Categories
ಸಿನಿ ಸುದ್ದಿ

ಮಾತಿಗಿಳಿದ ಮಾರಿಗೋಲ್ಡ್‌ ! ಗೋಲ್ಡ್‌ ಮತ್ತು ಅಂಡರ್‌ವರ್ಲ್ಡ್!!

ದಿಗಂತ್‌ ಸಿನ್ಮಾ ಡಬ್ಬಿಂಗ್‌ನಲ್ಲಿ ಬಿಝಿ

 

 ದಿಗಂತ್‌ ಅವರಿಗೆ ಇದೊಂದು ಹೊಸಬಗೆಯ ಚಿತ್ರವಂತೆ. ಅದರಲ್ಲೂ ದಿಗಂತ್‌ ಮೊದಲ ಬಾರಿಗೆ ಈ ರೀತಿಯ ಪಾತ್ರ ನಿರ್ವಹಿಸಿದ್ದಾರೆ. ಈ ಚಿತ್ರವನ್ನು ರಘುವರ್ಧನ್‌ ನಿರ್ಮಾಣ ಮಾಡಿದ್ದಾರೆ. ಇನ್ನು, ರಘುವರ್ಧನ್‌ ಅವರು ಮೂಲತಃ ನಿರ್ದೇಶಕರಾಗಿದ್ದರೂ, ಅವರು ಹೊಸ ಪ್ರತಿಭಾವಂತ ಯುವ ನಿರ್ದೇಶಕ ರಾಘವೇಂದ್ರ ಎಂ.ನಾಯಕ್‌ ಅವರಿಗೆ ನಿರ್ದೇಶನ ಮಾಡಲು ಅವಕಾಶ ಕಲ್ಪಿಸಿಕೊಟ್ಟಿದ್ದಾರೆ.

ಗುಳಿಕೆನ್ನೆ ಹುಡುಗ ದಿಗಂತ್‌ ಅಭಿನಯದ “ಮಾರಿಗೋಲ್ಡ್” ಚಿತ್ರೀಕರಣ ಪೂರ್ಣಗೊಂಡಿದ್ದು ಗೊತ್ತೇ ಇದೆ. ರಾಜ್ಯೋತ್ಸವ ದಿನದಂದ ಚಿತ್ರದ ಶೀರ್ಷಿಕೆಯ ಫಸ್ಟ್‌ ಲುಕ್‌ ಪೋಸ್ಟರ್‌ ಕೂಡ ಹೊರಬಂದು ಸುದ್ದಿಯಾಗಿದ್ದು ಗೊತ್ತು. ಈಗ ಚಿತ್ರತಂಡ “ಮಾರಿಗೋಲ್ಡ್‌” ಚಿತ್ರದ ಡಬ್ಬಿಂಗ್‌ ಕಾರ್ಯಕ್ಕೆ ಮುಂದಾಗಿದೆ. ಹೌದು, ಚಿತ್ರೀಕರಣವನ್ನು ಯಶಸ್ವಿಯಾಗಿ ಮುಗಿಸಿರುವ ಚಿತ್ರತಂಡ, ಈಗ ಡಬ್ಬಿಂಗ್ ಕೆಲಸದಲ್ಲಿ ನಿರತಗೊಂಡಿದೆ. ಸೋಮವಾರದಿಂದ ಡಬ್ಬಿಂಗ್‌ಗೆ ಮುಂದಾಗಿರುವ ಚಿತ್ರತಂಡ, ರೇಣು ಸ್ಟುಡಿಯೋದಲ್ಲಿ ಡಬ್ಬಿಂಗ್‌ ನಡೆಸುತ್ತಿದೆ. ಈಗಾಗಲೇ “ಮಾರಿಗೋಲ್ಡ್‌” ಸಾಕಷ್ಟು ಕುತೂಹಲ ಹುಟ್ಟಿಸಿದೆ. ಅದಕ್ಕೆ ಕಾರಣ, ಶೀರ್ಷಿಕೆ ಮತ್ತು ಚಿತ್ರತಂಡ ಬಿಡುಗಡೆ ಮಾಡಿರುವ ಶೀರ್ಷಿಕೆ ಫಸ್ಟ್‌ ಲುಕ್‌.

ಮಾರಿಗೋಲ್ಡ್‌ ಅಂಡರ್‌ವರ್ಲ್ಡ್‌ ಸಿನ್ಮಾನಾ?

ಶೀರ್ಷಿಕೆಯೇ ಅದೊಂದು ಅಂಡರ್‌ವರ್ಲ್ಡ್‌ ಸಿನಿಮಾ ಇರಬಹುದಾ ಎಂಬ ಪ್ರಶ್ನೆಯೂ ಮೂಡಿಬರುತ್ತೆ. ಅದಕ್ಕೆ ಕಾರಣ, ನಿರ್ದೇಶಕ ರಾಘವೇಂದ್ರ ಎಂ.ನಾಯಕ್‌ ಅವರು ಬಿಡುಗಡೆ ಮಾಡಿರುವ ಪೋಸ್ಟರ್‌ನಲ್ಲಿ ಒಂದು ಗನ್‌, ಬುಲೆಟ್ಸ್‌ ಹಾಗೂ ಗೋಲ್ಡ್‌ ಬಿಸ್ಕತ್‌ಗಳನ್ನಿಟ್ಟು ಒಂದಷ್ಟು ಕುತೂಹಲ ಮೂಡಿಸಿದ್ದಾರೆ. ಹಾಗಾಗಿ, ಇದೊಂದು “ಮಾರಿಗೋಲ್ಡ್‌” ಅಂಡರ್‌ವರ್ಲ್ಡ್‌ ಸಬ್ಜೆಕ್ಟ್‌ ಇರಬಹುದೇನೋ ಎಂಬ ಪ್ರಶ್ನೆಯನ್ನು ತಳ್ಳಿಹಾಕುವಂತಿಲ್ಲ. ದಿಗಂತ್‌ ಅವರಿಗೆ ಇದೊಂದು ಹೊಸಬಗೆಯ ಚಿತ್ರವಂತೆ. ಅದರಲ್ಲೂ ದಿಗಂತ್‌ ಮೊದಲ ಬಾರಿಗೆ ಈ ರೀತಿಯ ಪಾತ್ರ ನಿರ್ವಹಿಸಿದ್ದಾರೆ. ಹಾಡುಗಳ ಚಿತ್ರೀಕರಣವಷ್ಟೇ ಬಾಕಿ ಉಳಿಸಿಕೊಂಡಿರುವ ಈ ಚಿತ್ರವನ್ನು ರಘುವರ್ಧನ್‌ ನಿರ್ಮಾಣ ಮಾಡಿದ್ದಾರೆ. ಇನ್ನು, ರಘುವರ್ಧನ್‌ ಅವರು ಮೂಲತಃ ನಿರ್ದೇಶಕರಾಗಿದ್ದರೂ, ಅವರು ಹೊಸ ಪ್ರತಿಭಾವಂತ ಯುವ ನಿರ್ದೇಶಕ ರಾಘವೇಂದ್ರ ಎಂ.ನಾಯಕ್‌ ಅವರಿಗೆ ನಿರ್ದೇಶನ ಮಾಡಲು ಅವಕಾಶ ಕಲ್ಪಿಸಿಕೊಟ್ಟಿದ್ದಾರೆ.

ರಘುವರ್ಧನ್‌, ನಿರ್ಮಾಪಕ

ಕಥೆಗಾಗಿ ನಿರ್ಮಾಣಕ್ಕಿಳಿದ ರಘುವರ್ಧನ್

ಅದಕ್ಕೆ ಕಾರಣ, ರಾಘವೇಂದ್ರ ಎಂ.ನಾಯಕ್‌ ಅವರು ಮಾಡಿಕೊಂಡಿದ್ದ ಕಥೆ. ಕಥೆ ಚೆನ್ನಾಗಿದ್ದರಿಂದ, ಆ ಕಥೆಯನ್ನು ರಾಘವೇಂದ್ರ ನಾಯಕ್‌ ಅವರೇ ನಿರ್ದೇಶಿಸಲಿ ಎಂಬ ಮನೋಭಾವದಿಂದಾಗಿ ರಘುವರ್ಧನ್‌, ನಿರ್ಮಾಣಕ್ಕೆ ಮುಂದಾಗಿದ್ದಾರೆ. ಇನ್ನು, ಬಹುತೇಕ ಬೆಂಗಳೂರು ಸುತ್ತಮುತ್ತಲ ತಾಣಗಳಲ್ಲಿ ಚಿತ್ರೀಕರಣಗೊಂಡಿರುವ ಚಿತ್ರದಲ್ಲಿ ಹಲವು ವಿಶೇಷತೆಗಳಿವೆ. ಆ ಕಾರಣಕ್ಕೆ ಇದು ಸಾಕಷ್ಟು ವಿಶೇಷ ಎನಿಸಿಕೊಂಡಿದೆ. ಇದೊಂದು ಪಕ್ಕಾ ಕ್ರೈಮ್‌ ಥ್ರಿಲ್ಲರ್‌ ಕಥಾಹಂದರ ಹೊಂದಿದ್ದು, ದಿಗಂತ್‌ ಅವರಿಗೆ ಸಂಗೀತಾ ಶೃಂಗೇರಿ ಜೋಡಿಯಾಗಿದ್ದಾರೆ. ಇವರೊಂದಿಗೆ ಸಂಪತ್‌ ಕುಮಾರ್‌, ಕಾಕ್ರೋಚ್‌ ಸುಧಿ, ಯಶ್‌ ಶೆಟ್ಟಿ, ರಾಜ್‌ ಬಲವಾಡಿ, ಗಣೇಶ್‌ರಾವ್‌ ಸೇರಿದಂತೆ ಹಲವು ಕಲಾವಿದರು ಕಾಣಿಸಿಕೊಂಡಿದ್ದಾರೆ.

