರಿ. ಈವರೆಗೆ ಸುಮಾರು ೩೦೦ಕ್ಕೂ ಹೆಚ್ಚು ಯಶಸ್ವಿ ಹಾಗೂ ಅಪರೂಪದ ಚಿತ್ರಗಳಿಗೆ ಸ್ಥಿರಚಿತ್ರ ಛಾಯಾಗ್ರಾಹಕರಾಗಿ ಕೆಲಸ ಮಾಡಿದ ಹೆಗ್ಗಳಿಕೆ ಇವರದು.


೨೦೦೫ರ ನಂತರ ಗಾಂಧಿನಗರದಲ್ಲಿದ್ದ ಇವರ ಪ್ರಗತಿ ಸ್ಟುಡಿಯೋ ಕ್ಲೋಸ್‌ ಆಗಿದ್ದರೂ, ಅಶ್ವತ್ಥನಾರಾಯಣ ಅವರು ಮಾತ್ರ ಸುಮ್ಮನೆ ಕೂರದೆ, ಅಪರೂಪದ ಫೋಟೋಗಳೊಂದಿಗೆ ಆಗಾಗ ಸುದ್ದಿಯಾಗುತ್ತಲೇ ಇದ್ದಾರೆ. ಈಗ ಹೊಸದೊಂದು ಸುದ್ದಿಗೂ ಕಾರಣರಾಗಿದ್ದಾರೆ. ಅದೇ ಈ ಹೊತ್ತಿನ ವಿಶೇಷ. ಅಷ್ಟಕ್ಕೂ ಪ್ರಗತಿ ಅಶ್ವತ್ಥನಾರಾಯಣ ಅವರ ಕುರಿತಾದ ಹೊಸ ಸುದ್ದಿ ಏನು ಎಂಬ ಪ್ರಶ್ನೆಗೆ “ತಾರಾ ಕ್ಯಾಲೆಂಡರ್‌-೨೦೨೧” ಉತ್ತರ.


ಪ್ರಗತಿ ಅಶ್ವತ್ಥನಾರಾಯಣ ಅವರು, ಬರುವ ಹೊಸ ವರ್ಷಕ್ಕೆ “ತಾರಾ ಕ್ಯಾಲೆಂಡರ್‌ -೨೦೨೧” ಸಿದ್ಧಗೊಳಿಸಿದ್ದಾರೆ. ಹಾಗಂತ, ಇದು ಕಮರ್ಷಿಯಲ್‌ ಅಂದುಕೊಂಡರೆ ಆ ಊಹೆ ತಪ್ಪು. ಸದಾ ಸಿನಿಮಾ ಪ್ರೀತಿಸುವ, ಧ್ಯಾನಿಸುವ ಪ್ರಗತಿ ಅಶ್ವತ್ಥನಾರಾಯಣ ಅವರು, ತಮ್ಮದೇ ಶೈಲಿಯಲ್ಲೊಂದು ತಾರಾ ಕ್ಯಾಲೆಂಡರ್‌ ವಿನ್ಯಾಸಗೊಳಿಸಿದ್ದಾರೆ.

ಅದನ್ನು ಫೇಸ್‌ಬುಕ್‌ ಅಕೌಂಟ್‌ನಲ್ಲೂ ಹಾಕಿಕೊಂಡಿದ್ದಾರೆ. ಮೊದಲೇ ಹೇಳಿದಂತೆ, ಇದನ್ನು ಕಮರ್ಷಿಯಲ್‌ ಆಗಿ ಮಾಡಿಲ್ಲ. ಸಿನಿಮಾದ ಮೇಲಿರುವ ಪ್ರೀತಿಗೆ ಮಾಡಿದ್ದಾರೆ. ಇದನ್ನು ಸಿನಿಪ್ರಿಯರು ತಮ್ಮ ಲ್ಯಾಪ್‌ಟಾಪ್‌ನಲ್ಲಿ ಸ್ಟೋರ್‌ ಮಾಡಿಕೊಳ್ಳಬಹುದು.

 

ಅಷ್ಟೇ ಅಲ್ಲ, ಬೇಕಾದವರು ಡಿಜಿಟಲ್‌ ಪ್ರಿಂಟ್‌,‌ ಜೆರಾಕ್ಸ್‌ ಕೂಡ ಮಾಡಿಟ್ಟುಕೊಳ್ಳಬಹುದು. ಕೇವಲ ತಾರೆಯರಷ್ಟೇ ಅಲ್ಲ, ಅಶ್ವತ್ಥನಾರಾಯಣ ಅವರು, ಟೆಂಪಲ್ಸ್‌ ಫೋಟೋಗಳನ್ನೂ ಬಳಸಿಕೊಂಡು ಕ್ಯಾಲೆಂಡರ್‌ ಮಾಡಿದ್ದಾರೆ. ಅದನ್ನು ಇನ್ನಷ್ಟೇ ಸೋಶಿಯಲ್‌ ಮೀಡಿಯಾದಲ್ಲಿ ಬಿಡಬೇಕಿದೆ.


ಈ ಕುರಿತು “ಸಿನಿಲಹರಿ” ಜೊತೆ ಮಾತನಾಡುವ ಪ್ರಗತಿ ಅಶ್ವತ್ಥನಾರಾಯಣ, “ನಾನು ಈ ತಾರಾ ಕ್ಯಾಲೆಂಡರ್‌ ಅನ್ನು ಕಮರ್ಷಿಯಲ್‌ ದೃಷ್ಟಿಯಲ್ಲಿ ಮಾಡಿಲ್ಲ. ಸುಮ್ಮನೆ ಒಂದಷ್ಟು ಫೋಟೋ ಆಯ್ಕೆ ಮಾಡಿಕೊಂಡು ಮಾಡಿದ್ದೇನೆ. ಈ ತಾರಾ ಕ್ಯಾಲೆಂಡರ್‌ನ ವಿಶೇಷತೆ ಅಂದರೆ, ಕನ್ನಡ ಚಿತ್ರರಂಗದ ಮಹನೀಯರನ್ನು ಒಟ್ಟಿಗೆ ನೋಡಬಹುದಷ್ಟೇ.

ಒಂದೇ ವೇದಿಕೆಯಲ್ಲಿ ಸಿನಿಮಾ ಮಂದಿ ಸಿಕ್ಕಂತೆ ಈ ತಾರಾ ಕ್ಯಾಲೆಂಡರ್‌ನಲ್ಲೂ ಕಾಣಬಹುದು. ಇಲ್ಲಿ ಡಾ.ರಾಜಕುಮಾರ್‌, ಡಾ.ವಿಷ್ಣುವರ್ಧನ್‌, ಅಂಬರೀಶ್‌, ಶಂಕರ್‌ನಾಗ್‌, ಉದಯ್‌ ಕುಮಾರ್‌, ಕಲ್ಯಾಣ್‌ ಕುಮಾರ್‌, ಬಾಲಕೃಷ್ಣ, ಲೋಕೇಶ್‌, ವಜ್ರಮುನಿ, ನರಸಿಂಹರಾಜು, ಕಲ್ಪನಾ, ಮಂಜುಳಾ ಅವರ ಫೋಟೋಗಳಿವೆ. ಇದನ್ನು ನಾನೇ ಆಯ್ಕೆ ಮಾಡಿ ಮಾಡಿದ್ದು,

ಇಲ್ಲಿರುವರಾರೂ ಈಗ ಇಲ್ಲ. ಹಾಗಾಗಿ ಇದೊಂದು ವಿಶೇಷ ತಾರಾ ಕ್ಯಾಲೆಂಡರ್‌ ಅಷ್ಟೇ. ಕೆಲವರು ಆ ಫೋಟೋ ಹಾಕಿಲ್ಲ, ಇವರನ್ನೇಕೆ ಕೈ ಬಿಟ್ಟಿದ್ದೀರಿ ಅಂತೆಲ್ಲಾ ಕೇಳುತ್ತಿದ್ದಾರೆ. ಆದರೆ, ಇರುವ ಹನ್ನೆರೆಡು ತಿಂಗಳಲ್ಲಿ ಒಂದೊಂದು ತಿಂಗಳಿಗೆ ಒಬ್ಬೊಬ್ಬರಂತೆ ಆಯ್ಕೆ ಮಾಡಿಕೊಳ್ಳಲಾಗಿದೆ.

ಮುಂದಿನ ಸಲದ ತಾರಾ ಕ್ಯಾಲೆಂಡರ್‌ನಲ್ಲಿ ಉಳಿದವರ ಫೋಟೋ ಬಳಸಿಕೊಂಡು ಕ್ಯಾಲೆಂಡರ್‌ ಮಾಡತ್ತೇನೆ ಎನ್ನುವ ಅವರು, ತಾವೇ ಸೆರೆಹಿಡಿದ ಅಪರೂಪದ ಫೋಟೋಗಳನ್ನು ನೋಡುಗರಿಗೆ ಕ್ಯಾಲೆಂಡರ್‌ ರೂಪದಲ್ಲಿ ಕೊಟ್ಟಿರುವುದು ವಿಶೇಷವೇ ಸರಿ.

