Categories
ಸಿನಿ ಸುದ್ದಿ

ಸಾರಥಿಯ ಒಂಟಿ ಹೋರಾಟ! ಚಾಲೆಂಜಿಂಗ್‌ ಲೈಫ್‌ನಿಂದಲೇ ಹೊತ್ತಿಕೊಳ್ಳುತ್ತಾ ಕ್ರಾಂತಿಯ ಕಿಚ್ಚು?

ಫೈಟ್ ಮಾಡೋಕೆ ಬೇಕಾಗಿರೋದು ಗ್ರೌಂಡು..ಬ್ಯಾಗ್ರೌಂಡ್ ಅಲ್ಲ.. ಇದು ಕೇವಲ ಬಿಲ್ಡಪ್‌ಗೋಸ್ಕರ ಹೊಡೆದಂತಹ ಡೈಲಾಗ್ ಅಲ್ಲ. ಆ ಡೈಲಾಗ್‌ಗೆ ಬಿಲ್ಡಪ್ ಸಿಗಲಿ ಅಂತ ಹೊಡೆಸಿದ್ದು ಅಷ್ಟೇ. ಇದೇ ರಿಯಲ್ಲು.. ಇದೇ ಫ್ಯಾಕ್ಟು. ಆ ಫ್ಯಾಕ್ಟ್ನಂತೆಯೇ ಫೀಲ್ಡಿಗಿಳಿದವರು, ಮೈಕೊಡವಿಕೊಂಡು ಅಖಾಡಕ್ಕೆ ಇಳಿದು ತೊಡೆತಟ್ಟಿದವರು, ಕಲೆಗಾಗಿ ಬೆವರೊಟ್ಟಿಗೆ ರಕ್ತಬಸಿದವರು, ಅಪ್ಪನ ಹೆಸರು ಬಳಸಿಕೊಳ್ಳದೇ ಸ್ವಂತ ಪರಿಶ್ರಮದಿಂದ ಹೋರಾಡಿದವರು, ಬಜಾರ್‌ನಲ್ಲಿ ಸ್ವಂತ ಬ್ರಾಂಡ್ ಆದವರು, ಗಂಧದಗುಡಿಯಲ್ಲಿ ತಮ್ಮದೇ ಆದ ಸಾಮ್ರಾಜ್ಯ ಕಟ್ಟಿದವರು, ಇಷ್ಟೆಲ್ಲಾ ಮಾಡಿದವರು ಬೇರಾರು ಅಲ್ಲ ತೂಗುದೀಪದ ಕುಡಿ, ಒನ್ ಅಂಡ್ ಓನ್ಲೀ ಡಿಬಾಸ್..!

ಚಾಲೆಂಜಿಂಗ್ ಸ್ಟಾರ್, ಚಕ್ರವರ್ತಿ, ಬಾಕ್ಸ್ ಆಫೀಸ್ ಸುಲ್ತಾನ್, ಯಜಮಾನ, ಒಡೆಯ, ಕುಲಕೋಟಿ ಅಭಿಮಾನಿಗಳ ಆರಾಧ್ಯದೈವ, ದಾಸ, ದಚ್ಚು, ದರ್ಶನ್, ಹೀಗೆ ಒಂದಾ.. ಎರಡಾ..ಹತ್ತಾರು ಹೆಸರುಗಳಿಂದ ಕರೆಸಿಕೊಳ್ಳುವ ನಾಯಕ ಇವರು. ಯಾರಿಗೂ ಸಲಾಂ ಹೊಡೆಯದೇ, ಬಕೆಟ್ ಹಿಡಿಯದೇ, ಸಿಂಟ್ಯಾಕ್ಸ್ ಬಳಸದೇ, ಸ್ವಂತ ಪರಿಶ್ರಮದಿಂದ ಒಂದೊಂದೇ ಮೆಟ್ಟಿಲೇರಿ ಸ್ಟಾರ್ ಆದವರು. ಶ್ರೇಷ್ಟ ಖಳನಾಯಕನ ಮಗನಾದರೂ ಕೂಡ ಅಪ್ಪನ ಹೆಸರೇಳಿ ಅವಕಾಶ ಗಿಟ್ಟಿಸಿಕೊಳ್ಳಲು ಹಿಂಜರಿದವರು. ಬಣ್ಣದ ಲೋಕಕ್ಕೆ ಧುಮಕಲೆಬೇಕು, ಅಪ್ಪನಂತೆ ಕಲಾವಿದನಾಗ್ಬೇಕು ಎನ್ನುವ ಹಂಬಲಕ್ಕೆ, ತುಡಿತಕ್ಕೆ, ಕನಸಿಗೆ, ಮಹದಾಸೆಗೆ ತಾವೇ ನೀರೆರೆದುಕೊಂಡು ಪೋಷಿಸಿದವರು. ಲೈಟ್‌ಮ್ಯಾನ್ ಆಗಿ ಚಿತ್ರರಂಗಕ್ಕೆ ಎಂಟ್ರಿಕೊಟ್ಟು ಹೆಜ್ಜೆಹೆಜ್ಜೆಗೂ ಕಷ್ಟ-ನೋವು-ಅವಮಾನ, ಅಪಮಾನ, ನಿಂದನಗೆಳನ್ನು ಎದುರಿಸಿದವರು. ಸವಾಲುಗಳಿಗೆ ಹೆದರದೇ ಸೆಡ್ಡುಹೊಡೆದು ಮೆಟ್ಟಿನಿಂತವರು. ಕೊನೆಗೆ ಚಾಲೆಂಜ್ ಹಾಕಿಯೇ ಲೈಫ್‌ನ ಕಂಡುಕೊಂಡವರು. ಹೀಗಾಗಿಯೇ ಇವತ್ತು ಇವರಿಗೆ ಚಾಲೆಂಜಿಂಗ್ ಸ್ಟಾರ್ ಅಂತ ಕರೆಯುತ್ತಾರೆ. ಕೋಟ್ಯಾಂತರ ಭಕ್ತರು ತಲೆಮೇಲೆ ಹೊತ್ತು ಮೆರೆಸುತ್ತಾರೆ.

ದರ್ಶನ್ ಇವತ್ತು ಏನೇ ಆಗಿದ್ದರೂ ಕೂಡ ಅದಕ್ಕೆ ಕಾರಣ ಅವರೇ. 150 ರೂಪಾಯಿ ಬಾಟದಿಂದ ಹಿಡಿದು ೧೦ ಕೋಟಿ ಸಂಭಾವನೆ ಪಡೆಯುವುದಕ್ಕೆ ಡಿಬಾಸ್ ಪಟ್ಟಿರುವ ಕಷ್ಟ ಡಿಬಾಸ್‌ಗೆ ಮಾತ್ರ ಗೊತ್ತು. ಹೀಗಾಗಿಯೇ, ಸಾಕಷ್ಟು ಭಾರಿ ಅವರೇ ಹೇಳಿಕೊಂಡಿದ್ದಾರೆ. ನಾನು ದರ್ಶನ್‌ಗೆ ಬೆಳೆಸದೇ, ನಾನು ದರ್ಶನ್‌ಗೆ ಅವಕಾಶ ಕೊಡಿಸಿದೇ, ಈ ರೀತಿ ಹೇಳಿಕೊಳ್ಳುವ ಅವಕಾಶವನ್ನ ನಾನು ಯಾರಿಗೂ ಕೊಟ್ಟಿಲ್ಲವೆಂದು. ಅಪ್‌ಕೋರ್ಸ್ ಯಾರಿಗೂ ಸಲಾಂ ಹೊಡೆದು ಚಾನ್ಸ್ ಗಿಟ್ಟಿಸಿಕೊಂಡಿಲ್ಲ, ಸಲಾಂ ಹೊಡೆದು ಆಳೆತ್ತರಕ್ಕೆ ಬೆಳೆದು ನಿಂತಿಲ್ಲ. ಲೈಟ್‌ಮ್ಯಾನ್ ಕೆಲಸ ಮಾಡಿ, ಸಣ್ಣ-ಪುಟ್ಟ ಪಾತ್ರಗಳಿಗೆ ಜೀವತುಂಬಿ, ಸೀರಿಯಲ್ ಮಾಡಿ ತನ್ನ ಕಲೆಯನ್ನ ಪ್ರೂ ಮಾಡಿದವರು. ದಾಸನ ಕಲೆಗೆ ಬೆಲೆಕೊಟ್ಟು ಪಿ.ಎನ್. ಸತ್ಯ, ಎಂ.ಜಿ ರಾಮ್‌ಮೂರ್ತಿ ಅವರು ಬೆಳ್ಳಿತೆರೆಗೆ ಕರೆತಂದರು. ಮೆಜೆಸ್ಟಿಕ್‌ನಲ್ಲೇ ಮೆಜೆಸ್ಟಿಕ್ ತೋರ‍್ಸಿದರು. ಮುಂದಾಗಿದ್ದೆಲ್ಲವೂ ಇವತ್ತಿಗೂ ಇತಿಹಾಸವೇ ಸರೀ.

ಸಾರಥಿ ಚಿತ್ರರಂಗಕ್ಕೆ ಬಂದು ೨೪ ವರ್ಷ ಕಳೆದಿದೆ. ಈ ೨೪ ವರ್ಷದ ಸಿನಿಜರ್ನಿಯಲ್ಲಿ ೫೩ ಸಿನಿಮಾಗೆ ಜೀವಕೊಟ್ಟಿದ್ದಾರೆ. ಮಾಸ್ ಹೀರೋ ಆಗಿ ಬೆಳ್ಳಿತೆರೆಮೇಲೆ ಧಗಧಗಿಸಿದ್ದಾರೆ, ಬಾಕ್ಸ್ಆಫೀಸ್‌ನಲ್ಲಿ ಕೋಟಿ ಕೋಟಿ ಕಮಾಯಿ ಕೊಟ್ಟು ಅನ್ನದಾತರನ್ನ ಬೆಳೆಸಿದ್ದಾರೆ. ಬಾಕ್ಸ್ಆಫೀಸ್ ಸುಲ್ತಾನ್ ಪಟ್ಟಕ್ಕೇರಿದ್ದಾರೆ. ಕೋಟ್ಯಾಂತರ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ. ಕೋಟಿ ಕೋಟಿ ದುಡ್ಡು ಮಾಡಿದ್ದಾರೆ. ಇಷ್ಟೆಲ್ಲಾ ಸಾಧನೆ ಮಾಡೋದಕ್ಕೆ ದರ್ಶನ್ ಗುಂಪುಕಟ್ಟಿಕೊಂಡು ಹೋರಾಡಲಿಲ್ಲ. ಮೇಲ್ನೋಟಕ್ಕೆ ಚೆನ್ನಾಗಿದ್ದು ಒಳಗೊಳಗೆ ಕೇಡು ಬಯಸುವವರಿಗೂ ಕೂಡ ಒಳ್ಳೆಯದನ್ನೇ ಬಯಸಿದರು. ಒಬ್ಬಂಟಿಯಾಗಿ ಒಂಟಿಸಲಗದಂತೆ ಹೋರಾಡಿದರು. ಅದರ ಪ್ರತಿಫಲವೇ ಇವತ್ತು ಗಂಧದಗುಡಿಯಲ್ಲಿ ಸ್ವಂತ ಸಾಮ್ರಾಜ್ಯಕ್ಕೆ ಕಟ್ಟಲಿಕ್ಕೆ ಸಾಧ್ಯವಾಗಿದ್ದು, ತೂಗುದೀಪ ವಂಶ ವಜ್ರದಂತೆ ಹೊಳೆಯುತ್ತಿರುವುದು.

ಕ್ಷೇತ್ರ ಯಾವುದೇ ಇರಲಿ ಏಕಾಂಗಿ ಹೋರಾಟ ತುಂಬಾ ಕಷ್ಟ. ಕೈಗೊಬ್ಬರು.. ಕಾಲಿಗೊಬ್ಬರು ಆಳು.. ಹೆಸರು.. ಕೀರ್ತಿ..ಹಣ..ಆಸ್ತಿ.. ಎಲ್ಲವೂ ಇದ್ದವರು, ಬಲ ತುಂಬಿಕೊಂಡವರು ಒಂಟಿಸಲಗದ ಹೋರಾಟಕ್ಕೆ ಹಿಂಜರಿಯುತ್ತಾರೆ. ಆದರೆ, ದಚ್ಚು ಎದೆಗುಂದಲಿಲ್ಲ, ಮುಂದಿಟ್ಟ ಹೆಜ್ಜೆನಾ ಹಿಂದೆ ತೆಗೆದುಕೊಳ್ಳಲಿಲ್ಲ. ಬದಲಿಗೆ, ವ್ಯಕ್ತಿನಾ ನೋಡಿ ನನ್ನ ಶಕ್ತಿ ಡಿಸೈಡ್ ಆಗಲ್ಲ. ಸೆಡ್ಡು ಹೊಡೆದು ನಿಂತ್ಮೇಲೆ ಸೈಡಿಗೆ ಹೋಗೋ ಮಾತೇಯಿಲ್ಲ. ಹೀಗನ್ನುತ್ತಲೇ ಫೀಲ್ಡಿಗಿಳಿದರು. ಮೂವೀ ಎನ್ನುವ ಮಾಯಲೋಕದಲ್ಲಿ ಮಿನುಗಿದರು. ಸಿನಿಮಾ ಎನ್ನುವ ಸಾಮ್ರಾಜ್ಯದಲ್ಲಿ ಸುಂಟರಗಾಳಿ ಎಬ್ಬಿಸಿ ಒಡೆಯನಾದರು. ಹೀಗಾಗಿ, ಬಣ್ಣ ಹಚ್ಚುವವರು ಯಜಮಾನನ ಬದುಕನ್ನ ಸ್ಪೂರ್ತಿಯಾಗಿಟ್ಟುಕೊಂಡು ಸಿನಿಮಾ ಲೋಕಕ್ಕೆ ಎಂಟ್ರಿಕೊಡ್ತಾರೆ. ಯಜಮಾನ ಸಿನಿಮಾ ನಂತರ ಎರಡನೇ ಭಾರಿ ಕ್ಯಾಪ್ ತೊಟ್ಟಿರುವ ವಿ ಹರಿಕೃಷ್ಣ ಏಕಾಂಗಿಯಾಗಿ ಹೋರಾಡೋದನ್ನ ಕಲಿಯಿರಿ' ಎನ್ನುವ ಟ್ಯಾಗ್‌ಲೈನ್ ಜೊತೆಗೆ ಚಾಲೆಂಜಿಂಗ್ಕ್ರಾಂತಿ’ ಮಾಡಿಸೋದಕ್ಕೆ ಹೊರಟಿದ್ದಾರೆ.