ರಾಘವೇಂದ್ರ ಎಂ.ನಾಯಕ್‌, ನಿರ್ದೇಶಕ

 

ಚಿತ್ರಕ್ಕೆ ಕೆ.ಎಸ್.‌ ಚಂದ್ರಶೇಖರ್‌ ಕ್ಯಾಮೆರಾ ಹಿಡಿದರೆ, ವೀರ್‌ಸಮರ್ಥ್‌ ಅವರ ಸಂಗೀತವಿದೆ. ಕೆ.ಎಂ.ಪ್ರಕಾಶ್‌ ಅವರ ಸಂಕಲನವಿದೆ. ರಘು ನಿಡುವಳ್ಳಿ ಅವರ ಸಂಭಾಷಣೆ ಬರೆದಿದಾರೆ. ಯೋಗರಾಜ್‌ ಭಟ್‌, ಕವಿರಾಜ್‌, ವಿಜಯ್‌ ಭರಮಸಾಗರ ಸಾಹಿತ್ಯವಿದೆ.‌ ಸದ್ಯಕ್ಕೆ ಡಬ್ಬಿಂಗ್‌ ಕಾರ್ಯದಲ್ಲಿ ನಿರತವಾಗಿರುವ ಚಿತ್ರ, ಒಂದಷ್ಟು ಸುದ್ದಿಯಲ್ಲಂತೂ ಇದೆ. “ಮಾರಿಗೋಲ್ಡ್”‌ ಒಂದು ರೀತಿಯ ಮಾಸ್‌ ಕ್ರೇಜ್‌ ಹುಟ್ಟುಹಾಕಿದ್ದು, ದಿಗಂತ್‌ ಅವರನ್ನೂ ಮಾಸ್‌ ಲುಕ್‌ ನಲ್ಲಿ ತೋರಿಸಿದ್ದಾರಾ ಎಂಬ ಪ್ರಶ್ನೆ ಇದ್ದರೂ, “ಮಾರಿಗೋಲ್ಡ್‌” ಪಕ್ಕಾ ಸಿನಿಪ್ರೇಮಿಗಳಿಗಂತೂ ಒಂದೊಳ್ಳೆಯ ಮನರಂಜನಾತ್ಮಕ ಸಿನಿಮಾ ಆಗಿ ಹೊರಬರಲಿದೆ ಎಂಬ ಗ್ಯಾರಂಟಿ ಕೊಡುತ್ತಾರೆ ನಿರ್ಮಾಪಕ ರಘುವರ್ಧನ್.

Categories
ಸಿನಿ ಸುದ್ದಿ

ಆಕಾಶವಾಣಿ ಡಬ್ಬಿಂಗ್‌ ಕಂಪ್ಲೀಟ್‌

ನಿರೀಕ್ಷೆ ಹೆಚ್ಚಿಸಿದ ಹೊಸಬರ ಚಿತ್ರ

ಕನ್ನಡದಲ್ಲಿ ಒಂದಷ್ಟು ಸಿನಿಮಾಗಳು ಗಮನಸೆಳೆಯುತ್ತಿರುವುದು ಗೊತ್ತೇ ಇದೆ. ಅದರಲ್ಲೂ ಹೊಸಬರಂತೂ ತಮ್ಮ ಚಿತ್ರಗಳಿಗೆ ವಿಭಿನ್ನ ಸಿನಿಮಾ ಶೀರ್ಷಿಕೆ ಮೂಲಕವೇ ಗಮನಸೆಳೆಯುತ್ತಿದ್ದಾರೆ. ಆ ಸಾಲಿಗೆ “ಇದು ಆಕಾಶವಾಣಿ ಬೆಂಗಳೂರು ನಿಲಯ” ಸಿನಿಮಾ ಕೂಡ ಸೇರಿದೆ. ತನ್ನ ಶೀರ್ಷಿಕೆಯಲ್ಲೇ ಸಾಕಷ್ಟು ಕುತೂಹಲ ಮೂಡಿಸಿರುವ ಈ ಚಿತ್ರದ ಮೇಲೆ ನಿರೀಕ್ಷೆಯೂ ಇದೆ. ಸದ್ಯಕ್ಕೆ ಈ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದ್ದು, ಇದೀಗ ಡಬ್ಬಿಂಗ್‌ ಕೂಡ ಮುಗಿಸಿದೆ. ಕಮಲಾನಂದ ಚಿತ್ರಾಲಯ ಸಂಸ್ಥೆಯಡಿ ಶಿವಾನಂದಪ್ಪ ಬಳ್ಳಾರಿ (ಮಿಸ್ಟರ್ ಎಇಜಿ) ಹಾಗೂ ಅವರ ಒಂದಷ್ಟು ಗೆಳೆಯರು ಸೇರಿ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಬೆಂಗಳೂರು, ತಿಪಟೂರು ಹಾಗೂ ನೊಣವಿನಕೆರೆ ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ.


ಇತ್ತೀಚೆಗೆ ಚಿತ್ರದ ಡಬ್ಬಿಂಗ್ ಮುಗಿಸಿರುವ ಚಿತ್ರತಂಡ, ಇನ್ನೇನು ಪ್ರೇಕ್ಷಕರ ಮುಂದೆ ಬರಲು ಸಜ್ಜಾಗುತ್ತಿದೆ. ಈ ಹಿಂದೆ “ನಾವೇ ಭಾಗ್ಯವಂತರು” ಎಂಬ ಚಿತ್ರವನ್ನು ನಿರ್ದೇಶಿಸಿದ್ದ ಎಂ. ಹರಿಕೃಷ್ಣ ಅವರು ಈ ಚಿತ್ರ ನಿರ್ದೇಶನ ಮಾಡಿದ್ದಾರೆ. ಇದೊಂದು ವಿಭಿನ್ನವಾದ ಹಾರರ್, ಥ್ರಿಲ್ಲರ್ ಕಥಾಹಂದರ ಹೊಂದಿರುವ ಸಿನಿಮಾ ಆಗಿದ್ದು, ಚಿತ್ರಕ್ಕೆ ಸುಮ್‌ ಸುಮ್ನೆ ವಿಜಯಕುಮಾರ್ ಅವರು ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ. ಎ.ಟಿ.ರವೀಶ್‌ ಸಂಗೀತವಿದೆ. ಆಂಟೋನಿ ಎಂ, ಶಿವರಾಜ್‍ಗುಬ್ಬಿ ಅವರ ಸಾಹಿತ್ಯವಿದೆ. ಪ್ರವೀಣ್ ಶೆಟ್ಟಿ ಅವರ ಛಾಯಾಗ್ರಹಣ, ಪವನ್‍ಗೌಡ ಅವರ ಸಂಕಲನ, ಕಂಬಿರಾಜು ಅವರ ನೃತ್ಯ ನಿರ್ದೇಶನವಿದೆ. ನಿಖಿತಸ್ವಾಮಿ, ರಣ್‌ವೀರ್
‌ ಟೀಲ್, ಸುಚೇಂದ್ರ ಪ್ರಸಾದ್, ಟೆನ್ನಿಸ್ ಕೃಷ್ಣ, ಎಸ್.ನಾರಾಯಣಸ್ವಾಮಿ, ದಿವ್ಯಶ್ರೀ (ಕಾಮಿಡಿ ಕಿಲಾಡಿಗಳು) ಮುಂತಾದವರ ತಾರಾಬಳಗವಿದೆ. ಸದ್ಯದಲ್ಲೇ ಚಿತ್ರದ ಹಾಡುಗಳನ್ನು ಬಿಡುಗಡೆ ಮಾಡುವ ಯೋಚನೆ ನಿರ್ಮಾಪಕರದ್ದು.