Categories
ಸಿನಿ ಸುದ್ದಿ

ಜನವರಿ 8 ರಂದು ಕೆಜಿಎಫ್-2 ಟೀಸರ್‌ ರಿಲೀಸ್‌ ಯಶ್‌ ಹುಟ್ಟುಹಬ್ಬಕ್ಕೆ ಸ್ಪೆಷಲ್‌ ಗಿಫ್ಟ್‌

ಫ್ಯಾನ್ಸ್‌ಗೆ ನಿರೀಕ್ಷೆ ಹೆಚ್ಚಿಸಿದ ಟೀಸರ್‌ ಸುದ್ದಿ

“ಕೆಜಿಎಫ್”‌ ಕನ್ನಡ ಚಿತ್ರರಂಗದಲ್ಲಿ ದೊಡ್ಡ ಸುದ್ದಿ ಮಾಡಿದ ಚಿತ್ರ. ಕನ್ನಡ ಮಾತ್ರವಲ್ಲ, ಇಡೀ ಭಾರತೀಯ ಚಿತ್ರರಂಗವೇ ತಿರುಗಿ ನೋಡುವಂತೆ ಮಾಡಿದ ಚಿತ್ರ ಅಂದರೆ ತಪ್ಪಿಲ್ಲ. “ಕೆಜಿಎಫ್‌-೨” ಚಿತ್ರ ಕೂಡ ತುಂಬಾ ನಿರೀಕ್ಷೆ ಹುಟ್ಟಿಸಿದೆ. ಇದುವರೆಗೆ ಬರೀ ಫಸ್ಟ್‌ ಲುಕ್‌ ನೋಡಿದ್ದ ಫ್ಯಾನ್ಸ್‌ಗೆ ಈಗ ಹೊಂಬಾಳೆ ಫಿಲ್ಮ್ಸ್‌ ಹೊಸ ಸುದ್ದಿ ಹೊರಹಾಕಿದೆ. ಹೌದು, ಜನವರಿ 8ರಂದು “ಕೆಜಿಎಫ್-‌2” ಚಿತ್ರದ ಟೀಸರ್‌ ಬಿಡುಗಡೆ ಮಾಡುವುದಾಗಿ ಹೇಳಿಕೊಂಡಿದೆ. ಜನವರಿ 8ರಂದು 10.08ಕ್ಕೆ ಟೀಸರ್‌ ಬಿಡುಗಡೆಯಾಗಲಿದೆ. ಅಂದು ಹೊಂಬಾಳೆ ಫಿಲ್ಮ್ಸ್‌ ಯುಟ್ಯೂಬ್‌ ಚಾನೆಲ್‌ನಲ್ಲಿ ಈ ಟೀಸರ್‌ ಹೊರಬರುತ್ತಿದೆ.

ಪ್ರಶಾಂತ್‌ ನೀಲ್‌ ನಿರ್ದೇಶನದ ಈ ಚಿತ್ರವನ್ನು ವಿಜಯ್‌ ಕಿರಗಂದೂರು ನಿರ್ಮಾಣ ಮಾಡಿದ್ದಾರೆ. ಚಿತ್ರದಲ್ಲಿ ಯಶ್‌ಗೆ ಜೋಡಿಯಾಗಿ ಶ್ರೀನಿಧಿ ಶೆಟ್ಟಿ ಇದ್ದಾರೆ. ಈ ಬಾರಿ ಬಾಲಿವುಡ್‌ ನಟ ಸಂಜಯ್‌ ದತ್‌ ಪ್ರಮುಖ ಆಕರ್ಷಣೆ. ಅಷ್ಟೇ ಅಲ್ಲ, ರವೀನಾ ಟಂಡನ್‌ ಕೂಡ ಇದ್ದಾರೆ. ಪ್ರಕಾಶ್‌ರಾಜ್‌ ಸೇರಿದಂತೆ ಹಲವರು ಇಲ್ಲಿ ನಟಿಸಿದ್ದಾರೆ.  ಚಿತ್ರಕ್ಕೆ ಭುವನ್ ಗೌಡ ಕ್ಯಾಮೆರಾ ಹಿಡಿದರೆ, ರವಿಬಸ್ರೂರು ಸಂಗೀತ ನೀಡಿದ್ದಾರೆ.

ಅಂದಹಾಗೆ, ಯಶ್‌ ಅವರು ತಮ್ಮ ಫೇಸ್‌ಬುಕ್‌ ಖಾತೆ, ಟ್ವಿಟ್ಟರ್‌ನಲ್ಲೂ ಜನವರಿ ೮ರಂದು ಟೀಸರ್‌ ಬಿಡುಗಡೆಯಾಗುವ ವಿಷಯ‌ ಹಂಚಿಕೊಂಡಿದ್ದಾರೆ. ಅದೇನೆ ಇರಲಿ, ತುಂಬಾ ದಿನಗಳಿಂದ ಫ್ಯಾನ್ಸ್‌ ಕಾತುರದಿಂದಲೇ ಕಾಯುತ್ತಿದ್ದ ಟೀಸರ್‌ ಅಂತೂ ಬಿಡುಗಡೆಯಾಗುವ ಸೂಚನೆ ನೀಡಿದ್ದು, ದಿನವನ್ನೂ ನಿಗದಿಪಡಿಸಿದೆ. ಇನ್ನೇನಿದ್ದರೂ, ಜನವರಿ ೮ರ ತನಕ ಫ್ಯಾನ್ಸ್‌ ಕೆಜಿಎಫ್-‌೨ ಚಿತ್ರದ ಜಪ ಮಾಡುವುದು ಖಚಿತ.

Categories
ಸಿನಿ ಸುದ್ದಿ

ಬಾಲಿವುಡ್‌ಗೆ ಸಮರ್ಥ – ಶಕೀಲಾ ಜೊತೆ ಮುಂಬೈ ಫ್ಲೈಟ್‌ ಏರಿದ ಕನ್ನಡದ ವೀರ!

ಇಂದ್ರಜಿತ್‌ ಚಿತ್ರಕ್ಕೆ ಸಮರ್ಥ ಸಂಗೀತ

ವೀರ್‌ ಸಮರ್ಥ್

ಚಿತ್ರರಂಗಕ್ಕೆ ಸಂಬಂಧಿಸಿದ ಯಾವುದೇ ಕಲಾವಿದನಿರಲಿ, ತಾಂತ್ರಿಕ ವರ್ಗದವರಿರಲಿ ನಾನು ಗುರುತಿಸಿಕೊಳ್ಳಬೇಕು, ಸಾಧಿಸಬೇಕು ಎಂಬ ಅಸೆ ಇದ್ದೇ ಇರುತ್ತೆ. ಕೆಲವರು ಆ ಆಸೆಯ ಬೆನ್ನತ್ತಿ ಹೋಗಿದ್ದಾರೆ, ಇನ್ನೂ ಕೆಲವರು ಹೋಗಲು ಪ್ರಯತ್ನಿಸುತ್ತಲೇ ಇದ್ದಾರೆ. ಕೆಲವರು ಗೆದ್ದಿದ್ದಾರೆ, ಕೆಲವರೂ ಗೆಲ್ಲಲಾಗದೆ ಸುಮ್ಮನಾಗಿದ್ದಾರೆ. ಈಗ ಇಲ್ಲಿ ಹೇಳಹೊರಟಿರುವ ವಿಷಯ, ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡು ತಮ್ಮದೇ ಆದ ಒಂದು ಜಾಗ ಮಾಡಿಕೊಂಡಿರುವ ಸಂಗೀತ ನಿರ್ದೇಶಕ ವೀರ್‌ ಸಮರ್ಥ್.‌ ಹೌದು, ವೀರ್‌ಸಮರ್ಥ್‌ ಈಗಾಗಲೇ ಕನ್ನಡದ ಅನೇಕ ಸಿನಿಮಾಗಳಿಗೆ ಸಂಗೀತ ನೀಡಿದ್ದಾರೆ. ಸೂಪರ್‌ ಹಿಟ್‌ ಸಾಂಗ್‌ ಕೊಟ್ಟಿದ್ದಾರೆ. ಅನೇಕ ನಿರ್ದೇಶಕ, ನಿರ್ಮಾಪಕರ ಮೆಚ್ಚಿನ ಸಂಗೀತ ನಿರ್ದೇಶಕರಾಗಿಯೂ ಸೈ ಎನಿಸಿಕೊಂಡಿದ್ದಾರೆ. ಇದೇ ಮೊದಲ ಬಾರಿಗೆ ಅವರೀಗ ಬಾಲಿವುಡ್‌ಗೆ ಕಾಲಿಟ್ಟಿದ್ದಾರೆ ಎಂಬುದೇ ಈ ಹೊತ್ತಿನ ಸುದ್ದಿ.

‌1998 ರಲ್ಲಿ ವೀರ್‌ ಗಾಯಕ ಸುರೇಶ್‌ ವಾಡ್ಕರ್‌ ಬಳಿ ಸಂಗೀತ ಕಲಿತರು. ಅದಕ್ಕೂ ಮೊದಲು ಬೀದರ್‌ನಲ್ಲಿ 8 ವರ್ಷ ಶಾಸ್ತ್ರೀಯ ಸಂಗೀತ ಕರಗತ ಮಾಡಿಕೊಂಡಿದ್ದರು. ಸುರೇಶ್‌ ವಾಡ್ಕರ್‌ ‌ ಬಳಿ ಆಡಿಷನ್‌ ಮೂಲಕ ಆಯ್ಕೆಯಾದರು. ಅವರ ಹಾಡು ಕೇಳಿದ ಅವರು, ಹಾಡು ಕಲಿಸಿದರು. ನಂತರ ಅಲ್ಲೇ ಕೆಲಸ ಶುರುಮಾಡಿದರು. 1998 ರಲ್ಲಿ ವೀರ್‌ ಅವರಿಗೆ ವಿಜಯಪ್ರಕಾಶ್‌ ಪರಿಚಯ ಆಗಿದ್ದು ಅಲ್ಲೇ. ನಂತರ ಭಾರತೀಯ ಚಿತ್ರರಂಗದ ಯಶಸ್ವಿ ಸಂಗೀತ ನಿರ್ದೇಶಕ, ಗಾಯಕ, ಗೀತ ಸಾಹಿತಿ ರವೀಂದ್ರ ಜೈನ್‌ ಬಳಿ ಐದು ವರ್ಷ ಜೊತೆಗಿದ್ದರು. ಆ ಬಳಿಕ ಹಿಂದಿಯಲ್ಲಿ ಹಿಟ್‌ ಎನಿಸಿಕೊಂಡ “ಕಭೀ ಖುಷ್‌ ಕಭೀ ಗಮ್‌” ಚಿತ್ರದ ಸಂಗೀತ ನಿರ್ದೇಶಕ ಸಂದೇಶ್‌ ಶಾಂಡಿಲ್ಯ ಅವರ  ಹಾಡೊಂದರಲ್ಲಿ ಕೋರಸ್‌ ಹಾಡುವ ಅವಕಾಶ ಗಿಟ್ಟಿಸಿಕೊಂಡು, ಜೊತೆಗೆ ಮೂರನೇ ಬಿಜಿಎಂನಲ್ಲಿ ವಿಷಲ್‌ ಹಾಕುವ ಅವಕಾಶವೂ ಅವರದಾಗಿತ್ತು