ಕ್ರಾಂತಿ' ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ೫೫ನೇ ಸಿನಿಮಾ. ಸಿನಿಮಾರಂಗದಲ್ಲಿ ದಚ್ಚು ಬೆಳೆದು ನಿಂತ ಪರಿಯೇ ಒಂದು ರೀತಿ ಕ್ರಾಂತಿಯಾಗಿರುವುದರಿಂದ,ಕ್ರಾಂತಿ’ ಸಿನಿಮಾ ಬಹಳಷ್ಟು ನಿರೀಕ್ಷೆಯನ್ನ ಮೂಡಿಸಿದೆ. ಬಹುಭಾಷೆಯಲ್ಲಿ ಈ ಮೂವೀ ನಿರ್ಮಾಣ ಮಾಡೋದಕ್ಕೆ ನಿರ್ಮಾಪಕರಾದ ಶೈಲಜಾ ನಾಗ್ ಹಾಗೂ ಬಿ ಸುರೇಶ್ ನಿರ್ಧರಿಸಿದ್ದಾರೆ. ಕ್ರೇಜಾ.. ಕ್ರೇಜಿಗೆ ಅಪ್ಪನಪ್ಪನಪ್ಪ ಕಣೋ ಇವ್ರು ಅಂತ ಹೇಳಿ `ಯಜಮಾನ’ ಸುದ್ದಿಗೋಷ್ಟಿಯಲ್ಲಿ ಮತ್ತೊಂದು ಚಿತ್ರ ಮಾಡುವುದಾಗಿ ತಿಳಿಸಿದ್ದರು. ಅದರಂತೇ, ಅದ್ದೂರಿ ಚಿತ್ರಕ್ಕೆ ಕೈಹಾಕಿದ್ದಾರೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಕ್ರಾಂತಿ ಮಾಡೋದಕ್ಕೆ ಹೊರಟಿದ್ದಾರೆ. ಅಷ್ಟಕ್ಕೂ, ಸಾರಥಿಯ ಕೈಯಲ್ಲಿ ಯಾವ್ ರೀತಿಯ ಕ್ರಾಂತಿ ಮಾಡಿಸ್ತಾರೆ? ಆದ್ರೆ ಇಲ್ಲಿ ಕ್ಯೂರಿಯಾಸಿಟಿ ಹುಟ್ಟಿಸಿದ್ದು ಕ್ರಾಂತಿ ಹೆಸರಿನ ಚಿತ್ರಕ್ಕೆ ಕೊಟ್ಟ ಟ್ಯಾಗ್ ಲೈನ್. ಲರ್ನ್ ಟು ಫೈಟ್ ಅಲೋನ್. ಅಂದ್ರೆ ಏಕಾಂಗಿಯಾಗಿ ಹೋರಾಡೋದನ್ನು ಕಲಿ ಅಂತ. ಹಾಗಾದ್ರೆ.. ಬೆಳ್ಳಿ ತೆರೆ ಮೇಲೆ ಹೀಗೆ ಹೇಳಲು ಹೊರಟವರು ಯಾರು ? ನಿರ್ದೇಶಕ ಹರಿಕೃಷ್ಣ ತಮ್ಮ ಕಥೆ ಮೂಲಕ ದರ್ಶನ್ ಅವರ ರಿಯಲ್ ಕಥೆ ಹೇಳಿಸ್ತಾರಾ ಅಥವಾ ಹೊಸ ಕಥೆನಾ ಕಟ್ಟಿ ಕೊಡ್ತರಾ ಅನ್ನೋದಿಕ್ಕೆ ಚಿತ್ರ ನೋಡಿದಾಗಲೇ ಗೊತ್ತಗಲಿದೆ. ಅಲ್ಲಿವರೆಗೂ ನೀವು ಒಬ್ಬಂಟಿಯಾಗಿ ಫೈಟ್ ಮಾಡಿ.

  • ವಿಶಾಲಾಕ್ಷಿ, ಎಂಟರ್‌ಟೈನ್ಮೆಂಟ್ ಬ್ಯೂರೋ ಸಿನಿಲಹರಿ
Categories
ಸಿನಿ ಸುದ್ದಿ

ಪ್ರಶಾಂತ್ ಸಂಬರಗಿ ಮುಖವಾಡ ಬಯಲು ಮಾಡಿದ ಬೆನ್ನಲ್ಲೇ ಅವರ ವಿರುದ್ಧ ಕಾನೂನು ಸಮರಕ್ಕೆ ಅಣಿಯಾದ್ರಾ ಚಂದ್ರಚೂಡ್‌ ?

ಸಾಮಾಜಿಕ ಹೋರಾಟಗಾರ ಪ್ರಶಾಂತ್ ಸಂಬರಗಿ ಅವರಿಗೆ ನಿರ್ದೇಶಕ ಹಾಗೂ ಪತ್ರಕರ್ತ ಚಕ್ರವರ್ತಿ ಚಂದ್ರಚೂಡ್ ಶನಿಯಂತೆ ಹೆಗಲೇರುವುದು ಗ್ಯಾರಂಟಿ ಆಗಿದೆ. ಅತ್ತ ಡ್ರಗ್ಸ್ ಕೇಸ್ ನಲ್ಲಿರುವವರೆಲ್ಲರೂ ಜೈಲು ಕಂಬಿ ಎಣಿಸಬೇಕೆಂದು ಸಂಬರಗಿ ಗುಡುಗುತ್ತಿದ್ದರೆ, ಇತ್ತ ಸಂಬರಗಿ ಅವರನ್ನೇ ಚಂದ್ರಚೂಡ್ ಕಾನೂನು ತಂತ್ರ ಹೆಣೆಯುತ್ತಿದ್ದಾರೆ. ಗಣೇಶ್ ಹಬ್ಬದ ದಿನವಾದ ಶುಕ್ರವಾರವಷ್ಟೇ ಸೋಷಲ್ ಮೀಡಿಯಾದಲ್ಲಿ ಸಂಬರಗಿ ಅವರ ಮುಖವಾಡ ಬಯಲು ಮಾಡಿದ್ದ ಚಂದ್ರಚೂಡ್, ಈಗ ಅವರ ವಿರುದ್ಧ ಕಾನೂನು ಹೋರಾಟಕ್ಕೂ ಸಿದ್ದತೆ ನಡೆಸಿದ್ದಾರೆ. ಶುಕ್ರವಾರವೇ ಸಂಜೆ ಈ ಸಂಬಂಧ ವಕೀಲರೂ ಹಾಗೂ ಆವರ ಆತ್ಮೀಯರಾದ ಸೂರ್ಯ ಮುಕುಂದರಾಜ್ ಮತ್ತು ಸಂಪತ್ ಕುಮಾರ್‌, ಜತೆಗೆ ಚರ್ಚೆ ನಡೆಸಿದ್ದಾರೆ. ತಮ್ಮ ನಿವಾಸದಲ್ಲಿಯೇ ಈ ಕುರಿತು ಮಾತುಕತೆ ನಡೆಸಿರುವ ಫೋಟೋಗಳನ್ನು ಸೋಷಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಚಂದ್ರಚೂಡ್, ಕಾನೂನು ಸಮರಕ್ಕೆ ಸಿದ್ದ ಎಂದು ಹೇಳಿದ್ದಾರೆ. ಇಷ್ಟಕ್ಕೂ, ಸಂಬರಗಿ ವಿರುದ್ಧ ಕಾನೂನು ಹೋರಾಟಕ್ಕೆ ಚಂದ್ರಚೂಡ್ ನೀಡುವ ಪ್ರಮುಖ ಕಾರಣಗಳೇನು ? ಸಂಬರಗಿ ಮಾಡಿರುವ ಅಪರಾಧಗಳೇನು ? ಅದೆಲ್ಲದ್ದರ ಬಗ್ಗೆ ಚಂದ್ರಚೂಡ್ ಅಧಿಕೃತವಾಗಿಯೇ ಸೋಷಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದೀಷ್ಟು…

  • ಸಾಮಾಜಿಕ ಕಾರ್ಯಕರ್ತ (ನಿಜವಾದ ಹೋರಾಟಗಾರರಲ್ಲಿ ಕ್ಷಮೆ ಕೇಳಿ )ನನ್ನ ಮೇಲೆ ವಿಪರೀತ ಕೇಸುಗಳನ್ನು ಹಾಕಲಾಗಿದೆ ಎಂದು ಪೋಸು ಕೊಡುವಾಗಲೇ -ಸಣ್ಣದೊಂದು ಮಾಹಿತಿ ತೆಗೆದರೆ ಈತ ಒಬ್ಬ ನೆಲಹಿಡುಕ ಅವುಗಳ ಹಳವಂಡದ ಕೇಸುಗಳವು. ಸೋನಿಯಾ ಗಾಂಧಿ ಮತ್ತು ಕುಸುಮಾ ಹನುಮಂತರಾಯರಪ್ಪ ಅವರ ವಿರುದ್ಧ ನೀಡಿದ ಸಂವಿಧಾನ ವಿರೋಧಿ ಹೇಳಿಕೆಗಳ ಕಾರಣಕ್ಕೆ ಕಾಂಗ್ರೆಸ್ ನ ಲೀಗಲ್ ಸೆಲ್ ಕೇಸು ಜಡಿದಿದೆ. ನಂತರ ದೇವನಾಥ್ ಎಂಬುವವರು ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.ಉಳಿದವುಗಳಲ್ಲೇ ಭೂತಾಯಿಯ ದಲ್ಲಾಳಿ (ಅವನದೇ ಹೇಳಿಕೆ)ತನದ ಕಾರಣದ ಕೇಸುಗಳು.
    -ಇವನ ಬಳಿ ಇರುವ ರೇಂಜ್ ರೇವರ್ ಕಾರು ಸಿಸಿಬಿ ಕೇಸು, ಬಿಡಿಎ ರವಿ ಎಂಬಾತ ,ದೇವನಾಥ್ ಎಂಬಾತನ ಗೆಳೆತನ -ಇವುಗಳ ಸಣ್ಣ ತನಿಖೆ ಮಾಡಿದಾಗ ತಿಳಿದದ್ದು ತನ್ನ ಹೆಸರಿನ ಲೋನ್ ಪಡೆದು ಕಾರ್ ಕೊಡಿಸಿ ಅದಕ್ಕೂ ಕಮಿಷನ್ ಪಡೆದು ರಾತ್ರೋರಾತ್ರಿ ತನ್ನದೇ ಕಾರೆಂದು ನಂಬಿದ ಸ್ನೇಹಿತನಿಗೇ ವಿಶ್ವಾಸ ದ್ರೋಹ ಮಾಡಿದ ಆಸಾಮಿ ಕಂಡವರ ಬಗ್ಗೆ ಸುಳ್ಳು ಆಸ್ತಿಗಳ ಲೆಕ್ಕ ಕೇಳುತ್ತಾನೆ.
  • ರಾಗಿಣಿ ಸಂಜನಾ ,ಅನುಶ್ರೀ ಜಮೀರ್ ಮಹಮದ್ ಮುಂತಾದವರ ಬಗ್ಗೆ ಈತ ಈವರೆಗೂ ಒಂದು ಔನ್ಸಿನ ಮಾಹಿತಿ ಕೊಟ್ಟಿಲ್ಲ. ಪೋಲೀಸರ ಕಾರ್ಯಚರಣೆಯ predictions ಗಳನ್ನ ಹೇಳುವ ಜ್ಯೋತಿಷಿ ಇವನು.ಸಿಸಿಬಿ ಕಛೇರಿಯಿಂದ ಬುಲಾವ್ ಹೋದಾಗ ಇವನು ಹಿಡಿದಿದ್ದ ಫೈಲನ್ನೇ ಝೂಮ್ ಮಾಡಿ ಮಾಡಿ ತೋರಿಸಿದವು ಕ್ಯಾಮರಾಗಳು.
    -ಇವನ ಮೂಲ ಊರು ಮರಾಠರ ಪ್ರಾಂತ್ಯದ್ದು.ಬಿಜೆಪಿಯ ಬೂಟಿನ ರುಚಿಗಾಗಿ ಹಪಹಪಿಸುವ ಇವನು ಕನ್ನಡ ವಿರೋಧಿ ಹಿಂದಿ ಹೇರಿಕೆಯ ಹೇಳಿಕೆಗಳನ್ನ ನಾವೆಲ್ಲ ನೋಡಿಯೂ ಕೇಳಿಯೂ ಕನ್ನಡಿಗ ಅಂತ ಒಪ್ಪಿಕೊಳ್ಳುವವರ ಎದೆಭಾಷೆಯಬಗ್ಗೆ ನನಗಂತೂ ಅನುಮಾನ. ಹಾಳುಬಿದ್ದು ಹೋಗಲಿ ರಾಜಕೀಯ ಕಾರಣಕ್ಕೆ ತಾಯಿಭಾಷೆಯ ಬಲಿಕೊಡುವ ಇಂತಹ ನೆಲಹಿಡುಕರೂ ಇದ್ದಾರೆಂದರೆ ನೆಟ್ಟಗೆ ಕನ್ನಡದ ಸ್ವರ ವ್ಯಂಜನಗಳ ಪರಿಚಯವಿಲ್ಲ.
  • ಇನ್ನು ಇವನಿಗೆ ಜೀವದ ಗೆಳೆಯರಿರುವುದು ನನಗೆ ಅರಿವಿಲ್ಲ .ಎಲ್ಲರ ಮಾತೂ ರೆಕಾರ್ಡ್ ಎಲ್ಲರ ವೀಡಿಯೋ ರೆಕಾರ್ಡೂ…. ಬಿಗ್ ಬಾಸ್ ನ ಎರಡನೇ ಇನ್ನಿಂಗ್ಸ್ ನ ಕ್ವಾರೈಂಟೈನ್ ಸಂದರ್ಭದಲಿ ಸ್ಪರ್ಧಿ ಅರವಿಂದ ಸೇರಿದಂತೆ ಹಲವರಿಗೆ ಮಧ್ಯಪಾನದ ಪಾರ್ಟಿಕೊಟ್ಟು ( ಚಾನಲ್ ನಿಯಮಾವಳಿ ವಿರೋಧಿಸಿ)ವಿಡಿಯೋ ಮಾಡಿದ .ಸಧ್ಯ ನಾನು ಇಂತಹ ಚಾಣಪತ್ರಿಗಳನ್ನ ತುಂಬಾ ನೋಡಿದವನು ಕ್ಷಣಮಾತ್ರದಲ್ಲಿ ಕುತಂತ್ರ ಕಂಡುಹಿಡಿದು ಹೆಣ್ಣುಮಕ್ಕಳು ಅವನ ರೂಮಿಂದ ಹೋಗುವಂತೆ ಮಾಡಿದೆ.ಆದರೂ ಅರವಿಂದರ ವೀಡಿಯೋ ಮಾಡಿ ಅದನ್ನು ಯಾವಾಗ ಬಿಡುಗಡೆ ಮಾಡಬೇಕೆಂದು ಚಂದನ್ ಎಂಬ ಟ್ರೋಲಿಗನಿಗೆ ಕೊಟ್ಟುಬಂದ
  • ಜೀವನದಲ್ಲಿ ತಪ್ಪೇ ಮಾಡಾದವರು ಇಲ್ಲವೆಂದಲ್ಲ.ಈಗ ನೋಡಿ ಶುಗರ್ ಡ್ಯಾಡಿ ಪುಸ್ತಕ ಅಂತಾನೆ ಜಮೀರ್ ದಾಯಿತೀಗ ನವೆಂಬರ್ ಒಂದರ ಮಹೂರ್ತಕ್ಕೆ ಆಡಿಯೋ ಬಿಡ್ತೀನಿ ಅಂತಾನೆ.ಮಾಧ್ಯಮಗಳು ಜೊಲ್ಲಿನ ನಾಲಿಗೆಯೊಡ್ಡುತ್ತವೆ.ಹೀಗೆ ತಿಂಗಳಾನುಗಟ್ಟಲೆ ತಾರೀಖು ನೀಡಿ ದಾಖಲೆ ಕೊಡ್ತೀನಿ ಎನ್ನುವ ಕಳ್ಳಾಟದಿಂದ ಆಗುವ ಅನಾಹುತಕ್ಕೆ ಮಾಧ್ಯಮಗಳೂ ಹೊಣೆ.ಇವನ ಬ್ಲಾಕ್ ಮೇಲ್ ತಂತ್ರದಲ್ಲಿ ಈಗ ಅವರೂ ಪಾಲುದಾರರು.
  • ಇವನ ಸಿಮ್ ಕಾರ್ಡ್ ಮೊಬೈಲ್ ಜಪ್ತಿ ಮಾಡಿ ಕಾರ್ ಡೀಲರ್ ಹೆಸರಿನ ನಂಬರ್ ಗಳ ತಲೆಹಿಡುಕರ ಪಟ್ಟಿ ತೆಗೆದರೆ ಇವನ ಪತ್ನಿ ಸಂಗೀತ ಸಂಬರ್ಗಿ ಪಾಪ ಅದು ಹೇಗೆ ಮತ್ತೆ ಇವನ ಮುಖ ನೋಡುತ್ತಾರೋ?
    -ಖ್ಯಾತ ಗಾಯಕ ರಘುಧೀಕ್ಷಿತ್ ಬಗ್ಗೆ ಡ್ರಗ್ಸ್ ಆರೋಪ ಮಾಡಿದ.ರಘು ವ್ಯಯಕ್ತಿಕ ಜೀವನದ ನೋವು ನಲಿವುಗಳೇನೇ ಇರಲಿ ಇವನ ಆರೋಪವನ್ನ ಧೂಳಂತೆ ಕೊಡವಿಕೊಂಡು ಎದ್ದರು.ಈ ಗಿಂಡಿಮಾಣಿ ರಘು ಅವರನ್ನ ಇನ್ನೋವೇಟಿವ್ ಸಿಟಿಯಲ್ಲಿ ಮಾತಾದರೂ ಆಡಿಸಲು ತುಂಬಾ ಕರುಳು ಸವೆಸಿದರೂ ಪ್ರಯೋಜನವಾಗಲಿಲ್ಲ.ಅಷ್ಟಕ್ಕೂ ಡ್ರಗ್ ಕುರಿತಂತೆ ಪಾಲುದಾರರಿಗೆ ಶಿಕ್ಷೆಯಾಗಲಿ .ಜೊತೆಗೆ ಇಂತಹ ನಕಲಿಗಳ ಮುಖವಾಡ ಬಯಲಾಗಲಿ. ಈ ಕುರಿತಂತೆ ಯಾವ ವೇದಿಕೆಯಲ್ಲಾದರೂ ಚರ್ಚೆಗೆ ಸಿದ್ಧ…..
    ಸಾಮಾಜಿಕ ಹೋರಾಟಗಾರ ಪ್ರಶಾಂತ್‌ ಸಂಬರಗಿ ವಿರುದ್ಧ ಚಕ್ರವರ್ತಿ ಚಂದ್ರಚೂಡ್‌ ಮಾಡಿರುವ ಆರೋಪಗಳಿವು. ಸದ್ಯಕ್ಕೆ ಅವರು ಇವೆಲ್ಲವನ್ನು ಇಟ್ಟುಕೊಂಡೇ ಕಾನೂನು ಸಮರ ನಡೆಸುವುದಾಗಿ ಹೇಳುತ್ತಿದ್ದಾರೆ. ಮುಂದೆನದು ಕಾನೂನು ಹೋರಾಟ. ಅದು ಎಲ್ಲಿಗೆ ಹೋಗಿ ನಿಲ್ಲತ್ತೋ ಕಾದು ನೋಡಬೇಕಿದೆ.
  • ಎಂಟರ್‌ ಟೈನ್‌ ಮೆಂಟ್‌ ಬ್ಯೂರೋ ಸಿನಿಲಹರಿ
Categories
ಸಿನಿ ಸುದ್ದಿ