Categories
ಸಿನಿ ಸುದ್ದಿ

ಜೆಕೆ ಮತ್ತೆ ಬಂದ್ರು

ಅವರೀಗ ಐರಾವನ್ ಸಿನ್ಮಾ ಹೀರೋ

ಕನ್ನಡದಲ್ಲಿ ಹಲವು ಸಿನಿಮಾ ಮೂಲಕ ಗುರುತಿಸಿಕೊಂಡಿದ್ದರೂ, ಕಿರುತೆರೆ ಮೂಲಕ ಸುದ್ದಿಯಾದ ನಟ ಜೆಕೆ (ಜಯರಾಮ್‌ ಕಾರ್ತಿಕ್)‌ ಈಗ ಮತ್ತೊಂದು ಹೊಸ ಸಿನಿಮಾ ಮೂಲಕ ಸುದ್ದಿಯಾಗುತ್ತಿದ್ದಾರೆ. ಹೌದು, ಅವರ ಹೊಸ ಚಿತ್ರಕ್ಕೆ “ಐರಾವನ್‌” ಎಂದು ನಾಮಕರಣ ಮಾಡಲಾಗಿದೆ. ಇತ್ತೀಚೆಗೆ ಗವಿಪುರಂನಲ್ಲಿರುವ ಕಾಲಭೈರವನ ಸನ್ನಿಧಿಯಲ್ಲಿ ನೂತನ ಚಿತ್ರ ಆರಂಭಗೊಂಡಿದೆ. “ನಿರಂತರ” ಗಣೇಶ್‌ ಅವರು ಕ್ಲಾಪ್‌ ಮಾಡುವ ಮೂಲಕ ಸಿನಿಮಾಗೆ ಚಾಲನೆ ಕೊಟ್ಟರು. ಇನ್ನು, ಈ ಸಂದರ್ಭದಲ್ಲಿ ತುಮಕೂರಿನ ಶ್ರೀಸಾಗರ ಮಹಾಸ್ವಾಮಿಗಳು ಕ್ಯಾಮೆರಾಗೆ ಚಾಲನೆ ನೀಡಿದರು.

ಈ ಚಿತ್ರವನ್ನು ನಿರಂತರ ಗಣೇಶ್ ಅವರು ತಮ್ಮ ನಿರಂತರ ಪ್ರೊಡಕ್ಷನ್ಸ್ ಮೂಲಕ ನಿರ್ಮಿಸುತ್ತಿದ್ದಾರೆ. ರಾಮ್ಸ್ ರಂಗಾ ಅವರು ಕಥೆ, ಚಿತ್ರಕಥೆ ಬರೆದು ನಿರ್ದೇಶನಕ್ಕೆ ಕೈ ಹಾಕಿದ್ದಾರೆ. ಈಗಾಗಲೇ ಕನ್ನಡದ ಹಲವು ಚಿತ್ರಗಳಿಗೆ ಸಹ ಹಾಗೂ ಸಹಾಯಕ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿರುವ ರಾಮ್ಸ್ ರಂಗಾ ಅವರಿಗೆ ಇದು ಮೊದಲ ನಿರ್ದೇಶನದ ಚಿತ್ರ. ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಕಥೆ ಹೊಂದಿದ್ದು, ಬೆಂಗಳೂರು ಮತ್ತು ಮಂಗಳೂರು ಸುತ್ತಮುತ್ತ ಒಂದೇ ಹಂತದ ಚಿತ್ರೀಕರಣ ನಡೆಯಲಿದೆ. ಎಸ್. ಪ್ರದೀಪ್ ವರ್ಮ ಸಂಗೀತವಿದೆ. ಚಿತ್ರಕ್ಕೆ ದೇವೇಂದ್ರ ಛಾಯಾಗ್ರಹಣ ಮಾಡಿದರೆ, ಕೆ.ಎಂ.ಪ್ರಕಾಶ್ ಸಂಕಲನವಿದೆ. ಅರ್ಜುನ್ ಸಾಹಸ ನಿರ್ದೇಶನ ಹಾಗೂ ವಲ್ಲಭ ಅವರ ನಿರ್ಮಾಣ ನಿರ್ವಹಣೆಯಿದೆ ಚಿತ್ರಕ್ಕೆ ಇದೆ. ಚಿತ್ರದಲ್ಲಿ ವಿವೇಕ್, ಅದ್ವಿತಿ ಶೆಟ್ಟಿ, ಅವಿನಾಶ್, ಕೃಷ್ಣ ಹೆಬ್ಬಾರ್ ಇತರರು ಇದ್ದಾರೆ.

Categories
ಸಿನಿ ಸುದ್ದಿ

ಶಂಕರ್‌ ನಾಗ್‌ ಹುಟ್ಟು ಹಬ್ಬಕ್ಕೆ ಶುಭಕೋರಿದ ಫ್ಯಾನ್ಸ್‌

ಆಟೋರಾಜನ ನೆನಪಿಸಿಕೊಂಡ ಚಿತ್ರರಂಗ

ಕನ್ನಡ‌ ಚಿತ್ರರಂಗ ಕಂಡ ಅದ್ಬುತ ನಟ,‌ ನಿರ್ದೇಶಕ ಮತ್ತು ತಂತ್ರಜ್ಞ. ಇದ್ದ ಅಲ್ಪ ಸಮಯದಲ್ಲೇ ಸಾಕಷ್ಟು ಸಂದೇಶವುಳ್ಳ ಸಿನಿಮಾ ಕಟ್ಟಿಕೊಡುವ ಮೂಲಕ ಕನ್ಮಡಿಗರ ಪಾಲಿಗೆ ಪ್ರೀತಿಯ ಶಂಕ್ರಣ್ಣ ಆಗಿ ಉಳಿದವರು. ನವೆಂಬರ್‌ 9 ಅವರ ಹುಟ್ಟುಹಬ್ಬ. ಎಲ್ಲೆಡೆ ಅವರ ಅಭಿಮಾನಿಗಳು ಹುಟ್ಟುಹಬ್ಬವನ್ನು ಪ್ರೀತಿಯಿಂದ ಆಚರಿಸಿದ್ದಾರೆ. ಇನ್ನು, ಸಿನಿಮಾರಂಗದಿಂದಲೂ ಸಾಕಷ್ಟು ಸ್ಟಾರ್‌ ನಟರು ಪ್ರೀತಿಯಿಂದಲೇ ಶಂಕರ್‌ನಾಗ್‌ ಅವರ ಹುಟ್ಟುಹಬ್ಬಕ್ಕೆ ಶುಭಕೋರಿದ್ದಾರೆ. ಕಿಚ್ಚ ಸುದೀಪ್‌ ಕೂಡ ಶಂಕರ್‌ ನಾಗ್‌ ಅವರ ಹುಟ್ಟುಹಬ್ಬಕ್ಕೆ ತಮ್ಮ ಟ್ವೀಟ್‌ನಲ್ಲಿ ಶಂಕರ್ ನಾಗ್‌ ಅವರ ಫೋಟೋ ಹಂಚಿಕೊಂಡು ಶುಭಕೋರಿದ್ದಾರೆ. ಉಳಿದಂತೆ ಸಾಕಷ್ಟು ಮಂದಿ ಶುಭಕೋರಿದ್ದಾರೆ.


