ನವರಸ ನಟನ ಅಕಾಡೆಮಿಯ ಮಂದಹಾಸ-ಯಶಸ್ವಿಯತ್ತ ಮಾಲೂರು ನಟನಾ ಸಂಸ್ಥೆ

ಡಿ.6ರಿಂದ ಹೊಸ ಬ್ಯಾಚ್ ಶುರು ಗುರು

ಮಾಲೂರು ಶ್ರೀನಿವಾಸ್‌, ವ್ಯವಸ್ಥಾಪಕ ನಿರ್ದೇಶಕ

ಮಾಲೂರು ಶ್ರೀನಿವಾಸ್…‌

ಬಹುಶಃ ಕನ್ನಡ ಚಿತ್ರರಂಗದಲ್ಲಿ ಈ ಹೆಸರು ಚಿರಪರಿಚಿತ. ಹಿರಿಯ ನೃತ್ಯ ನಿರ್ದೇಶಕರಾಗಿರುವ ಮಾಲೂರು ಶ್ರೀನಿವಾಸ್‌, ಕಳೆದ ಎರಡು ದಶಕಗಳಿಂದಲೂ ಕನ್ನಡ ಚಿತ್ರರಂಗದಲ್ಲಿ ತನ್ನದೇ ಆದ ವಿಶೇಷ ಛಾಪು ಮೂಡಿಸಿಕೊಂಡವರು. ನೂರಾರು ಸಿನಿಮಾಗಳಿಗೆ ನೃತ್ಯ ನಿರ್ದೇಶಕರಾಗಿ ದುಡಿದಿರುವ, ಈಗಲೂ ದುಡಿಯುತ್ತಿರುವ ಮಾಲೂರು ಶ್ರೀನಿವಾಸ್‌, ಕಳೆದ ಮೂರ್ನಾಲ್ಕು ವರ್ಷಗಳಿಂದ ತಮ್ಮ ನೇತೃತ್ವದಲ್ಲಿ “ನವರಸ ನಟನ ಆಕಾಡೆಮಿ” ಸ್ಥಾಪಿಸಿದವರು.

ಅ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾಗಿರುವ ಮಾಲೂರು ಈಗಾಗಲೇ ಈ ಅಕಾಡೆಮಿ ಮೂಲಕ ನೂರಾರು ಹೊಸ ಪ್ರತಿಭೆಗಳನ್ನು ತಯಾರು ಮಾಡಿದ ಕೀರ್ತಿಗೆ ಪಾತ್ರರಾದವರು. ಕೊರೊನಾ ಹೊಡೆತದಿಂದ ಇಡೀ ಜಗತ್ತೇ ಸ್ತಬ್ಧವಾಗಿತ್ತು. ಕನ್ನಡ ಚಿತ್ರರಂಗವೂ ಇದಕ್ಕೆ ಹೊರತಲ್ಲ. ಹಾಗೆಯೇ ಚಿತ್ರೀಕರಣದ ಚಟುವಟಿಕೆಗಳು, ಮನರಂಜನೆಯ ಕಾರ್ಯಕ್ರಮಗಳಿಗೂ ಬ್ರೇಕ್‌ ಬಿದ್ದಿತ್ತು. ಹಾಗೆಯೇ, ಮಾಲೂರು ಶ್ರೀನಿವಾಸ್‌ ಕೂಡ ತಮ್ಮ ಸಂಸ್ಥೆಯನ್ನು ಸ್ಥಗಿತಗೊಳಿಸಿದ್ದರು. ಈಗ ಪುನಃ ತಮ್ಮ ಅಕಾಡೆಮಿಯನ್ನು ಶುರುಮಾಡುತ್ತಿದ್ದಾರೆ.