ರೆಡ್‌ ಶೇಡ್‌ ಟೊಮೆಟೊ ! ದಿ ಕಲರ್‌ ಆಫ್‌ ಟೊಮೆಟೊ ಟೀಸರ್‌ಗೆ ಜನ ಮೆಚ್ಚುಗೆ

“ರಕ್ತ ಚಿಮ್ಮುವ ಅಖಾಡದಲ್ಲಿ ನಿಷ್ಠೆಯ ನೂರು ತಲೆಗಳು ಬಿದ್ದರೂ, ಪ್ರತಿಷ್ಠೆಯ ತಲೆ ಮಾತ್ರ ಬೀಳಬಾರದು… ಮಾರ್ಕೆಟ್‌ನಲ್ಲಿ ಮಾರೋಕೆ ಏನ್‌ ತಂದಿದ್ದೇವೆ ಅನ್ನೋದರ ಮೇಲೆ ಬೆಲೆ..” ಇದಿಷ್ಟೇ ಡೈಲಾಗ್‌ ಆ ಟೀಸರ್‌ನಲ್ಲಿದೆ. ಅದರ ಮೇಕಿಂಗ್‌ ನೋಡಿದವರಿಗೆ ಅದೊಂದು ಪಕ್ಕಾ ಮಾಸ್‌ ಫೀಲ್‌ ಇರುವ ಸಿನಿಮಾ ಎನಿಸದೇ ಇರದು. ಅಷ್ಟರಮಟ್ಟಿಗೆ ನಿರ್ದೇಶಕ ತಾಯಿ ಲೋಕೇಶ್‌ ಕಟ್ಟಿಕೊಟ್ಟಿದ್ದಾರೆ. ಶೀರ್ಷಿಕೆ ಹೇಳುವಂತೆಯೇ, ಇದೊಂದು ಟೊಮೆಟೊ ಕಥೆ ಎನಿಸುತ್ತೆ. ಟೊಮ್ಯಾಟೊ ಕಲರ್‌ ರೆಡ್‌ ಆಗಿದ್ದರೂ, ಅದರಲ್ಲಿ ರೆಡ್‌ ಶೇಡ್‌ ಜಾಸ್ತೀನೆ ಇರಬಹುದಾ ಎಂಬ ಪ್ರಶ್ನೆ ಟೀಸರ್‌ ನೋಡಿದವರಿಗೆ ಗೊತ್ತಾಗುತ್ತೆ. ಇದು ವಾಸ್ತವತೆಗೆ ಹತ್ತಿರದ ಕಥೆ ಅನ್ನುವುದನ್ನು ಹೇಳುತ್ತದೆ

ಕನ್ನಡದಲ್ಲಿ ದಿನ ಕಳೆದಂತೆ ಹೊಸಬರ ಸಿನಿಮಾಗಳು ಶುರುವಾಗುತ್ತಲೇ ಇವೆ. ಅದರಲ್ಲೂ ಹೊಸ ಪ್ರತಿಭಾವಂತರು ಅಂದರೆ ಸುಮ್ಮನೆ ಅಲ್ಲ ಬಿಡಿ. ಮೊದಲ ಪ್ರಯತ್ನದಲ್ಲೇ ಸುದ್ದಿಯಾಗಿಬಿಡುತ್ತಾರೆ. ಇಲ್ಲೀಗ ಹೇಳಹೊರಟಿರುವುದು ಹೊಸ ಸಿನಿಮಾದ ಫಸ್ಟ್‌ ಲುಕ್‌ ಕುರಿತು. ಅಷ್ಟೇ ಅಲ್ಲ, ಈಗಾಗಲೇ ಆ ಚಿತ್ರದ ಟೀಸರ್‌ ಕೂಡ ಬಿಡುಗಡೆಯಾಗಿದೆ. ಪ್ರತಾಪ್‌ ನಾರಾಯಣ್‌ ಅಭಿನಯದ ಈ ಚಿತ್ರದ ಫಸ್ಟ್‌ ಲುಕ್‌ ವಿಶೇಷವೆನಿಸಿದೆ. ಹೌದು, ಅ ಚಿತ್ರದ ಹೆಸರು. “ದಿ ಕಲರ್‌ ಆಫ್‌ ಟೊಮೆಟೊ” ಚಿತ್ರದ ಶೀರ್ಷಿಕೆಯೇ ವಿಭಿನ್ನ ಅಂದುಕೊಂಡರೆ, ಕಥೆ ಅದಕ್ಕಿಂತಲೂ ವಿಭಿನ್ನವಾಗಿರುತ್ತೆ ಎನ್ನುವುದರಲ್ಲಿ ಎರಡು ಮಾತಿಲ್ಲ ಬಿಡಿ.

ಯಾಕೆಂದರೆ, ಈ ಚಿತ್ರದ ಕಥೆ ಬರೆದಿರೋದು. ಕೋಟಿಗಾನಹಳ್ಳಿ ರಾಮಯ್ಯ. ಈ ಹೆಸರೇ ಸಾಕು ಅದ್ಭುತ ಕಥೆಗಾರ ಅನ್ನುವುದಕ್ಕೆ. ಈಗಾಗಲೇ “ಮೂಕ ಹಕ್ಕಿ” ಸಿನಿಮಾನೇ ಸಾಕು ಅವರ ಬರಹ ಎಂಥದ್ದು ಅಂತ ತಿಳಿಯೋಕೆ. ಅದಾಗಲೇ ಸಾಬೀತು ಮಾಡಿರುವ ಕೋಟಿಗಾನಹಳ್ಳಿ ರಾಮಯ್ಯ, ಈಗ ಮತ್ತೊಂದು ಸಿನಿಮಾ ಮೂಲಕ ಹೊಸ ವಿಷಯ ಹೇಳೋಕೆ ಬಂದಿದ್ದಾರೆ. ಅವರ ಬರಹದಲ್ಲಿ ಸಾಕಷ್ಟು ವಿಶೇಷತೆಗಳಿರುತ್ತವೆ ಎನ್ನುವುದನ್ನು ಹೆಚ್ಚೇನು ಹೇಳಬೇಕಿಲ್ಲ. ಇನ್ನೂ ಬಿಡುಗಡೆಯ ಹಂತದಲ್ಲಿರುವ ಕನ್ನೇರಿ ಸಿನಿಮಾಗೂ ಕೋಟಿಗಾನಹಳ್ಳಿ ರಾಮಯ್ಯ ಅವರದೇ ಬರವಣಿಗೆ ಇದೆ. ಈಗ “ದಿ ಕಲರ್‌ ಆಫ್‌ ಟೊಮೆಟೊ” ಸಿನಿಮಾಗೂ ಕಥೆ ಬರೆದಿದ್ದಾರೆ.
ಈ ಸಿನಿಮಾಗೆ ಸ್ವಾತಿ ಕುಮಾರ್ ನಿರ್ಮಾಪಕರು. ತಾಯಿ ಲೋಕೇಶ್ ನಿರ್ದೇಶನ ಮಾಡುತ್ತಿರುವ ಸಿನಿಮಾ ಇದು. ಈಗಾಗಲೇ ಚಿತ್ರದ ಫಸ್ಟ್‌ ಲುಕ್‌ ಬಿಡುಗಡೆಯಾಗಿದೆ. ಅದರೊಂದಿಗೆ ಟೀಸರ್‌ ಕೂಡ ರಿಲೀಸ್‌ ಮಾಡಲಾಗಿದೆ.

“ರಕ್ತ ಚಿಮ್ಮುವ ಅಖಾಡದಲ್ಲಿ ನಿಷ್ಟೆಯ ನೂರು ತಲೆಗಳು ಬಿದ್ದರೂ, ಪ್ರತಿಷ್ಟೇಯ ತಲೆ ಮಾತ್ರ ಬೀಳಬಾರದು… ಮಾರ್ಕೆಟ್‌ನಲ್ಲಿ ಮಾರೋಕೆ ಏನ್‌ ತಂದಿದ್ದೇವೆ ಅನ್ನೋದರ ಮೇಲೆ ಬೆಲೆ..” ಇದಿಷ್ಟೇ ಡೈಲಾಗ್‌ ಆ ಟೀಸರ್‌ನಲ್ಲಿದೆ. ಅದರ ಮೇಕಿಂಗ್‌ ನೋಡಿದವರಿಗೆ ಅದೊಂದು ಪಕ್ಕಾ ಮಾಸ್‌ ಫೀಲ್‌ ಇರುವ ಸಿನಿಮಾ ಎನಿಸದೇ ಇರದು.

ದಿ ಕಲರ್‌ ಆಫ್‌ ಟೊಮೆಟೊ ಟೀಸರ್

ಅಷ್ಟರಮಟ್ಟಿಗೆ ನಿರ್ದೇಶಕ ತಾಯಿ ಲೋಕೇಶ್‌ ಕಟ್ಟಿಕೊಟ್ಟಿದ್ದಾರೆ. ಚಿತ್ರದ ಶೀರ್ಷಿಕೆ ಹೇಳುವಂತೆಯೇ, ಇದೊಂದು ಟೊಮ್ಯಾಟೊ ಕಥಾಹಂದರ ಹೊಂದಿರುವ ಸಿನಿಮಾ. ಟೊಮೆಟೊ ಕಲರ್‌ ರೆಡ್‌ ಆಗಿದ್ದರೂ, ಅದರಲ್ಲಿ ರೆಡ್‌ ಶೇಡ್‌ ಜಾಸ್ತೀನೆ ಇರಬಹುದಾ ಎಂಬ ಪ್ರಶ್ನೆ ಟೀಸರ್‌ ನೋಡಿದವರಿಗೆ ಗೊತ್ತಾಗುತ್ತೆ.

ಅದರಲ್ಲೂ, ಇದು ವಾಸ್ತವತೆಗೆ ಹತ್ತಿರವಾಗಿರುವ ಕಥೆ ಅನ್ನುವುದನ್ನು ಈ ಟೀಸರ್‌ ಹೇಳುತ್ತದೆ. ರೈತ ಇಂದು ಟೊಮೆಟೊ ಬೆಳೆಗೆ ಬೆಂಬಲ ಸಿಗದೆ ಪರದಾಡುತ್ತಿದ್ದಾನೆ. ಇಂತಹ ಸಂದರ್ಭದಲ್ಲಿ ರೈತ ರೊಚ್ಚಿಗೆದ್ದರೆ ರಕ್ತಪಾತವೂ ಗ್ಯಾರಂಟಿ ಅನ್ನೋದು ಯಾವಾಗಲೋ ಸಾಬೀತಾಗಿದೆ. ಅದೇನೆ ಇರಲಿ, ಇಲ್ಲಿ ನಿರ್ದೇಶಕ ತಾಯಿ ಲೋಕೇಶ್‌ ಏನು ಹೇಳೋಕೆ ಹೊರಟಿದ್ದಾರೋ ಗೊತ್ತಿಲ್ಲ. ಟೀಸರ್‌ ನೋಡಿದ ಮೇಲೆ, ಅದೊಂದು ಪಕ್ಕಾ ಮಾಸ್‌ ಎಲಿಮೆಂಟ್ಸ್‌ ಇರುವ ಸಿನಿಮಾ ಅನ್ನೋದು ಗೊತ್ತಾಗುತ್ತೆ. ಟೀಸರ್‌ ಮೇಕಿಂಗ್‌ ಜೊತೆಗೆ ಹಿನ್ನೆಲೆ ಸಂಗೀತ ಇಲ್ಲಿ ಗಮನಸೆಳೆಯುತ್ತದೆ. ಅಲ್ಲೊಂದು ಕುತೂಹಲವೂ ಇದೆ. ಆ ಕುತೂಹಲ ಏನೆಂಬುದಕ್ಕೆ ಸಿನಿಮಾ ಬರೋವರೆಗೆ ಕಾಯಬೇಕು.