 

ವೀರ್‌ ಸಮರ್ಥ್‌ ಹಿಂದಿ ಸಿನಿಮಾಗೆ ಸಂಗೀತ ನೀಡಿದ್ದಾರೆಂಬುದೇ ವಿಶೇಷ. ಅದು “ಶಕೀಲಾ” ಸಿನಿಮಾಗೆ. ಶಕೀಲಾ ಅಂದಾಕ್ಷಣ, ಪಡ್ಡೆಗಳಿಗೆ ಬಿಡಿಸಿ ಹೇಳಬೇಕಿಲ್ಲ. ಯುವಕರೂ ಸೇರಿದಂತೆ ವಯಸ್ಕರನ್ನೂ ನಿದ್ದೆಗೆಡಿಸಿದ ಶಕೀಲಾ ಅವರ ಬಯೋಗ್ರಫಿ ಚಿತ್ರವೇ “ಶಕೀಲಾ”. ಈ ಚಿತ್ರಕ್ಕೆ ಇಂದ್ರಜಿತ್‌ ಲಂಕೇಶ್‌ ನಿರ್ದೇಶಕರು. ಈ ಚಿತ್ರವೀಗ ಡಿಸೆಂಬರ್‌ ೨೫ರ ಕ್ರಿಸ್ಮಸ್‌ಗೆ ದೇಶಾದ್ಯಂತ ಬಿಡುಗಡೆಯಾಗುತ್ತಿದೆ. ಇದೇ ಮೊದಲ ಸಲ‌ ಬಾಲಿವುಡ್‌ ಚಿತ್ರವೊಂದಕ್ಕೆ ಸಂಗೀತ ನೀಡಿರುವ ವೀರ್‌ಸಮರ್ಥ್, ತಮ್ಮ ಬಾಲಿವುಡ್‌ ಪಯಣ ಕುರಿತು “ಸಿನಿಲಹರಿ” ಜೊತೆ ಮಾತನಾಡಿದ್ದಾರೆ.

 

‌ಓವರ್‌ ಟು ವೀರ್…
“ನನಗೆ ಬಾಲಿವುಡ್‌ ಹೊಸದೇನಲ್ಲ. ಹಾಗೆ ಹೇಳುವುದಾದರೆ, ‌1998 ರಲ್ಲಿ ನಾನು ಹೆಸರಾಂತ ಗಾಯಕ ಸುರೇಶ್‌ ವಾಡ್ಕರ್‌ ಬಳಿ ಸಂಗೀತ ಕಲಿಯೋಕೆ ಸೇರಿಕೊಂಡೆ. ಅದಕ್ಕೂ ಮೊದಲು ಬೀದರ್‌ನಲ್ಲಿ 8 ವರ್ಷ ಶಾಸ್ತ್ರೀಯ ಸಂಗೀತ ಕರಗತ ಮಾಡಿಕೊಂಡಿದ್ದೆ. ಸುರೇಶ್‌ ವಾಡೇಕರ್‌ ಬಳಿ ಆಡಿಷನ್‌ ಮೂಲಕ ಆಯ್ಕೆಯಾದೆ. ನನ್ನ ಹಾಡು ಕೇಳಿದ ಅವರು, ಕಲಿಸ್ತೀನಿ ಅಂದ್ರು. ಅಲ್ಲೇ ಕೆಲಸ ಶುರುಮಾಡಿದೆ. 1998 ರಲ್ಲಿ ವಿಜಯಪ್ರಕಾಶ್‌ ಪರಿಚಯ ಆಗಿದ್ದು ಅಲ್ಲೇ. ನಂತರ ಭಾರತೀಯ ಚಿತ್ರರಂಗದ ಯಶಸ್ವಿ ಸಂಗೀತ ನಿರ್ದೇಶಕ, ಗಾಯಕ, ಗೀತ ಸಾಹಿತಿ ರವೀಂದ್ರ ಜೈನ್‌ ಬಳಿ ಐದು ವರ್ಷ ಜೊತೆಗಿದ್ದು ಕೆಲಸವನ್ನೂ ಕಲಿತೆ. ಆ ಬಳಿಕ ಹಿಂದಿಯಲ್ಲಿ ಹಿಟ್‌ ಎನಿಸಿಕೊಂಡ “ಕಭೀ ಖುಷ್‌ ಕಭೀ ಗಮ್‌” ಚಿತ್ರದ ಸಂಗೀತ ನಿರ್ದೇಶಕ ಸಂದೇಶ್‌ ಶಾಂಡಿಲ್ಯ ಅವರು, ಹಾಡೊಂದರಲ್ಲಿ ಕೋರಸ್‌ ಹಾಡುವ ಅವಕಾಶ ಕೊಟ್ಟರು. ಜೊತೆಗೆ ಮೂರನೇ ಬಿಜಿಎಂನಲ್ಲಿ ವಿಷಲ್‌ ಹಾಕುವ ಅವಕಾಶವೂ ನನ್ನದಾಗಿತ್ತು.

ಗುರು ರವೀಂದ್ರ ಜೈನ್‌ ಜೊತೆ ವೀರ್

ಆ ಸಿನಿಮಾದಲ್ಲಿ ನನ್ನದೂ ಒಂದು ವಾಯ್ಸ್‌ ಇದೆ ಅನ್ನೋದೇ ಖುಷಿ. ಅದಾದ ಮೇಲೆ, ಹಿಂದಿಯ ಸುಮಾರು ಸಿನಿಮಾಗಳಲ್ಲಿ ಕೋರಸ್‌ ಹಾಡಿದ್ದೂ ಉಂಟು.‌ ಅನೇಕ ಹಿಂದಿ ಆಲ್ಬಂಗಳಲ್ಲೂ ಕೆಲಸ ಮಾಡಿದ್ದೇನೆ. ನನ್ನ ಗುರುಗಳಾದ ರವೀಂದ್ರ ಜೈನ್‌ ಜೊತೆ ಸಾಕಷ್ಟು ಸ್ಟೇಜ್‌ ಶೋ ಕೊಟ್ಟಿದ್ದೂ ಇದೆ. ಇವೆಲ್ಲದರ ಜೊತೆಯಲ್ಲಿ ನಾನು ಭೀಮ್‌ಸೇನ್‌ ಜೋಶಿ ಅವರ ಬಳಿ ಕೆಲಸ ಮಾಡುವ ಅವಕಾಶವೂ ಪಡೆದುಕೊಂಡೆ. ದೊಡ್ಡ ಲೆಜೆಂಡರಿ ಜೊತೆ ಇದ್ದೆ ಅನ್ನೋದು ಹೆಮ್ಮೆಯ ವಿಷಯ. ಕ್ಲಾಸಿಕಲ್‌ ಮತ್ತು ಸಿನಿಮಾ ಈ ಎರಡೂ ಕಡೆ ಕೆಲಸ ಮಾಡಿದ ಅನುಭವ ಅನನ್ಯ. ಬಾಲಿವುಡ್‌ನಲ್ಲೇ ಕೆಲಸ ಮಾಡಬೇಕು ಎಂಬ ಆಸೆ ಕಳೆದ ಐದಾರು ವರ್ಷಗಳಿಂದಲೂ ಇತ್ತು. ಅದಕ್ಕಾಗಿಯೇ ನಾನು ಮಹೇಶ್‌ ಭಟ್‌, ವಿಕ್ರಮ್‌ ಭಟ್‌, “ಹಮ್‌ ಆಪ್‌ಕೆ ಹೈ ಕೌನ್”‌ ನಿರ್ದೇಶಕ ಸೂರಜ್‌ ಬರ್ಜಾತ್ಯ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದೂ ಆಗಿತ್ತು. ಆದರೆ, ಮಾತುಕತೆ ನಡೆದಿತ್ತಾದರೂ ಕೆಲ ಕಾರಣಗಳಿಂದ ಸಾಧ್ಯವಾಗಿರಲಿಲ್ಲ. ಆ ಪ್ರಯತ್ನದಲ್ಲಿದ್ದ ನನಗೆ “ಶಕೀಲಾ” ಅಂಥದ್ದೊಂದು ಅವಕಾಶ ಮಾಡಿಕೊಟ್ಟಿದೆ” ಎಂದು ವಿವರ ಕೊಡುತ್ತಾರೆ ವೀರ್‌ ಸಮರ್ಥ್.‌‌

ನಿರ್ದೇಶಕ ಲಂಕೇಶ್‌ ಜೊತೆ ವೀರ್

ಮಜಾ ಕೊಟ್ಟ ಅವಕಾಶ..
ಈ ಪ್ರಯತ್ನದ ನಡುವೆಯೇ ಶಿವರಾಜಕುಮಾರ್‌ ಅಭಿನಯದ “ಮಾಸ್‌ ಲೀಡರ್‌” ಚಿತ್ರಕ್ಕೆ ಸಂಗೀತ ನೀಡಿದ್ದೆ. ಅದರಲ್ಲೊಂದು ಅರೇಬಿಕ್‌ ಶೈಲಿಯ ಸಂಗೀತ ಸ್ಪರ್ಶಿಸಿ ಹಾಡೊಂದನ್ನು ಮಾಡಿದ್ದೆ. ಆ ಹಾಡು ಹಿಟ್‌ ಆಗಿತ್ತು. ಜೊತೆಗೆ “ಮಜಾ ಟಾಕೀಸ್‌” ವೇದಿಕೆಯಲ್ಲಿ ಪ್ರಚಾರಕ್ಕಾಗಿ ಹೋಗಿದ್ದಾಗ, ಆ ಶೋನಲ್ಲಿದ್ದ ನಿರ್ದೇಶಕ ಇಂದ್ರಜಿತ್‌ ಲಂಕೇಶ್ ಅವರು, ವೇದಿಕೆ ಮೇಲೇರಿ ಗ್ರೂಪ್‌ ಫೋಟೋ ತೆಗೆಸಿಕೊಳ್ಳುವಾಗ, ಸಾಂಗ್‌ ಕುರಿತು ಮಾತಾಡಿದ್ದರು. ಚೆನ್ನಾಗಿ ಕಂಪೋಸ್‌ ಮಾಡಿದ್ದೀರಿ ಎಂಬ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಆಗ ನನ್ನ‌ ಫೋನ್‌ ನಂಬರ್‌ ಪಡೆದಿದ್ದರು. ಕೆಲ ತಿಂಗಳ ಬಳಿಕ ನಿರ್ದೇಶಕ ಮೋಹನ್‌ಗೆ ಕಾಲ್‌ ಮಾಡಿದ ಇಂದ್ರಜಿತ್‌ ಲಂಕೇಶ್‌ ಅವರು, ವೀರ್‌ಸಮರ್ಥ್‌ ಅವರಿಗೆ ಕಾಲ್‌ ಮಾಡಲು ಹೇಳು ಎಂದಿದ್ದರು. ಆಗ ಮೋಹನ್‌ ಅವರ “ಡಬಲ್‌ ಎಂಜಿನ್‌” ಚಿತ್ರಕ್ಕೆ ನಾನು ಸಂಗೀತ ನೀಡುತ್ತಿದ್ದೆ. ಅಲ್ಲೇ ಜೊತೆಗಿದ್ದ ಮೋಹನ್‌, ವಿಷಯ ತಿಳಿಸಿದರು.‌