ಶಂಕರ್‌ ನಾಗ್‌ ಅವರು ಈಗ ನಮ್ಮೊಂದಿಗಿಲ್ಲ. ಆದರೆ ಅವರ ಸಿನಿಮಾಗಳ ಮೂಲಕ ಎಲ್ಲರ ಮನದಲ್ಲಿ ಅಚ್ಚಳಿಯದೆ ಉಳಿದಿದ್ದಾರೆ. ಉತ್ತತರ ಕನ್ನಡ ಜಿಲ್ಲೆಯ ಹೊನ್ನಾವರ ಸಮೀಪದ ಮಲ್ಲಾಪುರ ಗ್ರಾಮದ ಶಂಕರ್‌ನಾಗ್‌, ಮುಂಬೈ ವಿಶ್ವವಿದ್ಯಾಲಯದಲ್ಲಿ ಕಾಮರ್ಸ್‌ ಪದವಿ ಓದಿದವರು. ಬ್ಯಾಂಕ್‌ ನೌಕರರಾಗಿ ಮೊದಲು ಸೇವೆ ಸಲ್ಲಿಸಿದವರು. “ಒಂದಾನೊಂದು ಕಾಲದಲ್ಲಿ” ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡಿದವರು. “ಸೀತಾರಾಮು” ಅವರ ವೃತ್ತಿ ಬದುಕಲ್ಲಿ ದೊಡ್ಡ ತಿರುವು ಕೊಟ್ಟ ಚಿತ್ರ. ಆ ಬಳಿಕ “ಮಿಂಚಿನ ಓಟ” ಎಂಬ ಸಿನಿಮಾ ಮೂಲಕ ನಿರ್ದೇಶನಕ್ಕೆ ಎಂಟ್ರಿಕೊಟ್ಟರು. ಆ ಸಿನಿಮಾ ಮೂಲಕವೇ ನಿರ್ಮಾಪಕರೂ ಆಗಿಬಿಟ್ಟರು. ಇನ್ನು, “ಸಂಕೇತ್‌ ಸ್ಟುಡಿಯೋ” ಕಟ್ಟಿದ್ದ ಅವರು ದೊಡ್ಡ ಕೊಡುಗೆ ಕೊಟ್ಟವರು. “ಮಾಲ್ಗುಡಿ ಡೇಸ್”‌ ಎಂಬ ಧಾರಾವಾಹಿ ನಿರ್ದೇಶಿಸಿ, ಇಂದಿಗೂ ಮನೆಮಾತಾದವರು. 1978 ರಿಂದ 1990ರ ತನಕ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿದ್ದರು. ಅವರು ಇರುವವರೆಗೆ 83 ಚಿತ್ರಗಳಲ್ಲಿ ನಟಿಸಿದ್ದಾರೆ ಎಂಬುದು ವಿಶೇಷ. ಅವರ ಅಭಿನಯದ ಕೊನೆಯ ಚಿತ್ರ “ಸುಂದರ ಕಾಂಡ”. ಈಗ ಅವರು ಇಲ್ಲದ 30 ವರ್ಷಗಳು ಕಳೆದಿವೆ. ಸೆ.30, 1990 ಅವರು ಇಹಲೋಕ ತ್ಯಜಿಸಿದರು. ಮೂರು ದಶಕ ಕಳೆದರೂ ಅವರ ನೆನಪು ಮಾತ್ರ ಜೀವಂತ. ಸೆ.30 ಆಟೋರಾಜನ ಪುಣ್ಯಸ್ಮರಣೆ. ನವೆಂಬರ್‌ 9 ಅವರ ಹುಟ್ಟುಹಬ್ಬ. ಶಂಕರ್ ನಾಗ್ ಅವರಿಗೆ ಎಲ್ಲಾ ವರ್ಗದ ಅಭಿಮಾನಿಗಳೂ ಇದ್ದಾರೆ. ಅವರ ಎದೆಯಲ್ಲಿ ಸದಾ ಹಸಿರಾಗಿರುವ ಶಂಕರ್ ನಾಗ್ ಎಂದೂ ಮರೆಯದ ಧ್ರುವತಾರೆ. ಇಂದಿಗೂ ಅವರು ಗೀತಾ, ಸಾಂಗ್ಲಿಯಾನ, ಮಿಂಚಿನ ಓಟ, ಒಂದು ಮುತ್ತಿನ ಕಥೆ, ಮಾಲ್ಗುಡಿ ಡೇಸ್… ಮೂಲಕ ನೆನಪಾಗುತ್ತಲೇ ಇದ್ದಾರೆ. ಇಂತಹ ಮಹಾನ್‌ ನಟನಿಗೆ “ಸಿನಿಲಹರಿ” ಕಡೆಯಿಂದ ಹುಟ್ಟುಹಬ್ಬದ ಶುಭಾಶಯ.

Categories
ಸಿನಿ ಸುದ್ದಿ

ಪೆಂಟಗನ್‌ ಎಂಬ ಹೊಸ ಪ್ರಯೋಗ

ವಿಭಿನ್ನ ಪ್ರಯತ್ನಕ್ಕೆ ಮುಂದಾದ ಗುರುದೇಶಪಾಂಡೆ

ಗುರುದೇಶಪಾಂಡೆ

ನಿರ್ದೇಶಕ ಕಮ್‌ ನಿರ್ಮಾಪಕ ಗುರುದೇಶಪಾಂಡೆ ಈಗ ಮತ್ತೆ ಸುದ್ದಿಯಲ್ಲಿದ್ದಾರೆ. ಹೌದು, ಈ ವರ್ಷದ ಆರಂಭದಲ್ಲಿ “ಜಂಟಲ್‌ ಮ್ಯಾನ್‌” ಸಿನಿಮಾ ರಿಲೀಸ್‌ ಮಾಡಿ ಗೆಲುವು ಕಂಡಿದ್ದ ಗುರುದೇಶಪಾಂಡೆ, ಈಗ ಹೊಸ ಸಿನಿಮಾ ಕೈಗೆತ್ತಿಕೊಂಡಿದ್ದಾರೆ. ಅವರು ತಮ್ಮ ಜಿ ಸಿನಿಮಾಸ್‌ ಬ್ಯಾನರ್‌ನಡಿಯಲ್ಲಿ ವಿಭಿನ್ನ ಪ್ರಯತ್ನಕ್ಕೆ ಮುಂದಾಗಿದ್ದಾರೆ. ತಮ್ಮ ಹೊಸ ಚಿತ್ರಕ್ಕೆ “ಪೆಂಟಗನ್‌” ಎಂದು ಹೆಸರಿಡಲಾಗಿದೆ. ಅಂದಹಾಗೆ, ಈ ಚಿತ್ರವನ್ನು ಐವರು ಪ್ರತಿಭಾವಂತ ನಿರ್ದೇಶಕರು ನಿರ್ದೇಶನ ಮಾಡುತ್ತಿದ್ದಾರೆ ಅನ್ನೋದು ವಿಶೇಷ. ಐವರು ನಿರ್ದೇಶಕರಿಂದ ವಿಭಿನ್ನ ಸಿನಿಮಾ ಕೊಡುವ ಪ್ರಯತ್ನಕ್ಕೆ ಮುಂದಾಗಿದ್ದಾರೆ ದೇಶಪಾಂಡೆ. ಇನ್ನು, ಐವರು ನಿರ್ದೇಶಕರು ನಿರ್ದೇಶನ ಮಾಡುತ್ತಿದ್ದಾರೆ ಅಂದಮೇಲೆ, ಚಿತ್ರಕ್ಕಾಗಿ ಆಯ್ಕೆ ಮಾಡಿಕೊಂಡ ಕಥೆಗಳು ಕೂಡ ಒಂದಕ್ಕಿಂತ ಒಂದು ಭಿನ್ನವಾಗಿರಲಿವೆ. ಪ್ರತಿ ಕಥೆಯಿಂದ ಇನ್ನೊಂದು ಕಥೆಗೆ ಹೊಂದಾಣಿಕೆಯಾಗುವಂತೆಯೇ ಕಥೆ ಹೆಣೆಯಲಾಗಿದೆ. ಕಥೆಯಲ್ಲಿ ಒಳ್ಳೆಯ ಆಶಯವಿದೆ. ಐದು ಬೇರೆ ಬೇರೆ ಕಥೆಗಳಿದ್ದರೂ, ಅಂತ್ಯದಲ್ಲಿ ಒಂದಕ್ಕೊಂದು ಲಿಂಕ್‌ ಇರಲಿದೆ. ಈ “ಪೆಂಟಗನ್‌” ಸಿನಿಮಾ ಕುರಿತು ಮಾತನಾಡುವ ಗುರುದೇಶಪಾಂಡೆ, “ನನ್ನ ನಿರ್ಮಾಣ ಸಂಸ್ಥೆಯಲ್ಲಿ ಸೃಜನಶೀಲ ಹಾಗೂ ಹೊಸತನಗಳಿಂದ ಕೂಡಿದ ಚಿತ್ರಗಳನ್ನು ನಿರ್ಮಾಣ ಮಾಡುವ ಕೆಲಸ ಮಾಡುತ್ತಿದ್ದೇನೆ. ಅದು “ಜಂಟಲ್‌ಮನ್”‌ ನಂತರವೂ ನಾನು ಮುಂದುವರೆಸುತ್ತಿದ್ದೇನೆ ಎನ್ನುತ್ತಾರೆ  ಅವರು.