ನಿರ್ದೇಶಕ ತಾಯಿ ಲೋಕೇಶ್‌ ಅವರು ರಂಗಭೂಮಿ ಹಿನ್ನೆಲೆಯಿಂದ ಬಂದವರು. ಹಾಗಾಗಿ ಒಂದಷ್ಟು ಹೋರಾಟದ ಛಾಯೆ ಈ ಟೀಸರ್‌ನಲ್ಲೂ ಈಗಾಗಲೇ ಎದ್ದು ಕಾಣುತ್ತಿದೆ. ಸಾಂಸ್ಕೃತಿಕ ಲೋಕದ ಬಗ್ಗೆ ಅಪಾರ ಒಲವು ಇಟ್ಟುಕೊಂಡಿರುವ ತಾಯಿ ಲೋಕೇಶ್, ಹಲವು ಬೀದಿ ಬದಿಯ ಬದುಕನ್ನು, ಪಾತ್ರಗಳನ್ನು ತಮ್ಮ ಕ್ಯಾಮೆರಾದಲ್ಲಿ ಸೆರೆ ಹಿಡಿದು ದಾಖಲಿಸಿದ್ದಾರೆ.

ದೊಡ್ಡವರ, ಚಿಂತಕರ ಒಡನಾಟವಿರಿಸಿಕೊಂಡಿರುವ ಅವರಿಗೆ ಸಿನಿಮಾ ಹುಚ್ಚು ಹೆಚ್ಚು. ಸಿನಿಮಾ ಕಥೆ ಬಗ್ಗೆ ಅಪಾರ ಆಸಕ್ತಿ ತೋರುವ ಅವರಿಗೆ ಸಿನೆಮಾವನ್ನು ಹೇಗೆ ಕಟ್ಟಬೇಕು ಎಂಬ ಕುರಿತು ಅರಿವಿದೆ. ಒಳ್ಳೆಯ ಆಲೋಚನೆಗಳೊಂದಿಗೆ “ದಿ ಕಲರ್‌ ಆಫ್‌ ಟೊ‌ಮೆಟೊ” ಸಿನಿಮಾ ಮಾಡಲು ಹೊರಟಿರುವ ಅವರ ತಂಡಕ್ಕೆ “ಸಿನಿಲಹರಿ” ಶುಭ ಹಾರೈಸಲಿದೆ.

Categories
ಸಿನಿ ಸುದ್ದಿ

ಕಾಂಟ್ರೋವರ್ಸಿ ಚೇತನ್‌- ಹೀಗೇಕಾದ್ರೂ ಆ ದಿನಗಳ ಹೀರೋ ?

ಚೇತನ್‌ ಒಬ್ಬ ನಟ. ಹಾಗೆಯೇ ಒಬ್ಬ ಸಾಮಾಜಿಕ ಹೋರಾಟಗಾರ. ಅವರಿಗಿರುವ ಅವೆರೆಡು ಬ್ರಾಂಡ್‌ ಗಳ ಬಗ್ಗೆ ಅನುಮಾನವೇ ಇಲ್ಲ. ಅದರಾಚೆ ಅವರು ಯಾರು ? ಅವರ ಹಿಂದಿನ ಶಕ್ತಿಯಾವುದು ? ಹೋಗ್ಲಿ ಅವರು ಒಪ್ಪಿ-ಅಪ್ಪಿಕೊಂಡಿರುವ ಸಿದ್ದಾಂತವಾದ್ರು ಯಾವ್ದು? ಈ ಪ್ರಶ್ನೆಗಳಿಗೆ ಈಗಲೂ ಉತ್ತರ ಇಲ್ಲ. ಹಾಗೆಯೇ ಚೇತನ್‌ ಅವರದ್ದು ಎಡಪಂಥವೂ ಅಲ್ಲ ಬಲಪಂಥವೂ ಅಲ್ಲ.

ನಟ ಚೇತನ್‌ ಅಹಿಂಸ ಹೀಗೇಕಾದ್ರೂ ? ಹೀಗಂತ ಕೇಳ್ತೀರೋದು ನಾವಲ್ಲ, ಬದಲಿಗೆ ಕನ್ನಡದ ಸಿನಿಮಾ ಪ್ರೇಕ್ಷಕರು ಹಾಗೂ ಅವರನ್ನು ಹತ್ತಿರದಿಂದ ಬಲ್ಲವರು. ಯಾಕಂದ್ರೆ ನಟ ಚೇತನ್‌ ದಿನೇ ದಿನೇ ತಾವೊಬ್ಬ ಕಾಂಟ್ರೋವರ್ಷಿ ಹೀರೋ ಎನ್ನುವುದನ್ನು ಪ್ರೂ ಮಾಡುತ್ತಲೇ ಹೊರಟಿದ್ದಾರೆ. ಕೊರೋನಾ ನಂತರದ ಈ ದಿನಗಳಲ್ಲಿ ಉಪೇಂದ್ರ ಆಯ್ತು, ಕುಮಾರ ಸ್ವಾಮಿ ಆಯ್ತು, ಕೊನೆಗೆ ಸಿದ್ದರಾಮಯ್ಯ ಅವರನ್ನು ಬಿಡದೆ ಅವರನ್ನು ಟೀಕಿಸಿದ್ದು ಮುಗೀತು. ಅಲ್ಲಿಂದೀಗ ಕಾಂಗ್ರೆಸ್‌ಗೂ ಆರ್‌ಎಸ್‌ಎಸ್‌ ಸಂಘಟನೆಯ ನಂಟು ಅಂಟು ಹಾಕಿ, ಬಾಯಿಗೆ ಬಂದಂತೆ ಟೀಕಿಸಿದ್ದಾರೆ. ಸೋಷಲ್‌ ಮೀಡಿಯಾದಲ್ಲಿ ಅವರು ಹಾಕಿರುವ ಸ್ಟೇಟಸ್ ದೊಡ್ಡ ವಿವಾದಕ್ಕೂ ನಾಂದಿ ಹಾಡಿದೆ. ಉಪೇಂದ್ರ ಬಿಟ್ರು, ಕುಮಾರ ಸ್ವಾಮಿ ಬಿಟ್ರು, ಹೋಗ್ಲಿ ಬಿಡಿ ಆತ ನಮ್ಮಡುಗ ಅಂತ ಸಿದ್ದರಾಮಯ್ಯ ಕೂಡ ಬಿಟ್ರು, ಹಾಗಂತ ಇಡೀ ಪಾರ್ಟಿಗೇ ಡ್ಯಾಮೇಜ್‌ ಮಾಡಲು ಹೊರಟ್ರೆ, ಕಾಂಗ್ರೆಸ್‌ನವ್ರು ಬಿಡ್ತಾರಾ?

ಸದ್ಯಕ್ಕೆ ಗೊತ್ತಾಗಿರುವ ಮಾಹಿತಿ ಪ್ರಕಾರ ನಟ ಚೇತನ್‌ ಅವರ ವಿರುದ್ಧ ಸೋಷಲ್‌ ಮೀಡಿಯಾದಲ್ಲಿಯೇ ತಕ್ಕ ಉತ್ತರ ನೀಡಲು ಕಾಂಗ್ರೆಸ್‌ ಮುಂದಾಗಿದೆ. ಮುಂದೆಯೂ ಹೀಗೆಯೇ ಅರ್ಥಹೀನ ಟೀಕೆ ಮಾಡಿದರೆ ಸರಿಯಾದ ಉತ್ತರ ನೀಡಲು ಕಾಂಗ್ರೆಸ್‌ ಮುದಾಗಿದೆಯಂತೆ. ಇರಲಿ ಬಿಡಿ, ಅದನ್ನ ಅವರವರು ನೋಡಿ ಕೊಳ್ತಾರೆ. ಪ್ರಶ್ನೆ ಇರೋದು ನಟ ಚೇತನ್‌ ಹೀಗೇಕೆ ಅಂತ. ಹಾಗಂತ ಸಿನಿಮಾ ಪ್ರೇಕ್ಷಕರಿಗೆ ಈ ಪ್ರಶ್ನೆ ಕಾಡ್ತಿರೋದು ಇದೇ ಮೊದಲು ಅಲ್ಲ. ಅವರು ನಟರಾಗಿ ಕನ್ನಡ ಚಿತ್ರರಂಗಕ್ಕೆ ಬಂದ ಆ ದಿನಗಳಿಂದಲೂ ನಟ ಚೇತನ್‌ ಕೊಂಚ ವಿಚಿತ್ರವಾಗಿಯೇ ಕಾಣಿಸಿಕೊಂಡಿದ್ದು ನಿಮಗೆಲ್ಲ ಗೊತ್ತೇ ಇದೆ. ಅದು ಅವರ ಖಾಸಗಿ ಬದುಕಿನ ಜತೆಗೆ ಸಿನಿ ಕೆರಿಯರ್‌ ದೃಷ್ಟಿಯಿಂದಲೂ ಹೌದು. ಯುವ ನಿರ್ದೇಶಕ ಕೆ.ಎಂ. ಚೈತನ್ಯ ನಿರ್ದೇಶನ ʼ ಆ ದಿನಗಳುʼ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿಯಾದವರು ನಟ ಚೇತನ್‌. ಇದು ಅವರ ಚೊಚ್ಚಲ ಸಿನಿಮಾ. ಅಮೆರಿಕದಲ್ಲಿದ್ದ ಹುಡುಗ ದಿಢೀರ್‌ ಕನ್ನಡಕ್ಕೆ ಬಂದು ದೊಡ್ಡ ಸಂಚಲನ ಸೃಷ್ಟಿಸಿದರು.

ಮಾಜಿ ಡಾನ್‌ ಅಗ್ನಿ ಶ್ರೀಧರ್‌ ಅವರದ್ದೇ ಬದುಕಿನ ಈ ಕಥಾ ಚಿತ್ರದಲ್ಲಿ ನಟ ಚೇತನ್‌ ಭರವಸೆಯ ತಾರೆಯಾಗಿ ಕಾಣಿಸಿಕೊಂಡರು. ಇನ್ನೇನು ಬಹುಬೇಡಿಕೆಯ ನಟನಾಗಿ ಅವರು ಕನ್ನಡ ಚಿತ್ರರಂಗದಲ್ಲಿ ಬ್ಯುಸಿ ನಟ ಎನಿಸಿಕೊಳ್ತಾರೆ ಎನ್ನುವ ಸಿನಿಮಾ ಪ್ರೇಕ್ಷಕರ ನಿರೀಕ್ಷೆಯ ನಡುವೆಯೇ ಚೇತನ್‌ ಕಾಣೆಯಾದರು. ವಾಪಾಸ್‌ ಅಮೆರಿಕಕ್ಕೆ ಹೋದರು. ಒಂದಷ್ಟು ದಿನಗಳ ನಂತರ ಮತ್ತೆ ಅಲ್ಲಿಂದ ಬಂದವರುʼ ಮೈನಾʼ ದಂತಹ ಬ್ಲಾಕ್‌ ಬಸ್ಟರ್‌ ಚಿತ್ರದಲ್ಲಿ ಅಭಿನಯಿಸಿದರು. ಕನ್ನಡ ಚಿತ್ರರಂಗದಲ್ಲಿ ಮತ್ತೆ ಹೊಸ ಭರವಸೆ ಮೂಡಿಸಿದರು. ಆದ್ರೇನು, ಮುಂದೆ ಮತ್ತೆ ಚೇತನ್‌ ನಟನೆಯಾಚೆ ಹೋರಾಟ, ಸಾಮಾಜಿಕ ಕೆಲಸ ಅಂತೆಲ್ಲ ಬ್ಯುಸಿಯಾದರು. ಅವರ ಈ ನಿಲುವು ಪ್ರಶ್ನಾತೀತವೇ. ಯಾಕಂದ್ರೆ ಪ್ರತಿಯೊಬ್ಬರ ಬದುಕಿನ ಆಯ್ಕೆ, ಇನ್ನಾರೋ ಬಯಸಿದಂತೆಯೇ ಇರಬೇಕಿಲ್ಲ. ತಾನೊಬ್ಬ ನಟನಾಗುವುದಕ್ಕಿಂತ ಸಾಮಾಜಿಕ ಹೋರಾಟಗಾರನಾಬೇಕಿದೆ ಅಂತ ಚೇತನ್‌ ಅದಕ್ಕೆ ಸ್ಪಷ್ಟನೆ ಕೊಟ್ಟರು. ಕನ್ನಡ ಚಿತ್ರರಂಗದ ಮಟ್ಟಿಗೆ ಚೇತನ್‌ ಅವರನ್ನು ಇದು ಭಿನ್ನವಾದ ಸ್ಥಾನದಲ್ಲಿ ನಿಲ್ಲಿಸಿತು. ಯಾಕಂದ್ರೆ ನಟರಂದ್ರೆ, ಸಿನಿಮಾ ಮಾಡಬೇಕು, ಸ್ಟಾರ್‌ ಆಗಿ ಮೆರೀಬೇಕು, ಆ ಮೂಲಕ ಐಷಾರಾಮಿಯ ಕಂಪೋರ್ಟ್‌ ಜೋನ್‌ ನಲ್ಲಿ ಕುಳಿತಿರಬೇಕು ಅನ್ನೋ ಸಿನಿಮಾದ ರಂಗದ ಸಿದ್ಧ ಸೂತ್ರಗಳನ್ನು ಬ್ರೇಕ್‌ ಮಾಡಿ, ಅವರು ಜನರ ಪರವಾಗಿ ಬೀದಿಗಿಳಿಬೇಕು ಅಂದಾಗ ವಾಹ್ಹ್….‌ ಇಂತಹ ನಟ ಕನ್ನಡಕ್ಕೆ ಬೇಕಿತ್ತು ಅಂತ ಮೆಚ್ಚಿಕೊಂಡು ಮಾತನಾಡಿದವರು ಕಮ್ಮಿ ಇರಲಿಲ್ಲ.