ಹೀರೋ ರಾಜು ಪಿಳೈ ಜೊತೆ

ಇಂದ್ರಜಿತ್‌ ಸ್ಟೈಲಿಶ್‌ ಸಿನ್ಮಾ ಮೇಕರ್

ನಾನು ಸಂಜೆ ಇಂದ್ರಜಿತ್‌ ಅವರಿಗೆ ಕಾಲ್‌ ಮಾಡಿ ಮಾತಾಡಿದೆ. ಇವತ್ತು ಸಿಕ್ಕು ಮಾತಾಡೋಣ ಅಂತ ಕೋರಮಂಗಲ ಬಳಿಯ ಹೋಟೇಲ್‌ವೊಂದಕ್ಕೆ ಆಹ್ವಾನಿಸಿದ್ದರು. ಹೊಸ ಕನ್ನಡ ಸಿನಿಮಾ ಮಾಡುತ್ತಿರಬಹುದೆಂದು ಭಾವಿಸಿ ಹೋದೆ. ಹೋದವನಿಗೆ ಒಂದು ಸರ್‌ಪ್ರೈಸ್‌ ಕಾದಿತ್ತು. ಹಿಂದಿ ಸಿನಿಮಾ ಮಾಡುತ್ತಿದ್ದೇನೆ. ಅದು “ಶಕೀಲಾ” ಬಯೋಗ್ರಫಿ. ನೀವೇ ಸಂಗೀತ ಕೊಡಬೇಕು ಅಂದರು. ನನ್ನೊಳಗಿದ್ದ ಆಸೆಗೂ ಜೀವ ಬಂತು. ಇಂದ್ರಜಿತ್‌ ಅವರ ಜೊತೆ ಕೆಲಸ ಮಾಡಿದೆ. ಅವರೊಬ್ಬ ಸ್ಟೈಲಿಶ್‌ ಸಿನಿಮಾ ಮೇಕರ್ ಅಷ್ಟೇ ಅಲ್ಲ, ಅವರೊಳಗೊಬ್ಬ ಸಂಗೀತ ಪ್ರೇಮಿಯೂ ಇದ್ದಾರೆ. ಸಂಗೀತದ ಬಗ್ಗೆ ಸಾಕಷ್ಟು ತಿಳಿದುಕೊಂಡಿದ್ದ ಅವರು, ನನ್ನಿಂದ ಕೆಲಸ ತೆಗೆಸಿದರು. ಒಂದು ಅರೇಬಿಕ್‌ ಸಾಂಗ್‌ ಬಂತು. ಮೆಲೋಡಿ ಹಾಡು ಕೊಟ್ಟೆ. ಮತ್ತೊಂದು ಆಪ್ಷನ್‌ ಇಲ್ಲದೆ ಓಕೆ ಮಾಡಿದರು. ಅವರ ಟೇಸ್ಟ್‌ಗೆ, ಸಿನಿಮಾ ಕಥೆಯ ಕಲ್ಪನೆಗೆ ಸಂಗೀತ ಮಾಡಿದೆ. ಒಳ್ಳೆಯ ಹಾಡುಗಳು ಮೂಡಿಬಂದವು. ಹಿನ್ನೆಲೆ ಸಂಗೀತ ಕೂಡ ಅಷ್ಟೇ ಅದ್ಭುತವಾಗಿ ಮೂಡಲು ಕಾರಣ, ಮತ್ತದೇ ಇಂದ್ರಜಿತ್‌ ಲಂಕೇಶ್. ಚಿತ್ರದಲ್ಲಿ ಮೀಟ್‌ ಬ್ರದರ್ಸ್‌ ಕೂಡ ಒಂದು ಪ್ರಮೋಷನಲ್‌ ಸಾಂಗ್‌ ಮಾಡಿದ್ದಾರೆ.

ಗಾಯಕಿ ಪ್ರಕೃತಿ ಕಕ್ಕರ್‌ ಜೊತೆ

ಬಾಲಿವುಡ್‌ ಮಂದಿಯ ಮೆಚ್ಚುಗೆ ಸುಲಭವಲ್ಲ‌

ಸದ್ಯ ಈಗ ಸಿನಿಮಾದ ಹಾಡುಗಳ ತುಣುಕು ರಿಲೀಸ್‌ ಆಗಿದೆ. ಎಲ್ಲೆಡೆಯಿಂದ ಒಳ್ಳೆಯ ಮೆಚ್ಚುಗೆಯೂ ಸಿಕ್ಕಿದೆ. ಒಬ್ಬ ಸಂಗೀತ ನಿರ್ದೇಶಕನಿಗೆ ತಾನು ಮಾಡಿದ ಕೆಲಸಕ್ಕೆ ಮೆಚ್ಚುಗೆ ಸಿಕ್ಕರೆ ಅದು ದೊಡ್ಡ ಪ್ರಶಸ್ತಿ ಸಿಕ್ಕಂತೆ. ಅಲ್ಲದೆ, ಬಾಲಿವುಡ್‌ ಮಂದಿಯನ್ನು ಮೆಚ್ಚಿಸುವುದು ಸುಲಭದ ಮಾತಲ್ಲ. ಹಿಂದಿಯಲ್ಲಿ ವಿಶಾಲ್‌ ಮಿಶ್ರ ನನ್ನ ಸಾಂಗ್‌ ಹಾಡಿದ್ದು ವಿಶೇಷತೆಗಳಲ್ಲೊಂದು. ವಿಶಾಲ್‌ ಮಿಶ್ರ ಸಲ್ಮಾನ್‌ ಖಾನ್‌ ಅವರ ಅನೇಕ ಸಿನಿಮಾಗಳಿಗೆ ಸಂಗೀತ ನೀಡಿದ್ದಾರೆ, ಹಾಡಿದ್ದಾರೆ. ನನ್ನ ಹಾಡನ್ನು ಯಾರಿಂದ ಹಾಡಿಸಬೇಕು ಎಂಬ ಯೋಚನೆ ಬಂತು. ಅದರಲ್ಲೂ ಕುಮಾರ್‌ ಅವರ ಎಲ್ಲಾ ಹಾಡಿಗೂ ಸಾಹಿತ್ಯವಿತ್ತು. ಕುಮಾರ್‌ ಅವರು ಬಾಲಿವುಡ್‌ನ ಲೀಡಿಂಗ್‌ ಗೀತ ಸಾಹಿತಿಯರ ಪೈಕಿ ಟಾಪ್‌ ಫೈವ್‌ನಲ್ಲಿದ್ದಾರೆ.

ವಿಶಾಲ್ ಮಿಶ್ರ ಜೊತೆ ರೆಕಾರ್ಡಿಂಗ್‌ ಟೈಮ್

ಅವರ ಒಳ್ಳೆಯ ಸಾಹಿತ್ಯಕ್ಕೆ ವಿಶಾಲ್‌ ಮಿಶ್ರ ಅವರ ವಾಯ್ಸ್‌ ಇದ್ದರೆ ಚೆನ್ನಾಗಿರುತ್ತೆ ಅಂತ ಯೋಚಿಸಿ ಅವರನ್ನು ಫೋನ್‌ನಲ್ಲಿ ಮಾತಾಡಿಸಿದೆ. ಸಾಂಗ್‌ ಹಾಡಬೇಕು ಅಂದಾಗ, ಟ್ಯೂನ್‌ ಕಳಿಸಿ ಅಂದ್ರು. ಕೇಳಿದ ಕೂಡಲೇ ಫೋನ್‌ ಮಾಡಿ, ಸಾಂಗ್‌ ಕಂಪೋಸ್‌ ಚೆನ್ನಾಗಿದೆ ಹಾಡ್ತೀನಿ ಅಂದ್ರು. ಆದರೆ, ತುಂಬಾ ದುಬಾರಿನಾ ಎಂಬ ಕಾರಣಕ್ಕೆ ಪೇಮೆಂಟ್‌ ಹೇಳಿ ಸರ್‌ ಅಂದೆ, ನೀವು ಎಷ್ಟಾದರೂ ಕೊಡಿ ತಕರಾರು ಇಲ್ಲ. ಸಾಂಗ್‌ ಚೆನ್ನಾಗಿದೆ ಹಾಡಬೇಕಷ್ಟೇ ಅಂದ್ರು. ಆಗ ಮುಂಬೈಗೆ ಹೋಗಿ “ಓ ಲಮ್ಹಾ..” ಸಾಂಗ್‌ ಹಾಡಿಸಿದೆ. ಹಾಡು ಹಾಡಿದ ಅವರು ಹಾಡಿನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಸ್ವತಃ ಇಂದ್ರಜಿತ್‌ ಲಂಕೇಶ್‌ ಅವರೂ ನನ್ನ ಕೆಲಸ ಕೊಂಡಾಡಿ ತಬ್ಬಿಕೊಂಡರು.