ಗುರು ಶೂಟಿಂಗ್‌ ಶುರು…
ಈಗಾಗಲೇ ಸದ್ದಿಲ್ಲದೆಯೇ “ಪೆಂಟಗನ್‌” ಸಿನಿಮಾದ ಚಿತ್ರೀಕರಣ ನಡೆಯುತ್ತಿದೆ. ಐದು ಕಥೆಗಳ ಪೈಕಿ ಎರಡು ಕಥೆಗಳ ಚಿತ್ರೀಕರಣವನ್ನೂ ಮುಗಿಸಲಾಗಿದೆ. ಇತರೆ ಕಥೆಗಳ ಚಿತ್ರೀಕರಣ ಬಾಕಿ ಇದೆ. ಈ ಸಿನಿಮಾಗೆ ಹಲವು ತಿಂಗಳ ಹಿಂದೆಯೇ ಸಿದ್ಧತೆ ನಡೆಸಲಾಗಿತ್ತು. ಕೊರೊನಾ ಸಮಸ್ಯೆಯಿಂದಾಗಿ ಎಲ್ಲೂ ಸುದ್ದಿಯಾಗಿರಲಿಲ್ಲ. ಈಗ “ಪೆಂಟಗನ್‌” ಕುರಿತು ವಿವರಿಸುತ್ತಿರುವುದಾಗಿ ಹೇಳುತ್ತಾರೆ ಗುರುದೇಶಪಾಂಡೆ. ಇನ್ನು ಶೀರ್ಷಿಕೆ ಕುರಿತು ಹೇಳುವ ಗುರುದೇಶಪಾಂಡೆ, “ಪೆಂಟಗನ್‌” ಅಂದರೆ, ಐದು ಮುಖಗಳ ಆಕಾರ. ಕಥೆ ಕೂಡ ಶೀರ್ಷಿಕೆಗೆ ಹೊಂದಿಕೊಳ್ಳುತ್ತದೆ. ಒಟ್ಟಾರೆ, ಒಂದೊಳ್ಳೆಯ ಸಿನಿಮಾ ಕೊಡುವ ಉದ್ದೇಶದಿಂದ ಐದು ಕಥೆಗಳನ್ನು ಆಯ್ಕೆ ಮಾಡಿಕೊಂಡು ಸಿನಿಮಾ ಮಾಡುತ್ತಿದ್ದೇನೆ. ಈ ಚಿತ್ರ ಎಲ್ಲರಿಗೂ ರುಚಿಸಲಿದೆ ಎಂಬ ನಂಬಿಕೆ ನನಗಿದೆ. ಇನ್ನು, ಚಿತ್ರದಲ್ಲಿ ಐವರು ಪ್ರತಿಭಾವಂತ ನಿರ್ದೇಶಕರು ಮಾತ್ರವಲ್ಲದೆ, ಪ್ರಸಿದ್ಧ ನಟರು ಮತ್ತು ತಾಂತ್ರಿಕರು ಕೆಲಸ ಮಾಡುತ್ತಿದ್ದಾರೆ. ಕನ್ನಡ ಸಿನಿಮಾ ರಂಗದಲ್ಲಿ ಈಗಾಗಲೇ ತಮ್ಮದೇ ಆದ ಕೊಡುಗೆ ನೀಡಿದ ನಿರ್ದೇಶಕರು ಮತ್ತು ಹೊಸ ಹಾಗೂ ಅನುಭವಿ ಕಲಾವಿದರು ಮತ್ತು ತಾಂತ್ರಿಕರು ಈ ಚಿತ್ರಕ್ಕಾಗಿ ಕೆಲಸ ಮಾಡುತ್ತಿದ್ದಾರೆ ಇಷ್ಟರಲ್ಲೇ ಅವರನ್ನು ಪರಿಚಯಿಸುವ ಪ್ರಯತ್ನ ಮಾಡುವುದಾಗಿ ವಿವರ ಕೊಡುತ್ತಾರೆ ಗರು.

Categories
ಸಿನಿ ಸುದ್ದಿ

ಇದು ಸೋನಾಲ್ ಶುಗರ್ ಫ್ಯಾಕ್ಟರಿ!

ಹೊಸ ಚಿತ್ರ ಒಪ್ಪಿದ ಮಾಂತೆರೊ

ಸೋನಾಲ್

ಅಮೂಲ್ಯ ಸಹೋದರ ದೀಪಕ್ ಅರಸ್ ಈ ಹಿಂದೆ ‘ಮನಸಾಲಜಿ’ ಎಂಬ ಸಿನಿಮಾ ಮಾಡಿದ್ದು ಗೊತ್ತೇ ಇದೆ. ಈಗ ತುಂಬ ಗ್ಯಾಪ್ ಬಳಿಕ ಅವರೊಂದು “ಶುಗರ್ ಫ್ಯಾಕ್ಟರಿ” ಶುರುಮಾಡಿದ್ದಾರೆ.
ಹೀಗಂದಾಕ್ಷಣ, ದೀಪಕ್ ಶುಗರ್ ಫ್ಯಾಕ್ಟರಿ ಇಟ್ಟುಕೊಂಡರಾ ಎಂಬ ಅನುಮಾನ ಬೇಡ. ಗ್ಯಾಪ್ ನಂತರ ಅವರೀಗ “ಶುಗರ್ ಫ್ಯಾಕ್ಟರಿ” ಹೆಸರಿನ ಸಿನಿಮಾ ನಿರ್ದೇಶನಕ್ಕೆ ಕೈ ಹಾಕಿದ್ದಾರೆ.

ಈ ಸಿನಿಮಾಗೆ “ಡಾರ್ಲಿಂಗ್” ಕೃಷ್ಣ ಹೀರೋ. ಅವರಿಗೆ ಸೋನಲ್ ಮಾಂತೆರೊ ನಾಯಕಿಯಾಗಿದ್ದಾರೆ.
ಇದೊಂದು ಫನ್ ರೊಮ್ಯಾಂಟಿಕ್ ಕಥಾಹಂದರ ಹೊಂದಿರುವ ಚಿತ್ರ. ತಮ್ಮ ಎರಡನೇ ಸಿನಿಮಾಗೆಬಕೈ ಹಾಕಿರುವ ದೀಪಕ್‌ ಅರಸ್,
ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದಿದ್ದಾರೆ. ಬಹದ್ದೂರ್ ಚೇತನ್ ಸಂಭಾಷಣೆ ಬರೆಯುತ್ತಿದ್ದಾರೆ. ಇನ್ನು,.
ಬಾಲಮಣಿ ಪ್ರೊಡಕ್ಷನ್ಸ್ ಬ್ಯಾನರ್ ನಲ್ಲಿ ಗಿರೀಶ್ ಆರ್ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.‌
ಜನವರಿಯಲ್ಲಿ ಚಿತ್ರದ ಚಿತ್ರೀಕರಣ ಆರಂಭವಾಗಲಿದೆ. ಬೆಂಗಳೂರಿನಲ್ಲಿ ಮೊದಲ ಹಂತದ ಚಿತ್ರೀಕರಣ ನಡೆಯಲಿದೆ. ನಂತರ ಹಂತಹಂತವಾಗಿ ಗೋವಾ, ಮೈಸೂರು ಹಾಗೂ ಅಬ್ರಾಡ್ ನಲ್ಲಿ ಚಿತ್ರೀಕರಣ ಸಾಗಲಿದೆ.
ಆರು ಹಾಡುಗಳಿಗೆ ಕಬೀರ್ ರಫಿ ಸಂಗೀತ ನೀಡುತ್ತಿದ್ದಾರೆ. ಸಂತೋಷ್ ರೈ ಪಾತಾಜೆ ಅವರ ಛಾಯಾಗ್ರಹಣವಿದೆ.
ಡಾರ್ಲಿಂಗ್ ಕೃಷ್ಣ ಅವರಿಗೆ ಮೂವರು ನಾಯಕಿಯರಿದ್ದು, ಸದ್ಯ ಸೋನಾಲ್ ಮಾಂತೆರೊ ಮೊದಲ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಇನ್ನಿಬ್ಬರು ನಾಯಕಿಯರು ಸೇರಿದಂತೆ ಉಳಿದ ತಾರಾಬಳಗದ ಸುದ್ದಿ ಸದ್ಯದಲ್ಲೇ ಹೊರಬೀಳಲಿದೆ.

Categories
ಸಿನಿ ಸುದ್ದಿ

ಆಗ ಆಫೀಸ್ ಬಾಯ್, ಲೈಟ್ ಬಾಯ್ ಕೆಲಸ… ಈಗ ನಟ, ನಿರ್ದೇಶಕ, ನಿರ್ಮಾಪಕ!

ಸಿನಿ ದುನಿಯಾದ ಅದೃಷ್ಟ

ಸಿದ್ದು

ಈ ಚಿತ್ರರಂಗವೇ ಹಾಗೆ. ಒಮ್ಮೆ ಈ ಬಣ್ಣದ ಲೋಕಕ್ಕೆ ಕಾಲಿಟ್ಟರೆ, ಮನಸು ಸಾಧಿಸೋವರೆಗೂ ಬಿಡಲ್ಲ. ಕಲೆ ಎಲ್ಲರನ್ನೂ ಒಪ್ಪಿ ಅಪ್ಪಿಕೊಳ್ಳುವುದಿಲ್ಲ.
ನೂರಾರು ಸಂಕಷ್ಟಗಳ ನಡುವೆಯೇ ಇಲ್ಲಿ ಬದುಕು ಕಟ್ಟಿಕೊಂಡವರೂ ಇದ್ದಾರೆ. ಬೆಟ್ಟದಷ್ಟು ಕನಸು ಕಟ್ಟಿಕೊಂಡು‌ ಬಂದ ಪ್ರತಿಭೆಗಳೂ ಇಲ್ಲಿವೆ. ಆ ಸಾಲಿಗೆ ಈಗ ಸಿದ್ದು ಎಂಬ ಹೊಸ ಪ್ರತಿಭೆಯೂ ಸೇರಿದೆ.
ಸಿದ್ದು ಮೂಲತಃ ಕೋಟೆ ನಾಡು ಚಿತ್ರದುರ್ಗದವರು.
ಸಿದ್ದು, ಸಿನಿಮಾರಂಗಕ್ಕೆ ಬಂದದ್ದು ತಾನೊಬ್ಬ ನಟ‌ ಆಗಬೇಕು, ನಿರ್ದೇಶಕನಾಗಬೇಕು ಅಂತ. ಆದರೆ, ಆ ಕನಸು ಸುಲಭವಾಗಿರಲಿಲ್ಲ. ವರ್ಷಗಟ್ಟಲೆ ಕಷ್ಟಪಟ್ಟಿದ್ದೂ ಇದೆ. ಈಗಲೂ ಆ ಶ್ರಮ ಮುಂದುವರೆದಿದೆ.