ಲಿಂಗಾಯತ ಪ್ರತ್ಯೇಕ ಧರ್ಮದ ವಿಚಾರ, ಸಿನಿಮಾ ರಂಗದಲ್ಲಿನ ಮೀಟೂ ಪ್ರಕರಣ, ಸರ್ಕಾರದ ಬೆಲೆ ಏರಿಕೆ ಧೋರಣೆಗಳು.. ಹೀಗೆ ಒಂದಲ್ಲ ನಟ ಚೇತನ್‌ ಪ್ರತಿಯೊಂದಕ್ಕೂ ಇಲ್ಲಿ ಒಬ್ಬ ಸಾಮಾಜಿಕ ಹೋರಾಟಗಾರನಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಆದರೆ ಇಲ್ಲೆಲ್ಲವೂ ಅನಗತ್ಯ ವಿವಾದವೇ ಆಗಿದೆ.

ಆ ಹೊತ್ತಿಗೆ ಅವರೊಬ್ಬ ಸಾಮಾಜಿಕ ಹೋರಾಟಗಾರನಾಗಿ ಮಾತ್ರ ಗುರುತಿಸಿಕೊಂಡಿದ್ದರು. ಅಲ್ಲಿಂದಾಚೆ ಯಾವುದೇ ಈಸಂ ಗೂ ಸಿಲುಕಿರಲಿಲ್ಲ. ಹಾಗಾಗಿ ಕನ್ನಡದ ಅದೆಷ್ಟೋ ಸಿನಿಮಾ ಪ್ರೇಕ್ಷಕರು ನಟ ಚೇತನ್‌ ಅವರನ್ನು ಒಬ್ಬ ಡಿಫೆರೆಂಟ್‌ ಆಕ್ಟರ್‌ ಅಂತಲೇ ಮಾತನಾಡಿದ್ದರು. ಮುಂದೇನಾಯ್ತೋ ಗೊತ್ತಿಲ್ಲ, ಚೇತನ್‌ ನಿಲುವು, ನಡೆ ಎಲ್ಲವೂ ಬದಲಾದವು. ಯಾರ ಅಂಕೆಗೂ ಸಿಲುಕದೆ ಹುಚ್ಚು ಕುದುರೆಯಂತೆ ಓಡತೊಡಗಿದರು ಚೇತನ್. ರಾಜಕೀಯ, ಸಾಮಾಜಿಕ, ಆರ್ಥಿಕ ರಂಗಗಳು ಸೇರಿದಂತೆ ಪ್ರಚಲಿತ ವಿದ್ಯಮಾನಗಳಿಗೆಲ್ಲ ಪ್ರತಿಕ್ರಿಯೆ ನೀಡತೊಡಗಿದರು. ವಿವಾದವೋ, ವಿಚಿತ್ರವೋ ದೊಡ್ಡ ಮಟ್ಟದ ಪ್ರಚಾರದಲ್ಲಿ ಚೇತನ್‌ ಧಗ ಧಗಸಿತೊಡಗಿದರು. ಮೊದಲೆಲ್ಲ ಅವರನ್ನು ಮೆಚ್ಚಿಕೊಂಡು ಮಾತನಾಡಿದವರೆಲ್ಲ ಚೇತನ್‌ ವಿರುದ್ಧ ಗಡುಗತೊಡಗಿದರು. ಲಿಂಗಾಯತ ಪ್ರತ್ಯೇಕ ಧರ್ಮದ ವಿಚಾರ, ಸಿನಿಮಾ ರಂಗದಲ್ಲಿನ ಮೀಟೂ ಪ್ರಕರಣ, ಸರ್ಕಾರದ ಬೆಲೆ ಏರಿಕೆ ಧೋರಣೆಗಳು.. ಹೀಗೆ ಒಂದಲ್ಲ ನಟ ಚೇತನ್‌ ಪ್ರತಿಯೊಂದಕ್ಕೂ ಇಲ್ಲಿ ಒಬ್ಬ ಸಾಮಾಜಿಕ ಹೋರಾಟಗಾರನಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಆದರೆ ಇಲ್ಲೆಲ್ಲವೂ ಅನಗತ್ಯ ವಿವಾದವೇ ಆಗಿದೆ. ಚೇತನ್‌ ಪ್ರಸ್ತಾಪಿಸಿದ ವಿಷಯ ಎಷ್ಟು ಗಂಭೀರವಾದದ್ದು ಎನ್ನುವುದಕ್ಕಿಂತ ಚೇತನ್‌ ಅವರನ್ನೇ ಟಾರ್ಗೆಟ್‌ ಮಾಡಿ, ಟೀಕಿಸಲಾಯಿತು. ಮೀಟೂ ಪ್ರಕರಣದಲ್ಲಂತೂ ಚೇತನ್‌ ಕೊಲೆ ಬೆದರಿಕೆ ಎದುರಿಸಿದರು. ಚಿತ್ರರಂಗ ಕೂಡ ಅವರನ್ನು ದೂರವೇ ನಿಲ್ಲಿಸಿತು. ಯಾಕಂದ್ರೆ, ಇಲ್ಲಿ ಚೇತನ್‌ ಅಂದ್ರೆ ಒಬ್ಬ ನಟ ಎಂದಷ್ಟೇ ಕಂಡಿತೇ ಹೊರತು, ಅದರಾಚೆ ಅವರಾರು ಅನ್ನೋದೇ ಇಲ್ಲಿ ದೊಡ್ಡ ಪ್ರಶ್ನೆ ಆಗಿ ಉಳಿಯಿತು.

ಹೌದು, ಅದು ನಿಜವೂ ಕೂಡ, ಚೇತನ್‌ ಅಂದ್ರೆ ಯಾರು ಎನ್ನುವುದು ಈಗಲೂ ಎಲ್ಲರಿಗೂ ಇರುವ ಯಕ್ಷ ಪ್ರಶ್ನೆ. ಚೇತನ್‌ ಒಬ್ಬ ನಟ ಹಾಗೆಯೇ ಒಬ್ಬ ಸಾಮಾಜಿಕ ಹೋರಾಟಗಾರ. ಅವರಿಗಿರುವ ಅವೆರೆಡು ಬ್ರಾಂಡ್‌ ಗಳ ಬಗ್ಗೆ ಅನುಮಾನವೇ ಇಲ್ಲ. ಅದರಾಚೆ ಅವರು ಯಾರು ? ಅವರ ಹಿಂದಿನ ಶಕ್ತಿಯಾವುದು ? ಹೋಗ್ಲಿ ಅವರು ಒಪ್ಪಿ-ಅಪ್ಪಿಕೊಂಡಿರುವ ಸಿದ್ದಾಂತವಾದ್ರು ಯಾವ್ದು? ಈ ಪ್ರಶ್ನೆಗಳಿಗೆ ಈಗಲೂ ಉತ್ತರ ಇಲ್ಲ. ಚೇತನ್‌ ಅವರದ್ದು ಎಡಪಂಥಿಯವೋ, ಬಲಪಂಥೀಯವೋ ಅದರಲ್ಲೂ ಗೊಂದಲ ಇದೆ. ಹಾಗಂತ ಕಾಂಗ್ರೆಸ್‌, ಬಿಜೆಪಿ, ಜೆಡಿಎಸ್‌ ಪಕ್ಷಗಳಲ್ಲಿ ಅವರು ಒಲವು ಹೊಂದಿರುವ ಪಕ್ಷ ಯಾವುದು ಅಂತಲೂ ಹೇಳೋ ಹಾಗಿಲ್ಲ. ಒಂದೊಮ್ಮೆ ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಕುಮಾರ ಸ್ವಾಮಿ ಅವರನ್ನು ಹಿಗ್ಗಾಮುಗ್ಗಾ ಟೀಕಿಸಿದ್ದ ಚೇತನ್‌, ಈಗ ಈಗ ಕಾಂಗ್ರೆಸ್‌ -ಬಿಜೆಪಿ ಎರಡು ಆರ್‌ ಎಸ್‌ ಎಸ್‌ ನ ಕೊಂಬೆಗಳೇ ಅಂತ ಟೀಕಿಸಿ ದೊಡ್ಡ ವಿವಾದ ಸೃಷ್ಟಿಸಿದ್ದಾರೆ. ಅಲ್ಲಿಂದಾಚೆ, ಚೇತನ್‌ ಅವರು ಒಬ್ಬ ಕಮ್ಯುನಿಸ್ಟಾ? ಅದು ಅಲ್ಲ. ಕಮ್ಯುನಿಸ್ಟರ ಮೇಲೂ ನಂಬಿಕೆ ಇಲ್ಲ. ಉಳಿದಂತೆ ಉಪೇಂದ್ರ ಅವರ ಪ್ರಜಾಕೀಯವನ್ನು ಅವರು ಒಪ್ಪಿಕೊಂಡಿಲ್ಲ. ಉಪೇಂದ್ರ ಅವರು ಕೂಡ ಚೇತನ್‌ ಅವರ ಟೀಕೆಯ ಬಾಣಕ್ಕೆ ಸಿಲುಕಿ ಒದ್ದಾಡಿದವರೇ. ಹೀಗಾಗಿ ಒಂದ್ರೀತಿ ಚೇತನ್ ಅವರದ್ದು ಏಕಾಂಗಿ, ಎಡಬಿಡಂಗಿ ನಿಲುವು.‌ ಮೇಲ್ನೋಟಕ್ಕೆ ಚೇತನ್‌ , ಬಿಜೆಪಿ ಸೇರಿದಂತೆ ಬಲಪಂಥೀಯ ಶಕ್ತಿಗಳ ವಿರೋಧಿ ಅಂತ ಕಂಡರೂ, ಈಗ ತಾವೊಬ್ಬ ಕಾಂಗ್ರೆಸ್‌ ವಿರೋಧಿ ಅಂತಲೂ ತೋರಿಸಿಕೊಂಡಿದ್ದಾರೆ. ಈ ನಿಲುವೇ ಅವರನ್ನು ಒಬ್ಬ ಎಡಬಿಡಂಗಿ ವ್ಯಕ್ತಿಯನ್ನಾಗಿ ರೂಪಿಸುತ್ತಿದೆ. ಯಾರನ್ನು, ಹೇಗೆ, ಯಾವ ರೂಪದಲ್ಲಿ ಟೀಕಿಸಬೇಕೆನ್ನುವ ಅರಿವಿಲ್ಲದೆ ಸಿಕ್ಕ ಸಿಕ್ಕವರನ್ನು ಟೀಕಿಸುತ್ತಿದ್ದಾರೆ. ಆ ಮೂಲಕ ಚೇತನ್‌ ಒಬ್ಬ ಸಾಮಾಜಿಕ ಹೋರಾಟಗಾರ ಎನ್ನುವುದರ ಬದಲಿಗೆ, ಕಾಂಟ್ರೋವರ್ಷಿ ಹೀರೋ ಅಂತ ಗುರುತಿಸುವಂತೆ ಮಾಡಿದೆ. ಚೇತನ್‌ ಅವರಿಗೆ ಈ ಅರಿವು ಈಗಲಾದರೂ ಬಂದರೆ ಒಳ್ಳಿತು.

  • ಎಂಟರ್‌ ಟೈನ್‌ ಮೆಂಟ್‌ ಬ್ಯೂರೋ ಸಿನಿ ಲಹರಿ
Categories
ಸಿನಿ ಸುದ್ದಿ

ಬರ್ಕ್ಲಿ ಲಿರಿಕಲ್‌ ಸಾಂಗ್‌ ರಿಲೀಸ್‌ ; ಹಾಡು ಕೇಳಿದ ಮಂದಿಯಿಂದ ಮೆಚ್ಚುಗೆ

ಹಬ್ಬಗಳು ಬಂದರೆ ಸಿನಿಮಾ ಮಂದಿಗೆ ಅದೊಂದು ರೀತಿ ದೊಡ್ಡ ಸಂಭ್ರಮ. ಕಾರಣ, ತಮ್ಮ ಸಿನಿಮಾಗಳ ಪೋಸ್ಟರ್‌, ಟೀಸರ್‌, ಟ್ರೇಲರ್‌, ಸಾಂಗ್‌ ಬಿಡುಗಡೆ ಮಾಡುವ ಮೂಲಕ ಪ್ರಚಾರ ಕಾರ್ಯ ಶುರುವಿಟ್ಟುಕೊಳ್ಳುತ್ತಾರೆ. ಆ ಸಾಲಿಗೆ “ಬರ್ಕ್ಲಿʼ ಸಿನಿಮಾ ಕೂಡ ಸೇರಿದೆ. ಹೌದು, ಗೌರಿ-ಗಣೇಶ ಹಬ್ಬಕ್ಕೆ “ಬರ್ಕ್ಲಿ” ಚಿತ್ರದ ಲಿರಿಕಲ್ ಸಾಂಗ್ ಬಿಡುಗಡೆಯಾಗಿದ್ದು, ಎಲ್ಲೆಡೆ ಮೆಚ್ಚುಗೆಗೂ ಪಾತ್ರವಾಗಿದೆ.

ಸಂತೋಷ್ ಬಾಲರಾಜ್ ಹೀರೋ ಆಗಿರುವ ಈ ಚಿತ್ರವನ್ನು ಸುಮಂತ್ ಕ್ರಾಂತಿ ನಿರ್ದೇಶನ ಮಾಡಿದ್ದಾರೆ. ವಿಭಿನ್ನ ಕಥಾಹಂದರ ಹೊಂದಿರುವ “ಬರ್ಕ್ಲಿ” ಚಿತ್ರದ ಲಿರಿಕಲ್ ಸಾಂಗ್ ಝೇಂಕಾರ್ ಮ್ಯೂಸಿಕ್ ಮೂಲಕ ಬಿಡುಗಡೆಯಾಗಿದೆ. ಬಹದ್ದೂರ್ ಚೇತನ್ ಬರೆದಿರುವ ಈ ಹಾಡನ್ನು ಸಂಜಿತ್ ಹೆಗ್ಡೆ‌ ಹಾಡಿದ್ದಾರೆ. ಜ್ಯೂಡಾ ಸ್ಯಾಂಡಿ ಸಂಗೀತ ಇರುವ ಚಿತ್ರವನ್ನು ಸಂತೋಷ್ ಎಂಟರ್ ಪ್ರೈಸಸ್ ಬ್ಯಾನರ್‌ನಲ್ಲಿ ಆನೇಕಲ್ ಬಾಲರಾಜ್ ನಿರ್ಮಿಸಿದ್ದಾರೆ.
ಸದ್ಯ ಚಿತ್ರದ ಮೊದಲ ಪ್ರತಿ ಸಿದ್ಧವಾಗುತ್ತಿದೆ. “ಕರಿಯ”, “ಗಣಪ”, “ಕರಿಯ ೨”, ಚಿತ್ರಗಳನ್ನು ನಿರ್ಮಿಸಿರುವ ಆನೇಕಲ್ ಬಾಲರಾಜ್ ಅವರ ನಿರ್ಮಾಣದ ಮತ್ತೊಂದು ಅದ್ದೂರಿ ಚಿತ್ರ “ಬರ್ಕ್ಲಿ‌”. ಉತ್ತಮ‌ ಮನೋರಂಜನೆಯ ಈ ಚಿತ್ರಕ್ಕೆ ಸುಮಂತ್ ಕ್ರಾಂತಿ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ.