ಗಾಯಕ ಕೇಶವ್‌ ಕುಮಾರ್

ಬಾಲಿವುಡ್‌ ಸಿನಿಮಾ ಕೆಲಸ ತೃಪ್ತಿ ಕೊಡ್ತು ಎಂಬ ಖುಷಿ ನನ್ನದಾಯ್ತು. ಇನ್ನು, ಕನ್ನಡದಲ್ಲಿ “ಹವಾಮಾನಕೆ ಏನಾಗಿದೆ…” ಎಂಬ ಅದೇ ರಾಗಕ್ಕೆ ಜಯಂತ್‌ ಕಾಯ್ಕಿಣಿ ಅವರು ಹಾಡು ಬರೆದಿದ್ದಾರೆ. ಆ ಹಾಡನ್ನು ಕೇಶವ ಕುಮಾರ್‌ ಹಾಡಿದ್ದಾರೆ. ಕನ್ನಡದ ಈ ಹುಡುಗ ಮುಂಬೈನಲ್ಲಿದ್ದಾರೆ. ಈ ಹಾಡು ಈಗಾಗಲೇ ಬಿಡುಗಡೆಯಾಗಿದ್ದು, ಒಳ್ಳೆಯ ಮೆಚ್ಚುಗೆ ಪಡೆದುಕೊಳ್ಳುತ್ತಿದೆ ಎಂದು ಹೇಳುವ ವೀರ್‌ ಸಮರ್ಥ್‌, “ಶಕೀಲಾʼ ಬಗ್ಗೆ ದೊಡ್ಡ ನಿರೀಕ್ಷೆ ಇದೆ. ಸಾಕಷ್ಟು ಕುತೂಹಲ ಕೆರಳಿಸಿರುವ ಸಿನಿಮಾ ಅದು ಅನ್ನೋದು ಅವರ ಮಾತು.

 

Categories
ಸಿನಿ ಸುದ್ದಿ

ಅಲೆಯಾಗಿ ಬಂದ ಹುಡುಗನ ಅಲೆ‌‌ ಅಲೆಯ ಮಾತು!

ಆ್ಯಕ್ಟರ್ ಆಗಲು ಗಾಂಧಿನಗರಕ್ಕೆ ಬಂದ ಡಾಕ್ಟರ್

ಪುನೀತ್ ರಾಜ್ ಕುಮಾರ್ ಜತೆಗೆ ರಥ ಕಿರಣ್

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಪಿಆರ್ ಕೆ ಸಂಸ್ಥೆ ಈಗಾಗಲೇ ಚಿತ್ರ ನಿರ್ಮಾಣದ ಜತೆಗೆ ಕನ್ನಡ ಅನೇಕ ಸಿನಿಮಾಗಳ ಆಡಿಯೋ ಹೊರ ತಂದಿರುವುದು ನಿಮಗೆಲ್ಲ ಗೊತ್ತಿರುವ ವಿಚಾರ. ಆದರೆ ಇದೇ ಮೊದಲ ಬಾರಿಗೆ ಪಿಆರ್ ಕೆ ಸಂಸ್ಥೆ‌ ಒಂದು ವಿಡಿಯೋ ಸಾಂಗ್ ಆಲ್ಬಂವೊಂದನ್ನು ಲಾಂಚ್ ಮಾಡುವ ಮೂಲಕ‌ ಸೋಷಲ್ ಮೀಡಿಯಾದಲ್ಲಿ ಸಂಚಲನ ಮೂಡಿಸಿದೆ.

 

‘ಅಲೆಯಾಗಿ ಬಾ ‘ ಎನ್ನುವುದು ಆ ವಿಡಿಯೋ ಸಾಂಗ್ ಆಲ್ಬಂ ಹೆಸರು. ಅದರಲ್ಲಿರುವುದು ಒಂದೇ ಒಂದು ಸಾಂಗ್.‌ಅದೀಗ ಸೋಷಲ್ ಮೀಡಿಯಾದಲ್ಲಿ‌ ಸಖತ್ ವೈರಲ್ ಆಗಿದೆ. ಅದಕ್ಕೆ , ಪಿಆರ್ ಕೆ ಸಂಸ್ಥೆ ಎನ್ನುವುದು ಹೇಗೆ ಕಾರಣವೋ,ಹಾಗೆಯೇ ಆ ಸಾಂಗ್ ಗುಣಮಟ್ಟವೂ ಅದಕ್ಕೆ ಅಷ್ಟೇ ಕಾರಣ. ಹಾಡಿನ ಸಾಹಿತ್ಯ ನಿರ್ದೇಶಕ ಸಿಂಪಲ್ ಸುನಿಯವರದ್ದು, ರಾಜೇಶ್ ಕೃಷ್ಣನ್ ಮತ್ತು ಆಶಾ ಭಟ್ ಇದರ ಗಾಯಕರು. ಬಿ.ಜೆ.‌ಭರತ್ ಸಂಗೀತ ನೀಡಿದ್ದಾರೆ. ಈ‌ಆಲ್ಬಂ ಥೀಮ್ ಡಾ. ಸಹನಾ ಸುಧಾಕರ್ ಅವರದ್ದು. ಆ ಮೂಲಕ ಭರ್ಜರಿ ಸದ್ದು ಮಾಡುತ್ತಿದೆ ‘ಅಲೆಯಾಗಿ ಬಾ’ ಹಾಡು.

ಕೇಳುಗನ ಮನಸ್ಸಿಗೆ ಹಿತ ಕೊಡುವ ಆ ಹಾಡಿನ ಸಾಹಿತ್ಯ, ಕಣ್ಣಿಗೆ ಮುದ‌ ನೀಡುವ ಅದರ ಚಿತ್ರೀಕರಣ, ಹಾಗೆಯೇ ಕೇಳುವುದಕ್ಕೂ ಖುಷಿ ನೀಡುವ ಅದರ ಸಂಗೀತವೂ ಅದು ಸೋಷಲ್ ಮೀಡಿಯಾದಲ್ಲಿ ವೈರಲ್ ಆಗಲು ಕಾರಣ. ಅದು ಪಿಆರ್ ಕೆ ಆಡಿಯೋ ಸಂಸ್ಥೆಯ ಅಧಿಕೃತ ಯುಟ್ಯೂಬ್ ಚಾನೆಲ್ ಮೂಲಕ ಹೊರ ಬಂದ ಮೂರು ದಿನದಲ್ಲಿ ಎರಡೂವರೆ ಲಕ್ಷ ವಿವ್ಯೂಸ್ ಪಡೆದಿದೆ.

ಕುಂದಾಪುರದ ಸುಂದರ ನಿಸರ್ಗದ ಮಧ್ಯೆ ಅಷ್ಟೇ ಸೊಗಸಾಗಿ ಚಿತ್ರೀಕರಣಗೊಂಡಿರುವ ಈ ಹಾಡು, ಪ್ರೇಮ ಅರಸಿ ಹೋಗುವ ಹುಡುಗನ ಖುಷಿಯನ್ನು ಕಟ್ಟಿಕೊಡುತ್ತಿದೆ. ಹಾಡಿನ ಅಂತ್ಯದಲ್ಲಿ ಸಿಹಿ ನೋವನ್ನೂ ಸವರುತ್ತಿದೆ. ಅದೇ ಕಾರಣಕ್ಕೆ ಸೋಷಲ್ ಮೀಡಿಯಾದಲ್ಲಿ ಇದು ವೈರಲ್ ಆಗುತ್ತಿದೆ. ಅದೇ ವೇಳೆ ಈ ಹಾಡಿನ ಕ್ವಾಲಿಟಿಗೂ ಅಪಾರ ಮೆಚ್ಚುಗೆ ಸೂಚಿಸುತ್ತಿರುವ ಜನರ ಕಣ್ಣು ಈಗ, ಈವಿಡಿಯೋ ಆಲ್ಬಂ ರೂವಾರಿಯ ಮೇಲೂ ಬಿದ್ದಿದೆ.

ಅಂದ ಹಾಗೆ, ಈ ಆಲ್ಬಂ ಸಾಂಗ್ ನ ರೂವಾರಿ ರಥ ಕಿರಣ್. ಇವರ ಮೂಲ‌ ಹೆಸರು ಕಿರಣ್. ಆನ್ ಸ್ಕ್ರೀನ್ ಪರಿಚಯಕ್ಕೆ ರಥ ಕಿರಣ್ ಎಂಬುದಾಗಿ ಬದಲಾಯಿಸಿಕೊಂಡಿದ್ದಾರೆ. ಹುಟ್ಟಿದ್ದು ಮೈಸೂರು, ಬೆಳೆದಿದ್ದು ವೃತ್ತಿಯಲ್ಲಿ ವೈದ್ಯರು. ಜೆಎಸ್ಎಸ್ ನಲ್ಲಿ ಮೆಡಿಕಲ್ ಶಿಕ್ಷಣ ಮುಗಿಸಿ, ವೈದ್ಯ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೆ ಈಗ ವೈದ್ಯ ವೃತ್ತಿಗೆ ಒಂದಷ್ಟು ವಿಶ್ರಾಂತಿ ಕೊಟ್ಟು, ಸಿನಿಮಾ ನಟನಾಗುವ ಮಹತ್ತರ ಆಸೆಯಿಂದ ಬೆಂಗಳೂರಿಗೆ ಬಂದಿದ್ದಾರೆ. ಅದರ ಮೊದಲ ಪ್ರಯತ್ನವೇ ‘ಅಲೆಯಾಗಿ ಬಾ’.