ಎಸ್.ನಾರಾಯಣ್‌, ಪ್ರಾಂಶುಪಾಲರು

ಮಾಲೂರು ಶ್ರೀನಿವಾಸ್‌ ಅವರ “ನವರಸ ನಟನ ಅಕಾಡೆಮಿ”ಯಲ್ಲಿ ಹಿರಿಯ ನಿರ್ದೇಶಕ ಎಸ್.ನಾರಾಯಣ್ ಅವರು ಪ್ರಾಂಶುಪಾಲರು. ಡಿಸೆಂಬರ್ 6ರಿಂದ ಈ ವರ್ಷದ ಎರಡನೇ ಬ್ಯಾಚ್ ಶುರು ಮಾಡಲಾಗುತ್ತಿದೆ. ಈಗ ಲಾಕ್‌ ಡೌನ್‌ ಸಡಿಲಗೊಳ್ಳುತ್ತಿರುವುದರಿಂದ ಈಗಾಗಲೇ ಸುರಕ್ಷತೆಯೊಂದಿಗೆ ಈ ವರ್ಷದ ಮೊದಲ ಬ್ಯಾಚ್ ಯಶಸ್ವಿಯಾಗಿ ಮುಗಿಸಿದ್ದು, ಡಿ.6ರಿಂದ ಹೊಸ ತರಗತಿಗಳು ಆರಂಭವಾಗಲಿವೆ. ಈಗಲೂ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮ ಅಳವಡಿಸಿಕೊಂಡು ತರಗತಿ ಪ್ರಾರಂಭಿಸಲಾಗುತ್ತಿರುವುದು ವಿಶೇಷ. ಇನ್ನು ಸಾಮಾಜಿಕ ಅಂತರ, ಶುಚಿತ್ವ ಕಾಪಾಡಿಕೊಂಡು, ಒಂದು ಬ್ಯಾಚ್’ಗೆ ನಿಯಮಿತ ವಿದ್ಯಾರ್ಥಿಗಳನ್ನು ಮಾತ್ರ ಸೇರಿಸಿಕೊಂಡು ತರಗತಿ ಪ್ರಾರಂಭಿಸುವ ಉದ್ದೇಶ ಈ ಸಂಸ್ಥೆಯದ್ದು.

ನವರಸ ವಿದ್ಯಾರ್ಥಿಗಳ ಅಭಿನಯದ ದೃಶ್ಯ

ಮೊದಲಿನಿಂದಲೂ ನಡೆದುಕೊಂಡು ಬರುತ್ತಿರುವ 4 ಮತ್ತು 6 ತಿಂಗಳ ಹಾಗೂ ವಾರಾಂತ್ಯದ ನಟನೆ-ನಿರ್ದೇಶನ ತರಗತಿಗಳು ಬೆಳಗ್ಗೆ 10.30ರಿಂದ ಸಂಜೆ 5.30ರವರೆಗೆ ನಡೆಯಲಿವೆ. ಎಲ್ಲಾ ವಿದ್ಯಾರ್ಥಿಗಳಿಗೂ ನಟನೆ, ನಿರ್ದೇಶನ, ಡಾನ್ಸಿಂಗ್, ಫೈಟಿಂಗ್, ಮೂಖಾಭಿನಯ, ಮೇಕಪ್, ಸಂಕಲನ ಮತ್ತು ಡಬ್ಬಿಂಗ್ ಸೇರಿದಂತೆ ಚಿತ್ರೀಕರಣದ ಅನುಭವ, ಪೋಸ್ಟ್ ಪ್ರೊಡಕ್ಷನ್ ಬಗ್ಗೆ ಮಾಹಿತಿ ನೀಡುತ್ತಾ ಬಂದಿರುವ ಈ ಸಂಸ್ಥೆ, ಈ ಬಾರಿಯೂ ಅವೆಲ್ಲವನ್ನೂ ಮುಂದುವರೆಸಿಕೊಂಡು ಹೋಗುವ ಉತ್ಸಾಹದಲ್ಲಿದೆ. ಮಾಲೂರು ಶ್ರೀನಿವಾಸ್ ಸ್ವತಃ ಅಕಾಡೆಮಿ ವಿದ್ಯಾರ್ಥಿಗಳಿಗೆ ನೃತ್ಯ ಕಲಿಸಿಕೊಡುತ್ತಿದ್ದಾರೆ.