ಗಣಪ, ಕರಿಯ ೨ ಚಿತ್ರಗಳಲ್ಲಿ ನಟಿಸಿರುವ ಸಂತೋಷ್ ಬಾಲರಾಜ್ ಈ ಚಿತ್ರದ ನಾಯಕರಾಗಿ ಅಭಿನಯಿಸಿದ್ದಾರೆ. ಬಾಲ್ಯದಲ್ಲಿ ಕೇಂದ್ರ ಸರ್ಕಾರದ ನೋ ಸ್ಮೋಕಿಂಗ್ ಜಾಹೀರಾತಿನ ಮೂಲಕ ಬಾಲನಟಿಯಾಗಿ ಖ್ಯಾತರಾಗಿದ್ದ, ಸಿಮ್ರಾನ್ ನಾಟೇಕರ್ ಈ ಚಿತ್ರದ ನಾಯಕಿ. ಬಹುಭಾಷ ನಟ ಚರಣರಾಜ್, ಖ್ಯಾತ ನಟಿ ಶೃತಿ, ಬಲ ರಾಜವಾಡಿ , ಬುಲೆಟ್ ಪ್ರಕಾಶ್ ಇತರರು ನಟಿಸಿದ್ದಾರೆ.

Categories
ಸಿನಿ ಸುದ್ದಿ

ಶಿವಾಜಿಯಾಗಿ ಮತ್ತೆ ರಮೇಶ್‌ ಅರವಿಂದ್‌ ; ಪಾರ್ಟ್‌‌ 2 ಬರಲಿದ ಶಿವಾಜಿ ಸುರತ್ಕಲ್

ಕನ್ನಡದಲ್ಲಿ ಈಗಾಗಲೇ ಭಾಗ-2 3 ಸಿನಿಮಾಗಳಿಗೆ ಲೆಕ್ಕವಿಲ್ಲ. ಪಾರ್ಟ್‌ 1, ಪಾರ್ಟ್‌ 2 ಮತ್ತು ಪಾರ್ಟ್‌ 3 ಸಿನಿಮಾಗಳು ಈಗಾಗಲೇ ಬಂದು ಹೋಗಿವೆ. ಆ ಸಾಲಿಗೆ ಈಗ ರಮೇಶ್‌ ಅರವಿಂದ್‌ ಅಭಿಯದ ಸಿನಿಮಾ ಕೂಡ ಸೇರಿದೆ. ಹೌದು, ಕಳೆದ 2020ರಲ್ಲಿ ಬಿಡುಗಡೆಯಾಗಿದ್ದ “ಶಿವಾಜಿ ಸುರತ್ಕಲ್” ಸಿನಿಮಾ ಪ್ರೇಕ್ಷಕರ ಮನಗೆದ್ದಿತ್ತು. ಸ್ವತಃ ವಿತರಕರಿಂದಲೇ ಬ್ಲಾಕ್ ಬಸ್ಟರ್ ಸಿನಿಮಾ ಎನಿಸಿಕೊಂಡಿತ್ತು. ರಮೇಶ್ ಅರವಿಂದ್ ಅವರ ಈ ಚಿತ್ರವನ್ನು ಆಕಾಶ್ ಶ್ರೀವತ್ಸ ನಿರ್ದೇಶಿಸಿದ್ದರು. ರೇಖಾ ಕೆ.ಎನ್ ಮತ್ತು ಅನೂಪ್ ಅವರು ನಿರ್ಮಿಸಿದ್ದರು. ಈಗ ಅದೇ ಶೀರ್ಷಿಕೆಯಲ್ಲಿ ಭಾಗ -2 ಮಾಡ ಹೊರಟಿರುವುದು ಗೊತ್ತೇ ಇದೆ.

ಕಥೆ, ಚಿತ್ರಕಥೆ ರೆಡಿ ಮಾಡಿ ಕೊಂಡಿರುವ ಚಿತ್ರತಂಡ, ಅಕ್ಟೋಬರ್‌ನಲ್ಲಿ ಚಿತ್ರೀಕರಿಸುವ ಯೋಜನೆ ರೂಪಿಸಿದೆ.
ಶಿವಾಜಿಯಾಗಿ ರಮೇಶ್ ಅರವಿಂದ್ ಕಾಣಿಸಿಕೊಳ್ಳಲಿದ್ದು, ರಾಧಿಕಾ ನಾರಾಯಣ್, ರಘು ರಾಮನಕೊಪ್ಪ ಮತ್ತು ವಿದ್ಯಾಮೂರ್ತಿ ಭಾಗ-2ರಲ್ಲೂ ಮುಂದುವರಿಯಲಿದ್ದಾರೆ. ಉಳಿದಂತೆ ಚಿತ್ರದಲ್ಲಿ ಒಂದಷ್ಟು ಹೊಸ ಪ್ರತಿಭೆಗಳು ಕಾಣಿಸಿಕೊಳ್ಳಲಿವೆ. “ಶಿವಾಜಿ ಸುರತ್ಕಲ್” ಎರಡು ಕಾಲಘಟ್ಟದಲ್ಲಿ ನಡೆಯುವ ಚಿತ್ರವಾಗಿತ್ತು.

ಆದರೆ, ಭಾಗ-2 ಬಹುಕೋನಗಳಿರುವ ಚಿತ್ರಕಥೆ ಹೊಂದಿದ್ದು, ಪತ್ತೇದಾರಿ ಕತೆಯಾಗಿರುವುದರಿಂದ ಕೊಲೆಗಾರನ ಹುಡುಕಾಟದ ಅಂಶಗಳು ಇಲ್ಲಿ ಹೈಲೈಟ್‌ ಆಗಿರಲಿವೆ. ಚಿತ್ರಕ್ಕೆ ಗುರುಪ್ರಸಾದ್ ಕ್ಯಾಮೆರಾ ಹಿಡಿಯಲಿದ್ದು, ಉಳಿದಂತೆ ತಾಂತ್ರಿಕ ತಂಡದ ಆಯ್ಕೆ ಇಷ್ಟರಲ್ಲೇ ನಡೆಯಲಿದೆ. “ಶಿವಾಜಿ ಸುರತ್ಕಲ್‌” ಚಿತ್ರದ ಯಶಸ್ಸು ಮತ್ತು ತಮಿಳು, ಮಲಯಾಳಂ, ತೆಲುಗಿಗೆ ರೀಮೇಕ್ ರೈಟ್ಸ್ ಮಾರಾಟವಾಗಿದ್ದರಿಂದ ಚಿತ್ರತಂಡ ಮತ್ತಷ್ಟು ಉತ್ಸಾಹದಿಂದ ಅದ್ದೂರಿಯಾಗಿ ಚಿತ್ರ ಮಾಡುವ ತಯಾರಿಯಲ್ಲಿದೆ.

Categories
ಸಿನಿ ಸುದ್ದಿ

ದರ್ಶನ್ ಈಗ ‘ಕ್ರಾಂತಿ’ಕಾರಿ; ನಯಾ ‘ಕ್ರಾಂತಿ’ ಮಾಡಲು ಚಾಲೆಂಜಿಂಗ್ ಸ್ಟಾರ್ ಸಜ್ಜು ; ಪೋಸ್ಟರ್ ಟ್ರೆಂಡಿಂಗ್ ಆದ್ಮೇಲೆ ಸಿನಿಮಾ ಸುನಾಮಿ ಅಲ್ಲವೇ !

‘ಕ್ರಾಂತಿ’ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಹೊಸ ಸಿನಿಮಾ. ಗಣೇಶ ಹಬ್ಬದಂದು ವಿಶೇಷವಾಗಿ ಶೀರ್ಷಿಕೆ ಬಿಡುಗಡೆ ಮಾಡಲಾಗಿದೆ. ಡಿ‌55 ಟೈಟಲ್ ಏನಿರಬಹುದು ಎನ್ನುವ ದರ್ಶನ್ ಭಕ್ತಗಣದ ಮಹಾ ನಿರೀಕ್ಷೆಗೆ ಕುಂಬಳಕಾಯಿ ಹೊಡೆದಾಗಿದೆ. ಟೈಟಲ್ ಅನೌನ್ಸ್ ಆದ ಒಂದೇ ಗಂಟೆಯಲ್ಲಿ ಟ್ರೆಂಡಿಂಗ್ ಆಗಿದೆ. ಇದು‌ ದರ್ಶನ್ ಹೆಸರಿಗಿರುವ ಶಕ್ತಿ, ದಾಸನ ಅಭಿಮಾನಿ ಬಳಗಕ್ಕಿರುವ ತಾಕತ್ತು.

ಕಳೆದ ಒಂದು ತಿಂಗಳಿಂದ ದಚ್ಚು ಭಕ್ತರು ಒಂಟಿಕಾಲಿನಲ್ಲಿ ನಿಂತಿದ್ದರು. ಡಿ‌55 ಅನೌನ್ಸ್ ಆಗುವ ದಿವ್ಯಕ್ಷಣಕ್ಕಾಗಿ ಕಾತುರದಿಂದ ಕಾದಿದ್ದರು. ಆ ಸುಂದರ ಕ್ಷಣಕ್ಕೆ ಗಣೇಶನ ಹಬ್ಬ ಸಾಕ್ಷಿಯಾಗಿದೆ. ಗಜಾನನ ಆಶೀರ್ವಾದದೊಂದಿಗೆ ‘ ಕ್ರಾಂತಿ’ಗೆ ಕಿಕ್ ಸ್ಟಾರ್ಟ್ ಸಿಕ್ಕಿ
ದೆ. ಇಂಟ್ರೆಸ್ಟಿಂಗ್ ಅಂದರೆ ಪ್ಯಾನ್ ಇಂಡಿಯಾ ಲೆವೆಲ್ ನಲ್ಲಿ ಕ್ರಾಂತಿ ಆಗ್ತಿರುವುದು.

ಬಜಾರ್ ನಲ್ಲಿ, ಬೆಳ್ಳಿತೆರೆ ಅಂಗಳದಲ್ಲಿ, ಬಾಕ್ಸ್ ಆಫೀಸ್ ಅಡ್ಡದಲ್ಲಿ ಚಾಲೆಂಜಿಂಗ್ ಚಕ್ರವರ್ತಿಯ ಸಿನಿಮಾಗಳು ಎಷ್ಟೆಲ್ಲಾ ಕ್ರಾಂತಿ ಮಾಡಿವೆ ಎನ್ನುವುದು ಇಡೀ ಕರ್ನಾಟಕ ಮಾತ್ರವಲ್ಲ ಪಕ್ಕದ ರಾಜ್ಯವೂ ಕಣ್ಣರಳಿಸಿ‌ ನೋಡಿದೆ. ದಾಸ ಬರ್ತಾವ್ನೆ ಅಂದಾಗ ಬೆಳ್ಳಿತೆರೆ ಕುಣಿಯುತ್ತೆ, ಬಾಕ್ಸ್ ಆಫೀಸ್ ಪಟಾಕಿ ಕೇಕೆ ಹಾಕುತ್ತೆ. ಅದಕ್ಕೆ ಕಾರಣ ಚಿತ್ರಮಂದಿರ ಹೌಸ್ ಫುಲ್ ಮಾಡಿ, ಬಾಕ್ಸ್ ಆಫೀಸ್ ಡಬ್ಬದಲ್ಲಿ ಕೋಟಿಕೋಟಿ ಕುಣಿಯುವಂತೆ ಕ್ರಾಂತಿ ಮಾಡುವ ಪವರ್ ಚಕ್ರವರ್ತಿಗಿರುವುದಕ್ಕೆ. ಅಪ್ ಕೋರ್ಸ್ ಇದೆ. ಆ ಪವರ್ ಇರುವುದಕ್ಕೇನೇ ಬಾಕ್ಸ್ ಆಫೀಸ್ ಸುಲ್ತಾನ್ ಪಟ್ಟ ಸಿಕ್ಕಿರುವುದು.

ಅಷ್ಟಕ್ಕೂ, ಈ ಭಾರಿ ‘ಕ್ರಾಂತಿ’ ಟೈಟಲ್ ಇಟ್ಟುಕೊಂಡೇ ಫೀಲ್ಡಿಗಿಳಿಯುತ್ತಿರುವ ದರ್ಶನ್, ಯಾವ ಕ್ಷೇತ್ರದಲ್ಲಿ ರೆವಲ್ಯೂಷನ್ ತರುತ್ತಾರೆ ಎನ್ನುವ ಕೂತೂಹಲ ಹೆಚ್ಚಾಗಿದೆ. ಆರ್ಥಿಕವಾಗಿ, ಸಾಮಾಜಿಕವಾಗಿ, ರಾಜಕೀಯವಾಗಿ ಕ್ರಾಂತಿಯಾಗಬಹುದಾ ಎನ್ನುವ ನಿರೀಕ್ಷೆಯ ಜೊತೆಗೆ
ಫ್ರೀಡಂ ಫೈಟರ್ ಆಗಿ ತೊಡೆತಟ್ಟಲಿದ್ದಾರಾ ಯಜಮಾನ? ಈ ಮಹಾನಿರೀಕ್ಷೆಯ ಪ್ರಶ್ನೆಗೆ ಕೆಲವೇ ದಿನಗಳಲ್ಲಿ ಚಿತ್ರತಂಡವೇ ಉತ್ತರ ನೀಡಲಿದೆ.

ಕುಲಕೋಟಿ ಅಭಿಮಾನಿಗಳ ಒಡೆಯನನ್ನ ಕ್ರಾಂತಿಯ ಕಣಕ್ಕೆ ಇಳಿಸ್ತಿರುವುದು ಯಜಮಾನ ಸಿನಿಮಾ ತಂಡ. ನಿರ್ಮಾಪಕಿ ಶೈಲಜನಾಗ್ ಹಾಗೂ ಬಿ ಸುರೇಶ್ ಅವರು ದರ್ಶನ್ ಆಗಿದ್ದಾಗ್ಲೀ ಈ‌ ಭಾರಿ ಕ್ರಾಂತಿ ಮಾಡೆಬಿಡೋಣ ಅಂತ ಸಜ್ಜಾಗಿದ್ದಾರೆ. ಸಾರಥಿಯ ಜೊತೆಜೊತೆಗೆ ಹೆಜ್ಜೆಹಾಕುತ್ತಿರುವ ವಿ ಹರಿಕೃಷ್ಣ ‘ ಕ್ರಾಂತಿ’ ಗೆ ಆಕ್ಷನ್ ಕಟ್ ಹೇಳ್ತಿದ್ದಾರೆ. ಬಹುಭಾಷೆಯಲ್ಲಿ ಕ್ರಾಂತಿ ಮಾಡೋದಕ್ಕೆ ಹೊರಟಿರುವ ಫಿಲ್ಮ್ ಟೀಮ್ ಗಣೇಶನ ಹಬ್ಬಕ್ಕೆ ಟೈಟಲ್ ಅನೌನ್ಸ್ ಮಾಡಿ ಫ್ಯಾನ್ಸ್ ಗೆ ಹಬ್ಬದೂಟ ಹಾಕಿಸಿದೆ. ಯಜಮಾನ ತಂಡ ಮತ್ತೆ ಒಂದಾಗಿರುವುದಕ್ಕೆ ದಾಸನ ಭಕ್ತರಲ್ಲಿ ಮಾತ್ರವಲ್ಲ ಇಡೀ ಗಾಂಧಿನಗರದ ಮಂದಿಯಲ್ಲಿ ನಿರೀಕ್ಷೆ ಮುಗಿಲೆತ್ತರಕ್ಕೇರಿದೆ.