ಸಿನಿಮಾ ನನ್ನ‌ ಕನಸು, ಉಸಿರು‌. ಮೆಡಿಕಲ್ ಓದಿದರೂ ನನಗೆ ಸಿನಿಮಾ ನಟ ಆಗ್ಬೇಕು ಎನ್ನುವ ಆಸೆಗೆ ಕಾರಣ ಡಾ. ರಾಜ್ ಕುಮಾರ್. ಹಾಗೆಯೇ ಪುನೀತ್ ರಾಜ್ ಕುಮಾರ್ ನನ್ನ ನೆಚ್ಚಿನ ನಟ. ಅವರ ಪ್ರಭಾವದಿಂದಲೇ ನನಗೆ ಸಿನಿಮಾ ಹುಚ್ವು ಹತ್ತಿಸಿಕೊಂಡೆ‌. ಈಗ ನನಗೆ ಅದೇ ಮೈನ್ ಟಾರ್ಗೆಟ್. ಹಾಗಾಗಿಯೇ ನಾನು ಗಾಂಧಿನಗರಕ್ಕೆ ಬಂದೆ. ನನ್ನನು ನಾನು ತೋರಿಸಿಕೊಳ್ಳುವ ಮೊದಲ ಪ್ರಯತ್ನವಾಗಿ ಈ ವಿಡಿಯೋ ಸಾಂಗ್ ಆಲ್ಬಂ ಹೊರ ತಂದಿದ್ದೇನೆ’

– ರಥ ಕಿರಣ್, ಯುವ ನಟ

ಅವರೇ ಹೇಳುವ ಹಾಗೆ ರಥ ಕಿರಣ್ ನಟನಾಗಲು ಗಾಂಧಿನಗರಕ್ಕೆ ಬಂದವರು. ಬಂದ ಹೊಸತರಲ್ಲಿಯೇ ಅವರಿಗೆ ನಿರ್ದೇಶಕ‌ ಸಿಂಪಲ್ ಸುನಿ ಬೆಂಬಲ‌ಸಿಕ್ಕಿದೆ. ಈ ಹಾಡು ಬರುವುದಕ್ಕೆ ಸುನಿ ಅವರೇ ಕಾರಣವಂತೆ. ರಥ ಕಿರಣ್ ಗಾಂಧಿನಗರಕ್ಕೆ ಬಂದ ಹೊಸಬರಾದರೂ, ಅಭಿನಯದ ತಿಳಿವಳಿಕೆ ಬಲ್ಲವರು‌.‌  ಧನಂಜಯ್ ಅವರಿಂದ ಖಾಸಗಿಯಾಗಿ ಅಭಿನಯದ ಪಟ್ಟುಗಳನ್ನು ಕಲಿತುಕೊಂಡಿದ್ದಾರಂತೆ.‌ಅದೇ ಅನುಭವದಲ್ಲಿ ಕಿರುಚಿತ್ರವೊಂದರಲ್ಲೂ ಅಭಿನಯಿಸಿದ್ದಾರೆ‌. ಈಗ ಅಲೆಯಾಗಿ ಹಾಡಿಗೂ ನಾಯಕ ಆಗಿದ್ದಾರೆ‌. ಈ ಮೂಲಕ ನಟನಾಗಿ ಇಲ್ಲಿಯೇ ನೆಲೆ ನಿಲ್ಲುವ ಅಚಲ ವಿಶ್ವಾಸದಲ್ಲಿದ್ದಾರೆ ರಥ ಕಿರಣ್.

ಸದ್ಯಕ್ಕೆ‌’ ಅಲೆಯಾಗಿ‌‌‌‌ ಬಾ’ ಹಾಡು ‌ಭಾರೀ ಮೆಚ್ಚುಗೆ ಪಡೆದಿದೆ.ಜ‌ನ‌ಕೂಡ ಮೆಚ್ಚುಗೆ ಪಡೆದಿದ್ದಾರೆ. ಅದೇ ಥೀಮ್ ಅನ್ನು ಮುಂದುವರೆಸಲು ಸಹ ಕೆಲವರು ಸಲಹೆ ಕೊಟ್ಟಿದ್ದಾರಂತೆ.‌ಅದನ್ನೇ ಯಾಕೆ ಮಾಡಬಾರದು ಅಂತ, ಕಾತರದಲ್ಲಿರುವ ರಥ ಕಿರಣ್, ಯಾರೇ ಅವಕಾಶ ಕೊಟ್ಟರು ಸಿನಿಮಾ‌ಮಾಡಲು ರೆಡಿ ಇದ್ದಾರೆ.ಅಂತಹ ಅವಕಾಶ ಸಿಕ್ಕಿತೇ ಎನ್ನುವುದು ಮುಂದಿರುವ ಕುತೂಹಲ.

Categories
ಸಿನಿ ಸುದ್ದಿ

ಕನ್ನಡ, ತೆಲುಗಿನಲ್ಲಿ ಹೊಸಬರ ಚರಿತ್‌

ಚರಿತ್‌ ಚೊಚ್ಚಲ ಚಿತ್ರಕ್ಕೆ ಸೃಜನ್‌ ಲೋಕೇಶ್‌ ಸಾಥ್‌

ಮೈಸೂರು ಹುಡುಗನ ಹೀರೋ ಆಗುವ ಕನಸು ಕೊನೆಗೂ ನನಸಾಗಿದೆ. ಚರಿತ್‌ ಅಭಿನಯದ ಚೊಚ್ಚಲ ಚಿತ್ರ ʼ ಚರಿತ್‌ʼ ಅಧಿಕೃತವಾಗಿ  ಸೆಟ್ಟೇರಿದೆ. ಚಿತ್ರ ತಂಡ ಅಂದುಕೊಂಡಂತೆ ಮೊನ್ನೆ ಈ ಚಿತ್ರದ ಫಸ್ಟ್‌ ಲುಕ್‌ ಪೋಸ್ಟರ್‌ ಅನ್ನು ಟಾಕಿಂಗ್‌ ಸ್ಟಾರ್‌ ಸೃಜನ್‌ ಲೋಕೇಶ್‌ ಆನಾವರಣಗೊಳಿಸಿ, ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.

 

ಕಳೆದ ಏಳೆಂಟು ವರ್ಷಗಳಿಂದ ಚಿತ್ರರಂಗದಲ್ಲಿ ಬ್ಯಾಕ್‌ ಗ್ರೌಂಡ್‌ ಡಾನ್ಸರ್‌ ಆಗಿ ಕೆಲಸ ಮಾಡಿದ್ದ ಚರಿತ್‌, ಈಗ ಹೀರೋ ಆಗಿ ಆಭಿನಯಿಸುತ್ತಿರುವ ಚೊಚ್ಚಲ ಚಿತ್ರ ಇದು. ಮೈಸೂರು ಮೂಲದವರೇ ಆದ ಭರತ್‌ ನಿರ್ಮಾಣ ಮಾಡುತ್ತಿದ್ದು, ಎ.ಆರ್.‌ ಕೃಷ್ಣ ಆಕ್ಷನ್‌ ಕಟ್‌ ಹೇಳುತ್ತಿದ್ದಾರೆ. ಈ ಹಿಂದೆ ಇವರು ʼಅಥರ್ವʼ ಚಿತ್ರಕ್ಕೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದರು. ಅದೇ ಅನುಭದಲ್ಲೀಗ ಚರಿತ್‌ ಚಿತ್ರದ ನಿರ್ದೇಶನದ ಜವಾಬ್ದಾರಿ ಹೊತ್ತುಕೊಂಡಿರುವುದು ವಿಶೇಷ.

ಕನ್ನಡದ ಜತೆಗೆ ತೆಲುಗಿನಲ್ಲೂ ನಿರ್ಮಾಣವಾಗುತ್ತಿದೆ. ಈಗ ಎರಡು ಭಾಷೆಯಲ್ಲೂ ಚಿತ್ರ ತಂಡ ಫಸ್ಟ್‌ ಲುಕ್‌ ಪೋಸ್ಟರ್‌ ಲಾಂಚ್‌ ಮಾಡಿದೆ. ಚಿತ್ರಕ್ಕಾಗಿಯೇ ಸಿಕ್ಸ್‌ ಪ್ಯಾಕ್‌ ಮೂಲಕ ದೇಹವನ್ನು ಸರಿಯಾಗಿ ಹುರಿಗಟ್ಟಿಸಿಕೊಂಡಿರುವ ಚರಿತ್‌, ಇಲ್ಲಿ ತನ್ನ ಬಾಡಿ ಪ್ರದರ್ಶನದ ಚಿತ್ರಣದೊಂದಿಗೆ ಫಸ್ಟ್‌ ಲುಕ್‌ ಲಾಂಚ್‌ ಆಗಿದೆ. ಹಾಗಂತ ಇದು ಗಿಮಿಕ್‌ ಅಲ್ಲ, ಚಿತ್ರದ ನಾಯಕನ ನಿಜ ಲುಕ್‌ ಅದು. ಯಾಕಂದ್ರೆ ಚಿತ್ರದಲ್ಲಿ ಚರಿತ್‌ ನಿರ್ವಹಿಸುತ್ತಿರುವ ಪಾತ್ರ ಹಾರ್ಸ್‌ ರೈಡರ್.‌ ಅದನ್ನು ಪರಿಚಯಿಸುವ ಪರಿಕಲ್ಪನೆಯ ಮೂಲಕ ಚಿತ್ರ ಫಸ್ಟ್‌ ಲುಕ್‌ ಲಾಂಚ್‌ ಪೋಸ್ಟರ್‌ ಲಾಂಚ್‌ ಮಾಡಿದೆ.