ಆಗ ಲೈಟ್ ಬಾಯ್, ಈಗ ನಿರ್ಮಾಪಕ
ಸಿದ್ದು ಆರಂಭದ ದಿನಗಳಲ್ಲಿ ಆಫೀಸ್ ಬಾಯ್ ಆಗಿ, ಲೈಟ್ ಬಾಯ್ ಆಗಿ ನಂತರದ ದಿನಗಳಲ್ಲಿ ಜೂನಿಯರ್ ಆರ್ಟಿಸ್ಟ್ ಆಗಿ ಕೆಲಸ ಮಾಡಿದ್ದಾರೆ. ಇದರೊಂದಿಗೆ ಹಲವು ಚಿತ್ರಗಳಲ್ಲಿ ಸಹ ನಿರ್ದೇಶಕನಾಗಿ, ಬರಹಗಾರನಾಗಿಯೂ ಕೆಲಸ ಮಾಡಿದ್ದಾರೆ.
ಈ ಅನುಭವದೊಂದಿಗೆ ಅವರು, 2017 ರಲ್ಲಿ “ಅನಾಸಿನ್” ಎಂಬ ಕಿರುಚಿತ್ರದಲ್ಲಿ ಒಬ್ಬರೇ 6 ಪಾತ್ರಗಳಲ್ಲಿ ನಟಿಸಿ, ನಿರ್ದೇಶನ‌ ಮಾಡಿದ್ದಾರೆ.
ಆಮೇಲೆ ಸ್ವಂತವಾಗಿ ಸಿನಿ ಪ್ಯಾಲೇಸ್ ಸ್ಟುಡಿಯೋ ಎಂಬ ಕ್ಯಾಮೆರಾ ರೆಂಟಲ್ ಶುರು ಮಾಡಿ ಸಿನಿಮಾಗಳು, ಕಿರುಚಿತ್ರಗಳು, ಆಲ್ಬಮ್ ಸಾಂಗ್, ಸೀರಿಯಲ್, ವೆಬ್ ಸೀರೀಸ್ ಗಳು ಮಾಡಿದ್ದಾರೆ.

ಆರ್ಮಿಗೆ ಸೆಲ್ಯೂಟ್ 
ಕಳೆದ 2019ರಲ್ಲಿ ‘ಸೆಲ್ಯೂಟ್ ಫಾರ್ ಸೋಲ್ಡ್ಜರ್ಸ್’ ಎಂಬ ಆಲ್ಬಂ ಸಾಂಗ್ ನಲ್ಲಿ ನಟಿಸಿದ್ದಾರೆ. 2020 ರಲ್ಲಿ ‘ ಆಯ್ತು ಬಿಡಿ’ ಎಂಬ ಆಲ್ಬಮ್ ಸಾಂಗ್ ಗೆ ಸಾಹಿತ್ಯ ಬರೆದು, ನಟಿಸಿ, ನಿರ್ದೇಶಿಸಿ, ನಿರ್ಮಾಣ ಮಾಡಿದ್ದಾರೆ. ಸದ್ಯ ಈ ಹಾಡಿಗೆ ಒಳ್ಳೆಯ ಮೆಚ್ಚುಗೆ ಸಿಗುತ್ತಿದೆ.ಇದರೊಂದಿಗೆ ಸಿದ್ದು, ‘ಬ್ರಾಂಡೆಡ್ ಲವ್’ ಎಂಬ 30 ನಿಮಿಷದ ಕಿರುಚಿತ್ರ ತಯಾರಿಸಿದ್ದಾರೆ. ಈಗ ಇದೇ ಅನುಭವದೊಂದಿಗೆ ಒಂದು ಸಿನಿಮಾವನ್ನು ನಿರ್ದೇಶಿಸಿ, ನಿರ್ಮಿಸಿ, ನಟಿಸಿದ್ದಾರೆ. ಅದನ್ನೀಗ ಬಿಡುಗಡೆಗೆ ರೆಡಿ ಮಾಡುತ್ತಿದ್ದಾರೆ. ಮುಂದಿನ‌ ವರ್ಷ ಫೆಬ್ರವರಿಯಲ್ಲಿ ಒಂದು ಹಾಸ್ಯ ಪ್ರಧಾನ ಚಿತ್ರ ನಿರ್ದೇಶಿಸುವ ಯೋಚನೆಯಲ್ಲಿದ್ದಾರೆ ಸಿದ್ದು.

 

 

Categories
ಸಿನಿ ಸುದ್ದಿ

ಹೀಗೊಂದು ಸಿಹಿ ಸುದ್ದಿ ಗಂಡು ಗರ್ಭ ಧರಿಸಿದ ಕಥೆ!

ಇದು ನೂತನ ವೆಬ್ ಸೀರೀಸ್

ಈಗಾಗಲೇ ಕನ್ನಡದಲ್ಲಿ ತರಹೇವಾರಿ ಶೀರ್ಷಿಕೆ ‌ಇರುವ ಸಿನಿಮಾಗಳು ಬಂದಿವೆ. ಬರುತ್ತಲೂ ಇವೆ. ಸದ್ಯಕ್ಕೆ ಮತ್ತೊಂದು ವಿಶೇಷ ಎನಿಸುವ, ಗಮನ ಸೆಳೆಯುವ ಶೀರ್ಷಿಕೆ ಹೊತ್ತ ವೆಬ್ ಸೀರೀಸ್ ಗೆ ಚಾಲನೆ ದೊರೆತಿದೆ.
ಹೌದು ಕನ್ನಡದಲ್ಲಿ ಈಗಂತೂ ವೆಬ್ ಸಿರೀಸ್ ಗಳ ಪರ್ವ. ಆ ಸಾಲಿಗೆ ‘ನಿಮಗೊಂದು ಸಿಹಿ ಸುದ್ದಿ’ ಹೆಸರಿನ‌ ವೆಬ್ ಸೀರೀಸ್ ಕೂಡ ಸೇರಿದೆ. ಇದೊಂದು ವಿಶೇಷ ಕಥಾಹಂದರ ಹೊಂದಿರುವ ವೆಬ್ ಸೀರೀಸ್.


ಕನ್ನಡದಲ್ಲಿ ಮೊದಲ ಬಾರಿಗೆ ಗರ್ಭ ಧರಿಸಿದ ಗಂಡಸೊಬ್ಬನ ಕಥೆ ಈ ವೆಬ್ ಸೀರೀಸ್ ನಲ್ಲಿ ಮೂಡಿ ಬರಲಿದೆ.
ಹಾಗೆ ಹೇಳುವುದಾದರೆ, ಕನ್ನಡದ ಮಟ್ಟಿಗೆ ಇದು
ಹೊಸ ಕಾನ್ಸೆಪ್ಟ್. ಸುಮಾರು
ಎಂಟು ಎಪಿಸೋಡುಗಳನ್ನು ಹೊಂದಿರುವ ಈ ಫ್ಯಾಮಿಲಿ ಎಂಟರ್ಟೈನ್ಮೆಂಟ್ ವೆಬ್ ಸಿರೀಸ್ ಗೆ ಇತ್ತೀಚೆಗೆ ಪೂಜೆ ನೆರವೇರಿದೆ. ಪರ್ಪಲ್ ರಾಕ್ ಎಂಟರ್ಟೈನರ್ಸ್ ಮತ್ತು ಗೋಲ್ಡ್ ಚೈನ್ ಪ್ರೊಡಕ್ಷನ್ಸ್ ಸಹಯೋಗದಲ್ಲಿ ಶುರುವಾಗುತ್ತಿರುವ ಈ ವೆಬ್ ಸರಣಿಗೆ ಗೋವಾದ ಶಾಂತದುರ್ಗ ದೇವಸ್ಥಾನದಲ್ಲಿ ಮುಹೂರ್ತ ನಡೆದಿದೆ.
ಸುಮಾರು 30 ದಿನಗಳ ಕಾಲ ಒಂದೇ ಹಂತದ ಚಿತ್ರೀಕರಣ ನಡೆಯಲಿದೆ.