ವಿಶಾಲಾಕ್ಷಿ, ಎಂಟರ್ ಟೈನ್ಮೆಂಟ್ ಬ್ಯೂರೋ‌ ಸಿನಿಲಹರಿ

Categories
ಸಿನಿ ಸುದ್ದಿ

ನಾನೆಲ್ಲೂ ಓಡಿ ಹೋಗಿಲ್ಲ; ಓಡಿ ಹೋಗಲ್ಲ; ಮಾಧ್ಯಮ ಮುಂದೆ ಆಂಕರ್ ಅನುಶ್ರೀ ಪ್ರತ್ಯಕ್ಷ!


ಸ್ಯಾಂಡಲ್‌ವುಡ್ ಡ್ರಗ್ಸ್ ಲಿಂಕ್ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಎ2 ಆರೋಪಿ ಕಿಶೋರ್ ಶೆಟ್ಟಿ ಹೇಳಿಕೆಯನ್ನ ಆಧರಿಸಿ ಮಂಗಳೂರು ಪೊಲೀಸರು ಚಾರ್ಜ್ ಶೀಟ್ ಸಲ್ಲಿಸಿದ್ದಾರೆಂದು ಸುದ್ದಿಯಾಗಿದೆ. ಕಿಶೋರ್ ಶೆಟ್ಟಿ ಅನುಶ್ರೀ ವಿರುದ್ದ ಹೇಳಿಕೆ ನೀಡಿದ್ದಾರೆಂದು ಮೊದಲು ಸುದ್ದಿಯಾಯ್ತು. ಕೊನೆಗೆ ಕಿಶೋರ್ ಶೆಟ್ಟಿ ನಾನು ಅನುಶ್ರೀ ವಿರುದ್ದ ಹೇಳಿಕೆ ನೀಡಿಲ್ಲವೆಂದು
ಡ್ರಗ್ಸ್ ಪಾರ್ಟಿ ಮಾಡಿಲ್ಲವೆಂದು ಕ್ಲ್ಯಾರಿಟಿ ಕೊಟ್ಟರು. ಅಷ್ಟಕ್ಕೂ, ಇದರಲ್ಲಿ ಯಾವುದು ಸತ್ಯ? ಯಾವುದು ಸುಳ್ಳು? ಎನ್ನುವುದು ಗೊಂದಲದ ಗೂಡಾಗಿದೆ. ಈ ನಡುವೆ ಕಿಶೋರ್ ಹೇಳಿಕೆ ಅನುಶ್ರೀಗೆ ಮುಳುವಾಗ್ಬೋದು, ನಶೆಯ ಸುಳಿಯಲ್ಲಿ ಸಿಲುಕಿ ಲಾಕ್ ಆಗ್ಬೋದು ಎನ್ನುವಂತಹ ಮಾತುಗಳು ಕೇಳಿಬಂದವು. ಎಲ್ಲಿ ಲಾಕ್ ಆಗ್ತೀನೋ ಎಂಬ ಭಯದಿಂದ ಆಂಕರ್ ಕಮ್ ನಟಿ ಅನುಶ್ರೀ ತಲೆಮರೆಸಿಕೊಂಡಿದ್ದಾರೆ, ಮುಂಬೈನಲ್ಲಿ ಅಡಗಿ ಕುಳಿತಿದ್ದಾರೆ ಅಂತೆಲ್ಲಾ ಚರ್ಚೆಯಾಯ್ತು. ಇದೆಲ್ಲದಕ್ಕೂ ಸ್ವತಃ ಅನುಶ್ರೀ ಫುಲ್ ಸ್ಟಾಪ್ ಹಾಕಿದ್ದಾರೆ. ವೃತ್ತಿ ನಿಮಿತ್ತ ಮುಂಬೈಗೆ ಹೋಗಿದ್ದು ನಿಜ ಆದರೆ ನಾನು ಓಡಿಹೋಗಿಲ್ಲ. ಎಂತಹದ್ದೇ ಸಂದರ್ಭ ಬಂದರೂ ಕೂಡ ಎದುರಿಸಿ ನಿಲ್ತೇನೆ ಹೊರೆತು ಈ ಕನ್ನಡ ನೆಲ ಬಿಟ್ಟು ಓಡಿಹೋಗೋದಿಲ್ಲ ಎಂದಿದ್ದಾರೆ.

ಅಷ್ಟಕ್ಕೂ, ಕಳೆದ ವರ್ಷ ಮಂಗಳೂರು ಸಿಸಿಬಿ ಪೊಲೀಸರು ನನ್ನ ಕರೆಸಿ ತನಿಖೆ ಮಾಡಿದ್ದು ನಾನು ಆರೋಪಿ ಅಥವಾ ಅಪರಾಧಿ ಎನ್ನುವ ಕಾರಣಕ್ಕೆ ಅಲ್ಲ. ಡ್ಯಾನ್ಸರ್ ಕಿಶೋರ್ ಶೆಟ್ಟಿ ಹಾಗೂ ತರುಣ್ ಇಬ್ಬರು ಕೂಡ ನನ್ನ ಡ್ಯಾನ್ಸ್ ರಿಯಾಲಿಟಿ ಶೋಗೆ ಕೊರಿಯಾಗ್ರಫಿ ಮಾಡಿದ್ದರು. ಹೀಗಾಗಿ ನನ್ನ ಕರೆಸಿ ತನಿಖೆ ನಡೆಸಿದ್ದರು. ನಾನು ತನಿಖೆಗೆ ಸ್ಪಂಧಿಸಿ ಅವರು ಏನೆಲ್ಲಾ ಪ್ರಶ್ನೆಗಳನ್ನ ಕೇಳಿದ್ದರೋ ಅದೆಲ್ಲದಕ್ಕೂ ಉತ್ತರಿಸಿ ಬಂದಿದ್ದೆ. ಈಗ, ಚಾರ್ಜ್ಶೀಟ್‌ನಲ್ಲಿ ನನ್ನ ಹೆಸರು ಕೇಳಿಬಂದಿದೆ ಎನ್ನುವ ಸುದ್ದಿ ಹರಿದಾಡ್ತಿದೆ. ಒಂದ್ವೇಳೆ ನನ್ನ ಹೆಸರು ಚಾರ್ಜ್ ಶೀಟ್‌ನಲ್ಲಿದ್ದು, ಆರೋಪಿ ಕಿಶೋರ್ ಶೆಟ್ಟಿ ನನ್ನ ವಿರುದ್ದ ಹೇಳಿಕೆ ನೀಡಿದ್ದರೆ, ಪೊಲೀಸರು ತನಿಖೆಗೆ ಕರೆದರೆ ನಾನು ಹಾಜರಾಗ್ತೀನಿ ಮತ್ತು ತನಿಖೆಗೆ ಸ್ಪಂಧಿಸ್ತೇನೆ ಎಂದಿದ್ದಾರೆ.

ನನ್ನ ವಿರುದ್ದ ನೂರು ಜನ ನೂರು ಮಾತನಾಡ್ತಿದ್ದಾರೆ ಮತ್ತು ಆರೋಪ ಮಾಡ್ತಿದ್ದಾರೆ. ಅವರೆಲ್ಲರ ಮಾತಿಗೆ ಹಾಗೂ ಆರೋಪಕ್ಕೆ ನಾನು ಉತ್ತರ ಕೊಡುವುದಿಲ್ಲ. ಕಾನೂನಿದೆ, ಪೊಲೀಸರು ತನಿಖೆ ಮಾಡ್ತಿದ್ದಾರೆ ಮಾಡಲಿ. ಕಾನೂನಿನ ಮುಂದೆ ಯಾರೂ ದೊಡ್ಡವರಲ್ಲ ಹೀಗಾಗಿ ನಾನು ಕಾನೂನಿಗೆ ತಲೆಬಾಗ್ತೀನಿ ಎಂದಿದ್ದಾರೆ. ಅಷ್ಟೇ ಅಲ್ಲದೇ ಬೆಂಗಳೂರಲ್ಲಿ ೪ ಕೋಟಿ ಮನೆಯಿದೆ, ಮಂಗಳೂರಲ್ಲಿ ೧೨ ಕೋಟಿ ಮನೆಯಿದೆ ಅಂತೆಲ್ಲಾ ಹೇಳಿಕೆ ಕೊಡ್ತಿದ್ದಾರೆ. ಕಳೆದ ೩ ವರ್ಷದಿಂದ ಬೆಂಗಳೂರಿನಲ್ಲಿ ಬಾಡಿಗೆ ಮನೆಯಲ್ಲಿ ವಾಸ ಮಾಡ್ತಿದ್ದೇನೆ. ಬ್ಯಾಂಕ್‌ನಲ್ಲಿ ಲೋನ್ ಪಡೆದು ಮಂಗಳೂರಿನಲ್ಲಿ ಮನೆ ಕಟ್ಟಿದ್ದೇನೆ. ಕಷ್ಟಪಟ್ಟು ಕೆಲಸ ಮಾಡಿ ದುಡಿದು ಬದುಕುತ್ತಿದ್ದೇನೆ. ಯಾವ ಪ್ರಭಾವಿಗಳ ಸಹಾಯವೂ ನನಗಿಲ್ಲ. ಯಾರ ಸಹಾಯವೂ ನನಗೆ ಬೇಕಾಗಿಲ್ಲ. ಏನೇ ಬಂದರೂ ಒಬ್ಬಳೇ ಎದುರಿಸುತ್ತೇನೆ. ಬೆಂಗಳೂರಿಗೆ ಒಬ್ಬಳೇ ಬಂದಿದ್ದೇನೆ, ಬದುಕು ಕಟ್ಟಿಕೊಂಡಿದ್ದೇನೆ. ಹಾಗೆಯೇ ಒಬ್ಬಳೇ ಮುಂದೆ ಸಾಗುತ್ತೇನೆ ಎಂದು ಹೆಮ್ಮೆಯಿಂದ ಮಾತನಾಡಿದ್ದಾರೆ ಆಂಕರ್ ಕಮ್ ನಟಿ ಅನುಶ್ರೀಯವರು

Categories
ಸಿನಿ ಸುದ್ದಿ

ವಿಕ್ರಾಂತ್ ರೋಣ ಗಣೇಶನ ಗ್ರಾಂಡ್‌ ಎಂಟ್ರಿ : ಗನ್ ಹಿಡಿದ ಗಣೇಶ – ಬಾರ್ಸಿ ತಮಟೆ !

ನಾಡಿನಾದ್ಯಂತ ಗೌರಿ-ಗಣೇಶ ಸಂಭ್ರಾಮಚರಣೆ ಜೋರಾಗಿದೆ. ತರಹೇವಾರಿ ಗೌರಿ-ಗಣೇಶ ಮೂರ್ತಿಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಆದರೆ, ಜನರನ್ನ ಭಾರೀ ಅಟ್ರ್ಯಾಕ್ಟ್‌ ಮಾಡ್ತಿರುವುದು ವಿಕ್ರಾಂತ್ ರೋಣ ಗಣೇಶ. ಯಸ್, ಈ ಭಾರಿ ವಿಕ್ರಾಂತ್ ರೋಣ ಗಣೇಶನ ಹವಾ ಜೋರಾಗಿದೆ. ಸುದೀಪಿಯನ್ಸ್ ಮಾತ್ರವಲ್ಲ ಸಾಮಾನ್ಯರು ಕೂಡ ವಿಕ್ರಾಂತ್ ರೋಣ ಗಣೇಶನಿಗಾಗಿ ಮುಗಿಬೀಳ್ತಿದ್ದಾರೆ. ಬೇಡಿಕೆ ಹೆಚ್ಚಿಸಿಕೊಂಡು ಟ್ರೆಂಡ್ ಸೃಷ್ಟಿಮಾಡುತ್ತಿರುವ `ವಿಕ್ರಾಂತ್ ರೋಣ ಗಣೇಶನ’ ಸೂಪರ್ಬ್ ಸ್ಟೋರಿ ಇಲ್ಲಿದೆ ಹ್ಯಾವ್ ಎ ಲುಕ್.

ಮಾಯಲೋಕದಲ್ಲಿ ವಿಕ್ರಾಂತ್ ರೋಣ ಹವಾ ಹೆಂಗೈತಿ ಎನ್ನುವುದು ಬಹುಶ: ನಿಮ್ಮೆಲ್ಲರಿಗೂ ಗೊತ್ತಿದೆ. ಬುರ್ಜ್ ಖಲೀಫಾವನ್ನು ಮೆಟ್ಟಿನಿಂತು ನಯಾ ಮೇನಿಯಾ ಸೃಷ್ಟಿಸಿಕೊಂಡಿರುವ ಅಭಿನಯ ಚಕ್ರವರ್ತಿ ಅಭಿನಯದ ʼವಿಕ್ರಾಂತ್ ರೋಣ’, ಗೌರಿ-ಗಣೇಶ ಹಬ್ಬದಂದು ಹೊಸದೊಂದು ಹವಾ ಶುರುವಿಟ್ಟುಕೊಂಡಿದೆ.

ಸೋಷಿಯಲ್ ಮೀಡಿಯಾದಲ್ಲಿ ಭಾರೀ ಮೆಚ್ಚುಗೆ ಪಡೆದು ಬೇಡಿಕೆ ಹೆಚ್ಚಿಸಿಕೊಳ್ಳುತ್ತಿದೆ. ಅದಕ್ಕೆ ಕಾರಣ ವಿಕ್ರಾಂತ್ ರೋಣ ಗಣೇಶ’ ಮೂರ್ತಿ ಎನ್ನುವುದು ವಿಶೇಷ ಪ್ರತಿವರ್ಷ ಗೌರಿ-ಗಣೇಶ ಹಬ್ಬಕ್ಕೆ ಸ್ಟಾರ್‌ನಟರುಗಳ ಅವತಾರವೆತ್ತಿ ಗಣೇಶಪ್ಪ ಗ್ರಾಂಡ್ ಎಂಟ್ರಿಕೊಡ್ತಾನೆ. ಮಾರುಕಟ್ಟೆಯಲ್ಲಿ ನಂದೇ ಹವಾ ಅಂತ ತಿಂಗಳಾನುಗಟ್ಟಲ್ಲೇ ಮೆರೆಯುತ್ತಾನೆ. ಸ್ಟಾರ್‌ನಟರುಗಳ ಅಭಿಮಾನಿಗಳನ್ನು ಮಾತ್ರವಲ್ಲ ನಾಡಿನ ಜನರ ಹೃದಯ ಗೆದ್ದು ಅವರುಗಳ ಮನೆಯಲ್ಲಿ ಹೋಗಿ ಚಕ್ಕಮಕ್ಕಳ ಹಾಕಿಕೊಂಡು ಕೂತುಬಿಡ್ತಾನೆ. ಅದರಂತೇ, ಈ ವರ್ಷವಿಕ್ರಾಂತ್ ರೋಣ ಗಣೇಶ’ ಅಖಾಡದಲ್ಲಿ ಹವಾ ಎಬ್ಬಿಸುತ್ತಿದ್ದಾನೆ. ಕಿಚ್ಚನಂತೆ ಹ್ಯಾಟ್ ಹಾಕಿಕೊಂಡು, ಕೈಯಲ್ಲಿ ಗನ್ ಹಿಡಿದುಕೊಂಡು ಮ್ಯಾಸೀವ್ ಸೀಟ್‌ನಲ್ಲಿ ಕುಳಿತಿರುವ ಗಣೇಶನನ್ನ ನೋಡಿ ಕಿಚ್ಚ ಫ್ಯಾನ್ಸ್ ಮಾತ್ರವಲ್ಲ ಸಕಲರೂ ಕೂಡ ಫಿದಾ ಆಗಿದ್ದಾರೆ. ವಿಕ್ರಾಂತ್ ರೋಣ ಗಣೇಶನನ್ನು ಮನೆಗೆ ಕೊಂಡೊಯ್ಯುತ್ತಿದ್ದಾರೆ.