 

ಪೊಸ್ಟರ್‌ ಲಾಂಚ್‌ ಮಾಡಿ ಮಾತನಾಡಿದ ಸೃಜನ್‌ ಲೋಕೇಶ್‌, ಸಿನಿಮಾ ಅನ್ನೋದೇ ಒಂದು ಅಕರ್ಷಣೀಯ ಜಗತ್ತು. ಹಾಗಂತ ಬರೀ ಆಕರ್ಷಣಿಗೆ ಇಲ್ಲಿ ಬರುವುದಲ್ಲ, ಟ್ಯಾಲೆಂಟ್‌ ಇಂಫಾರ್ಟೆಂಟ್.‌ ಟ್ಯಾಲೆಂಟ್‌ ಇದ್ದರೆ ಇಲ್ಲಿ ಒಳ್ಳೆಯ ಸಿನಿಮಾ ಮಾಡಿ ಗೆಲ್ಲಬಹುದು. ಈಗ ಕಂಟೆಂಟ್‌ ಆಧರಿತ ಸಿನಿಮಾಗಳು ಹೆಚ್ಚು ಸದ್ದು ಮಾಡುತ್ತಿವೆ. ಹೊಸಬರಾದ ನೀವು ಕೂಡ ಆ ಕಡೆ ಹೆಚ್ಚು ಗಮನ ಹರಿಸಿ ಅಂತವ ಕಿವಿ ಮಾತು  ಹೇಳುವ ಮೂಲಕ ಚಿತ್ರ ತಂಡಕ್ಕೆ ಶುಭ ಹಾರೈಸಿದ್ದಾಗಿ ಚಿತ್ರದ ನಾಯಕ ನಟ ಚರಿತ್’‌ ಸಿನಿಲಹರಿ’ ಗೆ ತಿಳಿಸಿದರು.

 

ಸದ್ಯಕ್ಕೆ ಚಿತ್ರಕ್ಕೆ ತಂತ್ರಜ್ನರ ಜತೆಗೆ ಹೀರೋ ಮಾತ್ರ ಸೆಲೆಕ್ಟ್‌ ಆಗಿದ್ದಾರೆ. ನಾಯಕಿ ಸೇರಿದಂತೆ ಉಳಿದ ಕಲಾವಿದರ ಆಯ್ಕೆ ಬಾಕಿ ಇದೆ. ಚರಿತ್‌ ಫಸ್ಟ್‌ ಲುಕ್‌ ಗೆ ಅಪಾರ ಮೆಚ್ಚುಗೆ ಕೂಡ ಸಿಕ್ಕಿದೆ. ನಟಿಯರಾದ ಮಾನ್ವಿತಾ ಹರೀಶ್‌ ಹಾಗೂ ನಭಾ ನಟೇಶ್‌ ಸೇರಿದಂತೆ ಹನವರು ತಮ್ಮ ಫೇಸ್‌ ಬುಕ್‌ ಹಾಗೂ ಟ್ವಿಟರ್‌ ಖಾತೆಗಳಲ್ಲಿ ಪೋಸ್ಟರ್‌ ಶೇರ್‌ ಮಾಡುವ ಮೂಲಕ ಚಿತ್ರ ತಂಡಕ್ಕೆ ಬೆಂಬಲವಾಗಿ ನಿಂತಿದ್ದಾರೆ. ಇದು ಚಿತ್ರ ತಡಕ್ಕೆ ಖುಷಿ ಕೊಟ್ಟಿದೆ.

Categories
ಸಿನಿ‌ ಆ್ಯಡ್ ಸಿನಿ ಸುದ್ದಿ

ಅಂದು ದ್ವಾರಕೀಶ್-‌ ಇಂದು ಶರಣ್! ಮತ್ತೆ ಗುರುಶಿಷ್ಯರು

ತರುಣ್‌ ಸುಧೀರ್‌ ನಿರ್ಮಾಣದ ಮೊದಲಚಿತ್ರ

ಇದೇ ಮೊದಲ ಬಾರಿಗೆ ತರುಣ್‌ ಸುಧೀರ್‌ ನಿರ್ಮಾಣದ ಚಿತ್ರವೊಂದು ಸೆಟ್ಟೇರುತ್ತಿದ್ದು, ಆ ಚಿತ್ರಕ್ಕೆ “ಗುರುಶಿಷ್ಯರು” ಎಂದು ನಾಮಕರಣ ಮಾಡಲಾಗಿದೆ. ೧೯೯೫ರಲ್ಲಿ ಬಿಡುಗಡೆಯಾಗಿದ್ದ “ಗುರುಶಿಷ್ಯರು” ದ್ವಾರಕೀಶ್‌ ಅಭಿನಯದ ಯಶಸ್ವಿ ಚಿತ್ರವಾಗಿತ್ತು. ಈ ಚಿತ್ರದ ಶೀರ್ಷಿಕೆಯಡಿ ನಟ ಶರಣ್‌ ಅಭಿನಯಿಸುತ್ತಿರುವುದು ವಿಶೇಷ. ದ್ವಾರಕೀಶ್‌ ಅವರೇ ಈ ಚಿತ್ರದ ಶೀರ್ಷಿಕೆ ಅನಾವರಣಗೊಳಿಸಿದ್ದಾರೆ. ಈ ಹಿಂದೆ  ಶರಣ್‌ ಅವರ ವಿಡಿಯೋ ಒಂದು ವೈರಲ್ ಆಗಿತ್ತು. ಶರಣ್ ಅಮ್ಮಂದಿರ ಮಾತಿಗೆ ಶರಣ್ ಉತ್ತರಿಸದೆ, ಬರೀ ವಿಷಲ್ ಹಾಕುವ ಮೂಲಕ ಹೊಸದೊಂದು ಕುತೂಹಲ ಮೂಡಿಸಿದ್ದರು. ಅದು ಹೊಸ ಚಿತ್ರದ ಸೂಚನೆ ಎಂದು ಹೇಳಲಾಗಿತ್ತು. ಇತ್ತೀಚೆಗಷ್ಟೇ ನಿರ್ಮಾಪಕ ಕಮ್‌ ನಿರ್ದೇಶಕ ತರುಣ್‌ ಸುಧೀರ್‌ ಅವರು, ಚಿತ್ರದ ಶೀರ್ಷಿಕೆ ಬಿಡುಗಡೆ ಮಾಡುವುದಾಗಿ ಹೇಳಿದ್ದರು. ಡಿಸೆಂಬರ್‌ ೨೧ರಂದು “ಗುರುಶಿಷ್ಯರು” ಶೀರ್ಷಿಕೆ ಅನಾವರಣಗೊಂಡಿದೆ.

 

ಜಡೇಶ್ ಹಂಪಿ ನಿರ್ದೇಶನದ ಈ ಚಿತ್ರವನ್ನು ಲಡ್ಡು ಸಿನಿಮಾ ಹೌಸ್ ಹಾಗೂ ತರುಣ್ ಸುಧೀರ್ ಕ್ರಿಯೇಟಿವ್ಸ್  ಮೂಲಕ ನಿರ್ಮಾಣ ಮಾಡಲಾಗುತ್ತಿದೆ. ಸದ್ಯಕ್ಕಿಷ್ಟು ಚಿತ್ರದ ಮಾಹಿತಿ. ಇನ್ನುಳಿದಂತೆ, ತಾಂತ್ರಿಕ ವರ್ಗ, ಕಲಾವಿದರು ಇತರೆ ವಿಷಯವನ್ನು ಇಷ್ಟರಲ್ಲೇ ಅನೌನ್ಸ್‌ ಮಾಡಲಿದ್ದಾರೆ.

Categories
ಸಿನಿ ಸುದ್ದಿ

ಎರಡು ದಶಕದ ರೈತರ ಕಥೆಗೆ ದೃಶ್ಯರೂಪ – ಕೊಳಗ ಎಂಬ ಹೋರಾಟದ ಚಿತ್ರಣ

ಇದು ನಾ.ಡಿಸೋಜಾ ಕಥೆಯ ಸಿನಿಮಾ

ಕನ್ನಡ ಚಿತ್ರರಂಗದಲ್ಲಿ ಈಗಾಗಲೇ ಹಲವು ಹೋರಾಟದ ಕಥೆಗಳು ತೆರೆಯ ಮೇಲೆ ರಾರಾಜಿಸಿವೆ. ಆ ಸಾಲಿಗೆ ರೈತ ಹೋರಾಟದ ಕಥೆಗಳೂ ಹೊಸದೇನಲ್ಲ. ಈಗ ಮತ್ತೊಂದು ರೈತರ ಹೋರಾಟದ ಕಥೆಯೊಂದು ಚಿತ್ರವಾಗಲು ಸಜ್ಜಾಗಿದೆ. ಹೌದು, ಇತ್ತೀಚೆಗೆ ಆ ಚಿತ್ರಕ್ಕೆ ಮುಹೂರ್ತವೂ ನೆರವೇರಿದೆ. ಅಂದಹಾಗೆ, ಆ ಚಿತ್ರದ ಹೆಸರು “ಕೊಳಗ”. ಇದು ನಾ.ಡಿಸೋಜಾ ಅವರ ಕಾದಂಬರಿ ಆಧಾರಿತ ಚಿತ್ರ. ಈ ಚಿತ್ರವನ್ನು ಪ್ರಸನ್ನ ಗೊರಲಕೆರೆ ನಿರ್ದೇಶಿಸುತ್ತಿದ್ದಾರೆ. ಸಂಭಾಷಣೆಯನ್ನೂ ಇವರೇ ಬರೆದಿದ್ದಾರೆ. ಇನ್ನು, ನಿಶಿತಾಗೌಡ ಅವರು ಚಿತ್ರಕಥೆ ಬರೆದು, ನಾಯಕಿಯಾಗಿಯೂ ಕಾಣಿಸಿಕೊಳ್ಳುತ್ತಿದ್ದಾರೆ.

ಪ್ರಸನ್ನ ಗೊರಲಕೆರೆ, ನಿರ್ದೇಶಕ

ರೈತ ಹೋರಾಟಗಾರ ಕೋಡಿಹಳ್ಳಿ ಚಂದ್ರಶೇಖರ್‌, ಡಾ.ಅಶೋಕ್‌, ನಿರ್ದೇಶಕ ಎಸ್.‌ ನಾರಾಯಣ್‌, ಕೂಡ್ಲು ರಾಮಕೃಷ್ಣ, ಅವಿನಾಶ್‌ ಯು ಶಟ್ಟಿ ಸೇರಿದಂತೆ ಹಲವು ಗಣ್ಯರು ಚಿತ್ರತಂಡಕ್ಕೆ ಶುಭಕೋರಿದ್ದಾರೆ.
ಚಿತ್ರದಲ್ಲಿ ಆರೇಳು ಪ್ರಮುಖ ಪಾತ್ರಗಳು ಬರಲಿವೆ. ಇಡೀ ಕಥೆಯಲ್ಲಿ ಮೂರು ಪಾತ್ರಗಳು ಮಾತ್ರ ಹೈಲೈಟ್‌ ಆಗಿರಲಿವೆ. ಈ ಚಿತ್ರದಲ್ಲಿ ಆದಿಲೋಕೇಶ್‌ ಅವರು ಸ್ವಾಮೀಜಿ ಪಾತ್ರ ನಿಭಾಯಿಸುತ್ತಿದ್ದಾರೆ. ಇನ್ನುಳಿದಂತೆ ನಿಶಿತಾಗೌಡ ಹಾಗೂ ಕಿಶೋರ್‌ ಪ್ರಮುಖವಾಗಿ ಕಾಣಿಸಿಕೊಳ್ಳಲಿದ್ದಾರೆ.