ಕಳೆದ ಮೂರು ವರ್ಷಗಳಲ್ಲಿ ‘ನವರಸ ನಟನ ಅಕಾಡೆಮಿ’ ಸಂಸ್ಥೆಯಲ್ಲಿ ತರಬೇತಿ ಪಡೆದ ಅನೇಕ ವಿದ್ಯಾರ್ಥಿಗಳು ಇಂದು ಸಾಕಷ್ಟು ಸಿನಿಮಾ, ಧಾರಾವಾಹಿಗಳಲ್ಲಿ ನಟಿಸುವ ಮೂಲಕ ತಮ್ಮದ್ದೊಂದು ಹೊಸ ಬದುಕು ಕಟ್ಟಿಕೊಂಡು ಬಿಝಿಯಾಗುತ್ತಿದ್ದಾರೆ. ಕೆಲವರು ಸ್ವತಂತ್ರ ನಿರ್ದೇಶಕರಾಗಿ, ಕಲಾವಿದರಾಗಿ ಗುರುತಿಸಿಕೊಂಡಿರುವುದು ಈ ಅಕಾಡೆಮಿಯ ಹೆಮ್ಮೆ.

ಪ್ರಾಂಶುಪಾಲರಾದ ಎಸ್.ನಾರಾಯಣ್ ಸೇರಿದಂತೆ ನಿರ್ದೇಶಕರಾದ ವಿ.ಮನೋಹರ್, ಲಕ್ಕಿ ಶಂಕರ್, ಹಿರಿಯ ನಟರಾದ ಶಿವರಾಮ್, ಸುಂದರ್ ರಾಜ್ ಸೇರಿದಂತೆ ಚಿತ್ರರಂಗದ ಹಿರಿಯರು ಮತ್ತು ಎನ್.ಎಸ್.ಡಿ, ನೀನಾಸಂ ಬಳಗದವರು ನಟನೆ, ನಿರ್ದೇಶನ, ಡೈಲಾಗ್ ಡೆಲಿವರಿ ಹಾಗೂ ಕ್ಯಾಮೆರಾ ಮುಂದೆ ನಟಿಸುವ ಕುರಿತಂತೆ ಹಲವು ವಿಷಯಗಳನ್ನು ವಿದ್ಯಾರ್ಥಿಗಳಿಗೆ ಹೇಳಿಕೊಡುವ ಮೂಲಕ ಅವರಿಂದ ಕಿರುಚಿತ್ರ ತಯಾರಿಸಿ, ಅವರಲ್ಲಿ ಧೈರ್ಯ ತುಂಬುವ ಕೆಲಸ ಮಾಡುತ್ತಿದೆ. ಇವೆಲ್ಲದರ ಜೊತೆಗೆ ಅರ್ಹತಾ ಪತ್ರ ವಿತರಿಸಿ, ಬೆನ್ನುತಟ್ಟಿ ಕಳುಹಿಸಿಕೊಡುತ್ತಿದೆ.

ಜಗ್ಗೇಶ್ ಅವರ ಸಹಕಾರದೊಂದಿಗೆ ಈ ಸಂಸ್ಥೆ ಯಶಸ್ವಿಯಾಗಿ ನಡೆಯುತ್ತಿರುವ ಕುರಿತು ಸ್ವತಃ ವ್ಯವಸ್ಥಾಪಕ ನಿರ್ದೇಶಕ ಮಾಲೂರು ಶ್ರೀನಿವಾಸ್‌ ಖುಷಿ ವ್ಯಕ್ತಪಡಿಸುತ್ತಾರೆ. ಇನ್ನು, ಮಹಿಳೆಯರಿಗಾಗಿ ವಿಶೇಷ ರಿಯಾಯಿತಿ ಸೌಲಭ್ಯ ಕೂಡ ಇಲ್ಲಿದ್ದು, ಹೆಚ್ಚಿನ ಮಾಹಿತಿಗೆ ನವರಸ ನಟನ ಅಕಾಡೆಮಿ, ಮೊಬೈಲ್ ಸಂಖ್ಯೆ; 98802 19666 / 98804 19666 ಸಂಪರ್ಕಿಸಬಹುದಾಗಿದೆ. ಹೆಚ್ಚಿನ ವಿಷಯಕ್ಕೆ ಅಕಾಡಮಿಯ
ವೆಬ್ಸೈಟ್: www.navarasanatana.com ಸಂಪರ್ಕಿಸಬಹುದು.

Related Posts

error: Content is protected !!