‘ಡಿಯರ್ ಸತ್ಯ’ ಸಿನಿಮಾದ ಬಳಿಕ ಪರ್ಪಲ್ ರಾಕ್ ಎಂಟರ್ಟೈನರ್ಸ್ ಶುರು ಮಾಡುತ್ತಿರುವ ವೆಬ್ ಸೀರೀಸ್ ನಲ್ಲಿ ರಘು ಭಟ್ ಪ್ರಮುಖ ಆಕರ್ಷಣೆ. ಕಾವ್ಯ ಶೆಟ್ಟಿ ನಾಯಕಿ. ಆನಂದ್ ಸುಂದರೇಶ ಛಾಯಾಗ್ರಹಣವಿದೆ. ‘ಟೋಪಿವಾಲಾ’ ಚಿತ್ರದ ಸಹಾಯಕ ನಿರ್ದೇಶಕರಾಗಿದ್ದ ಸುಧೀಂದ್ರ ನಾಡಿಗರ್ ಆರ್ ಈ ವೆಬ್ ಸಿರೀಸ್ ಮೂಲಕ ನಿರ್ದೇಶಕರಾಗುತ್ತಿದ್ದಾರೆ.

Categories
ಸಿನಿ ಸುದ್ದಿ

ಜಗ್ಗೇಶ್ ಕಲಾ ಬದುಕಿಗೆ ನಾಲ್ಕು ದಶಕ

ನವರಸ ನಾಯಕನ 40 ವರ್ಷಗಳ ಯಶಸ್ವಿ ಜರ್ನಿ

ಕನ್ನಡ ಚಿತ್ರರಂಗದ ನವರಸ ನಾಯಕ‌ ಅಂದಾಕ್ಷಣ ನೆನಪಾಗೋದೆ ಜಗ್ಗೇಶ್. ಕನ್ನಡ‌ ಚಿತ್ರರಗ ಕಂಡ ಅಪರೂಪದ ನಟ ಜಗ್ಗೇಶ್.
ಆರಂಭದ ದಿನಗಳಲ್ಲಿ ಅವಕಾಶಕ್ಕಾಗಿ ಅಲೆದಾಡುತ್ತಿದ್ದ ಜಗ್ಗೇಶ್ ಅವರ ಸಿನಿ ಜರ್ನಿ ನಿಜಕ್ಕೂ ಅದ್ಭುತ. ಅವರ ಸಿನಿಮಾ‌ ಪಯಣಕ್ಕೀಗ ನಾಲ್ಕು ದಶಕ.
ಹೌದು, ಜಗ್ಗೇಶ್ ಕಲಾ ಬದುಕಿಗೆ ಎಂಟ್ರಿಯಾಗಿ ನಲವತ್ತು ದಶಕಗಳಾಗಿವೆ. ಇಷ್ಟು ವರ್ಷಗಳ ಸಿನಿ ಬದುಕಲ್ಲಿ ಹಲವು ಸೋಲು‌ ಕಂಡಿದ್ದಾರೆ. ಬದುಕು ಕಟ್ಟಿಕೊಳ್ಳಲು ಸಾಕಷ್ಟು ಕಷ್ಟಪಟ್ಟಿದ್ದಾರೆ. ಗೆಲುವು ಬಂದಾಗ ಹಿಗ್ಗದ ಸೋಲು‌ ಕಂಡಾಗ ಕುಗ್ಗದ ಜಗ್ಗೇಶ್ ತಮ್ಮ ಸಿನಿಮಾ ಪಯಣದಲ್ಲಿ ಹಲವು ಬಗೆಯ ಪಾತ್ರಗಳ ಮೂಲಕ ಸಿನಿ ರಸಿಕರ ಮನ ಗೆದ್ದಿದ್ದಾರೆ.


ಸಿನಿಮಾ‌ ಜೊತೆಗೆ ಜಗ್ಗೇಶ್ ಅವರು, ರಾಜಕೀಯದಲ್ಲೂ ಗುರುತಿಸಿಕೊಂಡಿದ್ದಾರೆ.
ಸಿನಿಮಾ ಜೊತೆ ಜೊತೆಗೆ ಅವರು ಕಿರುತೆರೆಯಲ್ಲೂ ಸದ್ದು ಮಾಡಿದ್ದು ಗೊತ್ತೇ ಇದೆ. ಸದಾ ರಾಯರ ನೆನೆಯುವ ಜಗ್ಗೇಶ್, ಈಗ ಯಶಸ್ವಿ ನಾಲ್ಕು ದಶಕ ಪೂರೈಸಿದ್ದಾರೆ. ಇನ್ನೂ ನಟನೆಯ ಉತ್ಸಹದಲ್ಲಿರುವ ಜಗ್ಗೇಶ್ ಇನ್ನಷ್ಟು ವಿಭಿನ್ನ ಸಿನಿಮಾ ಮಾಡಲಿ.

Categories
ಸಿನಿ ಸುದ್ದಿ

ತನಿಖೆಗೆ ಬಂದ ಹೊಸಬರು

ನವೆಂಬರ್‌ 20ಕ್ಕೆ ನಮ್ಮ ಫ್ಲಿಕ್ಸ್‌ನಲ್ಲಿ ಚಿತ್ರ ರಿಲೀಸ್

ಕನ್ನಡದಲ್ಲಿ ಈಗಾಗಲೇ ಓಟಿಟಿ ಫ್ಲಾಟ್‌ಫಾರ್ಮ್‌ ಮೂಲಕ ಒಂದಷ್ಟು ಸಿನಿಮಾಗಳು ಬಿಡುಗಡೆಯಾಗಿವೆ.ಇನ್ನಷ್ಟು ಚಿತ್ರಗಳು ಬಿಡುಗಡೆಗೂ ಸಜ್ಜಾಗಿವೆ. ಆ ಸಾಲಿಗೆ ಈಗ “ತನಿಖೆ” ಎಂಬ ಹೊಸಬರ ಚಿತ್ರವೂ ಸೇರಿದೆ

ಚಂದನಾ, ನಾಯಕಿ

“ತನಿಖೆ” ಎಂಬ ಶೀರ್ಷಿಕೆ ಕೇಳಿದಾಕ್ಷಣ, ಕಳೆದ ಎರಡುವರೆ ದಶಕದ ಹಿಂದೆ ಬಂದ ಗುಲ್ಜಾರ್‌ ಖಾನ್‌ ಅವರ “ತನಿಖೆ” ನೆನಪಾಗದೇ ಇರದು. ಈಗ ಆದೇ ಶೀರ್ಷಿಕೆ ಇಟ್ಟುಕೊಂಡು ಹೊಸಬರು ಹೊಸ ಪ್ರಯತ್ನದ ಮೂಲಕ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ. ಹೌದು, ಈ ಹೊಸಬರ “ತನಿಖೆ” ಸಿನಿಮಾ ಈ ಹಿಂದೆಯೇ ತೆರೆಗೆ ಬರಬೇಕಿತ್ತು. ಕೊರೊನಾ ಹಾವಳಿಯಿಂದಾಗಿ, ಚಿತ್ರ ಈಗ ಬಿಡುಗಡೆಯಾಗುತ್ತಿದೆ. ಅದರಲ್ಲೂ ಈ ಸಿನಿಮಾ ಓಟಿಟಿಯಲ್ಲಿ ಬಿಡುಗಡೆಯಾಗುತ್ತಿದೆ ಎಂಬುದು ವಿಶೇಷ.