ಈ ವೇಳೆ ಮಾತನಾಡಿದ ರೈತ ಮುಖಂಡ, ಕೋಡಿಹಳ್ಳಿ ಚಂದ್ರಶೇಕರ್‌, “ಕೊಳಗ” ಅನ್ನೋದು ಹಿಂದಿನ ಕಾಲದಲ್ಲಿ ರೈತರು ತಮ್ಮ ಧಾನ್ಯಗಳನ್ನು ಅಳೆಯಲು ಉಪಯೋಗಿಸುತ್ತಿದ್ದ ಒಂದು ಅಳತೆಗೋಲು. ರೈತಾಪಿ ವರ್ಗ ಹಾಗೂ ಭೂ ಮಾಲೀಕರ ನಡುವೆ ನಡೆಯುವಂತಹ ಘರ್ಷಣೆಯೇ ಈ ಕಥೆ. ಒಂದು ಮಹತ್ತರ ಬದಲಾವಣೆಗೆ ಕೊಳಗ ಹೇಗೆ ಕಾರಣವಾಯಿತು ಎಂಬುದನ್ನು ಈ ಚಿತ್ರದಲ್ಲಿ ಹೇಳಲಾಗುತ್ತಿದೆ. ಚಿತ್ರ ಎಲ್ಲರಿಗೂ ಗೆಲುವು ತರಲಿ ಎಂದು ಆಶಿಸಿದರು ಕೋಡಿಹಳ್ಳಿ.


ನಿರ್ದೇಶಕ ಕೂಡ್ಲು ರಾಮಕೃಷಷ್ಣ ಅವರು ಈವರೆಗೆ ಸುಮಾರು ೩೦ ಸಿನಿಮಾಗಳನ್ನು ನಿರ್ದೇಶಿಸಿದ್ದು, ಆ ಪೈಕಿ ೧೫ ಕಾದಂಬರಿ ಆಧಾರಿತ ಚಿತ್ರಗಳನ್ನೇ ಮಾಡಿದ್ದಾರೆ. ಆದರೆ, ಅವರಿಗೆ ನಾ.ಡಿಸೋಜ ಅವರ ಕಥೆ ಮಾಡಲಾಗಲಿಲ್ಲ ಎಂಬ ಬೇಸರವಿದೆಯಂತೆ. ಈ ಹಿಂದೆ ಕಾಗೋಡು ಸತ್ಯಾಗ್ರಹದ ಬಗ್ಗೆ ಗಿರೀಶ್‌ ಕಾಸರವಳ್ಳಿ ಅವರು ಸಾಕ್ಷ್ಯ ಚಿತ್ರ ನಿರ್ದೇಶಿಸಿದ್ದರು. ಈಗ ಪ್ರಸನ್ನ ಸಿನಿಮಾ ಮಾಡುತ್ತಿದ್ದಾರೆ. ಇದೊಂದು ದೊಡ್ಡ ಪರಿಣಾಮ ಬೀರುವ ಸಿನಿಮಾ ಆಗಲಿ ಎಂಬುದು ಕೂಡ್ಲು ರಾಮಕೃಷ್ಣ ಅವರ ಮಾತು.


ನಿರ್ದೇಶಕ ಪ್ರಸನ್ನ ಅವರು ಇದೊಂದು ೨೦ ವರ್ಷಗಳ ಕಾಲ ನಡೆದ ರೈತರ ದೊಡ್ಡ ಹೋರಾಟದ ಕಥೆ ಇದು ಎಂದರು. ನನ್ನ ತಾತ ಕಾಗೋಡು ಹೋರಾಟದಲ್ಲಿ ಭಾಗಿಯಾಗಿದ್ದರು. ಆಗಿನಿಂದಲೂ ಆ ವಿಚಾರಗಳು ನನ್ನೊಳಗಿದ್ದವು. ಆಗಿನ ಕಾಲದಲ್ಲಿ ರೈತ ಭೂಮಿ ಮೇಲೆ ಭಾವನಾತ್ಮಕ ಸಂಬಂಧ ಇಟ್ಟುಕೊಂಡಿದ್ದ. ಇತ್ತೀಚೆಗೆ ಅದು ಕಡಿಮೆಯಾಗುತ್ತಿದೆ. ಅದನ್ನು ಬೆಳೆಸುವ ಪ್ರಯತ್ನವಾಗಿ ಈ ಸಿನಿಮಾ ಮಾಡುತ್ತಿದ್ದೇನೆ. ಈ ಚಿತ್ರಕ್ಕೆ ಸಾಕಷ್ಟು ತಯಾರಿ ಮಾಡಿಕೊಂಡಿದ್ದೇನೆ. ಈ ಚಿತ್ರಕ್ಕೆ ನೀನಾಸಂ ಮಂಜು, ಅವಿನಾಶ್‌ ಸೇರಿದಂತೆ ಹಲವರ ಸಹಕಾರವಿದೆ. ಚಿತ್ರಕ್ಕೆ ರಾಜಗುರು ಸಂಗೀತವಿದೆ. ಸುಜಿತ್‌ ನಾಯಕ್‌ ಸಂಕಲನವಿದೆ ಎಂದರು.

Categories
ಸಿನಿ ಸುದ್ದಿ

ಶ್ರೀನಿಧಿ ಶಾಸ್ತ್ರಿ ‘ಸರಿಗಮಪ ಸೀಸನ್ 17’ ರ ಚಾಂಪಿಯನ್

-ರನ್ನರ್ ಅಪ್ ಆಗಿ ಅಶ್ವಿನ್ ಶರ್ಮಾ
ಕಂಬದ ರಂಗಯ್ಯ ಗೆ ಸಿಕ್ತು ಮೂರನೇ ಸ್ಥಾನ

ಶ್ರೀನಿಧಿ ಶಾಸ್ತ್ರಿ

ಜೀ ಕನ್ನಡದ ಬಹು ಜನಪ್ರಿಯ ರಿಯಾಲಿಟಿ ಶೋ ” ಸರಿ ಗಮಪ ಸೀಸನ್‌ 17 ” ರ ಚಾಂಪಿಯನ್ ಆಗಿ ಬೆಂಗಳೂರಿನ‌ ಹುಡುಗ ಶ್ರೀನಿಧಿ ಶಾಸ್ತ್ರಿ ಹೊರ ಹೊಮ್ಮಿದ್ದಾರೆ. ಟ್ರೋಪಿ ಜತೆಗೆ 10 ಲಕ್ಷ, ಕ್ಯಾಸ್ ಪ್ರೇಜ್ ಅವರದಾಗಿದೆ.‌

ಹಾಗೆಯೇ ಎರಡನೇ ಸ್ಥಾನದಲ್ಲಿ ಅಶ್ವಿನ್ ಶರ್ಮಾ ಆಯ್ಕೆಯಾದರು. ಟ್ರೋಪಿ ಜತೆಗೆ ಅವರಿಗೆ ಐದು ಲಕ್ಷ ನಗದು ಬಹುಮಾನ ಅವರಾಯಿತು.ಶೋ‌ನ ರಿಯಾಲಿಟಿ ಶೋ ಮಹಾಗುರು ಹಂಸಲೇಖ ಅವರು ಚಾಂಪಿಯನ್ ಅನೌನ್ಸ್ ಮಾಡಿದರು.

ಭಾನುವಾರ ತಡ ರಾತ್ರಿಯವರೆಗೂ‌ ನಡೆದ
ಗ್ರಾಂಡ್ ಫಿನಾಲೆಯ ಅಂತಿಮ ಸುತ್ತಿನಲ್ಲಿ ನೆರೆದಿದ್ದ ಅಪಾರ ಜನ ಸಂಖ್ಯೆಯ ಸಮಕ್ಷಮದಲ್ಲಿ ಶ್ರೀನಿಧಿ ಶಾಸ್ತ್ರಿ ವಿನ್ನರ್ ಆಗಿ ಹೊರ ಹೊಮ್ಮಿದರೆ, ಆಶ್ವಿನ್ ಶರ್ಮಾ ಎರಡನೇ ಸ್ಥಾನಕ್ಕೆ ಆಯ್ಕೆಯಾಗಿ ಅಪಾರ ಜನ್ನಮನ್ನಣೆ ಪಡೆದುಕೊಂಡರು.

ಕಂಬದ ರಂಗಯ್ಯ

ಕಂಬದ ರಂಗಯ್ಯ ಮೂರನೇಸ್ಥಾನ

ಸೆಕೆಂಡ್ ರನ್ನರಪ್ ಆಗಿ ಕಂಬದ ರಂಗಯ್ಯ ಆಯ್ಕೆಯಾದರು.ಟ್ರೋಫಿ ಜತೆಗೆ ಎರಡೂವರೆ ಲಕ್ಷ ಬಹುಮಾನ ಅವರ ಪಾಲಾಯಿತು‌. ಈ ಫಲಿತಾಂಶವನ್ನು ಗಾಯಕ , ಸಂಗೀತ ನಿರ್ದೇಶಕ ರಾಜೇಶ್ ಕೃಷ್ಣ ಅನೌನ್ಸ್ ಮಾಡಿದರು. ಟ್ರೋಫಿ ಜತೆಗೆ ಎರಡೂವರೆ ಲಕ್ಷ ಬಹುಮಾನ ಅವರ ಪಾಲಾಯಿತು‌.

error: Content is protected !!