ಅಷ್ಟಕ್ಕೂ, ವಿಕ್ರಾಂತ್ ರೋಣ ಗಣೇಶನ ಕಲ್ಪನೆ ಮೂಡಿದ್ದು ಮತ್ತು ಮಾರುಕಟ್ಟೆಗೆ ತರಬೇಕು ಎನ್ನುವ ಕನಸು ಕಂಡಿದ್ದು ಮಾಣಿಕ್ಯನ ಅಪ್ಪಟ ಅಭಿಮಾನಿ ಯಶ್ವಂತ್ ಶೆಟ್ಟಿ. ವಿಕ್ರಾಂತ್ ರೋಣ’ ಚಿತ್ರಕ್ಕಾಗಿ ಎದುರುನೋಡ್ತಿರುವ ಯಶ್ವಂತ್, ಭಾರತೀಯ ಚಿತ್ರರಂಗದಲ್ಲಿ ಹವಾ ಎಬ್ಬಿಸುವವಿಕ್ರಾಂತ್ ರೋಣ’ ಲುಕ್‌ನ ನೋಡಿ ಪ್ರೇರಣೆಗೊಂಡರು. ಈ ಭಾರಿ ಗೌರಿ-ಗಣೇಶ ಹಬ್ಬಕ್ಕೆ ಕಿಚ್ಚನ ಅಭಿಮಾನಿಯಾಗಿ ಕಾಣಿಕೆ ಕೊಡಬೇಕು ಎಂದು ನಿರ್ಧರಿಸಿ ವರದನಾಯಕನ’ ಮೂರ್ತಿ ಕೆತ್ತನೆಯ ಕೆಲಸದಲ್ಲಿ ಬ್ಯುಸಿಯಾದರು. ಸುಮಾರು ಎರಡು ತಿಂಗಳು ಟೈಮ್ ತೆಗೆದುಕೊಂಡುವಿಕ್ರಾಂತ್ ರೋಣ ಗಣೇಶಪ್ಪನಿಗೆ’ ಜೀವ ತುಂಬಿದರು. ಆನ್‌ಲೈನ್‌ನಲ್ಲಿ ಹಾಗೆಯೇ ಪೋಸ್ಟ್ ಮಾಡಿದರು. ಇದಾಗಿ, ಕೆಲವೇ ನಿಮಿಷಗಳಲ್ಲಿ ಟ್ರೆಂಡ್‌ಸೆಟ್ ಆಗಿದೆ ಜೊತೆಗೆ ಸುದೀಪಿಯನ್ಸ್ ಕಡೆಯಿಂದ ಶುಭಾಷಯದ ಮಹಾಪೂರವು ಹರಿದು ಹೋಗಿದೆ.

ವಿಕ್ರಾಂತ್ ರೋಣ’ ಗಣೇಶನನ್ನು ಕೆತ್ತನೆ ಮಾಡಿ ನಿಲ್ಲಿಸಿರುವ ಯಶ್ವಂತ್‌ಗೆ ಬೇಜಾನ್ ಆರ್ಡರ್ ಬುಕ್ ಆಗಿದೆ. ಮಾಣಿಕ್ಯನ ಅಭಿಮಾನಿಗಳು ಮಾತ್ರವಲ್ಲ ಬೇರೆಯವರು ಕೂಡವಿಕ್ರಾಂತ್ ರೋಣ ಗಣೇಶನನ್ನು ಬುಕ್ ಮಾಡಿಕೊಂಡು ಮನೆಗೆ ಕೊಂಡೊಯ್ದಿದ್ದಾರಂತೆ. ಈ ಬಗ್ಗೆ ಖಾಸಗಿ ಪತ್ರಿಕೆಗೆ ಯಶ್ವಂತ್ ಸಂದರ್ಶನ ನೀಡಿದ್ದು ಖುಷಿ ವ್ಯಕ್ತಪಡಿಸಿದ್ದಾರೆ. ಒಟ್ಟಿನಲ್ಲಿ ಈಗೇನಿದ್ರೂ ವಿಕ್ರಾಂತ್ ರೋಣನದ್ದೇ ಕಾರುಬಾರು. `ಊರಲ್ಲೆಲ್ಲಾ ಒಬ್ಬರದ್ದೇ ಸೌಂಡು ಅವರೇ ವಿಕ್ರಾಂತ್ ರೋಣ’ ಅಂತ ಶ್ರೀಲಂಕನ್ ಬ್ಯೂಟಿ ಹೇಳಿದ್ದೇ ಬಂತು ಸೌಂಡ್ ಇನ್ನೂ ಜಾಸ್ತಿಯಾಗಿದೆ. ಅನುಪ್ ಭಂಡಾರಿ ನಿರ್ದೇಶನದ-ಕಿಚ್ಚ ಅಭಿನಯದ- ಜಾಕ್‌ಮಂಜು ನಿರ್ಮಾಣದ ಈ ಮಹಾಮೂವೀಯ ಮೇಲಿನ ನಿರೀಕ್ಷೆ ಗಳಿಗಳಿಗೆಗೂ ಹೆಚ್ಚುತ್ತಲೇ ಇದೆ. ಡೆಡ್ಸ್ ಆಂಥಮ್ ಸಾಂಗ್ ಸುನಾಮಿ ಎಬ್ಬಿಸಿದೆ. ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿದ್ದು, ಶೀಘ್ರದಲ್ಲೇ ಜಾಕ್ವೆಲಿನ್ ಡಬ್ಬಿಂಗ್ ಮಾಡೋದಕ್ಕೆ ಮತ್ತೆ ಬೆಂಗಳೂರಿಗೆ ಬರಲಿದ್ದಾರೆ. ಅಲ್ಲಿವರೆಗೂ ಕಿಚ್ಚನಷ್ಟೇ ತಾಳ್ಮೆಯಿಂದ ನೀವೆಲ್ಲರೂ ಕಾಯ್ರಿ.

  • ಎಂಟರ್‌ಟೈನ್ಮೆಂಟ್‌, ಬ್ಯೂರೋ ಸಿನಿಲಹರಿ

Categories
ಸಿನಿ ಸುದ್ದಿ

ಗೌರಿ ಗಣೇಶರಿಗೂ ಉಂಟು , ಡಿಎನ್‌ ಎ ನಂಟು : ನಿರ್ದೇಶಕ ಪ್ರಕಾಶರಾಜ್‌ ಮೇಹು ಕಥೆ ಬಿಚ್ಚಿದಾಗಲೇ ಗೊತ್ತಾಗಲಿದೆ ಅದರ ಗುಟ್ಟು !

ಡಿಎನ್‌ಎ ಅಂದ್ರೆ ನಮಗೆಲ್ಲ ಗೊತ್ತಿರೋದು ಜೀನ್ಸ್‌ ಅಥವಾ ವಂಶವಾಹಿ ಅಂತ. ಆದ್ರೆ ನಿರ್ದೇಶಕ ಪ್ರಕಾಶ್‌ರಾಜಮೇಹುʼ ಡಿಎನ್‌ಎʼ ಎನ್ನುವ ಚಿತ್ರದ ಶೀರ್ಷಿಕೆಗೆ ಧೃವ ನಕ್ಷತ್ರ ಆಕಾಶ ಅಂತ ಸಬ್‌ ಟೈಟಲ್‌ ಇಟ್ಕೊಂಡು ಪ್ರೇಕ್ಷಕರಿಗೆ ಏನನ್ನು ಹೇಳೋದಿಕ್ಕೆ ಪ್ರಯತ್ನಿಸಿದ್ದಾರೋ ಗೊತ್ತಿಲ್ಲ, ಆದರೆ ಚಿತ್ರದ ಶೀರ್ಷಿಕೆಗೆ ತಕ್ಕಂತೆ ಇದೊಂದು ವಂಶವಾಹಿಗೆ ಕನೆಕ್ಟ್‌ ಆಗುವ ಕಥೆ ಅನ್ನೋದು ಅಷ್ಟೇ ಸತ್ಯ. ಹಾಗಾಗಿಯೇ ತಮ್ಮ ಚಿತ್ರದ ಕಥಾ ಹೂರಣಕ್ಕೆ ಕನೆಕ್ಟ್‌ ಆಗುವ ಹಾಗೆ ʼಸಂಬಂಜ ಅನ್ನೋದು ದೊಡದು ಕನಾ..ʼ ಎನ್ನುವ ಮಾತನ್ನು ಹೈಲೈಟ್‌ ಮಾಡಿಕೊಂಡಿದ್ದಾರೆ. ಅದೇ ಕಾರಣಕ್ಕೆ ಈಗ ಗೌರಿ, ಗಣೇಶ ಹಬ್ಬದ ಸಂಭ್ರಮದಲ್ಲಿ ಚಿತ್ರ ಪ್ರೇಮಿಗಳಿಗೆ ಶುಭಾಶಯ ಕೋರಿರುವ ಚಿತ್ರ ತಂಡವು ಗೌರಿ-ಗಣೇಶನಿಗೂ ಇದೆ ಡಿಎನ್‌ ಎ ನಂಟು ಎಂಬುದಾಗಿ ಕಥೆಯ ಎಳೆಯೊಂದನ್ನು ರಿವೀಲ್‌ ಮಾಡಿದೆ.

ʼ ಇಬ್ಬರು ಗೌರಿಯರು, ಇಬ್ಬರು ಗಣೇಶಂದಿರು ಮತ್ತು ಇಬ್ಬರು ಶಿವನ ನಡುವಿನ ಭಾವನಾತ್ಮಕ ಸಂಬಂಧದ ಕಥೆಯೇ ಡಿಎನ್‌ ಎ. ಎಲ್ಲಾ ಕುಟುಂಬಗಳಿಗೂ ಕನೆಕ್ಟ್‌ ಆಗುತ್ತೆ. ಹಾಗೆಯೇ ಗೌರಿ-ಗಣೇಶ ಹಬ್ಬಕ್ಕೂ ಅದರ ಕನೆಕ್ಟ್‌ ಇದೆ. ಅದು ಹೇಗೆ ಅನ್ನೋದು ಸಿನಿಮಾ ನೋಡಿದಾಗಲೇ ಗೊತ್ತಾಗಲಿದೆ. ಸಂಬಂಜ ಅನ್ನೋದು ದೊಡದು ಕನಾ ಎನ್ನುವ ಸಂದೇಶ ಸಾರುವ ಕಥಾ ಹಂದರೊಂದಿಗೆ ಸಧಬಿರುಚಿಯ ಕೌಟುಂಬಿಕ ಚಿತ್ರ ವಿದು ಎಂದಿದ್ದಾರೆ ನಿರ್ದೇಶಕ ಪ್ರಕಾಶರಾಜ್‌ ಮೇಹು.ಮಾತೃಶ್ರೀ ಎಂಟರ್​ ಪ್ರೈಸಸ್​ ಬ್ಯಾನರ್​ನಲ್ಲಿ ನಿರ್ಮಾಣವಾಗಿರುವ ಈ ಚಿತ್ರಕ್ಕೆ ನಿರ್ಮಾಪಕ ಎಂ. ಮೈಲಾರಿ ಬಂಡವಾಳ ಹಾಕಿದ್ದು, ಅಚ್ಯುತ್ ಕುಮಾರ್, ರೋಜರ್ ನಾರಾಯಣ್, ಎಸ್ಟರ್ ನರೋನ್ಹಾ, ಯುಮನಾ, ಮಾಸ್ಟರ್ ಆನಂದ್ ಪುತ್ರ ಮಾಸ್ಟರ್​ ಕೃಷ್ಣ ಚೈತನ್ಯ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.ಒಂದ್ರೀತಿ ಇದು ಮಲ್ಟಿಸ್ಟಾರ್‌ ಸಿನಿಮಾ. ಅನೇಕ ಅನುಭವಿ ಕಲಾವಿದರ ಸಮಾಗಮ ಇಲ್ಲಿದೆ. ಹಾಗೆಯೇ ಇದು ಬಿಗ್‌ ಬಜೆಟ್‌ ಸಿನಿಮಾವೂ ಹೌದು. ಕಥೆಗೆ ತಕ್ಕಂತೆ ನಿರ್ಮಾಪಕರು ಅದ್ದೂರಿ ವೆಚ್ಚದಲ್ಲಿಯೇ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಸದ್ಯಕ್ಕೆ ಅದರ ಛಾಯೆ ಚಿತ್ರದ ಪ್ರಮೋಷನಲ್‌ ಹಾಡಿನಲ್ಲಿ ಅನಾವರಣ ಗೊಂಡಿದೆ.

ಆ ಮೂಲಕ ಸೋಷಲ್‌ ಮೀಡಿಯಾದಲ್ಲಿ ದೊಡ್ಡ ಸದ್ದು ಮಾಡಿದೆ. ಎಲ್ಲವೂ ಅಂದುಕೊಂಡಂತೆಯೇ ಆಗಿದ್ದರೆ ಇಷ್ಟೊತ್ತಿಗೆ ಈ ಚಿತ್ರ ತೆರೆಗೆ ಬಂದು ಹಳೇ ಮಾತೇ ಆಗುತ್ತಿತ್ತೇನೋ. ಆದರೆ ಕೊರೋನಾ ಕಾರಣಕ್ಕೆ ತಡವಾಗಿ ತೆರೆ ಕಾಣಲಿದೆ. ತಡವಾದರೂ, ಕನ್ನಡದ ಸಿನಿಮಾ ಪ್ರೇಕ್ಷಕರಿಗೆ ಒಂದೊಳ್ಳೆಯ ಕಥಾ ಹಂದರದ ಮೂಲಕ ಭಾವನೆಗಳ ಕದ ತಟ್ಟಲಿದೆ ಎನ್ನುತ್ತಾರೆ ನಿರ್ದೇಶಕ ಪ್ರಕಾಶ್‌ ರಾಜ ಮೇಹು.

  • ಎಂಟರ್‌ ಟೈನ್‌ ಮೆಂಟ್‌ ಬ್ಯೂರೋ ಸಿನಿ ಲಹರಿ
error: Content is protected !!