ತನಿಖೆ ಚಿತ್ರತಂಡ…

“ನಮ್ಮ ಫ್ಲಿಕ್ಸ್” ಎಂಬ ಓಟಿಟಿ ಫ್ಲಾಟ್‌ಫಾರ್ಮ್ ನಲ್ಲಿ ನವೆಂಬರ್‌ 20 ರಂದು “ತನಿಖೆ” ಚಿತ್ರ ಬಿಡುಗಡೆಯಾಗುತ್ತಿದೆ. ಈ ಚಿತ್ರವನ್ನು ಕಲಿಗೌಡ ನಿರ್ದೇಶನ ಮಾಡಿದ್ದಾರೆ. ಇವರಿಗೆ ಇದು ಮೊದಲ ಚಿತ್ರ. ತಮ್ಮ ಗೆಳೆಯರ ಜೊತೆಗೂಡಿ ನಿರ್ಮಾಣವನ್ನೂ ಮಾಡಿದ್ದಾರೆ. ಇನ್ನು, ಈ ಚಿತ್ರ ಬಿಡುಗಡೆ ಕುರಿತು ನಿರ್ದೇಶಕ ಕಲಿಗೌಡ ಹೇಳುವುದಿಷ್ಟು. “ಬಹುತೇಕ ಹೊಸಬರೇ ಸೇರಿ ಮಾಡಿರುವ “ತನಿಖೆ” ಇದು. ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುವ ಮೊದಲೇ ನಾವು, “ನಮ್ಮ ಫ್ಲಿಕ್ಸ್” ಓಟಿಟಿ ಫ್ಲಾಟ್‌ಫಾರ್ಮ್‌ ನಲ್ಲಿ ನೇರವಾಗಿ ಬಿಡುಗಡೆ ಮಾಡುತ್ತಿದ್ದೇವೆ. ಈಗಾಗಲೇ ನಾವು ಟಿಕೆಟ್‌ಗಳನ್ನೂ ವಿತರಿಸಿದ್ದೇವೆ. ಸುಮಾರು 30 ಸಾವಿರ ಟಿಕೆಟ್‌ ವಿತರಿಸಲಾಗಿದೆ. ಒಳ್ಳೆಯ ಪ್ರತಿಕ್ರಿಯೆ ಕೂಡ ಸಿಗುತ್ತಿದೆ. ೯೯ ರುಪಾಯಿ ಕೊಟ್ಟು ಟಿಕೆಟ್‌ ಖರೀದಿಸುವ ಪ್ರೇಕ್ಷಕ ನಾವು ಕೊಡುವ ಒಂದು ಕ್ಯೂ ಆರ್‌ ಕೋಡ್‌ ಸ್ಕ್ಯಾನ್‌ ಮಾಡಿದರೆ, ತಮ್ಮ ಮೊಬೈಲ್, ಲ್ಯಾಪ್‌ ಟಾಪ್‌, ಟಿವಿಯಲ್ಲಿ ನಮ್ಮ ಸಿನಿಮಾವನ್ನು ವೀಕ್ಷಿಸಬಹುದು.

ಕಲಿಗೌಡ, ನಿರ್ದೇಶಕ

 

ಕೇವಲ 99 ರುಪಾಯಿಗೆ ಮನೆಮಂದಿ ಕೂಡ ಸಿನಿಮಾ ನೋಡಬಹುದಾಗಿದೆ. ಇದೊಂದು ಒಳ್ಳೆಯ ವೇದಿಕೆಯಾಗಿದ್ದರಿಂದ ನಾವು ಓಟಿಟಿ ಮೊರೆ ಹೋಗಿದ್ದೇವೆ. ಇನ್ನು ಚಿತ್ರದ ಬಗ್ಗೆ ಹೇಳುವುದಾದರೆ, ಇದೊಂದು ಗ್ರಾಮದಲ್ಲಿ ನಡೆಯುವ ಕಥೆ. ಐವರು ಸೋಮಾರಿ ಗೆಳೆಯರ ಸುತ್ತ ನಡೆಯುವ ಸ್ಟೋರಿ ಇದಾಗಿದ್ದು, ಅವರು ಇರುವ ಹಳ್ಳಿಯಲ್ಲೊಂದು ಕ್ರೈಮ್‌ ನಡೆದು ಹೋಗುತ್ತದೆ. ಅದು ಅವರ ಮೇಲೆ ಆರೋಪ ಕೇಳಿಬರುತ್ತದೆ. ಆಗ ಭಯಗೊಂಡ ಆ ಐವರು ಗೆಳೆಯರು ಊರು ಬಿಟ್ಟು ಹೋಗುತ್ತಾರೆ. ಆಗ ಅಲ್ಲಿಗೆ ಬರುವ ಖಡಕ್‌ ಪೊಲೀಸ್‌ ಅಧಿಕಾರಿ, “ತನಿಖೆ” ನಡೆಸುತ್ತಾರೆ. ಆ ತನಿಖೆಯೇ ಸಸ್ಪೆನ್ಸ್.‌ ಅದನ್ನು ಸಿನಿಮಾದಲ್ಲೇ ನೋಡಬೇಕು” ಎನ್ನುತ್ತಾರೆ ಕಲಿಗೌಡ.
ಈ ಚಿತ್ರವನ್ನು “ನಮ್ಮ ಫ್ಲಿಕ್ಸ್”‌ ಬಿಡುಗಡೆ ಮಾಡುತ್ತಿರುವ ಓಟಿಟಿಯ ಮುಖ್ಯಸ್ಥ ವಿಜಯಪ್ರಕಾಶ್‌, ಮಾತನಾಡಿ, ಇದೊಂದು ಒಳ್ಳೆಯ ಬೆಳವಣಿಗೆ. ಸಿನಿಮಾ ತಂಡ ಹೊಸದು. ಅವರಿಗೆ ನಮ್ಮ ಫ್ಲಾಟ್‌ಫಾರ್ಮ್ ಕಲ್ಪಿಸಿಕೊಡುತ್ತಿದ್ದೇವೆ. ಈಗಾಗಲೇ30 ಸಾವಿರ ಟಿಕೆಟ್‌ ಸೇಲ್‌ ಆಗಿದೆ. ಚಿತ್ರ ಬಿಡುಗಡೆ ನಂತರವೂ ಚಿತ್ರಕ್ಕೆ ಟಿಕೆಟ್‌ ಪಡೆದು ವೀಕ್ಷಿಸಬಹುದು. ಕನ್ನಡ ಚಿತ್ರರಂಗಕ್ಕೆ, ಕನ್ನಡ ಚಿತ್ರಗಳಿಗಾಗಿಯೇ ಈ ವೇದಿಕೆ ಕಲ್ಪಿಸಲಾಗಿದೆ ಎಂದರು.


ನಾಯಕಿ ಚಂದನಾ ಜಾನಕಿ ಅವರಿಗೆ ಇದು ಮೊದಲ ಸಿನಿಮಾ. ಅವರು ಈ ಚಿತ್ರದ ಮೇಲೆ ಸಾಕಷ್ಟು ಕನಸು ಕಟ್ಟಿಕೊಂಡಿದ್ದಾರಂತೆ. ಅವರೇ ಹೇಳುವಂತೆ, “ಇದು ನನ್ನ ಮೊದಲ ಚಿತ್ರ. ನಾನಿಲ್ಲಿ ಶಾಲೆಯ ವಿದ್ಯಾರ್ಥಿನಿಯಾಗಿ ಕಾಣಿಸಿಕೊಂಡಿದ್ದೇನೆ. ಕಾಲೇಜು ದಿನಗಳಲ್ಲಿ ಕ್ರಶ್‌ ಆಗುತ್ತೆ. ಆಮೇಲೆ ಒಂದಷ್ಟು ಸಮಸ್ಯೆಗಳೂ ನಡೆದುಹೋಗುತ್ತವೆ. ಆಗ ಏನೆಲ್ಲಾ ಸಮಸ್ಯೆ ಎದುರಿಸುತ್ತೇನೆ ಎಂಬುದು ಕಥೆ. ಈ ಚಿತ್ರ ನವೆಂಬರ್‌ 20 ರಂದು ರಿಲೀಸ್‌ ಆಗುತ್ತಿದೆ. ಎಲ್ಲರೂ ವೀಕ್ಷಿಸಿ, ಕನ್ನಡ ಚಿತ್ರರಂಗವನ್ನು ಬೆಳೆಸಿ” ಎಂದರು ಚಂದನಾ.
ಮಚ್ಚು ಮುನಿ ಅವರಿಗೆ ಇದು ಮೊದಲ ಚಿತ್ರವಂತೆ. ಇಲ್ಲಿ ಎಲ್ಲರೂ ಹೊಸಬರೇ ಸೇರಿ ಸಿನಿಮಾ ಮಾಡಿದ್ದೇವೆ. ನಮ್ಮಂತಹ ಹೊಸಬರನ್ನು ಪ್ರೋತ್ಸಾಹಿಸಿ ಎಂದರು ಮುನಿ. ಛಾಯಾಗ್ರಾಹಕ ಶ್ಯಾಮ್‌ ಸುಂದರ್‌ ಕೂಡ, “ತನಿಖೆ” ಚಿತ್ರ ಹೊಸಬರಿಂದ ಕೂಡಿದೆ. ಒಂದು ಕ್ರೈಂ ಸುತ್ತ ನಡೆಯುವ ಕಥೆ ಇದು. ಇಡೀ ಸಿನಿಮಾ ಸಸ್ಪೆನ್ಸ್‌ ಆಗಿಯೇ ಸಾಗಲಿದೆ ಎಂದರು. ಅನಿಲ್‌ ಆಡಿ, ಹರ್ಷಿಕಾ, ಅನಿಲ್‌,‌ ಅಪ್ಪು ಬಡಿಗೇರ್ ಇತರರು ಇದ್ದರು.

error: Content is protected !!